ವಿಶ್ವ ಧರ್ಮ ಸಂಸತ್ತು
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ಅಮೆರಿಕದ ಷಿಕಾಗೊ ನಗರದಲ್ಲಿ ೧೧/೯/೧೮೯೩ ರಿಂದ ೨೮/೯/೧೮೯೩ ರ ವರೆಗೆ ೧೮ ದಿನ ನಡೆದ ವಿಶ್ವ ಧರ್ಮ ಸಂಸತ್ತಿನ ಮೂಲಕ ಸ್ವಾಮಿಗಳು ಖ್ಯಾತಿಗೆ ಬಂದರು. ಆಲ್ಲಿಂದ ಸ್ವಾಮಿಗಳ ಚಟುವಟಿಕೆಗಳು ಸಾರ್ವಜನಿಕವಾದವು. ಆದ್ದರಿಂದ ಅಲ್ಲಿಂದಲೇ ಸ್ವಾಮಿಗಳ ಚಿತ್ರಣವನ್ನು ಪಡೆಯಲು ಮೊದಲಾಗಬಹುದು. ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿಗಳು ಗಳಿಸಿದ ಯಶಸ್ಸಿನ ಬಗ್ಗೆ ಸಾಕಷ್ಟು ವರದಿಗಳಿರುವುದರಿಂದ ಸ್ವಾಮಿಗಳು ಇಲ್ಲದಿದ್ದ ವಿಶ್ವ ಧರ್ಮ ಸಂಸತ್ತು ಹೇಗಿ ಇದ್ದಿರುತ್ತಿದ್ದಿತೆಂದು ತಿಳಿಯಬಹುದು.
ವಿಶ್ವ ಧರ್ಮ ಸಂಸತ್ತು ಎಂದರೆ ಸ್ವಾಮಿ ವಿವೇಕಾನಂದರು ಮಾತ್ರ ಎನ್ನುವ ತಪ್ಪು ತಿಳಿವಳಿಕೆಯನ್ನು ಭಾರತದಲ್ಲಿ ಕಳೆದ ೧೨೦ ವರ್ಷಗಳಿಂದ ಬಹು ಯಶಸ್ವಿಯಾಗಿ ಬಿತ್ತಿ ಬೆಳೆಸಿಕೊಂಡು ಬರಲಾಗಿದೆ. ವಿಶ್ವ ಧರ್ಮ ಸಂಸತ್ತಿನ ಕಲಾಪ ಮತ್ತು ಪ್ರತಿನಿಧಿಗಳ ವಿವರಗಳನ್ನು ಅದರ ಕಾರ್ಯದರ್ಶಿಯಾಗಿದ್ದ ಜೆ.ಎಚ್ ಬರೋಸ್’ ಎರಡು ಸಂಪುಟಗಳಲ್ಲಿ ದಾಖಲಿಸಿದ್ದಾರೆ. ಈ ದಾಖಲೆಯಂತೆ ವಿಶ್ವ ಸಂಸತ್ತಿನ ಉದ್ಘಾಟನೆಯ ದಿನ – ೧೧/೯/೧೮೯೩- ಅಧ್ಯಕ್ಷ ಚಾರ್ಲ್ಸ್ ಸಿ.ಬೊನ್ನಿ ಮತ್ತು ಕಾರ್ಯದರ್ಶಿ ಜೆ.ಎಚ್ ಬರೋಸ್ ಸೇರಿದಂತೆ ಮುಖ್ಯ ವೇದಿಕೆಯ ಮೇಲೆ ೫೯ ಜನರಿದ್ದರು. ಅದರಲ್ಲಿ (೧) ಪ್ರತಾಪಚಂದ್ರ ಮಜುಂದಾರ್-ಬ್ರಾಹ್ಮ ಸಮಾಜ, ಕಲ್ಕತ್ತ (೨) ಸ್ವಾಮಿ ವಿವೇಕಾನಂದ-ಹಿಂದೂ ಧರ್ಮ, ಕಲ್ಕತ್ತ (೩) ಬಲವಂತ ಬಾಹು ನಗರ್ಕರ್-ಬ್ರಾಹ್ಮ ಸಮಾಜ,ಬಾಂಬೆ (೪) ಹೇವಿರತ್ನೆ ಧರ್ಮಪಾಲ –ಬೌದ್ಧ, ಸಿಲೋನ್ (೫) ಮೌರಿಸ್ ಫಿಲಿಫ್-ಕ್ರೈಸ್ತ , ಬೆಂಗಳೂರು (೬) ವೀರಚಂದ ಗಾಂಧಿ-ಜೈನ , ಬಾಂಬೆ (೭) ಜಿಯಾನ್ನೆ ಸೊರಾಬ್ಜಿ-ಕ್ರೈಸ್ತ , ಬಾಂಬೆ (೮) ಜ್ಞಾನೇಂದ್ರ ಎನ್. ಚಕ್ರವರ್ತಿ-ಥಿಯೊಸೊಫಿ, ಅಲಹಾಬಾದ್ (೯) ಜಿಂದಾ ರಾಮ್-ಇಸ್ಲಾಂ, ಪಂಜಾಬ್ (೧೦) ಸಿಧೂ ರಾಮ್-ಇಸ್ಲಾಂ ಭಾರತದ ಈ ೧೦ ಜನರಿಗೆ ಮುಖ್ಯ ವೇದಿಕೆಯಲ್ಲಿ ಸ್ಥಾನ ದಕ್ಕಿದ್ದಿತು. ಇವರಲ್ಲದೆ (೧) ಲಕ್ಷ್ಮೀ ನಾರಾಯಣ , ಹಿಂದೂ, ಲಾಹೋರ್ (೨) ನರಸಿಂಹಾಚಾರ್ಯ – ಹಿಂದೂ, ವಿಶಿಷ್ಟಾದ್ವೈತ , ಮದ್ರಾಸ್ (೩) (೩) ರಾಬರ್ಟ್ ಹ್ಯೂಮ್-ಕ್ರೈಸ್ತ, ಮದ್ರಾಸ್ ಮುಖ್ಯ ವೇದಿಕೆಯಲ್ಲಿ ಇರದಿದ್ದರೂ ಸಭೆಯಲ್ಲಿ ಹಾಜರಿದ್ದರು. ವಿಶ್ವ ಧರ್ಮ ಸಮ್ಮೇಳನಕ್ಕೆ ಹೋಗದಿದ್ದರೂ (೧) ಜೆ..ಜೆ ಮೋದಿ –ಪಾರ್ಸಿ , ಬಾಂಬೆ (೨) ಮಣಿಲಾಲ ದ್ವಿವೇದಿ-ಹಿಂದೂ , ಬಾಂಬೆ , (೩) ಮೋಹನ ದೇವ್ –ಹಿಂದೂ , ಲಾಹೋರ್ (೪) ಎಸ್. ಪಾರ್ಥಸಾರಥಿ ಅಯ್ಯಂಗಾರ್, ಹಿಂದೂ, ವಿಶಿಷ್ಟಾದ್ವೈತ , ಮದ್ರಾಸ್ (೫) ಥಾಮ್ಸ್ ಇ. ಸ್ಲೇಟರ್-ಕ್ರೈಸ್ತ (೬) ಟಿ;ಜೆ ಸ್ಕಾಟ್-ಕ್ರೈಸ್ತ (೭) ಪುರುಷೋತ್ತಮ ಬಾಲಕೃಷ್ಣ ಜೋಷಿ –ಹಿಂದೂ , ಕೇಳ್ವ, ಮಾಹಿಂ, ಬಾಂಬೆ ತಮ್ಮ ಪ್ರಬುದ್ಧ ಲೇಖನಗಳನ್ನು ಕಳಿಸಿದ್ದರು. ಸಿಧುರಾಂ ಮತ್ತು ಜಿಂದಾರಾಂ ಎನ್ನುವ ಇಬ್ಬರ ಮುಸ್ಲಿಮರು ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಗವಹಿಸಿದರಾದರೂ ಯಾವುದೇ ಭಾಷಣ ಮಾಡಲಿಲ್ಲ, ಲೇಖನ ಮಂಡಿಸಲಿಲ್ಲ. ಸ್ವಾಮಿ ವಿವೇಕಾನಂದ , ನರಸಿಂಹಾಚಾರ್ಯ ಮತ್ತು ಲಕ್ಷ್ಮೀನಾರಾಯಣ ಸೈಂಟಿಫಿಕ್ ಸೆಕ್ಷನ್’ನಲ್ಲಿ ಮಾತನಾಡಿದರಾದರೂ ಅದನ್ನು ಜೆ.ಎಚ್ ಬರೋಸ್ ವರದಿಯಲ್ಲಿ ಸೇರಿಸಿಲ್ಲ. ಕ್ರೈಸ್ತ ಧರ್ಮವನ್ನು ಪ್ರತಿನಿಧಿಸಿ ಭಾರತದಿಂದ ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ನಾಲ್ಕು ಜನ ಕ್ರೈಸ್ತ ಪಾದ್ರಿಗಳಿಗೂ ತಮ್ಮ ಧರ್ಮವಲ್ಲದೆ ಹಿಂದೂ ಧರ್ಮವನ್ನು ಅಧ್ಯಯನ ಮಾಡಿದ್ದರೆನ್ನುವುದು ಅವರು ಸಂಸತ್ತಿನಲ್ಲಿ ಮಂಡಿಸಿದ ಲೇಖನಗಳು ಸ್ಪಷ್ಟಪಡಿಸುತ್ತವೆ. (1)
