ಉಡುಗೆ- ತೊಡುಗೆ-ವಸತಿ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ಭಾರತ , ಅಮೆರಿಕ ಮತ್ತು ಇಂಗ್ಲೆಂಡ್’ನಲ್ಲಿ ಸ್ವಾಮಿಗಳು ಇದ್ದಾಗ ತೆಗೆದ ಅಂದಾಜು ೧೦೬ ಫೋಟೊಗಳು ಲಭ್ಯವಿವೆ. ಅವುಗಳನ್ನು (೧) ಪರಿವ್ರಾಜಕ ಜೀವನಕ್ಕಿಂತ ಮೊದಲು (೨) ಪರಿವ್ರಾಜಕನಾಗಿ (೩) ಅಮೆರಿಕದಲ್ಲಿ ಮತ್ತು (೪) ಇಂಗ್ಲೆಂಡ್’ನಲ್ಲಿ ಎಂದು ನಾಲ್ಕು ಬಗೆಯಲ್ಲಿ ಮತ್ತು ಒಂಟಿ ಮತ್ತು ಗುಂಪು ಎನ್ನುವ ವರ್ಗಗಳಲ್ಲಿ ಗುರುತಿಸಬಹುದು.
(೧) ಸ್ವಾಮಿಗಳು ಪರಿವ್ರಾಜಕ ದಿನಗಳಲ್ಲಿ ಆ ಕಾಲದ ಸಾಮಾನ್ಯ ಸಂನ್ಯಾಸಿಗಳಿಗಿಂತ ಭಿನ್ನವಾದ ಸಭ್ಯವಾದ ಬಟ್ಟೆಗಳನ್ನು ತೊಡುತ್ತಿದ್ದರು. ಬೆಳಗಾವಿ ಮತ್ತು ತಿರುವನಂತಪುರದಲ್ಲಿ ತೆಗೆಸಿಕೊಂಡಿರುವ ಫೋಟೊಗಳನ್ನು ಗಮನಿಸಿದರೆ ಸ್ವಾಮಿಗಳು ಯಾವಾಗಲೂ ಪಂಚೆಯುಟ್ಟು , ಮೇಲುಹೊದಿಕೆಯಲ್ಲಿ ಇರುತ್ತಿರಲಿಲ್ಲ. ಅವರು ಅಳತೆ ಕೊಟ್ಟು ದರ್ಜಿಯಿಂದ ಬಟ್ಟೆಗಳನ್ನು ಹೊಲಿಸಿಕೊಳ್ಳುತ್ತಿದ್ದರು. ತುಂಬು ತೋಳಿನ ಅಂಗಿ , ಷರಾಯಿ ಉಟ್ಟು ಅವುಗಳಿಗೆ ಒಪ್ಪುವಂತೆ ಮುಂಡಾಸು ಸುತ್ತುತ್ತಿದ್ದರು. ಈ ಮುಂಡಾಸನ್ನು ಆಕರ್ಷಕವಾಗಿ ಎದೆಯ ಮುಂಭಾಗಕ್ಕೆ ಇಳಿಬಿಟ್ಟುಕೊಳ್ಳುವ ಅಭ್ಯಾಸವನ್ನು ೧೮೯೨ ರಲ್ಲಿ ಬೆಳಗಾವಿಯಲ್ಲಿ ಫೋಟೊ ತೆಗೆಸಿಕೊಳ್ಳುವ ವೇಳೆಗೆ ರೂಢಿಸಿಕೊಂಡಿದ್ದರು. ಉತ್ತಮವಾದ ಚಪ್ಪಲಿಗಳನ್ನು ಹಾಕಿಕೊಳ್ಳುತ್ತಿದ್ದರು. ಸ್ವಾಮಿಗಳು ಪರಿವ್ರಾಜಕ ದಿನಗಳಿಗಿಂತ ಮಂಚೆ ತೆಗೆಸಿಕೊಂಡ ಫೋಟೊಗಳಿಗಿಂತಲೂ ನಂತರದ ದಿನಗಳಲ್ಲಿ ತೆಗೆಸಿಕೊಂಡ ನಂತರ ಬೇರೆಯವೇ ಆಗಿವೆ. ರಾಜ , ದಿವಾನ , ಶ್ರೀಮಂತರ ಪರಿಚಯವಾದ ನಂತರ ಉಡುಗೆ, ತೊಡುಗೆಗಳಲ್ಲಿ ಬದಲಾವಣೆ ಬಂದಿರಬಹುದು.
(೨) ಅಮೆರಿಕಕ್ಕೆ ಹೋದ ಆರಂಭದ ಕೆಲ ದಿನ ಮಾತ್ರ ಸ್ವಾಮಿಗಳು ಖೇತ್ರಿ ರಾಜ ಅಜಿತ್ ಸಿಂಗ್ ಹೊಲಿಸಿಕೊಟ್ಟ ರೇಷ್ಮೆ/ ಜರತಾರಿಯ ಭಾರತೀಯ ಸಂನ್ಯಾಸಿಯ ಉಡುಗೆಯಲ್ಲಿದ್ದರು. ೨೦/೮/೧೮೯೩ ರಂದು ಅಳಸಿಂಗ ಪೆರುಮಾಳ್’ಗೆ ‘….ನಾನು ಕಪ್ಪು ನಿಲುವಂಗಿ ಹಾಕಿಕೊಳ್ಳುತ್ತೇನೆ. ಉಪನ್ಯಾಸ ಮಾಡುವ ಸಮಯದಲ್ಲಿ ಕಾಷಾಯದ ಮುಂಡಾಸ ಸುತ್ತಬೇಕೆಂದಿರುವೆ. ಹೀಗೆ ಮಾಡಬೇಕೆಂದು ಇಲ್ಲಿಯ ಮಹಿಳೆಯರು ಹೇಳುತ್ತಾರೆ. ಅವರೇ ಇಲ್ಲಿ ಆಳುವವರು. ಅವರ ಸಹಾನುಭೂತಿ ನನಗೆ ಆವಶ್ಯಕ ಎಂದು ಬರೆದು ತಮ್ಮ ಉಡುಪನ್ನು ಪಾಶ್ಚಾತ್ಯೀಕರಿಸಿಕೊಂಡರು. ಆಕರ್ಷಣೆ ಮತ್ತು ಭಾರತೀಯ ಸಂಕೇತವಾಗಿ ನಿಲುವಂಗಿಗೆ ವೈದೃಶ್ಯ ಕೊಡುವ ಕೇಸರಿ ಮುಂಡಾಸನ್ನು ಮಾತ್ರ ಉಳಿಸಿಕೊಂಡರು. ಅದಕ್ಕೆ ತಕ್ಕುದಾದ ಮೆರುಗುಗೊಳಿಸಿದ ಪಾಶ್ಚಾತ್ಯ ಕೆರಗಳು ಕಾಲಿಗೆ ಬಂದವು. ಭಾರತದಿಂದ ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ಇತರ ಪ್ರತಿನಿಧಿಗಳು-ಧರ್ಮಪಾಲರನ್ನು ಹೊರತು ಪಡಿಸಿ- ಪಾಶ್ಚಾತ್ಯ ಶೈಲಿಯ ಸರಳವಾದ ಅಂಗಿ , ಮೇಲಿನ ಕೋಟು ಮತ್ತು ಷರಾಯಿ ಉಟ್ಟು ತಲೆಗೆ ಮುಂಡಾಸು ಸುತ್ತಿದ್ದರು. ಧರ್ಮಪಾಲರು ಮಾತ್ರ ಬಿಳಿ ಪಂಚೆ ಅತ್ಯಂತ ಸರಳವಾದ ಬಿಳಿ ಅಂಗಿ ಉಟ್ಟು. ತಲೆಗೆ ಮುಂಡಾಸನ್ನೂ ಸುತ್ತದೆ ಅಪ್ಪಟ ಸಾತ್ವಿಕ ಸಂನ್ಯಾಸಿಯಂತೆ ಕಾಣುತ್ತಿದ್ದು ಉಡುಗೆಯಲ್ಲಿ ಪರಿಪೂರ್ಣ ಭಾರತೀಯರಾಗಿದ್ದರು. ಇತರ ಭಾರತೀಯ ಪ್ರತಿನಿಧಿಗಳಿಗಿಂತ ಭಿನ್ನವಾಗಿರುವ ಸಡಿಲ ನಿಲುವಂಗಿ ಉಟ್ಟು , ಸೊಂಟಕ್ಕೆ ಇಳಿಬಿಟ್ಟ ಪಟ್ಟಿ ಕಟ್ಟಿ , ತಲೆಗೆ ಸುತ್ತಿದ್ದ ಮುಂಡಾಸಿನ ತುದಿಯನ್ನು ಎದೆಯ ಎಡಭಾಗದ ಮೇಲೆ ಬಿಟ್ಟಿದ್ದ ಸ್ವಾಮಿಗಳ ವೇಷ-ಭೂಷಣಗಳು ಅಮೆರಿಕದ ಜನರನ್ನು ತಕ್ಷಣವೇ ಸೆಳೆದವು. ಆದ್ದರಿಂದ ಅಮೆರಿಕದ ಪತ್ರಿಕೆಗಳು ಸ್ವಾಮಿಗಳ ಉಡುಗೆ-ತೊಡುಗೆಗಳನ್ನು ಉತ್ಸಾಹದಿಂದ ಬಣ್ಣಿಸಿ , ಅದಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದವು. ಅಮೆರಿಕದ ವಾತಾವರಣದಲ್ಲಿ ಅಂತಹ ಬಟ್ಟೆ ಅನಿವಾರ್ಯವಾಗಿದ್ದವೆಂದು ಸ್ವಾಮಿಗಳ ಚರಿತ್ರೆಕಾರರು ಹೇಳುವರಾದರೂ ಅದಕ್ಕೆ ಧರ್ಮಪಾಲರ ಉಡುಗೆ ಸವಾಲೆಸೆಯುತ್ತದೆ.
(೩) ಸ್ವಾಮಿಗಳ ಉಡುಗೆ-ತೊಡುಗೆಗಳು ಅಮೆರಿಕನ್ನರಿಗೆ ಭಾರಿ ಆಕರ್ಷಕ ಸಂಗತಿಗಳಾಗಿದ್ದು ಅವರ ಭಾಷಣಕ್ಕಿಂತಲೂ ಹೆಚ್ಚಿನ ಗಮನ ಸೆಳೆದಿದ್ದವು. ಶ್ರೀಮತಿ ಜಾರ್ಜ್ ರೈಟ್ ೨೯/೮/೧೮೯೩ ರಂದು ತನ್ನ ತಾಯಿಗೆ ಆನಿಸ್ಕ್ವಾಮ್’ನಿಂದ ಬರೆದ ಪತ್ರದಲ್ಲಿ ‘ …. ಶುಕ್ರವಾರ ಆತ ನೀಳವಾದ ಉಡುಗೆಯಲ್ಲಿ ಬಂದು ಭಾರಿ ಸೋಜಿಗಗನ್ನುಂಟು ಮಾಡಿದನು’ ಎಂದು ಬರೆದಿದ್ದಳು. (17) ೨೪/೮/೧೮೯೩ರ ಸಲೆಂ ಈವೆನಿಂಗ್ ನ್ಯೂಸ್ ಸ್ವಾಮಿಗಳ ಆಗಮನ ಮತ್ತು ನೀಡಲಿರುವ ಭಾಷಣದ ಸುದ್ದಿ ನೀಡುತ್ತ ‘ರಾಜ (ಸ್ವಾಮಿಗಳು) ದೇಶಿಯ ಉಡುಗೆಯಲ್ಲಿರುತ್ತಾರೆ’ ಎಂದು , ೨೯/೮/೧೮೯೩ ರ ವರದಿಯಲ್ಲಿ ‘ಆತ ಸುಂದರನಾಗಿ ಕಾಣುವ ಹಳದಿ ಮಿಶ್ರಿತ ಕೆಂಪು ಬಣ್ಣದ ನಿಲುವಂಗಿಯುಟ್ಟು , ಸೊಂಟಕ್ಕೆ ಪಟ್ಟಿ ಕಟ್ಟಿಕೊಂಡು , ಮುಂಡಾಸು ಸುತ್ತಿರುವ ಕಪ್ಪುಬಣ್ಣದ ಸಜ್ಜನ ‘ ಎಂದಿತು. (18), ೬/೯/೧೮೯೩ ಸಾರಟೊಗ ಪ್ರೆಸ್ ‘ ದೇಶೀಯ ಉಡುಗೆಯಲ್ಲಿ ಆತನದು ಎದ್ದು ಕಾಣುವ ವ್ಯಕ್ತಿತ್ವ’ ಎನ್ನುವ ಅಭಿಪ್ರಾಯ ತಳೆಯಿತು. (19) ,೧೨/೯/೧೮೯೩ ರ ಷಿಕಾಗೊ ಟೈಮ್ಸ್ ‘ ವಿಶೇಷವಾಗಿ ಹೆಂಗಸರನ್ನು ಸೆಳೆದ ಮುಖ ಮತ್ತು ಉಡುಗೆ ಸುಂದರ ತರುಣ ವಿವೇಕಾನಂದರದ್ದು . ಆತನ ಲಕ್ಷಣಗಳು ಎಲ್ಲಿ ಬೇಕಾದರೂ ಎದ್ದು ಕಾಣುತ್ತವೆ. ಆತನ ಉಡುಗೆ ಕಡು ಕಿತ್ತಳೆ ಬಣ್ಣದ ನಿಲುವಂಗಿ , ಅದೇ ಬಣ್ಣದ ಮುಂಡಾಸು ‘ ಎಂದಿದೆ. (20) ೨೮/೯/೧೮೯೩ ರ ಸಂಚಿಕೆಯಲ್ಲಿ ಷಿಕಾಗೊ ಅಡ್ವೋಕೇಟ್ ‘ತೂರಾಡುವ ಕಿತ್ತಳೆ ಬಣ್ಣದ ಬಟ್ಟೆ , ಕೇಸರಿ ಮುಂಡಾಸು ಉಟ್ಟ , ನುಣುಪಾಗಿ ಮುಖ ಕ್ಷೌರ ಮಾಡಿದ ಚೆಲುವಿನ ಮುಖದ ಅಗಲ ಆಳವಾದ ಭೇದಿಸುವ ಕಣ್ಣುಗಳ ಬ್ರಾಹ್ಮಣ ಸಂನ್ಯಾಸಿ ಕೆಲವು ದೃಷ್ಟಿಯಲ್ಲಿ ಅತಿ ಹೆಚ್ಚು ಮೋಹಕ ವ್ಯಕ್ತಿ ‘ (21) ಎಂದರೆ ಅಯೋವಾ ಸ್ಟೇಟ್ ರಿಜಿಸ್ಟರ್ ಪತ್ರಿಕೆಯ ೨೮/೧೧/೧೮೯೩ ಸಂಚಿಕೆ ‘ ಆತನದು ಮಧ್ಯಮ ಗಾತ್ರ , ನೇರ ನಿಲುವು , ಸೆಳೆಯುವ ಚೆಲುವಿನದೆಂದು ಕರೆಯಬಹುದಾದ ಮುಖ , ಕೆಂಪು ಷರಾಯಿ ,ಸಡಿಲವಾದ ಕೆಂಪು ನಿಲುವಂಗಿ , ಸೊಂಟಪಟ್ಟಿ ಹಾಗೂ ದೊಡ್ಡ ಬಿಳಿ ಮುಂಡಾಸಿನ ದೇಶಿಯ ಉಡುಗೆಯಲ್ಲಿಯೂ ಆತ ಎಂದಿಗೂ ಪ್ರಚೋದನಾಕಾರಿಯಾಗಿಲ್ಲ ‘ ಎನ್ನುವ ಅಭಿಪ್ರಾಯ ತಳೆದಿದೆ. (22) ಷಿಕಾಗೊ ಈವೆನಿಂಗ್ ಜರ್ನಲ್ -೨೯/೯/೧೮೯೩- ಸ್ವಾಮಿಗಳು ತಮ್ಮ ‘ಬಾಲ್ಟಿಮೋರ್ ಓರಿಯೋಲ್’ ಉಡುಗೆಯಿಂದ ಮಾತ್ರವಲ್ಲ ಧ್ಯಾನಸ್ಥ ಸ್ಥಿತಿ , ನಿರ್ವಿಕಾರ ಮತ್ತು ಹಿಂದೂ ಸಿದ್ಧಾಂತದ ಪ್ರತಿಪಾದನೆಯಿಂದಲೂ ಗಮನ ಸೆಳೆಯುತ್ತಾನೆ ‘ ಎಂದಿದೆ. (23) ಕಮರ್ಷಿಯಲ್ ಜರ್ನಲ್-೧೭/೧/೧೮೯೪- ‘ಆತ ಅಪ್ಪಟ ರೇಷ್ಮೆಯ ಗುಲಾಬಿ ಬಣ್ಣದ ಬಟ್ಟೆಯುಟ್ಟು , ಸೊಂಟಕ್ಕೆ ಕಪ್ಪು ಪಟ್ಟಿ ಕಟ್ಟಿ , ಕಪ್ಪು ಷರಾಯಿಯಲ್ಲಿದ್ದು ಆತನ ತಲೆಯ ಮೇಲೆ ಭಾರತದ ಹಳದಿ ರೇಷ್ಮೆ ಮುಂಡಾಸು ಶೋಭಿಸುತ್ತಿದ್ದಿತು ‘ ಎಂದ ಬಣ್ಣಿಸಿದೆ. (24)
