ಗುರಿ-ಸಾಧನೆ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಅ ಆಯ್ದ ಭಾಗ)
ಸ್ವಾಮಿಗಳು ಅಮೆರಿಕಕ್ಕೆ ಹೋಗಿದ್ದು ಏಕೆ ಎನ್ನುವ ಪ್ರಶ್ನೆಗೆ ಲೌಕಿಕ ಸಾಧಕರಾದ ಪಾಶ್ಚಾತ್ಯರಿಗೆ ಹಿಂದೂ ಧರ್ಮದ ಶ್ರೇಷ್ಟತೆಯನ್ನು ಮನವರಿಕೆ ಮಾಡಿ ಆ ಮೂಲಕ ಜಗತ್ತಿಗೆ ತಿಳಿಸುವುದು ಎನ್ನುವ ಸಾಮಾನ್ಯ ಉತ್ತರ ಬರುತ್ತದೆ. ಈ ಜನಪ್ರಿಯ ನಂಬಿಕೆಗೆ ೧೫/೩/೧೮೯೩ ರಂದು ಖೇತ್ರಿ ರಾಜ ಅಜಿತ್ ಸಿಂಗ್’ಗೆ ಸ್ವಾಮಿಗಳು ಬರೆದಿರುವ ಪತ್ರ ಅಡ್ಡಿಯಾಗಿದೆ. ‘ಈಗ ಮದ್ರಾಸಿನಲ್ಲಿ ನೆಲೆಸಿರುವ ರಾಮನಾಡಿನ ಜಮೀನ್ದಾರನಿದ್ದಾನೆ. ಆತ ನನ್ನನ್ನು ಯುರೋಪಿಗೆ ಕಳಿಸಬೇಕೆಂದಿದ್ದಾನೆ. ನಿಮಗೆ ಈಗಾಗಲೇ ಗೊತ್ತಿರುವಂತೆ ನನಗೆ ಆ ಜಾಗಗಳನ್ನು ನೋಡಬೇಕೆನ್ನುವ ತವಕದ ಮನಸ್ಸಿದೆ. ಈ ಅವಕಾಶವನ್ನು ಬಳಸಿಕೊಂಡು ನಾನು ಯುರೋಪ್ ಮತ್ತು ಅಮೆರಿಕ ಪ್ರವಾಸ ಮಾಡಬೇಕೆಂದಿದ್ದೇನೆ. ಆದರೆ ಜಗತ್ತಿನ ಮೇಲಿರುವ ನನ್ನ ಏಕೈಕ ಗೆಳೆಯರಾದ ಪ್ರಭುಗಳನ್ನು (ಹೈ ಅಪ್) ಕೇಳದೆ ನಾನು ಏನನ್ನೂ ಮಾಡುವುದಿಲ್ಲ. ಆದ್ದರಿಂದ ದಯಮಾಡಿ ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ. ಆ ಜಾಗಗಳಿಗೆ ಒಂದು ರೀತಿಯ ಪ್ರವಾಸವನ್ನು ಮಾತ್ರ ಮಾಡಬೇಕೆಂದುಕೊಂಡಿರುವೆ‘ ಇದು ಸ್ವಾಮಿಗಳ ವಿದೇಶಿ ಪ್ರವಾಸಕ್ಕೆ ಸ್ಪಷ್ಟ ಮುನ್ನುಡಿಯಾಗಿದೆ- ಈ ಪತ್ರ ಕೃತಿಶ್ರೇಣಿಯಲ್ಲಿಲ್ಲ.
ಸಂನ್ಯಾಸಿಯಾಗಿ ಪರಿವ್ರಾಜಕರಾಗಿದ್ದಾಗ ಪ್ರಮದದಾಸ ಮಿತ್ರರಿಗೆ ಪಾಣಿನಿಯ ಪದ್ದತಿಯಲ್ಲಿ ಪಾಂಡಿತ್ಯ ಪಡೆದು , ಆನಂತರ ಬಂಗಾಳದಲ್ಲಿ ವೇದಗಳನ್ನು ಮತ್ತೊಮ್ಮೆ ಪ್ರಚಾರಕ್ಕೆ ತರುವ ಭರವಸೆಯನ್ನು ವ್ಯಕ್ತಪಡಿಸಿದ್ದರು. (೧೯/೧೧/೧೮೮೮) . ಅಮೆರಿಕಕ್ಕೆ ಹೋದ ನಂತರವೂ ತಮ್ಮ ವಿದೇಶ ಪ್ರವಾಸದ ಗುರಿಯ ಬಗ್ಗೆ ಸ್ವಾಮಿಗಳಲ್ಲಿ ಸ್ಪಷ್ಟತೆ ಇರಲಿಲ್ಲ. ೨೯/೮/೧೮೯೩ ರಂದು ಶ್ರೀಮತಿ ಆಸ್ಟಿನ್ ಟಪ್ಪನ್ ರೈಟ್ (ಶ್ರೀಮತಿ ಜಾನ್ ರೈಟ್) ತನ್ನ ತಾಯಿಗೆ ಬರೆದ ಪತ್ರದಲ್ಲಿ ‘ಭಾನುವಾರ ಜಾನ್ ಈತನನ್ನು (ಸ್ವಾಮಿಗಳು) ಚರ್ಚ್’ನಲ್ಲಿ ಭಾಷಣ ಮಾಡಲು ಕರೆದಿದ್ದನು. ಆ ಸಂದರ್ಭದಲ್ಲಿ ವಿಧರ್ಮಿಯೊಬ್ಬನು ವಿಧರ್ಮ ತತ್ತ್ವಗಳ ಮೇಲೆ ಕಾಲೇಜು ಸ್ಥಾಪಿಸಲು ಚರ್ಚ್ ಚಂದಾ ಎತ್ತಿದ್ದನ್ನು ಕಂಡು ನಾನು ಮೂಲೆಗೆ ಸರಿದು ಮನಸಾರೆ ನಕ್ಕೆ ‘ ಎಂದು ಬರೆದಿದ್ದಳು. ಇದರಿಂದ ಸ್ವಾಮಿಗಳು ಭಾರತದಲ್ಲಿ ಸಂಘವೊಂದನ್ನು ಸ್ಥಾಪಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರೆಂದು ತಿಳಿಯಬಹುದು. ಡೈಲಿ ಗೆಝೆಟ್-೨೯/೮/೧೮೯೩- ಸ್ವಾಮಿಗಳು ಭಾರತದಲ್ಲಿ ಕೈಗಾರಿಕ ತರಬೇತಿಗಾಗಿ ಸಂನ್ಯಾಸಿಗಳನ್ನು ಒಗ್ಗೂಡಿಸಿ ತನ್ನ ದೇಶದ ಜನರನ್ನು ಬಡತನದಿಂದ ಬಿಡುಗಡೆಗೊಳಿಸುವುದೇ ತನ್ನ ಗುರಿಯೆಂದು ತಿಳಿಸಿದನು (47) ಮಿನ್ನೆಯಾಪೊಲಿಸ್-೨೩/೧೧/೧೮೯೩- ಬಡ ಜನ ತಮ್ಮ ಹೊಲಗಳಲ್ಲಿ ದುಡಿದು ಬಂದು ದಣಿವಾರಿಸುತ್ತ ಕುಳಿತಿರುವಾಗ ಅವರಲ್ಲಿಗೆ ಸಂನ್ಯಾಸಿಗಳನ್ನು ಕಳಿಸಿ ವಿದ್ಯೆಯನ್ನು ಹರಡುವ ಯೋಜನೆ ಸ್ವಾಮಿಗಳಿಗಿದೆ (48) , ಅಯೋವಾ ಸ್ಟೇಟ್ ರಿಜಿಸ್ಟರ್-೨೮/೧೧/೧೮೯೩- ಸ್ವಾಮಿಯ ಭಾಷಣ ಸಂಚಾರಗಳ ಗುರಿ ಭಾರತದ ಬಡವರಿಗಾಗಿ ಶಾಲೆಗಳನ್ನು ತೆಗೆದು ಅವರ ಸ್ಥಿತಿಯನ್ನು ಉತ್ತಮಗೊಳಿಸುವ ಯತ್ನವಾಗಿದೆಯಾದರೂ ಆತನ ಈ ಉಪನ್ಯಾಸಗಳನ್ನು ಅದೊಂದೇ ಗುರಿಯಿಂದ ಪರಿಗಣಿಸಲು ಸಿದ್ಧನಿಲ್ಲ ‘ (49) ಅಪೀಲ್ ಅವಲಾಂಚ್-೨೧/೧/೧೮೯೪- ‘ ಆತ ಭಾರತದಲ್ಲಿ ಪಾಲಿಟೆಕ್ನಿಕ್ ಕಾಲೇಜೊಂದನ್ನು ಪ್ರಾರಂಭಿಸಿ ಅದನ್ನು ಕೇಂದ್ರವಾಗಿರಿಸಿಕೊಂಡು ಶೈಕ್ಷಣಿಕ ವ್ಯವಸ್ಥೆಯೊಂದನ್ನು ಕಟ್ಟಿ ಧಾರ್ಮಿಕ ಮನೋಭಾವದ ತನ್ನ ಜನರನ್ನು ಏಳಿಗೆಗೆ ತರಬಯಸುತ್ತಾನೆ. (೫೦)‘ ಎನ್ನುವ ವರದಿಗಳು ಸ್ವಾಮಿಗಳ ಗುರಿ ಏನಾಗಿದ್ದಿತೆಂದು ತಿಳಿಸುತ್ತವೆ. ಲಾರೆನ್ಸ್ ಅಮೆರಿಕನ್ ಪತ್ರಿಕೆ ೧೩/೧೦/೧೮೯೪ ರಂದು ನಡೆಸಿದ ಸಂದರ್ಶನದಲ್ಲಿ ‘ ಸ್ವಾಮಿಗಳು ಏಳು ಭಾಷೆಗಳನ್ನು (ಬಂಗಾಳಿ ? , ಸಂಸ್ಕೃತ ? ಇಂಗ್ಲಿಷ್ ? ಹಿಂದಿ ? …..? ? ? ? ) ಬಲ್ಲವರಾಗಿದ್ದು ಅವೆಲ್ಲವನ್ನೂ ಓದಬಲ್ಲರು….. ಇಲ್ಲಿ ಅಮೆರಿಕದ ಸಂಸ್ಥೆಗಳನ್ನು ಅದರಲ್ಲೂ ವಿಶೇಷವಾಗಿ ಆಡಳಿತ ಪದ್ದತಿ ಸರ್ಕಾರವನ್ನು ಅರಿಯಲು ಯತ್ನಿಸುತ್ತಿದ್ದಾರೆ…’ ಎಂದು ಬರೆದಿದೆ. ಇದು ಸಂದರ್ಶಕ ಸ್ವಾಮಿಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಬರೆದದ್ದೋ ಅಥವಾ ಸ್ವಾಮಿಗಳು ಮಾತುಕತೆಯ ನಡುವೆ ಹಾಗೆ ಹೇಳಿದ್ದರೋ ತಿಳಿಯದು.
‘ಜನರು ಮೆಚ್ಚಲಿ , ಮೆಚ್ಚದಿರಲಿ ಯುವಕರನ್ನು ಒಂದುಗೂಡಿಸುವುದಕ್ಕೆ ನಾನು ಜನ್ಮವೆತ್ತಿದ್ದೇನೆ. ಪ್ರತಿಯೊಂದು ಪಟ್ಟಣದಿಂದಲೂ ಇಂತಹ ನೂರಾರು ಜನರು ನನ್ನೊಡನೆ ಕೆಲಸ ಮಾಡಲು ಸಿದ್ಧರಾಗಿರುವರು. ತಡೆಯಲಾಗದ ಮಹಾ ತೆರೆ ಎದ್ದು ಕೊಚ್ಚಿಕೊಂಡು ಹೋಗುವಂತೆ ಈ ಯುವಕರೆಲ್ಲರನ್ನೂ ಭರತ ಖಂಡದ ಮೇಲೆ ಬಿಡುವೆನು. ದೀನರ , ದಲಿತರ ಬಾಗಿಲಿಗೆ , ಜೀವನದಲ್ಲಿ ಶಾಂತಿ , ನೀತಿ, ಧರ್ಮ , ವಿದ್ಯೆ ಬರುವಂತೆ ಮಾಡುವೆನು ..’ ಎಂದು ೨೯/೧/೧೮೯೪ ರಂದು ಹರಿದಾಸ ವಿಹಾರಿದಾಸ ದೇಸಾಯಿಗೆ ಬರೆದ ಪತ್ರದಿಂದ ಪ್ರಾರಂಭಿಸಿ ಹರಪದ ಮಿತ್ರ (೨೮/೧೨/೧೮೯೩) , ಗುರುಭಾಯಿಗಳು (೨೪/೧/೧೮೯೪) , ರಾಮಕೃಷ್ಣಾನಂದ (೧೯/೩/೧೮೯೪) , ಅಳಸಿಂಗ ಪೆರುಮಾಳ್ (೨೮/೫/೧೮೯೪) , ಚಾಮರಾಜೇಂದ್ರ ಒಡೆಯರ್ ( ೨೩/೬/೧೮೯೪) , ಗುರುಭಾಯಿಗಳು (೩೦/೬/೧೮೯೪) ಅವರಿಗೆ ಬರೆದ ಪತ್ರಗಳು ಅಮೆರಿಕದ ಪತ್ರಿಕೆಗಳು ನೀಡಿದ ವಿವರಗಳನ್ನು ಸಮರ್ಥಿಸುತ್ತವೆ. ಮಾಯಾ ದೀಪ ,ಭೂಗೋಳ , ರಾಸಾಯನಿಕ ವಸ್ತುಗಳೊಂದಿಗೆ ಪಾಠ ಮಾಡುತ್ತ , ಮೊದಲು ಧರ್ಮ, ನಂತರ ವಿಜ್ಞಾನ, ಚರಿತ್ರೆ. ಇವುಗಳನ್ನು ಹರಡುತ್ತ ಯುವಕರ ಗುಂಪುಗಳು ದೇಶದ ತುಂಬ ಸುತ್ತಲಿ. ವಿಧವೆಯರನ್ನು ಸೇರಿಸಿ ರಾಮಕೃಷ್ಣರನ್ನು ಮತ್ತು ಆಧುನಿಕ ವಿದ್ಯಾಭ್ಯಾಸವನ್ನು ಬೋಧಿಸುವುದೇ ನಮ್ಮ ಗುರಿ. ಇದು ಸ್ವಾಮಿಗಳು ಶಿಷ್ಯರಿಗೆ ನೀಡಿದ ಕರೆಯಾಗಿದ್ದಿತು. ಹರಿದಾಸ ವಿಹಾರಿದಾಸ ದೇಸಾಯಿಯವರರಿಗೆ ‘ …….ಇದರ ಪರಿಹಾರಕ್ಕೆ ಮೊದಲು ನಮಗೆ ಬೇಕಾಗಿರುವುದು ಜನ, ಆನಂತರ ಹಣ. ಪ್ರತಿ ಊರಿನಿಂದಲೂ ಗುರುದೇವನ ಕೃಪೆಯಿಂದ ಹತ್ತು ಹದಿನೈದು ಜನ ಸಿಗುವರೆಂದು ತಿಳಿದೆನು. ಆನಂತರ ಹಣ ಶೇಖರಿಸಲು ಹೊರಟೆನು. ಭರತ ಖಂಡದ ಜನರು ಹಣವನ್ನು ವ್ಯಯಿಸುವರೆಂದು ತಿಳಿದಿರುವಿರೇನು ? ಸ್ವಾರ್ಥ ಮೂರ್ತಿಗಳು ಅವರು ಏನಾದರೂ ಖರ್ಚು ಮಾಡುವರೇ? ಅದಕ್ಕಾಗಿಯೇ ಹಣ ಸಂಪಾದನೆಗಾಗಿ ನಾನು ಅಮೆರಿಕಕ್ಕೆ ಬಂದಿದ್ದೇನೆ,….. ನಾನು ಅವರಿಗೆ ಅಧ್ಯಾತ್ಮ ವಿದ್ಯೆಯನ್ನು ಕೊಡುತ್ತೇನೆ. ಅವರು ನನಗೆ ಹಣವನ್ನು ಕೊಡುತ್ತಾರೆ. ನನ್ನ ಬಯಕೆ ಈಡೆರಲು ಅದೆಷ್ಟು ದಿನ ಬೇಕಾಗುವುದೋ ಗೊತ್ತಿಲ್ಲ. ಇಲ್ಲಿಯ ಜನ ಆಷಾಢಭೂತಿಗಳಲ್ಲ. ಇವರಲ್ಲಿ ಅಸೂಯೆನ್ನುವುದು ಲವಲೇಶವೂ ಇಲ್ಲ…..ನನ್ನ ಸ್ವಂತ ಕೆಲಸಕ್ಕೆ ಹಣ ಶೇಖರಿಸುವುದೇ ನಾನು ಇಲ್ಲಿಗೆ ಬಂದ ಮುಖ್ಯ ಉದ್ದೇಶ. ಒಂದು ವರ್ಷದಿಂದ ಭಾಷಣ ಮಾಡಿದರೂ ಯಾವ ಸಾರ್ಥಕವೂ ಆಗಲಿಲ್ಲ (ಸಂಸ್ಥೆ, ಸಂಘ ಸ್ಥಾಪಿಸುವಷ್ಟು). ಹೊಟ್ಟೆ , ಬಟ್ಟೆಗಷ್ಟೇ ಆಯಿತು. ಅಮೆರಿಕದಲ್ಲಿ ಆರ್ಥಿಕ ಹಿಂಜರಿತವಿದೆ. ಕ್ರೈಸ್ತ ಪಾದ್ರಿಗಳು , ಬ್ರಾಹ್ಮ ಸಮಾಜದವರು ನನಗೆ ಅಡ್ಡಿಮಾಡುತ್ತಿದ್ದಾರೆ ‘ ಎಂದು ಅಮೆರಿಕಕ್ಕೆ ಹೋದ ಮುಖ್ಯ ಉದ್ದೇಶವನ್ನು ಬಿಚ್ಚಿಟ್ಟಿದ್ದಾರೆ. ( ೨೦/೬/೧೮೯೪).
ಸ್ವಾಮಿಗಳ ಚಂಚಲ ಮನಸ್ಸಿನಲ್ಲಿ ಯಾವಾಗಲೂ ಒಂದೇ ಗುರಿ ಇರುತ್ತಿರಲಿಲ್ಲ. ಒಮ್ಮೆ ಬಡವರಿಗೆ ಲೌಕಿಕ ಶಿಕ್ಷಣ ಕೊಡುವುದು ಮೊದಲ ಕರ್ತವ್ಯವೆಂದು ಭಾಸವಾದರೆ ಅದರ ಹಿಂದೆಯೇ ಎಲ್ಲ ಸುಧಾರಣೆಗಳಿಗಿಂತ ಅಧ್ಯಾತ್ಮಿಕ ಎಚ್ಚರ ಮೊದಲು ಆಗಬೇಕು. ಅದಕ್ಕಾಗಿ ರಾಮಕೃಷ್ಣ ಮಠದ ಸ್ಥಾಪನೆ ಅತ್ಯಗತ್ಯ ಎನಿಸುತ್ತಿದ್ದಿತು. ಮನಸ್ಸು ಒಂದು ಸಲ ಆಕಡೆ ತೂಗಿದರೆ ಮರುಕ್ಷಣ ವಿರುದ್ಧ ದಿಶೆಯಲ್ಲಿರುತ್ತಿದ್ದಿತು. ಹರಿದಾಸ ವಿಹಾರಿದಾಸ ದೇಸಾಯಿಗಳಿಗೆ ತಿಳಿಸಿದ್ದ ಗುರಿ ಮುಂದಿನ ಒಂದೆರಡು ತಿಂಗಳುಗಳಲ್ಲಿ ಬದಲಾಯಿತು. ಸ್ವಾಮಿಗಳು ಅಮೆರಿಕದಲ್ಲಿ ಹಿಂದೂ ಧರ್ಮ ಪತಾಕೆಯನ್ನು ಹಾರಿಸಿದರು ಎಂದು ಪತ್ರಿಕೆಗಳು ಹೊಗಳುತ್ತಿರುವ ಸಮಯಯದಲ್ಲಿಯೇ ಅಭೇದಾನಂದರಿಗೆ ತಲುಪಿದ ದಿನಾಂಕವಿಲ್ಲದ ಪತ್ರದಲ್ಲಿ ‘……ನಮಗೋಸ್ಕರ ಒಂದು ಮಠ ಸ್ಥಾಪಿಸಲು ನಾನು ಸ್ವಲ್ಪ ಹಣ ಸಂಪಾದಿಸುತ್ತೇನೆ.,…...ಜನರ ಅಭಿರುಚಿಗೆ ತಕ್ಕಂತೆ ನೀನು ಅನುಸರಿಸಿ ನಡೆಯಬೇಕು. ನಾವು ಕ್ರೈಸ್ತ ಧರ್ಮದಲ್ಲಿ ಕೆಲ ಅಂಶಗಳನ್ನು ಮೆಚ್ಚುವಂತೆ ಅವರು ಹಿಂದೂ ಧರ್ಮದಲ್ಲಿನ ಕೆಲ ಆಂಶಗಳನ್ನು ಮೆಚ್ಚುವರು ಅಷ್ಟೇ . ಅವರನ್ನು ಹಿಂದೂಗಳಾಗಿ ಎಂದರೆ ದೂರ ಸರಿದು ದ್ವೇಷಿಸುವರು……ಧರ್ಮ ಮುಂತಾದ ವಿಷಯಗಳಲ್ಲಿ ಗಂಡಸರಿಗೆ ಆಸಕ್ತಿಯಿಲ್ಲ. ಹೆಂಗಸರಿಗೆ ಸ್ವಲ್ಪ ಇರುವುದು ಅಷ್ಟೇ. ಆದರೆ ಅದನ್ನು ಮಿತಿ ಮೀರಿ ಕೊಡಬಾರದು !.....ಮತ್ತು ನಮಗೋಸ್ಕರ ಒಂದು ಮಠವನ್ನು ಸ್ಥಾಪಿಸಲು ನಾನು ಸ್ವಲ್ಪ ಹಣ ಸಂಗ್ರಹಿಸುತ್ತೇನೆ. ನನ್ನನ್ನು ಇದಕ್ಕೆ ದೂರಿದರೆ ಯಾವ ಪರಿಣಾಮವೂ ಆಗದು ಎಂದು ಅಭೇದಾನಂದರಿಗೆ ತಿಳಿಸಿದಾಗ ಮಠ ಸ್ಥಾಪನೆ ಮನಸ್ಸಿನಲ್ಲಿದ್ದಿತು.
‘ಈ ದೇಶಾದ್ಯಂತ ಸುತ್ತಾಡಿ ಸಂಸ್ಥೆಗಳನ್ನು ತೆರೆಯುತ್ತೇನೆ. ಇದು ಕೆಲಸಕ್ಕೆ ಒಳ್ಳೆಯ ಕ್ಷೇತ್ರ. …….ನನ್ನ ಹತ್ತಿರ ಈಗಲೂ ರೂ. ೯೦೦೦ ಇದೆ. ಅದರಲ್ಲಿ ಸ್ವಲ್ಪ ಭಾಗವನ್ನು ಸಂಸ್ಥೆಗೆ ಕಳಿಸುತ್ತೇನೆ….ಮೈಸೂರು ಮತ್ತು ಇತರ ಕಡೆಗಳಲ್ಲಿ ಹಣ ಕೂಡಿಸಿ ಮದ್ರಾಸಿನಲ್ಲಿ ಒಂದು ದೇವಾಲಯ ಕಟ್ಟಿಸಲು ಯತ್ನಿಸು. ಅದರಲ್ಲಿ ವಾಚನಾಲಯ ಇರಬೇಕು. ಧರ್ಮೋಪದೇಶ ಮಾಡುವ ಸಂನ್ಯಾಸಿಗಳಿಗೆ , ಆಕಸ್ಮಾತ್ತಾಗಿ ಬರುವ ಸಾಧುಗಳಿಗೆ ಕೋಣೆಗಳಿರಬೇಕು…….ನಿನಗೆ ಗೊತ್ತಿರುವ ಹಾಗೆ ಹಣವನ್ನು ಇಟ್ಟುಕೊಳ್ಳುವುದು , ಮುಟ್ಟುವುದು ಕೂಡ ನನಗೆ ಅತ್ಯಂತ ಕಷ್ಟವೆನಿಸುತ್ತದೆ. ಆದ್ದರಿಂದ ನೀನು ಒಂದು ಸಂಘವನ್ನು ಸ್ಥಾಪಿಸು…….ನಿನಗೆ ಸರಿ ಎನಿಸುವುದಾದರೆ ಯಾರಾದರೂ ದೊಡ್ದ ವ್ಯಕ್ತಿಗಳನ್ನು ಸಂಸ್ಥೆಯ ಅಧಿಕಾರಿಗಳಾಗಿ ನೇಮಿಸಿ . ಹಿಂದಿನಿಂದ ನೀನೇ ಎಲ್ಲ ನಿರ್ವಹಿಸು. ಅದು ಹೆಚ್ಚು ಸಹಾಯಕವಾಗುತ್ತದೆ. ….. ಎಂದು ಬದಲಾದ ತಮ್ಮ ಗುರಿಯನ್ನು ಮೊದಲ ಬಾರಿಗೆ ಸ್ಪಷ್ಟವಾಗಿ ಅಳಸಿಂಗ ಪೆರುಮಾಳ್’ಗೆ ತಿಳಿಸಿದರು. (೩೧/೮/೧೮೯೪). ಮುಂದಿನ ದಿನಗಳಲ್ಲಿ ಸುಬ್ರಮಣ್ಯ ಅಯ್ಯರ್’ಗೆ ಮದ್ರಾಸಿನಲ್ಲಿ ಒಂದು ಧಾರ್ಮಿಕ ಕಾಲೇಜನ್ನು ಸ್ಥಾಪಿಸಿ ಮುಂದೆ ಅದನ್ನು ವಿಶಾಲಗೊಳಿಸಿ ಯುವಕರಿಗೆ ವೇದ , ಭಾಷ್ಯ ಹಾಗೂ ಇತರ ಧರ್ಮಗಳ ಅಧ್ಯಯನ ಮಾಡಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. (೩/೧/೧೮೯೫) ಇದಾದ ಹತ್ತು ದಿನಗಳ ನಂತರ (೧೨/೧/೧೮೯೫) ಅಳಸಿಂಗ ಪೆರುಮಾಳ್’ಗೆ ‘ ಜನ ಸಮುದಾಯಕ್ಕೆ ವಿದ್ಯೆ ಹಂಚುವ ಯೋಜನೆಯನ್ನು ನಾನು ಸದ್ಯಕ್ಕೆ ಬಿಟ್ಟಿದ್ದೇನೆ. ಕ್ರಮೇಣ ಅದು ಆಗುತ್ತದೆ. ಈಗ ನನಗ ಬೇಕಾಗಿರುವುದು ಬೆಂಕಿ ಸಮಾನರಾದ ಒಂದು ಧರ್ಮ ಪ್ರಚಾರಕರ ತಂಡ. ಮದ್ರಾಸಿನಲ್ಲಿ ಒಂದು ಕಾಲೇಜನ್ನು ಸ್ಥಾಪಿಸಿ ಅಲ್ಲಿ ಧರ್ಮಗಳು , ತೌಲನಿಕ ವಿವರಣೆ , ಸಂಸ್ಕೃತ , ವೇದಾಂತದ ವಿವಿಧ ಪಂಥಗಳು , ಐರೋಪ್ಯ ಭಾಷೆಗಳನ್ನು ಬೋಧಿಸಬೇಕು…….’ ಎನ್ನುವ ತಿರುವನ್ನು ನೀಡಿದರು.