ವಿಶ್ವ ಧರ್ಮ ಸಂಸತ್ತಿನಲ್ಲಿ ೧೭ ದೇಶಗಳ ಪ್ರತಿನಿಧಿಗಳು ಮಾತನಾಡಿದರು. ಭಾರತದ ೧೮ , ಜಪಾನಿನ ೧೬ , ಇಂಗ್ಲೆಂಡ್ ೫ , ಫ್ರಾನ್ಸ್’ನ ೫ ಲೇಖನಗಳು ವಿಶ್ವ ಧರ್ಮ ಸಂಸತ್ತನ್ನು ಪ್ರವೇಶಿಸಿದ್ದವು. ಅರ್ಮೇನಿಯಾ, ಬೆಲ್ಜಿಯಂ , ಕೆನಡಾ, ಜರ್ಮನಿ , ಗ್ರೀಸ್ , ರಷ್ಯಾ , ಸಿಟ್ಸರ್ಲ್ಯಾಂಡ್ , ಸಿರಿಯಾ , ಥೈಲ್ಯಾಂಡ್ , ಟರ್ಕಿ ದೇಶಗಳು ಭಾಗವಹಿಸಿದ್ದವು. (1) ಇಂಗ್ಲಿಷ್ ಭಾಷೆಯ ಪ್ರಭುತ್ವದಿಂದಾಗಿ ಭಾರತೀಯ ಪ್ರತಿನಿಧಿಗಳು ಹೆಚ್ಚು ಗಮನ ಸೆಳೆದರು, ಜಪಾನಿನ ಬೌದ್ಧ ಪ್ರತಿನಿಧಿ ಕಿಂಝ ರಿಂಝೆ ಹಿರಾಯ್ ಮತ್ತು ಭಾರತದ ಪ್ರತಾಪ ಚಂದ್ರ ಮಜುಂದಾರ್ ಅಮೆರಿಕನ್ನರ ಹೃದಯ ಗೆದ್ದವರಲ್ಲಿ ಮುಂಚೂಣಿಯಲ್ಲಿದ್ದರು. ಹಿಂದೂ ದೇವಾಲಯದಲ್ಲಿ ಪ್ರಚಲಿತವಿದ್ದ ಕೆಲ ಪದ್ದತಿಗಳ ಬಗ್ಗೆ ಕ್ರೈಸ್ತ ಮಿಷನರಿ ಮಾಡಿದ ಅವಹೇಳನಕ್ಕೆ ಸಿಡಿದೆದ್ದು ೨೫/೯/೧೮೯೩ ರಂದು ವಿಶ್ವ ಧರ್ಮ ಸಂಸತ್ತಿನ ಮುಖ್ಯ ವೇದಿಕೆಯ ಮೇಲಿಂದ ದಿಟ್ಟ ಉತ್ತರ ಕೊಟ್ಟು ಹಿಂದೂಗಳ ಪರ ನಿಂತವರು ಹಿಂದೂ ಅಲ್ಲದ ಜೈನ ವೀರಚಂದ ಗಾಂಧಿ. ವಿಶ್ವ ಧರ್ಮ ಸಂಸತ್ತಿನ ಉದ್ಘಾಟನೆಯ ದಿನ ಕೊಲಂಬಸ್ ಮುಖ್ಯ ವೇದಿಕೆಯಿಂದ ಭಾಷಣ ಮಾಡಿದ ಜ್ಞಾನೇಂದ್ರ ಚಕ್ರವರ್ತಿ ಪಾಶ್ಚಾತ್ಯರ ಲೌಕಿಕ ಸಾಧನೆ ಮತ್ತು ಪೌರಾತ್ಯರ ಮಾನಸಿಕ ಸಾಧನೆಗಳನ್ನು ಹೋಲಿಸಿ ವಿಶ್ಲೇಷಿಸಿ ಮಿಂಚಿನ ಸಂಚಲನ ತಂದರು. ಮೋಹನ ದೇವರ ಲೇಖನ ಹಿಂದೂ ಅಧ್ಯಾತ್ಮ ಜೀವನ ದೃಷ್ಟಿಯನ್ನು ವಿಸ್ತರಿಸಿ ತಿಳಿಸಿತು.
೧೭/೯/೧೮೯೩ ರಂದು ಬಲವಂತ ಬಾಹು ನಗರ್ಕರ್ ಹಣದ ನೆರವಿನಿಂದ ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಹರಡಲು ಸಾಧ್ಯವಿಲ್ಲವೆಂದು ಘೋಷಿಸಿ , ಮಿಷನರಿಗಳ ಮಾರ್ಗೋಪಾಯಗಳ ಮೇಲೆ ಹರಿಹಾಯ್ದರು. ಇದಾದ ೩ ದಿನಗಳ ನಂತರ -೨೧/೯/೧೮೯೩- ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾತನಾಡಲು ಎರಡು ಸಲ ಅವಕಾಶ ಪಡೆದ ನರಸಿಂಹಾಚಾರ್ಯ ಮೊದಲ ಬಾರಿಗೆ ಕ್ರೈಸ್ತ ದೇಶದಲ್ಲಿ , ಕ್ರೈಸ್ತರ ವೇದಿಕೆಯಿಂದ ಮಿಷನರಿಗಳು ಭಾರತದಲ್ಲಿ ಕ್ರೈಸ್ತ ಧರ್ಮ ಹರಡಲು ಅನುಸರಿಸುತ್ತಿರುವ ಮಾರ್ಗಗಳನ್ನು ದಿಟ್ಟವಾಗಿ , ನೇರವಾಗಿ , ವಿಮರ್ಶಿಸಿ , ಖಂಡಿಸಿ , ಉತ್ತಮವಾದುದನ್ನು ಗೌರವಿಸಿ ಗಮನ ಸೆಳೆದರು. ನರಸಿಂಹಾಚಾರ್ಯರನ್ನು ಧರ್ಮಪಾಲ ಬಲವಾಗಿ ಬೆಂಬಲಿಸಿದರು.ಸ್ವಾಮಿಗಳು ಕ್ರೈಸ್ತ ಮಿಷನರಿಗಳ ಮತಾಂತರ ತಂತ್ರಗಳನ್ನು ಟೀಕಿಸಿದರು. (2) ಮಣಿಲಾಲ ನಭುಭಾಯಿ ದ್ವಿವೇದಿಯವರು ಸಿದ್ಧಪಡಿಸಿದ್ದ ‘ಹಿಂದೂ ಧರ್ಮ’ ಲೇಖನ ತಿರುಳಿನಲ್ಲಿ , ವಿದ್ವತ್ತಿನಲ್ಲಿ ಸ್ವಾಮಿಗಳು ಮಾಡಿದ ಭಾಷಣಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದಿತು. (3) ಮುಂದಿನ ದಿನಗಳಲ್ಲಿ ಸ್ವಾಮಿಗಳು ಪ್ರತಾಪಚಂದ್ರ ಮಜುಂದಾರ , ನರಸಿಂಹಾಚಾರ್ಯ , ಜ್ಞಾನೇಂದ್ರ ಚಕ್ರವರ್ತಿಯವರ ಹಲವು ಅಭಿಪ್ರಾಯಗಳನ್ನು ವಿಸ್ತರಿಸಿ ಅವು ತಮ್ಮದೇ ಎಂಬಂತೆ ಹಲವು ಭಾಷಣಗಳಲ್ಲಿ ಮಂಡಿಸಿದರು.