ಅಪೀಲ್ ಅವಲಾಂಚ್-೨೦/೧/೧೮೯೪- ‘ಸ್ವಾಮಿ ವಿವೇಕಾನದರ ಜನಪ್ರಿಯತೆ ಹೆಚ್ಚಿದೆ- ಅದು ವಿಶೇಷವಾಗಿ ಹೆಂಗಸರಲ್ಲಿ. ಅವರಿಗೆ ಆತ ಇತ್ತೀಚಿನ ಸಂವೇದನೆಯಾಗಿದ್ದಾನೆ. ಆತನ ಬಗ್ಗೆ ಮಾತನಾಡಿ ಅವರು ದಣಿಯರು. ಕಳೆದ ರಾತ್ರಿಯ ಭಾಷಣದಲ್ಲಿದ್ದ ಸಭಿಕರಲ್ಲಿ ಮೂರನೇ ಎರಡರಷ್ಟು ಹೆಂಗಸರೇ ಇದ್ದು ಆತನ ಬಾಯಿಂದ ಉದುರುವ ಪ್ರತಿಯೊಂದು ಮಾತು ಕಡಲಾಳದಿಂದ ಎತ್ತಿ ತಂದ ಒಂದು ಮುತ್ತೇನೋ ಎನ್ನುವಷ್ಟು ಏಕಾಗ್ರತೆಯಿಂದ ಇದ್ದರು’ ಎನ್ನುವ ವಿವರಣೆ ನೈಜವಾಗಿದೆ. (25) ಹೀಗೆ ಆರಂಭದಲ್ಲಿ ಅಮೆರಿಕದ ಪತ್ರಿಕೆಗಳು ಸ್ವಾಮಿಗಳು ಉಡುಗೆ , ತೊಡುಗೆಗಳಿಂದಲೇ ಜನರನ್ನು ಅದರಲ್ಲೂ ಹೆಂಗಸರನ್ನು ತಮ್ಮತ್ತ ಸೆಳೆಯುವುದನ್ನು ಗುರುತಿಸಿದ್ದವು. ಸಾಜಿನಾ ಈವೆನಿಂಗ್ ನ್ಯೂಸ್ – ೧೯/೩/೧೮೯೪- ‘ಆತ ಸ್ಥಿತಿವಂತ ಅಮೆರಿಕನ್ನರಂತೆ ಬಟ್ಟೆ ತೊಡುತ್ತಾನೆ. ಅತ್ಯುತ್ತಮ ಇಂಗ್ಲಿಷ್ ಮಾತಾನಾಡುತ್ತಾನೆ’ ಎಂದು ಗುರುತಿಸಿದೆ. (26) ೨೯/೪/೧೮೯೪ ರಂದು ಡಾ. ಎಗ್ಬರ್ಟ್ ಗೆರ್ನ್ಸ ಮನೆಯಲ್ಲಿ ಕೊಟ್ಟ ಔತಣಕ್ಕ ಹಾಜರಾಗಿದ್ದ ಮಿಸ್ ಗಿಬ್ಬನ್ಸ್ ( ಶ್ರೀಮತಿ ಟೌನೆ) ‘ ಆತ ಕಿತ್ತಳೆ ನಿಲವಂಗಿಯುಟ್ಟು , ಕಡು ಕೆಂಗುಲಾಬಿ ಬಣ್ಣದ ನಡುಪಟ್ಟಿ ಸುತ್ತಿ ಬಂಗಾರದ ಎಳೆಗಳಿರುವ ಬಿಳಿ ಮುಂಡಾಸು ಸುತ್ತಿದ್ದನು. ಬರಿಗಾಲುಗಳಿಗೆ (ಕಾಲಚೀಲವಿಲ್ಲದ) ಮೆದುವಾದ ಕಂದು ಬಣ್ಣದ ಚರ್ಮದ ಚಪ್ಪಲಿ ಹಾಕಿಕೊಂಡಿದ್ದನು’ ಎಂದು ನೆನಪಿಸಿಕೊಂಡಿದ್ದಾಳೆ. (27) ಬಾಲ್ಟಿಮೋರ್ ನ್ಯೂಸ್ -೧೩/೧೦/೧೮೯೪- ‘ಆತ ರೆನ್ನೆರ್ಟ್ ಹೊಟೆಲ್’ಗೆ ಹೋಗುವ ಮೊದಲು ಉಟ್ಟಿದ್ದ ಕಪ್ಪು ಕೋಟಿನ ಬದಲು ಕೆಂಪು ಬಟ್ಟೆಯುಟ್ಟು , ತಲೆಗೆ ಹಳದಿ ಮುಂಡಾಸನ್ನು ಸುತ್ತಿ ಕೋಣೆಯಿಂದ ಹೊರಬರುತ್ತ ಹಾಸ್ಯಮಯವಾಗಿ ‘ಪರಿವರ್ತನೆ’ ಎಂದು ಹೇಳಿದನು’ ಎನ್ನುವ ವರದಿಯಿಂದ ಸ್ವಾಮಿಗಳು ಭಾಷಣದ ಸಮಯದಲ್ಲಿ ಮಾತ್ರ ‘ದೇಶೀಯ ಉಡುಗೆ, ಮುಂಡಾಸು ಧರಿಸುತ್ತಿರುವುದು ಸ್ಪಷ್ಟವಾಗುತ್ತದೆ. ಬಾಲ್ಟಿಮೊರ್ ನ್ಯೂಸ್ ಇನ್ನೂ ಮುಂದುವರೆದು ‘ ಆತನಿಗೆ ಅಮೆರಿಕದ ಸಮಾಜದ ತಿರುಳಿಗೆ ಸಾಗಿಲ್ಲ , ಯುರೋಪಿಯನ್ ವಲಸೆ, ವಿಚ್ಛೇದನ , ಜನಾಂಗೀತ ತಾರತಮ್ಯ , ಕಾಡುತ್ತಿರುವ ಆರ್ಥಿಕ ಸಂಕಷ್ಟ ಮುಂತಾದವುಗಳ ಬಗ್ಗೆ ಏನೂ ಗೊತ್ತಿಲ್ಲ’ ಎಂದು ಸೇರಿಸಿದೆ. (28) ಡೆಟ್ರಾಯಿಟ್ ಟ್ರಬ್ಯೂನ್-೫/೩/೧೮೯೬- ‘ಆತ ಮೇಲಿನ ಮಹಡಿಗೆ ಹೋಗಿ ಅಲ್ಪ ಸಮಯದಲ್ಲಿ ಊದಾ ಬಣ್ಣದ ಬಟ್ಟೆಯುಟ್ಟು ,ಸೊಂಟಕ್ಕೆ ಅದೇ ಬಣ್ಣದ ಪಟ್ಟಿ ಕಟ್ಟಿ ಕೆಳಗಿಳಿದು ಬಂದನು ‘ ಎಂದಿದೆ. (29)
(೪) ಸ್ವಾಮಿಗಳು ತಮ್ಮ ಉಡುಗೆ , ತೊಡುಗೆ , ತಲೆಗೂದಲು , ಭಂಗಿ , ಆಕರ್ಷಕ ಶೈಲಿಗಳ ಬಗ್ಗೆ ಭಾರಿ ಗಮನ ಕೊಡುತ್ತಿದ್ದರು. ಕೂದಲುಗಳು ನರೆಯುತ್ತಿರುವುದನ್ನು ಗಮನಿಸಿದ್ದ ಸ್ವಾಮಿಗಳು ‘ನನ್ನ ಕೂದಲು ಕಂತೆಕಂತೆಯಾಗಿ ಬೆಳ್ಳಗಾಗುತ್ತಿದೆ. ನನ್ನ ಮುಖವೆಲ್ಲ ಸುಕ್ಕಾಗುತ್ತಲಿದೆ… ಕೂದಲು ನರೆಯುತ್ತಿರುವುದರಿಂದ ನಾನು ದೊಡ್ದ ಗಡ್ಡವನ್ನು ಬೆಳೆಸಬೇಕೆಂದಿದ್ದೇನೆ, ಅದು ನೋಡುವವರಲ್ಲಿ ಒಂದು ಪೂಜ್ಯ ಭಾವನೆ ಹುಟ್ಟುವಂತೆ ಮಾಡುತ್ತದೆ’ ಹೀಗೆಂದು ಮೇರಿ ಹೇಲ್’ಗೆ ಹಲವು ಪತ್ರಗಳಲ್ಲಿ ವ್ಯಕ್ತಪಡಿಸಿದ್ದರು. (೨೮/೪/೧೮೯೭, ೪/೯/೧೮೯೯-ಮೇರಿ ಹೇಲ್). ಸ್ಯಾನ್’ಪ್ರಾನ್ಸಿಸ್ಕೊದಲ್ಲಿ ತೆಗೆಸಿದ ಫೋಟೊಗಳಲ್ಲಿ ನಡುವೆ ಬೈತಲೆ ತೆಗೆದು ಎರಡು ಕಡೆ ಅಲೆಯಂತೆ ಕವಲೊಡೆದಿರುವಂತೆ ಬಾಚಿಕೊಂಡಿರುವುದು ಕಾಣುತ್ತದೆ. ಸ್ವಾಮಿಗಳು ಜನರ ಒತ್ತಾಯದ ಮೇರೆಗೆ ಉದ್ದ ಕೂದಲನ್ನು ಬಿಟ್ಟಿದ್ದರು. ಅವರ ಕೂದಲು ಉದ್ದಕ್ಕೆ ಅಲೆಅಲೆಯಾಗಿದ್ದು ಆತನ ಲಕ್ಷಣಗಳನ್ನು ಎತ್ತಿ ತೋರಿಸುತ್ತಿದ್ದಿತು. ನಾವು ಕೂದಲನ್ನು ಕತ್ತರಿಸಬಾರದೆಂದು ತಿಳಿಸಿದ್ದೆವು. ಅದಕ್ಕೆ ಆತನ ಆಕ್ಷೇಪಣೆಯಿರಲಿಲ್ಲ. ದೇಹದ ಬಗ್ಗೆ ದಿವ್ಯ ನಿರ್ಲಕ್ಷ್ಯವಿದ್ದಿತು ಎಂದು ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ತಿಳಿಸಿದ್ದಾಳೆ. (30) ಇದು ನಿಜವಲ್ಲ ಎನ್ನುವುದು ಬೇರೆ ಮೂಲದಿಂದ ಗೊತ್ತಾಗುತ್ತದೆ. ಮೇರಿ ಹೇಲ್ ಸಲಹೆಯಂತೆ ಸ್ವಾಮಿಗಳು ತಮ್ಮ ಉದ್ದ ಕೂದಲನ್ನು ಕತ್ತರಿಸಿದ್ದರು. ‘ನೀನು ಒತ್ತಾಯಮಾಡಿ ನಾನು ನನ್ನ ಉದ್ದ ಕೂದಲುಗಳನ್ನು ಕತ್ತರಿಸುವಂತೆ ಮಾಡಿದೆ. ಅದನ್ನು ಈಗ ಎಲ್ಲರೂ ಟೀಕಿಸುತ್ತಿದ್ದಾರೆ. ಇದರಿಂದ ನನಗೆ ಬಹಳ ವ್ಯಥೆಯಾಗಿದೆ’ ಎಂದು ದೂರಿದ್ದರು. (೧೧/೭/೧೯೦೦). ಪಸಡೆನಾದಲ್ಲಿರುವಾಗ ಸಡಿಲವಾದ ಕಪ್ಪು ಕೋಟ್ ಉಟ್ಟು ಕಪ್ಪು ಟೋಪಿ ಧರಿಸುತ್ತಿದ್ದರು. ಭಾಷಣಕ್ಕೆ ಹೋಗುವಾಗ ಸಣ್ಣ ಸೂಟ್’ಕೇಸನಲ್ಲಿ ಕಾವಿ ಬಟ್ಟೆಗಳನ್ನು ಒಯ್ಯುತ್ತಿದ್ದು ಭಾಷಣಕ್ಕಿಂತ ಮುಂಚೆ ಉಡುತ್ತಿದ್ದರು. (31) ಫ್ರಾಂಕ್ ರೋಡ್’ಹ್ಯಾಮೆಲ್ ಸ್ವಾಮಿಗಳ ಮೊದಲ ಸಂದರ್ಶನವನ್ನು ನೆನಪಿಸಿಕೊಳ್ಳುತ್ತ ‘ ನಾನು ಕುಳಿತುಕೊಳ್ಳುವಷ್ಟರಲ್ಲಿ ಆತ ಚೊಕ್ಕಟವಾಗಿ ತಲೆಯನ್ನು ಬಾಚಿಕೊಂಡು ಸಂನ್ಯಾಸಿ ಉಡುಗೆಯಲ್ಲಿ ಬಂದನು ‘ ಎಂದಿದ್ದಾನೆ. (32) ಕ್ಯಾಂಪ್ ಟೇಲರ್’ಗೆ ಹೋಗುವ ದಿನ -೨೪/೪/೧೯೦೦- ನಾನು ಆತನ ಕೋಣೆಗೆ ಹೋದಾಗ ಯಾರೋ ಕೊಟ್ಟಿದ್ದ ಇಂಗ್ಲಿಷ್ ಹಂಟಿಂಗ್ ಸೂಟ್ ಹಾಕಿಕೊಂಡು ಕುಳಿತಿದ್ದನೆಂದು ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ನೆನೆಪಿಸಿಕೊಂಡಿದ್ದಾಳೆ. (33) ಪಾಶ್ಚಾತ್ಯ ಉಡುಗೆಯೇ ಅಮೆರಿಕದಲ್ಲಿ ಸ್ವಾಮಿಗಳ ದೈನಂದಿನ ಉಡುಗೆಯಾಗಿದ್ದಿತು. ಭಾಷಣದ ಸಮಯದಲ್ಲಿ ಮಾತ್ರ ಅವರು ಗೈರಿಕ ವಸನ ಉಟ್ಟ ಭಾರತದ ಸಂನ್ಯಾಸಿಯಾಗುತ್ತಿದ್ದರು.
