ವೈರಾಗ್ಯದ ವಿವಾದ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ಸ್ವಾಮಿಗಳು ವೇದಿಕೆಯ ಮೇಲಿಂದ ಹಿಂದೂಗಳ ಸಂನ್ಯಾಸ ಜೀವನದ ಆದರ್ಶ , ವೈರಾಗ್ಯ , ಇಂದ್ರಿಯ ಸಂಯಮಗಳನ್ನು ವೈಭವೀಕರಿಸಿ ಭಾಷಣ ಮಾಡುತ್ತಿದ್ದರಾದರೂ ಅವರ ಬ್ರಹ್ಮಚರ್ಯ, ಸಾತ್ವಿಕ ಜೀವನ ಮತ್ತು ಇಂದ್ರಿಯ ಸಂಯಮದ ಪರಿಕಲ್ಪನೆಯಲ್ಲಿ ನಾಲಿಗೆ ಚಪಲವನ್ನು, ಚಟಗಳನ್ನು ಹತೋಟಿಯಲ್ಲಿಡುವುದು ಸೇರಿರಲಿಲ್ಲ. ಲಂಡನ್’ನಲ್ಲಿ ಸಸ್ಯಾಹಾರವನ್ನು ಮಾತ್ರ ಒದಗಿಸುತ್ತಿದ್ದ ಎಡ್ವರ್ಡ್ ಸ್ಟರ್ಡಿ ಮತ್ತು ಹೆನ್ರಿಯೆಟ್ಟಾ ಮುಲ್ಲರ್ ಮೇಲೆ ಸ್ವಾಮಿಗಳಿಗೆ ಕಡುಕೋಪ ಬಂದಿತ್ತಾದರೂ ಅದನ್ನು ಆ ಸಮಯದಲ್ಲಿ ತೋರಿಸಿಕೊಂಡಿರಲಿಲ್ಲ. ಪೌಲ್ ಡಾಯ್ಸನ್ ಸ್ವಾಮಿಗಳ ಧೂಮಪಾನ ಚಟ ಮತ್ತು ಅನಿಯಂತ್ರಿತ ಆಹಾರ ಸೇವನೆಯನ್ನು ಕಂಡು ಪ್ರಶ್ನಿಸಿದಾಗ ಸ್ವಾಮಿಗಳು ತಾವು ದಾರಿದ್ರ್ಯ ಮತ್ತು ಬ್ರಹ್ಮಚರ್ಯ ಎನ್ನುವ ತಮ್ಮ ಎರಡು ವ್ರತಗಳಿಂದ ಎಂದಿಗೂ ವಿಮುಖರಾಗಿಲ್ಲವೆಂದು ತಿಳಿಸಿದ್ದರು. ಹರಿದಾಸ ವಿಹಾರಿದಾಸ ದೇಸಾಯಿಯವರಿಗೆ ‘‘….ಸಂನ್ಯಾಸಿ ತನ್ನ ಸಂನ್ಯಾಸತ್ವದ ಒಂದು ಸಣ್ಣ ಅಂಶವನ್ನು ತನ್ನ ಜೀವನ ವಿಧಾನವನ್ನೂ ಕಳೆದುಕೊಂಡಿಲ್ಲ ‘ ಎಂದು ಭರವಸೆ ನೀಡಿದಾಗಲೂ ಇದೇ ಅರ್ಥ ಇದ್ದಿತು. (೧೫/೧೧/೧೮೯೪) ಕಲ್ಕತ್ತದ ಬೇಲೂರಿನಲ್ಲಿ ಮಠ ಕಟ್ಟಲು ಬೇಕಾದ ಜಮೀನು ಖರೀದಿಸಲು ನಿರ್ಣಾಯಕ ಹಣ ನೀಡಿದ್ದ ಹೆನ್ರಿಯೆಟ್ಟಾ ಮುಲ್ಲರ್ ಸ್ವಾಮಿ ಮತ್ತು ಗುರುಭಾಯಿಗಳಲ್ಲಿ ಹೇಳಿಕೊಳ್ಳುವಂತಹ ವೈರಾಗ್ಯವಿಲ್ಲ , ಸ್ವಾಮಿಗಳು ತಮ್ಮ ಪೂರ್ವಾಶ್ರಮದ ಕೌಟುಂಬಿಕ ವಿಚಾರಗಳಲ್ಲಿ ತಲೆ ಹಾಕುತ್ತಾರೆ , ಹಿಂದೂ ಧರ್ಮದಲ್ಲಿ ಶಿಶ್ನಾರಾಧನೆಯಿದೆ ಎನ್ನುವ ಆಕ್ಷೇಪಗಳನ್ನು ಹೊಂದಿದ್ದಳು. (126)
ಎಡ್ವರ್ಡ್ ಸ್ಟರ್ಡಿ ಮತ್ತು ಸ್ವಾಮಿಗಳ ನಡುವೆ ಸಾತ್ವಿಕ ಸಂನ್ಯಾಸಿಯ ಜೀವನ ಶೈಲಿ ಕುರಿತಾಗಿ ಭಾರಿ ಭಿನ್ನಾಭಿಪ್ರಾಯಗಳು ಬಂದಿದ್ದವು. ಇದರ ಮುಂದುವೆರೆದ ಭಾಗವಾಗಿ ತಿಕ್ಕಾಟಗಳು ನಡೆದಿದ್ದವು. ೧೮೯೯ ಜೂನ್’ನಲ್ಲಿ ಸ್ವಾಮಿಗಳು ಲಂಡನ್ ತಲುಪಿದಾಗ ಅವರನ್ನು ಎದುರುಗೊಳ್ಳಲು ಬರದೆ , ರಜಾ ಕಳೆಯಲು ಹೋಗಿ ಸ್ವಾಮಿಗಳಿಗೆ ನಿರ್ಲಕ್ಷ್ಯ ತೋರಿಸಿದ್ದ ಎಡ್ವರ್ಡ್ ಸ್ಟರ್ಡಿಯ ನಡವಳಿಕೆಯನ್ನು ಆಕ್ಷೇಪಿಸಿ ತನ್ನ ಗುರುವನ್ನು ಹೊಗಳಿ ಮಾರ್ಗರೆಟ್ ನೋಬಲ್ ಪತ್ರ ಬರೆದಿದ್ದಳು. ಅದಕ್ಕೆ ಆತ ಸುದೀರ್ಘವಾಗಿ ಉತ್ತರಿಸಿದ್ದನು. ಈ ಭಾಗವನ್ನು ಯಥಾವತ್ತಾಗಿ ಉದ್ದರಿಸಿ ಮಾರ್ಗರೆಟ್ ನೋಬಲ್ ಮಾರೋಲೆ ಬರೆದಿದ್ದಳು. ಈ ಪತ್ರದ ಮೊದಲ ಪುಟದ ಮೇಲೆ ‘ಸ್ಟರ್ಡಿ ಸಾವಿನ ನಂತರ ಪ್ರಕಟಿಸುವುದು’ ಎಂದು ಬರೆಯಲಾಗಿದ್ದಿತು. ಸ್ಟರ್ಡಿಯ ಮೂಲ ಪತ್ರ ದೊರೆತಿಲ್ಲವಾದರೂ ಮಾರ್ಗರೆಟ್ ನೋಬಲ್ ಉದ್ದರಿಸಿದ ಆತನ ಪತ್ರದ ಭಾಗ ಹೀಗಿದೆ. ‘ ಸ್ವಾಮಿಗಳು ಮತ್ತು ಅವರ ಕೆಲಸ ಕುರಿತಾಗಿ ನಮ್ಮಿಬ್ಬರ ನಡುವೆ ದೃಷ್ಟಿ ಭೇದವಿದೆ, ಸಂನ್ಯಾಸ ಜೀವನದ ಬಗ್ಗೆ ನಾನು ಸಾಕಷ್ಟು ಕೇಳಿರುವೆನಾದರೂ ಈ ದೇಶಕ್ಕೆ ಭೇಟಿ ನೀಡಿದ ಸಂನ್ಯಾಸಿಗಳಲ್ಲಿ ಯಾವುದೇ ಸಂನ್ಯಾಸವನ್ನು ನಾನು ಕಂಡಿಲ್ಲ. ನಿನ್ನ ಆದರ್ಶಗಳ ಮೇಲೆ ಪ್ರಭಾವ ಬೀರಲು ನಾನು ಇಚ್ಛಿಸುತ್ತಿಲ್ಲವಾದರೂ ಹಲವು ನಿಟ್ಟಿನಲ್ಲಿ ನಾನು ನಿರಾಶನಾಗಿದ್ದೇನಲ್ಲದೆ ಇದನ್ನು ಸ್ವಾಮಿ ವಿವೇಕಾನಂದನಿಗೆ ಹೇಗೆ ತಿಳಿಸಬೇಕೆಂದು ಚಿಂತಿಸುತ್ತಿದ್ದೇನೆ ’.
ಎಡ್ವರ್ಡ್ ಸ್ಟರ್ಡಿಯ ಈ ಪತ್ರಕ್ಕೆ ೨೪/೮/೧೮೯೯ ರಂದು ಮಾರ್ಗರೆಟ್ ನೋಬಲ್ ಉತ್ತರಿಸಿ ವಿವಾದಕ್ಕೆ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಳು. ‘‘ನಿನ್ನ ಆದರ್ಶಗಳ ಮೇಲೆ ನಾನು ಪ್ರಭಾವ ಬೀರಲು ಇಚ್ಛಿಸುವುದಿಲ್ಲ’ ಎನ್ನುವ ಹೇಳಿಕೆ ಎಂತಹ ತೀವ್ರ ನೋವನ್ನು ತಂದಿದೆ ಎನ್ನುವುದನ್ನು ನಾನು ಅಸ್ಪಷ್ಟವಾಗಿ ಮಾತ್ರ ಊಹಿಸಬಲ್ಲೆ. ನನಗೆ ಆಘಾತವಾಗಿದೆ. ಸ್ವಾಮಿಗಳ ಹೊರತಾಗಿ ಅವರ ಶಿಷ್ಯ ಅಥವಾ ಯಾರೊಬ್ಬರೂ ಈ ಟೀಕೆಗಳನ್ನು ಕೇಳಲು ಸರಿಯಾದ ವ್ಯಕ್ತಿಯಲ್ಲ ಎನಿಸಿತು. ಅದೇ ಸಮಯದಲ್ಲಿ ಹಿಂದಿನ ಜೀವನದಿಂದ ನಿನ್ನನ್ನು ಬೇರ್ಪಡಿಸಿರುವ ತೊಳಲಾಟದಿಂದ ಕುಗ್ಗಿರುವ ನಿನ್ನ ಬಗ್ಗೆ ನನಗೆ ಮರುಕವಿದೆ. ಹೊರಗಿನವರ ಕಣ್ಣಿಗೆ ಈ ಸಂಗತಿ ಹೇಗೆ ಕಾಣಬಹುದೆಂದು ನಿನಗೆ ತಿಳಿಸುತ್ತೇನೆ. ನಿನ್ನ ತೊಂದರೆಯನ್ನು ನಾನು ಕಷ್ಟವಾದ ಪ್ರಶ್ನೆಯ ರೂಪದಲ್ಲಿ ನನ್ನ ತಾಯಿಯ ಬಳಿಯಿಟ್ಟು ಶಿಷ್ಯನನ್ನು ಬಾಧಿಸುತ್ತಿರುವ ಈ ವಿಷಯದ ಬಗ್ಗೆ ಏನೆನಿಸುತ್ತದೆ ಎಂದು ಕೇಳಿದೆನು. ನಿನಗೆ ಗೊತ್ತಿರುವಂತೆ ಆಕೆಯ ಕ್ರೈಸ್ತ ಸಾಂಪ್ರದಾಯಿಕತೆಯ ಹಿನ್ನೆಲೆಯಲ್ಲಿ ಸ್ವಾಮಿ ನನ್ನ ಮೇಲೆ ಬೀರಿರುವ ಪ್ರಭಾವವನ್ನು ಸ್ವಾಮಿಯ ಅರ್ಹತೆಯ ಆಧಾರದ ಮೇಲೆ ನಿರ್ಧರಿಸುವಂತೆ ಮನವಿ ಮಾಡಿಕೊಂಡಿದ್ದೆನು. ಅದಕ್ಕೆ ಉತ್ತರವಾಗಿ ಆಕೆ ರೋಗಿಗೆ ರೋಗಿಯ ಅನುಕೂಲಗಳು ಅಗತ್ಯ. ಸ್ವಾಮಿಯ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ ಇರಬೇಕೆಂದು ತಿಳಿಸಿದಳು. ಸಣ್ಣ ವ್ಯಕ್ತಿಗಳ ಹೊಟ್ಟೆಕಿಚ್ಚಿಗೆ ಕಾರಣವಾದರೂ ಮಹಾನ್ ವ್ಯಕ್ತಿಗಳು ಎಲ್ಲ ವಿಷಯದಲ್ಲೂ ಮಹತ್ತರ ದಾರಿ ತುಳಿಯುತ್ತಾರೆ ಎಂದು ತಿಳಿಸಿದಳು. ಇತರ ಸಂನ್ಯಾಸಿಗಳ ಬಗ್ಗೆ ಮಾಡಿದ ಟೀಕೆಗಳು ಅವರ ಧಾರ್ಮಿಕ ಉತ್ಸಾಹಕ್ಕೆ ವಿರುದ್ಧವಾದವೆಂದು ಸ್ಪಷ್ಟಪಡಿಸಿದಳು. …… ಸಂನ್ಯಾಸ ಎಂದರೆ ಒಂದು ಬಗೆಯ ವೈರಾಗ್ಯ ಅದು ಪರಿಶುದ್ಧತೆಗೆ ಸಂಬಂಧಿಸಿದ್ದು. ಈ ವೈರಾಗ್ಯ ಸಮರ್ಪಕವಿಲ್ಲವೆಂದು ನಿನಗೆ ಎಂದಾದರೂ ಅನಿಸಿದೆಯೇ ?... ಸ್ವಾಮಿಗಳ ವೈರಾಗ್ಯದ ಬಗ್ಗೆ ಮಾತನಾಡುತ್ತಿರುವ ನೀನು ಭಾರತದ ಉದ್ದಗಲಕ್ಕೆ ಪೂಜಿಸಲ್ಪಡಬಹುದಾದ , ಭಾರಿ ಪ್ರತಿರೋಧದಲ್ಲಿಯೂ ತನ್ನ ದೇಶದ ಎಲ್ಲ ಶ್ರೀಮಂತರಿಗೆ ಬೆರಳು ತೋರುವ , ಪಾಶ್ಚಾತ್ಯ ವಿಲಾಸಿ ಜೀವನದ ಬಗ್ಗೆ ಭಾರತದ ಅತಿ ಶ್ರೀಮಂತರಿಗಿಂತ , ನನಗಿಂತ, ನಿನಗಿಂತ ಹೆಚ್ಚು ತಿಳಿವಳಿಕೆ ಮತ್ತು ಮೆಚ್ಚುಗೆಯಿದ್ದರೂ ಜನಸಾಮಾನ್ಯರಂತೆ ಸರಳ ಜೀವನ ನಡೆಸಲು ಬಯಸುತ್ತಿದ್ದಾರೆ ಎನ್ನುವುದನ್ನು ನೆನಪಿಡು. ನೀನು ಹಾಗಿರಬಲ್ಲೆಯಾ ? ಇಂತಹ ವೈರಾಗ್ಯ ಧನಾತ್ಮಕ , ಕ್ರಿಯಾತ್ಮಕ ಮತ್ತು ಅಸದಳ ! …. ನಿನ್ನ ಅಭಿಪ್ರಾಯಗಳನ್ನು ತಿಳಿಸಬೇಕಾದ ವ್ಯಕ್ತಿ ಸ್ವಾಮಿಗಳೇ… ಒಂದು ಗಳಿಗೆ ಆತನ ಮಹಾತ್ಮೆಯನ್ನು ನೆನೆ , ನಿನ್ನ ಟೀಕೆಗಳನ್ನು ನಂಬು , ನಿನ್ನೆಲ್ಲ ಅಪನಿಂದನೆಗಳನ್ನು ಆತನಿಗೆ ತಿಳಿಸು. ಎಂದು ಕಾಲು ಕೆರೆದಳು. (127)
ಎಡ್ವರ್ಡ್ ಸ್ಟರ್ಡಿ ತನ್ನ ಗುರುವಿನ ಪರವಾಗಿ ಮಾರ್ಗರೆಟ್ ನೋಬಲ್ ಎಸೆದ ಚೆಂಡನ್ನು ಸರಿಯಾಗಿಯೆ ಬಾರಿಸಿ ಹಿಂದಕ್ಕೆ ಕಳಿಸಿದ್ದನು. ‘ ವಿವೇಕಾನಂದನನ್ನು ಕುರಿತಾಗಲಿ ಅಥವಾ ಬೇರೆ ಇತರ ಸ್ವಾಮಿಗಳ ಚಾರಿತ್ರ್ಯದ ಬಗ್ಗೆಯಾಗಲಿ ಬರಹದ ಮೂಲಕ ಸುದೀರ್ಘ ಚರ್ಚೆಗಿಳಿಯುವುದು ನನ್ನ ಉದ್ದೇಶವಲ್ಲ , ಅದರಲ್ಲಿ ಆಸಕ್ತಿಯೂ ಇಲ್ಲ. ಪ್ರತಿಯೊಬ್ಬರು ಅವರದೇ ಆದ ಆದರ್ಶಗಳನ್ನು ರೂಪಿಸಿಕೊಂಡು ಅವುಗಳಿಗೆ ತಕ್ಕಂತೆ ಬದುಕಬೇಕು. ; ಅಂತಹ ಆದರ್ಶ ಹೊಂದದವರು ಸಹಜವಾಗಿ ದೂರ ಉಳಿಯುತ್ತಾರೆ. ನಾನು ಅಂತಹ ಜೀವನ ನಡೆಸಿಲ್ಲವಾದರೂ ವೈರಾಗ್ಯದ ಬಗ್ಗೆ ನನ್ನದೇ ಆದ ಆದರ್ಶಗಳನ್ನು ಕಲ್ಪಿಸಿಕೊಂಡಿದ್ದೇನೆ ಮಾತ್ರವಲ್ಲ ಸಂನ್ಯಾಸಿಗಳೆಂದು ಕರೆಸಿಕೊಳ್ಳುವ ಎಲ್ಲರೂ ಅದಕ್ಕೆ ಸನಿಹವೆನಿಸುವಂತೆ ಬದುಕಬೇಕೆಂದು ನಿರೀಕ್ಷಿಸುತ್ತೇನೆ. ತರ್ಕಾತೀತವಾದ ನಿನ್ನ ಉತ್ಸಾಹದಲ್ಲಿ ನಾನು ಭಾಗಿಯೆಂದು ನೀನು ಭಾವಿಸಿದ್ದರಿಂದ ನಾನು ನಿನಗೆ ಪತ್ರ ಬರೆದನು. ಅದು ನಿನಗೆ ಸರಿಯಿರಬಹುದು, ಆದರೆ ಯಾವ ದೃಷ್ಟಿಕೋನ ಹೊಂದಬೇಕು ಮತ್ತು ಯಾವುಗಳ ಆಧಾರಧ ಮೇಲೆ ತೀರ್ಮಾನಕ್ಕೆ ಬರಬೇಕೆನ್ನುವುದನ್ನು ನಾನೇ ನಿರ್ಧರಿಸಬೇಕು. ಸಾಮಾನ್ಯವಾಗಿ (ವಿಚಾರಾತೀತ) ನಿಷ್ಠೆ ಯಾವಾಗಲೂ ವ್ಯಕ್ತಿಪೂಜೆಯಾಗಿ ಕಾಣಿಸಿಕೊಳ್ಳುವುದೆಂದು , ಅದೇ ಸಮಯದಲ್ಲಿ ಸ್ವಂತ ವಿವೇಚನೆಯಿಂದ ವಿಭಿನ್ನ ತೀರ್ಮಾನಕ್ಕೆ ಬರುವವರನ್ನು ದುಷ್ಟರಂತೆ ಕಾಣಲಾಗುವುದು ಎನ್ನುವುದನ್ನು ಬಲ್ಲೆ. ನಾನು ಮಹಾತ್ಮನೆಂದು ಎಂದೂ ಹೇಳಿಕೊಂಡಿಲ್ಲ , ಕೆಳಗೆಸೆಯಬಹುದಾದ ಯಾವ ದೊಡ್ದಸ್ತಿಕತೆಯೂ ನನಗಿಲ್ಲ. ನೀನೇನಾದರೂ ಯಾವೊಬ್ಬ ದೇವ ಅಥವಾ ದೇವತೆಗಳನ್ನು ಆರಿಸಿಕೊಂಡಿದ್ದರೆ ಅವರಿಗೆ ನೀನು ನಿಷ್ಠವಾಗಿರಬೇಕಾದುದು ಸರಿ. ನನ್ನ ನಿಷ್ಟೆ ನನ್ನ ಆದರ್ಶಗಳಿಗೆ ಮಾತ್ರ ; ಬದಲಾಗುವ ವ್ಯಕ್ತಿತ್ವಗಳು ಅದಕ್ಕೆ ಹೊಂದಾಣಿಕೆಯಾಗುವುದಿಲ್ಲ. ಹಾಗಿದ್ದಾಗ ನಿಷ್ಠೆಯೆಲ್ಲಿ ? ನಾವಿಬ್ಬರೂ ಒಂದೇ ಆದರ್ಶ ಹೊಂದಿದ್ದೇವೆಂದು ತಪ್ಪಾಗಿ ಭಾವಿಸಿರುವ ನಿರ್ಧಾರಗಳಿಗೆ ನನ್ನ ಒಪ್ಪಿಗೆಯಿಲ್ಲ. ಕೆಲವು ವಿಚಾರಗಳಲ್ಲಿ ಸ್ವಾಮಿ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವುದನ್ನು ನಿನಗೆ ತಿಳಿಸಿದ್ದೇನೆ. ಇದನ್ನು ಕೊನೆಗೊಳಿಸುವ ಹೊಣೆ ಸ್ವಾಮಿಯ ಮೇಲಿದೆಯೇ ಹೊರತು ನನ್ನ ಅಥವಾ ನಿನ್ನ ಮೇಲಲ್ಲ ‘ (128)
