ಎಡ್ವರ್ಡ್ ಸ್ಟರ್ಡಿ ಪತ್ರ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
೨೫ , ಹಾಲೆಂಡ್ ವಿಲ್ಲಾಸ್ ರೋಡ್
ಅಕ್ಟೋಬರ್ ೧, ೧೮೯೯
ಪ್ರೀತಿಯ ಸ್ವಾಮೀಜಿ
ನಿನ್ನ ೧೪ ಸೆಪ್ಟೆಂಬರ್ ಪತ್ರ ನನಗೆ ತಲುಪಿದೆ. ಅದಕ್ಕಾಗಿ ಧನ್ಯವಾದಗಳು.
ಹೆಚ್ಚಿನ ಅಭಿಪ್ರಾಯ ಕೊಡುವ ಮೊದಲು ನಿನ್ನ ವಿರುದ್ಧ ಯಾರೂ ಸಂಘಟಿತರಾಗಿರಾಗಿಲ್ಲ ಎನ್ನುವುದನ್ನು ತಿಳಿಸುತ್ತೇನೆ. ನಿನಗೆ ತಿಳಿದಿರುವಂತೆ ನಾನು ಮಿಸ್ ಸೌಟೆರ್ ಸಂಪರ್ಕ ಹೊಂದಿ ಬಹಳ ದಿನಗಳಾದವು. ಶ್ರೀಮತಿ ಆಸ್ಟನ್ ಜಾನ್ಸನ್ , ಆಕೆಗೆ ಸ್ವಲ್ಪ ಗೊತ್ತಿದೆಯಾದರೂ , ಎಂದೂ ಭೇಟಿಯಾಗುವುದಿಲ್ಲ , ಮಿಸ್ ಮುಲ್ಲರ್’ಗೆ ಆಗಲಿ ಅಥವಾ ಮೊದಲಿನ ಇಬ್ಬರು ಹೆಂಗಸರಿಗಾಗಲಿ ಅಥವಾ ನನಗಾಗಲಿ ಯಾವುದರೊಂದಿಗೂ ಸಂಬಂಧವಿಲ್ಲ.
ನನ್ನ ಮತ್ತು ಶ್ರೀಮತಿ ಆಷ್ಟನ್ ಜಾನ್ಸನ್ (ಎ.ಜೆ) ನಡುವೆ ಕಳೆದ ಎರಡೂವರೆ ತಿಂಗಳಿನಿಂದ ಸ್ವಲ್ಪ ಮಟ್ಟಿನ ಪತ್ರ ವ್ಯವಹಾರವಿದ್ದಿತು. ನಿನ್ನ ಬಗ್ಗೆ ಏನೂ ಇಲ್ಲ , ಆದರೆ ಎ.ಜೆ ಮಿಸ್ ಮಾರ್ಗರೆಟ್ ಬಗ್ಗೆ ಎಂತಹ ಅಭಿಪ್ರಾಯ ಹೊಂದಿದ್ದಾಳೆ ಎನ್ನುವ ಬಗ್ಗೆ ನಾನು ದೂರವಿದ್ದೇನೆ. ಮಿಸ್ ಮಾರ್ಗರೆಟ್ ನಿನ್ನ ಬಗ್ಗೆ ಹೊಂದಿರುವ ಅಭಿಪ್ರಾಯಗಳ ಬಗ್ಗೆ ನನ್ನ ಯಾವುದೇ ತಕರಾರುಗಳಿಲ್ಲ. ಅದು ನಿಮ್ಮಿಬ್ಬರ ನಡುವಿನ ವೈಯಕ್ತಿಕ ವಿಚಾರವಾಗಿದ್ದು ಅಲ್ಲಿಗೆ ಕೊನೆಗೊಳ್ಳುತ್ತದೆ. ಇದೇ ನನ್ನ ವೈಯಕ್ತಿಕ ಸ್ವಾತಂತ್ರದ ಕಲ್ಪನೆಯಾಗಿದ್ದು ನಿನಗೆ ಮತ್ತು ನನಗೆ ಇಬ್ಬರಿಗೂ ಸಲ್ಲುತ್ತದೆ. ಆದರೆ ಮಿಸ್ ಮಾರ್ಗರೆಟ್ ತಾನು ನಿನ್ನ ಬಗ್ಗೆ ಹೊಂದಿರುವಂತಹ ಆರಾಧನೆಯ ಭಾವನೆಗಳನ್ನು ನಾನೂ ಕೂಡ ಹೊಂದಿದ್ದೇನೆ ಎಂದು ಊಹಿಸಿ ಪತ್ರಗಳನ್ನು ಬರೆಯುತ್ತಿದ್ದಳು. ಆದ್ದರಿಂದ ನಾನು ಆಷಾಢಭೂತಿಯಂತೆ ಇರದೆ ನನ್ನ ನಿಲುವನ್ನು ಸ್ಪಷ್ಟಪಡಿಸಲು ಪತ್ರ ಬರೆಯಬೇಕಾದ ಅನಿವಾರ್ಯತೆ ಇದ್ದಿತು. ನಾನು ನಿನಗೆ ಪತ್ರಗಳನ್ನು ತೋರಿಸುವಂತೆ ಆಕೆಗೆ ಹೇಳಿದೆನಾದರೂ ಮೊದಲಿಗೆ ಆಕೆ ಅದನ್ನು ಒಪ್ಪಲಿಲ್ಲ.
ನನ್ನ ಪತ್ರಗಳಲ್ಲಿರುವುದರಲ್ಲಿ ಯಾವುದನ್ನೂ ಹಿಂದೆಗೆದುಕೊಳ್ಳುವುದಿಲ್ಲ. ಮಿಸ್ ನೋಬಲ್ ಸಂನ್ಯಾಸ, ಸಂನ್ಯಾಸ ಎಂದು ಬರೆಯುತ್ತಿದ್ದಳು . ನಾನು ಬಹಳ ದಿನಗಳಿಂದ –ಕ್ಯಾವೆರ್’ಷ್ಯಾಂ ದಿನಗಳಾದ ಮೇಲೆ ಸ್ವಲ್ಪ ಕಾಲದ ನಂತರದಿಂದ - ಚಿಂತಿಸುತ್ತಿದ್ದುದನ್ನು ಆಕೆಗೆ ಬರೆದೆನು. ‘ನಾನು ಈ ದೇಶದಲ್ಲಿ ಸಂನ್ಯಾಸದ ಬಗ್ಗೆ ಬೇಕಾದಷ್ಟು ಕೇಳಿದ್ದೇನೆ. ಆದರೆ ಅದನ್ನು ಪ್ರತಿಪಾದಿಸುವವರು ಕಿಂಚಿತ್ತೂ ಅನುಸರಿಸದಿರುವುದನ್ನು ಬಲ್ಲೆ. ಈ ವಿಚಾರವನ್ನು ಎಳೆದು ಮುಂದುವರೆಸಲು ಬಯಸಿ ವಿಷಯವನ್ನು ಕಹಿಗೊಳಿಸಲು ಬಯಸುವುದಿಲ್ಲವಾದರೂ ನಾನು ಹೇಳಿದ್ದನ್ನು ಸಮರ್ಥಿಸಿಕೊಳ್ಳುತ್ತೇನೆ. ಊಟ , ವಸತಿಗಳ ಬಗ್ಗೆ ಯಾವಾಗಲೂ ಗೊಣಗಾಟವಿದ್ದಿತು. ಒಬ್ಬ ಸಂನ್ಯಾಸಿಯನ್ನು ಸಲಹಲು ಆಗುತ್ತಿದ್ದ ಖರ್ಚು ಸಂನ್ಯಾಸದ ಯಾವ ಸೋಗನ್ನೂ ಹಾಕದ ಹಲವು ಕಾರ್ಮಿಕರನ್ನು , ವಿಶ್ವವಿದ್ಯಾಲಯದ ಒಬ್ಬ ಯುವವಿದ್ಯಾರ್ಥಿಯನ್ನು ಅಥವಾ ಬಡತನ ತುಂಬಿರುವ ಜಾಗಗಳಲ್ಲಿರುವ ವೈದ್ಯನನ್ನು ಸಾಕುವುದಕ್ಕಿಂತ ಹಲವು ಪಟ್ಟು ಹೆಚ್ಚಿನದಾಗಿದ್ದಿತು. ಹೆಚ್ಚಿಗೆ ಮಾತನಾಡದೆ ತಮ್ಮ ಆದರ್ಶಗಳನ್ನು ಪೂರ್ಣಗೊಳಿಸುವವರು ಯಾರು ? ಸಣ್ಣ ವಿಷಯಗಳ ಬಗ್ಗೆ ನಿನಗಿದ್ದ ಸಿಟ್ಟು , ಕೆಲಮಟ್ಟಿಗೆ ಬಡಾಯಿ ಕೊಚ್ಚುವುದು , ಉತ್ಪ್ರೇಕ್ಷೆ ಒತ್ತಟ್ಟಿಗಿರಲಿ, ನಾನು ಪರಿಪೂರ್ಣತೆಯ ಪ್ರತಿಪಾದಕನೆಂದಾಗಲಿ ಅಥವಾ ಸಾಧಕನೆಂದಾಗಲಿ ಹೇಳಿಕೊಂಡಿಲ್ಲ. ಕಪಟತನ , ನಟನೆ ಬದಿಗಿರಿಸಿ ನೀನು ಏನಾಗಿರುವೆಯೋ , ಹೇಗೆ ಕಾಣಿಸಿಕೊಳ್ಳುವೆಯೋ ಹಾಗೆ ಲೆಕ್ಕಿಸೋಣ . ನಿನ್ನನ್ನು ನಮ್ಮಂತೆಯೇ ಸೋಲು ಗೆಲುವುಗಳಿರುವ ಆದರೆ ಸ್ವಲ್ಪ ಹೆಚ್ಚು ಪ್ರತಿಭೆ, ಒಳನೋಟ , ಕಡಿಮೆ ಸಂಶಯಗಳಿರುವ ಒಬ್ಬ ಮನುಷ್ಯನಂತೆ ಪರಿಗಣಿಸುತ್ತೇನೆಯೇ ಹೊರತು ಕೆಲ ಭಕ್ತ ಹೆಂಗಸರು ಭಾವಿಸುವಂತೆ ನಡೆದಾಡುವ ದೇವರೆಂದಲ್ಲ.
ಮಿಸ್ ಸೌಟೆರ್ ಅಥವಾ ಮಿಸ್ ಮುಲ್ಲರ್ ನಿನಗೆ ಹಣ ಕೊಟ್ಟಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದರೆ ನೀನು ಅವರಿಗೆ ಪತ್ರವನ್ನು ಬರೆಯಬೇಕು , ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ನನ್ನ ಪರವಾಗಿ ಮಾತ್ರ ನಾನು ಉತ್ತರಿಸುತ್ತೇನೆ. ಮೊದಲ ಬಾರಿಗೆ ನಿನ್ನ ಕಡೆಯಿಂದ ಅದು (ಹಣ) ಯಥೋಚಿತವಾಗಿ ಬಳಸಲ್ಪಟ್ಟಿದೆಯೆಂದು ತಿಳಿದು ಸಂತೋಷವಾಯಿತು. ನಾನು ಕೊಟ್ಟ ಹಣದಲ್ಲಿ ಕನಿಷ್ಟ ಒಂದು ಪೈಸೆಯ ಬಗ್ಗೆಯೂ ನನಗೆ ಪಶ್ಚತ್ತಾಪವಿಲ್ಲ. ಅದು ಒಂದೊಂದು ಇಟ್ಟಿಗೆಯನ್ನು ಅಥವಾ ಸಂನ್ಯಾಸಿಯನ್ನು ಮೇಲೇರಿಸಲು ನೆರವಾಗಿದ್ದು ಆಶೀರ್ವಾದಿಂದ ಆವರಿಸಲ್ಪಟ್ಟಿದೆ ಎಂದು ಆಶಿಸುತ್ತೇನೆ. ಯಾರಾದರೂ ತಾವು ಹಣ ಕೊಟ್ಟಿದ್ದಕ್ಕೆ ಪಶ್ಚಾತ್ತಾಪ ಪಟ್ಟರೆನ್ನುವ ಅಭಿಪ್ರಾಯಗಳು ಯಾವುವೂ ನನಗೆ ಗೊತ್ತಿಲ್ಲ. ನೀನು ದ್ವೇಷದ ಬಗ್ಗೆ ಹೇಳುತ್ತಿರುವೆ ಅದು ಉತ್ಪ್ರೇಕ್ಷೆ ಅಥವಾ ಅದಕ್ಕಿಂತ ಕೆಟ್ಟದ್ದು. ನಾನು, ದ್ವೇಷದ ದಿಕ್ಕಿಗೆ ಸನಿಹದಲ್ಲಿರುವೆ , ದ್ವೇಷಿಸುವೆ ಎಂದು ಯಾರೂ ಹೇಳಲಾರರು. ಪ್ರಾಮಾಣಿಕ ಅಭಿಪ್ರಾಯ , ಆದರ್ಶಗಳನ್ನು ಕುರಿತಾದ ಭಿನ್ನಮತ ದ್ವೇಷವಲ್ಲ. ಗಂಡುಗಲಿ , ಗುಲಾಮ ಜನಾಂಗ ಎನ್ನುವ ನಿನ್ನ ಮಾತುಗಳಲ್ಲಿ ನನಗೆ ಯಾವ ನಿಜವೂ ಕಾಣುತ್ತಿಲ್ಲ. ಇಲ್ಲಿ ಯಾವುದೇ ಪಿತೂರಿ ಅಥವಾ ಒಳಸಂಚಿಲ್ಲ. ರಕ್ತಪಿಪಾಸುಗಳಾದ ಪಾಳೆಗಾರರು ನನ್ನೊಂದಿಗಿಲ್ಲ. ಯಾರೂ ಯಾವುದೇ ದ್ವೇಷವನ್ನು ಒಳಗೆ ಅಡಗಿಸಿಕೊಂಡಿಲ್ಲ. ಆ ವಿಚಾರದಲ್ಲಿ ನಾನು ಶ್ರೀಮತಿ ಜಾನ್ಸನ್ ಬಗ್ಗೆ ಖಚಿತವಾಗಿ ಮಾತನಾಡಬಲ್ಲೆ. ಆಕೆ ಕ್ರಿಶ್ಚಿಯನ್ ಸೈನ್ಸ್ ವಿಚಾರದಲ್ಲಿ ಭಾರಿ ನಂಬಿಕೆ ಇಟ್ಟಿದ್ದು ಆ ವಿಷಯದಲ್ಲಿ ನಿಮ್ಮ ಬಗ್ಗೆ ಕಠಿಣ ನಿಲುವು ತಳೆದಿರುವಂತಿದೆ. ರೋಗ ಪೀಡಿತರಾದಾಗ ಎಲ್ಲ ದೆಸೆಗಳಿಂದ ನಾವೆಷ್ಟು ದುರ್ಬಲರಾಗುತ್ತೇವೆ ಎನ್ನುವುದನ್ನು ನಾನು ಬಲ್ಲೆ. ವ್ಯಸ್ತವಾದ ದೇಹ ಹೊರತಾಗಿ ಮಾನಸಿಕವಾಗಿ ನೀನಾಗಲಿ ಅಥವಾ ಇನ್ನಿತರರಾಗಲಿ ಎಷ್ಟು ಅನಾರೋಗ್ಯವಾಗಿರುವಿರೆಂದು ನಿರ್ಧರಿಸುವ ನ್ಯಾಯಾಧೀಶ ನಾನಲ್ಲ.