ಒಂದು ವರ್ಷದ ಹಿಂದೆ ಅಮೆರಿಕದಲ್ಲಿ ಪತ್ರಿಕೆಗಳಿಗೆ ಸಂದರ್ಶನ ನೀಡಿದಾಗ ಭಾರತದ ಅಧ್ಯಾತ್ಮವನ್ನು ಪಾಶ್ಚಾತ್ಯರಿಗೆ ಕೊಟ್ಟು ವಿನಿಮಯ ರೂಪದಲ್ಲಿ ಲೌಕಿಕ ಆಧುನಿಕ ವಿದ್ಯೆಯನ್ನು ಭಾರತಕ್ಕೆ ಒಯ್ಯುವುದೇ ತಮ್ಮ ಗುರಿಯೆಂದು ತಿಳಿಸಿದ್ದರು. ಭಾರತದಲ್ಲಿದ್ದ ತಮ್ಮ ಶಿಷ್ಯರಿಗೆ ಮಕ್ಕಳಿರಾ ಏಳಿ , ಹಳ್ಳಿಯಿಂದ ಹಳ್ಳಿಗೆ ಯುವ ಸಂನ್ಯಾಸಿಗಳು ಕೈಯಲ್ಲಿ ಮಾಯಾದೀಪ ಹಿಡಿದು ಭೂಗೋಳ , ಚರಿತ್ರೆ ಮತ್ತು ಧಾರ್ಮಿಕ ತತ್ತ್ವಗಳನ್ನು ಬೋಧಿಸುತ್ತ ಭಾರತವನ್ನು ಕವಿಯಿರಿ ಎಂದು ಕರೆ ಕೊಟ್ಟಿದ್ದರು. ಚಾಮರಾಜೆಂದ್ರ ಒಡೆಯರಿಗೆ ಬಡ ಜನರತ್ತ ಶಿಕ್ಷಣವನ್ನು ಒಯ್ಯುವ ಅನಿವಾರ್ಯತೆಯನ್ನು ಒತ್ತಿ ಹೇಳಿದ್ದರು. (೨೩/೬/೧೮೯೪) ಹರಿದಾಸ ವಿಹಾರಿದಾಸ ದೇಸಾಯಿಗಳು ಅ ನಿಟ್ಟಿನಲ್ಲಿ ಕೆಲಸ ಮಾಡದಿದ್ದುದಕ್ಕೆ ಛೇಡಿಸಿದ್ದರು.(೨೦/೬/೧೮೯೪) ಸ್ವಾಮಿಗಳು ತಮಗೆ ಅತ್ಯಂತ ಆಪ್ತರಾದ ಖೇತ್ರಿ ಮಹಾರಾಜರಿಗೆ ಇಂತಹ ಕೆಲಸಗಳನ್ನು ಮಾಡಲು ಕರೆ ಕೊಟ್ಟಿರಲಿಲ್ಲ. ಇದಕ್ಕೆ ಬೇರೆಯದೇ ಆದ ಕಾರಣವಿದ್ದಿತು. ಅದೇನೇ ಇರಲಿ ಈ ನಿಟ್ಟಿನಲ್ಲಿ ಕಚ್ಚೆ ಕಟ್ಟಿ ಓಡಬೇಕೆಂದಿದ್ದ ಅಳಸಿಂಗನನ್ನು ತಡೆದು ಈಗ ನನ್ನ ಯೋಜನೆ ಬೇರೆಯಾಗಿದೆ. ನನಗೆ ಧಾರ್ಮಿಕ ಶಾಲೆ ಮೊದಲ ಆದ್ಯತೆ ಎನ್ನುತ್ತಿದ್ದಾರೆ, ಸ್ವಾಮಿಗಳಲ್ಲಿ ಈ ಬದಲಾವಣೆಗೆ ಅವರದೇ ಆದ ಕಾರಣಗಳಿದ್ದವು. ಭಾರತಕ್ಕೆ ಯಾವಾಗ ಬರುತ್ತೀರಿ ಎಂದು ಕೇಳಿದ್ದ ಖೇತ್ರಿ ಮಹಾರಾಜರಿಗೆ ನಿಂದೆ , ಅಡಚಣೆ ನಂತರ ಸ್ವೀಕಾರ. ಅದರ ನಂತರವೇ ಕಾರ್ಯ ಸಿದ್ಧಿ. ಇಲ್ಲಿ ನೂರಾರು ಜನ ನನ್ನ ಹಿಂದೆ ಇದ್ದಾರೆ. ಅವರಲ್ಲಿ ಕೆಲವರನ್ನು ಸಂನ್ಯಾಸಿಗಳನ್ನಾಗಿ ಮಾಡಿ , ನನ್ನ ಕೆಲಸವನ್ನು ಅವರಿಗೆ ಒಪ್ಪಿಸಿ ಮುಂದಿನ ವರ್ಷದ ವೇಳೆಗೆ ಬರುತ್ತೇನೆ ಎನ್ನುವ ಆಶ್ವಾಸನೆಯನ್ನು ನೀಡಿದರು. (ಪತ್ರ-೯/೭/೧೮೯೫)
ಸ್ವಾಮಿ ಅಖಂಡಾನಂದರು ಚಂದಾ ಎತ್ತಿ ಹಣ ಸಂಗ್ರಹಿಸಲು ಉತ್ಸುಕರಾಗಿದ್ದರು. ಸ್ವಾಮಿಗಳು ಅವರನ್ನು ೧೩/೧೧/೧೮೯೫ ರ ಪತ್ರದ ಮೂಲಕ ಎಚ್ಚರಿಸುತ್ತ ಎಂದಿಗೂ ಆಶ್ರಮ , ಮಠ ಸ್ಥಾಪನೆಗಾಗಿ ಹಣ ಎತ್ತಲು ನೀನೇ ನುಗ್ಗಿ ಮುಂದಾಗಬೇಡ. ಗೃಹಸ್ಥರು ಅದರಲ್ಲೂ ಬಡವರು ಹಾಗೆ ಮುಂದಾದಾಗ ಬಹಳ ಎಚ್ಚರದಿಂದಿರು. ಒಂದು ವೇಳೆ ಹಾಗೆ ಹಣ ಸಂಗ್ರಹಿಸಿದ್ದೇ ಆದರೆ ಸ್ಥಿತಿವಂತ ಶ್ರೀಮಂತರಲ್ಲ ಆ ಹಣವನ್ನು ಇರಿಸಿವುದು ಒಳ್ಳೆಯದು. ….. ಜಯಪುರ ಅಥವಾ ಅಜ್ಮೀರ್’ನಲ್ಲಿ ಒಂದು ಕೇಂದ್ರ ಮತ್ತು ಖೇತ್ರಿ , ಆಳ್ವಾರ್’ಗಳಲ್ಲಿ ಶಾಖೆಗಳಿದ್ದರೆ ಒಳ್ಳೆಯದು. ಮಠ , ಕೇಂದ್ರ ಅಥವಾ ಅಂತಹ ಇನ್ನಾವುದನ್ನೂ ಕಲ್ಕತ್ತದಲ್ಲಿ ಸ್ಥಾಪಿಸಿದರೆ ಲಾಭವಿಲ್ಲ. ಅದು ವಾರಣಾಸಿಯಲ್ಲಿ ಇದ್ದರೆ ಸರಿ. ಇಂತಹ ಹಲವು ಯೋಜನೆಗಳು ನನ್ನ ಮನಸ್ಸಿನಲ್ಲಿವೆ. ಆದರೆ ಎಲ್ಲ ಹಣ ಸಂಗ್ರಹದ ಮೇಲೆ ನಿಂತಿದೆ……. ಅಚ್ಯುತಾನಂದ ಎನ್ನುವ ಸಂನ್ಯಾಸಿಯ ಬಗ್ಗೆ ತಿಳಿಯಲು ಆರ್ಯ ಸಮಾಜದ ಕಾರ್ಯದರ್ಶಿಯವರಿಗೆ ಪತ್ರ ಬರೆ. ಧೈರ್ಯವಾಗಿರು ……’ ಎಂದು ಬೆನ್ನು ತಟ್ಟಿದರು. ಈ ಅವಧಿಯಲ್ಲಿ ಗುರುಭಾಯಿಗಳಿಗೆ ಸ್ವಾಮಿಗಳು ಬರೆದಿರುವ ಪತ್ರಗಳನ್ನು ನೋಡಿದರೆ ಆಶ್ರಮ, ಮಠವನ್ನು ಇತರರು ಹೇಗೆ ಕಟ್ಟುತ್ತಿದ್ದಾರೆ , ಅವರೊಂದಿಗೆ ಒಗ್ಗೂಡಿದರೆ ಲಾಭವೇ ಅಥವಾ ಮಠ , ಆಶ್ರಮ ಕಟ್ಟುವ ಸಾಧಕ ಬಾಧಕಗಳೇನು ,ಎಲ್ಲೆಲ್ಲಿ ಶಾಖೆಗಳನ್ನು , ಕೇಂದ್ರಗಳನ್ನು ವ್ಯಾವಹಾರಿಕವಾಗಿ ತರೆಯಲು ಸಾದ್ಯ ಎಂದು ತಿಳಿಯಲು ಯತ್ನಿಸುತ್ತಿರುವಂತಿದೆ.
ಇದೇ ಸಮಯದಲ್ಲಿ ‘ ಒಬ್ಬನು ಮದ್ರಾಸಿಗೆ ಹೋಗಲಿ, ಮತ್ತೊಬ್ಬನು ಬೊಂಬಾಯಿಗೆ ಹೋಗಲಿ. ಪ್ರಪಂಚವ ತಲ್ಲಣಿಸಬೇಕು. ಅಯ್ಯೋ ಸಂಕಟವೇ ! ನನಗೆ ನನ್ನಂತಹ ಇಬ್ಬರು , ಮೂವರು ಸಿಕ್ಕಿದ್ದರೆ ಜಗತ್ತೆನ್ನೆಲ್ಲಾ ಅಲಗಾಡಿಸುತ್ತಿದ್ದೆ. ಆದರೆ ಅಂತಹವರಿಲ್ಲದೆ ಇರುವುದರಿಂದ ನಾನು ನಿಧಾನವಾಗಿ ಸಾಗಬೇಕಾಗಿದೆ. ಜಗತ್ತಿನಾದ್ಯಂತ ಚಲಿಸುವಂತೆ ಮಾಡಬೇಕು. ! ಒಬ್ಬನನ್ನು ಚೈನಾಕ್ಕೆ , ಮತ್ತೊಬ್ಬನನ್ನು ಜಪಾನಿಗೆ ಕಳಿಸಬೇಕು ! ಪಾಪ ಬಡ ಗೃಹಸ್ಥರು ಏನು ಮಾಡಿಯಾರು ? ಶಿವನ ಭೂತಗಣಗಳಾದ ಸಂನ್ಯಾಸಿಗಳು ಮಾತ್ರ ‘ಹರಹರ ಮಹಾದೇವ’ ಎಂಬ ಜಯ ನಿನಾದದಿಂದ ದಿಕ್ತಟಗಳು ಬಿರಿಯುವಂತೆ ಮಾಡಬಹುದು’ ಎಂದು ತ್ರಿಗುಣಾತೀತಾನಂದರಿಗೆ ಬರೆದರು (೫/೧/೧೮೯೬). ಆರಂಭದಲ್ಲಿ ಸಂನ್ಯಾಸಿಗಳು ಮಾಯಾಲಾಂದ್ರ , ಭೂಗೋಳ ಹಿಡಿದು ಶಿಕ್ಷಣ ಹರಡುತ್ತ ಭಾರತದಾದ್ಯಂತ ಸಂಚರಿಸಬೇಕು ಎನ್ನುವ ಕನಸನ್ನು ಸ್ವಾಮಿಗಳು ಕಟ್ಟಿದ್ದರು. ನಂತರ ಅದನ್ನು ಕೈಬಿಟ್ಟು ಧಾರ್ಮಿಕ ತರಬೇತಿ ಶಾಲೆ ತೆರೆಯುವ ಬಯಕೆ ಮೂಡಿದ್ದಿತು. ನಂತರದ ಹಂತದಲ್ಲಿ ಅಲೆಕ್ಸಾಂಡರ್ , ನೆಪೊಲಿಯನ್ , ಹಿಟ್ಲರ್ ಭೌತಿಕ ಜಗತ್ತನ್ನು ಗೆಲ್ಲಲು ಹೊರಟಂತೆ ಸಂಚಾರಿ ಸಂನ್ಯಾಸಿಗಳ ಮೂಲಕ ಧಾರ್ಮಿಕ ಜಗತ್ತನ್ನು ಗೆಲ್ಲುವ ಮಹತ್ವಾಕಾಂಕ್ಷೆ ಸ್ವಾಮಿಗಳಲ್ಲಿ ಮೂಡಿದ್ದಿತು. ಈ ಬಯಕೆಯಲ್ಲಿ ಮುಕ್ತಿ , ಭಕ್ತಿ, ದೇಶಭಕ್ತಿಗಳು ಹಿನ್ನೆಲೆಗೆ ಸರಿದಿದ್ದವು.
ಸ್ವಾಮಿಗಳಿಗೆ ಅಮೆರಿಕಕ್ಕೆ ಹೋಗುವುದಕ್ಕೆ ಮುಂಚಿನಿಂದಲೂ ಭಾರತದಲ್ಲಿ ರಾಮಕೃಷ್ಣರ ಹೆಸರಿನಲ್ಲಿ ಒಂದು ಆಶ್ರಮ ಸ್ಥಾಪಿಸುವ ಬಯಕೆಯಿದ್ದಿತು. ಅಮೆರಿಕದಲ್ಲಿ ಉಪನ್ಯಾಸಗಳನ್ನು ಕಟ್ಟು ಹಣ ಕೈ ಸೇರತೊಡಗಿದಂತೆ ಇದರ ವ್ಯಾಪ್ತಿ , ಲಕ್ಷಣ , ಸ್ವರೂಪಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿದ್ದವು. ೧೬/೧/೧೮೯೬ ರಂದು ಎಡ್ವರ್ಡ್ ಸ್ಟರ್ಡಿಗೆ ಅಮೆರಿಕದಲ್ಲಿ ಸ್ವಲ್ಪ ಜಮೀನು ಸಿಗುವ ಸಾದ್ಯತೆಯಿದೆ. ಅದರಲ್ಲಿ ಕೆಲ ಕಟ್ಟಡ , ಮರ , ನದಿಗಳಿವೆ. ಆ ಜಾಗವನ್ನು ಬೇಸಿಗೆಯ ಅಧ್ಯಾತ್ಮ ಕೇಂದ್ರ ಮಾಡಬಹುದು. ಆದರೆ ನಾನು ಹಣ ಕಾಸಿನ ವ್ಯವಹಾರದಿಂದ ದೂರವಿದ್ದೇನೆ ಎಂದು ತಿಳಿಸಿದ್ದರು. ೨೫/೧/೧೮೯೬ ರಂದು ಸಾರಾ ಬುಲ್’ಗೆ ‘ ಕ್ಯಾಟ್ಲ್ ಕಿಲ್ಸ್'ನಲ್ಲಿ ವಿಸ್ತಾರವಾದ ಪ್ರದೇಶಗಳು ಬಹಳ ಕಡಿಮೆ ಬೆಲೆಗೆ ಸಿಗುತ್ತವೆ. ೧೦೦ ಎಕರೆ ಪ್ರದೇಶ ೨೦೦ ಡಾಲರ್'ಗೆ ಸಿಗುತ್ತದೆ. ನನ್ನಲೀಗ ಹಣ ಸಿದ್ಧವಾಗಿದೆ. ಆದರೆ ನನ್ನ ಹೆಸರಿನಲ್ಲಿ ನಾನು ಕೊಂಡುಕೊಳ್ಳಲಾರೆ. ಈ ದೇಶದಲ್ಲಿ ನಾನು ಸಂಪೂರ್ಣವಾಗಿ ನಂಬುವ ಸ್ನೇಹಿತೆಯೆಂದರೆ ನೀವು ಮಾತ್ರ. ನೀವು ಒಪ್ಪಿಗೆಯಿತ್ತಲ್ಲಿ ನಿಮ್ಮ ಹೆಸರಿನಲ್ಲಿ ಆ ಭೂಮಿಯನ್ನು ಕೊಳ್ಳುವೆ. ಬೇಸಿಗೆಯಲ್ಲಿ ವಿದ್ಯಾರ್ಥಿಗಳು ಅಲ್ಲಿಗೆ ಹೋಗುವರು. ಅವರಿಚ್ಛೆ ಬಂದಂತೆ ಡೇರೆ, ಗುಡಾರಗಳನ್ನು ಕಟ್ಟಲು ಅವಕಾಶವಿದೆ. ಧ್ಯಾನಾದಿ ಸಾಧನೆಗಳನ್ನು ಮಾಡುವರು. ಮುಂದೆ ಅವರು ಹಣ ಕೂಡಿಸಿದರೆ ಮತ್ತೆನನ್ನಾದರೂ ಕಟ್ಟಬಹುದು ‘ ಎಂದು ತಿಳಿಸುವ ಮೂಲಕ ಭವಬಂಧನ ದಾಟಬೇಕೆಂದು ಬೋಧಿಸುತ್ತಿದ್ದ ಸ್ವಾಮಿಗಳು ಅಶ್ರಮ , ಕಟ್ಟಡ , ಬೇಸಿಗೆಯ ಶಿಬಿರ ಮುಂತಾದ ಬಯಕೆಗಳ ಬಂಧಿಯಾಗಿದ್ದರು. ಇದೇ ಪತ್ರದಲ್ಲಿ ‘………ಪ್ರಪಂಚವೆಲ್ಲಾ ನನ್ನೊಡನೆ ಸುತ್ತಾಡಿದ ಒಂದು ಟಿಪ್ಪಣಿ ಪುಸ್ತಕ ನನ್ನಲ್ಲಿದೆ. ೭ ವರ್ಷಗಳ ಹಿಂದೆ 'ಈಗ ಒಂದು ಮೂಲೆಯನ್ನು ಹುಡುಕಿ ಮರಣೋನ್ಮುಖನಾಗಬೇಕು ! ಎಂದು ಬರೆದಿದ್ದೆ. ಆದರೂ ಈ ಕರ್ಮಗಳೆಲ್ಲ ಉಳಿದಿದ್ದವು. ಈಗ ನನ್ನ ಕೆಲಸವೆಲ್ಲವನ್ನೂ ಪೂರೈಸಿದೆ ಎಂದು ಭಾವಿಸುವೆ. …….. ಓ ! ನಾನೆಷ್ಟು ಹಂಬಲಿಸುತ್ತೇನೆ ! ತಲೆ ಬೋಳಿಸಿಕೊಂಡು , ಚಿಂದಿಬಟ್ಟೆಯನ್ನುಟ್ಟು , ಭಿಕ್ಷಾನ್ನವನ್ನು ಉಣ್ಣುತ್ತ ಮರದ ಕೆಳಗೆ ವಾಸಿಸುವ ದಿನಗಳಿಗಾಗಿ ನಾನೆಷ್ಟು ಹಾತೊರೆಯುತ್ತಿದ್ದೇನೆ. ಎಷ್ಟೇ ನ್ಯೂನ್ಯತೆಗಳಿದ್ದರೂ ಭಾರತದಲ್ಲಿ ಮಾತ್ರ ಆತ್ಮ ತನ್ನ ಸ್ವಾತಂತ್ರವನ್ನೂ , ದೇವರನ್ನೂ ಕಾಣುವುದು. ಈ ಪಾಶ್ಚಾತ್ಯ ಆಡಂಬರವೆಲ್ಲ ಕೇವಲ ನಿಸ್ಸಾರವಾದುದು….’ ಎಂದು ತೊಳಲಾಡಿದ್ದಾರೆ.
ಆಗಿಂದಾಗ್ಗೆ ಸ್ವಾಮಿಗಳ ಬಾಯಿಂದ ಬರುತ್ತಿದ್ದ ಇಂತಹ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಹೀಗೆ ಹೇಳಿದ ಕೆಲ ದಿನಗಳಲ್ಲಿಯೇ ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸುವದು ಸಾಮಾನ್ಯ ಸಂಗತಿಯಾಗಿದ್ದಿತು. ೭ ವರ್ಷಗಳ ಹಿಂದೆ ಎಂದರೆ ೧೮೮೯ ರಲ್ಲಿ ಆಸ್ತಿ ಕುರಿತಾಗಿ ದಾಯಾದಿಗಳು ಹಾಕಿದ್ದ ಮೊಕದ್ದಮೆಗಳು ತೀವ್ರವಾಗತೊಡಗಿ , ತಾಯಿ , ತಮ್ಮಂದಿರು , ತಂಗಿಯರು ಹೊಟ್ಟೆಗಿಲ್ಲದೆ ತೀವ್ರ ಸಂಕಷ್ಟದ ಸ್ಥಿತಿಯಲ್ಲಿದ್ದರು. ಆ ಸಂದರ್ಭದಲ್ಲಿ ಸ್ವಾಮಿಗಳಿಗೆ ನರಳುವುದಕ್ಕಿಂತ ಸಾಯುವುದೇ ಲೇಸು ಎನಿಸಿದ್ದರೆ ಸೋಜಿಗವೇನಲ್ಲ. ಆದರೆ ರಾಮಕೃಷ್ಣರ ಭೀಮಶಿಷ್ಯರಾಗಿದ್ದ , ಅವರಿಂದ ನಿರ್ವಿಕಲ್ಪ ಸಮಾಧಿಯ ಸ್ಥಿತಿಯನ್ನು ಕೆಲಕಾಲ ತಲುಪಿದ್ದ ವೀರ ಸಂನ್ಯಾಸಿ ಹೀಗೆ ಸಾಮಾನ್ಯರಂತೆ ಪರಿತಪಿಸಬಹುದೇ ಎನ್ನುವುದಕ್ಕೆ ಸಮಾಧಾನಕರ ಉತ್ತರ ಸಿಕ್ಕದು. ಒಮ್ಮೆ ಕ್ಯಾಟ್ಲ್’ಕಿಲ್ಸ್’ನಲ್ಲಿ ಜಮೀನು ಕೊಳ್ಳುತ್ತೇನೆ ಎನ್ನುವುದು ತಕ್ಷಣವೇ ತಲೆ ಬೋಳಿಸಿಕೊಂಡು ಬಿಡುಗಡೆ ಹೊಂದುತ್ತೇನೆ ಎನ್ನುವುದು ಸ್ವಾಮಿಗಳ ವಿಷಯದಲ್ಲಿ ಸಾಮಾನ್ಯ ಸಂಗತಿಗಳಾಗಿದ್ದವು. ನಿಸ್ಸಂಗಿಗಳಾಗದಂತೆ ಅವರನ್ನು ಯಾರೂ ತಡೆದಿರಲಿಲ್ಲ. ಭಾರತಕ್ಕೆ ಮರಳದಂತೆ ಯಾರೂ ನಿರ್ಬಂಧಿಸಿರಲಿಲ್ಲ. ಭಾಷಣಗಳ ಮೂಲಕ ಶತಮಾನಗಳ ದೈನ್ಯ ಸ್ಥಿತಿಯಿಂದ ಹಿಂದೂ ಧರ್ಮವನ್ನು ಮೇಲೆತ್ತಬೇಕೆಂದೂ , ಅದಕ್ಕಾಗಿ ಅಮೆರಿಕದಲ್ಲಿ ಎಡೆಬಿಡದೆ ಭಾಷಣಗಳನ್ನು ಮಾಡಬೇಕೆಂದು ಯಾರೂ ತಾಕೀತು ಮಾಡಿರಲಿಲ್ಲ. ಸ್ವಾಮಿಗಳ ಎಲ್ಲ ಬಂಧನಗಳು ಅವರು ಹಾಕಿಕೊಂಡವೇ ಆಗಿದ್ದವು. ಸ್ವಾಮಿಗಳ ಉಲ್ಲೇಖಿಸುತ್ತಿರುವ ಟಿಪ್ಪಣಿ ಪುಸ್ತಕ ಸಿಕ್ಕಿದೆಯೇ ಮತ್ತು ಅದರಲ್ಲಿ ಏನಿದ್ದಿತು ಎನ್ನುವ ಬಗ್ಗೆ ನಮಗೆ ಯಾವುದೇ ಸುಳಿವುಗಳು ದಕ್ಕವು.
ಅಳಸಿಂಗ ಪೆರುಮಾಳ್ ಕೇಳಿದ್ದ ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ ಸ್ವಾಮಿಗಳು ೨೩/೩/೧೮೯೬ ರ ಪತ್ರದಲ್ಲಿ ‘ ನನ್ನ ಹೊಸ ಸಂನ್ಯಾಸಿಗಳಲ್ಲಿ ನಿಜವಾಗಿಯೂ ಒಬ್ಬ ಮಹಿಳೆಯಿದ್ದಾಳೆ. . ಉಳಿದವರು ಗಂಡಸರು. ನಾನು ಇಂಗ್ಲೆಂಡ್’ನಲ್ಲಿ ಇನ್ನೂ ಕೆಲವರನ್ನು ಸಂನ್ಯಾಸಿಗಳನ್ನಾಗಿ ಮಾಡಿ ಭರತಖಂಡಕ್ಕೆ ನನ್ನೊಡನೆ ಕರೆದೊಯ್ಯಬೇಕೆಂದಿರುವೆ. ಹಿಂದೂಗಳಿಗಿಂತ ಈ ಬಿಳಿ ಬಣ್ಣದ ಮುಖಗಳು ಭರತಖಂಡದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವುವು. ಅದೂ ಅಲ್ಲದೆ ಅವರು ಹೆಚ್ಚು ಉತ್ಸಾಹಪೂರಿತರು. ಹಿಂದೂಗಳಾದರೋ ಶವದಂತಿರುವರು. ಜನಸಾಮಾನ್ಯರೇ ಇಂದಿನ ಭರತಖಂಡದ ಏಕಮಾತ್ರ ಭರವಸೆಯಾಗಿರುವರು. ಉತ್ತಮ ವರ್ಗದವರು ಶಾರೀರಿಕವಾಗಿ ಮತ್ತು ನೈತಿಕವಾಗಿ ಮೃತರಾಗಿರುವರು ಎನ್ನುತ್ತ ಹಿಂದೂಗಳ ಬಾರೆತ್ತಿದ್ದರು.