೨೪/೮/೧೮೯೯ ರಂದು ಮಾರ್ಗರೆಟ್ ನೋಬಲ್ ತನ್ನ ಮತ್ತು ಎಡ್ವರ್ಡ್ ಸ್ಟರ್ಡಿಯ ನಡುವಿನ ಮೊದಲ ಪತ್ರ ವ್ಯವಹಾರವನ್ನು ಸಾರಾ ಬುಲ್ ಮತ್ತು ಮಿಸ್ ಜೊಸೆಫಿನ್ ಮೆಕ್ಲಿಯಾಡ್ ಗಮನಕ್ಕೆ ತಂದಳು. ರಾಮಕೃಷ್ಣರ ಸಂನ್ಯಾಸಿ ಶಿಷ್ಯರಲ್ಲಿ ವೈರಾಗ್ಯದ ಕೊರತೆಯಿದೆ ಎನ್ನುವ ಎಡ್ವರ್ಡ್ ಸ್ಟರ್ಡಿಯ ಟೀಕೆ ಸುಲಭವಾಗಿ ತಳ್ಳಿ ಹಾಕುವಂತಹುದಲ್ಲ ಎನ್ನುವುದು ಸ್ಪಷ್ಟವಾಗಿ ಸಾರಾ ಬುಲ್ ಕಳವಳಕ್ಕೆ ಕಾರಣವಾಗಿದ್ದಿತು. ಮಾರ್ಗರೆಟ್ ನೋಬಲ್’ನಂತೆ ಸ್ವಾಮಿಗಳಿಗೆ ಸಂಪೂರ್ಣ ಶರಣಾಗತಳಾಗದೆ ಸ್ವಂತ ವಿಚಾರ ಶಕ್ತಿಯನ್ನು ಉಳಿಸಿಕೊಂಡಿದ್ದ ಸಾರಾ ಬುಲ್ ವೈರಾಗ್ಯ ಮತ್ತು ಸಂಯಮದ ಜೀವನದ ಹೇಗಿರುತ್ತದೆಯೆನ್ನುವ ಸಾಮಾನ್ಯ ಮಾರ್ಗದರ್ಶಿ ಅಂಶಗಳನ್ನು ಸ್ವಾಮಿಗಳಿಂದ ಕೇಳಿ ತಿಳಿಯುವುದೇ ಸರಿ ಅಥವಾ ಆ ಬಗ್ಗೆ ಅವರ ಅರಿವಿಗೆ ಬಾರದಂತೆ ಏನು ಹೇಳುತ್ತಾರೆ ಎನ್ನುವುದನ್ನು ಅರಿತಿಕೋ ಎಂದು ಬರೆದಳಲ್ಲದೆ ಪಾಶ್ಚಾತ್ಯರ ಮುಂದೆ ರಾಮಕೃಷ್ಣರ ಸಂನ್ಯಾಸಿ ಶಿಷ್ಯರ ನಡವಳಿಕೆಯನ್ನು ಹೇಗೆ ಸಮರ್ಥಿಸಿಕೊಳ್ಳಬೇಕೆಂದು ಹಲವು ನಿಟ್ಟಿನಲ್ಲಿ ಚಿಂತಿಸಿದಳು. ಈ ಚಿಂತನೆಗಳಲ್ಲಿ ನೂರು ತಾಕಲಾಟ , ಪ್ರಶ್ನಾರ್ಥಕ ಚಿಹ್ನೆಗಳಿದ್ದವು. (129)
ಎಡ್ವರ್ಡ್ ಸ್ಟರ್ಡಿಯ ಪ್ರಶ್ನೆಯನ್ನು ನೇರವಾಗಿ ಎದುರಿಸಲಾಗದ ಸ್ವಾಮಿಗಳ ಭಕ್ತೆ ಮಾರಿ ಲೂಯಿ ಬರ್ಕೆ ಎಡ್ವರ್ಡ್ ಸ್ಟರ್ಡಿಯಂತಹ ಹುಲು ಮಾನವರಿಗೆ ರಾಮಕೃಷ್ಣ ಪರಮಹಂಸರ ಸಂನ್ಯಾಸಿ ಶಿಷ್ಯರ ಬಗ್ಗೆ ಹೇಗೆ ಗೊತ್ತಾಗಬೇಕು. ಅವರೆಲ್ಲರೂ ನಿತ್ಯಮುಕ್ತರಾಗಿದ್ದು ಅವರು ಯಾವುದೇ ಸಂಯಮ , ವೈರಾಗ್ಯ ನಡೆಸುವ ಆವಶ್ಯಕತೆಯೇ ಇರಲಿಲ್ಲ ಎಂದು ಸಮರ್ಥಿಸುತ್ತ ಒಂದು ತಾತ್ತ್ವಿಕ ಸಮಸ್ಯೆಗೆ ನಂಬಿಕೆ ಮತ್ತು ಬೌದ್ಧಿಕ ದಾಸ್ಯದ ಉತ್ತರ ನೀಡಿದ್ದಾಳೆ. (130) ಸ್ವಾಮಿಗಳು ರಿಡ್ಜ್’ಲೆ ಮ್ಯಾನೊರ್ ತಲುಪಿದ ನಂತರ ಜೊಸೆಫಿನ್ ಮೆಕ್ಲಿಯಾಡ್, ಮಾರ್ಗರೆಟ್ ನೋಬಲ್ ಮತ್ತು ಎಡ್ವರ್ಡ್ ಸ್ಟರ್ಡಿಯ ನಡುವೆ ನಡೆದ ಪತ್ರದ ನಕಲುಗಳನ್ನು ಸ್ವಾಮಿಗಳಿಗೆ ತೋರಿಸಿದಳು. ಇದಾದ ಮರುದಿನ – ೪/೯/೧೮೯೬- ‘ ಕಳೆದ ಆರು ತಿಂಗಳಿನಿಂದ ನನಗೆ ದುರಾದೃಷ್ಟವೆ ಗತಿಯಾಗಿದೆ. ನಾನು ಹೋದೆಲ್ಲೆಲ್ಲ ಅದು ನನ್ನ ಬೆನ್ನು ಹತ್ತುತ್ತಿದೆ. ಇಂಗ್ಲೆಂಡ್ ಕೆಲಸದ ವಿಷಯದಲ್ಲಿ ಸ್ಟರ್ಡಿಗೆ ಬಹಳ ಜುಗುಪ್ಸೆಯಾಗಿರುವಂತಿದೆ. ಆತನಿಗೆ ನಮ್ಮಲ್ಲಿ ಯಾವ ವೈರಾಗ್ಯವೂ ಕಾಣಬರುತ್ತಿಲ್ಲ ‘ ಇದು ಸ್ವಾಮಿಗಳು ತಮ್ಮ ಸಂಕಷ್ಟಗಳ ಪರಿಹಾರಕ್ಕೆ ತುದಿಗಾಲಲ್ಲಿರುತ್ತಿದ್ದ ಸಾರಾ ಬುಲ್’ಗೆ ಬರೆದ ಪತ್ರದ ತಿರುಳು.
ಇದೇ ದಿನ -೪/೯/೧೮೯೯-ಎಡ್ವರ್ಡ್ ಸ್ಟರ್ಡಿಗೆ ಬರೆದ ಪತ್ರದಲ್ಲಿ ‘… ಯಾವ ಅಧ್ಯಾತ್ಮಿಕ ವ್ಯಕ್ತಿಯೂ ಖಾಯಿಲೆ ಬೀಳಬಾರದು ಎನ್ನುವುದು ಶ್ರೀಮತಿ ಜಾನ್ಸನ್ ಅಭಿಪ್ರಾಯ. ಅವರಿಗೆ ನಾನು ಧೂಮಪಾನ ಮಾಡುವುದು ಪಾಪಕರವೆಂದು ಕಾಣಿಸುತ್ತಿದೆ. ಮಿಸ್ ಮುಲ್ಲರ್ ನನ್ನನ್ನು ಬಿಟ್ಟು ಹೋಗಲು ಈ ಖಾಯಿಲೆಯೇ ಕಾರಣ. ಅವರು ಹೇಳಿದುದೆಲ್ಲಾ ಸಂಪೂರ್ಣವಾಗಿ ನಿಜವಿರಬಹುದು. ಆದರೆ ಏನೇ ಆಗಲಿ ನಾನು ಏನಾಗಿರುವೆನೋ ಅದೇ ಆಗಿರುವೆನು. ಈ ಕುಂದುಗಳ ಜೊತೆಗೆ ನಾನು ಪಾಶ್ಚಾತ್ಯರೊಡನೆ ಊಟ ಮಾಡಿದ್ದರಿಂದ ಒಂದು ಖಾಸಗಿ ದೇವಾಲಯದ ಮಾಲಿಕರು ನನ್ನನ್ನು ಹೊರಕ್ಕೆ ಅಟ್ಟಿದರು. ಯಾರು ಹೇಗೆ ಇಷ್ಟಪಡುವರೋ ಹಾಗೆಲ್ಲ ಹೊಂದಿಕೊಳ್ಳುವಂತೆ ನಾನು ಬದಲಾಗುವಂತಿದ್ದರೆ ಚೆನ್ನಾಗಿತ್ತು. ಆದರೆ ದುರದೃಷ್ಟವಶಾತ್ ಪ್ರತಿಯೊಬ್ಬರಿಗೂ ಮೆಚ್ಚುಗೆಯಾಗುವಂತೆ ನಡೆದುಕೊಳ್ಳುವ ವ್ಯಕ್ತಿಯನ್ನು ನಾನು ಕಾಣೆ. …… ಭರತಖಂಡದಲ್ಲಿ ನಾನು ಹಡಗಿನಿಂದ ಇಳಿದ ಗಳಿಗೆಯೇ ನನ್ನ ತಲೆ ಬೋಳಿಸಿ , ಕೌಪೀನ ಧರಿಸುವಂತೆ ಮಾಡಿದರು. ಅದರ ಪರಿಣಾಮ ನಾನು ಡಯಾಬಿಟಸ್ ಮುಂತಾದವುಗಳಿಂದ ನರಳುವಂತಾಯಿತು. ಶಾರದಾನಂದನು ಏನು ಮಾಡಿದರೂ ತನ್ನ ಒಳ ಉಡುಪುಗಳನ್ನು ಉಡುವುದನ್ನು ಬಿಡಲಿಲ್ಲ. ಅದು ಆತನ ಜೀವವನ್ನು ಉಳಿಸಿತು. ಸ್ವಲ್ಪ ಸಂಧಿವಾತ ರೋಗ ಮತ್ತು ನಮ್ಮ ಜನರಿಂದ ಹೆಚ್ಚು ಟೀಕೆಗಳನ್ನು ಅವನು ಅನುಭವಿಸಬೇಕಾಯಿತು. …..ನಾನು ಜನರಿಂದ ಪಡೆಯುತ್ತಿರುವ ಪ್ರತಿಯೊಂದು ದ್ವೇಷದ ಅಲೆಗೂ ದೋಷವೆಲ್ಲಾ ನನ್ನದೇ , ಕೇವಲ ನನ್ನದೇ ಎನ್ನುವುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ. ಇದಲ್ಲದೆ ಬೇರೆ ಇರಲು ಸಾಧ್ಯವಿಲ್ಲ. ಮತ್ತೊಮ್ಮೆ ನನ್ನನ್ನು ಅಂತರ್ಮುಖಿಯನ್ನಾಗಿ ಮಾಡಿದ ನಿನಗೂ , ಶ್ರೀಮತಿ ಜಾನ್ಸನ್’ಗೂ ಕೃತಜ್ಞತೆಗಳು..….’ ಎಂದು ತಮ್ಮನ್ನು ತಾವೇ ವಿಮರ್ಶಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದರು.
ಕಾವಿಯುಟ್ಟು , ತಲೆ ಬೋಳಿಸಿ , ಅಲೆಮಾರಿಯಾಗಿ ತಿರಿದು ಹೊಟ್ಟೆ ಹೊರೆಯುವ ಉನ್ನತ ಜೀವನಕ್ಕಾಗಿ ಹಾತೊರೆಯುತ್ತಿದ್ದೇನೆ ಎಂದು ಹೇಳುತ್ತಿದ್ದ ಸ್ವಾಮಿಗಳು ಅದರಿಂದಲೇ ಡಯಾಬಿಟಿಸ್ ಬಂದಿತೆಂದು , ತಮಗೆ ಕಾವಿ ಬಟ್ಟೆ ಕೊಟ್ಟವರನ್ನು ದೂರತೊಡಗಿದ್ದಾರೆ. ಅಸ್ತಮಾ , ಡಯಾಬಿಟಿಸ್ ಮತ್ತು ಹೃದಯದ ಖಾಯಿಲೆಗಳಿಗ ಧೂಮಪಾನದ ಚಟ ಮಾರಕ. ಮನಸ್ಸಿನ ನಿಯಂತ್ರಣ ಸಾಧಿಸುವ ರಾಜಯೋಗವನ್ನು ಎದೆಯುಬ್ಬಿಸಿ , ದನಿಯೆತ್ತರಿಸಿ ಬೋಧಿಸುತ್ತಿದ್ದ ಸ್ವಾಮಿಗಳಿಗೆ ಧೂಮಪಾನ ಚಟವನ್ನು ಬಿಡುವಷ್ಟು , ಮಾಂಸಾಹಾರವನ್ನು ದೂರವಿರಿಸುವಷ್ಟು ಮನಸ್ಸಿನ ನಿಯಂತ್ರಣವಿರಲಿಲ್ಲ. ಅದರ ಬದಲು ಅವುಗಳಿಂದ ದೂರ ಇರುವಂತೆ ಹೇಳುತ್ತಿದ್ದವರನ್ನು ದೂರಿದ್ದರು. ಈ ವಿಷಯವೇ ಅವರನ್ನು ಅಂತರ್ಮುಖಿಯನ್ನಾಗಿಸಿದ್ದಿತು. ಸ್ವಾಮಿಗಳು ಧೂಮಪಾನ ಮಾಡುವ ಭೌತಿಕ ಕ್ರಿಯೆಗಿಂತ ಆ ಚಟದ ಮೇಲೆ ಮಾನಸಿಕ ನಿಯಂತ್ರಣ ಸಾಧಿಸಲು ಆಗಿಲ್ಲವಲ್ಲ ಎನ್ನುವ ಅಸಮಾಧಾನ ಅವರ ಅಭಿಮಾನಿಗಳಲ್ಲಿ ಕೆಲವರಿಗದ್ದಿತು. ಅದು ಸ್ವಾಮಿಗಳಿಗೆ ಅರ್ಥವಾಗಿರಲಿಲ್ಲ. ಸಾರಾ ಬುಲ್ ಮತ್ತು ನಿವೇದಿತಾರಿಗೆ ಜಗತ್ತಿನ ಅಧ್ಯಾತ್ಮ ಪ್ರವೃತ್ತಿಯನ್ನು ಎಚ್ಚರಿಸಲು ತಮ್ಮಿಂದ ಆಗುತ್ತಿಲ್ಲ ಎಂದು ತೋಡಿಕೊಂಡಿದ್ದರು.
ಎಡ್ವರ್ಡ್ ಸ್ಟರ್ಡಿ ವೈರಾಗ್ಯ ಕುರಿತು ಸ್ವಾಮಿಗಳೇ ಉತ್ತರಿಸಬೇಕೆಂದು ತಿಳಿಸಿದ್ದರಿಂದ ಅತನಿಗೆ ಉತ್ತರಿಸಲೇ ಬೇಕಾದ ಅನಿವಾರ್ಯತೆ ಎದುರಾಗಿ ೧೪/೯/೧೮೯೯ರಂದು ಸುದೀರ್ಘ ಪತ್ರ ಬರೆದರು. ಈ ಪತ್ರವನ್ನು ಕತ್ತರಿಸಿ , ವಿರೂಪಗೊಳಿಸಿ ಕನ್ನಡದ ಕೃತಿಶ್ರೇಣಿಗಳಲ್ಲಿ ಪ್ರಕಟಿಸಲಾಗಿದೆ. ಸ್ವಾಮಿಗಳು ಈ ಪತ್ರದಲ್ಲಿ ತಮ್ಮ ವೈಯಕ್ತಿಕ ಖರ್ಚಿಗೆ ಸೇವಿಯರ್ಸ್ , ಖೇತ್ರಿ ರಾಜ ಅಜಿತ್ ಸಿಂಗ್ ಹಣ ಒದಗಿಸುತ್ತಿದ್ದು ಇಂಗ್ಲಿಷ್ ಜನರಿಂದ ಬಂದ ದೇಣಿಗೆಯಲ್ಲಿ ತಮ್ಮ ಸ್ವಂತ ಖರ್ಚಿಗೆ ಒಂದು ಪೈಸೆಯನ್ನೂ ಬಳಸಿಕೊಂಡಿಲ್ಲ ಎಂದು ತಮ್ಮನು ಸಮರ್ಥಿಸಿಕೊಂಡಿದ್ದರು. ಇದರೊಂದಿಗೆ ಎಡ್ವರ್ಡ್ ಸ್ಟರ್ಡಿ , ಶ್ರೀಮತಿ ಅಷ್’ಟನ್ ಜಾನ್ಸನ್ ಮತ್ತು ಹೆನ್ರಿಯೆಟ್ಟಾ ಮುಲ್ಲರ್ ಒಗ್ಗಟ್ಟಾಗಿ ತಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ಎನ್ನುವ ಅರ್ಥ ಬರುವಂತೆ ಉತ್ತರ ನೀಡಿದ್ದರು. ಯಾವ ಅಂಜಿಕೆ ಅಳುಕುಗಳಿಲ್ಲದೆ ೧/೧೦/೧೮೯೯ ರಂದು ಎಡ್ವರ್ಡ್ ಸ್ಟರ್ಡಿ ಸ್ವಾಮಿಗಳಿಗೆ ನೇರವಾಗಿ ಉತ್ತರಿಸಿದ್ದನು‘ ‘……ಈ ದೇಶದಲ್ಲಿ ನಾನು ಸಂನ್ಯಾಸದ ಬಗ್ಗೆ ಬೇಕಾದಷ್ಟು ಕೇಳಿದ್ದೇನೆ. ಆದರೆ ಅದನ್ನು ಪ್ರತಿಪಾದಿಸುವವರು ಕಿಂಚಿತ್ತೂ ಅನುಸರಿಸದಿರುವುದನ್ನು ಬಲ್ಲೆ. ಈ ವಿಚಾರವನ್ನು ಎಳೆದು ಮುಂದುವರೆಸಲು ಬಯಸುವುದಿಲ್ಲ…ಒಬ್ಬ ಸಂನ್ಯಾಸಿಯನ್ನು ಸಲಹಲು ಆಗುತ್ತಿರುವ ಖರ್ಚು ಸಂನ್ಯಾಸದ ಯಾವ ಸೋಗನ್ನೂ ಹಾಕದ ಹಲವು ಕಾರ್ಮಿಕರನ್ನು , ವಿಶ್ವವಿದ್ಯಾಲಯದ ಒಬ್ಬ ಯುವ ವಿದ್ಯಾರ್ಥಿಯನ್ನು ಅಥವಾ ಬಡತನ ತುಂಬಿರುವ ಜಾಗಗಳಲ್ಲಿರುವ ವೈದ್ಯನನ್ನು ಸಾಕುವುದಕ್ಕಿಂತ ಹಲವು ಪಟ್ಟು ಹೆಚ್ಚಿನದಾಗಿದೆ…..ಕ್ಷುಲ್ಲಕ ವಿಷಯಗಳು , ಬಡಾಯಿ ಕೊಚ್ಚುವುದು , ಉತ್ಪ್ರೇಕ್ಷೆ ಒತ್ತಟ್ಟಿಗಿರಲಿ, ನಾನು ಪರಿಪೂರ್ಣತೆಯ ಪ್ರತಿಪಾದಕನೆಂದಾಗಲಿ ಅಥವಾ ಸಾಧಕನೆಂದಾಗಲಿ ಹೇಳಿಕೊಂಡಿಲ್ಲ…..ನಿನ್ನನ್ನು ನಮ್ಮಂತೆಯೇ ಸೋಲು ಗೆಲುವುಗಳಿರುವ ಆದರೆ ಸ್ವಲ್ಪ ಹೆಚ್ಚು ಪ್ರತಿಭೆ, ಒಳನೋಟ , ಕಡಿಮೆ ಸಂಶಯಗಳಿರುವ ಒಬ್ಬ ಮನುಷ್ಯನಂತೆ ಪರಿಗಣಿಸುತ್ತೇನೆಯೇ ಹೊರತು ಕೆಲ ಭಕ್ತ ಹೆಂಗಸರು ಭಾವಿಸುವಂತೆ ನಡೆದಾಡುವ ದೇವರೆಂದಲ್ಲ… ನೀನು ದೇಹವನ್ನು ಕುರಿತಾಗಿ ಏನು ಬೋಧಿಸಿರುವೆಯೆಂದು ಬಲ್ಲೆ. ‘ನಾನು ಹೇಳಿದಂತೆ ಮಾಡು. ನಾನು ಮಾಡುವಂತಲ್ಲ’ ಎನ್ನುವುದು ನನಗೆ ಗೊತ್ತು,,,, ನಿರರ್ಗಳ ಮಾತಿನಿಂದ ಪ್ರಚೋದಿಸಲ್ಪಟ್ಟವರು ಅದರ ಪ್ರಭಾವ ಕುಗ್ಗಿದ ಮೇಲೆ ಮಾತು ಮತ್ತು ಅನುಷ್ಠಾನದಲ್ಲಿರುವ ವ್ಯತ್ಯಾಸವನ್ನು ಕಂಡಾಗ ಷಾಂಪೆನ್ ನಿಶೆಯಿಳಿದ ನಂತರ ಮತ್ತೊಮ್ಮೆ ಖಿನ್ನತೆಗೆ ಒಳಗಾಗುವವರ ಸ್ಥಿತಿ ತಲುಪುತ್ತಾರೆ… ಸಂನ್ಯಾಸಿಗಳನ್ನು ಇಲ್ಲಿಗೆ ಕರೆಸಿಕೊಂಡ ನಂತರ ಅವರಲ್ಲಿ ಸಂನ್ಯಾಸ, ತೃಪ್ತಿ , ಮನಸ್ಥೈರ್ಯ , ಪರಿಸರದ ಸರಳತೆಗಳು ಮಾಯವಾಗುತ್ತವೆ. ..ಅವರು ಬದುಕಲು ಗೋಳದ ಇನ್ನೊಂದು ತುದಿಯಲ್ಲಿರುವ ಊಟ , ಸೇದಲು ಷಿಲ್ಲಿಂಗ್ ಬೆಲೆಯ ಸಿಗಾರ್ , ಅತ್ಯುತ್ತಮ ಬಟ್ಟೆ , ಹಣ್ಣು ಬಯಸಿದರೆ ಆವರು ಯಾರು ? ಏನನ್ನು ಬೋಧಿಸುತ್ತಿದ್ದಾರೆ? .....ನುಡಿದಂತೆ ನಡೆಯುವಂತಿದ್ದರೆ ಮಾತ್ರ ಇತರರಿಗೆ ಬೋಧಿಸಬಹುದು……. ಫ್ರಾನ್ಸಿಸ್ ಲೆಗೆಟ್ ಸೇರಿದಂತೆ ರಿಡ್ಜ್’ಲಿ ಮ್ಯಾನೊರ್’ನಲ್ಲಿರುವ ಎಲ್ಲರೂ ಈ ಪತ್ರವನ್ನು ನೋಡಬೇಕೆಂದು ನಾನು ಬಯಸುತ್ತೇನೆ , ಅದಾಗದಿದ್ದರೆ ನನ್ನಂತೆ ಪತ್ರವನ್ನು ಯಾರಿಗೂ ತೋರಿಸದೆ ನೀನೆ ಇಟ್ಟುಕೋ…..’