ಷಿಕಾಗೊ ಡೈಲಿ ಇಂಟರ್ ಓಷನ್ -೧೨/೯/೧೮೯೩- ‘ಭಾರತದ ಪಿ.ಸಿ ಮಜುಂದಾರರು ಮಾಡಿದ ಭಾಷಣ ಅಮೆರಿಕದ ಮುಂದಿನ ಯಾವುದೇ ಅಧ್ಯಕ್ಷ ತಿಳಿದುಕೊಳ್ಳುವಂತಹುದು ಎಂದರೆ ಧರ್ಮಪಾಲ ಕೊಲಂಬಸ್ ಮುಖ್ಯ ವೇದಿಕೆಯಿಂದ ಸಭಿಕರಿಗೆ ಎಸೆದ ದಿಟ್ಟ ಸವಾಲನ್ನು ‘ದಿ ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್ ‘ ೧೫/೯/೧೮೯೩ ರ ಸಂಚಿಕೆಯಲ್ಲಿ ವರದಿ ಮಾಡಿತು. ೧೮/೯/೧೮೯೩ ರಂದು ಧರ್ಮಪಾಲ ಮಾಡಿದ ‘ವರ್ಲ್ಡ್ ಡೆಬ್ಟ್ಸ್ ಟು ಬುದ್ಧ ‘ ಎನ್ನುವ ಭಾಷಣದ ಬಗ್ಗೆ ೨೮/೯/೧೮೯೩ ರಂದು ಬರೆಯುತ್ತ ಡುಬುಕ್ಯೂ (ಅಯೋವಾ) ಟೈಮ್ಸ್ ‘ ಆತನ ಭಾಷಣದ ಮುಕ್ತಾಯ ಷಿಕಾಗೊದ ಜನ ಈ ಹಿಂದೆ ಎಂದೂ ಕೇಳಿರದಷ್ಟು ಆಹ್ಲಾದಕರವಾಗಿದ್ದು. ಡೆಮೊಸ್ತೆನೆಸ್ ಎಂದಿಗೂ ಅದನ್ನು ಮೀರಿಸಲಾರ’ ಎಂದು ಉದ್ಗರಿಸಿದ್ದಿತು. ಷಿಕಾಗೊ ಡೈಲಿ ಇಂಟರ್ ಓಷನ್ ೨೨/೯/೧೮೯೩ - ಮುಖಪುಟದಲ್ಲಿ ‘ಜಿಯಾನ್ನೆ ಸೊರಾಬ್ಜಿಯನ್ನು ಪರಿಚಯಿಸಿದಾಗ ಆಕೆ ಎದ್ದು ನಿಂತಳು. ಆಗ ಆಕೆ ಕ್ಲಿಯೋಪಾತ್ರಳ ರೂಪದರ್ಶಿಯಂತೆ ಕಂಡಳು…….ಆಕೆ ಮಂಡಿಸಿದ ಲೇಖನ ಹೃದಯಸ್ಪರ್ಶಿಯಾಗಿದ್ದಿತು… ವಾಷಿಂಗ್ಟನ್ ರಾಜಕಾರಣಿಯ ಮಗಳದೋ ಎಂಬಂತೆ ಆಕೆ ಉತ್ಕೃಷ್ಟ ಇಂಗ್ಲಿಷ್’ನಲ್ಲಿ ಗಾಂಭೀರ್ಯದಿಂದ ತನ್ನ ಲೇಖನ ಓದಿದಳು ಎಂದು ತನ್ನ ಮೆಚ್ಚುಗೆ ವ್ಯಕ್ತಪಡಿಸಿತು. ಷಿಕಾಗೊ ಹೆರಾಲ್ಡ್ - ೧೫/೯/೧೮೯೩- ಹಳದಿ ಮುಂಡಾಸು ಧರಿಸಿದ್ದ ಕಡೆದ ವಿಗ್ರಹದಂತಿದ್ದ ಜಿ.ಎನ್ ಚಕ್ರವರ್ತಿ ಹೆಂಗಸರನ್ನು ಕುರಿತಾಗಿ ಮಾರ್ದವತೆಯಿಂದ ಮಾತನಾಡಿ ಅವರಿಂದ ಭಾರಿ ಮೆಚ್ಚುಗೆ ಪಡೆದರು ಮತ್ತು ಹೆಂಗಸರಿಂದ ಅತ್ಯಂತ ಮೋಹಕ ಗಂಡಸು ಎಂದು ಗುರುತಿಸಲ್ಪಟ್ಟರು ಎಂದು ವರದಿಮಾಡಿತು. ಹೀಗೆ ಸ್ವಾಮಿಗಳು ಮಾತ್ರವಲ್ಲದೆ ಇತರ ಭಾರತೀಯ ಪ್ರತಿನಿಧಿಗಳು ತಮ್ಮ ನಡೆ , ನುಡಿ , ಜ್ಞಾನ , ಇಂಗ್ಲಿಷ್ ನಿರರ್ಗಳತೆ , ಭಾಷಣ ಶೈಲಿಗಳಿಂದ ಅಮೆರಿಕನ್ನರ ಮನ ಗೆದ್ದಿದ್ದರು.
೩.೨ ಕಲಾಪಗಳು : ವಿಶ್ವ ಧರ್ಮ ಸಂಸತ್ತು ೧೧/೯/೧೮೯೩ ರಿಂದ ೨೭/೯/೧೮೯೩ ರ ಅವಧಿಯಲ್ಲಿ ಒಟ್ಟು ೧೭ ದಿನ ನಡೆಯಿತು. ಸಂಸತ್ತಿನ ಕಲಾಪಗಳ ಪಟ್ಟಿ , ಭಾಷಣಕಾರರ ವಿವರಗಳು ಕೋಷ್ಟಕ-೫ ರಲ್ಲಿದೆ. ಬ್ರಾಹ್ಮ ಸಮಾಜ, ಥಿಯೊಸೊಫಿ ಮತ್ತು ಹಿಂದೂ ಧರ್ಮದ ಪ್ರತಿನಿಧಿಗಳಿಗೆ ಈ ಕಲಾಪಗಳಲ್ಲಿ ಸಿಕ್ಕ ಅವಕಾಶಗಳ ವಿವರ ಮುಂದಿದೆ. (4) ( ಕೊಲಂಬಸ್ ಹಾಲ್ = * , ಸೈಂಟಿಫಿಕ್ ಸೆಕ್ಷನ್ = ** )
ಮೇಲಿನ ಕೋಷ್ಟಕ ಸ್ವಾಮಿಗಳು ಷಿಕಾಗೊ ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಗವಹಿಸಿದ ಬಗ್ಗೆ ಈವರೆಗೆ ಜನಪ್ರಿಯವಾಗರುವ ನೂರಾರು ತಪ್ಪು ತಿಳಿವಳಿಕೆಗಳನ್ನು ಕೊನೆಗಾಣಿಸುತ್ತದೆ.
