ಸ್ವಾಮಿಗಳ ಅಜ್ಞಾತ ಪತ್ರಗಳು
( ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ )`
೨೪/೨/೧೯೯೦ ರಂದು ದೆಹಲಿಯಿಂದ ಸಂಪಾದಿತವಾದ ‘ದಿ ಟೈಮ್ಸ್ ಆಫ್ ಇಂಡಿಯಾ ‘ ಪತ್ರಿಕೆಯ ಸಂಚಿಕೆಯ ಮುಖಪುಟದಲ್ಲಿ ಪ್ರಕಾಶ್ ಭಂಡಾರಿಯವರು ಹೊಸದಾಗಿ ಬೆಳಕಿಗೆ ಬಂದಿರುವ ೧೫/೨/೧೮೯೩ ಮತ್ತು ೨೨/೫/೧೮೯೩ ರಂದು ಸ್ವಾಮಿಗಳು ಖೇತ್ರಿಯ ರಾಜ ಅಜಿತ್ ಸಿಂಗ್’ಗೆ ಬರೆದ ಎರಡು ಪತ್ರಗಳಿರುವ ಸುದ್ದಿ ನೀಡಿದರು. ಮತ್ತೊಮ್ಮೆ ೨/೩/೧೯೯೦ ರಂದು ಆ ಎರಡು ಪತ್ರಗಳ ಕೊನೆಯ ಎರಡು ಪುಟಗಳ ಚಿತ್ರಗಳನ್ನು ಮುಖಪುಟದಲ್ಲಿ ನೀಡಿದರು. ಖೇತ್ರಿಯ ಹಳ್ಳಿ ಪಟ್ವಾರಿಯಾಗಿದ್ದ , ಇಂಗ್ಲಿಷ್ ಬಾರದ ಘೀಸಾರಾಂ, ಝುಂಜುನು ದಾಖಲೆ ಕೊಠಡಿಯನ್ನು ಚೊಕ್ಕಟಗೊಳಿಸುತ್ತಿರುವಾಗ ಈ ಪತ್ರಗಳು ಸಿಕ್ಕಿದ್ದವು. ರಿಬ್ಬನ್’ನಿಂದ ಕಟ್ಟಲಾಗಿದ್ದ ಈ ಪತ್ರಗಳಲ್ಲಿ ಏನಿದೆಯೆಂದು ತಿಳಿಸಿ ಹೇಳುವಂತೆ ಆತ ಉಪವಿಭಾಗ ನ್ಯಾಯಾಧೀಶ ರಾಮ್ ನಿವಾಸ ಮೆಹ್ತಾ ಕೈಗೊಪ್ಪಿಸಿದನು. ಆ ಕಟ್ಟನ್ನು ಸೂಕ್ಷ್ಮವಾಗಿ ನೋಡಿದ ತಕ್ಷಣ ರಾಮ್’ನಿವಾಸ್ ಮೆಹ್ತಾ ಆನಂದದಿಂದ ಕುಪ್ಪಳಿಸತೊಡಗಿದರು. ಆ ಪತ್ರಗಳು ಸ್ವಾಮಿ ವಿವೇಕಾನಂದರು ಮದ್ರಾಸಿನಿಂದ ಖೇತ್ರಿ ಮಹಾರಾಜ ಅಜಿತ್ ಸಿಂಗ್’ಗೆ ಬರೆದ ಪತ್ರಗಳೆಂದು ತಿಳಿಯಿತು’ ಎಂದು ಘೀಸಾ ರಾಂ ಪ್ರಕಾಶ್ ಭಂಡಾರಿಯವರಿಗೆ ತಿಳಿಸಿದ್ದನು. ಇದಾದ ತಕ್ಷಣ ಬಂಗಾಳಿಯ ಜನಪ್ರಿಯ ದೈನಿಕಗಳು - ಆನಂದ ಬಜಾರ್ ಪತ್ರಿಕೆ ಮತ್ತು ಬರ್ತಮಾನ್ -ಈ ಪತ್ರಗಳ ಸುದ್ದಿಯನ್ನು ೭/೩/೧೯೦೦ ರ ಭಾನುವಾರದ ಸಂಚಿಕೆಯಲ್ಲಿ ಪ್ರಕಟಿಸಿದವು. ೧೪/೩/೧೯೦೦ ರಂದು ಬರ್ತಮಾನ್ ಈ ಪತ್ರಗಳ ಬಂಗಾಳಿ ಅನುವಾದ ನೀಡಿತು. ಪ್ರಬುದ್ಧ ಭಾರತ ೧೯೯೯ ರಂದು ಈ ಪತ್ರಗಳನ್ನು ಪ್ರಕಟಿಸಿತು. ಈ ಪತ್ರಗಳಲ್ಲಿ ಮೊದಲನೆಯದು ಮುಂದಿದೆ.
ಸ್ವಾಮಿಗಳು ಮದ್ರಾಸ್’ನಿಂದ ಖೇತ್ರಿ ರಾಜ ಅಜಿತ್ ಸಿಂಗ್’ಗೆ ಬರೆದ ಮೊದಲ ಪತ್ರ
ಮದ್ರಾಸ್ , ೧೫ ಫೆಬ್ರವರಿ (೧೮೯೩)
ಪ್ರಭುಗಳಲ್ಲಿ (ಯುವರ್ ಹೈನೆಸ್)
ಪ್ರಭುಗಳೇ , ನಾನು ನಿಮಗೆ ಎರಡು ಸಂಗತಿಗಳನ್ನು ಹೇಳುತ್ತೇನೆ. ಒಂದು ಕುಂಬಕೋಣಂ ಎನ್ನುವ ಹಳ್ಳಿಯಲ್ಲಿ ನಾನು ನೋಡಿದ ಅಧ್ಬುತ ಸಂಗತಿ ಮತ್ತು ಇನ್ನೊಂದು ನನ್ನನ್ನು ಕುರಿತಾದದ್ದು. ಮೇಲೆ ತಿಳಿಸಿದ ಹಳ್ಳಿಯಲ್ಲಿ ಚೆಟ್ಟಿ ಜಾತಿಯ ಒಬ್ಬಾತ ಜ್ಯೋತಿಷ್ಯ ಹೇಳುತ್ತಾನೆ. ನಾನು ಇನ್ನಿಬ್ಬರು ಯುವಕರೊಡನೆ ಆತನನ್ನು ಕಾಣಲು ಹೋಗಿದ್ದೆನು. ಆತ ಮನುಷ್ಯನ ಆಲೋಚನೆಗಳೆಲ್ಲವನ್ನೂ ತಿಳಿಯಬಲ್ಲನೆಂದು ಹೇಳಲಾಗಿದ್ದಿತು. ಎರಡು ತಿಂಗಳುಗಳ ಹಿಂದೆ ನನ್ನ ತಾಯಿ ಸತ್ತಂತೆ ಕನಸು ಕಂಡು ನಾನು ಆಕೆಯ ಬಗ್ಗೆ ತಿಳಿಯಲು ಕಾತರನಾಗಿದ್ದೆ. ಎರಡನೆಯದು ನನ್ನ ಗುರು ಹೇಳಿದ್ದು ಸರಿಯೇ ಎಂದು ತಿಳಿಯುವುದಾಗಿದ್ದಿತು. ಮೂರನೆಯದು ಆತನನ್ನು ಪರೀಕ್ಷೆಗೆ ಒಳಪಡಿಸುವ ಪ್ರಶ್ನೆಯಾಗಿದ್ದು ಟಿಬೆಟ್ ಭಾಷೆಯಲ್ಲಿದ್ದ ಬೌದ್ಧ ಮಂತ್ರವಾಗಿದ್ದಿತು. ಗೋವಿಂದ ಚೆಟ್ಟಿಯಲ್ಲಿಗೆ ಹೋಗುವ ಎರಡು ದಿನ ಮೊದಲೇ ನಾನು ಇವುಗಳನ್ನು ನಿರ್ಧರಿಸಿಕೊಂಡಿದ್ದೆನು. ಇನ್ನೊಬ್ಬ ಯುವಕನ ಅತ್ತಿಗೆಗೆ ಅಪರಿಚಿತರು ಯಾರೋ ವಿಷ ನೀಡಿದ್ದು ಅದರಿಂದ ಆಕೆ ಚೇತರಿಸಿಕೊಂಡಿದ್ದಳು. ವಿಷ ನೀಡಿದವರು ಯಾರೆಂದು ತಿಳಿಯುವುದು ಆತನ ಉದ್ದೇಶವಾಗಿದ್ದಿತು.
ನಾವು ಮೊದಲಿಗೆ ಆತನನ್ನು ನೋಡಿದಾಗ ಕೆರಳುವಂತಾಗಿದ್ದನು. ಕೆಲವು ಯುರೋಪಿಯನ್ನರು ಮೈಸೂರು ದಿವಾನರೊಂದಿಗೆ ಆತನನ್ನು ಕಾಣಲು ಬಂದಿದ್ದು ಅವರಿಂದ ದೃಷ್ಟಿದೋಷ ತಾಗಿ ಜ್ವರ ಬಂದಿದ್ದು ನಾವು ೧೦ ರೂಪಾಯಿ ಕೊಡದ ಹೊರತು ನಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುವುದಿಲ್ಲವೆಂದು ತಿಳಿಸಿದನು. ನನ್ನೊಂದಿಗಿದ್ದ ಯುವಕರು ಹಣ ಕೊಡಲು ಸಿದ್ಧರಿದ್ದರು. ಆತ ಸ್ವಲ್ಪ ಹೊತ್ತು ತನ್ನ ಖಾಸಗಿ ಕೋಣೆಯೊಳಕ್ಕೆ ಹೋಗಿ ಹೊರಬಂದ ನಂತರ ಆತನ ಜ್ವರ ವಾಸಿ ಮಾಡಲು ನಾನು ಸ್ವಲ್ಪ ಬೂದಿಯನ್ನು ಕೊಟ್ಟರೆ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವುದಾಗಿ ತಿಳಿಸಿದನು. ನನಗೆ ಯಾವುದೇ ರೋಗವನ್ನು ವಾಸಿ ಮಾಡುವ ಶಕ್ತಿ ಇದೆಯೆಂದು ನಾನು ಕೊಚ್ಚಿಕೊಳ್ಳಲಾರೆ ಎಂದು ತಿಳಿಸಿದೆ. ಆಗ ಆತ ನನಗೆ ಅದೆಲ್ಲ ಬೇಕಿಲ್ಲ. ಬೂದಿಯೊಂದೇ ಸಾಕು ಎಂದನು. ಅದಕ್ಕೆ ನಾನು ಒಪ್ಪಿದೆ. ಆತ ನಮ್ಮನ್ನು ಖಾಸಗಿ ಕೋಣೆಯೊಳಕ್ಕೆ ಕರೆದೊಯ್ದು , ಖಾಲಿ ಕಾಗದದ ಚೂರಿನ ಮೇಲೆ ಏನೋ ಬರೆದು ನನ್ನೊಂದಿಗೆ ಬಂದವರಲ್ಲಿ ಒಬ್ಬರಿಗೆ ಕೊಟ್ಟು , ಅದರ ಮೇಲೆ ನಾನು ಸಹಿ ಹಾಕುವಂತೆ ಹೇಳಿ ಅದನ್ನು ನನ್ನ ಜೊತೆಗಿದ್ದ ಇನ್ನೊಬ್ಬಾತನ ಜೇಬಿನಲ್ಲಿರಿಸಿದನು. ನಂತರ ಆಗ ಎದೆಗೆ ಗುಂಡು ಹೊಡೆದಂತೆ ನೇರವಾಗಿ ‘ಸಂನ್ಯಾಸಿಯಾಗಿರುವ ನೀನು ನಿನ್ನ ತಾಯಿಯ ಬಗ್ಗೆ ಏಕೆ ಚಿಂತಿಸುತ್ತಿರುವೆ’ ಎಂದು ಕೇಳಿದನು . ಆಗ ನಾನು ‘ಮಹಾ ಶಂಕರಾಚಾರ್ಯರೇ ಅವರ ತಾಯಿಯನ್ನು ನೋಡಿಕೊಳ್ಳಬೇಕಾಯಿತು’ ಎಂದು ತಿಳಿಸಿದೆ. ಆಗ ಆತ ‘ಅದಿರಲಿ ನಿನ್ನ ತಾಯಿ ಚೆನ್ನಾಗಿದ್ದಾರೆ. ಆಕೆಯ ಹೆಸರನ್ನು ನಿನ್ನ ಸ್ನೇಹಿತನ ಬಳಿ ಇರುವ ಚೀಟಿಯಲ್ಲಿ ಬರೆದಿದ್ದೇನೆ ‘ ಎನ್ನುತ್ತ ಮುಂದುವರೆದು ‘ ನಿನ್ನ ಗುರು ತೀರಿಕೊಂಡಿದ್ದಾರೆ. ಆತ ಮಹಾ ಮಹಾನ್ ವ್ಯಕ್ತಿಯಾಗಿದ್ದರಿಂದ ಆತ ಹೇಳಿದ್ದೆಲ್ಲವನ್ನೂ ನೀನು ನಂಬಬೇಕು’ ಎನ್ನುತ್ತ ಗುರುವಿವ ವಿವರಣೆ ನೀಡತೊಡಗಿ , ‘ನಿನ್ನ ಗುರುವಿನ ಬಗ್ಗೆ ಹೆಚ್ಚಿನ ಇನ್ನೇನನ್ನು ತಿಳಿಯಬೇಕು’ ಎಂದನು. ಆಗ ನಾನು ‘ನನ್ನ ಗುರುವಿನ ಹೆಸರು ತಿಳಿಸಿದರೆ ನನಗೆ ತೃಪ್ತಿಯಾಗುತ್ತದೆ ಎಂದೆನು. ಆಗ ಆತ ‘ಯಾವ ಹೆಸರು ? ಸಂನ್ಯಾಸಿಗೆ ಹಲವು ಹೆಸರುಗಳಿರುತ್ತವೆ ‘ ಎಂದನು. ಆಗ ನಾನು ‘ ಆತ ಸಾರ್ವಜನಿಕರಿಗೆ ಯಾವ ಹೆಸರಿನಲ್ಲಿ ಗೊತ್ತಿದ್ದನೋ ಆ ಹೆಸರು’ ಎಂದು ತಿಳಿಸಿದೆನು. ಆಗ ಆತ ‘ಆ ಅದ್ಭುತವಾದ ಹೆಸರನ್ನು ನಾನು ಈಗಾಗಲೇ ಚೀಟಿಯಲ್ಲಿ ಬರೆದಿದ್ದೇನೆ. ನೀನು ಟಬೆಟ್’ನ ಒಂದು ಮಂತ್ರದ ಬಗ್ಗೆ ಕೇಳಲು ಬಯಸಿದ್ದೆ. ಅದನ್ನೂ ಚೀಟಿಯಲ್ಲಿ ಬರೆದಿದ್ದೇನೆ’ ಎಂದು ಹೇಳಿದನು. ಮತ್ತೆ ಆತ ನನಗೆ ಯಾವುದೇ ಭಾಷೆಯಲ್ಲಿ , ಯಾವುದೇ ವಿಷಯದ ಬಗ್ಗೆ ಚಿಂತಿಸಿ ಅದನ್ನು ಹೇಳಲು ತಿಳಿಸಿದನು. ನಾನು ‘ನಮೋ ಭಗವತೇ ವಾಸುದೇವಾಯ’ ಎಂದರೆ ಆತ ‘ಅದನ್ನು ಆಗಲೇ ನಿನ್ನ ಗೆಳೆಯನ ಬಳಿ ಇರುವ ಚೀಟಿಯಲ್ಲಿ ಬರೆಯಲಾಗಿದೆ. ತೆಗೆದು ನೋಡು’ ಎಂದನು. ಅಗ ! ಆತ ಹೇಳಿದ್ದೆಲ್ಲವೂ ಆ ಚೀಟಿಯಲ್ಲಿದ್ದವು. ನನ್ನ ತಾಯಿಯ ಹೆಸರು ಕೂಡ !! . ಅದರಲ್ಲಿ ನಿನ್ನ ತಾಯಿ ಇಂತಹ ಹೆಸರಿನಾಕೆ, ಆಕೆ ಚೆನ್ನಾಗಿದ್ದಾಳೆ. ಆಕೆ ಒಳ್ಳೆಯವಳು , ಪವಿತ್ರಳು , ನಿನ್ನ ಅಗಲಿಕೆ ಆಕೆಗೆ ಸಾವಿಗೆ ಸಮಾನವಾಗಿದ್ದು ಮುಂದಿನ ಎರಡು ವರ್ಷಗಳಲ್ಲಿ ಆಕೆ ಸಾಯುತ್ತಾಳೆ. ನೀನು ಆಕೆಯನ್ನು ನೋಡಬೇಕೆಂದಿದ್ದರೆ ಎರಡು ವರ್ಷಗಳ ಒಳಗೇ ಆಗಬೇಕು.’ ಎಂದು ತಿಳಿಸಿದನು.
ನಿನ್ನ ಗುರು ರಾಮಕೃಷ್ಣ ಪರಮಹಂಸ ತೀರಿಕೊಂಡಿದ್ದಾರಾದರೂ ಸೂಕ್ಷ್ಮ ಶರೀರದಲ್ಲಿ ಜೀವಿಸುತ್ತಿದ್ದು ನಿನ್ನ ಮೇಲೆ ನಿಗಾ ಇರಿಸಿದ್ದಾರೆ ಮುಂತಾಗಿ ಬರೆದಿದ್ದು ಮುಂದೆ ‘ ಲಮಲ ಕಪ್ಸೆಚುವ’ ಎಂದು ಟಿಬೆಟಿಯನ್ ಮಂತ್ರವಿದ್ದು ಕೊನೆಯಲ್ಲಿ ‘ ನಾನು ಬರೆದಿರುವುದಕ್ಕೆ ಪ್ರಮಾಣವಾಗಿ ನಾನು ನಿನಗೆ ‘ಓಂ ಭಗವತೆ ‘ ಮುಂತಾದ ಒಂದು ಮಂತ್ರವನ್ನು ಕೊಡುತ್ತೇನೆ; ಇದನ್ನು ಬರೆದ ಒಂದು ಗಂಟೆಯ ನಂತರ ನನಗೆ ಹಿಂದಿರುಗಿಸು’ ಎಂದಿದ್ದಿತು. ನನ್ನ ಗೆಳೆಯರ ವಿಚಾರದಲ್ಲಿಯೂ ಆತ ಹೇಳಿದ್ದು ನಿಜವಿದ್ದಿತು. ನಂತರ ಬಹುದೂರದ ಜಾಗಗಳಿಂದ ಜನ ಆತನಲ್ಲಿಗೆ ಬರುವುದನ್ನು ನೋಡಿದೆನು. ಆತ ಅವರಿಗೆ ನೀವು ಇಂತಹವರು , ಇಂತಹ ಜಾಗದಿಂದ , ಇಂತಹ ಕೆಲಸಕ್ಕೆ ಬಂದಿದ್ದೀರಿ’ ಎಂದು ಹೇಳುವುದನ್ನು ಕಂಡೆನು. ನನ್ನ ಆಲೋಚನೆಗಳನ್ನು ಆತ ಓದುತ್ತಿರುವಾಗ , ಅದನ್ನು ತಗ್ಗಿಸಿ ‘ ನಾನು ನಿನ್ನ ಹತ್ತಿರ ಹಣ ತೆಗೆದುಕೊಳ್ಳುವುದಿಲ್ಲ. ಆದರೆ ನೀನು ನನ್ನಿಂದ ಸ್ವಲ್ಪ ಸೇವೆ ಪಡೆಯಬೇಕು’ ಎಂದು ತಿಳಿಸಿದನು. ನಾನು ಆತನ ಅತನ ಮನೆಯಲ್ಲಿ ಸ್ವಲ್ಪ ಹಾಲನ್ನು ಕುಡಿದೆನು. ಆತ ತನ್ನ ಕುಟುಂಬವೆಲ್ಲವನ್ನೂ ಕರೆತಂದು ನನಗೆ ಅಡ್ಡ ಬೀಳಿಸಿದನು. ಆಗ ನಾನು ಆತ ತಂದ ವಿಭೂತಿಯನ್ನು ಮುಟ್ಟಿ ಆತನ ಅಧ್ಹುತ ಶಕ್ತಿಯ ರಹಸ್ಯವನ್ನು ಕೇಳಿದೆನು. ಮೊದಲಿಗೆ ಆತ ನನಗೆ ಗುಟ್ಟು ಬಿಟ್ಟುಕೊಡಲಿಲ್ಲವಾದರೂ ನಂತರ ನನ್ನ ಬಳಿ ಬಂದು ‘ ಮಹಾರಾಜ್ , ಅವು ದೇವಿಯ ನೆರವನಿಂದ ಸಿಕ್ಕಿರುವ ಮಂತ್ರ ಸಿದ್ಧಿಗಳು ‘ ಎಂದು ತಿಳಿಸಿದನು. ನಿಜವಾಗಿಯೂ ‘ ಹೊರೇಷಿಯೋ ಈ ಭೂಮಿ ಮತ್ತು ಸ್ವರ್ಗದಲ್ಲಿ ನಿನ್ನ ತತ್ತ್ವಜ್ಞಾನ ಮೀರಿದ ಅದೆಷ್ಟೋ ಸಂಗತಿಗಳಿವೆ-ಷೇಕ್ಸ್’ಸ್ಪಿಯರ್.