ಮನ್ಮಥನಾಥ ಗಂಗೂಲಿಯ ನೆನಪುಗಳು ‘ರೆಮಿನಿಸೆನ್ಸ್’ನಲ್ಲಿವೆ . ಆಗ ನಡೆದ ಒಂದು ಘಟನೆ ಹೀಗಿದೆ. ಸ್ವಾಮಿಗಳು ಬಂಗಾರದ ಸರವನ್ನು ಕೊರಳಲ್ಲಿ ಧರಿಸಿದ್ದರು. ಆ ಸರದ ಕೊನೆಗೆ ಬಂಗಾರದ ಗಡಿಯಾರ ಲಗತ್ತಾಗಿದ್ದು ಅದನ್ನು ಜೇಬಿನಲ್ಲಿ ಇಳಿಬಿಟ್ಟಿದ್ದರು. ಬಂಗಾರದ ಸರ ಸ್ವಾಮಿಗಳ ಮೈಬಣ್ಣಕ್ಕೆ ಒಪ್ಪುವಂತಿದ್ದಿತು. ಅದನ್ನು ನೋಡಿದ ಒಬ್ಬ ಯುವಕ ಬಂಗಾರದ ಸರವನ್ನು ಮುಟ್ಟಿ ಎಷ್ಟು ಸುಂದರವಾಗಿದೆ ಎನ್ನುವ ಉದ್ಗಾರ ತೆಗೆದನು. ತಕ್ಷಣವೇ ಸ್ವಾಮಿಗಳು ಗಡಿಯಾರ ಸಹಿತವಿದ್ದ ಚಿನ್ನದ ಸರವನ್ನು ತಮ್ಮ ಕೊರಳಿನಿಂದ ತೆಗೆದು ಯುವಕನ ಕೈಯಲ್ಲಿರಿಸಿ ‘ನಿನಗೆ ಇಷ್ಟವಾಯಿತಲ್ಲವೇ ? ಈಗ ಅದು ನಿನ್ನದು. ಆದರೆ ಮಗು ಅದನ್ನು ಮಾರಬೇಡ , ನೆನಪಿಗಾಗಿ ಉಳಿಸಿಕೋ’ ಎಂದರು. ಸ್ವಾಮಿಗಳಿಂದ ಅಂತಹ ಮೌಲ್ಯದ ನೆನಪಿನ ವಸ್ತು ಪಡೆದ ಅದೃಷ್ಟಶಾಲಿ ಯಾರು ಮತ್ತು ಆ ಸರ ಈಗ ಎಲ್ಲಿದೆ ಎನ್ನುವುದರ ಸುಳಿವಿಲ್ಲ. ಅದೇನೇ ಇರಲಿ ಬಂಗಾರದ ಸರ ಗಡಿಯಾರದ ಮೂಲಕ ಸ್ವಾಮಿಗಳ ಮೈಯೇರಿದ್ದಿತು ಎನ್ನುವುದು ತಿಳಿಯುತ್ತದೆ.
ಭಾವಚಿತ್ರಗಳು / ಫೋಟೊಗಳು : ಸಂದರ್ಭಕ್ಕೆ ಅನುಗುಣವಾದ ಬಟ್ಟೆಗಳನ್ನುಟ್ಟು ಸ್ಟುಡಿಯೊಗಳಲ್ಲಿ ಫೋಟೊ ತೆಗೆಸಿಕೊಳ್ಳುವುದನ್ನು ಸ್ವಾಮಿಗಳು ಭಾರತದಲ್ಲಿರುವಾಗಲೇ ರೂಢಿಸಿಕೊಂಡಿದ್ದರು. ಸ್ವಾಮಿಗಳು ಯಾವಾಗಲೂ ಉನ್ನತ ಪ್ರಜ್ಞೆಯಲ್ಲಿರುತ್ತಿದ್ದು ದೇಹದ ಬಗ್ಗೆ ಅರಿವೇ ಇರುತ್ತಿಲ್ಲ ಎಂದು ಮಾರಿ ಲೂಯಿ ಬರ್ಕೆ ಹಲವು ಕಡೆ ಬರೆದಿದ್ದಾಳೆ. ಇದು ಸುಳ್ಳು ಎನ್ನುವಂತೆ ತಮ್ಮ ಫೊಟೊ ತಾವು ಬಯಸಿದಂತೆ ಬರದಿದ್ದರೆ ಜನ ಸಾಮಾನ್ಯರಂತೆ ಅವರೂ ಬೇಸರಗೊಳ್ಳುತ್ತಿದ್ದರು. ೧೦/೩/೧೮೯೪ ರಂದು ‘ಇಲ್ಲಿನ (ಡೆಟ್ರಾಯಿಟ್) ಛಾಯಾಚಿತ್ರಕಾರನು ತಾನು ತೆಗೆದ ಚಿತ್ರಗಳನ್ನು ನನಗೆ ಕಳಿಸಿದ್ದಾನೆ. ಅವು ಖಳನಾಯಕನಂತಿವೆ. ಶ್ರೀಮತಿ ಬ್ಯಾಗ್ಲಿಯವರಿಗೆ ಅವು ಸ್ವಲ್ಪವೂ ಹಿಡಿಸವು. ನಿಜವಾದ ಸಂಗತಿ ಏನೆಂದರೆ ನನ್ನ ಎರಡು ಚಿತ್ರಗಳನ್ನು ತೆಗೆದ ನಡುವಿನ ಅವಧಿಯಲ್ಲಿ ನನ್ನ ಮುಖ ದೊಡ್ಡದಾಗಿ , ದಪ್ಪವಾಗಿ ಹೋಗಿದೆ. ಅದಕ್ಕೆ ಆ ಛಾಯಾಚಿತ್ರಕಾರ ಏನು ಮಾಡಿಯಾನು ? ದಯವಿಟ್ಟು ಆ ಚಿತ್ರದ ನಾಲ್ಕು ಪ್ರತಿಗಳನ್ನು ಕಳಿಸಿಕೊಡಿ’ ಎಂದು ಈ ಹಿಂದೆ ಷಿಕಾಗೊದಲ್ಲಿ ತೆಗೆದಿದ್ದ ಉತ್ತಮ ಫೊಟೊಗಳನ್ನು ಕಳಿಸುವಂತೆ ಶ್ರೀಮತಿ ಜಾರ್ಜ್ ಹೇಲ್’ರನ್ನು ಕೋರಿದ್ದರು. ‘ಹ್ಯಾರಿಸನ್ ಅಂದಗೆಟ್ಟು ನಿಂತಿರುವ ನನ್ನ ಎರಡು ಫೋಟೋಗಳನ್ನು ಕಳಿಸಿರುವನು. ಅವುಗಳಲ್ಲಿ ನಾನು ಅಂದಗೆಟ್ಟಿರುವಂತಿದ್ದು ನೂರಕ್ಕೆ ೧೦-೧೫ ಅಂಕಗಳು ಬರಬಹುದು. ಅದರಲ್ಲಿ ಅವರು ನಲವತ್ತು ಅಂಕಗಳನ್ನು ಕಳೆಯಬೇಕಾಗುವುದು’ (೫/೮/೧೮೯೪) ಎಂದು ತಿಳಿಸಿದ್ದಾರೆ. ಸ್ವಾಮಿಗಳು ದಿನ ಕಳೆದಂತೆ ಫೋಟೋಗಳಲ್ಲಿ ತಾವು ಹೇಗೆ ಕಾಣಿಸುತ್ತಿದ್ದೇನೆ ಎನ್ನುವ ಬಗ್ಗೆ ಅತೀವ ಕಾಳಜಿ ವಹಿಸತೊಡಗಿ , ಪ್ರಚಾರದ ದೃಷ್ಟಿಕೋನ ತಳೆಯುತ್ತಿರುವಂತೆ ಭಾಸವಾಗುತ್ತದೆ. ೨೩/೮/೧೮೯೪ ರಂದು ನನಗೆ ಬೇಕಾದ ಭಂಗಿಯ ಫೋಟುಗಳು ಬಂದಿಲ್ಲ ಎಂದು ದೂರಿದ್ದರು.
ನವೆಂಬರ್’ನಲ್ಲಿ ಕ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೊದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಸ್ವಾಮಿಗಳು ಷಿಕಾಗೊದ (ವಾಷಿಂಗ್ಟನ್-?)ಥಾಮಸ್ ಹ್ಯಾರಿಸನ್ ಸ್ಟುಡಿಯೋದಲ್ಲಿ ಹಲವು ಭಂಗಿಯ ೭ ಫೋಟೊಗಳನ್ನು ಸ್ವಂತ ಖರ್ಚಿನಲ್ಲಿ ತೆಗೆಸಿಕೊಂಡಿದ್ದರು. ಅವುಗಳನ್ನು ಭಾರತ ಮತ್ತು ಅಮೆರಿಕದಲ್ಲಿದ್ದ ತಮ್ಮ ಬೆಂಬಲಿಗ , ಅಭಿಮಾನಿ , ಅನುಯಾಯಿಗಳಿಗೆ ಕಳಿಸಿಕೊಡುವುದೇ ಅದರ ಉದ್ದೇಶವಾಗಿದ್ದಿತು. ಹಾಗೆ ಕಳಿಸಿಕೊಡುವಾಗ ಬಂಗಾಳಿ ಲಿಪಿಯಲ್ಲಿ ಸಂಸ್ಕೃತ ಸುಭಾಷಿತಗಳನ್ನು ಬರೆಯುತ್ತಿದ್ದರು. ಈ ಸುಭಾಷಿತಗಳಲ್ಲಿ (೧) ರೋಗ, ಸಾವುಗಳು ತನಗಿಲ್ಲ ಎನುವಂತೆ ಜ್ಞಾನ ಮತ್ತು ಹಣವನ್ನು, ಸಾವು ಕೂದಲು ಹಿಡಿದು ಎಳೆಯುತ್ತಿದೆ ಎನ್ನುವಂತೆ ಧರ್ಮವನ್ನು ಆಚರಿಸಬೇಕು (೨) ಸಾವಿನಾಚೆಗೂ ಜೊತೆಗಿರುವುದು ಧರ್ಮ ಮಾತ್ರ (೩) ಗುಣಾತೀತ ಚಿಂತನಾತೀತವಾದ ಅನಂತ ಪವಿತ್ರ ಪರಿಶುದ್ಧತೆಗೆ ನಾನು ತಲೆಬಾಗುತ್ತೇನೆ (೪) ಎಲ್ಲ ಪ್ರಾಣಿಗಳಲ್ಲಿ ಸಮತ್ವವನ್ನು ಕಾಣುವುದೇ ಮುಕ್ತನ ಲಕ್ಷಣ (೪) ನೀನೊಬ್ಬನೇ ಈ ಜಗತ್ತಿನ ನಿಧಿ (೫) ನೀನೆ ಒಡೆಯ , ತಂದೆ , ತಾಯಿ , ಗಂಡ ಮತ್ತು ಪ್ರೀತಿ ಎನ್ನುವ ಆಶಯಗಳು ವ್ಯಕ್ತವಾಗಿವೆ. (34) ಒಂದು ವರ್ಷದ ಸುದೀರ್ಘಾವಧಿಯಲ್ಲಿ ಬರೆದ -೨/೧೧/೧೮೯೩, ೨೮/೫/೧೮೯೪, ೧೧/೭/೧೮೯೪ , ೫/೮/೧೮೯೪ , ೨೦/೮/೧೮೯೪, ೫/೯/೧೮೯೪ , ೨೭/೯/೧೮೯೪ , ೨೭/೧೦/೧೮೯೪ ದಿನಾಂಕದ ಪತ್ರಗಳು - ಸ್ವಾಮಿಗಳು ಈ ಫೋಟೊಗಳಿಗೆ ಎಷ್ಟು ಮಹತ್ವ ನೀಡಿದ್ದರೆಂದು ಸೂಚಿಸುತ್ತವೆ. ಭಾರತದಲ್ಲಿ ಹಂಚಲು ೧೦೦ ಫೋಟೊಗಳನ್ನು ಕಳಿಸಲು ೨೭/೧೦/೧೮೯೪ರಂದು ಮೇರಿ ಹೇಲ್’ಗೆ ತಿಳಿಸಿದ್ದರು. ಥಾಮಸ್ ಹ್ಯಾರಿಸನ್ ಮತ್ತು ಸ್ವಾಮಿಗಳ ನಡುವೆ ಹೊಂದಾಣಿಕೆ ಇಲ್ಲದಿದ್ದರೂ ಆತ ಸ್ವಾಮಿಗಳ ಅತ್ಯಧಿಕ ಅತ್ಯುತ್ತಮ ಫೋಟಗಳನ್ನು ತೆಗೆದಾತ ಎಂದು ಗುರುತಿಸಲಾಗುತ್ತದೆ. ಥಾಮಸ್ ಹ್ಯಾರಿಸನ್ ವ್ಯಾಪಾರಕ್ಕಾಗಿ ಅಷ್ಟೊಂದು ಫೊಟೊಗಳನ್ನು ತೆಗೆದಿರುವುದು ಸ್ಪಷ್ಟ.
ಸ್ವಾಮಿಗಳ ಅಭಿಮಾನಿ ಮಿಸ್ ಎಮೆಲಿನ್ ಸೌಟೆರ್ ಸ್ವಾಮಿಗಳು ಭಾರತಕ್ಕೆ ತೆರಳುವ ಮೊದಲು ಫೋಟೊಗ್ರಫಿ ಪರಿಣಿತ ಆಲ್ಫ್ರೆಡ್ ಎಲ್ಲಿಸ್'ನಿಂದ ಸ್ಟುಡಿಯೊದಲ್ಲಿ ೬ ಫೋಟೊಗಳನ್ನು ತೆಗೆಸಿದಳು. ಅದರಲ್ಲಿ ರಾಮಕೃಷ್ಣ ಮಠಗಳಲ್ಲಿ ಪೂಜಿಸಲ್ಪಡುತ್ತಿರುವ ಸ್ವಾಮಿಗಳ ಧ್ಯಾನ ಭಂಗಿಯ ಫೋಟೊ ಅತ್ಯಂತ ಖ್ಯಾತವಾದುದು. ಲಂಡನ್'ನಲ್ಲಿ ಸ್ವಾಮಿಗಳು ಯೋಗ ತರಗತಿಗಳನ್ನು ನಡೆಸುತ್ತಿರವಾಗ ಧ್ಯಾನಸ್ಥರಾಗಿ ಸಮಾಧಿಗೆ ಹೋದರು ಆಗ ತೆಗದ ಫೊಟೊ ಇದೆಂದು ಕೆಲವು ಭಕ್ತರು ನಂಬುತ್ತಾರಾದರೂ ಸ್ವಾಮಿಗಳು ಇತರ ಫೋಟೊಗಳಲ್ಲಿ ಉಟ್ಟಿರುವ ಬಟ್ಟೆ , ಭಂಗಿ ಮತ್ತು ಈ ಆರೂ ಫೋಟೊಗಳು ಒಂದೇ ‘ಪ್ರೂಫ್ ಷೀಟ್’ ಸ್ಟುಡಿಯೊದಲ್ಲಿ ನಡೆಸಿದ ಫೋಟೊ ಸೆಷನ್,ನಲ್ಲಿ ಈ ಫೋಟೊಗಳನ್ನು ತೆಗೆಸಿಕೊಂಡಿರುವುದು ಖಚಿತವಾಗುತ್ತದೆ. (35)
ವಸತಿ : ಸ್ವಾಮಿಗಳು ಅಮೆರಿಕ ಮತ್ತು ಇಂಗ್ಲೆಂಡ್’ನಲ್ಲಿರುವಾಗ ಎಲ್ಲಿರುತ್ತಿದ್ದರು ಮತ್ತು ಹೇಗಿರುತ್ತಿದ್ದರು ಎನ್ನುವ ಸ್ಪಷ್ಟ ಮಾಹಿತಿ ‘ದಿ ಲೈಫ್-೧೯೧೪’ ರಲ್ಲಾಗಲಿ ಅಥವಾ ಇತರ ಜೀವನ ಚರಿತ್ರೆಗಳಲ್ಲಾಗಲಿ ದಕ್ಕುವುದಿಲ್ಲ. ಕೋಷ್ಟಕ-೨ ರಲ್ಲಿ ಸ್ವಾಮಿಗಳ ವಸತಿಯ ವಿವರಗಳಿವೆ. ಸ್ವಾಮಿಗಳು ೧೮೯೩ ರಲ್ಲಿ ಅಮೆರಿಕ ತಲುಪಿದ ಹೊಸದರಲ್ಲಿ ಎಲ್ಲಿರುತ್ತಿದ್ದರು ಎನ್ನುವ ಖಚಿತ ಮಾಹಿತಿ ಇಲ್ಲವಾದರೂ ಹೋಟೆಲ್’ಗಳಲ್ಲಿ ಉಳಿದುಕೊಳ್ಳುತ್ತಿದ್ದರೆಂದು ಊಹಿಸಬಹುದು. ೧೮೯೪ ಆರಂಭದಲ್ಲಿ ಕ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೊ ಜೊತೆ ಒಪ್ಪಂದ ಮಾಡಿಕೊಂಡ ನಂತರ ಸ್ವಾಮಿಗಳ ಪ್ರಯಾಣ ಮತ್ತು ವಸತಿಯನ್ನು ಆ ಸಂಸ್ಥೆಯೇ ಏರ್ಪಡಿಸಿರುವಂತಿದ್ದು ಆ ಬಗ್ಗೆ ಖಚಿತ ಮಾಹಿತಿ ದಕ್ಕುವುದಿಲ್ಲ. ಅಮೆರಿಕದಲ್ಲಿ ಜನ ಪರಿಚಯವಾಗತೊಡಗಿದಂತೆ ಸ್ವಾಮಿಗಳ ವಸತಿ, ಊಟ, ಪ್ರವಾಸಗಳ ಬಗ್ಗೆ ನಿರ್ದಿಷ್ಟ ಮಾಹಿತಿಗಳು ಸಿಕ್ಕುತ್ತವೆ. ಸ್ವಾಮಿಗಳು ಅಮೆರಿಕ, ಇಂಗ್ಲೆಂಡ್’ನಲ್ಲಿ ೧೭೬೦ ದಿನಗಳಿದ್ದರು. ಈ ದಿನಗಳಲ್ಲಿ ಸ್ವಾಮಿಗಳ ಮುಖ್ಯ ವಸತಿ ನೆಲೆಗಳ ಸ್ಥೂಲ ನೋಟ ಹೀಗಿದೆ.
