ಆರೋಗ್ಯ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ರೊಮ್ಯಾಂಡ್ ರೋಲಾ ಸ್ವಾಮಿಗಳ ದೇಹ ಮಲ್ಲಯುದ್ದದ ಜಟ್ಟಿಯಂತೆ ಸದೃಢ ಹಾಗೂ ಬಲಶಾಲಿಯಾಗಿದ್ದಿತು. ಕಟ್ಟುಮಸ್ತು ದೇಹದ ಸ್ವಾಮಿಗಳು ಐದು ಅಡಿ ಎಂಟು ಇಂಚು ಎತ್ತರವಿದ್ದರು. ನೀಳವಾದ ಕುತ್ತಿಗೆ , ವಿಶಾಲ ಎದೆ, ಉದ್ದನೆಯ ಕೈ , ದುಡಿಯಲು ಹಾತೊರೆಯುವ ಬಲಯುತವಾದ ತೋಳುಗಳು , ದುಂಡು ಮುಖ , ಅಗಲ ಹಣೆ, ಗಟ್ಟಿಮುಟ್ಟಾದ ಗಲ್ಲ, ರೆಪ್ಪೆಗಳೊಳಗೆ ಮಿನುಗುವ ಅಗಲ ಕಣ್ಣುಗಳು , ನುಣುಪಾದ ಕರಿ ಚರ್ಮ ಯಾರನ್ನಾದರೂ ಮೊದಲ ನೋಟದಲ್ಲೇ ಸೆಳೆಯದೇ ಬಿಡುತ್ತಿರಲಿಲ್ಲ. ಅವರದು ಮಧುರ, ಗಂಭೀರ ವಾಣಿ ಎಂದಿದ್ದಾರೆ. ಫ್ರೆನೊಲಾಜಿಕಲ್ ಜರ್ನಲ್’ನಲ್ಲಿ ಇದಕ್ಕಿಂತ ಭಿನ್ನವಾಗಿ ಸ್ವಾಮಿಗಳ ದೇಹವನ್ನು ವರ್ಣಿಸಿ ಈ ಮನುಷ್ಯನ ಮುಖ , ತಲೆ , ಕೈ ಸೇರಿದಂತೆ ಇಡೀ ದೇಹದ ಲಕ್ಷಣ, ಏರಿಳಿತಗಳು ಹೆಣ್ಣಿನಂತಿವೆ…. ಅಮೆರಿಕದಲ್ಲಿ ಇಷ್ಟೊಂದು ಕೋಮಲ ಲಕ್ಷಣಗಳುಳ್ಳ ಹೆಣ್ಣು ಸಿಗಲಾರಳೇನೋ ಎಂದು ಡಾ.ಎಡ್ಗರ್ ಸಿ. ಬಿಯಾಲ್ ಬರೆದಿದ್ದಾರೆ. (66) ಇಂತಹುದೇ ಅಭಿಪ್ರಾಯವನ್ನು ಸ್ವಾಮಿಗಳ ಶಿಷ್ಯ ಮತ್ತು ಗೆಳೆಯ ಮನ್ಮಥನಾಥ ಗಂಗೋಪಾಧ್ಯಯ ಹೊಂದಿದ್ದನು. ಸ್ವಾಮಿ ತ್ರಿಗುಣಾತೀತನಂದ ಸ್ವಾಮಿಗಳ ಕೈ ಯಾವುದೇ ಹೆಣ್ಣಿನ ಕೈಗಳಿಗಿಂತ ಸುಂದರವಾಗಿದ್ದಿತು. ಅವರ ಬಣ್ಣ ಬದಲಾಗುವಂತೆ ಕಾಣುತ್ತಿದ್ದಿತು. ಕೆಲವು ದಿನ ದಟ್ಟ , ಕೆಲವು ದಿನ ತಿಳಿಯಾಗಿರುತ್ತಿದ್ದಿತು ಆದರೆ ಬಹುತೇಕ ಅದನ್ನು ಚಿನ್ನದ ಹೊಳಪೆನ್ನಬಹುದು ಎಂದಿದ್ದಾರೆ (67) ಬಿಸಿಲಿಗೆ ಹೋದರೆ ಮೆಲನಿನ್ ಪ್ರತಿಕ್ರಿಯೆಯಿಂದಾಗಿ೮ ಚರ್ಮದ ಬಣ್ಣ ಕಪ್ಪಾಗುವುದು ಸಹಜ. ಅದರ ಬದಲ ತ್ರಿಗುಣಾತೀತಾನಂದ ಊಸರವಳ್ಳಿಯಂತೆ ಸ್ವಾಮಿಗಳ ಬಣ್ಣ ಬದಲಾಗುತ್ತಿದ್ದಿತು ಎಂದು ಹೇಳಿ ದೈವೀಕರಿಸಲು ಯತ್ನಿಸಿದ್ದಾರೆ.
ಸ್ವಾಮಿಗಳ ಹಲವು ಫೊಟೊಗಳು/ಭಾವಚಿತ್ರಗಳು ಸಿಗುತ್ತವೆ. ಈ ಫೋಟೊಗಳನ್ನು ನೋಡಿದಾಗ ಅದರಲ್ಲಿ ಧೃಡ ತರುಣ ಎದ್ದು ಕಾಣುತ್ತಿದ್ದು , ಆರೋಗ್ಯ ಅವರಿಂದ ಹೊರಚಿಮ್ಮಿ ಇತರರನ್ನು ಉಲ್ಲಾಸಗೊಳಿಸುವಂತೆ ಭಾಸವಾಗುತ್ತದೆ. ಈಗ ಲಭ್ಯವಿರುವ ಭಾವಚಿತ್ರಗಳಲ್ಲಿ ರಾಮಕೃಷ್ಣರು ತೀರಿಕೊಂಡಾಗ ಗುರುಭಾಯಿಗಳೊಂದಿಗೆ ತೆಗೆಸಿಕೊಂಡ ಸಹಜ ಚಿತ್ರ ಮತ್ತು ಇತರ ಒಂದೆರಡನ್ನು ಹೊರತಾಗಿ ಉಳಿದೆಲ್ಲವೂ ಉಡುಗೆ , ತೊಡುಗೆಗಳೊಂದಿಗೆ ಸಿದ್ಧರಾಗಿ ಫೊಟೋ ಸ್ಟುಡಿಯೋಗಳಲ್ಲಿ ತೆಗೆಸಿಕೊಂಡಿರುವಂತಹುವೇ ಆಗಿವೆ. ಆದ್ದರಿಂದ ಸ್ವಾಮಿಗಳು ಭಾವಚಿತ್ರಗಳಲ್ಲಿರುವಂತೆ ಯಾವಾಗಲೂ ನಗುನಗುತ್ತ , ಉಲ್ಲಾಸದಿಂದ ತುಳುಕುತ್ತ ಆರೋಗ್ಯವಂತರಾಗಿದ್ದರೆನ್ನುವುದು ತಪ್ಪು ತಿಳಿವಳಿಕೆಯಾಗುತ್ತದೆ. ೧೯೦೦ ರಲ್ಲಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ತೆಗೆದ ಅತ್ಯಂತ ಆಕರ್ಷಕವಾದ ಸ್ವಾಮಿಗಳ ಫೊಟೊಗಳನ್ನು ನೋಡಿದರೆ ಅವುಗಳಲ್ಲಿ ಆರೋಗ್ಯ ಚಿಮ್ಮುತ್ತಿರುವ , ಪುಟಿಯುವ ಉತ್ಸಾಹ ತರುಣ ಕಾಣುತ್ತಾನೆ. ಆದರೆ ಈ ಕಾಲದಲ್ಲಿ ಬರೆದ ಎಲ್ಲ ಪತ್ರಗಳಲ್ಲಿ ಸ್ವಾಮಿಗಳು ಅನಾರೋಗ್ಯದಿಂದ ನಾನು ಸಾಯುವ ಸ್ಥಿತಿ ತಲುಪಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಶ್ರೀನಿವಾಸ ಪೈ ಬರೆದಿರುವ ನೆನಪುಗಳಲ್ಲಿ ಒಂದು ಕಡೆ ಸ್ವಾಮಿಗಳು ಈ ಕಾಷಯ ಉಡುಗೆಯ ಒಳಗೆ ಒಬ್ಬ ಜಟ್ಟಿಯಿದ್ದಾನೆ ಎಂದು ತಮ್ಮ ಬಗ್ಗೆ ಹೇಳಿಕೊಂಡಿದ್ದನ್ನು ಉಲ್ಲೇಖಿಸಿ ಸ್ವಾಮಿಗಳ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯ ಎಷ್ಟು ಅದ್ಭುತವಾಗಿದ್ದವೆಂದು ಅವರ ಹಲವು ಜೀವನ ಚರಿತ್ರೆಗಳು ವರ್ಣಿಸುತ್ತವೆ. ಒಬ್ಬ ವ್ಯಕ್ತಿಯ ಆರೋಗ್ಯ ಅತನಿಗಿಂತ ಉತ್ತಮವಾಗಿ ಇತರರಿಗೆ ತಿಳಿದಿರಲು ಸಾಧ್ಯವಿಲ್ಲ. ಸ್ವಾಮಿಗಳ ದೈಹಿಕ ಸಾಮರ್ಥ್ಯ , ಆರೋಗ್ಯದ ಬಗ್ಗೆ ಅವರ ಪತ್ರಗಳಿಗಿಂತ ಉತ್ತಮವಾದ ಬೇರೆ ಆಕರಗಳಿರಲು ಸಾಧ್ಯವೇ ಇಲ್ಲ.
ನಮಗೆ ಈಗ ದೊರಕಿರುವ ಸ್ವಾಮಿಗಳ ಮೊದಲ ಪತ್ರ ೧೨/೮/೧೮೮ ರಂದು ಬೃಂದಾವನದಿಂದ ವಾರಣಾಸಿಯಲ್ಲಿದ್ದ ಪ್ರಮದದಾಸ ಮಿತ್ರರಿಗೆ ಬರೆದದ್ದೇ ಆಗಿದೆ. ೨೮/೧೧/೧೮೮೮ ರಿಂದ ೭/೮/೧೮೮೯ರ ೯ ತಿಂಗಳುಗಳ ಅವಧಿಯಲ್ಲಿ ಸ್ವಾಮಿಗಳು ಪ್ರಮದದಾಸ ಮಿತ್ರರಿಗೆ ಬರೆದ ೯ ಪತ್ರಗಳಲ್ಲಿ ೬ ಪತ್ರಗಳಲ್ಲಿ ಆರೋಗ್ಯ ಕೆಟ್ಟಿರುವ ಸುದ್ದಿಯಿದೆ. ಸ್ವಾಮಿಗಳ ಆರೋಗ್ಯ ಪುರಾಣ ಇಲ್ಲಿಂದ ಪ್ರಾರಂಭವಾಗಿ ೧೯೦೨ ರಂದು ತೀರಿಕೊಳ್ಳುವವರೆಗೆ ಮುಂದುವರೆಯುತ್ತದೆ. ಸ್ವಾಮಿಗಳನ್ನು ಬಾಧಿಸುತ್ತಿದ್ದ ರೋಗಗಳ ವಿವರಗಳನ್ನು ಅವರ ಪತ್ರಗಳಿಂದಲೇ ತಿಳಿಯುವುದು ಸೂಕ್ತ. ಕೋಷ್ಟಕ-೧೦ ಸ್ವಾಮಿಗಳ ಅನಾರೋಗ್ಯದ ಚರಿತ್ರೆಯನ್ನು ನೀಡುತ್ತದೆ.
ಮನುಷ್ಯನಿಗೆ ಹೊರ ಮತ್ತು ಒಳ ಎರಡು ಕಾರಣಗಳಿಂದ ರೋಗಗಳು ಬರುತ್ತವೆ. ಕಾಲರಾ, ಮಲೇರಿಯಾ , ಟೈಫಾಯಿಡ್ ಮುಂತಾದ ಸಾಂಕ್ರಾಮಿಕ ಕಾಯಿಲೆಗಳು ಹೊರ ಕಾರಣಗಳಿಂದ ಬರುತ್ತವೆ. ಈ ರೋಗಗಳನ್ನು ಸಾಮುದಾಯಿಕ ಕಾಯಿಲೆಗಳೆನ್ನಬಹುದು. ತಲೆನೋವು , ಹೊಟ್ಟೆನೋವು , ವಾಂತಿ , ಭೇದಿ , ಅಜೀರ್ಣತೆ ಮುಂತಾದವು ಒಬ್ಬ ವ್ಯಕ್ತಿಗೆ ಮಾತ್ರ ಸಂಬಂಧಿಸಿದ ಹೊರಗಿನ ಕಾರಣದಿಂದಲೂ ಬರಬಹುದಾದ ತಾತ್ಕಾಲಿಕ ಕಾಯಿಲೆಗಳು. ಈ ಕಾಯಿಲೆಗಳು ವಯಸ್ಸಿನ , ಕಾಲದ ಹಂಗಿಲ್ಲದೆ ಯಾರಿಗೆ ಯಾವಾಗ ಬೇಕಾದರೂ ಬರಬಹುದು. ಇವು ಮನುಷ್ಯನನ್ನು ತಾತ್ಕಾಲಿಕವಾಗಿ ಮಾತ್ರ ಕಾಡಿಸುತ್ತವೆ. ಅಸ್ತಮಾ , ಮಧುಮೇಹ , ಹೃದ್ರೋಗ , ಮೂತ್ರಪಿಂಡ ವೈಫಲ್ಯ ,ನರದೌರ್ಬಲ್ಯ , ದೃಷ್ಟಿದೋಷ , ಬೊಜ್ಜು ಮುಂತಾದವು ವ್ಯಕ್ತಿಗೆ ಸೀಮಿತವಾದ ಅಂಗಕ್ರಿಯಾ ದೋಷದಿಂದ ಬರುವ ಒಳ ಕಾರಣದ ಕಾಯಿಲೆಗಳು. ಹೊರಗಿನ ಕಾರಣದಿಂದ ಬರುವ ಕಾಯಿಲೆಗಳಲ್ಲಿ ವ್ಯಕ್ತಿಯ ಪಾತ್ರ ಸೀಮಿತವಾಗಿದ್ದರೆ ಒಳ ಕಾರಣದ ಕಾಯಿಲೆಗಳಲ್ಲಿ ವ್ಯಕ್ತಿಯ ಕೌಟುಂಬಿಕ ಹಿನ್ನೆಲೆ , ಆತನ ಆಹಾರ ಪದ್ದತಿ , ಧೂಮಪಾನ , ಮದ್ಯಪಾನ ಮುಂತಾದ ಚಟಗಳು ಪ್ರಭಾವ ಪ್ರಮುಖವಾಗಿರುತ್ತವೆ. ಕೋಷ್ಟಕ-೧೦ ನ್ನು ಗಮನಿಸದರೆ ಸ್ವಾಮಿಗಳಿಗೆ ಬಂದಿರುವ ಬಹುತೇಕ ಕಾಯಿಲೆಗಳು ಒಳಕಾರಣಗಳಿಗೆ ಸಂಬಂಧ ಪಟ್ಟಿರುವುದು ಎದ್ದು ಕಾಣುತ್ತದೆ. ಸ್ವಾಮಿಗಳು ತಾವು ಅನುಭವಿಸುತ್ತಿದ್ದ ಕಾಯಿಲೆಗಳನ್ನು ತಮ್ಮ ಆಪ್ತ , ಶಿಷ್ಯ , ಅಭಿಮಾನಿಗಳಿಗೆ ಬರೆದ ಪತ್ರಗಳಲ್ಲಿ ತೋಡಿಕೊಂಡಿದ್ದಾರೆ.
ಪರಿವ್ರಾಜಕ ಜೀವನದಲ್ಲಿ ಸ್ವಾಮಿಗಳ ಆರೋಗ್ಯ ಹೇಗಿದ್ದಿತೆನ್ನುವುದರ ಸ್ಥೂಲ ಚಿತ್ರಣ ಮುಂದಿದೆ. ೧೮೮೬ರಲ್ಲಿ ಸ್ವಾಮಿಯವರ ಜೀವನ ರಾಮಕೃಷ್ಣರ ಸನ್ನಿಧಿಯಲ್ಲಿ ಕಳೆಯಿತು. ಅವರು ಬುದ್ಧ ಗಯಾಕ್ಕೆ ಹೋಗಿದ್ದಾಗ ಅಜೀರ್ಣತೆಯಿಂದ ಬಾಧೆಗೊಳಗಾಗಿದ್ದರು. ೧೮೮೭ ರ ಬೇಸಿಗೆ ಅವಧಿ ಪೂರ್ತಿ ಸ್ವಾಮಿಗಳು ಜ್ವರ , ಟೈಫಾಯಿಡ್ ಹಾಗೂ ಮೂತ್ರ ಸಂಬಂಧಿ ಕಾಯಿಲೆಗಳಿಂದ ನರಳುತ್ತಿದ್ದರು. ೧೮೮೮ ರಲ್ಲಿ ಮಲೇರಿಯಾ ತಗುಲಿ ಹೃಷಿಕೇಶದಿಂದ ಕೆಳಗಿನ ಬಯಲು ಪ್ರದೇಶಕ್ಕೆ ಬರಬೇಕಾಯಿತು. ಇದೇ ವರ್ಷ ಅಕ್ಟೋಬರ-ಡಿಸೆಂಬರ್ ತಿಂಗಳುಗಳಲ್ಲಿ ಕಾಯಿಲೆಗಳಿಂದ ಚೇತರಿಸಿಕೊಳ್ಳುವುದಲ್ಲಿಯೇ ಮುಗಿದುಹೋಯಿತು. ೨೨/೨/೧೮೮೯ ರಲ್ಲಿ ಪ್ರಮದದಾಸ ಮಿತ್ರರಿಗೆ ಬರೆದ ಪತ್ರದಲ್ಲಿ ನನ್ನ ದೇಹ ಅಲೆದಾಡುವ ಪರಿವ್ರಾಜಕತೆಗೆ ಸೂಕ್ತವಾದುದಲ್ಲ ಎನಿಸುತ್ತದೆ ಎಂದು ಬರೆದಿದ್ದರು.. ಫೆಬ್ರವರಿ-ಮಾರ್ಚ್ ೧೮೮೯ ರ ಅವಧಿಯಲ್ಲಿ ತೀವ್ರ ಜ್ವರದಿಂದ ಬಳಲಿ ವಿಶ್ರಾಂತಿಗಾಗಿ ಸಿಮೂಲತಲ ಮತ್ತು ದೇವಗಢಕ್ಕೆ ಹೋಗಲು ಯತ್ನಿಸಿದರು. ಉಷ್ಣ ಮತ್ತು ಹೊಟ್ಟೆನೋವಿನ ತೊಂದರೆಯಿಂದ ಸಿಮೂಲತಲಕ್ಕೆ ಹೋಗಲಾಗಲಿಲ್ಲ.
೧೮೮೯-೧೮೯೦ ರ ಚಳಿಗಾಲವನ್ನು ಸ್ವಾಮಿಯವರು ದೇವಘಡ ಮತ್ತು ಅಲಹಾಬಾದ್’ನಲ್ಲಿ ಕಳೆದರು. ದೇವಘಡದಲ್ಲಿ ಬಲರಾಮ್ ಬೋಸ್ ಮನೆಯಲ್ಲಿರುವಾಗ ಅಲ್ಲಿನ ನೀರು ಒಗ್ಗದೆ ಅಜೀರ್ಣತೆಯಾಗಿದೆ ಎಂದು ದೂರಿದ್ದರು. ಅಲಹಾಬಾದ್’ನಲ್ಲಿ ಸೊಂಟನೋವಿನಿಂದ ಬಳಲುತ್ತಿದ್ದರು. ಮುಂದಿನ ದಿನಗಳಲ್ಲಿ ಈ ಸೊಂಟ ನೋವು ಸ್ವಾಮಿಗಳನ್ನು ಬಿಡದಂತೆ ಕಾಡಿತು. ೧೮೯೦ ರಲ್ಲಿ ವಾರಾಣಾಸಿಯಲ್ಲಿರುವಾಗ ಇನ್’ಫ್ಲುಯೆಂಝ ರೋಗಕ್ಕೆ ತುತ್ತಾದರು. ನೈನಿತಾಲ್’ನಿಂದ ಆಲ್ಮೋರಾಕ್ಕೆ ಹೋಗುವಾಗ ತೀವ್ರ ಬಳಲಿ ಕುಸಿದು ಬೀಳುವ ಸ್ಥಿತಿ ತಲುಪಿದಾಗ ಅವರಿಗೆ ಸಾಧುವೊಬ್ಬ ತಿನ್ನಲು ಸೌತೆಕಾಯಿಯೊಂದನ್ನು ಕೊಟ್ಟಿದ್ದನು. ರುದ್ರಪ್ರಯಾಗ ಪ್ರವಾಸದಲ್ಲಿ ಜ್ವರದಿಂದ ಪೀಡಿತರಾಗಿದ್ದರು. ಹೃಷಿಕೇಶದಲ್ಲಿಯೂ ಜ್ವರ ತೀವ್ರವಾಗಿ ಮೂರ್ಛೆ ಸ್ಥಿತಿಗೆ ತಲುಪಿದ್ದರು. ಅದನ್ನು ವೈಕುಂಠನಾಥ ಸನ್ಯಾಲ್ ನಿರ್ವಿಕಲ್ಪ ಸಮಾಧಿಯ ಸ್ಥಿತಿಯೆಂದು ಭಾವಿಸಿದ್ದರು. ಮೀರತ್’ನಲ್ಲಿ ಪಡೆದ ದೀರ್ಘ ವಿಶ್ರಾಂತಿಯಿಂದ ಸ್ವಾಮಿಗಳ ಆರೋಗ್ಯ ಸುಧಾರಿಸಿದ್ದಿತು. ಸ್ವಾಮಿಗಳು ಒಬ್ಬಂಟಿಯಾಗಿ ಭಾರತ ಪ್ರವಾಸ ಕೈಗೊಂಡ ನಂತರ ಅವರ ಆರೋಗ್ಯ ಹೇಗಿದ್ದಿತೆನ್ನುವ ವಿವರಗಳು ಸಿಗುವುದಿಲ್ಲ. ಈ ಪ್ರವಾಸದಲ್ಲಿರುವಾಗ ಸ್ವಾಮಿಗಳು ರಾಜ , ದಿವಾನ, ಸೇಠರ ಅತಿಥಿಗಳಾಗಿರುತ್ತಿದ್ದರು. ಈ ಅತಿಥಿಗಳು ಗುರುಭಾಯಿಗಳಷ್ಟು ಸನಿಹ ಮತ್ತು ಆತ್ಮೀಯರಲ್ಲವಾದ್ದರಿಂದ ಆಗಿಂದಾಗ್ಗೆ ಹದಗೆಡುತ್ತಿರುವ ಸ್ವಾಮಿಗಳ ಆರೋಗ್ಯದ ಬಗ್ಗೆ ಅವರಿಗೆ ತಿಳಿದಿರುತ್ತಿರಲಿಲ್ಲ ಆಲ್ಲದೆ ಸ್ವಾಮಿಗಳು ಅದನ್ನು ಹೇಳಿಕೊಳ್ಳುವಂತೆಯೂ ಇರಲಿಲ್ಲ. ಆದ್ದರಿಂದ ಒಂಟಿಯಾಗಿ ಪ್ರವಾಸ ಮಾಡುತ್ತಿದ್ದಾಗ ಅವರ ಆರೋಗ್ಯ ಹೇಗಿದ್ದಿರಬಹುದು ಎನ್ನುವುದು ಊಹೆಗೆ ಬಿಟ್ಟದ್ದು.
ಸ್ವಾಮಿಯವರು ಏಪ್ರಿಲ್-ಜೂಲೈ ತಿಂಗಳುಗಳ ನಡುವಿನ ಉತ್ತರ ಭಾರತದ ಬಿಸಿಲಿಗೆ ಹೆದರುತ್ತಿದ್ದು ೧೮೮೬-೧೮೯೦ ರ ಅವಧಿಯ ಬೇಸಿಗೆಗಳನ್ನು ಕಲ್ಕತ್ತದಲ್ಲಿಯೇ ಕಳೆದರು. ಸ್ವಾಮಿಯವರು ಬೇಸಿಗೆ ಮತ್ತು ಬಿಸಿಲನ್ನು ದೂರುವುದು ಸಾಮಾನ್ಯ ಸಂಗತಿಯಾಗಿದ್ದಿತು. ಬೇಸಿಗೆ ಬಿಸಿಯಿಂದ ತಪ್ಪಿಸಿಕೊಳ್ಳಲು ೧೮೯೧ ರ ಏಪ್ರಿಲ್-ಮೇ ತಿಂಗಳಿನಲ್ಲಿ ಎತ್ತರದ ಅಬು ಪರ್ವತಕ್ಕೆ ಹೋದರು. ಇದರಿಂದ ಎತ್ತರದ ತಂಪು ಜಾಗಗಳಲ್ಲಿ ಬೇಸಿಗೆಯನ್ನು ಕಳೆಯಲು ಬರುತ್ತಿದ್ದ ರಾಜ, ದಿವಾನ , ಶ್ರೀಮಂತರ ಪರಿಚಯ ಸ್ವಾಮಿಗಳಿಗಾಯಿತು. ೨೪ ಜೂಲೈ ೧೮೯೧ ರಂದು ಅಜಿತ್ ಸಿಂಗ್ ಜೊತೆ ಖೇತ್ರಿಗೆ ಹೋದ ಸ್ವಾಮಿಗಳು ಆ ವರ್ಷದ ಮಳೆಗಾಲದ ಅವಧಿಯನ್ನು ಅಲ್ಲಿಯೇ ಕಳೆದರು. ೧೮೯೨ ರಲ್ಲಿ ಸ್ವಾಮಿಗಳು ಜುನಾಗಢವನ್ನು ನೆಲೆಯಾಗಿರಿಸಿಕೊಂಡು ಗುಜರಾತ್’ನಲ್ಲಿ ಪ್ರವಾಸ ಮಾಡಿದರು. ಏಪ್ರಿಲ್ ಮಧ್ಯದ ನಂತರ ಅವರು ಬರೋಡದಲ್ಲಿದ್ದರು. ಅಲ್ಲಿಂದ ಬಾಂಬೆಯ ಮೂಲಕ ಪೂನಾ ಮತ್ತು ಮಹಾಬಲೇಶ್ವರಕ್ಕೆ ಹೋದರು. ಇವೆರಡೂ ಬೇಸಿಗೆಯಲ್ಲಿ ಹಿತಕರವಾದ ವಾತಾವರಣ ಇರುವ ಎತ್ತರದ ಜಾಗಗಳು. ಇದನ್ನು ಗಮನಿಸಿಯೇ ಬ್ರಿಟಿಷರು ೧೮೧೭ ರಿಂದ ಪೂನಾವನ್ನು ಬಾಂಬೆ ಪ್ರೆಸಿಡೆನ್ಸಿಯ ಬೇಸಿಗೆ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಜೂನ್-ಜುಲೈ ತಿಂಗಳುಗಳನ್ನು ಪೂನದಲ್ಲಿ ಕಳೆದು ಅಲ್ಲಿಂದ ಬಾಂಬೆಗೆ ಹೋಗಿ ಸೆಪ್ಟೆಂಬರ್ ಕೊನೆಯವರೆಗೆ ಇದ್ದರು. ಅಕ್ಟೋಬರ್’ನಲ್ಲಿ ಮತ್ತೊಮ್ಮೆ ಪೂನಾಕ್ಕೆ ಹೋಗಿ ಅಲ್ಲಿಂದ ಕೊಲ್ಲಾಪುರ, ಬೆಳಗಾವಿ ಹಾಗೂ ಗೋವಾಗಳಿಗೆ ಭೇಟಿ ಕೊಟ್ಟರು. ಗೋವಾದಿಂದ ಧಾರವಾಡದ ಮೂಲಕ ನವೆಂಬರ್’ನಲ್ಲಿ ಬೆಂಗಳೂರಿಗೆ ಬಂದರು. ಇಲ್ಲಿಂದ ಡಿಸೆಂಬರ್’ನಲ್ಲಿ ತಿರುವನಂತಪುರಕ್ಕೆ ಬಂದರು. ಈ ವೇಳೆಗೆ ಕೇರಳದಲ್ಲಿ ಮಳೆಯ ತೀವ್ರತೆ ಇಲ್ಲವಾಗಿ ಉಲ್ಲಾಸಕರ ವಾತಾವರಣ ಇರುತ್ತದೆ. ಮದ್ರಾಸ್’ನಲ್ಲಿ ಚಳಿಗಾಲದ ಆವಧಿಯಲ್ಲಿ ಕಳೆದ ಸ್ವಾಮಿಗಳು ಅಜಿತ್ ಸಿಂಗ್ ಒತ್ತಾಯಕ್ಕೆ ಮಣಿದು ಬೇಸಿಗೆಯಲ್ಲಿ ಖೇತ್ರಿಗೆ ಭೇಟಿ ನೀಡಿ ವಿದೇಶಕ್ಕೆ ಹೋಗುವ ಅನಿವಾರ್ಯತೆಯಿಂದ ಮೇ ತಿಂಗಳು ಬಾಂಬೆಯಲ್ಲಿದ್ದರು.