ಸ್ವಾಮಿಗಳು ಅಮೆರಿಕದಲ್ಲಿ ಹಿಂದೂ ಧರ್ಮದ ಬೋಧನೆ ಪ್ರಾರಂಭಿಸಿ ಸುಮಾರು ೩೨ ತಿಂಗಳುಗಳೇ ಕಳೆದಿದ್ದು ಚರ್ಚ್ , ಪಡಸಾಲೆ , ಸಭಾಂಗಣ ಹೀಗೆ ಎಲ್ಲೆಲ್ಲಿ ಸಾದ್ಯವೋ ಅಲ್ಲೆಲ್ಲ ಬೋಧಿಸಿದ್ದರು. ಉದಾರವಾದಿ , ಮುಕ್ತ ಮನಸ್ಸಿನ ಅಮೆರಿಕನ್ನರು ಸ್ವಾಮಿಗಳ ಭಾಷಣಗಳನ್ನು ಸಹನೆ ಮತ್ತು ಕುತೂಹಲದಿಂದ ಕೇಳಿ , ಮತಭ್ರಾಂತರಾದ ಪಾದ್ರಿಗಳನ್ನು ತರಾಟೆಗೆ ತೆಗೆದುಕೊಂಡು ಸ್ವಾಮಿಗಳಿಗೆ ಬೆಂಬಲ ನೀಡುತ್ತಿದ್ದರು. ಆದರೆ ಅವರಲ್ಲಿ ಯಾರೊಬ್ಬರೂ ಕ್ರೈಸ್ತ ಧರ್ಮ ತೊರೆದು ಹಿಂದೂಗಳಾಗಿರಲಿಲ್ಲ. ಅಭಯಾನಂದ , ಕೃಪಾನಂದ ಮತ್ತು ಯೋಗಾನಂದರನ್ನು ಹೊರತಾಗಿ ಮತ್ತೊಬ್ಬ ವ್ಯಕ್ತಿ ಸಂನ್ಯಾಸಿಯಾಗಿರಲಿಲ್ಲ. ಕೆಲ ವರ್ಷಗಳಲ್ಲಿಯೇ ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಕಾವಿ ಬಟ್ಟೆಯ ಸಂನ್ಯಾಸಿಗಳು ಸಾಮಾನ್ಯರಾಗುತ್ತಾರೆ ಎನ್ನುವ ಸ್ವಾಮಿಗಳು ಕಲ್ಪನೆಯ ತುತ್ತ ತುದಿಯಲ್ಲಿದ್ದರು. ಅಮೆರಿಕ ಮತ್ತು ಇಂಗ್ಲೆಂಡ್’ಗಳಲ್ಲಿದ್ದ ಯಾವುದೇ ಸಾಮಾಜಿಕ , ಧಾರ್ಮಿಕ ಸನ್ನಿವೇಶಗಳು ಇಂತಹ ಅಭೂತಪೂರ್ವ ಘಟನೆಗೆ ಸಹಕಾರಿಯಾಗಿರಲಿಲ್ಲ. ಸಂನ್ಯಾಸ ಎಂದರೆ ವೈರಾಗ್ಯ . ಅದು ಸಹಜವಾಗಿ ಬಂದು , ಸಾಧನೆಯಿಂದ ಗಟ್ಟಿಗೊಳ್ಳಬೇಕೆಂದು ಹಿಂದೂಧರ್ಮ ನಂಬುತ್ತದೆ. ಇದಕ್ಕೆ ಬದಲಾಗಿ ಸ್ವಾಮಿಗಳು ಅಮೆರಿಕ ಮತ್ತು ಇಂಗ್ಲೆಂಡ್’ನಲ್ಲಿ ತಮ್ಮ ಭಾಷಣಗಳಿಂದ ಸಂನ್ಯಾಸಿಗಳನ್ನು ತಯಾರಿಸಿ ಭಾರತಕ್ಕೆ ಆಮದು ಮಾಡಿಕೊಳ್ಳವ ಉತ್ಸಾಹದಲ್ಲಿದ್ದಾರೆ. ಕೇವಲ ಎರಡು ತಿಂಗಳುಗಳ ಹಿಂದೆ (೫/೧/೧೮೯೬) ಭಾರತದಿಂದ ಸಂನ್ಯಾಸಿಗಳನ್ನು ಎಲ್ಲ ಕಡೆ ಕಳಿಸಿ ಜಗತ್ತನೇ ಗೆಲ್ಲುವ ಬಯಕೆ ತೋರಿಸಿದ್ದ ಸ್ವಾಮಿಗಳು ಈಗ ಭಾರತವನ್ನು ಗೆಲ್ಲಲು ತಾವು ಅಮೆರಿಕದಲ್ಲಿ ತಯಾರಿಸಿದ ಬಿಳಿ ಮುಖದ ಸಂನ್ಯಾಸಿಗಳನ್ನು ಆಮದು ಮಾಡಿಕೊಳ್ಳಲು ಬಯಸಿದ್ದಾರೆ. ತಾವು ಬಯಸಿದಂತೆ ಇರದ ಭಾರತವನ್ನು ಹೆಣದಂತಿದೆ ಎಂದು ಜರಿದಿದ್ದಾರೆ. ಅವರ ಗುರು ರಾಮಕೃಷ್ಣರು ಆ ಹೆಣದ ಭಾಗವೇ ಆಗಿದ್ದರು ಎನ್ನುವುದನ್ನು ಮರೆತಿದ್ದಾರೆ
೧೪/೪/೧೮೯೬ ರಂದು ಲಂಡನ್’ಗೆ ಹೊರಡುವ ಹಿಂದಿನ ದಿನ ಸ್ವಾಮಿಗಳು ತ್ರಿಗುಣಾತೀತಾನಂದನಿಗೆ ಬರೆದಿದ್ದ ಪತ್ರದಲ್ಲಿ ಇಂಗ್ಲೆಂಡ್’ಗೆ ಹೋದ ನಂತರ ಮುಂದಿನ ಸಂಘಟಿತ ಕಾರ್ಯಕ್ರಮಗಳ ಬಗ್ಗೆ ಬರೆಯುತ್ತೇನೆ ಎಂದು ತಿಳಿಸಿದ್ದರು. ಇದರ ಮುಂದುವರಿಕೆಯಾಗಿ ೨೭/೪/೧೮೯೬ ರಂದು ಅಲಂಬಜಾರಿನ ಮಠದಲ್ಲಿದ್ದ ಗುರುಭಾಯಿಗಳಿಗೆ ಒಂದು ಸುದೀರ್ಘ ಪತ್ರ ಬರೆದರು. ಈ ಪತ್ರದ ಆರಂಭದಲ್ಲಿಯೇ ಸ್ವಾಮಿಗಳು ‘….ನಮ್ಮ ಗುರುದೇವರು ಬಂದ ಉದ್ದೇಶ ಸಫಲವಾಗಲಿ ಎನ್ನುವ ದೃಷ್ಟಿಯಿಂದ ಇದನ್ನು ಬರೆಯುತ್ತಿದ್ದೇನೆ. ನಿಮ್ಮೆಲ್ಲರ ಜವಾಬ್ದಾರಿಯನ್ನು ಅವರು ನನಗೆ ಕೊಟ್ಟರು. ನಿಮ್ಮಲ್ಲಿ ಅನೇಕರಿಗೆ ಇದು ಗೊತ್ತಿಲ್ಲದಿರಬಹುದು. ಆದ್ದರಿಂದ ಇದನ್ನು ಬರೆಯುತ್ತಿದ್ದೇನೆ…’ ಎಂದು ಪ್ರಾರಂಭಿಸಿದ್ದರು. ಮಠ ಕಟ್ಟುವ ವಿಚಾರವನ್ನು ಎತ್ತಿಕೊಂಡು ಅದರ ಆಡಳಿತದ ವಿಚಾರವಾಗಿ ಒಟ್ಟು ೧೦ ಅಂಶಗಳನ್ನು , ಆಡಳಿತ ಮಂಡಳಿ ಸಭೆ ಕುರಿತಾಗಿ ೫ ಅಂಶಗಳನ್ನು , ಮಠದ ಕಾರ್ಯ ವಿಭಜನೆಗೆ ಸಂಬಂಧಿಸಿದ ೩ ಅಂಶಗಳನ್ನು , ಸಾಮಾನ್ಯ ಹೇಳಿಕೆಗಳ ಅಡಿಯಲ್ಲಿ ೬ ಅಂಶಗಳನ್ನು ಮತ್ತು ಅಧಿಕಾರ ವರ್ಗದ ವಿವರಗಳನ್ನು ನೀಡಿದ್ದರು. ಈ ಅಂಶಗಳನ್ನು ಎಲ್ಲರಿಗೂ ಓದಿ ಹೇಳುವಂತೆ ತಿಳಿಸಿದ್ದರು. ಇದರಲ್ಲಿ ಆಡಳಿತದ ೬ ನೇ ಅಂಶದಲ್ಲಿ ಗ್ರಂಥಾಲಯದಲ್ಲಿ ಧೂಮಪಾನ ಅವಕಾಶ ಇರಬಾರದು ಎಂದು ತಿಳಿಸಿ, ೯ ನೇ ಅಂಶದಲ್ಲಿ ಹೊಗೆಸೊಪ್ಪು ಸೇದುವುದಕ್ಕೆ ಒಂದು ಸಣ್ಣ ಕೋಣೆ ಇರಬೇಕು. ಅಲ್ಲಿ ಹೊರತು ಬೇರೆಲ್ಲೆಯು ಧೂಮಪಾನ ಮಾಡಬಾರದು ಎನ್ನುವ ಸೂಚನೆ ನೀಡಿದ್ದರು. ಇದಲ್ಲದೆ ನಿಮ್ಮಲ್ಲಿ ಯಾರೂ ವಾಮಾಚಾರದ ಅಭ್ಯಾಸಕ್ಕೆ ಅರ್ಹರಲ್ಲ. ಆದಕಾರಣ ಮಠದಲ್ಲಿ ಅದನ್ನು ಅಭ್ಯಾಸ ಮಾಡಕೂಡದು , ಈ ನಿಯಮವನ್ನು ಉಲ್ಲಂಘಿಸುವವರು ಸಂಘದಿಂದ ಹೊರ ನಡೆಯಬೇಕು ಎಂದು ಎಚ್ಚರಿಸಿದ್ದರು. ಇದರೊಂದಿಗೆ ‘ ಈ ನನ್ನ ಸೂಚನೆಗಳಿಗೆ ಅನುಗುಣವಾಗಿ ನಡೆಯುವುದು ಮೇಲೆಂದು ತಿಳಿದರೆ ಈ ನಿಯಮಗಳಿಗೆ ಅನುಸಾರವಾಗಿ ನೀವು ನಡೆದುಕೊಂಡರೆ ಇದಕ್ಕೆ ಬೇಕಾದ ಹಣ ಸಹಾಯವೆಲ್ಲವನ್ನೂ ನಾನು ಮಾಡುವೆನು ‘ ಎನ್ನುವ ನಿರ್ಬಂಧವನ್ನು ಹೊನ್ನನ್ನು ಗೆದ್ದಿದ್ದ ಸ್ವಾಮಿಗಳು ಹೇರಿದ್ದರು. ಸ್ವಾಮಿಗಳ ಈ ನಿರ್ಬಂಧ ಈ ಹಿಂದೆ ಹಲವು ಕಡೆ ಅವರೇ ಹೇಳಿರುವಂತೆ ‘ ಹಣ ಕೊಡುವಾತನಿಗೆ ಓಲಗದವನು ಏನು ನುಡಿಸಬೇಕು ಎಂದು ಹೇಳುವ ಅಧಿಕಾರವಿದೆ ‘ ಎನ್ನುವ ತತ್ತ್ವವನ್ನೇ ಹೋಲುತ್ತಿದ್ದಿತು. ಆದರೆ ಸ್ವಾಮಿಗಳು ತಮಗೆ ಹಣ ನೀಡುತ್ತಿದ್ದವರು ತಮ್ಮ ಮೇಲೆ ಯಾವುದೇ ಬಗೆಯ ನಿರ್ಬಂಧಗಳನ್ನು ಹೇರುವುದನ್ನು ಸಹಿಸುತ್ತಿರಲಿಲ್ಲ ಎನ್ನುವುದನ್ನು ಮುಂದೆ ನೋಡಬಹುದು
ಮೇಲಿನ ಪತ್ರ ಬರೆದಾಗ ಸ್ವಾಮಿಗಳು ಭಾರತ ಬಿಟ್ಟ ಈಗಾಗಲೇ ಮೂರುವರೆ ವರ್ಷಗಳ ಸನಿಹವಾಗಿದ್ದಿತು. ಭಾರತ ತೊರೆದಾಗ ಇದ್ದ ವಿವೇಕಾನಂದನ ಜಾಗದಲ್ಲಿ ರೂಪಾಂತರಗೊಂಡಿದ್ದ ಬೇರೊಬ್ಬ ವಿವೇಕಾನಂದನಿದ್ದ. ಪಾಶ್ಚಾತ್ಯ ಜಗತ್ತಿನಲ್ಲಿ ಸಿಕ್ಕ ಗೌರವ ಆತ್ಮವಿಶ್ವಾಸ ಮೂಡಿಸಿದ್ದಿತು. ೨೦/೧೧/೧೮೯೬ ರಂದು ಈ ಆತ್ಮವಿಶಾಸದಲ್ಲಿ ಸ್ವಾಮಿಗಳು ಅಳಸಿಂಗ ಪೆರುಮಾಳ್’ಗೆ ಬರೆದರು. ‘ ಕಲ್ಕತ್ತ ಮತ್ತು ಮದ್ರಾಸಿನಲ್ಲಿ ತರುಣ ಉಪನ್ಯಾಸಕರನ್ನು ತಯಾರು ಮಾಡುವ ಕೇಂದ್ರವನ್ನು ತೆರೆಯುತ್ತೇನೆ. ಕಲ್ಕತ್ತದ ಕೆಂದ್ರ ತೆಗೆಯಲು ಬೇಕಾದ ಹಣ ನನ್ನಲ್ಲಿದೆ. … ಈ ಕೇಂದ್ರಗಳಿಂದ ಕೇವಲ ಭರತ ಖಂಡಕ್ಕೆ ದಾಳಿಯಿಡದೆ ಜಗತ್ತಿನ ಎಲ್ಲ ದೇಶಗಳಿಗೆ ಬೋಧಕರ ತಂಡವನ್ನು ಕಳಿಸುತ್ತೇನೆ. ಅದೇ ನಮ್ಮ ಕರ್ತವ್ಯ… … ಒಂದು ಪತ್ರಿಕೆಯನ್ನು ಎಲ್ಲ ಜನಾಂಗಗಳೂ ಒಂದೇ ರೀತಿಯಲ್ಲಿ ಅಂಗೀಕರಿಸುವಂತೆ ಮಾಡಲು ಎಲ್ಲಾ ರಾಷ್ಟ್ರಗಳ ಬರಹಗಾರರಿಂದ ಕೂಡಿರುವ ಒಂದು ಸಿಬ್ಬಂದಿ ಆವಶ್ಯಕ. ಅದಕ್ಕೆ ಒಂದು ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳು ಬೇಕಾಗಬಹುದು… ನನ್ನ ಗುರಿ ಭಾರತವಲ್ಲ ಅಂತಾರಾಷ್ಟ್ರೀಯ ಎನ್ನುವುದನ್ನು ನೀನು ಮರೆಯಬಾರದು ‘ ಎಂದರು. ೧೮೯೩ ರಲ್ಲಿ ಅಧ್ಯಾತ್ಮವನ್ನು ಪಾಶ್ಚಾತ್ಯರಿಗೆ ನೀಡಿ ಅದಕ್ಕೆ ವಿನಿಮಯವಾಗಿ ಲೌಕಿಕ ವಿಧ್ಯೆಯನ್ನು ಭಾರತಕ್ಕೆ ತರುತ್ತೇನೆ. ತುಳಿತಕ್ಕೆ ಒಳಗಾದವರ , ವಿಧವೆಯರ , ಅನಾಥರರ ಕಣ್ಣೀರನ್ನು ಒರೆಸುತ್ತೇನೆ ಎನ್ನುತ್ತಿದ್ದ ಸ್ವಾಮಿಗಳು ಮೂರು ವರ್ಷಗಳ ನಂತರ ಜಗತ್ತಿನ ಮೂಲೆಗಳಿಗೆ ಧರ್ಮ ಪ್ರಚಾರಕರನ್ನು ಕಳಿಸಿ ಜಗತ್ತನ್ನೇ ಗೆಲ್ಲತ್ತೇನೆ ಎನ್ನುತ್ತಿದ್ದಾರೆ. ವೈಯಕ್ತಿಕವಾದ ಅಧ್ಯಾತ್ಮವನ್ನು ಪ್ರಚಾರದ ಮೂಲಕ ಹಿಗ್ಗಿಸಬಹುದೆನ್ನುವ ತಪ್ಪು ಕಲ್ಪನೆಗೆ ಬದಲಾಗುವುದರ ಮೂಲಕ ಹಳೆಯ ವಿವೇಕಾನಂದ ಮರೆಯಾಗಿ ಹೊಸ ವಿವೇಕಾನಂದರು ಕಾಣಿಸಿಕೊಳ್ಳತೊಡಗಿದರು.
‘ಲಂಡನ್ನಿನ ಕೆಲಸ ಜಯಘೋಷ ಘರ್ಜಿಸುತ್ತಿದೆ. ಸಾರ್ವಜನಿಕ ಉಪನ್ಯಾಸವಲ್ಲದೆ ೧೨೦ ಜನ ನಿರಂತರವಾಗಿ ನನ್ನ ಉಪನ್ಯಾಸಕ್ಕೆ ಬರುತ್ತಿದ್ದಾರೆ ಎಂದು ತಿಳಿದರೆ ನಿಮಗೆ ಸೋಜಿಗವಾಗಬಹುದು. ಸೇವಿಯರ್ ದಂಪತಿಗಳು ಮತ್ತು ಗುಡ್ವಿನ್ ನನ್ನೊಡನೆ ಭರತ ಖಂಡದಲ್ಲಿ ಕೆಲಸ ಮಾಡಲು ಮತ್ತು ಅದಕ್ಕಾಗಿ ತಮ್ಮ ಸ್ವಂತ ಹಣ ವಿನಿಯೋಗಿಸಲು ನನ್ನೊಂದಿಗೆ ಭರತ ಖಂಡಕ್ಕೆ ಹೊರಟಿದ್ದಾರೆ. ಇನ್ನೂ ನೂರಾರು ಮಂದಿ ಹಾಗೆ ಮಾಡಲು ಸಿದ್ಧರಿದ್ದಾರೆ……ನನ್ನ ಕಾರ್ಯವನ್ನು ಭರತಖಂಡದಲ್ಲಿ ಪ್ರಾರಂಭಿಸಲು ಕೊನೆಗಾದರೂ ಕಡಿಮೆಯಲ್ಲದ ಸಹಾಯ ನನಗೆ ಹಣದ ರೂಪದಲ್ಲಿ ಒದಗಿ ಬಂದಿತು……ಆಂಗ್ಲೇಯರ ವಿಚಾರದಲ್ಲಿ ನನ್ನ ಅಭಿಪ್ರಾಯಗಳು ಸಂಪೂರ್ಣ ಬದಲಾದವು. ಇತರ ಎಲ್ಲಾ ಜನಾಂಗಗಳಿಗಿಂತ ಹೆಚ್ಚಾಗಿ ಅವರನ್ನೇ ದೇವರು ಏಕೆ ಅಷ್ಟೊಂದು ಅದೃಷ್ಟಶಾಲಿಗಳನ್ನಾಗಿ ಮಾಡಿರುವನೆಂದು ನನಗೆ ಗೊತ್ತಾಯಿತು. ….. ನಾನು ಕಲ್ಕತ್ತದಲ್ಲಿ ಮತ್ತು ೭೦೦೦ ಅಡಿ ಎತ್ತರದ ಆಲ್ಮೋರಾದ ಇಡೀ ಬೆಟ್ಟದಲ್ಲಿ ಎರಡು ಕೇಂದ್ರಗಳನ್ನು ತೆರೆಯುತ್ತೇನೆ. ಆಲ್ಮೋರಾ ಏಕೆಂದರೆ ಬಯಲು ಸೀಮೆಯಲ್ಲಿ ಅವರು ವಾಸಿಸುವಂತೆ ಮಾಡಿ ಭಾರತೀಯ ಜೀವನ ಪದ್ದತಿಯನ್ನು ಅವರ ಮೇಲೆ ಹೇರಿ ಅವರ ಸಾವಿಗೆ ಕಾರಣನಾಗಲು ನಾನು ಬಯಸುವುದಿಲ್ಲ….. ಹಿಂದೂ ಯುವಕರ ತಂಡಗಳನ್ನು ಪ್ರತಿಯೊಂದು ಸುಸಂಸ್ಕೃತ ದೇಶಕ್ಕೆ ಬೋಧಿಸಲು ಕಳಿಸುವುದು, ವಿದೇಶಗಳ ಗಂಡಸರು , ಹೆಂಗಸರು ಭರತಖಂಡದಲ್ಲಿ ಕೆಲಸ ಮಾಡುವಂತೆ ಮಾಡುವುದು ಇದೇ ನನ್ನ ಯೋಜನೆ……. ಇದು ೨೮/೧೧/೧೮೯೬ ರಂದು ಮೇರಿ ಮತ್ತು ಹ್ಯಾರಿಯೆಟ್ ಹೇಲ್ ಸೋದರಿಯರಿಗೆ ಬರೆದ ಪತ್ರದ ತಿರುಳು. ೯/೧೨/೧೮೯೬ ರಂದು ಸಾರಾ ಬುಲ್’ಗೆ ಬರೆದ ಪತ್ರದಲ್ಲಿ ‘ಆರ್ಥಿಕ ನೆರವು ನೀಡಲು ಮುಂದಾಗಿರುವ ನಿಮ್ಮ ಉದಾರವಾದ ಕಾಣಿಕೆಗೆ ನನ್ನ ಕೃತಜ್ಞತೆಯನ್ನು ಅರ್ಪಿಸುವುದು ಅನಾವಶ್ಯಕ. ಭರತ ಖಂಡದಿಂದ ನನ್ನ ವಿವರವಾದ ಯೋಜನೆಗಳನ್ನೆಲ್ಲ ನಿನಗೆ ವಿವರವಾಗಿ ಬರೆಯುತ್ತೇನೆ. ಸದ್ಯಕ್ಕೆ ಹಣದ ನೆರವು ಬೇಡ. ನಾನು ಕೇಳಿದಾಗ ಕೊಡಿ’ ಎಂದಿದ್ದಾರೆ.
ಸ್ವಾಮಿಗಳು ತಮ್ಮ ಗುರಿಗಳನ್ನು ಆಗಾಗ್ಗೆ ಬದಲಿಸುತ್ತಿದ್ದರು. ಇದನ್ನು ಸ್ವಾಮಿಗಳೊಂದಿಗೆ ಸನಿಹ ಒಡನಾಟ ಹೊಂದಿದ್ದ ಜೆ.ಜೆ ಗುಡ್ವಿನ ಗುರುತಿಸಿದ್ದನು. ೬/೪/೧೮೯೭ ರಂದು ಸ್ವಾಮಿಗಳು ತಮ್ಮ ಗುರಿ , ಕಾರ್ಯ ಸಾಧನೆಯನ್ನು ತಿಳಿಸಿ ಸರಳ ಘೋಷಲ್’ಗೆ ಉತ್ತರಿಸಿದ್ದರು. ಅದಕ್ಕೆ ಪ್ರತಿಯಾಗಿ ಆಕೆ ಭಾರತದ ಲೌಕಿಕ , ಸಾಮಾಜಿಕ ಸಮಸ್ಯೆಗಳನ್ನು ಧಾರ್ಮಿಕ ಮಾರ್ಗದಲ್ಲಿ ಆತ್ಮಜ್ಞಾನದ ಹಿನ್ನೆಲೆಯಲ್ಲಿ ಹೇಗೆ ಪರಿಹರಿಸಲು ಸಾಧ್ಯ ಎಂದು ಪ್ರಶ್ನಿಸಿರುವಂತಿದೆ. ಇದು ಸ್ವಾಮಿಗಳನ್ನು ಗೊಂದಲಕ್ಕೆ ಕೆಡವಿದೆ. ಪಾಶ್ಚಾತ್ಯ ದೇಶಗಳಲ್ಲಿ ಹಿಂದೂ ಧರ್ಮ , ವೇದಾಂತಗಳನ್ನು ವೈಭವೀಕರಿಸಿ ವೇದಿಕೆಗಳಿಂದ ಉತ್ತರ ಕೊಡುವಷ್ಟು ಸುಲಭವಾಗಿ ಸರಳ ಘೋಷಲ್ ಎತ್ತಿದ ಪ್ರಶ್ನೆಗಳಿಗೆ ಸ್ವಾಮಿಗಳು ಉತ್ತರ ಕೊಡಲು ಸಾಧ್ಯವಿರಲಿಲ್ಲ. ಆದ್ದರಿಂದ ಅವರು ತಾವು ಪ್ರತಿಪಾದಿಸುತ್ತಿರುವ ಆತ್ಮಜ್ಞಾನ ಎಂದರೆ ಕ್ರಿಯಾಶೀಲರಾಗುವುದು , ವೇದಾಂತದ ಶ್ರದ್ಧೆಯ ಆಧಾರದ ಮೇಲೆ ಲೌಕಿಕ ಮುನ್ನಡೆ ಸಾಧಿಸುವುದು ಎನ್ನುವ ಹೊಸ ಬಗೆಯ ವ್ಯಾಖ್ಯಾನ ನೀಡಲು ಯತ್ನಿಸಿ ತಮ್ಮ ಬೋಧನೆಗಳ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತ ೨೪/೪/೧೮೯೭ ರಂದು ಸರಳ ಘೋಷಲ್’ಗೆ ……ನಮಗೆ ಎಂತಹ ಶಿಕ್ಷಣ ಬೇಕೋ ಅಂತಹುದನ್ನು ಕೊಡಲು ಪ್ರತಿಯೊಂದು ರಾಜಧಾನಿಯಲ್ಲಿಯೂ ಒಂದೊಂದು ಕೆಂದ್ರವಿರಬೇಕು. ಅಲ್ಲಿಂದ ಭರತಖಂಡದಲ್ಲಿ ನಿಧಾನವಾಗಿ ಹರಡಬೇಕು… ಮದ್ರಾಸ್ ಮತ್ತು ಕಲ್ಕತ್ತೆಯಲ್ಲಿ ಅಂತಹ ಎರಡು ಕೆಂದ್ರಗಳನ್ನು ಈಗಾಗಲೆ ತೆರೆಯಲಾಗಿದೆ…….ಪಾಠಶಾಲೆಗಳನ್ನು ತೆರೆಯಲು ಕಾಲ ಇನ್ನೂ ಮಾಗಿಲ್ಲ….ಕ್ರಮೇಣ ಮುಖ್ಯ ಕೇಂದ್ರಗಳಲ್ಲಿ ವ್ಯವಸಾಯ , ಕೈಗಾರಿಕೆ ಇತ್ಯಾದಿಗಳನ್ನು ಕಲಿಸಬೇಕಾಗುತ್ತದೆ. ಕಲೆಗಳ ಬೆಂಬಲಕ್ಕಾಗಿಯೇ ತರಬೇತಿ ಕೇಂದ್ರಗಳನ್ನು ತೆರೆಯಬೇಕಾಗುವುದು ….ಈ ಕಾರ್ಖಾನೆಗಳಲ್ಲಿ ತಯಾರಾದ ಸಾಮಾನುಗಳನ್ನು ಯುರೋಪ್ ಮತ್ತು ಅಮೆರಿಕದಲ್ಲಿ ಮಾರಾಟ ಮಾಡಲು ಈಗಾಗಲೇ ಇರುವಂತಹ ಸಂಘಗಳನ್ನು ತೆರೆಯಬೇಕು…’ ಎನ್ನುತ್ತ ಜನಸಾಮಾನ್ಯರಿಗೆ ಶಿಕ್ಷಣ ನೀಡುವುದರಿಂದ ಪ್ರಾರಂಭಿಸಿ , ಕೈಗಾರಿಕೆಗಳನ್ನು ಸ್ಥಾಪಿಸಿ , ಸರಕುಗಳನ್ನು ಮಾರುವ ಚಿಂತನೆಗಳನ್ನು ಮುಂದಿರಿಸುತ್ತ ,ಒಂದು ಸರ್ಕಾರ ಮಾಡಬೇಕಾದ , ಪರಿಣಿತರಿಂದ ನಿರ್ಧಾರವಾಗಬೇಕಾದ ಎಲ್ಲ ಕೆಲಸಗಳನ್ನು ಅಧ್ಯಾತ್ಮಿಕ ವ್ಯಾಪ್ತಿಗೆ ತಂದಿದ್ದರು.
ಸರಳ ಘೋಷಲ್ ಎತ್ತಿದ ಪ್ರಶ್ನೆಗಳು ಸ್ವಾಮಿಗಳನ್ನು ಒಳಗೊಳಗೆ ಕೆಣಕುತ್ತಿದ್ದವು. ಹಾಗಾಗಿ ಆಲ್ಮೋರಾದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸ್ವಾಮಿಗಳು ಬ್ರಹ್ಮಾನಂದರಿಗೆ ವಿಜ್ಞಾನದ ಸಲಕರಣೆಗಳನ್ನು ಖರೀದಿಸಿ ರಾಸಾಯನಿಕ , ಭೌತ ಮತ್ತು ಜೀವ ವಿಜ್ಞಾನಗಳ ತರಗತಿಗಳನ್ನು ಪ್ರಾರಂಭಿಸಲು , ಬಂಗಾಳಿಯಲ್ಲಿರುವ ವಿಜ್ಞಾನದ ಪುಸ್ತಕಗಳನ್ನು ಖರೀದಿಸಲು , ಶಿಕ್ಷಣ ನಿರ್ದೇಶಕರನ್ನು ಹುಡುಕಲು ಒತ್ತಾಯಿಸಿದರು. (೧೧/೭/೧೮೯೭). ಅಖಂಡಾನಂದರಿಗೂ ಒತ್ತಾಯಿಸಿ ಹಳ್ಳಿಗಳಿಗೆ ಸಂನ್ಯಾಸಿಗಳು ವಿಜ್ಞಾನ , ಚರಿತ್ರೆ , ಭೂಗೋಳಗಳನ್ನು ಬೋಧಿಸುತ್ತ ಸಂಚರಿಸುವ ಹಳೆಯ ಕಾರ್ಯಕ್ರಮಕ್ಕೆ ಮರಳಿದ್ದಾರೆ. ೧೯೦೦ ಜನವರಿಯಲ್ಲಿ ಪಸಡೆನ ಸ್ಟಾರ್ ಪತ್ರಿಕೆ ಸ್ವಾಮಿಗಳು ಭಾರತದಲ್ಲಿ ಇಂಗ್ಲಿಷ್ ಕೈಗಾರಿಕಾ ಶಾಲೆ ತೆರೆಯಲು ಬೇಕಾದ ಹಣ ಸಂಗ್ರಹಿಸಲ ಇಲ್ಲಿಗೆ ಬಂದಿದ್ದಾರೆ. ಜನ ವ್ಯವಸ್ಥೆ ಮಾಡುವಂತಿದ್ದರೆ ಅವರು ಭಾರತದಲ್ಲಿ ಸ್ಥಾಪಿಸಲಿರುವ ಶಾಲೆಗೆ ನೆರವಾಗುವಂತಿದ್ದರೆ ಅವರು ಮುಂದಿನ ವಾರವೂ ಭಾಷಣ ಮಾಡಲು ಆಶಿಸುತ್ತಾರೆ ಎನ್ನುವ ಸಂಗತಿಯನ್ನು ಹಲವು ಸಲ ಪ್ರಕಟಿಸಿತು. (51) ಸ್ವಾಮಿಗಳ ಪತ್ರಗಳು ತಿಳಿಸುವಂತೆ ಬಹುಹಿಂದೆಯೇ ಈ ಯೋಜನೆಯನ್ನು ಅವರು ಕೈಬಿಟ್ಟು ಬೇಲೂರಿನಲ್ಲಿ ರಾಮಕೃಷ್ಣ ಮಠ ಸ್ಥಾಪಿಸುವುದು , ತಮ್ಮ ತಾಯಿಗೆ ಮನೆ ಕಟ್ಟಿಕೊಡುವುದನ್ನೇ ತಮ್ಮ ಗುರಿಗಳನ್ನಾಗಿಸಿಕೊಂಡಿದ್ದರು. ಹೀಗೆ ಸ್ವಾಮಿಗಳ ಗುರಿಗಳು ನಿರ್ದಿಷ್ಟ , ಖಚಿತವಾಗಿರದೆ ಅವಕಾಶ , ಅನುಕೂಲಕ್ಕೆ , ಲಹರಿಗೆ ತಕ್ಕಂತೆ ಬದಲಾಗುತ್ತಿದ್ದವು.