ಸ್ವಾಮಿಗಳು ಈ ಪತ್ರವನ್ನು ರಿಡ್ಜ್’ಲಿ ಮ್ಯಾನೊರನಲ್ಲಿದ್ದ ತಮ್ಮ ಅಭಿಮಾನಿ ಹೆಂಗಸರಿಗೆ ತೋರಿಸಿದ್ದರೋ ಇಲ್ಲವೋ ಗೊತ್ತಿಲ್ಲವಾದರೂ ಎಡ್ವರ್ಡ್ ಸ್ಟರ್ಡಿ ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡುವುದು ಸುಲಭವಿರಲಿಲ್ಲ. ಅಕ್ಟೋಬರ್’ನಲ್ಲಿ ನ್ಯೂಯಾರ್ಕ್’ನ ಆಲ್’ಸ್ಟರ್ ಕೌಂಟಿಯಿಂದ ಸ್ವಾಮಿಗಳು ತಮ್ಮ ದೌರ್ಬಲ್ಯಗಳನ್ನು ಒಪ್ಪಿಕೊಂಡು ಎಡ್ವರ್ಡ್ ಸ್ಟರ್ಡಿಗೆ ಬರೆದ ಪತ್ರದಲ್ಲಿ ‘ ನಿನ್ನ ಟೀಕೆಯಲ್ಲಿ ಹೆಚ್ಚಿನದು ನ್ಯಾಯಯುತವಾಗಿದೆ , ಸತ್ಯವಾಗಿಯೂ ಇರಬಹುದು….ನಿನಗೆ ಕೆಲವರನ್ನು ಕಂಡರಾಗದು. ಅದಕ್ಕೆ ನಿನಗೆ ನಾನೊಂದು ನೆಪ ಮಾತ್ರ…ನಾನು ಹೇಗಿರುವೆನೋ ಹಾಗೆ ಕಾಣಿಸುವೆ , ಬೇರೆ ಕಾಣುವಂತೆ ನಟಿಸುವುದಿಲ್ಲ. ಅದು ಸಾಧ್ಯವೂ ಇಲ್ಲ. ಯಾರಾದರೂ ನನ್ನೊಡನೆ ಒಂದು ಗಂಟೆ ಇದ್ದರೆ ನನ್ನ ಧೂಮಪಾನ , ಮುಂಗೋಪಗಳ ಹಿಂದಿರುವ ವ್ಯಕ್ತಿಯನ್ನು ಸುಲಭವಾಗಿ ಕಂಡುಹಿಡಿಯಬಹುದು….’ ಎಂದು ಸ್ವವಿಮರ್ಶೆ ಮಾಡಿಕೊಂಡು ವೈರಾಗ್ಯ , ಸಂನ್ಯಾಸ ಜೀವನ , ನುಡಿ-ನಡೆ ಮುಂತಾದ ವಿಷಯಗಳು ಹೆಚ್ಚು ಚರ್ಚೆಗೆ ಬರದಂತೆ ನೋಡಿಕೊಳ್ಳಲು ಯತ್ನಿಸಿ ಬಿಳಿಯ ಬಾವುಟ ಹಾರಿಸಿದ್ದರು. ರಣೋತ್ಸಾಹದಲ್ಲಿದ್ದ ಎಡ್ವರ್ಡ್ ಸ್ಟರ್ಡಿಗೆ ಇದು ಬೇಕಾಗಿರಲಿಲ್ಲ. ೩/೧೧/೧೮೯೯ ರಂದು ‘ ..ನನಗೆ ಯಾರ ಮೇಲೂ ಅಸಮಾಧಾನನವಿಲ್ಲ… ನಿನ್ನ ದಾರಿಯಲ್ಲಿ ನಿನ್ನ ಸಂದೇಶವನ್ನು ಪಾಶ್ಚಾತ್ಯ ಜಗತ್ತಿಗೆ ಕೊಡಲು ನೀನು ಸ್ವತಂತ್ರ…. ನಿನ್ನ ನಡವಳಿಕೆಯನ್ನು ಸಮರ್ಥಿಸಲು ನಾನು ಹೆಣಗಿದೆ,. ಪಾಶ್ಚಾತ್ಯರ ವೈಭೋಗದ ಅತಿರೇಕದ ಪ್ರದರ್ಶನ ಮಾಡುತ್ತಾರಾದರೂ ಅವರು ಸರಳತೆಗೆ , ಸಹಜ ಸಾತ್ವಿಕತೆಗೆ ಅಪಾರ ಗೌರವ ಕೊಡುತ್ತಾರೆ. ಇವನ್ನು ಬೋಧಿಸುವರಲ್ಲಿ ಅವುಗಳನ್ನು ಬಯಸುತ್ತಾರೆ. ತಮ್ಮ ವೈಭೋಗವನ್ನು ಅವರು ನಿನ್ನ ಮುಂದಿರಿಸಿದಾಗ ಅವುಗಳನ್ನು ನಿರ್ಲಕ್ಷಿಸದ ನಿನ್ನ ಬಗ್ಗೆ ಅಂತರಂಗದಲ್ಲಿ ಕೊರಗುತ್ತಾರೆ. ಸ್ವಾತಂತ್ರ ಒಳ್ಳೆಯದು, ಅದರಂತೆ ನುಡಿ-ನಡೆಗಳ ನಡುವಿನ ಸಮನ್ವಯ. …ಉಡುಗೊರೆ ಕೊಡುವಂತಿದ್ದರೆ ಕಳ್ಳನಂತೆ ಬರಬೇಡ. ಹಾಗಲ್ಲದಿದ್ದರೆ ಉಪಚಾರದ ಬದಲು ಒದೆ ಸ್ವೀಕರಿಸಲು ಸಿದ್ಧನಿರು…..ಸಂನ್ಯಾಸಿಯಾಗಿ ಬಂದು ಜನ ಸಾಮಾನ್ಯರಿಗೆ ಅನಾಸಕ್ತಿ ಬೋಧಿಸುತ್ತಿರುವ ನೀನು ಅದೇ ವೇಳೆಗೆ ಆರಾಮ ಮತ್ತು ಐಷಾರಾಮಿ ಜೀವನ ಸಾಗಿಸುವಂತೆ ಕಾಣುತ್ತೀಯಾ. ಒಂದು ವೇಳೆ ಇವೆಲ್ಲವುಗಳಿಂದ ಮುಕ್ತನಾಗಿರುವೆ ಎಂದಾದರೂ ಏನು ಒಳಿತನ್ನು ಮಾಡಬಲ್ಲೆ ? ‘ ಎಂದು ಪ್ರಶ್ನಿಸಿದನು.
ಎಡ್ವರ್ಡ್ ಸ್ಟರ್ಡಿಯ ಈ ಪತ್ರ ಸ್ವಾಮಿಗಳ ಬುಡವನ್ನೇ ಅಲುಗಿಸಿದ್ದಿತು. ಆತ ಎತ್ತಿದ್ದ ಪ್ರಶ್ನೆಗಳನ್ನು ೬ ವರ್ಷಗಳ ಹಿಂದೆ ಇತರರೂ ಎತ್ತಿದ್ದರು- ಅದರಲ್ಲಿ ಭಾರತೀಯರೂ , ಹಿಂದೂಗಳು ಸೇರಿದ್ದರು. ಸ್ವಾಮಿಗಳಿಗೆ ಎಡ್ವರ್ಡ್ ಸ್ಟರ್ಡಿ ಮೇಲೆ ದಾಳಿ ಮಾಡುವದರ ಹೊರತಾಗಿ ಇನ್ನು ಬೇರೆ ಯಾವುದೇ ದಾರಿಯೇ ಉಳಿದಿರಲಿಲ್ಲ. ೧೮೯೮ ನವೆಂಬರ್’ನಲ್ಲಿ ‘ನಾನು ಮಾಡಿದ್ದು ಸರಿಯೆಂದು ಸಾಧಿಸಲು ಈ ಪತ್ರ ಬರೆಯುತ್ತಿಲ್ಲ.ನಾನು ಮಾಡಿರುವ ಪಾಪಗಳನ್ನು ಮಾತುಗಳಿಂದ ಅಳಿಸಲಾಗದು. ನಾನು ಮಾಡಿರುವುದರಲ್ಲಿ ಏನಾದರೂ ಒಳ್ಳೆಯದಿದ್ದರೆ ಯಾವ ಟೀಕೆಯೂ ಅದನ್ನು ತಡೆಯಲಾರದು...ತ್ಯಾಗವನ್ನು ಬೋಧಿಸುತ್ತ ಭೋಗ ಅನುಭವಿಸುತ್ತಿರುವ ಕಪಟಿ ನಾನೆಂದು , ನನ್ನ ಸುಖ ಭೋಗಗಳ ಬಯಕೆಯೇ ಇಂಗ್ಲೆಂಡಿನ ನನ್ನ ಕೆಲಸಕ್ಕೆ ಅಡ್ಡಿಯಾಯಿತೆಂದು ಹೇಳಲಾಗುತ್ತಿದೆ……..ರೀಡಿಂಗಿನಲ್ಲಿದ್ದ ನಿನ್ನ ಸ್ಥಳ ನನಗೆ ನೆನಪಿಗೆ ಬರುವುದು. ಅಲ್ಲಿ ನನಗೆ ಬೇಯಿಸಿದ ಕೋಸು , ಆಲೂಗಡ್ಡೆ , ಅನ್ನ ಮತ್ತು ಸೊಪ್ಪನ್ನು ದಿನಕ್ಕೆ ಮೂರು ಬಾರಿ ಬಡಿಸುತ್ತಿದ್ದರು. ನಿನ್ನ ಹೆಂಡತಿಯ ನಿರಂತರ ಬೈಗುಳವೇ ಅದಕ್ಕೆ ಹಾಕಿದ ಮಸಾಲೆ…. ನಿನ್ನ ಊಟ ಅಥವಾ ನಿನ್ನ ಹೆಂಡತಿಯ ಸತತ ನಿಂದೆಗಳಿಗೆ ನಾನೆಂದೂ ದೂರಿಲ್ಲ. ನಾನು ನಿನ್ನ ಮನೆಯಲ್ಲಿರುವ ತನಕ ಕಳ್ಳನಂತೆ ನಡುಗುತ್ತ ಪ್ರತಿದಿನವೂ ನಿನಗಾಗಿ ದುಡಿಯುತ್ತಿದ್ದೆ. …. ಅನಂತರ ಸೇಂಟ್ ಜಾರ್ಜ್ ರಸ್ತೆಯಲ್ಲಿದ್ದ ನಿನ್ನ ಮನೆಯ ನೆನಪು ಬರುತ್ತದೆ….. ಅಲ್ಲಿಯೂ ನನಗೆ ಕುಡಿಯಲು , ಮಲಗಲು ಯಾವ ಸುಖ ಭೋಗಗಳು ಇರಲಿಲ್ಲ ….ಮಿಸ್ ಮುಲ್ಲರ್ ಸ್ಥಳದಲ್ಲಿ ಹಣ್ಣು , ಬೀಜಗಳ ಮೇಲೆ ಬದುಕಿದ್ದೆ. ನನಗೆ ಲಂಡನ್’ನ ಆ ಕತ್ತಲೆ ಕೋಣೆ ನೆನಪಿಗೆ ಬರುತ್ತದೆ. ಅಲ್ಲಿ ನಾನು ಹಗಲಿರುಳು ಕೆಲಸ ಮಾಡುತ್ತಿದ್ದೆ. ಅನೇಕ ವೇಳೆ ರಾತ್ರಿ ಬರೀ ಬ್ರೆಡ್ ಮತ್ತು ಬೆಣ್ಣೆಯೇ ಗತಿಯಾಗಿದ್ದವು……ಶ್ರೀಮತಿ ಜಾನ್’ಸನ್ ನನಗೆ ಒಪ್ಪತ್ತು ಊಟ ಹಾಕಿ , ರಾತ್ರಿ ಮಲಗಲು ನೆಲೆ ಕೊಟ್ಟು ಮರುದಿನ ಈ ಕರಿಯ ಬಹಳ ಕೊಳಕನೆಂದು , ಮನೆಯಲ್ಲಿ ಎಲ್ಲ ಕಡೆ ಧೂಮಪಾನ ಮಾಡುವನೆಂದು ಬೈಯುತ್ತಿದ್ದಳು……ನಿಮ್ಮಲ್ಲಿ ಯಾರು ನನಗೆ ಕೋಟನ್ನು ಕೊಟ್ಟರು ? ಯಾರು ಒಂದು ಚುಟ್ಟವನ್ನು ಕೊಟ್ಟರು ? ಮೀನು , ಮಾಂಸದ ಚೂರನ್ನು ನಿಮ್ಮಲ್ಲಿ ನನಗೆ ಯಾರು ಕೊಟ್ಟರು ? ಯಾರು ಅನ್ನ ಕೊಟ್ಟರು….ಕ್ಯಾಪ್ಟನ್ ಮತ್ತು ಶ್ರೀಮತಿ ಸೇವಿಯರ್ಸ್ ನಾನು ಚಳಿಯಿಂದ ನಡುಗುತ್ತಿರುವಾಗ ಬಟ್ಟೆ ಕೊಟ್ಟರು..ಅವರು ನನ್ನನ್ನು ಸುಖ , ಭೋಗಗಳಿಗಾಗಿ ಟೀಕಿಸಲಿಲ್ಲ……ಅವರು ( ಶ್ರೀಮತಿ ಸಾರಾ ಬುಲ್ , ಮಿಸ್ ಜೊಸೆಫಿನ್ ಮೆಕ್ಲಿಯಾಡ್, ಶ್ರೀಮತಿ ಮತ್ತು ಶ್ರೀ ಫ್ರಾನ್ಸಿಸ್ ಲೆಗೆಟ್) ಸುಖ , ಭೋಗಗಳ ವಿಷಯದಲ್ಲಿ ನನ್ನಲ್ಲಿ ತಪ್ಪನ್ನು ಕಾಣಲಿಲ್ಲ. ನಾನು ಚೆನ್ನಾಗಿ ತಿಂದು ಡಾಲರುಗಳಷ್ಟು ಬೆಲೆಬಾಳುವ ಚುಟ್ಟ ಸೇದಿದರೆ ಸಂತೋಷ ಪಡುವರು. ಈ ಲೆಗ್ಗೆಟ್ಸ್ ಮತ್ತು ಬುಲ್ಸ್ ಅವರ ರೊಟ್ಟಿಯನ್ನೇ ನಾನು ತಿಂದದ್ದು , ಅವರ ಹಣದಿಂದಲೇ ಹೊಗೆಸೊಪ್ಪ್ಪು ಕೊಂಡದ್ದು , ಹಲವು ಸಲ ಮನೆ ಬಾಡಿಗೆ ಕಟ್ಟಿದ್ದು … ನಾನು ಎಲ್ಲಿಯಾದರೂ ದೇಹ ದಂಡನೆಯನ್ನು ಬೋಧಿಸಿದ್ದರೆ ತೋರಿಸು, ಶಾಸ್ತ್ರಗಳು ವಿಧಿಸಿದ ಸಂನ್ಯಾಸಿಯ ನಿಯಮಗಳನ್ನು ನಾವು ಮೀರಿದ್ದೇವೆಂದು ತೋರಿಸುವ ಧೈರ್ಯ ಯಾರಿಗಾದರೂ ಇದ್ದರೆ ಅಂತಹವರು ಮುಂದೆ ಬರಲಿ .’ ಸ್ವಾಮಿಗಳು ನೀಡಿದ ಈ ಉತ್ತರ ಸೈದ್ಧಾಂತಿಕವಾಗಿರಲಿಲ್ಲ ಎನ್ನುವದು ಸ್ಪಷ್ಟ.
ಶ್ರೀಮತಿ ಆಸ್ಟನ್ ಜಾನ್’ಸನ್ ಸ್ವಾಮಿಗಳ ನಡವಳಿಕೆಯನ್ನು ಟೀಕಿಸುವುದರಲ್ಲಿ ಎಡ್ವರ್ಡ್ ಸ್ಟರ್ಡಿಯೊಂದಿಗೆ ಸೇರಿರುವಳೆಂದು ಮಾರ್ಗರೆಟ್ ನೋಬಲ್ ಮತ್ತು ಸ್ವಾಮಿಗಳಿಬ್ಬರೂ ಭಾವಿಸಿದ್ದರು. ೨/೧೧/೧೮೯೯ ರಂದು ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿ ಶ್ರೀಮತಿ ಆಸ್ಟನ್ ಜಾನ್’ಸನ್ ಸಾರಾ ಬುಲ್’ಗೆ ಪತ್ರ ಬರೆದಳು . ಅದರಲ್ಲಿನ ಆಯ್ದ ಭಾಗ ಹೀಗಿದೆ ‘…….ನಡೆಯುವ ಮಗು ಎಡವಿ ಬಿದ್ದು ತಾನೇ ಗಾಯಗೊಂಡಾಗ ಹೇಗೆ ಖಂಡಿಸುವುದಿಲ್ಲವೋ , ಟೀಕಿಸುವುದಿಲ್ಲವೋ ಅದರಂತೆ ಸ್ವಾಮಿಗಳ ನಡವಳಿಕೆಯೂ ನನ್ನ ದೃಷ್ಟಿಯಲ್ಲಿ…ಈ ಅನಾರೋಗ್ಯದಲ್ಲಿ ಸ್ವಾಮಿ ದಿವ್ಯ ಪ್ರಜ್ಞೆಯನ್ನು ಗಳಿಸಿಕೊಂಡಿದ್ದಾರೆ ಎನ್ನುವುದನ್ನು ಒಪ್ಪುವುದಿಲ್ಲ. … ಅತ್ಯುನ್ನತ ದಿವ್ಯ ಪ್ರಜ್ಞೆ ವ್ಯಕ್ತವಾಗಲು ರೋಗಿಷ್ಟ ದೇಹ ಬೇಕು ಎನ್ನುವ ವಾದವನ್ನು ನಾನು ಒಪ್ಪಲಾರೆ. ಮಿಸ್ ಮಾರ್ಗರೆಟ್ ನೋಬಲ್ ಸ್ವಾಮಿಗಳ ಅಡಿಗಳನ್ನು ಪೂಜಿಸುವಂತೆ ನಾನು ನಟಿಸಲಾರೆ. ಇಂಗ್ಲಿಷ್ ಹೆಣ್ಣಿನ ದೃಷ್ಟಿಯಲ್ಲಿ ಆಕೆಯ ನಡವಳಿಕೆ ಹೀನಾಯ ; ಆದರೆ ಆಕೆ ಮತ್ತು ಸ್ವಾಮಿಯ ಬಗ್ಗೆ ನನಗಿರುವ ಗೆಳೆತನ, ಪ್ರೀತಿಯಲ್ಲಿ ನನ್ನಲ್ಲಿ ಯಾವ ಬದಲಾವಣೆಯೂ ಇಲ್ಲ. ….ಸ್ವಾಮಿ ಒಬ್ಬ ಮನುಷ್ಯ ಮಾತ್ರ-ಅದನ್ನು ಆತ ಆದಷ್ಟು ಬೇಗ ತಿಳಿದುಕೊಂಡರೆ ಒಳ್ಳೆಯದು. ….ವ್ಯಕ್ತಿ ಪೂಜೆಯನ್ನು ಮೀರಿದ ಒಂದು ಉನ್ನತ ಉದ್ದೇಶಕ್ಕಾಗಿ ಆಕೆ (ಮಾರ್ಗರೆಟ್ ನೋಬಲ್) ಹೆಣಗುತ್ತಿರುವಳೆಂದು ಮನದಟ್ಟು ಮಾಡುವವರೆಗೆ ಆಕೆಯ ‘ಕೆಲಸ’ಗಳಿಗೆ ಇಂಗ್ಲೆಂಡ್’ನಿಂದ ನೆರವು ಸಿಗುವುದು ಕಷ್ಟ . … ಒಂದು ಆದರ್ಶ ತನ್ನ ಗುಣಗಳ ಮೇಲೆ ನಿಲ್ಲಬೇಕಲ್ಲದೆ ವ್ಯಕ್ತಿಗಳ ಮೇಲಲ್ಲ….’ (131) ಸ್ವಾಮಿಗಳ ಅಭಿಮಾನಿಗಳು , ಭಕ್ತರು ಸ್ವಾಮಿಗಳನ್ನು ಸಮರ್ಥಿಸಿ ಅದೇನೇ ಹೇಳಲಿ ವಿಚಾರದ ದೃಷ್ಟಿಯಿಂದ ನೋಡಿದಾಗ ಎಡ್ವರ್ಡ್ ಸ್ಟರ್ಡಿ ಮತ್ತು ಶ್ರೀಮತಿ ಆಸ್ಟನ್ ಜಾನ್’ಸನ್ ಪತ್ರಗಳಲ್ಲಿ ಕಟು ಸತ್ಯವಿರುವುದು ಕಾಣುತ್ತದೆ.