ಸ್ವಾಮಿಗಳು ಕಲ್ಕತ್ತದಲ್ಲಿ ಹುಟ್ಟಿ ಬೆಳೆದರಾದರೂ ಸಂನ್ಯಾಸ ಸ್ವೀಕರಿಸಿದ ನಂತರ ೧೮೯೦ ರಿಂದ ಬಯಲು ಸೀಮೆಯ ಕಲ್ಕತ್ತದಲ್ಲಿದ್ದರೆ ತಮ್ಮ ಆರೋಗ್ಯ ಕೆಡುತ್ತದೆಯೆಂದು ಭಾವಿಸಿದ್ದು ಸ್ವಾಮಿಗಳ ಬಹುತೇಕ ವೇಳೆ ಡಾರ್ಜಿಲಿಂಗ್ , ನೈನಿತಾಲ್ , ಆಲ್ಮೋರಾ , ಕಾಶ್ಮೀರ ಮುಂತಾದ ಎತ್ತರದ ತಂಪು ಪ್ರದೇಶಗಳಿಗೆ-ಗಿರಿಧಾಮ- ಹೋಗಲು ಹಾತೊರೆಯುವುದು ಅವರ ಪತ್ರಗಳಲ್ಲಿ ಎದ್ದು ಕಾಣುತ್ತದೆ. ಯುವ ಮತ್ತು ತರುಣ ವಯಸ್ಸಿನಲ್ಲಿ ಬರದ ಹಾಗೆ ಬರಬಾರದಾದ ಬೆನ್ನು ಮತ್ತು ಸೊಂಟ ನೋವು , ನಡೆಯದಾಗದಿರುವದು , ನಿಶ್ಶಕ್ತಿ , ಸ್ನಾಯು ಸೆಳೆತ , ಮೂಳೆ ನೋವು , ಕತ್ತು ನೋವು ಮುಂತಾದವು ೨೫ ನೇ ವಯಸ್ಸಿನಲ್ಲಿಯೇ ಸ್ವಾಮಿಗಳ ಬೆನ್ನು ಹತ್ತಿದ್ದವು. ಮನಸ್ಸು ಕದಡಿದೆ (೪/೨/೧೮೮೯) , ಕಾಶಿಗೆ ಹೋಗಬೇಕೆಂಬ ಆಶೆಗೆ ಅನಾರೋಗ್ಯ ಅಡ್ಡಿ . ಜ್ವರ, ವಾಂತಿ,ಭೇದಿ ,ದೇಹ ದುರ್ಬಲ, ನಡೆದಾಡಲು ಅಶಕ್ತ (೨೨/೨/೧೮೮೯) , ಒಂದು ತಿಂಗಳ ನಂತರವೂ ಜ್ವರ ವಾಸಿಯಾಗುತ್ತಿಲ್ಲ . ಗುಲ್ಮ ಕೆಟ್ಟಿಲ್ಲವೆಂಬ ಸಮಾಧಾನ ಇದೆ. ಹೋಮಿಯೋಪತಿ ಚಿಕಿತ್ಸೆ ಪಡೆಯುತ್ತಿದ್ದೇನೆ (೨೧/೩/೧೮೮೯) , ಸಿಮೂಲತಲ (ವೈದ್ಯನಾಥ್ ಹತ್ತಿರ) ಆರೋಗ್ಯಕರ ಸ್ಠಳ ಎಂದು ಪೂರ್ವಾಶ್ರಮದ ಬಂಧುವೊಬ್ಬರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಬೇಸಿಗೆ ಧಗೆಯಿಂದ ಅತಿಸಾರ ಕಾಯಿಲೆ ಬಂದಿದೆ. (೪/೭/೧೮೮೯) , ಒಂದೂವರೆ ತಿಂಗಳ ಕಾಲ ಮಾತ್ರ ಆರೋಗ್ಯವಾಗಿದ್ದೆ ಮತ್ತೆ ಕಾಯಿಲೆಯಾಗಿದೆ. (೭/೮/೧೮೮೯) , ನೀರಿನಲ್ಲಿ ಕಬ್ಬಿಣದ ಅಂಶ ಹೆಚ್ಚಿ ಅಜೀರ್ಣವಾಗಿದೆ. ಆಮ್ಲತೆಯಿಂದ ನರಳಿದೆ (೨೫/೧೨/೧೮೮೯) , ‘ನಾನು ಪ್ರಬಲವಾದ ಬೆನ್ನು ನೋವಿನಿಂದ ನರಳುತ್ತಿದ್ದೇನೆ. ಅದು ಅಲಹಾಬಾದಿನಲ್ಲಿ ಪ್ರಾರಂಭವಾಯಿತು. ಸ್ವಲ್ಪ ಕಾಲದ ಹಿಂದೆ ಅದರಿಂದ ಪಾರಾಗಿದ್ದೆ. ಅದು ಮತ್ತೆ ಬಂದಿದೆ ( ೧೧/೨/೧೮೯೦) ಎಂದು ಬಲರಾಮ ಬಸುಗಳಲ್ಲಿ ಅಲವತ್ತು ಕೊಂಡಿದ್ದಾರೆ. ಪಳಗದ ದೇಹದ ಬಗ್ಗೆ ಬಲರಾಮ ಬಸು ನೀಡಿದ್ದ ಹೇಳಿಕೆಯನ್ನು ಒಪ್ಪಿ ಅದಕ್ಕೆ ಪ್ರತಿಕ್ರಿಯೆಯಾಗಿ ‘ ಬೇಯಿಸದ ರೊಟ್ಟಿಯ ಬಗ್ಗೆ ನೀವು ಬರೆದಿರುವುದು ನಿಜ. ಆದರೆ ಸಂನ್ಯಾಸಿ ಸಾಯುವುದೇ ಹಾಗೆ. ಕಪ್-ಸಾಸರ್ ಒಡೆದಂತಲ್ಲ. ಈ ಬಾರಿ ದುರ್ಬಲತೆ ನನ್ನನ್ನು ಯಾವ ರೀತಿಯಿಂದಲೂ ಬಿಡದು. ನಾನು ಸತ್ತರೆ, ಅದು ನನಗೆ ಒಳ್ಳೆಯದು ‘ ಎಂದು ಉತ್ತರಿಸುವಲ್ಲಿ ಆಳವಾದ ಹತಾಶೆ , ಕುಂದಿದ ಉತ್ಸಾಹಗಳು ಕಾಣುತ್ತವೆ. ‘ಈ ಸಮಯದಲ್ಲಿ ನನ್ನ ಪ್ರತಿಯೊಂದು ಮೂಳೆಯೂ ನೋಯುತ್ತಿದೆ. ಎಂದು ಶಿಷ್ಯನಿಗೆ ತಿಳಿಸಿದ್ದಾರೆ. (೧೭/೨/೧೮೯೬-ಅಳಸಿಂಗ ಪೆರುಮಾಳ್)
೧೮೮೭ ರಿಂದಲೇ ಅಸ್ತಮಾ, ಉಸಿರು ಕಟ್ಟುವುದು ಸ್ವಾಮಿಗಳ ಸಂಗಾತಿಯಾಗಿದ್ದು ೧೮೯೭ ರ ವೇಳೆಗೆ ಉಲ್ಬಣ ಸ್ಥಿತಿ ತಲುಪಿ ಸ್ವಾಮಿಗಳಿಗೆ ತಾವು ಸತ್ತೇ ಹೋಗುತ್ತೇನೆ ಎನಿಸುವಂತೆ ಹಿಂಡಿ ಹಿಪ್ಪೆ ಮಾಡಿದ್ದಿತು. ಪರಿವ್ರಾಜಕ ದಿನಗಳ ಆರಂಭದಿಂದಲೇ ಸ್ವಾಮಿಗಳನ್ನು ಆವರಿಸಿಕೊಂಡಿದ್ದ ಅನಾರೋಗ್ಯ ಮತ್ತು ಜ್ವರಗಳ ಸರಣಿ ಸ್ವಾಮಿಗಳ ಕೊನೆಯ ದಿನಗಳವರೆಗೆ ತನ್ನ ಹಿಡಿತವನ್ನು ಸಡಿಲಗೊಳಿಸಿರಲಿಲ್ಲ. ಕೆಲವು ಸಲ ಕಾಣಿಸಿಕೊಂಡ ಜ್ವರ ಮತ್ತು ಅನಾರೋಗ್ಯ ಹಲವು ವಾರಗಳ ಕಾಲ ಸ್ವಾಮಿಗಳನ್ನು ಬಿಡುತ್ತಿರಲಿಲ್ಲ ಎನ್ನುವುದನ್ನು ಅವರ ಪತ್ರಗಳು ಸ್ಪಷ್ಟಪಡಿಸುತ್ತವೆ. ಸ್ವಾಮಿಗಳಿಗೆ ಅಸ್ತಮಾ/ಉಸಿರು ಕಟ್ಟುವಿಕೆಯಿಂದ ಕೆಲವು ಸಲ ತಾವು ಸತ್ತೇ ಹೋಗಬಹುದೆನ್ನುವ ಆತಂಕ ಮೂಡಿದ್ದಿತು. ‘ಮೇಲೇಳುವಾಗ ಅಥವಾ ಕೆಳಗೆ ಕುಳಿತುಕೊಳ್ಳೂವಾಗ ಉಸಿರು ಕಟ್ಟುತ್ತದೆ. ಇದು ಹಾಲು ಕುಡಿಯುತ್ತಿರುವುದರಿಂದ ಬರುತ್ತಿರಬಹುದು (೧೩/೭/೧೮೯೭-ಬ್ರಹ್ಮಾನಂದ) , ಕೆಲವು ವೈದ್ಯರು ಅಸ್ತಮಾ ಮತ್ತೆ ಕೆಲವು ವೈದ್ಯರು ಡಿಸ್’ಪೆಪ್ಸಿಯಾ ಎನ್ನುವ ಕಾಯಲೆ ನರಗಳ ದೌರ್ಬಲ್ಯದಿಂದ ಬಂದಿದೆ. ಅದೇನೆ ಇರಲಿ ಅದು ಉಸಿರು ಕಟ್ಟುವಂತೆ ಮಾಡುವುದಲ್ಲದೆ ಕೆಲವು ಸಲ ಹಲವು ದಿನಗಳ ಕಾಲ ತೊಂದರೆ ಕೊಡುತ್ತದೆ.. (೨೬/೧/೧೮೯೯, ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) , ವೈದ್ಯನಾಥಕ್ಕೆ ಹವಾ ಬದಲಾವಣೆಗೆ ಹೋಗಿದ್ದು ಪ್ರಯೋಜನವಾಗಲಿಲ್ಲ. ಅಲ್ಲಿ ನಾನು ಉಸಿರು ಕಟ್ಟಿ ನರಳುತ್ತಿದ್ದು , ಸಾಯುವುದರಲ್ಲಿದ್ದೆ (೨/೨/೧೮೯೯-ಜೊಸೆಫಿನ್ ಮೆಕ್ಲಿಯಾಡ್ ) , ಅಸ್ತಮಾ ಒಂದೇ ಸಮನೆ ಭಯಂಕರವಾಗಿ ಹಿಡಿದುಕೊಳ್ಳುತ್ತಿದ್ದಿತು. ಇದು ಹಗಲು , ರಾತ್ರಿ ಕೆಲವು ಸಲ ಏಳು ದಿನಗಳವರೆಗೆ ಇರುತ್ತಿದ್ದಿತು ಯಾವಾಗಲೂ ಉಸಿರು ಹಿಡಿದಿಕೊಳ್ಳುತ್ತಿದ್ದು ನಾನು ಎದ್ದು ನಿಲ್ಲುತ್ತಿದ್ದೆ..( ೧೪/೭/೧೮೯೯- ಕ್ರಿಸ್ಟೈನಾ ಗ್ರೀನ್’ಸ್ಟೈಡಲ್), ಕಲ್ಕತ್ತೆಯಲ್ಲಿ ನನ್ನ ಮೊದಲ ದಿನದ ಅನುಭವವೆಂದರೆ ಅಸ್ತಮಾ ಮತ್ತೆ ಹಿಂದಿರುಗಿ ಬಂದಿರುವುದು. ನಾನು ಅಲ್ಲಿದ್ದ ಎರಡು ವಾರಗಳೂ ರಾತ್ರಿಯ ಹೊತ್ತು ಕೆಲವು ಕಾಲ ಪ್ರಜ್ಞೆಯೇ ತಪ್ಪಿಹೋಗುತ್ತಿದ್ದಿತು (೬/೧/೧೯೦೧) , ನನ್ನ ಸ್ಥಿತಿ ಗಂಬೀರವಾಗಿ ಇಲ್ಲವಾದರೂ ಅದು ಯಾವಾಗ ಬೇಕಾದರೂ ಹಾಗಾಬಹುದು. ಜ್ವರ ಸ್ವಲ್ಪ ಇದೆ ಮತ್ತು ಯಾವಾಗಲೂ ಎಡೆಬಿಡದೆ ಇದೆ ಮತ್ತು ಉಸಿರಾಟ ಕಷ್ಟವಾಗಿದೆ. ಇದು ಏತಕ್ಕೆ ಎನ್ನುವುದು ತಿಳಿಯುತ್ತಿಲ್ಲ ( ೪/೩/೧೯೦೨-ಮಾರ್ಗರೆಟ್ ನೋಬಲ್). ಸ್ವಾಮಿಗಳ ಈ ಹೇಳಿಕೆಗಳಿಂದ ಅಸ್ತಮಾ ಅವರನ್ನು ತೀವ್ರವಾಗಿ ಬಾಧಿಸುತ್ತಿರುವುದು ನಿಚ್ಚಳವಾಗುತ್ತದೆ.
ಸ್ವಾಮಿಗಳಿಗಿದ್ದ ಕೌಟುಂಬಿಕ ಮತ್ತು ಜೀವನಶೈಲಿಗೆ ಸಂಬಂಧಿಸಿದ್ದ ರೋಗಗಳದ್ದೇ ಇನ್ನೊಂದು ಕಥೆ. ೧೮೯೪ ರಲ್ಲಿ ಸ್ವಾಮಿಗಳು ತಡರಾತ್ರಿಯ ಔತಣ ಕೂಟಗಳಲ್ಲಿ ಭಾಗವಹಿಸಿದ್ದರ ಪರಿಣಾಮ ಅಕ್ಟೋಬರ್ ವೇಳೆಗೆ ಬೊಜ್ಜು ಕಾಣಸಿಕೊಳ್ಳತೊಡಗಿತು. ಸಮರ್ಪಕ ವ್ಯಾಯಾಮದ ಕೊರತೆ, ಜಡ ಜೀವನ ಪದ್ದತಿ , ಮಾಂಸಾಹಾರ, ಧೂಮಪಾನಗಳ ನೆರವಿನಿಂದ ಬೊಜ್ಜು ಸ್ವಾಮಿಗಳನ್ನು ಆಕ್ರಮಿಸತೊಡಗಿತು. ಇದನ್ನು ತೋಡಿಕೊಂಡು ಸ್ವಾಮಿಗಳು ಬರೆದ ಪತ್ರಗಳ ಸರಣಿಯೇ ಇದೆ. ‘ಎಂದಿನಂತೆ ನಾನು ದಪ್ಪನಾಗಿರುವೆನು ಮತ್ತು ಊಟ ಚೆನ್ನಾಗಿದೆ (೧೦/೧೦/೧೮೯೪- ಶ್ರೀಮತಿ ಜಾರ್ಜ್ ಹೇಲ್’ ) , ‘ಈ ಬೇಸಿಗೆಯಲ್ಲಿ ೩೦-೪೦ ಪೌಂಡ್ ತೂಕ ಇಳಿಯಬಹುದು. ಆಗ ಆ ತೂಕ ನನ್ನ ನಿಲುವಿಗೆ ಸೂಕ್ತವಾದುದು. ಈ ವರ್ಷ ನನ್ನ ಆರೋಗ್ಯ ಸರಿಯಿರಲಿಲ್ಲ ( ೨೨/೬/೧೮೯೫ –ಮೇರಿ ಹೇಲ್ ) ಇವು ಬೊಜ್ಜಿನ ಬಗ್ಗೆ ಸ್ವಾಮಿಗಳ ಸ್ವವಿಮರ್ಶೆಗಳಾಗಿದ್ದವು. ಸ್ವಾಮಿಗಳು ‘ಅಭಿವ್ಯಕ್ತಿ ಕಲೆ’ ತರಬೇತುದಾರಳಾದ ಶ್ರೀಮತಿ ಫ್ಲಾರೆನ್ಸ್ ಆಡಮ್ಸ್ ಮಾರ್ಗದರ್ಶನದಲ್ಲಿ ನಡಿಗೆಯ ಶೈಲಿಯನ್ನು ಅಭ್ಯಾಸ ಮಾಡುತ್ತಿದ್ದರು. ಮಾರ್ಚ್ ೧೮೯೫ ರಲ್ಲಿ ಇಸಾಬೆಲ್ಲಾ ಮೆಕ್ಲೆಂಡ್ಲಿಗೆ ‘ ಪ್ರಯೋಜನವಿಲ್ಲ ; ಶ್ರೀಮತಿ ಆಡಮ್ಸ್ ಬಯಸುವಂತೆ ಮುಂಭಾಗದಲ್ಲಿ ಹೆಚ್ಚಾಗಿರುವ ತೂಕ ನನ್ನನ್ನು ಬಗ್ಗಲು ಬಿಡುತ್ತಿಲ್ಲ. ನಡೆಯುವಾಗ ನಾನು ಮುಂದಕ್ಕೆ ಬಾಗಲು ಯತ್ನಿಸಿದರೆ ದೇಹದ ಗುರುತ್ವ ಕೇಂದ್ರ ಹೊಟ್ಟಿಯ ತುದಿಗೆ ಪಲ್ಲಟಗೊಂಡು ಲಾಗ ಹೊಡೆಯುವ ಪರಿಸ್ಥಿತಿ ಎದುರಾಗುತ್ತದೆ’ ಎಂದು ತಮ್ಮ ಡೊಳ್ಳುಹೊಟ್ಟೆಯ ಪ್ರಭಾವವನ್ನು ಬಿಚ್ಚಿಟ್ಟಿದ್ದರು.
‘ ನಾನು ಈಗ ಹೆಚ್ಚಾಗಿ ಹಣ್ಣು ಮತ್ತು ಬೀಜಗಳನ್ನು ತಿಂದು ಜೀವಿಸುತ್ತಿದ್ದೇನೆ. ಅದು ನನಗೆ ಚೆನ್ನಾಗಿ ಒಗ್ಗಿದೆ ಎನಿಸುತ್ತಿದೆ… ನನ್ನ ಬೊಜ್ಜು ಬಹಳ ಕರಗಿದೆ. ನಾನು ಗಟ್ಟಿಯಾದ ಆಹಾರವನ್ನೇ ತೆಗೆದುಕೊಳ್ಳುತ್ತಿದ್ದೇನೆ ‘ (೨/೧೦/೧೮೯೬-ಜೊಸೆಫಿನ್ ಮೆಕ್ಲಿಯಾಡ್) , ‘ಸೆಕೆಯಿದ್ದರೂ ಬಾಯರಿಕೆಯಾಗದು. ಹಾಲಿನ ಸೇವನೆಯಿಂದ ಮೈ ಬರುತ್ತಿದೆ (೨೯/೫/೧೮೯೭- ಶಶಿಭೂಷಣ ಘೋಷ್) , ಡಾಕ್ಟರ್ ಸಲಹೆಯಂತೆ ಕೆನೆ ತೆಗೆದ ಹಾಲು ಸೇವಿಸಿ ಬೆನ್ನಿಗಿಂತ ಹೊಟ್ಟೆ ಮುಂದೆ ಬಂದಿದೆ. ಹಾಲನ್ನು ಕುಡಿಯುವುದನ್ನು ಬಿಟ್ಟಿದ್ದೇನೆ ( ೨೫/೭/೧೮೯೭- ಮೇರಿ ಹಾಲ್ ಬಾಯಿಸ್ಟರ್) , ಅಂಗಸಾಧನೆ ಇಲ್ಲದೆ ಆರೋಗ್ಯವಿಲ್ಲ. ಸದಾ ಮಾತನಾಡುತ್ತಿದ್ದರೆ ರೋಗ ಬರುತ್ತದೆ /ವ್ಯಾಯಾಮದಿಂದ ಕೈಕಾಲುಗಳಲ್ಲಿ ಮಾಂಸ ತುಂಬಿಕೊಂಡಿದೆ….ಹೊಟ್ಟೆ ತುಂಬಾ ಉಬ್ಬುತ್ತಿದೆ ( ೧೩/೭/೧೮೯೭ ಮತ್ತು ೧೧/೧೧/೧೮೯೭ – ಬ್ರಹ್ಮಾನಂದ) , ನನ್ನ ತೂಕವನ್ನು ೫೦ ಪೌಂಡ್ ಕಡಿಮೆ ಮಾಡಿಕೊಳ್ಳಲು ನನಗೆ ಬಹಳ ಸಂತೋಷ ಮತ್ತು ನಾನು ಮತ್ತೆೀ ದಪ್ಪನಾಗುತ್ತಿದ್ದೇನೆ ಎಂದು ತಿಳಿಸಲು ಬಹಳ ವಿಷಾದವಾಗುತ್ತಿದೆ ( ೧೩/೧೨/೧೮೯೭ ಮತ್ತು ೨೦/೯/೧೮೯೯-ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) ಎನ್ನುವ ಸ್ವಾಮಿಗಳ ಪತ್ರಗಳಿಂದ ಅವರು ಎಂದಿಗೂ ಬೊಜ್ಜಿನಿಂದ ದೂರ ಇರಲಿಲ್ಲ. ಬೊಜ್ಜು ಅವರನ್ನು ಬೇತಾಳನಂತೆ ಬೆನ್ನು ಹತ್ತಿದ್ದಿತು ಎಂದು ಗುರುತಿಸಬಹುದು. ೧೮೯೯ ರ ವೇಳೆಗೆ ಬೊಜ್ಜು ಮತ್ತು ಆಯಾಸ ಸ್ವಾಮಿಗಳನ್ನು ತೀವ್ರವಾಗಿ ಆಕ್ರಮಿಸಿದ್ದವು. ‘ ಈದಿನ ಬೆಳಿಗ್ಗೆ ‘ರಾಜ’ನ ಆರೋಗ್ಯ ತೀರಾ ಹದಗೆಟ್ಟದ್ದಿತು. ನಿನ್ನೆ ಮಿಸ್ ಸೌಟೆರ್’ಳನ್ನು ನೋಡಲು ಹೋಗಿದ್ದು ಮನೆಗೆ ತಡವಾಗಿ ಬಂದರು. ೪-೫ ನಿಮಿಷಗಳ ನಡಿಗೆಯ ದೂರದಲ್ಲಿರುವ ರೈಲು ನಿಲ್ದಾಣದಿಂದ ನಡೆದುಕೊಂಡು ಮನೆಗೆ ಬರಲು ಅರ್ಧ ಗಂಟೆಗೂ ಹೆಚ್ಚು ಸಮಯ ಬೇಕಾಯಿತು ‘ ಎಂದು ತಿಳಿಸಿ ಮಾರ್ಗರೆಟ್ ನೋಬಲ್ ೨/೮/೧೮೯೯ ರಂದು ಜೊಸೆಫಿನ್ ಮೆಕ್ಲಿಯಾಡ್’ಗೆ ಬರೆದ ಪತ್ರ ಸ್ವಾಮಿಗಳ ಆರೋಗ್ಯ ಪತ್ರದಂತಿದೆ. (68)
ಬೊಜ್ಜಿನ ಗೆಳೆಯನಾದ ಡಯಾಬಿಟಿಸ್ (ಮಧುಮೇಹ) ಸ್ವಾಮಿಗಳನ್ನು ಮರೆತಿರಲಿಲ್ಲ. ‘ನನಗೆ ಡಯಾಬಿಟೀಸ್ ಎಂಬ ವಾಸಿಯಾಗದ ಕಾಯಿಲೆ ಬಂದಿದೆ. ಅದು ಕೆಲವು ವರ್ಷಗಳಲ್ಲಿ ನನ್ನನ್ನು ಇಹಲೋಕದಿಂದ ಸಾಗಿಸುವುದು (೧೬/೩/೧೮೯೭-ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) , ‘ ಪಶ್ಚಿಮ ದೇಶಗಳಲ್ಲಿ ಒಂದೇ ಸಮನಾಗಿ ಮಾಡಿದ ಕೆಲಸ ಮತ್ತು ಭಾರತದಲ್ಲಿ ಒಂದು ತಿಂಗಳು ಮಾಡಿದ ತೀವ್ರ ಕೆಲಸ ಈ ಬಂಗಾಲಿ ದೇಹದ ಮೇಲೆ ಮಾಡಿದ ಪರಿಣಾಮವೆಂದರೆ ಡಯಾಬಿಟಿಸ್. ಇದೊಂದು ಅನುವಂಶಿಕ ಶತ್ರು. ಹೆಚ್ಚೆಂದರೆ ಕೆಲವು ವರ್ಷಗಳಲ್ಲಿ ಇದು ನನ್ನನ್ನು ಈ ಪ್ರಪಂಚದಿಂದ ಸಾಗಿಸಿಬಿಡುವುದು. ಕೇವಲ ಮಾಂಸವನ್ನು ತಿನ್ನುವುದು ಮತ್ತು ನೀರನ್ನು ಕುಡಿಯದಿರುವುದೊಂದೇ ಜೀವನವನ್ನು ಎಳೆದುಕೊಂಡು ಹೋಗುವುದಕ್ಕಿರುವ ದಾರಿ ‘ (೨೬/೩/೧೮೯೭-ಸಾರಾ ಬುಲ್) , ‘ನನಗೆ ಡಯಾಬಿಟಿಸ್ ಎಂಬ ಭಯಂಕರ ರೋಗ ಬಂದಿರುವುದು ನಿಮಗೆ ತಿಳಿದಿರಬಹುದು. ಅದು ನನ್ನ ಯೋಜನೆಗಳನ್ನೆಲ್ಲ ಅಸ್ತವ್ಯಸ್ತಗೊಳಿಸಿತು ( ೭/೪/೧೮೯೭-ಲಾಲ ಬದ್ರಿ ಷಹಾ) ಎಂದು ತಮ್ಮ ಹಿತೈಷಿಗಳಿಗೆ , ಶಿಷ್ಯರಿಗೆ ಪತ್ರ ಬರೆದು ಮಧುಮೇಹ ಕಾಲನ ಕರೆಯೋಲೆಯನ್ನು ಹಿಡಿದು ತಮ್ಮ ಸನಿಹ ನಿಂತಿದೆ ಎಂದು ಸ್ವಾಮಿಗಳು ಕಂಗಾಲಾಗಿದ್ದರು.
ಕೊನೆಯ ದಿನಗಳಲ್ಲಿ ಮಧುಮೇಹ ಸ್ವಾಮಿಗಳ ಕಣ್ಣುಗಳ ಮೇಲೆ ತನ್ನ ಪ್ರಭಾವವನ್ನು ತೋರಿಸತೊಡಗಿದ್ದಿತು. ‘ ಬಿಸಿಲಿಗೆ ಹೋದರೆ ಕಣ್ಣು ಕೆಂಪಾಗುತ್ತದೆ (, ೧೩/೭/೧೮೯೭-ಬ್ರಹ್ಮಾನಂದ) , ಈಗ ನನ್ನ ಕಣ್ಣಿನ ದೃಷ್ಟಿಯೂ ಮಂದವಾಗಿರುವುದರಿಂದ ನನ್ನ ಸ್ಥಿತಿ ಹಿಂದಿಗಿಂತ ಕೆಟ್ಟಿದೆ. ಈ ವಿಷಯಗಳನ್ನು ನಾನು ಬರೆಯುತ್ತಿರಲಿಲ್ಲ. ಆದರೆ ಇವು ಕೆಲವರಿಗೆ ಬೇಕಾಗಿವೆ’ ( ೮/೧೧/೧೯೦೧- ಜೊಸೆಫಿನ್ ಮೆಕ್ಲಿಯಾಡ್) , ಆಲ್ಬ್ಯೂಮಿನ್ ರಕ್ತವನ್ನು ವಿಷಮಯವಾಗಿಸಿ ಹೃದಯಕ್ಕೆ ಅಪಾಯ ಉಂಟು ಮಾಡುವುದು. ಈ ಬಾರಿ ಅದು ಬಲಗಣ್ಣಿನ ಸೂಕ್ಷ್ಮ ನಾಳಗಳನ್ನು ಒಡೆದಿರುವುದು. ಆದ್ದರಿಂದ ನಾನು ಬಲಗಣ್ಣಿನಿಂದ ನೋಡಲಾರೆ (೧೨/೧೨/೧೯೦೧-ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) ಎಂದು ಬರೆದಿರುವುದನ್ನು ಗಮನಿಸಿದರೆ ಸ್ವಾಮಿಗಳ ಜೀವಿತದ ಕೊನೆಯ ಎರಡು ವರ್ಷಗಳಲ್ಲಿ ಮಧುಮೇಹ ಅವರನ್ನು ಸಂಪೂರ್ಣ ಆವರಿಸಿದ್ದಿತೆಂದು ಸ್ಪಷ್ಟವಾಗುತ್ತದೆ.