ಎರಡನೆಯದು ನನ್ನ ವಿಷಯ. ಈಗ ಮದ್ರಾಸಿನಲ್ಲಿ ನೆಲೆಸಿರುವ ರಾಮನಾಡಿನ ಜಮೀನ್ದಾರನಿದ್ದಾನೆ. ಆತ ನನ್ನನ್ನು ಯುರೋಪಿಗೆ ಕಳಿಸಬೇಕೆಂದಿದ್ದಾನೆ. ನಿಮಗೇ ಈಗಾಗಲೇ ಗೊತ್ತಿರುವಂತೆ ನನಗೆ ಆ ಜಾಗಗಳನ್ನು ನೋಡಬೇಕೆನ್ನುವ ತವಕದ ಮನಸ್ಸಿದೆ. ಈ ಅವಕಾಶವನ್ನು ಬಳಸಿಕೊಂಡು ನಾನು ಯುರೋಪ್ ಮತ್ತು ಅಮೆರಿಕ ಪ್ರವಾಸ ಮಾಡಬೇಕೆಂದಿದ್ದೇನೆ. ಆದರೆ ಜಗತ್ತಿನ ಮೇಲಿರುವ ನನ್ನ ಏಕೈಕ ಗೆಳೆಯರಾದ ಪ್ರಭುಗಳನ್ನು (ಹೈ ಅಪ್) ಕೇಳದೆ ನಾನು ಏನನ್ನೂ ಮಾಡುವುದಿಲ್ಲ. ಆದ್ದರಿಂದ ದಯಮಾಡಿ ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ. ಆ ಜಾಗಗಳಿಗೆ ಒಂದು ರೀತಿಯ ಪ್ರವಾಸವನ್ನು ಮಾತ್ರ ಮಾಡಬೇಕೆಂದುಕೊಂಡಿರುವೆ. ಪವಿತ್ರ ಹಾಗೂ ಉನ್ನತ ಶಕ್ತಿಯೊಂದರ ಕೈಗೊಂಬೆ ನಾನೆನ್ನುವುದು ನನಗೆ ಖಚಿತವಾಗಿದೆ. ನನಗೆ ಶಾಂತಿ ಎನ್ನುವುದಿಲ್ಲ, ಆಲಂಕಾರಿಕವಾಗಿ ಹೇಳಬೇಕೆಂದರೆ ಹಗಲು, ಇರುಳು ಬೇಯುತ್ತಿದ್ದೇನೆ. ನಾನು ಎಲ್ಲಿಗೇ ಹೋಗಲಿ ಹಗಲು ಇರುಳು ನೂರಾರು ಜನ , ಮದ್ರಾಸಿನಂತೆ ಕೆಲವು ಕಡೆ ಸಾವಿರಾರು ಜನ ನನ್ನ ಬಳಿ ಬಂದು ತಮ್ಮಲ್ಲಿರುವ ಅನುಮಾನ ಮತ್ತು ಅಪನಂಬಿಕೆಗಳನ್ನು ಪರಿಹರಿಸಿಕೊಳ್ಳುತ್ತಾರೆ ! ಆದರೆ ನಾನು-ನಾನಾದರೋ ಯಾವಾಗಲೂ ಸಂತೋಷಹೀನ !! ನಿನ್ನದೆಲ್ಲವೂ ಆಗುತ್ತದೆ !!! ಆದ್ದರಿಂದ ಈ ಶಕ್ತಿ ಯುರೋಪ್’ನಲ್ಲಿ ನಾನು ಏನು ಮಾಡಬೇಕೆಂದಿದೆಯೋ ತಿಳಿಯದು. ವಿಧೇಯನಾಗದೆ ಬೇರೆ ದಾರಿಯಿಲ್ಲ. ‘ನಿನ್ನದೆಲ್ಲವೂ ಆಗುತ್ತದೆ !! ಅದರಿಂದ ಬಿಡುಗಡೆ ಇಲ್ಲ.
ಮಗ ಮತ್ತು ವಂಶೋದ್ಧಾರಕ ಹುಟ್ಟಿರುವುದಕ್ಕೆ ನಿಮಗೆ ಶುಭಾಶಯಗಳು. ರಾಜ ಕಂದ ತನ್ನ ಸಮರ್ಥ ತಂದೆಯಂತೆಯೇ ಇದ್ದು , ಭಗವಂತ ಆತ ಮತ್ತು ಆತನನ್ನು ಹೆತ್ತವರ ಮೇಲೆ ಸದಾ ಕೃಪಾ ಕಟಾಕ್ಷವನ್ನು ಹರಿಸಲಿ. ಇನ್ನೆರಡು ಮೂರು ವಾರಗಳಲ್ಲಿ ನಾನು ಯುರೋಪಿಗೆ ಹೋಗುತ್ತೇನೆ. (ನಿರರ್ಥಕ ನಿರೀಕ್ಷೆ). ಈ ದೇಹ ಮುಂದೇನಾಗುವುದೋ ಎಂದು ಹೇಳಲಾರೆ. ನನ್ನ ತಾಯಿ ಹಸಿವಿನಿಂದ ಸಾಯದಂತೆ ನೋಡಿಕೊಳ್ಳಬೇಕೆಂದು ಪ್ರಭುಗಳಲ್ಲಿ ಕೇಳಿಕೊಳ್ಳುತ್ತೇನೆ. ಈ ಪತ್ರಕ್ಕೆ ಬೇಗನೆ ಉತ್ತರ ಸಿಕ್ಕರೆ ಋಣಿಯಾಗಿರುತ್ತೇನೆ. ಈ ಪತ್ರದ ಎರಡನೇ ಭಾಗವನ್ನು–ನಾನು ಯುರೋಪ್’ಗೆ ಹೋಗುವುದನ್ನು-ಗುಟ್ಟಾಗಿಟ್ಟಿರಬೇಕೆಂದು ಕೇಳಿಕೊಳ್ಳುತ್ತೇನೆ. ಜೀವನಪೂರ್ತಿ ದೇವರ ದಯೆ ನಿಮ್ಮ ಮೇಲಿರಲಿ. ನಿಮ್ಮದಾದ ಪ್ರಾರ್ಥನೆಯನ್ನು ಹಗಲಿರುಳು ನಿಮಗಾಗಿ ನಾನು ಮಾಡುತ್ತೇನೆ.
ಸಚ್ಚಿತ್ತಾನಂದ -–ಕೇರ್ ಆಫ್ ಎಂ.ಭಟ್ಟಾಚಾರ್ಯ ಇ.ಎಸ್.ಕ್ಯು
ಅಸಿಸ್ಟೆಂಟ್ ಅಕೌಂಟ್ ಜನರಲ್-ಸೇಮ್ಟ್ ಥೋಮ್ , ಮದ್ರಾಸ್
ಸ್ವಾಮಿಗಳು ಈ ಪತ್ರದಲ್ಲಿ ತಿಳಿಸಿದಂತೆ ರಾಮನಾಡಿನ ಜಮೀನ್ದಾರ ಭಾಸ್ಕರ ಸೇತುಪತಿ ಯುರೋಪ್’ಗೆ ಹೋಗಲ ೧೦,೦೦೦ ರೂಪಾಯಿಗಳನ್ನು ಕೊಡಲಿಲ್ಲ. ಸುಬ್ರಮಣ್ಯ ಅಯ್ಯರ್ , ಮನ್ಮಥನಾಥ ಭಟ್ಟಾಚಾರ್ಯರಂತೆ ಆತ ರೂ ೫೦೦ ಮಾತ್ರ ಕೊಟ್ಟನು. ಇದನ್ನು ಸ್ವಾಮಿಗಳು ಅಮೆರಿಕಕ್ಕೆ ಹೋದ ನಂತರ ೨೧/೨/೧೮೯೪ ರಂದು ಅಳಸಿಂಗ ಪೆರುಮಾಳ್’ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
೧೮೯೮ ರಲ್ಲಿ ಬಲರಾಮ ಬಸು ಮನೆಯಲ್ಲಿರುವಾಗ ತಮ್ಮ ಶಿಷ್ಯ ಶರತ್ ಚಂದ್ರ ಚಕ್ರವರ್ತಿಗೆ ಸ್ವಾಮಿಗಳು ಕುಂಬಕೋಣಂನಲ್ಲಿ ನಡೆದ ಈ ಅದ್ಭುತ ಸಂಗತಿಯನ್ನು ತಿಳಿಸಿದ್ದರು. ಇದು ಆತನ ದಿನಚರಿಯ ಅಧ್ಯಾಯ-೧೨ ರಲ್ಲಿದೆ. ಶರತ್ ಚಂದ್ರ ಚಕ್ರವರ್ತಿ ದಾಖಲಿಸಿರುವ ಘಟನೆಯಲ್ಲಿ ಸ್ವಾಮಿಗಳು ಖೇತ್ರಿ ಮಹಾರಾಜರಿಗೆ ಪತ್ರದಲ್ಲಿ ತಿಳಿಸದಿರುವ ಹಲವು ಸಂಗತಿಗಳಿವೆ. ಸ್ವಾಮಿಗಳಿಗೆ ಭುವನೇಶ್ವರಿ ದೇವಿ ತೀರಿಹೋದಂತೆ ಕನಸು ಬಿದ್ದು ಅವರು ಚಿಂತಿತರಾಗಿದ್ದರು. ಆಕೆಯ ಆರೋಗ್ಯ ಸರಿ ಇಲ್ಲದಿದ್ದರೆ ಅಮೆರಿಕಕ್ಕೆ ಹೋಗುವ ಯೋಜನೆಯನ್ನು ಬಿಟ್ಟುಬಿಡಬೇಕೆಂದಿದ್ದರು. ಸ್ವಾಮಿಗಳ ಕಳವಳ ಗಮನಿಸಿದ್ದ ಮನ್ಮಥನಾಥ ಭಟ್ಟಾಚಾರ್ಯ ವಿಷಯ ತಿಳಿಯಲು ಕಲ್ಕತ್ತಕ್ಕೆ ತಂತಿ ಕಳಿಸಿದ್ದನು. ಗೋವಿಂದ ಚೆಟ್ಟಿಯಲ್ಲಿಗೆ ಹೋಗುವ ಸಲಹೆ ಕೊಟ್ಟಾತ ಆತನೇ –ಆತನಿಗೆ ಗೋವಿಂದ ಚೆಟ್ಟಿಯ ವಿಷಯ ತಿಳಿಸಿದಾತ ಅಳಸಿಂಗ ಪೆರುಮಾಳ್. ಗೋವಿಂದ ಚೆಟ್ಟಿಯಲ್ಲಿಗೆ ಹೋಗುವ ಎರಡು ದಿನ ಮೊದಲೇ ಸ್ವಾಮಿಗಳು ತಮ್ಮ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಅವು ಮನ್ಮಥನಾಥ ಭಟ್ಟಾಚಾರ್ಯ ಮತ್ತು ಅಳಸಿಂಗ ಪೆರುಮಾಳ್’ಗೆ ತಿಳಿದಿದ್ದವು.
ಸ್ವಾಮಿಗಳು , ಮನ್ಮಥನಾಥ ಭಟ್ಟಾಚಾರ್ಯ , ಅಳಸಿಂಗ ಪೆರುಮಾಳ್ ಹಾಗೂ ಇನ್ನೊಬ್ಬರು ಮದ್ರಾಸ್’ನಿಂದ ಕುಂಬಕೋಣಂಗೆ ರೈಲಿನಲ್ಲಿ ಹೋಗಿದ್ದರು. ಗೋವಿಂದ ಚೆಟ್ಟಿ ಮತ್ತು ಸ್ವಾಮಿಗಳ ನಡುವೆ ಭಾಷಾಂತರಕಾರನಾಗಿ ಕೆಲಸ ಮಾಡಿದಾತ ಅಳಸಿಂಗ ಪೆರುಮಾಳ್. ಸ್ವಾಮಿಗಳಿಗೆ ಒಂದೇ ಒಂದು ತಮಿಳಿನ ಪದವೂ ಅರ್ಥವಾಗುತ್ತಿರಲಿಲ್ಲ. ಅಳಸಿಂಗ ಪೆರುಮಾಳ್, ಸ್ವಾಮಿಗಳು ಬಂದ ಉದ್ದೇಶ , ಅವರು ಕೇಳಬೇಕೆಂದಿದ್ದ ಪ್ರಶ್ನೆಗಳು ಅವುಗಳಿಗೆ ಉತ್ತರಗಳನ್ನೂ ಗೋವಿಂದಚೆಟ್ಟಿಗೆ ಸೂಚಿಸಿದ್ದನು. ಗೋವಿಂದ ಚೆಟ್ಟಿ ಆತ ಹೇಳಿದ್ದನ್ನೋ ಅಥವಾ ಇನ್ನೇನನ್ನೋ ತಾನು ಕೊಟ್ಟ ಚೀಟಿಯಲ್ಲಿ ತಮಿಳಿನಲ್ಲಿ ಗೀಚಿದ್ದನು. ತಮಿಳಿನಲ್ಲಿದ್ದ ಬರಹವನ್ನು ಓದಿ ಸ್ವಾಮಿಗಳಿಗೆ ತಿಳಿಸಿದಾತನೂ ಅಳಸಿಂಗ ಪೆರುಮಾಳನೇ. ಮನ್ಮಥನಾಥ ಭಟ್ಟಾಚಾರ್ಯ ಕಲ್ಕತ್ತೆಗೆ ತಂತಿ ಕಳಿಸಿರುವುದು ಅಳಸಿಂಗ ಪೆರುಮಾಳ್’ಗೆ ತಿಳಿದಿದ್ದಿತು. ಎಂದರೆ ಸ್ವಾಮಿಗಳು ಎಲ್ಲಿದ್ದಾರೆಂದು ಕಲ್ಕತದಲ್ಲಿದ್ದ ಸ್ವಾಮಿಗಳ ತಮ್ಮಂದಿರಿಗೆ ಮತ್ತು ತಾಯಿಗೆ ಗೊತ್ತಾಗಿದ್ದಿತು. ಭುವನೇಶ್ವರಿ ದೇವಿಗೆ ಏನಾದರೂ ತೊಂದರೆಯಾಗಿದ್ದರೆ ಅವರು ತಕ್ಷಣ ತಿಳಿಸದೆ ಬಿಡುತ್ತಿರಲಿಲ್ಲ. ಈ ಲೋಕಜ್ಞಾನವನ್ನು ಬಳಸಿಕೊಂಡು ಅಳಸಿಂಗ ಪೆರುಮಾಳ್ ಭುವನೇಶ್ವರಿ ದೇವಿ ಆರೋಗ್ಯವಾಗಿರುವಳೆಂದು ಗೋವಿಂದಚೆಟ್ಟಿಯ ಮೂಲಕ ತಿಳಿಸಿದ್ದನು. ಗೋವಿಂದಚೆಟ್ಟಿ ‘ ನಿನ್ನ ಅಗಲಿಕೆ ಆಕೆಗೆ ಸಾವಿಗೆ ಸಮಾನವಾಗಿದ್ದು ಮುಂದಿನ ಎರಡು ವರ್ಷಗಳಲ್ಲಿ ಆಕೆ ಸಾಯುತ್ತಾಳೆ. ನೀನು ಆಕೆಯನ್ನು ನೋಡಬೇಕೆಂದಿದ್ದರೆ ಎರಡು ವರ್ಷಗಳ ಒಳಗೇ ಆಗಬೇಕು’ ಎಂದು ತಿಳಿಸಿದ್ದನು. ಇದಾದ ಐದು ವರ್ಷಗಳ ನಂತರ ವಿದೇಶಗಳನ್ನು ಸುತ್ತಿ ಸ್ವಾಮಿಗಳು ಭಾರತಕ್ಕೆ ಮರಳಿ ಬಂದ ನಂತರವೂ ಭುವನೇಶ್ವರಿ ದೇವಿ ಆರೋಗ್ಯವಾಗಿ ಬದುಕಿದ್ದಳು. ಇವೆಲ್ಲವುಗಳನ್ನೂ ವೈಚಾರಿಕವಾಗಿ ,ತರ್ಕಬದ್ಧವಾಗಿ ವಿಶ್ಲೇಷಿಸಿ ನೋಡದೆ ಸ್ವಾಮಿಗಳು ಆತನಲ್ಲಿ ದೇವಿಯ ಕೃಪೆಯಿಂದ ಅದ್ಭುತ ಸಿದ್ದಿಗಳು ದಕ್ಕಿದ್ದವೆಂದು ಭ್ರಮಿಸಿದ್ದರು. ಗೋವಿಂದಚೆಟ್ಟಿ ತಮ್ಮ ವಂಶದ ಹದಿನಾಲ್ಕು ತಲೆಮಾರುಗಳ ಹೆಸರುಗಳನ್ನು ಹೇಳಿದನೆಂದು ಸ್ವಾಮಿಗಳು ಶರತ್ ಚಂದ್ರ ಚಕ್ರವರ್ತಿಗೆ ತಿಳಿಸಿದ್ದಾರೆ. ಈಗ ಲಭ್ಯವಿರುವ ನರೇಂದ್ರನಾಥ ದತ್ತ ವಂಶದ ಚರಿತ್ರೆ ಐದು ತಲೆಮಾರುಗಳಿಗಿಂತ ಹಿಂದಕ್ಕೆ ಹೋಗುವುದಿಲ್ಲ. (ರಾಮನಿಧಿ ದತ್ತ – ರಾಮ್’ಜಿ ಬನ್ –ರಾಮಸುಂದರ-ದುರ್ಗಾಪ್ರಸಾದ-ವಿಶ್ವನಾಥ-ನರೇಂದ್ರನಾಥ ದತ್ತ). ಆದ್ದರಿಂದ ಸ್ವಾಮಿಗಳು ಕಾಗೆ ಗುಬ್ಬಿ ಕಥೆಗಳನ್ನು ನಂಬುವುದರಲ್ಲಿ ಬೇರೆ ಸಾಮಾನ್ಯ ಜನರಿಗಿಂತ ಭಿನ್ನರೇನಲ್ಲ. ಮಗ ನರೇಂದ್ರನಾಥ ದತ್ತ ಸತ್ತ ನಂತರ ಒಂಬತ್ತು ವರ್ಷ ಬದುಕಿ ಭುವನೇಶ್ವರಿ ದೇವಿ ಗೋವಿಂದ ಚೆಟ್ಟಿಯ ಭವಿಷ್ಯವನ್ನು ಸುಳ್ಳು ಮಾಡಿದ್ದಳು
ಸ್ವಾಮಿಗಳು ಮದ್ರಾಸಿನಿಂದ ಖೇತ್ರಿ ರಾಜ ಅಜಿತ್ ಸಿಂಗ್’ಗೆ ಬರೆದ ಎರಡನೇ ಪತ್ರ
ಬಾಂಬೆ , ೨೨ ಮೇ (೧೮೯೩)
ಪ್ರಭುಗಳಲ್ಲಿ ( ಯುವರ್ ಹೈ ಅಪ್ )
ಖೇತ್ರಿಯಲ್ಲಿ ನಿಂತು ನದಿಯಾದ್’’ಗೆ ಸಾಗಿದ ನನ್ನ ಸುಗಮ ಪ್ರವಾಸದಲ್ಲಿ ಪ್ರತಿಯೊಂದು ಸೌಕರ್ಯ ದೊರಕಿತು ಎನ್ನುವುದರ ಹೊರತಾಗಿ ಹೇಳಿಕೊಳ್ಳುವಂತಹ ಯಾವ ವಿಶೇಷ ಸಂಗತಿಯೂ ಜರುಗಲಿಲ್ಲ. ಹರಿದಾಸ ಭಾಯಿಯವರು ಎಂದಿನಂತೆಯೇ ನನ್ನ ಬಗ್ಗೆ ಮರುಕ ಹೊಂದಿದ್ದಾರೆ. ನಾವಿಬ್ಬರೂ ಪ್ರಭುಗಳ ಬಗ್ಗೆ ಅದೆಷ್ಟು ಮಾತನಾಡಿದೆವೆಂದರೆ ಅವರು ನಿಮ್ಮನ್ನು ಕಾಣಲು ಕಾತರರಾಗಿರುವರಲ್ಲದೆ , ಬರುವ ಚಳಿಗಾಲದಲ್ಲಿ ಉತ್ತರದ ಕಡೆಗೆ ಪ್ರವಾಸ ಹೋಗುವಾಗ ನಿಮ್ಮನ್ನು ಕಂಡು ಗೌರವ ಸಲ್ಲಿಸಬೇಕೆಂದಿದ್ದಾರೆ. ೨೫ ವರ್ಷಗಳ ಕಾಲ ಕಾಥೆವಾಡಕ್ಕೆ ಸಲಹೆಗಾರರಾಗಿರುವ ಈ ವೃದ್ಧ ಮಹಾ ಅನುಭವಿಯನ್ನು ನೋಡಲು ಪ್ರಭುಗಳು ಬಯಸುತ್ತಾರೆ ಎನ್ನುವ ಧೈರ್ಯ ಮಾಡುತ್ತೇನೆ. ಸಾಂಪ್ರದಾಯಿಕ ರಾಜಕಾರಣ ಬಲ್ಲ ಈಗ ಬದುಕಿರುವ ಏಕೈಕ ವ್ಯಕ್ತಿ ಇವರು. ಈಗಿರುವ ಆಡಳಿತ ಯಂತ್ರವನ್ನು ಸಂಘಟಸಿ ಸುಸ್ಥಿತಿಯಲ್ಲಿಡಬಲ್ಲ ಸಮರ್ಥರಿವರು ; ಆದರೆ ಮುಂದಕ್ಕೆ ಒಂದಡಿ ಇಡಲೂ ಹಿಂಜರಿಯುವ ಕೊನೆಯ ವ್ಯಕ್ತಿ .