ಪತ್ರಿಕೆ ವರದಿಗಳು : ಕೋಷ್ಟಕ-೬: ರಲ್ಲಿ ಅಮೆರಿಕದ ವಿಶ್ವ ಧರ್ಮ ಸಂಸತ್ತು ನಡೆಯುತ್ತಿದ್ದಾಗ ಅಮೆರಿಕ ಪತ್ರಿಕೆಗಳು ಪ್ರಕಟಿಸಿದ ವರದಿ ಅದರಲ್ಲಿ ಉಲ್ಲೇಖವಾಗರುವ ವ್ಯಕ್ತಿಗಳು ಮಾಹಿತಿಯಿದೆ. ವಿವಿಧ ಪತ್ರಿಕೆಗಳಲ್ಲಿ ಭಾರತೀಯರು ಸುದ್ದಿಯಾಗಿ ಅಥವಾ ಪ್ರಾಸಂಗಿಕ ಸುದ್ದಿಯಾಗಿ ಕಾಣಿಸಿಕೊಂಡ ದಿನಾಂಕದ ಪಟ್ಟಿ ಕೆಳಗಿದೆ. ( ಕ್ರೈಸ್ತರಲ್ಲದ ಭಾರತೀಯರು ಮಾತ್ರ)
ಸ್ವಾಮಿಗಳು ೨/೧೧/೧೮೯೩ ರಂದು ಅಳಸಿಂಗ ಪೆರುಮಾಳ್’’ಗೆ ಬರೆದ ಪತ್ರದಲ್ಲಿ ‘ನನ್ನ ಭಾಷಣ ಮುಗಿದ ಮೇಲೆ ಉದ್ವೇಗದಿಂದ ದಣಿವಾಗಿ ಕುಳಿತುಬಿಟ್ಟೆ. ಮಾರನೆಯ ದಿನ ಎಲ್ಲ ಪತ್ರಿಕೆಗಳು ನನ್ನ ಭಾಷಣವೇ ಎಲ್ಲಕ್ಕಿಂತ ಉತ್ತಮವಾದುದು ಎಂದು ಕೊಂಡಾಡಿದವು. ನಾನು ಇಡೀ ಅಮೆರಿಕ ದೇಶಕ್ಕೆ ಪರಿಚಿತನಾದೆ….......’ ಎಂದು ಬರೆದಿದ್ದಾರೆ. ಇದು ನಿಜವಲ್ಲ ೧೨/೯/೧೮೯೩ ರ ಸಂಚಿಕೆಯಲ್ಲಿ ‘ದಿ ಷಿಕಾಗೊ ಹೆರಾಲ್ಡ್ . ಷಿಕಾಗಿ ಡೈಲಿ ಟ್ರಿಬ್ಯೂನ್ ಮತ್ತು ದಿ ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್ ಮಾತ್ರ ಸ್ವಾಮಿಗಳನ್ನು ಉಲ್ಲೇಖಿಸಿವೆ. ಅದರಂತೆ ಪ್ರತಾಪಚಂದ್ರ ಮಜುಂದಾರ್, ಬಲವಂತ ಬಾಹು ನಗರ್ಕರ್, ಹೇವಿರತ್ನೆ ಧರ್ಮಪಾಲ ಮತ್ತು ವೀರಚಂದ ಗಾಂಧಿಯವರನ್ನು ಕುರಿತಾಗಿಯೂ ಪತ್ರಿಕೆಗಳು ಬರೆದಿವೆ. ಆದ್ದರಿಂದ ಸ್ವಾಮಿಗಳು ಅಳಸಿಂಗ ಪೆರುಮಾಳ್’ಗೆ ತಿಳಿಸಿದ್ದು ಉತ್ಪ್ರೇಕ್ಷೇಯಿಂದ ಕೂಡಿದ್ದು , ಆತ ಬೆರಗಾಗುವಂತೆ ಮಾಡುವ ಗುರಿಯನ್ನು ಹೊಂದಿದ್ದಿತು.
ವಿಶ್ವ ಧರ್ಮ ಸಂಸತ್ತು ನಡೆಯುತ್ತಿರುವಾಗ-೧೧/೯/೧೮೯೩ ರಿಂದ ೨೭/೯/೧೮೯೩- ಅಮೆರಿಕದ ಅದರಲ್ಲೂ ವಿಶೇಷವಾಗಿ ಷಿಕಾಗೊ ಮೂಲದ ಜನಪ್ರಿಯ ಪತ್ರಿಕೆಗಳು ಭಾರತೀಯರಿಗೆ ಅವರು ಮಂಡಿಸಿದ ವಿವರಗಳಿಗೆ ಎಷ್ಟು ಪ್ರಾಶಸ್ತ್ಯ ಕೊಟ್ಟವು , ಯಾವ ಭಾರತೀಯರು ಹೆಚ್ಚಿನ ಗಮನ ಸೆಳೆದರು ಎನ್ನುವ ವಿವರಗಳು ಕೋಷ್ಟಕ-೭ ರಲ್ಲಿವೆ. ಪತ್ರಿಕೆಗಳ ಒಂದು ಲಂಬ ಸಾಲಿನ ಘಟಕದಲ್ಲಿ ಎಷ್ಟು ಸಾಲುಗಳು ಯಾವ ವ್ಯಕ್ತಿಗೆ ಮೀಸಲಾಗಿದ್ದವು ಎನ್ನುವ ಸ್ಥೂಲ ಚಿತ್ರಣ ಮುಂದಿದೆ. ( ಕ್ರೈಸ್ತರಲ್ಲದ ಭಾರತೀಯರು ಮಾತ್ರ). ಕೋಷ್ಟಕದಲ್ಲಿರುವ ಮಾಹಿತಿಯಿದ ಅಮೆರಿಕ ಮೂಲದ ಪತ್ರಿಕೆಗಳಲ್ಲಿ ಸ್ವಾಮಿಗಳಿಗಿಂತ ಹೆಚ್ಚು ಸ್ಥಾನ ಗಿಟ್ಟಿಸಿದ್ದ ಇತರರಿದ್ದರೆನ್ನುವುದು ತಿಳಿದುಬರುತ್ತದೆ. (5)
ವರದಿಗಳು ಮತ್ತು ಪ್ರಾಶಸ್ತ್ಯ : ವಿಶ್ವ ಧರ್ಮ ಸಂಸತ್ತು ಮುಗಿದ ನಂತರ ಅದರೆ ಸಮಗ್ರ ವರದಿ (೧) ದಿ ವರ್ಲ್ಡ್ಸ್ ಪಾರ್ಲಿಮೆಂಟ್ ಆಫ್ ರಿಲಿಜನ್ಸ್ –ರೆ. ಜಾನ್ ಎಚ್. ಬರೋಸ್ ೧೮೯೩ (೨) ದಿ ವರ್ಲ್ಡ್ಸ್ ಕಾಂಗೆಸ್ ಆಫ್ ರಿಲಿಜನ್ಸ್ ಅಟ್ ದಿ ವರ್ಲ್ದ್ಸ್ ಕೊಲಂಬಿಯನ್ ಎಕ್ಸ್’ಪೊಸಿಷನ್ – ಜೆ. ಡಬ್ಲ್ಯು ಜಾನ್ಸನ್ ೧೮೯೪ (೩) ದಿ ಪಾರ್ಲಿಮೆಂಟ್ ಆಫ್ ರಿಲಿಜನ್ಸ್ ಅಂಡ್ ದಿ ರಿಲಿಜಿಯಸ್ ಕಾಂಗ್ರೆಸ್ ಅಟ್ ದಿ ವರ್ಲ್ದ್ಸ್ ಕೊಲಂಬಿಯನ್ ಎಕ್ಸ್’ಪೊಸಿಷನ್ –ವಾಲ್ಟರ್ ಆರ್ ಹೌಟನ್- ೧೮೯೩ (೪) ರಿವ್ಯೂ ಆಫ್ ವರ್ಲ್ಡ್ಸ್ ರಿಲಿಜಿಯಸ್ ಕಾಂಗ್ರೆಸ್ –ಎಲ್.ಪಿ ಮರ್ಸರ್ , ರ್ಯಾಂಡ್ ೧೮೯೩ (೫) ಎ ಖೋರಸ್ ಆಫ್ ಫೇಥ್-ಜೆಂಕಿನ್ ಲಾಯ್ಡ್ ಜೋನ್ಸ್ (೬) ವರ್ಲ್ಡ್ಸ್ ಕಾಂಗೆಸ್ ಅಡ್ರೆಸಸ್ – ಚಾರ್ಲ್ಸ್ ಕರೋಲ್ ಬೊನ್ನಿ ಕೃತಿಗಳಲ್ಲಿ ಸಿಗುತ್ತದೆ. ಈ ಕೃತಿಗಳಲ್ಲಿ ವಿಶ್ವ ಧರ್ಮ ಸಂಸತ್ತನ್ನು ಪ್ರತಿನಿಧಿಸಿ ಮಾತನಾಡಿದ ಭಾರತೀಯರಲ್ಲಿ ಯಾರಿಗೆ ಎಷ್ಟು ಸ್ಥಳಾವಕಾಶ ದಕ್ಕಿದೆ ಎನ್ನುವುದು ಕೋಷ್ಟಕ-೮ ರಲ್ಲಿದೆ. ಇದರ ಆಧಾರದ ಮೇಲೆ ಸ್ವಾಮಿಗಳು ಪ್ರತಿಪಾದಿಸಿದ್ದಕ್ಕಿಂತಲೂ ಹೆಚ್ಚು ಗಮನ ಸೆಳೆಯುವ ವಿಷಯಗಳು ಇತರರಿಂದ ಬಂದಿದ್ದವೆಂದು ತಿಳಿಯುತ್ತದೆ.