ಸ್ವಾಮಿಗಳಿಗೆ ಶ್ರೀನಗರದಲ್ಲಿರುವಾಗ ಕಾಶ್ಮೀರದಲ್ಲಿ ಒಂದು ಕಾಲೇಜನ್ನು ಸ್ಥಾಪಿಸುವ ಬಯಕೆ ಮೂಡಿದ್ದಿತು. ನಂತರ ವಾಸ್ತವ ಸ್ಥಿತಿಗತಿಗಳನ್ನು ತಿಳಿದು ಅದು ಸಧ್ಯಕ್ಕೆ ಸಾಧ್ಯವಿಲ್ಲ ಅದರ ಬದಲು ಕಲ್ಕತದಲ್ಲಿ ಸ್ಥಾಪಿಸುವುದು ಸೂಕ್ತ . ಅದಕ್ಕೆ ೧೦೦೦ ರೂಪಾಯಿಗಳು ಬೇಕಾಗಬಹುದು ಮತ್ತು ಮಹೇಂದ್ರನಾಥ ಗುಪ್ತರನ್ನು (ಮಾಸ್ಟರ್ ಮಹಾಶಯ) ಪ್ರಿನ್ಸಿಪಾಲ್ ಮಾಡಬಹುದು ಎನ್ನುವ ಚರ್ಚೆಗಳು ಹರಿದಾಡಿದ್ದವು. ಹೊಸದಾಗಿ ಸ್ಥಾಪಿಸುವ ಮಠದ ಕೆಲಸಗಳಲ್ಲಿ ಎಲ್ಲರೂ ಭಾಗಿಯಾಗುವಂತೆ ಮಾಡಿ ಅವರಲ್ಲಿ ಉತ್ತರದಾಯಿತ್ವವನ್ನು ತರಬೇಕು. ಇದರಿಂದ ವ್ಯಕ್ತಿಗಳು ಕಣ್ಮರೆಯಾದರೂ ಸಂಸ್ಥೆಗಳು ಉಳಿಯುತ್ತವೆ ಎನ್ನುವ ಚಿಂತನೆಗಳು ಹರಳುಗಟ್ಟಿದ್ದವು. (೧೭/೭/೧೮೯೮, ೧/೮/೧೮೯೮-ಬ್ರಹ್ಮಾನಂದ)
ಸ್ವಾಮಿಗಳ ಅಮೆರಿಕ ಪ್ರವಾಸ ನಂತರದ ದಿನಗಳಲ್ಲಿ ಮಾಡಿದ ಭಾಷಣ ಸಂಚಾರ ಮತ್ತು ಅವರ ಗುರಿಗಳನ್ನು ಕುರಿತಾಗಿ ಯಾವ ನಿರ್ಧಾರಕ್ಕೆ ಬರಬಹುದು ? ಸ್ವಾಮಿಗಳು ಆಕಸ್ಮಾತ್ತಾಗಿ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಅಮೆರಿಕಕ್ಕೆ ಹೋಗಿದ್ದರು. ಅಷ್ಟೇ ಅಚ್ಚರಿಯ ರೀತಿಯಲ್ಲಿ ಅಲ್ಲಿ ಭಾಷಣಗಳಿಗೆ ವಾಣಿಜ್ಯ ಸ್ವರೂಪವಿದೆಯೆಂದು ಅವರಿಗೆ ಗೊತ್ತಾಯಿತು. ಈ ಅವಕಾಶಗಳನ್ನು ಬಳಸಿಕೊಂಡು ಹಣ ಸಂಪಾದಿಸಿ ಭಾರತದಲ್ಲಿ ರಾಮಕೃಷ್ಣ ಮಠ ಕಟ್ಟಿದರೆ ಒಂದು ನೆಲೆ ದಕ್ಕಿದಂತಾಗುತ್ತದೆಯೆಂದು ಭಾವಿಸಿದರು. ಹರಿದಾಸ ವಿಹಾರಿದಾಸ ದೇಸಾಯಿಗಳು ಕಲ್ಕತ್ತಕ್ಕೆ ಭೇಟಿ ನೀಡಿದಾಗ ಗುರುಭಾಯಿಗಳೊಂದಿಗೆ ಸ್ವಾಮಿಗಳ ಕುಟುಂಬದವರನ್ನು ಭೇಟಿ ಮಾಡಿದ್ದರು. ಅವರ ದುಸ್ಥಿತಿಯನ್ನು ಕಂಡು ಮರುಕಗೊಂಡಿದ್ದರು. ಅವರು ಅವರ ಕುಟುಂಬಕ್ಕೆ ಅರ್ಥಿಕ ನೆರವು ನೀಡಿದ್ದರೋ ಇಲ್ಲವೋ ಗೊತ್ತಿಲ್ಲ. ಮನೆಯ ಹಿರಿಯ ಮಗನಾಗಿ ಕುಟುಂಬದ ಸಮಸ್ಯೆಗಳನ್ನು ಬಗೆ ಹರಿಸುವ ಮೊದಲು ಸಂನ್ಯಾಸವನ್ನು ತೆಗೆದುಕೊಂಡಿದ್ದರ ಔಚಿತ್ಯವನ್ನು ಅವರು ಪ್ರಶ್ನಿಸಿದ್ದರು. ಪ್ರಮದದಾಸ ಮಿತ್ರರೂ ಇದೇ ಪ್ರಶ್ನೆಯನ್ನು ಎತ್ತಿದ್ದು ಸ್ವಾಮಿಗಳು ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ೧೪/೭/೧೮೯೯ರ ಪತ್ರದಲ್ಲಿ ಉತ್ತರಿಸಿದ್ದರು. ಭಾರತದಲ್ಲಿ ನೂರಾರು ಮತ , ಪಂಥ , ಸಂತರು ಇರುವಾಗ ರಾಮಕೃಷ್ಣರನ್ನು ಇನ್ನೊಬ್ಬ ದೇವತೆಯಾಗಿ ಪೂಜಿಸುವುದು ಮತ್ತು ಅವರ ಹೆಸರಿನಲ್ಲಿ ಮಠ ಮತ್ತು ಇನ್ನೊಂದು ಪಂಥ ಸ್ಥಾಪಿಸಲು ಹೆಣಗುವುದು ಎಷ್ಟು ಸರಿ ಎಂದು ಹರಿದಾಸ ವಿಹಾರಿದಾಸ ದೇಸಾಯಿಗಳು ಕೇಳಿದ್ದರೆಂದು ಸ್ವಾಮಿಗಳು ಕೊಟ್ಟಿರುವ ಉತ್ತರದಿಂದ ಊಹಿಸಬಹುದು. ನಿಮ್ಮ ಚರಿತ್ರೆಯಲ್ಲಿ ಬರುವ ಎಲ್ಲ ಮಹಾತ್ಮರನ್ನು ಸೇರಿಸಿದರೂ ಅದರ ನೂರರಷ್ಟು ಗುರು ಪವಿತ್ರನಾಗಿರುವಾಗ , ಅಂತಹ ಗುರುವನ್ನು ಕೆಲವರು ಪೂಜೆ ಮಾಡಿದರೆ ತಪ್ಪೇನು ? ಎಂದು ಪ್ರಶ್ನಿಸಿ ರಾಮಕೃಷ್ಣರ ಹೆಸರಿನಲ್ಲಿ ಮಠ ಸ್ಥಾಪಿಸುವುದನ್ನು ಸಮರ್ಥಿಸಿಕೊಂಡಿದ್ದರು. (೨೯/೧/೧೮೯೪). ಅದರಲ್ಲಿ ಭಾರತದ ದೀನ ದಲಿತರ ಉದ್ಧಾರದ ಮಾತಿರಲಿಲ್ಲ. ಹರಿದಾಸ ವಿಹಾರಿದಾಸ ದೇಸಾಯಿಯವರಿಗೆ ಬರೆದ ಪತ್ರದಲ್ಲಿ ಸ್ವಂತ ಕುಟುಂಬದ ಏಳಿಗೆ ಮತ್ತು ಭಾರತದ ಉದ್ದಾರ ಎರಡರಲ್ಲಿ ಎರಡನೆಯದನ್ನು ನಾನು ಆರಿಸಿಕೊಂಡೆ ಎಂದು ಹೇಳಿದ್ದಾರೆ. ಅಮೆರಿಕಕ್ಕೆ ಹೋಗುವ ಮೊದಲು ಬರೆದ ಯಾವುದ ಪತ್ರದಲ್ಲಾಗಲಿ , ಮಾತುಕತೆಗಳಲ್ಲಿ ಆಗಲಿ ಇದು ಕಂಡುಬಂದಿಲ್ಲ. ಆರು ತಿಂಗಳ ನಂತರ ಹರಿದಾಸ ವಿಹಾರಿದಾಸ ದೇಸಾಯಿಗಳಿಗೆ ತಾವು ದೀನ , ದಲಿತರ ಸೇವೆಗೆ ಹಣ ಹೊಂದಿಸಲು ಬಂದಿರುವುದಾಗಿ ತಿಳಿಸಿದರು. (೨೦/೬/೧೮೯೪). ಸ್ವಾಮಿಗಳು ಹಿಂದೂ ಧರ್ಮವನ್ನು ಹೊಗಳಿ ಭಾಷಣ ಮಾಡುತ್ತಿದ್ದಾಗ ಪಾದ್ರಿಗಳು ಅಂತಹ ಶ್ರೇಷ್ಟ ಧರ್ಮ ತುಳಿತಕ್ಕೊಳಗಾದವರಿಗೆ ಏನು ಮಾಡಿದೆ ಎಂದು ತೀವ್ರವಾಗಿ ಪ್ರಶ್ನಿಸತೊಡಗಿದಾಗ ಅವರಲ್ಲಿ ಸಮಾಜ ಸೇವೆಯ ಚಿಂತನೆಗಳು ಮೊಳಕೆಯೊಡೆದವು.
ಭಾರತದ ಬಹುತೇಕ ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೇ ಮದ್ದು .ಆಧುನಿಕ ಜಗತ್ತಿಗೆ ಮೈಯೊಡ್ಡಿಕೊಳ್ಳುವುದರಿಂದ ಮಾತ್ರವೇ ಭಾರತೀಯ ಸಮಾಜದಲ್ಲಿ ಹೊಸಗಾಳಿ ಬೀಸಬಲ್ಲದು ಎಂದು ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಸಮಾಜ ಸುಧಾರಕರಿಗೆ ಗೊತ್ತಾಗಿದ್ದಿತು. ಹೆಂಗಸರಿಗೆ ಶಿಕ್ಷಣ ನೀಡುವುದು ಅದರ ಮುಖ್ಯವಾದ ಒಂದು ಅಂಗ ಎಂದು ಅವರ ಭಾವಿಸಿದ್ದರು. ಈ ದೃಷ್ಟಿಯಲ್ಲಿಯೇ ಸ್ವಾಮಿಗಳ ಹುಟ್ಟೂರು ಕಲ್ಕತ್ತದಲ್ಲಿಯೇ ಭಾರತೀಯರು ಆಧುನಿಕ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳನ್ನು ತೆರೆದಿದ್ದರು. ಅಂತಹ ವಿದ್ಯಾಸಂಸ್ಥೆ ಒಂದರಿಂದಲೇ ದತ್ತ ವಂಶದ ನರೇಂದ್ರನಾಥ ಇಂಗ್ಲಿಷ್’ನಲ್ಲಿ ಪ್ರಭುತ್ವ ಗಳಿಸಿ ಸ್ವಾಮಿ ವಿವೇಕಾನಂದನಾಗಿ ಆತ್ಮವಿಶ್ವಾಸದಿಂದ ಅಮೆರಿಕಕ್ಕೆ ಹೋಗಲು ಸಾದ್ಯವಾಗಿದ್ದಿತು. ಸ್ವಾಮಿಗಳು ೧೮೯೩ ರಲ್ಲಿ ಮೈಸೂರಿಗೆ ಭೇಟಿ ನೀಡುವ ವೇಳೆಗಾಗಲೇ ಚಾಮರಾಜೆಂದ್ರ ಒಡೆಯರು ಮೈಸೂರಿನಲ್ಲಿ ಹೆಣ್ಣು ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡುವ ಪ್ರೌಢಶಾಲೆಗಳನ್ನು ತೆರೆದಿದ್ದರು. ಸ್ವಾಮಿಗಳು ಅಲ್ಲಿಗೆ ಭೇಟಿಕೊಟ್ಟಿದ್ದರು. (೨೩/೬/೧೮೯೪-ನರಸಿಂಹಾಚಾರ್ಯ). ಆದ್ದರಿಂದ ಹಿಂದೂ ಸಮಾಜದ ಏಳ್ಗೆಗಾಗಿ ಜನರಿಗೆ ಶಿಕ್ಷಣ ಬೇಕು ಎಂದು ಗುರುತಿಸಿದವರಲ್ಲಿ ಸ್ವಾಮಿಗಳು ಮೊದಲಿಗರೇನಲ್ಲ. ಇದಕ್ಕೆ ಭಿನ್ನವಾಗಿ ಶಿಕ್ಷಣ ಕೊಡುವ ದಾರಿ ಸ್ವಾಮಿಗಳಿಗೆ ಹೊಳೆದಿದ್ದಿತು. ಅಧ್ಯಾತ್ಮ ಕೇಂದ್ರ /ಮಠ/ಆಶ್ರಮವನ್ನು ತೆರೆದು ಅಲ್ಲಿ ಸಂನ್ಯಾಸಿಗಳನ್ನು ತರಬೇತಿಗೊಳಿಸಿ ಅವರು ಊರಿಂದ ಊರಿಗೆ ವಿದ್ಯೆಯನ್ನು ಹಂಚುತ್ತ ಸಾಗುವುದು ಅವರ ಯೋಜನೆಯಾಗಿದ್ದಿತು. . ಪ್ರತಿ ಹಳ್ಳಿಯಲ್ಲಿ ಪಾಠಶಾಲೆಗಳನ್ನು ತೆರೆದು ವಿದ್ಯೆ ಹಂಚುವುದು ಸಾದ್ಯವಿಲ್ಲ ಎಂದು ಸ್ವಾಮಿಗಳು ಭಾವಿಸಿದ್ದರು (೨೩/೬/೧೮೯೪-ಚಾಮರಾಜೇಂದ್ರ ಒಡೆಯರ್ ) ಶಿಕ್ಷಣದಿಂದ ಜನರಿಗೆ ಸ್ವತಂತ್ರ ವಿಚಾರ ಧಾರೆ ಮೂಡುತ್ತದೆ , ಆಗ ಅವರೇ ಜಾತಿ ಪದ್ದತಿ , ಹೆಂಗಸರ ಶಿಕ್ಷಣ , ಸಮಾನತೆ ಮುಂತಾದ ಉರಿಯುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡಕೊಳ್ಳುತ್ತಾರೆ ಎಂದು ಭಾವಿಸಿದ್ದರು. ಊರಿಂದ ಊರಿಗೆ ಅಲೆಯುವ ಸಂನ್ಯಾಸಿಗಳು ಹರಿಕಥೆ ಹೇಳಬಹುದೇ ಹೊರತು ಸ್ಥಿರವಾದ ಶೈಕ್ಷಣಿಕ ವ್ಯವಸ್ಥೆಗೆ ಪರ್ಯಾಯ ಆಗಲಾರರು. ಜನರಿಗೆ ಶಿಕ್ಷಣ ಕೊಡುವುದಕ್ಕೆ ನಿರಂತರ ಸಂಪನ್ಮೂಲಗಳು ಬೇಕು ಎನ್ನುವುದರತ್ತ ಗಮನ ಹರಿಸಿರಲಿಲ್ಲ. ಸ್ವಾಮಿಗಳು ತಮ್ಮ ಗುರಿಗೆ ಬೇಕಾದ ಸಂಪನ್ಮೂಲವನ್ನು ಪಡೆಯಲು ಅವರು ಆರಿಸಿಕೊಂಡ ದಾರಿ ಮಾತ್ರ ವಿಚಿತ್ರವಾಗಿದ್ದಿತು. ಅಮೆರಿಕದಲ್ಲಿ ಪಾದ್ರಿಗಳು ಧರ್ಮವನ್ನು ವ್ಯಾಪಾರವಾಗಿಸಿದ್ದಾರೆ. ಧರ್ಮ ಎಂದರೆ ಆತ್ಮಾನುಭೂತಿಯ ಮಾರ್ಗ. ಅದು ಸಾಧನೆ, ತ್ಯಾಗ ಮತ್ತು ನಿರ್ವಿಕಾರದಿಂದ ಬರುವ ವೈಯಕ್ತಿಕ ಅನುಭಾವವೇ ಹೊರತು ಕೊಟ್ಟು ಕೊಳ್ಳುವ ಸರಕಲ್ಲ ಎಂದು ಪಾದ್ರಿಗಳ ಬೆವರಿಳಿಸಿದ್ದ ಸ್ವಾಮಿಗಳು ನಾನು ಅಮೆರಿಕನ್ನರಿಗೆ ಅಧ್ಯಾತ್ಮವನ್ನು ನೀಡಿ ಜನರಿಗೆ ಶಿಕ್ಷಣ ನೀಡಲು ಬೇಕಾದ ಹಣ ಸಂಪಾದಿಸುತ್ತೇನೆ ಎನ್ನುತ್ತಿರುವುದೇ ಒಂದು ವ್ಯಂಗ್ಯವಾಗದ್ದಿತು.
ಕರ್ನಾಟಕದಲ್ಲಿ ಸ್ವಾಮಿಗಳಿಗಿಂತ ಮೊದಲೇ ಪ್ರಗತಿಪರ ಧೋರಣೆ ತಳೆದವರಿದ್ದರು. ಸ್ವಾಮಿಗಳಿಗಿಂತ ಒಂದು ತಿಂಗಳು ಚಿಕ್ಕವರಾಗಿದ್ದ ಚಾಮರಾಜೇಂದ್ರ ಒಡೆಯರ್ (೨೨/೨/೧೮೬೩-೨೮/೧೨/೧೮೯೪) ಸ್ವಾಮಿಗಳ ಪರಿಚಯ ಆಗುವುದಕ್ಕೆ ಮೊದಲೇ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು. ಶಾಲೆಗಳನ್ನು ತೆರೆದಿದ್ದರು. ರೈಲ್ವೇ ಮಾರ್ಗಗಳನ್ನು ಹಾಕಿಸಲು ಯತ್ನಿಸಿದ್ದರು. ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಸಾಮಾನ್ಯ ಜನರನ್ನು ಮೇಲೆತ್ತಲು ೧೮೯೨ ರಲ್ಲಿಯೇ ಮದ್ರಾಸ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಯಾವ ಬಾಹ್ಯ ಪ್ರೇರಣೆಯಿಲ್ಲದೆ ಇವರ ಹೆಂಡತಿ ರಾಣಿ ಕೆಂಪನಂಜಮ್ಮಣ್ಣಿ ೧೮೯೮ ರಲ್ಲಿ ಮಾರಿಕಣಿವೆ ಆಣೆಕಟ್ಟೆ ಕಟ್ಟುವ ಸಾಹಸ ಮಾಡಿದ್ದಳು. ಇವು ಸ್ವಾಮಿಗಳ ‘ಭಾರತದ ಕೆಲಸಗಳಿಗಿಂತ’ ಉತ್ತಮವೂ , ಸಾರ್ವಜನಿಕವೂ ಆಗಿದ್ದವು. ಇದೇ ರೀತಿಯಲ್ಲಿ ಶಿರಸಂಗಿ ಲಿಂಗರಾಜರು ಜನಾನುರಾಗಿ , ಜನಪರ ರಾಜರಾಗಿ ಬಡತನ ನಿರ್ಮೂಲನಕ್ಕೆ ಬೇಕಾದ ನೀರಾವರಿ , ಕೃಷಿಗೆ ಶ್ರಮಿಸಿದ್ದರು. ರಮಾಬಾಯಿ ವಿಧವೆಯರ ವಸತಿ ಶಾಲೆಗಳನ್ನು ಸ್ವಾಮಿಗಳಿಗಿಂತ ೨೦ ವರ್ಷ ಮೊದಲೇ ಸ್ಥಾಪಿಸಿ ಯಶಸ್ವಿಯಾಗಿ ನಡೆಸಿದ್ದಳು. ಕಲ್ಕತ್ತದಲ್ಲಿಯೇ ಶಶಿಧರ ಬ್ಯಾನರ್ಜಿ ಅಂತಹುದೇ ಕೆಲಸದಲ್ಲಿ ತೊಡಗಿದ್ದರು. ಆದ್ದರಿಂದ ಸ್ವಾಮಿಗಳನ್ನು ಈ ಯಾವ ದೃಷ್ಟಿಯಿಂದಲೂ ಮೊದಲಿಗರೆನ್ನಲು ಸಾಧ್ಯವಿಲ್ಲ.
ವಿಶ್ವ ಧರ್ಮ ಸಂಸತ್ತಿನ ನಂತರ ಸ್ವಾಮಿಗಳ ಈ ಭಾಷಣಗಳ ಪ್ರವಾಸಗಳ ಉದ್ದೇಶ ಏನಾಗಿದ್ದಿತು ? ಹಲವು ಭಾಷಣಗಳಲ್ಲಿ ಅವರೇ ತಿಳಿಸಿದಂತೆ ಅಮೆರಿಕನ್ನರನ್ನು ಹಿಂದೂ ಧರ್ಮಕ್ಕೆ ಮತಾಂತರಿಸುವುದಲ್ಲ. ಅಮೆರಿಕದ ಜನರಿಗೆ ಹಿಂದೂ ಧರ್ಮ ಮತ್ತು ಅದರ ಹೆಗ್ಗಳಿಕೆಯನ್ನು ಪರಿಚಯಿಸುವುದೇ ? ಅದಾಗಿದ್ದರೆ ಕ್ರೈಸ್ತ ಮಿಷನರಿಗಳ ಮೇಲೆ ಅಷ್ಟೊಂದು ಟೀಕೆ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಕೆಲವು ಸಂದರ್ಶನ ಮತ್ತು ಪತ್ರಗಳಲ್ಲಿ ಸ್ವಾಮಿಗಳು ಅಮೆರಿಕದಿಂದ ಆಧುನಿಕ ಜ್ಞಾನವನ್ನು ಭಾರತಕ್ಕೆ ಒಯ್ಯಲು ಬಂದಿರುವುದಾಗಿ ತಿಳಿಸಿದ್ದಾರೆ. ಈ ಉದ್ದೇಶಕ್ಕೆ ಸರದಿಯಲ್ಲಿ ಧಾರ್ಮಿಕ ಭಾಣಗಳನ್ನು ಕೊಡುವುದರಿಂದ ಪ್ರಯೋಜನವಿಲ್ಲ. ಆದ್ದರಿಂದ ಸ್ವಾಮಿಗಳ ಈ ಭಾಷಣಗಳ ಪ್ರವಾಸಗಳನ್ನು ಬೇರೆ ಕೋನದಿಂದ ನೋಡಿ ಅರ್ಥಮಾಡಿಕೊಳ್ಳಲು ಯತ್ನಿಸಬಹುದು. ವಿಶ್ವ ಧರ್ಮ ಸಂಸತ್ತು ಮುಗಿದ ನಂತರ ಕೆಲವು ಭಾರತೀಯ ಪತ್ರಿಕೆಗಳು ಸ್ವಾಮಿಗಳನ್ನು ಕೇಂದ್ರೀಕರಿಸಿ-ಇತರ ಭಾರತೀಯರನ್ನು ಕಡೆಗಣಿಸಿ- ಸುದ್ದಿಗಳನ್ನು ನೀಡುತ್ತಿದ್ದವು. ಸ್ವಾಮಿಗಳಿಗೆ ಅಮೆರಿಕದಲ್ಲಿ ಸಿಕ್ಕುತ್ತಿರುವ ದಿಗ್ವಿಜಯದ ಸುದ್ದಿಗಾಗಿ ಕಾಯುತ್ತಿದ್ದ ಗುರುಭಾಯಿ ಮತ್ತು ಮದ್ರಾಸಿನ ಶಿಷ್ಯರಿಗೆ ಈ ಸುದ್ದಿಗಳು ಬಲ ತುಂಬುತ್ತಿದ್ದವು. ವಿದೇಶಿ ನೆಲದಲ್ಲಿ ಹಿಂದೂ ಧ್ವಜವನ್ನು ನೆಡುವ ಸಾಹಸಿಯಾಗಿ ಕಾಣಿಸಲು ಅಥವಾ ಭಾಷಣಗಳ ಮೂಲಕ ಹಣ ಸಂಪಾದಿಸಿ ತಮ್ಮ ಭಾರತದ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವೇ ಎಂದು ತಿಳಿಯಲು ಅಥವಾ ಹೊಸ ಜಾಗಗಳನ್ನು ನೋಡುತ್ತ , ಹೊಸಬರ ಪರಿಚಯ ಮಾಡಿಕೊಳ್ಳಲು ಸ್ವಾಮಿಗಳು ಈ ಉಪನ್ಯಾಸ ಪ್ರವಾಸಗಳನ್ನು ಮಾಡಿರಬಹುದು. ಆದರೆ ಇಂತಹ ಯಾವ ವಿವರಣೆಗಳಿಂದಲೂ ಅಭಿಮಾನಿಗಳಿಗೆ ತೃಪ್ತಿಯಾಗದು.
ಸ್ವಾಮಿಗಳು ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಗವಹಿಸಿದ್ದು ಆನಂತರ ಅಮೆರಿಕ ನಗರ , ಪಟ್ಟಣಗಳಲ್ಲಿ ಹಿಂದೂ ಧರ್ಮ ನಡೆಸಿದ ದಿಗ್ವಿಜಯದಂತೆ ಕೆಲವರಿಗೆ ಕಂಡಿದ್ದರೆ, ಇನ್ನು ಕೆಲವರು ವೇದಾಂತ ಕೇಸರಿಯ ಗರ್ಜನೆಗೆ ಅಮೆರಿಕ ಬೆಚ್ಚಿ ಮೆಚ್ಚುಗೆಯಲ್ಲಿ ನೋಡಿತು ಎಂದು ಕಲ್ಪಿಸಿಕೊಂಡಿದ್ದಾರೆ. ಇನ್ನು ಕೆಲವರಿಗೆ ಅವರು ಹಿಂದೂ ಧರ್ಮದ ಸಾರವನ್ನು ಅಮೆರಿಕನ್ನರಿಗೆ ಬೋಧಿಸಿದ ಪ್ರವಾದಿಯಾಗಿ ಕಂಡಿದ್ದಾರೆ. ಸ್ವಾಮಿಗಳ ಆರಂಭಿಕ ಭಾಷಣಗಳನ್ನು ಒಂದು ಸಂಸ್ಥೆ ವ್ಯಾಪಾರದ ದೃಷ್ಟಿಯಲ್ಲಿ ಆಯೋಜಿಸಿದ್ದಿತೇ ಹೊರತು ಸಾರ್ವಜನಿಕರು ತಾವಾಗಿಯೇ ಸ್ವಾಮಿಗಳನ್ನು ಭಾಷಣ ಮಾಡಿರಲು ಕರೆದಿರಲಿಲ್ಲ. ಸ್ವಯಂ ಪ್ರೇರಣೆಯಿಂದ ಕೆಲ ಸಂಘ ಸಂಸ್ಥೆಗಳು ಪೌರಾತ್ಯ ಹಿಂದೂ ಧರ್ಮದ ಬಗ್ಗೆ ತಿಳಿಯಲು ಸ್ವಾಮಿಗಳನ್ನು ಆಹ್ವಾನಿಸಿದ್ದವು. ಕ್ರೈಸ್ತ ಮಿಷನರಿಗಳೊಂದಿಗೆ ಸ್ವಾಮಿಗಳು ನಡೆಸಿದ ಸೆಣಸಾಟಗಳಲ್ಲಿ ಯಾವುದೇ ನಿರ್ದಿಷ್ಟ , ಖಚಿತ ಮಾರ್ಗಸೂಚಿಗಳಿರಲಿಲ್ಲ. ಅವರನ್ನು ಪ್ರವಾದಿ ಎಂದು ಕರೆಯಲು ಜನ ಸಮೂಹ ಅವರ ಬೋಧನೆಗಳಿಗೆ ಮರುಳಾಗಿರಲಿಲ್ಲ. ನಂತರ ದಿನಗಳಲ್ಲಿ ಇಂತಹ ಕಾಲ್ಪನಿಕ ಸಂಗತಿಗಳನ್ನು ಹೊಸೆಯಲಾಯಿತು. ಸ್ವಾಮಿಗಳು ತಮ್ಮ ಆಲೋಚನೆ , ಚಿಂತನೆ , ಯೋಜನೆಗಳಿಗೆ ಅನುಗುಣವಾಗಿ ವರ್ತಿಸುತ್ತಿದ್ದರು. ಅವು ವಿಫಲವಾದಾಗ ಅಥವಾ ತ್ರಾಸಕರವಾದಾಗ ಭಗವಂತನ ಕೈಯಲ್ಲಿ ಗೊಂಬೆ ತಾವೆನ್ನುವಂತೆ ವರ್ತಿಸುತ್ತಿದ್ದರು. ಅವರ ನಡವಳಿಕೆ ಸನ್ನಿವೇಶಕ್ಕೆ ಅನುಗುಣವಾಗಿ ಬದಲಾಗುತ್ತಿದ್ದಿತೇ ಹೊರತು ನಿರ್ದಿಷ್ಟ ನೀತಿ , ಸಿದ್ಧಾಂತಗಳಿಗೆ ಅನುಗುಣವಾಗಿ ಅಲ್ಲ. ಅವರಿಗೆ ವಸತಿ ಕಲ್ಪಿಸಿ , ಆರ್ಥಿಕ ಮತ್ತಿತರ ಬೆಂಬಲ ನೀಡಿದವರಲ್ಲಿ ಯಾರೂ ಕ್ರೈಸ್ತ ಧರ್ಮ ತೊರೆಯಲಿಲ್ಲ , ಹಿಂದೂ ಧರ್ಮಕ್ಕೆ ಮತಾಂತರವಾಗಲಿಲ್ಲ, ಅಮೆರಿಕದ ನಾಗರಿಕ ಜೀವನದಿಂದ ವಿಮುಖರಾಗಲಿಲ್ಲ. ಸ್ವಾಮಿಗಳ ವರ್ತನೆ , ನಡವಳಿಕೆ , ಸಿಟ್ಟು, ಸೆಡವು , ಸೋಲು, ಗೆಲುವುಗಳು ಯಾವುದೇ ಸಾಮಾನ್ಯ ಮನುಷ್ಯನಿಗಿಂತ ಭಿನ್ನವಾಗಿರಲಿಲ್ಲ.