ಬಾಂಬೆಯಲ್ಲಿ ನನ್ನ ಸ್ನೇಹಿತ ರಾಮದಾಸ ಬ್ಯಾರಿಸ್ಟರ್-ಅಟ್ ಲಾ ಕಾಣಲು ಹೋಗಿದ್ದೆನು. ಆತ ಭಾವುಕ ಸ್ವಭಾವದ ಸಜ್ಜನನಾಗಿದ್ದು ಪ್ರಭುಗಳ ಗುಣಗಳನ್ನು ಮೆಚ್ಚುತ್ತಾನಲ್ಲದೆ ಇದು ನಡು ಬೇಸಿಗೆ ಅಲ್ಲದೆ ಹೋಗಿದ್ದರೆ ನಿಮ್ಮನ್ನು ನೋಡಲು ಹಾರಿ ಹೋಗುತ್ತಿದ್ದೆ ಎನ್ನುತ್ತಾನೆ. ಆತನ ತಂದೆ ೩೧ ನೇ ತಾರೀಕು ಷಿಕಾಗೊಗೆ ಹೋಗಬೇಕೆಂದಿದ್ದಾರೆ ; ಹಾಗಾದರೆ ನಾವಿಬ್ಬರೂ ಒಟ್ಟಿಗೆ ಹೋಗುತ್ತೇವೆ. ಇಂದು ನಾನು ಕೆಲವು ಸ್ಟೀಲ್ ಟ್ರಂಕ್’ಗಳನ್ನು ಕೊಳ್ಳಲು ಹೋಗಬೇಕೆಂದಿದ್ದು ಮದ್ರಾಸಿನಿಂದ ಹಣ ಬರುವುದನ್ನೇ ಕಾಯುತ್ತಿದ್ದೇನೆ. ನಾನು ಜೈಪುರದಿಂದ ತಂತಿ ಕಳಿಸಿದರೂ , ಅವರಿಗೆ ಅನುಮಾನಗಳಿದ್ದು, ನಾನು ಮತ್ತೊಮ್ಮೆ ಸಂಪರ್ಕಿಸುವುದನ್ನು ಕಾಯುತ್ತಿದ್ದರು. ನಾನು ಅವರಿಗೆ ಮತ್ತೊಮ್ಮೆ ತಂತಿ ಕಳಿಸಿದ್ದೇನೆ, ಪತ್ರ ಬರೆದಿದ್ದೇನೆ ಕೂಡ.
ದಾರಿಯಲ್ಲಿ ನಮಗೆ ಜೈಪುರದ ನೊಬೆಲ್ ಹೈಸ್ಕೂಲ್’ನ ಮುಖ್ಯೋಪಾಧ್ಯಾಯ ರಾಮನಾಥರ ಒಡನಾಟ ದೊರೆಯಿತು. ಮೊದಲ ಸಲ ನಾನು ಖೇತ್ರಿಗೆ ಬಂದಾಗ ನಮ್ಮಿಬ್ಬರ ನಡುವೆ ಸಸ್ಯಾಹಾರ ಕುರಿತಾಗಿ ವಾದ-ವಿವಾದಗಳಾಗಿದ್ದವು. ಈ ನಡುವೆ ಆತ ಕೆಲವು ಅಮೆರಿಕನ್ ಬರಹಗಾರರನ್ನು ಹಿಡಿದು , ಅವರ ವಾದಗಳಿಂದ ನನ್ನ ಮೇಲೆರಗಿದನು. ಆತನ ಲೇಖಕ ಮಾನವನ ಜೀರ್ಣಾಂಗ ವ್ಯವಸ್ಥೆ ಮತ್ತು ಹಲ್ಲು ಹಸುಗಿರುವಂತೆಯೇ ಇದ್ದು ಮನುಷ್ಯ ಸಸ್ಯಾಹಾರಿಯೆಂದು ತೃಪ್ತಿಯಾಗುವಂತೆ ವಿವರಿಸಿದ್ದಾನಂತೆ. ಆದ್ದರಿಂದ ನೈಸರ್ಗಿಕವಾಗಿ ಮನುಷ್ಯ ಸಸ್ಯಾಹಾರಿ. ಆತ ಒಳ್ಳೆಯ ವ್ಯಕ್ತಿ ಮತ್ತು ಸಜ್ಜನ. ಆದ್ದರಿಂದ ನಾನು ಆತ ಅಮೆರಿಕದಾತನ ಮೇಲಿರಿಸಿರುವ ನಂಬಿಕೆಯನ್ನು ಕದಲಿಸಲು ಇಚ್ಛಿಸಲಿಲ್ಲ. ಆದರೂ ನನ್ನ ನಾಲಿಗೆಯ ತುದಿಯ ಮೇಲೆ ನಮ್ಮ ಜೀರ್ಣಾಂಗ ವ್ಯವಸ್ಥೆ ಹಸುವಿನಂತೆ ಇದ್ದುದಾದರೆ ಅವುಗಳಂತೆ ನಾವು ಹುಲ್ಲು ತಿಂದು ಅರಗಿಸಕೊಳ್ಳಬಹುದಿತ್ತು ಎಂದು ಬಂದಿದ್ದಿತು. ಅದು ನಿಜವೇ ಆಗಿದ್ದರೆ ಬರಗಾಲದ ಸಮಯದಲ್ಲಿ ಯಥೇಚ್ಛವಾಗಿ ಸಿಗುವ ತಮ್ಮ ನೈಸರ್ಗಿಕ ಆಹಾರ ಹುಲ್ಲನ್ನು ತಿಂದು ಬದುಕದೆ , ಹಸಿದು ಸಾಯುವ ಭಾರತೀಯರಷ್ಟು ಮೂರ್ಖರು ಇನ್ನೊಬ್ಬರಿಲ್ಲ . ಪಕ್ಕದ ಗುಡ್ಡಕ್ಕೆ ಹೋಗಿ ಬೇಕಾದಷ್ಟು ಹುಲ್ಲನ್ನು ತಂದು ಹೊಟ್ಟೆ ತುಂಬುವಷ್ಟು ನೀಡದೆ , ಬಗೆಬಗೆಯಲ್ಲಿ ಅದಕ್ಕೆ ಹೆಣಗುವ ಆಳುಗಳಷ್ಟು ಮೂರ್ಖರು ಮತ್ತೊಬ್ಬರಿಲ್ಲ .!! ಅಮೆರಿಕದ ಅದ್ಭುತ ಸಂಶೋಧನೆ !!! ಅಂತಹ ಮಾನವ ಹಸುಗಳ ಪವಿತ್ರ ಲದ್ದಿ ಅಮೆರಿಕದ ಆ ಲೇಖಕ ಮತ್ತು ಆತನ ಭಾರತೀಯ ಅನುಯಾಯಿಗಳಿಗೆ ಉಪಯೋಗವಾಗಬಹುದು ಎಂದು ಭಾವಿಸುತ್ತೇನೆ. ಹಾಗೆ ಆಗಲಿ- ಮಾನವ-ಹಸು ಸಿಧ್ಧಾಂತಕ್ಕೆ.
ಪ್ರಭುಗಳ ಮುಂದಿರಿಸಲು ಹೆಚ್ಚಿನದನೂ ಇಲ್ಲವಾಗಿ ಇಲ್ಲಿಗೆ ಕೊನೆಗೊಳಿಸುತ್ತೇನೆಂದು ಬೇಡಿಕೊಳ್ಳುತ್ತೇನೆ.
ಎಲ್ಲ ಒಳಿತನ್ನು ಕೊಡುವಾತ ತನ್ನ ಅತ್ಯುತ್ತಮ ಆಶೀರ್ವಾದಗಳನ್ನು ನಿಮ್ಮ ಮತ್ತು ನಿಮ್ಮವರ ಮೇಲಿರಿಸಲಿ.
ನಿಮ್ಮ ವಿಧೇಯನಾಗಿ ಉಳಿದಿರುವ-
ವಿವೇಕಾನಂದ
ಸ್ವಾಮಿಗಳು ಸ್ನೇಹಿತ ಮನ್ಮಥನಾಥ ಭಟ್ಟಾಚಾರ್ಯನಿಗೆ ಬರೆದ ಪತ್ರ
೫/೯/೧೮೯೪ ರಂದು ಸ್ವಾಮಿಗಳು ಮನ್ಮಥನಾಥ ಭಟ್ಟಾಚಾರ್ಯನಿಗೆ ಬಂಗಾಳಿಯಲ್ಲಿ ಬರೆದ ಒಂದು ಸುದೀರ್ಘ ಪತ್ರ ಕುತೂಹಲಕಾರಿಯಾಗಿದೆ.
‘ನಿನ್ನ ಪ್ರೀತಿಪೂರ್ವಕ ಪತ್ರವನ್ನು ಓದಿ ಸಂತೋಷವಾಯಿತು. ಸಾಧ್ಯವಾದಷ್ಟು ಬೇಗ ಹೊಲಿಗೆ ಯಂತ್ರದ ಬಗ್ಗೆ ವಿಚಾರಿಸಿ ನಿನಗೆ ತಿಳಿಸುತ್ತೇನೆ. ನಾನೀಗ ಸಮುದ್ರ ತೀರದ ಒಂದು ಹಳ್ಳಿ ಅನ್ನಿಸ್ಕ್ವಾಮ್’ನಲ್ಲಿ ವಿಶ್ರಾಂತಿಯಲ್ಲಿದ್ದೇನೆ ; ಯಂತ್ರದ ಬಗ್ಗೆ ವಿಚಾರಿಸಲು ನಗರಕ್ಕೆ ಹೋಗುತ್ತೇನೆ. ಬೇಸಿಗೆಯಲ್ಲಿ ಕಡಲಿನ ತೀರದ ಜಾಗಗಳು ಜನರಿಂದ ಕಿಕ್ಕಿರಿದಿರುತ್ತವೆ.; ಕೆಲವರು ಸ್ನಾನಕ್ಕೆ , ಕೆಲವರು ವಿಶ್ರಾಂತಿಗೆ ಮತ್ತೆ ಕೆಲವರು ಗಂಡಂದಿರ ಬೇಟೆಗೆ ಬರುತ್ತಾರೆ.
ಈ ದೇಶದಲ್ಲಿ ಬಹಳ ಔಪಚಾರಿಕ ನಡವಳಿಕೆಗಳಿವೆ. ಹೆಂಗಸರ ಉಪಸ್ಥಿತಿಯಲ್ಲಿ ಗಂಡಸರು ಕುತ್ತಿಗೆಯಿಂದ ತಲೆಯವರೆಗೆ ಮೈಮುಚ್ಚಿಕೊಂಡಿರಬೇಕು. ದೇಹದ ನೈಸರ್ಗಿಕ ಕರೆಗಳ ಬಗ್ಗೆ ಹೆಚ್ಚು ಹೇಳುವಂತಿಲ್ಲ ; ಕಕ್ಕಸಿಗೆ ಹೋಗುವುದೂ ಗೊತ್ತಾಗದಷ್ಟು ಜಾಗರೂಕತೆಯಿಂದ ಇರಬೇಕು. ಆದರೆ ಈ ದೇಶದಲ್ಲಿ ಕರವಸ್ತ್ರದೊಳಗೆ ಸಾವಿರ ಸಲ ಸೀನಿದರೂ ನಡೆಯುತ್ತದೆ ; ಆದರೆ ತೇಗುವುದು ಅತ್ಯಂತ ಅನಾಗರಿಕ ಲಕ್ಷಣ ಎನಿಸುತ್ತದೆ. ಇಲ್ಲಿನ ಹೆಂಗಸರು ಸೊಂಟದ ಮೇಲಿನ ದೇಹದ ಭಾಗವನ್ನು ಪ್ರದರ್ಶಿಸಲು ಅಳುಕುವುದಿಲ್ಲ. ಕುತ್ತಿಗೆಯ ಕೆಳಗೆ ಆಳ ಸೀಳಿರುವ ಗೌನ್’ಗಳನ್ನು ನೀನು ನೋಡಿರಬಹುದು. ಆದರೆ ಬರಿಗಾಲಲ್ಲಿ ಹೋಗುವುದು ಬತ್ತಲಾಗಿ ಹೋದಂತೆ ಎಂದು ಭಾವಿಸಲಾಗುತ್ತದೆ. ನಮ್ಮದು ಆತ್ಮ ಚಿಂತನೆಯಾದರೆ ಅವರದ್ದು ದೇಹದ ಚಿಂತನೆ. ದೇಹವನ್ನು ಶುದ್ಧಿ ಮಾಡಿಕೊಳ್ಳುವುದಕ್ಕೆ , ಸಿಂಗರಿಸಿಕೊಳ್ಳುವುದಕ್ಕೆ ಕೊನೆಯೇ ಇಲ್ಲ. ಇವುಗಳನ್ನು ಮಾಡದವರಿಗೆ ಸಮಾಜದಲ್ಲಿ ಸ್ಥಾನವಿಲ್ಲ.
ಬೆರಣಿಯನ್ನು ಬಳಸಿ ಅಡುಗೆ ಮಾಡುವ ವಿಧಾನ , ನೆಲದ ಮೇಲೆ ಕುಳಿತು ಉಣ್ಣುವ ನಮ್ಮ ಪದ್ದತಿಯನ್ನು ಅವರು ಹಂದಿಗಳು ತಿನ್ನುವಂತೆ ಎಂದು ಪರಿಗಣಿಸುತ್ತಾರೆ. ಹಿಂದೂಗಳಿಗೆ ಹೇಸಿಗೆಯ ಪ್ರಜ್ಞೆಯಿಲ್ಲ , ಹಂದಿಗಳಂತೆ ಸೆಗಣಿ ತಿನ್ನುತ್ತಾರೆ ಎನ್ನುತ್ತಾರೆ. ‘ಸೆಗಣಿ’ ಪದವೇ ಇಂಗ್ಲಿಷ್’ನಲ್ಲಿ ನಿಷಿದ್ಧ. ಇದೇ ಸಮಯದಲ್ಲಿ ಜನ ತೊಳೆಯುವ ಚಿಂತೆಯನ್ನೇ ಮಾಡದೆ ಒಂದೇ ಲೋಟದಲ್ಲಿ ಹಲವು ಜನ ಕಚ್ಚಿ ಕುಡಿಯುತ್ತಾರೆ , ಅಡುಗೆಗೆ ಮುಂಚೆ ಪಾತ್ರೆಗಳನ್ನು ತೊಳೆಯಬೇಕೆಂಬ ನಿಯಮವನ್ನು ಪಾಲಿಸುವುದು ಅಪರೂಪ. ಆದರೆ ಅಡುಗೆಯವಳ ಬಟ್ಟೆ ಸ್ವಲ್ಪ ಕೊಳೆಯಾಗಿದ್ದರೂ ಆಕೆಯನ್ನು ಹೊರದಬ್ಬುತ್ತಾರೆ. ಮೇಜಿನ ಮೇಲಿರುವ ಎಲ್ಲ ಉಪಕರಣಗಳು ಶುದ್ಧ, ತಾಜ. ಅವರು ಜಗತ್ತಿನಲ್ಲಿಯೇ ಅತಿ ಶ್ರೀಮಂತರು ; ಅವರ ಆಮೋದ ಪ್ರಮೋದ ವಿಲಾಸಗಳು ಬಿಕ್ಷುಕನ ವರ್ಣನೆಗಳು……..
ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಲು ಹೆತ್ತವರು ಹೆಣಗಿದರೆ ಇಲ್ಲಿ ಹೆತ್ತವರ ಬದಲು ಕನ್ಯೆಯರು ಹೆಣಗುತ್ತಾರೆ –ಇಲ್ಲಿ ಗಂಡನನ್ನು ಹುಡುಕಿಕೊಳ್ಳುವ ಜವಾಬ್ದಾರಿ ಹುಡುಗಿಯದು. ಅವರ ಈ ಎಲ್ಲ ಈ ಪ್ರಕರಣಗಳಲ್ಲಿ ನಾನು ಬಹು ಸನಿಹದ ಭಾಗಿ. ಆದ್ದರಿಂದ ಅವರು ಆಡುವ ಆಟಗಳನ್ನು ನೋಡಿದ್ದೇನೆ ಮತ್ತು ಈಗಲೂ ನೋಡುತ್ತಿದ್ದೇನೆ. ಅದಕ್ಕಾಗಿ ಅವರು ಔತಣಗಳನ್ನು ಏರ್ಪಡಿಸುವುದು , ಸಂಗೀತ ಗೋಷ್ಟಿಗಳಿಗೆ ಹೋಗುವುದು , ನರ್ತಿಸುವುದು , ನೀರಿನ ತಾಣಗಳಲ್ಲಿ ಅಲೆಯುವುದು ಎಲ್ಲವದೂ ಸರಿ. ಹದಿಹರೆಯದ ಹೆಣ್ಣುಗಳು ಗಂಡನ್ನು ಹೇಗೆ ಬಲೆಗೆ ಹಾಕಿಕೊಳ್ಳಬೇಕು ಎನ್ನುವ ತಂತ್ರಗಾರಿಕೆಯಲ್ಲಿರುತ್ತಾರೆ. ಹುಡುಗರನ್ನು ಸುತ್ತುತ್ತಾರೆ. ಇನ್ನೊಂದು ಬದಿಯಲ್ಲಿ ಹುಡುಗರು ಬಹಳ ಜಾಗರೂಕರಾಗಿರುತ್ತಾರೆ. ಹುಡುಗಿಯರೊಂದಿಗೆ ಬೆರೆಯುತ್ತಾರೆ , ಪ್ರಣಯ ಚೇಷ್ಟೆಗಳನ್ನು ಮಾಡುತ್ತಾರೆ. ಬಂಧನಕ್ಕೆ ಒಳಗಾಗುವ ಸಮಯ ಬಂದಾಗ ತಪ್ಪಿಸಿಕೊಳ್ಳುತ್ತಾರೆ. ಹುಡುಗರು ಹುಡುಗಿಯರನ್ನು ತಮಗಿಂತ ಶ್ರೇಷ್ಟರೆಂದು ಪರಿಗಣಿಸುತ್ತಾರೆ , ಗೌರವಿಸುತ್ತಾರೆ, ಅಡಿಯಾಳುಗಳಾಗುತ್ತಾರೆ. ; ಹುಡುಗಿಯರು ಅವರನ್ನು ತಲುಪಲು ಕೈಚಾಚಿದ ತಕ್ಷಣ ಸಿಗದಂತೆ ಪರಾರಿಯಾಗತ್ತಾರೆ. ಇಂತಹ ಹಲವು ಯತ್ನಗಳ ನಂತರ ಹುಡುಗಿ ಒಬ್ಬ ಹುಡುಗನನ್ನು ಹಿಡಿದುಹಾಕುತ್ತಾಳೆ. ಹುಡುಗಿ ಶ್ರೀಮಂತಳಾಗಿದ್ದಾರೆ ಹಲವು ಹುಡುಗರು ಆಕೆಯ ಸುತ್ತ ಕುಣಿಯುತ್ತಾರೆ. ಬಡಹುಡುಗಿಯರ ಸ್ಥಿತಿ ಬಹಳ ಕಷ್ಟ. ಬಡ ಹುಡುಗಿ ಅಪ್ರತಿಮ ಸುಂದರಿಯಾಗಿದ್ದರೆ ಆಕೆಗೆ ಗಂಡು ಸಿಕ್ಕಬಹುದು-ಇಲ್ಲದಿದ್ದರೆ ಬಾಳೆಲ್ಲ ಕಾಯಬೇಕು. ನಮ್ಮ ದೇಶದಲ್ಲಿ ಇರುವಂತೆ ಇಲ್ಲಿಯೂ ಸಾವಿರ ಮದುವೆಗಳಲ್ಲಿ ಒಂದು ಮದುವೆ ಮಾತ್ರ ಪರಸ್ಪರ ಪ್ರೇಮಾಂಕುರವಾಗಿ ನಡೆಯುತ್ತದೆ.; ಉಳಿದವೆಲ್ಲ ಹಣದ ಮೇಲೆ ನಿಂತಿವೆ. ಇದಾದ ನಂತರ ಜಗಳ ಮತ್ತು ಕೊನೆಗೆ ತೊಲಗು ಎಂದರೆ ವಿಚ್ಛೇದನ. ನಮ್ಮಲ್ಲಿ ಇದಿಲ್ಲ - ನೇಣಿಗೆ ಮೊರೆಹೋಗುವುದೊಂದೆ ಕೊನೆಯ ಮಾರ್ಗ. ಎಲ್ಲ ದೇಶಗಳಲ್ಲಿಯೂ ಇದು ಹೀಗೆಯೇ. ಇಲ್ಲಿ ಮಾತ್ರ ಹುಡುಗಿಯರು ತಾವೇ ಎಲ್ಲ ವಿಷಯಗಳನ್ನು ನಿಭಾಯಿಸುತ್ತಾರೆ ; ನಮ್ಮ ದೇಶದಲ್ಲಿ ಹೆತ್ತವರ ನೆರವು ಸಿಗುತ್ತದೆ. ….ಎರಡರಲ್ಲೂ ಫಲಿತಾಂಶ ಒಂದೇ ..’