ಸ್ವಾಮಿಗಳಿಗೆ ಹೃದ್ರೋಗದ ಲಕ್ಷಣಗಳು ಯಾವಾಗಿನಿಂದ ಕಾಣಿಸಿಕೊಂಡವೆಂದು ಹೇಳುವುದು ಕಷ್ಟ . ೧೮೯೬೭ ರಲ್ಲಿ ಸ್ವಾಮಿಗಳು ಲಂಡನ್’ನಲ್ಲಿರುವಾಗ ಮಧ್ಯಾಹ್ನ ಊಟವಾದ ನಂತರ ಜಾನ್.ಪಿ.ಫಾಕ್ಸ್ ಜೊತೆ ವಿಶ್ರಾಂತಿ ತೆಗೆದುಕೊಳ್ಳತ್ತಿರುವಾಗ ಇದ್ದಕ್ಕಿಂದ್ದಂತೆ ಮುಖದಲ್ಲಿ ತೀವ್ರ ನೋವು ಕಾಣಿಸಿಕೊಂಡಿತು. ಇದಾದ ಸ್ವಲ್ಪ ಹೊತ್ತಿನ ನಂತರ ಸುಧಾರಿಸಿಕೊಂಡ ಸ್ವಾಮಿಗಳು ನನಗೆ ಎದೆ ನೋವು ಕಾಣಿಸಿಕೊಂಡಿತು. ನನ್ನ ತಂದೆ ಇದೇ ರೋಗದಿಂದ ಸತ್ತರು ಎಂದು ಜಾನ್.ಪಿ.ಫಾಕ್ಸ್’ಗೆ ತಿಳಿಸಿದರು ಎಂದು ಮಹೇಂದ್ರನಾಥ ದತ್ತ ಬರೆದಿದ್ದಾರೆ. ೧೮೯೮ ರಲ್ಲಿ ಅಮರನಾಥ ಯಾತ್ರೆಗೆ ಹೋಗಿದ್ದಾಗ ಕಡಿದಾದ ಬೆಟ್ಟವನ್ನು ಹತ್ತಿ ಆಯಾಸ ಹೆಚ್ಚಿ ಲಘು ಹೃದಯಾಘಾತ ಆಗಿದೆಯೆಂದು ವೈದ್ಯರು ತಿಳಿಸಿದ್ದರು. ಹೃದಯಾಘಾತದ ಬಗ್ಗೆ ಸ್ವಾಮಿಗಳ ಹಲವು ಕಡೆ ತಿಳಿಸಿದ್ದಾರೆ. ನನ್ನ ಹೃದಯದಲ್ಲಿ ಎನೋ ತೊಂದರೆ ಇರುವಂತೆ ಭಾಸವಾಗುತ್ತದೆ (೨೬/೧೦/೧೮೯೮, ?/೧೧/೧೮೯೮ ರಾಜ ಅಜಿತ್ ಸಿಂಗ್) ,ಹೃದಯ ಸ್ವಲ್ಪ ತಗಾದೆ ಕೊಟ್ಟಾಗ ಮಾತ್ರ ನನಗೆ ನನ್ನ ವಯಸ್ಸು ಜ್ಞಾಪಕಕ್ಕೆ ಬರುವುದು ( ೩/೮/೧೮೯೯-ಜೊಸೆಫಿನ್ ಮೆಕ್ಲಿಯಾಡ್) , ಹೃದಯ ನರಗಳ ದೌರ್ಬಲ್ಯಕ್ಕೆ ಒಳಗಾಗಿದೆ. ಅದನ್ನು ಶಾಂತಗೊಳಿಸಬೇಕಾಗಿದೆ. ಉಲ್ಲಾಸಕರ ಸಹವಾಸ, ಪ್ರೀತಿಪೂರ್ವಕ ಮಿತ್ರರು , ಮತ್ತು ಪ್ರಶಾಂತ ವಾತಾವರಣ ಬೇಕು (೧೦/೧೧/೧೮೯೯ -ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) , ನನ್ನ ಹೃದಯ ಬಹಳ ದುರ್ಬಲವಾಗಿದೆ. ಸ್ಥಳ ಬದಲಾವಣೆಯಿಂದ ನನಗೇನೂ ಒಳ್ಳೆಯದಾಗುವುದೆಂದು ತೋರದು (೩೧/೧೨/೧೯೦೦ , ರಾಜ ಅಜಿತ್ ಸಿಂಗ್) ಎನ್ನುವ ಸ್ವಾಮಿಗಳ ಮಾತುಗಳಲ್ಲಿ ಹೃದಯದ ಬಗ್ಗೆ ಅನುಭವಿಸುತ್ತಿರುವ ವ್ಯಕ್ತಿಯ ನೋವು ತುಂಬಿದೆ. ಸ್ವಾಮಿಗಳು ತಮ್ಮ ಹಲವು ಪತ್ರಗಳಲ್ಲಿ ಮೂತ್ರ ಪಿಂಡ , ಯಕೃತ್ತು ಮತ್ತು ಪಿತ್ತಜನಕಾಂಗದ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ. ‘ಮೂತ್ರಪಿಂಡದ ಸಮಸ್ಯೆ-ಬಹುದಿನ ಬದುಕುವ ಭರವಸೆಯಿಲ್ಲ (೧೫/೧೧/೧೮೯೭ , ಇಂದುಮತಿ ಮಿತ್ರ) , ಮೂತ್ರ ಪಿಂಡದ ತೊಂದರೆಯ ಬಗ್ಗೆ ಹಿಂದೆ ಇದ್ದ ಭಯವೆಲ್ಲವೂ ಹೊರಟು ಹೋಗಿದೆ. ಚಿಂತೆಯೊಂದೇ ನನಗಿರುವ ಕಾಯಿಲೆ. ಅದನ್ನು ನಾನು ಕ್ಷಿಪ್ರವಾಗಿ ಜಯಿಸುತ್ತಿರುವೆನು (೧೯/೦೫/೧೯೦೦ -ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) , ಬಿಸಿಲು ಮತ್ತು ನಡೆದಾಟದಿಂದ ಯಕೃತ್ತು ತೊಂದರೆ ಕೊಡುತ್ತಿದೆ (೨೦/೫/೧೮೯೭-ಬ್ರಹ್ಮಾನಂದ).
ಸ್ವಾಮಿಗಳಿಗೆ ಯಾಕೆ , ಯಾವ ಕಾರಣದಿಂದ ತಮ್ಮ ಆರೋಗ್ಯ ಹೇಗೆ ಕೆಡುತ್ತಿದೆ ಎನ್ನುವುದೇ ಯಕ್ಷಪ್ರಶ್ನೆಯಾಗಿದ್ದಿತು. ಕೆಲವೊಮ್ಮೆ ಅವರಿಗೆ ಅಸ್ತಮಾ ತಮ್ಮ ಜೀವ ತೆಗೆಯುತ್ತಿದೆ ಎಂದೆನಿಸಿದರೆ , ಮತ್ತೊಮ್ಮೆ ಮೂತ್ರಪಿಂಡ , ಯಕೃತ್ತು , ಪಿತ್ತಜನಾಂಕಗಳಲ್ಲಿ ತೊಂದರೆ ಇದೆ ಎಂದು ಭಾಸವಾಗುತ್ತಿದ್ದಿತು. ಒಮ್ಮೊಮ್ಮೆ ಡಯಾಬಿಟಿಸ್ ತಮಗೆ ವಂಶಪಾರಂಪರ್ಯವಾಗಿ ಬಂದ ಶಾಪ ಎಂದು ಕೊರಗುತ್ತಿದ್ದರು. ಹಲವಾರು ಪತ್ರಗಳಲ್ಲಿ ನನಗೆ ನರಗಳ ಉದ್ವಿಗ್ನತೆ/ದೌರ್ಬಲ್ಯ ಹೊರತಾಗಿ ಮತ್ತಾವ ಕಾಯಿಲೆಯೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಸ್ವಾಮಿಗಳು ಯಾವುದನ್ನು ಕುರಿತಾಗಿ ನರಗಳ ದೌರ್ಬಲ್ಯ ಎನ್ನುತ್ತಾರೋ ಸ್ಪಷ್ಟವಿಲ್ಲ. ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಇನ್ನು ೬ ತಿಂಗಳಿನಲ್ಲಿ ಸಾಯುತ್ತೇನೆ. ನನ್ನ ದೇಹ ಅನೇಕ ತಿಂಗಳುಗಳಿಂದಲೂ ನಾನು ಖಂಡಿತವಾಗಿ ಬದುಕಿರುವೆನೆಂಬುದನ್ನು ನನಗೆ ಮನಗಾಣಿಸಬೇಕೆಂದು ಪ್ರಯತ್ನಿಸುತ್ತಿದೆ. ಈಗ ನನ್ನ ದೇಹದೊಡನೆ ನಾನು ಒಂದು ಬಗೆಯ ತಿರುಗಣಿಯಲ್ಲಿ ಬಿದ್ದಿದ್ದೇನೆ ಎಂದು ನಿರಾಶೆಯಲ್ಲಿ ಹೇಳುತ್ತಿದ್ದರು. ಇದಾದ ಕೆಲದಿನಗಳಲ್ಲಿಯೇ ಪ್ರಾಂತದ ಹವಾಗುಣಗಳಿಗೆ ಅನುಗುಣವಾಗಿ ರೋಗಗಳು ಬರುತ್ತವೆ…. ನಾನು ಸುಲಭವಾಗಿ ಸಾಯುವುದಿಲ್ಲ. ಈ ಜ್ವರಕ್ಕೆಲ್ಲ ಯಕೃತ್ತು ಕಾರಣ ಎಂದು ನನಗೆ ಗೊತ್ತಾಗಿದೆ ಎಂದು ಘೋಷಿಸುತ್ತಿದ್ದರು. ನಾನು ಮತ್ತೆ ಉತ್ತಮಗೊಳ್ಳುತ್ತಿದ್ದೇನೆ. ಅಜೀರ್ಣತೆ ಮತು ನರಗಳ ದೌರ್ಬಲ್ಯ ಇವೆರಡೇ ನನಗಿರುವ ತೊಂದರೆಗಳು. ಮೊದಲನೆಯದರ ಬಗ್ಗೆ ನಾನು ಎಚ್ಚರ ತೆಗೆದುಕೊಳ್ಳುತ್ತೇನೆ . ಎರಡನೆಯದು ನಿನ್ನನ್ನು ಭೇಟಿ ಮಾಡುವ ವೇಳೆಗೆ ವಾಸಿಯಾಗಿರುವುದು….. ನಾನೀಗ ಬರೆಯುವ ನಿರಾಶದಾಯಕ ಮಾತುಗಳನ್ನು ನಂಬದಿರು. ಏಕೆಂದರೆ ನಾನು ಕೆಲವು ವೇಳೆ ಎಂದಿನಂತಿರುವುದಿಲ್ಲ. ಅಷ್ಟು ದಿಗಿಲಾಗುವುದು ಎಂದು ೧೦/೫/೧೮೯೯ ಕ್ರಿಸ್ಟೈನಾ ಗ್ರೀನ್’ಸ್ಟೈಡಲ್’ಗೆ ತಿಳಿಸಿದ್ದರು.
‘ಬಾಬುರಾಮ್ ಮತ್ತು ಯೋಗೇನ್ ಏಕೆ ಅಷ್ಟು ನರಳುತ್ತಿರುವರು ? ಅದಕ್ಕೆ ನಿಷೇಧಾತ್ಮಕವಾದ ಆತ್ಮ ನಿಂದನೆಯೇ ಕಾರಣ. ಮಾನಸಿಕ ಶಕ್ತಿಯಿಂದ ಅವರು ರೋಗವನ್ನು ವಾಸಿಮಾಡಿಕೊಳ್ಳಲು ಹೇಳಿ. ಅದು ಒಂದು ಗಂಟೆಯಲ್ಲಿ ಮಾಯವಾಗುವುದು. ಆತ್ಮರಾಗಿರುವ ನಮಗೆ ಕಾಯಿಲೆ ಎಂದರೇನು? ಎನ್ನುವ ಸಲಹೆಯನ್ನು ೨೫/೯/೧೮೯೪ ರಂದು ಅಮೆರಿಕದಿಂದ ಬರೆದ ಪತ್ರದಲ್ಲಿ ಸ್ವಾಮಿಗಳು ನೀಡಿದ್ದರು, ಯಾವ ಹೊರ ಚಿಕಿತ್ಸೆಯೂ ಇಲ್ಲದೆ ಕೇವಲ ಮಾನಸಿಕ ಚಿಕಿತ್ಸೆಯಿಂದ ನನ್ನ ರೋಗಗಳಿಂದ ಮುಕ್ತನಾದೆ ಎಂದು ತಮ್ಮ ಶಿಷ್ಯೆ ಮಾರ್ಗರೆಟ್ ನೋಬಲ್’ಗೆ ತಿಳಿಸಿದ್ದರು. ( ೫/೫/೧೮೯೭) ಆತ್ಮನಿಗೆ ರೋಗವಿಲ್ಲ, ಮುಪ್ಪು, ಸಾವುಗಳಿಲ್ಲ .ಆತ ಯೋಗಾಗ್ನಿಯಿಂದ ತುಂಬಿದ ದೇಹ ಹೊಂದಿದ್ದಾನೆ ಎನ್ನುವ ಶ್ಲೋಕ ನೆನಪಾಗುತ್ತಿದೆ. ಕುಸ್ತಿ ಪಂದ್ಯ ಇಟ್ಟರೆ ಜಿ.ಜಿ ಮತ್ತು ನಿರಂಜನ ಇಬ್ಬರನ್ನು ಸೋಲಿಸುತ್ತೇನೆ ಎಂದು ೨೯/೫/೧೮೯೭ ರ ಪತ್ರದಲ್ಲಿ ಶಶಿಭೂಷಣ ಘೋಷ್’ಗೆ ಮನದಟ್ಟು ಮಾಡಲು ಯತ್ನಿಸಿದ್ದರು.
…. ಅಮೆರಿಕದಲ್ಲಿ ಪ್ರಖ್ಯಾತನಾದ ಶರೀರಶಾಸ್ತ್ರಜ್ಞನು ನನ್ನ ವಿಚಾರಪೂರ್ವಕವಾದ ಆಲೋಚನೆಗಳನ್ನು ಬಹಳ ಮೆಚ್ಚಿರುವೆನೆಂದು ಕೇಳಿದ್ದೇನೆ. ಅದೇ ಸಮಯದಲ್ಲಿ ಇಂಗ್ಲೆಂಡ್'ನಲ್ಲಿ ನನ್ನ ವಿಚಾರಗಳನ್ನು ಅಲ್ಲಗಳೆದವರೂ ಇರುವರು. ಒಳ್ಳೆಯದು ನನ್ನ ವಿಚಾರಪೂರ್ವಕ ಆಲೋಚನೆಗಳು ಬಹಳ ಧೈರ್ಯವಾದವು. ಅದರಲ್ಲಿ ಬಹಳ ಭಾಗ ಅನೇಕ ಕಾಲ ಅರ್ಥವಾಗದೆ ಉಳಿಯುವುದು. ಆದರೆ ಅಲ್ಲಿ ಕೆಲವು ಸೂಚನೆಗಳಿವೆ. ಅವನ್ನು ಶರೀರಶಾಸ್ತ್ರಜ್ಞರು ಬೇಗ ತೆಗೆದುಕೊಂಡರೆ ಒಳ್ಳೆಯದಾಗುವುದು ‘ ಎಂದು ಅಳಸಿಂಗ ಪೆರುಮಾಳ್’ಗೆ ಶರೀರ ವಿಜ್ಞಾನದ ರಹಸ್ಯ ತಿಳಿಸಿದ್ದರು. (?/೧೦/೧೮೯೬). ೨೯/೭/೧೮೯೭ ರ ಪತ್ರದಲ್ಲಿ ರಾಮಕೃಷ್ಣಾನಂದರಿಗೆ ‘ನಿನ್ನ ಆರೋಗ್ಯವನ್ನು ಸರಿಯಾಗಿ ಇಟ್ಟುಕೋ . ದೇಹವನ್ನು ಕುರಿತಾಗಿ ಬಹಳ ಆಲೋಚಿಸಿದರೂ ಆರೋಗ್ಯ ಕೆಡುವುದು ‘ ಎನ್ನುವ ರಹಸ್ಯವನ್ನು ತಿಳಿಸಿದ್ದರು. ಆದರೆ ತಾವು ಮಾತ್ರ ತಮ್ಮ ದೇಹ ಸ್ಥಿತಿಯ ಬಗ್ಗೆ ಸದಾ ಚಿಂತಿತರಾಗಿದ್ದು ಅದನ್ನು ಪತ್ರಗಳಲ್ಲಿ ಮೇಲಿಂದ ಮೇಲೆ ವ್ಯಕ್ತಪಡಿಸುತ್ತಿದ್ದರು. ಮಾನಸಿಕ ಬಲದಿಂದ ರೋಗಗಳನ್ನು ವಾಸಿ ಮಾಡಬಹುದು ಎನ್ನುವುದು ಸ್ವಾಮಿಗಳ ಬಲವಾದ ನಂಬಿಕೆಯಾಗಿದ್ದು ಅದನ್ನು ಬೇರೆಯವರಿಗೆ ತಿಳಿಸುತ್ತಿದ್ದರು , ಶರೀರಶಾಸ್ತ್ರಜ್ಞರು ತಮ್ಮ ಪರಿಕಲ್ಪನೆಗಳನ್ನು ಪರಿಗಣಿಸಿದರೆ ಒಳ್ಳೆಯದು ಎಂದು ಹೇಳುತ್ತಿದ್ದರು. ಆದರೆ ಅವರ ಹೇಳಿಕೆಗಳ ಮೇಲೆ ಅವರಿಗೇ ನಂಬಿಕೆ ಇರುತ್ತಿರಲಿಲ್ಲ. ಕಾಯಿಲೆ ಹೆಚ್ಚಿದಾಗ ವೈದ್ಯರ ಸಲಹೆಯ ಔಷಧಗಳನ್ನು ಸೇವಿಸಿ ಗುಣಮುಖರಾಗದಿದ್ದಾಗ ‘ಔಷಧಿ ಬ್ರಹ್ಮಜ್ಞಾನಿಯ ಮೇಲೆ ಪರಿಣಾಮ ಬೀರುತ್ತಿಲ್ಲ ಎಂದು ತಮ್ಮನ್ನು ತಾವೇ ಛೇಡಿಸಿಕೊಳ್ಳುತ್ತಿದ್ದರು .(೧/೮/೧೮೯೮)
ಅನುಭವಿಸುವುದು ದೇಹವೇ ಹೊರತು ಆತ್ಮವಲ್ಲ. ಈ ದೇಹ ಏನಾದರೇನಂತೆ ಎಂದು ಆರೋಗ್ಯವಂತರಾಗಿದ್ದಾಗ ದಿಟ್ಟತನದಲ್ಲಿ ನುಡಿದಿದ್ದ ಸ್ವಾಮಿಗಳು ತಮ್ಮ ಆರೋಗ್ಯ ಕೆಡುತ್ತಿರುವುದರಿಂದ ಹೆದರಿದ್ದರು. ತಮಗೆ ಅಜೀರ್ಣ ಹೊರತು ಬೇರೆಯೇನೂ ತೊಂದರೆಯಿಲ್ಲ ಎಂದು ಆಗಿಂದಾಗ್ಗೆ ಭಾಸವಾಗುತ್ತಿದ್ದಿತು. ಬ್ಯಾಟ್ಲ್’ಕ್ರೀಕ್ (ಕೆಲ್ಲೊಗ್ಸ್) ಆಹಾರ ಆರೋಗ್ಯಕ್ಕೆ ಒಳ್ಳೆಯದು ಮತ್ತು ಪೌಷ್ಟಿಕ ಎಂದು ಯಾರೋ ಹೇಳಿದ್ದರು. ಕೆಲ ತಿಂಗಳು ಸ್ವಾಮಿಗಳ ಮನಸ್ಸು ಪೂರಾ ಈ ಆಹಾರವನ್ನು ತಿನ್ನುವ ಬಯಕೆಯಲ್ಲಿದ್ದಿತು. ‘ನಾನು ಬ್ಯಾಟ್ಸ್ ಕ್ರೀಕ್ ಆಹಾರವನ್ನು ತಿಂದು ನೋಡುತ್ತೇನೆ. ಅದು ವಿಫಲವಾದರೆ ಬೇಗನೆ ನಿರ್ಗಮಿಸುತ್ತೇನೆ (೩೦/೧೦/೧೮೯೯) ‘ನೀನು ಬ್ಯಾಟ್ಲ್’ಕ್ರೀಕ್ ಆಹಾರದ ಎಲ್ಲಾ ಸೂಚನೆಗಳನ್ನು ತೆಗೆದುಕೊಂಡು ಬಂದರೆ ಅದನ್ನು ತಯಾರಿಸಲು ನಾನು ಇಲ್ಲಿ ವ್ಯವಸ್ಥೆ ಮಾಡುತ್ತೇನೆ. ಇದು ೧೦/೧೧/೧೮೯೯ ರಂದು ಕ್ರಿಸ್ಟೈನಾಗೆ ಬರೆದ ಪತ್ರಗಳ ಮುಖ್ಯಾಂಶ. ‘ಬ್ಯಾಟ್ಲ್ ಕ್ರೀಕ್ ಆಹಾರ ಸೇವಿಸಬೇಕೆಂದು ನನಗೆ ಇಚ್ಛೆಯಾಗಿದೆ. ಅದನ್ನು ತಯಾರಿಸುವ ಹೋಟೆಲ್ ಒಂದು ಇಲ್ಲೇ ಇದೆ. ಅದನ್ನು ಈಗಲೇ ಪ್ರಯತ್ನಿಸಿವುದು ಒಳ್ಳೆಯದು ಎನ್ನುವಿರಾ? ಎಂದು ಸಾರಾ ಬುಲ್ ಸಲಹೆ ಕೇಳಿದ್ದರು.(೧೨/೧೧/೧೮೯೯)
ಇವೆಲ್ಲಕ್ಕಿಂತ ಸೋಜಿಗದ ವಿಚಾರವೆಂದರೆ ಸ್ವಾಮಿಗಳು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಭಾರಿ ಏರುಪೇರು ವ್ಯಕ್ತಿತ್ವವನ್ನು ಹೊಂದಿದ್ದರು. ಸಂನ್ಯಾಸಿಯಾದ ಹೊಸತರಲ್ಲಿ ‘ಹಲವು ಯೋಚನೆಗಳಿಂದ ಜರ್ಝರಿತನಾಗಿದ್ದೇನೆ. ಆರೇಳು ವರ್ಷಗಳಿಂದ ಜೀವನ ಮೂರಾಬಟ್ಟೆಯಾಗಿದೆ…. ಮನಸ್ಸಿನಲ್ಲಿ ತುಮುಲಗಳೆದ್ದಿವೆ. ಎಂದು ತಮ್ಮ ಮಾನಸಿಕ ತಳಮಳವನ್ನು ತೋಡಿಕೊಂಡಿದ್ದರು. (೪/೨/೧೮೮೯) ’ವೇದಾಂತ ಮತ್ತು ಯೋಗದಿಂದ ನಿನಗೆ ಬಹಳ ಸಹಾಯವಾಯಿತೆಂದು ತಿಳಿದು ನನಗೆ ಆನಂದವಾಯಿತು. ದೌರ್ಭಾಗ್ಯದಿಂದ ನಾನು ಕೆಲವು ವೇಳೆ ಸರ್ಕಸ್ಸಿನ ಕೋಡಂಗಿಯಂತೆ ಇತರರನ್ನು ನಗಿಸಿ ನಾನು ಮಾತ್ರ ವ್ಯಥೆ ಮಾಡುತ್ತೇನೆ. ..ನಿನ್ನ ಮಾನಸಿಕ ಸ್ಥಿತಿ –ಶಾಂತಿ, ಸಮಾಧಾನ ,ಹಗುರವಾದ ಆದರೆ ಆಳವಾದ ಮತ್ತು ಸ್ವತಂತ್ರವಾದ ಮನಸ್ಸು-ಇದನ್ನು ನೋಡಿ ನಾನು ತುಂಬಾ ಅಸೂಯೆ ಪಡುತ್ತೇನೆ. ಮೇರಿ ನೀನಾಗಲೇ ಮುಕ್ತಳಾಗಿರುವೆ… ನಾನು ಗಂಡಿಗಿಂತ ಹೆಣ್ಣಾಗಿರುವೆ. ನೀನು ಹೆಣ್ಣಿಗಿಂತ ಹೆಚ್ಚಾಗಿ ಗಂಡಾಗಿರುವೆ. …ಯಾರಿಗೂ ಏನೊಂದು ಒಳಿತನ್ನು ಮಾಡಲಾಗದಿದ್ದರೂ ನಾನು ಯಾವಾಗಲೂ ಇನ್ನೊಬ್ಬರ ನೋವನ್ನು ನನ್ನ ಮೆಲೆ ಕಾರಣವಿಲ್ಲದೆ ಎಳೆದುಕೊಳ್ಳುತ್ತೇನೆ…..ಇದರಲ್ಲಿ ಏನಾದರು ಅಧ್ಯಾತ್ಮಿಕತೆ ಇದೆಯೆಂದು ಭಾವಿಸುವೆಯೇನು ? ಅಸಂಬದ್ಧ ! ಇದೆಲ್ಲ ಪ್ರಾಪಂಚಿಕತೆಯಿಂದ ಕೂಡಿದ ದುರ್ಬಲ ಮನಸ್ಸಿನ ಬಂಧನ-ಕೇವಲ ಅದೇ ಇದು. ಓ! ಈ ಮನೋವಿಕಾರಗಳಿಂದ ಕೂಡಿದ ಶರೀರದ ಗುಲಾಮಗಿರಿಯನ್ನು ಬುಡದಲ್ಲಿ ಕಡಿಯುವಂತ್ತಾಗಿದ್ದರೆ ! …..ನೀನು ಎಂದೆಂದಿಗೂ ಶಾರೀರಿಕ ಪ್ರಲೋಭನೆಗಳಿಗೆ ಒಳಗಾಗದಿರಲಿ ಎನ್ನುವುದೇ ನನ್ನ ಪ್ರಾರ್ಥನೆ…’ಎಂದು ಮೇರಿ ಹಾಲ್ ಬಾಯಿಸ್ಟರ್ ಮುಂದೆ ಹಲುಬಿದ್ದರು. (೨೫/೭/೧೮೯೭)
ಈ ಹಳಹಳಿಕೆಯ ಹಿನ್ನೆಲೆಯನ್ನು ಸ್ವಲ್ಪ ನೋಡಬಹುದು. ಸ್ವಾಮಿಗಳು ರಾಜಯೋಗ ತರಗತಿಗಳಲ್ಲಿ ಉಸಿರಾಟ ಪ್ರಾಣವಲ್ಲ. ಪ್ರಾಣ ಉಸಿರಾಟಕ್ಕೆ ಕಾರಣ. ದೇಹದಲ್ಲಿ ಪ್ರಾಣವನ್ನು ತುಂಬಿಸಬೇಕು. ಪ್ರಾಣವನ್ನು ಎಚ್ಚರಿಸಿ ದೇಹದ ಯಾವುದೇ ಅಂಗವನ್ನು ನಿಯಂತ್ರಿಸಲು ಮತ್ತು ರೋಗ ನಿವಾರಿಸಲು ಸಾಧ್ಯ ಎಂದು ಹೇಳಿದ್ದರು. ರಾಜಯೋಗಕ್ಕೆ ಬರೆದ ಭಾಷ್ಯದಲ್ಲಿ ಇದನ್ನು ವಿಸ್ತರಿಸಿದ್ದರು. ಆದರೆ ತಮ್ಮ ಯಾವ ರೋಗಗಳನ್ನೂ ತಾವೇ ಪ್ರತಿಪಾದಿಸುತ್ತಿದ್ದ ಯೋಗ , ಪ್ರಾಣ ಮುಂತಾದವುಗಳಿಂದ ವಾಸಿ ಮಾಡಿಕೊಳ್ಳಲು ಸಾದ್ಯವಾಗಿರಲಿಲ್ಲ. ಶಶಿಭೂಷಣ ಘೋಷ್ ಕಳಿಸಿದ ಔಷಧಿಗಳು , ಪಥ್ಯಗಳು ಸ್ವಾಮಿಗಳ ರೋಗ ಚಿಕಿತ್ಸೆಯ ದಾರಿಗಳಾಗಿದ್ದವು. ಯೋಗದಿಂದ ಇತರರಿಗೆ ಒಳ್ಳೆಯದಾಗುತ್ತದೆ ಅದರೆ ಅದು ನನ್ನ ಮೇಲೆ ಮಾತ್ರ ಪರಿಣಾಮ ಬೀರುತ್ತಿಲ್ಲ ಎನ್ನುವ ಬೇಗುದಿಯಲ್ಲಿ ತಾನೇ ನಗಲಾಗದ ಆದರೆ ಇತರರನ್ನು ನಗಿಸುವ ಸರ್ಕಸ್’ನ ಜೋಕರ್’ಗೆ ತಮ್ಮನ್ನು ಹೋಲಿಸಿಕೊಂಡಿದ್ದರು. ತಮ್ಮ ಆರೋಗ್ಯದ ಬಗ್ಗೆ ಭಯ ಬಿದ್ದು ಆಪ್ತರಿಗೆ ಒಂದರ ಹಿಂದೆ ಒಂದರಂತೆ ಪತ್ರಗಳನ್ನು ಬರೆಯುತ್ತಿದ್ದರೂ ಸ್ವಾಮಿಗಳು ಇತರರಿಗೆ ಹೇಗೆ ಆರೋಗ್ಯವಾಗಿರಬೇಕೆಂದು ತಿಳಿಸಲು ಹಿಂಜರಿಯುತ್ತಿರಲಿಲ್ಲ. ಸೆಪ್ಟೆಂಬರ್ ೧೯೦೦ ರಲ್ಲಿ ತುರೀಯಾನಂದರಿಗೆ ‘ಸ್ಥಿರವಾಗಿ ನಿಂತು ಮನಕ್ಲೇಶಗಳಿಂದ ಬಿಡುಗಡೆ ಹೊಂದು. ಎಲ್ಲವೂ ಸರಿಹೋಗುವುದು. ನಾದ ಮುಂತಾದುವುಗಳನ್ನು ಕೇಳುವುದರಿಂದ ಯಾರಿಗಾದರೂ ತೊಂದರೆಯಾಗುವಂತಿದ್ದರೆ ಕೊಂಚ ಕಾಲ ಧ್ಯಾನ ಮಾಡುವುದನ್ನು ನಿಲ್ಲಿಸಿ ಮೀನು ಮಾಂಸದ ಊಟವನ್ನು ಮಾಡಿದರೆ ಅದು ನಿವಾರಣೆಯಾಗುವುವುದು’ ಎನ್ನುವ ಅದ್ಭುತ ಪರಿಹಾರ ನೀಡಿದ್ದರು.