ನೀನು ದೇಹವನ್ನು ಕುರಿತಾಗಿ ಏನು ಬೋಧಿಸಿರುವೆಯೆಂದು ಬಲ್ಲೆ. ‘ನಾನು ಹೇಳಿದಂತೆ ಮಾಡು. ನಾನು ಮಾಡುವಂತಲ್ಲ’ ಎನ್ನುವುದು ನನಗೆ ಗೊತ್ತು,,,, ನಿರರ್ಗಳ ಮಾತಿನಿಂದ ಪ್ರಚೋದಿಸಲ್ಪಟ್ಟವರು ಅದರ ಪ್ರಭಾವ ಕುಗ್ಗಿದ ಮೇಲೆ ಮಾತು ಮತ್ತು ಅನುಷ್ಠಾನದಲ್ಲಿರುವ ವ್ಯತ್ಯಾಸವನ್ನು ಕಂಡಾಗ ಷಾಂಪೆನ್ ನಿಶೆಯಿಳಿದ ನಂತರ ಮತ್ತೊಮ್ಮೆ ಖಿನ್ನತೆಗೆ ಒಳಗಾಗುವವರ ಸ್ಥಿತಿ ತಲುಪುತ್ತಾರೆ. ಎಲ್ಲ ಧರ್ಮ , ಪಂಥಗಳ ಎಲ್ಲ ಜನ ಪ್ರತಿ ದಿನ ಮಾತನಾಡುವುದು ಮತ್ತು ಅದರ ಬದಲು ಅದರಂತೆ ನಡೆದುಕೊಳ್ಳುವ ಒಬ್ಬ ವ್ಯಕ್ತಿಯ ಬಗ್ಗೆ ಆಲೋಚಿಸು. ಮಾತನಾಡುವವರು ಯಾವ ಪ್ರಭಾವ ಬೀರಬಲ್ಲರು ? ಕೊನೆಗೆ ಎಲ್ಲವದೂ ಇಲ್ಲಿಗೆ ಬಂದು ನಿಲ್ಲುತ್ತದೆ. ಇಲ್ಲಿ ನಾನು ಯಾವುದೇ ಬಗೆಯ ಕೆಲಸ ಮಾಡಲು ಸಿದ್ಧ ಎನ್ನುವುದು ಭಾರತೀಯ ಆದರ್ಶಗಳ ಯೋಗ್ಯ ಮುನ್ನುಡಿಯಾಗಿರುತ್ತದೆ. ನಾನು ಯಾರಿಗೆ ಅನಿರ್ಬಂಧಿತ ಸಹಕಾರ ಕೊಡಲು ಮುಂದಾಗಿರುವೆನೋ ಅವರು ಬೋಧಿಸುವುದೇ ಒಂದು ಬದುಕುವುದೇ ಒಂದು ಎನ್ನುವುದರ ಬಗ್ಗೆ ನಾನು ಬಹಳ ಸೂಕ್ಷ್ಮ.
ಸಂನ್ಯಾಸಿಗಳನ್ನು ಇಲ್ಲಿಗೆ ಕರೆಸಿಕೊಂಡ ನಂತರ ಅವರಲ್ಲಿ ಸಂನ್ಯಾಸ, ತೃಪ್ತಿ , ಮನಸ್ಥೈರ್ಯ , ಪರಿಸರದ ಸರಳತೆಗಳು ಮಾಯವಾಗುತ್ತವೆ. ಅವರು ಬದುಕಲು ಗೋಳದ ಇನ್ನೊಂದು ತುದಿಯಲ್ಲಿರುವ ಊಟ , ಸೇದಲು ಷಿಲ್ಲಿಂಗ್ ಬೆಲೆಯ ಸಿಗಾರ್ , ಅತ್ಯುತ್ತಮ ಬಟ್ಟೆ , ಹಣ್ಣು ಬಯಸಿದರೆ ಆವರು ಯಾರು ? ಏನನ್ನು ಬೋಧಿಸುತ್ತಿದ್ದಾರೆ? ಇದು ನನಗೆ ಅರ್ಥವಾಗದು. ಗೀತೆ , ಉಪನಿಷತ್ತು , ಮಹಾಭಾರತ ಮತ್ತು ಇತರ ಗ್ರಂಥಗಳನ್ನು ಓದಿ , ಭಾರತದ ಗತಕಾಲದಲ್ಲಿದ್ದ ವೈಭವಯುತ, ಪೌರುಷಯುತ, ಸಾತ್ತ್ವಿಕ ಜೀವನ , ಪ್ರೀತಿ ಮತ್ತು ಸಭ್ಯತೆ ತುಂಬಿರುವುದನ್ನು ಅರಿತು ನಾನು ಮನಸ್ಸಿನಲ್ಲಿ ರೂಪಿಕೊಂಡಿರುವ ಸಂನ್ಯಾಸದ ಆದರ್ಶಗಳು ಅವಲ್ಲ ಎಂದು ಹೇಳಬಲ್ಲೆ. ಬಹುಶಃ ಅವರು (ಹಿಂದಿನ ಸಂನ್ಯಾಸಿಗಳು) ತಮ್ಮ ಕಾಲದ ಶ್ರೀಮಂತರೊಂದಿಗೆ ಬದುಕಿದ್ದು , ಚೆನ್ನಾಗಿ ಕಾಲ ಕಳೆಯಬಹುದಿದ್ದಿತು. ಆದರೆ ನನಗೆ ಅವರು ಹಾಗಿರಲಿಲ್ಲ ಎನಿಸುತ್ತದೆ. ತಮಗೆ ಬೇಕಾದುದಕ್ಕಿಂತಲೂ ಕಡಿಮೆ ಅಗತ್ಯಗಳನ್ನು ತಾವು ರೂಢಿಸಿಕೊಂಡು ಅವರು ಬಡವರಿಗೆ , ಜೀವನಕ್ಕಾಗಿ ಹೋರಾಟ ನಡೆಸುತ್ತಿರುವವರಿಗೆ ನೆರವಾಗಲು ಯತ್ನಿಸಿದ್ದರೆನ್ನುವುದೇ ಸರಿ. ನಾನು ನನ್ನ ಹೆಂಡತಿ , ಮಕ್ಕಳು ಮತ್ತು ನಾಗರಿಕತೆಯ ಎಲ್ಲ ರೇಜಿಗೆಗಳೊಂದಿಗೆ ಬದುಕುತ್ತಿದ್ದೇನೆ. ಹಲವು ವರ್ಷಗಳ ಹಿಂದೆ ನನಗೆ ಸಿಕ್ಕ ಅವಕಾಶವನ್ನು ಬಳಸದೆ ( ಸಂನ್ಯಾಸಿಯಾಗುವ ಅವಕಾಶ) ಈಗ ಅದಕ್ಕಾಗಿ ಹಲವು ವರ್ಷಗಳಿಂದ ಹೋರಾಡುತ್ತಿದ್ದೇನೆ. ಇರಲಿ ಅದೆಲ್ಲ ಮುಗಿದ ಕತೆ.
ನಾನು.ನುಡಿದಂತೆ ನಡೆಯುವಂತಿದ್ದರೆ ಮಾತ್ರ ಇತರರಿಗೆ ಬೋಧಿಸಬಹುದು. ನಾನು ದಾರಿದ್ರ್ಯ , ಸರಳತೆ , ವಸ್ತು ನಿರ್ಮೋಹದ ಬಗ್ಗೆ ಬೋಧಿಸುತ್ತ ಹೆಂಡತಿ , ಮಕ್ಕಳಿರುವ ನನ್ನ ಕುಟುಂಬವನ್ನು ಸಲಹಲಾರೆ. ಆದರೆ ಆಷಾಢಭೂತಿಗಳಾಗದೆ ಯಾರು ಅದನ್ನು ಬೋಧಿಸಲು ಜೀವಿಸುತ್ತಾರೋ ಅವರಿಗೆ ನೆರವಾಗುತ್ತೇನೆ.; ಆದರೆ ಅಂತಹ ಯಾರಾದರೂ ನನಗೆ ಸಿಗುವರೇ ಎನ್ನುವುದೇ ಪ್ರಶ್ನೆ. ಜಗತ್ತಿನಲ್ಲಿ ಉಳಿದ ಬಾಯಿಬಡುಕರಂತೆ ಕೇವಲ ಮಾತನಾಡದೆ ಅದರಂತೆ ಬದುಕುವರು ಇರುವರೇ? ನನಗೆ ನಕಲಿಗಳು ಬೇಕಿಲ್ಲ.
ನಾನು ವರ್ಷಗಳು ಉರುಳಿ ಕಳೆದು ಹೋಗುವವರೆಗೆ ಎಂದೆಂದಿಗೂ ಮೌನವಾಗಿರುತ್ತೇನೆ. ನನ್ನಲ್ಲಿಲ್ಲದ ಯಾವುದೇ ಆದರ್ಶವನ್ನು ಮೈಗೂಡಿಸಿಕೊಳ್ಳಲು ಪರಿಶ್ರಮಿಸುತ್ತೇನೆ. ಅತ್ಯಾಚಾರ ಮಾಡಲಿ , ಕೊಲೆಗೈಯ್ಯಲಿ ನಾನು ಯಾರನ್ನೂ ಟೀಕಿಸುವುದನ್ನು ಬಯಸುವುದಿಲ್ಲ. ಆದರೆ ನಾನು ಏನು ಹೇಳುತ್ತೇನೋ ಅದೇ ಆಗಬೇಕೆಂದು, ಯಾರೊಂದಿಗಾದರೂ ಕೆಲಸ ಮಾಡಿದರೆ ಅವರು ಆಡಿದ ಮಾತೇ ಆ ವ್ಯಕ್ತಿಯಾಗಬೇಕೆಂದು ಬಯಸುತ್ತೇನೆ. ನನ್ನ ಇಬ್ಬಂದಿತನವೇ ನನಗೆ , ತೃಪ್ತಿ ತರದು , ನಾನು ಏನಾಗಿಲ್ಲವೋ , ನಾನು ಯಾವುದನ್ನು ಆಚರಿಸುತ್ತಿಲ್ಲವೋ ಅದನ್ನು ಇತರರಿಗೆ ಬೋಧಿಸಲಾರೆ . ನನ್ನ ಜೀವನ ನಾನು ಏನಾಗಿರುವೆನೆಂದು ತಿಳಿಸುತ್ತದೆ, ಇದೇ ನನ್ನ ಬೋಧನೆ. ನೀನು ಮತ್ತು ನಿನ್ನ ಗುರುಭಾಯಿಗಳು ಸಂನ್ಯಾಸಿಗಳೆಂದು ಹೇಳುವೆ . ಅದು ಹಾಗೆಯೇ ಇರಲಿ. ನೀನು ಬೋಧಿಸುವುದೆಲ್ಲವೂ ಜಾರಿಗೆ ಬರುವುದನ್ನು ಕಾಣೋಣ. ನಾನು ಭಾವಿಸುವುದನ್ನು ಸ್ಫುಟವಾಗಿ ವ್ಯಕ್ತಪಡಿಸಲು ನನಗೆ ಆಗದಿರಬಹುದು ; ಆದರೆ ನಾನು ಮರೆಮಾಚುವಂತಹುದಾಗಲಿ , ಹಿಂದಕ್ಕೆ ಉಳಿಸಿಕೊಳ್ಳುವಂತಹುದಾಗಲಿ ಏನೂ ಇಲ್ಲ ; ಏನನ್ನಾದರೂ ನೀನು ಹೇಳುವುದಿದ್ದರೆ , ಸ್ಪಷ್ಟೀಕರಿಸುವುದಿದ್ದರೆ ಅದು ಬರಲಿ. ಫ್ರಾನ್ಸಿಸ್ ಲೆಗೆಟ್ ಸೇರಿದಂತೆ ರಿಡ್ಜ್’ಲಿ ಮ್ಯಾನೊರ್’ನಲ್ಲಿರುವ ಎಲ್ಲರೂ ಈ ಪತ್ರವನ್ನು ನೋಡಬೇಕೆಂದು ನಾನು ಬಯಸುತ್ತೇನೆ , ಅದಾಗದಿದ್ದರೆ ನನ್ನಂತೆ ಪತ್ರವನ್ನು ಯಾರಿಗೂ ತೋರಿಸದೆ ನೀನೆ ಇಟ್ಟುಕೋ.
ಎಂದಿನಂತೆ ನಿನ್ನವ – ಎ,ಟಿ.ಎಸ್ (1)
*************************************************
ಸಾರಾ ಬುಲ್ ಪತ್ರ
ಆಗಸ್ಟ್ ೨೨, ೧೮೯೫
ಪ್ರೀತಿಯ ಲೇಡಿ ಹೆನ್ರಿ
ನಾನು ನಿನ್ನಿಂದ ಒಂದು ವೈಯಕ್ತಿಕ ಉಪಕಾರವನ್ನು ಬಯಸುತ್ತೇನೆ.
ಸ್ವಾಮಿ ವಿವೇಕಾನಂದ ಈಗ ಇಂಗ್ಲೆಂಡ್’ಗೆ ಹೋಗಿದ್ದಾನೆ. ನೀನು ಲಂಡನ್’ನಲ್ಲಿ ಆತನ ಪರಿಚಯಸ್ಥರ ಮುಂದೆ ಊಟದ ಸಮಯದಲ್ಲಿ ನಿನ್ನ ಉಪಸ್ಥಿತಿಯಲ್ಲಿ ಆತ ಷಾಂಪೇನ್ ಕುಡಿದಿದ್ದಕ್ಕೆ ಅಸಂತೋಷ ವ್ಯಕ್ತಪಡಿಸಿದಯೆಂದು ಅದು ಆತನಿಗೆ ಬರವಣಿಗೆಯಲ್ಲಿ (ಪತ್ರ) ತಿಳಿಯಿತೆಂದು ಲಂಡನ್’ಗೆ ಹೋಗುವ ಮೊದಲು ನನಗೆ ತಿಳಿಸಿದನು. ಆತ ನಿನ್ನೊಂದಿಗೆ , ನಿನ್ನ ಮತ್ತು ನನ್ನ ಮನೆಯಲ್ಲಿ ಮಾತ್ರ ಊಟ ಮಾಡಿರುವುದರಿಂದ ನೀನು ಹಾಗೆ ಹೇಳಿರುವುದು ಅಸಾದ್ಯವೆಂದು ತಿಳಿಸಿದೆನು, ನೀನು ಮಾತನಾಡಿರುವುದು ಆತನ ಘನತೆಗೆ ಕುಂದು ತರಬಹುದು. ನೀನು ನಮ್ಮೊಂದಿಗೆ ಡಿಸೆಂಬರ್’ನಿಂದ ಇರುವುದರಿಂದ , ಆತನನ್ನು ಮತ್ತು ಆತನ ಕೆಲಸವನ್ನು ಸನಿಹದಿಂದ ನಾನು ತಿಳಿಯುವುದು ಸಾದ್ಯವಾಗಿದೆ. ನಮ್ಮ ಮನೆಯಲ್ಲಿ ‘ಭಾರತದ ಮಹಿಳೆಯ ಆದರ್ಶ’ ಕುರಿತಾಗಿ ಮಾಡಿದ ಭಾಷಣಗಳ ಹಿನ್ನೆಲೆಯಲ್ಲಿ ಬ್ರೂಕ್ಲಿನ್ ನ್ಯೂಯಾರ್ಕ್’ನಿಂದ ಟೀಕೆಗಳು ಬಂದವು. ಏಳು ಉಪನ್ಯಾಸಗಳ ಸರಣಿಯಲ್ಲಿ ಎಥಿಕಲ್ ಅಸೋಸಿಯೇಷನ್ ಸಭೆಯಲ್ಲಿ ನೆರೆದಿದ್ದ ಭಾರಿ ಜನರ ಮುಂದೆ ಆತ ಮತ್ತೊಮ್ಮೆ ಭಾಷಣ ಮಾಡಿದಾಗ ರಮಾಬಾಯಿ ಸರ್ಕಲ್’ನವರು ಪತ್ರಿಕೆಗಳಲ್ಲಿ ಆತನ ಮೇಲೆ ದಾಳಿ ಮಾಡಿದರು. ಆತನ ಪರ ಬಲವಾದ ಬೆಂಬಲವಿದ್ದಿತು. ಆದರೆ ಎರಡೂ ಕಡೆಯವರು ಸರಿಯಿದ್ದು ಮ್ಯಾಕ್ಸ್ ಮುಲ್ಲರ್ ಹೇಳುವಂತೆ ಸಮನ್ವಯಗೊಳಿಸಬೇಕೆಂದು ನನಗೆನಿಸುತ್ತದೆ. ಸ್ವಾಮಿಗಳ ವಿರುದ್ಧ ಮಾಡಿರುವ ಟೀಕೆಗಳು ಗಂಭೀರವಾದುವಾಗಿವೆ. ಅವು ಮಜುಂದಾರ , ಲೈಮನ್ ಅಬ್ಬಾಟ್ , ಡಾ. ಎಸ್ಟ್’ಲಿನ್ ಕಾರ್ಪೆಂಟರ್ ಹಾಗೂ ಮತ್ತಿತರ ಮೂಲಕ ಹಲವು ಸಲ ನನಗೆ ತಲುಪಿವೆ. ವಿವೇಕಾನಂದ ಹಲವು ವರ್ಷಗಳಿಂದ ಧೂಮಪಾನ ಮಾಡುವುದು , ಔತಣ ಕೂಟಗಳಲ್ಲಿ ಭಾಗವಹಿಸುವುದು , ಗಂಡಸಿನ ಹೋರಾಟದ ಸ್ವಭಾವಕ್ಕೆ ಅನುಗುಣವಾಗಿ ಕೆಲವು ಸಲ ದ್ರಾಕ್ಷಾರಸ ಮದ್ಯದ ರುಚಿ ನೋಡಿರುವುದರಲ್ಲಿ ( ಕೇವಲ ಗಂಡಸರೊಂದಿಗೆ ಅಲ್ಲ) ಆತನದೇ ಹೆಚ್ಚಿನ ತಪ್ಪೆಂದು , ಉಳಿದಂತೆ ಅಂಶಿಕವಾಗಿ ಕ್ರೈಸ್ತನಾಗಿ ಮತಾಂತರ ಹೊಂದದ ಪ್ರತಿಯೊಬ್ಬ ಪೌರಾತ್ಯನ ಬಗ್ಗೆ ಮತ್ತು ಒಂದು ಧರ್ಮ , ಪಂಥದ ಬಗ್ಗೆ ಇರುವ (ಪಾಶ್ಚಾತ್ಯರಿಗೆ) ಪೂರ್ವಗ್ರಹವೆಂದೂ ಆತ ನನಗೆ ಪರಿಚಿತವಾಗುವುದಕ್ಕೆ ಮೊದಲಿನಿಂದಲೂ ಇದನ್ನು ನಾನು ಬಲ್ಲೆನೆಂದು ಹೇಳುತ್ತೇನೆ.