ಇತ್ತೀಚಿನ ದಿನಗಳಲ್ಲಿ ಅಮೆರಿಕದ ಹುಡುಗಿಯರು ಮದುವೆಯಾಗುತ್ತಿಲ್ಲ. ಅಂತರ್ಯುದ್ಧದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಗಂಡಸರು ಕೊಲ್ಲಲ್ಪಟ್ಟ ನಂತರ ಹೆಂಗಸರು ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳತೊಡಗಿದರು.ಆಗಿನಿಂದ ತಾವು ಪಡೆದ ಸ್ವಾತಂತ್ರವನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲ. ಅವರು ಸ್ವಂತ ಗಳಿಸಿ ಜೀವನ ಮಾಡುವುದರಿಂದ ಮದುವೆಯಲ್ಲಿ ಅರ್ಥವಿಲ್ಲ , ನಾವು ನಿಜವಾಗಿಯೂ ಪ್ರೇಮದಲ್ಲಿ ಬಿದ್ದರೆ ಆಗ ಮದುವೆಯಾಗುತ್ತೇವೆ. ಹಾಗಲ್ಲದಿದ್ದರೆ ನಮ್ಮ ಜೀವನವನ್ನು ನಾವು ಸಾಗಿಸುತ್ತೇವೆ ಎನ್ನುತ್ತಾರೆ. ತಂದೆ ಕೋಟ್ಯಧಿಪತಿಯಾದರೂ ಮದುವೆಗೆ ಮುಂಚೆ ಮಗ ಗಳಿಸಲೇ ಬೇಕು. ತಂದೆಯ ಗಳಿಕೆಯ ಮೇಲೆಯೇ ಒಬ್ಬಾತ ಮದುವೆಯಾಲಾಗದು. ಅದನ್ನೇ ಈಗ ಹುಡುಗಿಯರು ಬಯಸುತ್ತಿದ್ದಾರೆ. ಮದುವೆಯಾದ ತಕ್ಷಣ ಮಗ ತನ್ನ ಕುಟುಂಬಕ್ಕೆ ಅಪರಿಚಿತನಾದರೆ ಮಗಳು ಮದುವೆಯಾಗಿ ಗಂಡನನ್ನು ಹೆತ್ತವರ ಮನೆಗೆ ಕರೆತರುತ್ತಾಳೆ. ಗಂಡಸರು ಹೆಂಡತಿಯ ಹೆತ್ತವರನ್ನು ಕಾಣಲು ಹತ್ತರು ಬಾರಿ ಹೋಗುತ್ತಾರಾದರೂ ಸ್ವಂತ ತಂದೆ ತಾಯಿಗಳನ್ನು ನೋಡಲು ಹೋಗುವುದು ಅಪರೂಪ. ಅತ್ತೆ ತಮ್ಮ ಕುತ್ತಿಗೆ ಏರಿಯಾಳೆಂಬ ಭಯ ಅಳಿಯಂದಿರಿಗೆ.
ಈ ದೇಶದಲ್ಲಿ ಎಲ್ಲೆಲ್ಲೂ ಸಂಪತ್ತಿನ ಹೊಳೆ, ಚೆಲುವಿನ ಅಲೆ ಹಾಗೂ ಜ್ಞಾನದ ಸೆಲೆ ಹರಿದಾಡುತ್ತಿವೆ. ದೇಶ ಆರೋಗ್ಯಮಯವಾಗಿದ್ದು , ಈ ಜೀವನವನ್ನು ಹೇಗೆ ಅನುಭವಿಸಬೇಕೆಂದು ಬಲ್ಲವರು ಇವರು ,…. ಯುರೋಪಿನ ರಾಜಕುಮಾರರು ಬಡತನ ತಟ್ಟಿದರೆ ಮದುವೆಯಾಗಲು ಇಲ್ಲಿಗೆ ಬರುತ್ತಾರೆ. ಸಾಮಾನ್ಯ ಅಮೆರಿಕನ್’ಗೆ ಇದು ಇಷ್ಟವಿಲ್ಲ ; ಆದರೆ ಕೆಲ ಶ್ರೀಮಂತ , ಚೆಲುವೆಯರು ಸ್ಥಾನ , ಹೆಸರಿಗೆ ಬಿದ್ದು ಇದಕ್ಕೆ ಒಪ್ಪುತ್ತಾರೆ. ಈ ದೇಶದ ಗಂಡಂದಿರು ಹೆಂಡದಿರ ಗುಲಾಮರು ; ಆದರೆ ಯುರೋಪಿಯನ್ ಹೆಂಗಸರು ಗಂಡಂದಿರ ಗುಲಾಮರು-ಇದನ್ನು ಅಮೆರಿಕದ ಹೆಂಗಸರು ಮೆಚ್ಚುವುದಿಲ್ಲ. ಯಾವುದೇ ವಿಚಾರವಿರಲಿ ಗಂಡಸರು ‘ಆಯಿತು, ಆಗಲಿ ಮ್ಯಾಡಂ ‘ ಎನ್ನುವುದೊಂದೇ , ಇಲ್ಲದಿದ್ದರೆ ಹೆಂಗಸರಿಗೆ ಇತರರೆದುರು ಮುಖಭಂಗವಾದಂತೆ.
ಅಮೆರಿಕದ ಹೆಂಗಸರು ಭಾವುಕರು ಹಾಗೂ ಅವರಿಗೆ ಪ್ರಣಯದಾಟದ ಹುಚ್ಚು. ಪ್ರಣಯದ ಯಾವ ಭಾವನೆಯೂ ಇಲ್ಲದ ನಾನೊಬ್ಬ ವಿಚಿತ್ರ ಪ್ರಾಣಿ , ಆದ್ದರಿಂದ ಅಂತಹ ಯಾವ ಭಾವನೆಯನ್ನೂ ಅವರು ನನಗೆ ತೋರಿಸಲಾಗುತ್ತಿಲ್ಲ. ಅವರು ನನಗೆ ಬಹಳ ಗೌರವ ನೀಡುತ್ತಾರೆ. ಅವರು ನನ್ನನ್ನು ‘ಅಪ್ಪ’ ‘ಅಣ್ಣ’ ಎಂದು ಕರೆಯುವಂತೆ ನೋಡಿಕೊಳ್ಳುತ್ತೇನೆ. ಇದರ ಹೊರತು ಬೇರೆ ಯಾವ ಭಾವನೆಯಿಂದಲೂ ನನ್ನ ಹತ್ತಿರ ಬರಲು ಅವಕಾಶ ಕೊಟ್ಟಿಲ್ಲ. ಕ್ರಮೇಣ ಎಲ್ಲವೂ ನೇರವಾಗುವುದು. ಈ ದೇಶದ ಕ್ರೈಸ್ತ ಮಿನಿಸ್ಟರ್’ಗಳು ಪಾಪಿಗಳನ್ನು ಕದಲಿಗೆ ಎಸೆಯಲು ಕಾತುರರಾಗಿದ್ದಾರೆ. ಅವರಲ್ಲಿ ಕೆಲವರು ಬಹಳ ಒಳ್ಳೆಯವರು. ಹೇಗಾದರೂ ……. ಈ ದೇಶದ ಹೆಂಗಸರಲ್ಲಿ ನನ್ನ ಬಗ್ಗೆ ಬಹಳ ಗೌರವವಿದೆ. …. ಈ ದೇಶದ ಹೆಂಗಸರ ಬಗ್ಗೆ ನನಗೆ ಬಹಳ ಆದರವಿದೆ. ಈವರೆಗೆ ಮದುವೆಯಾಗದ ಹುಡುಗಿಯರಲ್ಲಿ ಸಚ್ಛಾರಿತ್ರಳಲ್ಲದ ಒಬ್ಬ ಹುಡುಗಿಯನ್ನೂ ನಾನು ನೋಡಿಲ್ಲ. ಮದುವೆಯಾದವರು ಮತ್ತು ವಿಧವೆಯರು ಮಾತ್ರ ಚಾರಿತ್ರ್ಯಹೀನರಾಗಬಹುದು. ಮದುವೆಯಾಗದ ಹುಡುಗಿಯರ ಭವಿಷ್ಯ ಉಜ್ಜ್ವಲವಾಗಿದೆ. ಅವರ ಪ್ರಣಯಾಸಕ್ತ ಸ್ವಭಾವ ಎನ್ನುವ ಸಣ್ಣ ದೋಷವನ್ನು ಬಿಟ್ಟರೆ ನಮ್ಮ ‘ಕೋತಿ’ಗಳು ಅವರ ಸನಿಹ ಬರಲು ಅರ್ಹರಲ್ಲ. ಸೊರಗಿರುವ ಒಣಗಿದ ಹಣ್ಣಿನಂತಿರುವ ಭಾರತದಲ್ಲಿ ನೀನು ಕಾಣುವ ಆ ಪಾಶ್ಚಾತ್ಯ ಹೆಂಗಸರು ಇಂಗ್ಲಿಷರು. ಯುರೋಪಿನಲ್ಲಿ ಇಂಗ್ಲಿಷರು ಕುರೂಪಿ ಜನಾಂಗ. ಅಮೆರಿಕದಲ್ಲಿ ಯುರೋಪಿನ ಅತ್ಯುತ್ತಮ ಜನಾಂಗಗಳ ರಕ್ತ ಬೆರೆತಿವೆ. ಆದ್ದರಿಂದ ಅಮೆರಿಕ ಹೆಂಗಸರು ಅಪ್ರತಿಮ ಸುಂದರಿಯರು. ಅಬ್ಬಾ ಅವರು ತಮ್ಮ ಸೌಂದರ್ಯವನ್ನು ಹೇಗೆ ಕಾದುಕೊಳ್ಳುತ್ತಾರೆ ! ಹೆತ್ತ ನಂತರವೂ ಹೆಣ್ಣು ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಬಲ್ಲಳೇ ?........ ಹತ್ತು ವರ್ಷಗಳಾದ ನಂತರ ಪ್ರತಿ ಗಂಟೆಯೂ ? ಎಂತಹ ಭಯಂಕರ ಪಾಪ !….ನಮ್ಮ ದೇಶದ ಅತ್ಯಂತ ಸುಂದರಿಯೂ ಇವರ ಮುಂದೆ ಕರಿಗೂಬೆಯಂತೆ ಕಾಣತ್ತಾಳೆ. ಆದರೂ ಪಂಜಾಬಿನ ಹೆಣ್ಣುಗಳಿಗೆ ಅತ್ಯುತ್ತಮ ಮೈಮಾಟವಿದೆಯೆಂದು ಹೇಳಬಹುದು. …
ಅದೆಷ್ಟೋ ಅಮೆರಿಕದ ಹೆಂಗಸರು ಅತ್ಯುತ್ತಮ ಶಿಕ್ಷಣ ಪಡೆದಿದ್ದು ಅವರೆದುರು ಪಂಡಿತ ಪ್ರಾಧ್ಯಾಪಕರೇ ನಾಚಿಕೆಪಡುಬೇಕಾಗಿದೆ; ಅಷ್ಟೇ ಅಲ್ಲ ಅವರು (ತಮ್ಮನ್ನು ಕುರಿತಾಗಿ) ಇತರರ ಅಭಿಪ್ರಾಯಗಳನ್ನು ಲಕ್ಷಿಸುವುದೇ ಇಲ್ಲ. (ಅಮೆರಿಕ ಹೆಂಗಸರ) ಅವರ ಅನುಕಂಪ , ಚಿಂತನೆ, ಕ್ರಿಯಾಶೀಲತೆಗಳು ಅದೆಷ್ಟು ಉದಾತ್ತ. ! ಈ ದೇಶದ ಗಂಡಸೊಬ್ಬನು ಭಾರತಕ್ಕೆ ಭೇಟಿ ನೀಡಿದರೆ ಯಾರೊಬ್ಬರೂ ಆತನನ್ನು ಮುಟ್ಟುವುದಿಲ್ಲ ಎನ್ನುವ ಬಗ್ಗೆ ಸ್ವಲ್ಪ ಚಿಂತಿಸು ; ಅದರೆ ಇಲ್ಲಿ ನಾನು ಅತ್ಯಂತ ಶ್ರೇಷ್ಟರ ಮನೆಗಳಲ್ಲಿಯೂ ಅವರ ಸ್ವಂತ ಮಗನಂತೆ ನಾನು ಬೇಕಾದುದನ್ನು ಮಾಡುವ ಸ್ವಾತಂತ್ರವಿದೆ ! ನಾನು ಮಗುವಿದ್ದಂತೆ ; ಅವರ ಹೆಂಗಸರು ನನಗಾಗಿ ಕೊಳ್ಳುತ್ತಾರೆ, ಸಂದೇಶಗಳನ್ನು ಒಯ್ಯುತ್ತಾರೆ. ಉದಾಹರಣೆಗೆ ನಾನು ಒಬ್ಬ ಹುಡುಗಿಗೆ ಹೊಲಿಗೆ ಯಂತ್ರದ ಬಗ್ಗೆ ಮಾಹಿತಿ ಕೊಡಲು ಬರೆದಿದ್ದೆ. ಅದಕ್ಕೆ ಆಕೆ ಎಲ್ಲ ಮಾಹಿತಿಯನ್ನೂ ಪಡೆದು ನನಗೆ ತಿಳಿಸುತ್ತಾಳೆ. ಹಾಗೆಯೇ ಖೇತ್ರಿ ರಾಜನಿಗೆ ಒಂದು ಫೋನೋಗ್ರಾಫ್ ಕಳಿಸಲಾಯಿತು ; ಹುಡುಗಿಯರೇ ಅದನ್ನೆಲ್ಲ ಅತ್ಯುತ್ತ್ಮವಾಗಿ ನಿರ್ವಹಿಸಿದರು . ದೇವರೇ ! ದೇವರೇ ! ಅದು ಸ್ವರ್ಗ ಮತ್ತು ನರಕಗಳ ನಡುವಿನ ವ್ಯತ್ಯಾಸ. ಅವರು ಚೆಲುವಿನಲ್ಲಿ ಲಕ್ಶ್ಮಿಯರು , ಕೌಶಲ ಮಾತು ಸಾಧನೆಯಲ್ಲಿ ಸರಸ್ವತಿಯರು. ಇದು ಪುಸ್ತಕ ಓದುವುದರಿಂದ ಬರುವಂತಹುದಲ್ಲ. ಈ ಜಗತ್ತು ಹೇಗಿದೆ ಎಂದು ನೋಡಲು ಕೆಲ ಗಂಡಸು , ಹೆಂಗಸರನ್ನು ನೀನು ಕಳಿಸಲು ಸಾಧ್ಯವೇ ? ಆಗರೆ ದೇಶ ಎಚ್ಚೆತ್ತುಕೊಳ್ಳುತ್ತದೆ-ಪುಸ್ತಕದ ಓದಿನಿಂದಲ್ಲ. ಇಲ್ಲಿನ ಗಂಡಸರು ಸಂಪತ್ತು ಗಳಿಸುವುದರಲ್ಲಿ ಬಹಳ ಜಾಣರು. ಬೇರೆಯವರು ಧೂಳನ್ನೂ ಕಾಣದಿದ್ದಲ್ಲಿ ಅವರು ಹೊನ್ನನ್ನು ಕಾಣುತ್ತಾರೆ.
ಪತ್ರಗಳು ಸರಿಯಾದ ಸಮಯಕ್ಕೆ ಸುಸ್ಥಿತಿಯಲ್ಲಿ ತಲುಪಿದವು.; ಅವುಗಳ ಬಗ್ಗೆ ಯಾವ ತಕರಾರು ಇಲ್ಲ. ಎದುರಾಳಿಯನ್ನು ಸುಮ್ಮನಿರಿಸಲಾಗಿದೆ. ಅಪರಿಚಿತನಾದ ನನ್ನಂತಹ ತರುಣ ತಮ್ಮ ಬೆಳೆದ ಹೆಣ್ಣು ಮಕ್ಕಳೊಂದಿಗೆ ಜೀವಿಸಲು ಅವಕಾಶ ಮಾಡಿಕೊಟ್ಟಿರುವುದನ್ನು ನೋಡು. ಅದೇ ವೆಳೆಗೆ ನಮ್ಮ ದೇಶದವನೇ ಆದ ಮಜುಂದಾರ ನಾನು ಧೂರ್ತನೆಂದು ಹೇಳುತ್ತಾನಾದರೂ ಅವರು ಅದಕ್ಕೆ ಮಾನ್ಯತೆ ನೀಡಿಲ್ಲ. ! ಅವರೆಷ್ಟು ಉದಾತ್ತರು , ಅದೆಷ್ಟು ಕರುಣಾಳುಗಳು ! ನೂರು ಜನ್ಮವಾದರೂ ಈ ಋಣವನ್ನು ನಾನು ತೀರಿಸಲಾರೆ. ನಾನು ಅಮೆರಿಕದ ಹೆಂಗಸರ ಸಾಕು ಮಗನಿದ್ದಂತೆ. ಅವರೇ ನನ್ನ ನಿಜವಾದ ತಾಯಿಯರು. ಅವರಲ್ಲದೆ ಈ ಜಗತ್ತಿನಲ್ಲಿ ಬೇರೆ ಯಾರು ಏಳಿಗೆ ಹೊಂದಬಲ್ಲರು ? ಕೆಲ ದಿನಗಳ ಹಿಂದೆ ಗ್ರೀನೇಕರ್ ಎನ್ನುವ ಸ್ಥಳದಲ್ಲಿ ಬೌದ್ಧಿಕ ವಲಯದ ಹಲವಾರು ಗಂಡಸರು , ಹೆಂಗಸರು ಸೇರಿದ್ದರು. ಸುಮಾರು ಎರಡು ತಿಂಗಳು (ವಾರ) ನಾನು ಅಲ್ಲಿದ್ದೆನು. ಪ್ರತಿ ದಿನ ನಾನು ಹಿಂದೂ ಶೈಲಿಯಲ್ಲಿ ಮರದ ಕೆಳಗೆ ಕುಳಿತುಕೊಳ್ಳುತ್ತಿದ್ದೆನು ,ನನ್ನ ಅನುಯಾಯಿಗಳು , ಶಿಷ್ಯರು ಹುಲ್ಲಿನ ಮೇಲೆ ನನ್ನ ಸುತ್ತ ಕುಳಿತುಕೊಳ್ಳುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಅವರಿಗೆ ಭೋಧಿಸುತ್ತಿದ್ದೆ-ಅವರೆಷ್ಟು ಪ್ರಾಮಾಣಿಕರಾಗಿದ್ದರು ! ಇಡೀ ದೇಶಕ್ಕೆ ನಾನು ಗೊತ್ತು. ಮಿನಿಸ್ಟರ್’ಗಳು ಬಹಳ ಸಿಟ್ಟಾಗಿದ್ದಾರೆ ; ಆದರೆ ಎಲ್ಲರೂ ಅಲ್ಲ. ಈ ದೇಶದ ತಿಳಿದ ಮಿನಿಸ್ಟರ್’ಗಳಲ್ಲಿ ಬಹಳಷ್ಟು ಜನ ನನ್ನ ಅನುಯಾಯಿಗಳಿದ್ದಾರೆ. ಅಜ್ಞಾನಿ ಮತ್ತು ಬಿಗಿ ನಿಲುವಿನ ಕೆಲವರಿಗೆ ಏನೂ ತಿಳಿಯುವುದಿಲ್ಲ ಮಾತ್ರವಲ್ಲ ನನಗೆ ತೊಂದರೆ ಕೊಡಲು ಹೋಗಿ ತಾವೇ ಅದರಲ್ಲಿ ಸಿಲುಕುತ್ತಾರೆ. ನನ್ನನ್ನು ಹೀಯಾಳಿಸಿ ಮಜುಂದಾರ ಈ ದೇಶದಲ್ಲಿ ಗಳಿಸಿದ್ದ ಗೌರವದಲ್ಲಿ ಮುಕ್ಕಾಲು ಪಾಲು ಕಳೆದುಕೊಂಡಿದ್ದಾನೆ. ನನ್ನನು ಅವರು ದತ್ತು ತೆಗೆದುಕೊಂಡಿದ್ದಾರೆ. ಯಾರಾದರೂ ನನ್ನನ್ನು ಹೀಯಾಳಿಸಿದರೆ ಹೆಂಗಸರು ಆತನನ್ನು ಎಲ್ಲ ಕಡೆಯೂ ಖಂಡಿಸುತ್ತಾರೆ. ನಾನು ಯಾವಾಗ ಭಾರತಕ್ಕೆ ಮರಳುತ್ತೇನೆಂದು ಹೇಳಲಾರೆ. ಮುಂದಿನ ಚಳಿಗಾಲ ಆಗಬಹುದು. ಅಲ್ಲಿಗೆ ಬಂದ ನಂತರ ಅಲೆದಾಡುತ್ತೇನೆ , ಇಲ್ಲಿಯೂ ಅದನ್ನೇ ಮಾಡುತ್ತಿದ್ದೇನೆ. ಹೆಚ್ಚಿಗೆ ಬರೆಯಲು ಏನೂ ಇಲ್ಲ. ದಯವಿಟ್ಟು ಈ ಪತ್ರವನ್ನು ಬಹಿರಂಗಗೊಳಿಸಬೇಡ. ನಾನು ಉಚ್ಚರಿಸುವ ಪ್ರತಿಯೊಂದು ಶಬ್ದದ ಬಗ್ಗೆಯೂ ಎಚ್ಚರದಿಂದಿರಬೇಕು. ದಯವಿಟ್ಟು ಈ ಪತ್ರವನ್ನು ಬಹಿರಂಗಗೊಳಿಸಬೇಡ. ನಾನೀಗ ಸಾರ್ವಜನಿಕ ವ್ಯಕ್ತಿ . ಎಲ್ಲರೂ ಅದರಲ್ಲೂ ವಿಶೇಷವಾಗಿ ಪಾದ್ರಿಗಳು ನನ್ನ ಮೇಲೆ ಕಣ್ಣಿಟ್ಟಿದ್ದಾರೆ. (೧೧)
( ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ )`
೨೪/೨/೧೯೯೦ ರಂದು ದೆಹಲಿಯಿಂದ ಸಂಪಾದಿತವಾದ ‘ದಿ ಟೈಮ್ಸ್ ಆಫ್ ಇಂಡಿಯಾ ‘ ಪತ್ರಿಕೆಯ ಸಂಚಿಕೆಯ ಮುಖಪುಟದಲ್ಲಿ ಪ್ರಕಾಶ್ ಭಂಡಾರಿಯವರು ಹೊಸದಾಗಿ ಬೆಳಕಿಗೆ ಬಂದಿರುವ ೧೫/೨/೧೮೯೩ ಮತ್ತು ೨೨/೫/೧೮೯೩ ರಂದು ಸ್ವಾಮಿಗಳು ಖೇತ್ರಿಯ ರಾಜ ಅಜಿತ್ ಸಿಂಗ್’ಗೆ ಬರೆದ ಎರಡು ಪತ್ರಗಳಿರುವ ಸುದ್ದಿ ನೀಡಿದರು. ಮತ್ತೊಮ್ಮೆ ೨/೩/೧೯೯೦ ರಂದು ಆ ಎರಡು ಪತ್ರಗಳ ಕೊನೆಯ ಎರಡು ಪುಟಗಳ ಚಿತ್ರಗಳನ್ನು ಮುಖಪುಟದಲ್ಲಿ ನೀಡಿದರು. ಖೇತ್ರಿಯ ಹಳ್ಳಿ ಪಟ್ವಾರಿಯಾಗಿದ್ದ , ಇಂಗ್ಲಿಷ್ ಬಾರದ ಘೀಸಾರಾಂ, ಝುಂಜುನು ದಾಖಲೆ ಕೊಠಡಿಯನ್ನು ಚೊಕ್ಕಟಗೊಳಿಸುತ್ತಿರುವಾಗ ಈ ಪತ್ರಗಳು ಸಿಕ್ಕಿದ್ದವು. ರಿಬ್ಬನ್’ನಿಂದ ಕಟ್ಟಲಾಗಿದ್ದ ಈ ಪತ್ರಗಳಲ್ಲಿ ಏನಿದೆಯೆಂದು ತಿಳಿಸಿ ಹೇಳುವಂತೆ ಆತ ಉಪವಿಭಾಗ ನ್ಯಾಯಾಧೀಶ ರಾಮ್ ನಿವಾಸ ಮೆಹ್ತಾ ಕೈಗೊಪ್ಪಿಸಿದನು. ಆ ಕಟ್ಟನ್ನು ಸೂಕ್ಷ್ಮವಾಗಿ ನೋಡಿದ ತಕ್ಷಣ ರಾಮ್’ನಿವಾಸ್ ಮೆಹ್ತಾ ಆನಂದದಿಂದ ಕುಪ್ಪಳಿಸತೊಡಗಿದರು. ಆ ಪತ್ರಗಳು ಸ್ವಾಮಿ ವಿವೇಕಾನಂದರು ಮದ್ರಾಸಿನಿಂದ ಖೇತ್ರಿ ಮಹಾರಾಜ ಅಜಿತ್ ಸಿಂಗ್’ಗೆ ಬರೆದ ಪತ್ರಗಳೆಂದು ತಿಳಿಯಿತು’ ಎಂದು ಘೀಸಾ ರಾಂ ಪ್ರಕಾಶ್ ಭಂಡಾರಿಯವರಿಗೆ ತಿಳಿಸಿದ್ದನು. ಇದಾದ ತಕ್ಷಣ ಬಂಗಾಳಿಯ ಜನಪ್ರಿಯ ದೈನಿಕಗಳು - ಆನಂದ ಬಜಾರ್ ಪತ್ರಿಕೆ ಮತ್ತು ಬರ್ತಮಾನ್ -ಈ ಪತ್ರಗಳ ಸುದ್ದಿಯನ್ನು ೭/೩/೧೯೦೦ ರ ಭಾನುವಾರದ ಸಂಚಿಕೆಯಲ್ಲಿ ಪ್ರಕಟಿಸಿದವು. ೧೪/೩/೧೯೦೦ ರಂದು ಬರ್ತಮಾನ್ ಈ ಪತ್ರಗಳ ಬಂಗಾಳಿ ಅನುವಾದ ನೀಡಿತು. ಪ್ರಬುದ್ಧ ಭಾರತ ೧೯೯೯ ರಂದು ಈ ಪತ್ರಗಳನ್ನು ಪ್ರಕಟಿಸಿತು. ಈ ಪತ್ರಗಳಲ್ಲಿ ಮೊದಲನೆಯದು ಮುಂದಿದೆ.
