(ತಮಿಳಗಂ-ಸಂಗಂ: ಎಷ್ಟು ಪ್ರಾಚೀನ ? ಕೃತಿಯ ಆಯ್ದ ಭಾಗಗಳು) (see at end for tolkappiam -facts over myths)
ತೊಲ್ಕಾಪ್ಪಿಯಂ ತಮಿಳಿನ ಆದಿಗ್ರಂಥವೆಂದು ಸಂಗಂ ಸಾಹಿತ್ಯಕ್ಕೆ ಅಹಂ ಮತ್ತು ಪುರಂ ಎಂಬ ನಿರ್ದಿಷ್ಟ ಚೌಕಟ್ಟನ್ನು ಒದಗಿಸಿದ ಆಕರವೆಂದು ಪರಿಗಣಿತವಾಗಿದೆ. ಆದರೆ ಕಾವ್ಯದ ಅಸ್ತಿತ್ವ ಮತ್ತು ಪರಂಪರೆ ಇರದೆ ತೊಲ್ಕಾಪ್ಪಿಯಂನಂತಹ ವ್ಯಾಕರಣ ಮತ್ತು ಲಕ್ಷಣ ಗ್ರಂಥ ರಚಿತವಾಗಲಾರದೆಂದು, ಲಕ್ಷ್ಯವಿರದೆ ಲಕ್ಷಣ ಗ್ರಂಥಗಳು ಬರಲಾರವೆಂದು ಭಾಷೆ ಮತ್ತು ಸಾಹಿತ್ಯದ ಉಗಮವನ್ನು ಕುರಿತಾದ ಆಧುನಿಕ ತಿಳುವಳಿಕೆಗಳು ಸಾರುತ್ತವೆ. ಕ್ರಿ.ಪೂ. ಅವಧಿಯದೆಂದು , ತಮಿಳಗಂನ ಬಹು ಶ್ರೇಷ್ಟ ಕೃತಿಯೆಂದು ಭಾವಿಸಲಾದ ತೊಲ್ ಹೆಸರು 8-10ನೇ ಶತಮಾನದ ಅವಧಿಯ ಇರೈನಾರ್ ಅಹಪ್ಪೊರುಳ್ ಮೊದಲ ಬಾರಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮೌಖಿಕವಾಗಿದ್ದ ಸಂಗಂ ಸಾಹಿತ್ಯ ಸಂಗ್ರಹಿಸಿ ಲಿಪಿಕರಣಗೊಂಡು ವರ್ಗೀಕರಣಗೊಳಿಸಲ್ಪಟ್ಟ ನಂತರವೆ ಅದರಲ್ಲಿನ ಕಾವ್ಯ ವಸ್ತು,ತಂತ್ರ,ಭಾವ,ಛಂದಸ್ಸುಗಳ ಸಮಗ್ರ ಸ್ವರೂಪವನ್ನು ವಿವೇಚಿಸಿ ತೊಲ್ಕಾಪ್ಪಿಯಂ ರಚಿತವಾಗಿದೆ. ಅದಲ್ಲದೆ ಹೋದರೆ ಶೂನ್ಯದಿಂದ,ದಿವ್ಯಾನುಭವದಿಂದ ತೊಲ್ಕಾಪ್ಪಿಯನಾರ್ ಕಾವ್ಯ ದರ್ಶನವೊಂದನ್ನು ಕಂಡನೆಂದು ಸಾರುವ ಅವೈಜ್ಞಾನಿಕತೆಯತ್ತ ಸಾಗುತ್ತೇವೆ. ಬಿ.ಜಿ.ಎಲ್ ಸ್ವಾಮಿಯವರು ಯಾವ ಭಾಷೆಯ ಬಗೆಗೂ ಪಕ್ಷಪಾತ ಧೋರಣೆ ತೋರದೆ ವಸ್ತು ಮತ್ತು ಆಕರನಿಷ್ಟ ಅಧ್ಯಯನದಿಂದ ತೊಲ್ಕಾಪ್ಪಿಯಂ ಕಾಲವನ್ನು ಸೂಚಿಸಿದರು. ಅವರು ರಚಿಸಿದ ‘ತಮಿಳು ತಲೆಗಳ ನಡುವೆ’ ಗ್ರಂಥದ ವಿಡಂಬನ ಶೈಲಿಯಿಂದಾಗಿ ಅವರ ಈ ತೀರ್ಮಾನ ಎದ್ದು ಕಾಣುತ್ತಿಲ್ಲ. ಹೆಚ್ಚಿನ ವಿದ್ವಾಂಸರು ಒಮ್ಮತದ ತೀರ್ಮಾನಕ್ಕೆ ಬರುವವರೆಗೆ ತೊಲ್ಕಾಪ್ಪಿಯಂ ಕಾಲ ಅನಿರ್ಧಾರಿತವೆಂದು ಪರಿಗಣಿಸುವುದು ಸರಿ ಹೊರತು ಕ್ರಿ.ಪೂ, ಅಥವಾ ಕ್ರಿ.ಶ ಆದಿ ಎನ್ನುವುದರಲ್ಲಿ ಅರ್ಥವಿಲ್ಲ.
ಮಾನವ ಚಟುವಟಿಕೆಗಳು ಮೊದಲಿಗೆ ಹಲವಾರು ನಿಟ್ಟುಗಳಲ್ಲಿ ಯಾವ ನಿಯಮಗಳಿಗೂ ಒಳಪಡದೆ ಸಹಜವಾಗಿ ಮೂಡಿಬರುತ್ತವೆ. ಕಾಲಾನುಕ್ರಮದಲ್ಲಿ ಇವುಗಳಲ್ಲಿ ವೈವಿಧ್ಯತೆಗಳು , ಪ್ರಯೋಗಗಳು ಕಾಣಿಸಿಕೊಳ್ಳುತ್ತವೆ. ಇವು ಗಣನೀಯ ಪ್ರಮಾಣದಲ್ಲಿ ಹೆಚ್ಚಿದಾಗ ಇವುಗಳನ್ನು ವಿವರಿಸಲು , ವಿಭಜಿಸಲು,ಅರ್ಥೈಸಲು , ವಿಶ್ಲೇಷಿಸಲು ಸಾಹಿತ್ಯದಲ್ಲಿ ಲಕ್ಷಣ ಗ್ರಂಥಗಳು ಕಾಣಿಸಿಕೊಳ್ಳುತ್ತವೆ. ವಿಜ್ಞಾನ ತಂತ್ರಜ್ಞಾನ,ಗಣಿತಗಳಲ್ಲಿಯೂ ಸಹ ನಾನಾ ತರದ ಸಂಶೋಧನೆಗಳು ಯಾವ ಚೌಕಟ್ಟಿನ ಹಂಗಿಲ್ಲದೆ ಹೊರಬಂದು, ನಂತರದ ಕಾಲದಲ್ಲಿ ಸಂಗ್ರಹ , ಸಂಪಾದನೆಗಳಿಗೊಳಗಾಗಿ , ವಿಸ್ತೃತ ಚರ್ಚೆಯ ನಂತರ ‘ಅನುಷ್ಠಾನ ಸಂಹಿತೆಗಳು’ ( Codes of practIce ) ಮೂಡಿಬರುತ್ತವೆ. ಇದು ನೀತಿ ನಿಯಮ ಮತ್ತು ಕಾನೂನಿಗಳಿಗೂ ಸಹ ಅನ್ವಯವಾಗುತ್ತದೆ.
ಪರಿಚಯ
ತೊಲ್ಕಾಪ್ಪಿಯಂ (ಉಚ್ಚಾರದಲ್ಲಿ ತೊಲ್ಹಾಪ್ಪಿಯಂ) ತಮಿಳು ಭಾಷೆಯ ವ್ಯಾಕರಣ ಹಾಗೂ ಲಕ್ಷಣ ಗ್ರಂಥ. ಇದನ್ನು ತಮಿಳು ಭಾಷೆಯ ಆದಿಗ್ರಂಥವೆಂದು ಪರಿಗಣಿಸಲಾಗಿದೆ. ಇದು ಸೂತ್ರರೂಪದ ನೂರ್ಪಗಳಲ್ಲಿ (ನೂರ್ಪ=ನೂಲ್+ಪ=ನೂಲು>ಸೂತ್ರ,ಪ=ನಿಯಮ) ರಚಿತವಾಗಿದೆ. ತೊಲ್ಕಾಪ್ಪಿಯಂನಲ್ಲಿ ಎಳುತ್ತದಿಗಾರಂ (ಎಳುತ್ತು=ಬರಹ), ಸೊಲ್ಲದಿಗಾರಮ್ (ಸೊಲ್=ನುಡಿ,ಮಾತು,ಸೊಲ್ಲು) ಮತ್ತು ಪೊರುಳಾದಿಗಾರಂ (ಪೊರುಳು=ಹುರುಳು,ಸಾರ) ಎಂಬ ಮೂರು ಅಂಗಗಳು ಒಂಬತ್ತು ಅಧ್ಯಾಯಗಳಾಗಿ ವಿಂಗಡಿಸಲ್ಪಟ್ಟಿವೆ. )
ತೊಲ್ಕಾಪ್ಪಿಯಂ ಅರ್ಥ ಏನಿರಬಹುದೆಂಬ ವಿಚಾರದಲ್ಲಿ ವಿದ್ವಾಂಸರಲ್ಲಿ ಒಮ್ಮತವಿಲ್ಲ, ತೊಲ್=ಪ್ರಾಚೀನ , ಕಾಪ್ಪಿಯಂ=ಕಾವ್ಯಂ ಎಂಬ ವಿವರಣೆಗೆ ಒಂದು ಬಣ ನೀಡಿದರೆ, ಇನ್ನೊಂದು ಬಣ ತೊಲ್ಕಾಪ್ಪಿಯನಾರ್ ಹೆಸರಿನ ಕೃತಿಕಾರನಿಂದ ಆ ಹೆಸರು ಬಂದಿತೆಂದು ಹೇಳುತ್ತಾರೆ (ಕೃ:3-ಪು:65-66).
ಪುರಪ್ಪೊಪರುಳ್ ವೆಂಬಮಾಲೈ (ಕ್ರಿ.ಶ 10) ಎಂಬ ತಮಿಳಿನ ಛಂದೋಗ್ರಂಥದ ಪ್ರಸ್ತಾವನಾ ಪದ್ಯದಲ್ಲಿ ಅಗಸ್ತ್ಯನಿಗೆ ಹನ್ನೆರಡು ಶಿಷ್ಯರಿದ್ದರೆಂದು ಅವರಲ್ಲಿ ತೊಲ್ಕಾಪ್ಪಿಯನಾರ್ ಒಬ್ಬನೆಂದು , ಈ ಹನ್ನೆರಡು ಜನ ಶಿಷ್ಯರು ಸೇರಿ ಸಾಮೂಹಿಕವಾಗಿ ಪಣ್ಣಿರು ಪಾಟಲಂ ಮತ್ತು ಪುರಪ್ಪೊಪರುಳ್ ಕೃತಿಗೆ ಕಾರಣರಾದರೆ, ತೊಲ್ಕಾಪ್ಪಿಯಾರ್ನಿಂದ ತೊಲ್ಕಾಪ್ಪಿಯಂ , ಚೆಂಪುಟಚೀಯನ್ನಿಂದ ಕುರ್ರಿಯಾಲ್ (ಲಭ್ಯವಿಲ್ಲ), ವಾಯಪ್ಪಿಯನ್ನಿಂದ ವಾಪ್ಪಿಯಂ (ಲಭ್ಯವಿಲ್ಲ) , ಅವಿನಯನ್ನಿಂದ ಅವಿನಯಂ,ಕಾಕ್ಕೈಪಟ್ಟಿನಿಯಿಂದ ಕಾಕ್ಕೈಪಟ್ಟಿನಿಯಂ(ಲಭ್ಯವಿಲ್ಲ) ಕೃತಿಗಳು ಮೂಡಿಬಂದವೆಂದು ಭಾವಿಸಲಾಗಿದೆ. 10ನೇ ಶತಮಾನದ ಅವಧಿಯಲ್ಲಿ ಅವಿನಯಂ ವ್ಯಾಕರಣ ಕೃತಿ ಜನಪ್ರಿಯವಾಗಿದ್ದು 13 ನೇ ಶತಮಾನದಲ್ಲಿದ್ದ ತಂಟಲಾರಿ ಕಿಳವನ್ ಎಂದು ಹೆಸರು ಪಡೆದಿದ್ದ ಇರಾಜ ಪಾವಿತ್ತಿರ ಪಲವಟರೈಯನ್ ಇದಕ್ಕೆ ಭಾಷ್ಯ ಬರೆದಿದ್ದಾನೆ.
ತೊಲ್ಕಾಪ್ಪಿಯಂ ಮೇಲೆ ಭಾಷ್ಯ ಬರೆದ ಪೆರಾಶಿಯಾರ್ (ಕ್ರಿ.ಶ. 12-13) ತೊಲ್ಕಾಪ್ಪಿಯನಾರ್ ಅಗಸ್ತ್ಯನಿಗಿಂತಲೂ ಬೇರೆಯದಾದ ವ್ಯಾಕರಣ ರಚಿಸಿದನೆಂದು ಕೆಲವರು ಹೇಳುತ್ತಾರೆ ಆದರೆ ಇದು ಸರಿಯಲ್ಲ. ತೊಲ್ಕಾಪ್ಪಿಯನಾರ್ ಅಗಸ್ತ್ಯನ ಹನ್ನೆರಡು ಶಿಷ್ಯರಲ್ಲೊಬ್ಬನು ಎಂದು ತಿಳಿಸಿದ್ದಾನೆ.
ತೊಲ್ಕಾಪ್ಪಿಯಂನ ಮತ್ತೊಬ್ಬ ಭಾಷ್ಯಕಾರ ನಾಚ್ಚಿಣಾರ್’ಕ್ಕಿಣಿಯಾರ್ (ಕ್ರಿ.ಶ 14-15) ಅಗಸ್ತ್ಯ ಮತ್ತು ಆತನ ಶಿಷ್ಯನಾದ ತೊಲ್ಕಾಪ್ಪಿಯಂ ನಡುವಿನ ವೈಮನ್ಯಸ್ಯ , ಅಗಸ್ತ್ಯನ ಶಿಷ್ಯನಾದ ಅದಂಕೊಟ್ಟಸಾನ್ ತೊಲ್ಕಾಪ್ಪಿಯಂ ಕೃತಿಯನ್ನು ವಿರೋಧಿಸಿದ ಘಟನೆ ಹಾಗೂ ಇನ್ನಿತರ ಸಂಗತಿಗಳನ್ನು ನೀಡಿದ್ದಾನೆ.
ತೊಲ್ಕಾಪ್ಪಿಯಂ ಭಾಷ್ಯ ಬರೆದು ಖ್ಯಾತನಾದ ಇಳಂಪೂರಣಾರ್ (ಕ್ರಿ.ಶ 11-12) ಅಗಸ್ತ್ಯನ ಶಿಷ್ಯನಾದ ಚಮತಕ್ಕಿನಿ (ಜಮದಗ್ನಿ) ಮಗನಾದ ತಿರುಣತೂಮಾಕ್ಕಿನಿ (ತೃಣಧೂಮಾಗ್ನಿ) ತನ್ನ ಗುರುವಾದ ಅಗಸ್ತ್ಯನಿಗೆ ಸರಿಸಮಾನಾದ ಗ್ರಂಥವನ್ನು ರಚಿಸಿದನೆಂದು ಹೇಳಿದ್ದಾನೆ.
ತೊಲ್ಕಾಪ್ಪಿಯಂಗಿಂತಲೂ ಹಿಂದೆ ಮಾಪುರಾಣಂ (ಮಹಾಪುರಾಣ) ಹಾಗೂ ಪೂತಪುರಾಣಂ(ಭೂತಪುರಾಣಂ) ಎಂಬ ವ್ಯಾಕರಣ ಗ್ರಂಥವಿದ್ದಿತೆಂದು ನಾಚ್ಚಿಣಾರ್’ಕ್ಕಿಣಿಯಾರ್ ,ಮಯಿಲೈನಾತರ್ ತೊಲ್ಕಾಪ್ಪಿಯಂಗೆ ಬರೆದ ಭಾಷ್ಯಗಳಲ್ಲಿ ಹೇಳಿದ್ದಾರೆ. ಇದು ಮತ್ತು ಇಚ್ಚೈನುಣುಕಂ ಎಂಬ ವ್ಯಾಕರಣ ಗ್ರಂಥಗಳಿದ್ದವೆಂದು ಇರೈಯನಾರ್ ಅಹಪ್ಪೊರುಳ್ಗೆ ಬರೆದ ಭಾಷ್ಯದಲ್ಲಿ ನಕ್ಕೀರಾರ್ ತಿಳಿಸಿದ್ದಾನೆ. ಅಡಿಯಾರ್ಕುನಲ್ಲಾರ್ ಇಚ್ಚೈನುಣುಕಂ ಕೃತಿಯನ್ನು ಆಣಾಕುಲನ್ ಮತ್ತು ತಿಲೋತ್ತಮೈಯರ ಮಗನಾದ ಚಾರುಕುಮಾರ ಪಾಂಡ್ಯನಿಗೆ ವ್ಯಾಕರಣ ಕಲಿಸಲು ರಚಿಸಲಾಯಿತೆಂದು ತಿಳಿಸಿದ್ದಾನೆ. ಇವುಗಳಲ್ಲಿನ ಸಂಸ್ಕೃತದ ವಿಸ್ತೃತ ಬಳಕೆಯನ್ನು ಗಮನಿಸಿದ ಕಮಿಲ್ ಝ್ವೆಲೆಬಿಲ್ ಇದು ಪರಿಗಣನೆಗೆ ಅರ್ಹ ಕೃತಿಯಲ್ಲವೆಂದು ಸಾರಿದ್ದಾರೆ.