ಧೂಮಪಾನಿಗಳು ಮತ್ತು ಕುಡುಕರು ಎರಡೂ ಆಗಿರುವ ಕ್ರೈಸ್ತ ಮಿನಿಸ್ಟರ್’ಗಳು ಆತನ ಬಗ್ಗೆ ಕಟುವಾಗಿ ನನಗೆ ಹೇಳಿದ್ದಾರೆ. ರಮಾಬಾಯಿ ಸರ್ಕಲ್ ಸ್ವಾಮಿಗಳ ವಿರುದ್ಧವಾಗಿ ಹೇಳಿದರೆನ್ನುವ ಗೃಹಸ್ಥರನ್ನು ಭೇಟಿಯಾಗಿ , ಅವರಿಂದ ಆತ ತಮ್ಮ ಮನೆಯಲ್ಲಿ ಇರುವುದೇ ದೊಡ್ದವರಿಗೆ ಮತ್ತು ಸಣ್ಣವರಿಗೆ ಒಂದು ಆಶೀರ್ವಾದವಿದ್ದಂತೆ ಎಂದು ತಿಳಿಸುವ ಮೂಲಕ ಬ್ರೂಕ್ಲಿನ್’ನಲ್ಲಿ ಆತನಿಗೆ ಎದುರಾದ ಭಾರಿ ಸಂಕಷ್ಟಗಳನ್ನು ನಿಭಾಯಿಸಿ ಆತನ ಪರ ಬರುವಂತೆ ಮಾಡಲಾಯಿತು. ಆತ ಪವಿತ್ರ ಮತ್ತು ಪೂಜ್ಯ ಗುರುಗಳ ಕೆಳಗೆ ತರಬೇತಾಗಿರುವುದು ಆತನ ತತ್ತ್ವ , ಧರ್ಮದ ಮೂಲವಾಗಿದೆ , ಆತನ ಅಧ್ಯಾತ್ಮಿಕ ಸ್ವಭಾವದ ಮಗ್ಗಲು ಸ್ಫೂರ್ತಿದಾಯಕವಾಗಿದ್ದು ಆತನಿಗೆ ಮಾರ್ಗದರ್ಶಿಯಾಗಿದೆಯೆಂದು ನನಗೆನಿಸುತ್ತದೆ. ಅತನ ಪರಿಶುದ್ಧ ಚಿಂತನೆ ಮತ್ತು ಜೀವನ , ಆತನೊಂದಿಗಿದ್ದ ಕುಟುಂಬಗಳ ಮೇಲೆ ಪ್ರಭಾವ ಬೀರಿದ್ದು – ಆತನನ್ನು ಸನಿಹದಿಂದ ಬಲ್ಲ ವೈದ್ಯರು ಮತ್ತು ಅನುಭವಿಗಳು – ಹುಡುಕಿಕೊಂಡು ನನ್ನಲ್ಲಿಗೆ ಬರುವಂತೆ ಮಾಡಿವೆ. ಆತ ಜಾತಿಯಲ್ಲಿ ಬ್ರಾಹ್ಮಣನಲ್ಲ-ಯೋಧ ಕ್ಷತ್ರಿಯ. ಆತನ ದೋಷಗಳು ಮೇಲ್ಮಟ್ಟದವು ಮತ್ತು ಉದಾತ್ತವಾದುವೇ ಹೊರತು ಕೀಳು ಸ್ವಭಾವದವಲ್ಲ. ಭಾರತದಲ್ಲಿ ಆತನ ಪ್ರಭಾವ ವ್ಯಾಪಕವಾಗಿದೆ. ಆತನ ಜೀವನ ಮತ್ತು ಕೆಲಸಗಳು ನಾವು ಆತ ಭಾರತಕ್ಕೆ ಮರಳದಂತೆ ತಡೆಯೊಡ್ಡಿವೆ. ಆತ ನಮ್ಮಲ್ಲಿ ಅತ್ಯುತ್ತಮವಾದುದನ್ನು ಅರಿಯಬೇಕೇ ಹೊರತು ಸಮಾಜ ಸೇವಕರು ಮತ್ತು ಕ್ರೈಸ್ತ ಪಾದ್ರಿಗಳು ಅವಕಾಶ ಸಿಕ್ಕಿದಾಗ ಒಂಟಿಯಾಗಿ ಅಥವಾ ಗುಂಪಾಗಿ ವಿಧರ್ಮಿಯನೊಬ್ಬನನ್ನು ಇರಿದರೆಂದು ಭಾವಿಸುವಂತಾಗಬಾರದು. ಮಾಯ ಮಂತ್ರಗಳಲ್ಲಿ ಆತನಿಗೆ ಆಸಕ್ತಿ ಇರದೆ ಆತನ ತತ್ತ್ವ ಸರಳ ಮತ್ತು ಶುದ್ಧವಾಗಿರುವುದರಿಂದ ಥಿಯೊಸೊಫಿಸ್ಟರು ಆತನಿಗೆ ವಿರುದ್ಧವಾಗಿದ್ದಾರೆ. ನಾನು ಮಜುಂದಾರನಿಗೆ ಪತ್ರ ಬರೆದಿದ್ದೆನು , ಅದಕ್ಕೆ ಉತ್ತರವಾಗಿ ಆತ ತನಗೆ ಸ್ವಾಮಿ ವಿವೇಕಾನಂದನ ಗುರು ರಾಮಕೃಷ್ಣನ ಬಗ್ಗೆ ಇರುವ ಪೂಜ್ಯ ಭಾವನೆಯನ್ನು ಮತ್ತೊಮ್ಮೆ ಧೃಢೀಕರಿಸಿ , ಸ್ವಾಮಿ ವಿವೇಕಾನಂದನಿಗೆ ವೈಯಕ್ತಿಕ ಶುಭಾಶಯಗಳನ್ನು ತಿಳಿಸಿದ್ದಾನಲ್ಲದೆ ಭಾರತದಲ್ಲಿ ಸ್ವಾಮಿಯ ವಿರುದ್ಧ ಎದ್ದಿರುವ ಟೀಕೆಗೆ ತಾನು ಕಾರಣ ಎನ್ನುವುದು ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದಾನೆ.
ಈತ ತನಗೆದುರಾದ ಸಂಕಷ್ಟಗಳನ್ನು ಸಮರ್ಥವಾಗಿ , ಉದಾತ್ತವಾಗಿ ಎದುರಿಸಿದಂತೆ ನನ್ನ ಮಗ ಎದುರಿಸಿದ್ದರೆ ನಾನು ಹೆಮ್ಮೆಪಡುತ್ತಿದ್ದೆ. ಆತ ಸ್ವಭಾವದಲ್ಲಿ ನನ್ನ ಗಂಡನಂತಿದ್ದು , ಭಾರತದಲ್ಲಿ ಆತನ ಸ್ಥಾನ ಮತ್ತು ಈ ದೇಶದಲ್ಲಿ ಆತ ಹೊಂದಿರುವ ಸಂಪರ್ಕಗಳು ಸಾಂದರ್ಭಿಕವಾಗಿ ನನ್ನ ಅರಿವಿನ ವ್ಯಾಪ್ತಿಗೆ ಬಂದವೆನಿಸುತ್ತಿದೆ. ನಾನು ವೇದಾಂತ ತತ್ತ್ವವನ್ನು ಒಪ್ಪಿದ್ದು ಪ್ರಾಯೋಗಿಕ ಕಾರಣಗಳಿಗೆ ಕಳೆದ ಒಂಬತ್ತು ವರ್ಷಗಳಿಂದ ಅಧ್ಯಯನ ಮಾಡಿದ್ದೇನೆ. ಇದು ಆತ ನನ್ನ ಮನೆಯಲ್ಲಿ ಸಂಕೋಚಪಡದೆ ಇರುವಂತೆ ಮಾಡಿದೆ. ಆತನ ಬೋಧನೆಗಳು ಅಜ್ಞೇಯವಾದಿಗಳು , ನಾಸ್ತಿಕರು , ಮೆಥಡಿಸ್ಟರು , ಪ್ರೆಸ್ಬಟೇರಿಯನ್ನರು – ವಿವಿಧ ಪಂಥ, ಮತದವರು , ನೀತಿ ಶಾಸ್ತ್ರಜ್ಞರು ಕೊಡವುದಕ್ಕಿಂತ ಅತ್ಯುಚ್ಛವಾಗಿದ್ದು , ಹಾರ್ವಡ್ ಪ್ರಾಧ್ಯಾಪಕರು ಕೊಡದಿರುವಂತಹ ದೇವರು ಮತ್ತು ಆತ್ಮದ ತತ್ತ್ವಗಳನ್ನು ಆತ ಕೊಡುತ್ತಿದ್ದಾನೆ. ಆತ ಅನುಸರಿಸುತ್ತಿರುವ ಆಶ್ರಮದ ವ್ರತಗಳು ದಾರಿದ್ರ್ಯ ಮತ್ತು ಬ್ರಹ್ಮಚರ್ಯ , ಇವುಗಳನ್ನು ಆತ ಸ್ವಲ್ಪವೂ ಕುಂದದಂತೆ ಪಾಲಿಸುತ್ತಿದ್ದಾನೆ ಎನ್ನುವ ತೃಪ್ತಿ ನನಗಿದೆ. ; ಆತನ ಪರೋಪಕಾರದ ಮೂಲ ಅದೇ. ಆದ್ದರಿಂದ ಪ್ರಿಯ ಲೇಡಿ ಹೆನ್ರಿ , ಆತನಿಗೆ ಕಳಂಕ ತರುವಂತಹುದನ್ನು ಹೇಳುವಂತಿದ್ದರೆ ಅದರೊಂದಿಗೆ ಆತ ಇಲ್ಲಿ ತಮ್ಮ ಹೃದಯ ಮತ್ತು ಮನೆಯ ಬಾಗಿಲುಗಳನ್ನು ಆತನಿಗಾಗಿ ತೆರೆದಿರುವಂತಹ ಸ್ನೇಹಿತರನ್ನು ಹೊಂದಿದ್ದಾನೆಂದು ತಿಳಿಸು. ಆತನನ್ನು ಸನಿಹದಿಂದ ಬಲ್ಲ ಯಾರೊಬ್ಬರೂ ಆತನ ಬಗ್ಗೆ ಇದಕ್ಕಿಂತ ಬೇರೆಯದನ್ನು ಹೇಳುವುದನ್ನು ನಾನು ಈವರೆಗೆ ಕೇಳಿಲ್ಲ.
ರಮಾಬಾಯಿ ಮತ್ತು ಮಜುಂದಾರರ ಕೆಲಸಗಳನ್ನು ನಾನು ಸಹಾನುಭೂತಿಯಿಂದ ಪರಿಗಣಿಸುತ್ತೇನೆ. ಭಾರತದ ಮಹಾ ಸುಧಾರಕರಾದ ರಾಜರಾಮ ಮೋಹನರಾಯ್ ಮತ್ತು ನಂತರದವರು ಹೆಂಗಸರ ಏಳ್ಗೆಗೆ ಮತ್ತು ಶಿಕ್ಷಣಕ್ಕೆ ಪಡುತ್ತಿರುವ ಶ್ರಮ ಬಹು ಮುಖ್ಯವಾದುದೆಂದು ಮತ್ತು ನಮಗೆ ಈಗ ಬೇಕಾಗಿರುವ ಅದರ ಪ್ರಾಚೀನ ತತ್ತ್ವಶಾಸ್ತ್ರ ಮತ್ತು ವಿವೇಕ ನೆರವಾಗುತ್ತಿವೆಯೆಂದು ಭಾವಿಸುತ್ತೇನೆ. ನನ್ನನ್ನು ಕ್ರೈಸ್ತಳಲ್ಲದೆ ಬೇರೆಯವಳೆಂದು ಪರಿಗಣಿಸುವುದನ್ನು ವಿಷಾದಿಸುವಂತೆ , ಅವರ ಪ್ರತಿಭಾವಂತ ಕೆಲಸಗಾರರು ತಮ್ಮದರಿಂದ ಹೊರಗೆ ಬಂದು , ವೇದಾಂತ ಹೊಸ ಒಡಂಬಡಿಕೆಯ ಸತ್ಯವನ್ನೇ ತಿಳಿಸುತ್ತದೆ ಎನ್ನುವುದೇ ಜನರಿಗೆ ಮಾಡುವ ಅತ್ಯುತ್ತಮ ಸೇವೆಯೆಂದು ನಾನು ಭಾವಿಸುತ್ತೇನೆ
ನನ್ನಲ್ಲಿ ನಂಬಿಕೆಯಿಡು ಪ್ರೀತಿಯ ಲೇಡಿ ಹೆನ್ರಿ
ಎಂದೆಂದಿಗೂ ಪ್ರಾಮಣಿಕವಾಗಿ ಪ್ರೀತುಯುತ ಗೌರವಗಳೊಂದಿಗೆ
ಸಾರಾ ಸಿ. ಬುಲ್ , (2)
ಈ ಪತ್ರವನ್ನು ಕೊಟ್ಟಿರುವ ಮಾರಿ ಲೂಯಿ ಬರ್ಕೆ, ಲೇಡಿ ಹೆನ್ರಿ ಸಾಮರ್’ಸೆಟ್ ಇಂಗ್ಲೆಂಡ್’ನಲ್ಲಿ ಸ್ವಾಮಿಗಳ ಬಗ್ಗೆ ಯಾವುದೇ ಅಹಿತಕಾರಿ ಮಾತುಗಳನ್ನಾದಲಿಲ್ಲ, ಅದರಂತೆ ಸ್ವಾಮಿಗಳು ತಮ್ಮ ತನ್ನ ನಡವಳಿಕೆಗಳನ್ನು ಬದಲಿಸಿಕೊಳ್ಳಲಿಲ್ಲ ಎನ್ನುವ ಷರಾ ಬರೆದಿದ್ದಾಳೆ.
************************
ಎ.ಓ ಹ್ಯೂಮ್ ಪತ್ರ
ಡೆಟ್ರಾಯಿಟ್ ಫ್ರೀ ಪ್ರೆಸ್ , ಏಪ್ರಿಲ್ ೮, ೧೮೯೪
ಭಾರತದಲ್ಲಿ ಮಿಷನರಿಗಳು -ತಮ್ಮನ್ನು ಕುರಿತಾಗಿ ಸ್ವಾಮಿ ವಿವೇಕಾನಂದನ ಹೇಳಿಕೆಗಳ ಖಂಡನೆ.
ಎರಡೂ ಕಡೆಗಳಿಂದಲೂ ಆಸಕ್ತಿದಾಯಕ ಮತ್ತು ಮುಖ್ಯವಾದ ಸಂಗತಿಗಳನ್ನು ತಿಳಿಯಿರಿ.
ಪಶ್ಚಿಮ ಭಾರತದ ಅಹಮದ್’ ನಗರದಲ್ಲಿ ಶಿಕ್ಷಕನಾಗಿರುವ ಅಮೆರಿಕ ಬೋರ್ಡ್’ನ ಮಿಷನರಿ ರೆ. ರಾಬರ್ಟ್ ಎ. ಹ್ಯೂಮ್ ಮತ್ತು ಡೆಟ್ರಾಯಿಟ್’ನಲ್ಲಿ ಭಾಣಗಳಿಂದ ಭಾರಿ ಗಮನ ಸೆಳೆದಿರುವ ಸ್ವಾಮಿ ವಿವೇಕಾನಂದ ಇವರಿಬ್ಬರ ನಡುವಿನ ಪತ್ರ ವ್ಯವಹಾರ ಫ್ರೀ ಪ್ರೆಸ್ ಓದುಗರಿಗೆ ಆಸಕ್ತಿದಾಯಕವಾಗಿರುತ್ತದೆ. ಶ್ರೀ ಹ್ಯೂಮ್ ಭಾರತದಲ್ಲಿ ಹುಟ್ಟಿದನು. ಆತನ ಕುಟುಂಬ ಆತನಿಗಿಂತ ಮುಂಚೆ ಮಿಷನರಿಗಳದ್ದಾಗಿದ್ದಿತು. ಆದ್ದರಿಂದ ಆತನಿಗೆ ಭಾರತದಲ್ಲಿ ಯಾವ ಸ್ಥಿತಿಯಲ್ಲಿ ಮಿಷನರಿ ಕೆಲಸ ಮಾಡಬೇಕೆನ್ನುವ ಅರಿವಿದೆ.