ಈ ಅತಿಥೇಯರ ಮನೆಗಳಲ್ಲಿ ಸ್ವಾಮಿಗಳು ೪೭೩ ದಿನ (೨೬.೮೮ %) ಕಳೆದರು. ಈ ಮನೆಗಳಲ್ಲಿ ಇದ್ದಾಗ ಅವರಿಗೆ ಸಕಲ ಸವಲತ್ತುಗಳು , ಸಂಪೂರ್ಣ ವಿಶ್ರಾಂತಿ , ಬೇಕಾದ ಸ್ವಾತಂತ್ರ ಇರುತ್ತಿದ್ದವು. ಸ್ವಾಮಿಗಳು ದೀರ್ಘ ಕಾಲ ನೆಲೆಸಿದ್ದ ಫ್ರಾನ್ಸಿಸ್ ಲೆಗೆಟ್’ನ ಪೆರ್ಸಿ ಹಾಗೂ ಸ್ಟೋನ್ ರಿಜ್ ಸ್ಥಳಗಳಲ್ಲಿದ್ದ ವೈಟ್ ಬರ್ಚ್ ಲಾಜ್ ಮತ್ತು ರಿಡ್ಜ್’ಲಿ ಮ್ಯಾನರ್’ಗಳು ಆಧುನಿಕ ಕಾಲದ ಯಾವುದೇ ವಿಲಾಸಿ ರಿಸಾರ್ಟ್’ನ್ನು ನಾಚಿಸುವಂತಿದ್ದವು. ಕೇಂಬ್ರಿಜ್’’ನಲ್ಲಿದ್ದ ಸಾರಾ ಬುಲ್ ಮನೆ ಸಂಪತ್ತಿನಲ್ಲಿ ಮುಳುಗೇಳುತ್ತಿದ್ದು ಶ್ರೀಮಂತರೇ ಕರುಬುವಂತೆ ಭವ್ಯವಾಗಿದ್ದಿತು. ಹಲವು ಉದ್ಯಮಗಳ ಕೆಂದ್ರವಾಗಿದ್ದ ಡಾ. ಗೆರ್ನ್ಸಿ ಮನೆ ನ್ಯೂಯಾರ್ಕ್’ನ ಸಿರಿವಂತರಿಗೆ ತಕ್ಕುದಾಗಿದ್ದಿತು. ಡೆಟ್ರಾಯಿಟ್’ನಲ್ಲಿದ್ದ ಮಾಜಿ ಗವರ್ನರ್ ಜೆ.ಜೆ ಬ್ಯಾಗ್ಲಿ ಮನೆ ಜನ ಸಾಮಾನ್ಯರು ಆಸೆಯ ಕಣ್ಣುಗಳಿಂದ ದಿಟ್ಟಿಸುವಂತಿದ್ದಿತು. ಮೇರಿ ಡಚರ್’ಗೆ ಸೇರಿದ ಥೌಸಂಡ್ ಐಲ್ಯಾಂಡ್ ಪಾರ್ಕ್ ರಮಣೀಯ ಪ್ರದೇಶವಾಗಿದ್ದು ಅಲ್ಲಿ ಕೇವಲ ೧೨ ಜನ ಶಿಬರಾರ್ಥಿಗಳು ಮಾತ್ರವಿದ್ದು ಮೊದಲನೆ ಮಹಡಿಯಲ್ಲಿ ಸ್ವಾಮಿಗಳಿಗಾಗಿಯೇ ಪ್ರತ್ಯೇಕ ಸುಸಜ್ಜಿತ ಕೋಣೆಯನ್ನು ಸಿದ್ದಪಡಿಸಲಾಗಿದ್ದಿತು. ಶಿಬಿರದಲ್ಲಿದ್ದವರೆಲ್ಲರೂ ಸ್ವಾಮಿಗಳು ಹಾಕಿದ ಗೆರೆ ದಾಟುತ್ತಿರಲಿಲ್ಲ. ಷಿಕಾಗೊದಲ್ಲಿದ್ದ ಜಾರ್ಜ್ ಹೇಲ್ ಮನೆ ಮೇಲ್ ಮಧ್ಯಮ ವರ್ಗದ್ದಾಗಿದ್ದರೆ , ಪಸಾಡೆನದ ಮೀಡ್ಸ್ ಸೋದರಿಯರ ಮನೆ ಅಮೆರಿಕದ ಮಧ್ಯಮ ವರ್ಗದ ನೈಜ ಪ್ರತಿನಿಧಿಯಾಗಿದ್ದಿತು.
ಸ್ವಾಮಿಗಳು ತರಗತಿಗಳನ್ನು ನಡೆಸುವಾಗ ದೀರ್ಘ ಕಾಲ ಒಂದೇ ಜಾಗದಲ್ಲಿ ಇರಬೇಕಾದಾಗ ಆರಂಭದಲ್ಲಿ ಹೊಟೆಲ್’ನಲ್ಲಿರುತ್ತಿದ್ದರು. ನಂತರದ ದಿನಗಳಲ್ಲಿ ಬಾಡಿಗೆ ಮನೆಯನ್ನು ಗೊತ್ತುಪಡಿಸಿಕೊಂಡರು. ಸಾಕಷ್ಟು ಕಾಲ ಶ್ರೀಮಂತರೊಂದಿಗೆ ಪ್ರವಾಸದಲ್ಲಿದ್ದರು. ಈ ಸಮಯದಲ್ಲಿ ಸ್ವಾಮಿಗಳಿದ್ದ ಜಾಗಗಳ ವಿವರ ಹೀಗಿದೆ.
ಸ್ವಾಮಿಗಳು ನ್ಯೂಯಾರ್ಕ್’ನ ೫೪ ವೆಸ್ಟ್ , ೩೩ ಸ್ಟ್ರೀಟ್ , ವೇದಾಂತ ಸೊಸೈಟಿ , ಲಂಡನ್’ನ ಬಾಡಿಗೆ ಮನೆ. ಲಂಡನ್ ಓಕ್ಲೆ ಸ್ಟ್ರೀಟ್, ಲಂಡನ್’ನ ಗ್ರೇ ಕೋಟ್ ಗಾರ್ಡನ್ಸ್’ಗಳಲ್ಲಿರುವಾಗ ಬೆಳಗಿನ ಮತ್ತು ಸಂಜೆಯ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಸ್ವಾಮಿಗಳು ೧೮೯೫ ರಲ್ಲಿ ಫ್ರಾನ್ಸಿಸ್ ಲೆಗೆಟ್ , ಬೆಟ್ಟಿ ಸ್ಟರ್ಜಿಸ್ , ಜೊಸೆಪಿನ್ ಮೆಕ್ಲಿಯಾಡ್ ಜೊತೆ ಅತ್ಯುತ್ತಮ ಶ್ರೇಣಿ ಮತ್ತು ದರ್ಜೆಯ ಹಡಗಿನಲ್ಲಿ ೭ ದಿನ ಯುರೋಪ್’ಗೆ ಪಯಣಿಸಿದರು. ಪ್ಯಾರಿಸ್’ನಲ್ಲಿ ಕಾಂಟಿನೆಂಟಲ್ ಎನ್ನುವ ಐಷಾರಾಮಿ ಹೊಟೆಲ್’ನಲ್ಲಿ ೧೭ ದಿನ ಉಳಿದಿದ್ದರು. ೧೮೯೬ ರಲ್ಲಿ ಸೇವಿಯರ್ಸ್ ದಂಪತಿಗಳ ಜೊತೆ-೯೮ ದಿನ ಯುರೋಪ್ ಪ್ರವಾಸ ಮಾಡಿದರು. ೧೯೦೦ರಲ್ಲಿ ಎಮ್ಮಾ ಕಾಲ್ವೆ-೩೨ ದಿನ ಸ್ವಾಮಿಗಳ ಪ್ರಯಾಣ ಮತ್ತು ಪ್ರವಾಸ ಅತ್ಯಂತ ಸುಖಕರವಾಗುವಂತೆ ನೋಡಿಕೊಂಡಿದ್ದಳು. ಸ್ವಾಮಿಗಳ ಪ್ರವಾಸದ ಒಟ್ಟು ೧೫೪ ದಿನಗಳನ್ನು (೮.೭೫ %) ನೆಮ್ಮದಿಯಲ್ಲಿ ಕಳೆದಿದ್ದರು. ಸ್ವಾಮಿಗಳು ಭಾರತದಿಂದ ಹೊರಗಿದ್ದ ೧೭೬೦ ದಿನಗಳಲ್ಲಿ ೧೦೫೨ ದಿನ ಬೆರಳೆಣಿಕೆಯ ಪರಿಚಿತರೊಂದಿಗಿದ್ದರು. ೧೯೦೦ ರಲ್ಲಿ ಹೋಂ ಆಫ್ ಟ್ರುಥ್’ನಲ್ಲಿದ್ದ ೩೧ ದಿನಗಳ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಯಾವುದೇ ಸಂಘ-ಸಂಸ್ಥೆಯ ವಸತಿಗಳಲ್ಲಿ ಉಳಿದಿರಲಿಲ್ಲ. ಸ್ವಾಮಿಗಳು ಪಾಶ್ಚಾತ್ಯ ದೇಶಗಳಲ್ಲಿ ಇದ್ದ ವಸತಿ ಮಾಹಿತಿ ಅವರಿಗಿದ್ದ ಜನ ಸಂಪರ್ಕ ಮತ್ತು ಪ್ರಭಾವದ ಸೀಮಿತತೆಯನ್ನು ಸೂಚಿಸುತ್ತದೆ.
೧೬/೩/೧೮೯೪ ರಂದು ಶ್ರೀಮತಿ ಜಾರ್ಜ್’ಗೆ ‘‘ನಾನು ಪ್ರಾಮಾಣಿಕರು , ಅಜ್ಞಾನಿಗಳು ಮತ್ತು ಬಡವರ ನಡುವೆ ವಾಸಿಸುವಂತೆ ಮಾಡು. ಕಪಟಿಗಳು ಮತ್ತು ಮಾತಿನ ಮಲ್ಲರ ನೆರಳೂ ನನ್ನ ಮೇಲೆ ಬೀಳದಿರಲಿ ‘ ಎಂದಿರುವುದು ನಗೆಪಾಟಲಿನ ವಿಚಾರವಾಗಿದೆ. ಯಾರೊಂದಿಗೆ ಇರಬೇಕು ಎನ್ನುವ ಆಯ್ಕೆ ಸ್ವಾಮಿಗಳದ್ದಾಗಿರಲಿಲ್ಲ. ಅದು ಸ್ವಾಮಿಗಳನ್ನು ತಮ್ಮಿಂದ ಇನ್ನೊಬ್ಬರಿಗೆ ಪರಿಚಯಿಸುತ್ತಿದ್ದ ಶ್ರೀಮಂತರ ಮರ್ಜಿಯಲ್ಲಿದ್ದಿತು. ಸ್ವಾಮಿಗಳು ಅಮೆರಿಕದಲ್ಲಿರುವಾಗ ಶ್ರೀಮಂತರ ಆಶ್ರಯಲ್ಲಿದ್ದರು ಎನ್ನುವ ಆರೋಪವನ್ನು ತಳ್ಳಿಹಾಕಲು ಯತ್ನಿಸಿರುವ ಮಾರಿ ಲೂಯಿ ಬರ್ಕೆ ಸ್ವಾಮಿಗಳು ಬಡವರ, ಕಾರ್ಮಿಕರ,ಶೋಷಿತರ ಜೀವನವನ್ನು ಅರಿಯುವ ತವಕದಲ್ಲಿದ್ದರು , ಅವರ ಅಂತರಂಗ ಪ್ರವೇಶಿಸಲು ಬಯಸಿದ್ದರು , ಕೆಲವೊಮ್ಮೆ ಅವರ ಮುರುಕು ಮನೆಗಳಲ್ಲಿ ಅವರೊಂದಿಗೆ ‘ಅಂಬಲಿ’ಯನ್ನೂ ಕುಡಿದಿರಬಹುದು. ಭಾರತದಲ್ಲಿ ಪರಿವ್ರಾಜಕ ಜೀವನದಲ್ಲಿ ಬಡವ , ಶ್ರೀಮಂತ , ರಾಜ , ಭಿಕಾರಿಗಳೊಂದಿಗೆ ಬೆರೆತಂತೆ ಅಮೆರಿಕದಲ್ಲಿಯೂ ಬೆರೆತಿದ್ದರು ಎನ್ನುವ ಸಮರ್ಥನೆ ನೀಡುತ್ತ ನಂತರ ಪೆಚ್ಚು ಧ್ವನಿಯಲ್ಲಿ ಆದರೆ ಇದಕ್ಕೆ ಯಾವ ದಾಖಲೆಗಳೂ ಲಭ್ಯವಿಲ್ಲ ಎಂದು ಬಡಬಡಿಸಿದ್ದಾರೆ.(36) ಸ್ವಾಮಿಗಳು ಪಾಶ್ಚಾತ್ಯ ದೇಶದ ಜೀವನ ಬಹುತೇಕ ಜೀವನ ದಿನಾಂಕವಾರು ದಾಖಲಾಗಿದೆ. ಅವರ ಎಲ್ಲ ಬಗೆಯ ಭಾಷಣಗಳು , ಚಟುವಟಿಕೆಗಳನ್ನು ಪತ್ರಿಕೆಗಳು ವರದಿ ಮಾಡಿವೆ. ಸ್ವಾಮಿಗಳು ಅಮೆರಿಕದ ಬಡವರ ಬಗ್ಗೆ ತೋರಿಸಿದ ಕಾಳಜಿಯ ಬಗ್ಗೆ ಒಂದು ಸಾಲಿನ ವರದಿಯೂ ಲಭ್ಯವಿಲ್ಲ.