ಎಡ್ವರ್ಡ್ ಸ್ಟರ್ಡಿ ಪತ್ರ ಬಂದ ನಂತರ ಸ್ವಾಮಿಗಳ ಮನಸ್ಸಿನಲ್ಲಿ ಜುಗುಪ್ಸೆಯ ಅಲೆಗಳೆದ್ದಿದ್ದವು. ನವೆಂಬರ್ ೨ ಮತ್ತು ೩ ರಂದು ರಿಡ್ಜ್’ಲಿ ಮ್ಯಾನೊರ್’ನಲ್ಲಿ ನಡೆದ ಘಟನೆಗಳನ್ನು ಜೊಸೆಫಿನ್ ಮೆಕ್ಲಿಯಾಡ್’ಗೆ ತಿಳಿಸುತ್ತ ಮಾರ್ಗರೆಟ್ ನೋಬಲ್ ದಾಖಲಿಸಿದ್ದಾಳೆ. ನವೆಂಬರ್-೨ರಂದು ಸ್ವಾಮಿಗಳು ತಮ್ಮ ಸಂನ್ಯಾಸಕ್ಕೆ ಯಾವುದೇ ಧಕ್ಕೆಯಾಗಿಲ್ಲವಾದರೂ ವೈಯಕ್ತಿಯ ಪ್ರೀತಿಯಿಂದ ಧಕ್ಕೆಯಾಗಬಹುದೆಂದು ತಿಳಿಸಿದರು. ಇದನ್ನು ಕೇಳಿ ಸಾರಾ ಬುಲ್ ಕಣ್ಣೀರಿಡುತ್ತ ಮಾರ್ಗರೆಟ್ ನೋಬಲ್ ಕೋಣೆಗೆ ಹೋಗಿ ಒಂದು ಗಂಟೆಗೂ ಹೆಚ್ಚು ಕಾಲ ಈ ವಿಚಾರವಾಗಿ ಚರ್ಚಿಸಿದಳು. ಮರುದಿನ ಬೆಳಿಗ್ಗೆ ಉಲ್ಲಸಿತರಾಗಿ ಬಂದ ಸ್ವಾಮಿಗಳು ಮಾರ್ಗರೆಟ್ ನೋಬೆಲ್ ಜೊತೆ ನಿರ್ಮೋಹದಿಂದ ಮಾತನಾಡಿದಾಗ ದುಃಖ ತಾಳದೆ ಆಕೆ ಅಳಲು ತನ್ನ ಕೋಣೆಗೆ ಓಡಿದಳು. ಆಕೆಯ ಕೋಣೆಯ ಬಾಗಿಲಿಗೆ ಹೋಗಿ ನಿಂತು ಸ್ವಾಮಿಗಳು ಪ್ರಾಪಂಚಿಕತೆಯಿಂದ ತಮಗಾಗುತ್ತಿರುವ ನೋವನ್ನು ವಿವರಿಸಿದರು. ನಿಸ್ತೇಜ ಮುಖದವರಾಗಿ ‘ಈಗ ನಾನೆಲ್ಲಿದ್ದೇನೆ ? ‘ ಎಂದು ಪ್ರಶ್ನಿಸಿದರು. ನಂತರ ಏನನ್ನೋ ಮಣಗುಟ್ಟುತ್ತ ರಾಮಕೃಷ್ಣರ ಹೆಸರನ್ನು ಬಡಬಡಿಸಿದರು. ‘ ಹೇಗಾದರೂ ಈ ದೇಹ ಇಲ್ಲವಾಗುತ್ತದೆ. ನಾನು ಕಠಿಣ ತಪಸ್ಸಿನಲ್ಲಿ ತೊಡಗಿಕೊಳ್ಳುತ್ತೇನೆ.- ಉಪವಾಸದಿಂದ ಇರುತ್ತ ದಿನಕ್ಕೆ ೧೦,೦೦೦ ಓಂ ಪಠಣ ಮಾಡುತ್ತೇನೆ. ಒಬ್ಬಂಟಿಯಾಗಿ , ಒಬ್ಬಂಟಿಯಾಗಿ ಮಾತ್ರ ನಾನು ಹಿಮಾಲಯ ಸೇರಿ ಗಂಗಾ ತಟದಲ್ಲಿ ಹರ ಹರ ಮಹಾದೇವ ಮುಕ್ತಿನಾಥ , ಮುಕ್ತಿನಾಥ ಎನ್ನುತ್ತೇನೆ. ನನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೇನೆ. ಈ ಸಲ ಅದು ಯಾರಿಗೂ ತಿಳಿಯುವಂತಿಲ್ಲ. ಮತ್ತೊಮ್ಮೆ ಸಂನ್ಯಾಸಾಶ್ರಮಕ್ಕೆ ಹೋಗುತ್ತೇನೆ. ಇದಕ್ಕಾಗಿಯೇ ಈ ನಿರ್ಧಾರ , ನಾನು ಇನ್ನೆಂದೂ ಯಾರ ಹತ್ತಿರವೂ ಬರುವುದಿಲ್ಲ.’ ಎಂದು ಹೇಳುತ್ತಿರುವಾಗ ನೋಟದಲ್ಲಿ ಬದಲಾವಣೆಯಾಗಿ , ಭಯಂಕರ ಚಿಂತನೆಗಳು ಹಾದು ‘ ನಾನೆಲ್ಲ ಕಳೆದುಕೊಂಡೆ , ಮ್ಲೇಚ್ಛರೇ ನಿಮಗಾಗಿ ನಾನೆಲ್ಲ ಕಳೆದುಕೊಂಡೆ ! ಎನ್ನುತ್ತ ನಿಟ್ಟುಸಿರಿಡುತ್ತ ದೂರ ಸರಿದರು. (132) ಸ್ವಾಮಿಗಳಿಗೆ ಅಧ್ಯಾತ್ಮಿಕ ಅನುಭವಗಳನ್ನು ಹೆಮ್ಮೆಯಿಂದ ವರ್ಣಿಸುತ್ತ ಸ್ವಾಮಿಗಳಿಗೆ ಎಂತೆಂತಹ ಅಧ್ಯಾತ್ಮಿಕ ಅನುಭವಗಳಾಗಿದ್ದವೋ ಎನ್ನುವ ‘ದಿ ಲೈಫ್-೧೯೧೪’ ಹಾಗೂ ಅಮೆರಿಕದ ಪ್ರಾಪಂಚಿಕತೆಯನ್ನೂ ಸ್ವಲವೂ ಅಂಟಿಸಿಕೊಳ್ಳದೆ ಸ್ವಾಮಿಗಳು ನಿರುದ್ವಿಗ್ನವಾಗಿ ಉನ್ನತ ಪ್ರಜ್ಞೆಯಲ್ಲಿರುತ್ತಿದ್ದರು ಎಂದು ಹೇಳುವರೆಲ್ಲರೂ ನಿತ್ಯಮುಕ್ತರಾದ ಸ್ವಾಮಿಗಳು ಇತರರಂತೆ ತಪ್ಪು ಮಾಡುವುದೇಕೆ , ೧೦೦೦೦ ಸಲ ಓಂ ಪಠಿಸಬೇಕೇಕೆ ಎನ್ನುವುದನ್ನು ಕೆದಕಲು ಹೋಗಿಲ್ಲ.
೫/೧೧/೧೮೯೯-ರಿಡ್ಜ್’ಲಿ ಮ್ಯಾನೋರ್- ಸ್ವಾಮಿಗಳು ಮಾರ್ಗರೆಟ್ ನೋಬಲ್ ಇದ್ದ ಕೋಣೆ ಹೊಕ್ಕು ಬಾಗಿಲು ಮುಚ್ಚಿದರು. ಅಲ್ಲಿ ಸಾರಾ ಬುಲ್ ಬರೆಯುತ್ತ ಕುಳಿತಿದ್ದಳು. ಸ್ವಾಮಿಗಳು ತಾವು ತಂದಿದ್ದ ರೇಷ್ಮೆ ಬಟ್ಟೆಯ ತುಂಡನ್ನು ಸಾರಾ ಬುಲ್ ಸೊಂಟಕ್ಕೆ ಸುತ್ತಿ ಆಕೆಯನ್ನು ಸಂನ್ಯಾಸಿಯೆಂದು ಕರೆದರು. ಒಂದು ಕೈಯನ್ನು ಸಾರಾ ಬುಲ್ ತಲೆಯ ಮೇಲೆ ಇನ್ನೊಂದು ಕೈಯನ್ನು ಮಾರ್ಗರೆಟ್ ತಲೆಯ ಮೇಲಿರಿಸಿ ‘ರಾಮಕೃಷ್ಣ ಪರಮಹಂಸರು ನನಗೆ ಕೊಟ್ಟಿದ್ದೆಲ್ಲವನ್ನೂ ನಿಮಗೆ ಕೊಡುತ್ತಿದ್ದೇನೆ. ಹೆಣ್ಣಿನಿಂದ ಬಂದದ್ದು ( ತಾಯಿ , ಜಗನ್ಮಾತೆ) ಇಬ್ಬರು ಹೆಂಗಸರಿಗೆ ಕೊಡುತ್ತಿದ್ದೇನೆ. ಅದನ್ನು ಏನು ಬೇಕಾದರೂ ಮಾಡಿರಿ. ನನ್ನಲ್ಲಿ ನನಗೆ ನಂಬಿಕೆಯಿಲ್ಲ. ನಾಳೆ ಏನು ಮಾಡುವೆನೆಂದು ಗೊತ್ತಿಲ್ಲ , ಕೆಲಸವೂ ಹಾಳಾಗಬಹುದು. ಹೆಣ್ಣಿನಿಂದ (ತಾಯಿ, ಜಗನ್ಮಾತೆ) ಬಂದದ್ದನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಹೆಣ್ಣುಗಳೇ ಸೂಕ್ತ. ನಾನು ಆಕೆ (ತಾಯಿ, ಜಗನ್ಮಾತೆ) ಯಾರು , ಹೇಗಿರುವಳೆಂದು ಕಂಡಿಲ್ಲ. ಆದರೆ ರಾಮಕೃಷ್ಣರು ಆಕೆಯನ್ನು ಕಂಡು , ಮುಟ್ಟಿದ್ದರು ಹೀಗೆ ಮುಟ್ಟಿದ್ದರು’ ಎನ್ನುತ್ತ ಮಾರ್ಗರೆಟ್ ಅಂಗಿಯ ತೋಳನ್ನು ಮುಟ್ಟಿದರು. ….ಇಂದು ಬೆಳಿಗ್ಗೆ ನಾನು ಹುಚ್ಚನಾಗಿದ್ದೆ. ಏನು ಮಾಡಬೇಕೆಂದು ಭಾರಿ ಚಿಂತಿಸಿದೆ. ಊಟಕ್ಕೆ ಮೊದಲು ಮಲಗಲು ನನ್ನ ಕೋಣೆಗೆ ಹೋದಾಗ ಇದು ಹೊಳೆಯಿತು…ನಿಮಗೆ ವರ್ಗಾಂತರಿಸಿದ ನಂತರ ನನ್ನ ಹೊರೆ ಇಳಿಯಿತು , ನಾನೀಗ ನಿರಾಳ….’ ಎಂದರು. (133 )
ಬೋಳೆ ಸ್ವಭಾವದ ಮಾರ್ಗರೆಟ್ ನೋಬಲ್ ಸ್ವಾಮಿಗಳಿಂದ ತಮ್ಮಿಬ್ಬರಿಗೆ ಅಧ್ಯಾತ್ಮಿಕ ಶಕ್ತಿ ವರ್ಗಾಂತರಗೊಂಡು ಅವರ ಅಧ್ಯಾತ್ಮಿಕ ಶಕ್ತಿ ಕ್ಷೀಣಿಸಿತೆಂದು ಭಾವಿಸಿದಳು. ಆದರೆ ಈ ಎಲ್ಲ ಘಟನೆಗಳನ್ನು ಜೋಡಿಸಿ ನೋಡಿದಾಗ ಒಂದು ಚಿತ್ರಣ ಸಿಗುತ್ತದೆ. ಹಿಂದೂ ಧರ್ಮ , ಸಂನ್ಯಾಸದ ನಿಯಮ , ಅನಾಸಕ್ತಿ , ನಿಷ್ಕಾಮ ಕರ್ಮ ಮುಂತಾದವನ್ನು ಅಮೆರಿಕದ ಜನ ಸ್ವಾಮಿಗಳ ಬಾಯಿಂದ ಮೊದಲ ಬಾರಿಗೆ ಕೇಳಿದ್ದರು. ಅವರಿಗೆ ಅವೇನೆಂದು ಸ್ಪಷ್ಟವಾಗಿರಲಿಲ್ಲ. ಹೇಲ್ ಮತ್ತು ಮೆಕೆಂಡ್ಲಿ ಸೋದರಿಯರು ಇವುಗಳನ್ನು ವಿಚಾರಿಸಿ , ವಿಮರ್ಶಿಸುವಷ್ಟು ಪ್ರಬುದ್ಧರಾಗಿರಾಗಿರಲಿಲ್ಲ. ಶ್ರೀಮತಿ ಜಾನ್ ಜೆ ಬ್ಯಾಗ್ಲಿ , ಸಾರಾ ಬುಲ್ , ಬೆಟ್ಟಿ ಲೆಗ್ಗಟ್ ಜೊಸೆಫಿನ್ ಮೆಕ್ಲಿಯಾಡ್ , ಸಾರಾ ಎಲೆನ್ ವಾಲ್ಡೋ , ಮೇರಿ ಡಚರ್ ಮಂತಾದವರು ಪ್ರಬುದ್ಧರಾಗಿದ್ದರಾದರೂ ವೈಚಾರಿಕರೂ , ವಿಮರ್ಶಕರೂ ಆಗಿರಲಿಲ್ಲ. ಅವರಿಗೆ ಅಮೆರಿಕದಲ್ಲಿ ಪ್ರಚಲಿತವಿರುವ ಧರ್ಮಕ್ಕಿಂತ ಬೇರೆಯದಾದ ಹೊಸತು ಬೇಕಾಗಿದ್ದಿತು. ಉದಾರವಾದಿಗಳು ಎಲ್ಲ ಬಗೆಯ ಧರ್ಮ , ತತ್ತ್ವಗಳ ಪ್ರತಿಪಾದನೆಗೆ ಮುಕ್ತ ಅವಕಾಶ ಇರಬೇಕೆಂದು ನಂಬಿದ್ದು ಆ ನಿಲುವಿನಿಂದ ಸ್ವಾಮಿಗಳನ್ನು ಬೆಂಬಲಿಸಿದ್ದರು. ಅವರಿಗೆ ಸ್ವಾಮಿಗಳ ಜೀವನಶೈಲಿಯ ವಿವರಗಳು ಗೊತ್ತಿರಲಿಲ್ಲ. ಫ್ರಾನ್ಸಿಸ್ ಲೆಗ್ಗಟ್’’ನಂತಹ ಶ್ರೀಮಂತರಿಗೆ ತಮ್ಮ ಒಡನಾಟಕ್ಕೆ ಹೊಸತರದ ವ್ಯಕ್ತಿ ಬೇಕಾಗಿದ್ದನು. ಆತ ಸ್ವಾಮಿ ವಿವೇಕಾನಂದನೇ ಆಗಿರುವ ಅಗತ್ಯವಿರಲಿಲ್ಲ. ಮೊದಲ ಪ್ರಿಯಕರ ಕ್ಷಯರೋಗದಿಂದ ಸತ್ತು , ಎರಡನೇ ಪ್ರಿಯಕರ ತನ್ನನ್ನು ತೊರೆದು ಬೇರೆಯವಳ ಹಿಂದೆ ಹೋದ ನಂತರ ಮಾರ್ಗರೆಟ್ ನೋಬಲ್ ವಸ್ತುನಿಷ್ಠಳಾಗಿರದೆ ಭಾವುಕಳಾಗಿದ್ದಳು. ಎಡ್ವರ್ಡ್ ಸ್ಟರ್ಡಿ ಎತ್ತಿದ ಪ್ರಶ್ನೆಯನ್ನು ಬೇರೆ ಯಾರಾದರೂ ಎತ್ತಬಹುದಿತ್ತು. ಅದಕ್ಕಿಂತಲೂ ಮುಖ್ಯವಾಗಿ ತಮ್ಮನ್ನು ‘ಪ್ರವಾದಿ , ರಾಜ’ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದ ಮಾರ್ಗರೆಟ್ ನೋಬಲ್’ರಂತಹವರನ್ನು ವಿಶ್ವಾಸಕ್ಕೆ ತೆದುಕೊಳ್ಳಬೇಕಾಗಿದ್ದಿತು. ಇವೆಲ್ಲವುಗಳನ್ನು ‘ಅಧ್ಯಾತ್ಮಿಕ ಶಕ್ತಿ ‘ ವರ್ಗಾಂತರದ ಮೂಲಕ ಸ್ವಾಮಿಗಳು ಸಾಧಿಸಿದರು. ಭಾರತದ ಅಧ್ಯಾತ್ಮ ಮತ್ತು ತಾತ್ತ್ವಿಕ ಪರಂಪರೆಯಲ್ಲಿ ಒಳ್ಳೆಯದೇ ಆಗಿರಲಿ ಕೆಟ್ಟದ್ದೇ ಆಗಿರಲಿ ಒಬ್ಬರ ಕರ್ಮದ ಫಲವನು ಇನ್ನೊಬ್ಬರು ಪಡೆಯುವಂತಿಲ್ಲ. ಹಸಿವು , ನೀರಡಿಕೆಗಳನ್ನು ತಾನೇ ಪರಿಹರಿಸಿಕೊಳ್ಳಬೇಕಲ್ಲದೆ ತನ್ನ ಪರವಾಗಿ ಬೇರೆಯವರು ಅದನ್ನು ಮಾಡಲು ಸಾಧ್ಯವಿಲ್ಲ. ಅದು ಅಧ್ಯಾತ್ಮಿಕ ಶಕ್ತಿಗೂ ಅನ್ವಯ. ಸ್ವಾಮಿಗಳ ಅಧ್ಯಾತ್ಮಿಕ ಶಕ್ತಿಯನ್ನು ಸ್ವೀಕರಿಸುವ ಯೋಗ್ಯತೆ ರಾಮಕೃಷ್ಣರಿಂದ ನಿತ್ಯಮುಕ್ತರೆಂದು ಗುರುತಿಸಿಕೊಂಡಿದ್ದ ಇತರ ಗುರುಭಾಯಿಗಳಿಗೆ ಇರಲಿಲ್ಲವೇ ? ಅಷ್ಟೇ ಅಲ್ಲ ಸ್ವಾಮಿಗಳಿಂದ ಅಧ್ಯಾತ್ಮ ಶಕ್ತಿ ಪಡೆದ ಈ ಇಬ್ಬರು ಮುಂದೆ ಸಾಧಿಸಿದ್ದಾರು ಏನು ಎನ್ನುವ ಪ್ರಶ್ನೆಗೆ ಉತ್ತರಗಳು ಬೇಕಾಗುತ್ತವೆ.