ಸ್ವಾಮಿಗಳ ಈ ಮಾನಸಿಕ ತುಮುಲಗಳು ಜೀವನದುದ್ದಕ್ಕೂ ಅವರ ನಿದ್ದೆಯನು ಕಸಿದಿದ್ದವು ‘ನನ್ನ ಜೀವಮಾನದಲ್ಲಿ ಒಂದು ದಿನವಾದರೂ ನಾನು ಹಾಸಿಗೆಗೆ ಹೋದ ಕೂಡಲೇ ನಿದ್ರಿಸಲಾಗುತ್ತಿರಲಿಲ್ಲ. ಕಡೆಯ ಪಕ್ಷ ಎರಡು ಗಂಟೆಯಾದರು ಹೊರಳಾಡ ಬೇಕಾಗುತ್ತಿದ್ದಿತು. ಮದ್ರಾಸಿನಿಂದ ಡಾರ್ಜಿಲಿಂಗ್’ಗೆ ಬಂದ ಮೇಲೆ ದಿಂಬಿನ ಮೇಲೆ ತಲೆ ಇಟ್ಟ ತಕ್ಷಣ ನಿದ್ದೆ ಬರುತ್ತಿತ್ತು. ಈಗ ಅದು ಹೊರಟುಹೋಗಿದೆ. ಹಿಂದಿನಂತೆ ಈಗ ನನ್ನದು ಹೊರಳಾಡುವ ಸ್ಥಿತಿ…..’ ಶಶಿಭೂಷಣ ಘೋಷ್’ ಮುಂದೆ ತೋಡಿಕೊಂಡಿದ್ದ ರಹಸ್ಯವಿದು. (೨೯/೫/೧೮೯೭) ನನ್ನನ್ನು ಬಹಳ ಉದ್ವೇಗಪರನೆನ್ನುವರು. ನಾನು ತುಂಬಾ ಮನಸ್ಸಿಗೆ ಹಚ್ಚಿಕೊಳ್ಳುವೆನು (೬/೭/೧೯೦೧) , ನಾನು ಕೆಲವು ವೇಳೆ ಸಂತೋಷವಾಗಿದ್ದರೆ ಇನ್ನು ಕೆಲವು ವೇಳೆ ದುಗುಡದಿಂದರುವೆನು… ಇರಲಿ. ಅವೆಲ್ಲ ದೇಹಕ್ಕೆ ಸಂಬಂಧಿಸಿದವು. (೨೭/೮/೧೯೦೧) ಎಂದು ಸಮಾಧಾನ ಮಾಡಿಕೊಂಡಿದ್ದರು. ಹಲವು ಪತ್ರಗಳಲ್ಲಿ ತಮ್ಮ ಮಾನಸಿಕ ಸ್ಥಿತಿ ಸರಿಯಿಲ್ಲವೆಂದು ಅಮೆರಿಕನ್ ಗೆಳೆಯರಲ್ಲಿ ತೋಡಿಕೊಂಡಿದ್ದರು. ನಿದ್ರಾಹೀನತೆ ಸ್ವಾಮಿಗಳ ಬೆನ್ನೇರಿದ್ದ ಇನ್ನೊಂದು ಭೇತಾಳವಾಗಿದ್ದಿತು. ನಿದ್ರೆ ಬರದೇ ಇರುವುದಕ್ಕೆ ಕ್ರಿಶ್ಚಿಯನ್ ಸೈನ್ಸ್ ಚಿಕಿತ್ಸೆಯನ್ನು ಪ್ರಯೋಗಮಾಡಿದೆ. ಅದು ಫಲ ಕೊಟ್ಟಿತು (೧೩/೯/೧೮೯೪-ಮೇರಿ ಹೇಲ್) , ನಾನು ನ್ಯೂಯಾರ್ಕ್ ನಿಂದ ಬಂದಾಗಿನಿಂದ ಒಂದು ರಾತ್ರಿಯೂ ಸೊಂಪಾಗಿ ನಿದ್ರಿಸಿಲ್ಲ ( ೬/೨/೧೮೯೬-ಸಾರಾ ಬುಲ್) , ಈ ಜಗತ್ತಿನ ಹೋರಾಟ ಕದನಗಳಿಗೆ ನಾನು ತಕ್ಕವನಲ್ಲ. ನಾನು ಸ್ವಪ್ನ ಜೀವಿ. ವಿಶ್ರಾಂತಿಪ್ರಿಯ. ನಾನೊಬ್ಬ ಹುಟ್ಟು ಭಾವ ಜೀವಿ. ಕನಸಿನ ಜಗತ್ತಿನಲ್ಲಿ ಮಾತ್ರ ಜೀವಿಸಬಲ್ಲೆ. ವಾಸ್ತವಿಕತೆಯ ಸ್ಪರ್ಶ ಮಾತ್ರದಿಂದ ನನ್ನ ಸ್ವಪ್ನ ದರ್ಶನಗಳೆಲ್ಲ ಭಂಗವಾಗಿ ನನ್ನನ್ನು ವ್ಯಥಿತನನ್ನಾಗಿ ಮಾಡುವುವು ( ೧೦/೨/೧೮೯೬- ಮೇರಿ ಹೇಲ್) , ಈ ನ್ಯೂಯಾರ್ಕ್ ನಿದ್ರೆಗೆ ಮಾತ್ರ ಕೆಟ್ಟ ಸ್ಥಳ , ನನ್ನನ್ನು ಬಹಳ ಉದ್ವೇಗಪರನೆನ್ನುವರು-ನಾನು ತುಂಬಾ ಮನಸ್ಸಿಗೆ ಹಚ್ಚಿಕೊಳ್ಳುವೆನು ನೀನೂ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ (೧೯/೫/೧೯೦೦ ಮತ್ತು ೬/೭/೧೯೦೨ ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) ಕಳೆದ ಎರ್ಡು ವರ್ಷಗಳಿಂದ ನನ್ನ ಪಾಲಿಗೆ ಉತ್ತಮವಾಗಿರಲಿಲ್ಲ. ನಾನೊಂದು ಮನೋನರಕದಲ್ಲಿ ಬದುಕುತ್ತಿರುವೆನು. ಪರಮಶಾಂತಿಯ ಕ್ಷಣವೊಂದನ್ನೂ ನಾನು ಅರಿಯೆ. ಯಾವಾಗಲೂ ನಾನು ಮಾನಸಿಕ ಪ್ರಚಂಡ ವೇದನೆಯಲ್ಲಿರುವೆ.(೨/೩/೧೯೦೦- ಮೇರಿ ಹೇಲ್) , ನಾನು ಅಧಮಾಧಮನು . ಗುರುಗಳ ಪಾದ ಧೂಳಿಯನ್ನು ನನ್ನ ತಲೆಯ ಮೇಲೆ ಹಾಕು. ನಾನು ಇನ್ನು ಮೇಲೆ ಕೆಲವು ಜಪ , ಧ್ಯಾನಗಳನ್ನು ಮಾಡುವೆ. ಇನ್ನೇನನ್ನೂ ಮಾಡುವುದಿಲ್ಲ. ಉಳಿದದ್ದು ಜಗನ್ಮಾತೆಗೆ ಗೊತ್ತು (೧೨/೩/೧೯೦೦-ಬ್ರಹ್ಮಾನಂದ) ,ನನ್ನ ಮನಸ್ಸು ಶಾಂತವಾಗಿದೆ. ಸ್ವಲ್ಪ ಕಾಲದಿಂದ ಹಾಗೆಯೇ ಇದೆ. ನಾನು ನನ್ನ ವ್ಯಾಕುಲತೆಗಳನ್ನೆಲ್ಲ ಭಗವಂತನಿಗೆ ಅರ್ಪಣೆ ಮಾಡಲು ಯತ್ನಿಸುತ್ತಿರುವೆ ಎಂದು ತಿಳಿಸಿದ್ದಾರೆ. ( ೧೨/೩/೧೯೦೦-ಮೇರಿ ಹೇಲ್)
ಹೀಗೆ ಪರಿವ್ರಾಜಕ ಜೀವನದ ಮೊದಲನೆಯ ವರ್ಷದಿಂದ ಪ್ರಾರಂಭವಾಗುವ ಸ್ವಾಮಿಗಳ ಆರೋಗ್ಯ ಸಮಸ್ಯೆ ಕೊನೆಯ ನಾಲ್ಕು ವರ್ಷಗಳಲ್ಲಿ ನೋವು , ಹತಾಶೆಗಳಿಗಳಿಗೆ ಬದಲಾಗಿದೆ. ಹಾಗಾಗಿ ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ತಮ್ಮ ಆಪ್ತರು ಸೂಚಿಸಿದ -ಮ್ಯಾಗ್ನೆಟಿಕ್ ಚಿಕಿತ್ಸೆ , ನೀವಿಸಿಕೊಳ್ಳುವುದು ಸೇರಿದಂತೆ- ಯಾವುದೇ ಬಗೆಯ ಚಿಕಿತ್ಸೆಗೆ ಒಳಗಾಗಲು ಸಿದ್ಧರಾದರು. ಕೆಲವೊಮ್ಮೆ ಚಿಕಿತ್ಸೆಯಿಂದ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎನಿಸಿದಾಗ ಉಲ್ಲಸಿತರಾಗುತ್ತಿದ್ದರು , ಮತ್ತೆ ಕಾಯಿಲೆ ಕಾಣಿಸಿಕೊಂಡಾಗ ನಿರಾಶೆಯಿಂದ ತಾತ್ತ್ವಿಕರಾಗಲು ಯತ್ನಿಸುತ್ತಿದ್ದರು. ಸಾವು ತಮ್ಮನ್ನು ಸಮೀಪಿಸಿದೆ ಎಂದು ಭಾಸವಾದಾಗ ಆಟ ಆಡಿ ದಣಿದ ಮಗು ತಾಯಿಯನ್ನು ಕರೆಯುವಂತೆ ಕಾಳಿಯ ಮೊರೆ ಹೋಗುತ್ತಿದ್ದರು. ನಾನು ಮಾಡುವ ಯಾವ ಕೆಲಸವೂ ಉಳಿದಿಲ್ಲ ಎಂದು ಸಾರಿದ ಮರುದಿನವೇ ಉಪನ್ಯಾಸಗಳನ್ನು ನೀಡಲು , ತರಗತಿಗಳನ್ನು ನಡೆಸಿ ಹಣ ಸಂಗ್ರಹಿಸಲು ಮುಂದಾಗುತಿದ್ದರು. ಸ್ವಾಮಿಗಳು ಕಾಯಿಲೆ ಬೀಳುತ್ತಿರುವುದು ಕೆಲ ಅಮೆರಿಕನ್ನರಿಗೆ ಸರಿ ಕಂಡಿರಲಿಲ್ಲ. ‘ನಾನು ಸಂನ್ಯಾಸಿಯಾಗಿದ್ದೂ ಕಾಯಿಲೆ ಬಿದ್ದಿರುವುದು ಶ್ರೀಮತಿ ಜಾನ್'ಸನ್'ಗೆ ಒಗ್ಗದ ವಿಚಾರವಾಗಿದೆ. ನಾನು ಧೂಮಪಾನ ಮಾಡುವುದನ್ನು ಆಕೆ ಪಾಪವೆಂದು ಪರಿಗಣಿಸಿದ್ದಾಳೆ ಎಂದು ಸ್ವಾಮಿಗಳು ತಿಳಿಸಿದ್ದರು. (೪/೮/೧೮೯೯). ಸ್ವಾಮಿಗಳನ್ನು ಯಾವುದೇ ಪ್ರಶ್ನೆಯಿಲ್ಲದೆ ಒಪ್ಪಿಕೊಳ್ಳುತ್ತಿದ್ದ ಸಾರಾ ಬುಲ್ , ಜೊಸೆಫಿನ್ ಮೆಕ್ಲಿಯಾಡ್ , ಕ್ರಿಸ್ಟೈನಾ ಗ್ರೀನ್’ಸ್ಟೈಡಲ್ , ಮಾರ್ಗರೆಟ್ ನೋಬಲ್ ಮುಂತಾದವರಿಗೆ ಮಾತ್ರ ರಾಜಯೋಗದಲ್ಲಿ ಪ್ರಾಣದ ಮೂಲಕ ಉಸಿರಾಟವನ್ನು ನಿಯಂತ್ರಿಸಿ ದೇಹದ ಯಾವ ಭಾಗವನ್ನೇ ಬೇಕಾದರೂ ವಶಕ್ಕೆ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದ ತಮ್ಮ ಯೋಗ ತರಗತಿಗಳಲ್ಲಿ ಅದನ್ನೇ ಬೋಧಿಸುತ್ತಿದ್ದ ಸ್ವಾಮಿಗಳಿಗೆ ರೋಗಗಳನ್ನು ನಿಯಂತ್ರಿಸಿಕೊಳ್ಳುವ ಶಕ್ತಿಯೇಕಿಲ್ಲ ಎನ್ನುವ ಅನುಮಾನ ಬಂದಿರಲಿಲ್ಲ. ೧೯೦೧ ಅಕ್ಟೋಬರ್’ನಲ್ಲಿ ಸ್ವಾಮಿಗಳು ತೀವ್ರ ಅನಾರೋಗ್ಯರಾಗಿದ್ದು ಹಾಸಿಗೆ ಹಿಡಿದಿದ್ದರು. ಅವರಿಗೆ ಖ್ಯಾತ ವೈದ್ಯ ಸೌಂಡರ್ಸ್ ಚಿಕಿತ್ಸೆ ನೀಡುತ್ತಿದ್ದರು. ಇದೇ ಸಮಯದಲ್ಲಿ ನಿರ್ಭಯಾನಂದರು ತೀವ್ರ ಜ್ವರಕ್ಕೆ ತುತ್ತಾಗಿ ಮೂರ್ಛಾ ಸ್ಥಿತಿ ತಲುಪಿದ್ದರು. ಆಗ ಸ್ವಾಮಿಗಳು ರಾಮಕೃಷ್ಣರ ಮಂದಿರಕ್ಕೆ ಹೋಗಿ ಪೂಜೆ ಮಾಡಿ , ರಾಮಕೃಷ್ಣರ ಅಸ್ತಿಗಳಿದ್ದ ಕರಂಡಕವನ್ನು ತೊಳೆದು ಅದರ ನೀರನ್ನು ತಂದು ಕುಡಿಸಿದಾಗ ಜ್ವರ ಮಾಯವಾಯಿತು. ಆಗ ಸ್ವಾಮಿಗಳು ‘ ರಾಮಕೃಷ್ಣರ ಲೀಲೆ ನೋಡಿರಿ’ ಎಂದು ಉದ್ಗರಿಸಿದರು ಎನ್ನುವ ಒಂದು ಸೋಜಿಗದ ಕಥೆಯನ್ನು ‘ದಿ ಲೈಫ್-೧೯೬೦’ ನೀಡಿದೆ. ಆದರೆ ಇದೇ ರೀತಿ ಸ್ವಾಮಿಗಳು ತಮ್ಮ ಕಾಯಿಲೆಗಳನ್ನು ಏಕೆ ವಾಸಿ ಮಾಡಿಕೊಳ್ಳಲಿಲ್ಲ ಎನ್ನುವ ಪ್ರಶ್ನೆ ಅಸ್ತಿತ್ವದಲ್ಲಿಯೇ ಇಲ್ಲ ಎನ್ನುವ ಧೋರಣೆ ತಳೆದಿದೆ.
ಹಲವು ಮಾರಣಾಂತಿಕ ರೋಗಗಳಿಂದ ನರಳುತ್ತಿದ್ದ ಸ್ವಾಮಿಗಳು ಜುಲೈ ೪, ೧೯೦೨ ರಂದು ರಾತ್ರಿ ೯ ಗಂಟೆ ದಾಟಿ ಹತ್ತು ನಿಮಿಷಗಳಾದಾಗ ತೀರಿಕೊಂಡರು. ಆ ಸನ್ನಿವೇಶದ ಸುದೀರ್ಘ ಚಿತ್ರಣ ಶಾರದಾನಂದ ೨೪/೭/೧೯೦೨ ರಂದು ಸ್ಯಾನ್ ‘ಫ್ರಾನ್ಸಿಸ್ಕೊ ವೇದಾಂತ ಸೊಸೈಟಿಯ ಅಧ್ಯಕ್ಷ ಡಾ. ಲೋಗನ್’ಗೆ ಬರೆದ ಪತ್ರ , ಪ್ರಬುದ್ಧ ಭಾರತದಲ್ಲಿ ಗುರುಭಾಯಿಗಳು ಬರೆದಿರುವ ಲೇಖನಗಳಿಂದ ದಕ್ಕುತ್ತದೆ. ಇವುಗಳನ್ನು ‘ದಿ ಲೈಪ್-೧೯೬೦’ ದಾಖಲಿಸಿದೆ. ಅದರ ಆಯ್ದ ಭಾಗ ಹೀಗಿದೆ ‘ಸಹಾಯಕ ಬ್ರಹ್ಮಚಾರಿ ಬ್ರಜೇಂದ್ರನಿಗೆ ತಾವಾಗಿಯೇ ಕರೆದ ಹೊರತು ತಮಗೆ ಯಾರೂ ಅಡಚಣೆ ಉಂಟುಮಾಡಬಾರದೆಂದು ಸ್ವಾಮಿಗಳು ತಿಳಿಸಿ ಜಪಮಾಲೆಯನ್ನು ಕೈಯಲ್ಲಿ ಹಿಡಿದು , ಗಂಗಾನದಿಯತ್ತ ಮುಖ ಮಾಡಿ ಧ್ಯಾನಕ್ಕೆ ಕುಳಿತರು. ಒಂದು ಗಂಟೆಯ ನಂತರ ಎಲ್ಲ ಕಿಟಕಿ , ಬಾಗಿಲುಗಳನ್ನು ತೆಗೆದು ತಲೆಗೆ ಗಾಳಿ ಬೀಸುವಂತೆ ಬ್ರಜೇಂದ್ರನಿಗೆ ಹೇಳಿದರು. ನಿಧಾನವಾಗಿ ಹಾಸಿಗೆಯ ಮೇಲೆ ಅಡ್ಡಾಗಿ ತಲೆಯನ್ನು ದಿಂಬಿನ ಮೇಲೆ ಒರಗಿಸಿಕೊಂಡು ಪಾದಗಳನ್ನು ತಿಕ್ಕಲು ತಿಳಿಸಿದರು. ಹೀಗೆ ಒಂದು ಗಂಟೆ ಕಳೆದು ರಾತ್ರಿ ೯ ಗಂಟೆಯ ಸಮಯವಾಯಿತು. ತಲೆಯನ್ನು ಬಲಕ್ಕೆ ತಿರುಗಿಸಿ ಬಾಲಕನಂತೆ ಆತ್ತರು. ಕೈಗಳು ಅಲುಗಿದವು. ಒಮ್ಮೆ ನಿಟ್ಟುಸಿರು ಬಿಟ್ಟರು. ಒಂದು ನಿಮಿಷ ಮೌನ ಕವಿಯಿತು. ಮತ್ತೊಂದು ಸಲ ಆಳ ನಿಟ್ಟುಸಿರು ಬಿಟ್ಟರು. ಕಣ್ಣುಗಳು ಹುಬ್ಬಿನ ಕೇಂದ್ರದಲ್ಲಿ ಸ್ಥಿರಗೊಂಡವು. ಮುಖದಲ್ಲಿ ಅನಿರ್ವಚನೀಯ ಕಳೆ ಬೆಳಗಿತು-ಅಲ್ಲಿಗೆ ಎಲ್ಲವೂ ಕೊನೆಗೊಂಡಿತು …ಮಹಾಯೋಗಿಗಳಾಗಿದ್ದ ಸ್ವಾಮಿಗಳು ಅದಕ್ಕೆ ತಕ್ಕಂತೆ ೩೯ ವರ್ಷ ೫ ತಿಂಗಳು ೨೪ ದಿನಗಳನ್ನು ಈ ಜಗತ್ತಿನಲ್ಲಿ ಕಳೆದು ಯೌಗಿಕ ಮಾರ್ಗದಲ್ಲಿ ಉಟ್ಟ ಬಟ್ಟೆಯನ್ನು ಕಳಚುವಂತೆ ದೇಹವನ್ನು ಕಳಚಿ ಮಹಾ ಸಮಾಧಿಗೇರಿದರು…. ಎಂದಿದೆ.
ಉದ್ಭೋಧನ ಪತ್ರಿಕೆಯಲ್ಲಿ ಗುರುಭಾಯಿ ಸಾವಿನ ಸನ್ನಿವೇಶವನ್ನು ವಿವರಿಸುತ್ತ ಸಾವಿನ ಖಚಿತ ಕಾರಣ ಯಾವ ವೈದ್ಯರಿಗೂ ತಿಳಿಯಲಿಲ್ಲ, ಸ್ವಾಮಿಗಳು ದೇಹ ತ್ಯಜಿಸಿದಾಗ ಅವರ ಕಣ್ಣುಗಳು ರಕ್ತರಂಜಿತವಾಗಿದ್ದವು. ಬಾಯಿ, ಕಿವಿ , ಮೂಗುಗಳಿಂದ ರಕ್ತ ಒಸರಿರಲಿಲ್ಲ. ಸ್ವಾಮಿಗಳು ಧ್ಯಾನದಲ್ಲಿರುವಾಗ ಅವರ ಪ್ರಾಣ ಸಹಸ್ರಾರಕ್ಕೇರಿ ಬ್ರಹ್ಮರಂಧ್ರದ ಮೂಲಕ ಹೊರಹೋಗಿದ್ದಿತು. ಆದ್ದರಿಂದ ಅವರ ಕಣ್ಣುಗಳಲ್ಲಿ ರಕ್ತ ಒಸರಿ ಕೆಂಪಾಗಿದ್ದವು ಎಂದು ಬರೆದಿದ್ದಾರೆ. ಒಂದು ಸಾವಿಗೆ ಸಹಜವಾದ ವಿವರಣೆ ಇರುವಾಗಲೂ ಅಲೌಕಿಕ ಕಾರಣಗಳಿಗೆ ಮೊರೆ ಹೋಗುವುದು ಪುರಾಣದ ಒಂದು ತಂತ್ರ. ಬರೆದ ನೂರಾರು ಪತ್ರಗಳಲ್ಲಿ ಸ್ವಾಮಿಗಳು ತಾವಾಗಿಯೇ ವ್ಯಕ್ತಪಡಿಸಿರುವುದನ್ನು ಗಮನಿಸಿದರೆ ಜೀವಘಾತುಕ ಕಾಯಿಲೆಗಳೊಂದಿಗೆ ಹೆಣಗಿ ಅವರು ದೀರ್ಘ ಕಾಲ ಬದುಕಿರುವುದು ಸಾಧ್ಯವೇ ಇರಲಿಲ್ಲ. ಮಧುಮೇಹದಿಂದ ೧೮೯೭ ರಲ್ಲಿಯೇ ಸ್ವಾಮಿಗಳ ಕಣ್ಣುಗಳು ದುರ್ಬಲವಾಗಿದ್ದವು. ೧೯೦೧, ನವೆಂಬರ್ ವೇಳೆಗೆ ಮಂದಗೊಂಡಿದ್ದು ಕಣ್ಣಿನ ನಾಳಗಳು ಒಡೆದು ಕೆಂಪಾಗಿ ಬಲಗಣ್ಣು ಕಾಣದೆ ಬಹುತೇಕ ಒಂಟಿಗಣ್ಣಿಗರಾಗಿದ್ದರು. ಸ್ವಾಮಿಗಳ ಸಾವು ಅವರ ತಂದೆ ವಿಶ್ವನಾಥದತ್ತನ ಸಾವು ಒಂದೇ ರೀತಿಯಲ್ಲಿ ಆಗಿದ್ದವೆಂದು ಭೂಪೇಂದ್ರನಾಥ ದತ್ತ ಹೇಳಿರುವುದು ಸತ್ಯ. ಸ್ವಾಮಿಗಳು ಹೃದಯಾಘಾತದಿಂದ ಸತ್ತಿದ್ದರು. ಜಗತ್ತಿನ ಮೂಲ ಕಾರಣವಾದ ಪ್ರಾಣವನ್ನು ಅರಿತರೆ ದೇಹವನ್ನು ಬೇಕಾದಂತೆ ಬಳಸಬಹುದೆಂದು ವೇದಿಕೆಗಳಲ್ಲಿ , ತರಗತಿಗಳಲ್ಲಿ , ಪುಸ್ತಕಗಳಲ್ಲಿ ಪ್ರತಿಪಾದಿಸಿದ್ದ ಸ್ವಾಮಿಗಳ ಮೇಲೆ ಕೊನೆಗೆ ನಿಸರ್ಗದ ಸಹಜ ವ್ಯಾಪಾರಗಳೇ ಮೇಲುಗೈ ಸಾಧಿಸಿದವು. ಯಾವ ಯೌಗಿಕ ಬಲವೂ ಅದಕ್ಕೆ ಅಡ್ಡಿಯಾಗಲಿಲ್ಲ ಎನ್ನುವುದು ಮಾತ್ರ ನಿಚ್ಚಳ.