ತೊಲ್ಕಾಪ್ಪಿಯಂ ಗ್ರಂಥದ ಪಾಯಿರಂನಲ್ಲಿ (ಪ್ರಸ್ತಾವನಾ ಪದ್ಯ) ಜೀವ-ಅಜೀವಕಗಳ ವರ್ಗೀಕರಣ , ಮಾತ್ರೆಗಳ ಗಣನೆ ಇತ್ಯಾದಿ ಸಂಗತಿಗಳನ್ನು ಪರಿಗಣಿಸಿ ತೊಲ್ಕಾಪ್ಪಿಯನಾರ್ ಐಂದಿರಂ ವ್ಯಾಕರಣ ಶಾಖೆಗೆ ಸೇರಿದ ಜೈನನೆಂದು , ತಮಿಳು ವ್ಯಾಕರಣದಲ್ಲಿಲ್ಲದ ಆದರೆ ಮಲಯಾಳಂ ವ್ಯಾಕರಣಗಳಲ್ಲಿ ಅಸ್ತಿತ್ವದಲ್ಲಿರುವ ವಿಶಿಷ್ಟ ರೂಪಗಳನ್ನು ಪರಿಗಣಿಸಿ ಈತ ಈಗಿನ ಕೇರಳದ ದಕ್ಷಿಣ ತಿರುವಾಂಕೂರು ಪ್ರದೇಶದವನಿರುವ ಸಾಧ್ಯತೆಯಿದೆ0ದು ವಯ್ಯಾಪುರಿ ಪಿಳ್ಳೆಯವರು ಹೇಳಿದ್ದಾರೆ.
ತೊಲ್ಕಾಪ್ಪಿಯಂ ತನ್ನ ಪೂರ್ವಾಚಾರ್ಯರನ್ನು ‘ಎಣ್ಬ , ಮೊರಿಬು,ಸೊಲ್ಲುಪ’ ಎಂದು ಗೌರವ ಪೂರ್ವಕವಾಗಿ ಸ್ಮರಿಸುತ್ತದೆ. ಇದರಿಂದ ತೊಲ್ಕಾಪ್ಪಿಯಂ ಮೂಲ ತಿರುಳು ಇದ್ದಿತೆಂದು ಮತ್ತು ಸಾಹಿತ್ಯವಿರದೆ ಲಕ್ಷಣ ಗ್ರಂಥಗಳು ಕಾಣಿಸಿಕೊಳ್ಳುವುದಿಲ್ಲವಾದ್ದರಿಂದ ಅದರ ಹಿಂದೆ ಸಾಕಷ್ಟು ಸಾಹಿತ್ಯವಿದ್ದಿತೆಂದು ಕಮಿಲ್ ಝ್ವೆಲೆಬಿಲ್ ಪರಿಗಣಿಸಿದ್ದಾರೆ. ಇದೇ ಆಧಾರದ ಮೇಲೆ ಕವಿರಾಜಮಾರ್ಗಕ್ಕಿಂತಲೂ ಹಿಂದೆ ಕನ್ನಡದಲ್ಲಿ ,ಇದೇ ರೀತಿಯಲ್ಲಿ ತೆಲುಗಿನಲ್ಲಿ ಸಾಹಿತ್ಯ ಇದ್ದಿರಬಹುದೆಂಬ ಸೂಚನೆಯನ್ನು ಅವರು ಉಹಾತ್ಮಕವಾದ ಕಲ್ಪನೆಯ್ದೆಂದು ಸಾರಿ ವಿಭಿನ್ನ ಮಾನದಂಡಗಳಿಗೆ ಮೊರೆ ಹೋಗಿದ್ದಾರೆ. ಕವಿರಾಜಮಾರ್ಗಕಾರ ಸ್ಮರಿಸಿರುವ ಪೂರ್ವಾಚಾರ್ಯರು ಕನ್ನಡದವರಾಗಿರದೆ ಸಂಸ್ಕೃತ ಲಕ್ಷಣಕಾರರಿರುವ ಸಾಧ್ಯತೆಗಳು ಹೆಚ್ಚೆಂದು ವಿದ್ವಾಂಸರು ಭಾವಿಸುತ್ತಾರೆ. ಹಾಗಾದರೆ ತೊಲ್ಕಾಪ್ಪಿಯಂ ಸ್ಮರಿಸಿರುವ ಪೂರ್ವಾಚಾರ್ಯರು ಯಾರು ? ತಮಿಳಿನ ಆದಿಗ್ರಂಥದ ಕತೃ ಯಾರಿಗೆ ಋಣಿಯಾಗಿದ್ದನೆಂಬುದು ಸಂಶೋಧಾನಾರ್ಹವಾಗಿದೆ.
ಸಂಪ್ರದಾಯ ಭಾವಿಸುವಂತೆ ತೊಲ್ಕಾಪ್ಪಿಯನಾರ್ ಅಗಸ್ತ್ಯನ ಹನ್ನೆರಡು ಜನ ಶಿಷ್ಯರಲ್ಲೊಬ್ಬ. ತಮಿಳಿನ ಆದಿಗ್ರಂಥಕ್ಕೆ ಪ್ರಸ್ತಾವನಾ ಪದ್ಯ ಬರೆದು ತೊಲ್ಕಾಪ್ಪಿಯಂ ಎಂದು ಹೆಸರಿಸಿದವನು ತೊಲ್ಕಾಪ್ಪಿಯಾರ್ ಸಹಪಾಠಿಯಾಗಿದ್ದ ಪಣಂಪಾರನಾರ್. ಕೃತಿಗಾರನೊಬ್ಬ ತಾನು ರಚಿಸಿದ ಗ್ರಂಥಕ್ಕೆ ಹೆಸರಿಡದಿರುವುದು , ನಂತರ ಅವನ ಸಹಪಾಠಿ ಅದಕ್ಕೆ ಪ್ರಸ್ತಾವನಾ ಪದ್ಯ ಒದಗಿಸಿ ಹೆಸರಿಡುವುದು ಮತ್ತು ಕತೃವಿನ ಬಗೆಗೆ ಏನೂ ಹೇಳದಿರುವುದು ಕೃತಕದಂತೆ ತೋರುತ್ತದೆ.
ತೊಲ್ಕಾಪ್ಪಿಯಂ ಮೇಲೆ ವ್ಯಾಖ್ಯಾನ ರಚಿಸಿದ ನಾಚ್ಚಿಣಾರ್’ಕ್ಕಿಣಿಯಾರ್ ,ಈ ಗ್ರಂಥ ನಿಲಂತರುವಿರ್ ಪಾಂಡ್ಯನ ಆಸ್ಥಾನದ ವಿದ್ವನ್ಮಂಡಳಿಯ ಮುಂದೆ ಮಂಡಿತವಾಗಿ ಚರ್ಚೆಗೆ ಒಳಗಾಯಿತೆಂದು ,ಅಲ್ಲಿ ತೊಲ್ಕಾಪ್ಪಿಯಾರನ ಸಹಪಾಠಿಯೂ, ಅಗಸ್ತ್ಯನ ಶಿಷ್ಯನೂ ಆಗಿದ್ದ ಅದಂಕೊಟ್ಟಸಾನ್ ಮಾಡಿದ ಟೀಕೆ, ವಿಮರ್ಶೆಗಳನ್ನು ಯಶಸ್ವಿಯಾಗಿ ಎದುರಿಸಿ ಮನ್ನಣೆ ಪಡೆಯಿತೆಂದು ತಿಳಿಸಿದ್ದಾನೆ. ಈ ಪಾಂಡ್ಯ ದೊರೆಯ ಹೆಸರು ಸಂಗಂ ಸಾಹಿತ್ಯದಲ್ಲಾಗಲಿ ಅಥವಾ ನಂತರದ ಅವಧಿಯ ಸಾಹಿತ್ಯ,ಶಿಲಾಶಾಸನಗಳಲ್ಲಿ ಎಲ್ಲಿಯೂ ಕಂಡುಬಂದಿಲ್ಲ.
ಸಂಸ್ಕೃತದ ವ್ಯಾಕರಣ ಗ್ರಂಥಗಳಿಗೂ ಹಿಂದಿನದೆಂದು , ಸೆಂದಮಿಳ್ ಪ್ರತಿಪಾದಕ ಕೃತಿಯೆಂದು ಹೊಗಳಲ್ಪಟ್ಟಿರುವ ಕೃತಿ ತನ್ನ ಅಧ್ಯಾಯಗಳನ್ನು ಸಂಸ್ಕೃತ ಮಾದರಿಯಲ್ಲಿ ಅದಿಗಾರಂಗಳಲ್ಲಿ (ಅಧಿಕಾರ=ಪ್ರಕರಣ) ವಿಂಗಡಿಸಿದೆ.
ತೊಲ್ಕಾಪ್ಪಿಯಂ ಗ್ರಂಥ ತಮಿಳಿನ ಸಂಗಂ ಸಾಹಿತ್ಯ ನಿರ್ಮಾಣಕ್ಕೆ ಒಂದು ಖಚಿತ ಮಾರ್ಗವನ್ನು ಒದಗಿಸಿತೆಂದು , ಇದರಿಂದ ತಮಿಳಗಂನ ಕವಿಗಳು ಅಹಂ(ಪ್ರಣಯ) ಮತ್ತು ಪುರಂ(ವೀರ) ಎಂಬ ಎರಡು ಪ್ರಭೇಧಗಳಲ್ಲಿ ಕಾವ್ಯ ರಚನೆ ಮಾಡಿದರೆಂದು ತಮಿಳು ಪರಂಪರೆ ಪರಿಗಣಿಸುತ್ತದೆ.
ಪುಲ್ಲಿಯ ಪ್ರಸ್ತಾಪ : ಅಕ್ಷರಗಳನ್ನು ನಿರ್ದಿಷ್ಟವಾಗಿ ಗುರುತಿಸಲು ಲಿಪಿಯಲ್ಲಿ ಬಳಸಲಾಗುವ ಚುಕ್ಕಿಯನ್ನು ತಮಿಳಿನಲ್ಲಿ ಪುಳ್ಳಿ ಎನ್ನುತ್ತಾರೆ. ತೊಲ್ಕಾಪ್ಪಿಯಂನ ಎಳುತ್ತು ಅದಿಗಾರಂನ ಸೂತ್ರ 15 ರಲ್ಲಿ ಪುಲ್ಲಿಯನ್ನು ಬಳಸಿದಾಗ ‘ಏ’ ಮತ್ತು ‘ಓ’ ಅಕ್ಷರಗಳನ್ನು ‘ಎ’ ಮತ್ತು ‘ಒ’ ಎಂದು ಪರಿಗಣಿಸಬೇಕೆಂದು , ಐತ್ವಕ್ಕೆ ಮೂರು ಪುಳ್ಳಿ ಎಂದು ಹೇಳುತ್ತದೆ. ಇದರೊಂದಿಗೆ ಸ್ವರರಹಿತ ವ್ಯಂಜನವನ್ನು ಗುರುತಿಸಲು ಪುಲ್ಲಿಯ ಬಳಕೆಯನ್ನು ಸೂಚಿಸಿ ಸಂಯುಕ್ತಾಕ್ಷರಗಳನ್ನು ಬರೆಯುವ ವಿಧಾನವನ್ನು ಪ್ರತಿಪಾದಿಸುತ್ತದೆ. ಕ (ಮೇಲೆ ಪುಳ್ಳಿ) ಇಟ್ಟಾಗ ‘ಕ್’ ಎಂದು ಓದಬೇಕು. ಅಕ್ಕ = ಅ ಕ್(ಕ ಮೇಲೆ ಪುಳ್ಳಿ) ಕ ಎಂದು ಬರೆಯಬೇಕು. ತೊಲ್ಕಾಪ್ಪಿಯಂನ ಪುಲ್ಲಿಯ ಉಲ್ಲೇಖ ತಮಿಳಿನ ಶಿಲಾಶಾಸನಗಳ ಕಾಲ ನಿರ್ಧಾರದಲ್ಲಿ ಹಲವಾರು ವಿವಾದಗಳನ್ನು ಹುಟ್ಟು ಹಾಕಿದೆ ತಮಿಳಿನ ಪ್ರಾಚೀನತೆಯ ನಿರ್ಧಾರದಲ್ಲಿ ಒಂದು ಪ್ರಮುಖ ಆಧಾರವಾಗಿದೆ. (ನೋಡಿರಿ : ತಮಿಳು ಬ್ರಾಹ್ಮಿ- ಪುಳ್ಳಿ ಸಮಸ್ಯೆ).
ತಮಿಳಿನ ಎಲ್ಲ ಆರಂಭಿಕ ಸಾಹಿತ್ಯದಂತೆ ತೊಲ್ಕಾಪ್ಪಿಯಂನ ರಚನೆಯ ಕಾಲವನ್ನು ನಿರ್ಧರಿಸುವಲ್ಲಿ ನೂರಾರು ತೊಡಕುಗಳಿವೆ.
ಕಾಲ ನಿರ್ಣಯದ ಆಧಾರಗಳು
ತಮಿಳಿನ ಯಾವುದೇ ಪ್ರಾಚೀನ ಗ್ರಂಥದ ರಚನೆಯ ಕಾಲವನ್ನು ವಿವಾದಾತೀತವಾಗಿ ನಿರ್ಧರಿಸಲಾಗಿಲ್ಲ. ತೊಲ್ಕಾಪ್ಪಿಯಂ ತಮಿಳಿನ ಆದಿಗ್ರಂಥವೆಂಬ ಕೀರ್ತಿ ಹೊಂದಿರುವುದರಿಂದ ಇದರ ರಚನೆಯ ಕಾಲವನ್ನು ಆದಷ್ಟು ಹಿಂದಕ್ಕೊಯ್ಯುವ ಪ್ರಯತ್ನಗಳಾಗುತ್ತವೆ. ತೊಲ್ಕಾಪ್ಪಿಯಂ ಕಾಲವನ್ನು ಈವರೆಗೆ ಪಾಶ್ಚಾತ್ಯ , ಪೌರ್ವಾತ್ಯ ವಿದ್ವಾಂಸರಲ್ಲಿ ಯಾರೊಬ್ಬರಿಂದಲೂ ಸಾಕಷ್ಟು ಖಚಿತವಾಗಿ ಅತ್ಯಲ್ಪ ವಿವಾದಗಳಿರುವಂತೆ ನಿರ್ಧರಿಸಲಾಗಿಲ್ಲ.
ತೊಲ್ಕಾಪ್ಪಿಯಂ ಕೃತಿ ರಚನೆಯ ನಿಜವಾದ ಕಾಲವನ್ನು ನಿಷ್ಕರ್ಷಿಸುವುದು ಅಂತಹ ಅಸಾಧ್ಯ ಕಾರ್ಯವೇನಲ್ಲ. ಆದರೆ ಇದಕ್ಕೆ ಜನಾಂಗೀಯ, ಧಾರ್ಮಿಕ,ಭಾಷಿಕ,ಸಾಹಿತ್ಯಕ ಆವೇಶಗಳು ಅಡ್ಡಿಯಾಗುತ್ತಿವೆ ಎಂದು ಶಿವರಾಜ ಪಿಳ್ಳೆಯವರು ಅಭಿಪ್ರಾಯಪಟ್ಟಿದ್ದಾರೆ .ತೊಲ್ಕಾಪ್ಪಿಯಂನ್ನು ಒಂದು ನಿರ್ದಿಷ್ಟ ಕಾಲಕ್ಕೆ ನಿಗದಿಗೊಳಿಸುವುದು ತ್ರಾಸದಾಯಕವಾದರೂ ಅದನ್ನು ಸಂಗಂಯುಗದ ನಂತರದ ಕರಾಳ ಯುಗದಲ್ಲಿ ನೆಲೆಗೊಳಿಸುವುದು ಸಾಧ್ಯವೆಂದು ಸಾರಿದ್ದಾರೆ. ಆದರೆ 12ನೇ ಶತಮಾನದವರೆಗೆ ಇದರ ಬಗ್ಗೆ ಯಾವುದೇ ಉಲ್ಲೇಖ,ಭಾಷ್ಯಗಳು ಬರಲಿಲ್ಲವೇಕೆ ಎಂಬುದರ ಬಗ್ಗೆ ಮೌನ ತಾಳಿದ್ದಾರೆ.