ಸ್ವಾಮಿಗಳು ಮದ್ರಾಸ್’ನಿಂದ ಖೇತ್ರಿ ರಾಜ ಅಜಿತ್ ಸಿಂಗ್’ಗೆ ಬರೆದ ಮೊದಲ ಪತ್ರ
ಮದ್ರಾಸ್ , ೧೫ ಫೆಬ್ರವರಿ (೧೮೯೩)
ಪ್ರಭುಗಳಲ್ಲಿ (ಯುವರ್ ಹೈನೆಸ್)
ಪ್ರಭುಗಳೇ , ನಾನು ನಿಮಗೆ ಎರಡು ಸಂಗತಿಗಳನ್ನು ಹೇಳುತ್ತೇನೆ. ಒಂದು ಕುಂಬಕೋಣಂ ಎನ್ನುವ ಹಳ್ಳಿಯಲ್ಲಿ ನಾನು ನೋಡಿದ ಅಧ್ಬುತ ಸಂಗತಿ ಮತ್ತು ಇನ್ನೊಂದು ನನ್ನನ್ನು ಕುರಿತಾದದ್ದು. ಮೇಲೆ ತಿಳಿಸಿದ ಹಳ್ಳಿಯಲ್ಲಿ ಚೆಟ್ಟಿ ಜಾತಿಯ ಒಬ್ಬಾತ ಜ್ಯೋತಿಷ್ಯ ಹೇಳುತ್ತಾನೆ. ನಾನು ಇನ್ನಿಬ್ಬರು ಯುವಕರೊಡನೆ ಆತನನ್ನು ಕಾಣಲು ಹೋಗಿದ್ದೆನು. ಆತ ಮನುಷ್ಯನ ಆಲೋಚನೆಗಳೆಲ್ಲವನ್ನೂ ತಿಳಿಯಬಲ್ಲನೆಂದು ಹೇಳಲಾಗಿದ್ದಿತು. ಎರಡು ತಿಂಗಳುಗಳ ಹಿಂದೆ ನನ್ನ ತಾಯಿ ಸತ್ತಂತೆ ಕನಸು ಕಂಡು ನಾನು ಆಕೆಯ ಬಗ್ಗೆ ತಿಳಿಯಲು ಕಾತರನಾಗಿದ್ದೆ. ಎರಡನೆಯದು ನನ್ನ ಗುರು ಹೇಳಿದ್ದು ಸರಿಯೇ ಎಂದು ತಿಳಿಯುವುದಾಗಿದ್ದಿತು. ಮೂರನೆಯದು ಆತನನ್ನು ಪರೀಕ್ಷೆಗೆ ಒಳಪಡಿಸುವ ಪ್ರಶ್ನೆಯಾಗಿದ್ದು ಟಿಬೆಟ್ ಭಾಷೆಯಲ್ಲಿದ್ದ ಬೌದ್ಧ ಮಂತ್ರವಾಗಿದ್ದಿತು. ಗೋವಿಂದ ಚೆಟ್ಟಿಯಲ್ಲಿಗೆ ಹೋಗುವ ಎರಡು ದಿನ ಮೊದಲೇ ನಾನು ಇವುಗಳನ್ನು ನಿರ್ಧರಿಸಿಕೊಂಡಿದ್ದೆನು. ಇನ್ನೊಬ್ಬ ಯುವಕನ ಅತ್ತಿಗೆಗೆ ಅಪರಿಚಿತರು ಯಾರೋ ವಿಷ ನೀಡಿದ್ದು ಅದರಿಂದ ಆಕೆ ಚೇತರಿಸಿಕೊಂಡಿದ್ದಳು. ವಿಷ ನೀಡಿದವರು ಯಾರೆಂದು ತಿಳಿಯುವುದು ಆತನ ಉದ್ದೇಶವಾಗಿದ್ದಿತು.
ನಾವು ಮೊದಲಿಗೆ ಆತನನ್ನು ನೋಡಿದಾಗ ಕೆರಳುವಂತಾಗಿದ್ದನು. ಕೆಲವು ಯುರೋಪಿಯನ್ನರು ಮೈಸೂರು ದಿವಾನರೊಂದಿಗೆ ಆತನನ್ನು ಕಾಣಲು ಬಂದಿದ್ದು ಅವರಿಂದ ದೃಷ್ಟಿದೋಷ ತಾಗಿ ಜ್ವರ ಬಂದಿದ್ದು ನಾವು ೧೦ ರೂಪಾಯಿ ಕೊಡದ ಹೊರತು ನಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುವುದಿಲ್ಲವೆಂದು ತಿಳಿಸಿದನು. ನನ್ನೊಂದಿಗಿದ್ದ ಯುವಕರು ಹಣ ಕೊಡಲು ಸಿದ್ಧರಿದ್ದರು. ಆತ ಸ್ವಲ್ಪ ಹೊತ್ತು ತನ್ನ ಖಾಸಗಿ ಕೋಣೆಯೊಳಕ್ಕೆ ಹೋಗಿ ಹೊರಬಂದ ನಂತರ ಆತನ ಜ್ವರ ವಾಸಿ ಮಾಡಲು ನಾನು ಸ್ವಲ್ಪ ಬೂದಿಯನ್ನು ಕೊಟ್ಟರೆ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವುದಾಗಿ ತಿಳಿಸಿದನು. ನನಗೆ ಯಾವುದೇ ರೋಗವನ್ನು ವಾಸಿ ಮಾಡುವ ಶಕ್ತಿ ಇದೆಯೆಂದು ನಾನು ಕೊಚ್ಚಿಕೊಳ್ಳಲಾರೆ ಎಂದು ತಿಳಿಸಿದೆ. ಆಗ ಆತ ನನಗೆ ಅದೆಲ್ಲ ಬೇಕಿಲ್ಲ. ಬೂದಿಯೊಂದೇ ಸಾಕು ಎಂದನು. ಅದಕ್ಕೆ ನಾನು ಒಪ್ಪಿದೆ. ಆತ ನಮ್ಮನ್ನು ಖಾಸಗಿ ಕೋಣೆಯೊಳಕ್ಕೆ ಕರೆದೊಯ್ದು , ಖಾಲಿ ಕಾಗದದ ಚೂರಿನ ಮೇಲೆ ಏನೋ ಬರೆದು ನನ್ನೊಂದಿಗೆ ಬಂದವರಲ್ಲಿ ಒಬ್ಬರಿಗೆ ಕೊಟ್ಟು , ಅದರ ಮೇಲೆ ನಾನು ಸಹಿ ಹಾಕುವಂತೆ ಹೇಳಿ ಅದನ್ನು ನನ್ನ ಜೊತೆಗಿದ್ದ ಇನ್ನೊಬ್ಬಾತನ ಜೇಬಿನಲ್ಲಿರಿಸಿದನು. ನಂತರ ಆಗ ಎದೆಗೆ ಗುಂಡು ಹೊಡೆದಂತೆ ನೇರವಾಗಿ ‘ಸಂನ್ಯಾಸಿಯಾಗಿರುವ ನೀನು ನಿನ್ನ ತಾಯಿಯ ಬಗ್ಗೆ ಏಕೆ ಚಿಂತಿಸುತ್ತಿರುವೆ’ ಎಂದು ಕೇಳಿದನು . ಆಗ ನಾನು ‘ಮಹಾ ಶಂಕರಾಚಾರ್ಯರೇ ಅವರ ತಾಯಿಯನ್ನು ನೋಡಿಕೊಳ್ಳಬೇಕಾಯಿತು’ ಎಂದು ತಿಳಿಸಿದೆ. ಆಗ ಆತ ‘ಅದಿರಲಿ ನಿನ್ನ ತಾಯಿ ಚೆನ್ನಾಗಿದ್ದಾರೆ. ಆಕೆಯ ಹೆಸರನ್ನು ನಿನ್ನ ಸ್ನೇಹಿತನ ಬಳಿ ಇರುವ ಚೀಟಿಯಲ್ಲಿ ಬರೆದಿದ್ದೇನೆ ‘ ಎನ್ನುತ್ತ ಮುಂದುವರೆದು ‘ ನಿನ್ನ ಗುರು ತೀರಿಕೊಂಡಿದ್ದಾರೆ. ಆತ ಮಹಾ ಮಹಾನ್ ವ್ಯಕ್ತಿಯಾಗಿದ್ದರಿಂದ ಆತ ಹೇಳಿದ್ದೆಲ್ಲವನ್ನೂ ನೀನು ನಂಬಬೇಕು’ ಎನ್ನುತ್ತ ಗುರುವಿವ ವಿವರಣೆ ನೀಡತೊಡಗಿ , ‘ನಿನ್ನ ಗುರುವಿನ ಬಗ್ಗೆ ಹೆಚ್ಚಿನ ಇನ್ನೇನನ್ನು ತಿಳಿಯಬೇಕು’ ಎಂದನು. ಆಗ ನಾನು ‘ನನ್ನ ಗುರುವಿನ ಹೆಸರು ತಿಳಿಸಿದರೆ ನನಗೆ ತೃಪ್ತಿಯಾಗುತ್ತದೆ ಎಂದೆನು. ಆಗ ಆತ ‘ಯಾವ ಹೆಸರು ? ಸಂನ್ಯಾಸಿಗೆ ಹಲವು ಹೆಸರುಗಳಿರುತ್ತವೆ ‘ ಎಂದನು. ಆಗ ನಾನು ‘ ಆತ ಸಾರ್ವಜನಿಕರಿಗೆ ಯಾವ ಹೆಸರಿನಲ್ಲಿ ಗೊತ್ತಿದ್ದನೋ ಆ ಹೆಸರು’ ಎಂದು ತಿಳಿಸಿದೆನು. ಆಗ ಆತ ‘ಆ ಅದ್ಭುತವಾದ ಹೆಸರನ್ನು ನಾನು ಈಗಾಗಲೇ ಚೀಟಿಯಲ್ಲಿ ಬರೆದಿದ್ದೇನೆ. ನೀನು ಟಬೆಟ್’ನ ಒಂದು ಮಂತ್ರದ ಬಗ್ಗೆ ಕೇಳಲು ಬಯಸಿದ್ದೆ. ಅದನ್ನೂ ಚೀಟಿಯಲ್ಲಿ ಬರೆದಿದ್ದೇನೆ’ ಎಂದು ಹೇಳಿದನು. ಮತ್ತೆ ಆತ ನನಗೆ ಯಾವುದೇ ಭಾಷೆಯಲ್ಲಿ , ಯಾವುದೇ ವಿಷಯದ ಬಗ್ಗೆ ಚಿಂತಿಸಿ ಅದನ್ನು ಹೇಳಲು ತಿಳಿಸಿದನು. ನಾನು ‘ನಮೋ ಭಗವತೇ ವಾಸುದೇವಾಯ’ ಎಂದರೆ ಆತ ‘ಅದನ್ನು ಆಗಲೇ ನಿನ್ನ ಗೆಳೆಯನ ಬಳಿ ಇರುವ ಚೀಟಿಯಲ್ಲಿ ಬರೆಯಲಾಗಿದೆ. ತೆಗೆದು ನೋಡು’ ಎಂದನು. ಅಗ ! ಆತ ಹೇಳಿದ್ದೆಲ್ಲವೂ ಆ ಚೀಟಿಯಲ್ಲಿದ್ದವು. ನನ್ನ ತಾಯಿಯ ಹೆಸರು ಕೂಡ !! . ಅದರಲ್ಲಿ ನಿನ್ನ ತಾಯಿ ಇಂತಹ ಹೆಸರಿನಾಕೆ, ಆಕೆ ಚೆನ್ನಾಗಿದ್ದಾಳೆ. ಆಕೆ ಒಳ್ಳೆಯವಳು , ಪವಿತ್ರಳು , ನಿನ್ನ ಅಗಲಿಕೆ ಆಕೆಗೆ ಸಾವಿಗೆ ಸಮಾನವಾಗಿದ್ದು ಮುಂದಿನ ಎರಡು ವರ್ಷಗಳಲ್ಲಿ ಆಕೆ ಸಾಯುತ್ತಾಳೆ. ನೀನು ಆಕೆಯನ್ನು ನೋಡಬೇಕೆಂದಿದ್ದರೆ ಎರಡು ವರ್ಷಗಳ ಒಳಗೇ ಆಗಬೇಕು.’ ಎಂದು ತಿಳಿಸಿದನು.
ನಿನ್ನ ಗುರು ರಾಮಕೃಷ್ಣ ಪರಮಹಂಸ ತೀರಿಕೊಂಡಿದ್ದಾರಾದರೂ ಸೂಕ್ಷ್ಮ ಶರೀರದಲ್ಲಿ ಜೀವಿಸುತ್ತಿದ್ದು ನಿನ್ನ ಮೇಲೆ ನಿಗಾ ಇರಿಸಿದ್ದಾರೆ ಮುಂತಾಗಿ ಬರೆದಿದ್ದು ಮುಂದೆ ‘ ಲಮಲ ಕಪ್ಸೆಚುವ’ ಎಂದು ಟಿಬೆಟಿಯನ್ ಮಂತ್ರವಿದ್ದು ಕೊನೆಯಲ್ಲಿ ‘ ನಾನು ಬರೆದಿರುವುದಕ್ಕೆ ಪ್ರಮಾಣವಾಗಿ ನಾನು ನಿನಗೆ ‘ಓಂ ಭಗವತೆ ‘ ಮುಂತಾದ ಒಂದು ಮಂತ್ರವನ್ನು ಕೊಡುತ್ತೇನೆ; ಇದನ್ನು ಬರೆದ ಒಂದು ಗಂಟೆಯ ನಂತರ ನನಗೆ ಹಿಂದಿರುಗಿಸು’ ಎಂದಿದ್ದಿತು. ನನ್ನ ಗೆಳೆಯರ ವಿಚಾರದಲ್ಲಿಯೂ ಆತ ಹೇಳಿದ್ದು ನಿಜವಿದ್ದಿತು. ನಂತರ ಬಹುದೂರದ ಜಾಗಗಳಿಂದ ಜನ ಆತನಲ್ಲಿಗೆ ಬರುವುದನ್ನು ನೋಡಿದೆನು. ಆತ ಅವರಿಗೆ ನೀವು ಇಂತಹವರು , ಇಂತಹ ಜಾಗದಿಂದ , ಇಂತಹ ಕೆಲಸಕ್ಕೆ ಬಂದಿದ್ದೀರಿ’ ಎಂದು ಹೇಳುವುದನ್ನು ಕಂಡೆನು. ನನ್ನ ಆಲೋಚನೆಗಳನ್ನು ಆತ ಓದುತ್ತಿರುವಾಗ , ಅದನ್ನು ತಗ್ಗಿಸಿ ‘ ನಾನು ನಿನ್ನ ಹತ್ತಿರ ಹಣ ತೆಗೆದುಕೊಳ್ಳುವುದಿಲ್ಲ. ಆದರೆ ನೀನು ನನ್ನಿಂದ ಸ್ವಲ್ಪ ಸೇವೆ ಪಡೆಯಬೇಕು’ ಎಂದು ತಿಳಿಸಿದನು. ನಾನು ಆತನ ಅತನ ಮನೆಯಲ್ಲಿ ಸ್ವಲ್ಪ ಹಾಲನ್ನು ಕುಡಿದೆನು. ಆತ ತನ್ನ ಕುಟುಂಬವೆಲ್ಲವನ್ನೂ ಕರೆತಂದು ನನಗೆ ಅಡ್ಡ ಬೀಳಿಸಿದನು. ಆಗ ನಾನು ಆತ ತಂದ ವಿಭೂತಿಯನ್ನು ಮುಟ್ಟಿ ಆತನ ಅಧ್ಹುತ ಶಕ್ತಿಯ ರಹಸ್ಯವನ್ನು ಕೇಳಿದೆನು. ಮೊದಲಿಗೆ ಆತ ನನಗೆ ಗುಟ್ಟು ಬಿಟ್ಟುಕೊಡಲಿಲ್ಲವಾದರೂ ನಂತರ ನನ್ನ ಬಳಿ ಬಂದು ‘ ಮಹಾರಾಜ್ , ಅವು ದೇವಿಯ ನೆರವನಿಂದ ಸಿಕ್ಕಿರುವ ಮಂತ್ರ ಸಿದ್ಧಿಗಳು ‘ ಎಂದು ತಿಳಿಸಿದನು. ನಿಜವಾಗಿಯೂ ‘ ಹೊರೇಷಿಯೋ ಈ ಭೂಮಿ ಮತ್ತು ಸ್ವರ್ಗದಲ್ಲಿ ನಿನ್ನ ತತ್ತ್ವಜ್ಞಾನ ಮೀರಿದ ಅದೆಷ್ಟೋ ಸಂಗತಿಗಳಿವೆ-ಷೇಕ್ಸ್’ಸ್ಪಿಯರ್.