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ರೊಮ್ಯಾಂಡ್ ರೋಲಾ ಸ್ವಾಮಿಗಳ ದೇಹ ಮಲ್ಲಯುದ್ದದ ಜಟ್ಟಿಯಂತೆ ಸದೃಢ ಹಾಗೂ ಬಲಶಾಲಿಯಾಗಿದ್ದಿತು. ಕಟ್ಟುಮಸ್ತು ದೇಹದ ಸ್ವಾಮಿಗಳು ಐದು ಅಡಿ ಎಂಟು ಇಂಚು ಎತ್ತರವಿದ್ದರು. ನೀಳವಾದ ಕುತ್ತಿಗೆ , ವಿಶಾಲ ಎದೆ, ಉದ್ದನೆಯ ಕೈ , ದುಡಿಯಲು ಹಾತೊರೆಯುವ ಬಲಯುತವಾದ ತೋಳುಗಳು , ದುಂಡು ಮುಖ , ಅಗಲ ಹಣೆ, ಗಟ್ಟಿಮುಟ್ಟಾದ ಗಲ್ಲ, ರೆಪ್ಪೆಗಳೊಳಗೆ ಮಿನುಗುವ ಅಗಲ ಕಣ್ಣುಗಳು , ನುಣುಪಾದ ಕರಿ ಚರ್ಮ ಯಾರನ್ನಾದರೂ ಮೊದಲ ನೋಟದಲ್ಲೇ ಸೆಳೆಯದೇ ಬಿಡುತ್ತಿರಲಿಲ್ಲ. ಅವರದು ಮಧುರ, ಗಂಭೀರ ವಾಣಿ ಎಂದಿದ್ದಾರೆ. ಫ್ರೆನೊಲಾಜಿಕಲ್ ಜರ್ನಲ್’ನಲ್ಲಿ ಇದಕ್ಕಿಂತ ಭಿನ್ನವಾಗಿ ಸ್ವಾಮಿಗಳ ದೇಹವನ್ನು ವರ್ಣಿಸಿ ಈ ಮನುಷ್ಯನ ಮುಖ , ತಲೆ , ಕೈ ಸೇರಿದಂತೆ ಇಡೀ ದೇಹದ ಲಕ್ಷಣ, ಏರಿಳಿತಗಳು ಹೆಣ್ಣಿನಂತಿವೆ…. ಅಮೆರಿಕದಲ್ಲಿ ಇಷ್ಟೊಂದು ಕೋಮಲ ಲಕ್ಷಣಗಳುಳ್ಳ ಹೆಣ್ಣು ಸಿಗಲಾರಳೇನೋ ಎಂದು ಡಾ.ಎಡ್ಗರ್ ಸಿ. ಬಿಯಾಲ್ ಬರೆದಿದ್ದಾರೆ. (66) ಇಂತಹುದೇ ಅಭಿಪ್ರಾಯವನ್ನು ಸ್ವಾಮಿಗಳ ಶಿಷ್ಯ ಮತ್ತು ಗೆಳೆಯ ಮನ್ಮಥನಾಥ ಗಂಗೋಪಾಧ್ಯಯ ಹೊಂದಿದ್ದನು. ಸ್ವಾಮಿ ತ್ರಿಗುಣಾತೀತನಂದ ಸ್ವಾಮಿಗಳ ಕೈ ಯಾವುದೇ ಹೆಣ್ಣಿನ ಕೈಗಳಿಗಿಂತ ಸುಂದರವಾಗಿದ್ದಿತು. ಅವರ ಬಣ್ಣ ಬದಲಾಗುವಂತೆ ಕಾಣುತ್ತಿದ್ದಿತು. ಕೆಲವು ದಿನ ದಟ್ಟ , ಕೆಲವು ದಿನ ತಿಳಿಯಾಗಿರುತ್ತಿದ್ದಿತು ಆದರೆ ಬಹುತೇಕ ಅದನ್ನು ಚಿನ್ನದ ಹೊಳಪೆನ್ನಬಹುದು ಎಂದಿದ್ದಾರೆ (67) ಬಿಸಿಲಿಗೆ ಹೋದರೆ ಮೆಲನಿನ್ ಪ್ರತಿಕ್ರಿಯೆಯಿಂದಾಗಿ೮ ಚರ್ಮದ ಬಣ್ಣ ಕಪ್ಪಾಗುವುದು ಸಹಜ. ಅದರ ಬದಲ ತ್ರಿಗುಣಾತೀತಾನಂದ ಊಸರವಳ್ಳಿಯಂತೆ ಸ್ವಾಮಿಗಳ ಬಣ್ಣ ಬದಲಾಗುತ್ತಿದ್ದಿತು ಎಂದು ಹೇಳಿ ದೈವೀಕರಿಸಲು ಯತ್ನಿಸಿದ್ದಾರೆ.
ಸ್ವಾಮಿಗಳ ಹಲವು ಫೊಟೊಗಳು/ಭಾವಚಿತ್ರಗಳು ಸಿಗುತ್ತವೆ. ಈ ಫೋಟೊಗಳನ್ನು ನೋಡಿದಾಗ ಅದರಲ್ಲಿ ಧೃಡ ತರುಣ ಎದ್ದು ಕಾಣುತ್ತಿದ್ದು , ಆರೋಗ್ಯ ಅವರಿಂದ ಹೊರಚಿಮ್ಮಿ ಇತರರನ್ನು ಉಲ್ಲಾಸಗೊಳಿಸುವಂತೆ ಭಾಸವಾಗುತ್ತದೆ. ಈಗ ಲಭ್ಯವಿರುವ ಭಾವಚಿತ್ರಗಳಲ್ಲಿ ರಾಮಕೃಷ್ಣರು ತೀರಿಕೊಂಡಾಗ ಗುರುಭಾಯಿಗಳೊಂದಿಗೆ ತೆಗೆಸಿಕೊಂಡ ಸಹಜ ಚಿತ್ರ ಮತ್ತು ಇತರ ಒಂದೆರಡನ್ನು ಹೊರತಾಗಿ ಉಳಿದೆಲ್ಲವೂ ಉಡುಗೆ , ತೊಡುಗೆಗಳೊಂದಿಗೆ ಸಿದ್ಧರಾಗಿ ಫೊಟೋ ಸ್ಟುಡಿಯೋಗಳಲ್ಲಿ ತೆಗೆಸಿಕೊಂಡಿರುವಂತಹುವೇ ಆಗಿವೆ. ಆದ್ದರಿಂದ ಸ್ವಾಮಿಗಳು ಭಾವಚಿತ್ರಗಳಲ್ಲಿರುವಂತೆ ಯಾವಾಗಲೂ ನಗುನಗುತ್ತ , ಉಲ್ಲಾಸದಿಂದ ತುಳುಕುತ್ತ ಆರೋಗ್ಯವಂತರಾಗಿದ್ದರೆನ್ನುವುದು ತಪ್ಪು ತಿಳಿವಳಿಕೆಯಾಗುತ್ತದೆ. ೧೯೦೦ ರಲ್ಲಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ತೆಗೆದ ಅತ್ಯಂತ ಆಕರ್ಷಕವಾದ ಸ್ವಾಮಿಗಳ ಫೊಟೊಗಳನ್ನು ನೋಡಿದರೆ ಅವುಗಳಲ್ಲಿ ಆರೋಗ್ಯ ಚಿಮ್ಮುತ್ತಿರುವ , ಪುಟಿಯುವ ಉತ್ಸಾಹ ತರುಣ ಕಾಣುತ್ತಾನೆ. ಆದರೆ ಈ ಕಾಲದಲ್ಲಿ ಬರೆದ ಎಲ್ಲ ಪತ್ರಗಳಲ್ಲಿ ಸ್ವಾಮಿಗಳು ಅನಾರೋಗ್ಯದಿಂದ ನಾನು ಸಾಯುವ ಸ್ಥಿತಿ ತಲುಪಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಶ್ರೀನಿವಾಸ ಪೈ ಬರೆದಿರುವ ನೆನಪುಗಳಲ್ಲಿ ಒಂದು ಕಡೆ ಸ್ವಾಮಿಗಳು ಈ ಕಾಷಯ ಉಡುಗೆಯ ಒಳಗೆ ಒಬ್ಬ ಜಟ್ಟಿಯಿದ್ದಾನೆ ಎಂದು ತಮ್ಮ ಬಗ್ಗೆ ಹೇಳಿಕೊಂಡಿದ್ದನ್ನು ಉಲ್ಲೇಖಿಸಿ ಸ್ವಾಮಿಗಳ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯ ಎಷ್ಟು ಅದ್ಭುತವಾಗಿದ್ದವೆಂದು ಅವರ ಹಲವು ಜೀವನ ಚರಿತ್ರೆಗಳು ವರ್ಣಿಸುತ್ತವೆ. ಒಬ್ಬ ವ್ಯಕ್ತಿಯ ಆರೋಗ್ಯ ಅತನಿಗಿಂತ ಉತ್ತಮವಾಗಿ ಇತರರಿಗೆ ತಿಳಿದಿರಲು ಸಾಧ್ಯವಿಲ್ಲ. ಸ್ವಾಮಿಗಳ ದೈಹಿಕ ಸಾಮರ್ಥ್ಯ , ಆರೋಗ್ಯದ ಬಗ್ಗೆ ಅವರ ಪತ್ರಗಳಿಗಿಂತ ಉತ್ತಮವಾದ ಬೇರೆ ಆಕರಗಳಿರಲು ಸಾಧ್ಯವೇ ಇಲ್ಲ.
ನಮಗೆ ಈಗ ದೊರಕಿರುವ ಸ್ವಾಮಿಗಳ ಮೊದಲ ಪತ್ರ ೧೨/೮/೧೮೮ ರಂದು ಬೃಂದಾವನದಿಂದ ವಾರಣಾಸಿಯಲ್ಲಿದ್ದ ಪ್ರಮದದಾಸ ಮಿತ್ರರಿಗೆ ಬರೆದದ್ದೇ ಆಗಿದೆ. ೨೮/೧೧/೧೮೮೮ ರಿಂದ ೭/೮/೧೮೮೯ರ ೯ ತಿಂಗಳುಗಳ ಅವಧಿಯಲ್ಲಿ ಸ್ವಾಮಿಗಳು ಪ್ರಮದದಾಸ ಮಿತ್ರರಿಗೆ ಬರೆದ ೯ ಪತ್ರಗಳಲ್ಲಿ ೬ ಪತ್ರಗಳಲ್ಲಿ ಆರೋಗ್ಯ ಕೆಟ್ಟಿರುವ ಸುದ್ದಿಯಿದೆ. ಸ್ವಾಮಿಗಳ ಆರೋಗ್ಯ ಪುರಾಣ ಇಲ್ಲಿಂದ ಪ್ರಾರಂಭವಾಗಿ ೧೯೦೨ ರಂದು ತೀರಿಕೊಳ್ಳುವವರೆಗೆ ಮುಂದುವರೆಯುತ್ತದೆ. ಸ್ವಾಮಿಗಳನ್ನು ಬಾಧಿಸುತ್ತಿದ್ದ ರೋಗಗಳ ವಿವರಗಳನ್ನು ಅವರ ಪತ್ರಗಳಿಂದಲೇ ತಿಳಿಯುವುದು ಸೂಕ್ತ. ಕೋಷ್ಟಕ-೧೦ ಸ್ವಾಮಿಗಳ ಅನಾರೋಗ್ಯದ ಚರಿತ್ರೆಯನ್ನು ನೀಡುತ್ತದೆ.
ಮನುಷ್ಯನಿಗೆ ಹೊರ ಮತ್ತು ಒಳ ಎರಡು ಕಾರಣಗಳಿಂದ ರೋಗಗಳು ಬರುತ್ತವೆ. ಕಾಲರಾ, ಮಲೇರಿಯಾ , ಟೈಫಾಯಿಡ್ ಮುಂತಾದ ಸಾಂಕ್ರಾಮಿಕ ಕಾಯಿಲೆಗಳು ಹೊರ ಕಾರಣಗಳಿಂದ ಬರುತ್ತವೆ. ಈ ರೋಗಗಳನ್ನು ಸಾಮುದಾಯಿಕ ಕಾಯಿಲೆಗಳೆನ್ನಬಹುದು. ತಲೆನೋವು , ಹೊಟ್ಟೆನೋವು , ವಾಂತಿ , ಭೇದಿ , ಅಜೀರ್ಣತೆ ಮುಂತಾದವು ಒಬ್ಬ ವ್ಯಕ್ತಿಗೆ ಮಾತ್ರ ಸಂಬಂಧಿಸಿದ ಹೊರಗಿನ ಕಾರಣದಿಂದಲೂ ಬರಬಹುದಾದ ತಾತ್ಕಾಲಿಕ ಕಾಯಿಲೆಗಳು. ಈ ಕಾಯಿಲೆಗಳು ವಯಸ್ಸಿನ , ಕಾಲದ ಹಂಗಿಲ್ಲದೆ ಯಾರಿಗೆ ಯಾವಾಗ ಬೇಕಾದರೂ ಬರಬಹುದು. ಇವು ಮನುಷ್ಯನನ್ನು ತಾತ್ಕಾಲಿಕವಾಗಿ ಮಾತ್ರ ಕಾಡಿಸುತ್ತವೆ. ಅಸ್ತಮಾ , ಮಧುಮೇಹ , ಹೃದ್ರೋಗ , ಮೂತ್ರಪಿಂಡ ವೈಫಲ್ಯ ,ನರದೌರ್ಬಲ್ಯ , ದೃಷ್ಟಿದೋಷ , ಬೊಜ್ಜು ಮುಂತಾದವು ವ್ಯಕ್ತಿಗೆ ಸೀಮಿತವಾದ ಅಂಗಕ್ರಿಯಾ ದೋಷದಿಂದ ಬರುವ ಒಳ ಕಾರಣದ ಕಾಯಿಲೆಗಳು. ಹೊರಗಿನ ಕಾರಣದಿಂದ ಬರುವ ಕಾಯಿಲೆಗಳಲ್ಲಿ ವ್ಯಕ್ತಿಯ ಪಾತ್ರ ಸೀಮಿತವಾಗಿದ್ದರೆ ಒಳ ಕಾರಣದ ಕಾಯಿಲೆಗಳಲ್ಲಿ ವ್ಯಕ್ತಿಯ ಕೌಟುಂಬಿಕ ಹಿನ್ನೆಲೆ , ಆತನ ಆಹಾರ ಪದ್ದತಿ , ಧೂಮಪಾನ , ಮದ್ಯಪಾನ ಮುಂತಾದ ಚಟಗಳು ಪ್ರಭಾವ ಪ್ರಮುಖವಾಗಿರುತ್ತವೆ. ಕೋಷ್ಟಕ-೧೦ ನ್ನು ಗಮನಿಸದರೆ ಸ್ವಾಮಿಗಳಿಗೆ ಬಂದಿರುವ ಬಹುತೇಕ ಕಾಯಿಲೆಗಳು ಒಳಕಾರಣಗಳಿಗೆ ಸಂಬಂಧ ಪಟ್ಟಿರುವುದು ಎದ್ದು ಕಾಣುತ್ತದೆ. ಸ್ವಾಮಿಗಳು ತಾವು ಅನುಭವಿಸುತ್ತಿದ್ದ ಕಾಯಿಲೆಗಳನ್ನು ತಮ್ಮ ಆಪ್ತ , ಶಿಷ್ಯ , ಅಭಿಮಾನಿಗಳಿಗೆ ಬರೆದ ಪತ್ರಗಳಲ್ಲಿ ತೋಡಿಕೊಂಡಿದ್ದಾರೆ.
ಪರಿವ್ರಾಜಕ ಜೀವನದಲ್ಲಿ ಸ್ವಾಮಿಗಳ ಆರೋಗ್ಯ ಹೇಗಿದ್ದಿತೆನ್ನುವುದರ ಸ್ಥೂಲ ಚಿತ್ರಣ ಮುಂದಿದೆ. ೧೮೮೬ರಲ್ಲಿ ಸ್ವಾಮಿಯವರ ಜೀವನ ರಾಮಕೃಷ್ಣರ ಸನ್ನಿಧಿಯಲ್ಲಿ ಕಳೆಯಿತು. ಅವರು ಬುದ್ಧ ಗಯಾಕ್ಕೆ ಹೋಗಿದ್ದಾಗ ಅಜೀರ್ಣತೆಯಿಂದ ಬಾಧೆಗೊಳಗಾಗಿದ್ದರು. ೧೮೮೭ ರ ಬೇಸಿಗೆ ಅವಧಿ ಪೂರ್ತಿ ಸ್ವಾಮಿಗಳು ಜ್ವರ , ಟೈಫಾಯಿಡ್ ಹಾಗೂ ಮೂತ್ರ ಸಂಬಂಧಿ ಕಾಯಿಲೆಗಳಿಂದ ನರಳುತ್ತಿದ್ದರು. ೧೮೮೮ ರಲ್ಲಿ ಮಲೇರಿಯಾ ತಗುಲಿ ಹೃಷಿಕೇಶದಿಂದ ಕೆಳಗಿನ ಬಯಲು ಪ್ರದೇಶಕ್ಕೆ ಬರಬೇಕಾಯಿತು. ಇದೇ ವರ್ಷ ಅಕ್ಟೋಬರ-ಡಿಸೆಂಬರ್ ತಿಂಗಳುಗಳಲ್ಲಿ ಕಾಯಿಲೆಗಳಿಂದ ಚೇತರಿಸಿಕೊಳ್ಳುವುದಲ್ಲಿಯೇ ಮುಗಿದುಹೋಯಿತು. ೨೨/೨/೧೮೮೯ ರಲ್ಲಿ ಪ್ರಮದದಾಸ ಮಿತ್ರರಿಗೆ ಬರೆದ ಪತ್ರದಲ್ಲಿ ನನ್ನ ದೇಹ ಅಲೆದಾಡುವ ಪರಿವ್ರಾಜಕತೆಗೆ ಸೂಕ್ತವಾದುದಲ್ಲ ಎನಿಸುತ್ತದೆ ಎಂದು ಬರೆದಿದ್ದರು.. ಫೆಬ್ರವರಿ-ಮಾರ್ಚ್ ೧೮೮೯ ರ ಅವಧಿಯಲ್ಲಿ ತೀವ್ರ ಜ್ವರದಿಂದ ಬಳಲಿ ವಿಶ್ರಾಂತಿಗಾಗಿ ಸಿಮೂಲತಲ ಮತ್ತು ದೇವಗಢಕ್ಕೆ ಹೋಗಲು ಯತ್ನಿಸಿದರು. ಉಷ್ಣ ಮತ್ತು ಹೊಟ್ಟೆನೋವಿನ ತೊಂದರೆಯಿಂದ ಸಿಮೂಲತಲಕ್ಕೆ ಹೋಗಲಾಗಲಿಲ್ಲ.
೧೮೮೯-೧೮೯೦ ರ ಚಳಿಗಾಲವನ್ನು ಸ್ವಾಮಿಯವರು ದೇವಘಡ ಮತ್ತು ಅಲಹಾಬಾದ್’ನಲ್ಲಿ ಕಳೆದರು. ದೇವಘಡದಲ್ಲಿ ಬಲರಾಮ್ ಬೋಸ್ ಮನೆಯಲ್ಲಿರುವಾಗ ಅಲ್ಲಿನ ನೀರು ಒಗ್ಗದೆ ಅಜೀರ್ಣತೆಯಾಗಿದೆ ಎಂದು ದೂರಿದ್ದರು. ಅಲಹಾಬಾದ್’ನಲ್ಲಿ ಸೊಂಟನೋವಿನಿಂದ ಬಳಲುತ್ತಿದ್ದರು. ಮುಂದಿನ ದಿನಗಳಲ್ಲಿ ಈ ಸೊಂಟ ನೋವು ಸ್ವಾಮಿಗಳನ್ನು ಬಿಡದಂತೆ ಕಾಡಿತು. ೧೮೯೦ ರಲ್ಲಿ ವಾರಾಣಾಸಿಯಲ್ಲಿರುವಾಗ ಇನ್’ಫ್ಲುಯೆಂಝ ರೋಗಕ್ಕೆ ತುತ್ತಾದರು. ನೈನಿತಾಲ್’ನಿಂದ ಆಲ್ಮೋರಾಕ್ಕೆ ಹೋಗುವಾಗ ತೀವ್ರ ಬಳಲಿ ಕುಸಿದು ಬೀಳುವ ಸ್ಥಿತಿ ತಲುಪಿದಾಗ ಅವರಿಗೆ ಸಾಧುವೊಬ್ಬ ತಿನ್ನಲು ಸೌತೆಕಾಯಿಯೊಂದನ್ನು ಕೊಟ್ಟಿದ್ದನು. ರುದ್ರಪ್ರಯಾಗ ಪ್ರವಾಸದಲ್ಲಿ ಜ್ವರದಿಂದ ಪೀಡಿತರಾಗಿದ್ದರು. ಹೃಷಿಕೇಶದಲ್ಲಿಯೂ ಜ್ವರ ತೀವ್ರವಾಗಿ ಮೂರ್ಛೆ ಸ್ಥಿತಿಗೆ ತಲುಪಿದ್ದರು. ಅದನ್ನು ವೈಕುಂಠನಾಥ ಸನ್ಯಾಲ್ ನಿರ್ವಿಕಲ್ಪ ಸಮಾಧಿಯ ಸ್ಥಿತಿಯೆಂದು ಭಾವಿಸಿದ್ದರು. ಮೀರತ್’ನಲ್ಲಿ ಪಡೆದ ದೀರ್ಘ ವಿಶ್ರಾಂತಿಯಿಂದ ಸ್ವಾಮಿಗಳ ಆರೋಗ್ಯ ಸುಧಾರಿಸಿದ್ದಿತು. ಸ್ವಾಮಿಗಳು ಒಬ್ಬಂಟಿಯಾಗಿ ಭಾರತ ಪ್ರವಾಸ ಕೈಗೊಂಡ ನಂತರ ಅವರ ಆರೋಗ್ಯ ಹೇಗಿದ್ದಿತೆನ್ನುವ ವಿವರಗಳು ಸಿಗುವುದಿಲ್ಲ. ಈ ಪ್ರವಾಸದಲ್ಲಿರುವಾಗ ಸ್ವಾಮಿಗಳು ರಾಜ , ದಿವಾನ, ಸೇಠರ ಅತಿಥಿಗಳಾಗಿರುತ್ತಿದ್ದರು. ಈ ಅತಿಥಿಗಳು ಗುರುಭಾಯಿಗಳಷ್ಟು ಸನಿಹ ಮತ್ತು ಆತ್ಮೀಯರಲ್ಲವಾದ್ದರಿಂದ ಆಗಿಂದಾಗ್ಗೆ ಹದಗೆಡುತ್ತಿರುವ ಸ್ವಾಮಿಗಳ ಆರೋಗ್ಯದ ಬಗ್ಗೆ ಅವರಿಗೆ ತಿಳಿದಿರುತ್ತಿರಲಿಲ್ಲ ಆಲ್ಲದೆ ಸ್ವಾಮಿಗಳು ಅದನ್ನು ಹೇಳಿಕೊಳ್ಳುವಂತೆಯೂ ಇರಲಿಲ್ಲ. ಆದ್ದರಿಂದ ಒಂಟಿಯಾಗಿ ಪ್ರವಾಸ ಮಾಡುತ್ತಿದ್ದಾಗ ಅವರ ಆರೋಗ್ಯ ಹೇಗಿದ್ದಿರಬಹುದು ಎನ್ನುವುದು ಊಹೆಗೆ ಬಿಟ್ಟದ್ದು.
ಸ್ವಾಮಿಯವರು ಏಪ್ರಿಲ್-ಜೂಲೈ ತಿಂಗಳುಗಳ ನಡುವಿನ ಉತ್ತರ ಭಾರತದ ಬಿಸಿಲಿಗೆ ಹೆದರುತ್ತಿದ್ದು ೧೮೮೬-೧೮೯೦ ರ ಅವಧಿಯ ಬೇಸಿಗೆಗಳನ್ನು ಕಲ್ಕತ್ತದಲ್ಲಿಯೇ ಕಳೆದರು. ಸ್ವಾಮಿಯವರು ಬೇಸಿಗೆ ಮತ್ತು ಬಿಸಿಲನ್ನು ದೂರುವುದು ಸಾಮಾನ್ಯ ಸಂಗತಿಯಾಗಿದ್ದಿತು. ಬೇಸಿಗೆ ಬಿಸಿಯಿಂದ ತಪ್ಪಿಸಿಕೊಳ್ಳಲು ೧೮೯೧ ರ ಏಪ್ರಿಲ್-ಮೇ ತಿಂಗಳಿನಲ್ಲಿ ಎತ್ತರದ ಅಬು ಪರ್ವತಕ್ಕೆ ಹೋದರು. ಇದರಿಂದ ಎತ್ತರದ ತಂಪು ಜಾಗಗಳಲ್ಲಿ ಬೇಸಿಗೆಯನ್ನು ಕಳೆಯಲು ಬರುತ್ತಿದ್ದ ರಾಜ, ದಿವಾನ , ಶ್ರೀಮಂತರ ಪರಿಚಯ ಸ್ವಾಮಿಗಳಿಗಾಯಿತು. ೨೪ ಜೂಲೈ ೧೮೯೧ ರಂದು ಅಜಿತ್ ಸಿಂಗ್ ಜೊತೆ ಖೇತ್ರಿಗೆ ಹೋದ ಸ್ವಾಮಿಗಳು ಆ ವರ್ಷದ ಮಳೆಗಾಲದ ಅವಧಿಯನ್ನು ಅಲ್ಲಿಯೇ ಕಳೆದರು. ೧೮೯೨ ರಲ್ಲಿ ಸ್ವಾಮಿಗಳು ಜುನಾಗಢವನ್ನು ನೆಲೆಯಾಗಿರಿಸಿಕೊಂಡು ಗುಜರಾತ್’ನಲ್ಲಿ ಪ್ರವಾಸ ಮಾಡಿದರು. ಏಪ್ರಿಲ್ ಮಧ್ಯದ ನಂತರ ಅವರು ಬರೋಡದಲ್ಲಿದ್ದರು. ಅಲ್ಲಿಂದ ಬಾಂಬೆಯ ಮೂಲಕ ಪೂನಾ ಮತ್ತು ಮಹಾಬಲೇಶ್ವರಕ್ಕೆ ಹೋದರು. ಇವೆರಡೂ ಬೇಸಿಗೆಯಲ್ಲಿ ಹಿತಕರವಾದ ವಾತಾವರಣ ಇರುವ ಎತ್ತರದ ಜಾಗಗಳು. ಇದನ್ನು ಗಮನಿಸಿಯೇ ಬ್ರಿಟಿಷರು ೧೮೧೭ ರಿಂದ ಪೂನಾವನ್ನು ಬಾಂಬೆ ಪ್ರೆಸಿಡೆನ್ಸಿಯ ಬೇಸಿಗೆ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಜೂನ್-ಜುಲೈ ತಿಂಗಳುಗಳನ್ನು ಪೂನದಲ್ಲಿ ಕಳೆದು ಅಲ್ಲಿಂದ ಬಾಂಬೆಗೆ ಹೋಗಿ ಸೆಪ್ಟೆಂಬರ್ ಕೊನೆಯವರೆಗೆ ಇದ್ದರು. ಅಕ್ಟೋಬರ್’ನಲ್ಲಿ ಮತ್ತೊಮ್ಮೆ ಪೂನಾಕ್ಕೆ ಹೋಗಿ ಅಲ್ಲಿಂದ ಕೊಲ್ಲಾಪುರ, ಬೆಳಗಾವಿ ಹಾಗೂ ಗೋವಾಗಳಿಗೆ ಭೇಟಿ ಕೊಟ್ಟರು. ಗೋವಾದಿಂದ ಧಾರವಾಡದ ಮೂಲಕ ನವೆಂಬರ್’ನಲ್ಲಿ ಬೆಂಗಳೂರಿಗೆ ಬಂದರು. ಇಲ್ಲಿಂದ ಡಿಸೆಂಬರ್’ನಲ್ಲಿ ತಿರುವನಂತಪುರಕ್ಕೆ ಬಂದರು. ಈ ವೇಳೆಗೆ ಕೇರಳದಲ್ಲಿ ಮಳೆಯ ತೀವ್ರತೆ ಇಲ್ಲವಾಗಿ ಉಲ್ಲಾಸಕರ ವಾತಾವರಣ ಇರುತ್ತದೆ. ಮದ್ರಾಸ್’ನಲ್ಲಿ ಚಳಿಗಾಲದ ಆವಧಿಯಲ್ಲಿ ಕಳೆದ ಸ್ವಾಮಿಗಳು ಅಜಿತ್ ಸಿಂಗ್ ಒತ್ತಾಯಕ್ಕೆ ಮಣಿದು ಬೇಸಿಗೆಯಲ್ಲಿ ಖೇತ್ರಿಗೆ ಭೇಟಿ ನೀಡಿ ವಿದೇಶಕ್ಕೆ ಹೋಗುವ ಅನಿವಾರ್ಯತೆಯಿಂದ ಮೇ ತಿಂಗಳು ಬಾಂಬೆಯಲ್ಲಿದ್ದರು.