ತಮಿಳು ಪರಂಪರೆಯಂತೆ ತೊಲ್ಕಾಪ್ಪಿಯಂ ಗ್ರಂಥ ಹಾಕಿದ ಮಾರ್ಗದಲ್ಲಿ ಅಹಂ ಮತ್ತು ಪುರಂ ವರ್ಗಗಳಲ್ಲಿ ಸಂಗಂ ಸಾಹಿತ್ಯ ವಿಕಸಿಸಿದೆ ಎನ್ನಲಾಗುತ್ತಿದೆ ಆದರೆ ಭಾಷೆ ಮತ್ತು ಸಾಹಿತ್ಯದ ಉಗಮದ ಬಗೆಗಿನ ಆಧುನಿಕ ತಿಳುವಳಿಕೆಗಳು ಇದನ್ನು ಪುರಸ್ಕರಿಸುವುದಿಲ್ಲ. ಸಂಗಂ ಕಾಲದ ಕವಿಗಳು ಯಾವ ಕಟ್ಟಿಗೂ ಒಳಪಡದೆ ತಮ್ಮ ಅಂತರಂಗದ ಒತ್ತಡ ಮತ್ತು ಮಾನಸಿಕ ಪ್ರೇರಣೆಗಳಿಗೆ ಅನುಗುಣವಾಗಿ ಸಾಹಿತ್ಯ ರಚಿಸಿದರು. ಮಾನವನ ಬುದ್ಧಿ ಮತ್ತು ಭಾಷೆಯ ಸ್ವರೂಪದಿಂದಾಗಿ ಈ ರಚನೆಗಳಲ್ಲಿ ಕಾವ್ಯಾತ್ಮಕತೆ ಮತ್ತು ಸುಸಂಬದ್ಧತೆ ಮೂಡಿ ಬಂದಿತು. ಮುಂದೆ ಈ ಸಾಹಿತ್ಯವನ್ನು ಅಭ್ಯಸಿಸತೊಡಗಿದವರು ಅದರ ರಚನಾ ಸ್ವರೂಪ ಅರಿಯಲು, ವಿಶ್ಲೇಷಿಸಲು ಯತ್ನಿಸಿ ಕಾವ್ಯರಚನೆಯ ತಳಹದಿಯನ್ನು ಗುರುತಿಸಿ ವರ್ಗೀಕರಣಗೊಳಿಸಿದರು. ಆದ್ದರಿಂದ ಸಂಗಂ ಸಾಹಿತ್ಯದ ನಂತರ ತೊಲ್ಕಾಪ್ಪಿಯಂ ರಚಿತವಾಯಿತು. ಶಿವರಾಜ ಪಿಳ್ಳೆಯವರು ಸಹ ಇದೇ ನಿರ್ಧಾರಕ್ಕೆ ಬಂದಿದ್ದಾರೆ. ದೀರ್ಘ ವರ್ಣನಾತ್ಮಕ ಪದ್ಯಗಳನ್ನು ಸಂಗಂ ಸಾಹಿತ್ಯವನ್ನು ಲಿಪಿಗೊಳಿಸಿ ಸಂಗ್ರಹಿಸಿದ ಕಾಲದಲ್ಲಿ ರಚಿಸಿ ಸೇರಿಸಲಾಯಿತೆಂದು ಎಂ.ಜಿ.ಎಸ್. ನಾರಾಯಣನ್ ಹೇಳಿದ್ದಾರೆ.
ಅನೇಕ ವಿದ್ವಾಂಸರು ತೊಲ್ಕಾಪ್ಪಿಯಂ ಏಕಕಾಲದಲ್ಲಿ, ಏಕವ್ಯಕ್ತಿಯಿಂದ ರಚಿತವಾಗಿರದೆ ಹಲವಾರು ಹಂತಗಳಲ್ಲಿ ,ಹಲವರಿಂದ ರಚಿತವಾಗಿದೆಯೆಂದು ಭಾವಿಸುತ್ತಾರೆ.
ತೊಲ್ಕಾಪ್ಪಿಯಂ ಕಾಲ ನಿಗದಿಗೆ ಸಹಾಯಕವಾಗಿರುವ ಅಂಶಗಳನ್ನು ಶಿವರಾಮ ಪಿಳ್ಳೆ ತಮ್ಮ ‘ಕ್ರೋನಾಲಜಿ ಆಫ್ ಅರ್ಲಿ ತಮಿಳಿಯನ್ಸ್’ ಕೃತಿಯಲ್ಲಿ ಸೂಚಿಸಿದ್ದಾರೆ. ಅವುಗಳು ಸ್ಥೂಲವಾಗಿ ಹೀಗಿವೆ.
ಕುರುಳ್ ಹಾಗೂ ತೊಲ್ಕಾಪ್ಪಿಯಂ ಸಂಗಂ ಸಾಹಿತ್ಯದ ಕಾಲಕ್ಕೆ ಸೇರಿದುವಲ್ಲ. ಏಕೆಂದರೆ ಅಂತಹ ಕೃತಿಗಳು ಆ ಕಾಲಕ್ಕೆ ಅಸ್ತಿತ್ವದಲ್ಲಿ ಇದ್ದುದೇ ಆದರೆ ಅವುಗಳಿಗೆ ವಿವಿಧ ರಾಜರುಗಳಿಂದ ಮನ್ನಣೆ ಗೌರವ ದಕ್ಕದೇ ಇರುತ್ತಿರಲಿಲ್ಲ ಮತ್ತು ಸಂಗಂ ಕವಿಗಳಿಂದ ಉಲ್ಲೇಖಿತವಾಗದೇ ಹೋಗುತ್ತಿರಲಿಲ್ಲ. ಆದ್ದರಿಂದ ತೊಲ್ ಮತ್ತು ಕುರುಳ್ ನಂತರದ ಕಾಲಾವಧಿಯವು. ತಮಿಳಿನ ಆದಿಕೃತಿ, ತಮಿಳಗಂನ ಸಾಹಿತ್ಯಕ್ಕೆ ಮಾರ್ಗ ಮತ್ತು ಪರಂಪರೆಯನ್ನು ಒದಗಿಸಿದ ಕೃತಿಯೆಂದು ಪ್ರಶಂಸಿಲ್ಪಟ್ಟ ತೊಲ್ಕಾಪ್ಪಿಯಂನ್ನು ಸಂಗಂ ಕಾಲದ 473 ಕವಿಗಳು, ಮುವತ್ತು ಸಾವಿರಕ್ಕೂ ಹೆಚ್ಚಿನ ಸಾಲುಗಳುಳ್ಳ ತಮ್ಮ ಸಾಹಿತ್ಯದಲ್ಲಿ ಒಮ್ಮೆಯೂ ಉಲ್ಲೇಖಿಸದಿರುವುದು, ಮಹಾ ಸಾಹಿತ್ಯ ಪ್ರೇಮಿಗಳೆಂದು ಪರಿಗಣಿತರಾಗಿರುವ ಆದಿಪಾಂಡ್ಯರಲ್ಲಿ ಯಾರೊಬ್ಬರ ಆಸ್ಥಾನದಲ್ಲೂ ಇದರ ಬಗ್ಗೆ ಚಕಾರವಿಲ್ಲದಿರುವುದು ಸೋಜಿಗದ ವಿಚಾರವಾಗಿದೆ.
ವೆಂಗಡವನ್ನು ಮೊದಲಿಗೆ ಉಲ್ಲೇಖಿಸಿದ ಕವಿ ಅಗನಾನೂರಿನಲ್ಲಿರುವ ಕಲ್ಲಾಡನಾರ್. ಎರಡನೇ ಕರಿಕಾಲನ ಕಾಲದಲ್ಲಿ ಮೊದಲ ಬಾರಿಗೆ ಚೋಳ ಸಾಮ್ರಾಜ್ಯ ವೆಂಕಟದವರೆಗೆ ವಿಸ್ತರಿಸಿತು. ಈ ಮೊದಲು ತಮಿಳಗಂ ಆವರೆಗೆ ಹರಡಿದ ನಿದರ್ಶನಗಳು ಸಂಗಂ ಸಾಹಿತ್ಯದಲ್ಲಿ ಕಾಣಸಿಗುವುದಿಲ್ಲ.ಸಾಂಪ್ರದಾಯಿಕ ನಂಬಿಕೆಯಂತೆ ತೊಲ್ಕಾಪ್ಪಿಯಾರ್ನ ಸಹಪಾಠಿಯಾಠಿಯಾಗಿದ್ದ ಪಣಂಪಾರನಾರ್ ತೊಲ್ಕಾಪ್ಪಿಯಂಗೆ ಪ್ರಸ್ತಾವನಾ ವಚನವೊಂದನ್ನು ಸೇರಿಸಿದ್ದಾನೆ. ಇದರಲ್ಲಿ ಈತ ತಮಿಳಗಂನ ಉತ್ತರದ ಗಡಿ ವೇಂಗಡವೆಂದು ಮೊದಲ ಬಾರಿಗೆ ಸೂಚಿಸಿದ್ದಾನೆ. ಆದ್ದರಿಂದ ತೊಲ್ಕಾಪ್ಪಿಯಂ ಚೋಳರು ವೇಂಗಡದವರೆಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುವ ಮುನ್ನ ರಚಿತವಾಗಿರುವ ಸಾಧ್ಯತೆಯಿಲ್ಲ. ಆದ್ದರಿಂದ ತೊಲ್ಕಾಪ್ಪಿಯಂ ಅಗನಾನೂರು ನಂತರ ರಚಿತವಾಗಿದೆ.
ಸಂಗಂ ಸಾಹಿತ್ಯದ ಆಂತರಿಕ ಮೂಲಗಳಿಂದ ಚೋಳ,ಚೇರ,ಪಾಂಡ್ಯರು ಪೂರ್ಣ ಪ್ರಮಾಣದ ದೊರೆಗಳಾಗಿ ಸಂಸ್ಥಾಪಿತರಾಗದೆ ನೆರೆಹೊರೆಯ ಗುಡ್ಡಗಾಡು,ಬುಡಕಟ್ಟು ಜನಾಂಗಗಳೊಂದಿಗೆ ತಮ್ಮ ಪ್ರದೇಶ ವಿಸ್ತರಣೆಯ ಸೆಣಸಾಟದಲ್ಲಿ ಸದಾ ನಿರತರಾಗಿದ್ದರು. ಉರೈಯೂರು ಕರುವೂರು ಹಾಗೂ ಕೂಡಲ್ಗಳಲ್ಲಿ ರಾಜಧಾನಿಗಳನ್ನು ನೆಲೆಗೊಳಿಸಿದ ನಂತರವೇ ಅವರು ಅಧಿಕೃತ ರಾಜರಂತೆ ಆಳಿದರು. ತೊಲ್ಕಾಪ್ಪಿಯಂ ಮೂವರು ರಾಜರುಗಳನ್ನು ಬೃಹತ್ ಸೇನೆ ಹೊಂದಿದ ರಾಜರಂತೆ ಪರಿಪೂರ್ಣ ಆಡಳಿತ ಸೂತ್ರ ಹಿಡಿದವರಂತೆ,ಕಿರೀಟಧಾರಿಗಳಂತೆ ಚಿತ್ರಿಸಿರುವುದರಿಂದ ಅದರ ರಚನೆ ತಮಿಳಗಂನ ಸಂಸ್ಥಾಪಿತ ರಾಜ್ಯಗಳ ನಂತರವೇ ರಚನೆಯಾಗಿರಬೇಕು. ತೊಲ್ಕಾಪ್ಪಿಯಂನ ಕಾಲದಲ್ಲಿ ತಮಿಳಗಂ ಪಾಂಡ್ಯಮಂಡಲಂ, ಮಲೈಮಂಡಲಂ,ಚೋಳಮಂಡಲಂ ಮತ್ತು ತೊಂಡೈಮಂಡಲಂ ಎಂಬ ನಾಲ್ಕು ರಾಜಕೀಯ ಸಂಸ್ಥಾನಗಳಿಂದಾಗಿತ್ತೆಂದು ಸೂಚಿತವಾಗಿದೆ. ಇದು ಸಂಗಂ ಸಾಹಿತ್ಯದ ನಂತರದ ತಮಿಳಗಂನ ಸ್ವರೂಪ. ಸಂಗಂ ಸಾಹಿತ್ಯದಿಂದ ಇಮ್ಮಡಿ ಕರಿಕಾಲ ಮತ್ತು ಮುದುಕುಡುಮಿ ಪೆರುವಾಳುಡಿಯ ಕಾಲದಲ್ಲಿ ಯಾಗ ಯಜ್ಞಾದಿಗಳ ನಿರ್ವಹಣೆಗೆ ಆರ್ಯರನ್ನು ಉತ್ತರದಿಂದ ಕರೆತಂದಿರುವ ಸೂಚನೆಗಳಿವೆ. ಈ ಆರ್ಯರು ಬೆರಳೆಣಿಕೆಯಷ್ಟಿದ್ದು ಅವರಲ್ಲಿ ಎರಡು ಪಂಗಡಗಳಿದ್ದು ಒಂದು ಪಂಗಡ ವೈದಿಕ ಕರ್ತವ್ಯಗಳಲ್ಲಿ ನಿರತವಾಗಿದ್ದರೆ ಮತ್ತೊಂದು ಪಂಗಡ ಕರಕುಶಲ ವೃತ್ತಿಯಲ್ಲಿ ತೊಡಗಿದ್ದ ಕುರುಹುಗಳಿವೆ. ಈ ಅಲ್ಪ ಸಂಖ್ಯೆಯ ಹೊರಗಿನವರು ತಮಿಳಗಂನ ಮೇಲೆ ಪ್ರಭಾವ ಬೀರುವಷ್ಟು ಪ್ರಬಲರಾಗಿರಲಿಲ್ಲ. ಆದರೆ ತೊಲ್ಕಾಪ್ಪಿಯಂ ಹಲವಾರು ಆರ್ಯ ದೈವಗಳಿಗೆ ಸ್ಥಾನಗಳನ್ನು ಕಲ್ಪಿಸಿದೆ. ಸಂಗಂ ಸಾಹಿತ್ಯದಲ್ಲಿ ಎಲ್ಲಿಯೂ ಕಾಣ ಸಿಗದ ವರುಣನ ಉಲ್ಲೇಖ ತೊಲ್ಕಾಪ್ಪಿಯಂನಲ್ಲಿದೆ. ಆದ್ದರಿಂದ ತಮಿಳಗಂ ಗಣನೀಯವಾಗಿ ಉತ್ತರದ ಪ್ರಭಾವಕ್ಕೊಳಗಾದ ನಂತರವೇ ತೊಲ್ಕಾಪ್ಪಿಯಂ ರಚಿತವಾಗಿದೆ.(ಕೃ:5- ಪು.262)ತೊಲ್ಕಾಪ್ಪಿಯಂನಲ್ಲಿನ ವರುಣನ ಉಲ್ಲೇಖ ಅದು ಋಗ್ವೇದದಷ್ಟೇ ಪ್ರಾಚೀನವೆಂಬ ವಾದಕ್ಕೆ ಅನುಕೂಲಕರವಾಗಿರುವಂತೆ ಕಾಣುತ್ತದೆ. ಆದರೆ ಇದು ಸಂಗಂ ಸಾಹಿತ್ಯ ತೊಲ್ಕಾಪ್ಪಿಯಂ ಹಾಕಿದ ಮಾರ್ಗದಲ್ಲಿ ಸಾಗಿಬಂದಿತೆಂಬ ಹೇಳಿಕೆಗೆ ವಿರುದ್ಧವಾಗುತ್ತದೆ.