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ಸ್ವಾಮಿಗಳು ವೇದಿಕೆಯ ಮೇಲಿಂದ ಹಿಂದೂಗಳ ಸಂನ್ಯಾಸ ಜೀವನದ ಆದರ್ಶ , ವೈರಾಗ್ಯ , ಇಂದ್ರಿಯ ಸಂಯಮಗಳನ್ನು ವೈಭವೀಕರಿಸಿ ಭಾಷಣ ಮಾಡುತ್ತಿದ್ದರಾದರೂ ಅವರ ಬ್ರಹ್ಮಚರ್ಯ, ಸಾತ್ವಿಕ ಜೀವನ ಮತ್ತು ಇಂದ್ರಿಯ ಸಂಯಮದ ಪರಿಕಲ್ಪನೆಯಲ್ಲಿ ನಾಲಿಗೆ ಚಪಲವನ್ನು, ಚಟಗಳನ್ನು ಹತೋಟಿಯಲ್ಲಿಡುವುದು ಸೇರಿರಲಿಲ್ಲ. ಲಂಡನ್’ನಲ್ಲಿ ಸಸ್ಯಾಹಾರವನ್ನು ಮಾತ್ರ ಒದಗಿಸುತ್ತಿದ್ದ ಎಡ್ವರ್ಡ್ ಸ್ಟರ್ಡಿ ಮತ್ತು ಹೆನ್ರಿಯೆಟ್ಟಾ ಮುಲ್ಲರ್ ಮೇಲೆ ಸ್ವಾಮಿಗಳಿಗೆ ಕಡುಕೋಪ ಬಂದಿತ್ತಾದರೂ ಅದನ್ನು ಆ ಸಮಯದಲ್ಲಿ ತೋರಿಸಿಕೊಂಡಿರಲಿಲ್ಲ. ಪೌಲ್ ಡಾಯ್ಸನ್ ಸ್ವಾಮಿಗಳ ಧೂಮಪಾನ ಚಟ ಮತ್ತು ಅನಿಯಂತ್ರಿತ ಆಹಾರ ಸೇವನೆಯನ್ನು ಕಂಡು ಪ್ರಶ್ನಿಸಿದಾಗ ಸ್ವಾಮಿಗಳು ತಾವು ದಾರಿದ್ರ್ಯ ಮತ್ತು ಬ್ರಹ್ಮಚರ್ಯ ಎನ್ನುವ ತಮ್ಮ ಎರಡು ವ್ರತಗಳಿಂದ ಎಂದಿಗೂ ವಿಮುಖರಾಗಿಲ್ಲವೆಂದು ತಿಳಿಸಿದ್ದರು. ಹರಿದಾಸ ವಿಹಾರಿದಾಸ ದೇಸಾಯಿಯವರಿಗೆ ‘‘….ಸಂನ್ಯಾಸಿ ತನ್ನ ಸಂನ್ಯಾಸತ್ವದ ಒಂದು ಸಣ್ಣ ಅಂಶವನ್ನು ತನ್ನ ಜೀವನ ವಿಧಾನವನ್ನೂ ಕಳೆದುಕೊಂಡಿಲ್ಲ ‘ ಎಂದು ಭರವಸೆ ನೀಡಿದಾಗಲೂ ಇದೇ ಅರ್ಥ ಇದ್ದಿತು. (೧೫/೧೧/೧೮೯೪) ಕಲ್ಕತ್ತದ ಬೇಲೂರಿನಲ್ಲಿ ಮಠ ಕಟ್ಟಲು ಬೇಕಾದ ಜಮೀನು ಖರೀದಿಸಲು ನಿರ್ಣಾಯಕ ಹಣ ನೀಡಿದ್ದ ಹೆನ್ರಿಯೆಟ್ಟಾ ಮುಲ್ಲರ್ ಸ್ವಾಮಿ ಮತ್ತು ಗುರುಭಾಯಿಗಳಲ್ಲಿ ಹೇಳಿಕೊಳ್ಳುವಂತಹ ವೈರಾಗ್ಯವಿಲ್ಲ , ಸ್ವಾಮಿಗಳು ತಮ್ಮ ಪೂರ್ವಾಶ್ರಮದ ಕೌಟುಂಬಿಕ ವಿಚಾರಗಳಲ್ಲಿ ತಲೆ ಹಾಕುತ್ತಾರೆ , ಹಿಂದೂ ಧರ್ಮದಲ್ಲಿ ಶಿಶ್ನಾರಾಧನೆಯಿದೆ ಎನ್ನುವ ಆಕ್ಷೇಪಗಳನ್ನು ಹೊಂದಿದ್ದಳು. (126)
ಎಡ್ವರ್ಡ್ ಸ್ಟರ್ಡಿ ಮತ್ತು ಸ್ವಾಮಿಗಳ ನಡುವೆ ಸಾತ್ವಿಕ ಸಂನ್ಯಾಸಿಯ ಜೀವನ ಶೈಲಿ ಕುರಿತಾಗಿ ಭಾರಿ ಭಿನ್ನಾಭಿಪ್ರಾಯಗಳು ಬಂದಿದ್ದವು. ಇದರ ಮುಂದುವೆರೆದ ಭಾಗವಾಗಿ ತಿಕ್ಕಾಟಗಳು ನಡೆದಿದ್ದವು. ೧೮೯೯ ಜೂನ್’ನಲ್ಲಿ ಸ್ವಾಮಿಗಳು ಲಂಡನ್ ತಲುಪಿದಾಗ ಅವರನ್ನು ಎದುರುಗೊಳ್ಳಲು ಬರದೆ , ರಜಾ ಕಳೆಯಲು ಹೋಗಿ ಸ್ವಾಮಿಗಳಿಗೆ ನಿರ್ಲಕ್ಷ್ಯ ತೋರಿಸಿದ್ದ ಎಡ್ವರ್ಡ್ ಸ್ಟರ್ಡಿಯ ನಡವಳಿಕೆಯನ್ನು ಆಕ್ಷೇಪಿಸಿ ತನ್ನ ಗುರುವನ್ನು ಹೊಗಳಿ ಮಾರ್ಗರೆಟ್ ನೋಬಲ್ ಪತ್ರ ಬರೆದಿದ್ದಳು. ಅದಕ್ಕೆ ಆತ ಸುದೀರ್ಘವಾಗಿ ಉತ್ತರಿಸಿದ್ದನು. ಈ ಭಾಗವನ್ನು ಯಥಾವತ್ತಾಗಿ ಉದ್ದರಿಸಿ ಮಾರ್ಗರೆಟ್ ನೋಬಲ್ ಮಾರೋಲೆ ಬರೆದಿದ್ದಳು. ಈ ಪತ್ರದ ಮೊದಲ ಪುಟದ ಮೇಲೆ ‘ಸ್ಟರ್ಡಿ ಸಾವಿನ ನಂತರ ಪ್ರಕಟಿಸುವುದು’ ಎಂದು ಬರೆಯಲಾಗಿದ್ದಿತು. ಸ್ಟರ್ಡಿಯ ಮೂಲ ಪತ್ರ ದೊರೆತಿಲ್ಲವಾದರೂ ಮಾರ್ಗರೆಟ್ ನೋಬಲ್ ಉದ್ದರಿಸಿದ ಆತನ ಪತ್ರದ ಭಾಗ ಹೀಗಿದೆ. ‘ ಸ್ವಾಮಿಗಳು ಮತ್ತು ಅವರ ಕೆಲಸ ಕುರಿತಾಗಿ ನಮ್ಮಿಬ್ಬರ ನಡುವೆ ದೃಷ್ಟಿ ಭೇದವಿದೆ, ಸಂನ್ಯಾಸ ಜೀವನದ ಬಗ್ಗೆ ನಾನು ಸಾಕಷ್ಟು ಕೇಳಿರುವೆನಾದರೂ ಈ ದೇಶಕ್ಕೆ ಭೇಟಿ ನೀಡಿದ ಸಂನ್ಯಾಸಿಗಳಲ್ಲಿ ಯಾವುದೇ ಸಂನ್ಯಾಸವನ್ನು ನಾನು ಕಂಡಿಲ್ಲ. ನಿನ್ನ ಆದರ್ಶಗಳ ಮೇಲೆ ಪ್ರಭಾವ ಬೀರಲು ನಾನು ಇಚ್ಛಿಸುತ್ತಿಲ್ಲವಾದರೂ ಹಲವು ನಿಟ್ಟಿನಲ್ಲಿ ನಾನು ನಿರಾಶನಾಗಿದ್ದೇನಲ್ಲದೆ ಇದನ್ನು ಸ್ವಾಮಿ ವಿವೇಕಾನಂದನಿಗೆ ಹೇಗೆ ತಿಳಿಸಬೇಕೆಂದು ಚಿಂತಿಸುತ್ತಿದ್ದೇನೆ ’.
ಎಡ್ವರ್ಡ್ ಸ್ಟರ್ಡಿಯ ಈ ಪತ್ರಕ್ಕೆ ೨೪/೮/೧೮೯೯ ರಂದು ಮಾರ್ಗರೆಟ್ ನೋಬಲ್ ಉತ್ತರಿಸಿ ವಿವಾದಕ್ಕೆ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಳು. ‘‘ನಿನ್ನ ಆದರ್ಶಗಳ ಮೇಲೆ ನಾನು ಪ್ರಭಾವ ಬೀರಲು ಇಚ್ಛಿಸುವುದಿಲ್ಲ’ ಎನ್ನುವ ಹೇಳಿಕೆ ಎಂತಹ ತೀವ್ರ ನೋವನ್ನು ತಂದಿದೆ ಎನ್ನುವುದನ್ನು ನಾನು ಅಸ್ಪಷ್ಟವಾಗಿ ಮಾತ್ರ ಊಹಿಸಬಲ್ಲೆ. ನನಗೆ ಆಘಾತವಾಗಿದೆ. ಸ್ವಾಮಿಗಳ ಹೊರತಾಗಿ ಅವರ ಶಿಷ್ಯ ಅಥವಾ ಯಾರೊಬ್ಬರೂ ಈ ಟೀಕೆಗಳನ್ನು ಕೇಳಲು ಸರಿಯಾದ ವ್ಯಕ್ತಿಯಲ್ಲ ಎನಿಸಿತು. ಅದೇ ಸಮಯದಲ್ಲಿ ಹಿಂದಿನ ಜೀವನದಿಂದ ನಿನ್ನನ್ನು ಬೇರ್ಪಡಿಸಿರುವ ತೊಳಲಾಟದಿಂದ ಕುಗ್ಗಿರುವ ನಿನ್ನ ಬಗ್ಗೆ ನನಗೆ ಮರುಕವಿದೆ. ಹೊರಗಿನವರ ಕಣ್ಣಿಗೆ ಈ ಸಂಗತಿ ಹೇಗೆ ಕಾಣಬಹುದೆಂದು ನಿನಗೆ ತಿಳಿಸುತ್ತೇನೆ. ನಿನ್ನ ತೊಂದರೆಯನ್ನು ನಾನು ಕಷ್ಟವಾದ ಪ್ರಶ್ನೆಯ ರೂಪದಲ್ಲಿ ನನ್ನ ತಾಯಿಯ ಬಳಿಯಿಟ್ಟು ಶಿಷ್ಯನನ್ನು ಬಾಧಿಸುತ್ತಿರುವ ಈ ವಿಷಯದ ಬಗ್ಗೆ ಏನೆನಿಸುತ್ತದೆ ಎಂದು ಕೇಳಿದೆನು. ನಿನಗೆ ಗೊತ್ತಿರುವಂತೆ ಆಕೆಯ ಕ್ರೈಸ್ತ ಸಾಂಪ್ರದಾಯಿಕತೆಯ ಹಿನ್ನೆಲೆಯಲ್ಲಿ ಸ್ವಾಮಿ ನನ್ನ ಮೇಲೆ ಬೀರಿರುವ ಪ್ರಭಾವವನ್ನು ಸ್ವಾಮಿಯ ಅರ್ಹತೆಯ ಆಧಾರದ ಮೇಲೆ ನಿರ್ಧರಿಸುವಂತೆ ಮನವಿ ಮಾಡಿಕೊಂಡಿದ್ದೆನು. ಅದಕ್ಕೆ ಉತ್ತರವಾಗಿ ಆಕೆ ರೋಗಿಗೆ ರೋಗಿಯ ಅನುಕೂಲಗಳು ಅಗತ್ಯ. ಸ್ವಾಮಿಯ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ ಇರಬೇಕೆಂದು ತಿಳಿಸಿದಳು. ಸಣ್ಣ ವ್ಯಕ್ತಿಗಳ ಹೊಟ್ಟೆಕಿಚ್ಚಿಗೆ ಕಾರಣವಾದರೂ ಮಹಾನ್ ವ್ಯಕ್ತಿಗಳು ಎಲ್ಲ ವಿಷಯದಲ್ಲೂ ಮಹತ್ತರ ದಾರಿ ತುಳಿಯುತ್ತಾರೆ ಎಂದು ತಿಳಿಸಿದಳು. ಇತರ ಸಂನ್ಯಾಸಿಗಳ ಬಗ್ಗೆ ಮಾಡಿದ ಟೀಕೆಗಳು ಅವರ ಧಾರ್ಮಿಕ ಉತ್ಸಾಹಕ್ಕೆ ವಿರುದ್ಧವಾದವೆಂದು ಸ್ಪಷ್ಟಪಡಿಸಿದಳು. …… ಸಂನ್ಯಾಸ ಎಂದರೆ ಒಂದು ಬಗೆಯ ವೈರಾಗ್ಯ ಅದು ಪರಿಶುದ್ಧತೆಗೆ ಸಂಬಂಧಿಸಿದ್ದು. ಈ ವೈರಾಗ್ಯ ಸಮರ್ಪಕವಿಲ್ಲವೆಂದು ನಿನಗೆ ಎಂದಾದರೂ ಅನಿಸಿದೆಯೇ ?... ಸ್ವಾಮಿಗಳ ವೈರಾಗ್ಯದ ಬಗ್ಗೆ ಮಾತನಾಡುತ್ತಿರುವ ನೀನು ಭಾರತದ ಉದ್ದಗಲಕ್ಕೆ ಪೂಜಿಸಲ್ಪಡಬಹುದಾದ , ಭಾರಿ ಪ್ರತಿರೋಧದಲ್ಲಿಯೂ ತನ್ನ ದೇಶದ ಎಲ್ಲ ಶ್ರೀಮಂತರಿಗೆ ಬೆರಳು ತೋರುವ , ಪಾಶ್ಚಾತ್ಯ ವಿಲಾಸಿ ಜೀವನದ ಬಗ್ಗೆ ಭಾರತದ ಅತಿ ಶ್ರೀಮಂತರಿಗಿಂತ , ನನಗಿಂತ, ನಿನಗಿಂತ ಹೆಚ್ಚು ತಿಳಿವಳಿಕೆ ಮತ್ತು ಮೆಚ್ಚುಗೆಯಿದ್ದರೂ ಜನಸಾಮಾನ್ಯರಂತೆ ಸರಳ ಜೀವನ ನಡೆಸಲು ಬಯಸುತ್ತಿದ್ದಾರೆ ಎನ್ನುವುದನ್ನು ನೆನಪಿಡು. ನೀನು ಹಾಗಿರಬಲ್ಲೆಯಾ ? ಇಂತಹ ವೈರಾಗ್ಯ ಧನಾತ್ಮಕ , ಕ್ರಿಯಾತ್ಮಕ ಮತ್ತು ಅಸದಳ ! …. ನಿನ್ನ ಅಭಿಪ್ರಾಯಗಳನ್ನು ತಿಳಿಸಬೇಕಾದ ವ್ಯಕ್ತಿ ಸ್ವಾಮಿಗಳೇ… ಒಂದು ಗಳಿಗೆ ಆತನ ಮಹಾತ್ಮೆಯನ್ನು ನೆನೆ , ನಿನ್ನ ಟೀಕೆಗಳನ್ನು ನಂಬು , ನಿನ್ನೆಲ್ಲ ಅಪನಿಂದನೆಗಳನ್ನು ಆತನಿಗೆ ತಿಳಿಸು. ಎಂದು ಕಾಲು ಕೆರೆದಳು. (127)
ಎಡ್ವರ್ಡ್ ಸ್ಟರ್ಡಿ ತನ್ನ ಗುರುವಿನ ಪರವಾಗಿ ಮಾರ್ಗರೆಟ್ ನೋಬಲ್ ಎಸೆದ ಚೆಂಡನ್ನು ಸರಿಯಾಗಿಯೆ ಬಾರಿಸಿ ಹಿಂದಕ್ಕೆ ಕಳಿಸಿದ್ದನು. ‘ ವಿವೇಕಾನಂದನನ್ನು ಕುರಿತಾಗಲಿ ಅಥವಾ ಬೇರೆ ಇತರ ಸ್ವಾಮಿಗಳ ಚಾರಿತ್ರ್ಯದ ಬಗ್ಗೆಯಾಗಲಿ ಬರಹದ ಮೂಲಕ ಸುದೀರ್ಘ ಚರ್ಚೆಗಿಳಿಯುವುದು ನನ್ನ ಉದ್ದೇಶವಲ್ಲ , ಅದರಲ್ಲಿ ಆಸಕ್ತಿಯೂ ಇಲ್ಲ. ಪ್ರತಿಯೊಬ್ಬರು ಅವರದೇ ಆದ ಆದರ್ಶಗಳನ್ನು ರೂಪಿಸಿಕೊಂಡು ಅವುಗಳಿಗೆ ತಕ್ಕಂತೆ ಬದುಕಬೇಕು. ; ಅಂತಹ ಆದರ್ಶ ಹೊಂದದವರು ಸಹಜವಾಗಿ ದೂರ ಉಳಿಯುತ್ತಾರೆ. ನಾನು ಅಂತಹ ಜೀವನ ನಡೆಸಿಲ್ಲವಾದರೂ ವೈರಾಗ್ಯದ ಬಗ್ಗೆ ನನ್ನದೇ ಆದ ಆದರ್ಶಗಳನ್ನು ಕಲ್ಪಿಸಿಕೊಂಡಿದ್ದೇನೆ ಮಾತ್ರವಲ್ಲ ಸಂನ್ಯಾಸಿಗಳೆಂದು ಕರೆಸಿಕೊಳ್ಳುವ ಎಲ್ಲರೂ ಅದಕ್ಕೆ ಸನಿಹವೆನಿಸುವಂತೆ ಬದುಕಬೇಕೆಂದು ನಿರೀಕ್ಷಿಸುತ್ತೇನೆ. ತರ್ಕಾತೀತವಾದ ನಿನ್ನ ಉತ್ಸಾಹದಲ್ಲಿ ನಾನು ಭಾಗಿಯೆಂದು ನೀನು ಭಾವಿಸಿದ್ದರಿಂದ ನಾನು ನಿನಗೆ ಪತ್ರ ಬರೆದನು. ಅದು ನಿನಗೆ ಸರಿಯಿರಬಹುದು, ಆದರೆ ಯಾವ ದೃಷ್ಟಿಕೋನ ಹೊಂದಬೇಕು ಮತ್ತು ಯಾವುಗಳ ಆಧಾರಧ ಮೇಲೆ ತೀರ್ಮಾನಕ್ಕೆ ಬರಬೇಕೆನ್ನುವುದನ್ನು ನಾನೇ ನಿರ್ಧರಿಸಬೇಕು. ಸಾಮಾನ್ಯವಾಗಿ (ವಿಚಾರಾತೀತ) ನಿಷ್ಠೆ ಯಾವಾಗಲೂ ವ್ಯಕ್ತಿಪೂಜೆಯಾಗಿ ಕಾಣಿಸಿಕೊಳ್ಳುವುದೆಂದು , ಅದೇ ಸಮಯದಲ್ಲಿ ಸ್ವಂತ ವಿವೇಚನೆಯಿಂದ ವಿಭಿನ್ನ ತೀರ್ಮಾನಕ್ಕೆ ಬರುವವರನ್ನು ದುಷ್ಟರಂತೆ ಕಾಣಲಾಗುವುದು ಎನ್ನುವುದನ್ನು ಬಲ್ಲೆ. ನಾನು ಮಹಾತ್ಮನೆಂದು ಎಂದೂ ಹೇಳಿಕೊಂಡಿಲ್ಲ , ಕೆಳಗೆಸೆಯಬಹುದಾದ ಯಾವ ದೊಡ್ದಸ್ತಿಕತೆಯೂ ನನಗಿಲ್ಲ. ನೀನೇನಾದರೂ ಯಾವೊಬ್ಬ ದೇವ ಅಥವಾ ದೇವತೆಗಳನ್ನು ಆರಿಸಿಕೊಂಡಿದ್ದರೆ ಅವರಿಗೆ ನೀನು ನಿಷ್ಠವಾಗಿರಬೇಕಾದುದು ಸರಿ. ನನ್ನ ನಿಷ್ಟೆ ನನ್ನ ಆದರ್ಶಗಳಿಗೆ ಮಾತ್ರ ; ಬದಲಾಗುವ ವ್ಯಕ್ತಿತ್ವಗಳು ಅದಕ್ಕೆ ಹೊಂದಾಣಿಕೆಯಾಗುವುದಿಲ್ಲ. ಹಾಗಿದ್ದಾಗ ನಿಷ್ಠೆಯೆಲ್ಲಿ ? ನಾವಿಬ್ಬರೂ ಒಂದೇ ಆದರ್ಶ ಹೊಂದಿದ್ದೇವೆಂದು ತಪ್ಪಾಗಿ ಭಾವಿಸಿರುವ ನಿರ್ಧಾರಗಳಿಗೆ ನನ್ನ ಒಪ್ಪಿಗೆಯಿಲ್ಲ. ಕೆಲವು ವಿಚಾರಗಳಲ್ಲಿ ಸ್ವಾಮಿ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವುದನ್ನು ನಿನಗೆ ತಿಳಿಸಿದ್ದೇನೆ. ಇದನ್ನು ಕೊನೆಗೊಳಿಸುವ ಹೊಣೆ ಸ್ವಾಮಿಯ ಮೇಲಿದೆಯೇ ಹೊರತು ನನ್ನ ಅಥವಾ ನಿನ್ನ ಮೇಲಲ್ಲ ‘ (128)