ಎರಡನೆಯದು ನನ್ನ ವಿಷಯ. ಈಗ ಮದ್ರಾಸಿನಲ್ಲಿ ನೆಲೆಸಿರುವ ರಾಮನಾಡಿನ ಜಮೀನ್ದಾರನಿದ್ದಾನೆ. ಆತ ನನ್ನನ್ನು ಯುರೋಪಿಗೆ ಕಳಿಸಬೇಕೆಂದಿದ್ದಾನೆ. ನಿಮಗೇ ಈಗಾಗಲೇ ಗೊತ್ತಿರುವಂತೆ ನನಗೆ ಆ ಜಾಗಗಳನ್ನು ನೋಡಬೇಕೆನ್ನುವ ತವಕದ ಮನಸ್ಸಿದೆ. ಈ ಅವಕಾಶವನ್ನು ಬಳಸಿಕೊಂಡು ನಾನು ಯುರೋಪ್ ಮತ್ತು ಅಮೆರಿಕ ಪ್ರವಾಸ ಮಾಡಬೇಕೆಂದಿದ್ದೇನೆ. ಆದರೆ ಜಗತ್ತಿನ ಮೇಲಿರುವ ನನ್ನ ಏಕೈಕ ಗೆಳೆಯರಾದ ಪ್ರಭುಗಳನ್ನು (ಹೈ ಅಪ್) ಕೇಳದೆ ನಾನು ಏನನ್ನೂ ಮಾಡುವುದಿಲ್ಲ. ಆದ್ದರಿಂದ ದಯಮಾಡಿ ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ. ಆ ಜಾಗಗಳಿಗೆ ಒಂದು ರೀತಿಯ ಪ್ರವಾಸವನ್ನು ಮಾತ್ರ ಮಾಡಬೇಕೆಂದುಕೊಂಡಿರುವೆ. ಪವಿತ್ರ ಹಾಗೂ ಉನ್ನತ ಶಕ್ತಿಯೊಂದರ ಕೈಗೊಂಬೆ ನಾನೆನ್ನುವುದು ನನಗೆ ಖಚಿತವಾಗಿದೆ. ನನಗೆ ಶಾಂತಿ ಎನ್ನುವುದಿಲ್ಲ, ಆಲಂಕಾರಿಕವಾಗಿ ಹೇಳಬೇಕೆಂದರೆ ಹಗಲು, ಇರುಳು ಬೇಯುತ್ತಿದ್ದೇನೆ. ನಾನು ಎಲ್ಲಿಗೇ ಹೋಗಲಿ ಹಗಲು ಇರುಳು ನೂರಾರು ಜನ , ಮದ್ರಾಸಿನಂತೆ ಕೆಲವು ಕಡೆ ಸಾವಿರಾರು ಜನ ನನ್ನ ಬಳಿ ಬಂದು ತಮ್ಮಲ್ಲಿರುವ ಅನುಮಾನ ಮತ್ತು ಅಪನಂಬಿಕೆಗಳನ್ನು ಪರಿಹರಿಸಿಕೊಳ್ಳುತ್ತಾರೆ ! ಆದರೆ ನಾನು-ನಾನಾದರೋ ಯಾವಾಗಲೂ ಸಂತೋಷಹೀನ !! ನಿನ್ನದೆಲ್ಲವೂ ಆಗುತ್ತದೆ !!! ಆದ್ದರಿಂದ ಈ ಶಕ್ತಿ ಯುರೋಪ್’ನಲ್ಲಿ ನಾನು ಏನು ಮಾಡಬೇಕೆಂದಿದೆಯೋ ತಿಳಿಯದು. ವಿಧೇಯನಾಗದೆ ಬೇರೆ ದಾರಿಯಿಲ್ಲ. ‘ನಿನ್ನದೆಲ್ಲವೂ ಆಗುತ್ತದೆ !! ಅದರಿಂದ ಬಿಡುಗಡೆ ಇಲ್ಲ.
ಮಗ ಮತ್ತು ವಂಶೋದ್ಧಾರಕ ಹುಟ್ಟಿರುವುದಕ್ಕೆ ನಿಮಗೆ ಶುಭಾಶಯಗಳು. ರಾಜ ಕಂದ ತನ್ನ ಸಮರ್ಥ ತಂದೆಯಂತೆಯೇ ಇದ್ದು , ಭಗವಂತ ಆತ ಮತ್ತು ಆತನನ್ನು ಹೆತ್ತವರ ಮೇಲೆ ಸದಾ ಕೃಪಾ ಕಟಾಕ್ಷವನ್ನು ಹರಿಸಲಿ. ಇನ್ನೆರಡು ಮೂರು ವಾರಗಳಲ್ಲಿ ನಾನು ಯುರೋಪಿಗೆ ಹೋಗುತ್ತೇನೆ. (ನಿರರ್ಥಕ ನಿರೀಕ್ಷೆ). ಈ ದೇಹ ಮುಂದೇನಾಗುವುದೋ ಎಂದು ಹೇಳಲಾರೆ. ನನ್ನ ತಾಯಿ ಹಸಿವಿನಿಂದ ಸಾಯದಂತೆ ನೋಡಿಕೊಳ್ಳಬೇಕೆಂದು ಪ್ರಭುಗಳಲ್ಲಿ ಕೇಳಿಕೊಳ್ಳುತ್ತೇನೆ. ಈ ಪತ್ರಕ್ಕೆ ಬೇಗನೆ ಉತ್ತರ ಸಿಕ್ಕರೆ ಋಣಿಯಾಗಿರುತ್ತೇನೆ. ಈ ಪತ್ರದ ಎರಡನೇ ಭಾಗವನ್ನು–ನಾನು ಯುರೋಪ್’ಗೆ ಹೋಗುವುದನ್ನು-ಗುಟ್ಟಾಗಿಟ್ಟಿರಬೇಕೆಂದು ಕೇಳಿಕೊಳ್ಳುತ್ತೇನೆ. ಜೀವನಪೂರ್ತಿ ದೇವರ ದಯೆ ನಿಮ್ಮ ಮೇಲಿರಲಿ. ನಿಮ್ಮದಾದ ಪ್ರಾರ್ಥನೆಯನ್ನು ಹಗಲಿರುಳು ನಿಮಗಾಗಿ ನಾನು ಮಾಡುತ್ತೇನೆ.
ಸಚ್ಚಿತ್ತಾನಂದ -–ಕೇರ್ ಆಫ್ ಎಂ.ಭಟ್ಟಾಚಾರ್ಯ ಇ.ಎಸ್.ಕ್ಯು
ಅಸಿಸ್ಟೆಂಟ್ ಅಕೌಂಟ್ ಜನರಲ್-ಸೇಮ್ಟ್ ಥೋಮ್ , ಮದ್ರಾಸ್
ಸ್ವಾಮಿಗಳು ಈ ಪತ್ರದಲ್ಲಿ ತಿಳಿಸಿದಂತೆ ರಾಮನಾಡಿನ ಜಮೀನ್ದಾರ ಭಾಸ್ಕರ ಸೇತುಪತಿ ಯುರೋಪ್’ಗೆ ಹೋಗಲ ೧೦,೦೦೦ ರೂಪಾಯಿಗಳನ್ನು ಕೊಡಲಿಲ್ಲ. ಸುಬ್ರಮಣ್ಯ ಅಯ್ಯರ್ , ಮನ್ಮಥನಾಥ ಭಟ್ಟಾಚಾರ್ಯರಂತೆ ಆತ ರೂ ೫೦೦ ಮಾತ್ರ ಕೊಟ್ಟನು. ಇದನ್ನು ಸ್ವಾಮಿಗಳು ಅಮೆರಿಕಕ್ಕೆ ಹೋದ ನಂತರ ೨೧/೨/೧೮೯೪ ರಂದು ಅಳಸಿಂಗ ಪೆರುಮಾಳ್’ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
೧೮೯೮ ರಲ್ಲಿ ಬಲರಾಮ ಬಸು ಮನೆಯಲ್ಲಿರುವಾಗ ತಮ್ಮ ಶಿಷ್ಯ ಶರತ್ ಚಂದ್ರ ಚಕ್ರವರ್ತಿಗೆ ಸ್ವಾಮಿಗಳು ಕುಂಬಕೋಣಂನಲ್ಲಿ ನಡೆದ ಈ ಅದ್ಭುತ ಸಂಗತಿಯನ್ನು ತಿಳಿಸಿದ್ದರು. ಇದು ಆತನ ದಿನಚರಿಯ ಅಧ್ಯಾಯ-೧೨ ರಲ್ಲಿದೆ. ಶರತ್ ಚಂದ್ರ ಚಕ್ರವರ್ತಿ ದಾಖಲಿಸಿರುವ ಘಟನೆಯಲ್ಲಿ ಸ್ವಾಮಿಗಳು ಖೇತ್ರಿ ಮಹಾರಾಜರಿಗೆ ಪತ್ರದಲ್ಲಿ ತಿಳಿಸದಿರುವ ಹಲವು ಸಂಗತಿಗಳಿವೆ. ಸ್ವಾಮಿಗಳಿಗೆ ಭುವನೇಶ್ವರಿ ದೇವಿ ತೀರಿಹೋದಂತೆ ಕನಸು ಬಿದ್ದು ಅವರು ಚಿಂತಿತರಾಗಿದ್ದರು. ಆಕೆಯ ಆರೋಗ್ಯ ಸರಿ ಇಲ್ಲದಿದ್ದರೆ ಅಮೆರಿಕಕ್ಕೆ ಹೋಗುವ ಯೋಜನೆಯನ್ನು ಬಿಟ್ಟುಬಿಡಬೇಕೆಂದಿದ್ದರು. ಸ್ವಾಮಿಗಳ ಕಳವಳ ಗಮನಿಸಿದ್ದ ಮನ್ಮಥನಾಥ ಭಟ್ಟಾಚಾರ್ಯ ವಿಷಯ ತಿಳಿಯಲು ಕಲ್ಕತ್ತಕ್ಕೆ ತಂತಿ ಕಳಿಸಿದ್ದನು. ಗೋವಿಂದ ಚೆಟ್ಟಿಯಲ್ಲಿಗೆ ಹೋಗುವ ಸಲಹೆ ಕೊಟ್ಟಾತ ಆತನೇ –ಆತನಿಗೆ ಗೋವಿಂದ ಚೆಟ್ಟಿಯ ವಿಷಯ ತಿಳಿಸಿದಾತ ಅಳಸಿಂಗ ಪೆರುಮಾಳ್. ಗೋವಿಂದ ಚೆಟ್ಟಿಯಲ್ಲಿಗೆ ಹೋಗುವ ಎರಡು ದಿನ ಮೊದಲೇ ಸ್ವಾಮಿಗಳು ತಮ್ಮ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಅವು ಮನ್ಮಥನಾಥ ಭಟ್ಟಾಚಾರ್ಯ ಮತ್ತು ಅಳಸಿಂಗ ಪೆರುಮಾಳ್’ಗೆ ತಿಳಿದಿದ್ದವು.
ಸ್ವಾಮಿಗಳು , ಮನ್ಮಥನಾಥ ಭಟ್ಟಾಚಾರ್ಯ , ಅಳಸಿಂಗ ಪೆರುಮಾಳ್ ಹಾಗೂ ಇನ್ನೊಬ್ಬರು ಮದ್ರಾಸ್’ನಿಂದ ಕುಂಬಕೋಣಂಗೆ ರೈಲಿನಲ್ಲಿ ಹೋಗಿದ್ದರು. ಗೋವಿಂದ ಚೆಟ್ಟಿ ಮತ್ತು ಸ್ವಾಮಿಗಳ ನಡುವೆ ಭಾಷಾಂತರಕಾರನಾಗಿ ಕೆಲಸ ಮಾಡಿದಾತ ಅಳಸಿಂಗ ಪೆರುಮಾಳ್. ಸ್ವಾಮಿಗಳಿಗೆ ಒಂದೇ ಒಂದು ತಮಿಳಿನ ಪದವೂ ಅರ್ಥವಾಗುತ್ತಿರಲಿಲ್ಲ. ಅಳಸಿಂಗ ಪೆರುಮಾಳ್, ಸ್ವಾಮಿಗಳು ಬಂದ ಉದ್ದೇಶ , ಅವರು ಕೇಳಬೇಕೆಂದಿದ್ದ ಪ್ರಶ್ನೆಗಳು ಅವುಗಳಿಗೆ ಉತ್ತರಗಳನ್ನೂ ಗೋವಿಂದಚೆಟ್ಟಿಗೆ ಸೂಚಿಸಿದ್ದನು. ಗೋವಿಂದ ಚೆಟ್ಟಿ ಆತ ಹೇಳಿದ್ದನ್ನೋ ಅಥವಾ ಇನ್ನೇನನ್ನೋ ತಾನು ಕೊಟ್ಟ ಚೀಟಿಯಲ್ಲಿ ತಮಿಳಿನಲ್ಲಿ ಗೀಚಿದ್ದನು. ತಮಿಳಿನಲ್ಲಿದ್ದ ಬರಹವನ್ನು ಓದಿ ಸ್ವಾಮಿಗಳಿಗೆ ತಿಳಿಸಿದಾತನೂ ಅಳಸಿಂಗ ಪೆರುಮಾಳನೇ. ಮನ್ಮಥನಾಥ ಭಟ್ಟಾಚಾರ್ಯ ಕಲ್ಕತ್ತೆಗೆ ತಂತಿ ಕಳಿಸಿರುವುದು ಅಳಸಿಂಗ ಪೆರುಮಾಳ್’ಗೆ ತಿಳಿದಿದ್ದಿತು. ಎಂದರೆ ಸ್ವಾಮಿಗಳು ಎಲ್ಲಿದ್ದಾರೆಂದು ಕಲ್ಕತದಲ್ಲಿದ್ದ ಸ್ವಾಮಿಗಳ ತಮ್ಮಂದಿರಿಗೆ ಮತ್ತು ತಾಯಿಗೆ ಗೊತ್ತಾಗಿದ್ದಿತು. ಭುವನೇಶ್ವರಿ ದೇವಿಗೆ ಏನಾದರೂ ತೊಂದರೆಯಾಗಿದ್ದರೆ ಅವರು ತಕ್ಷಣ ತಿಳಿಸದೆ ಬಿಡುತ್ತಿರಲಿಲ್ಲ. ಈ ಲೋಕಜ್ಞಾನವನ್ನು ಬಳಸಿಕೊಂಡು ಅಳಸಿಂಗ ಪೆರುಮಾಳ್ ಭುವನೇಶ್ವರಿ ದೇವಿ ಆರೋಗ್ಯವಾಗಿರುವಳೆಂದು ಗೋವಿಂದಚೆಟ್ಟಿಯ ಮೂಲಕ ತಿಳಿಸಿದ್ದನು. ಗೋವಿಂದಚೆಟ್ಟಿ ‘ ನಿನ್ನ ಅಗಲಿಕೆ ಆಕೆಗೆ ಸಾವಿಗೆ ಸಮಾನವಾಗಿದ್ದು ಮುಂದಿನ ಎರಡು ವರ್ಷಗಳಲ್ಲಿ ಆಕೆ ಸಾಯುತ್ತಾಳೆ. ನೀನು ಆಕೆಯನ್ನು ನೋಡಬೇಕೆಂದಿದ್ದರೆ ಎರಡು ವರ್ಷಗಳ ಒಳಗೇ ಆಗಬೇಕು’ ಎಂದು ತಿಳಿಸಿದ್ದನು. ಇದಾದ ಐದು ವರ್ಷಗಳ ನಂತರ ವಿದೇಶಗಳನ್ನು ಸುತ್ತಿ ಸ್ವಾಮಿಗಳು ಭಾರತಕ್ಕೆ ಮರಳಿ ಬಂದ ನಂತರವೂ ಭುವನೇಶ್ವರಿ ದೇವಿ ಆರೋಗ್ಯವಾಗಿ ಬದುಕಿದ್ದಳು. ಇವೆಲ್ಲವುಗಳನ್ನೂ ವೈಚಾರಿಕವಾಗಿ ,ತರ್ಕಬದ್ಧವಾಗಿ ವಿಶ್ಲೇಷಿಸಿ ನೋಡದೆ ಸ್ವಾಮಿಗಳು ಆತನಲ್ಲಿ ದೇವಿಯ ಕೃಪೆಯಿಂದ ಅದ್ಭುತ ಸಿದ್ದಿಗಳು ದಕ್ಕಿದ್ದವೆಂದು ಭ್ರಮಿಸಿದ್ದರು. ಗೋವಿಂದಚೆಟ್ಟಿ ತಮ್ಮ ವಂಶದ ಹದಿನಾಲ್ಕು ತಲೆಮಾರುಗಳ ಹೆಸರುಗಳನ್ನು ಹೇಳಿದನೆಂದು ಸ್ವಾಮಿಗಳು ಶರತ್ ಚಂದ್ರ ಚಕ್ರವರ್ತಿಗೆ ತಿಳಿಸಿದ್ದಾರೆ. ಈಗ ಲಭ್ಯವಿರುವ ನರೇಂದ್ರನಾಥ ದತ್ತ ವಂಶದ ಚರಿತ್ರೆ ಐದು ತಲೆಮಾರುಗಳಿಗಿಂತ ಹಿಂದಕ್ಕೆ ಹೋಗುವುದಿಲ್ಲ. (ರಾಮನಿಧಿ ದತ್ತ – ರಾಮ್’ಜಿ ಬನ್ –ರಾಮಸುಂದರ-ದುರ್ಗಾಪ್ರಸಾದ-ವಿಶ್ವನಾಥ-ನರೇಂದ್ರನಾಥ ದತ್ತ). ಆದ್ದರಿಂದ ಸ್ವಾಮಿಗಳು ಕಾಗೆ ಗುಬ್ಬಿ ಕಥೆಗಳನ್ನು ನಂಬುವುದರಲ್ಲಿ ಬೇರೆ ಸಾಮಾನ್ಯ ಜನರಿಗಿಂತ ಭಿನ್ನರೇನಲ್ಲ. ಮಗ ನರೇಂದ್ರನಾಥ ದತ್ತ ಸತ್ತ ನಂತರ ಒಂಬತ್ತು ವರ್ಷ ಬದುಕಿ ಭುವನೇಶ್ವರಿ ದೇವಿ ಗೋವಿಂದ ಚೆಟ್ಟಿಯ ಭವಿಷ್ಯವನ್ನು ಸುಳ್ಳು ಮಾಡಿದ್ದಳು
ಸ್ವಾಮಿಗಳು ಮದ್ರಾಸಿನಿಂದ ಖೇತ್ರಿ ರಾಜ ಅಜಿತ್ ಸಿಂಗ್’ಗೆ ಬರೆದ ಎರಡನೇ ಪತ್ರ
ಬಾಂಬೆ , ೨೨ ಮೇ (೧೮೯೩)
ಪ್ರಭುಗಳಲ್ಲಿ ( ಯುವರ್ ಹೈ ಅಪ್ )
ಖೇತ್ರಿಯಲ್ಲಿ ನಿಂತು ನದಿಯಾದ್’’ಗೆ ಸಾಗಿದ ನನ್ನ ಸುಗಮ ಪ್ರವಾಸದಲ್ಲಿ ಪ್ರತಿಯೊಂದು ಸೌಕರ್ಯ ದೊರಕಿತು ಎನ್ನುವುದರ ಹೊರತಾಗಿ ಹೇಳಿಕೊಳ್ಳುವಂತಹ ಯಾವ ವಿಶೇಷ ಸಂಗತಿಯೂ ಜರುಗಲಿಲ್ಲ. ಹರಿದಾಸ ಭಾಯಿಯವರು ಎಂದಿನಂತೆಯೇ ನನ್ನ ಬಗ್ಗೆ ಮರುಕ ಹೊಂದಿದ್ದಾರೆ. ನಾವಿಬ್ಬರೂ ಪ್ರಭುಗಳ ಬಗ್ಗೆ ಅದೆಷ್ಟು ಮಾತನಾಡಿದೆವೆಂದರೆ ಅವರು ನಿಮ್ಮನ್ನು ಕಾಣಲು ಕಾತರರಾಗಿರುವರಲ್ಲದೆ , ಬರುವ ಚಳಿಗಾಲದಲ್ಲಿ ಉತ್ತರದ ಕಡೆಗೆ ಪ್ರವಾಸ ಹೋಗುವಾಗ ನಿಮ್ಮನ್ನು ಕಂಡು ಗೌರವ ಸಲ್ಲಿಸಬೇಕೆಂದಿದ್ದಾರೆ. ೨೫ ವರ್ಷಗಳ ಕಾಲ ಕಾಥೆವಾಡಕ್ಕೆ ಸಲಹೆಗಾರರಾಗಿರುವ ಈ ವೃದ್ಧ ಮಹಾ ಅನುಭವಿಯನ್ನು ನೋಡಲು ಪ್ರಭುಗಳು ಬಯಸುತ್ತಾರೆ ಎನ್ನುವ ಧೈರ್ಯ ಮಾಡುತ್ತೇನೆ. ಸಾಂಪ್ರದಾಯಿಕ ರಾಜಕಾರಣ ಬಲ್ಲ ಈಗ ಬದುಕಿರುವ ಏಕೈಕ ವ್ಯಕ್ತಿ ಇವರು. ಈಗಿರುವ ಆಡಳಿತ ಯಂತ್ರವನ್ನು ಸಂಘಟಸಿ ಸುಸ್ಥಿತಿಯಲ್ಲಿಡಬಲ್ಲ ಸಮರ್ಥರಿವರು ; ಆದರೆ ಮುಂದಕ್ಕೆ ಒಂದಡಿ ಇಡಲೂ ಹಿಂಜರಿಯುವ ಕೊನೆಯ ವ್ಯಕ್ತಿ .