ತೊಲ್ಕಾಪ್ಪಿಯಂನ 135ನೇ ಸೂತ್ರ ಕಳವಿಯಲ್ನಲ್ಲಿ ಒರೈ ಶಬ್ಧ ಬಂದಿದೆ. ಒರೈ ಮೂಲತಃ ಗ್ರೀಕರ ಹೋರಾ ಶಬ್ಧದ ತಮಿಳು ರೂಪ. ಗುಪ್ತರ ಕಾಲದಲ್ಲಿ ಭಾರತೀಯ ಖಗೋಳಶಾಸ್ತ್ರ ಗ್ರೀಕರಿಂದ ಅಪಾರವಾಗಿ ಪ್ರಭಾವಿತಗೊಂಡಿತು. ಈ ಅವಧಿ ಕ್ರಿ.ಶ. 320 ರಿಂದ ಕ್ರಿ.ಶ. 650 ರವರೆಗೆ ವಿಸ್ತರಿಸಿದುದನ್ನು ಖ್ಯಾತ ಭಾರತೀಯ ಮತ್ತು ಪಾಶ್ಯಾತ್ಯ ವಿದ್ವಾಂಸರು ಒಪ್ಪಿದ್ದಾರೆ. ಐದನೇ ಶತಮಾನದ ಕೊನೆಗಿದ್ದ ಆರ್ಯಭಟ ಹಾಗೂ ಆರನೇ ಶತಮಾನದ ವರಾಹಮಿಹಿರ ಗ್ರೀಕರ ಖಗೋಳ ತತ್ವಗಳನ್ನು ಅರಿತವರಲ್ಲಿ ಮೊದಲಿಗರು. ಇವರೇ ಗ್ರೀಕರ ಹೋರಾವನ್ನು ಮೊದಲಿಗೆ ಸ್ವೀಕರಿಸಿದರು. ಆದ್ದರಿಂದ ಸಂಸ್ಕೃತ ಮೂಲದ ಹೋರಾದಿಂದ ತಮಿಳಿನ ಒರೈ ಶಬ್ಧ ಪಡೆದ ತೊಲ್ಕಾಪ್ಪಿಯಂ ಇದಕ್ಕಿಂತ ಹಿಂದಿನದಿರಲಾರದು(ಕೃ:5-ಪು.263, ಕೃ3-ಪ:71). ಇದಕ್ಕೆ ಪ್ರತಿಯಾಗಿ ತೊಲ್ಕಾಪ್ಪಿಯಂ ನೇರವಾಗಿ ಬಂದಿರದೆ ಗ್ರೀಕರಿಂದ ಈ ಶಬ್ಧವನ್ನು ಪಡೆದಿರಬಹುದೆಂದು ವಾದಿಸಬಹುದು. ತಮಿಳಗಂ ಕ್ರಿ.ಶ 1-3 ಶತಮಾನದ ಅವಧಿಯಲ್ಲಿ ಗ್ರೀಕರ ಸಂಪರ್ಕ ಪಡೆದಿದ್ದುದು ಸ್ಪಷ್ಟವಾಗಿದೆ. ಇದರಿಂದ ಸಂಗಂ ಸಾಹಿತ್ಯದ ಮತ್ತು ತೊಲ್ಕಾಪ್ಪಿಯಂ ಸಮಕಾಲೀನವಾಗುತ್ತವೆ. ಆಗ ಸಂಗಂ ಸಾಹಿತ್ಯದಲ್ಲಿ ಒಮ್ಮೆಯಾದರೂ ತೊಲ್ಕಾಪ್ಪಿಯಂ ಬಗೆಗಾಗಲಿ, ಅದರ ಕರ್ತೃವಿನ ಬಗೆಗಾಗಲಿ, ಪೋಷಿಸಿದವರ ಬಗೆಗಾಗಲಿ ವಿವರಗಳೇಕೆ ದಕ್ಕುವುದಿಲ್ಲ ಎಂಬ ಸಮಸ್ಯೆ ಬಗೆಹರಿಯದೆ ಉಳಿಯುತ್ತದೆ.
ಸಂಗಂ ಸಾಹಿತ್ಯ ಕಾಲದ ನಂತರವೇ ತೊಲ್ಕಾಪ್ಪಿಯಂ ರಚಿತವಾಗಿದೆ. ಇದರ ಬದಲು ತೊಲ್ಕಾಪ್ಪಿಯಂ ಮೊದಲಿಗಿದ್ದು ಅದರ ಆಧಾರದ ಅಂಶಗಳ ಮೇಲೆ ಸಂಗಂ ಸಾಹಿತ್ಯ ರಚನೆಯಾಗಿದೆಯೆಂದರೆ ಆದಿ ತಮಿಳಗಂನ ರಾಜಚರಿತ್ರೆ,ವಂಶಾವಳಿಗಳನ್ನು ಕಾಲಾನುಕ್ರಮಣಿಕೆಯಲ್ಲಿ ಜೋಡಿಸಲು ಸಾಧ್ಯವಿಲ್ಲ.
ತೊಲ್ಕಾಪ್ಪಿಯಂ ಕಾಲ ಮತ್ತು ಸ್ವರೂಪ : ವಿದ್ವಾಂಸರ ದೃಷ್ಟಿಯಲ್ಲಿ
ಕಾಲದ ದೃಷ್ಟಿಯಿಂದ ತೊಲ್ಕಾಪ್ಪಿಯಂನಷ್ಟು ವಿವಾದಿತ ಕೃತಿ ಜಗತ್ತಿನಲ್ಲಿ ಮತ್ತೊಂದಿಲ್ಲ. ಇದರ ರಚನೆಯ ಕಾಲ ಕ್ರಿ. ಪೂ 5000- ಕ್ರಿ.ಶ. 1000 ರ 6000 ವರ್ಷಗಳ ಅವಧಿಯಲ್ಲಿ ತಾಕಲಾಡುತ್ತಿದೆ. ಈ ಕೃತಿಯ ಸ್ವರೂಪ ಮತ್ತು ತಿರುಳಿನ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆಯಾದರು ಅಂತಿಮವಾಗಿ ಒಂದು ನಿರ್ಧಾರಕ್ಕೆ ಬರುವಲ್ಲಿ ಒಮ್ಮತವಿಲ್ಲ.
-ಝೆಕ್ ಸಂಜಾತನಾದ ಖ್ಯಾತ ಭಾರತೀಯಶಾಸ್ತ್ರಜ್ಞ ಹಾಗೂ ತಮಿಳು ಭಾಷೆಯ ಪಂಡಿತನಾದ ಕಮಿಲ್ ಝ್ವೆಲೆಬಿಲ್ ತೊಲ್ಕಾಪ್ಪಿಯಂನ ಮೂಲ ತಿರುಳಾದ ಉರ್-ತೊಲ್ಕಾಪ್ಪಿಯಂ ಕ್ರಿ.ಶ. 1ರಿಂದ 2.0 ನೇಶತಮಾನದ ಅವಧಿಯದು ಇರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ(ಕೃ:3- ಪು.68) . ಇದಕ್ಕೆ ಅವರು ತಮಿಳು ಬ್ರಾಹ್ಮಿ ಶಿಲಾಶಾಸನಗಳ ಬರಹಗಳನ್ನು, ತೊಲ್ಕಾಪ್ಪಿಯಂ ಮತ್ತು ಇವುಗಳಲ್ಲಿನ ಭಾಷೆಯನ್ನು ಪರಿಗಣಿಸಿದ್ದಾರೆ. ಆದರೆ ಈ ತೀರ್ಮಾನಕ್ಕೆ ಅಧಾರವಾದ ಯಾವುದೇ ನಿರ್ದಿಷ್ಟ ಸಕಾರಣಗಳನ್ನು ಅವರು ನೀಡದೆ ಹಲವಾರು ಊಹೆಗಳ ಮೇಲೆ ನಿಂತಿದೆ. ಝ್ವೆಲೆಬಿಲ್ರವರ ತೀರ್ಮಾನ ಸಂಗಂ ಸಾಹಿತ್ಯ ಮತ್ತು ತೊಲ್ಕಾಪ್ಪಿಯಂ ಸಮಕಾಲೀನತೆಯನ್ನು ಸಾರುತ್ತದೆ.
-ಭಾರತೀಯಶಾಸ್ತ್ರದ ಖ್ಯಾತ ವಿದ್ವಾಂಸ ಜಪಾನಿನ ತಕಹಸಿ ತಕನೊಬು ತೊಲ್ಕಾಪ್ಪಿಯಂನಲ್ಲಿ ಹಲವು ಪದರಗಳಿದ್ದು ಇದರಲ್ಲಿ ಅತ್ಯಂತ ಹಳೆಯದು ಎರಡನೇ ಶತಮಾನಕ್ಕೆ ಸೇರಿದ್ದು ಕೃತಿ 3-4 ನೇ ಶತಮಾನದ ವೇಳೆಗೆ ಪೂರ್ಣಗೊಂಡಿರಬಹುದೆಂದು ಹೇಳಿದ್ದಾರೆ.
-ಸಂಶೋಧಕರಾದ ರಾಮಸ್ವಾಮಿ ಮತ್ತು ವಿಜಯ ತೊಲ್ಕಾಪ್ಪಿಯಂ ಕಾಲ ಕ್ರಿ. ಪೂ 3 ರಿಂದ ಕ್ರಿ.ಶ 5.0 ಇರಬಹುದೆಂದು ಸೂಚಿಸಿದ್ದಾರೆ. ಇವರು ಇದು ಏಕ ಕಾಲದಲ್ಲಿ ಏಕ ವ್ಯಕ್ತಿಯಿಂದ ರಚಿತವಾಗದೆ ಹಂತಹಂತವಾಗಿ ಶತಮಾನಗಳ ಕಾಲ ಹಲವರಿಂದ ರೂಪುಗೊಂಡಿತೆಂದು ಭಾವಿಸುತ್ತಾರೆ.
-ತಮಿಳು ಲೆಕ್ಸಿಕಾನ್ನ ಕೃತಿಕಾರರಾದ ವಯ್ಯಾಪುರಿ ಪಿಳ್ಳೈಯವರು ತೊಲ್ಕಾಪ್ಪಿಯಂ ಕಾಲ ಕ್ರಿ.ಶ. 5-6 ನೇ ಶತಮಾನಕ್ಕಿಂತ ಮುಂಚಿನದಲ್ಲವೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.
-ಕಂಪ್ಯಾರಿಟಿವ್ ಗ್ರಾಮರ್ ಆಫ್ ದ್ರವಿಡಿಯನ್ ಲಾಂಗ್ವೇಜಸ್ ರಚಿಸಿದ 19ನೇಶತಮಾನದ ಖ್ಯಾತ ತಮಿಳು ಭಾಷಾ ವಿದ್ವಾಂಸ ರಾಬರ್ಟ್ ಕಾಲ್ಡ್ವೆಲ್ ತಮಿಳಿನ ಎಲ್ಲಾ ಸಾಹಿತ್ಯ 8-9ನೇ ಶತಮಾನದಿಂದ ಪ್ರಾರಂಭವಾಗಿ 12-13ನೇ ಶತಮಾನದವರೆಗೆ ವಿಸ್ತರಿಸಿದ ಜೈನ ಕಾಲದ್ದೆಂದು ತಿಳಿಸಿದ್ದಾನೆ. ಆದರೆ ಕಾಲ್ಡ್ವೆಲ್ನ ಮರಣಾನಂತರ ಯು.ವಿ. ಸುಬ್ರಹ್ಮಣ್ಯ ಅಯ್ಯರ್ ಪ್ರಾಚೀನ ಕೃತಿಗಳಾದ ಪತ್ತುಪ್ಪತ್ತು ಹಾಗೂ ಪುರನಾನೂರುಗಳನ್ನು ಶೋಧಿಸಿ ಪ್ರಕಟಿಸಿದರು. ಇವುಗಳ ಪರಿಚಯ ಕಾಲ್ಡ್ವೆಲ್ಗೆ ಇರಲಿಲ್ಲ.
- ಖ್ಯಾತ ಸಸ್ಯಶಾಸ್ತ್ರಜ್ಞ ಮತ್ತು ತಮಿಳು ಭಾಷೆಯಲ್ಲಿ ಪರಿಣಿತಿಯಿದ್ದ ಬಿ.ಜಿ.ಎಲ್. ಸ್ವಾಮಿಯವರು ತೊಲ್ಕಾಪ್ಪಿಯಂನಲ್ಲಿ ನಿರೂಪಿತವಾಗಿರುವ ಸಾಮಾಜಿಕ,ರಾಜಕೀಯ ಮತ್ತು ಸಾಂಸ್ಕೃತಿಕ ಸ್ಥಿತಿಗಳನ್ನು 11-13 ಶತಮಾನಗಳಲ್ಲಿ ಮೂಡಿಬಂದ ತೊಲ್ಕಾಪ್ಪಿಯಂ ಮೇಲಿನ ಭಾಷ್ಯಗಳಲ್ಲಿನ ಸ್ಥಿತಿಗತಿಗಳೊಂದಿಗೆ ಹೋಲಿಸಿ ತೊಲ್ಕಾಪ್ಪಿಯಂ 10ನೇ ಶತಮಾನಕ್ಕಿಂತ ಮುಂಚಿನದಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
- ಟಿ. ಆರ್ ಶೇಷಅಯ್ಯಂಗಾರ್ ತೊಲ್ಕಾಪ್ಪಿಯಂ ಕ್ರಿ.ಪೂ. ಅವಧಿಯದೆಂಬ ಅಭಿಪ್ರಾಯ ತಳೆದಿದ್ದಾರೆ.
- ತಮಿಳು ಭಾಷಾ ವಿದ್ವಾಂಸ ಹಾಗೂ ಶಿಲಾಶಾಸನ ಪರಿಣಿತ ಡಾ. ಗಿಫ್ಟ್ ಶಿರೋಮಣಿಯವರು ಆನೈಮಲೈಯಲ್ಲಿನ ಶಿಲಾಶಾಸನದ ತಮಿಳು ಬ್ರಾಹ್ಮಿಯ ವಿಶ್ಲೇಷಣೆಯ ಆಧಾರದ ಮೇಲೆ ತೊಲ್ಕಾಪ್ಪಿಯಂ ಕಾಲವನ್ನು ಅಶೋಕನ ಕಾಲದವರೆಗೆ (ಕ್ರಿ. ಪೂ 3ನೇ ಶತಮಾನ) ಹಿಂದೂಡಿದ್ದಾರೆ. (ನೋಡಿರಿ : ತಮಿಳು ಬ್ರಾಹ್ಮಿ).
- ಹಳೆ ತಮಿಳಿನ ವಿದ್ವಾಂಸರಾದ ವಿ.ಎಸ್. ರಾಜಂ ತೊಲ್ಕಾಪ್ಪಿಯಂ ಕಾಲ ಕ್ರಿ.ಶ. 5 ನೇ ಶತಮಾನಕ್ಕಿಂತಲೂ ಮೊದಲೆಂದು ಅಭಿಪ್ರಾಯಪಟ್ಟಿದ್ದಾರೆ. ಇವರು ಸಂಸ್ಕೃತ ಹಾಗೂ ತೊಲ್ಕಾಪ್ಪಿಯಂಗಳ ತೌಲನಿಕ ಅಧ್ಯನ ನಡೆಸಿ ಇವೆರಡಕ್ಕೂ ಒಂದೇ ಮೂಲವನ್ನು ಒಪ್ಪದೇ, ಇವೆರಡರ ಮಧ್ಯದ ಸಾಮ್ಯತೆಗಳನ್ನು ಅಲ್ಲಗಳೆಯದೆ ಪ್ರಾಚೀನ ಭಾರತದಲ್ಲಿ ವಿಭಿನ್ನ ವ್ಯಾಕರಣ ಶಾಖೆಗಳಿರುವುದರತ್ತ ಗಮನ ಸೆಳೆದಿದ್ದಾರೆ.