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ಭಾರತ , ಅಮೆರಿಕ ಮತ್ತು ಇಂಗ್ಲೆಂಡ್’ನಲ್ಲಿ ಸ್ವಾಮಿಗಳು ಇದ್ದಾಗ ತೆಗೆದ ಅಂದಾಜು ೧೦೬ ಫೋಟೊಗಳು ಲಭ್ಯವಿವೆ. ಅವುಗಳನ್ನು (೧) ಪರಿವ್ರಾಜಕ ಜೀವನಕ್ಕಿಂತ ಮೊದಲು (೨) ಪರಿವ್ರಾಜಕನಾಗಿ (೩) ಅಮೆರಿಕದಲ್ಲಿ ಮತ್ತು (೪) ಇಂಗ್ಲೆಂಡ್’ನಲ್ಲಿ ಎಂದು ನಾಲ್ಕು ಬಗೆಯಲ್ಲಿ ಮತ್ತು ಒಂಟಿ ಮತ್ತು ಗುಂಪು ಎನ್ನುವ ವರ್ಗಗಳಲ್ಲಿ ಗುರುತಿಸಬಹುದು.
(೧) ಸ್ವಾಮಿಗಳು ಪರಿವ್ರಾಜಕ ದಿನಗಳಲ್ಲಿ ಆ ಕಾಲದ ಸಾಮಾನ್ಯ ಸಂನ್ಯಾಸಿಗಳಿಗಿಂತ ಭಿನ್ನವಾದ ಸಭ್ಯವಾದ ಬಟ್ಟೆಗಳನ್ನು ತೊಡುತ್ತಿದ್ದರು. ಬೆಳಗಾವಿ ಮತ್ತು ತಿರುವನಂತಪುರದಲ್ಲಿ ತೆಗೆಸಿಕೊಂಡಿರುವ ಫೋಟೊಗಳನ್ನು ಗಮನಿಸಿದರೆ ಸ್ವಾಮಿಗಳು ಯಾವಾಗಲೂ ಪಂಚೆಯುಟ್ಟು , ಮೇಲುಹೊದಿಕೆಯಲ್ಲಿ ಇರುತ್ತಿರಲಿಲ್ಲ. ಅವರು ಅಳತೆ ಕೊಟ್ಟು ದರ್ಜಿಯಿಂದ ಬಟ್ಟೆಗಳನ್ನು ಹೊಲಿಸಿಕೊಳ್ಳುತ್ತಿದ್ದರು. ತುಂಬು ತೋಳಿನ ಅಂಗಿ , ಷರಾಯಿ ಉಟ್ಟು ಅವುಗಳಿಗೆ ಒಪ್ಪುವಂತೆ ಮುಂಡಾಸು ಸುತ್ತುತ್ತಿದ್ದರು. ಈ ಮುಂಡಾಸನ್ನು ಆಕರ್ಷಕವಾಗಿ ಎದೆಯ ಮುಂಭಾಗಕ್ಕೆ ಇಳಿಬಿಟ್ಟುಕೊಳ್ಳುವ ಅಭ್ಯಾಸವನ್ನು ೧೮೯೨ ರಲ್ಲಿ ಬೆಳಗಾವಿಯಲ್ಲಿ ಫೋಟೊ ತೆಗೆಸಿಕೊಳ್ಳುವ ವೇಳೆಗೆ ರೂಢಿಸಿಕೊಂಡಿದ್ದರು. ಉತ್ತಮವಾದ ಚಪ್ಪಲಿಗಳನ್ನು ಹಾಕಿಕೊಳ್ಳುತ್ತಿದ್ದರು. ಸ್ವಾಮಿಗಳು ಪರಿವ್ರಾಜಕ ದಿನಗಳಿಗಿಂತ ಮಂಚೆ ತೆಗೆಸಿಕೊಂಡ ಫೋಟೊಗಳಿಗಿಂತಲೂ ನಂತರದ ದಿನಗಳಲ್ಲಿ ತೆಗೆಸಿಕೊಂಡ ನಂತರ ಬೇರೆಯವೇ ಆಗಿವೆ. ರಾಜ , ದಿವಾನ , ಶ್ರೀಮಂತರ ಪರಿಚಯವಾದ ನಂತರ ಉಡುಗೆ, ತೊಡುಗೆಗಳಲ್ಲಿ ಬದಲಾವಣೆ ಬಂದಿರಬಹುದು.
(೨) ಅಮೆರಿಕಕ್ಕೆ ಹೋದ ಆರಂಭದ ಕೆಲ ದಿನ ಮಾತ್ರ ಸ್ವಾಮಿಗಳು ಖೇತ್ರಿ ರಾಜ ಅಜಿತ್ ಸಿಂಗ್ ಹೊಲಿಸಿಕೊಟ್ಟ ರೇಷ್ಮೆ/ ಜರತಾರಿಯ ಭಾರತೀಯ ಸಂನ್ಯಾಸಿಯ ಉಡುಗೆಯಲ್ಲಿದ್ದರು. ೨೦/೮/೧೮೯೩ ರಂದು ಅಳಸಿಂಗ ಪೆರುಮಾಳ್’ಗೆ ‘….ನಾನು ಕಪ್ಪು ನಿಲುವಂಗಿ ಹಾಕಿಕೊಳ್ಳುತ್ತೇನೆ. ಉಪನ್ಯಾಸ ಮಾಡುವ ಸಮಯದಲ್ಲಿ ಕಾಷಾಯದ ಮುಂಡಾಸ ಸುತ್ತಬೇಕೆಂದಿರುವೆ. ಹೀಗೆ ಮಾಡಬೇಕೆಂದು ಇಲ್ಲಿಯ ಮಹಿಳೆಯರು ಹೇಳುತ್ತಾರೆ. ಅವರೇ ಇಲ್ಲಿ ಆಳುವವರು. ಅವರ ಸಹಾನುಭೂತಿ ನನಗೆ ಆವಶ್ಯಕ ಎಂದು ಬರೆದು ತಮ್ಮ ಉಡುಪನ್ನು ಪಾಶ್ಚಾತ್ಯೀಕರಿಸಿಕೊಂಡರು. ಆಕರ್ಷಣೆ ಮತ್ತು ಭಾರತೀಯ ಸಂಕೇತವಾಗಿ ನಿಲುವಂಗಿಗೆ ವೈದೃಶ್ಯ ಕೊಡುವ ಕೇಸರಿ ಮುಂಡಾಸನ್ನು ಮಾತ್ರ ಉಳಿಸಿಕೊಂಡರು. ಅದಕ್ಕೆ ತಕ್ಕುದಾದ ಮೆರುಗುಗೊಳಿಸಿದ ಪಾಶ್ಚಾತ್ಯ ಕೆರಗಳು ಕಾಲಿಗೆ ಬಂದವು. ಭಾರತದಿಂದ ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ಇತರ ಪ್ರತಿನಿಧಿಗಳು-ಧರ್ಮಪಾಲರನ್ನು ಹೊರತು ಪಡಿಸಿ- ಪಾಶ್ಚಾತ್ಯ ಶೈಲಿಯ ಸರಳವಾದ ಅಂಗಿ , ಮೇಲಿನ ಕೋಟು ಮತ್ತು ಷರಾಯಿ ಉಟ್ಟು ತಲೆಗೆ ಮುಂಡಾಸು ಸುತ್ತಿದ್ದರು. ಧರ್ಮಪಾಲರು ಮಾತ್ರ ಬಿಳಿ ಪಂಚೆ ಅತ್ಯಂತ ಸರಳವಾದ ಬಿಳಿ ಅಂಗಿ ಉಟ್ಟು. ತಲೆಗೆ ಮುಂಡಾಸನ್ನೂ ಸುತ್ತದೆ ಅಪ್ಪಟ ಸಾತ್ವಿಕ ಸಂನ್ಯಾಸಿಯಂತೆ ಕಾಣುತ್ತಿದ್ದು ಉಡುಗೆಯಲ್ಲಿ ಪರಿಪೂರ್ಣ ಭಾರತೀಯರಾಗಿದ್ದರು. ಇತರ ಭಾರತೀಯ ಪ್ರತಿನಿಧಿಗಳಿಗಿಂತ ಭಿನ್ನವಾಗಿರುವ ಸಡಿಲ ನಿಲುವಂಗಿ ಉಟ್ಟು , ಸೊಂಟಕ್ಕೆ ಇಳಿಬಿಟ್ಟ ಪಟ್ಟಿ ಕಟ್ಟಿ , ತಲೆಗೆ ಸುತ್ತಿದ್ದ ಮುಂಡಾಸಿನ ತುದಿಯನ್ನು ಎದೆಯ ಎಡಭಾಗದ ಮೇಲೆ ಬಿಟ್ಟಿದ್ದ ಸ್ವಾಮಿಗಳ ವೇಷ-ಭೂಷಣಗಳು ಅಮೆರಿಕದ ಜನರನ್ನು ತಕ್ಷಣವೇ ಸೆಳೆದವು. ಆದ್ದರಿಂದ ಅಮೆರಿಕದ ಪತ್ರಿಕೆಗಳು ಸ್ವಾಮಿಗಳ ಉಡುಗೆ-ತೊಡುಗೆಗಳನ್ನು ಉತ್ಸಾಹದಿಂದ ಬಣ್ಣಿಸಿ , ಅದಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದವು. ಅಮೆರಿಕದ ವಾತಾವರಣದಲ್ಲಿ ಅಂತಹ ಬಟ್ಟೆ ಅನಿವಾರ್ಯವಾಗಿದ್ದವೆಂದು ಸ್ವಾಮಿಗಳ ಚರಿತ್ರೆಕಾರರು ಹೇಳುವರಾದರೂ ಅದಕ್ಕೆ ಧರ್ಮಪಾಲರ ಉಡುಗೆ ಸವಾಲೆಸೆಯುತ್ತದೆ.
(೩) ಸ್ವಾಮಿಗಳ ಉಡುಗೆ-ತೊಡುಗೆಗಳು ಅಮೆರಿಕನ್ನರಿಗೆ ಭಾರಿ ಆಕರ್ಷಕ ಸಂಗತಿಗಳಾಗಿದ್ದು ಅವರ ಭಾಷಣಕ್ಕಿಂತಲೂ ಹೆಚ್ಚಿನ ಗಮನ ಸೆಳೆದಿದ್ದವು. ಶ್ರೀಮತಿ ಜಾರ್ಜ್ ರೈಟ್ ೨೯/೮/೧೮೯೩ ರಂದು ತನ್ನ ತಾಯಿಗೆ ಆನಿಸ್ಕ್ವಾಮ್’ನಿಂದ ಬರೆದ ಪತ್ರದಲ್ಲಿ ‘ …. ಶುಕ್ರವಾರ ಆತ ನೀಳವಾದ ಉಡುಗೆಯಲ್ಲಿ ಬಂದು ಭಾರಿ ಸೋಜಿಗಗನ್ನುಂಟು ಮಾಡಿದನು’ ಎಂದು ಬರೆದಿದ್ದಳು. (17) ೨೪/೮/೧೮೯೩ರ ಸಲೆಂ ಈವೆನಿಂಗ್ ನ್ಯೂಸ್ ಸ್ವಾಮಿಗಳ ಆಗಮನ ಮತ್ತು ನೀಡಲಿರುವ ಭಾಷಣದ ಸುದ್ದಿ ನೀಡುತ್ತ ‘ರಾಜ (ಸ್ವಾಮಿಗಳು) ದೇಶಿಯ ಉಡುಗೆಯಲ್ಲಿರುತ್ತಾರೆ’ ಎಂದು , ೨೯/೮/೧೮೯೩ ರ ವರದಿಯಲ್ಲಿ ‘ಆತ ಸುಂದರನಾಗಿ ಕಾಣುವ ಹಳದಿ ಮಿಶ್ರಿತ ಕೆಂಪು ಬಣ್ಣದ ನಿಲುವಂಗಿಯುಟ್ಟು , ಸೊಂಟಕ್ಕೆ ಪಟ್ಟಿ ಕಟ್ಟಿಕೊಂಡು , ಮುಂಡಾಸು ಸುತ್ತಿರುವ ಕಪ್ಪುಬಣ್ಣದ ಸಜ್ಜನ ‘ ಎಂದಿತು. (18), ೬/೯/೧೮೯೩ ಸಾರಟೊಗ ಪ್ರೆಸ್ ‘ ದೇಶೀಯ ಉಡುಗೆಯಲ್ಲಿ ಆತನದು ಎದ್ದು ಕಾಣುವ ವ್ಯಕ್ತಿತ್ವ’ ಎನ್ನುವ ಅಭಿಪ್ರಾಯ ತಳೆಯಿತು. (19) ,೧೨/೯/೧೮೯೩ ರ ಷಿಕಾಗೊ ಟೈಮ್ಸ್ ‘ ವಿಶೇಷವಾಗಿ ಹೆಂಗಸರನ್ನು ಸೆಳೆದ ಮುಖ ಮತ್ತು ಉಡುಗೆ ಸುಂದರ ತರುಣ ವಿವೇಕಾನಂದರದ್ದು . ಆತನ ಲಕ್ಷಣಗಳು ಎಲ್ಲಿ ಬೇಕಾದರೂ ಎದ್ದು ಕಾಣುತ್ತವೆ. ಆತನ ಉಡುಗೆ ಕಡು ಕಿತ್ತಳೆ ಬಣ್ಣದ ನಿಲುವಂಗಿ , ಅದೇ ಬಣ್ಣದ ಮುಂಡಾಸು ‘ ಎಂದಿದೆ. (20) ೨೮/೯/೧೮೯೩ ರ ಸಂಚಿಕೆಯಲ್ಲಿ ಷಿಕಾಗೊ ಅಡ್ವೋಕೇಟ್ ‘ತೂರಾಡುವ ಕಿತ್ತಳೆ ಬಣ್ಣದ ಬಟ್ಟೆ , ಕೇಸರಿ ಮುಂಡಾಸು ಉಟ್ಟ , ನುಣುಪಾಗಿ ಮುಖ ಕ್ಷೌರ ಮಾಡಿದ ಚೆಲುವಿನ ಮುಖದ ಅಗಲ ಆಳವಾದ ಭೇದಿಸುವ ಕಣ್ಣುಗಳ ಬ್ರಾಹ್ಮಣ ಸಂನ್ಯಾಸಿ ಕೆಲವು ದೃಷ್ಟಿಯಲ್ಲಿ ಅತಿ ಹೆಚ್ಚು ಮೋಹಕ ವ್ಯಕ್ತಿ ‘ (21) ಎಂದರೆ ಅಯೋವಾ ಸ್ಟೇಟ್ ರಿಜಿಸ್ಟರ್ ಪತ್ರಿಕೆಯ ೨೮/೧೧/೧೮೯೩ ಸಂಚಿಕೆ ‘ ಆತನದು ಮಧ್ಯಮ ಗಾತ್ರ , ನೇರ ನಿಲುವು , ಸೆಳೆಯುವ ಚೆಲುವಿನದೆಂದು ಕರೆಯಬಹುದಾದ ಮುಖ , ಕೆಂಪು ಷರಾಯಿ ,ಸಡಿಲವಾದ ಕೆಂಪು ನಿಲುವಂಗಿ , ಸೊಂಟಪಟ್ಟಿ ಹಾಗೂ ದೊಡ್ಡ ಬಿಳಿ ಮುಂಡಾಸಿನ ದೇಶಿಯ ಉಡುಗೆಯಲ್ಲಿಯೂ ಆತ ಎಂದಿಗೂ ಪ್ರಚೋದನಾಕಾರಿಯಾಗಿಲ್ಲ ‘ ಎನ್ನುವ ಅಭಿಪ್ರಾಯ ತಳೆದಿದೆ. (22) ಷಿಕಾಗೊ ಈವೆನಿಂಗ್ ಜರ್ನಲ್ -೨೯/೯/೧೮೯೩- ಸ್ವಾಮಿಗಳು ತಮ್ಮ ‘ಬಾಲ್ಟಿಮೋರ್ ಓರಿಯೋಲ್’ ಉಡುಗೆಯಿಂದ ಮಾತ್ರವಲ್ಲ ಧ್ಯಾನಸ್ಥ ಸ್ಥಿತಿ , ನಿರ್ವಿಕಾರ ಮತ್ತು ಹಿಂದೂ ಸಿದ್ಧಾಂತದ ಪ್ರತಿಪಾದನೆಯಿಂದಲೂ ಗಮನ ಸೆಳೆಯುತ್ತಾನೆ ‘ ಎಂದಿದೆ. (23) ಕಮರ್ಷಿಯಲ್ ಜರ್ನಲ್-೧೭/೧/೧೮೯೪- ‘ಆತ ಅಪ್ಪಟ ರೇಷ್ಮೆಯ ಗುಲಾಬಿ ಬಣ್ಣದ ಬಟ್ಟೆಯುಟ್ಟು , ಸೊಂಟಕ್ಕೆ ಕಪ್ಪು ಪಟ್ಟಿ ಕಟ್ಟಿ , ಕಪ್ಪು ಷರಾಯಿಯಲ್ಲಿದ್ದು ಆತನ ತಲೆಯ ಮೇಲೆ ಭಾರತದ ಹಳದಿ ರೇಷ್ಮೆ ಮುಂಡಾಸು ಶೋಭಿಸುತ್ತಿದ್ದಿತು ‘ ಎಂದ ಬಣ್ಣಿಸಿದೆ. (24)