೨೪/೮/೧೮೯೯ ರಂದು ಮಾರ್ಗರೆಟ್ ನೋಬಲ್ ತನ್ನ ಮತ್ತು ಎಡ್ವರ್ಡ್ ಸ್ಟರ್ಡಿಯ ನಡುವಿನ ಮೊದಲ ಪತ್ರ ವ್ಯವಹಾರವನ್ನು ಸಾರಾ ಬುಲ್ ಮತ್ತು ಮಿಸ್ ಜೊಸೆಫಿನ್ ಮೆಕ್ಲಿಯಾಡ್ ಗಮನಕ್ಕೆ ತಂದಳು. ರಾಮಕೃಷ್ಣರ ಸಂನ್ಯಾಸಿ ಶಿಷ್ಯರಲ್ಲಿ ವೈರಾಗ್ಯದ ಕೊರತೆಯಿದೆ ಎನ್ನುವ ಎಡ್ವರ್ಡ್ ಸ್ಟರ್ಡಿಯ ಟೀಕೆ ಸುಲಭವಾಗಿ ತಳ್ಳಿ ಹಾಕುವಂತಹುದಲ್ಲ ಎನ್ನುವುದು ಸ್ಪಷ್ಟವಾಗಿ ಸಾರಾ ಬುಲ್ ಕಳವಳಕ್ಕೆ ಕಾರಣವಾಗಿದ್ದಿತು. ಮಾರ್ಗರೆಟ್ ನೋಬಲ್’ನಂತೆ ಸ್ವಾಮಿಗಳಿಗೆ ಸಂಪೂರ್ಣ ಶರಣಾಗತಳಾಗದೆ ಸ್ವಂತ ವಿಚಾರ ಶಕ್ತಿಯನ್ನು ಉಳಿಸಿಕೊಂಡಿದ್ದ ಸಾರಾ ಬುಲ್ ವೈರಾಗ್ಯ ಮತ್ತು ಸಂಯಮದ ಜೀವನದ ಹೇಗಿರುತ್ತದೆಯೆನ್ನುವ ಸಾಮಾನ್ಯ ಮಾರ್ಗದರ್ಶಿ ಅಂಶಗಳನ್ನು ಸ್ವಾಮಿಗಳಿಂದ ಕೇಳಿ ತಿಳಿಯುವುದೇ ಸರಿ ಅಥವಾ ಆ ಬಗ್ಗೆ ಅವರ ಅರಿವಿಗೆ ಬಾರದಂತೆ ಏನು ಹೇಳುತ್ತಾರೆ ಎನ್ನುವುದನ್ನು ಅರಿತಿಕೋ ಎಂದು ಬರೆದಳಲ್ಲದೆ ಪಾಶ್ಚಾತ್ಯರ ಮುಂದೆ ರಾಮಕೃಷ್ಣರ ಸಂನ್ಯಾಸಿ ಶಿಷ್ಯರ ನಡವಳಿಕೆಯನ್ನು ಹೇಗೆ ಸಮರ್ಥಿಸಿಕೊಳ್ಳಬೇಕೆಂದು ಹಲವು ನಿಟ್ಟಿನಲ್ಲಿ ಚಿಂತಿಸಿದಳು. ಈ ಚಿಂತನೆಗಳಲ್ಲಿ ನೂರು ತಾಕಲಾಟ , ಪ್ರಶ್ನಾರ್ಥಕ ಚಿಹ್ನೆಗಳಿದ್ದವು. (129)
ಎಡ್ವರ್ಡ್ ಸ್ಟರ್ಡಿಯ ಪ್ರಶ್ನೆಯನ್ನು ನೇರವಾಗಿ ಎದುರಿಸಲಾಗದ ಸ್ವಾಮಿಗಳ ಭಕ್ತೆ ಮಾರಿ ಲೂಯಿ ಬರ್ಕೆ ಎಡ್ವರ್ಡ್ ಸ್ಟರ್ಡಿಯಂತಹ ಹುಲು ಮಾನವರಿಗೆ ರಾಮಕೃಷ್ಣ ಪರಮಹಂಸರ ಸಂನ್ಯಾಸಿ ಶಿಷ್ಯರ ಬಗ್ಗೆ ಹೇಗೆ ಗೊತ್ತಾಗಬೇಕು. ಅವರೆಲ್ಲರೂ ನಿತ್ಯಮುಕ್ತರಾಗಿದ್ದು ಅವರು ಯಾವುದೇ ಸಂಯಮ , ವೈರಾಗ್ಯ ನಡೆಸುವ ಆವಶ್ಯಕತೆಯೇ ಇರಲಿಲ್ಲ ಎಂದು ಸಮರ್ಥಿಸುತ್ತ ಒಂದು ತಾತ್ತ್ವಿಕ ಸಮಸ್ಯೆಗೆ ನಂಬಿಕೆ ಮತ್ತು ಬೌದ್ಧಿಕ ದಾಸ್ಯದ ಉತ್ತರ ನೀಡಿದ್ದಾಳೆ. (130) ಸ್ವಾಮಿಗಳು ರಿಡ್ಜ್’ಲೆ ಮ್ಯಾನೊರ್ ತಲುಪಿದ ನಂತರ ಜೊಸೆಫಿನ್ ಮೆಕ್ಲಿಯಾಡ್, ಮಾರ್ಗರೆಟ್ ನೋಬಲ್ ಮತ್ತು ಎಡ್ವರ್ಡ್ ಸ್ಟರ್ಡಿಯ ನಡುವೆ ನಡೆದ ಪತ್ರದ ನಕಲುಗಳನ್ನು ಸ್ವಾಮಿಗಳಿಗೆ ತೋರಿಸಿದಳು. ಇದಾದ ಮರುದಿನ – ೪/೯/೧೮೯೬- ‘ ಕಳೆದ ಆರು ತಿಂಗಳಿನಿಂದ ನನಗೆ ದುರಾದೃಷ್ಟವೆ ಗತಿಯಾಗಿದೆ. ನಾನು ಹೋದೆಲ್ಲೆಲ್ಲ ಅದು ನನ್ನ ಬೆನ್ನು ಹತ್ತುತ್ತಿದೆ. ಇಂಗ್ಲೆಂಡ್ ಕೆಲಸದ ವಿಷಯದಲ್ಲಿ ಸ್ಟರ್ಡಿಗೆ ಬಹಳ ಜುಗುಪ್ಸೆಯಾಗಿರುವಂತಿದೆ. ಆತನಿಗೆ ನಮ್ಮಲ್ಲಿ ಯಾವ ವೈರಾಗ್ಯವೂ ಕಾಣಬರುತ್ತಿಲ್ಲ ‘ ಇದು ಸ್ವಾಮಿಗಳು ತಮ್ಮ ಸಂಕಷ್ಟಗಳ ಪರಿಹಾರಕ್ಕೆ ತುದಿಗಾಲಲ್ಲಿರುತ್ತಿದ್ದ ಸಾರಾ ಬುಲ್’ಗೆ ಬರೆದ ಪತ್ರದ ತಿರುಳು.
ಇದೇ ದಿನ -೪/೯/೧೮೯೯-ಎಡ್ವರ್ಡ್ ಸ್ಟರ್ಡಿಗೆ ಬರೆದ ಪತ್ರದಲ್ಲಿ ‘… ಯಾವ ಅಧ್ಯಾತ್ಮಿಕ ವ್ಯಕ್ತಿಯೂ ಖಾಯಿಲೆ ಬೀಳಬಾರದು ಎನ್ನುವುದು ಶ್ರೀಮತಿ ಜಾನ್ಸನ್ ಅಭಿಪ್ರಾಯ. ಅವರಿಗೆ ನಾನು ಧೂಮಪಾನ ಮಾಡುವುದು ಪಾಪಕರವೆಂದು ಕಾಣಿಸುತ್ತಿದೆ. ಮಿಸ್ ಮುಲ್ಲರ್ ನನ್ನನ್ನು ಬಿಟ್ಟು ಹೋಗಲು ಈ ಖಾಯಿಲೆಯೇ ಕಾರಣ. ಅವರು ಹೇಳಿದುದೆಲ್ಲಾ ಸಂಪೂರ್ಣವಾಗಿ ನಿಜವಿರಬಹುದು. ಆದರೆ ಏನೇ ಆಗಲಿ ನಾನು ಏನಾಗಿರುವೆನೋ ಅದೇ ಆಗಿರುವೆನು. ಈ ಕುಂದುಗಳ ಜೊತೆಗೆ ನಾನು ಪಾಶ್ಚಾತ್ಯರೊಡನೆ ಊಟ ಮಾಡಿದ್ದರಿಂದ ಒಂದು ಖಾಸಗಿ ದೇವಾಲಯದ ಮಾಲಿಕರು ನನ್ನನ್ನು ಹೊರಕ್ಕೆ ಅಟ್ಟಿದರು. ಯಾರು ಹೇಗೆ ಇಷ್ಟಪಡುವರೋ ಹಾಗೆಲ್ಲ ಹೊಂದಿಕೊಳ್ಳುವಂತೆ ನಾನು ಬದಲಾಗುವಂತಿದ್ದರೆ ಚೆನ್ನಾಗಿತ್ತು. ಆದರೆ ದುರದೃಷ್ಟವಶಾತ್ ಪ್ರತಿಯೊಬ್ಬರಿಗೂ ಮೆಚ್ಚುಗೆಯಾಗುವಂತೆ ನಡೆದುಕೊಳ್ಳುವ ವ್ಯಕ್ತಿಯನ್ನು ನಾನು ಕಾಣೆ. …… ಭರತಖಂಡದಲ್ಲಿ ನಾನು ಹಡಗಿನಿಂದ ಇಳಿದ ಗಳಿಗೆಯೇ ನನ್ನ ತಲೆ ಬೋಳಿಸಿ , ಕೌಪೀನ ಧರಿಸುವಂತೆ ಮಾಡಿದರು. ಅದರ ಪರಿಣಾಮ ನಾನು ಡಯಾಬಿಟಸ್ ಮುಂತಾದವುಗಳಿಂದ ನರಳುವಂತಾಯಿತು. ಶಾರದಾನಂದನು ಏನು ಮಾಡಿದರೂ ತನ್ನ ಒಳ ಉಡುಪುಗಳನ್ನು ಉಡುವುದನ್ನು ಬಿಡಲಿಲ್ಲ. ಅದು ಆತನ ಜೀವವನ್ನು ಉಳಿಸಿತು. ಸ್ವಲ್ಪ ಸಂಧಿವಾತ ರೋಗ ಮತ್ತು ನಮ್ಮ ಜನರಿಂದ ಹೆಚ್ಚು ಟೀಕೆಗಳನ್ನು ಅವನು ಅನುಭವಿಸಬೇಕಾಯಿತು. …..ನಾನು ಜನರಿಂದ ಪಡೆಯುತ್ತಿರುವ ಪ್ರತಿಯೊಂದು ದ್ವೇಷದ ಅಲೆಗೂ ದೋಷವೆಲ್ಲಾ ನನ್ನದೇ , ಕೇವಲ ನನ್ನದೇ ಎನ್ನುವುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ. ಇದಲ್ಲದೆ ಬೇರೆ ಇರಲು ಸಾಧ್ಯವಿಲ್ಲ. ಮತ್ತೊಮ್ಮೆ ನನ್ನನ್ನು ಅಂತರ್ಮುಖಿಯನ್ನಾಗಿ ಮಾಡಿದ ನಿನಗೂ , ಶ್ರೀಮತಿ ಜಾನ್ಸನ್’ಗೂ ಕೃತಜ್ಞತೆಗಳು..….’ ಎಂದು ತಮ್ಮನ್ನು ತಾವೇ ವಿಮರ್ಶಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದರು.
ಕಾವಿಯುಟ್ಟು , ತಲೆ ಬೋಳಿಸಿ , ಅಲೆಮಾರಿಯಾಗಿ ತಿರಿದು ಹೊಟ್ಟೆ ಹೊರೆಯುವ ಉನ್ನತ ಜೀವನಕ್ಕಾಗಿ ಹಾತೊರೆಯುತ್ತಿದ್ದೇನೆ ಎಂದು ಹೇಳುತ್ತಿದ್ದ ಸ್ವಾಮಿಗಳು ಅದರಿಂದಲೇ ಡಯಾಬಿಟಿಸ್ ಬಂದಿತೆಂದು , ತಮಗೆ ಕಾವಿ ಬಟ್ಟೆ ಕೊಟ್ಟವರನ್ನು ದೂರತೊಡಗಿದ್ದಾರೆ. ಅಸ್ತಮಾ , ಡಯಾಬಿಟಿಸ್ ಮತ್ತು ಹೃದಯದ ಖಾಯಿಲೆಗಳಿಗ ಧೂಮಪಾನದ ಚಟ ಮಾರಕ. ಮನಸ್ಸಿನ ನಿಯಂತ್ರಣ ಸಾಧಿಸುವ ರಾಜಯೋಗವನ್ನು ಎದೆಯುಬ್ಬಿಸಿ , ದನಿಯೆತ್ತರಿಸಿ ಬೋಧಿಸುತ್ತಿದ್ದ ಸ್ವಾಮಿಗಳಿಗೆ ಧೂಮಪಾನ ಚಟವನ್ನು ಬಿಡುವಷ್ಟು , ಮಾಂಸಾಹಾರವನ್ನು ದೂರವಿರಿಸುವಷ್ಟು ಮನಸ್ಸಿನ ನಿಯಂತ್ರಣವಿರಲಿಲ್ಲ. ಅದರ ಬದಲು ಅವುಗಳಿಂದ ದೂರ ಇರುವಂತೆ ಹೇಳುತ್ತಿದ್ದವರನ್ನು ದೂರಿದ್ದರು. ಈ ವಿಷಯವೇ ಅವರನ್ನು ಅಂತರ್ಮುಖಿಯನ್ನಾಗಿಸಿದ್ದಿತು. ಸ್ವಾಮಿಗಳು ಧೂಮಪಾನ ಮಾಡುವ ಭೌತಿಕ ಕ್ರಿಯೆಗಿಂತ ಆ ಚಟದ ಮೇಲೆ ಮಾನಸಿಕ ನಿಯಂತ್ರಣ ಸಾಧಿಸಲು ಆಗಿಲ್ಲವಲ್ಲ ಎನ್ನುವ ಅಸಮಾಧಾನ ಅವರ ಅಭಿಮಾನಿಗಳಲ್ಲಿ ಕೆಲವರಿಗದ್ದಿತು. ಅದು ಸ್ವಾಮಿಗಳಿಗೆ ಅರ್ಥವಾಗಿರಲಿಲ್ಲ. ಸಾರಾ ಬುಲ್ ಮತ್ತು ನಿವೇದಿತಾರಿಗೆ ಜಗತ್ತಿನ ಅಧ್ಯಾತ್ಮ ಪ್ರವೃತ್ತಿಯನ್ನು ಎಚ್ಚರಿಸಲು ತಮ್ಮಿಂದ ಆಗುತ್ತಿಲ್ಲ ಎಂದು ತೋಡಿಕೊಂಡಿದ್ದರು.
ಎಡ್ವರ್ಡ್ ಸ್ಟರ್ಡಿ ವೈರಾಗ್ಯ ಕುರಿತು ಸ್ವಾಮಿಗಳೇ ಉತ್ತರಿಸಬೇಕೆಂದು ತಿಳಿಸಿದ್ದರಿಂದ ಅತನಿಗೆ ಉತ್ತರಿಸಲೇ ಬೇಕಾದ ಅನಿವಾರ್ಯತೆ ಎದುರಾಗಿ ೧೪/೯/೧೮೯೯ರಂದು ಸುದೀರ್ಘ ಪತ್ರ ಬರೆದರು. ಈ ಪತ್ರವನ್ನು ಕತ್ತರಿಸಿ , ವಿರೂಪಗೊಳಿಸಿ ಕನ್ನಡದ ಕೃತಿಶ್ರೇಣಿಗಳಲ್ಲಿ ಪ್ರಕಟಿಸಲಾಗಿದೆ. ಸ್ವಾಮಿಗಳು ಈ ಪತ್ರದಲ್ಲಿ ತಮ್ಮ ವೈಯಕ್ತಿಕ ಖರ್ಚಿಗೆ ಸೇವಿಯರ್ಸ್ , ಖೇತ್ರಿ ರಾಜ ಅಜಿತ್ ಸಿಂಗ್ ಹಣ ಒದಗಿಸುತ್ತಿದ್ದು ಇಂಗ್ಲಿಷ್ ಜನರಿಂದ ಬಂದ ದೇಣಿಗೆಯಲ್ಲಿ ತಮ್ಮ ಸ್ವಂತ ಖರ್ಚಿಗೆ ಒಂದು ಪೈಸೆಯನ್ನೂ ಬಳಸಿಕೊಂಡಿಲ್ಲ ಎಂದು ತಮ್ಮನು ಸಮರ್ಥಿಸಿಕೊಂಡಿದ್ದರು. ಇದರೊಂದಿಗೆ ಎಡ್ವರ್ಡ್ ಸ್ಟರ್ಡಿ , ಶ್ರೀಮತಿ ಅಷ್’ಟನ್ ಜಾನ್ಸನ್ ಮತ್ತು ಹೆನ್ರಿಯೆಟ್ಟಾ ಮುಲ್ಲರ್ ಒಗ್ಗಟ್ಟಾಗಿ ತಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ಎನ್ನುವ ಅರ್ಥ ಬರುವಂತೆ ಉತ್ತರ ನೀಡಿದ್ದರು. ಯಾವ ಅಂಜಿಕೆ ಅಳುಕುಗಳಿಲ್ಲದೆ ೧/೧೦/೧೮೯೯ ರಂದು ಎಡ್ವರ್ಡ್ ಸ್ಟರ್ಡಿ ಸ್ವಾಮಿಗಳಿಗೆ ನೇರವಾಗಿ ಉತ್ತರಿಸಿದ್ದನು‘ ‘……ಈ ದೇಶದಲ್ಲಿ ನಾನು ಸಂನ್ಯಾಸದ ಬಗ್ಗೆ ಬೇಕಾದಷ್ಟು ಕೇಳಿದ್ದೇನೆ. ಆದರೆ ಅದನ್ನು ಪ್ರತಿಪಾದಿಸುವವರು ಕಿಂಚಿತ್ತೂ ಅನುಸರಿಸದಿರುವುದನ್ನು ಬಲ್ಲೆ. ಈ ವಿಚಾರವನ್ನು ಎಳೆದು ಮುಂದುವರೆಸಲು ಬಯಸುವುದಿಲ್ಲ…ಒಬ್ಬ ಸಂನ್ಯಾಸಿಯನ್ನು ಸಲಹಲು ಆಗುತ್ತಿರುವ ಖರ್ಚು ಸಂನ್ಯಾಸದ ಯಾವ ಸೋಗನ್ನೂ ಹಾಕದ ಹಲವು ಕಾರ್ಮಿಕರನ್ನು , ವಿಶ್ವವಿದ್ಯಾಲಯದ ಒಬ್ಬ ಯುವ ವಿದ್ಯಾರ್ಥಿಯನ್ನು ಅಥವಾ ಬಡತನ ತುಂಬಿರುವ ಜಾಗಗಳಲ್ಲಿರುವ ವೈದ್ಯನನ್ನು ಸಾಕುವುದಕ್ಕಿಂತ ಹಲವು ಪಟ್ಟು ಹೆಚ್ಚಿನದಾಗಿದೆ…..ಕ್ಷುಲ್ಲಕ ವಿಷಯಗಳು , ಬಡಾಯಿ ಕೊಚ್ಚುವುದು , ಉತ್ಪ್ರೇಕ್ಷೆ ಒತ್ತಟ್ಟಿಗಿರಲಿ, ನಾನು ಪರಿಪೂರ್ಣತೆಯ ಪ್ರತಿಪಾದಕನೆಂದಾಗಲಿ ಅಥವಾ ಸಾಧಕನೆಂದಾಗಲಿ ಹೇಳಿಕೊಂಡಿಲ್ಲ…..ನಿನ್ನನ್ನು ನಮ್ಮಂತೆಯೇ ಸೋಲು ಗೆಲುವುಗಳಿರುವ ಆದರೆ ಸ್ವಲ್ಪ ಹೆಚ್ಚು ಪ್ರತಿಭೆ, ಒಳನೋಟ , ಕಡಿಮೆ ಸಂಶಯಗಳಿರುವ ಒಬ್ಬ ಮನುಷ್ಯನಂತೆ ಪರಿಗಣಿಸುತ್ತೇನೆಯೇ ಹೊರತು ಕೆಲ ಭಕ್ತ ಹೆಂಗಸರು ಭಾವಿಸುವಂತೆ ನಡೆದಾಡುವ ದೇವರೆಂದಲ್ಲ… ನೀನು ದೇಹವನ್ನು ಕುರಿತಾಗಿ ಏನು ಬೋಧಿಸಿರುವೆಯೆಂದು ಬಲ್ಲೆ. ‘ನಾನು ಹೇಳಿದಂತೆ ಮಾಡು. ನಾನು ಮಾಡುವಂತಲ್ಲ’ ಎನ್ನುವುದು ನನಗೆ ಗೊತ್ತು,,,, ನಿರರ್ಗಳ ಮಾತಿನಿಂದ ಪ್ರಚೋದಿಸಲ್ಪಟ್ಟವರು ಅದರ ಪ್ರಭಾವ ಕುಗ್ಗಿದ ಮೇಲೆ ಮಾತು ಮತ್ತು ಅನುಷ್ಠಾನದಲ್ಲಿರುವ ವ್ಯತ್ಯಾಸವನ್ನು ಕಂಡಾಗ ಷಾಂಪೆನ್ ನಿಶೆಯಿಳಿದ ನಂತರ ಮತ್ತೊಮ್ಮೆ ಖಿನ್ನತೆಗೆ ಒಳಗಾಗುವವರ ಸ್ಥಿತಿ ತಲುಪುತ್ತಾರೆ… ಸಂನ್ಯಾಸಿಗಳನ್ನು ಇಲ್ಲಿಗೆ ಕರೆಸಿಕೊಂಡ ನಂತರ ಅವರಲ್ಲಿ ಸಂನ್ಯಾಸ, ತೃಪ್ತಿ , ಮನಸ್ಥೈರ್ಯ , ಪರಿಸರದ ಸರಳತೆಗಳು ಮಾಯವಾಗುತ್ತವೆ. ..ಅವರು ಬದುಕಲು ಗೋಳದ ಇನ್ನೊಂದು ತುದಿಯಲ್ಲಿರುವ ಊಟ , ಸೇದಲು ಷಿಲ್ಲಿಂಗ್ ಬೆಲೆಯ ಸಿಗಾರ್ , ಅತ್ಯುತ್ತಮ ಬಟ್ಟೆ , ಹಣ್ಣು ಬಯಸಿದರೆ ಆವರು ಯಾರು ? ಏನನ್ನು ಬೋಧಿಸುತ್ತಿದ್ದಾರೆ? .....ನುಡಿದಂತೆ ನಡೆಯುವಂತಿದ್ದರೆ ಮಾತ್ರ ಇತರರಿಗೆ ಬೋಧಿಸಬಹುದು……. ಫ್ರಾನ್ಸಿಸ್ ಲೆಗೆಟ್ ಸೇರಿದಂತೆ ರಿಡ್ಜ್’ಲಿ ಮ್ಯಾನೊರ್’ನಲ್ಲಿರುವ ಎಲ್ಲರೂ ಈ ಪತ್ರವನ್ನು ನೋಡಬೇಕೆಂದು ನಾನು ಬಯಸುತ್ತೇನೆ , ಅದಾಗದಿದ್ದರೆ ನನ್ನಂತೆ ಪತ್ರವನ್ನು ಯಾರಿಗೂ ತೋರಿಸದೆ ನೀನೆ ಇಟ್ಟುಕೋ…..’