- ಡಚ್ ವಿದ್ವಾಂಸ ಹೆರ್ಮಾನ್ ಟೀಕೆನ್ ಇಡೀ ಸಂಗಂ ಸಾಹಿತ್ಯದ ಮೇಲೆ ಸಂಸ್ಕೃತದ ಕಾವ್ಯ ಪರಂಪರೆಯನ್ನು ಗುರುತಿಸಲು ಯತ್ನಿಸಿದ್ದಾನೆ. ಈತನ ಪ್ರಕಾರ ಒಂಬತ್ತನೇ ಶತಮಾನದಲ್ಲಿದ್ದ ಪಾಂಡ್ಯರು ತಮಿಳನ್ನು ಸಂಸ್ಕೃತದ ಸ್ಥಾನಮಾನಕ್ಕೆ ಏರಿಸಲು ನಡೆಸಿದ ಪ್ರಯತ್ನದ ಫಲವಾಗಿ ತೊಲ್ಕಾಪ್ಪಿಯಂ ಹಾಗೂ ಸಂಗಂ ಸಾಹಿತ್ಯ ಸೃಜಿತವಾಗಿದೆ. ಈತ ಸಂಗಂ ಸಾಹಿತ್ಯದಲ್ಲಿರುವ ಎಲ್ಲಾ ಅವಧಿಗಳನ್ನು ಮರುತೇದೀಗೊಳಿಸಿ 9ನೇ ಶತಮಾನಕ್ಕೆ ತಂದಿದ್ದಾರೆ. ಆದರೆ ಈತ ಅನುಸರಿಸಿದ ವಿಧಾನಗಳನ್ನು ಜಾರ್ಜ್ ಹಾರ್ಟ್, ಜಿ.ಇ.ಫೆರೋ-ಲುಝ್ವಿ ಎನ್.ಎ. ಮೋನಿಯಸ್ನಂತಹ ಖ್ಯಾತ ವಿದ್ವಾಂಸರು ಸಮೂಲಾಗ್ರವಾಗಿ ಟೀಕಿಸಿದ್ದಾರೆ. ಕ್ರಿ.ಶ 10ನೇ ಶತಮಾನಕ್ಕೆ ಸೇರಿದುದೆಂದು ಅಂದಾಜಿಸಲಾದ ಕಲ್ಲಾಡನಾರ್ನ ಕಲ್ಲಾಟಂ ಸಂಗಂ ಸಾಹಿತ್ಯದಿಂದ ಪ್ರಭಾವಿತಗೊಂಡ ಕೊನೆಯ ಕೃತಿಯೆಂದು ಪರಿಗಣಿಸಲಾಗಿದೆ. ಇದು ಅಹಂ ಪರಂಪರೆಯನ್ನು ಅನುಸರಿಸಿ ಉದ್ದೇಶಪೂರ್ವಕವಾಗಿ ಪ್ರಾಚೀನ ಸ್ವರೂಪದಲ್ಲಿ ರಚಿಸಲ್ಪಟ್ಟಿದೆ . ಇದು 10 ನೇ ಶತಮಾನದಲ್ಲಿ ಸಂಗಂ ಸಾಹಿತ್ಯದ ಅನುಕರಣೆಗಳಿದ್ದುದನ್ನು ದೃಢಪಡಿಸುತ್ತ ಹೆರ್ಮಾನ ಟೀಕೆನ್ ದೃಷ್ಟಿಯನ್ನು ಅಂಶಿಕವಾಗಿ ಸಂಗಂ ಸಾಹಿತ್ಯದ ಕೆಲ ಭಾಗಕ್ಕೆ ಅನ್ವಯವಾಗುವ ಸಾಧ್ಯತೆಯನ್ನು ಸೂಚಿಸುತ್ತದೆ.
- ತೊಲ್ಕಾಪ್ಪಿಯಂ ಸ್ವರರಹಿತ ವ್ಯಂಜನಗಳನ್ನು (ಶುದ್ಧ ವ್ಯಂಜನ) ಗುರುತಿಸಲು ಪುಲ್ಲಿಯ ಬಳಕೆಯನ್ನು ಹೇಳಿದೆ. ಈ ಬಳಕೆ ಕಂಡು ಬರುವುದೆಂದು ಹೇಳಲಾಗುತ್ತಿರುವ ಅರಿಕಮೇಡು ಬರಹಗಳ ಆಧಾರದ ಮೇಲೆ ಐರಾವತಂ ಮಹಾದೇವನ್ ಈ ಕೃತಿಯ ಕಾಲ ಕ್ರಿ.ಶ. 2 ಎಂದು ನಿರ್ಧರಿಸಿ ತೊಲ್ಕಾಪ್ಪಿಯಂ ಮತ್ತು ತಮಿಳು-ಬ್ರಾಹ್ಮಿ ಶಿಲಾಬರಹಗಳಲ್ಲಿನ ಭಾಷಾ ಸ್ವರೂಪ ಒಂದೇ ಎಂದಿದ್ದಾರೆ. ಇದನ್ನು ಕಮಿಲ್ ಝ್ವೆಲೆಬಿಲ್ ಒಪ್ಪಿಲ್ಲ. ತಮಿಳು-ಬ್ರಾಹ್ಮಿ ಬರಹಗಳು ಹಲವು ರೀತಿಯ ವಿವಾದಗಳಿಗೆ ಎಡೆಮಾಡಿಕೊಟ್ಟಿವೆ. (ನೋಡಿರಿ : ತಮಿಳು ಬ್ರಾಹ್ಮಿ).
- ಕೆಲ ವಿದ್ವಾಂಸರು ತೊಲ್ಕಾಪ್ಪಿಯಂ ಸಂಸ್ಕೃತ ವ್ಯಾಕರಣ ಗ್ರಂಥಗಳಿಗೆ ಹಲವಾರು ದೃಷ್ಟಿಯಲ್ಲಿ ಋಣಿಯಾಗಿದೆಯೆಂದು ಹೇಳಿದ್ದಾರೆ. ತೊಲ್ಕಾಪ್ಪಿಯಂ ಕತೃ ಐಂದಿರಂನಲ್ಲಿ ಪರಿಣಿತಿ ಗಳಿಸಿದ್ದನೆಂದು ಈ ಕೃತಿಯ ಪ್ರಸ್ತಾವನೆಯಲ್ಲಿ ಬಂದಿದೆ. ಎ.ಸಿ. ಬರ್ನೆಲ್ ಈ ಆಧಾರಧ ಮೇಲೆ ಸಂಸ್ಕೃತದ ಐಂದ್ರ ವ್ಯಾಕರಣ ಶಾಖೆಗೆ ಇದು ಸೇರಿರಬೇಕೆಂದು ತರ್ಕಿಸಿ ಸುದೀರ್ಘ ಸಂಶೋಧನೆ ನಡೆಸಿದ್ದಾನೆ. ಐಂದ್ರ ಪಾಣಿನಿಪೂರ್ವದ ವ್ಯಾಕರಣ ಶಾಖೆ. ಬರ್ನೆಲ್ ತೊಲ್ಕಾಪ್ಪಿಯಂನ ಮೊದಲೆರಡು ಅದಿಗಾರಂಗಳು ಕ್ರಿ.ಶ. 3-4 ನೇ ಶತಮಾನದ ಕಾತಂತ್ರ ಎಂದು ಹೆಸರಾಗಿರುವ ವೈದಿಕ ಪ್ರತಿಸಾಖ್ಯಗಳಿಗೆ ಹಾಗೂ ಕಾಚ್ಛಾಯನನ ಪಾಳಿ ವ್ಯಾಕರಣ ಗ್ರಂಥಗಳೊಂದಿಗೆ ಪಾರಿಭಾಷಿಕತೆ, ಕ್ರಮಜೋಡಣೆಯಲ್ಲಿ ಸಾಕಷ್ಟು ಸಾಮ್ಯತೆ ಹೊಂದಿದೆಯೆಂದು ಹೇಳಿದ್ದಾರೆ.
ಕಮಿಲ್ ಝ್ವೆಲೆಬಿಲ್ ಮತ್ತು ವಯ್ಯಾಪುರಿ ಪಿಳ್ಳೈಯವರ ವಾದಗಳನ್ನು ಪರಿಶೀಲಿಸಿ ತಕಹಸಿಯವರು ಕಾತಂತ್ರ ಪಾಣಿನಿ ನಂತರದ ವ್ಯಾಕರಣ ಶಾಖೆಯೆಂಬ ತೀರ್ಮಾನಕ್ಕೆ ಬಂದಿದ್ದಾರೆ.
- ತೊಲ್ಕಾಪ್ಪಿಯಂ ಪ್ರತಿಪಾದಿಸಿದ ವ್ಯಾಕರಣ ಸಂಸ್ಕೃತ ವ್ಯಾಕರಣ ಗ್ರಂಥಗಳಿಗೆ ಅಭಾರಿಯಾಗಿದೆಯೆಂದು ಹಾರ್ಟ್ ಜಾರ್ಜ್ ಹೇಳಿದ್ದಾರೆ. ಮಾನವಧರ್ಮ ಶಾಸ್ತ್ರ, ಅರ್ಥಶಾಸ್ತ್ರ,ನಾಟ್ಯಶಾಸ್ತ್ರ , ಕಾಮಸೂತ್ರಗಳಂತಹ ಸಂಸ್ಕೃತದ ಹಲವಾರು ಕೃತಿಗಳ ಪ್ರಭಾವ ತೊಲ್ಕಾಪ್ಪಿಯಂ ಮೇಲೆ ಎದ್ದು ಕಾಣುತ್ತದೆ. ಪಾಣಿನಿ,ಪತಂಜಲಿ ವ್ಯಾಕರಣ ಗ್ರಂಥಗಳು ತೊಲ್ಕಾಪ್ಪಿಯಂ ಮೇಲೆ ಸಾಕಷ್ಟು ಪ್ರಭಾವ ಬೀರಿವೆ. ಸೊಲ್ಲದಿಗಾರಂನ ಕೆಲವು ಭಾಗಗಳು ಸಂಸ್ಕೃತ ಗ್ರಂಥಗಳ ನೇರ ಛಾಯೆಗಳಿವೆ . ಸೊಲ್ಲದಿಗಾರಂನ ಸೊಲ್419 ಪತಂಜಲಿ ಸೂತ್ರದ ನೇರ ಅನುವಾದದಂತಿದೆ ತೊಲ್ಕಾಪ್ಪಿಯಂನ ಪೊರುಳಾದಿಗಾರಂನಲ್ಲಿನ ಮೆಯ್ಪಾಡು ಭರತನ ನಾಟ್ಯಶಾಸ್ತ್ರದ ಅಷ್ಟರಸಗಳಿಗೆ ಹೊಂದಾಣಿಕೆಯಾಗುತ್ತದೆ. ತಕಹಸಿ ತಕನೊಬು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
-ಕಮಿಲ್ ಝ್ವೆಲೆಬಿಲ್ ತೊಲ್ಕಾಪ್ಪಿಯಂ ಯಾವುದೇ ಸಂಸ್ಕೃತ ಅಥವಾ ಪ್ರಾಕೃತ ಗ್ರಂಥದ ಆಧಾರದ ಮೇಲೆ ರಚಿತವಾಗಿದೆಯಂದು ಸಾಬೀತು ಮಾಡಲಾಗಿಲ್ಲ. ಆದರೆ ಅದರಲ್ಲಿನ ಆಂತರಿಕ ಸಾಕ್ಷ್ಯಗಳು ಅದರ ಕೃತಿಗಾರನಿಗೆ ಅವುಗಳ ಪರಿಚಯವಿದ್ದುದನ್ನು ಖಚಿತಪಡಿಸುತ್ತವೆ ಎಂದು ಸಾರಿ ಆರು ಅಂಶಗಳಲ್ಲಿ ತೊಲ್ಕಾಪ್ಪಿಯಂ ಸಂಸ್ಕೃತದಿಂದ ಪ್ರಭಾವಿತವಾಗಿದೆಯೆಂದು ಗುರುತಿಸಿದ್ದಾರೆ. ಅವುಗಳೆಂದರೆ (1) ನಾಮಪದ , ಕ್ರಿಯಾಪದ ಆಖ್ಯಾತ , ಉಪಸರ್ಗ , ನಿಪಾತ , ವಿಭಜನೆಯಲ್ಲಿ ಪಾಣಿನಿಯ ನಾಲ್ಕು ವಿಧದ ವ್ಯವಸ್ಥೆಯ ಅನುಕರಣೆ. (2) ಸಂಯುಕ್ತಗಳ ವರ್ಗೀಕರಣದಲ್ಲಿ ಪೂರ್ವಪದಾರ್ಥ , ಉತ್ತರ ಪದಾರ್ಥ , ಅನ್ಯ ಪದಾರ್ತ ಮತ್ತು ಉಭಯ ಪದಾರ್ಥಗಳ ಪರಿಕಲ್ಪನೆಯ ಅನುಕರಣೆ (3)ಪತಂಜಲಿಯ ಹೇಳಿರುವ ಲಕ್ಷಣವನ್ನು ಇಲಕ್ಕಣಂ ಎಂದು ಪರಿಭಾವಿಸಿರುವುದು (4) ಕೌಟಿಲ್ಯನ ಅರ್ಥಶಾಸ್ತ್ರದ ತಂತ್ರಾಯುಕ್ತಗಳನ್ನು ಉತ್ತಿಕಳೆ ಎಂದು ಕರೆದು ಬಳಸಿಕೊಂಡಿರುವುದು (5) ಭರತನ ನಾಟ್ಯಶಾಸ್ತ್ರದ ಎಂಟು ಭಾವ ಮತ್ತು ಸ್ಥಿತಿಗಳನ್ನು ಮೆಯ್ಪಾಡುವಿನಲ್ಲಿ ಪರಿಗಣಿಸಿರುವುದು. (6) ವಾತ್ಸಾಯನನ ಕಾಮಶಾಸ್ತ್ರದ ದಶಸ್ಥಿತಿಗಳನ್ನು ಒಂಬತ್ತು ಸ್ಥಿತಿಗಳಾಗಿ ಮಾರ್ಪಡಿಸಿಕೊಂಡಿರುವುದು.
- ತೊಲ್ಕಾಪ್ಪಿಯಂ ವೈದಿಕ ಮಂತ್ರಗಳನ್ನು ಶ್ರೇಷ್ಟ ಋಷಿಗಳ ಮಹಾಭಾವನೆಗಳೆಂದು ಸಾರುತ್ತವೆ ಎಂದು ತೊಲ್ಕಾಪ್ಪಿಯಾರ್'ಗೆ ಸಂಸ್ಕೃತ , ಪ್ರಾಕೃತಗಳ ಪಾಂಡಿತ್ಯವಿದ್ದಿತೆಂದು ಶರ್ಮ ಹೇಳಿದ್ದಾರೆ.
-ತೊಲ್ಕಾಪ್ಪಿಯಂ ಸಾಹಿತ್ಯವನ್ನು ಅಹಂ ಮತ್ತು ಪುರಂಗಳಿಗೆ ಸೀಮಿತಗೊಳಿಸಿರುವುದರಿಂದ ಸೃಜನಶೀಲತೆಗೆ ದಕ್ಕೆಯಾಗಿದೆಯೆಂದು ಪೂರ್ಣಲಿಂಗ ಪಿಳ್ಳೆಯವರು ಹೇಳಿದ್ದಾರೆ. -ತೊಲ್ಕಾಪ್ಪಿಯಂನ ಪೊರುಳಾದಿಗಾರಂ ವಿಭಾಗದಲ್ಲಿ ಸಂಗಂ ಸಾಹಿತ್ಯ ಕುರಿತು ನೀಡಲಾಗಿರುವ ಅಹಂ+ಪುರಂ ಪ್ರಬೇಧ ,ಅದರ ವಿಶ್ಲೇಷಣೆ,ವರ್ಗೀಕರಣ , ವಿವರಣೆ ಆ ಕೃತಿಗಾರನ ಕಲ್ಪನೆಗಳಾಗಿದ್ದು ಮೂಲ ಸಂಗಂ ಸಾಹಿತ್ಯದಲ್ಲಿ ಅಂತಹ ಆಶಯವಿರಲಿಲ್ಲ. ಈ ಕೃತಿಯಲ್ಲಿನ ಯಾವುದೇ ವಿವರಣೆಗಳು, ಸಾಹಿತ್ಯಕ ಚೌಕಟ್ಟು ಎಂದಿಗೂ ಪ್ರಾಚೀನ ತಮಿಳು ಸಾಹಿತ್ಯದ ಮೇಲೆ ಪ್ರಭಾವ ಬೀರಿರಲಿಲ್ಲವೆಂದು ವಯ್ಯಾಪುರಿ ಪಿಳ್ಳೆ ಅಭಿಪ್ರಾಯ ಪಟ್ಟಿದ್ದಾರೆ.
- ಪ್ರಾಚೀನ ಮೌಖಿಕ ಸಾಹಿತ್ಯವನ್ನು ಆಧುನಿಕ ದೃಷ್ಟಿಯಲ್ಲಿ ನೋಡಿ ವಿಮರ್ಶಿಸುವುದು , ಮೆರುಗುಗೊಳಿಸುವುದು ಸರಿಯಲ್ಲವೆಂದು , ಸಂಗಂ ಸಾಹಿತ್ಯದ ಪುನರಾವರ್ತನೆಯ ಭಾಗಗಳು ಕಳಪೆಯಾಗಿವೆಯೆಂದು ಎಂ.ವರದರಾಜನ್ ತಿಳಿಸಿದ್ದಾರೆ .
- ಆರ್. ವೆಲ್ಲೆಕ್ ತಮಿಳಿನ ಸಂಗಂ ಸಾಹಿತ್ಯ ಹಿಂದಿದ್ದ ಜಾನಪದ ರೂಪದ ಪ್ರಭಾವದಿಂದ ನಂತರದ ಕಾಲದಲ್ಲಿ ಮೂಡಿಬಂದ ಸೂತ್ರಗಳಿಗನುಗುಣವಾಗಿ ರಚಿತವಾಗಿದೆಯೆಂದು ಹೇಳಿದ್ದಾರೆ.