ಸ್ವಾಮಿಗಳ ಗುರಿ ಅದಕ್ಕಾಗಿ ಅವರು ಪಟ್ಟ ಶ್ರಮ , ಅದರಿಂದ ಅವರಿಗೆ ಉಂಟಾದ ಭಾವನೆಗಳನ್ನು ಅವರ ,ಮಾತಿನಲ್ಲಿಯೇ ಕೇಳಬಹುದು. ‘ಕರ್ತವ್ಯ ನಡು ಹಗಲಿನ ಸೂರ್ಯನಂತೆ. ಅದರ ಭಯಂಕರ ಕಿರಣಗಳು ಮಾನವ ಜನಾಂಗದ ಜೀವ ಶಕ್ತಿಯನ್ನು ಸುಟ್ಟು ಹಾಕುತ್ತವೆ. ಸ್ವಲ್ಪ ಕಾಲದವರೆಗೆ ಕನಸು ಹೇಗೋ ಆವಶ್ಯಕ. ಆದಾದ ನಂತರ ಅದು ವಿಕಾರವಾದ ಕೆಟ್ಟ ಕನಸು . ನಾವು ಸಹಾಯ ಮಾಡಲಿ , ಬಿಡಲಿ ನಡೆಯಬೇಕಾದ ಕೆಲಸಗಳು ನಡೆಯುತ್ತವೆ. ನಾವು ಮಾತ್ರ ಭ್ರಾಂತಿಯಿಂದ ನುಚ್ಚು ನೂರಾಗುವೆವು. ನಿಸ್ವಾರ್ಥತೆಯ ತುದಿಯಲ್ಲಿ ಒಂದು ಮಿಥ್ಯಾ ಭಾವುಕತೆಯಿದೆ. ಅದು ಅತಿರೇಕಕ್ಕೆ ಹೋಗುತ್ತದೆ. ಅದು ಪ್ರತಿಯೊಂದು ಅಮಿಷಕ್ಕೂ ತಲೆಬಾಗುತ್ತ ಇತರರಿಗೆ ಹಾನಿ ಮಾಡುತ್ತದೆ. ನಮ್ಮ ನಿಸ್ವಾರ್ಥತೆಯಿಂದ ಇತರರನ್ನು ಸ್ವಾರ್ಥಿಗಳಾಗುವಂತೆ ಮಾಡಲು ನಮಗೆ ಯಾವ ಅಧಿಕಾರವೂ ಇಲ್ಲ. ‘ (೨೫/೮/೧೮೯೮). ಈ ಸಂದೇಶ ಅವರು ಕರ್ಮಯೋಗದ ಬಗ್ಗೆ ಮಾಡಿದ ಭಾಷಣ , ಬರೆದ ಭಾಷ್ಯ ಮತ್ತು ತ್ಯಾಗದ ಕಲ್ಪನೆಗಳಿಗಿಂತ ಭಿನ್ನವಾಗಿದೆ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಅ ಆಯ್ದ ಭಾಗ)
ಸ್ವಾಮಿಗಳು ಅಮೆರಿಕಕ್ಕೆ ಹೋಗಿದ್ದು ಏಕೆ ಎನ್ನುವ ಪ್ರಶ್ನೆಗೆ ಲೌಕಿಕ ಸಾಧಕರಾದ ಪಾಶ್ಚಾತ್ಯರಿಗೆ ಹಿಂದೂ ಧರ್ಮದ ಶ್ರೇಷ್ಟತೆಯನ್ನು ಮನವರಿಕೆ ಮಾಡಿ ಆ ಮೂಲಕ ಜಗತ್ತಿಗೆ ತಿಳಿಸುವುದು ಎನ್ನುವ ಸಾಮಾನ್ಯ ಉತ್ತರ ಬರುತ್ತದೆ. ಈ ಜನಪ್ರಿಯ ನಂಬಿಕೆಗೆ ೧೫/೩/೧೮೯೩ ರಂದು ಖೇತ್ರಿ ರಾಜ ಅಜಿತ್ ಸಿಂಗ್’ಗೆ ಸ್ವಾಮಿಗಳು ಬರೆದಿರುವ ಪತ್ರ ಅಡ್ಡಿಯಾಗಿದೆ. ‘ಈಗ ಮದ್ರಾಸಿನಲ್ಲಿ ನೆಲೆಸಿರುವ ರಾಮನಾಡಿನ ಜಮೀನ್ದಾರನಿದ್ದಾನೆ. ಆತ ನನ್ನನ್ನು ಯುರೋಪಿಗೆ ಕಳಿಸಬೇಕೆಂದಿದ್ದಾನೆ. ನಿಮಗೆ ಈಗಾಗಲೇ ಗೊತ್ತಿರುವಂತೆ ನನಗೆ ಆ ಜಾಗಗಳನ್ನು ನೋಡಬೇಕೆನ್ನುವ ತವಕದ ಮನಸ್ಸಿದೆ. ಈ ಅವಕಾಶವನ್ನು ಬಳಸಿಕೊಂಡು ನಾನು ಯುರೋಪ್ ಮತ್ತು ಅಮೆರಿಕ ಪ್ರವಾಸ ಮಾಡಬೇಕೆಂದಿದ್ದೇನೆ. ಆದರೆ ಜಗತ್ತಿನ ಮೇಲಿರುವ ನನ್ನ ಏಕೈಕ ಗೆಳೆಯರಾದ ಪ್ರಭುಗಳನ್ನು (ಹೈ ಅಪ್) ಕೇಳದೆ ನಾನು ಏನನ್ನೂ ಮಾಡುವುದಿಲ್ಲ. ಆದ್ದರಿಂದ ದಯಮಾಡಿ ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ. ಆ ಜಾಗಗಳಿಗೆ ಒಂದು ರೀತಿಯ ಪ್ರವಾಸವನ್ನು ಮಾತ್ರ ಮಾಡಬೇಕೆಂದುಕೊಂಡಿರುವೆ‘ ಇದು ಸ್ವಾಮಿಗಳ ವಿದೇಶಿ ಪ್ರವಾಸಕ್ಕೆ ಸ್ಪಷ್ಟ ಮುನ್ನುಡಿಯಾಗಿದೆ- ಈ ಪತ್ರ ಕೃತಿಶ್ರೇಣಿಯಲ್ಲಿಲ್ಲ.
ಸಂನ್ಯಾಸಿಯಾಗಿ ಪರಿವ್ರಾಜಕರಾಗಿದ್ದಾಗ ಪ್ರಮದದಾಸ ಮಿತ್ರರಿಗೆ ಪಾಣಿನಿಯ ಪದ್ದತಿಯಲ್ಲಿ ಪಾಂಡಿತ್ಯ ಪಡೆದು , ಆನಂತರ ಬಂಗಾಳದಲ್ಲಿ ವೇದಗಳನ್ನು ಮತ್ತೊಮ್ಮೆ ಪ್ರಚಾರಕ್ಕೆ ತರುವ ಭರವಸೆಯನ್ನು ವ್ಯಕ್ತಪಡಿಸಿದ್ದರು. (೧೯/೧೧/೧೮೮೮) . ಅಮೆರಿಕಕ್ಕೆ ಹೋದ ನಂತರವೂ ತಮ್ಮ ವಿದೇಶ ಪ್ರವಾಸದ ಗುರಿಯ ಬಗ್ಗೆ ಸ್ವಾಮಿಗಳಲ್ಲಿ ಸ್ಪಷ್ಟತೆ ಇರಲಿಲ್ಲ. ೨೯/೮/೧೮೯೩ ರಂದು ಶ್ರೀಮತಿ ಆಸ್ಟಿನ್ ಟಪ್ಪನ್ ರೈಟ್ (ಶ್ರೀಮತಿ ಜಾನ್ ರೈಟ್) ತನ್ನ ತಾಯಿಗೆ ಬರೆದ ಪತ್ರದಲ್ಲಿ ‘ಭಾನುವಾರ ಜಾನ್ ಈತನನ್ನು (ಸ್ವಾಮಿಗಳು) ಚರ್ಚ್’ನಲ್ಲಿ ಭಾಷಣ ಮಾಡಲು ಕರೆದಿದ್ದನು. ಆ ಸಂದರ್ಭದಲ್ಲಿ ವಿಧರ್ಮಿಯೊಬ್ಬನು ವಿಧರ್ಮ ತತ್ತ್ವಗಳ ಮೇಲೆ ಕಾಲೇಜು ಸ್ಥಾಪಿಸಲು ಚರ್ಚ್ ಚಂದಾ ಎತ್ತಿದ್ದನ್ನು ಕಂಡು ನಾನು ಮೂಲೆಗೆ ಸರಿದು ಮನಸಾರೆ ನಕ್ಕೆ ‘ ಎಂದು ಬರೆದಿದ್ದಳು. ಇದರಿಂದ ಸ್ವಾಮಿಗಳು ಭಾರತದಲ್ಲಿ ಸಂಘವೊಂದನ್ನು ಸ್ಥಾಪಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರೆಂದು ತಿಳಿಯಬಹುದು. ಡೈಲಿ ಗೆಝೆಟ್-೨೯/೮/೧೮೯೩- ಸ್ವಾಮಿಗಳು ಭಾರತದಲ್ಲಿ ಕೈಗಾರಿಕ ತರಬೇತಿಗಾಗಿ ಸಂನ್ಯಾಸಿಗಳನ್ನು ಒಗ್ಗೂಡಿಸಿ ತನ್ನ ದೇಶದ ಜನರನ್ನು ಬಡತನದಿಂದ ಬಿಡುಗಡೆಗೊಳಿಸುವುದೇ ತನ್ನ ಗುರಿಯೆಂದು ತಿಳಿಸಿದನು (47) ಮಿನ್ನೆಯಾಪೊಲಿಸ್-೨೩/೧೧/೧೮೯೩- ಬಡ ಜನ ತಮ್ಮ ಹೊಲಗಳಲ್ಲಿ ದುಡಿದು ಬಂದು ದಣಿವಾರಿಸುತ್ತ ಕುಳಿತಿರುವಾಗ ಅವರಲ್ಲಿಗೆ ಸಂನ್ಯಾಸಿಗಳನ್ನು ಕಳಿಸಿ ವಿದ್ಯೆಯನ್ನು ಹರಡುವ ಯೋಜನೆ ಸ್ವಾಮಿಗಳಿಗಿದೆ (48) , ಅಯೋವಾ ಸ್ಟೇಟ್ ರಿಜಿಸ್ಟರ್-೨೮/೧೧/೧೮೯೩- ಸ್ವಾಮಿಯ ಭಾಷಣ ಸಂಚಾರಗಳ ಗುರಿ ಭಾರತದ ಬಡವರಿಗಾಗಿ ಶಾಲೆಗಳನ್ನು ತೆಗೆದು ಅವರ ಸ್ಥಿತಿಯನ್ನು ಉತ್ತಮಗೊಳಿಸುವ ಯತ್ನವಾಗಿದೆಯಾದರೂ ಆತನ ಈ ಉಪನ್ಯಾಸಗಳನ್ನು ಅದೊಂದೇ ಗುರಿಯಿಂದ ಪರಿಗಣಿಸಲು ಸಿದ್ಧನಿಲ್ಲ ‘ (49) ಅಪೀಲ್ ಅವಲಾಂಚ್-೨೧/೧/೧೮೯೪- ‘ ಆತ ಭಾರತದಲ್ಲಿ ಪಾಲಿಟೆಕ್ನಿಕ್ ಕಾಲೇಜೊಂದನ್ನು ಪ್ರಾರಂಭಿಸಿ ಅದನ್ನು ಕೇಂದ್ರವಾಗಿರಿಸಿಕೊಂಡು ಶೈಕ್ಷಣಿಕ ವ್ಯವಸ್ಥೆಯೊಂದನ್ನು ಕಟ್ಟಿ ಧಾರ್ಮಿಕ ಮನೋಭಾವದ ತನ್ನ ಜನರನ್ನು ಏಳಿಗೆಗೆ ತರಬಯಸುತ್ತಾನೆ. (೫೦)‘ ಎನ್ನುವ ವರದಿಗಳು ಸ್ವಾಮಿಗಳ ಗುರಿ ಏನಾಗಿದ್ದಿತೆಂದು ತಿಳಿಸುತ್ತವೆ. ಲಾರೆನ್ಸ್ ಅಮೆರಿಕನ್ ಪತ್ರಿಕೆ ೧೩/೧೦/೧೮೯೪ ರಂದು ನಡೆಸಿದ ಸಂದರ್ಶನದಲ್ಲಿ ‘ ಸ್ವಾಮಿಗಳು ಏಳು ಭಾಷೆಗಳನ್ನು (ಬಂಗಾಳಿ ? , ಸಂಸ್ಕೃತ ? ಇಂಗ್ಲಿಷ್ ? ಹಿಂದಿ ? …..? ? ? ? ) ಬಲ್ಲವರಾಗಿದ್ದು ಅವೆಲ್ಲವನ್ನೂ ಓದಬಲ್ಲರು….. ಇಲ್ಲಿ ಅಮೆರಿಕದ ಸಂಸ್ಥೆಗಳನ್ನು ಅದರಲ್ಲೂ ವಿಶೇಷವಾಗಿ ಆಡಳಿತ ಪದ್ದತಿ ಸರ್ಕಾರವನ್ನು ಅರಿಯಲು ಯತ್ನಿಸುತ್ತಿದ್ದಾರೆ…’ ಎಂದು ಬರೆದಿದೆ. ಇದು ಸಂದರ್ಶಕ ಸ್ವಾಮಿಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಬರೆದದ್ದೋ ಅಥವಾ ಸ್ವಾಮಿಗಳು ಮಾತುಕತೆಯ ನಡುವೆ ಹಾಗೆ ಹೇಳಿದ್ದರೋ ತಿಳಿಯದು.
‘ಜನರು ಮೆಚ್ಚಲಿ , ಮೆಚ್ಚದಿರಲಿ ಯುವಕರನ್ನು ಒಂದುಗೂಡಿಸುವುದಕ್ಕೆ ನಾನು ಜನ್ಮವೆತ್ತಿದ್ದೇನೆ. ಪ್ರತಿಯೊಂದು ಪಟ್ಟಣದಿಂದಲೂ ಇಂತಹ ನೂರಾರು ಜನರು ನನ್ನೊಡನೆ ಕೆಲಸ ಮಾಡಲು ಸಿದ್ಧರಾಗಿರುವರು. ತಡೆಯಲಾಗದ ಮಹಾ ತೆರೆ ಎದ್ದು ಕೊಚ್ಚಿಕೊಂಡು ಹೋಗುವಂತೆ ಈ ಯುವಕರೆಲ್ಲರನ್ನೂ ಭರತ ಖಂಡದ ಮೇಲೆ ಬಿಡುವೆನು. ದೀನರ , ದಲಿತರ ಬಾಗಿಲಿಗೆ , ಜೀವನದಲ್ಲಿ ಶಾಂತಿ , ನೀತಿ, ಧರ್ಮ , ವಿದ್ಯೆ ಬರುವಂತೆ ಮಾಡುವೆನು ..’ ಎಂದು ೨೯/೧/೧೮೯೪ ರಂದು ಹರಿದಾಸ ವಿಹಾರಿದಾಸ ದೇಸಾಯಿಗೆ ಬರೆದ ಪತ್ರದಿಂದ ಪ್ರಾರಂಭಿಸಿ ಹರಪದ ಮಿತ್ರ (೨೮/೧೨/೧೮೯೩) , ಗುರುಭಾಯಿಗಳು (೨೪/೧/೧೮೯೪) , ರಾಮಕೃಷ್ಣಾನಂದ (೧೯/೩/೧೮೯೪) , ಅಳಸಿಂಗ ಪೆರುಮಾಳ್ (೨೮/೫/೧೮೯೪) , ಚಾಮರಾಜೇಂದ್ರ ಒಡೆಯರ್ ( ೨೩/೬/೧೮೯೪) , ಗುರುಭಾಯಿಗಳು (೩೦/೬/೧೮೯೪) ಅವರಿಗೆ ಬರೆದ ಪತ್ರಗಳು ಅಮೆರಿಕದ ಪತ್ರಿಕೆಗಳು ನೀಡಿದ ವಿವರಗಳನ್ನು ಸಮರ್ಥಿಸುತ್ತವೆ. ಮಾಯಾ ದೀಪ ,ಭೂಗೋಳ , ರಾಸಾಯನಿಕ ವಸ್ತುಗಳೊಂದಿಗೆ ಪಾಠ ಮಾಡುತ್ತ , ಮೊದಲು ಧರ್ಮ, ನಂತರ ವಿಜ್ಞಾನ, ಚರಿತ್ರೆ. ಇವುಗಳನ್ನು ಹರಡುತ್ತ ಯುವಕರ ಗುಂಪುಗಳು ದೇಶದ ತುಂಬ ಸುತ್ತಲಿ. ವಿಧವೆಯರನ್ನು ಸೇರಿಸಿ ರಾಮಕೃಷ್ಣರನ್ನು ಮತ್ತು ಆಧುನಿಕ ವಿದ್ಯಾಭ್ಯಾಸವನ್ನು ಬೋಧಿಸುವುದೇ ನಮ್ಮ ಗುರಿ. ಇದು ಸ್ವಾಮಿಗಳು ಶಿಷ್ಯರಿಗೆ ನೀಡಿದ ಕರೆಯಾಗಿದ್ದಿತು. ಹರಿದಾಸ ವಿಹಾರಿದಾಸ ದೇಸಾಯಿಯವರರಿಗೆ ‘ …….ಇದರ ಪರಿಹಾರಕ್ಕೆ ಮೊದಲು ನಮಗೆ ಬೇಕಾಗಿರುವುದು ಜನ, ಆನಂತರ ಹಣ. ಪ್ರತಿ ಊರಿನಿಂದಲೂ ಗುರುದೇವನ ಕೃಪೆಯಿಂದ ಹತ್ತು ಹದಿನೈದು ಜನ ಸಿಗುವರೆಂದು ತಿಳಿದೆನು. ಆನಂತರ ಹಣ ಶೇಖರಿಸಲು ಹೊರಟೆನು. ಭರತ ಖಂಡದ ಜನರು ಹಣವನ್ನು ವ್ಯಯಿಸುವರೆಂದು ತಿಳಿದಿರುವಿರೇನು ? ಸ್ವಾರ್ಥ ಮೂರ್ತಿಗಳು ಅವರು ಏನಾದರೂ ಖರ್ಚು ಮಾಡುವರೇ? ಅದಕ್ಕಾಗಿಯೇ ಹಣ ಸಂಪಾದನೆಗಾಗಿ ನಾನು ಅಮೆರಿಕಕ್ಕೆ ಬಂದಿದ್ದೇನೆ,….. ನಾನು ಅವರಿಗೆ ಅಧ್ಯಾತ್ಮ ವಿದ್ಯೆಯನ್ನು ಕೊಡುತ್ತೇನೆ. ಅವರು ನನಗೆ ಹಣವನ್ನು ಕೊಡುತ್ತಾರೆ. ನನ್ನ ಬಯಕೆ ಈಡೆರಲು ಅದೆಷ್ಟು ದಿನ ಬೇಕಾಗುವುದೋ ಗೊತ್ತಿಲ್ಲ. ಇಲ್ಲಿಯ ಜನ ಆಷಾಢಭೂತಿಗಳಲ್ಲ. ಇವರಲ್ಲಿ ಅಸೂಯೆನ್ನುವುದು ಲವಲೇಶವೂ ಇಲ್ಲ…..ನನ್ನ ಸ್ವಂತ ಕೆಲಸಕ್ಕೆ ಹಣ ಶೇಖರಿಸುವುದೇ ನಾನು ಇಲ್ಲಿಗೆ ಬಂದ ಮುಖ್ಯ ಉದ್ದೇಶ. ಒಂದು ವರ್ಷದಿಂದ ಭಾಷಣ ಮಾಡಿದರೂ ಯಾವ ಸಾರ್ಥಕವೂ ಆಗಲಿಲ್ಲ (ಸಂಸ್ಥೆ, ಸಂಘ ಸ್ಥಾಪಿಸುವಷ್ಟು). ಹೊಟ್ಟೆ , ಬಟ್ಟೆಗಷ್ಟೇ ಆಯಿತು. ಅಮೆರಿಕದಲ್ಲಿ ಆರ್ಥಿಕ ಹಿಂಜರಿತವಿದೆ. ಕ್ರೈಸ್ತ ಪಾದ್ರಿಗಳು , ಬ್ರಾಹ್ಮ ಸಮಾಜದವರು ನನಗೆ ಅಡ್ಡಿಮಾಡುತ್ತಿದ್ದಾರೆ ‘ ಎಂದು ಅಮೆರಿಕಕ್ಕೆ ಹೋದ ಮುಖ್ಯ ಉದ್ದೇಶವನ್ನು ಬಿಚ್ಚಿಟ್ಟಿದ್ದಾರೆ. ( ೨೦/೬/೧೮೯೪).
ಸ್ವಾಮಿಗಳ ಚಂಚಲ ಮನಸ್ಸಿನಲ್ಲಿ ಯಾವಾಗಲೂ ಒಂದೇ ಗುರಿ ಇರುತ್ತಿರಲಿಲ್ಲ. ಒಮ್ಮೆ ಬಡವರಿಗೆ ಲೌಕಿಕ ಶಿಕ್ಷಣ ಕೊಡುವುದು ಮೊದಲ ಕರ್ತವ್ಯವೆಂದು ಭಾಸವಾದರೆ ಅದರ ಹಿಂದೆಯೇ ಎಲ್ಲ ಸುಧಾರಣೆಗಳಿಗಿಂತ ಅಧ್ಯಾತ್ಮಿಕ ಎಚ್ಚರ ಮೊದಲು ಆಗಬೇಕು. ಅದಕ್ಕಾಗಿ ರಾಮಕೃಷ್ಣ ಮಠದ ಸ್ಥಾಪನೆ ಅತ್ಯಗತ್ಯ ಎನಿಸುತ್ತಿದ್ದಿತು. ಮನಸ್ಸು ಒಂದು ಸಲ ಆಕಡೆ ತೂಗಿದರೆ ಮರುಕ್ಷಣ ವಿರುದ್ಧ ದಿಶೆಯಲ್ಲಿರುತ್ತಿದ್ದಿತು. ಹರಿದಾಸ ವಿಹಾರಿದಾಸ ದೇಸಾಯಿಗಳಿಗೆ ತಿಳಿಸಿದ್ದ ಗುರಿ ಮುಂದಿನ ಒಂದೆರಡು ತಿಂಗಳುಗಳಲ್ಲಿ ಬದಲಾಯಿತು. ಸ್ವಾಮಿಗಳು ಅಮೆರಿಕದಲ್ಲಿ ಹಿಂದೂ ಧರ್ಮ ಪತಾಕೆಯನ್ನು ಹಾರಿಸಿದರು ಎಂದು ಪತ್ರಿಕೆಗಳು ಹೊಗಳುತ್ತಿರುವ ಸಮಯಯದಲ್ಲಿಯೇ ಅಭೇದಾನಂದರಿಗೆ ತಲುಪಿದ ದಿನಾಂಕವಿಲ್ಲದ ಪತ್ರದಲ್ಲಿ ‘……ನಮಗೋಸ್ಕರ ಒಂದು ಮಠ ಸ್ಥಾಪಿಸಲು ನಾನು ಸ್ವಲ್ಪ ಹಣ ಸಂಪಾದಿಸುತ್ತೇನೆ.,…...ಜನರ ಅಭಿರುಚಿಗೆ ತಕ್ಕಂತೆ ನೀನು ಅನುಸರಿಸಿ ನಡೆಯಬೇಕು. ನಾವು ಕ್ರೈಸ್ತ ಧರ್ಮದಲ್ಲಿ ಕೆಲ ಅಂಶಗಳನ್ನು ಮೆಚ್ಚುವಂತೆ ಅವರು ಹಿಂದೂ ಧರ್ಮದಲ್ಲಿನ ಕೆಲ ಆಂಶಗಳನ್ನು ಮೆಚ್ಚುವರು ಅಷ್ಟೇ . ಅವರನ್ನು ಹಿಂದೂಗಳಾಗಿ ಎಂದರೆ ದೂರ ಸರಿದು ದ್ವೇಷಿಸುವರು……ಧರ್ಮ ಮುಂತಾದ ವಿಷಯಗಳಲ್ಲಿ ಗಂಡಸರಿಗೆ ಆಸಕ್ತಿಯಿಲ್ಲ. ಹೆಂಗಸರಿಗೆ ಸ್ವಲ್ಪ ಇರುವುದು ಅಷ್ಟೇ. ಆದರೆ ಅದನ್ನು ಮಿತಿ ಮೀರಿ ಕೊಡಬಾರದು !.....ಮತ್ತು ನಮಗೋಸ್ಕರ ಒಂದು ಮಠವನ್ನು ಸ್ಥಾಪಿಸಲು ನಾನು ಸ್ವಲ್ಪ ಹಣ ಸಂಗ್ರಹಿಸುತ್ತೇನೆ. ನನ್ನನ್ನು ಇದಕ್ಕೆ ದೂರಿದರೆ ಯಾವ ಪರಿಣಾಮವೂ ಆಗದು ಎಂದು ಅಭೇದಾನಂದರಿಗೆ ತಿಳಿಸಿದಾಗ ಮಠ ಸ್ಥಾಪನೆ ಮನಸ್ಸಿನಲ್ಲಿದ್ದಿತು.
‘ಈ ದೇಶಾದ್ಯಂತ ಸುತ್ತಾಡಿ ಸಂಸ್ಥೆಗಳನ್ನು ತೆರೆಯುತ್ತೇನೆ. ಇದು ಕೆಲಸಕ್ಕೆ ಒಳ್ಳೆಯ ಕ್ಷೇತ್ರ. …….ನನ್ನ ಹತ್ತಿರ ಈಗಲೂ ರೂ. ೯೦೦೦ ಇದೆ. ಅದರಲ್ಲಿ ಸ್ವಲ್ಪ ಭಾಗವನ್ನು ಸಂಸ್ಥೆಗೆ ಕಳಿಸುತ್ತೇನೆ….ಮೈಸೂರು ಮತ್ತು ಇತರ ಕಡೆಗಳಲ್ಲಿ ಹಣ ಕೂಡಿಸಿ ಮದ್ರಾಸಿನಲ್ಲಿ ಒಂದು ದೇವಾಲಯ ಕಟ್ಟಿಸಲು ಯತ್ನಿಸು. ಅದರಲ್ಲಿ ವಾಚನಾಲಯ ಇರಬೇಕು. ಧರ್ಮೋಪದೇಶ ಮಾಡುವ ಸಂನ್ಯಾಸಿಗಳಿಗೆ , ಆಕಸ್ಮಾತ್ತಾಗಿ ಬರುವ ಸಾಧುಗಳಿಗೆ ಕೋಣೆಗಳಿರಬೇಕು…….ನಿನಗೆ ಗೊತ್ತಿರುವ ಹಾಗೆ ಹಣವನ್ನು ಇಟ್ಟುಕೊಳ್ಳುವುದು , ಮುಟ್ಟುವುದು ಕೂಡ ನನಗೆ ಅತ್ಯಂತ ಕಷ್ಟವೆನಿಸುತ್ತದೆ. ಆದ್ದರಿಂದ ನೀನು ಒಂದು ಸಂಘವನ್ನು ಸ್ಥಾಪಿಸು…….ನಿನಗೆ ಸರಿ ಎನಿಸುವುದಾದರೆ ಯಾರಾದರೂ ದೊಡ್ದ ವ್ಯಕ್ತಿಗಳನ್ನು ಸಂಸ್ಥೆಯ ಅಧಿಕಾರಿಗಳಾಗಿ ನೇಮಿಸಿ . ಹಿಂದಿನಿಂದ ನೀನೇ ಎಲ್ಲ ನಿರ್ವಹಿಸು. ಅದು ಹೆಚ್ಚು ಸಹಾಯಕವಾಗುತ್ತದೆ. ….. ಎಂದು ಬದಲಾದ ತಮ್ಮ ಗುರಿಯನ್ನು ಮೊದಲ ಬಾರಿಗೆ ಸ್ಪಷ್ಟವಾಗಿ ಅಳಸಿಂಗ ಪೆರುಮಾಳ್’ಗೆ ತಿಳಿಸಿದರು. (೩೧/೮/೧೮೯೪). ಮುಂದಿನ ದಿನಗಳಲ್ಲಿ ಸುಬ್ರಮಣ್ಯ ಅಯ್ಯರ್’ಗೆ ಮದ್ರಾಸಿನಲ್ಲಿ ಒಂದು ಧಾರ್ಮಿಕ ಕಾಲೇಜನ್ನು ಸ್ಥಾಪಿಸಿ ಮುಂದೆ ಅದನ್ನು ವಿಶಾಲಗೊಳಿಸಿ ಯುವಕರಿಗೆ ವೇದ , ಭಾಷ್ಯ ಹಾಗೂ ಇತರ ಧರ್ಮಗಳ ಅಧ್ಯಯನ ಮಾಡಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. (೩/೧/೧೮೯೫) ಇದಾದ ಹತ್ತು ದಿನಗಳ ನಂತರ (೧೨/೧/೧೮೯೫) ಅಳಸಿಂಗ ಪೆರುಮಾಳ್’ಗೆ ‘ ಜನ ಸಮುದಾಯಕ್ಕೆ ವಿದ್ಯೆ ಹಂಚುವ ಯೋಜನೆಯನ್ನು ನಾನು ಸದ್ಯಕ್ಕೆ ಬಿಟ್ಟಿದ್ದೇನೆ. ಕ್ರಮೇಣ ಅದು ಆಗುತ್ತದೆ. ಈಗ ನನಗ ಬೇಕಾಗಿರುವುದು ಬೆಂಕಿ ಸಮಾನರಾದ ಒಂದು ಧರ್ಮ ಪ್ರಚಾರಕರ ತಂಡ. ಮದ್ರಾಸಿನಲ್ಲಿ ಒಂದು ಕಾಲೇಜನ್ನು ಸ್ಥಾಪಿಸಿ ಅಲ್ಲಿ ಧರ್ಮಗಳು , ತೌಲನಿಕ ವಿವರಣೆ , ಸಂಸ್ಕೃತ , ವೇದಾಂತದ ವಿವಿಧ ಪಂಥಗಳು , ಐರೋಪ್ಯ ಭಾಷೆಗಳನ್ನು ಬೋಧಿಸಬೇಕು…….’ ಎನ್ನುವ ತಿರುವನ್ನು ನೀಡಿದರು.