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ಅಮೆರಿಕದ ಷಿಕಾಗೊ ನಗರದಲ್ಲಿ ೧೧/೯/೧೮೯೩ ರಿಂದ ೨೮/೯/೧೮೯೩ ರ ವರೆಗೆ ೧೮ ದಿನ ನಡೆದ ವಿಶ್ವ ಧರ್ಮ ಸಂಸತ್ತಿನ ಮೂಲಕ ಸ್ವಾಮಿಗಳು ಖ್ಯಾತಿಗೆ ಬಂದರು. ಆಲ್ಲಿಂದ ಸ್ವಾಮಿಗಳ ಚಟುವಟಿಕೆಗಳು ಸಾರ್ವಜನಿಕವಾದವು. ಆದ್ದರಿಂದ ಅಲ್ಲಿಂದಲೇ ಸ್ವಾಮಿಗಳ ಚಿತ್ರಣವನ್ನು ಪಡೆಯಲು ಮೊದಲಾಗಬಹುದು. ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿಗಳು ಗಳಿಸಿದ ಯಶಸ್ಸಿನ ಬಗ್ಗೆ ಸಾಕಷ್ಟು ವರದಿಗಳಿರುವುದರಿಂದ ಸ್ವಾಮಿಗಳು ಇಲ್ಲದಿದ್ದ ವಿಶ್ವ ಧರ್ಮ ಸಂಸತ್ತು ಹೇಗಿ ಇದ್ದಿರುತ್ತಿದ್ದಿತೆಂದು ತಿಳಿಯಬಹುದು.
ವಿಶ್ವ ಧರ್ಮ ಸಂಸತ್ತು ಎಂದರೆ ಸ್ವಾಮಿ ವಿವೇಕಾನಂದರು ಮಾತ್ರ ಎನ್ನುವ ತಪ್ಪು ತಿಳಿವಳಿಕೆಯನ್ನು ಭಾರತದಲ್ಲಿ ಕಳೆದ ೧೨೦ ವರ್ಷಗಳಿಂದ ಬಹು ಯಶಸ್ವಿಯಾಗಿ ಬಿತ್ತಿ ಬೆಳೆಸಿಕೊಂಡು ಬರಲಾಗಿದೆ. ವಿಶ್ವ ಧರ್ಮ ಸಂಸತ್ತಿನ ಕಲಾಪ ಮತ್ತು ಪ್ರತಿನಿಧಿಗಳ ವಿವರಗಳನ್ನು ಅದರ ಕಾರ್ಯದರ್ಶಿಯಾಗಿದ್ದ ಜೆ.ಎಚ್ ಬರೋಸ್’ ಎರಡು ಸಂಪುಟಗಳಲ್ಲಿ ದಾಖಲಿಸಿದ್ದಾರೆ. ಈ ದಾಖಲೆಯಂತೆ ವಿಶ್ವ ಸಂಸತ್ತಿನ ಉದ್ಘಾಟನೆಯ ದಿನ – ೧೧/೯/೧೮೯೩- ಅಧ್ಯಕ್ಷ ಚಾರ್ಲ್ಸ್ ಸಿ.ಬೊನ್ನಿ ಮತ್ತು ಕಾರ್ಯದರ್ಶಿ ಜೆ.ಎಚ್ ಬರೋಸ್ ಸೇರಿದಂತೆ ಮುಖ್ಯ ವೇದಿಕೆಯ ಮೇಲೆ ೫೯ ಜನರಿದ್ದರು. ಅದರಲ್ಲಿ (೧) ಪ್ರತಾಪಚಂದ್ರ ಮಜುಂದಾರ್-ಬ್ರಾಹ್ಮ ಸಮಾಜ, ಕಲ್ಕತ್ತ (೨) ಸ್ವಾಮಿ ವಿವೇಕಾನಂದ-ಹಿಂದೂ ಧರ್ಮ, ಕಲ್ಕತ್ತ (೩) ಬಲವಂತ ಬಾಹು ನಗರ್ಕರ್-ಬ್ರಾಹ್ಮ ಸಮಾಜ,ಬಾಂಬೆ (೪) ಹೇವಿರತ್ನೆ ಧರ್ಮಪಾಲ –ಬೌದ್ಧ, ಸಿಲೋನ್ (೫) ಮೌರಿಸ್ ಫಿಲಿಫ್-ಕ್ರೈಸ್ತ , ಬೆಂಗಳೂರು (೬) ವೀರಚಂದ ಗಾಂಧಿ-ಜೈನ , ಬಾಂಬೆ (೭) ಜಿಯಾನ್ನೆ ಸೊರಾಬ್ಜಿ-ಕ್ರೈಸ್ತ , ಬಾಂಬೆ (೮) ಜ್ಞಾನೇಂದ್ರ ಎನ್. ಚಕ್ರವರ್ತಿ-ಥಿಯೊಸೊಫಿ, ಅಲಹಾಬಾದ್ (೯) ಜಿಂದಾ ರಾಮ್-ಇಸ್ಲಾಂ, ಪಂಜಾಬ್ (೧೦) ಸಿಧೂ ರಾಮ್-ಇಸ್ಲಾಂ ಭಾರತದ ಈ ೧೦ ಜನರಿಗೆ ಮುಖ್ಯ ವೇದಿಕೆಯಲ್ಲಿ ಸ್ಥಾನ ದಕ್ಕಿದ್ದಿತು. ಇವರಲ್ಲದೆ (೧) ಲಕ್ಷ್ಮೀ ನಾರಾಯಣ , ಹಿಂದೂ, ಲಾಹೋರ್ (೨) ನರಸಿಂಹಾಚಾರ್ಯ – ಹಿಂದೂ, ವಿಶಿಷ್ಟಾದ್ವೈತ , ಮದ್ರಾಸ್ (೩) (೩) ರಾಬರ್ಟ್ ಹ್ಯೂಮ್-ಕ್ರೈಸ್ತ, ಮದ್ರಾಸ್ ಮುಖ್ಯ ವೇದಿಕೆಯಲ್ಲಿ ಇರದಿದ್ದರೂ ಸಭೆಯಲ್ಲಿ ಹಾಜರಿದ್ದರು. ವಿಶ್ವ ಧರ್ಮ ಸಮ್ಮೇಳನಕ್ಕೆ ಹೋಗದಿದ್ದರೂ (೧) ಜೆ..ಜೆ ಮೋದಿ –ಪಾರ್ಸಿ , ಬಾಂಬೆ (೨) ಮಣಿಲಾಲ ದ್ವಿವೇದಿ-ಹಿಂದೂ , ಬಾಂಬೆ , (೩) ಮೋಹನ ದೇವ್ –ಹಿಂದೂ , ಲಾಹೋರ್ (೪) ಎಸ್. ಪಾರ್ಥಸಾರಥಿ ಅಯ್ಯಂಗಾರ್, ಹಿಂದೂ, ವಿಶಿಷ್ಟಾದ್ವೈತ , ಮದ್ರಾಸ್ (೫) ಥಾಮ್ಸ್ ಇ. ಸ್ಲೇಟರ್-ಕ್ರೈಸ್ತ (೬) ಟಿ;ಜೆ ಸ್ಕಾಟ್-ಕ್ರೈಸ್ತ (೭) ಪುರುಷೋತ್ತಮ ಬಾಲಕೃಷ್ಣ ಜೋಷಿ –ಹಿಂದೂ , ಕೇಳ್ವ, ಮಾಹಿಂ, ಬಾಂಬೆ ತಮ್ಮ ಪ್ರಬುದ್ಧ ಲೇಖನಗಳನ್ನು ಕಳಿಸಿದ್ದರು. ಸಿಧುರಾಂ ಮತ್ತು ಜಿಂದಾರಾಂ ಎನ್ನುವ ಇಬ್ಬರ ಮುಸ್ಲಿಮರು ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಗವಹಿಸಿದರಾದರೂ ಯಾವುದೇ ಭಾಷಣ ಮಾಡಲಿಲ್ಲ, ಲೇಖನ ಮಂಡಿಸಲಿಲ್ಲ. ಸ್ವಾಮಿ ವಿವೇಕಾನಂದ , ನರಸಿಂಹಾಚಾರ್ಯ ಮತ್ತು ಲಕ್ಷ್ಮೀನಾರಾಯಣ ಸೈಂಟಿಫಿಕ್ ಸೆಕ್ಷನ್’ನಲ್ಲಿ ಮಾತನಾಡಿದರಾದರೂ ಅದನ್ನು ಜೆ.ಎಚ್ ಬರೋಸ್ ವರದಿಯಲ್ಲಿ ಸೇರಿಸಿಲ್ಲ. ಕ್ರೈಸ್ತ ಧರ್ಮವನ್ನು ಪ್ರತಿನಿಧಿಸಿ ಭಾರತದಿಂದ ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ನಾಲ್ಕು ಜನ ಕ್ರೈಸ್ತ ಪಾದ್ರಿಗಳಿಗೂ ತಮ್ಮ ಧರ್ಮವಲ್ಲದೆ ಹಿಂದೂ ಧರ್ಮವನ್ನು ಅಧ್ಯಯನ ಮಾಡಿದ್ದರೆನ್ನುವುದು ಅವರು ಸಂಸತ್ತಿನಲ್ಲಿ ಮಂಡಿಸಿದ ಲೇಖನಗಳು ಸ್ಪಷ್ಟಪಡಿಸುತ್ತವೆ. (1)