- ವೃತ್ತಿ ಗಾಯಕ ಪಾಣಾರರು ಅಹಂ/ಪುರಂ ವರ್ಗಗಳಲ್ಲಿ ಸಾಹಿತ್ಯ ರಚಿಸುವ ಪರಂಪರೆ ಹೊಂದಿದ್ದು , ಆ ಸಂಪ್ರದಾಯ ನಿಂತ ನಂತರ ಈ ಸಾಹಿತ್ಯ ಪರಂಪರೆಯನ್ನು ಸೂತ್ರ ರೂಪದಲ್ಲಿ ಹೇಳುವ ಆಶಯವಾಗಿ ತೊಲ್ಕಾಪ್ಪಿಯಂನ ಪೊರುಳಾದಿಗಾರಂ ರಚಿತವಾಯಿತೆಂದು ಕೈಲಾಸಪತಿಯವರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ಲೇಷಣೆ
* ತೊಲ್ಕಾಪ್ಪಿಯಂ ವ್ಯಾಕರಣ ಗ್ರಂಥದ ಹೆಸರು ಮೊದಲ ಬಾರಿ ನಕ್ಕೀರಾರ್(ಕ್ರಿ.ಶ 8-10 ಶತಮಾನ) ಇರೈಯನಾರ್ ಅಹಪ್ಪೊಪರುಳ್ ಕೃತಿಗೆ ಬರೆದ ಭಾಷ್ಯದಲ್ಲಿ ಸಂಗಂ ಐತಿಹ್ಯಗಳ ಮೂಲಕ ಕಾಣಿಸಿಕೊಳ್ಳುತ್ತದೆ. (ಕೃ:3-ಪು:61,ಕೃ:2-ಪು:47). ಈ ಅಧಾರದ ಮೇಲೆ ಇದು ಎರಡನೇ ಸಂಗಂ ಕಾಲಕ್ಕೆ ಸೇರಿದ ಕೃತಿಯೆಂದು , ತಮಿಳಿನ ಲಭ್ಯ ಆದಿಗ್ರಂಥವೆಂದು ಪರಿಗಣಿಸಲಾಯಿತು. ತೊಲ್ಕಾಪ್ಪಿಯಂ ಕಾಲವನ್ನು ವಿದ್ವತ್ ದೃಷ್ಟಿಯಲ್ಲಿ ನಿರ್ಧರಿಸಿದುದ್ದಕ್ಕಿಂತಲೂ ಈ ನಂಬುಗೆ ಬಲವಾಗಿ ಬೇರೂರಿತು.
* ತಾಂತ್ರಿಕ ವಿಷಯಗಳ ಮಂಡನೆಯಲ್ಲಿ ಪ್ರಾಕೃತ ಮತ್ತು ಸಂಸ್ಕೃತಗಳಿಂದ ಒಂದು ನಿರ್ದಿಷ್ಟವಾದ ಪರಂಪರೆ ಮೂಡಿಬಂದಿದೆ. ಇದನ್ನು ಎಲ್ಲ ಭಾರತೀಯ ಭಾಷೆಗಳು ಅನುಸರಿಸಿವೆ. ಅವೆಂದರೆ :
(1) ಧ್ವನಿಶಾಸ್ತ್ರದನ್ವಯ ವಿವರಣೆ ಮತ್ತು ಅಕಾರಾದಿ ಜೋಡಣೆ (2) ಸೂತ್ರರೂಪಗಳಲ್ಲಿ ವಿಷಯ ಮಂಡನೆ (3) ತಂತ್ರ ಉಕ್ತಿ ಪದ್ದತಿ ಮತ್ತು ಅಂತಹ ತಂತ್ರಗಳ ಬಳಕೆ (4) ವ್ಯಾಖ್ಯಾನ ಮತ್ತು ಭಾಷ್ಯಗಳ ರಚನೆ – ವ್ಯಾಖ್ಯಾನ ಸಿದ್ಧಾಂತಗಳ ಅಳವಡಿಕೆ (5) ಸಂಕ್ಷಿಪ್ತೀಕರಣ , ಕೈಪಿಡಿ , ವಿವರಣಾತ್ಮಕ ಕೃತಿಗಳ ರಚನೆ (6) ತಾಂತ್ರಿಕ ಮತ್ತು ಪಾರಿಭಾಷಿಕ ಶಬ್ಧ ಸೃಷ್ಟಿ (7) ನಿಘಂಟು , ಕೋಶ , ಅಕಾರಾದಿಯಾಗಿ ವಿಷಯಗಳ ಜೋಡಣೆ
* ತೊಲ್ಕಾಪ್ಪಿಯಂ ರಚನೆ ಮತ್ತು ನಂತರದ ಅದರ ಮೇಲಿನ ಭಾಷ್ಯಗಳು ಈ ಪದ್ದತಿಯನ್ನು ಚಾಚೂ ತಪ್ಪದೆ ಅನುಸರಿಸಿವೆ. ಕ್ರಿ.ಶ 2 ನೇ ಶತಮಾನದಲ್ಲಿ ಶರ್ವವರ್ಮನಿಂದ ರಚಿತವಾದ ಸಂಸ್ಕೃತದ ಕಾತಂತ್ರ ವ್ಯಾಕರಣ ಗ್ರಂಥ ಶೀರ್ಷಿಕೆವಾರು ವಿಂಗಡಣೆಯನ್ನು ಅಳವಡಿಸಿಕೊಂಡಿದೆ. ತೊಲ್ಕಾಪ್ಪಿಯಂ ಈ ಮಾರ್ಗವನ್ನು ಅನುಸರಿಸಿದೆ. ಕಾವ್ಯಾವಲೋಕನ ಗ್ರಂಥದ ‘ಶಬ್ಧಸ್ಮೃತಿ’ ಅಧ್ಯಾಯದಲ್ಲಿ ಕನ್ನಡದ ವ್ಯಾಕರಣವನ್ನು ಮೊದಲಿಗೆ ವಿವರಿಸಿದ ನಾಗವರ್ಮ (1042) ಮತ್ತು ಶಬ್ಧಮಣಿದರ್ಪಣದ ಮೂಲಕ ಸಂಪೂರ್ಣ ಕನ್ನಡ ವ್ಯಾಕರಣ ಬರೆದಿರುವ ಕೇಶೀರಾಜ (1225) ತಮ್ಮ ಕೃತಿಯ ಜೋಡಣೆ ಮತ್ತು ತಂತ್ರಗಳಲ್ಲಿ ಕಾತಂತ್ರ ಗ್ರಂಥವನ್ನು ಅನುಸರಿಸಿದ್ದಾರೆ. ನಾಗವರ್ಮ ತನ್ನನ್ನು ‘ಅಭಿನವ ಶರ್ವವರ್ಮನೆಂದು ಕರೆದುಕೊಂಡು ಹೆಮ್ಮೆ ಪಟ್ಟಿದ್ದಾನೆ. ಇದರಿಂದ 10 -11 ನೇ ಶತಮಾನದಲ್ಲಿ ಕಾತಂತ್ರ ಪದ್ದತಿ ಮಾನ್ಯತೆಹೊಂದಿದ್ದು ದಕ್ಷಿಣ ಭಾರತದ ಭಾಷೆಗಳ ವ್ಯಾಕರಣ ರಚನೆಗೆ ಒಂದು ಚೌಕಟ್ಟನ್ನು ಒದಗಿಸಿತೆಂದು ಸೂಚಿತವಾಗುತ್ತದೆ.
* ತೊಲ್ಕಾಪ್ಪಿಯಂ ವ್ಯಾಖ್ಯಾನಕಾರ ನಾಚ್ಚಿಣಾರ್ಕ್ಕಿಣಿಯಾರ್ ತಿಳಿಸುವಂತೆ ಕವಿಗಳು ಪಾಂಡ್ಯರ ಅಸ್ಥಾನದ ಸಭೆಯ ಮುಂದೆ ತಮ್ಮ ಕೃತಿಗಳನ್ನು ಮಂಡಿಸಿ ಮನ್ನಣೆ ಪಡೆಯುತ್ತಿದ್ದುದು ನಿಜವಿರಬಹುದೆಂದು , ಅಗತ್ತಿಯಂ ಮತ್ತು ಉರ್-ತೊಲ್ಕಾಪ್ಪಿಯಂಗಳ ಮೂಲ ಚೌಕಟ್ಟು ಹೊರಹೊಮ್ಮಿ ಇಲ್ಲಿ ವಿಮರ್ಶೆಗೆ ಒಳಗಾಗಿರಬಹುದೆಂದು ಕಮಿಲ್ ಝ್ವೆಲೆಬಿಲ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಕೃತಿಯಲ್ಲಿ ಎಲ್ಲಿಯೂ ಅಂತಹ ಸೂಚನೆ ದಕ್ಕುವುದಿಲ್ಲ ಮತ್ತು ತನ್ನ ಪೆÇಷಕರನ್ನು ಕುರಿತಾಗಿ ತೊಲ್ಕಾಪ್ಪಿಯಂ ಮೌನವಾಗಿರುವುದು ಸೋಜಿಗವೆನಿಸುತ್ತದೆ. ಇದೇ ಬಗೆಯ ಗ್ರಂಥವಾದ ಕವಿರಾಜಮಾರ್ಗದಲ್ಲಿ ನೃಪತುಂಗ ದೇವತಾನುಮತಮಪ್ಪ ಎಂಬ ಸ್ಪಷ್ಟ ಹೇಳಿಕೆಗಳಿರುವುದು ಗಮನಾರ್ಹವಾಗಿದೆ.
* ಕ್ರಿ.ಶ 11-18 ಶತಮಾನದ 700 ವರ್ಷಗಳ ಅವಧಿಯಲ್ಲಿ ತೊಲ್ಕಾಪ್ಪಿಯಂ ಮೇಲೆ ಏಳು ಭಾಷ್ಯಗಳು ಮೂಡಿಬಂದಿವೆ.
- ಇಳಂಪೂರಣಾರ್(ಕ್ರಿ.ಶ 11-12 ಶತಮಾನ) : ತೊಲ್ಕಾಪ್ಪಿಯಂ ಎಲ್ಲ ಅಧಿಕಾರಗಳ ಮೇಲೂ ಭಾಷ್ಯ ಬರೆದಿದ್ದಾನೆ. ಇದು ಅತ್ಯುತ್ತಮ ಭಾಷ್ಯವೆಂದು ಖ್ಯಾತಿಯೆತ್ತಿದೆ. ಈತನನ್ನು ಉರೈಆಶಿರಿಯಾರ್ (ಉರೈ=ಒರೆ=ಟೀಕೆ/ಭಾಷ್ಯ , ಆಶಿರಿಯಾರ್>ಆಚಾರ್ಯ) ಎಂದು ಕರೆಯಲಾಗುತ್ತದೆ.
- ಪೆರಾಶಿಯಾರ್ (ಕ್ರಿ.ಶ 12-13 ಶತಮಾನ) : ಪೆÇರುಳಾದಿಗಾರಂ ಮೇಲೆ ಭಾಷ್ಯ ಬರೆದಿದ್ದಾನೆ.
- ಸೇನಾವರೈಯಾರ್(ಕ್ರಿ.ಶ 13-14 ಶತಮಾನ) : ಸೊಲ್ಲದಿಗಾರಂ ಮೇಲೆ ಭಾಷ್ಯ ಬರೆದಿದ್ದಾನೆ.
- ನಾಚ್ಚಿಣಾರ್’ಕ್ಕಿಣಿಯಾರ್ (ಕ್ರಿ.ಶ 14-15 ಶತಮಾನ) : ತೊಲ್ಕಾಪ್ಪಿಯಂ ಎಲ್ಲ ಅಧಿಕಾರಗಳ ಮೇಲೂ ಭಾಷ್ಯ ಬರೆದಿದ್ದಾನೆ. ಆದರೆ ಪೆÇರುಳಾದಿಗಾರಂ ಭಾಗದ ಭಾಷ್ಯ ಲಭ್ಯವಿಲ್ಲ. ಈತ ತನ್ನ ಸಮಕಾಲೀನನಾಗಿದ್ದ ವ್ಯಾಖ್ಯಾನಕಾರ ಪರಿಮೇಲಳಗರನನ್ನು ಹಲವಾರು ಸಲ ಉಲ್ಲೇಖಿಸಿದ್ದಾನೆ.
- ತೆಯ್ವಚಿಲೈಯಾರ್ (ಕ್ರಿ.ಶ 16 ಶತಮಾನ) : ಸೊಲ್ಲದಿಗಾರಂ ಮೇಲೆ ಭಾಷ್ಯ ಬರೆದಿದ್ದಾನೆ.
- ಕಲ್ಲಾಡನಾರ್ (ಕ್ರಿ.ಶ 16-17 ಶತಮಾನ) : ಸೊಲ್ಲದಿಗಾರಂ ಮೇಲೆ ಭಾಷ್ಯ ಬರೆದಿದ್ದಾನೆ.
- ಅಜ್ಞಾತ ಕತೃ (ಕ್ರಿ.ಶ 17-18) : ಸೊಲ್ಲದಿಗಾರಂ ಮೇಲೆ ಭಾಷ್ಯ ಬರೆದಿದ್ದಾನೆ.
* ತೊಲ್ಕಾಪ್ಪಿಯಂ ಕಾಲವನ್ನು ಸಂಗಂ ಸಮಕಾಲೀನ ಅಥವಾ ಅದರ ಹಿಂದಿನ ಕಾಲವೆಂದು ಹೇಳಿದಾಗಲೆಲ್ಲ ಸಂಗಂ ಸಾಹಿತ್ಯದಲ್ಲಿ ಅದರ ಉಲ್ಲೇಖವೇಕಿಲ್ಲ ,ಅಂತಹ ಮಹಾನ್ ಗ್ರಂಥ ಕುರಿತಾಗಿ ಸಮಕಾಲೀನರು ಮೌನವಾಗಿರುವುದೇಕೆ ಮತ್ತು ಅದರ ಮೇಲಿನ ಭಾಷ್ಯಗಳು 12ನೇ ಶತಮಾನಕ್ಕೆ ಮೊದಲು ಏಕೆ ಕಾಣಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆ ಬೃಹದಾಕಾರವಾಗಿ ಎದುರು ನಿಲ್ಲುತ್ತದೆ. ಮೇಲಿನ ಎಲ್ಲ ಅಂಶಗಳನ್ನು ಸಮೂಲಾಗ್ರವಾU ಪರಿಗಣಿಸಿ ನೋಡಿದಾಗ ತೊಲ್ಕಾಪ್ಪಿಯಂ ಸಂಗಂ ಸಾಹಿತ್ಯ ಲಿಪಿಕರಣಗೊಂಡು, ವರ್ಗೀಕೃತವಾದ ಅವಧಿಯದೆಂದು ಸ್ಪಷ್ಟವಾಗುತ್ತದೆ.
* ತೊಲ್ಕಾಪ್ಪಿಯಂ ಮೇಲೆ ರಚಿತವಾದ ಮೊದಲ ಪ್ರಮುಖ ಐದು ಭಾಷ್ಯಗಳು 11-14ನೇ ಶತಮಾನದ ಅವಧಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇದು ತೊಲಕಾಪ್ಪಿಯಂ ಇದಕ್ಕಿಂತಲು ಒಂದೆರಡು ಶತಮಾನಗಳ ಹಿಂದೆ ರಚಿತವಾಗಿರುವ ಸಾಧ್ಯತೆಯನ್ನು ಸೂಚಿಸುವ ಪ್ರಬಲ ಆಧಾರಗಳೆನ್ನುವ ಎ.ಸಿ.ಬರ್ನೆಲ್ ಅಭಿಪ್ರಾಯ ಹೆಚ್ಚು ಸಮಂಜಸವೆನಿಸುತ್ತದೆ. ಬಿ.ಜಿ.ಎಲ್. ಸ್ವಾಮಿಯವರ ನಿಲುವು ಇದೇ ಆಗಿರುವುದು ಗಮನಾರ್ಹ. ಉಳಿದ ಭಾಷೆಗಳಲ್ಲಿ ವ್ಯಾಕರಣ ಗ್ರಂಥಗಳ ರಚನೆ ಮತ್ತು ಅವುಗಳಿಗೆ ಬರೆದ ಭಾಷ್ಯಗಳು ಕಾಣಿಸಿಕೊಂಡ ಅವಧಿಯನ್ನು ಕೋಷ್ಟಕಗಳಲ್ಲಿ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.