ಒಂದು ವರ್ಷದ ಹಿಂದೆ ಅಮೆರಿಕದಲ್ಲಿ ಪತ್ರಿಕೆಗಳಿಗೆ ಸಂದರ್ಶನ ನೀಡಿದಾಗ ಭಾರತದ ಅಧ್ಯಾತ್ಮವನ್ನು ಪಾಶ್ಚಾತ್ಯರಿಗೆ ಕೊಟ್ಟು ವಿನಿಮಯ ರೂಪದಲ್ಲಿ ಲೌಕಿಕ ಆಧುನಿಕ ವಿದ್ಯೆಯನ್ನು ಭಾರತಕ್ಕೆ ಒಯ್ಯುವುದೇ ತಮ್ಮ ಗುರಿಯೆಂದು ತಿಳಿಸಿದ್ದರು. ಭಾರತದಲ್ಲಿದ್ದ ತಮ್ಮ ಶಿಷ್ಯರಿಗೆ ಮಕ್ಕಳಿರಾ ಏಳಿ , ಹಳ್ಳಿಯಿಂದ ಹಳ್ಳಿಗೆ ಯುವ ಸಂನ್ಯಾಸಿಗಳು ಕೈಯಲ್ಲಿ ಮಾಯಾದೀಪ ಹಿಡಿದು ಭೂಗೋಳ , ಚರಿತ್ರೆ ಮತ್ತು ಧಾರ್ಮಿಕ ತತ್ತ್ವಗಳನ್ನು ಬೋಧಿಸುತ್ತ ಭಾರತವನ್ನು ಕವಿಯಿರಿ ಎಂದು ಕರೆ ಕೊಟ್ಟಿದ್ದರು. ಚಾಮರಾಜೆಂದ್ರ ಒಡೆಯರಿಗೆ ಬಡ ಜನರತ್ತ ಶಿಕ್ಷಣವನ್ನು ಒಯ್ಯುವ ಅನಿವಾರ್ಯತೆಯನ್ನು ಒತ್ತಿ ಹೇಳಿದ್ದರು. (೨೩/೬/೧೮೯೪) ಹರಿದಾಸ ವಿಹಾರಿದಾಸ ದೇಸಾಯಿಗಳು ಅ ನಿಟ್ಟಿನಲ್ಲಿ ಕೆಲಸ ಮಾಡದಿದ್ದುದಕ್ಕೆ ಛೇಡಿಸಿದ್ದರು.(೨೦/೬/೧೮೯೪) ಸ್ವಾಮಿಗಳು ತಮಗೆ ಅತ್ಯಂತ ಆಪ್ತರಾದ ಖೇತ್ರಿ ಮಹಾರಾಜರಿಗೆ ಇಂತಹ ಕೆಲಸಗಳನ್ನು ಮಾಡಲು ಕರೆ ಕೊಟ್ಟಿರಲಿಲ್ಲ. ಇದಕ್ಕೆ ಬೇರೆಯದೇ ಆದ ಕಾರಣವಿದ್ದಿತು. ಅದೇನೇ ಇರಲಿ ಈ ನಿಟ್ಟಿನಲ್ಲಿ ಕಚ್ಚೆ ಕಟ್ಟಿ ಓಡಬೇಕೆಂದಿದ್ದ ಅಳಸಿಂಗನನ್ನು ತಡೆದು ಈಗ ನನ್ನ ಯೋಜನೆ ಬೇರೆಯಾಗಿದೆ. ನನಗೆ ಧಾರ್ಮಿಕ ಶಾಲೆ ಮೊದಲ ಆದ್ಯತೆ ಎನ್ನುತ್ತಿದ್ದಾರೆ, ಸ್ವಾಮಿಗಳಲ್ಲಿ ಈ ಬದಲಾವಣೆಗೆ ಅವರದೇ ಆದ ಕಾರಣಗಳಿದ್ದವು. ಭಾರತಕ್ಕೆ ಯಾವಾಗ ಬರುತ್ತೀರಿ ಎಂದು ಕೇಳಿದ್ದ ಖೇತ್ರಿ ಮಹಾರಾಜರಿಗೆ ನಿಂದೆ , ಅಡಚಣೆ ನಂತರ ಸ್ವೀಕಾರ. ಅದರ ನಂತರವೇ ಕಾರ್ಯ ಸಿದ್ಧಿ. ಇಲ್ಲಿ ನೂರಾರು ಜನ ನನ್ನ ಹಿಂದೆ ಇದ್ದಾರೆ. ಅವರಲ್ಲಿ ಕೆಲವರನ್ನು ಸಂನ್ಯಾಸಿಗಳನ್ನಾಗಿ ಮಾಡಿ , ನನ್ನ ಕೆಲಸವನ್ನು ಅವರಿಗೆ ಒಪ್ಪಿಸಿ ಮುಂದಿನ ವರ್ಷದ ವೇಳೆಗೆ ಬರುತ್ತೇನೆ ಎನ್ನುವ ಆಶ್ವಾಸನೆಯನ್ನು ನೀಡಿದರು. (ಪತ್ರ-೯/೭/೧೮೯೫)
ಸ್ವಾಮಿ ಅಖಂಡಾನಂದರು ಚಂದಾ ಎತ್ತಿ ಹಣ ಸಂಗ್ರಹಿಸಲು ಉತ್ಸುಕರಾಗಿದ್ದರು. ಸ್ವಾಮಿಗಳು ಅವರನ್ನು ೧೩/೧೧/೧೮೯೫ ರ ಪತ್ರದ ಮೂಲಕ ಎಚ್ಚರಿಸುತ್ತ ಎಂದಿಗೂ ಆಶ್ರಮ , ಮಠ ಸ್ಥಾಪನೆಗಾಗಿ ಹಣ ಎತ್ತಲು ನೀನೇ ನುಗ್ಗಿ ಮುಂದಾಗಬೇಡ. ಗೃಹಸ್ಥರು ಅದರಲ್ಲೂ ಬಡವರು ಹಾಗೆ ಮುಂದಾದಾಗ ಬಹಳ ಎಚ್ಚರದಿಂದಿರು. ಒಂದು ವೇಳೆ ಹಾಗೆ ಹಣ ಸಂಗ್ರಹಿಸಿದ್ದೇ ಆದರೆ ಸ್ಥಿತಿವಂತ ಶ್ರೀಮಂತರಲ್ಲ ಆ ಹಣವನ್ನು ಇರಿಸಿವುದು ಒಳ್ಳೆಯದು. ….. ಜಯಪುರ ಅಥವಾ ಅಜ್ಮೀರ್’ನಲ್ಲಿ ಒಂದು ಕೇಂದ್ರ ಮತ್ತು ಖೇತ್ರಿ , ಆಳ್ವಾರ್’ಗಳಲ್ಲಿ ಶಾಖೆಗಳಿದ್ದರೆ ಒಳ್ಳೆಯದು. ಮಠ , ಕೇಂದ್ರ ಅಥವಾ ಅಂತಹ ಇನ್ನಾವುದನ್ನೂ ಕಲ್ಕತ್ತದಲ್ಲಿ ಸ್ಥಾಪಿಸಿದರೆ ಲಾಭವಿಲ್ಲ. ಅದು ವಾರಣಾಸಿಯಲ್ಲಿ ಇದ್ದರೆ ಸರಿ. ಇಂತಹ ಹಲವು ಯೋಜನೆಗಳು ನನ್ನ ಮನಸ್ಸಿನಲ್ಲಿವೆ. ಆದರೆ ಎಲ್ಲ ಹಣ ಸಂಗ್ರಹದ ಮೇಲೆ ನಿಂತಿದೆ……. ಅಚ್ಯುತಾನಂದ ಎನ್ನುವ ಸಂನ್ಯಾಸಿಯ ಬಗ್ಗೆ ತಿಳಿಯಲು ಆರ್ಯ ಸಮಾಜದ ಕಾರ್ಯದರ್ಶಿಯವರಿಗೆ ಪತ್ರ ಬರೆ. ಧೈರ್ಯವಾಗಿರು ……’ ಎಂದು ಬೆನ್ನು ತಟ್ಟಿದರು. ಈ ಅವಧಿಯಲ್ಲಿ ಗುರುಭಾಯಿಗಳಿಗೆ ಸ್ವಾಮಿಗಳು ಬರೆದಿರುವ ಪತ್ರಗಳನ್ನು ನೋಡಿದರೆ ಆಶ್ರಮ, ಮಠವನ್ನು ಇತರರು ಹೇಗೆ ಕಟ್ಟುತ್ತಿದ್ದಾರೆ , ಅವರೊಂದಿಗೆ ಒಗ್ಗೂಡಿದರೆ ಲಾಭವೇ ಅಥವಾ ಮಠ , ಆಶ್ರಮ ಕಟ್ಟುವ ಸಾಧಕ ಬಾಧಕಗಳೇನು ,ಎಲ್ಲೆಲ್ಲಿ ಶಾಖೆಗಳನ್ನು , ಕೇಂದ್ರಗಳನ್ನು ವ್ಯಾವಹಾರಿಕವಾಗಿ ತರೆಯಲು ಸಾದ್ಯ ಎಂದು ತಿಳಿಯಲು ಯತ್ನಿಸುತ್ತಿರುವಂತಿದೆ.
ಇದೇ ಸಮಯದಲ್ಲಿ ‘ ಒಬ್ಬನು ಮದ್ರಾಸಿಗೆ ಹೋಗಲಿ, ಮತ್ತೊಬ್ಬನು ಬೊಂಬಾಯಿಗೆ ಹೋಗಲಿ. ಪ್ರಪಂಚವ ತಲ್ಲಣಿಸಬೇಕು. ಅಯ್ಯೋ ಸಂಕಟವೇ ! ನನಗೆ ನನ್ನಂತಹ ಇಬ್ಬರು , ಮೂವರು ಸಿಕ್ಕಿದ್ದರೆ ಜಗತ್ತೆನ್ನೆಲ್ಲಾ ಅಲಗಾಡಿಸುತ್ತಿದ್ದೆ. ಆದರೆ ಅಂತಹವರಿಲ್ಲದೆ ಇರುವುದರಿಂದ ನಾನು ನಿಧಾನವಾಗಿ ಸಾಗಬೇಕಾಗಿದೆ. ಜಗತ್ತಿನಾದ್ಯಂತ ಚಲಿಸುವಂತೆ ಮಾಡಬೇಕು. ! ಒಬ್ಬನನ್ನು ಚೈನಾಕ್ಕೆ , ಮತ್ತೊಬ್ಬನನ್ನು ಜಪಾನಿಗೆ ಕಳಿಸಬೇಕು ! ಪಾಪ ಬಡ ಗೃಹಸ್ಥರು ಏನು ಮಾಡಿಯಾರು ? ಶಿವನ ಭೂತಗಣಗಳಾದ ಸಂನ್ಯಾಸಿಗಳು ಮಾತ್ರ ‘ಹರಹರ ಮಹಾದೇವ’ ಎಂಬ ಜಯ ನಿನಾದದಿಂದ ದಿಕ್ತಟಗಳು ಬಿರಿಯುವಂತೆ ಮಾಡಬಹುದು’ ಎಂದು ತ್ರಿಗುಣಾತೀತಾನಂದರಿಗೆ ಬರೆದರು (೫/೧/೧೮೯೬). ಆರಂಭದಲ್ಲಿ ಸಂನ್ಯಾಸಿಗಳು ಮಾಯಾಲಾಂದ್ರ , ಭೂಗೋಳ ಹಿಡಿದು ಶಿಕ್ಷಣ ಹರಡುತ್ತ ಭಾರತದಾದ್ಯಂತ ಸಂಚರಿಸಬೇಕು ಎನ್ನುವ ಕನಸನ್ನು ಸ್ವಾಮಿಗಳು ಕಟ್ಟಿದ್ದರು. ನಂತರ ಅದನ್ನು ಕೈಬಿಟ್ಟು ಧಾರ್ಮಿಕ ತರಬೇತಿ ಶಾಲೆ ತೆರೆಯುವ ಬಯಕೆ ಮೂಡಿದ್ದಿತು. ನಂತರದ ಹಂತದಲ್ಲಿ ಅಲೆಕ್ಸಾಂಡರ್ , ನೆಪೊಲಿಯನ್ , ಹಿಟ್ಲರ್ ಭೌತಿಕ ಜಗತ್ತನ್ನು ಗೆಲ್ಲಲು ಹೊರಟಂತೆ ಸಂಚಾರಿ ಸಂನ್ಯಾಸಿಗಳ ಮೂಲಕ ಧಾರ್ಮಿಕ ಜಗತ್ತನ್ನು ಗೆಲ್ಲುವ ಮಹತ್ವಾಕಾಂಕ್ಷೆ ಸ್ವಾಮಿಗಳಲ್ಲಿ ಮೂಡಿದ್ದಿತು. ಈ ಬಯಕೆಯಲ್ಲಿ ಮುಕ್ತಿ , ಭಕ್ತಿ, ದೇಶಭಕ್ತಿಗಳು ಹಿನ್ನೆಲೆಗೆ ಸರಿದಿದ್ದವು.
ಸ್ವಾಮಿಗಳಿಗೆ ಅಮೆರಿಕಕ್ಕೆ ಹೋಗುವುದಕ್ಕೆ ಮುಂಚಿನಿಂದಲೂ ಭಾರತದಲ್ಲಿ ರಾಮಕೃಷ್ಣರ ಹೆಸರಿನಲ್ಲಿ ಒಂದು ಆಶ್ರಮ ಸ್ಥಾಪಿಸುವ ಬಯಕೆಯಿದ್ದಿತು. ಅಮೆರಿಕದಲ್ಲಿ ಉಪನ್ಯಾಸಗಳನ್ನು ಕಟ್ಟು ಹಣ ಕೈ ಸೇರತೊಡಗಿದಂತೆ ಇದರ ವ್ಯಾಪ್ತಿ , ಲಕ್ಷಣ , ಸ್ವರೂಪಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿದ್ದವು. ೧೬/೧/೧೮೯೬ ರಂದು ಎಡ್ವರ್ಡ್ ಸ್ಟರ್ಡಿಗೆ ಅಮೆರಿಕದಲ್ಲಿ ಸ್ವಲ್ಪ ಜಮೀನು ಸಿಗುವ ಸಾದ್ಯತೆಯಿದೆ. ಅದರಲ್ಲಿ ಕೆಲ ಕಟ್ಟಡ , ಮರ , ನದಿಗಳಿವೆ. ಆ ಜಾಗವನ್ನು ಬೇಸಿಗೆಯ ಅಧ್ಯಾತ್ಮ ಕೇಂದ್ರ ಮಾಡಬಹುದು. ಆದರೆ ನಾನು ಹಣ ಕಾಸಿನ ವ್ಯವಹಾರದಿಂದ ದೂರವಿದ್ದೇನೆ ಎಂದು ತಿಳಿಸಿದ್ದರು. ೨೫/೧/೧೮೯೬ ರಂದು ಸಾರಾ ಬುಲ್’ಗೆ ‘ ಕ್ಯಾಟ್ಲ್ ಕಿಲ್ಸ್'ನಲ್ಲಿ ವಿಸ್ತಾರವಾದ ಪ್ರದೇಶಗಳು ಬಹಳ ಕಡಿಮೆ ಬೆಲೆಗೆ ಸಿಗುತ್ತವೆ. ೧೦೦ ಎಕರೆ ಪ್ರದೇಶ ೨೦೦ ಡಾಲರ್'ಗೆ ಸಿಗುತ್ತದೆ. ನನ್ನಲೀಗ ಹಣ ಸಿದ್ಧವಾಗಿದೆ. ಆದರೆ ನನ್ನ ಹೆಸರಿನಲ್ಲಿ ನಾನು ಕೊಂಡುಕೊಳ್ಳಲಾರೆ. ಈ ದೇಶದಲ್ಲಿ ನಾನು ಸಂಪೂರ್ಣವಾಗಿ ನಂಬುವ ಸ್ನೇಹಿತೆಯೆಂದರೆ ನೀವು ಮಾತ್ರ. ನೀವು ಒಪ್ಪಿಗೆಯಿತ್ತಲ್ಲಿ ನಿಮ್ಮ ಹೆಸರಿನಲ್ಲಿ ಆ ಭೂಮಿಯನ್ನು ಕೊಳ್ಳುವೆ. ಬೇಸಿಗೆಯಲ್ಲಿ ವಿದ್ಯಾರ್ಥಿಗಳು ಅಲ್ಲಿಗೆ ಹೋಗುವರು. ಅವರಿಚ್ಛೆ ಬಂದಂತೆ ಡೇರೆ, ಗುಡಾರಗಳನ್ನು ಕಟ್ಟಲು ಅವಕಾಶವಿದೆ. ಧ್ಯಾನಾದಿ ಸಾಧನೆಗಳನ್ನು ಮಾಡುವರು. ಮುಂದೆ ಅವರು ಹಣ ಕೂಡಿಸಿದರೆ ಮತ್ತೆನನ್ನಾದರೂ ಕಟ್ಟಬಹುದು ‘ ಎಂದು ತಿಳಿಸುವ ಮೂಲಕ ಭವಬಂಧನ ದಾಟಬೇಕೆಂದು ಬೋಧಿಸುತ್ತಿದ್ದ ಸ್ವಾಮಿಗಳು ಅಶ್ರಮ , ಕಟ್ಟಡ , ಬೇಸಿಗೆಯ ಶಿಬಿರ ಮುಂತಾದ ಬಯಕೆಗಳ ಬಂಧಿಯಾಗಿದ್ದರು. ಇದೇ ಪತ್ರದಲ್ಲಿ ‘………ಪ್ರಪಂಚವೆಲ್ಲಾ ನನ್ನೊಡನೆ ಸುತ್ತಾಡಿದ ಒಂದು ಟಿಪ್ಪಣಿ ಪುಸ್ತಕ ನನ್ನಲ್ಲಿದೆ. ೭ ವರ್ಷಗಳ ಹಿಂದೆ 'ಈಗ ಒಂದು ಮೂಲೆಯನ್ನು ಹುಡುಕಿ ಮರಣೋನ್ಮುಖನಾಗಬೇಕು ! ಎಂದು ಬರೆದಿದ್ದೆ. ಆದರೂ ಈ ಕರ್ಮಗಳೆಲ್ಲ ಉಳಿದಿದ್ದವು. ಈಗ ನನ್ನ ಕೆಲಸವೆಲ್ಲವನ್ನೂ ಪೂರೈಸಿದೆ ಎಂದು ಭಾವಿಸುವೆ. …….. ಓ ! ನಾನೆಷ್ಟು ಹಂಬಲಿಸುತ್ತೇನೆ ! ತಲೆ ಬೋಳಿಸಿಕೊಂಡು , ಚಿಂದಿಬಟ್ಟೆಯನ್ನುಟ್ಟು , ಭಿಕ್ಷಾನ್ನವನ್ನು ಉಣ್ಣುತ್ತ ಮರದ ಕೆಳಗೆ ವಾಸಿಸುವ ದಿನಗಳಿಗಾಗಿ ನಾನೆಷ್ಟು ಹಾತೊರೆಯುತ್ತಿದ್ದೇನೆ. ಎಷ್ಟೇ ನ್ಯೂನ್ಯತೆಗಳಿದ್ದರೂ ಭಾರತದಲ್ಲಿ ಮಾತ್ರ ಆತ್ಮ ತನ್ನ ಸ್ವಾತಂತ್ರವನ್ನೂ , ದೇವರನ್ನೂ ಕಾಣುವುದು. ಈ ಪಾಶ್ಚಾತ್ಯ ಆಡಂಬರವೆಲ್ಲ ಕೇವಲ ನಿಸ್ಸಾರವಾದುದು….’ ಎಂದು ತೊಳಲಾಡಿದ್ದಾರೆ.
ಆಗಿಂದಾಗ್ಗೆ ಸ್ವಾಮಿಗಳ ಬಾಯಿಂದ ಬರುತ್ತಿದ್ದ ಇಂತಹ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಹೀಗೆ ಹೇಳಿದ ಕೆಲ ದಿನಗಳಲ್ಲಿಯೇ ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸುವದು ಸಾಮಾನ್ಯ ಸಂಗತಿಯಾಗಿದ್ದಿತು. ೭ ವರ್ಷಗಳ ಹಿಂದೆ ಎಂದರೆ ೧೮೮೯ ರಲ್ಲಿ ಆಸ್ತಿ ಕುರಿತಾಗಿ ದಾಯಾದಿಗಳು ಹಾಕಿದ್ದ ಮೊಕದ್ದಮೆಗಳು ತೀವ್ರವಾಗತೊಡಗಿ , ತಾಯಿ , ತಮ್ಮಂದಿರು , ತಂಗಿಯರು ಹೊಟ್ಟೆಗಿಲ್ಲದೆ ತೀವ್ರ ಸಂಕಷ್ಟದ ಸ್ಥಿತಿಯಲ್ಲಿದ್ದರು. ಆ ಸಂದರ್ಭದಲ್ಲಿ ಸ್ವಾಮಿಗಳಿಗೆ ನರಳುವುದಕ್ಕಿಂತ ಸಾಯುವುದೇ ಲೇಸು ಎನಿಸಿದ್ದರೆ ಸೋಜಿಗವೇನಲ್ಲ. ಆದರೆ ರಾಮಕೃಷ್ಣರ ಭೀಮಶಿಷ್ಯರಾಗಿದ್ದ , ಅವರಿಂದ ನಿರ್ವಿಕಲ್ಪ ಸಮಾಧಿಯ ಸ್ಥಿತಿಯನ್ನು ಕೆಲಕಾಲ ತಲುಪಿದ್ದ ವೀರ ಸಂನ್ಯಾಸಿ ಹೀಗೆ ಸಾಮಾನ್ಯರಂತೆ ಪರಿತಪಿಸಬಹುದೇ ಎನ್ನುವುದಕ್ಕೆ ಸಮಾಧಾನಕರ ಉತ್ತರ ಸಿಕ್ಕದು. ಒಮ್ಮೆ ಕ್ಯಾಟ್ಲ್’ಕಿಲ್ಸ್’ನಲ್ಲಿ ಜಮೀನು ಕೊಳ್ಳುತ್ತೇನೆ ಎನ್ನುವುದು ತಕ್ಷಣವೇ ತಲೆ ಬೋಳಿಸಿಕೊಂಡು ಬಿಡುಗಡೆ ಹೊಂದುತ್ತೇನೆ ಎನ್ನುವುದು ಸ್ವಾಮಿಗಳ ವಿಷಯದಲ್ಲಿ ಸಾಮಾನ್ಯ ಸಂಗತಿಗಳಾಗಿದ್ದವು. ನಿಸ್ಸಂಗಿಗಳಾಗದಂತೆ ಅವರನ್ನು ಯಾರೂ ತಡೆದಿರಲಿಲ್ಲ. ಭಾರತಕ್ಕೆ ಮರಳದಂತೆ ಯಾರೂ ನಿರ್ಬಂಧಿಸಿರಲಿಲ್ಲ. ಭಾಷಣಗಳ ಮೂಲಕ ಶತಮಾನಗಳ ದೈನ್ಯ ಸ್ಥಿತಿಯಿಂದ ಹಿಂದೂ ಧರ್ಮವನ್ನು ಮೇಲೆತ್ತಬೇಕೆಂದೂ , ಅದಕ್ಕಾಗಿ ಅಮೆರಿಕದಲ್ಲಿ ಎಡೆಬಿಡದೆ ಭಾಷಣಗಳನ್ನು ಮಾಡಬೇಕೆಂದು ಯಾರೂ ತಾಕೀತು ಮಾಡಿರಲಿಲ್ಲ. ಸ್ವಾಮಿಗಳ ಎಲ್ಲ ಬಂಧನಗಳು ಅವರು ಹಾಕಿಕೊಂಡವೇ ಆಗಿದ್ದವು. ಸ್ವಾಮಿಗಳ ಉಲ್ಲೇಖಿಸುತ್ತಿರುವ ಟಿಪ್ಪಣಿ ಪುಸ್ತಕ ಸಿಕ್ಕಿದೆಯೇ ಮತ್ತು ಅದರಲ್ಲಿ ಏನಿದ್ದಿತು ಎನ್ನುವ ಬಗ್ಗೆ ನಮಗೆ ಯಾವುದೇ ಸುಳಿವುಗಳು ದಕ್ಕವು.
ಅಳಸಿಂಗ ಪೆರುಮಾಳ್ ಕೇಳಿದ್ದ ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ ಸ್ವಾಮಿಗಳು ೨೩/೩/೧೮೯೬ ರ ಪತ್ರದಲ್ಲಿ ‘ ನನ್ನ ಹೊಸ ಸಂನ್ಯಾಸಿಗಳಲ್ಲಿ ನಿಜವಾಗಿಯೂ ಒಬ್ಬ ಮಹಿಳೆಯಿದ್ದಾಳೆ. . ಉಳಿದವರು ಗಂಡಸರು. ನಾನು ಇಂಗ್ಲೆಂಡ್’ನಲ್ಲಿ ಇನ್ನೂ ಕೆಲವರನ್ನು ಸಂನ್ಯಾಸಿಗಳನ್ನಾಗಿ ಮಾಡಿ ಭರತಖಂಡಕ್ಕೆ ನನ್ನೊಡನೆ ಕರೆದೊಯ್ಯಬೇಕೆಂದಿರುವೆ. ಹಿಂದೂಗಳಿಗಿಂತ ಈ ಬಿಳಿ ಬಣ್ಣದ ಮುಖಗಳು ಭರತಖಂಡದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವುವು. ಅದೂ ಅಲ್ಲದೆ ಅವರು ಹೆಚ್ಚು ಉತ್ಸಾಹಪೂರಿತರು. ಹಿಂದೂಗಳಾದರೋ ಶವದಂತಿರುವರು. ಜನಸಾಮಾನ್ಯರೇ ಇಂದಿನ ಭರತಖಂಡದ ಏಕಮಾತ್ರ ಭರವಸೆಯಾಗಿರುವರು. ಉತ್ತಮ ವರ್ಗದವರು ಶಾರೀರಿಕವಾಗಿ ಮತ್ತು ನೈತಿಕವಾಗಿ ಮೃತರಾಗಿರುವರು ಎನ್ನುತ್ತ ಹಿಂದೂಗಳ ಬಾರೆತ್ತಿದ್ದರು.