ವಿಶ್ವ ಧರ್ಮ ಸಂಸತ್ತಿನಲ್ಲಿ ೧೭ ದೇಶಗಳ ಪ್ರತಿನಿಧಿಗಳು ಮಾತನಾಡಿದರು. ಭಾರತದ ೧೮ , ಜಪಾನಿನ ೧೬ , ಇಂಗ್ಲೆಂಡ್ ೫ , ಫ್ರಾನ್ಸ್’ನ ೫ ಲೇಖನಗಳು ವಿಶ್ವ ಧರ್ಮ ಸಂಸತ್ತನ್ನು ಪ್ರವೇಶಿಸಿದ್ದವು. ಅರ್ಮೇನಿಯಾ, ಬೆಲ್ಜಿಯಂ , ಕೆನಡಾ, ಜರ್ಮನಿ , ಗ್ರೀಸ್ , ರಷ್ಯಾ , ಸಿಟ್ಸರ್ಲ್ಯಾಂಡ್ , ಸಿರಿಯಾ , ಥೈಲ್ಯಾಂಡ್ , ಟರ್ಕಿ ದೇಶಗಳು ಭಾಗವಹಿಸಿದ್ದವು. (1) ಇಂಗ್ಲಿಷ್ ಭಾಷೆಯ ಪ್ರಭುತ್ವದಿಂದಾಗಿ ಭಾರತೀಯ ಪ್ರತಿನಿಧಿಗಳು ಹೆಚ್ಚು ಗಮನ ಸೆಳೆದರು, ಜಪಾನಿನ ಬೌದ್ಧ ಪ್ರತಿನಿಧಿ ಕಿಂಝ ರಿಂಝೆ ಹಿರಾಯ್ ಮತ್ತು ಭಾರತದ ಪ್ರತಾಪ ಚಂದ್ರ ಮಜುಂದಾರ್ ಅಮೆರಿಕನ್ನರ ಹೃದಯ ಗೆದ್ದವರಲ್ಲಿ ಮುಂಚೂಣಿಯಲ್ಲಿದ್ದರು. ಹಿಂದೂ ದೇವಾಲಯದಲ್ಲಿ ಪ್ರಚಲಿತವಿದ್ದ ಕೆಲ ಪದ್ದತಿಗಳ ಬಗ್ಗೆ ಕ್ರೈಸ್ತ ಮಿಷನರಿ ಮಾಡಿದ ಅವಹೇಳನಕ್ಕೆ ಸಿಡಿದೆದ್ದು ೨೫/೯/೧೮೯೩ ರಂದು ವಿಶ್ವ ಧರ್ಮ ಸಂಸತ್ತಿನ ಮುಖ್ಯ ವೇದಿಕೆಯ ಮೇಲಿಂದ ದಿಟ್ಟ ಉತ್ತರ ಕೊಟ್ಟು ಹಿಂದೂಗಳ ಪರ ನಿಂತವರು ಹಿಂದೂ ಅಲ್ಲದ ಜೈನ ವೀರಚಂದ ಗಾಂಧಿ. ವಿಶ್ವ ಧರ್ಮ ಸಂಸತ್ತಿನ ಉದ್ಘಾಟನೆಯ ದಿನ ಕೊಲಂಬಸ್ ಮುಖ್ಯ ವೇದಿಕೆಯಿಂದ ಭಾಷಣ ಮಾಡಿದ ಜ್ಞಾನೇಂದ್ರ ಚಕ್ರವರ್ತಿ ಪಾಶ್ಚಾತ್ಯರ ಲೌಕಿಕ ಸಾಧನೆ ಮತ್ತು ಪೌರಾತ್ಯರ ಮಾನಸಿಕ ಸಾಧನೆಗಳನ್ನು ಹೋಲಿಸಿ ವಿಶ್ಲೇಷಿಸಿ ಮಿಂಚಿನ ಸಂಚಲನ ತಂದರು. ಮೋಹನ ದೇವರ ಲೇಖನ ಹಿಂದೂ ಅಧ್ಯಾತ್ಮ ಜೀವನ ದೃಷ್ಟಿಯನ್ನು ವಿಸ್ತರಿಸಿ ತಿಳಿಸಿತು.
೧೭/೯/೧೮೯೩ ರಂದು ಬಲವಂತ ಬಾಹು ನಗರ್ಕರ್ ಹಣದ ನೆರವಿನಿಂದ ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಹರಡಲು ಸಾಧ್ಯವಿಲ್ಲವೆಂದು ಘೋಷಿಸಿ , ಮಿಷನರಿಗಳ ಮಾರ್ಗೋಪಾಯಗಳ ಮೇಲೆ ಹರಿಹಾಯ್ದರು. ಇದಾದ ೩ ದಿನಗಳ ನಂತರ -೨೧/೯/೧೮೯೩- ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾತನಾಡಲು ಎರಡು ಸಲ ಅವಕಾಶ ಪಡೆದ ನರಸಿಂಹಾಚಾರ್ಯ ಮೊದಲ ಬಾರಿಗೆ ಕ್ರೈಸ್ತ ದೇಶದಲ್ಲಿ , ಕ್ರೈಸ್ತರ ವೇದಿಕೆಯಿಂದ ಮಿಷನರಿಗಳು ಭಾರತದಲ್ಲಿ ಕ್ರೈಸ್ತ ಧರ್ಮ ಹರಡಲು ಅನುಸರಿಸುತ್ತಿರುವ ಮಾರ್ಗಗಳನ್ನು ದಿಟ್ಟವಾಗಿ , ನೇರವಾಗಿ , ವಿಮರ್ಶಿಸಿ , ಖಂಡಿಸಿ , ಉತ್ತಮವಾದುದನ್ನು ಗೌರವಿಸಿ ಗಮನ ಸೆಳೆದರು. ನರಸಿಂಹಾಚಾರ್ಯರನ್ನು ಧರ್ಮಪಾಲ ಬಲವಾಗಿ ಬೆಂಬಲಿಸಿದರು.ಸ್ವಾಮಿಗಳು ಕ್ರೈಸ್ತ ಮಿಷನರಿಗಳ ಮತಾಂತರ ತಂತ್ರಗಳನ್ನು ಟೀಕಿಸಿದರು. (2) ಮಣಿಲಾಲ ನಭುಭಾಯಿ ದ್ವಿವೇದಿಯವರು ಸಿದ್ಧಪಡಿಸಿದ್ದ ‘ಹಿಂದೂ ಧರ್ಮ’ ಲೇಖನ ತಿರುಳಿನಲ್ಲಿ , ವಿದ್ವತ್ತಿನಲ್ಲಿ ಸ್ವಾಮಿಗಳು ಮಾಡಿದ ಭಾಷಣಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದಿತು. (3) ಮುಂದಿನ ದಿನಗಳಲ್ಲಿ ಸ್ವಾಮಿಗಳು ಪ್ರತಾಪಚಂದ್ರ ಮಜುಂದಾರ , ನರಸಿಂಹಾಚಾರ್ಯ , ಜ್ಞಾನೇಂದ್ರ ಚಕ್ರವರ್ತಿಯವರ ಹಲವು ಅಭಿಪ್ರಾಯಗಳನ್ನು ವಿಸ್ತರಿಸಿ ಅವು ತಮ್ಮದೇ ಎಂಬಂತೆ ಹಲವು ಭಾಷಣಗಳಲ್ಲಿ ಮಂಡಿಸಿದರು.