* ಒಂದು ಭಾಷೆಯ ಬೆಳವಣಿಗೆಯನ್ನು ಗುರುತಿಸಲು ನೆರವಾಗುವ ಆಕರಗಳೆಂದರೆ ವ್ಯಾಕರಣ , ಛಂದಸ್ಸು/ಲಕ್ಷಣ/ಅಲಂಕಾರ/ಶಾಸ್ತ್ರೀಯ ಗ್ರಂಥ ಮತ್ತು ನಿಘಂಟುಗಳ ರಚನೆ. ಈ ಮುಂದೆ ನೀಡಿರುವ ಕೋಷ್ಟಕ-1 ರಿಂದ 6ನ್ನು ಗಮನಿಸಿದರೆ ಭಾರತದಲ್ಲಿ ಪ್ರಾಚೀನವಾದುವೆಂದು ಪರಿಗಣಿಸಲಾದ ವಿವಿಧ ಭಾಷೆಗಳಲ್ಲಿ ಈ ಗ್ರಂಥಗಳು ರಚಿತವಾದ ಕಾಲ ಸ್ಪಷ್ಟವಾಗುತ್ತದೆ. (ಈ ಕೋಷ್ಟಕಗಳಲ್ಲಿ ಲಭ್ಯ ಕೃತಿಗಳನ್ನು ಮಾತ್ರ ಪರಿಗಣಿಸಲಾಗಿದೆ. ಕಣ್ಮರೆಯಾದ ಕೃತಿಗಳ ಕಾಲ, ಕರ್ತೃ ಇತ್ಯಾದಿ ವಿವಾದಾಸ್ಪದವಾಗಿರುವುದರಿಂದ ಕೈಬಿಡಲಾಗಿದೆ)ವ್ಯಾಕರಣ ರಚನೆ ಮತ್ತು ಅದರ ಮೇಲಿನ ಭಾಷ್ಯಗಳ ನಡುವೆ ಎಲ್ಲ ಭಾಷೆಗಳಲ್ಲಿ ಸರಿಸುಮಾರು 200-300 ವರ್ಷಗಳ ಅಂತರ ಕಾಣುತ್ತದೆ. ತೊಲ್ಕಾಪ್ಪಿಯಂ ವಿಷಯದಲ್ಲಿ ಇದು ಸಾವಿರಾರು ವರ್ಷಗಳಾಗಿದ್ದು ಅತ್ಯಂತ ಕೃತಕವಾಗಿ ಗೋಚರಿಸುತ್ತದೆ. ತೊಲ್ಕಾಪ್ಪಿಯಂ ಹೊರತಾಗಿ ತಮಿಳಿನ ಯಾವ ವಿದ್ವತ್ ಗ್ರಂಥವೂ ಕನ್ನಡದ ಅದೇ ಬಗೆಯ ಗ್ರಂಥಗಳಿಗಿಂತ ರಚನೆಯ ಕಾಲಾವಧಿಯಲ್ಲಿ ಹಿಂದಿಲ್ಲ. ಪ್ರಾಕೃತ , ಸಂಸ್ಕೃತ ಹಾಗೆಯೇ ಕನ್ನಡದಲ್ಲಿ ವ್ಯಾಕರಣ ಗ್ರಂಥಗಳು ನಿರ್ದಿಷ್ಟ ಗತಿಯಲ್ಲಿ ಹರಿದುಬಂದಿರುವುದು ಕೋಷ್ಟಕಗಳಿಂದ ಸ್ಪಷ್ಟವಾಗುತ್ತದೆ. ಆದರೆ ತೊಲ್ಕಾಪ್ಪಿಯಂ ಅದರ ನಂತರ ಬಂದ ತಮಿಳಿನ ಎರಡನೇ ವ್ಯಾಕರಣ ವೀರಚೋಳಿಯಂ ನಡುವೆ ಸಾವಿರಾರು ವರ್ಷಗಳ ಕಂದಕ ಕಂಡುಬರುತ್ತದೆ . ಇದರಿಂದ ತೊಲ್ಕಾಪ್ಪಿಯಂ ಪ್ರಾಚೀನತೆ ಉದ್ದೇಶಪೂರ್ವಕವಾಗಿ ಸ್ಥಾಪಿಸಲ್ಪಟ್ಟದ್ದೆಂದು ತಿಳಿದುಬರುತ್ತದೆ.
* ಭಾಷೆಯ ಹಳೆಯ ರೂಪಗಳು ಮರೆಯಾಗುವ ,ಪ್ರಾಂತ ಭೇದ ಕಾಣಿಸಿಕೊಳ್ಳುವ ,ಬಾಹ್ಯ ಭಾಷೆಗಳ ಸಂಪರ್ಕದಿಂದ ಬದಲಾಗುತ್ತಿರುವ ಹಂತದಲ್ಲಿ ಭಾಷೆಯನ್ನು ಶಿಷ್ಟಗೊಳಿಸಿ ವಿವರಿಸುವ ಯತ್ನಗಳಾಗಿ ವ್ಯಾಕರಣ ಗ್ರಂಥಗಳು ಮೂಡಿಬರುತ್ತವೆ. ಮಲಯಾಳಂ ವ್ಯಾಕರಣ ಗ್ರಂಥ ‘ಲೀಲಾತಿಲಕಂ’ ಇಂತಹುದೇ ಸ್ಥಿತಿಯಲ್ಲಿ ಹೊರಬಂದಿರುವುದು ಈ ವಾದವನ್ನು ದೃಢಪಡಿಸುತ್ತದೆ. ಆದ್ದರಿಂದ ಸಂಗಂ ಸಾಹಿತ್ಯದ ವರ್ಗೀಕರಣದ ಮತ್ತು ಸಂಸ್ಕೃತದ ಸಂಪರ್ಕ ಮತ್ತು ತಮಿಳಿನ ಮೇಲೆ ಅದರ ಅಧಿಪತ್ಯ ಸ್ಥಾಪನೆಗೊಂಡ ನಂತರವೇ ತೊಲ್ಕಾಪ್ಪಿಯಂ ರಚನೆಯಾಗಿದೆಯೆಂದು ಎಸ್.ವಿ.ಷಣ್ಮುಗಂ ವಾದಿಸಿದ್ದಾರೆ. ಹಾಗಾಗಿ ತೊಲ್ಕಾಪಿಯಂ ರಚನೆಯ ಕಾಲದ ವಿವಾದವನ್ನು ಪರಿಗಣಿಸದೆ ಅದು ಸಂಗಂ ಸಾಹಿತ್ಯಕ್ಕೆ ಚೌಕಟ್ಟನ್ನು ಒದಗಿಸಿ ವಿಪುಲ ಸಾಹಿತ್ಯ ಸೃಷ್ಟಿಗೆ ಕಾರಣವಾತೆಂಬ ತಮಿಳಿನ ಪಾರಂಪರಿಕ ದೃಷ್ಟಿಯನ್ನು ಒಪ್ಪಿದರೆ ಒಂದು ಕೃತಿಯ ರಚನೆಯ ಹಿಂದಿನ ಚಾರಿತ್ರಿಕ ,ಭಾಷಿಕ, ಸಾಂಸ್ಕೃತಿಕ ಕಾರಣಗಳನ್ನು ಅರಿಯುವ ಯತ್ನದಿಂದ ದೂರವಾದಂತಾಗುತ್ತದೆ. (ನೋಡಿರಿ : ಸಂಗಂ ಸಾಹಿತ್ಯ)
* ಮುಂದೆ ನೀಡಿರುವ ಕೋಷ್ಟಕಗಳನ್ನು ಗಮನಿಸಿದರೆ ಎಲ್ಲ ಭಾಷೆಗಳಲ್ಲಿ ವಿದ್ವತ್ ಗ್ರಂಥಗಳು ನಿರ್ದಿಷ್ಟ ರೀತಿಯಲ್ಲಿ ಹರಿದುಬಂದಿದ್ದು ಅವುಗಳಲ್ಲಿ ಸಮರೂಪತೆ ಎದ್ದು ಕಂಡುಬರುತ್ತದೆ. ತಮಿಳಿನಲ್ಲಿ ಮಾತ್ರ ವ್ಯಾಕರಣ/ಲಕ್ಷಣ (ತೊಲ್ಕಾಪ್ಪಿಯಂ) ಮಾತ್ರ ಪ್ರಾಚೀನತೆ ಹೊಂದಿದ್ದು ಉಳಿದ ವಿದ್ವತ್ ಗ್ರಂಥಗಳು ಕನ್ನಡದಂತೆಯೇ 9-10 ಶತಮಾನದಿಂದ ಬಂದಿರುವುದು ಎದ್ದು ಕಾಣುತ್ತದೆ. ಇದು ತೊಲ್ಕಾಪ್ಪಿಯಂ 9-10 ನೇ ಶತಮಾನದ ಅವಧಿಯದೆಂದು ಪರೋಕ್ಷವಾಗಿ ಸಾರುತ್ತಿದೆ.
* ಕರ್ನಾಟಕದ ಚರಿತ್ರೆಯನ್ನು ಗಮನಿಸಿದರೆ ತಮ್ಮ ನುಡಿ ಮತ್ತು ಗಡಿಗಳನ್ನು ಗುರುತಿಸಿಕೊಳ್ಳುವುದು ಕದಂಬರಿಗಿಂತ ಚಾಲುಕ್ಯರಲ್ಲಿ , ಚಾಲುಕ್ಯರಿಗಿಂತ ರಾಷ್ಟ್ರಕೂಟರಲ್ಲಿ, ರಾಷ್ಟ್ರಕೂಟರಿಗಿಂತ ಹೊಯ್ಸಳರಲ್ಲಿ ಎದ್ದು ಕಾಣುತ್ತದೆ. ಇದು ಕಾಲಾನುಕ್ರಮದಲ್ಲಿ ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳಿಂದಾಗಿ ದಕ್ಷಿಣದ ವಿವಿಧ ಭಾಷಿಕರಲ್ಲಿ ತವi್ಮದೇ ಆದ ಪ್ರಾದೇಶಿಕ ಮತ್ತು ಭಾಷಾಪ್ರಜ್ಞೆ ಗಟ್ಟಿಗೊಳ್ಳುತ್ತಿರುವುದನ್ನು ಸೂಚಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಕವಿರಾಜಮಾರ್ಗಕಾರ ಕಾವೇರಿಯಿಂ ಗೋದಾವರಿವರಮಿರ್ಪನಾಡು’’ ಎಂದು ಹೇಳಿಕೊಂಡಿದ್ದರೆ ತೊಲ್ಕಾಪ್ಪಿಯಂ ‘’’ವಡವೇಂಗಡ ತೆನ ಕುಮಾರಿ ಅಯಿಡೈ ತಮಿಳ್ಕೂರಮ್ ನಲ್ ಉಲಕತ್ತು(ಉತ್ತರದಲ್ಲಿ ವೇಂಗಡ,ದಕ್ಷಿಣದಲ್ಲಿ ಕನ್ಯಾಕುಮಾರಿಯ ಎಡೆಯಾಗಿರುವ ತಮಿಳರ ನಲ್ಮೆಯ ಲೋಕ)ಎಂದು ಘೋಷಿಸಿದೆ. ಇವರಿಬ್ಬರೂ ಲಕ್ಷಣಕಾರರಾಗಿದ್ದು , ಸಮಕಾಲೀನವಾದ ಒಂದೇ ಬಗೆಯ ಭಾಷಾ ಮತ್ತು ಜನಾಂಗೀಯ ಹೆಮ್ಮೆಯ ಒತ್ತಡಕ್ಕೆ ಒಳಗಾದವರಂತೆ ಕಾಣುತ್ತಾರೆ. ಇದು ಪರೋಕ್ಷವಾಗಿ ತೊಲ್ಕಾಪ್ಪಿಯಂ ರಚಿತವಾಗಿರುವ ಕಾಲದ ಸೂಚನೆಯಾಗಿಯೂ ಕಾಣುತ್ತದೆ. ಆದ್ದರಿಂದಾಗಿಯೇ ಸಂಗಂ ಸಾಹಿತ್ಯದಲ್ಲಿ ಕಾಣದ ಮಾರ್ಗಕಾರನಲ್ಲಿ ಕಾಣುವ ಭಾಷಾಭಿಮಾನ ತೊಲ್ಕಾಪ್ಪಿಯಂನಲ್ಲಿ ಹೊರಹೊಮ್ಮಿ ಬಂದಿದೆ.
* ತೊಲ್ಕಾಪ್ಪಿಯಂ ಶುದ್ಧ ತಮಿಳಿನ ‘’ಇಯಚ್ಚೊಲ್’’ ಬಳಕೆಯ ‘ಸೆಂದಮಿಳ್ ನಿಲಂ(ಪ್ರದೇಶ)’ ಹಾಗೂ ಅದರಾಚೆಗಿನ ಆಡುಭಾಷೆಯ ‘’ತಿಶೈಸೊಲ್(ದಿಶೆಯ ಸೊಲ್ಲು?)’’ ಬಳಕೆಯಲ್ಲಿರುವ ಹನ್ನೆರಡು ಪ್ರಾಂತಗಳನ್ನು ಸೂಚಿಸಿ, ‘ವಡಸೊಲ್ಲನ್ನು (ಉತ್ತರದ ಮಾತು) ತಮಿಳಿಗೆ ಮಾರ್ಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದೆ. ನಾಚ್ಚಿಣಾರ್ಕ್ಕಿಣಿಯಾರ್ ಮತ್ತು ಸೇನವರೈಯಾರ್ ಮಧುರೈ ಪ್ರದೇಶದ ಶುದ್ಧ ‘ಸೆಂದಮಿಳ್’ ಮತ್ತು ಅದರಾಚೆಗಿನ ಪ್ರದೇಶಗಳ ಆಡುಭಾಷೆಯ ಕೋಡುಂದಮಿಳ್’ ಬಗೆಗೆ ಹೇಳಿದ್ದಾರೆ. ಸಂಗಂ ಸಾಹಿತ್ಯದಲ್ಲಿ ಅತ್ಯಲ್ಪ ಸಂಸ್ಕೃತವಿದ್ದು ಅದರ ಪ್ರಾಚೀನತೆಗೆ ಸಾಕ್ಷಿಯಾಗಿದೆಯೆಂದು ಕಮಿಲ್ ಝ್ವೆಲೆಬಿಲ್ , ಜಾರ್ಜ್ ಹಾರ್ಟ್ ಹಾಗೂ ನೂರಾರು ಜನ ತಮಿಳು ವಿದ್ವಾಂಸರು ವಾದಿಸಿದ್ದಾರೆ. ಸಂಗಂ ಸಾಹಿತ್ಯದಿಂದ ತಮಿಳಿನ ಮೇಲೆ ಸಂಸ್ಕೃತದ ಒತ್ತಡವಿರುವುದು ಮತ್ತು ತಮಿಳಿನಲ್ಲಿ ಪ್ರಾಂತ ಬೇಧವಿರುವುದು ಕಂಡುಬರುವುದಿಲ್ಲ. ತೊಲ್ಕಾಪ್ಪಿಯಂ ತಮಿಳಿನ ಭಾಷಾ ವೈವಿಧ್ಯತೆ ಮತ್ತು ಸಂಸ್ಕೃತವನ್ನು ತಮಿಳೀಕರಿಸುವ ಅಗತ್ಯವನ್ನು ಪ್ರತಿಪಾದಿಸುತ್ತಿರುವುದು ನಂತರದ ಕಾಲವನ್ನು ಸೂಚಿಸುತ್ತದೆ. ಕ್ರಿ.ಶ 5 ನೇ ಶತಮಾನದವರೆಗೆ ತಮಿಳಗಂನಲ್ಲಿ ಅಸ್ತಿತ್ವದಲ್ಲಿದ್ದ ಹಾಗೂ ಪ್ರಾಚೀನ ಗುಹಾಶಿಲಾಬರಹಗಳ ತಮಿಳಿನ ಮೇಲೆ ಪ್ರಾಕೃತ ಭಾಷೆಯ ಒತ್ತಡದ ಅರಿವು ತೊಲ್ಕಾಪ್ಪಿಯಂಗಿಲ್ಲ. ಸೆಂದಮಿಳ್ ನಿಲಂ , ತಿಶೈಸೊಲ್ಲುಗಳಂತೆ ಮಾರ್ಗಕಾರನ ತಿರುಳ್ಗನ್ನಡ’ ಪ್ರಾಂತ ಮತ್ತು ‘ವಾಸುಗಿಯುಮ್ ಹೇಳಲಾಗದ’ ಭಾಷಾ ವೈವಿಧ್ಯತೆ ಮತ್ತು ಪ್ರಾಂತಗಳ ಉಲ್ಲೇಖ ಈ ಲಕ್ಷಣಕಾರರು ಒಂದು ನಿರ್ದಿಷ್ಟ ಸಮಕಾಲೀನತೆಯ ಭಾಷಿಕವಾದ ಒತ್ತಡದಲ್ಲಿರುವುದನ್ನು ಖಚಿತಗೊಳಿಸುತ್ತದೆ.