ಸ್ವಾಮಿಗಳು ಕಲ್ಕತ್ತದಲ್ಲಿ ಹುಟ್ಟಿ ಬೆಳೆದರಾದರೂ ಸಂನ್ಯಾಸ ಸ್ವೀಕರಿಸಿದ ನಂತರ ೧೮೯೦ ರಿಂದ ಬಯಲು ಸೀಮೆಯ ಕಲ್ಕತ್ತದಲ್ಲಿದ್ದರೆ ತಮ್ಮ ಆರೋಗ್ಯ ಕೆಡುತ್ತದೆಯೆಂದು ಭಾವಿಸಿದ್ದು ಸ್ವಾಮಿಗಳ ಬಹುತೇಕ ವೇಳೆ ಡಾರ್ಜಿಲಿಂಗ್ , ನೈನಿತಾಲ್ , ಆಲ್ಮೋರಾ , ಕಾಶ್ಮೀರ ಮುಂತಾದ ಎತ್ತರದ ತಂಪು ಪ್ರದೇಶಗಳಿಗೆ-ಗಿರಿಧಾಮ- ಹೋಗಲು ಹಾತೊರೆಯುವುದು ಅವರ ಪತ್ರಗಳಲ್ಲಿ ಎದ್ದು ಕಾಣುತ್ತದೆ. ಯುವ ಮತ್ತು ತರುಣ ವಯಸ್ಸಿನಲ್ಲಿ ಬರದ ಹಾಗೆ ಬರಬಾರದಾದ ಬೆನ್ನು ಮತ್ತು ಸೊಂಟ ನೋವು , ನಡೆಯದಾಗದಿರುವದು , ನಿಶ್ಶಕ್ತಿ , ಸ್ನಾಯು ಸೆಳೆತ , ಮೂಳೆ ನೋವು , ಕತ್ತು ನೋವು ಮುಂತಾದವು ೨೫ ನೇ ವಯಸ್ಸಿನಲ್ಲಿಯೇ ಸ್ವಾಮಿಗಳ ಬೆನ್ನು ಹತ್ತಿದ್ದವು. ಮನಸ್ಸು ಕದಡಿದೆ (೪/೨/೧೮೮೯) , ಕಾಶಿಗೆ ಹೋಗಬೇಕೆಂಬ ಆಶೆಗೆ ಅನಾರೋಗ್ಯ ಅಡ್ಡಿ . ಜ್ವರ, ವಾಂತಿ,ಭೇದಿ ,ದೇಹ ದುರ್ಬಲ, ನಡೆದಾಡಲು ಅಶಕ್ತ (೨೨/೨/೧೮೮೯) , ಒಂದು ತಿಂಗಳ ನಂತರವೂ ಜ್ವರ ವಾಸಿಯಾಗುತ್ತಿಲ್ಲ . ಗುಲ್ಮ ಕೆಟ್ಟಿಲ್ಲವೆಂಬ ಸಮಾಧಾನ ಇದೆ. ಹೋಮಿಯೋಪತಿ ಚಿಕಿತ್ಸೆ ಪಡೆಯುತ್ತಿದ್ದೇನೆ (೨೧/೩/೧೮೮೯) , ಸಿಮೂಲತಲ (ವೈದ್ಯನಾಥ್ ಹತ್ತಿರ) ಆರೋಗ್ಯಕರ ಸ್ಠಳ ಎಂದು ಪೂರ್ವಾಶ್ರಮದ ಬಂಧುವೊಬ್ಬರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಬೇಸಿಗೆ ಧಗೆಯಿಂದ ಅತಿಸಾರ ಕಾಯಿಲೆ ಬಂದಿದೆ. (೪/೭/೧೮೮೯) , ಒಂದೂವರೆ ತಿಂಗಳ ಕಾಲ ಮಾತ್ರ ಆರೋಗ್ಯವಾಗಿದ್ದೆ ಮತ್ತೆ ಕಾಯಿಲೆಯಾಗಿದೆ. (೭/೮/೧೮೮೯) , ನೀರಿನಲ್ಲಿ ಕಬ್ಬಿಣದ ಅಂಶ ಹೆಚ್ಚಿ ಅಜೀರ್ಣವಾಗಿದೆ. ಆಮ್ಲತೆಯಿಂದ ನರಳಿದೆ (೨೫/೧೨/೧೮೮೯) , ‘ನಾನು ಪ್ರಬಲವಾದ ಬೆನ್ನು ನೋವಿನಿಂದ ನರಳುತ್ತಿದ್ದೇನೆ. ಅದು ಅಲಹಾಬಾದಿನಲ್ಲಿ ಪ್ರಾರಂಭವಾಯಿತು. ಸ್ವಲ್ಪ ಕಾಲದ ಹಿಂದೆ ಅದರಿಂದ ಪಾರಾಗಿದ್ದೆ. ಅದು ಮತ್ತೆ ಬಂದಿದೆ ( ೧೧/೨/೧೮೯೦) ಎಂದು ಬಲರಾಮ ಬಸುಗಳಲ್ಲಿ ಅಲವತ್ತು ಕೊಂಡಿದ್ದಾರೆ. ಪಳಗದ ದೇಹದ ಬಗ್ಗೆ ಬಲರಾಮ ಬಸು ನೀಡಿದ್ದ ಹೇಳಿಕೆಯನ್ನು ಒಪ್ಪಿ ಅದಕ್ಕೆ ಪ್ರತಿಕ್ರಿಯೆಯಾಗಿ ‘ ಬೇಯಿಸದ ರೊಟ್ಟಿಯ ಬಗ್ಗೆ ನೀವು ಬರೆದಿರುವುದು ನಿಜ. ಆದರೆ ಸಂನ್ಯಾಸಿ ಸಾಯುವುದೇ ಹಾಗೆ. ಕಪ್-ಸಾಸರ್ ಒಡೆದಂತಲ್ಲ. ಈ ಬಾರಿ ದುರ್ಬಲತೆ ನನ್ನನ್ನು ಯಾವ ರೀತಿಯಿಂದಲೂ ಬಿಡದು. ನಾನು ಸತ್ತರೆ, ಅದು ನನಗೆ ಒಳ್ಳೆಯದು ‘ ಎಂದು ಉತ್ತರಿಸುವಲ್ಲಿ ಆಳವಾದ ಹತಾಶೆ , ಕುಂದಿದ ಉತ್ಸಾಹಗಳು ಕಾಣುತ್ತವೆ. ‘ಈ ಸಮಯದಲ್ಲಿ ನನ್ನ ಪ್ರತಿಯೊಂದು ಮೂಳೆಯೂ ನೋಯುತ್ತಿದೆ. ಎಂದು ಶಿಷ್ಯನಿಗೆ ತಿಳಿಸಿದ್ದಾರೆ. (೧೭/೨/೧೮೯೬-ಅಳಸಿಂಗ ಪೆರುಮಾಳ್)
೧೮೮೭ ರಿಂದಲೇ ಅಸ್ತಮಾ, ಉಸಿರು ಕಟ್ಟುವುದು ಸ್ವಾಮಿಗಳ ಸಂಗಾತಿಯಾಗಿದ್ದು ೧೮೯೭ ರ ವೇಳೆಗೆ ಉಲ್ಬಣ ಸ್ಥಿತಿ ತಲುಪಿ ಸ್ವಾಮಿಗಳಿಗೆ ತಾವು ಸತ್ತೇ ಹೋಗುತ್ತೇನೆ ಎನಿಸುವಂತೆ ಹಿಂಡಿ ಹಿಪ್ಪೆ ಮಾಡಿದ್ದಿತು. ಪರಿವ್ರಾಜಕ ದಿನಗಳ ಆರಂಭದಿಂದಲೇ ಸ್ವಾಮಿಗಳನ್ನು ಆವರಿಸಿಕೊಂಡಿದ್ದ ಅನಾರೋಗ್ಯ ಮತ್ತು ಜ್ವರಗಳ ಸರಣಿ ಸ್ವಾಮಿಗಳ ಕೊನೆಯ ದಿನಗಳವರೆಗೆ ತನ್ನ ಹಿಡಿತವನ್ನು ಸಡಿಲಗೊಳಿಸಿರಲಿಲ್ಲ. ಕೆಲವು ಸಲ ಕಾಣಿಸಿಕೊಂಡ ಜ್ವರ ಮತ್ತು ಅನಾರೋಗ್ಯ ಹಲವು ವಾರಗಳ ಕಾಲ ಸ್ವಾಮಿಗಳನ್ನು ಬಿಡುತ್ತಿರಲಿಲ್ಲ ಎನ್ನುವುದನ್ನು ಅವರ ಪತ್ರಗಳು ಸ್ಪಷ್ಟಪಡಿಸುತ್ತವೆ. ಸ್ವಾಮಿಗಳಿಗೆ ಅಸ್ತಮಾ/ಉಸಿರು ಕಟ್ಟುವಿಕೆಯಿಂದ ಕೆಲವು ಸಲ ತಾವು ಸತ್ತೇ ಹೋಗಬಹುದೆನ್ನುವ ಆತಂಕ ಮೂಡಿದ್ದಿತು. ‘ಮೇಲೇಳುವಾಗ ಅಥವಾ ಕೆಳಗೆ ಕುಳಿತುಕೊಳ್ಳೂವಾಗ ಉಸಿರು ಕಟ್ಟುತ್ತದೆ. ಇದು ಹಾಲು ಕುಡಿಯುತ್ತಿರುವುದರಿಂದ ಬರುತ್ತಿರಬಹುದು (೧೩/೭/೧೮೯೭-ಬ್ರಹ್ಮಾನಂದ) , ಕೆಲವು ವೈದ್ಯರು ಅಸ್ತಮಾ ಮತ್ತೆ ಕೆಲವು ವೈದ್ಯರು ಡಿಸ್’ಪೆಪ್ಸಿಯಾ ಎನ್ನುವ ಕಾಯಲೆ ನರಗಳ ದೌರ್ಬಲ್ಯದಿಂದ ಬಂದಿದೆ. ಅದೇನೆ ಇರಲಿ ಅದು ಉಸಿರು ಕಟ್ಟುವಂತೆ ಮಾಡುವುದಲ್ಲದೆ ಕೆಲವು ಸಲ ಹಲವು ದಿನಗಳ ಕಾಲ ತೊಂದರೆ ಕೊಡುತ್ತದೆ.. (೨೬/೧/೧೮೯೯, ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) , ವೈದ್ಯನಾಥಕ್ಕೆ ಹವಾ ಬದಲಾವಣೆಗೆ ಹೋಗಿದ್ದು ಪ್ರಯೋಜನವಾಗಲಿಲ್ಲ. ಅಲ್ಲಿ ನಾನು ಉಸಿರು ಕಟ್ಟಿ ನರಳುತ್ತಿದ್ದು , ಸಾಯುವುದರಲ್ಲಿದ್ದೆ (೨/೨/೧೮೯೯-ಜೊಸೆಫಿನ್ ಮೆಕ್ಲಿಯಾಡ್ ) , ಅಸ್ತಮಾ ಒಂದೇ ಸಮನೆ ಭಯಂಕರವಾಗಿ ಹಿಡಿದುಕೊಳ್ಳುತ್ತಿದ್ದಿತು. ಇದು ಹಗಲು , ರಾತ್ರಿ ಕೆಲವು ಸಲ ಏಳು ದಿನಗಳವರೆಗೆ ಇರುತ್ತಿದ್ದಿತು ಯಾವಾಗಲೂ ಉಸಿರು ಹಿಡಿದಿಕೊಳ್ಳುತ್ತಿದ್ದು ನಾನು ಎದ್ದು ನಿಲ್ಲುತ್ತಿದ್ದೆ..( ೧೪/೭/೧೮೯೯- ಕ್ರಿಸ್ಟೈನಾ ಗ್ರೀನ್’ಸ್ಟೈಡಲ್), ಕಲ್ಕತ್ತೆಯಲ್ಲಿ ನನ್ನ ಮೊದಲ ದಿನದ ಅನುಭವವೆಂದರೆ ಅಸ್ತಮಾ ಮತ್ತೆ ಹಿಂದಿರುಗಿ ಬಂದಿರುವುದು. ನಾನು ಅಲ್ಲಿದ್ದ ಎರಡು ವಾರಗಳೂ ರಾತ್ರಿಯ ಹೊತ್ತು ಕೆಲವು ಕಾಲ ಪ್ರಜ್ಞೆಯೇ ತಪ್ಪಿಹೋಗುತ್ತಿದ್ದಿತು (೬/೧/೧೯೦೧) , ನನ್ನ ಸ್ಥಿತಿ ಗಂಬೀರವಾಗಿ ಇಲ್ಲವಾದರೂ ಅದು ಯಾವಾಗ ಬೇಕಾದರೂ ಹಾಗಾಬಹುದು. ಜ್ವರ ಸ್ವಲ್ಪ ಇದೆ ಮತ್ತು ಯಾವಾಗಲೂ ಎಡೆಬಿಡದೆ ಇದೆ ಮತ್ತು ಉಸಿರಾಟ ಕಷ್ಟವಾಗಿದೆ. ಇದು ಏತಕ್ಕೆ ಎನ್ನುವುದು ತಿಳಿಯುತ್ತಿಲ್ಲ ( ೪/೩/೧೯೦೨-ಮಾರ್ಗರೆಟ್ ನೋಬಲ್). ಸ್ವಾಮಿಗಳ ಈ ಹೇಳಿಕೆಗಳಿಂದ ಅಸ್ತಮಾ ಅವರನ್ನು ತೀವ್ರವಾಗಿ ಬಾಧಿಸುತ್ತಿರುವುದು ನಿಚ್ಚಳವಾಗುತ್ತದೆ.
ಸ್ವಾಮಿಗಳಿಗಿದ್ದ ಕೌಟುಂಬಿಕ ಮತ್ತು ಜೀವನಶೈಲಿಗೆ ಸಂಬಂಧಿಸಿದ್ದ ರೋಗಗಳದ್ದೇ ಇನ್ನೊಂದು ಕಥೆ. ೧೮೯೪ ರಲ್ಲಿ ಸ್ವಾಮಿಗಳು ತಡರಾತ್ರಿಯ ಔತಣ ಕೂಟಗಳಲ್ಲಿ ಭಾಗವಹಿಸಿದ್ದರ ಪರಿಣಾಮ ಅಕ್ಟೋಬರ್ ವೇಳೆಗೆ ಬೊಜ್ಜು ಕಾಣಸಿಕೊಳ್ಳತೊಡಗಿತು. ಸಮರ್ಪಕ ವ್ಯಾಯಾಮದ ಕೊರತೆ, ಜಡ ಜೀವನ ಪದ್ದತಿ , ಮಾಂಸಾಹಾರ, ಧೂಮಪಾನಗಳ ನೆರವಿನಿಂದ ಬೊಜ್ಜು ಸ್ವಾಮಿಗಳನ್ನು ಆಕ್ರಮಿಸತೊಡಗಿತು. ಇದನ್ನು ತೋಡಿಕೊಂಡು ಸ್ವಾಮಿಗಳು ಬರೆದ ಪತ್ರಗಳ ಸರಣಿಯೇ ಇದೆ. ‘ಎಂದಿನಂತೆ ನಾನು ದಪ್ಪನಾಗಿರುವೆನು ಮತ್ತು ಊಟ ಚೆನ್ನಾಗಿದೆ (೧೦/೧೦/೧೮೯೪- ಶ್ರೀಮತಿ ಜಾರ್ಜ್ ಹೇಲ್’ ) , ‘ಈ ಬೇಸಿಗೆಯಲ್ಲಿ ೩೦-೪೦ ಪೌಂಡ್ ತೂಕ ಇಳಿಯಬಹುದು. ಆಗ ಆ ತೂಕ ನನ್ನ ನಿಲುವಿಗೆ ಸೂಕ್ತವಾದುದು. ಈ ವರ್ಷ ನನ್ನ ಆರೋಗ್ಯ ಸರಿಯಿರಲಿಲ್ಲ ( ೨೨/೬/೧೮೯೫ –ಮೇರಿ ಹೇಲ್ ) ಇವು ಬೊಜ್ಜಿನ ಬಗ್ಗೆ ಸ್ವಾಮಿಗಳ ಸ್ವವಿಮರ್ಶೆಗಳಾಗಿದ್ದವು. ಸ್ವಾಮಿಗಳು ‘ಅಭಿವ್ಯಕ್ತಿ ಕಲೆ’ ತರಬೇತುದಾರಳಾದ ಶ್ರೀಮತಿ ಫ್ಲಾರೆನ್ಸ್ ಆಡಮ್ಸ್ ಮಾರ್ಗದರ್ಶನದಲ್ಲಿ ನಡಿಗೆಯ ಶೈಲಿಯನ್ನು ಅಭ್ಯಾಸ ಮಾಡುತ್ತಿದ್ದರು. ಮಾರ್ಚ್ ೧೮೯೫ ರಲ್ಲಿ ಇಸಾಬೆಲ್ಲಾ ಮೆಕ್ಲೆಂಡ್ಲಿಗೆ ‘ ಪ್ರಯೋಜನವಿಲ್ಲ ; ಶ್ರೀಮತಿ ಆಡಮ್ಸ್ ಬಯಸುವಂತೆ ಮುಂಭಾಗದಲ್ಲಿ ಹೆಚ್ಚಾಗಿರುವ ತೂಕ ನನ್ನನ್ನು ಬಗ್ಗಲು ಬಿಡುತ್ತಿಲ್ಲ. ನಡೆಯುವಾಗ ನಾನು ಮುಂದಕ್ಕೆ ಬಾಗಲು ಯತ್ನಿಸಿದರೆ ದೇಹದ ಗುರುತ್ವ ಕೇಂದ್ರ ಹೊಟ್ಟಿಯ ತುದಿಗೆ ಪಲ್ಲಟಗೊಂಡು ಲಾಗ ಹೊಡೆಯುವ ಪರಿಸ್ಥಿತಿ ಎದುರಾಗುತ್ತದೆ’ ಎಂದು ತಮ್ಮ ಡೊಳ್ಳುಹೊಟ್ಟೆಯ ಪ್ರಭಾವವನ್ನು ಬಿಚ್ಚಿಟ್ಟಿದ್ದರು.
‘ ನಾನು ಈಗ ಹೆಚ್ಚಾಗಿ ಹಣ್ಣು ಮತ್ತು ಬೀಜಗಳನ್ನು ತಿಂದು ಜೀವಿಸುತ್ತಿದ್ದೇನೆ. ಅದು ನನಗೆ ಚೆನ್ನಾಗಿ ಒಗ್ಗಿದೆ ಎನಿಸುತ್ತಿದೆ… ನನ್ನ ಬೊಜ್ಜು ಬಹಳ ಕರಗಿದೆ. ನಾನು ಗಟ್ಟಿಯಾದ ಆಹಾರವನ್ನೇ ತೆಗೆದುಕೊಳ್ಳುತ್ತಿದ್ದೇನೆ ‘ (೨/೧೦/೧೮೯೬-ಜೊಸೆಫಿನ್ ಮೆಕ್ಲಿಯಾಡ್) , ‘ಸೆಕೆಯಿದ್ದರೂ ಬಾಯರಿಕೆಯಾಗದು. ಹಾಲಿನ ಸೇವನೆಯಿಂದ ಮೈ ಬರುತ್ತಿದೆ (೨೯/೫/೧೮೯೭- ಶಶಿಭೂಷಣ ಘೋಷ್) , ಡಾಕ್ಟರ್ ಸಲಹೆಯಂತೆ ಕೆನೆ ತೆಗೆದ ಹಾಲು ಸೇವಿಸಿ ಬೆನ್ನಿಗಿಂತ ಹೊಟ್ಟೆ ಮುಂದೆ ಬಂದಿದೆ. ಹಾಲನ್ನು ಕುಡಿಯುವುದನ್ನು ಬಿಟ್ಟಿದ್ದೇನೆ ( ೨೫/೭/೧೮೯೭- ಮೇರಿ ಹಾಲ್ ಬಾಯಿಸ್ಟರ್) , ಅಂಗಸಾಧನೆ ಇಲ್ಲದೆ ಆರೋಗ್ಯವಿಲ್ಲ. ಸದಾ ಮಾತನಾಡುತ್ತಿದ್ದರೆ ರೋಗ ಬರುತ್ತದೆ /ವ್ಯಾಯಾಮದಿಂದ ಕೈಕಾಲುಗಳಲ್ಲಿ ಮಾಂಸ ತುಂಬಿಕೊಂಡಿದೆ….ಹೊಟ್ಟೆ ತುಂಬಾ ಉಬ್ಬುತ್ತಿದೆ ( ೧೩/೭/೧೮೯೭ ಮತ್ತು ೧೧/೧೧/೧೮೯೭ – ಬ್ರಹ್ಮಾನಂದ) , ನನ್ನ ತೂಕವನ್ನು ೫೦ ಪೌಂಡ್ ಕಡಿಮೆ ಮಾಡಿಕೊಳ್ಳಲು ನನಗೆ ಬಹಳ ಸಂತೋಷ ಮತ್ತು ನಾನು ಮತ್ತೆೀ ದಪ್ಪನಾಗುತ್ತಿದ್ದೇನೆ ಎಂದು ತಿಳಿಸಲು ಬಹಳ ವಿಷಾದವಾಗುತ್ತಿದೆ ( ೧೩/೧೨/೧೮೯೭ ಮತ್ತು ೨೦/೯/೧೮೯೯-ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) ಎನ್ನುವ ಸ್ವಾಮಿಗಳ ಪತ್ರಗಳಿಂದ ಅವರು ಎಂದಿಗೂ ಬೊಜ್ಜಿನಿಂದ ದೂರ ಇರಲಿಲ್ಲ. ಬೊಜ್ಜು ಅವರನ್ನು ಬೇತಾಳನಂತೆ ಬೆನ್ನು ಹತ್ತಿದ್ದಿತು ಎಂದು ಗುರುತಿಸಬಹುದು. ೧೮೯೯ ರ ವೇಳೆಗೆ ಬೊಜ್ಜು ಮತ್ತು ಆಯಾಸ ಸ್ವಾಮಿಗಳನ್ನು ತೀವ್ರವಾಗಿ ಆಕ್ರಮಿಸಿದ್ದವು. ‘ ಈದಿನ ಬೆಳಿಗ್ಗೆ ‘ರಾಜ’ನ ಆರೋಗ್ಯ ತೀರಾ ಹದಗೆಟ್ಟದ್ದಿತು. ನಿನ್ನೆ ಮಿಸ್ ಸೌಟೆರ್’ಳನ್ನು ನೋಡಲು ಹೋಗಿದ್ದು ಮನೆಗೆ ತಡವಾಗಿ ಬಂದರು. ೪-೫ ನಿಮಿಷಗಳ ನಡಿಗೆಯ ದೂರದಲ್ಲಿರುವ ರೈಲು ನಿಲ್ದಾಣದಿಂದ ನಡೆದುಕೊಂಡು ಮನೆಗೆ ಬರಲು ಅರ್ಧ ಗಂಟೆಗೂ ಹೆಚ್ಚು ಸಮಯ ಬೇಕಾಯಿತು ‘ ಎಂದು ತಿಳಿಸಿ ಮಾರ್ಗರೆಟ್ ನೋಬಲ್ ೨/೮/೧೮೯೯ ರಂದು ಜೊಸೆಫಿನ್ ಮೆಕ್ಲಿಯಾಡ್’ಗೆ ಬರೆದ ಪತ್ರ ಸ್ವಾಮಿಗಳ ಆರೋಗ್ಯ ಪತ್ರದಂತಿದೆ. (68)
ಬೊಜ್ಜಿನ ಗೆಳೆಯನಾದ ಡಯಾಬಿಟಿಸ್ (ಮಧುಮೇಹ) ಸ್ವಾಮಿಗಳನ್ನು ಮರೆತಿರಲಿಲ್ಲ. ‘ನನಗೆ ಡಯಾಬಿಟೀಸ್ ಎಂಬ ವಾಸಿಯಾಗದ ಕಾಯಿಲೆ ಬಂದಿದೆ. ಅದು ಕೆಲವು ವರ್ಷಗಳಲ್ಲಿ ನನ್ನನ್ನು ಇಹಲೋಕದಿಂದ ಸಾಗಿಸುವುದು (೧೬/೩/೧೮೯೭-ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) , ‘ ಪಶ್ಚಿಮ ದೇಶಗಳಲ್ಲಿ ಒಂದೇ ಸಮನಾಗಿ ಮಾಡಿದ ಕೆಲಸ ಮತ್ತು ಭಾರತದಲ್ಲಿ ಒಂದು ತಿಂಗಳು ಮಾಡಿದ ತೀವ್ರ ಕೆಲಸ ಈ ಬಂಗಾಲಿ ದೇಹದ ಮೇಲೆ ಮಾಡಿದ ಪರಿಣಾಮವೆಂದರೆ ಡಯಾಬಿಟಿಸ್. ಇದೊಂದು ಅನುವಂಶಿಕ ಶತ್ರು. ಹೆಚ್ಚೆಂದರೆ ಕೆಲವು ವರ್ಷಗಳಲ್ಲಿ ಇದು ನನ್ನನ್ನು ಈ ಪ್ರಪಂಚದಿಂದ ಸಾಗಿಸಿಬಿಡುವುದು. ಕೇವಲ ಮಾಂಸವನ್ನು ತಿನ್ನುವುದು ಮತ್ತು ನೀರನ್ನು ಕುಡಿಯದಿರುವುದೊಂದೇ ಜೀವನವನ್ನು ಎಳೆದುಕೊಂಡು ಹೋಗುವುದಕ್ಕಿರುವ ದಾರಿ ‘ (೨೬/೩/೧೮೯೭-ಸಾರಾ ಬುಲ್) , ‘ನನಗೆ ಡಯಾಬಿಟಿಸ್ ಎಂಬ ಭಯಂಕರ ರೋಗ ಬಂದಿರುವುದು ನಿಮಗೆ ತಿಳಿದಿರಬಹುದು. ಅದು ನನ್ನ ಯೋಜನೆಗಳನ್ನೆಲ್ಲ ಅಸ್ತವ್ಯಸ್ತಗೊಳಿಸಿತು ( ೭/೪/೧೮೯೭-ಲಾಲ ಬದ್ರಿ ಷಹಾ) ಎಂದು ತಮ್ಮ ಹಿತೈಷಿಗಳಿಗೆ , ಶಿಷ್ಯರಿಗೆ ಪತ್ರ ಬರೆದು ಮಧುಮೇಹ ಕಾಲನ ಕರೆಯೋಲೆಯನ್ನು ಹಿಡಿದು ತಮ್ಮ ಸನಿಹ ನಿಂತಿದೆ ಎಂದು ಸ್ವಾಮಿಗಳು ಕಂಗಾಲಾಗಿದ್ದರು.
ಕೊನೆಯ ದಿನಗಳಲ್ಲಿ ಮಧುಮೇಹ ಸ್ವಾಮಿಗಳ ಕಣ್ಣುಗಳ ಮೇಲೆ ತನ್ನ ಪ್ರಭಾವವನ್ನು ತೋರಿಸತೊಡಗಿದ್ದಿತು. ‘ ಬಿಸಿಲಿಗೆ ಹೋದರೆ ಕಣ್ಣು ಕೆಂಪಾಗುತ್ತದೆ (, ೧೩/೭/೧೮೯೭-ಬ್ರಹ್ಮಾನಂದ) , ಈಗ ನನ್ನ ಕಣ್ಣಿನ ದೃಷ್ಟಿಯೂ ಮಂದವಾಗಿರುವುದರಿಂದ ನನ್ನ ಸ್ಥಿತಿ ಹಿಂದಿಗಿಂತ ಕೆಟ್ಟಿದೆ. ಈ ವಿಷಯಗಳನ್ನು ನಾನು ಬರೆಯುತ್ತಿರಲಿಲ್ಲ. ಆದರೆ ಇವು ಕೆಲವರಿಗೆ ಬೇಕಾಗಿವೆ’ ( ೮/೧೧/೧೯೦೧- ಜೊಸೆಫಿನ್ ಮೆಕ್ಲಿಯಾಡ್) , ಆಲ್ಬ್ಯೂಮಿನ್ ರಕ್ತವನ್ನು ವಿಷಮಯವಾಗಿಸಿ ಹೃದಯಕ್ಕೆ ಅಪಾಯ ಉಂಟು ಮಾಡುವುದು. ಈ ಬಾರಿ ಅದು ಬಲಗಣ್ಣಿನ ಸೂಕ್ಷ್ಮ ನಾಳಗಳನ್ನು ಒಡೆದಿರುವುದು. ಆದ್ದರಿಂದ ನಾನು ಬಲಗಣ್ಣಿನಿಂದ ನೋಡಲಾರೆ (೧೨/೧೨/೧೯೦೧-ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) ಎಂದು ಬರೆದಿರುವುದನ್ನು ಗಮನಿಸಿದರೆ ಸ್ವಾಮಿಗಳ ಜೀವಿತದ ಕೊನೆಯ ಎರಡು ವರ್ಷಗಳಲ್ಲಿ ಮಧುಮೇಹ ಅವರನ್ನು ಸಂಪೂರ್ಣ ಆವರಿಸಿದ್ದಿತೆಂದು ಸ್ಪಷ್ಟವಾಗುತ್ತದೆ.