ಔಬರನ್’ಡೇಲ್ ಮಾಸ್ - ಮಾರ್ಚ್ ೨೧, ೧೮೯೪
ಸ್ವಾಮಿ ವಿವೇಕಾನಂದ , ಭಾರತದಿಂದ ಬಂದಿರುವ ನನ್ನ ದೇಶ ಬಾಂಧವ ,
ಮಾರ್ಚ್ ೧೧ ರಂದು ಡೆಟ್ರಾಯಿಟ್ ಒಪೆರಾ ಹೌಸ್’ನಲ್ಲಿ ನೀನು ಮಾಡಿದ ದೀರ್ಘ ಭಾಷಣವಿರುವ ಡೆಟ್ರಾಯಿಟ್ ಫ್ರೀ ಪ್ರೆಸ್ ಪತ್ರಿಕೆಯನ್ನು ನನಗೆ ಕಳಿಸಲಾಗಿದೆ. ನಾನು ಭಾರತದಲ್ಲಿ ಹುಟ್ಟಿ, ಜೀವನದ ಬಹು ಕಾಲವನ್ನು ಅಲ್ಲಿಯೇ ಕಳೆದು ವ್ಯಾಪಕವಾಗಿ ದೇಶಾದ್ಯಂತ ಸಂಚರಿಸಿ ಎಲ್ಲ ಭಾಗಗಳಲ್ಲಿರುವ ನಾಯಕರ ಭಾರತೀಯ ಚಿಂತನೆಗಳನ್ನು ತಿಳಿದು, ನೂರಾರು ಮಿಷನರಿಗಳ ಬಲ್ಲವನಾಗಿದ್ದು ನೀನು ಹೇಳಿದ ಬಹಳ ವಿಷಯಗಳ ಬಗ್ಗೆ ನನಗೆ ಸೋಜಿಗವಾಗಿದೆ. ಆದ್ದರಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ , ಮೊದಲು ನಾನು ಇದನ್ನು ನಿನಗೆ ಖಾಸಗಿಯಾಗಿ ಕಳಿಸಬೇಕೆಂದಿದ್ದು ಅದರಿಂದ ಪತ್ರಿಕೆಯಲ್ಲಿ ವರದಿಯಾದ ನಿಮ್ಮ ಅಭಿಪ್ರಾಯಗಳನ್ನು ಬದಲಾಯಿಸಿಕೊಳ್ಳುವಿಯೆಂದು ಭಾವಿಸಿದ್ದೆ. ಆದರೆ ಅದು ಈಗಾಗಲೇ ಮುದ್ರಣಗೊಂಡಿರುವುದರಿಂದ ಈ ಪತ್ರವೂ ಮುದ್ರಣಗೊಳ್ಳಬೇಕೆಂದು ನಂತರ ತೀರ್ಮಾನಿಸಿದೆ. ಬೇಕಿದ್ದರೆ ನಿಮ್ಮ ಉತ್ತರಗಳನ್ನು(ಪತ್ರಿಕೆಗಳಲ್ಲಿ) ಮುದ್ರಿಸು.
ನಿನ್ನ ಭಾಷಣದ ವರದಿಯಲ್ಲಿರುವ ಹೆಚ್ಚಿನ ವಿಷಯಗಳ ಬಗ್ಗೆ ಮಾತನಾಡಲು ಬಯಸುತ್ತೇನಾದರೂ ಕೆಲ ಅಂಶಗಳತ್ತ ಗಮನ ಹರಿಸುವುದು ಒಳ್ಳೆಯದು.
(೧) ವರದಿಯಲ್ಲಿರುವಂತೆ ನಿನಗೆ ಭಾರತದಲ್ಲಿರುವ ಮಿಷನರಿಗಳ ಬಗ್ಗೆ ಒಂದೇ ಒಂದು ಒಳ್ಳೆಯ ಅಭಿಪ್ರಾಯವಿಲ್ಲ ಎನ್ನುವುದು ಸೋಜಿಗವಾಗಿದೆ. ನಾವು ಇನ್ನೂ ಉತ್ತಮವಾಗಿರಬೇಕಿತ್ತು ಎನಿಸುತ್ತದೆ, ನಾವು ಪ್ರಾಮಾಣಿಕವಾಗಿ ಅತ್ಯುತ್ತಮವಾದುದನ್ನು ಮಾಡಲು ಯತ್ನಿಸುತ್ತಿದ್ದೇವೆ. ನಾವು ತಪ್ಪುಗಳನ್ನು ಮಾಡುತ್ತೇವೆ , ಅವುಗಳನ್ನು ತಿಳಿದು ತಿದ್ದಿಕೊಳ್ಳಲು ಯತ್ನಿಸುತ್ತೇವೆ. ನೀನು ಹಿಂದಿದ್ದ ಮಿಷನರಿಗಳ ಬಗ್ಗೆ ಒಂದೆರಡು ಗೌರವದ ಮಾತುಗಳನ್ನಾಡಿರುವೆ. ಆದರೆ ಈಗಿರುವ ಮಿಷನರಿಗಳ ಬಗ್ಗೆ-ಗಂಡಸರು , ಹೆಂಗಸರು- ಹಲವು ಕಟು ಮಾತುಗಳನ್ನಾಡಿ ಒಂದೂ ಒಳ್ಳೆಯ ಮಾತನಾಡಿಲ್ಲ. ಉದಾಹರಣೆಗೆ ನೀನು ‘ಮಿಷನರಿಗಳಿಗೆ ಜನರ ಬಗ್ಗೆ ಏನೂ ಗೊತ್ತಿಲ್ಲ ; ಆತ ಸ್ಥಳೀಯ ಭಾಷೆ ಮಾತನಾಡಲಾರ ; ಬಹುತೇಕ ಮಿಷನರಿಗಳು ಅಸಮರ್ಥರು , ಜನರ ಪರಂಪರೆ , ಪದ್ದತಿಗಳ ಬಗ್ಗೆ ಏನೂ ಗೊತ್ತಿಲ್ಲದ ಅಜ್ಞಾನಿಗಳಾಗಿದ್ದು ಜನರ ಸಹಾನುಭೂತಿ ಪಡೆಯಲು ಯತ್ನಿಸುತ್ತಾರೆ .; ಜನರನ್ನು ಮತಾಂತರ ಮಾಡುವ ಮಾರ್ಗ ಅಸಂಬದ್ಧ. . ಅವರು ತಮ್ಮೊಳಗೆ ಸೊಗಸಾದ ಸಾಮಾಜಿಕ ರಂಜನೆಯ ವೇಳೆಯನ್ನು ಕಳೆಯುವುದರ ಹೊರತಾಗಿ ಸಾಧಿಸುವುದು ಅಲ್ಪ’ ಎಂದಿರುವೆ.
ಈಗ , ಭಾರತದಲ್ಲಿರುವ ಮಿಷನರಿ ಸಂಘದ ಸಮರ್ಪಕವಾದ ವಿವರಣೆ ಇದೆಂದು ನೀನು ಭಾವಿಸುವಿಯೇನು ? ಭಾರತದಲ್ಲಿರುವ ಮಿಷನರಿಗಳಲ್ಲಿ ಹೆಚ್ಚಿನವರು ಕಾಲೇಜ್ ಪದವೀಧರರು , ಮತ್ತು ಆಯ್ದು ಕಳಿಸಲ್ಪಟ್ಟವರು. ಅವರಲ್ಲಿ ಕೆಲವರು ವಿದ್ವಾಂಸರು ಮತ್ತು ಖ್ಯಾತ ಬರಹಗಾರರು ಎನ್ನುವುದು ನಿನಗೆ ತಿಳಿದಿರಬಹುದು. ನೀನು ಕೊಟ್ಟ ವಿವರಣೆ ಕಾಲೇಜಿನಿಂದ , ಚರ್ಚಗಳಿಂದ ಹೋದ ಮಿಷನರಿಗಳಿಗೆ ಸಲ್ಲುತ್ತದೆಯೇ ಎಂದು ನಾನು ನಿನ್ನ ಸಭಿಕರನ್ನು ಕೇಳುತ್ತೇನೆ. ಅವರಿಗೆ ವೈಯಕ್ತಿಕವಾಗಿ ಯಾವುದೇ ಮಿಷನರಿಗಳು ಗೊತ್ತಿರದಿದ್ದರೆ ಗೊತ್ತಿರುವವರನ್ನು ಕೇಳಲಿ. ಮಿಷನರಿಗಳಿಗಿಂತ ಯಾವ ವಿದೇಶಿ ಸಂಸ್ಥೆ ಭಾರತೀಯರನ್ನು ಹೆಚ್ಚು ಚೆನ್ನಾಗಿ ತಿಳಿದುಕೊಂಡಿದೆ ಮತ್ತು ಸಹಾನುಭೂತಿ ಹೊಂದಿದೆ ಎಂದು ನಿನ್ನನ್ನು ಕೇಳುತ್ತೇನೆ .ಯಾವ ವಿದೇಶಿ ಸಂಸ್ಥೆಯವರು ಮಿಷನರಿಗಳಿಗಿಂತ ಚೆನ್ನಾಗಿ ದೇಶ ಭಾಷೆಗಳನ್ನು ಆಡುತ್ತಾರೆ ? ನಿನ್ನ ಹೇಳಿಕೆಯ ವಿರುದ್ಧ ಹಿಂದೂಗಳಿಗಾಗಿ ಹಿಂದುಗಳಿಂದಲೇ ನಡೆಸಲ್ಪಡುವ , ಬಹುತೇಕ ಹಿಂದೂಗಳೇ ಓದುವ ಬಹಳ ಪ್ರಭಾವಶಾಲಿಯಾದ ದಕ್ಷಿಣ ಭಾರತದ ‘ದಿ ಹಿಂದೂ’ ಹೆಸರಿನ ಮದ್ರಾಸ್ ಪತ್ರಿಕೆ ಏನು ಹೇಳಿದೆ ಎನ್ನುವುದನ್ನು ತಿಳಿಸುತ್ತೇನೆ. ದಿ ಹಿಂದೂ ‘ಮಿಷನರಿಗಳ ಬಗ್ಗೆ ಪೂರ್ವಾಗ್ರಹ ಇಲ್ಲದೆ ಅವರನ್ನು ಸನಿಹದಿಂದ ಬಲ್ಲವರು ಡಾ. ಪೆಂಟಕೋಸ್ಟ್ ವ್ಯಕ್ತಪಡಿಸುವ ಅಭಿಪ್ರಾಯವನ್ನು ಅನುಮೋದಿಸುತ್ತಾರೆ. ಅವರು ಪಂಡಿತಗಣ ಅಲ್ಲವಾದರೂ ಸಾಮಾನ್ಯ ಸರಾಸರಿ ಸಾಮರ್ಥ್ಯದವರಾಗಿದ್ದು , ಅವರಲ್ಲಿ ಕೆಲವರು ನಿಜವಾಗಿಯೂ ಅದ್ಭುತ ವ್ಯಕ್ತಿಗಳು. ಅವರ ಬುದ್ಧಿಗಿಂತ ಅವರ ನೈತಿಕ ಗುಣಗಳು ಮೆಚ್ಚುಗೆಗೆ ಪಾತ್ರವಾಗಿವೆ. ಅವರ ಸರಳ ಜೀವನ , ಬಡವರ ಬಗ್ಗೆ ಹೊಂದಿರುವ ಮರುಕ , ತ್ಯಾಗ ಗುಣಗಳು ಅವರ ಟೀಕಾಕಾರರೂ ಮೆಚ್ಚುವಂತೆ ಒತ್ತಾಯಿಸುತ್ತವೆ.
(೨) ಎರಡನೇ ಸೋಜಿಗದ ಸಂಗತಿಯೆಂದರೆ ದೇಶವಾಸಿ ಕ್ರಿಶ್ಚಿಯನ್ನರ ಬಗ್ಗೆ ನಿನಗೆ ಹೇಳಲು ಒಂದೇ ಒಂದು ಒಳ್ಳೆಯ ಗುಣ ಕಾಣದಿರುವುದು. ‘ಮತಾಂತರಗೊಂಡವರು ಅಲ್ಪ , ಅವರು ಒಂದು ಬಗೆಯಲ್ಲಿ ಜೀವನ ಸಾಗಿಸಲು ಮಿಷನರಿಗಳನ್ನು ಸುತ್ತುತ್ತಾರೆ . ಮತಾಂತರಗೊಂಡವರಿಗೆ ನೆರವು ಸಿಗದಿದ್ದರೆ ಅವರು ಮತಾಂತರದಿಂದ ಹೊರಗಾಗುತ್ತಾರೆ ; ಹಿಂದೂ ಜಾಣ ; ಆತ ಕೊಕ್ಕೆಗೆ ಸಿಕ್ಕದೆ ಬಲಿಯನ್ನು ಹಿಡಿಯುತ್ತಾನೆ ‘ ಮುಂತಾಗಿ ಹೇಳಿರುವೆ. ನಿಜ , ತಾನು ಏನಾಗಿಲ್ಲವೋ ಅದು ಆದಂತೆ ತೋರಿಸಿಕೊಳ್ಳುವವರು ಕುತಂತ್ರಿಗಳು ಮತ್ತು ಕೀಳು ವ್ಯಕ್ತಿಗಳು. ನೀನು ಇಂತಹ ಬೀಸು ಹೇಳಿಕೆ ನೀಡುವಾಗ ದೇಶಬಾಂಧವರು , ಹಿಂದೂಗಳೇ ನಿನ್ನ ಟೀಕೆಗೆ ಒಳಗಾದವರು ಎನ್ನುವುದು ನಿನಗೆ ಕಾಣಿಸದೇ ? ಕೊಕ್ಕೆಯನ್ನು ತಪ್ಪಿಸಿ ಬಲಿಯನ್ನು ಸೆಳೆಯುವವರು ಎಂದು ನೀನು ಹೇಳಿದಾಗ ಅಂತಹ ಕುತಂತ್ರಿಗಳು ಕ್ರೈಸ್ತರಲ್ಲ ಹಿಂದೂಗಳೆ ಎಂದು ಅಗುವುದಿಲ್ಲವೇ ? ಭಾರತದ ಕ್ರೈಸ್ತರಲ್ಲಿ ಹೆಚ್ಚಿನವರು ಕೆಳಜಾತಿಗೆ ಸೇರಿದವರು. ಕ್ರೈಸ್ತ ಧರ್ಮ ಅವರನ್ನು ಉನ್ನತೀಕರಿಸುತ್ತದೆ. ಆದರೆ ಮಿಷನರಿಗಳು ಎಲ್ಲರ ಉದ್ದೇಶಗಳ ಮೇಲೆ ಕಣ್ಣಿಟ್ಟಿರುತ್ತಾರೆ ; ಕೆಳಜಾತಿಯವರು ಸೇರಿದಂತೆ ಹೆಚ್ಚಿನ ಕ್ರಿಶ್ಚಿಯನ್ನರು ತಾವು ಮತಾಂತರಗೊಂಡ ಧರ್ಮಕ್ಕೆ ಪ್ರಾಮಾಣಿಕರಲ್ಲ ಎನ್ನುವುದು ತಪ್ಪು. ಎಲ್ಲಾದರೂ ಇಂತಹ ಕುತಂತ್ರ , ಅಪ್ರಾಮಾಣಿಕತೆ ಇದ್ದಿದ್ದೇ ಆದರೆ ಅದಕ್ಕೆ ಹಿಂದೂ ಧರ್ಮ ಕಾರಣವೇ ಹೊರತು ಕ್ರೈಸ್ತ ಧರ್ಮ ಅಲ್ಲ. ನಿನಗೆ ಗೊತ್ತಿರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಮೇಲಿನ ಜಾತಿಯವರು ತಾವು ಕ್ರೈಸ್ತ ಧರ್ಮಕ್ಕೆ ಸೇರಿದೆವೆಂದು ತಿಳಿಸಿದಾಗ ಬಹಳ ಸಂಕಷ್ಟಕ್ಕೆ ಒಳಗಾಗುತ್ತಾರೆ. ಕೆ.ಎಂ. ಬ್ಯಾನರ್ಜಿ , ಎಲ್.ಎಲ್. ಡಿ , ಕೆ.ಸಿ.ಬ್ಯಾನರ್ಜಿ ಎಂ.ಎ , ಜೆ.ಜಿ ಷೋಮ್ ಎಂ.ಎ ,ಇಮಾಂ ಉದ್ದೀನ್ ಡಿ.ಡಿ , ನೀಲಕಂಠ ಶಾಸ್ತ್ರಿ ಗೋರೆ , ಆರ್.ಸಿ ಬೋಸ್ ಎಂ.ಎ ಬಾಬಾ ಪದ್ಮಜಿ , ಎಸ್. ಸತ್ಯನಾಥನ್ ಎಂ.ಎ ಎಲ್.ಎಲ್.ಡಿ ಯಂತಹ ಅತ್ಯುತ್ತಮ ವಿದ್ಯಾವಂತ ಕ್ರೈಸ್ತರು ಭಾರತದಲ್ಲಿ ಉನ್ನತ ಗೌರವ ಹೊಂದಿದ್ದಾರೆ. ಕೆಲವು ಸಲ ಹಿಂದೂಗಳು ತಮ್ಮ ಪ್ರತಿನಿಧಿಯಾಗಿ ಭಾರತದ ನ್ಯಾಷನಲ್ ಕಾಂಗ್ರೆಸ್’ಗೆ ಕ್ರೈಸ್ತರನ್ನು ಕಳಿಸುತ್ತಾರೆ.