ಸ್ವಾಮಿಗಳು ಈ ಪತ್ರವನ್ನು ರಿಡ್ಜ್’ಲಿ ಮ್ಯಾನೊರನಲ್ಲಿದ್ದ ತಮ್ಮ ಅಭಿಮಾನಿ ಹೆಂಗಸರಿಗೆ ತೋರಿಸಿದ್ದರೋ ಇಲ್ಲವೋ ಗೊತ್ತಿಲ್ಲವಾದರೂ ಎಡ್ವರ್ಡ್ ಸ್ಟರ್ಡಿ ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡುವುದು ಸುಲಭವಿರಲಿಲ್ಲ. ಅಕ್ಟೋಬರ್’ನಲ್ಲಿ ನ್ಯೂಯಾರ್ಕ್’ನ ಆಲ್’ಸ್ಟರ್ ಕೌಂಟಿಯಿಂದ ಸ್ವಾಮಿಗಳು ತಮ್ಮ ದೌರ್ಬಲ್ಯಗಳನ್ನು ಒಪ್ಪಿಕೊಂಡು ಎಡ್ವರ್ಡ್ ಸ್ಟರ್ಡಿಗೆ ಬರೆದ ಪತ್ರದಲ್ಲಿ ‘ ನಿನ್ನ ಟೀಕೆಯಲ್ಲಿ ಹೆಚ್ಚಿನದು ನ್ಯಾಯಯುತವಾಗಿದೆ , ಸತ್ಯವಾಗಿಯೂ ಇರಬಹುದು….ನಿನಗೆ ಕೆಲವರನ್ನು ಕಂಡರಾಗದು. ಅದಕ್ಕೆ ನಿನಗೆ ನಾನೊಂದು ನೆಪ ಮಾತ್ರ…ನಾನು ಹೇಗಿರುವೆನೋ ಹಾಗೆ ಕಾಣಿಸುವೆ , ಬೇರೆ ಕಾಣುವಂತೆ ನಟಿಸುವುದಿಲ್ಲ. ಅದು ಸಾಧ್ಯವೂ ಇಲ್ಲ. ಯಾರಾದರೂ ನನ್ನೊಡನೆ ಒಂದು ಗಂಟೆ ಇದ್ದರೆ ನನ್ನ ಧೂಮಪಾನ , ಮುಂಗೋಪಗಳ ಹಿಂದಿರುವ ವ್ಯಕ್ತಿಯನ್ನು ಸುಲಭವಾಗಿ ಕಂಡುಹಿಡಿಯಬಹುದು….’ ಎಂದು ಸ್ವವಿಮರ್ಶೆ ಮಾಡಿಕೊಂಡು ವೈರಾಗ್ಯ , ಸಂನ್ಯಾಸ ಜೀವನ , ನುಡಿ-ನಡೆ ಮುಂತಾದ ವಿಷಯಗಳು ಹೆಚ್ಚು ಚರ್ಚೆಗೆ ಬರದಂತೆ ನೋಡಿಕೊಳ್ಳಲು ಯತ್ನಿಸಿ ಬಿಳಿಯ ಬಾವುಟ ಹಾರಿಸಿದ್ದರು. ರಣೋತ್ಸಾಹದಲ್ಲಿದ್ದ ಎಡ್ವರ್ಡ್ ಸ್ಟರ್ಡಿಗೆ ಇದು ಬೇಕಾಗಿರಲಿಲ್ಲ. ೩/೧೧/೧೮೯೯ ರಂದು ‘ ..ನನಗೆ ಯಾರ ಮೇಲೂ ಅಸಮಾಧಾನನವಿಲ್ಲ… ನಿನ್ನ ದಾರಿಯಲ್ಲಿ ನಿನ್ನ ಸಂದೇಶವನ್ನು ಪಾಶ್ಚಾತ್ಯ ಜಗತ್ತಿಗೆ ಕೊಡಲು ನೀನು ಸ್ವತಂತ್ರ…. ನಿನ್ನ ನಡವಳಿಕೆಯನ್ನು ಸಮರ್ಥಿಸಲು ನಾನು ಹೆಣಗಿದೆ,. ಪಾಶ್ಚಾತ್ಯರ ವೈಭೋಗದ ಅತಿರೇಕದ ಪ್ರದರ್ಶನ ಮಾಡುತ್ತಾರಾದರೂ ಅವರು ಸರಳತೆಗೆ , ಸಹಜ ಸಾತ್ವಿಕತೆಗೆ ಅಪಾರ ಗೌರವ ಕೊಡುತ್ತಾರೆ. ಇವನ್ನು ಬೋಧಿಸುವರಲ್ಲಿ ಅವುಗಳನ್ನು ಬಯಸುತ್ತಾರೆ. ತಮ್ಮ ವೈಭೋಗವನ್ನು ಅವರು ನಿನ್ನ ಮುಂದಿರಿಸಿದಾಗ ಅವುಗಳನ್ನು ನಿರ್ಲಕ್ಷಿಸದ ನಿನ್ನ ಬಗ್ಗೆ ಅಂತರಂಗದಲ್ಲಿ ಕೊರಗುತ್ತಾರೆ. ಸ್ವಾತಂತ್ರ ಒಳ್ಳೆಯದು, ಅದರಂತೆ ನುಡಿ-ನಡೆಗಳ ನಡುವಿನ ಸಮನ್ವಯ. …ಉಡುಗೊರೆ ಕೊಡುವಂತಿದ್ದರೆ ಕಳ್ಳನಂತೆ ಬರಬೇಡ. ಹಾಗಲ್ಲದಿದ್ದರೆ ಉಪಚಾರದ ಬದಲು ಒದೆ ಸ್ವೀಕರಿಸಲು ಸಿದ್ಧನಿರು…..ಸಂನ್ಯಾಸಿಯಾಗಿ ಬಂದು ಜನ ಸಾಮಾನ್ಯರಿಗೆ ಅನಾಸಕ್ತಿ ಬೋಧಿಸುತ್ತಿರುವ ನೀನು ಅದೇ ವೇಳೆಗೆ ಆರಾಮ ಮತ್ತು ಐಷಾರಾಮಿ ಜೀವನ ಸಾಗಿಸುವಂತೆ ಕಾಣುತ್ತೀಯಾ. ಒಂದು ವೇಳೆ ಇವೆಲ್ಲವುಗಳಿಂದ ಮುಕ್ತನಾಗಿರುವೆ ಎಂದಾದರೂ ಏನು ಒಳಿತನ್ನು ಮಾಡಬಲ್ಲೆ ? ‘ ಎಂದು ಪ್ರಶ್ನಿಸಿದನು.
ಎಡ್ವರ್ಡ್ ಸ್ಟರ್ಡಿಯ ಈ ಪತ್ರ ಸ್ವಾಮಿಗಳ ಬುಡವನ್ನೇ ಅಲುಗಿಸಿದ್ದಿತು. ಆತ ಎತ್ತಿದ್ದ ಪ್ರಶ್ನೆಗಳನ್ನು ೬ ವರ್ಷಗಳ ಹಿಂದೆ ಇತರರೂ ಎತ್ತಿದ್ದರು- ಅದರಲ್ಲಿ ಭಾರತೀಯರೂ , ಹಿಂದೂಗಳು ಸೇರಿದ್ದರು. ಸ್ವಾಮಿಗಳಿಗೆ ಎಡ್ವರ್ಡ್ ಸ್ಟರ್ಡಿ ಮೇಲೆ ದಾಳಿ ಮಾಡುವದರ ಹೊರತಾಗಿ ಇನ್ನು ಬೇರೆ ಯಾವುದೇ ದಾರಿಯೇ ಉಳಿದಿರಲಿಲ್ಲ. ೧೮೯೮ ನವೆಂಬರ್’ನಲ್ಲಿ ‘ನಾನು ಮಾಡಿದ್ದು ಸರಿಯೆಂದು ಸಾಧಿಸಲು ಈ ಪತ್ರ ಬರೆಯುತ್ತಿಲ್ಲ.ನಾನು ಮಾಡಿರುವ ಪಾಪಗಳನ್ನು ಮಾತುಗಳಿಂದ ಅಳಿಸಲಾಗದು. ನಾನು ಮಾಡಿರುವುದರಲ್ಲಿ ಏನಾದರೂ ಒಳ್ಳೆಯದಿದ್ದರೆ ಯಾವ ಟೀಕೆಯೂ ಅದನ್ನು ತಡೆಯಲಾರದು...ತ್ಯಾಗವನ್ನು ಬೋಧಿಸುತ್ತ ಭೋಗ ಅನುಭವಿಸುತ್ತಿರುವ ಕಪಟಿ ನಾನೆಂದು , ನನ್ನ ಸುಖ ಭೋಗಗಳ ಬಯಕೆಯೇ ಇಂಗ್ಲೆಂಡಿನ ನನ್ನ ಕೆಲಸಕ್ಕೆ ಅಡ್ಡಿಯಾಯಿತೆಂದು ಹೇಳಲಾಗುತ್ತಿದೆ……..ರೀಡಿಂಗಿನಲ್ಲಿದ್ದ ನಿನ್ನ ಸ್ಥಳ ನನಗೆ ನೆನಪಿಗೆ ಬರುವುದು. ಅಲ್ಲಿ ನನಗೆ ಬೇಯಿಸಿದ ಕೋಸು , ಆಲೂಗಡ್ಡೆ , ಅನ್ನ ಮತ್ತು ಸೊಪ್ಪನ್ನು ದಿನಕ್ಕೆ ಮೂರು ಬಾರಿ ಬಡಿಸುತ್ತಿದ್ದರು. ನಿನ್ನ ಹೆಂಡತಿಯ ನಿರಂತರ ಬೈಗುಳವೇ ಅದಕ್ಕೆ ಹಾಕಿದ ಮಸಾಲೆ…. ನಿನ್ನ ಊಟ ಅಥವಾ ನಿನ್ನ ಹೆಂಡತಿಯ ಸತತ ನಿಂದೆಗಳಿಗೆ ನಾನೆಂದೂ ದೂರಿಲ್ಲ. ನಾನು ನಿನ್ನ ಮನೆಯಲ್ಲಿರುವ ತನಕ ಕಳ್ಳನಂತೆ ನಡುಗುತ್ತ ಪ್ರತಿದಿನವೂ ನಿನಗಾಗಿ ದುಡಿಯುತ್ತಿದ್ದೆ. …. ಅನಂತರ ಸೇಂಟ್ ಜಾರ್ಜ್ ರಸ್ತೆಯಲ್ಲಿದ್ದ ನಿನ್ನ ಮನೆಯ ನೆನಪು ಬರುತ್ತದೆ….. ಅಲ್ಲಿಯೂ ನನಗೆ ಕುಡಿಯಲು , ಮಲಗಲು ಯಾವ ಸುಖ ಭೋಗಗಳು ಇರಲಿಲ್ಲ ….ಮಿಸ್ ಮುಲ್ಲರ್ ಸ್ಥಳದಲ್ಲಿ ಹಣ್ಣು , ಬೀಜಗಳ ಮೇಲೆ ಬದುಕಿದ್ದೆ. ನನಗೆ ಲಂಡನ್’ನ ಆ ಕತ್ತಲೆ ಕೋಣೆ ನೆನಪಿಗೆ ಬರುತ್ತದೆ. ಅಲ್ಲಿ ನಾನು ಹಗಲಿರುಳು ಕೆಲಸ ಮಾಡುತ್ತಿದ್ದೆ. ಅನೇಕ ವೇಳೆ ರಾತ್ರಿ ಬರೀ ಬ್ರೆಡ್ ಮತ್ತು ಬೆಣ್ಣೆಯೇ ಗತಿಯಾಗಿದ್ದವು……ಶ್ರೀಮತಿ ಜಾನ್’ಸನ್ ನನಗೆ ಒಪ್ಪತ್ತು ಊಟ ಹಾಕಿ , ರಾತ್ರಿ ಮಲಗಲು ನೆಲೆ ಕೊಟ್ಟು ಮರುದಿನ ಈ ಕರಿಯ ಬಹಳ ಕೊಳಕನೆಂದು , ಮನೆಯಲ್ಲಿ ಎಲ್ಲ ಕಡೆ ಧೂಮಪಾನ ಮಾಡುವನೆಂದು ಬೈಯುತ್ತಿದ್ದಳು……ನಿಮ್ಮಲ್ಲಿ ಯಾರು ನನಗೆ ಕೋಟನ್ನು ಕೊಟ್ಟರು ? ಯಾರು ಒಂದು ಚುಟ್ಟವನ್ನು ಕೊಟ್ಟರು ? ಮೀನು , ಮಾಂಸದ ಚೂರನ್ನು ನಿಮ್ಮಲ್ಲಿ ನನಗೆ ಯಾರು ಕೊಟ್ಟರು ? ಯಾರು ಅನ್ನ ಕೊಟ್ಟರು….ಕ್ಯಾಪ್ಟನ್ ಮತ್ತು ಶ್ರೀಮತಿ ಸೇವಿಯರ್ಸ್ ನಾನು ಚಳಿಯಿಂದ ನಡುಗುತ್ತಿರುವಾಗ ಬಟ್ಟೆ ಕೊಟ್ಟರು..ಅವರು ನನ್ನನ್ನು ಸುಖ , ಭೋಗಗಳಿಗಾಗಿ ಟೀಕಿಸಲಿಲ್ಲ……ಅವರು ( ಶ್ರೀಮತಿ ಸಾರಾ ಬುಲ್ , ಮಿಸ್ ಜೊಸೆಫಿನ್ ಮೆಕ್ಲಿಯಾಡ್, ಶ್ರೀಮತಿ ಮತ್ತು ಶ್ರೀ ಫ್ರಾನ್ಸಿಸ್ ಲೆಗೆಟ್) ಸುಖ , ಭೋಗಗಳ ವಿಷಯದಲ್ಲಿ ನನ್ನಲ್ಲಿ ತಪ್ಪನ್ನು ಕಾಣಲಿಲ್ಲ. ನಾನು ಚೆನ್ನಾಗಿ ತಿಂದು ಡಾಲರುಗಳಷ್ಟು ಬೆಲೆಬಾಳುವ ಚುಟ್ಟ ಸೇದಿದರೆ ಸಂತೋಷ ಪಡುವರು. ಈ ಲೆಗ್ಗೆಟ್ಸ್ ಮತ್ತು ಬುಲ್ಸ್ ಅವರ ರೊಟ್ಟಿಯನ್ನೇ ನಾನು ತಿಂದದ್ದು , ಅವರ ಹಣದಿಂದಲೇ ಹೊಗೆಸೊಪ್ಪ್ಪು ಕೊಂಡದ್ದು , ಹಲವು ಸಲ ಮನೆ ಬಾಡಿಗೆ ಕಟ್ಟಿದ್ದು … ನಾನು ಎಲ್ಲಿಯಾದರೂ ದೇಹ ದಂಡನೆಯನ್ನು ಬೋಧಿಸಿದ್ದರೆ ತೋರಿಸು, ಶಾಸ್ತ್ರಗಳು ವಿಧಿಸಿದ ಸಂನ್ಯಾಸಿಯ ನಿಯಮಗಳನ್ನು ನಾವು ಮೀರಿದ್ದೇವೆಂದು ತೋರಿಸುವ ಧೈರ್ಯ ಯಾರಿಗಾದರೂ ಇದ್ದರೆ ಅಂತಹವರು ಮುಂದೆ ಬರಲಿ .’ ಸ್ವಾಮಿಗಳು ನೀಡಿದ ಈ ಉತ್ತರ ಸೈದ್ಧಾಂತಿಕವಾಗಿರಲಿಲ್ಲ ಎನ್ನುವದು ಸ್ಪಷ್ಟ.
ಶ್ರೀಮತಿ ಆಸ್ಟನ್ ಜಾನ್’ಸನ್ ಸ್ವಾಮಿಗಳ ನಡವಳಿಕೆಯನ್ನು ಟೀಕಿಸುವುದರಲ್ಲಿ ಎಡ್ವರ್ಡ್ ಸ್ಟರ್ಡಿಯೊಂದಿಗೆ ಸೇರಿರುವಳೆಂದು ಮಾರ್ಗರೆಟ್ ನೋಬಲ್ ಮತ್ತು ಸ್ವಾಮಿಗಳಿಬ್ಬರೂ ಭಾವಿಸಿದ್ದರು. ೨/೧೧/೧೮೯೯ ರಂದು ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿ ಶ್ರೀಮತಿ ಆಸ್ಟನ್ ಜಾನ್’ಸನ್ ಸಾರಾ ಬುಲ್’ಗೆ ಪತ್ರ ಬರೆದಳು . ಅದರಲ್ಲಿನ ಆಯ್ದ ಭಾಗ ಹೀಗಿದೆ ‘…….ನಡೆಯುವ ಮಗು ಎಡವಿ ಬಿದ್ದು ತಾನೇ ಗಾಯಗೊಂಡಾಗ ಹೇಗೆ ಖಂಡಿಸುವುದಿಲ್ಲವೋ , ಟೀಕಿಸುವುದಿಲ್ಲವೋ ಅದರಂತೆ ಸ್ವಾಮಿಗಳ ನಡವಳಿಕೆಯೂ ನನ್ನ ದೃಷ್ಟಿಯಲ್ಲಿ…ಈ ಅನಾರೋಗ್ಯದಲ್ಲಿ ಸ್ವಾಮಿ ದಿವ್ಯ ಪ್ರಜ್ಞೆಯನ್ನು ಗಳಿಸಿಕೊಂಡಿದ್ದಾರೆ ಎನ್ನುವುದನ್ನು ಒಪ್ಪುವುದಿಲ್ಲ. … ಅತ್ಯುನ್ನತ ದಿವ್ಯ ಪ್ರಜ್ಞೆ ವ್ಯಕ್ತವಾಗಲು ರೋಗಿಷ್ಟ ದೇಹ ಬೇಕು ಎನ್ನುವ ವಾದವನ್ನು ನಾನು ಒಪ್ಪಲಾರೆ. ಮಿಸ್ ಮಾರ್ಗರೆಟ್ ನೋಬಲ್ ಸ್ವಾಮಿಗಳ ಅಡಿಗಳನ್ನು ಪೂಜಿಸುವಂತೆ ನಾನು ನಟಿಸಲಾರೆ. ಇಂಗ್ಲಿಷ್ ಹೆಣ್ಣಿನ ದೃಷ್ಟಿಯಲ್ಲಿ ಆಕೆಯ ನಡವಳಿಕೆ ಹೀನಾಯ ; ಆದರೆ ಆಕೆ ಮತ್ತು ಸ್ವಾಮಿಯ ಬಗ್ಗೆ ನನಗಿರುವ ಗೆಳೆತನ, ಪ್ರೀತಿಯಲ್ಲಿ ನನ್ನಲ್ಲಿ ಯಾವ ಬದಲಾವಣೆಯೂ ಇಲ್ಲ. ….ಸ್ವಾಮಿ ಒಬ್ಬ ಮನುಷ್ಯ ಮಾತ್ರ-ಅದನ್ನು ಆತ ಆದಷ್ಟು ಬೇಗ ತಿಳಿದುಕೊಂಡರೆ ಒಳ್ಳೆಯದು. ….ವ್ಯಕ್ತಿ ಪೂಜೆಯನ್ನು ಮೀರಿದ ಒಂದು ಉನ್ನತ ಉದ್ದೇಶಕ್ಕಾಗಿ ಆಕೆ (ಮಾರ್ಗರೆಟ್ ನೋಬಲ್) ಹೆಣಗುತ್ತಿರುವಳೆಂದು ಮನದಟ್ಟು ಮಾಡುವವರೆಗೆ ಆಕೆಯ ‘ಕೆಲಸ’ಗಳಿಗೆ ಇಂಗ್ಲೆಂಡ್’ನಿಂದ ನೆರವು ಸಿಗುವುದು ಕಷ್ಟ . … ಒಂದು ಆದರ್ಶ ತನ್ನ ಗುಣಗಳ ಮೇಲೆ ನಿಲ್ಲಬೇಕಲ್ಲದೆ ವ್ಯಕ್ತಿಗಳ ಮೇಲಲ್ಲ….’ (131) ಸ್ವಾಮಿಗಳ ಅಭಿಮಾನಿಗಳು , ಭಕ್ತರು ಸ್ವಾಮಿಗಳನ್ನು ಸಮರ್ಥಿಸಿ ಅದೇನೇ ಹೇಳಲಿ ವಿಚಾರದ ದೃಷ್ಟಿಯಿಂದ ನೋಡಿದಾಗ ಎಡ್ವರ್ಡ್ ಸ್ಟರ್ಡಿ ಮತ್ತು ಶ್ರೀಮತಿ ಆಸ್ಟನ್ ಜಾನ್’ಸನ್ ಪತ್ರಗಳಲ್ಲಿ ಕಟು ಸತ್ಯವಿರುವುದು ಕಾಣುತ್ತದೆ.