ಸ್ವಾಮಿಗಳು ಅಮೆರಿಕದಲ್ಲಿ ಹಿಂದೂ ಧರ್ಮದ ಬೋಧನೆ ಪ್ರಾರಂಭಿಸಿ ಸುಮಾರು ೩೨ ತಿಂಗಳುಗಳೇ ಕಳೆದಿದ್ದು ಚರ್ಚ್ , ಪಡಸಾಲೆ , ಸಭಾಂಗಣ ಹೀಗೆ ಎಲ್ಲೆಲ್ಲಿ ಸಾದ್ಯವೋ ಅಲ್ಲೆಲ್ಲ ಬೋಧಿಸಿದ್ದರು. ಉದಾರವಾದಿ , ಮುಕ್ತ ಮನಸ್ಸಿನ ಅಮೆರಿಕನ್ನರು ಸ್ವಾಮಿಗಳ ಭಾಷಣಗಳನ್ನು ಸಹನೆ ಮತ್ತು ಕುತೂಹಲದಿಂದ ಕೇಳಿ , ಮತಭ್ರಾಂತರಾದ ಪಾದ್ರಿಗಳನ್ನು ತರಾಟೆಗೆ ತೆಗೆದುಕೊಂಡು ಸ್ವಾಮಿಗಳಿಗೆ ಬೆಂಬಲ ನೀಡುತ್ತಿದ್ದರು. ಆದರೆ ಅವರಲ್ಲಿ ಯಾರೊಬ್ಬರೂ ಕ್ರೈಸ್ತ ಧರ್ಮ ತೊರೆದು ಹಿಂದೂಗಳಾಗಿರಲಿಲ್ಲ. ಅಭಯಾನಂದ , ಕೃಪಾನಂದ ಮತ್ತು ಯೋಗಾನಂದರನ್ನು ಹೊರತಾಗಿ ಮತ್ತೊಬ್ಬ ವ್ಯಕ್ತಿ ಸಂನ್ಯಾಸಿಯಾಗಿರಲಿಲ್ಲ. ಕೆಲ ವರ್ಷಗಳಲ್ಲಿಯೇ ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಕಾವಿ ಬಟ್ಟೆಯ ಸಂನ್ಯಾಸಿಗಳು ಸಾಮಾನ್ಯರಾಗುತ್ತಾರೆ ಎನ್ನುವ ಸ್ವಾಮಿಗಳು ಕಲ್ಪನೆಯ ತುತ್ತ ತುದಿಯಲ್ಲಿದ್ದರು. ಅಮೆರಿಕ ಮತ್ತು ಇಂಗ್ಲೆಂಡ್’ಗಳಲ್ಲಿದ್ದ ಯಾವುದೇ ಸಾಮಾಜಿಕ , ಧಾರ್ಮಿಕ ಸನ್ನಿವೇಶಗಳು ಇಂತಹ ಅಭೂತಪೂರ್ವ ಘಟನೆಗೆ ಸಹಕಾರಿಯಾಗಿರಲಿಲ್ಲ. ಸಂನ್ಯಾಸ ಎಂದರೆ ವೈರಾಗ್ಯ . ಅದು ಸಹಜವಾಗಿ ಬಂದು , ಸಾಧನೆಯಿಂದ ಗಟ್ಟಿಗೊಳ್ಳಬೇಕೆಂದು ಹಿಂದೂಧರ್ಮ ನಂಬುತ್ತದೆ. ಇದಕ್ಕೆ ಬದಲಾಗಿ ಸ್ವಾಮಿಗಳು ಅಮೆರಿಕ ಮತ್ತು ಇಂಗ್ಲೆಂಡ್’ನಲ್ಲಿ ತಮ್ಮ ಭಾಷಣಗಳಿಂದ ಸಂನ್ಯಾಸಿಗಳನ್ನು ತಯಾರಿಸಿ ಭಾರತಕ್ಕೆ ಆಮದು ಮಾಡಿಕೊಳ್ಳವ ಉತ್ಸಾಹದಲ್ಲಿದ್ದಾರೆ. ಕೇವಲ ಎರಡು ತಿಂಗಳುಗಳ ಹಿಂದೆ (೫/೧/೧೮೯೬) ಭಾರತದಿಂದ ಸಂನ್ಯಾಸಿಗಳನ್ನು ಎಲ್ಲ ಕಡೆ ಕಳಿಸಿ ಜಗತ್ತನೇ ಗೆಲ್ಲುವ ಬಯಕೆ ತೋರಿಸಿದ್ದ ಸ್ವಾಮಿಗಳು ಈಗ ಭಾರತವನ್ನು ಗೆಲ್ಲಲು ತಾವು ಅಮೆರಿಕದಲ್ಲಿ ತಯಾರಿಸಿದ ಬಿಳಿ ಮುಖದ ಸಂನ್ಯಾಸಿಗಳನ್ನು ಆಮದು ಮಾಡಿಕೊಳ್ಳಲು ಬಯಸಿದ್ದಾರೆ. ತಾವು ಬಯಸಿದಂತೆ ಇರದ ಭಾರತವನ್ನು ಹೆಣದಂತಿದೆ ಎಂದು ಜರಿದಿದ್ದಾರೆ. ಅವರ ಗುರು ರಾಮಕೃಷ್ಣರು ಆ ಹೆಣದ ಭಾಗವೇ ಆಗಿದ್ದರು ಎನ್ನುವುದನ್ನು ಮರೆತಿದ್ದಾರೆ
೧೪/೪/೧೮೯೬ ರಂದು ಲಂಡನ್’ಗೆ ಹೊರಡುವ ಹಿಂದಿನ ದಿನ ಸ್ವಾಮಿಗಳು ತ್ರಿಗುಣಾತೀತಾನಂದನಿಗೆ ಬರೆದಿದ್ದ ಪತ್ರದಲ್ಲಿ ಇಂಗ್ಲೆಂಡ್’ಗೆ ಹೋದ ನಂತರ ಮುಂದಿನ ಸಂಘಟಿತ ಕಾರ್ಯಕ್ರಮಗಳ ಬಗ್ಗೆ ಬರೆಯುತ್ತೇನೆ ಎಂದು ತಿಳಿಸಿದ್ದರು. ಇದರ ಮುಂದುವರಿಕೆಯಾಗಿ ೨೭/೪/೧೮೯೬ ರಂದು ಅಲಂಬಜಾರಿನ ಮಠದಲ್ಲಿದ್ದ ಗುರುಭಾಯಿಗಳಿಗೆ ಒಂದು ಸುದೀರ್ಘ ಪತ್ರ ಬರೆದರು. ಈ ಪತ್ರದ ಆರಂಭದಲ್ಲಿಯೇ ಸ್ವಾಮಿಗಳು ‘….ನಮ್ಮ ಗುರುದೇವರು ಬಂದ ಉದ್ದೇಶ ಸಫಲವಾಗಲಿ ಎನ್ನುವ ದೃಷ್ಟಿಯಿಂದ ಇದನ್ನು ಬರೆಯುತ್ತಿದ್ದೇನೆ. ನಿಮ್ಮೆಲ್ಲರ ಜವಾಬ್ದಾರಿಯನ್ನು ಅವರು ನನಗೆ ಕೊಟ್ಟರು. ನಿಮ್ಮಲ್ಲಿ ಅನೇಕರಿಗೆ ಇದು ಗೊತ್ತಿಲ್ಲದಿರಬಹುದು. ಆದ್ದರಿಂದ ಇದನ್ನು ಬರೆಯುತ್ತಿದ್ದೇನೆ…’ ಎಂದು ಪ್ರಾರಂಭಿಸಿದ್ದರು. ಮಠ ಕಟ್ಟುವ ವಿಚಾರವನ್ನು ಎತ್ತಿಕೊಂಡು ಅದರ ಆಡಳಿತದ ವಿಚಾರವಾಗಿ ಒಟ್ಟು ೧೦ ಅಂಶಗಳನ್ನು , ಆಡಳಿತ ಮಂಡಳಿ ಸಭೆ ಕುರಿತಾಗಿ ೫ ಅಂಶಗಳನ್ನು , ಮಠದ ಕಾರ್ಯ ವಿಭಜನೆಗೆ ಸಂಬಂಧಿಸಿದ ೩ ಅಂಶಗಳನ್ನು , ಸಾಮಾನ್ಯ ಹೇಳಿಕೆಗಳ ಅಡಿಯಲ್ಲಿ ೬ ಅಂಶಗಳನ್ನು ಮತ್ತು ಅಧಿಕಾರ ವರ್ಗದ ವಿವರಗಳನ್ನು ನೀಡಿದ್ದರು. ಈ ಅಂಶಗಳನ್ನು ಎಲ್ಲರಿಗೂ ಓದಿ ಹೇಳುವಂತೆ ತಿಳಿಸಿದ್ದರು. ಇದರಲ್ಲಿ ಆಡಳಿತದ ೬ ನೇ ಅಂಶದಲ್ಲಿ ಗ್ರಂಥಾಲಯದಲ್ಲಿ ಧೂಮಪಾನ ಅವಕಾಶ ಇರಬಾರದು ಎಂದು ತಿಳಿಸಿ, ೯ ನೇ ಅಂಶದಲ್ಲಿ ಹೊಗೆಸೊಪ್ಪು ಸೇದುವುದಕ್ಕೆ ಒಂದು ಸಣ್ಣ ಕೋಣೆ ಇರಬೇಕು. ಅಲ್ಲಿ ಹೊರತು ಬೇರೆಲ್ಲೆಯು ಧೂಮಪಾನ ಮಾಡಬಾರದು ಎನ್ನುವ ಸೂಚನೆ ನೀಡಿದ್ದರು. ಇದಲ್ಲದೆ ನಿಮ್ಮಲ್ಲಿ ಯಾರೂ ವಾಮಾಚಾರದ ಅಭ್ಯಾಸಕ್ಕೆ ಅರ್ಹರಲ್ಲ. ಆದಕಾರಣ ಮಠದಲ್ಲಿ ಅದನ್ನು ಅಭ್ಯಾಸ ಮಾಡಕೂಡದು , ಈ ನಿಯಮವನ್ನು ಉಲ್ಲಂಘಿಸುವವರು ಸಂಘದಿಂದ ಹೊರ ನಡೆಯಬೇಕು ಎಂದು ಎಚ್ಚರಿಸಿದ್ದರು. ಇದರೊಂದಿಗೆ ‘ ಈ ನನ್ನ ಸೂಚನೆಗಳಿಗೆ ಅನುಗುಣವಾಗಿ ನಡೆಯುವುದು ಮೇಲೆಂದು ತಿಳಿದರೆ ಈ ನಿಯಮಗಳಿಗೆ ಅನುಸಾರವಾಗಿ ನೀವು ನಡೆದುಕೊಂಡರೆ ಇದಕ್ಕೆ ಬೇಕಾದ ಹಣ ಸಹಾಯವೆಲ್ಲವನ್ನೂ ನಾನು ಮಾಡುವೆನು ‘ ಎನ್ನುವ ನಿರ್ಬಂಧವನ್ನು ಹೊನ್ನನ್ನು ಗೆದ್ದಿದ್ದ ಸ್ವಾಮಿಗಳು ಹೇರಿದ್ದರು. ಸ್ವಾಮಿಗಳ ಈ ನಿರ್ಬಂಧ ಈ ಹಿಂದೆ ಹಲವು ಕಡೆ ಅವರೇ ಹೇಳಿರುವಂತೆ ‘ ಹಣ ಕೊಡುವಾತನಿಗೆ ಓಲಗದವನು ಏನು ನುಡಿಸಬೇಕು ಎಂದು ಹೇಳುವ ಅಧಿಕಾರವಿದೆ ‘ ಎನ್ನುವ ತತ್ತ್ವವನ್ನೇ ಹೋಲುತ್ತಿದ್ದಿತು. ಆದರೆ ಸ್ವಾಮಿಗಳು ತಮಗೆ ಹಣ ನೀಡುತ್ತಿದ್ದವರು ತಮ್ಮ ಮೇಲೆ ಯಾವುದೇ ಬಗೆಯ ನಿರ್ಬಂಧಗಳನ್ನು ಹೇರುವುದನ್ನು ಸಹಿಸುತ್ತಿರಲಿಲ್ಲ ಎನ್ನುವುದನ್ನು ಮುಂದೆ ನೋಡಬಹುದು
ಮೇಲಿನ ಪತ್ರ ಬರೆದಾಗ ಸ್ವಾಮಿಗಳು ಭಾರತ ಬಿಟ್ಟ ಈಗಾಗಲೇ ಮೂರುವರೆ ವರ್ಷಗಳ ಸನಿಹವಾಗಿದ್ದಿತು. ಭಾರತ ತೊರೆದಾಗ ಇದ್ದ ವಿವೇಕಾನಂದನ ಜಾಗದಲ್ಲಿ ರೂಪಾಂತರಗೊಂಡಿದ್ದ ಬೇರೊಬ್ಬ ವಿವೇಕಾನಂದನಿದ್ದ. ಪಾಶ್ಚಾತ್ಯ ಜಗತ್ತಿನಲ್ಲಿ ಸಿಕ್ಕ ಗೌರವ ಆತ್ಮವಿಶ್ವಾಸ ಮೂಡಿಸಿದ್ದಿತು. ೨೦/೧೧/೧೮೯೬ ರಂದು ಈ ಆತ್ಮವಿಶಾಸದಲ್ಲಿ ಸ್ವಾಮಿಗಳು ಅಳಸಿಂಗ ಪೆರುಮಾಳ್’ಗೆ ಬರೆದರು. ‘ ಕಲ್ಕತ್ತ ಮತ್ತು ಮದ್ರಾಸಿನಲ್ಲಿ ತರುಣ ಉಪನ್ಯಾಸಕರನ್ನು ತಯಾರು ಮಾಡುವ ಕೇಂದ್ರವನ್ನು ತೆರೆಯುತ್ತೇನೆ. ಕಲ್ಕತ್ತದ ಕೆಂದ್ರ ತೆಗೆಯಲು ಬೇಕಾದ ಹಣ ನನ್ನಲ್ಲಿದೆ. … ಈ ಕೇಂದ್ರಗಳಿಂದ ಕೇವಲ ಭರತ ಖಂಡಕ್ಕೆ ದಾಳಿಯಿಡದೆ ಜಗತ್ತಿನ ಎಲ್ಲ ದೇಶಗಳಿಗೆ ಬೋಧಕರ ತಂಡವನ್ನು ಕಳಿಸುತ್ತೇನೆ. ಅದೇ ನಮ್ಮ ಕರ್ತವ್ಯ… … ಒಂದು ಪತ್ರಿಕೆಯನ್ನು ಎಲ್ಲ ಜನಾಂಗಗಳೂ ಒಂದೇ ರೀತಿಯಲ್ಲಿ ಅಂಗೀಕರಿಸುವಂತೆ ಮಾಡಲು ಎಲ್ಲಾ ರಾಷ್ಟ್ರಗಳ ಬರಹಗಾರರಿಂದ ಕೂಡಿರುವ ಒಂದು ಸಿಬ್ಬಂದಿ ಆವಶ್ಯಕ. ಅದಕ್ಕೆ ಒಂದು ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳು ಬೇಕಾಗಬಹುದು… ನನ್ನ ಗುರಿ ಭಾರತವಲ್ಲ ಅಂತಾರಾಷ್ಟ್ರೀಯ ಎನ್ನುವುದನ್ನು ನೀನು ಮರೆಯಬಾರದು ‘ ಎಂದರು. ೧೮೯೩ ರಲ್ಲಿ ಅಧ್ಯಾತ್ಮವನ್ನು ಪಾಶ್ಚಾತ್ಯರಿಗೆ ನೀಡಿ ಅದಕ್ಕೆ ವಿನಿಮಯವಾಗಿ ಲೌಕಿಕ ವಿಧ್ಯೆಯನ್ನು ಭಾರತಕ್ಕೆ ತರುತ್ತೇನೆ. ತುಳಿತಕ್ಕೆ ಒಳಗಾದವರ , ವಿಧವೆಯರ , ಅನಾಥರರ ಕಣ್ಣೀರನ್ನು ಒರೆಸುತ್ತೇನೆ ಎನ್ನುತ್ತಿದ್ದ ಸ್ವಾಮಿಗಳು ಮೂರು ವರ್ಷಗಳ ನಂತರ ಜಗತ್ತಿನ ಮೂಲೆಗಳಿಗೆ ಧರ್ಮ ಪ್ರಚಾರಕರನ್ನು ಕಳಿಸಿ ಜಗತ್ತನ್ನೇ ಗೆಲ್ಲತ್ತೇನೆ ಎನ್ನುತ್ತಿದ್ದಾರೆ. ವೈಯಕ್ತಿಕವಾದ ಅಧ್ಯಾತ್ಮವನ್ನು ಪ್ರಚಾರದ ಮೂಲಕ ಹಿಗ್ಗಿಸಬಹುದೆನ್ನುವ ತಪ್ಪು ಕಲ್ಪನೆಗೆ ಬದಲಾಗುವುದರ ಮೂಲಕ ಹಳೆಯ ವಿವೇಕಾನಂದ ಮರೆಯಾಗಿ ಹೊಸ ವಿವೇಕಾನಂದರು ಕಾಣಿಸಿಕೊಳ್ಳತೊಡಗಿದರು.
‘ಲಂಡನ್ನಿನ ಕೆಲಸ ಜಯಘೋಷ ಘರ್ಜಿಸುತ್ತಿದೆ. ಸಾರ್ವಜನಿಕ ಉಪನ್ಯಾಸವಲ್ಲದೆ ೧೨೦ ಜನ ನಿರಂತರವಾಗಿ ನನ್ನ ಉಪನ್ಯಾಸಕ್ಕೆ ಬರುತ್ತಿದ್ದಾರೆ ಎಂದು ತಿಳಿದರೆ ನಿಮಗೆ ಸೋಜಿಗವಾಗಬಹುದು. ಸೇವಿಯರ್ ದಂಪತಿಗಳು ಮತ್ತು ಗುಡ್ವಿನ್ ನನ್ನೊಡನೆ ಭರತ ಖಂಡದಲ್ಲಿ ಕೆಲಸ ಮಾಡಲು ಮತ್ತು ಅದಕ್ಕಾಗಿ ತಮ್ಮ ಸ್ವಂತ ಹಣ ವಿನಿಯೋಗಿಸಲು ನನ್ನೊಂದಿಗೆ ಭರತ ಖಂಡಕ್ಕೆ ಹೊರಟಿದ್ದಾರೆ. ಇನ್ನೂ ನೂರಾರು ಮಂದಿ ಹಾಗೆ ಮಾಡಲು ಸಿದ್ಧರಿದ್ದಾರೆ……ನನ್ನ ಕಾರ್ಯವನ್ನು ಭರತಖಂಡದಲ್ಲಿ ಪ್ರಾರಂಭಿಸಲು ಕೊನೆಗಾದರೂ ಕಡಿಮೆಯಲ್ಲದ ಸಹಾಯ ನನಗೆ ಹಣದ ರೂಪದಲ್ಲಿ ಒದಗಿ ಬಂದಿತು……ಆಂಗ್ಲೇಯರ ವಿಚಾರದಲ್ಲಿ ನನ್ನ ಅಭಿಪ್ರಾಯಗಳು ಸಂಪೂರ್ಣ ಬದಲಾದವು. ಇತರ ಎಲ್ಲಾ ಜನಾಂಗಗಳಿಗಿಂತ ಹೆಚ್ಚಾಗಿ ಅವರನ್ನೇ ದೇವರು ಏಕೆ ಅಷ್ಟೊಂದು ಅದೃಷ್ಟಶಾಲಿಗಳನ್ನಾಗಿ ಮಾಡಿರುವನೆಂದು ನನಗೆ ಗೊತ್ತಾಯಿತು. ….. ನಾನು ಕಲ್ಕತ್ತದಲ್ಲಿ ಮತ್ತು ೭೦೦೦ ಅಡಿ ಎತ್ತರದ ಆಲ್ಮೋರಾದ ಇಡೀ ಬೆಟ್ಟದಲ್ಲಿ ಎರಡು ಕೇಂದ್ರಗಳನ್ನು ತೆರೆಯುತ್ತೇನೆ. ಆಲ್ಮೋರಾ ಏಕೆಂದರೆ ಬಯಲು ಸೀಮೆಯಲ್ಲಿ ಅವರು ವಾಸಿಸುವಂತೆ ಮಾಡಿ ಭಾರತೀಯ ಜೀವನ ಪದ್ದತಿಯನ್ನು ಅವರ ಮೇಲೆ ಹೇರಿ ಅವರ ಸಾವಿಗೆ ಕಾರಣನಾಗಲು ನಾನು ಬಯಸುವುದಿಲ್ಲ….. ಹಿಂದೂ ಯುವಕರ ತಂಡಗಳನ್ನು ಪ್ರತಿಯೊಂದು ಸುಸಂಸ್ಕೃತ ದೇಶಕ್ಕೆ ಬೋಧಿಸಲು ಕಳಿಸುವುದು, ವಿದೇಶಗಳ ಗಂಡಸರು , ಹೆಂಗಸರು ಭರತಖಂಡದಲ್ಲಿ ಕೆಲಸ ಮಾಡುವಂತೆ ಮಾಡುವುದು ಇದೇ ನನ್ನ ಯೋಜನೆ……. ಇದು ೨೮/೧೧/೧೮೯೬ ರಂದು ಮೇರಿ ಮತ್ತು ಹ್ಯಾರಿಯೆಟ್ ಹೇಲ್ ಸೋದರಿಯರಿಗೆ ಬರೆದ ಪತ್ರದ ತಿರುಳು. ೯/೧೨/೧೮೯೬ ರಂದು ಸಾರಾ ಬುಲ್’ಗೆ ಬರೆದ ಪತ್ರದಲ್ಲಿ ‘ಆರ್ಥಿಕ ನೆರವು ನೀಡಲು ಮುಂದಾಗಿರುವ ನಿಮ್ಮ ಉದಾರವಾದ ಕಾಣಿಕೆಗೆ ನನ್ನ ಕೃತಜ್ಞತೆಯನ್ನು ಅರ್ಪಿಸುವುದು ಅನಾವಶ್ಯಕ. ಭರತ ಖಂಡದಿಂದ ನನ್ನ ವಿವರವಾದ ಯೋಜನೆಗಳನ್ನೆಲ್ಲ ನಿನಗೆ ವಿವರವಾಗಿ ಬರೆಯುತ್ತೇನೆ. ಸದ್ಯಕ್ಕೆ ಹಣದ ನೆರವು ಬೇಡ. ನಾನು ಕೇಳಿದಾಗ ಕೊಡಿ’ ಎಂದಿದ್ದಾರೆ.
ಸ್ವಾಮಿಗಳು ತಮ್ಮ ಗುರಿಗಳನ್ನು ಆಗಾಗ್ಗೆ ಬದಲಿಸುತ್ತಿದ್ದರು. ಇದನ್ನು ಸ್ವಾಮಿಗಳೊಂದಿಗೆ ಸನಿಹ ಒಡನಾಟ ಹೊಂದಿದ್ದ ಜೆ.ಜೆ ಗುಡ್ವಿನ ಗುರುತಿಸಿದ್ದನು. ೬/೪/೧೮೯೭ ರಂದು ಸ್ವಾಮಿಗಳು ತಮ್ಮ ಗುರಿ , ಕಾರ್ಯ ಸಾಧನೆಯನ್ನು ತಿಳಿಸಿ ಸರಳ ಘೋಷಲ್’ಗೆ ಉತ್ತರಿಸಿದ್ದರು. ಅದಕ್ಕೆ ಪ್ರತಿಯಾಗಿ ಆಕೆ ಭಾರತದ ಲೌಕಿಕ , ಸಾಮಾಜಿಕ ಸಮಸ್ಯೆಗಳನ್ನು ಧಾರ್ಮಿಕ ಮಾರ್ಗದಲ್ಲಿ ಆತ್ಮಜ್ಞಾನದ ಹಿನ್ನೆಲೆಯಲ್ಲಿ ಹೇಗೆ ಪರಿಹರಿಸಲು ಸಾಧ್ಯ ಎಂದು ಪ್ರಶ್ನಿಸಿರುವಂತಿದೆ. ಇದು ಸ್ವಾಮಿಗಳನ್ನು ಗೊಂದಲಕ್ಕೆ ಕೆಡವಿದೆ. ಪಾಶ್ಚಾತ್ಯ ದೇಶಗಳಲ್ಲಿ ಹಿಂದೂ ಧರ್ಮ , ವೇದಾಂತಗಳನ್ನು ವೈಭವೀಕರಿಸಿ ವೇದಿಕೆಗಳಿಂದ ಉತ್ತರ ಕೊಡುವಷ್ಟು ಸುಲಭವಾಗಿ ಸರಳ ಘೋಷಲ್ ಎತ್ತಿದ ಪ್ರಶ್ನೆಗಳಿಗೆ ಸ್ವಾಮಿಗಳು ಉತ್ತರ ಕೊಡಲು ಸಾಧ್ಯವಿರಲಿಲ್ಲ. ಆದ್ದರಿಂದ ಅವರು ತಾವು ಪ್ರತಿಪಾದಿಸುತ್ತಿರುವ ಆತ್ಮಜ್ಞಾನ ಎಂದರೆ ಕ್ರಿಯಾಶೀಲರಾಗುವುದು , ವೇದಾಂತದ ಶ್ರದ್ಧೆಯ ಆಧಾರದ ಮೇಲೆ ಲೌಕಿಕ ಮುನ್ನಡೆ ಸಾಧಿಸುವುದು ಎನ್ನುವ ಹೊಸ ಬಗೆಯ ವ್ಯಾಖ್ಯಾನ ನೀಡಲು ಯತ್ನಿಸಿ ತಮ್ಮ ಬೋಧನೆಗಳ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತ ೨೪/೪/೧೮೯೭ ರಂದು ಸರಳ ಘೋಷಲ್’ಗೆ ……ನಮಗೆ ಎಂತಹ ಶಿಕ್ಷಣ ಬೇಕೋ ಅಂತಹುದನ್ನು ಕೊಡಲು ಪ್ರತಿಯೊಂದು ರಾಜಧಾನಿಯಲ್ಲಿಯೂ ಒಂದೊಂದು ಕೆಂದ್ರವಿರಬೇಕು. ಅಲ್ಲಿಂದ ಭರತಖಂಡದಲ್ಲಿ ನಿಧಾನವಾಗಿ ಹರಡಬೇಕು… ಮದ್ರಾಸ್ ಮತ್ತು ಕಲ್ಕತ್ತೆಯಲ್ಲಿ ಅಂತಹ ಎರಡು ಕೆಂದ್ರಗಳನ್ನು ಈಗಾಗಲೆ ತೆರೆಯಲಾಗಿದೆ…….ಪಾಠಶಾಲೆಗಳನ್ನು ತೆರೆಯಲು ಕಾಲ ಇನ್ನೂ ಮಾಗಿಲ್ಲ….ಕ್ರಮೇಣ ಮುಖ್ಯ ಕೇಂದ್ರಗಳಲ್ಲಿ ವ್ಯವಸಾಯ , ಕೈಗಾರಿಕೆ ಇತ್ಯಾದಿಗಳನ್ನು ಕಲಿಸಬೇಕಾಗುತ್ತದೆ. ಕಲೆಗಳ ಬೆಂಬಲಕ್ಕಾಗಿಯೇ ತರಬೇತಿ ಕೇಂದ್ರಗಳನ್ನು ತೆರೆಯಬೇಕಾಗುವುದು ….ಈ ಕಾರ್ಖಾನೆಗಳಲ್ಲಿ ತಯಾರಾದ ಸಾಮಾನುಗಳನ್ನು ಯುರೋಪ್ ಮತ್ತು ಅಮೆರಿಕದಲ್ಲಿ ಮಾರಾಟ ಮಾಡಲು ಈಗಾಗಲೇ ಇರುವಂತಹ ಸಂಘಗಳನ್ನು ತೆರೆಯಬೇಕು…’ ಎನ್ನುತ್ತ ಜನಸಾಮಾನ್ಯರಿಗೆ ಶಿಕ್ಷಣ ನೀಡುವುದರಿಂದ ಪ್ರಾರಂಭಿಸಿ , ಕೈಗಾರಿಕೆಗಳನ್ನು ಸ್ಥಾಪಿಸಿ , ಸರಕುಗಳನ್ನು ಮಾರುವ ಚಿಂತನೆಗಳನ್ನು ಮುಂದಿರಿಸುತ್ತ ,ಒಂದು ಸರ್ಕಾರ ಮಾಡಬೇಕಾದ , ಪರಿಣಿತರಿಂದ ನಿರ್ಧಾರವಾಗಬೇಕಾದ ಎಲ್ಲ ಕೆಲಸಗಳನ್ನು ಅಧ್ಯಾತ್ಮಿಕ ವ್ಯಾಪ್ತಿಗೆ ತಂದಿದ್ದರು.
ಸರಳ ಘೋಷಲ್ ಎತ್ತಿದ ಪ್ರಶ್ನೆಗಳು ಸ್ವಾಮಿಗಳನ್ನು ಒಳಗೊಳಗೆ ಕೆಣಕುತ್ತಿದ್ದವು. ಹಾಗಾಗಿ ಆಲ್ಮೋರಾದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸ್ವಾಮಿಗಳು ಬ್ರಹ್ಮಾನಂದರಿಗೆ ವಿಜ್ಞಾನದ ಸಲಕರಣೆಗಳನ್ನು ಖರೀದಿಸಿ ರಾಸಾಯನಿಕ , ಭೌತ ಮತ್ತು ಜೀವ ವಿಜ್ಞಾನಗಳ ತರಗತಿಗಳನ್ನು ಪ್ರಾರಂಭಿಸಲು , ಬಂಗಾಳಿಯಲ್ಲಿರುವ ವಿಜ್ಞಾನದ ಪುಸ್ತಕಗಳನ್ನು ಖರೀದಿಸಲು , ಶಿಕ್ಷಣ ನಿರ್ದೇಶಕರನ್ನು ಹುಡುಕಲು ಒತ್ತಾಯಿಸಿದರು. (೧೧/೭/೧೮೯೭). ಅಖಂಡಾನಂದರಿಗೂ ಒತ್ತಾಯಿಸಿ ಹಳ್ಳಿಗಳಿಗೆ ಸಂನ್ಯಾಸಿಗಳು ವಿಜ್ಞಾನ , ಚರಿತ್ರೆ , ಭೂಗೋಳಗಳನ್ನು ಬೋಧಿಸುತ್ತ ಸಂಚರಿಸುವ ಹಳೆಯ ಕಾರ್ಯಕ್ರಮಕ್ಕೆ ಮರಳಿದ್ದಾರೆ. ೧೯೦೦ ಜನವರಿಯಲ್ಲಿ ಪಸಡೆನ ಸ್ಟಾರ್ ಪತ್ರಿಕೆ ಸ್ವಾಮಿಗಳು ಭಾರತದಲ್ಲಿ ಇಂಗ್ಲಿಷ್ ಕೈಗಾರಿಕಾ ಶಾಲೆ ತೆರೆಯಲು ಬೇಕಾದ ಹಣ ಸಂಗ್ರಹಿಸಲ ಇಲ್ಲಿಗೆ ಬಂದಿದ್ದಾರೆ. ಜನ ವ್ಯವಸ್ಥೆ ಮಾಡುವಂತಿದ್ದರೆ ಅವರು ಭಾರತದಲ್ಲಿ ಸ್ಥಾಪಿಸಲಿರುವ ಶಾಲೆಗೆ ನೆರವಾಗುವಂತಿದ್ದರೆ ಅವರು ಮುಂದಿನ ವಾರವೂ ಭಾಷಣ ಮಾಡಲು ಆಶಿಸುತ್ತಾರೆ ಎನ್ನುವ ಸಂಗತಿಯನ್ನು ಹಲವು ಸಲ ಪ್ರಕಟಿಸಿತು. (51) ಸ್ವಾಮಿಗಳ ಪತ್ರಗಳು ತಿಳಿಸುವಂತೆ ಬಹುಹಿಂದೆಯೇ ಈ ಯೋಜನೆಯನ್ನು ಅವರು ಕೈಬಿಟ್ಟು ಬೇಲೂರಿನಲ್ಲಿ ರಾಮಕೃಷ್ಣ ಮಠ ಸ್ಥಾಪಿಸುವುದು , ತಮ್ಮ ತಾಯಿಗೆ ಮನೆ ಕಟ್ಟಿಕೊಡುವುದನ್ನೇ ತಮ್ಮ ಗುರಿಗಳನ್ನಾಗಿಸಿಕೊಂಡಿದ್ದರು. ಹೀಗೆ ಸ್ವಾಮಿಗಳ ಗುರಿಗಳು ನಿರ್ದಿಷ್ಟ , ಖಚಿತವಾಗಿರದೆ ಅವಕಾಶ , ಅನುಕೂಲಕ್ಕೆ , ಲಹರಿಗೆ ತಕ್ಕಂತೆ ಬದಲಾಗುತ್ತಿದ್ದವು.