ಜನಸಂಖ್ಯಾ ಗಣತಿಯಂತೆ ಭಾರತದಲ್ಲಿ ಕ್ರೈಸ್ತರ ಸಂಖ್ಯೆ ೨,೧,೫೦,೭೮೧. ಇದರಲ್ಲಿ ವಿದೇಶಿಯರ ಸಂಖ್ಯೆಯನ್ನು ಕಳೆದರೆ – ಪ್ರಾಟೆಸ್ಟೆಂಟ್ , ರೋಮನ್ ಕ್ಯಾಥೊಲಿಕ್- ಹತ್ತೂವರೆ ಲಕ್ಷ ಭಾರತೀಯ ಕ್ರೈಸ್ತರಿದ್ದಾರೆ. ೧೮೯೦ ರ ಪ್ರಾಟೆಸ್ಟೆಂಟ್ ಮಿಷನರಿ ವರದಿಯಂತೆ ಎಲ್ಲ ಹಂತಗಳಲ್ಲಿ-ಗಂಡಸರು ,ಹೆಂಗಸರು - ಸೇರಿ ೧೨೮೬೩ ಜನ ಕ್ರೈಸ್ತ ಪ್ರಚಾರಕರಿದ್ದಾರೆ. ಇದಕ್ಕೆ ಸೇವಕರು , ಶಾಲೆಗಳಲ್ಲಿ ನೆರಪು ಪಡೆಯುವವರು ಸೇರಿದಂತೆ ಕೆಲವು ಸಾವಿರವನ್ನು ಸೇರಿಸಿದರೂ ಅವರ ಸಂಖ್ಯೆ ಅಲ್ಪವೇ. ಕ್ರೈಸ್ತ ಧರ್ಮಕ್ಕೆ ಸೇರಿದವರಲ್ಲಿ ಹೆಚ್ಚಿನವರು ನೆರವು ಅಥವಾ ಕೆಲಸವನ್ನು ಪಡೆಯದಿದ್ದರೆ ಅದನ್ನು ತೊರೆಯುತ್ತಾರೆ ಎನ್ನುವ ಸಾಕ್ಷ್ಯಾಧಾರಗಳಿಲ್ಲದ ನಿನ್ನ ಆರೋಪಕ್ಕೆ ವಿರುದ್ಧವಾಗಿ ಇತರ ಬಹುಸಂಖ್ಯಾತರು ಕ್ರೈಸ್ತ ಧರ್ಮವನ್ನು ಬಿಡದಿರುವುದರಿಂದ ಅವರು ಅತ್ಯುತ್ತಮ ಕೆಲಸಗಳನ್ನು ಹೊಂದಿದ್ದಾರೆಂದು ತಿಳಿಯಬೇಕಾಗುತ್ತದೆ.
ಎಲ್ಲ ಧರ್ಮಗಳ ಬಗ್ಗೆ ತಟಸ್ಥ ಧೋರಣೆ ತಳೆದಿರುವ ಮದ್ರಾಸ್ ಸಂಸ್ಥಾನದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಹೇಳಿಕೆ ಆ ಭಾರತ ಭಾಗದ ಕ್ರೈಸ್ತರ ಸ್ಥಿತಿಯನ್ನು ತಿಳಿಸುತ್ತದೆ. (ಆ ಭಾಗದಲ್ಲಿರುವ ಕ್ರೈಸ್ತರು ಕೆಳಜಾತಿಯಿಂದ ಬಂದವರಾಗಿದ್ದರೂ ಅವರು ಸರಾಸರಿ ಅಳತೆಯಲ್ಲಿ ಭಾರತದ ಇತರ ಭಾಗದ ಕ್ರೈಸ್ತರಿಗಿಂತ ಹೆಚ್ಚು ಮುಂದುವರೆದಿದ್ದಾರೆ.) ‘ ನಾನು ಆಗಾಗ್ಗೆ ದೇಶೀಯ ಕ್ರೈಸ್ತ ಸಮುದಾಯದ ಶೈಕ್ಷಣಿಕ ಮುನ್ನಡೆಯ ಬಗ್ಗೆ ಗಮನ ಸೆಳೆದಿದ್ದೇನೆ. ಈಗಿರುವ ಕಾರ್ಯಕ್ರಮವನ್ನು ಈ ಸಮುದಾಯ ಮುಂದುವರೆಸಿದರೆ , ಅದಕ್ಕಿರುವ ಭಾರಿ ಅನುಕೂಲಗಳ ಹಿನ್ನೆಲೆಯಲ್ಲಿ ಅದು ಎಲ್ಲ ಹುದ್ದೆಗಳಲ್ಲಿ ಬಹುಶಃ ದೇಶದ ಕೈಗಾರಿಕೆಯಲ್ಲಿಯೂ ಮುಂಚೂಣಿಯಲ್ಲಿರುತ್ತದೆ.
(೩) ಭಾರತದಲ್ಲಿ ಕ್ರೈಸ್ತ ಮಿಷನರಿ ಚಟುವಟಿಕೆಗಳು ತಗ್ಗಿರುವುದರಿಂದ ಅಮೆರಿಕದಲ್ಲಿ ವಿದೇಶಿ ಮಿಷನರಿಗಳು ಆಸಕ್ತಿ ತೋರಿಸುತ್ತಿದ್ದಾರೆ ಎನ್ನುವುದು ಮೂರನೆಯ ಸೋಜಿಗದ ಸಂಗತಿ. ಅಮೆರಿಕದಲ್ಲಿ ತಲೆ ಎತ್ತುತ್ತಿರುವ ನಾಸ್ತಿಕತೆ ಮತ್ತು ಅಜ್ಞೇಯವಾದಗಳು ಮಿಷನರಿಗಳು ನುಗ್ಗಲು ಪ್ರೇರೇಪಣೆಯಾಗಿದೆ ಎಂದು ನೀನು ತಿಳಿಸಿದಿಯೆಂದು ವರದಿಯಾಗಿದೆ. ಇದು ನಿಜವೇ ಆಗಿದ್ದರೆ ಕ್ರೈಸ್ತರು ತಮ್ಮ ಧರ್ಮವನ್ನು ಹೆಚ್ಚು ನಂಬುತ್ತ ಆಚರಿಸುತ್ತಿದ್ದರೆ ಅವರು ಅದನ್ನು ಹರಡಲು ಪ್ರಯತ್ನ ಮಾಡುವುದಿಲ್ಲ ಎನ್ನುವುದನ್ನು ಒಪ್ಪಬೇಕಾಗುತ್ತದೆ ! ಅಮೆರಿಕಕ್ಕೆ ನೀನು ನೀಡಿದ ಭೇಟಿ ಇಲ್ಲಿನ ಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನೆರವಾಗದಿದ್ದರೆ ನೀನು ಹೇಳಿದ ಸಂಗತಿಗಳು ಎಷ್ಟು ಸರಿ ಎನ್ನುವುದನ್ನು ನಿರ್ಧರಿಸುವುದನ್ನು ಇತರರ ವಿವೇಚನೆಗೆ ಬಿಡುತ್ತೇನೆ.
(೪) ನೀನು ಕ್ರೈಸ್ತ ಮಿಷನರಿಗಳು ಭಾರತೀಯರನ್ನು ತೆಗಳುತ್ತಾರೆ ಅಥವಾ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾರೆ ಎಂದು ಹೇಳಿರುವೆ. ಕೆಲ ಮಿಷನರಿಗಳು ಒಂದು ನಿರ್ದಿಷ್ಟ ಬಗೆಯ ಜನ , ಪರಿಸ್ಥಿತಿ , ಧಾರ್ಮಿಕ ಪರಿಸರ , ದೇಶ , ಧರ್ಮಗಳಲ್ಲಿ ಕೆಲಸ ಮಾಡಿದ್ದು ಅನುದ್ದೇಶಪೂರ್ವಕವಾಗಿ ಅಂತಹ ತಪ್ಪುಗಳನ್ನು ಮಾಡಿದ್ದಾರೆಂದು ನಾನು ಒಪ್ಪಿಕೊಳ್ಳುತ್ತೇನೆ. ನೀನು ನೋಡದಿರುವುದನ್ನು ವಿಶ್ವಾಸಾರ್ಹ ಮೂಲಗಳಿಂದ ದಕ್ಕಿದ್ದರೂ ನಂಬಲು ಸಿದ್ಧನಿಲ್ಲ. ನೀನು ಮತ್ತು ನಾನು ಇಬ್ಬರೂ ಭಾರತದಲ್ಲಿ ಹುಟ್ಟಿ ,ಬದುಕಿ , ವ್ಯಾಪಕವಾಗಿ ಸಂಚರಿಸಿದ್ದರೂ ನಮ್ಮಿಬ್ಬರಿಗೂ ಗೊತ್ತಿರದ ಸಾವಿರ ಸಂಗತಿಗಳು ಭಾರತದಲ್ಲಿವೆ.
(೫) ಭಾರತದ ಬಗ್ಗೆ ಮಿಷನರಿಗಳು ಏನು ಹೇಳುತ್ತಾರೆ ಎನ್ನುವುದನ್ನು ನಿನಗೆ ತಿಳಿಸುತ್ತೇನೆ. ಭಾರತದಲ್ಲಿ ಕೆಲ ವರ್ಗಗಳು ದುಸ್ಥಿತಿಯಲ್ಲಿವೆ , ಹೆಚ್ಚಿನ ಜನ ಓದಲಾರರು , ಬರೆಯಲಾರರು , ಕೆಳಜಾತಿಗಳನ್ನು ಹೀಗಳೆಯಲಾಗಿದೆ.; ಹೆಂಗಸರ ಶಿಕ್ಷಣಕ್ಕಿರುವ ಅವಕಾಶಗಳು ಅಲ್ಪ. ಇನ್ನೂ ಧರ್ಮ ಕುರಿತಾದಂತೆ ಉನ್ನತ ಹೇಳಿಕೆಗಳಿರುವ ಪಾಶ್ಚಾತ್ಯರು ಅದ್ವೈತ ಎಂದು ಗುರುತಿಸುವ ತತ್ತ್ವಶಾಸ್ತ್ರದ ಹಿಂದೂ ಧರ್ಮವಿದೆ. ಇದನ್ನು ಕೆಲ ಬ್ರಾಹ್ಮಣರು ಇತರ ಜಾತಿಯ ಕೈಬೆರಳೆಣಿಕೆಯ ಜನ ಅರಿತಿದ್ದಾರೆಯೇ ಹೊರತು ಬಹುಸಂಖ್ಯಾತ ಜನ ಸಮುದಾಯವಲ್ಲ. ಬಹುದೇವತೆಗಳನ್ನು ನಂಬುವ , ಪುರಾಣಗಳ , ಕೆಲವು ವೇಳೆ ಅನೈತಿಕ ಕಥೆಗಳ ತುಂಬಿರುವ , ಜನ ಸಮೂಹದ ಎಲ್ಲರ ಮೇಲೆ ಪರಿಣಾಮ ಬೀರುವ ಜನಪ್ರಿಯ ಹಿಂದೂಧರ್ಮ ಎನ್ನುವುದು ಇನ್ನೊಂದಿದೆ. ದೇವರತ್ತ ಸಾಗಲು ಇರುವ ವಿಗ್ರಹಾರಾಧನೆ ಮತ್ತು ಆಚರಣೆಗಳಿಂದ ತುಂಬಿರುವ ಧರ್ಮ ಜನಸಮೂಹಕ್ಕೆ ಅರ್ಥವಾಗದು. ಇವುಗಳಲ್ಲಿ ಜಾತಿ ಮತ್ತು ಅಸಂಬದ್ಧ ನಿಯಮಗಳಿವೆ. ಹೆಂಗಸರ ಸ್ಥಿತಿ ದಯನೀಯ ಎಂದು ಅವರು ಹೇಳುತ್ತಾರೆ. ; ಮದುವೆಯನ್ನು ಆದಷ್ಟು ಬೇಗ ಮಾಡಿ ಮಕ್ಕಳಾಗುವಂತೆ ಮಾಡುತ್ತಾರೆ ; ಇದರಿಂದಾಗಿ ಬಾಲ್ಯ ವಿಧವೆಯರ ಸ್ಥಿತಿ ಮತ್ತು ಎಳೆಯ ತಾಯಂದಿರ ಪಾಡು ಶೋಚನೀಯ.; ವಿಧವೆಯರದು ಅವಮಾನ ಮತ್ತು ಅನಗತ್ಯ ಸಂಕಷ್ಟಗಳ ಜೀವನ. ಹಿಂದೂ ಧರ್ಮಗ್ರಂಥಗಳು ಹೆಂಗಸರನ್ನು ಅಜ್ಞಾನ ಮತ್ತು ಸಂಕಷ್ಟದಲ್ಲಿರಿಸುತ್ತವೆ. ನಾನು ಹೇಳಿದ ಅಂಶಗಳು ಭಾರತೀಯರು ಸಿದ್ಧಪಡಿಸಿದ ಚಿತ್ರ , ಫೋಟೊ , ಪುಸ್ತಕಗಳಿಂದ , ಭಾರತದ ಸರ್ಕಾರದ ಕಾನೂನುಗಳಿಂದ ಮತ್ತು ಭಾರತೀಯರ ಹೇಳಿಕೆಗಳಿಂದ ನಿದರ್ಶಿಸಲ್ಪಟ್ಟಿವೆ. ತೀರಾ ಸಾಮಾನ್ಯವಾದ ಕೆಲ ಸಹಜ ತಪ್ಪು ಹೇಳಿಕೆಗಳನ್ನು ಹೊರತುಪಡಿಸಿ ಈ ಸಂಗತಿಗಳು ನಿಂದನೆಗಳಾಗಿರದೆ ಸತ್ಯಗಳಾಗಿವೆಯೆಂದು ನಾನು ಧೃಢಪಡಿಸುತ್ತೇನೆ. ನೀನು ಅಷ್ಟನ್ನು ಒಪ್ಪಿಕೊಳ್ಳುವೆಯಾ ? ಹಿಂದೂಗಳಲ್ಲಿ ಅತ್ಯುನ್ನತ ಧರ್ಮಸೂತ್ರಕಾರ ಮನುವಿನ ಸಂಹಿತೆಗಳು ಇವು – ‘ಹೆಂಗಸರಿಗೆ ಪವಿತ್ರ ಗ್ರಂಥಗಳೊಂದಿಗೆ ಯಾವುದೇ ಕೆಲಸವಿಲ್ಲ ‘ ಹೆಂಗಸು ಕಂಡ ತಕ್ಷಣ ಬ್ರಾಹ್ಮಣ ವೇದಗಳನ್ನು ಓದುವುದನ್ನು ನಿಲ್ಲಿಸಬೇಕು. . ಗಂಡ ನೀತಿಗೆಟ್ಟಿದ್ದರೂ , ಇನ್ನೊಂದು ಹೆಣ್ಣಿನಲ್ಲಿ ಅನುರಕ್ತನಾಗಿದ್ದರೂ , ಹೆಂಡತಿ ಆತನನ್ನು ದೇವರೆಂದು ಪರಿಗಣಿಸಬೇಕು. ಗಂಡ ಹೆಂಡತಿಗೆ ವಿಷ್ಣುವಿಗಿಂತಲೂ ದೊಡ್ಡವನು’
(೬) ಮಿಷನರಿಗಳು ತಮಗೆ ಸಾದ್ಯವಾದ ಎಲ್ಲ ರೀತಿಯಲ್ಲಿ ಭಾರತೀಯರಿಗೆ ನೆರವಾಗುತ್ತಾರೆ. ಅವರು ಜನರಿಗೆ ಬೋಧಿಸುತ್ತಾರೆ, ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ , ಜನರ ಲೌಕಿಕ ಉನ್ನತಿಗೆ ಬೇಕಾದುದೆಲ್ಲವನ್ನೂ ಮಾಡುತ್ತಾರೆ. ಇವೆಲ್ಲವುಗಳಿಗೆ ಪ್ರತಿಯಾಗಿ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುವ ಹುನ್ನಾರ ಇದೆನ್ನುವ ದೂಷಣೆಯ ಬಹುಮಾನ ದಕ್ಕುತ್ತದೆ. ಮಿಷನರಿಗಳ ಮುಖ್ಯ ಸಂದೇಶ ದೇವರು ಎಲ್ಲರ ತಂದೆ , ಆತ ಯೇಸುವಿನಂತೆ . ಪಾಪದಿಂದ ಜನರನ್ನು ರಕ್ಷಿಸಲು ಅಸು ನೀಗಿದ ಯೇಸು, ಪಾಪಿಗಳಿಗೆ ನೆರವಾಗುವ ಜೀವಂತ ರಕ್ಷಕ. ರಕ್ಷಕ ಈಗ ನೆರವಿಗೆ ಸಿದ್ಧನಿದ್ದಾನೆ, ಇದು ಭಾರತದ ಮಿಷನರಿ ಸಂಘಗಳ ಉದ್ದೇಶ.