ಅಪೀಲ್ ಅವಲಾಂಚ್-೨೦/೧/೧೮೯೪- ‘ಸ್ವಾಮಿ ವಿವೇಕಾನದರ ಜನಪ್ರಿಯತೆ ಹೆಚ್ಚಿದೆ- ಅದು ವಿಶೇಷವಾಗಿ ಹೆಂಗಸರಲ್ಲಿ. ಅವರಿಗೆ ಆತ ಇತ್ತೀಚಿನ ಸಂವೇದನೆಯಾಗಿದ್ದಾನೆ. ಆತನ ಬಗ್ಗೆ ಮಾತನಾಡಿ ಅವರು ದಣಿಯರು. ಕಳೆದ ರಾತ್ರಿಯ ಭಾಷಣದಲ್ಲಿದ್ದ ಸಭಿಕರಲ್ಲಿ ಮೂರನೇ ಎರಡರಷ್ಟು ಹೆಂಗಸರೇ ಇದ್ದು ಆತನ ಬಾಯಿಂದ ಉದುರುವ ಪ್ರತಿಯೊಂದು ಮಾತು ಕಡಲಾಳದಿಂದ ಎತ್ತಿ ತಂದ ಒಂದು ಮುತ್ತೇನೋ ಎನ್ನುವಷ್ಟು ಏಕಾಗ್ರತೆಯಿಂದ ಇದ್ದರು’ ಎನ್ನುವ ವಿವರಣೆ ನೈಜವಾಗಿದೆ. (25) ಹೀಗೆ ಆರಂಭದಲ್ಲಿ ಅಮೆರಿಕದ ಪತ್ರಿಕೆಗಳು ಸ್ವಾಮಿಗಳು ಉಡುಗೆ , ತೊಡುಗೆಗಳಿಂದಲೇ ಜನರನ್ನು ಅದರಲ್ಲೂ ಹೆಂಗಸರನ್ನು ತಮ್ಮತ್ತ ಸೆಳೆಯುವುದನ್ನು ಗುರುತಿಸಿದ್ದವು. ಸಾಜಿನಾ ಈವೆನಿಂಗ್ ನ್ಯೂಸ್ – ೧೯/೩/೧೮೯೪- ‘ಆತ ಸ್ಥಿತಿವಂತ ಅಮೆರಿಕನ್ನರಂತೆ ಬಟ್ಟೆ ತೊಡುತ್ತಾನೆ. ಅತ್ಯುತ್ತಮ ಇಂಗ್ಲಿಷ್ ಮಾತಾನಾಡುತ್ತಾನೆ’ ಎಂದು ಗುರುತಿಸಿದೆ. (26) ೨೯/೪/೧೮೯೪ ರಂದು ಡಾ. ಎಗ್ಬರ್ಟ್ ಗೆರ್ನ್ಸ ಮನೆಯಲ್ಲಿ ಕೊಟ್ಟ ಔತಣಕ್ಕ ಹಾಜರಾಗಿದ್ದ ಮಿಸ್ ಗಿಬ್ಬನ್ಸ್ ( ಶ್ರೀಮತಿ ಟೌನೆ) ‘ ಆತ ಕಿತ್ತಳೆ ನಿಲವಂಗಿಯುಟ್ಟು , ಕಡು ಕೆಂಗುಲಾಬಿ ಬಣ್ಣದ ನಡುಪಟ್ಟಿ ಸುತ್ತಿ ಬಂಗಾರದ ಎಳೆಗಳಿರುವ ಬಿಳಿ ಮುಂಡಾಸು ಸುತ್ತಿದ್ದನು. ಬರಿಗಾಲುಗಳಿಗೆ (ಕಾಲಚೀಲವಿಲ್ಲದ) ಮೆದುವಾದ ಕಂದು ಬಣ್ಣದ ಚರ್ಮದ ಚಪ್ಪಲಿ ಹಾಕಿಕೊಂಡಿದ್ದನು’ ಎಂದು ನೆನಪಿಸಿಕೊಂಡಿದ್ದಾಳೆ. (27) ಬಾಲ್ಟಿಮೋರ್ ನ್ಯೂಸ್ -೧೩/೧೦/೧೮೯೪- ‘ಆತ ರೆನ್ನೆರ್ಟ್ ಹೊಟೆಲ್’ಗೆ ಹೋಗುವ ಮೊದಲು ಉಟ್ಟಿದ್ದ ಕಪ್ಪು ಕೋಟಿನ ಬದಲು ಕೆಂಪು ಬಟ್ಟೆಯುಟ್ಟು , ತಲೆಗೆ ಹಳದಿ ಮುಂಡಾಸನ್ನು ಸುತ್ತಿ ಕೋಣೆಯಿಂದ ಹೊರಬರುತ್ತ ಹಾಸ್ಯಮಯವಾಗಿ ‘ಪರಿವರ್ತನೆ’ ಎಂದು ಹೇಳಿದನು’ ಎನ್ನುವ ವರದಿಯಿಂದ ಸ್ವಾಮಿಗಳು ಭಾಷಣದ ಸಮಯದಲ್ಲಿ ಮಾತ್ರ ‘ದೇಶೀಯ ಉಡುಗೆ, ಮುಂಡಾಸು ಧರಿಸುತ್ತಿರುವುದು ಸ್ಪಷ್ಟವಾಗುತ್ತದೆ. ಬಾಲ್ಟಿಮೊರ್ ನ್ಯೂಸ್ ಇನ್ನೂ ಮುಂದುವರೆದು ‘ ಆತನಿಗೆ ಅಮೆರಿಕದ ಸಮಾಜದ ತಿರುಳಿಗೆ ಸಾಗಿಲ್ಲ , ಯುರೋಪಿಯನ್ ವಲಸೆ, ವಿಚ್ಛೇದನ , ಜನಾಂಗೀತ ತಾರತಮ್ಯ , ಕಾಡುತ್ತಿರುವ ಆರ್ಥಿಕ ಸಂಕಷ್ಟ ಮುಂತಾದವುಗಳ ಬಗ್ಗೆ ಏನೂ ಗೊತ್ತಿಲ್ಲ’ ಎಂದು ಸೇರಿಸಿದೆ. (28) ಡೆಟ್ರಾಯಿಟ್ ಟ್ರಬ್ಯೂನ್-೫/೩/೧೮೯೬- ‘ಆತ ಮೇಲಿನ ಮಹಡಿಗೆ ಹೋಗಿ ಅಲ್ಪ ಸಮಯದಲ್ಲಿ ಊದಾ ಬಣ್ಣದ ಬಟ್ಟೆಯುಟ್ಟು ,ಸೊಂಟಕ್ಕೆ ಅದೇ ಬಣ್ಣದ ಪಟ್ಟಿ ಕಟ್ಟಿ ಕೆಳಗಿಳಿದು ಬಂದನು ‘ ಎಂದಿದೆ. (29)
(೪) ಸ್ವಾಮಿಗಳು ತಮ್ಮ ಉಡುಗೆ , ತೊಡುಗೆ , ತಲೆಗೂದಲು , ಭಂಗಿ , ಆಕರ್ಷಕ ಶೈಲಿಗಳ ಬಗ್ಗೆ ಭಾರಿ ಗಮನ ಕೊಡುತ್ತಿದ್ದರು. ಕೂದಲುಗಳು ನರೆಯುತ್ತಿರುವುದನ್ನು ಗಮನಿಸಿದ್ದ ಸ್ವಾಮಿಗಳು ‘ನನ್ನ ಕೂದಲು ಕಂತೆಕಂತೆಯಾಗಿ ಬೆಳ್ಳಗಾಗುತ್ತಿದೆ. ನನ್ನ ಮುಖವೆಲ್ಲ ಸುಕ್ಕಾಗುತ್ತಲಿದೆ… ಕೂದಲು ನರೆಯುತ್ತಿರುವುದರಿಂದ ನಾನು ದೊಡ್ದ ಗಡ್ಡವನ್ನು ಬೆಳೆಸಬೇಕೆಂದಿದ್ದೇನೆ, ಅದು ನೋಡುವವರಲ್ಲಿ ಒಂದು ಪೂಜ್ಯ ಭಾವನೆ ಹುಟ್ಟುವಂತೆ ಮಾಡುತ್ತದೆ’ ಹೀಗೆಂದು ಮೇರಿ ಹೇಲ್’ಗೆ ಹಲವು ಪತ್ರಗಳಲ್ಲಿ ವ್ಯಕ್ತಪಡಿಸಿದ್ದರು. (೨೮/೪/೧೮೯೭, ೪/೯/೧೮೯೯-ಮೇರಿ ಹೇಲ್). ಸ್ಯಾನ್’ಪ್ರಾನ್ಸಿಸ್ಕೊದಲ್ಲಿ ತೆಗೆಸಿದ ಫೋಟೊಗಳಲ್ಲಿ ನಡುವೆ ಬೈತಲೆ ತೆಗೆದು ಎರಡು ಕಡೆ ಅಲೆಯಂತೆ ಕವಲೊಡೆದಿರುವಂತೆ ಬಾಚಿಕೊಂಡಿರುವುದು ಕಾಣುತ್ತದೆ. ಸ್ವಾಮಿಗಳು ಜನರ ಒತ್ತಾಯದ ಮೇರೆಗೆ ಉದ್ದ ಕೂದಲನ್ನು ಬಿಟ್ಟಿದ್ದರು. ಅವರ ಕೂದಲು ಉದ್ದಕ್ಕೆ ಅಲೆಅಲೆಯಾಗಿದ್ದು ಆತನ ಲಕ್ಷಣಗಳನ್ನು ಎತ್ತಿ ತೋರಿಸುತ್ತಿದ್ದಿತು. ನಾವು ಕೂದಲನ್ನು ಕತ್ತರಿಸಬಾರದೆಂದು ತಿಳಿಸಿದ್ದೆವು. ಅದಕ್ಕೆ ಆತನ ಆಕ್ಷೇಪಣೆಯಿರಲಿಲ್ಲ. ದೇಹದ ಬಗ್ಗೆ ದಿವ್ಯ ನಿರ್ಲಕ್ಷ್ಯವಿದ್ದಿತು ಎಂದು ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ತಿಳಿಸಿದ್ದಾಳೆ. (30) ಇದು ನಿಜವಲ್ಲ ಎನ್ನುವುದು ಬೇರೆ ಮೂಲದಿಂದ ಗೊತ್ತಾಗುತ್ತದೆ. ಮೇರಿ ಹೇಲ್ ಸಲಹೆಯಂತೆ ಸ್ವಾಮಿಗಳು ತಮ್ಮ ಉದ್ದ ಕೂದಲನ್ನು ಕತ್ತರಿಸಿದ್ದರು. ‘ನೀನು ಒತ್ತಾಯಮಾಡಿ ನಾನು ನನ್ನ ಉದ್ದ ಕೂದಲುಗಳನ್ನು ಕತ್ತರಿಸುವಂತೆ ಮಾಡಿದೆ. ಅದನ್ನು ಈಗ ಎಲ್ಲರೂ ಟೀಕಿಸುತ್ತಿದ್ದಾರೆ. ಇದರಿಂದ ನನಗೆ ಬಹಳ ವ್ಯಥೆಯಾಗಿದೆ’ ಎಂದು ದೂರಿದ್ದರು. (೧೧/೭/೧೯೦೦). ಪಸಡೆನಾದಲ್ಲಿರುವಾಗ ಸಡಿಲವಾದ ಕಪ್ಪು ಕೋಟ್ ಉಟ್ಟು ಕಪ್ಪು ಟೋಪಿ ಧರಿಸುತ್ತಿದ್ದರು. ಭಾಷಣಕ್ಕೆ ಹೋಗುವಾಗ ಸಣ್ಣ ಸೂಟ್’ಕೇಸನಲ್ಲಿ ಕಾವಿ ಬಟ್ಟೆಗಳನ್ನು ಒಯ್ಯುತ್ತಿದ್ದು ಭಾಷಣಕ್ಕಿಂತ ಮುಂಚೆ ಉಡುತ್ತಿದ್ದರು. (31) ಫ್ರಾಂಕ್ ರೋಡ್’ಹ್ಯಾಮೆಲ್ ಸ್ವಾಮಿಗಳ ಮೊದಲ ಸಂದರ್ಶನವನ್ನು ನೆನಪಿಸಿಕೊಳ್ಳುತ್ತ ‘ ನಾನು ಕುಳಿತುಕೊಳ್ಳುವಷ್ಟರಲ್ಲಿ ಆತ ಚೊಕ್ಕಟವಾಗಿ ತಲೆಯನ್ನು ಬಾಚಿಕೊಂಡು ಸಂನ್ಯಾಸಿ ಉಡುಗೆಯಲ್ಲಿ ಬಂದನು ‘ ಎಂದಿದ್ದಾನೆ. (32) ಕ್ಯಾಂಪ್ ಟೇಲರ್’ಗೆ ಹೋಗುವ ದಿನ -೨೪/೪/೧೯೦೦- ನಾನು ಆತನ ಕೋಣೆಗೆ ಹೋದಾಗ ಯಾರೋ ಕೊಟ್ಟಿದ್ದ ಇಂಗ್ಲಿಷ್ ಹಂಟಿಂಗ್ ಸೂಟ್ ಹಾಕಿಕೊಂಡು ಕುಳಿತಿದ್ದನೆಂದು ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ನೆನೆಪಿಸಿಕೊಂಡಿದ್ದಾಳೆ. (33) ಪಾಶ್ಚಾತ್ಯ ಉಡುಗೆಯೇ ಅಮೆರಿಕದಲ್ಲಿ ಸ್ವಾಮಿಗಳ ದೈನಂದಿನ ಉಡುಗೆಯಾಗಿದ್ದಿತು. ಭಾಷಣದ ಸಮಯದಲ್ಲಿ ಮಾತ್ರ ಅವರು ಗೈರಿಕ ವಸನ ಉಟ್ಟ ಭಾರತದ ಸಂನ್ಯಾಸಿಯಾಗುತ್ತಿದ್ದರು.