ಷಿಕಾಗೊ ಡೈಲಿ ಇಂಟರ್ ಓಷನ್ -೧೨/೯/೧೮೯೩- ‘ಭಾರತದ ಪಿ.ಸಿ ಮಜುಂದಾರರು ಮಾಡಿದ ಭಾಷಣ ಅಮೆರಿಕದ ಮುಂದಿನ ಯಾವುದೇ ಅಧ್ಯಕ್ಷ ತಿಳಿದುಕೊಳ್ಳುವಂತಹುದು ಎಂದರೆ ಧರ್ಮಪಾಲ ಕೊಲಂಬಸ್ ಮುಖ್ಯ ವೇದಿಕೆಯಿಂದ ಸಭಿಕರಿಗೆ ಎಸೆದ ದಿಟ್ಟ ಸವಾಲನ್ನು ‘ದಿ ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್ ‘ ೧೫/೯/೧೮೯೩ ರ ಸಂಚಿಕೆಯಲ್ಲಿ ವರದಿ ಮಾಡಿತು. ೧೮/೯/೧೮೯೩ ರಂದು ಧರ್ಮಪಾಲ ಮಾಡಿದ ‘ವರ್ಲ್ಡ್ ಡೆಬ್ಟ್ಸ್ ಟು ಬುದ್ಧ ‘ ಎನ್ನುವ ಭಾಷಣದ ಬಗ್ಗೆ ೨೮/೯/೧೮೯೩ ರಂದು ಬರೆಯುತ್ತ ಡುಬುಕ್ಯೂ (ಅಯೋವಾ) ಟೈಮ್ಸ್ ‘ ಆತನ ಭಾಷಣದ ಮುಕ್ತಾಯ ಷಿಕಾಗೊದ ಜನ ಈ ಹಿಂದೆ ಎಂದೂ ಕೇಳಿರದಷ್ಟು ಆಹ್ಲಾದಕರವಾಗಿದ್ದು. ಡೆಮೊಸ್ತೆನೆಸ್ ಎಂದಿಗೂ ಅದನ್ನು ಮೀರಿಸಲಾರ’ ಎಂದು ಉದ್ಗರಿಸಿದ್ದಿತು. ಷಿಕಾಗೊ ಡೈಲಿ ಇಂಟರ್ ಓಷನ್ ೨೨/೯/೧೮೯೩ - ಮುಖಪುಟದಲ್ಲಿ ‘ಜಿಯಾನ್ನೆ ಸೊರಾಬ್ಜಿಯನ್ನು ಪರಿಚಯಿಸಿದಾಗ ಆಕೆ ಎದ್ದು ನಿಂತಳು. ಆಗ ಆಕೆ ಕ್ಲಿಯೋಪಾತ್ರಳ ರೂಪದರ್ಶಿಯಂತೆ ಕಂಡಳು…….ಆಕೆ ಮಂಡಿಸಿದ ಲೇಖನ ಹೃದಯಸ್ಪರ್ಶಿಯಾಗಿದ್ದಿತು… ವಾಷಿಂಗ್ಟನ್ ರಾಜಕಾರಣಿಯ ಮಗಳದೋ ಎಂಬಂತೆ ಆಕೆ ಉತ್ಕೃಷ್ಟ ಇಂಗ್ಲಿಷ್’ನಲ್ಲಿ ಗಾಂಭೀರ್ಯದಿಂದ ತನ್ನ ಲೇಖನ ಓದಿದಳು ಎಂದು ತನ್ನ ಮೆಚ್ಚುಗೆ ವ್ಯಕ್ತಪಡಿಸಿತು. ಷಿಕಾಗೊ ಹೆರಾಲ್ಡ್ - ೧೫/೯/೧೮೯೩- ಹಳದಿ ಮುಂಡಾಸು ಧರಿಸಿದ್ದ ಕಡೆದ ವಿಗ್ರಹದಂತಿದ್ದ ಜಿ.ಎನ್ ಚಕ್ರವರ್ತಿ ಹೆಂಗಸರನ್ನು ಕುರಿತಾಗಿ ಮಾರ್ದವತೆಯಿಂದ ಮಾತನಾಡಿ ಅವರಿಂದ ಭಾರಿ ಮೆಚ್ಚುಗೆ ಪಡೆದರು ಮತ್ತು ಹೆಂಗಸರಿಂದ ಅತ್ಯಂತ ಮೋಹಕ ಗಂಡಸು ಎಂದು ಗುರುತಿಸಲ್ಪಟ್ಟರು ಎಂದು ವರದಿಮಾಡಿತು. ಹೀಗೆ ಸ್ವಾಮಿಗಳು ಮಾತ್ರವಲ್ಲದೆ ಇತರ ಭಾರತೀಯ ಪ್ರತಿನಿಧಿಗಳು ತಮ್ಮ ನಡೆ , ನುಡಿ , ಜ್ಞಾನ , ಇಂಗ್ಲಿಷ್ ನಿರರ್ಗಳತೆ , ಭಾಷಣ ಶೈಲಿಗಳಿಂದ ಅಮೆರಿಕನ್ನರ ಮನ ಗೆದ್ದಿದ್ದರು.
೩.೨ ಕಲಾಪಗಳು : ವಿಶ್ವ ಧರ್ಮ ಸಂಸತ್ತು ೧೧/೯/೧೮೯೩ ರಿಂದ ೨೭/೯/೧೮೯೩ ರ ಅವಧಿಯಲ್ಲಿ ಒಟ್ಟು ೧೭ ದಿನ ನಡೆಯಿತು. ಸಂಸತ್ತಿನ ಕಲಾಪಗಳ ಪಟ್ಟಿ , ಭಾಷಣಕಾರರ ವಿವರಗಳು ಕೋಷ್ಟಕ-೫ ರಲ್ಲಿದೆ. ಬ್ರಾಹ್ಮ ಸಮಾಜ, ಥಿಯೊಸೊಫಿ ಮತ್ತು ಹಿಂದೂ ಧರ್ಮದ ಪ್ರತಿನಿಧಿಗಳಿಗೆ ಈ ಕಲಾಪಗಳಲ್ಲಿ ಸಿಕ್ಕ ಅವಕಾಶಗಳ ವಿವರ ಮುಂದಿದೆ. (4) ( ಕೊಲಂಬಸ್ ಹಾಲ್ = * , ಸೈಂಟಿಫಿಕ್ ಸೆಕ್ಷನ್ = ** )
ಮೇಲಿನ ಕೋಷ್ಟಕ ಸ್ವಾಮಿಗಳು ಷಿಕಾಗೊ ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಗವಹಿಸಿದ ಬಗ್ಗೆ ಈವರೆಗೆ ಜನಪ್ರಿಯವಾಗರುವ ನೂರಾರು ತಪ್ಪು ತಿಳಿವಳಿಕೆಗಳನ್ನು ಕೊನೆಗಾಣಿಸುತ್ತದೆ.