(೭) ಡೆಟ್ರಾಯಿಟ್ ಮತ್ತಿತರ ಕಡೆ ನೀನು ಮಾಡಿದ ಭಾಷಣಗಳಿಂದ ಭಾರತ ಸರ್ಕಾರದಲ್ಲಿ ಇಷ್ಟವಿಲ್ಲದ ನಿನಗೆ ಈಗ ರಾಜಕೀಯ ಸ್ವಾತಂತ್ರ ಬೇಕೆನಿಸುತ್ತಿದೆ ಎಂದು ತೀರ್ಮಾನಿಸಬಹುದು. ನಮ್ಮ ನಂಬಿಕೆಯೆಂದರೆ ಕ್ರಿಸ್ತನ ತಿಳಿವಳಿಕೆ ಭಾರತದ ಒಳಿತಿನ ಮೂಲವಾಗಿದೆ. ಮಿಷನರಿ ಅಲ್ಲದ ರುಡ್’ಯಾರ್ಡ್ ಕಿಪ್ಲಿಂಗ್ ‘ ಈ ದೇಶಕ್ಕೆ ಏನಾಗಿದೆ ‘ ಎಂದಿರುವ ಮಾತು ಕೇವಲ ಕನಿಷ್ಟ ರಾಜಕೀಯಕ್ಕೆ ಮಾತ್ರವಲ್ಲ ಲೌಕಿಕ , ಸಾಮಾಜಿಕ , ನೈತಿಕ ರೂಪದ ಎಲ್ಲ ಬಗೆಯ ಕೆಡುಕು ಮತ್ತು ಭ್ರಷ್ಟತೆಗಳಿಗೆ ಮತ್ತು ಹೆಂಗಸರನ್ನು ಅಸಹಜ ರೀತಿಯಲ್ಲಿ ಕಾಣುವುದಕ್ಕೆ ಸಂಬಂಧಿಸಿದೆ. ಇಲ್ಲಿ ತೊಂದರೆ ಇದೆಯೇ ಹೊರತು ರಾಜಕೀಯದಲ್ಲಲ್ಲ. ಬದುಕಿನ ಬುನಾದಿಯೇ ಕುಸಿದಿದೆ , ಪೂರಾ ಕುಸಿದಿದೆ . ಜನ ತಮ್ಮ ಹಕ್ಕು ಮತ್ತು ಅನುಕೂಲಗಳ ಬಗ್ಗೆ ಮಾತನಾಡುತ್ತಾರೆ ! ಇಂತಹ ಗಂಡಸರನ್ನು ಹೆಂಗಸರು ಸಹಿಸುತ್ತಾರೆ, ದೇವರೇ ಗಂಡಸರನ್ನು ಮನ್ನಿಸು. ಮಿಷನರಿಯಲ್ಲದ ಜಾನ್ ಎಲ್. ಸ್ಟೊಡಾರ್ಡ್ ‘ನಂತಹ ಪ್ರವಾಸಿ ಭಾರತದ ಸಾಮಾಜಿಕ , ನೈತಿಕ ಸ್ಥಿತಿಯ ಬಗ್ಗೆ ಏನು ಹೇಳುತ್ತಾನೆ ಎನ್ನುವುದನ್ನು ಕೇಳು.
(೮) ಸ್ವಾಮಿಯೇ ಈಗ ನೀನು ಮಿಷನರಿಗಳನ್ನು ತಿರಸ್ಕರಿಸುವಾಗ , ಅಮೆರಿಕನ್ನರು ಅದಕ್ಕೆ ಚಪ್ಪಾಳೆ ತಟ್ಟುವಾಗ ಅವರಿಗೆ ಹೀಗೆಂದು ಹೇಳು ‘ ಈ ಚಪ್ಪಾಳೆಯಿಂದ ನನ್ನ ದೇಶಕ್ಕೇನೂ ಲಾಭವಿಲ್ಲ. ಮಿಷನರಿಗಳಿಗಿಂತ ಉತ್ತಮವಾದ ಜಾರಿಗೊಳಿಸಬಹುದಾದ ಯಾವ ಕೆಲಸಗಳನ್ನು ನೀವು ಭಾರತಕ್ಕೆ ಮಾಡಲು ಇಚ್ಛಿಸುತ್ತೀರಿ ? ಭಾರತಕ್ಕೆ ಬಂದು ಬದುಕಿರಿ…..’ ಆಗ ನಿಮಗೆ ಥಿಯೊಸೊಫಿ ಅಧ್ಯಯನ ಮಾಡುವ . ಕಣ್ಕಟ್ಟು ನೋಡಬಯಸುವ , ದೇಶ ಸುತ್ತ ಬಯಸುವ ಕೆಲ ಪ್ರವಾಸಿಗಳು ಸಿಗಬಹುದಷ್ಟೇ. ಬೇರೆಯವರು ಅನುಷ್ಠಾನಶೀಲ ಒಳ್ಳೆಯ ಕೆಲಸ ಪ್ರಾರಂಬಿಸುವವರೆಗೆ ಭಾರತಕ್ಕೆ ಒಳ್ಳೆಯದನ್ನು ಮಾಡಿರುವರನ್ನು ತಿರಸ್ಕರಿಸಬೇಡ – ನಿಮ್ಮ ದೇಶವಾಸಿ ಆರ್.ಎ. ಹ್ಯೂಮ್
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
೨೫ , ಹಾಲೆಂಡ್ ವಿಲ್ಲಾಸ್ ರೋಡ್
ಅಕ್ಟೋಬರ್ ೧, ೧೮೯೯
ಪ್ರೀತಿಯ ಸ್ವಾಮೀಜಿ
ನಿನ್ನ ೧೪ ಸೆಪ್ಟೆಂಬರ್ ಪತ್ರ ನನಗೆ ತಲುಪಿದೆ. ಅದಕ್ಕಾಗಿ ಧನ್ಯವಾದಗಳು.
ಹೆಚ್ಚಿನ ಅಭಿಪ್ರಾಯ ಕೊಡುವ ಮೊದಲು ನಿನ್ನ ವಿರುದ್ಧ ಯಾರೂ ಸಂಘಟಿತರಾಗಿರಾಗಿಲ್ಲ ಎನ್ನುವುದನ್ನು ತಿಳಿಸುತ್ತೇನೆ. ನಿನಗೆ ತಿಳಿದಿರುವಂತೆ ನಾನು ಮಿಸ್ ಸೌಟೆರ್ ಸಂಪರ್ಕ ಹೊಂದಿ ಬಹಳ ದಿನಗಳಾದವು. ಶ್ರೀಮತಿ ಆಸ್ಟನ್ ಜಾನ್ಸನ್ , ಆಕೆಗೆ ಸ್ವಲ್ಪ ಗೊತ್ತಿದೆಯಾದರೂ , ಎಂದೂ ಭೇಟಿಯಾಗುವುದಿಲ್ಲ , ಮಿಸ್ ಮುಲ್ಲರ್’ಗೆ ಆಗಲಿ ಅಥವಾ ಮೊದಲಿನ ಇಬ್ಬರು ಹೆಂಗಸರಿಗಾಗಲಿ ಅಥವಾ ನನಗಾಗಲಿ ಯಾವುದರೊಂದಿಗೂ ಸಂಬಂಧವಿಲ್ಲ.
ನನ್ನ ಮತ್ತು ಶ್ರೀಮತಿ ಆಷ್ಟನ್ ಜಾನ್ಸನ್ (ಎ.ಜೆ) ನಡುವೆ ಕಳೆದ ಎರಡೂವರೆ ತಿಂಗಳಿನಿಂದ ಸ್ವಲ್ಪ ಮಟ್ಟಿನ ಪತ್ರ ವ್ಯವಹಾರವಿದ್ದಿತು. ನಿನ್ನ ಬಗ್ಗೆ ಏನೂ ಇಲ್ಲ , ಆದರೆ ಎ.ಜೆ ಮಿಸ್ ಮಾರ್ಗರೆಟ್ ಬಗ್ಗೆ ಎಂತಹ ಅಭಿಪ್ರಾಯ ಹೊಂದಿದ್ದಾಳೆ ಎನ್ನುವ ಬಗ್ಗೆ ನಾನು ದೂರವಿದ್ದೇನೆ. ಮಿಸ್ ಮಾರ್ಗರೆಟ್ ನಿನ್ನ ಬಗ್ಗೆ ಹೊಂದಿರುವ ಅಭಿಪ್ರಾಯಗಳ ಬಗ್ಗೆ ನನ್ನ ಯಾವುದೇ ತಕರಾರುಗಳಿಲ್ಲ. ಅದು ನಿಮ್ಮಿಬ್ಬರ ನಡುವಿನ ವೈಯಕ್ತಿಕ ವಿಚಾರವಾಗಿದ್ದು ಅಲ್ಲಿಗೆ ಕೊನೆಗೊಳ್ಳುತ್ತದೆ. ಇದೇ ನನ್ನ ವೈಯಕ್ತಿಕ ಸ್ವಾತಂತ್ರದ ಕಲ್ಪನೆಯಾಗಿದ್ದು ನಿನಗೆ ಮತ್ತು ನನಗೆ ಇಬ್ಬರಿಗೂ ಸಲ್ಲುತ್ತದೆ. ಆದರೆ ಮಿಸ್ ಮಾರ್ಗರೆಟ್ ತಾನು ನಿನ್ನ ಬಗ್ಗೆ ಹೊಂದಿರುವಂತಹ ಆರಾಧನೆಯ ಭಾವನೆಗಳನ್ನು ನಾನೂ ಕೂಡ ಹೊಂದಿದ್ದೇನೆ ಎಂದು ಊಹಿಸಿ ಪತ್ರಗಳನ್ನು ಬರೆಯುತ್ತಿದ್ದಳು. ಆದ್ದರಿಂದ ನಾನು ಆಷಾಢಭೂತಿಯಂತೆ ಇರದೆ ನನ್ನ ನಿಲುವನ್ನು ಸ್ಪಷ್ಟಪಡಿಸಲು ಪತ್ರ ಬರೆಯಬೇಕಾದ ಅನಿವಾರ್ಯತೆ ಇದ್ದಿತು. ನಾನು ನಿನಗೆ ಪತ್ರಗಳನ್ನು ತೋರಿಸುವಂತೆ ಆಕೆಗೆ ಹೇಳಿದೆನಾದರೂ ಮೊದಲಿಗೆ ಆಕೆ ಅದನ್ನು ಒಪ್ಪಲಿಲ್ಲ.
ನನ್ನ ಪತ್ರಗಳಲ್ಲಿರುವುದರಲ್ಲಿ ಯಾವುದನ್ನೂ ಹಿಂದೆಗೆದುಕೊಳ್ಳುವುದಿಲ್ಲ. ಮಿಸ್ ನೋಬಲ್ ಸಂನ್ಯಾಸ, ಸಂನ್ಯಾಸ ಎಂದು ಬರೆಯುತ್ತಿದ್ದಳು . ನಾನು ಬಹಳ ದಿನಗಳಿಂದ –ಕ್ಯಾವೆರ್’ಷ್ಯಾಂ ದಿನಗಳಾದ ಮೇಲೆ ಸ್ವಲ್ಪ ಕಾಲದ ನಂತರದಿಂದ - ಚಿಂತಿಸುತ್ತಿದ್ದುದನ್ನು ಆಕೆಗೆ ಬರೆದೆನು. ‘ನಾನು ಈ ದೇಶದಲ್ಲಿ ಸಂನ್ಯಾಸದ ಬಗ್ಗೆ ಬೇಕಾದಷ್ಟು ಕೇಳಿದ್ದೇನೆ. ಆದರೆ ಅದನ್ನು ಪ್ರತಿಪಾದಿಸುವವರು ಕಿಂಚಿತ್ತೂ ಅನುಸರಿಸದಿರುವುದನ್ನು ಬಲ್ಲೆ. ಈ ವಿಚಾರವನ್ನು ಎಳೆದು ಮುಂದುವರೆಸಲು ಬಯಸಿ ವಿಷಯವನ್ನು ಕಹಿಗೊಳಿಸಲು ಬಯಸುವುದಿಲ್ಲವಾದರೂ ನಾನು ಹೇಳಿದ್ದನ್ನು ಸಮರ್ಥಿಸಿಕೊಳ್ಳುತ್ತೇನೆ. ಊಟ , ವಸತಿಗಳ ಬಗ್ಗೆ ಯಾವಾಗಲೂ ಗೊಣಗಾಟವಿದ್ದಿತು. ಒಬ್ಬ ಸಂನ್ಯಾಸಿಯನ್ನು ಸಲಹಲು ಆಗುತ್ತಿದ್ದ ಖರ್ಚು ಸಂನ್ಯಾಸದ ಯಾವ ಸೋಗನ್ನೂ ಹಾಕದ ಹಲವು ಕಾರ್ಮಿಕರನ್ನು , ವಿಶ್ವವಿದ್ಯಾಲಯದ ಒಬ್ಬ ಯುವವಿದ್ಯಾರ್ಥಿಯನ್ನು ಅಥವಾ ಬಡತನ ತುಂಬಿರುವ ಜಾಗಗಳಲ್ಲಿರುವ ವೈದ್ಯನನ್ನು ಸಾಕುವುದಕ್ಕಿಂತ ಹಲವು ಪಟ್ಟು ಹೆಚ್ಚಿನದಾಗಿದ್ದಿತು. ಹೆಚ್ಚಿಗೆ ಮಾತನಾಡದೆ ತಮ್ಮ ಆದರ್ಶಗಳನ್ನು ಪೂರ್ಣಗೊಳಿಸುವವರು ಯಾರು ? ಸಣ್ಣ ವಿಷಯಗಳ ಬಗ್ಗೆ ನಿನಗಿದ್ದ ಸಿಟ್ಟು , ಕೆಲಮಟ್ಟಿಗೆ ಬಡಾಯಿ ಕೊಚ್ಚುವುದು , ಉತ್ಪ್ರೇಕ್ಷೆ ಒತ್ತಟ್ಟಿಗಿರಲಿ, ನಾನು ಪರಿಪೂರ್ಣತೆಯ ಪ್ರತಿಪಾದಕನೆಂದಾಗಲಿ ಅಥವಾ ಸಾಧಕನೆಂದಾಗಲಿ ಹೇಳಿಕೊಂಡಿಲ್ಲ. ಕಪಟತನ , ನಟನೆ ಬದಿಗಿರಿಸಿ ನೀನು ಏನಾಗಿರುವೆಯೋ , ಹೇಗೆ ಕಾಣಿಸಿಕೊಳ್ಳುವೆಯೋ ಹಾಗೆ ಲೆಕ್ಕಿಸೋಣ . ನಿನ್ನನ್ನು ನಮ್ಮಂತೆಯೇ ಸೋಲು ಗೆಲುವುಗಳಿರುವ ಆದರೆ ಸ್ವಲ್ಪ ಹೆಚ್ಚು ಪ್ರತಿಭೆ, ಒಳನೋಟ , ಕಡಿಮೆ ಸಂಶಯಗಳಿರುವ ಒಬ್ಬ ಮನುಷ್ಯನಂತೆ ಪರಿಗಣಿಸುತ್ತೇನೆಯೇ ಹೊರತು ಕೆಲ ಭಕ್ತ ಹೆಂಗಸರು ಭಾವಿಸುವಂತೆ ನಡೆದಾಡುವ ದೇವರೆಂದಲ್ಲ.