* ತಮಿಳಿನ ಬರಹದಲ್ಲಿ ಪುಲ್ಲಿಯ ಬಳಕೆ ಸುಸ್ಥಿರವಾಗಿ ನಿಂತ ನಂತರವೇ ತೊಲ್ಕಾಪ್ಪಿಯಂ ರಚಿತವಾಗಿದೆ. ತಮಿಳುನಾಡಿನಾದ್ಯಂತ ದೊರಕಿರುವ ಶಿಲಾಶಾಸನಗಳು ಪುಲ್ಲಿ ಬಳಕೆಯ ಪ್ರಾರಂಭ ಮತ್ತು ಕಾಲದ ಬಗೆಗೆ ಸಾಕಷ್ಟು ಮಾಹಿತಿ ನೀಡುತ್ತವೆ. ಇವುಗಳಲ್ಲಿನ ಪುಲ್ಲಿ ಬಳಕೆಯನ್ನು ಸಂಖ್ಯಾಕಲನೀಯಮತ್ತು ನರಜಾಲ ತಂತ್ರದಂತಹ ಆಧುನಿಕ ವಿಧಾನಗಳಿಗೆ ಒಳಪಡಿಸಿ ಅಧ್ಯಯನ ನಡೆಸಿ ತೊಲ್ಕಾಪ್ಪಿಯಂ ಕಾಲವನ್ನು ವೈಜ್ಞಾನಿಕವಾಗಿ ನಿರ್ಧರಿಸಲು ಸಾಧ್ಯ. ಆದರೆ ಇದು ಪರಿಶ್ರಮ ಬೇಡುವ ಕೆಲಸವಾಗಿದ್ದು 7 ನೇ ಶತಮಾನಕ್ಕಿಂತಲೂ ಮೊದಲಿನ ತಮಿಳಿನ ಶಿಲಾಶಾಸನಗಳ ಬರಹಗಳನ್ನು ಸಾಂಖ್ಯಿಕ ಛಾಯಾಗ್ರಹಣಗೊಳಿಸಿ ಗಣಕೀಕರಣಗೊಳಿಸಬೇಕಾಗುತ್ತದೆ. (ನೋಡಿರಿ : ತಮಿಳು ಬ್ರಾಹ್ಮಿ-ಪುಲ್ಲಿಯ ಸಮಸ್ಯೆ)
* ತೊಲ್ಕಾಪ್ಪಿಯಂ ಕಾಲವನ್ನು ಬೇರೆ ಭಾಷಿಕವಾದ ಪರೋಕ್ಷ ದೃಷ್ಟಿಗಳಿಂದಲೂ ನೋಡಬಹುದು. ಯಾವುದೇ ಭಾಷೆ ಬೆಳವಣಿಗೆ ಹೊಂದಿದಂತೆ ಸಾಹಿತ್ಯದಲ್ಲಿ ವೈವಿಧ್ಯತೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಯಾವುದೇ ಭಾಷೆಯಲ್ಲಿನ ಶಬ್ಧಗಳು ಗ್ರಾಮ್ಯ , ಶಿಷ್ಟ ಮತ್ತು ಸಾಹಿತ್ಯಕ ಅರ್ಥ ತಳೆಯುತ್ತವೆ ಹಾಗೂ ಹೊರಗಿನಿಂದ ಬಂದ ಶಬ್ಧಗಳ ಪ್ರಮಾಣ ಹೆಚ್ಚುತ್ತ ಹೋಗುತ್ತದೆ. ಆಗ ಒಂದು ಭಾಷೆಯಿಂದ (ಉದಾ: ಸಂಸ್ಕೃತ,ಇಂಗ್ಲೀಷ್) ಇನ್ನೊಂದು ಭಾಷೆಗೆ (ತಮಿಳು,ಕನ್ನಡ) ಶಬ್ಧಗಳನ್ನು ಪಡೆಯುವ,ಪರಿವರ್ತಿಸುವ ಅಗತ್ಯಗಳು ಕಾಣುತ್ತವೆ. ತೊಲ್ಕಾಪ್ಪಿಯಂ ಮತ್ತು ಕವಿರಾಜಮಾರ್ಗ ಈ ಸಂದರ್ಭಗಳನ್ನು ಎದುರಿಸಬೇಕಾಗಿ ಬಂದ ಕಾಲ ಮತ್ತು ತಮಿಳಿನಲ್ಲಿ ಸಂಸ್ಕೃತದ ಪ್ರಬಲ ಪ್ರಭಾವದ ಅವಧಿ ಒಂದೇ ಆಗಿರುವುದು ಗಮನಾರ್ಹ.
* ಮೇಲಿನಂತಹ ಸ್ಥಿತಿಯಲ್ಲಿ ಶಬ್ಧಗಳ ಅರ್ಥವನ್ನು ಖಚಿತಗೊಳಿಸುವ ಅನಿವಾರ್ಯತೆಯುಂಟಾಗಿ ಶಬ್ಧಕೋಶ, ನಿಘಂಟು, ಪದವಿವರಣ ಕೋಶಗಳು , ಭಾಷೆಯನ್ನು ಗಟ್ಟಿ ನೆಲೆಯಲ್ಲಿ ನಿಲ್ಲಿಸಲು ವ್ಯಾಕರಣಗಳು , ಸಾಹಿತ್ಯವನ್ನು ಮಾನಕಗೊಳಿಸಲು ಲಕ್ಷಣ ಗ್ರಂಥಗಳು ಮೂಡಿಬರುತ್ತವೆ. ಕೋಷ್ಟಕ-7 ರಿಂದ 13 ರಲ್ಲಿ ಪ್ರಮುಖ ಭಾರತೀಯ ಭಾಷೆಗಳಲ್ಲಿ ಮೊದಲಬಾರಿಗೆ ಗದ್ಯ , ನಿಘಂಟು , ವಿಶ್ವಕೋಶ ಮುಂತಾದ ವೈವಿಧ್ಯಮಯ ಸಾಹಿತ್ಯ ಕಾಣಿಸಿಕೊಂಡ ಕಾಲವನ್ನು ನೀಡಲಾಗಿದೆ. ಇದು ಭಾರತಿಯ ಭಾಷೆಗಳ ವಿಕಸನದ ಸೂಚಿಯೂ ಹೌದು. ತೊಲ್ಕಾಪ್ಪಿಯಂನ್ನು ಕ್ರಿ.ಪೂ ಅಥವಾ ಕ್ರಿ.ಶ ಆರಂಭದ ಅವಧಿಗೆ ಒಯ್ದರೆ ಆರಂಭಿಕ ಸಾಹಿತ್ಯ ಸೃಷ್ಟಿಯಾದ ನಂತರ ಸರಿಸುಮಾರು 1000 ವರ್ಷಗಳವರೆಗೆ ಯಾವುದೇ ಸಾಹಿತ್ಯ/ಭಾಷಾ ಮೀಮಾಂಸೆಯ ಕೃತಿಗಳು ತಮಿಳಿನಲ್ಲಿ ಹೊರಬರದಿದ್ದುದು ಸೊಜಿಗವೆನಿಸುತ್ತದೆ.
* ತೊಲ್ಕಾಪ್ಪಿಯಂ ಕಾಲವನ್ನು ಹಿಂದಕ್ಕೊಯ್ದಷ್ಟು ತಮಿಳುನಾಡಿನಲ್ಲಿ ತಮ್ಮ ಗುಹಾ ಶಿಲಾಬರಹಗಳ ಮೂಲಕ ಲಿಪಿ ಸಂಸ್ಕೃತಿಯನ್ನು ಪರಿಚಯಿಸಿದ ಜೈನರು (ನೋಡಿರಿ : ತಮಿಳು ಬ್ರಾಹ್ಮಿ) ಮುಂದಿನ ಸುಮಾರು ಸಾವಿರದ ಮುನ್ನೂರು ವರ್ಷಗಳ ಅವಧಿಯಲ್ಲಿ ತಮಿಳಿನಲ್ಲಿ ಯಾವುದೇ ಕೃತಿ ರಚಿಸದಿರುವ ಕಾರಣಗಳು ಯಾವುವೆಂದು ಇತಿಹಾಸ ಶೋಧನೆಯಿಂದ ಸ್ಪಷ್ಟವಾಗಬೇಕಿದೆ.
ಕೋಷ್ಟಕಗಳು ಮತ್ತು ತೌಲನಿಕ-ವಿಶ್ಲೇಷಕ ಕೋಷ್ಟಕಗಳು
ಮುಂದಿನ ಕೋಷ್ಟಕಗಳಲ್ಲಿ ಲಭ್ಯ ಕೃತಿಗಳನ್ನು ಮಾತ್ರ ಪರಿಗಣಿಸಲಾಗಿದೆ. ಕಣ್ಮರೆಯಾದ ಕೃತಿಗಳ ಕಾಲ, ಕರ್ತೃ ಇತ್ಯಾದಿ ವಿವಾದಾಸ್ಪದವಾಗಿರುವುದರಿಂದ ಕೈಬಿಡಲಾಗಿದೆ.
TOLKAPPIAM -FACTS OVER MYTHS
-The name of the grammer
work called ‘Tolkappiam’ appears for the first time in Nakkirar’s (800-1000
C.E) commentary on ‘Iraiyanar Ahapporul. In this book elobarate myth regarding
Tamil Sangams appear for the first time and includes Tolkappiam as the work of
second sangam.# Prakrit and Sanskrit have set a tradition in presenting the technical subjects such as grammer , prosody , mathematics, astronomy , dictionary etc., since from beginning . This tradition includes (1) Phonetic description and alphabetical arrangement (2) Adoptation of Sutra style presentation (3) Conventions of Tantra Ukti resembnling mnemonic sutras (4) Book writing techniques such as manuals , abridgements , digests etc., (5) Employment of technical vocabulary (6) Methodological theoretical approaches (7) preparation of accessories for understanding such as koshas , dictionaries , commentaries etc.,
-Tolkappiam and its commentaries adopt the above tradition completely. Katantra grammer of Sanskrit by Sharvavarma ( 200 C.E ) adopts arrangement of subject by ‘Heading’. Tolkappiam has followed this technique. Nagavarma (1042 C.E) who wrote first grammer in Kannada in ‘Shabdhasmruti’ chapter of his ‘Kavyaavalokana’ has followed Katantra school of grammer. He proudly calls himself as ‘Abhinava Sharvavarma ( Modern Sharvavarma) . This indicates that during 1000-1200 C.E Katantra was popular in South India and was followed in construction of native grammers .
-Nacchinarkkiniyar (1400-1500 C.E) the commentator on Tolkappiam informs that the literary works were presented in the court of Pandyas for approval. On this basis Kamil Zvelebil asserts that Agattiyam and Tolkappiam might have got such approval. But no where in Tolkappiam such possibility is indicated neither explicitely nor implicitely. It is very strange that Tolkappiam maintains silence about its approval , approving committee , the court which approved etc., KavirajaMarga which is equivalent to Tolkappiam in Kannada clearly says ‘Nrupatungadevatanumatamappa i.e., As per the approval of Nrupatunga Deva’
-Between 1100-1800 , in a span of 700 years seven commentaries have appeared on Tolkappiam. They are :
(1) Ilamapuranar (1100-1200 C.E) commentary on all Adigarams
(2) Perashiyar (1200-1300 C.E) commentary on Solladigaram
(3) Senavaraiyar (1200-1300 C.E) commentary on Poruladigaram
(4) Nacchinarkkiniyar (1400-1500 C.E) commentary on all Adigarams
(5) Teyvyashillaiyar (1600 C.E) commentary on Solladigaram
(6) Kalladanar (1600-1700 C.E) commentary on Solladigaram
( 7) Anonymus (1700-1800 C.E) commentary on Solladigaram
-Whenever Tolkappiam is taken to Sangam or Pre sangam period the doubt arises that why such a great work was not referred even once in the entire Sangam literature of 33000 lines or why until Nakkirar know body gave any scant reference to existence of it.
-The first five commentaries on Tolkappiam appears between 1100-1400 C.E. A.C Burnell and B.G.L Swamy considers this as the strong proof that Tolkappiam is 100-200 years older than these commentaries. -Developement of a language can be assessed through erudite works in that language such as Grammer ,Prosody ,Dictionary etc., Refer Tables 1 to 6 which give the first appearance of such literature in Indian Languages which are considered ancient. In all languages except Tamil , the time gap between the first grammer and first commentary on it is 200-300 years. Whereas in Tamil it is thousands of years. Except Tolkappiam no other erudite work in Tamil is ancient than Kannada. The Tables clearly show continuous and proper flow of various grammatical works in Sanskrit, Prakrit, Kannada and Telugu. But in case of Tamil the time gap between Tolkappiam and next grammatical work ‘Viracholiyam (1100 C.E) there is a time gap of 1300 years . This time gap is artificial and purposely maintained to push back the date of Tolkappiam by thousands of years.
-Grammatical works in a language appear to explain and maintain the language .whenever the old forms of a language are undergoing drastic changes/ are becoming extinct , the regional variations in a language are imminent due to contact with other languages . Tolkappiam has been written after the classification of Sangam Literature and the period in which severe contact with Sanskrit and its influence over Tamil has been established. The first Malayalam grammatical work ‘Lilatilakam ‘ emerged under the same conditions & supports this view.
-From history of Karnataka , it is well established that there is gradually increasing pride among southern states regarding their language and state. From Kadambas to Chalukyas to Rashtrakutas to Hoysals this pride is enhanced along with development in literature and political power. In this context Kavirajamarga the first erudite work in Kannada declares Karnataka as ‘Kaveriyim Godavarivaramirpa nadu ( The land between Kaveri & Godavari) . In the same tone Tolkappiyam declares ‘Vada vengada tena kumari ayidai Tamil kuram nal ulagattu ( The sweet land of Tamils between Vengada at the north and Kanyakumari at the south). Both of these authors belong to the same period and pressurized by the emerging regional nationalities called Kannada and Tamil . Hence the pride for Tamil and Tamilagam not found in Sangam literature is vibrant and evident in Tolkappiam.
-Tolkappiam speaks about the iyacchol region of pure Tamil called sendamil and tishaisol of colloquial Tamil. Commentators of Tolkappiam Nacchinarkkiniyar and Senavaraiyar describe the region around Madurai as fostering pure sendamil , and regions beyond that colloquial Tamil called Koduntamil. Tolkappiam explains the methods to Tamilise the nonTamil/Sanskrit words and vocabulary. George Hart , kamil Zvelebil and hundreds of other Tamil Pundits have argued that the effect of Sanskrit on Sangam literature is negligible and almost absent. By Sangam literature it is almost clear that there was no regional variations in Tamil. The regional variations of Tamil, influence of Sanskrit on Tamil as depicted in Tolkappiam are of later period. It has been established that upto 5 th century the Tamil-Brahmi inscriptions are highly influenced and are almost Prakritic in nature. But Tolkappiam is unaware of this great influence of Prakrit on Tamil. This indicates the later date for Tolkappiam. Like Tolkappiam . KavirajaMarga also talks about regional variations in Kannada and further wonders whether these variations can be understood by Vasugi of thousand tongues.
-The period of Tolkappiam can be seen from other linguistic angles also. As the languages evolve the variety in literature will appear. Due to this the vocabulary of the language increases , the meaning of the words change. The changes in colloquial , written and elite forms will become more demarked. The words from other languages will find place. This situation demands the specific methodologies to borrow foreign words and construction of dictionaries. This transition period is same for Tamil and Kannada as indicated by the first appearance of Dictionaries, prosodies and other erudite works. If otherwise date of Tolkappiam is dragged to antiquity , the great time gap of thousands of years between various works is unexplainable.
-From the Tables 1-6 it can be noticed that in all ancient languages the erudite works have emerged in homogeneous and continuous manner. In Tamil ,except Tolkappiam other works follow this pattern. This fact establishes the fact that it belongs to 900-1000 C.E
TABLE 1 : DICTIONARIES (C.e = Common Era)
PRAKRIT : 10 C.E : Deshi Nama Mala (Hemachandra) 11 C.E :Payyalacchi Nama Mala (Maha Kavi Dhanapala) 12 C.E :Abhidana Rajendra (Vijayendra Suri)
11 C.E : Ganita sara Sangrahamu (Pavaluri Mallana)
From the Tables 1-6 it can be noticed that in all ancient languages the erudite works have emerged in homogeneous and continuous manner. In Tamil except Tolkappiam other works follow this pattern. This fact establishes the fact that it belongs to 900-1000 C.E