ಸ್ವಾಮಿಗಳಿಗೆ ಹೃದ್ರೋಗದ ಲಕ್ಷಣಗಳು ಯಾವಾಗಿನಿಂದ ಕಾಣಿಸಿಕೊಂಡವೆಂದು ಹೇಳುವುದು ಕಷ್ಟ . ೧೮೯೬೭ ರಲ್ಲಿ ಸ್ವಾಮಿಗಳು ಲಂಡನ್’ನಲ್ಲಿರುವಾಗ ಮಧ್ಯಾಹ್ನ ಊಟವಾದ ನಂತರ ಜಾನ್.ಪಿ.ಫಾಕ್ಸ್ ಜೊತೆ ವಿಶ್ರಾಂತಿ ತೆಗೆದುಕೊಳ್ಳತ್ತಿರುವಾಗ ಇದ್ದಕ್ಕಿಂದ್ದಂತೆ ಮುಖದಲ್ಲಿ ತೀವ್ರ ನೋವು ಕಾಣಿಸಿಕೊಂಡಿತು. ಇದಾದ ಸ್ವಲ್ಪ ಹೊತ್ತಿನ ನಂತರ ಸುಧಾರಿಸಿಕೊಂಡ ಸ್ವಾಮಿಗಳು ನನಗೆ ಎದೆ ನೋವು ಕಾಣಿಸಿಕೊಂಡಿತು. ನನ್ನ ತಂದೆ ಇದೇ ರೋಗದಿಂದ ಸತ್ತರು ಎಂದು ಜಾನ್.ಪಿ.ಫಾಕ್ಸ್’ಗೆ ತಿಳಿಸಿದರು ಎಂದು ಮಹೇಂದ್ರನಾಥ ದತ್ತ ಬರೆದಿದ್ದಾರೆ. ೧೮೯೮ ರಲ್ಲಿ ಅಮರನಾಥ ಯಾತ್ರೆಗೆ ಹೋಗಿದ್ದಾಗ ಕಡಿದಾದ ಬೆಟ್ಟವನ್ನು ಹತ್ತಿ ಆಯಾಸ ಹೆಚ್ಚಿ ಲಘು ಹೃದಯಾಘಾತ ಆಗಿದೆಯೆಂದು ವೈದ್ಯರು ತಿಳಿಸಿದ್ದರು. ಹೃದಯಾಘಾತದ ಬಗ್ಗೆ ಸ್ವಾಮಿಗಳ ಹಲವು ಕಡೆ ತಿಳಿಸಿದ್ದಾರೆ. ನನ್ನ ಹೃದಯದಲ್ಲಿ ಎನೋ ತೊಂದರೆ ಇರುವಂತೆ ಭಾಸವಾಗುತ್ತದೆ (೨೬/೧೦/೧೮೯೮, ?/೧೧/೧೮೯೮ ರಾಜ ಅಜಿತ್ ಸಿಂಗ್) ,ಹೃದಯ ಸ್ವಲ್ಪ ತಗಾದೆ ಕೊಟ್ಟಾಗ ಮಾತ್ರ ನನಗೆ ನನ್ನ ವಯಸ್ಸು ಜ್ಞಾಪಕಕ್ಕೆ ಬರುವುದು ( ೩/೮/೧೮೯೯-ಜೊಸೆಫಿನ್ ಮೆಕ್ಲಿಯಾಡ್) , ಹೃದಯ ನರಗಳ ದೌರ್ಬಲ್ಯಕ್ಕೆ ಒಳಗಾಗಿದೆ. ಅದನ್ನು ಶಾಂತಗೊಳಿಸಬೇಕಾಗಿದೆ. ಉಲ್ಲಾಸಕರ ಸಹವಾಸ, ಪ್ರೀತಿಪೂರ್ವಕ ಮಿತ್ರರು , ಮತ್ತು ಪ್ರಶಾಂತ ವಾತಾವರಣ ಬೇಕು (೧೦/೧೧/೧೮೯೯ -ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) , ನನ್ನ ಹೃದಯ ಬಹಳ ದುರ್ಬಲವಾಗಿದೆ. ಸ್ಥಳ ಬದಲಾವಣೆಯಿಂದ ನನಗೇನೂ ಒಳ್ಳೆಯದಾಗುವುದೆಂದು ತೋರದು (೩೧/೧೨/೧೯೦೦ , ರಾಜ ಅಜಿತ್ ಸಿಂಗ್) ಎನ್ನುವ ಸ್ವಾಮಿಗಳ ಮಾತುಗಳಲ್ಲಿ ಹೃದಯದ ಬಗ್ಗೆ ಅನುಭವಿಸುತ್ತಿರುವ ವ್ಯಕ್ತಿಯ ನೋವು ತುಂಬಿದೆ. ಸ್ವಾಮಿಗಳು ತಮ್ಮ ಹಲವು ಪತ್ರಗಳಲ್ಲಿ ಮೂತ್ರ ಪಿಂಡ , ಯಕೃತ್ತು ಮತ್ತು ಪಿತ್ತಜನಕಾಂಗದ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ. ‘ಮೂತ್ರಪಿಂಡದ ಸಮಸ್ಯೆ-ಬಹುದಿನ ಬದುಕುವ ಭರವಸೆಯಿಲ್ಲ (೧೫/೧೧/೧೮೯೭ , ಇಂದುಮತಿ ಮಿತ್ರ) , ಮೂತ್ರ ಪಿಂಡದ ತೊಂದರೆಯ ಬಗ್ಗೆ ಹಿಂದೆ ಇದ್ದ ಭಯವೆಲ್ಲವೂ ಹೊರಟು ಹೋಗಿದೆ. ಚಿಂತೆಯೊಂದೇ ನನಗಿರುವ ಕಾಯಿಲೆ. ಅದನ್ನು ನಾನು ಕ್ಷಿಪ್ರವಾಗಿ ಜಯಿಸುತ್ತಿರುವೆನು (೧೯/೦೫/೧೯೦೦ -ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) , ಬಿಸಿಲು ಮತ್ತು ನಡೆದಾಟದಿಂದ ಯಕೃತ್ತು ತೊಂದರೆ ಕೊಡುತ್ತಿದೆ (೨೦/೫/೧೮೯೭-ಬ್ರಹ್ಮಾನಂದ).
ಸ್ವಾಮಿಗಳಿಗೆ ಯಾಕೆ , ಯಾವ ಕಾರಣದಿಂದ ತಮ್ಮ ಆರೋಗ್ಯ ಹೇಗೆ ಕೆಡುತ್ತಿದೆ ಎನ್ನುವುದೇ ಯಕ್ಷಪ್ರಶ್ನೆಯಾಗಿದ್ದಿತು. ಕೆಲವೊಮ್ಮೆ ಅವರಿಗೆ ಅಸ್ತಮಾ ತಮ್ಮ ಜೀವ ತೆಗೆಯುತ್ತಿದೆ ಎಂದೆನಿಸಿದರೆ , ಮತ್ತೊಮ್ಮೆ ಮೂತ್ರಪಿಂಡ , ಯಕೃತ್ತು , ಪಿತ್ತಜನಾಂಕಗಳಲ್ಲಿ ತೊಂದರೆ ಇದೆ ಎಂದು ಭಾಸವಾಗುತ್ತಿದ್ದಿತು. ಒಮ್ಮೊಮ್ಮೆ ಡಯಾಬಿಟಿಸ್ ತಮಗೆ ವಂಶಪಾರಂಪರ್ಯವಾಗಿ ಬಂದ ಶಾಪ ಎಂದು ಕೊರಗುತ್ತಿದ್ದರು. ಹಲವಾರು ಪತ್ರಗಳಲ್ಲಿ ನನಗೆ ನರಗಳ ಉದ್ವಿಗ್ನತೆ/ದೌರ್ಬಲ್ಯ ಹೊರತಾಗಿ ಮತ್ತಾವ ಕಾಯಿಲೆಯೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಸ್ವಾಮಿಗಳು ಯಾವುದನ್ನು ಕುರಿತಾಗಿ ನರಗಳ ದೌರ್ಬಲ್ಯ ಎನ್ನುತ್ತಾರೋ ಸ್ಪಷ್ಟವಿಲ್ಲ. ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಇನ್ನು ೬ ತಿಂಗಳಿನಲ್ಲಿ ಸಾಯುತ್ತೇನೆ. ನನ್ನ ದೇಹ ಅನೇಕ ತಿಂಗಳುಗಳಿಂದಲೂ ನಾನು ಖಂಡಿತವಾಗಿ ಬದುಕಿರುವೆನೆಂಬುದನ್ನು ನನಗೆ ಮನಗಾಣಿಸಬೇಕೆಂದು ಪ್ರಯತ್ನಿಸುತ್ತಿದೆ. ಈಗ ನನ್ನ ದೇಹದೊಡನೆ ನಾನು ಒಂದು ಬಗೆಯ ತಿರುಗಣಿಯಲ್ಲಿ ಬಿದ್ದಿದ್ದೇನೆ ಎಂದು ನಿರಾಶೆಯಲ್ಲಿ ಹೇಳುತ್ತಿದ್ದರು. ಇದಾದ ಕೆಲದಿನಗಳಲ್ಲಿಯೇ ಪ್ರಾಂತದ ಹವಾಗುಣಗಳಿಗೆ ಅನುಗುಣವಾಗಿ ರೋಗಗಳು ಬರುತ್ತವೆ…. ನಾನು ಸುಲಭವಾಗಿ ಸಾಯುವುದಿಲ್ಲ. ಈ ಜ್ವರಕ್ಕೆಲ್ಲ ಯಕೃತ್ತು ಕಾರಣ ಎಂದು ನನಗೆ ಗೊತ್ತಾಗಿದೆ ಎಂದು ಘೋಷಿಸುತ್ತಿದ್ದರು. ನಾನು ಮತ್ತೆ ಉತ್ತಮಗೊಳ್ಳುತ್ತಿದ್ದೇನೆ. ಅಜೀರ್ಣತೆ ಮತು ನರಗಳ ದೌರ್ಬಲ್ಯ ಇವೆರಡೇ ನನಗಿರುವ ತೊಂದರೆಗಳು. ಮೊದಲನೆಯದರ ಬಗ್ಗೆ ನಾನು ಎಚ್ಚರ ತೆಗೆದುಕೊಳ್ಳುತ್ತೇನೆ . ಎರಡನೆಯದು ನಿನ್ನನ್ನು ಭೇಟಿ ಮಾಡುವ ವೇಳೆಗೆ ವಾಸಿಯಾಗಿರುವುದು….. ನಾನೀಗ ಬರೆಯುವ ನಿರಾಶದಾಯಕ ಮಾತುಗಳನ್ನು ನಂಬದಿರು. ಏಕೆಂದರೆ ನಾನು ಕೆಲವು ವೇಳೆ ಎಂದಿನಂತಿರುವುದಿಲ್ಲ. ಅಷ್ಟು ದಿಗಿಲಾಗುವುದು ಎಂದು ೧೦/೫/೧೮೯೯ ಕ್ರಿಸ್ಟೈನಾ ಗ್ರೀನ್’ಸ್ಟೈಡಲ್’ಗೆ ತಿಳಿಸಿದ್ದರು.
‘ಬಾಬುರಾಮ್ ಮತ್ತು ಯೋಗೇನ್ ಏಕೆ ಅಷ್ಟು ನರಳುತ್ತಿರುವರು ? ಅದಕ್ಕೆ ನಿಷೇಧಾತ್ಮಕವಾದ ಆತ್ಮ ನಿಂದನೆಯೇ ಕಾರಣ. ಮಾನಸಿಕ ಶಕ್ತಿಯಿಂದ ಅವರು ರೋಗವನ್ನು ವಾಸಿಮಾಡಿಕೊಳ್ಳಲು ಹೇಳಿ. ಅದು ಒಂದು ಗಂಟೆಯಲ್ಲಿ ಮಾಯವಾಗುವುದು. ಆತ್ಮರಾಗಿರುವ ನಮಗೆ ಕಾಯಿಲೆ ಎಂದರೇನು? ಎನ್ನುವ ಸಲಹೆಯನ್ನು ೨೫/೯/೧೮೯೪ ರಂದು ಅಮೆರಿಕದಿಂದ ಬರೆದ ಪತ್ರದಲ್ಲಿ ಸ್ವಾಮಿಗಳು ನೀಡಿದ್ದರು, ಯಾವ ಹೊರ ಚಿಕಿತ್ಸೆಯೂ ಇಲ್ಲದೆ ಕೇವಲ ಮಾನಸಿಕ ಚಿಕಿತ್ಸೆಯಿಂದ ನನ್ನ ರೋಗಗಳಿಂದ ಮುಕ್ತನಾದೆ ಎಂದು ತಮ್ಮ ಶಿಷ್ಯೆ ಮಾರ್ಗರೆಟ್ ನೋಬಲ್’ಗೆ ತಿಳಿಸಿದ್ದರು. ( ೫/೫/೧೮೯೭) ಆತ್ಮನಿಗೆ ರೋಗವಿಲ್ಲ, ಮುಪ್ಪು, ಸಾವುಗಳಿಲ್ಲ .ಆತ ಯೋಗಾಗ್ನಿಯಿಂದ ತುಂಬಿದ ದೇಹ ಹೊಂದಿದ್ದಾನೆ ಎನ್ನುವ ಶ್ಲೋಕ ನೆನಪಾಗುತ್ತಿದೆ. ಕುಸ್ತಿ ಪಂದ್ಯ ಇಟ್ಟರೆ ಜಿ.ಜಿ ಮತ್ತು ನಿರಂಜನ ಇಬ್ಬರನ್ನು ಸೋಲಿಸುತ್ತೇನೆ ಎಂದು ೨೯/೫/೧೮೯೭ ರ ಪತ್ರದಲ್ಲಿ ಶಶಿಭೂಷಣ ಘೋಷ್’ಗೆ ಮನದಟ್ಟು ಮಾಡಲು ಯತ್ನಿಸಿದ್ದರು.
…. ಅಮೆರಿಕದಲ್ಲಿ ಪ್ರಖ್ಯಾತನಾದ ಶರೀರಶಾಸ್ತ್ರಜ್ಞನು ನನ್ನ ವಿಚಾರಪೂರ್ವಕವಾದ ಆಲೋಚನೆಗಳನ್ನು ಬಹಳ ಮೆಚ್ಚಿರುವೆನೆಂದು ಕೇಳಿದ್ದೇನೆ. ಅದೇ ಸಮಯದಲ್ಲಿ ಇಂಗ್ಲೆಂಡ್'ನಲ್ಲಿ ನನ್ನ ವಿಚಾರಗಳನ್ನು ಅಲ್ಲಗಳೆದವರೂ ಇರುವರು. ಒಳ್ಳೆಯದು ನನ್ನ ವಿಚಾರಪೂರ್ವಕ ಆಲೋಚನೆಗಳು ಬಹಳ ಧೈರ್ಯವಾದವು. ಅದರಲ್ಲಿ ಬಹಳ ಭಾಗ ಅನೇಕ ಕಾಲ ಅರ್ಥವಾಗದೆ ಉಳಿಯುವುದು. ಆದರೆ ಅಲ್ಲಿ ಕೆಲವು ಸೂಚನೆಗಳಿವೆ. ಅವನ್ನು ಶರೀರಶಾಸ್ತ್ರಜ್ಞರು ಬೇಗ ತೆಗೆದುಕೊಂಡರೆ ಒಳ್ಳೆಯದಾಗುವುದು ‘ ಎಂದು ಅಳಸಿಂಗ ಪೆರುಮಾಳ್’ಗೆ ಶರೀರ ವಿಜ್ಞಾನದ ರಹಸ್ಯ ತಿಳಿಸಿದ್ದರು. (?/೧೦/೧೮೯೬). ೨೯/೭/೧೮೯೭ ರ ಪತ್ರದಲ್ಲಿ ರಾಮಕೃಷ್ಣಾನಂದರಿಗೆ ‘ನಿನ್ನ ಆರೋಗ್ಯವನ್ನು ಸರಿಯಾಗಿ ಇಟ್ಟುಕೋ . ದೇಹವನ್ನು ಕುರಿತಾಗಿ ಬಹಳ ಆಲೋಚಿಸಿದರೂ ಆರೋಗ್ಯ ಕೆಡುವುದು ‘ ಎನ್ನುವ ರಹಸ್ಯವನ್ನು ತಿಳಿಸಿದ್ದರು. ಆದರೆ ತಾವು ಮಾತ್ರ ತಮ್ಮ ದೇಹ ಸ್ಥಿತಿಯ ಬಗ್ಗೆ ಸದಾ ಚಿಂತಿತರಾಗಿದ್ದು ಅದನ್ನು ಪತ್ರಗಳಲ್ಲಿ ಮೇಲಿಂದ ಮೇಲೆ ವ್ಯಕ್ತಪಡಿಸುತ್ತಿದ್ದರು. ಮಾನಸಿಕ ಬಲದಿಂದ ರೋಗಗಳನ್ನು ವಾಸಿ ಮಾಡಬಹುದು ಎನ್ನುವುದು ಸ್ವಾಮಿಗಳ ಬಲವಾದ ನಂಬಿಕೆಯಾಗಿದ್ದು ಅದನ್ನು ಬೇರೆಯವರಿಗೆ ತಿಳಿಸುತ್ತಿದ್ದರು , ಶರೀರಶಾಸ್ತ್ರಜ್ಞರು ತಮ್ಮ ಪರಿಕಲ್ಪನೆಗಳನ್ನು ಪರಿಗಣಿಸಿದರೆ ಒಳ್ಳೆಯದು ಎಂದು ಹೇಳುತ್ತಿದ್ದರು. ಆದರೆ ಅವರ ಹೇಳಿಕೆಗಳ ಮೇಲೆ ಅವರಿಗೇ ನಂಬಿಕೆ ಇರುತ್ತಿರಲಿಲ್ಲ. ಕಾಯಿಲೆ ಹೆಚ್ಚಿದಾಗ ವೈದ್ಯರ ಸಲಹೆಯ ಔಷಧಗಳನ್ನು ಸೇವಿಸಿ ಗುಣಮುಖರಾಗದಿದ್ದಾಗ ‘ಔಷಧಿ ಬ್ರಹ್ಮಜ್ಞಾನಿಯ ಮೇಲೆ ಪರಿಣಾಮ ಬೀರುತ್ತಿಲ್ಲ ಎಂದು ತಮ್ಮನ್ನು ತಾವೇ ಛೇಡಿಸಿಕೊಳ್ಳುತ್ತಿದ್ದರು .(೧/೮/೧೮೯೮)
ಅನುಭವಿಸುವುದು ದೇಹವೇ ಹೊರತು ಆತ್ಮವಲ್ಲ. ಈ ದೇಹ ಏನಾದರೇನಂತೆ ಎಂದು ಆರೋಗ್ಯವಂತರಾಗಿದ್ದಾಗ ದಿಟ್ಟತನದಲ್ಲಿ ನುಡಿದಿದ್ದ ಸ್ವಾಮಿಗಳು ತಮ್ಮ ಆರೋಗ್ಯ ಕೆಡುತ್ತಿರುವುದರಿಂದ ಹೆದರಿದ್ದರು. ತಮಗೆ ಅಜೀರ್ಣ ಹೊರತು ಬೇರೆಯೇನೂ ತೊಂದರೆಯಿಲ್ಲ ಎಂದು ಆಗಿಂದಾಗ್ಗೆ ಭಾಸವಾಗುತ್ತಿದ್ದಿತು. ಬ್ಯಾಟ್ಲ್’ಕ್ರೀಕ್ (ಕೆಲ್ಲೊಗ್ಸ್) ಆಹಾರ ಆರೋಗ್ಯಕ್ಕೆ ಒಳ್ಳೆಯದು ಮತ್ತು ಪೌಷ್ಟಿಕ ಎಂದು ಯಾರೋ ಹೇಳಿದ್ದರು. ಕೆಲ ತಿಂಗಳು ಸ್ವಾಮಿಗಳ ಮನಸ್ಸು ಪೂರಾ ಈ ಆಹಾರವನ್ನು ತಿನ್ನುವ ಬಯಕೆಯಲ್ಲಿದ್ದಿತು. ‘ನಾನು ಬ್ಯಾಟ್ಸ್ ಕ್ರೀಕ್ ಆಹಾರವನ್ನು ತಿಂದು ನೋಡುತ್ತೇನೆ. ಅದು ವಿಫಲವಾದರೆ ಬೇಗನೆ ನಿರ್ಗಮಿಸುತ್ತೇನೆ (೩೦/೧೦/೧೮೯೯) ‘ನೀನು ಬ್ಯಾಟ್ಲ್’ಕ್ರೀಕ್ ಆಹಾರದ ಎಲ್ಲಾ ಸೂಚನೆಗಳನ್ನು ತೆಗೆದುಕೊಂಡು ಬಂದರೆ ಅದನ್ನು ತಯಾರಿಸಲು ನಾನು ಇಲ್ಲಿ ವ್ಯವಸ್ಥೆ ಮಾಡುತ್ತೇನೆ. ಇದು ೧೦/೧೧/೧೮೯೯ ರಂದು ಕ್ರಿಸ್ಟೈನಾಗೆ ಬರೆದ ಪತ್ರಗಳ ಮುಖ್ಯಾಂಶ. ‘ಬ್ಯಾಟ್ಲ್ ಕ್ರೀಕ್ ಆಹಾರ ಸೇವಿಸಬೇಕೆಂದು ನನಗೆ ಇಚ್ಛೆಯಾಗಿದೆ. ಅದನ್ನು ತಯಾರಿಸುವ ಹೋಟೆಲ್ ಒಂದು ಇಲ್ಲೇ ಇದೆ. ಅದನ್ನು ಈಗಲೇ ಪ್ರಯತ್ನಿಸಿವುದು ಒಳ್ಳೆಯದು ಎನ್ನುವಿರಾ? ಎಂದು ಸಾರಾ ಬುಲ್ ಸಲಹೆ ಕೇಳಿದ್ದರು.(೧೨/೧೧/೧೮೯೯)
ಇವೆಲ್ಲಕ್ಕಿಂತ ಸೋಜಿಗದ ವಿಚಾರವೆಂದರೆ ಸ್ವಾಮಿಗಳು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಭಾರಿ ಏರುಪೇರು ವ್ಯಕ್ತಿತ್ವವನ್ನು ಹೊಂದಿದ್ದರು. ಸಂನ್ಯಾಸಿಯಾದ ಹೊಸತರಲ್ಲಿ ‘ಹಲವು ಯೋಚನೆಗಳಿಂದ ಜರ್ಝರಿತನಾಗಿದ್ದೇನೆ. ಆರೇಳು ವರ್ಷಗಳಿಂದ ಜೀವನ ಮೂರಾಬಟ್ಟೆಯಾಗಿದೆ…. ಮನಸ್ಸಿನಲ್ಲಿ ತುಮುಲಗಳೆದ್ದಿವೆ. ಎಂದು ತಮ್ಮ ಮಾನಸಿಕ ತಳಮಳವನ್ನು ತೋಡಿಕೊಂಡಿದ್ದರು. (೪/೨/೧೮೮೯) ’ವೇದಾಂತ ಮತ್ತು ಯೋಗದಿಂದ ನಿನಗೆ ಬಹಳ ಸಹಾಯವಾಯಿತೆಂದು ತಿಳಿದು ನನಗೆ ಆನಂದವಾಯಿತು. ದೌರ್ಭಾಗ್ಯದಿಂದ ನಾನು ಕೆಲವು ವೇಳೆ ಸರ್ಕಸ್ಸಿನ ಕೋಡಂಗಿಯಂತೆ ಇತರರನ್ನು ನಗಿಸಿ ನಾನು ಮಾತ್ರ ವ್ಯಥೆ ಮಾಡುತ್ತೇನೆ. ..ನಿನ್ನ ಮಾನಸಿಕ ಸ್ಥಿತಿ –ಶಾಂತಿ, ಸಮಾಧಾನ ,ಹಗುರವಾದ ಆದರೆ ಆಳವಾದ ಮತ್ತು ಸ್ವತಂತ್ರವಾದ ಮನಸ್ಸು-ಇದನ್ನು ನೋಡಿ ನಾನು ತುಂಬಾ ಅಸೂಯೆ ಪಡುತ್ತೇನೆ. ಮೇರಿ ನೀನಾಗಲೇ ಮುಕ್ತಳಾಗಿರುವೆ… ನಾನು ಗಂಡಿಗಿಂತ ಹೆಣ್ಣಾಗಿರುವೆ. ನೀನು ಹೆಣ್ಣಿಗಿಂತ ಹೆಚ್ಚಾಗಿ ಗಂಡಾಗಿರುವೆ. …ಯಾರಿಗೂ ಏನೊಂದು ಒಳಿತನ್ನು ಮಾಡಲಾಗದಿದ್ದರೂ ನಾನು ಯಾವಾಗಲೂ ಇನ್ನೊಬ್ಬರ ನೋವನ್ನು ನನ್ನ ಮೆಲೆ ಕಾರಣವಿಲ್ಲದೆ ಎಳೆದುಕೊಳ್ಳುತ್ತೇನೆ…..ಇದರಲ್ಲಿ ಏನಾದರು ಅಧ್ಯಾತ್ಮಿಕತೆ ಇದೆಯೆಂದು ಭಾವಿಸುವೆಯೇನು ? ಅಸಂಬದ್ಧ ! ಇದೆಲ್ಲ ಪ್ರಾಪಂಚಿಕತೆಯಿಂದ ಕೂಡಿದ ದುರ್ಬಲ ಮನಸ್ಸಿನ ಬಂಧನ-ಕೇವಲ ಅದೇ ಇದು. ಓ! ಈ ಮನೋವಿಕಾರಗಳಿಂದ ಕೂಡಿದ ಶರೀರದ ಗುಲಾಮಗಿರಿಯನ್ನು ಬುಡದಲ್ಲಿ ಕಡಿಯುವಂತ್ತಾಗಿದ್ದರೆ ! …..ನೀನು ಎಂದೆಂದಿಗೂ ಶಾರೀರಿಕ ಪ್ರಲೋಭನೆಗಳಿಗೆ ಒಳಗಾಗದಿರಲಿ ಎನ್ನುವುದೇ ನನ್ನ ಪ್ರಾರ್ಥನೆ…’ಎಂದು ಮೇರಿ ಹಾಲ್ ಬಾಯಿಸ್ಟರ್ ಮುಂದೆ ಹಲುಬಿದ್ದರು. (೨೫/೭/೧೮೯೭)
ಈ ಹಳಹಳಿಕೆಯ ಹಿನ್ನೆಲೆಯನ್ನು ಸ್ವಲ್ಪ ನೋಡಬಹುದು. ಸ್ವಾಮಿಗಳು ರಾಜಯೋಗ ತರಗತಿಗಳಲ್ಲಿ ಉಸಿರಾಟ ಪ್ರಾಣವಲ್ಲ. ಪ್ರಾಣ ಉಸಿರಾಟಕ್ಕೆ ಕಾರಣ. ದೇಹದಲ್ಲಿ ಪ್ರಾಣವನ್ನು ತುಂಬಿಸಬೇಕು. ಪ್ರಾಣವನ್ನು ಎಚ್ಚರಿಸಿ ದೇಹದ ಯಾವುದೇ ಅಂಗವನ್ನು ನಿಯಂತ್ರಿಸಲು ಮತ್ತು ರೋಗ ನಿವಾರಿಸಲು ಸಾಧ್ಯ ಎಂದು ಹೇಳಿದ್ದರು. ರಾಜಯೋಗಕ್ಕೆ ಬರೆದ ಭಾಷ್ಯದಲ್ಲಿ ಇದನ್ನು ವಿಸ್ತರಿಸಿದ್ದರು. ಆದರೆ ತಮ್ಮ ಯಾವ ರೋಗಗಳನ್ನೂ ತಾವೇ ಪ್ರತಿಪಾದಿಸುತ್ತಿದ್ದ ಯೋಗ , ಪ್ರಾಣ ಮುಂತಾದವುಗಳಿಂದ ವಾಸಿ ಮಾಡಿಕೊಳ್ಳಲು ಸಾದ್ಯವಾಗಿರಲಿಲ್ಲ. ಶಶಿಭೂಷಣ ಘೋಷ್ ಕಳಿಸಿದ ಔಷಧಿಗಳು , ಪಥ್ಯಗಳು ಸ್ವಾಮಿಗಳ ರೋಗ ಚಿಕಿತ್ಸೆಯ ದಾರಿಗಳಾಗಿದ್ದವು. ಯೋಗದಿಂದ ಇತರರಿಗೆ ಒಳ್ಳೆಯದಾಗುತ್ತದೆ ಅದರೆ ಅದು ನನ್ನ ಮೇಲೆ ಮಾತ್ರ ಪರಿಣಾಮ ಬೀರುತ್ತಿಲ್ಲ ಎನ್ನುವ ಬೇಗುದಿಯಲ್ಲಿ ತಾನೇ ನಗಲಾಗದ ಆದರೆ ಇತರರನ್ನು ನಗಿಸುವ ಸರ್ಕಸ್’ನ ಜೋಕರ್’ಗೆ ತಮ್ಮನ್ನು ಹೋಲಿಸಿಕೊಂಡಿದ್ದರು. ತಮ್ಮ ಆರೋಗ್ಯದ ಬಗ್ಗೆ ಭಯ ಬಿದ್ದು ಆಪ್ತರಿಗೆ ಒಂದರ ಹಿಂದೆ ಒಂದರಂತೆ ಪತ್ರಗಳನ್ನು ಬರೆಯುತ್ತಿದ್ದರೂ ಸ್ವಾಮಿಗಳು ಇತರರಿಗೆ ಹೇಗೆ ಆರೋಗ್ಯವಾಗಿರಬೇಕೆಂದು ತಿಳಿಸಲು ಹಿಂಜರಿಯುತ್ತಿರಲಿಲ್ಲ. ಸೆಪ್ಟೆಂಬರ್ ೧೯೦೦ ರಲ್ಲಿ ತುರೀಯಾನಂದರಿಗೆ ‘ಸ್ಥಿರವಾಗಿ ನಿಂತು ಮನಕ್ಲೇಶಗಳಿಂದ ಬಿಡುಗಡೆ ಹೊಂದು. ಎಲ್ಲವೂ ಸರಿಹೋಗುವುದು. ನಾದ ಮುಂತಾದುವುಗಳನ್ನು ಕೇಳುವುದರಿಂದ ಯಾರಿಗಾದರೂ ತೊಂದರೆಯಾಗುವಂತಿದ್ದರೆ ಕೊಂಚ ಕಾಲ ಧ್ಯಾನ ಮಾಡುವುದನ್ನು ನಿಲ್ಲಿಸಿ ಮೀನು ಮಾಂಸದ ಊಟವನ್ನು ಮಾಡಿದರೆ ಅದು ನಿವಾರಣೆಯಾಗುವುವುದು’ ಎನ್ನುವ ಅದ್ಭುತ ಪರಿಹಾರ ನೀಡಿದ್ದರು.