ಬಾಂಬೆಯಲ್ಲಿ ನನ್ನ ಸ್ನೇಹಿತ ರಾಮದಾಸ ಬ್ಯಾರಿಸ್ಟರ್-ಅಟ್ ಲಾ ಕಾಣಲು ಹೋಗಿದ್ದೆನು. ಆತ ಭಾವುಕ ಸ್ವಭಾವದ ಸಜ್ಜನನಾಗಿದ್ದು ಪ್ರಭುಗಳ ಗುಣಗಳನ್ನು ಮೆಚ್ಚುತ್ತಾನಲ್ಲದೆ ಇದು ನಡು ಬೇಸಿಗೆ ಅಲ್ಲದೆ ಹೋಗಿದ್ದರೆ ನಿಮ್ಮನ್ನು ನೋಡಲು ಹಾರಿ ಹೋಗುತ್ತಿದ್ದೆ ಎನ್ನುತ್ತಾನೆ. ಆತನ ತಂದೆ ೩೧ ನೇ ತಾರೀಕು ಷಿಕಾಗೊಗೆ ಹೋಗಬೇಕೆಂದಿದ್ದಾರೆ ; ಹಾಗಾದರೆ ನಾವಿಬ್ಬರೂ ಒಟ್ಟಿಗೆ ಹೋಗುತ್ತೇವೆ. ಇಂದು ನಾನು ಕೆಲವು ಸ್ಟೀಲ್ ಟ್ರಂಕ್’ಗಳನ್ನು ಕೊಳ್ಳಲು ಹೋಗಬೇಕೆಂದಿದ್ದು ಮದ್ರಾಸಿನಿಂದ ಹಣ ಬರುವುದನ್ನೇ ಕಾಯುತ್ತಿದ್ದೇನೆ. ನಾನು ಜೈಪುರದಿಂದ ತಂತಿ ಕಳಿಸಿದರೂ , ಅವರಿಗೆ ಅನುಮಾನಗಳಿದ್ದು, ನಾನು ಮತ್ತೊಮ್ಮೆ ಸಂಪರ್ಕಿಸುವುದನ್ನು ಕಾಯುತ್ತಿದ್ದರು. ನಾನು ಅವರಿಗೆ ಮತ್ತೊಮ್ಮೆ ತಂತಿ ಕಳಿಸಿದ್ದೇನೆ, ಪತ್ರ ಬರೆದಿದ್ದೇನೆ ಕೂಡ.
ದಾರಿಯಲ್ಲಿ ನಮಗೆ ಜೈಪುರದ ನೊಬೆಲ್ ಹೈಸ್ಕೂಲ್’ನ ಮುಖ್ಯೋಪಾಧ್ಯಾಯ ರಾಮನಾಥರ ಒಡನಾಟ ದೊರೆಯಿತು. ಮೊದಲ ಸಲ ನಾನು ಖೇತ್ರಿಗೆ ಬಂದಾಗ ನಮ್ಮಿಬ್ಬರ ನಡುವೆ ಸಸ್ಯಾಹಾರ ಕುರಿತಾಗಿ ವಾದ-ವಿವಾದಗಳಾಗಿದ್ದವು. ಈ ನಡುವೆ ಆತ ಕೆಲವು ಅಮೆರಿಕನ್ ಬರಹಗಾರರನ್ನು ಹಿಡಿದು , ಅವರ ವಾದಗಳಿಂದ ನನ್ನ ಮೇಲೆರಗಿದನು. ಆತನ ಲೇಖಕ ಮಾನವನ ಜೀರ್ಣಾಂಗ ವ್ಯವಸ್ಥೆ ಮತ್ತು ಹಲ್ಲು ಹಸುಗಿರುವಂತೆಯೇ ಇದ್ದು ಮನುಷ್ಯ ಸಸ್ಯಾಹಾರಿಯೆಂದು ತೃಪ್ತಿಯಾಗುವಂತೆ ವಿವರಿಸಿದ್ದಾನಂತೆ. ಆದ್ದರಿಂದ ನೈಸರ್ಗಿಕವಾಗಿ ಮನುಷ್ಯ ಸಸ್ಯಾಹಾರಿ. ಆತ ಒಳ್ಳೆಯ ವ್ಯಕ್ತಿ ಮತ್ತು ಸಜ್ಜನ. ಆದ್ದರಿಂದ ನಾನು ಆತ ಅಮೆರಿಕದಾತನ ಮೇಲಿರಿಸಿರುವ ನಂಬಿಕೆಯನ್ನು ಕದಲಿಸಲು ಇಚ್ಛಿಸಲಿಲ್ಲ. ಆದರೂ ನನ್ನ ನಾಲಿಗೆಯ ತುದಿಯ ಮೇಲೆ ನಮ್ಮ ಜೀರ್ಣಾಂಗ ವ್ಯವಸ್ಥೆ ಹಸುವಿನಂತೆ ಇದ್ದುದಾದರೆ ಅವುಗಳಂತೆ ನಾವು ಹುಲ್ಲು ತಿಂದು ಅರಗಿಸಕೊಳ್ಳಬಹುದಿತ್ತು ಎಂದು ಬಂದಿದ್ದಿತು. ಅದು ನಿಜವೇ ಆಗಿದ್ದರೆ ಬರಗಾಲದ ಸಮಯದಲ್ಲಿ ಯಥೇಚ್ಛವಾಗಿ ಸಿಗುವ ತಮ್ಮ ನೈಸರ್ಗಿಕ ಆಹಾರ ಹುಲ್ಲನ್ನು ತಿಂದು ಬದುಕದೆ , ಹಸಿದು ಸಾಯುವ ಭಾರತೀಯರಷ್ಟು ಮೂರ್ಖರು ಇನ್ನೊಬ್ಬರಿಲ್ಲ . ಪಕ್ಕದ ಗುಡ್ಡಕ್ಕೆ ಹೋಗಿ ಬೇಕಾದಷ್ಟು ಹುಲ್ಲನ್ನು ತಂದು ಹೊಟ್ಟೆ ತುಂಬುವಷ್ಟು ನೀಡದೆ , ಬಗೆಬಗೆಯಲ್ಲಿ ಅದಕ್ಕೆ ಹೆಣಗುವ ಆಳುಗಳಷ್ಟು ಮೂರ್ಖರು ಮತ್ತೊಬ್ಬರಿಲ್ಲ .!! ಅಮೆರಿಕದ ಅದ್ಭುತ ಸಂಶೋಧನೆ !!! ಅಂತಹ ಮಾನವ ಹಸುಗಳ ಪವಿತ್ರ ಲದ್ದಿ ಅಮೆರಿಕದ ಆ ಲೇಖಕ ಮತ್ತು ಆತನ ಭಾರತೀಯ ಅನುಯಾಯಿಗಳಿಗೆ ಉಪಯೋಗವಾಗಬಹುದು ಎಂದು ಭಾವಿಸುತ್ತೇನೆ. ಹಾಗೆ ಆಗಲಿ- ಮಾನವ-ಹಸು ಸಿಧ್ಧಾಂತಕ್ಕೆ.
ಪ್ರಭುಗಳ ಮುಂದಿರಿಸಲು ಹೆಚ್ಚಿನದನೂ ಇಲ್ಲವಾಗಿ ಇಲ್ಲಿಗೆ ಕೊನೆಗೊಳಿಸುತ್ತೇನೆಂದು ಬೇಡಿಕೊಳ್ಳುತ್ತೇನೆ.
ಎಲ್ಲ ಒಳಿತನ್ನು ಕೊಡುವಾತ ತನ್ನ ಅತ್ಯುತ್ತಮ ಆಶೀರ್ವಾದಗಳನ್ನು ನಿಮ್ಮ ಮತ್ತು ನಿಮ್ಮವರ ಮೇಲಿರಿಸಲಿ.
ನಿಮ್ಮ ವಿಧೇಯನಾಗಿ ಉಳಿದಿರುವ-
ವಿವೇಕಾನಂದ
ಸ್ವಾಮಿಗಳು ಸ್ನೇಹಿತ ಮನ್ಮಥನಾಥ ಭಟ್ಟಾಚಾರ್ಯನಿಗೆ ಬರೆದ ಪತ್ರ
೫/೯/೧೮೯೪ ರಂದು ಸ್ವಾಮಿಗಳು ಮನ್ಮಥನಾಥ ಭಟ್ಟಾಚಾರ್ಯನಿಗೆ ಬಂಗಾಳಿಯಲ್ಲಿ ಬರೆದ ಒಂದು ಸುದೀರ್ಘ ಪತ್ರ ಕುತೂಹಲಕಾರಿಯಾಗಿದೆ.
‘ನಿನ್ನ ಪ್ರೀತಿಪೂರ್ವಕ ಪತ್ರವನ್ನು ಓದಿ ಸಂತೋಷವಾಯಿತು. ಸಾಧ್ಯವಾದಷ್ಟು ಬೇಗ ಹೊಲಿಗೆ ಯಂತ್ರದ ಬಗ್ಗೆ ವಿಚಾರಿಸಿ ನಿನಗೆ ತಿಳಿಸುತ್ತೇನೆ. ನಾನೀಗ ಸಮುದ್ರ ತೀರದ ಒಂದು ಹಳ್ಳಿ ಅನ್ನಿಸ್ಕ್ವಾಮ್’ನಲ್ಲಿ ವಿಶ್ರಾಂತಿಯಲ್ಲಿದ್ದೇನೆ ; ಯಂತ್ರದ ಬಗ್ಗೆ ವಿಚಾರಿಸಲು ನಗರಕ್ಕೆ ಹೋಗುತ್ತೇನೆ. ಬೇಸಿಗೆಯಲ್ಲಿ ಕಡಲಿನ ತೀರದ ಜಾಗಗಳು ಜನರಿಂದ ಕಿಕ್ಕಿರಿದಿರುತ್ತವೆ.; ಕೆಲವರು ಸ್ನಾನಕ್ಕೆ , ಕೆಲವರು ವಿಶ್ರಾಂತಿಗೆ ಮತ್ತೆ ಕೆಲವರು ಗಂಡಂದಿರ ಬೇಟೆಗೆ ಬರುತ್ತಾರೆ.
ಈ ದೇಶದಲ್ಲಿ ಬಹಳ ಔಪಚಾರಿಕ ನಡವಳಿಕೆಗಳಿವೆ. ಹೆಂಗಸರ ಉಪಸ್ಥಿತಿಯಲ್ಲಿ ಗಂಡಸರು ಕುತ್ತಿಗೆಯಿಂದ ತಲೆಯವರೆಗೆ ಮೈಮುಚ್ಚಿಕೊಂಡಿರಬೇಕು. ದೇಹದ ನೈಸರ್ಗಿಕ ಕರೆಗಳ ಬಗ್ಗೆ ಹೆಚ್ಚು ಹೇಳುವಂತಿಲ್ಲ ; ಕಕ್ಕಸಿಗೆ ಹೋಗುವುದೂ ಗೊತ್ತಾಗದಷ್ಟು ಜಾಗರೂಕತೆಯಿಂದ ಇರಬೇಕು. ಆದರೆ ಈ ದೇಶದಲ್ಲಿ ಕರವಸ್ತ್ರದೊಳಗೆ ಸಾವಿರ ಸಲ ಸೀನಿದರೂ ನಡೆಯುತ್ತದೆ ; ಆದರೆ ತೇಗುವುದು ಅತ್ಯಂತ ಅನಾಗರಿಕ ಲಕ್ಷಣ ಎನಿಸುತ್ತದೆ. ಇಲ್ಲಿನ ಹೆಂಗಸರು ಸೊಂಟದ ಮೇಲಿನ ದೇಹದ ಭಾಗವನ್ನು ಪ್ರದರ್ಶಿಸಲು ಅಳುಕುವುದಿಲ್ಲ. ಕುತ್ತಿಗೆಯ ಕೆಳಗೆ ಆಳ ಸೀಳಿರುವ ಗೌನ್’ಗಳನ್ನು ನೀನು ನೋಡಿರಬಹುದು. ಆದರೆ ಬರಿಗಾಲಲ್ಲಿ ಹೋಗುವುದು ಬತ್ತಲಾಗಿ ಹೋದಂತೆ ಎಂದು ಭಾವಿಸಲಾಗುತ್ತದೆ. ನಮ್ಮದು ಆತ್ಮ ಚಿಂತನೆಯಾದರೆ ಅವರದ್ದು ದೇಹದ ಚಿಂತನೆ. ದೇಹವನ್ನು ಶುದ್ಧಿ ಮಾಡಿಕೊಳ್ಳುವುದಕ್ಕೆ , ಸಿಂಗರಿಸಿಕೊಳ್ಳುವುದಕ್ಕೆ ಕೊನೆಯೇ ಇಲ್ಲ. ಇವುಗಳನ್ನು ಮಾಡದವರಿಗೆ ಸಮಾಜದಲ್ಲಿ ಸ್ಥಾನವಿಲ್ಲ.
ಬೆರಣಿಯನ್ನು ಬಳಸಿ ಅಡುಗೆ ಮಾಡುವ ವಿಧಾನ , ನೆಲದ ಮೇಲೆ ಕುಳಿತು ಉಣ್ಣುವ ನಮ್ಮ ಪದ್ದತಿಯನ್ನು ಅವರು ಹಂದಿಗಳು ತಿನ್ನುವಂತೆ ಎಂದು ಪರಿಗಣಿಸುತ್ತಾರೆ. ಹಿಂದೂಗಳಿಗೆ ಹೇಸಿಗೆಯ ಪ್ರಜ್ಞೆಯಿಲ್ಲ , ಹಂದಿಗಳಂತೆ ಸೆಗಣಿ ತಿನ್ನುತ್ತಾರೆ ಎನ್ನುತ್ತಾರೆ. ‘ಸೆಗಣಿ’ ಪದವೇ ಇಂಗ್ಲಿಷ್’ನಲ್ಲಿ ನಿಷಿದ್ಧ. ಇದೇ ಸಮಯದಲ್ಲಿ ಜನ ತೊಳೆಯುವ ಚಿಂತೆಯನ್ನೇ ಮಾಡದೆ ಒಂದೇ ಲೋಟದಲ್ಲಿ ಹಲವು ಜನ ಕಚ್ಚಿ ಕುಡಿಯುತ್ತಾರೆ , ಅಡುಗೆಗೆ ಮುಂಚೆ ಪಾತ್ರೆಗಳನ್ನು ತೊಳೆಯಬೇಕೆಂಬ ನಿಯಮವನ್ನು ಪಾಲಿಸುವುದು ಅಪರೂಪ. ಆದರೆ ಅಡುಗೆಯವಳ ಬಟ್ಟೆ ಸ್ವಲ್ಪ ಕೊಳೆಯಾಗಿದ್ದರೂ ಆಕೆಯನ್ನು ಹೊರದಬ್ಬುತ್ತಾರೆ. ಮೇಜಿನ ಮೇಲಿರುವ ಎಲ್ಲ ಉಪಕರಣಗಳು ಶುದ್ಧ, ತಾಜ. ಅವರು ಜಗತ್ತಿನಲ್ಲಿಯೇ ಅತಿ ಶ್ರೀಮಂತರು ; ಅವರ ಆಮೋದ ಪ್ರಮೋದ ವಿಲಾಸಗಳು ಬಿಕ್ಷುಕನ ವರ್ಣನೆಗಳು……..
ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಲು ಹೆತ್ತವರು ಹೆಣಗಿದರೆ ಇಲ್ಲಿ ಹೆತ್ತವರ ಬದಲು ಕನ್ಯೆಯರು ಹೆಣಗುತ್ತಾರೆ –ಇಲ್ಲಿ ಗಂಡನನ್ನು ಹುಡುಕಿಕೊಳ್ಳುವ ಜವಾಬ್ದಾರಿ ಹುಡುಗಿಯದು. ಅವರ ಈ ಎಲ್ಲ ಈ ಪ್ರಕರಣಗಳಲ್ಲಿ ನಾನು ಬಹು ಸನಿಹದ ಭಾಗಿ. ಆದ್ದರಿಂದ ಅವರು ಆಡುವ ಆಟಗಳನ್ನು ನೋಡಿದ್ದೇನೆ ಮತ್ತು ಈಗಲೂ ನೋಡುತ್ತಿದ್ದೇನೆ. ಅದಕ್ಕಾಗಿ ಅವರು ಔತಣಗಳನ್ನು ಏರ್ಪಡಿಸುವುದು , ಸಂಗೀತ ಗೋಷ್ಟಿಗಳಿಗೆ ಹೋಗುವುದು , ನರ್ತಿಸುವುದು , ನೀರಿನ ತಾಣಗಳಲ್ಲಿ ಅಲೆಯುವುದು ಎಲ್ಲವದೂ ಸರಿ. ಹದಿಹರೆಯದ ಹೆಣ್ಣುಗಳು ಗಂಡನ್ನು ಹೇಗೆ ಬಲೆಗೆ ಹಾಕಿಕೊಳ್ಳಬೇಕು ಎನ್ನುವ ತಂತ್ರಗಾರಿಕೆಯಲ್ಲಿರುತ್ತಾರೆ. ಹುಡುಗರನ್ನು ಸುತ್ತುತ್ತಾರೆ. ಇನ್ನೊಂದು ಬದಿಯಲ್ಲಿ ಹುಡುಗರು ಬಹಳ ಜಾಗರೂಕರಾಗಿರುತ್ತಾರೆ. ಹುಡುಗಿಯರೊಂದಿಗೆ ಬೆರೆಯುತ್ತಾರೆ , ಪ್ರಣಯ ಚೇಷ್ಟೆಗಳನ್ನು ಮಾಡುತ್ತಾರೆ. ಬಂಧನಕ್ಕೆ ಒಳಗಾಗುವ ಸಮಯ ಬಂದಾಗ ತಪ್ಪಿಸಿಕೊಳ್ಳುತ್ತಾರೆ. ಹುಡುಗರು ಹುಡುಗಿಯರನ್ನು ತಮಗಿಂತ ಶ್ರೇಷ್ಟರೆಂದು ಪರಿಗಣಿಸುತ್ತಾರೆ , ಗೌರವಿಸುತ್ತಾರೆ, ಅಡಿಯಾಳುಗಳಾಗುತ್ತಾರೆ. ; ಹುಡುಗಿಯರು ಅವರನ್ನು ತಲುಪಲು ಕೈಚಾಚಿದ ತಕ್ಷಣ ಸಿಗದಂತೆ ಪರಾರಿಯಾಗತ್ತಾರೆ. ಇಂತಹ ಹಲವು ಯತ್ನಗಳ ನಂತರ ಹುಡುಗಿ ಒಬ್ಬ ಹುಡುಗನನ್ನು ಹಿಡಿದುಹಾಕುತ್ತಾಳೆ. ಹುಡುಗಿ ಶ್ರೀಮಂತಳಾಗಿದ್ದಾರೆ ಹಲವು ಹುಡುಗರು ಆಕೆಯ ಸುತ್ತ ಕುಣಿಯುತ್ತಾರೆ. ಬಡಹುಡುಗಿಯರ ಸ್ಥಿತಿ ಬಹಳ ಕಷ್ಟ. ಬಡ ಹುಡುಗಿ ಅಪ್ರತಿಮ ಸುಂದರಿಯಾಗಿದ್ದರೆ ಆಕೆಗೆ ಗಂಡು ಸಿಕ್ಕಬಹುದು-ಇಲ್ಲದಿದ್ದರೆ ಬಾಳೆಲ್ಲ ಕಾಯಬೇಕು. ನಮ್ಮ ದೇಶದಲ್ಲಿ ಇರುವಂತೆ ಇಲ್ಲಿಯೂ ಸಾವಿರ ಮದುವೆಗಳಲ್ಲಿ ಒಂದು ಮದುವೆ ಮಾತ್ರ ಪರಸ್ಪರ ಪ್ರೇಮಾಂಕುರವಾಗಿ ನಡೆಯುತ್ತದೆ.; ಉಳಿದವೆಲ್ಲ ಹಣದ ಮೇಲೆ ನಿಂತಿವೆ. ಇದಾದ ನಂತರ ಜಗಳ ಮತ್ತು ಕೊನೆಗೆ ತೊಲಗು ಎಂದರೆ ವಿಚ್ಛೇದನ. ನಮ್ಮಲ್ಲಿ ಇದಿಲ್ಲ - ನೇಣಿಗೆ ಮೊರೆಹೋಗುವುದೊಂದೆ ಕೊನೆಯ ಮಾರ್ಗ. ಎಲ್ಲ ದೇಶಗಳಲ್ಲಿಯೂ ಇದು ಹೀಗೆಯೇ. ಇಲ್ಲಿ ಮಾತ್ರ ಹುಡುಗಿಯರು ತಾವೇ ಎಲ್ಲ ವಿಷಯಗಳನ್ನು ನಿಭಾಯಿಸುತ್ತಾರೆ ; ನಮ್ಮ ದೇಶದಲ್ಲಿ ಹೆತ್ತವರ ನೆರವು ಸಿಗುತ್ತದೆ. ….ಎರಡರಲ್ಲೂ ಫಲಿತಾಂಶ ಒಂದೇ ..’