ಮಿಸ್ ಸೌಟೆರ್ ಅಥವಾ ಮಿಸ್ ಮುಲ್ಲರ್ ನಿನಗೆ ಹಣ ಕೊಟ್ಟಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದರೆ ನೀನು ಅವರಿಗೆ ಪತ್ರವನ್ನು ಬರೆಯಬೇಕು , ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ನನ್ನ ಪರವಾಗಿ ಮಾತ್ರ ನಾನು ಉತ್ತರಿಸುತ್ತೇನೆ. ಮೊದಲ ಬಾರಿಗೆ ನಿನ್ನ ಕಡೆಯಿಂದ ಅದು (ಹಣ) ಯಥೋಚಿತವಾಗಿ ಬಳಸಲ್ಪಟ್ಟಿದೆಯೆಂದು ತಿಳಿದು ಸಂತೋಷವಾಯಿತು. ನಾನು ಕೊಟ್ಟ ಹಣದಲ್ಲಿ ಕನಿಷ್ಟ ಒಂದು ಪೈಸೆಯ ಬಗ್ಗೆಯೂ ನನಗೆ ಪಶ್ಚತ್ತಾಪವಿಲ್ಲ. ಅದು ಒಂದೊಂದು ಇಟ್ಟಿಗೆಯನ್ನು ಅಥವಾ ಸಂನ್ಯಾಸಿಯನ್ನು ಮೇಲೇರಿಸಲು ನೆರವಾಗಿದ್ದು ಆಶೀರ್ವಾದಿಂದ ಆವರಿಸಲ್ಪಟ್ಟಿದೆ ಎಂದು ಆಶಿಸುತ್ತೇನೆ. ಯಾರಾದರೂ ತಾವು ಹಣ ಕೊಟ್ಟಿದ್ದಕ್ಕೆ ಪಶ್ಚಾತ್ತಾಪ ಪಟ್ಟರೆನ್ನುವ ಅಭಿಪ್ರಾಯಗಳು ಯಾವುವೂ ನನಗೆ ಗೊತ್ತಿಲ್ಲ. ನೀನು ದ್ವೇಷದ ಬಗ್ಗೆ ಹೇಳುತ್ತಿರುವೆ ಅದು ಉತ್ಪ್ರೇಕ್ಷೆ ಅಥವಾ ಅದಕ್ಕಿಂತ ಕೆಟ್ಟದ್ದು. ನಾನು, ದ್ವೇಷದ ದಿಕ್ಕಿಗೆ ಸನಿಹದಲ್ಲಿರುವೆ , ದ್ವೇಷಿಸುವೆ ಎಂದು ಯಾರೂ ಹೇಳಲಾರರು. ಪ್ರಾಮಾಣಿಕ ಅಭಿಪ್ರಾಯ , ಆದರ್ಶಗಳನ್ನು ಕುರಿತಾದ ಭಿನ್ನಮತ ದ್ವೇಷವಲ್ಲ. ಗಂಡುಗಲಿ , ಗುಲಾಮ ಜನಾಂಗ ಎನ್ನುವ ನಿನ್ನ ಮಾತುಗಳಲ್ಲಿ ನನಗೆ ಯಾವ ನಿಜವೂ ಕಾಣುತ್ತಿಲ್ಲ. ಇಲ್ಲಿ ಯಾವುದೇ ಪಿತೂರಿ ಅಥವಾ ಒಳಸಂಚಿಲ್ಲ. ರಕ್ತಪಿಪಾಸುಗಳಾದ ಪಾಳೆಗಾರರು ನನ್ನೊಂದಿಗಿಲ್ಲ. ಯಾರೂ ಯಾವುದೇ ದ್ವೇಷವನ್ನು ಒಳಗೆ ಅಡಗಿಸಿಕೊಂಡಿಲ್ಲ. ಆ ವಿಚಾರದಲ್ಲಿ ನಾನು ಶ್ರೀಮತಿ ಜಾನ್ಸನ್ ಬಗ್ಗೆ ಖಚಿತವಾಗಿ ಮಾತನಾಡಬಲ್ಲೆ. ಆಕೆ ಕ್ರಿಶ್ಚಿಯನ್ ಸೈನ್ಸ್ ವಿಚಾರದಲ್ಲಿ ಭಾರಿ ನಂಬಿಕೆ ಇಟ್ಟಿದ್ದು ಆ ವಿಷಯದಲ್ಲಿ ನಿಮ್ಮ ಬಗ್ಗೆ ಕಠಿಣ ನಿಲುವು ತಳೆದಿರುವಂತಿದೆ. ರೋಗ ಪೀಡಿತರಾದಾಗ ಎಲ್ಲ ದೆಸೆಗಳಿಂದ ನಾವೆಷ್ಟು ದುರ್ಬಲರಾಗುತ್ತೇವೆ ಎನ್ನುವುದನ್ನು ನಾನು ಬಲ್ಲೆ. ವ್ಯಸ್ತವಾದ ದೇಹ ಹೊರತಾಗಿ ಮಾನಸಿಕವಾಗಿ ನೀನಾಗಲಿ ಅಥವಾ ಇನ್ನಿತರರಾಗಲಿ ಎಷ್ಟು ಅನಾರೋಗ್ಯವಾಗಿರುವಿರೆಂದು ನಿರ್ಧರಿಸುವ ನ್ಯಾಯಾಧೀಶ ನಾನಲ್ಲ.
ನೀನು ದೇಹವನ್ನು ಕುರಿತಾಗಿ ಏನು ಬೋಧಿಸಿರುವೆಯೆಂದು ಬಲ್ಲೆ. ‘ನಾನು ಹೇಳಿದಂತೆ ಮಾಡು. ನಾನು ಮಾಡುವಂತಲ್ಲ’ ಎನ್ನುವುದು ನನಗೆ ಗೊತ್ತು,,,, ನಿರರ್ಗಳ ಮಾತಿನಿಂದ ಪ್ರಚೋದಿಸಲ್ಪಟ್ಟವರು ಅದರ ಪ್ರಭಾವ ಕುಗ್ಗಿದ ಮೇಲೆ ಮಾತು ಮತ್ತು ಅನುಷ್ಠಾನದಲ್ಲಿರುವ ವ್ಯತ್ಯಾಸವನ್ನು ಕಂಡಾಗ ಷಾಂಪೆನ್ ನಿಶೆಯಿಳಿದ ನಂತರ ಮತ್ತೊಮ್ಮೆ ಖಿನ್ನತೆಗೆ ಒಳಗಾಗುವವರ ಸ್ಥಿತಿ ತಲುಪುತ್ತಾರೆ. ಎಲ್ಲ ಧರ್ಮ , ಪಂಥಗಳ ಎಲ್ಲ ಜನ ಪ್ರತಿ ದಿನ ಮಾತನಾಡುವುದು ಮತ್ತು ಅದರ ಬದಲು ಅದರಂತೆ ನಡೆದುಕೊಳ್ಳುವ ಒಬ್ಬ ವ್ಯಕ್ತಿಯ ಬಗ್ಗೆ ಆಲೋಚಿಸು. ಮಾತನಾಡುವವರು ಯಾವ ಪ್ರಭಾವ ಬೀರಬಲ್ಲರು ? ಕೊನೆಗೆ ಎಲ್ಲವದೂ ಇಲ್ಲಿಗೆ ಬಂದು ನಿಲ್ಲುತ್ತದೆ. ಇಲ್ಲಿ ನಾನು ಯಾವುದೇ ಬಗೆಯ ಕೆಲಸ ಮಾಡಲು ಸಿದ್ಧ ಎನ್ನುವುದು ಭಾರತೀಯ ಆದರ್ಶಗಳ ಯೋಗ್ಯ ಮುನ್ನುಡಿಯಾಗಿರುತ್ತದೆ. ನಾನು ಯಾರಿಗೆ ಅನಿರ್ಬಂಧಿತ ಸಹಕಾರ ಕೊಡಲು ಮುಂದಾಗಿರುವೆನೋ ಅವರು ಬೋಧಿಸುವುದೇ ಒಂದು ಬದುಕುವುದೇ ಒಂದು ಎನ್ನುವುದರ ಬಗ್ಗೆ ನಾನು ಬಹಳ ಸೂಕ್ಷ್ಮ.
ಸಂನ್ಯಾಸಿಗಳನ್ನು ಇಲ್ಲಿಗೆ ಕರೆಸಿಕೊಂಡ ನಂತರ ಅವರಲ್ಲಿ ಸಂನ್ಯಾಸ, ತೃಪ್ತಿ , ಮನಸ್ಥೈರ್ಯ , ಪರಿಸರದ ಸರಳತೆಗಳು ಮಾಯವಾಗುತ್ತವೆ. ಅವರು ಬದುಕಲು ಗೋಳದ ಇನ್ನೊಂದು ತುದಿಯಲ್ಲಿರುವ ಊಟ , ಸೇದಲು ಷಿಲ್ಲಿಂಗ್ ಬೆಲೆಯ ಸಿಗಾರ್ , ಅತ್ಯುತ್ತಮ ಬಟ್ಟೆ , ಹಣ್ಣು ಬಯಸಿದರೆ ಆವರು ಯಾರು ? ಏನನ್ನು ಬೋಧಿಸುತ್ತಿದ್ದಾರೆ? ಇದು ನನಗೆ ಅರ್ಥವಾಗದು. ಗೀತೆ , ಉಪನಿಷತ್ತು , ಮಹಾಭಾರತ ಮತ್ತು ಇತರ ಗ್ರಂಥಗಳನ್ನು ಓದಿ , ಭಾರತದ ಗತಕಾಲದಲ್ಲಿದ್ದ ವೈಭವಯುತ, ಪೌರುಷಯುತ, ಸಾತ್ತ್ವಿಕ ಜೀವನ , ಪ್ರೀತಿ ಮತ್ತು ಸಭ್ಯತೆ ತುಂಬಿರುವುದನ್ನು ಅರಿತು ನಾನು ಮನಸ್ಸಿನಲ್ಲಿ ರೂಪಿಕೊಂಡಿರುವ ಸಂನ್ಯಾಸದ ಆದರ್ಶಗಳು ಅವಲ್ಲ ಎಂದು ಹೇಳಬಲ್ಲೆ. ಬಹುಶಃ ಅವರು (ಹಿಂದಿನ ಸಂನ್ಯಾಸಿಗಳು) ತಮ್ಮ ಕಾಲದ ಶ್ರೀಮಂತರೊಂದಿಗೆ ಬದುಕಿದ್ದು , ಚೆನ್ನಾಗಿ ಕಾಲ ಕಳೆಯಬಹುದಿದ್ದಿತು. ಆದರೆ ನನಗೆ ಅವರು ಹಾಗಿರಲಿಲ್ಲ ಎನಿಸುತ್ತದೆ. ತಮಗೆ ಬೇಕಾದುದಕ್ಕಿಂತಲೂ ಕಡಿಮೆ ಅಗತ್ಯಗಳನ್ನು ತಾವು ರೂಢಿಸಿಕೊಂಡು ಅವರು ಬಡವರಿಗೆ , ಜೀವನಕ್ಕಾಗಿ ಹೋರಾಟ ನಡೆಸುತ್ತಿರುವವರಿಗೆ ನೆರವಾಗಲು ಯತ್ನಿಸಿದ್ದರೆನ್ನುವುದೇ ಸರಿ. ನಾನು ನನ್ನ ಹೆಂಡತಿ , ಮಕ್ಕಳು ಮತ್ತು ನಾಗರಿಕತೆಯ ಎಲ್ಲ ರೇಜಿಗೆಗಳೊಂದಿಗೆ ಬದುಕುತ್ತಿದ್ದೇನೆ. ಹಲವು ವರ್ಷಗಳ ಹಿಂದೆ ನನಗೆ ಸಿಕ್ಕ ಅವಕಾಶವನ್ನು ಬಳಸದೆ ( ಸಂನ್ಯಾಸಿಯಾಗುವ ಅವಕಾಶ) ಈಗ ಅದಕ್ಕಾಗಿ ಹಲವು ವರ್ಷಗಳಿಂದ ಹೋರಾಡುತ್ತಿದ್ದೇನೆ. ಇರಲಿ ಅದೆಲ್ಲ ಮುಗಿದ ಕತೆ.
ನಾನು.ನುಡಿದಂತೆ ನಡೆಯುವಂತಿದ್ದರೆ ಮಾತ್ರ ಇತರರಿಗೆ ಬೋಧಿಸಬಹುದು. ನಾನು ದಾರಿದ್ರ್ಯ , ಸರಳತೆ , ವಸ್ತು ನಿರ್ಮೋಹದ ಬಗ್ಗೆ ಬೋಧಿಸುತ್ತ ಹೆಂಡತಿ , ಮಕ್ಕಳಿರುವ ನನ್ನ ಕುಟುಂಬವನ್ನು ಸಲಹಲಾರೆ. ಆದರೆ ಆಷಾಢಭೂತಿಗಳಾಗದೆ ಯಾರು ಅದನ್ನು ಬೋಧಿಸಲು ಜೀವಿಸುತ್ತಾರೋ ಅವರಿಗೆ ನೆರವಾಗುತ್ತೇನೆ.; ಆದರೆ ಅಂತಹ ಯಾರಾದರೂ ನನಗೆ ಸಿಗುವರೇ ಎನ್ನುವುದೇ ಪ್ರಶ್ನೆ. ಜಗತ್ತಿನಲ್ಲಿ ಉಳಿದ ಬಾಯಿಬಡುಕರಂತೆ ಕೇವಲ ಮಾತನಾಡದೆ ಅದರಂತೆ ಬದುಕುವರು ಇರುವರೇ? ನನಗೆ ನಕಲಿಗಳು ಬೇಕಿಲ್ಲ.
ನಾನು ವರ್ಷಗಳು ಉರುಳಿ ಕಳೆದು ಹೋಗುವವರೆಗೆ ಎಂದೆಂದಿಗೂ ಮೌನವಾಗಿರುತ್ತೇನೆ. ನನ್ನಲ್ಲಿಲ್ಲದ ಯಾವುದೇ ಆದರ್ಶವನ್ನು ಮೈಗೂಡಿಸಿಕೊಳ್ಳಲು ಪರಿಶ್ರಮಿಸುತ್ತೇನೆ. ಅತ್ಯಾಚಾರ ಮಾಡಲಿ , ಕೊಲೆಗೈಯ್ಯಲಿ ನಾನು ಯಾರನ್ನೂ ಟೀಕಿಸುವುದನ್ನು ಬಯಸುವುದಿಲ್ಲ. ಆದರೆ ನಾನು ಏನು ಹೇಳುತ್ತೇನೋ ಅದೇ ಆಗಬೇಕೆಂದು, ಯಾರೊಂದಿಗಾದರೂ ಕೆಲಸ ಮಾಡಿದರೆ ಅವರು ಆಡಿದ ಮಾತೇ ಆ ವ್ಯಕ್ತಿಯಾಗಬೇಕೆಂದು ಬಯಸುತ್ತೇನೆ. ನನ್ನ ಇಬ್ಬಂದಿತನವೇ ನನಗೆ , ತೃಪ್ತಿ ತರದು , ನಾನು ಏನಾಗಿಲ್ಲವೋ , ನಾನು ಯಾವುದನ್ನು ಆಚರಿಸುತ್ತಿಲ್ಲವೋ ಅದನ್ನು ಇತರರಿಗೆ ಬೋಧಿಸಲಾರೆ . ನನ್ನ ಜೀವನ ನಾನು ಏನಾಗಿರುವೆನೆಂದು ತಿಳಿಸುತ್ತದೆ, ಇದೇ ನನ್ನ ಬೋಧನೆ. ನೀನು ಮತ್ತು ನಿನ್ನ ಗುರುಭಾಯಿಗಳು ಸಂನ್ಯಾಸಿಗಳೆಂದು ಹೇಳುವೆ . ಅದು ಹಾಗೆಯೇ ಇರಲಿ. ನೀನು ಬೋಧಿಸುವುದೆಲ್ಲವೂ ಜಾರಿಗೆ ಬರುವುದನ್ನು ಕಾಣೋಣ. ನಾನು ಭಾವಿಸುವುದನ್ನು ಸ್ಫುಟವಾಗಿ ವ್ಯಕ್ತಪಡಿಸಲು ನನಗೆ ಆಗದಿರಬಹುದು ; ಆದರೆ ನಾನು ಮರೆಮಾಚುವಂತಹುದಾಗಲಿ , ಹಿಂದಕ್ಕೆ ಉಳಿಸಿಕೊಳ್ಳುವಂತಹುದಾಗಲಿ ಏನೂ ಇಲ್ಲ ; ಏನನ್ನಾದರೂ ನೀನು ಹೇಳುವುದಿದ್ದರೆ , ಸ್ಪಷ್ಟೀಕರಿಸುವುದಿದ್ದರೆ ಅದು ಬರಲಿ. ಫ್ರಾನ್ಸಿಸ್ ಲೆಗೆಟ್ ಸೇರಿದಂತೆ ರಿಡ್ಜ್’ಲಿ ಮ್ಯಾನೊರ್’ನಲ್ಲಿರುವ ಎಲ್ಲರೂ ಈ ಪತ್ರವನ್ನು ನೋಡಬೇಕೆಂದು ನಾನು ಬಯಸುತ್ತೇನೆ , ಅದಾಗದಿದ್ದರೆ ನನ್ನಂತೆ ಪತ್ರವನ್ನು ಯಾರಿಗೂ ತೋರಿಸದೆ ನೀನೆ ಇಟ್ಟುಕೋ.