ಎಡ್ವರ್ಡ್ ಸ್ಟರ್ಡಿ ಪತ್ರ ಬಂದ ನಂತರ ಸ್ವಾಮಿಗಳ ಮನಸ್ಸಿನಲ್ಲಿ ಜುಗುಪ್ಸೆಯ ಅಲೆಗಳೆದ್ದಿದ್ದವು. ನವೆಂಬರ್ ೨ ಮತ್ತು ೩ ರಂದು ರಿಡ್ಜ್’ಲಿ ಮ್ಯಾನೊರ್’ನಲ್ಲಿ ನಡೆದ ಘಟನೆಗಳನ್ನು ಜೊಸೆಫಿನ್ ಮೆಕ್ಲಿಯಾಡ್’ಗೆ ತಿಳಿಸುತ್ತ ಮಾರ್ಗರೆಟ್ ನೋಬಲ್ ದಾಖಲಿಸಿದ್ದಾಳೆ. ನವೆಂಬರ್-೨ರಂದು ಸ್ವಾಮಿಗಳು ತಮ್ಮ ಸಂನ್ಯಾಸಕ್ಕೆ ಯಾವುದೇ ಧಕ್ಕೆಯಾಗಿಲ್ಲವಾದರೂ ವೈಯಕ್ತಿಯ ಪ್ರೀತಿಯಿಂದ ಧಕ್ಕೆಯಾಗಬಹುದೆಂದು ತಿಳಿಸಿದರು. ಇದನ್ನು ಕೇಳಿ ಸಾರಾ ಬುಲ್ ಕಣ್ಣೀರಿಡುತ್ತ ಮಾರ್ಗರೆಟ್ ನೋಬಲ್ ಕೋಣೆಗೆ ಹೋಗಿ ಒಂದು ಗಂಟೆಗೂ ಹೆಚ್ಚು ಕಾಲ ಈ ವಿಚಾರವಾಗಿ ಚರ್ಚಿಸಿದಳು. ಮರುದಿನ ಬೆಳಿಗ್ಗೆ ಉಲ್ಲಸಿತರಾಗಿ ಬಂದ ಸ್ವಾಮಿಗಳು ಮಾರ್ಗರೆಟ್ ನೋಬೆಲ್ ಜೊತೆ ನಿರ್ಮೋಹದಿಂದ ಮಾತನಾಡಿದಾಗ ದುಃಖ ತಾಳದೆ ಆಕೆ ಅಳಲು ತನ್ನ ಕೋಣೆಗೆ ಓಡಿದಳು. ಆಕೆಯ ಕೋಣೆಯ ಬಾಗಿಲಿಗೆ ಹೋಗಿ ನಿಂತು ಸ್ವಾಮಿಗಳು ಪ್ರಾಪಂಚಿಕತೆಯಿಂದ ತಮಗಾಗುತ್ತಿರುವ ನೋವನ್ನು ವಿವರಿಸಿದರು. ನಿಸ್ತೇಜ ಮುಖದವರಾಗಿ ‘ಈಗ ನಾನೆಲ್ಲಿದ್ದೇನೆ ? ‘ ಎಂದು ಪ್ರಶ್ನಿಸಿದರು. ನಂತರ ಏನನ್ನೋ ಮಣಗುಟ್ಟುತ್ತ ರಾಮಕೃಷ್ಣರ ಹೆಸರನ್ನು ಬಡಬಡಿಸಿದರು. ‘ ಹೇಗಾದರೂ ಈ ದೇಹ ಇಲ್ಲವಾಗುತ್ತದೆ. ನಾನು ಕಠಿಣ ತಪಸ್ಸಿನಲ್ಲಿ ತೊಡಗಿಕೊಳ್ಳುತ್ತೇನೆ.- ಉಪವಾಸದಿಂದ ಇರುತ್ತ ದಿನಕ್ಕೆ ೧೦,೦೦೦ ಓಂ ಪಠಣ ಮಾಡುತ್ತೇನೆ. ಒಬ್ಬಂಟಿಯಾಗಿ , ಒಬ್ಬಂಟಿಯಾಗಿ ಮಾತ್ರ ನಾನು ಹಿಮಾಲಯ ಸೇರಿ ಗಂಗಾ ತಟದಲ್ಲಿ ಹರ ಹರ ಮಹಾದೇವ ಮುಕ್ತಿನಾಥ , ಮುಕ್ತಿನಾಥ ಎನ್ನುತ್ತೇನೆ. ನನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೇನೆ. ಈ ಸಲ ಅದು ಯಾರಿಗೂ ತಿಳಿಯುವಂತಿಲ್ಲ. ಮತ್ತೊಮ್ಮೆ ಸಂನ್ಯಾಸಾಶ್ರಮಕ್ಕೆ ಹೋಗುತ್ತೇನೆ. ಇದಕ್ಕಾಗಿಯೇ ಈ ನಿರ್ಧಾರ , ನಾನು ಇನ್ನೆಂದೂ ಯಾರ ಹತ್ತಿರವೂ ಬರುವುದಿಲ್ಲ.’ ಎಂದು ಹೇಳುತ್ತಿರುವಾಗ ನೋಟದಲ್ಲಿ ಬದಲಾವಣೆಯಾಗಿ , ಭಯಂಕರ ಚಿಂತನೆಗಳು ಹಾದು ‘ ನಾನೆಲ್ಲ ಕಳೆದುಕೊಂಡೆ , ಮ್ಲೇಚ್ಛರೇ ನಿಮಗಾಗಿ ನಾನೆಲ್ಲ ಕಳೆದುಕೊಂಡೆ ! ಎನ್ನುತ್ತ ನಿಟ್ಟುಸಿರಿಡುತ್ತ ದೂರ ಸರಿದರು. (132) ಸ್ವಾಮಿಗಳಿಗೆ ಅಧ್ಯಾತ್ಮಿಕ ಅನುಭವಗಳನ್ನು ಹೆಮ್ಮೆಯಿಂದ ವರ್ಣಿಸುತ್ತ ಸ್ವಾಮಿಗಳಿಗೆ ಎಂತೆಂತಹ ಅಧ್ಯಾತ್ಮಿಕ ಅನುಭವಗಳಾಗಿದ್ದವೋ ಎನ್ನುವ ‘ದಿ ಲೈಫ್-೧೯೧೪’ ಹಾಗೂ ಅಮೆರಿಕದ ಪ್ರಾಪಂಚಿಕತೆಯನ್ನೂ ಸ್ವಲವೂ ಅಂಟಿಸಿಕೊಳ್ಳದೆ ಸ್ವಾಮಿಗಳು ನಿರುದ್ವಿಗ್ನವಾಗಿ ಉನ್ನತ ಪ್ರಜ್ಞೆಯಲ್ಲಿರುತ್ತಿದ್ದರು ಎಂದು ಹೇಳುವರೆಲ್ಲರೂ ನಿತ್ಯಮುಕ್ತರಾದ ಸ್ವಾಮಿಗಳು ಇತರರಂತೆ ತಪ್ಪು ಮಾಡುವುದೇಕೆ , ೧೦೦೦೦ ಸಲ ಓಂ ಪಠಿಸಬೇಕೇಕೆ ಎನ್ನುವುದನ್ನು ಕೆದಕಲು ಹೋಗಿಲ್ಲ.
೫/೧೧/೧೮೯೯-ರಿಡ್ಜ್’ಲಿ ಮ್ಯಾನೋರ್- ಸ್ವಾಮಿಗಳು ಮಾರ್ಗರೆಟ್ ನೋಬಲ್ ಇದ್ದ ಕೋಣೆ ಹೊಕ್ಕು ಬಾಗಿಲು ಮುಚ್ಚಿದರು. ಅಲ್ಲಿ ಸಾರಾ ಬುಲ್ ಬರೆಯುತ್ತ ಕುಳಿತಿದ್ದಳು. ಸ್ವಾಮಿಗಳು ತಾವು ತಂದಿದ್ದ ರೇಷ್ಮೆ ಬಟ್ಟೆಯ ತುಂಡನ್ನು ಸಾರಾ ಬುಲ್ ಸೊಂಟಕ್ಕೆ ಸುತ್ತಿ ಆಕೆಯನ್ನು ಸಂನ್ಯಾಸಿಯೆಂದು ಕರೆದರು. ಒಂದು ಕೈಯನ್ನು ಸಾರಾ ಬುಲ್ ತಲೆಯ ಮೇಲೆ ಇನ್ನೊಂದು ಕೈಯನ್ನು ಮಾರ್ಗರೆಟ್ ತಲೆಯ ಮೇಲಿರಿಸಿ ‘ರಾಮಕೃಷ್ಣ ಪರಮಹಂಸರು ನನಗೆ ಕೊಟ್ಟಿದ್ದೆಲ್ಲವನ್ನೂ ನಿಮಗೆ ಕೊಡುತ್ತಿದ್ದೇನೆ. ಹೆಣ್ಣಿನಿಂದ ಬಂದದ್ದು ( ತಾಯಿ , ಜಗನ್ಮಾತೆ) ಇಬ್ಬರು ಹೆಂಗಸರಿಗೆ ಕೊಡುತ್ತಿದ್ದೇನೆ. ಅದನ್ನು ಏನು ಬೇಕಾದರೂ ಮಾಡಿರಿ. ನನ್ನಲ್ಲಿ ನನಗೆ ನಂಬಿಕೆಯಿಲ್ಲ. ನಾಳೆ ಏನು ಮಾಡುವೆನೆಂದು ಗೊತ್ತಿಲ್ಲ , ಕೆಲಸವೂ ಹಾಳಾಗಬಹುದು. ಹೆಣ್ಣಿನಿಂದ (ತಾಯಿ, ಜಗನ್ಮಾತೆ) ಬಂದದ್ದನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಹೆಣ್ಣುಗಳೇ ಸೂಕ್ತ. ನಾನು ಆಕೆ (ತಾಯಿ, ಜಗನ್ಮಾತೆ) ಯಾರು , ಹೇಗಿರುವಳೆಂದು ಕಂಡಿಲ್ಲ. ಆದರೆ ರಾಮಕೃಷ್ಣರು ಆಕೆಯನ್ನು ಕಂಡು , ಮುಟ್ಟಿದ್ದರು ಹೀಗೆ ಮುಟ್ಟಿದ್ದರು’ ಎನ್ನುತ್ತ ಮಾರ್ಗರೆಟ್ ಅಂಗಿಯ ತೋಳನ್ನು ಮುಟ್ಟಿದರು. ….ಇಂದು ಬೆಳಿಗ್ಗೆ ನಾನು ಹುಚ್ಚನಾಗಿದ್ದೆ. ಏನು ಮಾಡಬೇಕೆಂದು ಭಾರಿ ಚಿಂತಿಸಿದೆ. ಊಟಕ್ಕೆ ಮೊದಲು ಮಲಗಲು ನನ್ನ ಕೋಣೆಗೆ ಹೋದಾಗ ಇದು ಹೊಳೆಯಿತು…ನಿಮಗೆ ವರ್ಗಾಂತರಿಸಿದ ನಂತರ ನನ್ನ ಹೊರೆ ಇಳಿಯಿತು , ನಾನೀಗ ನಿರಾಳ….’ ಎಂದರು. (133 )
ಬೋಳೆ ಸ್ವಭಾವದ ಮಾರ್ಗರೆಟ್ ನೋಬಲ್ ಸ್ವಾಮಿಗಳಿಂದ ತಮ್ಮಿಬ್ಬರಿಗೆ ಅಧ್ಯಾತ್ಮಿಕ ಶಕ್ತಿ ವರ್ಗಾಂತರಗೊಂಡು ಅವರ ಅಧ್ಯಾತ್ಮಿಕ ಶಕ್ತಿ ಕ್ಷೀಣಿಸಿತೆಂದು ಭಾವಿಸಿದಳು. ಆದರೆ ಈ ಎಲ್ಲ ಘಟನೆಗಳನ್ನು ಜೋಡಿಸಿ ನೋಡಿದಾಗ ಒಂದು ಚಿತ್ರಣ ಸಿಗುತ್ತದೆ. ಹಿಂದೂ ಧರ್ಮ , ಸಂನ್ಯಾಸದ ನಿಯಮ , ಅನಾಸಕ್ತಿ , ನಿಷ್ಕಾಮ ಕರ್ಮ ಮುಂತಾದವನ್ನು ಅಮೆರಿಕದ ಜನ ಸ್ವಾಮಿಗಳ ಬಾಯಿಂದ ಮೊದಲ ಬಾರಿಗೆ ಕೇಳಿದ್ದರು. ಅವರಿಗೆ ಅವೇನೆಂದು ಸ್ಪಷ್ಟವಾಗಿರಲಿಲ್ಲ. ಹೇಲ್ ಮತ್ತು ಮೆಕೆಂಡ್ಲಿ ಸೋದರಿಯರು ಇವುಗಳನ್ನು ವಿಚಾರಿಸಿ , ವಿಮರ್ಶಿಸುವಷ್ಟು ಪ್ರಬುದ್ಧರಾಗಿರಾಗಿರಲಿಲ್ಲ. ಶ್ರೀಮತಿ ಜಾನ್ ಜೆ ಬ್ಯಾಗ್ಲಿ , ಸಾರಾ ಬುಲ್ , ಬೆಟ್ಟಿ ಲೆಗ್ಗಟ್ ಜೊಸೆಫಿನ್ ಮೆಕ್ಲಿಯಾಡ್ , ಸಾರಾ ಎಲೆನ್ ವಾಲ್ಡೋ , ಮೇರಿ ಡಚರ್ ಮಂತಾದವರು ಪ್ರಬುದ್ಧರಾಗಿದ್ದರಾದರೂ ವೈಚಾರಿಕರೂ , ವಿಮರ್ಶಕರೂ ಆಗಿರಲಿಲ್ಲ. ಅವರಿಗೆ ಅಮೆರಿಕದಲ್ಲಿ ಪ್ರಚಲಿತವಿರುವ ಧರ್ಮಕ್ಕಿಂತ ಬೇರೆಯದಾದ ಹೊಸತು ಬೇಕಾಗಿದ್ದಿತು. ಉದಾರವಾದಿಗಳು ಎಲ್ಲ ಬಗೆಯ ಧರ್ಮ , ತತ್ತ್ವಗಳ ಪ್ರತಿಪಾದನೆಗೆ ಮುಕ್ತ ಅವಕಾಶ ಇರಬೇಕೆಂದು ನಂಬಿದ್ದು ಆ ನಿಲುವಿನಿಂದ ಸ್ವಾಮಿಗಳನ್ನು ಬೆಂಬಲಿಸಿದ್ದರು. ಅವರಿಗೆ ಸ್ವಾಮಿಗಳ ಜೀವನಶೈಲಿಯ ವಿವರಗಳು ಗೊತ್ತಿರಲಿಲ್ಲ. ಫ್ರಾನ್ಸಿಸ್ ಲೆಗ್ಗಟ್’’ನಂತಹ ಶ್ರೀಮಂತರಿಗೆ ತಮ್ಮ ಒಡನಾಟಕ್ಕೆ ಹೊಸತರದ ವ್ಯಕ್ತಿ ಬೇಕಾಗಿದ್ದನು. ಆತ ಸ್ವಾಮಿ ವಿವೇಕಾನಂದನೇ ಆಗಿರುವ ಅಗತ್ಯವಿರಲಿಲ್ಲ. ಮೊದಲ ಪ್ರಿಯಕರ ಕ್ಷಯರೋಗದಿಂದ ಸತ್ತು , ಎರಡನೇ ಪ್ರಿಯಕರ ತನ್ನನ್ನು ತೊರೆದು ಬೇರೆಯವಳ ಹಿಂದೆ ಹೋದ ನಂತರ ಮಾರ್ಗರೆಟ್ ನೋಬಲ್ ವಸ್ತುನಿಷ್ಠಳಾಗಿರದೆ ಭಾವುಕಳಾಗಿದ್ದಳು. ಎಡ್ವರ್ಡ್ ಸ್ಟರ್ಡಿ ಎತ್ತಿದ ಪ್ರಶ್ನೆಯನ್ನು ಬೇರೆ ಯಾರಾದರೂ ಎತ್ತಬಹುದಿತ್ತು. ಅದಕ್ಕಿಂತಲೂ ಮುಖ್ಯವಾಗಿ ತಮ್ಮನ್ನು ‘ಪ್ರವಾದಿ , ರಾಜ’ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದ ಮಾರ್ಗರೆಟ್ ನೋಬಲ್’ರಂತಹವರನ್ನು ವಿಶ್ವಾಸಕ್ಕೆ ತೆದುಕೊಳ್ಳಬೇಕಾಗಿದ್ದಿತು. ಇವೆಲ್ಲವುಗಳನ್ನು ‘ಅಧ್ಯಾತ್ಮಿಕ ಶಕ್ತಿ ‘ ವರ್ಗಾಂತರದ ಮೂಲಕ ಸ್ವಾಮಿಗಳು ಸಾಧಿಸಿದರು. ಭಾರತದ ಅಧ್ಯಾತ್ಮ ಮತ್ತು ತಾತ್ತ್ವಿಕ ಪರಂಪರೆಯಲ್ಲಿ ಒಳ್ಳೆಯದೇ ಆಗಿರಲಿ ಕೆಟ್ಟದ್ದೇ ಆಗಿರಲಿ ಒಬ್ಬರ ಕರ್ಮದ ಫಲವನು ಇನ್ನೊಬ್ಬರು ಪಡೆಯುವಂತಿಲ್ಲ. ಹಸಿವು , ನೀರಡಿಕೆಗಳನ್ನು ತಾನೇ ಪರಿಹರಿಸಿಕೊಳ್ಳಬೇಕಲ್ಲದೆ ತನ್ನ ಪರವಾಗಿ ಬೇರೆಯವರು ಅದನ್ನು ಮಾಡಲು ಸಾಧ್ಯವಿಲ್ಲ. ಅದು ಅಧ್ಯಾತ್ಮಿಕ ಶಕ್ತಿಗೂ ಅನ್ವಯ. ಸ್ವಾಮಿಗಳ ಅಧ್ಯಾತ್ಮಿಕ ಶಕ್ತಿಯನ್ನು ಸ್ವೀಕರಿಸುವ ಯೋಗ್ಯತೆ ರಾಮಕೃಷ್ಣರಿಂದ ನಿತ್ಯಮುಕ್ತರೆಂದು ಗುರುತಿಸಿಕೊಂಡಿದ್ದ ಇತರ ಗುರುಭಾಯಿಗಳಿಗೆ ಇರಲಿಲ್ಲವೇ ? ಅಷ್ಟೇ ಅಲ್ಲ ಸ್ವಾಮಿಗಳಿಂದ ಅಧ್ಯಾತ್ಮ ಶಕ್ತಿ ಪಡೆದ ಈ ಇಬ್ಬರು ಮುಂದೆ ಸಾಧಿಸಿದ್ದಾರು ಏನು ಎನ್ನುವ ಪ್ರಶ್ನೆಗೆ ಉತ್ತರಗಳು ಬೇಕಾಗುತ್ತವೆ.
Comment Box is loading comments...