ಇತ್ತೀಚಿನ ದಿನಗಳಲ್ಲಿ ಅಮೆರಿಕದ ಹುಡುಗಿಯರು ಮದುವೆಯಾಗುತ್ತಿಲ್ಲ. ಅಂತರ್ಯುದ್ಧದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಗಂಡಸರು ಕೊಲ್ಲಲ್ಪಟ್ಟ ನಂತರ ಹೆಂಗಸರು ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳತೊಡಗಿದರು.ಆಗಿನಿಂದ ತಾವು ಪಡೆದ ಸ್ವಾತಂತ್ರವನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲ. ಅವರು ಸ್ವಂತ ಗಳಿಸಿ ಜೀವನ ಮಾಡುವುದರಿಂದ ಮದುವೆಯಲ್ಲಿ ಅರ್ಥವಿಲ್ಲ , ನಾವು ನಿಜವಾಗಿಯೂ ಪ್ರೇಮದಲ್ಲಿ ಬಿದ್ದರೆ ಆಗ ಮದುವೆಯಾಗುತ್ತೇವೆ. ಹಾಗಲ್ಲದಿದ್ದರೆ ನಮ್ಮ ಜೀವನವನ್ನು ನಾವು ಸಾಗಿಸುತ್ತೇವೆ ಎನ್ನುತ್ತಾರೆ. ತಂದೆ ಕೋಟ್ಯಧಿಪತಿಯಾದರೂ ಮದುವೆಗೆ ಮುಂಚೆ ಮಗ ಗಳಿಸಲೇ ಬೇಕು. ತಂದೆಯ ಗಳಿಕೆಯ ಮೇಲೆಯೇ ಒಬ್ಬಾತ ಮದುವೆಯಾಲಾಗದು. ಅದನ್ನೇ ಈಗ ಹುಡುಗಿಯರು ಬಯಸುತ್ತಿದ್ದಾರೆ. ಮದುವೆಯಾದ ತಕ್ಷಣ ಮಗ ತನ್ನ ಕುಟುಂಬಕ್ಕೆ ಅಪರಿಚಿತನಾದರೆ ಮಗಳು ಮದುವೆಯಾಗಿ ಗಂಡನನ್ನು ಹೆತ್ತವರ ಮನೆಗೆ ಕರೆತರುತ್ತಾಳೆ. ಗಂಡಸರು ಹೆಂಡತಿಯ ಹೆತ್ತವರನ್ನು ಕಾಣಲು ಹತ್ತರು ಬಾರಿ ಹೋಗುತ್ತಾರಾದರೂ ಸ್ವಂತ ತಂದೆ ತಾಯಿಗಳನ್ನು ನೋಡಲು ಹೋಗುವುದು ಅಪರೂಪ. ಅತ್ತೆ ತಮ್ಮ ಕುತ್ತಿಗೆ ಏರಿಯಾಳೆಂಬ ಭಯ ಅಳಿಯಂದಿರಿಗೆ.
ಈ ದೇಶದಲ್ಲಿ ಎಲ್ಲೆಲ್ಲೂ ಸಂಪತ್ತಿನ ಹೊಳೆ, ಚೆಲುವಿನ ಅಲೆ ಹಾಗೂ ಜ್ಞಾನದ ಸೆಲೆ ಹರಿದಾಡುತ್ತಿವೆ. ದೇಶ ಆರೋಗ್ಯಮಯವಾಗಿದ್ದು , ಈ ಜೀವನವನ್ನು ಹೇಗೆ ಅನುಭವಿಸಬೇಕೆಂದು ಬಲ್ಲವರು ಇವರು ,…. ಯುರೋಪಿನ ರಾಜಕುಮಾರರು ಬಡತನ ತಟ್ಟಿದರೆ ಮದುವೆಯಾಗಲು ಇಲ್ಲಿಗೆ ಬರುತ್ತಾರೆ. ಸಾಮಾನ್ಯ ಅಮೆರಿಕನ್’ಗೆ ಇದು ಇಷ್ಟವಿಲ್ಲ ; ಆದರೆ ಕೆಲ ಶ್ರೀಮಂತ , ಚೆಲುವೆಯರು ಸ್ಥಾನ , ಹೆಸರಿಗೆ ಬಿದ್ದು ಇದಕ್ಕೆ ಒಪ್ಪುತ್ತಾರೆ. ಈ ದೇಶದ ಗಂಡಂದಿರು ಹೆಂಡದಿರ ಗುಲಾಮರು ; ಆದರೆ ಯುರೋಪಿಯನ್ ಹೆಂಗಸರು ಗಂಡಂದಿರ ಗುಲಾಮರು-ಇದನ್ನು ಅಮೆರಿಕದ ಹೆಂಗಸರು ಮೆಚ್ಚುವುದಿಲ್ಲ. ಯಾವುದೇ ವಿಚಾರವಿರಲಿ ಗಂಡಸರು ‘ಆಯಿತು, ಆಗಲಿ ಮ್ಯಾಡಂ ‘ ಎನ್ನುವುದೊಂದೇ , ಇಲ್ಲದಿದ್ದರೆ ಹೆಂಗಸರಿಗೆ ಇತರರೆದುರು ಮುಖಭಂಗವಾದಂತೆ.
ಅಮೆರಿಕದ ಹೆಂಗಸರು ಭಾವುಕರು ಹಾಗೂ ಅವರಿಗೆ ಪ್ರಣಯದಾಟದ ಹುಚ್ಚು. ಪ್ರಣಯದ ಯಾವ ಭಾವನೆಯೂ ಇಲ್ಲದ ನಾನೊಬ್ಬ ವಿಚಿತ್ರ ಪ್ರಾಣಿ , ಆದ್ದರಿಂದ ಅಂತಹ ಯಾವ ಭಾವನೆಯನ್ನೂ ಅವರು ನನಗೆ ತೋರಿಸಲಾಗುತ್ತಿಲ್ಲ. ಅವರು ನನಗೆ ಬಹಳ ಗೌರವ ನೀಡುತ್ತಾರೆ. ಅವರು ನನ್ನನ್ನು ‘ಅಪ್ಪ’ ‘ಅಣ್ಣ’ ಎಂದು ಕರೆಯುವಂತೆ ನೋಡಿಕೊಳ್ಳುತ್ತೇನೆ. ಇದರ ಹೊರತು ಬೇರೆ ಯಾವ ಭಾವನೆಯಿಂದಲೂ ನನ್ನ ಹತ್ತಿರ ಬರಲು ಅವಕಾಶ ಕೊಟ್ಟಿಲ್ಲ. ಕ್ರಮೇಣ ಎಲ್ಲವೂ ನೇರವಾಗುವುದು. ಈ ದೇಶದ ಕ್ರೈಸ್ತ ಮಿನಿಸ್ಟರ್’ಗಳು ಪಾಪಿಗಳನ್ನು ಕದಲಿಗೆ ಎಸೆಯಲು ಕಾತುರರಾಗಿದ್ದಾರೆ. ಅವರಲ್ಲಿ ಕೆಲವರು ಬಹಳ ಒಳ್ಳೆಯವರು. ಹೇಗಾದರೂ ……. ಈ ದೇಶದ ಹೆಂಗಸರಲ್ಲಿ ನನ್ನ ಬಗ್ಗೆ ಬಹಳ ಗೌರವವಿದೆ. …. ಈ ದೇಶದ ಹೆಂಗಸರ ಬಗ್ಗೆ ನನಗೆ ಬಹಳ ಆದರವಿದೆ. ಈವರೆಗೆ ಮದುವೆಯಾಗದ ಹುಡುಗಿಯರಲ್ಲಿ ಸಚ್ಛಾರಿತ್ರಳಲ್ಲದ ಒಬ್ಬ ಹುಡುಗಿಯನ್ನೂ ನಾನು ನೋಡಿಲ್ಲ. ಮದುವೆಯಾದವರು ಮತ್ತು ವಿಧವೆಯರು ಮಾತ್ರ ಚಾರಿತ್ರ್ಯಹೀನರಾಗಬಹುದು. ಮದುವೆಯಾಗದ ಹುಡುಗಿಯರ ಭವಿಷ್ಯ ಉಜ್ಜ್ವಲವಾಗಿದೆ. ಅವರ ಪ್ರಣಯಾಸಕ್ತ ಸ್ವಭಾವ ಎನ್ನುವ ಸಣ್ಣ ದೋಷವನ್ನು ಬಿಟ್ಟರೆ ನಮ್ಮ ‘ಕೋತಿ’ಗಳು ಅವರ ಸನಿಹ ಬರಲು ಅರ್ಹರಲ್ಲ. ಸೊರಗಿರುವ ಒಣಗಿದ ಹಣ್ಣಿನಂತಿರುವ ಭಾರತದಲ್ಲಿ ನೀನು ಕಾಣುವ ಆ ಪಾಶ್ಚಾತ್ಯ ಹೆಂಗಸರು ಇಂಗ್ಲಿಷರು. ಯುರೋಪಿನಲ್ಲಿ ಇಂಗ್ಲಿಷರು ಕುರೂಪಿ ಜನಾಂಗ. ಅಮೆರಿಕದಲ್ಲಿ ಯುರೋಪಿನ ಅತ್ಯುತ್ತಮ ಜನಾಂಗಗಳ ರಕ್ತ ಬೆರೆತಿವೆ. ಆದ್ದರಿಂದ ಅಮೆರಿಕ ಹೆಂಗಸರು ಅಪ್ರತಿಮ ಸುಂದರಿಯರು. ಅಬ್ಬಾ ಅವರು ತಮ್ಮ ಸೌಂದರ್ಯವನ್ನು ಹೇಗೆ ಕಾದುಕೊಳ್ಳುತ್ತಾರೆ ! ಹೆತ್ತ ನಂತರವೂ ಹೆಣ್ಣು ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಬಲ್ಲಳೇ ?........ ಹತ್ತು ವರ್ಷಗಳಾದ ನಂತರ ಪ್ರತಿ ಗಂಟೆಯೂ ? ಎಂತಹ ಭಯಂಕರ ಪಾಪ !….ನಮ್ಮ ದೇಶದ ಅತ್ಯಂತ ಸುಂದರಿಯೂ ಇವರ ಮುಂದೆ ಕರಿಗೂಬೆಯಂತೆ ಕಾಣತ್ತಾಳೆ. ಆದರೂ ಪಂಜಾಬಿನ ಹೆಣ್ಣುಗಳಿಗೆ ಅತ್ಯುತ್ತಮ ಮೈಮಾಟವಿದೆಯೆಂದು ಹೇಳಬಹುದು. …
ಅದೆಷ್ಟೋ ಅಮೆರಿಕದ ಹೆಂಗಸರು ಅತ್ಯುತ್ತಮ ಶಿಕ್ಷಣ ಪಡೆದಿದ್ದು ಅವರೆದುರು ಪಂಡಿತ ಪ್ರಾಧ್ಯಾಪಕರೇ ನಾಚಿಕೆಪಡುಬೇಕಾಗಿದೆ; ಅಷ್ಟೇ ಅಲ್ಲ ಅವರು (ತಮ್ಮನ್ನು ಕುರಿತಾಗಿ) ಇತರರ ಅಭಿಪ್ರಾಯಗಳನ್ನು ಲಕ್ಷಿಸುವುದೇ ಇಲ್ಲ. (ಅಮೆರಿಕ ಹೆಂಗಸರ) ಅವರ ಅನುಕಂಪ , ಚಿಂತನೆ, ಕ್ರಿಯಾಶೀಲತೆಗಳು ಅದೆಷ್ಟು ಉದಾತ್ತ. ! ಈ ದೇಶದ ಗಂಡಸೊಬ್ಬನು ಭಾರತಕ್ಕೆ ಭೇಟಿ ನೀಡಿದರೆ ಯಾರೊಬ್ಬರೂ ಆತನನ್ನು ಮುಟ್ಟುವುದಿಲ್ಲ ಎನ್ನುವ ಬಗ್ಗೆ ಸ್ವಲ್ಪ ಚಿಂತಿಸು ; ಅದರೆ ಇಲ್ಲಿ ನಾನು ಅತ್ಯಂತ ಶ್ರೇಷ್ಟರ ಮನೆಗಳಲ್ಲಿಯೂ ಅವರ ಸ್ವಂತ ಮಗನಂತೆ ನಾನು ಬೇಕಾದುದನ್ನು ಮಾಡುವ ಸ್ವಾತಂತ್ರವಿದೆ ! ನಾನು ಮಗುವಿದ್ದಂತೆ ; ಅವರ ಹೆಂಗಸರು ನನಗಾಗಿ ಕೊಳ್ಳುತ್ತಾರೆ, ಸಂದೇಶಗಳನ್ನು ಒಯ್ಯುತ್ತಾರೆ. ಉದಾಹರಣೆಗೆ ನಾನು ಒಬ್ಬ ಹುಡುಗಿಗೆ ಹೊಲಿಗೆ ಯಂತ್ರದ ಬಗ್ಗೆ ಮಾಹಿತಿ ಕೊಡಲು ಬರೆದಿದ್ದೆ. ಅದಕ್ಕೆ ಆಕೆ ಎಲ್ಲ ಮಾಹಿತಿಯನ್ನೂ ಪಡೆದು ನನಗೆ ತಿಳಿಸುತ್ತಾಳೆ. ಹಾಗೆಯೇ ಖೇತ್ರಿ ರಾಜನಿಗೆ ಒಂದು ಫೋನೋಗ್ರಾಫ್ ಕಳಿಸಲಾಯಿತು ; ಹುಡುಗಿಯರೇ ಅದನ್ನೆಲ್ಲ ಅತ್ಯುತ್ತ್ಮವಾಗಿ ನಿರ್ವಹಿಸಿದರು . ದೇವರೇ ! ದೇವರೇ ! ಅದು ಸ್ವರ್ಗ ಮತ್ತು ನರಕಗಳ ನಡುವಿನ ವ್ಯತ್ಯಾಸ. ಅವರು ಚೆಲುವಿನಲ್ಲಿ ಲಕ್ಶ್ಮಿಯರು , ಕೌಶಲ ಮಾತು ಸಾಧನೆಯಲ್ಲಿ ಸರಸ್ವತಿಯರು. ಇದು ಪುಸ್ತಕ ಓದುವುದರಿಂದ ಬರುವಂತಹುದಲ್ಲ. ಈ ಜಗತ್ತು ಹೇಗಿದೆ ಎಂದು ನೋಡಲು ಕೆಲ ಗಂಡಸು , ಹೆಂಗಸರನ್ನು ನೀನು ಕಳಿಸಲು ಸಾಧ್ಯವೇ ? ಆಗರೆ ದೇಶ ಎಚ್ಚೆತ್ತುಕೊಳ್ಳುತ್ತದೆ-ಪುಸ್ತಕದ ಓದಿನಿಂದಲ್ಲ. ಇಲ್ಲಿನ ಗಂಡಸರು ಸಂಪತ್ತು ಗಳಿಸುವುದರಲ್ಲಿ ಬಹಳ ಜಾಣರು. ಬೇರೆಯವರು ಧೂಳನ್ನೂ ಕಾಣದಿದ್ದಲ್ಲಿ ಅವರು ಹೊನ್ನನ್ನು ಕಾಣುತ್ತಾರೆ.
ಪತ್ರಗಳು ಸರಿಯಾದ ಸಮಯಕ್ಕೆ ಸುಸ್ಥಿತಿಯಲ್ಲಿ ತಲುಪಿದವು.; ಅವುಗಳ ಬಗ್ಗೆ ಯಾವ ತಕರಾರು ಇಲ್ಲ. ಎದುರಾಳಿಯನ್ನು ಸುಮ್ಮನಿರಿಸಲಾಗಿದೆ. ಅಪರಿಚಿತನಾದ ನನ್ನಂತಹ ತರುಣ ತಮ್ಮ ಬೆಳೆದ ಹೆಣ್ಣು ಮಕ್ಕಳೊಂದಿಗೆ ಜೀವಿಸಲು ಅವಕಾಶ ಮಾಡಿಕೊಟ್ಟಿರುವುದನ್ನು ನೋಡು. ಅದೇ ವೆಳೆಗೆ ನಮ್ಮ ದೇಶದವನೇ ಆದ ಮಜುಂದಾರ ನಾನು ಧೂರ್ತನೆಂದು ಹೇಳುತ್ತಾನಾದರೂ ಅವರು ಅದಕ್ಕೆ ಮಾನ್ಯತೆ ನೀಡಿಲ್ಲ. ! ಅವರೆಷ್ಟು ಉದಾತ್ತರು , ಅದೆಷ್ಟು ಕರುಣಾಳುಗಳು ! ನೂರು ಜನ್ಮವಾದರೂ ಈ ಋಣವನ್ನು ನಾನು ತೀರಿಸಲಾರೆ. ನಾನು ಅಮೆರಿಕದ ಹೆಂಗಸರ ಸಾಕು ಮಗನಿದ್ದಂತೆ. ಅವರೇ ನನ್ನ ನಿಜವಾದ ತಾಯಿಯರು. ಅವರಲ್ಲದೆ ಈ ಜಗತ್ತಿನಲ್ಲಿ ಬೇರೆ ಯಾರು ಏಳಿಗೆ ಹೊಂದಬಲ್ಲರು ? ಕೆಲ ದಿನಗಳ ಹಿಂದೆ ಗ್ರೀನೇಕರ್ ಎನ್ನುವ ಸ್ಥಳದಲ್ಲಿ ಬೌದ್ಧಿಕ ವಲಯದ ಹಲವಾರು ಗಂಡಸರು , ಹೆಂಗಸರು ಸೇರಿದ್ದರು. ಸುಮಾರು ಎರಡು ತಿಂಗಳು (ವಾರ) ನಾನು ಅಲ್ಲಿದ್ದೆನು. ಪ್ರತಿ ದಿನ ನಾನು ಹಿಂದೂ ಶೈಲಿಯಲ್ಲಿ ಮರದ ಕೆಳಗೆ ಕುಳಿತುಕೊಳ್ಳುತ್ತಿದ್ದೆನು ,ನನ್ನ ಅನುಯಾಯಿಗಳು , ಶಿಷ್ಯರು ಹುಲ್ಲಿನ ಮೇಲೆ ನನ್ನ ಸುತ್ತ ಕುಳಿತುಕೊಳ್ಳುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಅವರಿಗೆ ಭೋಧಿಸುತ್ತಿದ್ದೆ-ಅವರೆಷ್ಟು ಪ್ರಾಮಾಣಿಕರಾಗಿದ್ದರು ! ಇಡೀ ದೇಶಕ್ಕೆ ನಾನು ಗೊತ್ತು. ಮಿನಿಸ್ಟರ್’ಗಳು ಬಹಳ ಸಿಟ್ಟಾಗಿದ್ದಾರೆ ; ಆದರೆ ಎಲ್ಲರೂ ಅಲ್ಲ. ಈ ದೇಶದ ತಿಳಿದ ಮಿನಿಸ್ಟರ್’ಗಳಲ್ಲಿ ಬಹಳಷ್ಟು ಜನ ನನ್ನ ಅನುಯಾಯಿಗಳಿದ್ದಾರೆ. ಅಜ್ಞಾನಿ ಮತ್ತು ಬಿಗಿ ನಿಲುವಿನ ಕೆಲವರಿಗೆ ಏನೂ ತಿಳಿಯುವುದಿಲ್ಲ ಮಾತ್ರವಲ್ಲ ನನಗೆ ತೊಂದರೆ ಕೊಡಲು ಹೋಗಿ ತಾವೇ ಅದರಲ್ಲಿ ಸಿಲುಕುತ್ತಾರೆ. ನನ್ನನ್ನು ಹೀಯಾಳಿಸಿ ಮಜುಂದಾರ ಈ ದೇಶದಲ್ಲಿ ಗಳಿಸಿದ್ದ ಗೌರವದಲ್ಲಿ ಮುಕ್ಕಾಲು ಪಾಲು ಕಳೆದುಕೊಂಡಿದ್ದಾನೆ. ನನ್ನನು ಅವರು ದತ್ತು ತೆಗೆದುಕೊಂಡಿದ್ದಾರೆ. ಯಾರಾದರೂ ನನ್ನನ್ನು ಹೀಯಾಳಿಸಿದರೆ ಹೆಂಗಸರು ಆತನನ್ನು ಎಲ್ಲ ಕಡೆಯೂ ಖಂಡಿಸುತ್ತಾರೆ. ನಾನು ಯಾವಾಗ ಭಾರತಕ್ಕೆ ಮರಳುತ್ತೇನೆಂದು ಹೇಳಲಾರೆ. ಮುಂದಿನ ಚಳಿಗಾಲ ಆಗಬಹುದು. ಅಲ್ಲಿಗೆ ಬಂದ ನಂತರ ಅಲೆದಾಡುತ್ತೇನೆ , ಇಲ್ಲಿಯೂ ಅದನ್ನೇ ಮಾಡುತ್ತಿದ್ದೇನೆ. ಹೆಚ್ಚಿಗೆ ಬರೆಯಲು ಏನೂ ಇಲ್ಲ. ದಯವಿಟ್ಟು ಈ ಪತ್ರವನ್ನು ಬಹಿರಂಗಗೊಳಿಸಬೇಡ. ನಾನು ಉಚ್ಚರಿಸುವ ಪ್ರತಿಯೊಂದು ಶಬ್ದದ ಬಗ್ಗೆಯೂ ಎಚ್ಚರದಿಂದಿರಬೇಕು. ದಯವಿಟ್ಟು ಈ ಪತ್ರವನ್ನು ಬಹಿರಂಗಗೊಳಿಸಬೇಡ. ನಾನೀಗ ಸಾರ್ವಜನಿಕ ವ್ಯಕ್ತಿ . ಎಲ್ಲರೂ ಅದರಲ್ಲೂ ವಿಶೇಷವಾಗಿ ಪಾದ್ರಿಗಳು ನನ್ನ ಮೇಲೆ ಕಣ್ಣಿಟ್ಟಿದ್ದಾರೆ. (೧೧)
Comment Box is loading comments...