ಪತ್ರಿಕೆ ವರದಿಗಳು : ಕೋಷ್ಟಕ-೬: ರಲ್ಲಿ ಅಮೆರಿಕದ ವಿಶ್ವ ಧರ್ಮ ಸಂಸತ್ತು ನಡೆಯುತ್ತಿದ್ದಾಗ ಅಮೆರಿಕ ಪತ್ರಿಕೆಗಳು ಪ್ರಕಟಿಸಿದ ವರದಿ ಅದರಲ್ಲಿ ಉಲ್ಲೇಖವಾಗರುವ ವ್ಯಕ್ತಿಗಳು ಮಾಹಿತಿಯಿದೆ. ವಿವಿಧ ಪತ್ರಿಕೆಗಳಲ್ಲಿ ಭಾರತೀಯರು ಸುದ್ದಿಯಾಗಿ ಅಥವಾ ಪ್ರಾಸಂಗಿಕ ಸುದ್ದಿಯಾಗಿ ಕಾಣಿಸಿಕೊಂಡ ದಿನಾಂಕದ ಪಟ್ಟಿ ಕೆಳಗಿದೆ. ( ಕ್ರೈಸ್ತರಲ್ಲದ ಭಾರತೀಯರು ಮಾತ್ರ)
ಸ್ವಾಮಿಗಳು ೨/೧೧/೧೮೯೩ ರಂದು ಅಳಸಿಂಗ ಪೆರುಮಾಳ್’’ಗೆ ಬರೆದ ಪತ್ರದಲ್ಲಿ ‘ನನ್ನ ಭಾಷಣ ಮುಗಿದ ಮೇಲೆ ಉದ್ವೇಗದಿಂದ ದಣಿವಾಗಿ ಕುಳಿತುಬಿಟ್ಟೆ. ಮಾರನೆಯ ದಿನ ಎಲ್ಲ ಪತ್ರಿಕೆಗಳು ನನ್ನ ಭಾಷಣವೇ ಎಲ್ಲಕ್ಕಿಂತ ಉತ್ತಮವಾದುದು ಎಂದು ಕೊಂಡಾಡಿದವು. ನಾನು ಇಡೀ ಅಮೆರಿಕ ದೇಶಕ್ಕೆ ಪರಿಚಿತನಾದೆ….......’ ಎಂದು ಬರೆದಿದ್ದಾರೆ. ಇದು ನಿಜವಲ್ಲ ೧೨/೯/೧೮೯೩ ರ ಸಂಚಿಕೆಯಲ್ಲಿ ‘ದಿ ಷಿಕಾಗೊ ಹೆರಾಲ್ಡ್ . ಷಿಕಾಗಿ ಡೈಲಿ ಟ್ರಿಬ್ಯೂನ್ ಮತ್ತು ದಿ ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್ ಮಾತ್ರ ಸ್ವಾಮಿಗಳನ್ನು ಉಲ್ಲೇಖಿಸಿವೆ. ಅದರಂತೆ ಪ್ರತಾಪಚಂದ್ರ ಮಜುಂದಾರ್, ಬಲವಂತ ಬಾಹು ನಗರ್ಕರ್, ಹೇವಿರತ್ನೆ ಧರ್ಮಪಾಲ ಮತ್ತು ವೀರಚಂದ ಗಾಂಧಿಯವರನ್ನು ಕುರಿತಾಗಿಯೂ ಪತ್ರಿಕೆಗಳು ಬರೆದಿವೆ. ಆದ್ದರಿಂದ ಸ್ವಾಮಿಗಳು ಅಳಸಿಂಗ ಪೆರುಮಾಳ್’ಗೆ ತಿಳಿಸಿದ್ದು ಉತ್ಪ್ರೇಕ್ಷೇಯಿಂದ ಕೂಡಿದ್ದು , ಆತ ಬೆರಗಾಗುವಂತೆ ಮಾಡುವ ಗುರಿಯನ್ನು ಹೊಂದಿದ್ದಿತು.
ವಿಶ್ವ ಧರ್ಮ ಸಂಸತ್ತು ನಡೆಯುತ್ತಿರುವಾಗ-೧೧/೯/೧೮೯೩ ರಿಂದ ೨೭/೯/೧೮೯೩- ಅಮೆರಿಕದ ಅದರಲ್ಲೂ ವಿಶೇಷವಾಗಿ ಷಿಕಾಗೊ ಮೂಲದ ಜನಪ್ರಿಯ ಪತ್ರಿಕೆಗಳು ಭಾರತೀಯರಿಗೆ ಅವರು ಮಂಡಿಸಿದ ವಿವರಗಳಿಗೆ ಎಷ್ಟು ಪ್ರಾಶಸ್ತ್ಯ ಕೊಟ್ಟವು , ಯಾವ ಭಾರತೀಯರು ಹೆಚ್ಚಿನ ಗಮನ ಸೆಳೆದರು ಎನ್ನುವ ವಿವರಗಳು ಕೋಷ್ಟಕ-೭ ರಲ್ಲಿವೆ. ಪತ್ರಿಕೆಗಳ ಒಂದು ಲಂಬ ಸಾಲಿನ ಘಟಕದಲ್ಲಿ ಎಷ್ಟು ಸಾಲುಗಳು ಯಾವ ವ್ಯಕ್ತಿಗೆ ಮೀಸಲಾಗಿದ್ದವು ಎನ್ನುವ ಸ್ಥೂಲ ಚಿತ್ರಣ ಮುಂದಿದೆ. ( ಕ್ರೈಸ್ತರಲ್ಲದ ಭಾರತೀಯರು ಮಾತ್ರ). ಕೋಷ್ಟಕದಲ್ಲಿರುವ ಮಾಹಿತಿಯಿದ ಅಮೆರಿಕ ಮೂಲದ ಪತ್ರಿಕೆಗಳಲ್ಲಿ ಸ್ವಾಮಿಗಳಿಗಿಂತ ಹೆಚ್ಚು ಸ್ಥಾನ ಗಿಟ್ಟಿಸಿದ್ದ ಇತರರಿದ್ದರೆನ್ನುವುದು ತಿಳಿದುಬರುತ್ತದೆ. (5)
ವರದಿಗಳು ಮತ್ತು ಪ್ರಾಶಸ್ತ್ಯ : ವಿಶ್ವ ಧರ್ಮ ಸಂಸತ್ತು ಮುಗಿದ ನಂತರ ಅದರೆ ಸಮಗ್ರ ವರದಿ (೧) ದಿ ವರ್ಲ್ಡ್ಸ್ ಪಾರ್ಲಿಮೆಂಟ್ ಆಫ್ ರಿಲಿಜನ್ಸ್ –ರೆ. ಜಾನ್ ಎಚ್. ಬರೋಸ್ ೧೮೯೩ (೨) ದಿ ವರ್ಲ್ಡ್ಸ್ ಕಾಂಗೆಸ್ ಆಫ್ ರಿಲಿಜನ್ಸ್ ಅಟ್ ದಿ ವರ್ಲ್ದ್ಸ್ ಕೊಲಂಬಿಯನ್ ಎಕ್ಸ್’ಪೊಸಿಷನ್ – ಜೆ. ಡಬ್ಲ್ಯು ಜಾನ್ಸನ್ ೧೮೯೪ (೩) ದಿ ಪಾರ್ಲಿಮೆಂಟ್ ಆಫ್ ರಿಲಿಜನ್ಸ್ ಅಂಡ್ ದಿ ರಿಲಿಜಿಯಸ್ ಕಾಂಗ್ರೆಸ್ ಅಟ್ ದಿ ವರ್ಲ್ದ್ಸ್ ಕೊಲಂಬಿಯನ್ ಎಕ್ಸ್’ಪೊಸಿಷನ್ –ವಾಲ್ಟರ್ ಆರ್ ಹೌಟನ್- ೧೮೯೩ (೪) ರಿವ್ಯೂ ಆಫ್ ವರ್ಲ್ಡ್ಸ್ ರಿಲಿಜಿಯಸ್ ಕಾಂಗ್ರೆಸ್ –ಎಲ್.ಪಿ ಮರ್ಸರ್ , ರ್ಯಾಂಡ್ ೧೮೯೩ (೫) ಎ ಖೋರಸ್ ಆಫ್ ಫೇಥ್-ಜೆಂಕಿನ್ ಲಾಯ್ಡ್ ಜೋನ್ಸ್ (೬) ವರ್ಲ್ಡ್ಸ್ ಕಾಂಗೆಸ್ ಅಡ್ರೆಸಸ್ – ಚಾರ್ಲ್ಸ್ ಕರೋಲ್ ಬೊನ್ನಿ ಕೃತಿಗಳಲ್ಲಿ ಸಿಗುತ್ತದೆ. ಈ ಕೃತಿಗಳಲ್ಲಿ ವಿಶ್ವ ಧರ್ಮ ಸಂಸತ್ತನ್ನು ಪ್ರತಿನಿಧಿಸಿ ಮಾತನಾಡಿದ ಭಾರತೀಯರಲ್ಲಿ ಯಾರಿಗೆ ಎಷ್ಟು ಸ್ಥಳಾವಕಾಶ ದಕ್ಕಿದೆ ಎನ್ನುವುದು ಕೋಷ್ಟಕ-೮ ರಲ್ಲಿದೆ. ಇದರ ಆಧಾರದ ಮೇಲೆ ಸ್ವಾಮಿಗಳು ಪ್ರತಿಪಾದಿಸಿದ್ದಕ್ಕಿಂತಲೂ ಹೆಚ್ಚು ಗಮನ ಸೆಳೆಯುವ ವಿಷಯಗಳು ಇತರರಿಂದ ಬಂದಿದ್ದವೆಂದು ತಿಳಿಯುತ್ತದೆ.
Comment Box is loading comments...