ಸ್ವಾಮಿಗಳ ಈ ಮಾನಸಿಕ ತುಮುಲಗಳು ಜೀವನದುದ್ದಕ್ಕೂ ಅವರ ನಿದ್ದೆಯನು ಕಸಿದಿದ್ದವು ‘ನನ್ನ ಜೀವಮಾನದಲ್ಲಿ ಒಂದು ದಿನವಾದರೂ ನಾನು ಹಾಸಿಗೆಗೆ ಹೋದ ಕೂಡಲೇ ನಿದ್ರಿಸಲಾಗುತ್ತಿರಲಿಲ್ಲ. ಕಡೆಯ ಪಕ್ಷ ಎರಡು ಗಂಟೆಯಾದರು ಹೊರಳಾಡ ಬೇಕಾಗುತ್ತಿದ್ದಿತು. ಮದ್ರಾಸಿನಿಂದ ಡಾರ್ಜಿಲಿಂಗ್’ಗೆ ಬಂದ ಮೇಲೆ ದಿಂಬಿನ ಮೇಲೆ ತಲೆ ಇಟ್ಟ ತಕ್ಷಣ ನಿದ್ದೆ ಬರುತ್ತಿತ್ತು. ಈಗ ಅದು ಹೊರಟುಹೋಗಿದೆ. ಹಿಂದಿನಂತೆ ಈಗ ನನ್ನದು ಹೊರಳಾಡುವ ಸ್ಥಿತಿ…..’ ಶಶಿಭೂಷಣ ಘೋಷ್’ ಮುಂದೆ ತೋಡಿಕೊಂಡಿದ್ದ ರಹಸ್ಯವಿದು. (೨೯/೫/೧೮೯೭) ನನ್ನನ್ನು ಬಹಳ ಉದ್ವೇಗಪರನೆನ್ನುವರು. ನಾನು ತುಂಬಾ ಮನಸ್ಸಿಗೆ ಹಚ್ಚಿಕೊಳ್ಳುವೆನು (೬/೭/೧೯೦೧) , ನಾನು ಕೆಲವು ವೇಳೆ ಸಂತೋಷವಾಗಿದ್ದರೆ ಇನ್ನು ಕೆಲವು ವೇಳೆ ದುಗುಡದಿಂದರುವೆನು… ಇರಲಿ. ಅವೆಲ್ಲ ದೇಹಕ್ಕೆ ಸಂಬಂಧಿಸಿದವು. (೨೭/೮/೧೯೦೧) ಎಂದು ಸಮಾಧಾನ ಮಾಡಿಕೊಂಡಿದ್ದರು. ಹಲವು ಪತ್ರಗಳಲ್ಲಿ ತಮ್ಮ ಮಾನಸಿಕ ಸ್ಥಿತಿ ಸರಿಯಿಲ್ಲವೆಂದು ಅಮೆರಿಕನ್ ಗೆಳೆಯರಲ್ಲಿ ತೋಡಿಕೊಂಡಿದ್ದರು. ನಿದ್ರಾಹೀನತೆ ಸ್ವಾಮಿಗಳ ಬೆನ್ನೇರಿದ್ದ ಇನ್ನೊಂದು ಭೇತಾಳವಾಗಿದ್ದಿತು. ನಿದ್ರೆ ಬರದೇ ಇರುವುದಕ್ಕೆ ಕ್ರಿಶ್ಚಿಯನ್ ಸೈನ್ಸ್ ಚಿಕಿತ್ಸೆಯನ್ನು ಪ್ರಯೋಗಮಾಡಿದೆ. ಅದು ಫಲ ಕೊಟ್ಟಿತು (೧೩/೯/೧೮೯೪-ಮೇರಿ ಹೇಲ್) , ನಾನು ನ್ಯೂಯಾರ್ಕ್ ನಿಂದ ಬಂದಾಗಿನಿಂದ ಒಂದು ರಾತ್ರಿಯೂ ಸೊಂಪಾಗಿ ನಿದ್ರಿಸಿಲ್ಲ ( ೬/೨/೧೮೯೬-ಸಾರಾ ಬುಲ್) , ಈ ಜಗತ್ತಿನ ಹೋರಾಟ ಕದನಗಳಿಗೆ ನಾನು ತಕ್ಕವನಲ್ಲ. ನಾನು ಸ್ವಪ್ನ ಜೀವಿ. ವಿಶ್ರಾಂತಿಪ್ರಿಯ. ನಾನೊಬ್ಬ ಹುಟ್ಟು ಭಾವ ಜೀವಿ. ಕನಸಿನ ಜಗತ್ತಿನಲ್ಲಿ ಮಾತ್ರ ಜೀವಿಸಬಲ್ಲೆ. ವಾಸ್ತವಿಕತೆಯ ಸ್ಪರ್ಶ ಮಾತ್ರದಿಂದ ನನ್ನ ಸ್ವಪ್ನ ದರ್ಶನಗಳೆಲ್ಲ ಭಂಗವಾಗಿ ನನ್ನನ್ನು ವ್ಯಥಿತನನ್ನಾಗಿ ಮಾಡುವುವು ( ೧೦/೨/೧೮೯೬- ಮೇರಿ ಹೇಲ್) , ಈ ನ್ಯೂಯಾರ್ಕ್ ನಿದ್ರೆಗೆ ಮಾತ್ರ ಕೆಟ್ಟ ಸ್ಥಳ , ನನ್ನನ್ನು ಬಹಳ ಉದ್ವೇಗಪರನೆನ್ನುವರು-ನಾನು ತುಂಬಾ ಮನಸ್ಸಿಗೆ ಹಚ್ಚಿಕೊಳ್ಳುವೆನು ನೀನೂ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ (೧೯/೫/೧೯೦೦ ಮತ್ತು ೬/೭/೧೯೦೨ ಕ್ರಿಸ್ಟೈನಾ ಗ್ರೀನ್’ಸ್ಟೈಡಲ್) ಕಳೆದ ಎರ್ಡು ವರ್ಷಗಳಿಂದ ನನ್ನ ಪಾಲಿಗೆ ಉತ್ತಮವಾಗಿರಲಿಲ್ಲ. ನಾನೊಂದು ಮನೋನರಕದಲ್ಲಿ ಬದುಕುತ್ತಿರುವೆನು. ಪರಮಶಾಂತಿಯ ಕ್ಷಣವೊಂದನ್ನೂ ನಾನು ಅರಿಯೆ. ಯಾವಾಗಲೂ ನಾನು ಮಾನಸಿಕ ಪ್ರಚಂಡ ವೇದನೆಯಲ್ಲಿರುವೆ.(೨/೩/೧೯೦೦- ಮೇರಿ ಹೇಲ್) , ನಾನು ಅಧಮಾಧಮನು . ಗುರುಗಳ ಪಾದ ಧೂಳಿಯನ್ನು ನನ್ನ ತಲೆಯ ಮೇಲೆ ಹಾಕು. ನಾನು ಇನ್ನು ಮೇಲೆ ಕೆಲವು ಜಪ , ಧ್ಯಾನಗಳನ್ನು ಮಾಡುವೆ. ಇನ್ನೇನನ್ನೂ ಮಾಡುವುದಿಲ್ಲ. ಉಳಿದದ್ದು ಜಗನ್ಮಾತೆಗೆ ಗೊತ್ತು (೧೨/೩/೧೯೦೦-ಬ್ರಹ್ಮಾನಂದ) ,ನನ್ನ ಮನಸ್ಸು ಶಾಂತವಾಗಿದೆ. ಸ್ವಲ್ಪ ಕಾಲದಿಂದ ಹಾಗೆಯೇ ಇದೆ. ನಾನು ನನ್ನ ವ್ಯಾಕುಲತೆಗಳನ್ನೆಲ್ಲ ಭಗವಂತನಿಗೆ ಅರ್ಪಣೆ ಮಾಡಲು ಯತ್ನಿಸುತ್ತಿರುವೆ ಎಂದು ತಿಳಿಸಿದ್ದಾರೆ. ( ೧೨/೩/೧೯೦೦-ಮೇರಿ ಹೇಲ್)
ಹೀಗೆ ಪರಿವ್ರಾಜಕ ಜೀವನದ ಮೊದಲನೆಯ ವರ್ಷದಿಂದ ಪ್ರಾರಂಭವಾಗುವ ಸ್ವಾಮಿಗಳ ಆರೋಗ್ಯ ಸಮಸ್ಯೆ ಕೊನೆಯ ನಾಲ್ಕು ವರ್ಷಗಳಲ್ಲಿ ನೋವು , ಹತಾಶೆಗಳಿಗಳಿಗೆ ಬದಲಾಗಿದೆ. ಹಾಗಾಗಿ ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ತಮ್ಮ ಆಪ್ತರು ಸೂಚಿಸಿದ -ಮ್ಯಾಗ್ನೆಟಿಕ್ ಚಿಕಿತ್ಸೆ , ನೀವಿಸಿಕೊಳ್ಳುವುದು ಸೇರಿದಂತೆ- ಯಾವುದೇ ಬಗೆಯ ಚಿಕಿತ್ಸೆಗೆ ಒಳಗಾಗಲು ಸಿದ್ಧರಾದರು. ಕೆಲವೊಮ್ಮೆ ಚಿಕಿತ್ಸೆಯಿಂದ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎನಿಸಿದಾಗ ಉಲ್ಲಸಿತರಾಗುತ್ತಿದ್ದರು , ಮತ್ತೆ ಕಾಯಿಲೆ ಕಾಣಿಸಿಕೊಂಡಾಗ ನಿರಾಶೆಯಿಂದ ತಾತ್ತ್ವಿಕರಾಗಲು ಯತ್ನಿಸುತ್ತಿದ್ದರು. ಸಾವು ತಮ್ಮನ್ನು ಸಮೀಪಿಸಿದೆ ಎಂದು ಭಾಸವಾದಾಗ ಆಟ ಆಡಿ ದಣಿದ ಮಗು ತಾಯಿಯನ್ನು ಕರೆಯುವಂತೆ ಕಾಳಿಯ ಮೊರೆ ಹೋಗುತ್ತಿದ್ದರು. ನಾನು ಮಾಡುವ ಯಾವ ಕೆಲಸವೂ ಉಳಿದಿಲ್ಲ ಎಂದು ಸಾರಿದ ಮರುದಿನವೇ ಉಪನ್ಯಾಸಗಳನ್ನು ನೀಡಲು , ತರಗತಿಗಳನ್ನು ನಡೆಸಿ ಹಣ ಸಂಗ್ರಹಿಸಲು ಮುಂದಾಗುತಿದ್ದರು. ಸ್ವಾಮಿಗಳು ಕಾಯಿಲೆ ಬೀಳುತ್ತಿರುವುದು ಕೆಲ ಅಮೆರಿಕನ್ನರಿಗೆ ಸರಿ ಕಂಡಿರಲಿಲ್ಲ. ‘ನಾನು ಸಂನ್ಯಾಸಿಯಾಗಿದ್ದೂ ಕಾಯಿಲೆ ಬಿದ್ದಿರುವುದು ಶ್ರೀಮತಿ ಜಾನ್'ಸನ್'ಗೆ ಒಗ್ಗದ ವಿಚಾರವಾಗಿದೆ. ನಾನು ಧೂಮಪಾನ ಮಾಡುವುದನ್ನು ಆಕೆ ಪಾಪವೆಂದು ಪರಿಗಣಿಸಿದ್ದಾಳೆ ಎಂದು ಸ್ವಾಮಿಗಳು ತಿಳಿಸಿದ್ದರು. (೪/೮/೧೮೯೯). ಸ್ವಾಮಿಗಳನ್ನು ಯಾವುದೇ ಪ್ರಶ್ನೆಯಿಲ್ಲದೆ ಒಪ್ಪಿಕೊಳ್ಳುತ್ತಿದ್ದ ಸಾರಾ ಬುಲ್ , ಜೊಸೆಫಿನ್ ಮೆಕ್ಲಿಯಾಡ್ , ಕ್ರಿಸ್ಟೈನಾ ಗ್ರೀನ್’ಸ್ಟೈಡಲ್ , ಮಾರ್ಗರೆಟ್ ನೋಬಲ್ ಮುಂತಾದವರಿಗೆ ಮಾತ್ರ ರಾಜಯೋಗದಲ್ಲಿ ಪ್ರಾಣದ ಮೂಲಕ ಉಸಿರಾಟವನ್ನು ನಿಯಂತ್ರಿಸಿ ದೇಹದ ಯಾವ ಭಾಗವನ್ನೇ ಬೇಕಾದರೂ ವಶಕ್ಕೆ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದ ತಮ್ಮ ಯೋಗ ತರಗತಿಗಳಲ್ಲಿ ಅದನ್ನೇ ಬೋಧಿಸುತ್ತಿದ್ದ ಸ್ವಾಮಿಗಳಿಗೆ ರೋಗಗಳನ್ನು ನಿಯಂತ್ರಿಸಿಕೊಳ್ಳುವ ಶಕ್ತಿಯೇಕಿಲ್ಲ ಎನ್ನುವ ಅನುಮಾನ ಬಂದಿರಲಿಲ್ಲ. ೧೯೦೧ ಅಕ್ಟೋಬರ್’ನಲ್ಲಿ ಸ್ವಾಮಿಗಳು ತೀವ್ರ ಅನಾರೋಗ್ಯರಾಗಿದ್ದು ಹಾಸಿಗೆ ಹಿಡಿದಿದ್ದರು. ಅವರಿಗೆ ಖ್ಯಾತ ವೈದ್ಯ ಸೌಂಡರ್ಸ್ ಚಿಕಿತ್ಸೆ ನೀಡುತ್ತಿದ್ದರು. ಇದೇ ಸಮಯದಲ್ಲಿ ನಿರ್ಭಯಾನಂದರು ತೀವ್ರ ಜ್ವರಕ್ಕೆ ತುತ್ತಾಗಿ ಮೂರ್ಛಾ ಸ್ಥಿತಿ ತಲುಪಿದ್ದರು. ಆಗ ಸ್ವಾಮಿಗಳು ರಾಮಕೃಷ್ಣರ ಮಂದಿರಕ್ಕೆ ಹೋಗಿ ಪೂಜೆ ಮಾಡಿ , ರಾಮಕೃಷ್ಣರ ಅಸ್ತಿಗಳಿದ್ದ ಕರಂಡಕವನ್ನು ತೊಳೆದು ಅದರ ನೀರನ್ನು ತಂದು ಕುಡಿಸಿದಾಗ ಜ್ವರ ಮಾಯವಾಯಿತು. ಆಗ ಸ್ವಾಮಿಗಳು ‘ ರಾಮಕೃಷ್ಣರ ಲೀಲೆ ನೋಡಿರಿ’ ಎಂದು ಉದ್ಗರಿಸಿದರು ಎನ್ನುವ ಒಂದು ಸೋಜಿಗದ ಕಥೆಯನ್ನು ‘ದಿ ಲೈಫ್-೧೯೬೦’ ನೀಡಿದೆ. ಆದರೆ ಇದೇ ರೀತಿ ಸ್ವಾಮಿಗಳು ತಮ್ಮ ಕಾಯಿಲೆಗಳನ್ನು ಏಕೆ ವಾಸಿ ಮಾಡಿಕೊಳ್ಳಲಿಲ್ಲ ಎನ್ನುವ ಪ್ರಶ್ನೆ ಅಸ್ತಿತ್ವದಲ್ಲಿಯೇ ಇಲ್ಲ ಎನ್ನುವ ಧೋರಣೆ ತಳೆದಿದೆ.
ಹಲವು ಮಾರಣಾಂತಿಕ ರೋಗಗಳಿಂದ ನರಳುತ್ತಿದ್ದ ಸ್ವಾಮಿಗಳು ಜುಲೈ ೪, ೧೯೦೨ ರಂದು ರಾತ್ರಿ ೯ ಗಂಟೆ ದಾಟಿ ಹತ್ತು ನಿಮಿಷಗಳಾದಾಗ ತೀರಿಕೊಂಡರು. ಆ ಸನ್ನಿವೇಶದ ಸುದೀರ್ಘ ಚಿತ್ರಣ ಶಾರದಾನಂದ ೨೪/೭/೧೯೦೨ ರಂದು ಸ್ಯಾನ್ ‘ಫ್ರಾನ್ಸಿಸ್ಕೊ ವೇದಾಂತ ಸೊಸೈಟಿಯ ಅಧ್ಯಕ್ಷ ಡಾ. ಲೋಗನ್’ಗೆ ಬರೆದ ಪತ್ರ , ಪ್ರಬುದ್ಧ ಭಾರತದಲ್ಲಿ ಗುರುಭಾಯಿಗಳು ಬರೆದಿರುವ ಲೇಖನಗಳಿಂದ ದಕ್ಕುತ್ತದೆ. ಇವುಗಳನ್ನು ‘ದಿ ಲೈಪ್-೧೯೬೦’ ದಾಖಲಿಸಿದೆ. ಅದರ ಆಯ್ದ ಭಾಗ ಹೀಗಿದೆ ‘ಸಹಾಯಕ ಬ್ರಹ್ಮಚಾರಿ ಬ್ರಜೇಂದ್ರನಿಗೆ ತಾವಾಗಿಯೇ ಕರೆದ ಹೊರತು ತಮಗೆ ಯಾರೂ ಅಡಚಣೆ ಉಂಟುಮಾಡಬಾರದೆಂದು ಸ್ವಾಮಿಗಳು ತಿಳಿಸಿ ಜಪಮಾಲೆಯನ್ನು ಕೈಯಲ್ಲಿ ಹಿಡಿದು , ಗಂಗಾನದಿಯತ್ತ ಮುಖ ಮಾಡಿ ಧ್ಯಾನಕ್ಕೆ ಕುಳಿತರು. ಒಂದು ಗಂಟೆಯ ನಂತರ ಎಲ್ಲ ಕಿಟಕಿ , ಬಾಗಿಲುಗಳನ್ನು ತೆಗೆದು ತಲೆಗೆ ಗಾಳಿ ಬೀಸುವಂತೆ ಬ್ರಜೇಂದ್ರನಿಗೆ ಹೇಳಿದರು. ನಿಧಾನವಾಗಿ ಹಾಸಿಗೆಯ ಮೇಲೆ ಅಡ್ಡಾಗಿ ತಲೆಯನ್ನು ದಿಂಬಿನ ಮೇಲೆ ಒರಗಿಸಿಕೊಂಡು ಪಾದಗಳನ್ನು ತಿಕ್ಕಲು ತಿಳಿಸಿದರು. ಹೀಗೆ ಒಂದು ಗಂಟೆ ಕಳೆದು ರಾತ್ರಿ ೯ ಗಂಟೆಯ ಸಮಯವಾಯಿತು. ತಲೆಯನ್ನು ಬಲಕ್ಕೆ ತಿರುಗಿಸಿ ಬಾಲಕನಂತೆ ಆತ್ತರು. ಕೈಗಳು ಅಲುಗಿದವು. ಒಮ್ಮೆ ನಿಟ್ಟುಸಿರು ಬಿಟ್ಟರು. ಒಂದು ನಿಮಿಷ ಮೌನ ಕವಿಯಿತು. ಮತ್ತೊಂದು ಸಲ ಆಳ ನಿಟ್ಟುಸಿರು ಬಿಟ್ಟರು. ಕಣ್ಣುಗಳು ಹುಬ್ಬಿನ ಕೇಂದ್ರದಲ್ಲಿ ಸ್ಥಿರಗೊಂಡವು. ಮುಖದಲ್ಲಿ ಅನಿರ್ವಚನೀಯ ಕಳೆ ಬೆಳಗಿತು-ಅಲ್ಲಿಗೆ ಎಲ್ಲವೂ ಕೊನೆಗೊಂಡಿತು …ಮಹಾಯೋಗಿಗಳಾಗಿದ್ದ ಸ್ವಾಮಿಗಳು ಅದಕ್ಕೆ ತಕ್ಕಂತೆ ೩೯ ವರ್ಷ ೫ ತಿಂಗಳು ೨೪ ದಿನಗಳನ್ನು ಈ ಜಗತ್ತಿನಲ್ಲಿ ಕಳೆದು ಯೌಗಿಕ ಮಾರ್ಗದಲ್ಲಿ ಉಟ್ಟ ಬಟ್ಟೆಯನ್ನು ಕಳಚುವಂತೆ ದೇಹವನ್ನು ಕಳಚಿ ಮಹಾ ಸಮಾಧಿಗೇರಿದರು…. ಎಂದಿದೆ.
ಉದ್ಭೋಧನ ಪತ್ರಿಕೆಯಲ್ಲಿ ಗುರುಭಾಯಿ ಸಾವಿನ ಸನ್ನಿವೇಶವನ್ನು ವಿವರಿಸುತ್ತ ಸಾವಿನ ಖಚಿತ ಕಾರಣ ಯಾವ ವೈದ್ಯರಿಗೂ ತಿಳಿಯಲಿಲ್ಲ, ಸ್ವಾಮಿಗಳು ದೇಹ ತ್ಯಜಿಸಿದಾಗ ಅವರ ಕಣ್ಣುಗಳು ರಕ್ತರಂಜಿತವಾಗಿದ್ದವು. ಬಾಯಿ, ಕಿವಿ , ಮೂಗುಗಳಿಂದ ರಕ್ತ ಒಸರಿರಲಿಲ್ಲ. ಸ್ವಾಮಿಗಳು ಧ್ಯಾನದಲ್ಲಿರುವಾಗ ಅವರ ಪ್ರಾಣ ಸಹಸ್ರಾರಕ್ಕೇರಿ ಬ್ರಹ್ಮರಂಧ್ರದ ಮೂಲಕ ಹೊರಹೋಗಿದ್ದಿತು. ಆದ್ದರಿಂದ ಅವರ ಕಣ್ಣುಗಳಲ್ಲಿ ರಕ್ತ ಒಸರಿ ಕೆಂಪಾಗಿದ್ದವು ಎಂದು ಬರೆದಿದ್ದಾರೆ. ಒಂದು ಸಾವಿಗೆ ಸಹಜವಾದ ವಿವರಣೆ ಇರುವಾಗಲೂ ಅಲೌಕಿಕ ಕಾರಣಗಳಿಗೆ ಮೊರೆ ಹೋಗುವುದು ಪುರಾಣದ ಒಂದು ತಂತ್ರ. ಬರೆದ ನೂರಾರು ಪತ್ರಗಳಲ್ಲಿ ಸ್ವಾಮಿಗಳು ತಾವಾಗಿಯೇ ವ್ಯಕ್ತಪಡಿಸಿರುವುದನ್ನು ಗಮನಿಸಿದರೆ ಜೀವಘಾತುಕ ಕಾಯಿಲೆಗಳೊಂದಿಗೆ ಹೆಣಗಿ ಅವರು ದೀರ್ಘ ಕಾಲ ಬದುಕಿರುವುದು ಸಾಧ್ಯವೇ ಇರಲಿಲ್ಲ. ಮಧುಮೇಹದಿಂದ ೧೮೯೭ ರಲ್ಲಿಯೇ ಸ್ವಾಮಿಗಳ ಕಣ್ಣುಗಳು ದುರ್ಬಲವಾಗಿದ್ದವು. ೧೯೦೧, ನವೆಂಬರ್ ವೇಳೆಗೆ ಮಂದಗೊಂಡಿದ್ದು ಕಣ್ಣಿನ ನಾಳಗಳು ಒಡೆದು ಕೆಂಪಾಗಿ ಬಲಗಣ್ಣು ಕಾಣದೆ ಬಹುತೇಕ ಒಂಟಿಗಣ್ಣಿಗರಾಗಿದ್ದರು. ಸ್ವಾಮಿಗಳ ಸಾವು ಅವರ ತಂದೆ ವಿಶ್ವನಾಥದತ್ತನ ಸಾವು ಒಂದೇ ರೀತಿಯಲ್ಲಿ ಆಗಿದ್ದವೆಂದು ಭೂಪೇಂದ್ರನಾಥ ದತ್ತ ಹೇಳಿರುವುದು ಸತ್ಯ. ಸ್ವಾಮಿಗಳು ಹೃದಯಾಘಾತದಿಂದ ಸತ್ತಿದ್ದರು. ಜಗತ್ತಿನ ಮೂಲ ಕಾರಣವಾದ ಪ್ರಾಣವನ್ನು ಅರಿತರೆ ದೇಹವನ್ನು ಬೇಕಾದಂತೆ ಬಳಸಬಹುದೆಂದು ವೇದಿಕೆಗಳಲ್ಲಿ , ತರಗತಿಗಳಲ್ಲಿ , ಪುಸ್ತಕಗಳಲ್ಲಿ ಪ್ರತಿಪಾದಿಸಿದ್ದ ಸ್ವಾಮಿಗಳ ಮೇಲೆ ಕೊನೆಗೆ ನಿಸರ್ಗದ ಸಹಜ ವ್ಯಾಪಾರಗಳೇ ಮೇಲುಗೈ ಸಾಧಿಸಿದವು. ಯಾವ ಯೌಗಿಕ ಬಲವೂ ಅದಕ್ಕೆ ಅಡ್ಡಿಯಾಗಲಿಲ್ಲ ಎನ್ನುವುದು ಮಾತ್ರ ನಿಚ್ಚಳ.
Comment Box is loading comments...