ಮನ್ಮಥನಾಥ ಗಂಗೂಲಿಯ ನೆನಪುಗಳು ‘ರೆಮಿನಿಸೆನ್ಸ್’ನಲ್ಲಿವೆ . ಆಗ ನಡೆದ ಒಂದು ಘಟನೆ ಹೀಗಿದೆ. ಸ್ವಾಮಿಗಳು ಬಂಗಾರದ ಸರವನ್ನು ಕೊರಳಲ್ಲಿ ಧರಿಸಿದ್ದರು. ಆ ಸರದ ಕೊನೆಗೆ ಬಂಗಾರದ ಗಡಿಯಾರ ಲಗತ್ತಾಗಿದ್ದು ಅದನ್ನು ಜೇಬಿನಲ್ಲಿ ಇಳಿಬಿಟ್ಟಿದ್ದರು. ಬಂಗಾರದ ಸರ ಸ್ವಾಮಿಗಳ ಮೈಬಣ್ಣಕ್ಕೆ ಒಪ್ಪುವಂತಿದ್ದಿತು. ಅದನ್ನು ನೋಡಿದ ಒಬ್ಬ ಯುವಕ ಬಂಗಾರದ ಸರವನ್ನು ಮುಟ್ಟಿ ಎಷ್ಟು ಸುಂದರವಾಗಿದೆ ಎನ್ನುವ ಉದ್ಗಾರ ತೆಗೆದನು. ತಕ್ಷಣವೇ ಸ್ವಾಮಿಗಳು ಗಡಿಯಾರ ಸಹಿತವಿದ್ದ ಚಿನ್ನದ ಸರವನ್ನು ತಮ್ಮ ಕೊರಳಿನಿಂದ ತೆಗೆದು ಯುವಕನ ಕೈಯಲ್ಲಿರಿಸಿ ‘ನಿನಗೆ ಇಷ್ಟವಾಯಿತಲ್ಲವೇ ? ಈಗ ಅದು ನಿನ್ನದು. ಆದರೆ ಮಗು ಅದನ್ನು ಮಾರಬೇಡ , ನೆನಪಿಗಾಗಿ ಉಳಿಸಿಕೋ’ ಎಂದರು. ಸ್ವಾಮಿಗಳಿಂದ ಅಂತಹ ಮೌಲ್ಯದ ನೆನಪಿನ ವಸ್ತು ಪಡೆದ ಅದೃಷ್ಟಶಾಲಿ ಯಾರು ಮತ್ತು ಆ ಸರ ಈಗ ಎಲ್ಲಿದೆ ಎನ್ನುವುದರ ಸುಳಿವಿಲ್ಲ. ಅದೇನೇ ಇರಲಿ ಬಂಗಾರದ ಸರ ಗಡಿಯಾರದ ಮೂಲಕ ಸ್ವಾಮಿಗಳ ಮೈಯೇರಿದ್ದಿತು ಎನ್ನುವುದು ತಿಳಿಯುತ್ತದೆ.
ಭಾವಚಿತ್ರಗಳು / ಫೋಟೊಗಳು : ಸಂದರ್ಭಕ್ಕೆ ಅನುಗುಣವಾದ ಬಟ್ಟೆಗಳನ್ನುಟ್ಟು ಸ್ಟುಡಿಯೊಗಳಲ್ಲಿ ಫೋಟೊ ತೆಗೆಸಿಕೊಳ್ಳುವುದನ್ನು ಸ್ವಾಮಿಗಳು ಭಾರತದಲ್ಲಿರುವಾಗಲೇ ರೂಢಿಸಿಕೊಂಡಿದ್ದರು. ಸ್ವಾಮಿಗಳು ಯಾವಾಗಲೂ ಉನ್ನತ ಪ್ರಜ್ಞೆಯಲ್ಲಿರುತ್ತಿದ್ದು ದೇಹದ ಬಗ್ಗೆ ಅರಿವೇ ಇರುತ್ತಿಲ್ಲ ಎಂದು ಮಾರಿ ಲೂಯಿ ಬರ್ಕೆ ಹಲವು ಕಡೆ ಬರೆದಿದ್ದಾಳೆ. ಇದು ಸುಳ್ಳು ಎನ್ನುವಂತೆ ತಮ್ಮ ಫೊಟೊ ತಾವು ಬಯಸಿದಂತೆ ಬರದಿದ್ದರೆ ಜನ ಸಾಮಾನ್ಯರಂತೆ ಅವರೂ ಬೇಸರಗೊಳ್ಳುತ್ತಿದ್ದರು. ೧೦/೩/೧೮೯೪ ರಂದು ‘ಇಲ್ಲಿನ (ಡೆಟ್ರಾಯಿಟ್) ಛಾಯಾಚಿತ್ರಕಾರನು ತಾನು ತೆಗೆದ ಚಿತ್ರಗಳನ್ನು ನನಗೆ ಕಳಿಸಿದ್ದಾನೆ. ಅವು ಖಳನಾಯಕನಂತಿವೆ. ಶ್ರೀಮತಿ ಬ್ಯಾಗ್ಲಿಯವರಿಗೆ ಅವು ಸ್ವಲ್ಪವೂ ಹಿಡಿಸವು. ನಿಜವಾದ ಸಂಗತಿ ಏನೆಂದರೆ ನನ್ನ ಎರಡು ಚಿತ್ರಗಳನ್ನು ತೆಗೆದ ನಡುವಿನ ಅವಧಿಯಲ್ಲಿ ನನ್ನ ಮುಖ ದೊಡ್ಡದಾಗಿ , ದಪ್ಪವಾಗಿ ಹೋಗಿದೆ. ಅದಕ್ಕೆ ಆ ಛಾಯಾಚಿತ್ರಕಾರ ಏನು ಮಾಡಿಯಾನು ? ದಯವಿಟ್ಟು ಆ ಚಿತ್ರದ ನಾಲ್ಕು ಪ್ರತಿಗಳನ್ನು ಕಳಿಸಿಕೊಡಿ’ ಎಂದು ಈ ಹಿಂದೆ ಷಿಕಾಗೊದಲ್ಲಿ ತೆಗೆದಿದ್ದ ಉತ್ತಮ ಫೊಟೊಗಳನ್ನು ಕಳಿಸುವಂತೆ ಶ್ರೀಮತಿ ಜಾರ್ಜ್ ಹೇಲ್’ರನ್ನು ಕೋರಿದ್ದರು. ‘ಹ್ಯಾರಿಸನ್ ಅಂದಗೆಟ್ಟು ನಿಂತಿರುವ ನನ್ನ ಎರಡು ಫೋಟೋಗಳನ್ನು ಕಳಿಸಿರುವನು. ಅವುಗಳಲ್ಲಿ ನಾನು ಅಂದಗೆಟ್ಟಿರುವಂತಿದ್ದು ನೂರಕ್ಕೆ ೧೦-೧೫ ಅಂಕಗಳು ಬರಬಹುದು. ಅದರಲ್ಲಿ ಅವರು ನಲವತ್ತು ಅಂಕಗಳನ್ನು ಕಳೆಯಬೇಕಾಗುವುದು’ (೫/೮/೧೮೯೪) ಎಂದು ತಿಳಿಸಿದ್ದಾರೆ. ಸ್ವಾಮಿಗಳು ದಿನ ಕಳೆದಂತೆ ಫೋಟೋಗಳಲ್ಲಿ ತಾವು ಹೇಗೆ ಕಾಣಿಸುತ್ತಿದ್ದೇನೆ ಎನ್ನುವ ಬಗ್ಗೆ ಅತೀವ ಕಾಳಜಿ ವಹಿಸತೊಡಗಿ , ಪ್ರಚಾರದ ದೃಷ್ಟಿಕೋನ ತಳೆಯುತ್ತಿರುವಂತೆ ಭಾಸವಾಗುತ್ತದೆ. ೨೩/೮/೧೮೯೪ ರಂದು ನನಗೆ ಬೇಕಾದ ಭಂಗಿಯ ಫೋಟುಗಳು ಬಂದಿಲ್ಲ ಎಂದು ದೂರಿದ್ದರು.
ನವೆಂಬರ್’ನಲ್ಲಿ ಕ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೊದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಸ್ವಾಮಿಗಳು ಷಿಕಾಗೊದ (ವಾಷಿಂಗ್ಟನ್-?)ಥಾಮಸ್ ಹ್ಯಾರಿಸನ್ ಸ್ಟುಡಿಯೋದಲ್ಲಿ ಹಲವು ಭಂಗಿಯ ೭ ಫೋಟೊಗಳನ್ನು ಸ್ವಂತ ಖರ್ಚಿನಲ್ಲಿ ತೆಗೆಸಿಕೊಂಡಿದ್ದರು. ಅವುಗಳನ್ನು ಭಾರತ ಮತ್ತು ಅಮೆರಿಕದಲ್ಲಿದ್ದ ತಮ್ಮ ಬೆಂಬಲಿಗ , ಅಭಿಮಾನಿ , ಅನುಯಾಯಿಗಳಿಗೆ ಕಳಿಸಿಕೊಡುವುದೇ ಅದರ ಉದ್ದೇಶವಾಗಿದ್ದಿತು. ಹಾಗೆ ಕಳಿಸಿಕೊಡುವಾಗ ಬಂಗಾಳಿ ಲಿಪಿಯಲ್ಲಿ ಸಂಸ್ಕೃತ ಸುಭಾಷಿತಗಳನ್ನು ಬರೆಯುತ್ತಿದ್ದರು. ಈ ಸುಭಾಷಿತಗಳಲ್ಲಿ (೧) ರೋಗ, ಸಾವುಗಳು ತನಗಿಲ್ಲ ಎನುವಂತೆ ಜ್ಞಾನ ಮತ್ತು ಹಣವನ್ನು, ಸಾವು ಕೂದಲು ಹಿಡಿದು ಎಳೆಯುತ್ತಿದೆ ಎನ್ನುವಂತೆ ಧರ್ಮವನ್ನು ಆಚರಿಸಬೇಕು (೨) ಸಾವಿನಾಚೆಗೂ ಜೊತೆಗಿರುವುದು ಧರ್ಮ ಮಾತ್ರ (೩) ಗುಣಾತೀತ ಚಿಂತನಾತೀತವಾದ ಅನಂತ ಪವಿತ್ರ ಪರಿಶುದ್ಧತೆಗೆ ನಾನು ತಲೆಬಾಗುತ್ತೇನೆ (೪) ಎಲ್ಲ ಪ್ರಾಣಿಗಳಲ್ಲಿ ಸಮತ್ವವನ್ನು ಕಾಣುವುದೇ ಮುಕ್ತನ ಲಕ್ಷಣ (೪) ನೀನೊಬ್ಬನೇ ಈ ಜಗತ್ತಿನ ನಿಧಿ (೫) ನೀನೆ ಒಡೆಯ , ತಂದೆ , ತಾಯಿ , ಗಂಡ ಮತ್ತು ಪ್ರೀತಿ ಎನ್ನುವ ಆಶಯಗಳು ವ್ಯಕ್ತವಾಗಿವೆ. (34) ಒಂದು ವರ್ಷದ ಸುದೀರ್ಘಾವಧಿಯಲ್ಲಿ ಬರೆದ -೨/೧೧/೧೮೯೩, ೨೮/೫/೧೮೯೪, ೧೧/೭/೧೮೯೪ , ೫/೮/೧೮೯೪ , ೨೦/೮/೧೮೯೪, ೫/೯/೧೮೯೪ , ೨೭/೯/೧೮೯೪ , ೨೭/೧೦/೧೮೯೪ ದಿನಾಂಕದ ಪತ್ರಗಳು - ಸ್ವಾಮಿಗಳು ಈ ಫೋಟೊಗಳಿಗೆ ಎಷ್ಟು ಮಹತ್ವ ನೀಡಿದ್ದರೆಂದು ಸೂಚಿಸುತ್ತವೆ. ಭಾರತದಲ್ಲಿ ಹಂಚಲು ೧೦೦ ಫೋಟೊಗಳನ್ನು ಕಳಿಸಲು ೨೭/೧೦/೧೮೯೪ರಂದು ಮೇರಿ ಹೇಲ್’ಗೆ ತಿಳಿಸಿದ್ದರು. ಥಾಮಸ್ ಹ್ಯಾರಿಸನ್ ಮತ್ತು ಸ್ವಾಮಿಗಳ ನಡುವೆ ಹೊಂದಾಣಿಕೆ ಇಲ್ಲದಿದ್ದರೂ ಆತ ಸ್ವಾಮಿಗಳ ಅತ್ಯಧಿಕ ಅತ್ಯುತ್ತಮ ಫೋಟಗಳನ್ನು ತೆಗೆದಾತ ಎಂದು ಗುರುತಿಸಲಾಗುತ್ತದೆ. ಥಾಮಸ್ ಹ್ಯಾರಿಸನ್ ವ್ಯಾಪಾರಕ್ಕಾಗಿ ಅಷ್ಟೊಂದು ಫೊಟೊಗಳನ್ನು ತೆಗೆದಿರುವುದು ಸ್ಪಷ್ಟ.
ಸ್ವಾಮಿಗಳ ಅಭಿಮಾನಿ ಮಿಸ್ ಎಮೆಲಿನ್ ಸೌಟೆರ್ ಸ್ವಾಮಿಗಳು ಭಾರತಕ್ಕೆ ತೆರಳುವ ಮೊದಲು ಫೋಟೊಗ್ರಫಿ ಪರಿಣಿತ ಆಲ್ಫ್ರೆಡ್ ಎಲ್ಲಿಸ್'ನಿಂದ ಸ್ಟುಡಿಯೊದಲ್ಲಿ ೬ ಫೋಟೊಗಳನ್ನು ತೆಗೆಸಿದಳು. ಅದರಲ್ಲಿ ರಾಮಕೃಷ್ಣ ಮಠಗಳಲ್ಲಿ ಪೂಜಿಸಲ್ಪಡುತ್ತಿರುವ ಸ್ವಾಮಿಗಳ ಧ್ಯಾನ ಭಂಗಿಯ ಫೋಟೊ ಅತ್ಯಂತ ಖ್ಯಾತವಾದುದು. ಲಂಡನ್'ನಲ್ಲಿ ಸ್ವಾಮಿಗಳು ಯೋಗ ತರಗತಿಗಳನ್ನು ನಡೆಸುತ್ತಿರವಾಗ ಧ್ಯಾನಸ್ಥರಾಗಿ ಸಮಾಧಿಗೆ ಹೋದರು ಆಗ ತೆಗದ ಫೊಟೊ ಇದೆಂದು ಕೆಲವು ಭಕ್ತರು ನಂಬುತ್ತಾರಾದರೂ ಸ್ವಾಮಿಗಳು ಇತರ ಫೋಟೊಗಳಲ್ಲಿ ಉಟ್ಟಿರುವ ಬಟ್ಟೆ , ಭಂಗಿ ಮತ್ತು ಈ ಆರೂ ಫೋಟೊಗಳು ಒಂದೇ ‘ಪ್ರೂಫ್ ಷೀಟ್’ ಸ್ಟುಡಿಯೊದಲ್ಲಿ ನಡೆಸಿದ ಫೋಟೊ ಸೆಷನ್,ನಲ್ಲಿ ಈ ಫೋಟೊಗಳನ್ನು ತೆಗೆಸಿಕೊಂಡಿರುವುದು ಖಚಿತವಾಗುತ್ತದೆ. (35)
ವಸತಿ : ಸ್ವಾಮಿಗಳು ಅಮೆರಿಕ ಮತ್ತು ಇಂಗ್ಲೆಂಡ್’ನಲ್ಲಿರುವಾಗ ಎಲ್ಲಿರುತ್ತಿದ್ದರು ಮತ್ತು ಹೇಗಿರುತ್ತಿದ್ದರು ಎನ್ನುವ ಸ್ಪಷ್ಟ ಮಾಹಿತಿ ‘ದಿ ಲೈಫ್-೧೯೧೪’ ರಲ್ಲಾಗಲಿ ಅಥವಾ ಇತರ ಜೀವನ ಚರಿತ್ರೆಗಳಲ್ಲಾಗಲಿ ದಕ್ಕುವುದಿಲ್ಲ. ಕೋಷ್ಟಕ-೨ ರಲ್ಲಿ ಸ್ವಾಮಿಗಳ ವಸತಿಯ ವಿವರಗಳಿವೆ. ಸ್ವಾಮಿಗಳು ೧೮೯೩ ರಲ್ಲಿ ಅಮೆರಿಕ ತಲುಪಿದ ಹೊಸದರಲ್ಲಿ ಎಲ್ಲಿರುತ್ತಿದ್ದರು ಎನ್ನುವ ಖಚಿತ ಮಾಹಿತಿ ಇಲ್ಲವಾದರೂ ಹೋಟೆಲ್’ಗಳಲ್ಲಿ ಉಳಿದುಕೊಳ್ಳುತ್ತಿದ್ದರೆಂದು ಊಹಿಸಬಹುದು. ೧೮೯೪ ಆರಂಭದಲ್ಲಿ ಕ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೊ ಜೊತೆ ಒಪ್ಪಂದ ಮಾಡಿಕೊಂಡ ನಂತರ ಸ್ವಾಮಿಗಳ ಪ್ರಯಾಣ ಮತ್ತು ವಸತಿಯನ್ನು ಆ ಸಂಸ್ಥೆಯೇ ಏರ್ಪಡಿಸಿರುವಂತಿದ್ದು ಆ ಬಗ್ಗೆ ಖಚಿತ ಮಾಹಿತಿ ದಕ್ಕುವುದಿಲ್ಲ. ಅಮೆರಿಕದಲ್ಲಿ ಜನ ಪರಿಚಯವಾಗತೊಡಗಿದಂತೆ ಸ್ವಾಮಿಗಳ ವಸತಿ, ಊಟ, ಪ್ರವಾಸಗಳ ಬಗ್ಗೆ ನಿರ್ದಿಷ್ಟ ಮಾಹಿತಿಗಳು ಸಿಕ್ಕುತ್ತವೆ. ಸ್ವಾಮಿಗಳು ಅಮೆರಿಕ, ಇಂಗ್ಲೆಂಡ್’ನಲ್ಲಿ ೧೭೬೦ ದಿನಗಳಿದ್ದರು. ಈ ದಿನಗಳಲ್ಲಿ ಸ್ವಾಮಿಗಳ ಮುಖ್ಯ ವಸತಿ ನೆಲೆಗಳ ಸ್ಥೂಲ ನೋಟ ಹೀಗಿದೆ.