ಸ್ವಾಮಿಗಳಿಗೆ ಶ್ರೀನಗರದಲ್ಲಿರುವಾಗ ಕಾಶ್ಮೀರದಲ್ಲಿ ಒಂದು ಕಾಲೇಜನ್ನು ಸ್ಥಾಪಿಸುವ ಬಯಕೆ ಮೂಡಿದ್ದಿತು. ನಂತರ ವಾಸ್ತವ ಸ್ಥಿತಿಗತಿಗಳನ್ನು ತಿಳಿದು ಅದು ಸಧ್ಯಕ್ಕೆ ಸಾಧ್ಯವಿಲ್ಲ ಅದರ ಬದಲು ಕಲ್ಕತದಲ್ಲಿ ಸ್ಥಾಪಿಸುವುದು ಸೂಕ್ತ . ಅದಕ್ಕೆ ೧೦೦೦ ರೂಪಾಯಿಗಳು ಬೇಕಾಗಬಹುದು ಮತ್ತು ಮಹೇಂದ್ರನಾಥ ಗುಪ್ತರನ್ನು (ಮಾಸ್ಟರ್ ಮಹಾಶಯ) ಪ್ರಿನ್ಸಿಪಾಲ್ ಮಾಡಬಹುದು ಎನ್ನುವ ಚರ್ಚೆಗಳು ಹರಿದಾಡಿದ್ದವು. ಹೊಸದಾಗಿ ಸ್ಥಾಪಿಸುವ ಮಠದ ಕೆಲಸಗಳಲ್ಲಿ ಎಲ್ಲರೂ ಭಾಗಿಯಾಗುವಂತೆ ಮಾಡಿ ಅವರಲ್ಲಿ ಉತ್ತರದಾಯಿತ್ವವನ್ನು ತರಬೇಕು. ಇದರಿಂದ ವ್ಯಕ್ತಿಗಳು ಕಣ್ಮರೆಯಾದರೂ ಸಂಸ್ಥೆಗಳು ಉಳಿಯುತ್ತವೆ ಎನ್ನುವ ಚಿಂತನೆಗಳು ಹರಳುಗಟ್ಟಿದ್ದವು. (೧೭/೭/೧೮೯೮, ೧/೮/೧೮೯೮-ಬ್ರಹ್ಮಾನಂದ)
ಸ್ವಾಮಿಗಳ ಅಮೆರಿಕ ಪ್ರವಾಸ ನಂತರದ ದಿನಗಳಲ್ಲಿ ಮಾಡಿದ ಭಾಷಣ ಸಂಚಾರ ಮತ್ತು ಅವರ ಗುರಿಗಳನ್ನು ಕುರಿತಾಗಿ ಯಾವ ನಿರ್ಧಾರಕ್ಕೆ ಬರಬಹುದು ? ಸ್ವಾಮಿಗಳು ಆಕಸ್ಮಾತ್ತಾಗಿ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಅಮೆರಿಕಕ್ಕೆ ಹೋಗಿದ್ದರು. ಅಷ್ಟೇ ಅಚ್ಚರಿಯ ರೀತಿಯಲ್ಲಿ ಅಲ್ಲಿ ಭಾಷಣಗಳಿಗೆ ವಾಣಿಜ್ಯ ಸ್ವರೂಪವಿದೆಯೆಂದು ಅವರಿಗೆ ಗೊತ್ತಾಯಿತು. ಈ ಅವಕಾಶಗಳನ್ನು ಬಳಸಿಕೊಂಡು ಹಣ ಸಂಪಾದಿಸಿ ಭಾರತದಲ್ಲಿ ರಾಮಕೃಷ್ಣ ಮಠ ಕಟ್ಟಿದರೆ ಒಂದು ನೆಲೆ ದಕ್ಕಿದಂತಾಗುತ್ತದೆಯೆಂದು ಭಾವಿಸಿದರು. ಹರಿದಾಸ ವಿಹಾರಿದಾಸ ದೇಸಾಯಿಗಳು ಕಲ್ಕತ್ತಕ್ಕೆ ಭೇಟಿ ನೀಡಿದಾಗ ಗುರುಭಾಯಿಗಳೊಂದಿಗೆ ಸ್ವಾಮಿಗಳ ಕುಟುಂಬದವರನ್ನು ಭೇಟಿ ಮಾಡಿದ್ದರು. ಅವರ ದುಸ್ಥಿತಿಯನ್ನು ಕಂಡು ಮರುಕಗೊಂಡಿದ್ದರು. ಅವರು ಅವರ ಕುಟುಂಬಕ್ಕೆ ಅರ್ಥಿಕ ನೆರವು ನೀಡಿದ್ದರೋ ಇಲ್ಲವೋ ಗೊತ್ತಿಲ್ಲ. ಮನೆಯ ಹಿರಿಯ ಮಗನಾಗಿ ಕುಟುಂಬದ ಸಮಸ್ಯೆಗಳನ್ನು ಬಗೆ ಹರಿಸುವ ಮೊದಲು ಸಂನ್ಯಾಸವನ್ನು ತೆಗೆದುಕೊಂಡಿದ್ದರ ಔಚಿತ್ಯವನ್ನು ಅವರು ಪ್ರಶ್ನಿಸಿದ್ದರು. ಪ್ರಮದದಾಸ ಮಿತ್ರರೂ ಇದೇ ಪ್ರಶ್ನೆಯನ್ನು ಎತ್ತಿದ್ದು ಸ್ವಾಮಿಗಳು ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ೧೪/೭/೧೮೯೯ರ ಪತ್ರದಲ್ಲಿ ಉತ್ತರಿಸಿದ್ದರು. ಭಾರತದಲ್ಲಿ ನೂರಾರು ಮತ , ಪಂಥ , ಸಂತರು ಇರುವಾಗ ರಾಮಕೃಷ್ಣರನ್ನು ಇನ್ನೊಬ್ಬ ದೇವತೆಯಾಗಿ ಪೂಜಿಸುವುದು ಮತ್ತು ಅವರ ಹೆಸರಿನಲ್ಲಿ ಮಠ ಮತ್ತು ಇನ್ನೊಂದು ಪಂಥ ಸ್ಥಾಪಿಸಲು ಹೆಣಗುವುದು ಎಷ್ಟು ಸರಿ ಎಂದು ಹರಿದಾಸ ವಿಹಾರಿದಾಸ ದೇಸಾಯಿಗಳು ಕೇಳಿದ್ದರೆಂದು ಸ್ವಾಮಿಗಳು ಕೊಟ್ಟಿರುವ ಉತ್ತರದಿಂದ ಊಹಿಸಬಹುದು. ನಿಮ್ಮ ಚರಿತ್ರೆಯಲ್ಲಿ ಬರುವ ಎಲ್ಲ ಮಹಾತ್ಮರನ್ನು ಸೇರಿಸಿದರೂ ಅದರ ನೂರರಷ್ಟು ಗುರು ಪವಿತ್ರನಾಗಿರುವಾಗ , ಅಂತಹ ಗುರುವನ್ನು ಕೆಲವರು ಪೂಜೆ ಮಾಡಿದರೆ ತಪ್ಪೇನು ? ಎಂದು ಪ್ರಶ್ನಿಸಿ ರಾಮಕೃಷ್ಣರ ಹೆಸರಿನಲ್ಲಿ ಮಠ ಸ್ಥಾಪಿಸುವುದನ್ನು ಸಮರ್ಥಿಸಿಕೊಂಡಿದ್ದರು. (೨೯/೧/೧೮೯೪). ಅದರಲ್ಲಿ ಭಾರತದ ದೀನ ದಲಿತರ ಉದ್ಧಾರದ ಮಾತಿರಲಿಲ್ಲ. ಹರಿದಾಸ ವಿಹಾರಿದಾಸ ದೇಸಾಯಿಯವರಿಗೆ ಬರೆದ ಪತ್ರದಲ್ಲಿ ಸ್ವಂತ ಕುಟುಂಬದ ಏಳಿಗೆ ಮತ್ತು ಭಾರತದ ಉದ್ದಾರ ಎರಡರಲ್ಲಿ ಎರಡನೆಯದನ್ನು ನಾನು ಆರಿಸಿಕೊಂಡೆ ಎಂದು ಹೇಳಿದ್ದಾರೆ. ಅಮೆರಿಕಕ್ಕೆ ಹೋಗುವ ಮೊದಲು ಬರೆದ ಯಾವುದ ಪತ್ರದಲ್ಲಾಗಲಿ , ಮಾತುಕತೆಗಳಲ್ಲಿ ಆಗಲಿ ಇದು ಕಂಡುಬಂದಿಲ್ಲ. ಆರು ತಿಂಗಳ ನಂತರ ಹರಿದಾಸ ವಿಹಾರಿದಾಸ ದೇಸಾಯಿಗಳಿಗೆ ತಾವು ದೀನ , ದಲಿತರ ಸೇವೆಗೆ ಹಣ ಹೊಂದಿಸಲು ಬಂದಿರುವುದಾಗಿ ತಿಳಿಸಿದರು. (೨೦/೬/೧೮೯೪). ಸ್ವಾಮಿಗಳು ಹಿಂದೂ ಧರ್ಮವನ್ನು ಹೊಗಳಿ ಭಾಷಣ ಮಾಡುತ್ತಿದ್ದಾಗ ಪಾದ್ರಿಗಳು ಅಂತಹ ಶ್ರೇಷ್ಟ ಧರ್ಮ ತುಳಿತಕ್ಕೊಳಗಾದವರಿಗೆ ಏನು ಮಾಡಿದೆ ಎಂದು ತೀವ್ರವಾಗಿ ಪ್ರಶ್ನಿಸತೊಡಗಿದಾಗ ಅವರಲ್ಲಿ ಸಮಾಜ ಸೇವೆಯ ಚಿಂತನೆಗಳು ಮೊಳಕೆಯೊಡೆದವು.
ಭಾರತದ ಬಹುತೇಕ ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೇ ಮದ್ದು .ಆಧುನಿಕ ಜಗತ್ತಿಗೆ ಮೈಯೊಡ್ಡಿಕೊಳ್ಳುವುದರಿಂದ ಮಾತ್ರವೇ ಭಾರತೀಯ ಸಮಾಜದಲ್ಲಿ ಹೊಸಗಾಳಿ ಬೀಸಬಲ್ಲದು ಎಂದು ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಸಮಾಜ ಸುಧಾರಕರಿಗೆ ಗೊತ್ತಾಗಿದ್ದಿತು. ಹೆಂಗಸರಿಗೆ ಶಿಕ್ಷಣ ನೀಡುವುದು ಅದರ ಮುಖ್ಯವಾದ ಒಂದು ಅಂಗ ಎಂದು ಅವರ ಭಾವಿಸಿದ್ದರು. ಈ ದೃಷ್ಟಿಯಲ್ಲಿಯೇ ಸ್ವಾಮಿಗಳ ಹುಟ್ಟೂರು ಕಲ್ಕತ್ತದಲ್ಲಿಯೇ ಭಾರತೀಯರು ಆಧುನಿಕ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳನ್ನು ತೆರೆದಿದ್ದರು. ಅಂತಹ ವಿದ್ಯಾಸಂಸ್ಥೆ ಒಂದರಿಂದಲೇ ದತ್ತ ವಂಶದ ನರೇಂದ್ರನಾಥ ಇಂಗ್ಲಿಷ್’ನಲ್ಲಿ ಪ್ರಭುತ್ವ ಗಳಿಸಿ ಸ್ವಾಮಿ ವಿವೇಕಾನಂದನಾಗಿ ಆತ್ಮವಿಶ್ವಾಸದಿಂದ ಅಮೆರಿಕಕ್ಕೆ ಹೋಗಲು ಸಾದ್ಯವಾಗಿದ್ದಿತು. ಸ್ವಾಮಿಗಳು ೧೮೯೩ ರಲ್ಲಿ ಮೈಸೂರಿಗೆ ಭೇಟಿ ನೀಡುವ ವೇಳೆಗಾಗಲೇ ಚಾಮರಾಜೆಂದ್ರ ಒಡೆಯರು ಮೈಸೂರಿನಲ್ಲಿ ಹೆಣ್ಣು ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡುವ ಪ್ರೌಢಶಾಲೆಗಳನ್ನು ತೆರೆದಿದ್ದರು. ಸ್ವಾಮಿಗಳು ಅಲ್ಲಿಗೆ ಭೇಟಿಕೊಟ್ಟಿದ್ದರು. (೨೩/೬/೧೮೯೪-ನರಸಿಂಹಾಚಾರ್ಯ). ಆದ್ದರಿಂದ ಹಿಂದೂ ಸಮಾಜದ ಏಳ್ಗೆಗಾಗಿ ಜನರಿಗೆ ಶಿಕ್ಷಣ ಬೇಕು ಎಂದು ಗುರುತಿಸಿದವರಲ್ಲಿ ಸ್ವಾಮಿಗಳು ಮೊದಲಿಗರೇನಲ್ಲ. ಇದಕ್ಕೆ ಭಿನ್ನವಾಗಿ ಶಿಕ್ಷಣ ಕೊಡುವ ದಾರಿ ಸ್ವಾಮಿಗಳಿಗೆ ಹೊಳೆದಿದ್ದಿತು. ಅಧ್ಯಾತ್ಮ ಕೇಂದ್ರ /ಮಠ/ಆಶ್ರಮವನ್ನು ತೆರೆದು ಅಲ್ಲಿ ಸಂನ್ಯಾಸಿಗಳನ್ನು ತರಬೇತಿಗೊಳಿಸಿ ಅವರು ಊರಿಂದ ಊರಿಗೆ ವಿದ್ಯೆಯನ್ನು ಹಂಚುತ್ತ ಸಾಗುವುದು ಅವರ ಯೋಜನೆಯಾಗಿದ್ದಿತು. . ಪ್ರತಿ ಹಳ್ಳಿಯಲ್ಲಿ ಪಾಠಶಾಲೆಗಳನ್ನು ತೆರೆದು ವಿದ್ಯೆ ಹಂಚುವುದು ಸಾದ್ಯವಿಲ್ಲ ಎಂದು ಸ್ವಾಮಿಗಳು ಭಾವಿಸಿದ್ದರು (೨೩/೬/೧೮೯೪-ಚಾಮರಾಜೇಂದ್ರ ಒಡೆಯರ್ ) ಶಿಕ್ಷಣದಿಂದ ಜನರಿಗೆ ಸ್ವತಂತ್ರ ವಿಚಾರ ಧಾರೆ ಮೂಡುತ್ತದೆ , ಆಗ ಅವರೇ ಜಾತಿ ಪದ್ದತಿ , ಹೆಂಗಸರ ಶಿಕ್ಷಣ , ಸಮಾನತೆ ಮುಂತಾದ ಉರಿಯುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡಕೊಳ್ಳುತ್ತಾರೆ ಎಂದು ಭಾವಿಸಿದ್ದರು. ಊರಿಂದ ಊರಿಗೆ ಅಲೆಯುವ ಸಂನ್ಯಾಸಿಗಳು ಹರಿಕಥೆ ಹೇಳಬಹುದೇ ಹೊರತು ಸ್ಥಿರವಾದ ಶೈಕ್ಷಣಿಕ ವ್ಯವಸ್ಥೆಗೆ ಪರ್ಯಾಯ ಆಗಲಾರರು. ಜನರಿಗೆ ಶಿಕ್ಷಣ ಕೊಡುವುದಕ್ಕೆ ನಿರಂತರ ಸಂಪನ್ಮೂಲಗಳು ಬೇಕು ಎನ್ನುವುದರತ್ತ ಗಮನ ಹರಿಸಿರಲಿಲ್ಲ. ಸ್ವಾಮಿಗಳು ತಮ್ಮ ಗುರಿಗೆ ಬೇಕಾದ ಸಂಪನ್ಮೂಲವನ್ನು ಪಡೆಯಲು ಅವರು ಆರಿಸಿಕೊಂಡ ದಾರಿ ಮಾತ್ರ ವಿಚಿತ್ರವಾಗಿದ್ದಿತು. ಅಮೆರಿಕದಲ್ಲಿ ಪಾದ್ರಿಗಳು ಧರ್ಮವನ್ನು ವ್ಯಾಪಾರವಾಗಿಸಿದ್ದಾರೆ. ಧರ್ಮ ಎಂದರೆ ಆತ್ಮಾನುಭೂತಿಯ ಮಾರ್ಗ. ಅದು ಸಾಧನೆ, ತ್ಯಾಗ ಮತ್ತು ನಿರ್ವಿಕಾರದಿಂದ ಬರುವ ವೈಯಕ್ತಿಕ ಅನುಭಾವವೇ ಹೊರತು ಕೊಟ್ಟು ಕೊಳ್ಳುವ ಸರಕಲ್ಲ ಎಂದು ಪಾದ್ರಿಗಳ ಬೆವರಿಳಿಸಿದ್ದ ಸ್ವಾಮಿಗಳು ನಾನು ಅಮೆರಿಕನ್ನರಿಗೆ ಅಧ್ಯಾತ್ಮವನ್ನು ನೀಡಿ ಜನರಿಗೆ ಶಿಕ್ಷಣ ನೀಡಲು ಬೇಕಾದ ಹಣ ಸಂಪಾದಿಸುತ್ತೇನೆ ಎನ್ನುತ್ತಿರುವುದೇ ಒಂದು ವ್ಯಂಗ್ಯವಾಗದ್ದಿತು.
ಕರ್ನಾಟಕದಲ್ಲಿ ಸ್ವಾಮಿಗಳಿಗಿಂತ ಮೊದಲೇ ಪ್ರಗತಿಪರ ಧೋರಣೆ ತಳೆದವರಿದ್ದರು. ಸ್ವಾಮಿಗಳಿಗಿಂತ ಒಂದು ತಿಂಗಳು ಚಿಕ್ಕವರಾಗಿದ್ದ ಚಾಮರಾಜೇಂದ್ರ ಒಡೆಯರ್ (೨೨/೨/೧೮೬೩-೨೮/೧೨/೧೮೯೪) ಸ್ವಾಮಿಗಳ ಪರಿಚಯ ಆಗುವುದಕ್ಕೆ ಮೊದಲೇ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು. ಶಾಲೆಗಳನ್ನು ತೆರೆದಿದ್ದರು. ರೈಲ್ವೇ ಮಾರ್ಗಗಳನ್ನು ಹಾಕಿಸಲು ಯತ್ನಿಸಿದ್ದರು. ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಸಾಮಾನ್ಯ ಜನರನ್ನು ಮೇಲೆತ್ತಲು ೧೮೯೨ ರಲ್ಲಿಯೇ ಮದ್ರಾಸ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಯಾವ ಬಾಹ್ಯ ಪ್ರೇರಣೆಯಿಲ್ಲದೆ ಇವರ ಹೆಂಡತಿ ರಾಣಿ ಕೆಂಪನಂಜಮ್ಮಣ್ಣಿ ೧೮೯೮ ರಲ್ಲಿ ಮಾರಿಕಣಿವೆ ಆಣೆಕಟ್ಟೆ ಕಟ್ಟುವ ಸಾಹಸ ಮಾಡಿದ್ದಳು. ಇವು ಸ್ವಾಮಿಗಳ ‘ಭಾರತದ ಕೆಲಸಗಳಿಗಿಂತ’ ಉತ್ತಮವೂ , ಸಾರ್ವಜನಿಕವೂ ಆಗಿದ್ದವು. ಇದೇ ರೀತಿಯಲ್ಲಿ ಶಿರಸಂಗಿ ಲಿಂಗರಾಜರು ಜನಾನುರಾಗಿ , ಜನಪರ ರಾಜರಾಗಿ ಬಡತನ ನಿರ್ಮೂಲನಕ್ಕೆ ಬೇಕಾದ ನೀರಾವರಿ , ಕೃಷಿಗೆ ಶ್ರಮಿಸಿದ್ದರು. ರಮಾಬಾಯಿ ವಿಧವೆಯರ ವಸತಿ ಶಾಲೆಗಳನ್ನು ಸ್ವಾಮಿಗಳಿಗಿಂತ ೨೦ ವರ್ಷ ಮೊದಲೇ ಸ್ಥಾಪಿಸಿ ಯಶಸ್ವಿಯಾಗಿ ನಡೆಸಿದ್ದಳು. ಕಲ್ಕತ್ತದಲ್ಲಿಯೇ ಶಶಿಧರ ಬ್ಯಾನರ್ಜಿ ಅಂತಹುದೇ ಕೆಲಸದಲ್ಲಿ ತೊಡಗಿದ್ದರು. ಆದ್ದರಿಂದ ಸ್ವಾಮಿಗಳನ್ನು ಈ ಯಾವ ದೃಷ್ಟಿಯಿಂದಲೂ ಮೊದಲಿಗರೆನ್ನಲು ಸಾಧ್ಯವಿಲ್ಲ.
ವಿಶ್ವ ಧರ್ಮ ಸಂಸತ್ತಿನ ನಂತರ ಸ್ವಾಮಿಗಳ ಈ ಭಾಷಣಗಳ ಪ್ರವಾಸಗಳ ಉದ್ದೇಶ ಏನಾಗಿದ್ದಿತು ? ಹಲವು ಭಾಷಣಗಳಲ್ಲಿ ಅವರೇ ತಿಳಿಸಿದಂತೆ ಅಮೆರಿಕನ್ನರನ್ನು ಹಿಂದೂ ಧರ್ಮಕ್ಕೆ ಮತಾಂತರಿಸುವುದಲ್ಲ. ಅಮೆರಿಕದ ಜನರಿಗೆ ಹಿಂದೂ ಧರ್ಮ ಮತ್ತು ಅದರ ಹೆಗ್ಗಳಿಕೆಯನ್ನು ಪರಿಚಯಿಸುವುದೇ ? ಅದಾಗಿದ್ದರೆ ಕ್ರೈಸ್ತ ಮಿಷನರಿಗಳ ಮೇಲೆ ಅಷ್ಟೊಂದು ಟೀಕೆ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಕೆಲವು ಸಂದರ್ಶನ ಮತ್ತು ಪತ್ರಗಳಲ್ಲಿ ಸ್ವಾಮಿಗಳು ಅಮೆರಿಕದಿಂದ ಆಧುನಿಕ ಜ್ಞಾನವನ್ನು ಭಾರತಕ್ಕೆ ಒಯ್ಯಲು ಬಂದಿರುವುದಾಗಿ ತಿಳಿಸಿದ್ದಾರೆ. ಈ ಉದ್ದೇಶಕ್ಕೆ ಸರದಿಯಲ್ಲಿ ಧಾರ್ಮಿಕ ಭಾಣಗಳನ್ನು ಕೊಡುವುದರಿಂದ ಪ್ರಯೋಜನವಿಲ್ಲ. ಆದ್ದರಿಂದ ಸ್ವಾಮಿಗಳ ಈ ಭಾಷಣಗಳ ಪ್ರವಾಸಗಳನ್ನು ಬೇರೆ ಕೋನದಿಂದ ನೋಡಿ ಅರ್ಥಮಾಡಿಕೊಳ್ಳಲು ಯತ್ನಿಸಬಹುದು. ವಿಶ್ವ ಧರ್ಮ ಸಂಸತ್ತು ಮುಗಿದ ನಂತರ ಕೆಲವು ಭಾರತೀಯ ಪತ್ರಿಕೆಗಳು ಸ್ವಾಮಿಗಳನ್ನು ಕೇಂದ್ರೀಕರಿಸಿ-ಇತರ ಭಾರತೀಯರನ್ನು ಕಡೆಗಣಿಸಿ- ಸುದ್ದಿಗಳನ್ನು ನೀಡುತ್ತಿದ್ದವು. ಸ್ವಾಮಿಗಳಿಗೆ ಅಮೆರಿಕದಲ್ಲಿ ಸಿಕ್ಕುತ್ತಿರುವ ದಿಗ್ವಿಜಯದ ಸುದ್ದಿಗಾಗಿ ಕಾಯುತ್ತಿದ್ದ ಗುರುಭಾಯಿ ಮತ್ತು ಮದ್ರಾಸಿನ ಶಿಷ್ಯರಿಗೆ ಈ ಸುದ್ದಿಗಳು ಬಲ ತುಂಬುತ್ತಿದ್ದವು. ವಿದೇಶಿ ನೆಲದಲ್ಲಿ ಹಿಂದೂ ಧ್ವಜವನ್ನು ನೆಡುವ ಸಾಹಸಿಯಾಗಿ ಕಾಣಿಸಲು ಅಥವಾ ಭಾಷಣಗಳ ಮೂಲಕ ಹಣ ಸಂಪಾದಿಸಿ ತಮ್ಮ ಭಾರತದ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವೇ ಎಂದು ತಿಳಿಯಲು ಅಥವಾ ಹೊಸ ಜಾಗಗಳನ್ನು ನೋಡುತ್ತ , ಹೊಸಬರ ಪರಿಚಯ ಮಾಡಿಕೊಳ್ಳಲು ಸ್ವಾಮಿಗಳು ಈ ಉಪನ್ಯಾಸ ಪ್ರವಾಸಗಳನ್ನು ಮಾಡಿರಬಹುದು. ಆದರೆ ಇಂತಹ ಯಾವ ವಿವರಣೆಗಳಿಂದಲೂ ಅಭಿಮಾನಿಗಳಿಗೆ ತೃಪ್ತಿಯಾಗದು.
ಸ್ವಾಮಿಗಳು ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಗವಹಿಸಿದ್ದು ಆನಂತರ ಅಮೆರಿಕ ನಗರ , ಪಟ್ಟಣಗಳಲ್ಲಿ ಹಿಂದೂ ಧರ್ಮ ನಡೆಸಿದ ದಿಗ್ವಿಜಯದಂತೆ ಕೆಲವರಿಗೆ ಕಂಡಿದ್ದರೆ, ಇನ್ನು ಕೆಲವರು ವೇದಾಂತ ಕೇಸರಿಯ ಗರ್ಜನೆಗೆ ಅಮೆರಿಕ ಬೆಚ್ಚಿ ಮೆಚ್ಚುಗೆಯಲ್ಲಿ ನೋಡಿತು ಎಂದು ಕಲ್ಪಿಸಿಕೊಂಡಿದ್ದಾರೆ. ಇನ್ನು ಕೆಲವರಿಗೆ ಅವರು ಹಿಂದೂ ಧರ್ಮದ ಸಾರವನ್ನು ಅಮೆರಿಕನ್ನರಿಗೆ ಬೋಧಿಸಿದ ಪ್ರವಾದಿಯಾಗಿ ಕಂಡಿದ್ದಾರೆ. ಸ್ವಾಮಿಗಳ ಆರಂಭಿಕ ಭಾಷಣಗಳನ್ನು ಒಂದು ಸಂಸ್ಥೆ ವ್ಯಾಪಾರದ ದೃಷ್ಟಿಯಲ್ಲಿ ಆಯೋಜಿಸಿದ್ದಿತೇ ಹೊರತು ಸಾರ್ವಜನಿಕರು ತಾವಾಗಿಯೇ ಸ್ವಾಮಿಗಳನ್ನು ಭಾಷಣ ಮಾಡಿರಲು ಕರೆದಿರಲಿಲ್ಲ. ಸ್ವಯಂ ಪ್ರೇರಣೆಯಿಂದ ಕೆಲ ಸಂಘ ಸಂಸ್ಥೆಗಳು ಪೌರಾತ್ಯ ಹಿಂದೂ ಧರ್ಮದ ಬಗ್ಗೆ ತಿಳಿಯಲು ಸ್ವಾಮಿಗಳನ್ನು ಆಹ್ವಾನಿಸಿದ್ದವು. ಕ್ರೈಸ್ತ ಮಿಷನರಿಗಳೊಂದಿಗೆ ಸ್ವಾಮಿಗಳು ನಡೆಸಿದ ಸೆಣಸಾಟಗಳಲ್ಲಿ ಯಾವುದೇ ನಿರ್ದಿಷ್ಟ , ಖಚಿತ ಮಾರ್ಗಸೂಚಿಗಳಿರಲಿಲ್ಲ. ಅವರನ್ನು ಪ್ರವಾದಿ ಎಂದು ಕರೆಯಲು ಜನ ಸಮೂಹ ಅವರ ಬೋಧನೆಗಳಿಗೆ ಮರುಳಾಗಿರಲಿಲ್ಲ. ನಂತರ ದಿನಗಳಲ್ಲಿ ಇಂತಹ ಕಾಲ್ಪನಿಕ ಸಂಗತಿಗಳನ್ನು ಹೊಸೆಯಲಾಯಿತು. ಸ್ವಾಮಿಗಳು ತಮ್ಮ ಆಲೋಚನೆ , ಚಿಂತನೆ , ಯೋಜನೆಗಳಿಗೆ ಅನುಗುಣವಾಗಿ ವರ್ತಿಸುತ್ತಿದ್ದರು. ಅವು ವಿಫಲವಾದಾಗ ಅಥವಾ ತ್ರಾಸಕರವಾದಾಗ ಭಗವಂತನ ಕೈಯಲ್ಲಿ ಗೊಂಬೆ ತಾವೆನ್ನುವಂತೆ ವರ್ತಿಸುತ್ತಿದ್ದರು. ಅವರ ನಡವಳಿಕೆ ಸನ್ನಿವೇಶಕ್ಕೆ ಅನುಗುಣವಾಗಿ ಬದಲಾಗುತ್ತಿದ್ದಿತೇ ಹೊರತು ನಿರ್ದಿಷ್ಟ ನೀತಿ , ಸಿದ್ಧಾಂತಗಳಿಗೆ ಅನುಗುಣವಾಗಿ ಅಲ್ಲ. ಅವರಿಗೆ ವಸತಿ ಕಲ್ಪಿಸಿ , ಆರ್ಥಿಕ ಮತ್ತಿತರ ಬೆಂಬಲ ನೀಡಿದವರಲ್ಲಿ ಯಾರೂ ಕ್ರೈಸ್ತ ಧರ್ಮ ತೊರೆಯಲಿಲ್ಲ , ಹಿಂದೂ ಧರ್ಮಕ್ಕೆ ಮತಾಂತರವಾಗಲಿಲ್ಲ, ಅಮೆರಿಕದ ನಾಗರಿಕ ಜೀವನದಿಂದ ವಿಮುಖರಾಗಲಿಲ್ಲ. ಸ್ವಾಮಿಗಳ ವರ್ತನೆ , ನಡವಳಿಕೆ , ಸಿಟ್ಟು, ಸೆಡವು , ಸೋಲು, ಗೆಲುವುಗಳು ಯಾವುದೇ ಸಾಮಾನ್ಯ ಮನುಷ್ಯನಿಗಿಂತ ಭಿನ್ನವಾಗಿರಲಿಲ್ಲ.
ಸ್ವಾಮಿಗಳ ಗುರಿ ಅದಕ್ಕಾಗಿ ಅವರು ಪಟ್ಟ ಶ್ರಮ , ಅದರಿಂದ ಅವರಿಗೆ ಉಂಟಾದ ಭಾವನೆಗಳನ್ನು ಅವರ ,ಮಾತಿನಲ್ಲಿಯೇ ಕೇಳಬಹುದು. ‘ಕರ್ತವ್ಯ ನಡು ಹಗಲಿನ ಸೂರ್ಯನಂತೆ. ಅದರ ಭಯಂಕರ ಕಿರಣಗಳು ಮಾನವ ಜನಾಂಗದ ಜೀವ ಶಕ್ತಿಯನ್ನು ಸುಟ್ಟು ಹಾಕುತ್ತವೆ. ಸ್ವಲ್ಪ ಕಾಲದವರೆಗೆ ಕನಸು ಹೇಗೋ ಆವಶ್ಯಕ. ಆದಾದ ನಂತರ ಅದು ವಿಕಾರವಾದ ಕೆಟ್ಟ ಕನಸು . ನಾವು ಸಹಾಯ ಮಾಡಲಿ , ಬಿಡಲಿ ನಡೆಯಬೇಕಾದ ಕೆಲಸಗಳು ನಡೆಯುತ್ತವೆ. ನಾವು ಮಾತ್ರ ಭ್ರಾಂತಿಯಿಂದ ನುಚ್ಚು ನೂರಾಗುವೆವು. ನಿಸ್ವಾರ್ಥತೆಯ ತುದಿಯಲ್ಲಿ ಒಂದು ಮಿಥ್ಯಾ ಭಾವುಕತೆಯಿದೆ. ಅದು ಅತಿರೇಕಕ್ಕೆ ಹೋಗುತ್ತದೆ. ಅದು ಪ್ರತಿಯೊಂದು ಅಮಿಷಕ್ಕೂ ತಲೆಬಾಗುತ್ತ ಇತರರಿಗೆ ಹಾನಿ ಮಾಡುತ್ತದೆ. ನಮ್ಮ ನಿಸ್ವಾರ್ಥತೆಯಿಂದ ಇತರರನ್ನು ಸ್ವಾರ್ಥಿಗಳಾಗುವಂತೆ ಮಾಡಲು ನಮಗೆ ಯಾವ ಅಧಿಕಾರವೂ ಇಲ್ಲ. ‘ (೨೫/೮/೧೮೯೮). ಈ ಸಂದೇಶ ಅವರು ಕರ್ಮಯೋಗದ ಬಗ್ಗೆ ಮಾಡಿದ ಭಾಷಣ , ಬರೆದ ಭಾಷ್ಯ ಮತ್ತು ತ್ಯಾಗದ ಕಲ್ಪನೆಗಳಿಗಿಂತ ಭಿನ್ನವಾಗಿದೆ
Comment Box is loading comments...