ಈ ಅತಿಥೇಯರ ಮನೆಗಳಲ್ಲಿ ಸ್ವಾಮಿಗಳು ೪೭೩ ದಿನ (೨೬.೮೮ %) ಕಳೆದರು. ಈ ಮನೆಗಳಲ್ಲಿ ಇದ್ದಾಗ ಅವರಿಗೆ ಸಕಲ ಸವಲತ್ತುಗಳು , ಸಂಪೂರ್ಣ ವಿಶ್ರಾಂತಿ , ಬೇಕಾದ ಸ್ವಾತಂತ್ರ ಇರುತ್ತಿದ್ದವು. ಸ್ವಾಮಿಗಳು ದೀರ್ಘ ಕಾಲ ನೆಲೆಸಿದ್ದ ಫ್ರಾನ್ಸಿಸ್ ಲೆಗೆಟ್’ನ ಪೆರ್ಸಿ ಹಾಗೂ ಸ್ಟೋನ್ ರಿಜ್ ಸ್ಥಳಗಳಲ್ಲಿದ್ದ ವೈಟ್ ಬರ್ಚ್ ಲಾಜ್ ಮತ್ತು ರಿಡ್ಜ್’ಲಿ ಮ್ಯಾನರ್’ಗಳು ಆಧುನಿಕ ಕಾಲದ ಯಾವುದೇ ವಿಲಾಸಿ ರಿಸಾರ್ಟ್’ನ್ನು ನಾಚಿಸುವಂತಿದ್ದವು. ಕೇಂಬ್ರಿಜ್’’ನಲ್ಲಿದ್ದ ಸಾರಾ ಬುಲ್ ಮನೆ ಸಂಪತ್ತಿನಲ್ಲಿ ಮುಳುಗೇಳುತ್ತಿದ್ದು ಶ್ರೀಮಂತರೇ ಕರುಬುವಂತೆ ಭವ್ಯವಾಗಿದ್ದಿತು. ಹಲವು ಉದ್ಯಮಗಳ ಕೆಂದ್ರವಾಗಿದ್ದ ಡಾ. ಗೆರ್ನ್ಸಿ ಮನೆ ನ್ಯೂಯಾರ್ಕ್’ನ ಸಿರಿವಂತರಿಗೆ ತಕ್ಕುದಾಗಿದ್ದಿತು. ಡೆಟ್ರಾಯಿಟ್’ನಲ್ಲಿದ್ದ ಮಾಜಿ ಗವರ್ನರ್ ಜೆ.ಜೆ ಬ್ಯಾಗ್ಲಿ ಮನೆ ಜನ ಸಾಮಾನ್ಯರು ಆಸೆಯ ಕಣ್ಣುಗಳಿಂದ ದಿಟ್ಟಿಸುವಂತಿದ್ದಿತು. ಮೇರಿ ಡಚರ್’ಗೆ ಸೇರಿದ ಥೌಸಂಡ್ ಐಲ್ಯಾಂಡ್ ಪಾರ್ಕ್ ರಮಣೀಯ ಪ್ರದೇಶವಾಗಿದ್ದು ಅಲ್ಲಿ ಕೇವಲ ೧೨ ಜನ ಶಿಬರಾರ್ಥಿಗಳು ಮಾತ್ರವಿದ್ದು ಮೊದಲನೆ ಮಹಡಿಯಲ್ಲಿ ಸ್ವಾಮಿಗಳಿಗಾಗಿಯೇ ಪ್ರತ್ಯೇಕ ಸುಸಜ್ಜಿತ ಕೋಣೆಯನ್ನು ಸಿದ್ದಪಡಿಸಲಾಗಿದ್ದಿತು. ಶಿಬಿರದಲ್ಲಿದ್ದವರೆಲ್ಲರೂ ಸ್ವಾಮಿಗಳು ಹಾಕಿದ ಗೆರೆ ದಾಟುತ್ತಿರಲಿಲ್ಲ. ಷಿಕಾಗೊದಲ್ಲಿದ್ದ ಜಾರ್ಜ್ ಹೇಲ್ ಮನೆ ಮೇಲ್ ಮಧ್ಯಮ ವರ್ಗದ್ದಾಗಿದ್ದರೆ , ಪಸಾಡೆನದ ಮೀಡ್ಸ್ ಸೋದರಿಯರ ಮನೆ ಅಮೆರಿಕದ ಮಧ್ಯಮ ವರ್ಗದ ನೈಜ ಪ್ರತಿನಿಧಿಯಾಗಿದ್ದಿತು.
ಸ್ವಾಮಿಗಳು ತರಗತಿಗಳನ್ನು ನಡೆಸುವಾಗ ದೀರ್ಘ ಕಾಲ ಒಂದೇ ಜಾಗದಲ್ಲಿ ಇರಬೇಕಾದಾಗ ಆರಂಭದಲ್ಲಿ ಹೊಟೆಲ್’ನಲ್ಲಿರುತ್ತಿದ್ದರು. ನಂತರದ ದಿನಗಳಲ್ಲಿ ಬಾಡಿಗೆ ಮನೆಯನ್ನು ಗೊತ್ತುಪಡಿಸಿಕೊಂಡರು. ಸಾಕಷ್ಟು ಕಾಲ ಶ್ರೀಮಂತರೊಂದಿಗೆ ಪ್ರವಾಸದಲ್ಲಿದ್ದರು. ಈ ಸಮಯದಲ್ಲಿ ಸ್ವಾಮಿಗಳಿದ್ದ ಜಾಗಗಳ ವಿವರ ಹೀಗಿದೆ.
ಸ್ವಾಮಿಗಳು ನ್ಯೂಯಾರ್ಕ್’ನ ೫೪ ವೆಸ್ಟ್ , ೩೩ ಸ್ಟ್ರೀಟ್ , ವೇದಾಂತ ಸೊಸೈಟಿ , ಲಂಡನ್’ನ ಬಾಡಿಗೆ ಮನೆ. ಲಂಡನ್ ಓಕ್ಲೆ ಸ್ಟ್ರೀಟ್, ಲಂಡನ್’ನ ಗ್ರೇ ಕೋಟ್ ಗಾರ್ಡನ್ಸ್’ಗಳಲ್ಲಿರುವಾಗ ಬೆಳಗಿನ ಮತ್ತು ಸಂಜೆಯ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಸ್ವಾಮಿಗಳು ೧೮೯೫ ರಲ್ಲಿ ಫ್ರಾನ್ಸಿಸ್ ಲೆಗೆಟ್ , ಬೆಟ್ಟಿ ಸ್ಟರ್ಜಿಸ್ , ಜೊಸೆಪಿನ್ ಮೆಕ್ಲಿಯಾಡ್ ಜೊತೆ ಅತ್ಯುತ್ತಮ ಶ್ರೇಣಿ ಮತ್ತು ದರ್ಜೆಯ ಹಡಗಿನಲ್ಲಿ ೭ ದಿನ ಯುರೋಪ್’ಗೆ ಪಯಣಿಸಿದರು. ಪ್ಯಾರಿಸ್’ನಲ್ಲಿ ಕಾಂಟಿನೆಂಟಲ್ ಎನ್ನುವ ಐಷಾರಾಮಿ ಹೊಟೆಲ್’ನಲ್ಲಿ ೧೭ ದಿನ ಉಳಿದಿದ್ದರು. ೧೮೯೬ ರಲ್ಲಿ ಸೇವಿಯರ್ಸ್ ದಂಪತಿಗಳ ಜೊತೆ-೯೮ ದಿನ ಯುರೋಪ್ ಪ್ರವಾಸ ಮಾಡಿದರು. ೧೯೦೦ರಲ್ಲಿ ಎಮ್ಮಾ ಕಾಲ್ವೆ-೩೨ ದಿನ ಸ್ವಾಮಿಗಳ ಪ್ರಯಾಣ ಮತ್ತು ಪ್ರವಾಸ ಅತ್ಯಂತ ಸುಖಕರವಾಗುವಂತೆ ನೋಡಿಕೊಂಡಿದ್ದಳು. ಸ್ವಾಮಿಗಳ ಪ್ರವಾಸದ ಒಟ್ಟು ೧೫೪ ದಿನಗಳನ್ನು (೮.೭೫ %) ನೆಮ್ಮದಿಯಲ್ಲಿ ಕಳೆದಿದ್ದರು. ಸ್ವಾಮಿಗಳು ಭಾರತದಿಂದ ಹೊರಗಿದ್ದ ೧೭೬೦ ದಿನಗಳಲ್ಲಿ ೧೦೫೨ ದಿನ ಬೆರಳೆಣಿಕೆಯ ಪರಿಚಿತರೊಂದಿಗಿದ್ದರು. ೧೯೦೦ ರಲ್ಲಿ ಹೋಂ ಆಫ್ ಟ್ರುಥ್’ನಲ್ಲಿದ್ದ ೩೧ ದಿನಗಳ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಯಾವುದೇ ಸಂಘ-ಸಂಸ್ಥೆಯ ವಸತಿಗಳಲ್ಲಿ ಉಳಿದಿರಲಿಲ್ಲ. ಸ್ವಾಮಿಗಳು ಪಾಶ್ಚಾತ್ಯ ದೇಶಗಳಲ್ಲಿ ಇದ್ದ ವಸತಿ ಮಾಹಿತಿ ಅವರಿಗಿದ್ದ ಜನ ಸಂಪರ್ಕ ಮತ್ತು ಪ್ರಭಾವದ ಸೀಮಿತತೆಯನ್ನು ಸೂಚಿಸುತ್ತದೆ.
೧೬/೩/೧೮೯೪ ರಂದು ಶ್ರೀಮತಿ ಜಾರ್ಜ್’ಗೆ ‘‘ನಾನು ಪ್ರಾಮಾಣಿಕರು , ಅಜ್ಞಾನಿಗಳು ಮತ್ತು ಬಡವರ ನಡುವೆ ವಾಸಿಸುವಂತೆ ಮಾಡು. ಕಪಟಿಗಳು ಮತ್ತು ಮಾತಿನ ಮಲ್ಲರ ನೆರಳೂ ನನ್ನ ಮೇಲೆ ಬೀಳದಿರಲಿ ‘ ಎಂದಿರುವುದು ನಗೆಪಾಟಲಿನ ವಿಚಾರವಾಗಿದೆ. ಯಾರೊಂದಿಗೆ ಇರಬೇಕು ಎನ್ನುವ ಆಯ್ಕೆ ಸ್ವಾಮಿಗಳದ್ದಾಗಿರಲಿಲ್ಲ. ಅದು ಸ್ವಾಮಿಗಳನ್ನು ತಮ್ಮಿಂದ ಇನ್ನೊಬ್ಬರಿಗೆ ಪರಿಚಯಿಸುತ್ತಿದ್ದ ಶ್ರೀಮಂತರ ಮರ್ಜಿಯಲ್ಲಿದ್ದಿತು. ಸ್ವಾಮಿಗಳು ಅಮೆರಿಕದಲ್ಲಿರುವಾಗ ಶ್ರೀಮಂತರ ಆಶ್ರಯಲ್ಲಿದ್ದರು ಎನ್ನುವ ಆರೋಪವನ್ನು ತಳ್ಳಿಹಾಕಲು ಯತ್ನಿಸಿರುವ ಮಾರಿ ಲೂಯಿ ಬರ್ಕೆ ಸ್ವಾಮಿಗಳು ಬಡವರ, ಕಾರ್ಮಿಕರ,ಶೋಷಿತರ ಜೀವನವನ್ನು ಅರಿಯುವ ತವಕದಲ್ಲಿದ್ದರು , ಅವರ ಅಂತರಂಗ ಪ್ರವೇಶಿಸಲು ಬಯಸಿದ್ದರು , ಕೆಲವೊಮ್ಮೆ ಅವರ ಮುರುಕು ಮನೆಗಳಲ್ಲಿ ಅವರೊಂದಿಗೆ ‘ಅಂಬಲಿ’ಯನ್ನೂ ಕುಡಿದಿರಬಹುದು. ಭಾರತದಲ್ಲಿ ಪರಿವ್ರಾಜಕ ಜೀವನದಲ್ಲಿ ಬಡವ , ಶ್ರೀಮಂತ , ರಾಜ , ಭಿಕಾರಿಗಳೊಂದಿಗೆ ಬೆರೆತಂತೆ ಅಮೆರಿಕದಲ್ಲಿಯೂ ಬೆರೆತಿದ್ದರು ಎನ್ನುವ ಸಮರ್ಥನೆ ನೀಡುತ್ತ ನಂತರ ಪೆಚ್ಚು ಧ್ವನಿಯಲ್ಲಿ ಆದರೆ ಇದಕ್ಕೆ ಯಾವ ದಾಖಲೆಗಳೂ ಲಭ್ಯವಿಲ್ಲ ಎಂದು ಬಡಬಡಿಸಿದ್ದಾರೆ.(36) ಸ್ವಾಮಿಗಳು ಪಾಶ್ಚಾತ್ಯ ದೇಶದ ಜೀವನ ಬಹುತೇಕ ಜೀವನ ದಿನಾಂಕವಾರು ದಾಖಲಾಗಿದೆ. ಅವರ ಎಲ್ಲ ಬಗೆಯ ಭಾಷಣಗಳು , ಚಟುವಟಿಕೆಗಳನ್ನು ಪತ್ರಿಕೆಗಳು ವರದಿ ಮಾಡಿವೆ. ಸ್ವಾಮಿಗಳು ಅಮೆರಿಕದ ಬಡವರ ಬಗ್ಗೆ ತೋರಿಸಿದ ಕಾಳಜಿಯ ಬಗ್ಗೆ ಒಂದು ಸಾಲಿನ ವರದಿಯೂ ಲಭ್ಯವಿಲ್ಲ.
Comment Box is loading comments...