ಎಂದಿನಂತೆ ನಿನ್ನವ – ಎ,ಟಿ.ಎಸ್ (1)
*************************************************
ಸಾರಾ ಬುಲ್ ಪತ್ರ
ಆಗಸ್ಟ್ ೨೨, ೧೮೯೫
ಪ್ರೀತಿಯ ಲೇಡಿ ಹೆನ್ರಿ
ನಾನು ನಿನ್ನಿಂದ ಒಂದು ವೈಯಕ್ತಿಕ ಉಪಕಾರವನ್ನು ಬಯಸುತ್ತೇನೆ.
ಸ್ವಾಮಿ ವಿವೇಕಾನಂದ ಈಗ ಇಂಗ್ಲೆಂಡ್’ಗೆ ಹೋಗಿದ್ದಾನೆ. ನೀನು ಲಂಡನ್’ನಲ್ಲಿ ಆತನ ಪರಿಚಯಸ್ಥರ ಮುಂದೆ ಊಟದ ಸಮಯದಲ್ಲಿ ನಿನ್ನ ಉಪಸ್ಥಿತಿಯಲ್ಲಿ ಆತ ಷಾಂಪೇನ್ ಕುಡಿದಿದ್ದಕ್ಕೆ ಅಸಂತೋಷ ವ್ಯಕ್ತಪಡಿಸಿದಯೆಂದು ಅದು ಆತನಿಗೆ ಬರವಣಿಗೆಯಲ್ಲಿ (ಪತ್ರ) ತಿಳಿಯಿತೆಂದು ಲಂಡನ್’ಗೆ ಹೋಗುವ ಮೊದಲು ನನಗೆ ತಿಳಿಸಿದನು. ಆತ ನಿನ್ನೊಂದಿಗೆ , ನಿನ್ನ ಮತ್ತು ನನ್ನ ಮನೆಯಲ್ಲಿ ಮಾತ್ರ ಊಟ ಮಾಡಿರುವುದರಿಂದ ನೀನು ಹಾಗೆ ಹೇಳಿರುವುದು ಅಸಾದ್ಯವೆಂದು ತಿಳಿಸಿದೆನು, ನೀನು ಮಾತನಾಡಿರುವುದು ಆತನ ಘನತೆಗೆ ಕುಂದು ತರಬಹುದು. ನೀನು ನಮ್ಮೊಂದಿಗೆ ಡಿಸೆಂಬರ್’ನಿಂದ ಇರುವುದರಿಂದ , ಆತನನ್ನು ಮತ್ತು ಆತನ ಕೆಲಸವನ್ನು ಸನಿಹದಿಂದ ನಾನು ತಿಳಿಯುವುದು ಸಾದ್ಯವಾಗಿದೆ. ನಮ್ಮ ಮನೆಯಲ್ಲಿ ‘ಭಾರತದ ಮಹಿಳೆಯ ಆದರ್ಶ’ ಕುರಿತಾಗಿ ಮಾಡಿದ ಭಾಷಣಗಳ ಹಿನ್ನೆಲೆಯಲ್ಲಿ ಬ್ರೂಕ್ಲಿನ್ ನ್ಯೂಯಾರ್ಕ್’ನಿಂದ ಟೀಕೆಗಳು ಬಂದವು. ಏಳು ಉಪನ್ಯಾಸಗಳ ಸರಣಿಯಲ್ಲಿ ಎಥಿಕಲ್ ಅಸೋಸಿಯೇಷನ್ ಸಭೆಯಲ್ಲಿ ನೆರೆದಿದ್ದ ಭಾರಿ ಜನರ ಮುಂದೆ ಆತ ಮತ್ತೊಮ್ಮೆ ಭಾಷಣ ಮಾಡಿದಾಗ ರಮಾಬಾಯಿ ಸರ್ಕಲ್’ನವರು ಪತ್ರಿಕೆಗಳಲ್ಲಿ ಆತನ ಮೇಲೆ ದಾಳಿ ಮಾಡಿದರು. ಆತನ ಪರ ಬಲವಾದ ಬೆಂಬಲವಿದ್ದಿತು. ಆದರೆ ಎರಡೂ ಕಡೆಯವರು ಸರಿಯಿದ್ದು ಮ್ಯಾಕ್ಸ್ ಮುಲ್ಲರ್ ಹೇಳುವಂತೆ ಸಮನ್ವಯಗೊಳಿಸಬೇಕೆಂದು ನನಗೆನಿಸುತ್ತದೆ. ಸ್ವಾಮಿಗಳ ವಿರುದ್ಧ ಮಾಡಿರುವ ಟೀಕೆಗಳು ಗಂಭೀರವಾದುವಾಗಿವೆ. ಅವು ಮಜುಂದಾರ , ಲೈಮನ್ ಅಬ್ಬಾಟ್ , ಡಾ. ಎಸ್ಟ್’ಲಿನ್ ಕಾರ್ಪೆಂಟರ್ ಹಾಗೂ ಮತ್ತಿತರ ಮೂಲಕ ಹಲವು ಸಲ ನನಗೆ ತಲುಪಿವೆ. ವಿವೇಕಾನಂದ ಹಲವು ವರ್ಷಗಳಿಂದ ಧೂಮಪಾನ ಮಾಡುವುದು , ಔತಣ ಕೂಟಗಳಲ್ಲಿ ಭಾಗವಹಿಸುವುದು , ಗಂಡಸಿನ ಹೋರಾಟದ ಸ್ವಭಾವಕ್ಕೆ ಅನುಗುಣವಾಗಿ ಕೆಲವು ಸಲ ದ್ರಾಕ್ಷಾರಸ ಮದ್ಯದ ರುಚಿ ನೋಡಿರುವುದರಲ್ಲಿ ( ಕೇವಲ ಗಂಡಸರೊಂದಿಗೆ ಅಲ್ಲ) ಆತನದೇ ಹೆಚ್ಚಿನ ತಪ್ಪೆಂದು , ಉಳಿದಂತೆ ಅಂಶಿಕವಾಗಿ ಕ್ರೈಸ್ತನಾಗಿ ಮತಾಂತರ ಹೊಂದದ ಪ್ರತಿಯೊಬ್ಬ ಪೌರಾತ್ಯನ ಬಗ್ಗೆ ಮತ್ತು ಒಂದು ಧರ್ಮ , ಪಂಥದ ಬಗ್ಗೆ ಇರುವ (ಪಾಶ್ಚಾತ್ಯರಿಗೆ) ಪೂರ್ವಗ್ರಹವೆಂದೂ ಆತ ನನಗೆ ಪರಿಚಿತವಾಗುವುದಕ್ಕೆ ಮೊದಲಿನಿಂದಲೂ ಇದನ್ನು ನಾನು ಬಲ್ಲೆನೆಂದು ಹೇಳುತ್ತೇನೆ.
ಧೂಮಪಾನಿಗಳು ಮತ್ತು ಕುಡುಕರು ಎರಡೂ ಆಗಿರುವ ಕ್ರೈಸ್ತ ಮಿನಿಸ್ಟರ್’ಗಳು ಆತನ ಬಗ್ಗೆ ಕಟುವಾಗಿ ನನಗೆ ಹೇಳಿದ್ದಾರೆ. ರಮಾಬಾಯಿ ಸರ್ಕಲ್ ಸ್ವಾಮಿಗಳ ವಿರುದ್ಧವಾಗಿ ಹೇಳಿದರೆನ್ನುವ ಗೃಹಸ್ಥರನ್ನು ಭೇಟಿಯಾಗಿ , ಅವರಿಂದ ಆತ ತಮ್ಮ ಮನೆಯಲ್ಲಿ ಇರುವುದೇ ದೊಡ್ದವರಿಗೆ ಮತ್ತು ಸಣ್ಣವರಿಗೆ ಒಂದು ಆಶೀರ್ವಾದವಿದ್ದಂತೆ ಎಂದು ತಿಳಿಸುವ ಮೂಲಕ ಬ್ರೂಕ್ಲಿನ್’ನಲ್ಲಿ ಆತನಿಗೆ ಎದುರಾದ ಭಾರಿ ಸಂಕಷ್ಟಗಳನ್ನು ನಿಭಾಯಿಸಿ ಆತನ ಪರ ಬರುವಂತೆ ಮಾಡಲಾಯಿತು. ಆತ ಪವಿತ್ರ ಮತ್ತು ಪೂಜ್ಯ ಗುರುಗಳ ಕೆಳಗೆ ತರಬೇತಾಗಿರುವುದು ಆತನ ತತ್ತ್ವ , ಧರ್ಮದ ಮೂಲವಾಗಿದೆ , ಆತನ ಅಧ್ಯಾತ್ಮಿಕ ಸ್ವಭಾವದ ಮಗ್ಗಲು ಸ್ಫೂರ್ತಿದಾಯಕವಾಗಿದ್ದು ಆತನಿಗೆ ಮಾರ್ಗದರ್ಶಿಯಾಗಿದೆಯೆಂದು ನನಗೆನಿಸುತ್ತದೆ. ಅತನ ಪರಿಶುದ್ಧ ಚಿಂತನೆ ಮತ್ತು ಜೀವನ , ಆತನೊಂದಿಗಿದ್ದ ಕುಟುಂಬಗಳ ಮೇಲೆ ಪ್ರಭಾವ ಬೀರಿದ್ದು – ಆತನನ್ನು ಸನಿಹದಿಂದ ಬಲ್ಲ ವೈದ್ಯರು ಮತ್ತು ಅನುಭವಿಗಳು – ಹುಡುಕಿಕೊಂಡು ನನ್ನಲ್ಲಿಗೆ ಬರುವಂತೆ ಮಾಡಿವೆ. ಆತ ಜಾತಿಯಲ್ಲಿ ಬ್ರಾಹ್ಮಣನಲ್ಲ-ಯೋಧ ಕ್ಷತ್ರಿಯ. ಆತನ ದೋಷಗಳು ಮೇಲ್ಮಟ್ಟದವು ಮತ್ತು ಉದಾತ್ತವಾದುವೇ ಹೊರತು ಕೀಳು ಸ್ವಭಾವದವಲ್ಲ. ಭಾರತದಲ್ಲಿ ಆತನ ಪ್ರಭಾವ ವ್ಯಾಪಕವಾಗಿದೆ. ಆತನ ಜೀವನ ಮತ್ತು ಕೆಲಸಗಳು ನಾವು ಆತ ಭಾರತಕ್ಕೆ ಮರಳದಂತೆ ತಡೆಯೊಡ್ಡಿವೆ. ಆತ ನಮ್ಮಲ್ಲಿ ಅತ್ಯುತ್ತಮವಾದುದನ್ನು ಅರಿಯಬೇಕೇ ಹೊರತು ಸಮಾಜ ಸೇವಕರು ಮತ್ತು ಕ್ರೈಸ್ತ ಪಾದ್ರಿಗಳು ಅವಕಾಶ ಸಿಕ್ಕಿದಾಗ ಒಂಟಿಯಾಗಿ ಅಥವಾ ಗುಂಪಾಗಿ ವಿಧರ್ಮಿಯನೊಬ್ಬನನ್ನು ಇರಿದರೆಂದು ಭಾವಿಸುವಂತಾಗಬಾರದು. ಮಾಯ ಮಂತ್ರಗಳಲ್ಲಿ ಆತನಿಗೆ ಆಸಕ್ತಿ ಇರದೆ ಆತನ ತತ್ತ್ವ ಸರಳ ಮತ್ತು ಶುದ್ಧವಾಗಿರುವುದರಿಂದ ಥಿಯೊಸೊಫಿಸ್ಟರು ಆತನಿಗೆ ವಿರುದ್ಧವಾಗಿದ್ದಾರೆ. ನಾನು ಮಜುಂದಾರನಿಗೆ ಪತ್ರ ಬರೆದಿದ್ದೆನು , ಅದಕ್ಕೆ ಉತ್ತರವಾಗಿ ಆತ ತನಗೆ ಸ್ವಾಮಿ ವಿವೇಕಾನಂದನ ಗುರು ರಾಮಕೃಷ್ಣನ ಬಗ್ಗೆ ಇರುವ ಪೂಜ್ಯ ಭಾವನೆಯನ್ನು ಮತ್ತೊಮ್ಮೆ ಧೃಢೀಕರಿಸಿ , ಸ್ವಾಮಿ ವಿವೇಕಾನಂದನಿಗೆ ವೈಯಕ್ತಿಕ ಶುಭಾಶಯಗಳನ್ನು ತಿಳಿಸಿದ್ದಾನಲ್ಲದೆ ಭಾರತದಲ್ಲಿ ಸ್ವಾಮಿಯ ವಿರುದ್ಧ ಎದ್ದಿರುವ ಟೀಕೆಗೆ ತಾನು ಕಾರಣ ಎನ್ನುವುದು ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದಾನೆ.
ಈತ ತನಗೆದುರಾದ ಸಂಕಷ್ಟಗಳನ್ನು ಸಮರ್ಥವಾಗಿ , ಉದಾತ್ತವಾಗಿ ಎದುರಿಸಿದಂತೆ ನನ್ನ ಮಗ ಎದುರಿಸಿದ್ದರೆ ನಾನು ಹೆಮ್ಮೆಪಡುತ್ತಿದ್ದೆ. ಆತ ಸ್ವಭಾವದಲ್ಲಿ ನನ್ನ ಗಂಡನಂತಿದ್ದು , ಭಾರತದಲ್ಲಿ ಆತನ ಸ್ಥಾನ ಮತ್ತು ಈ ದೇಶದಲ್ಲಿ ಆತ ಹೊಂದಿರುವ ಸಂಪರ್ಕಗಳು ಸಾಂದರ್ಭಿಕವಾಗಿ ನನ್ನ ಅರಿವಿನ ವ್ಯಾಪ್ತಿಗೆ ಬಂದವೆನಿಸುತ್ತಿದೆ. ನಾನು ವೇದಾಂತ ತತ್ತ್ವವನ್ನು ಒಪ್ಪಿದ್ದು ಪ್ರಾಯೋಗಿಕ ಕಾರಣಗಳಿಗೆ ಕಳೆದ ಒಂಬತ್ತು ವರ್ಷಗಳಿಂದ ಅಧ್ಯಯನ ಮಾಡಿದ್ದೇನೆ. ಇದು ಆತ ನನ್ನ ಮನೆಯಲ್ಲಿ ಸಂಕೋಚಪಡದೆ ಇರುವಂತೆ ಮಾಡಿದೆ. ಆತನ ಬೋಧನೆಗಳು ಅಜ್ಞೇಯವಾದಿಗಳು , ನಾಸ್ತಿಕರು , ಮೆಥಡಿಸ್ಟರು , ಪ್ರೆಸ್ಬಟೇರಿಯನ್ನರು – ವಿವಿಧ ಪಂಥ, ಮತದವರು , ನೀತಿ ಶಾಸ್ತ್ರಜ್ಞರು ಕೊಡವುದಕ್ಕಿಂತ ಅತ್ಯುಚ್ಛವಾಗಿದ್ದು , ಹಾರ್ವಡ್ ಪ್ರಾಧ್ಯಾಪಕರು ಕೊಡದಿರುವಂತಹ ದೇವರು ಮತ್ತು ಆತ್ಮದ ತತ್ತ್ವಗಳನ್ನು ಆತ ಕೊಡುತ್ತಿದ್ದಾನೆ. ಆತ ಅನುಸರಿಸುತ್ತಿರುವ ಆಶ್ರಮದ ವ್ರತಗಳು ದಾರಿದ್ರ್ಯ ಮತ್ತು ಬ್ರಹ್ಮಚರ್ಯ , ಇವುಗಳನ್ನು ಆತ ಸ್ವಲ್ಪವೂ ಕುಂದದಂತೆ ಪಾಲಿಸುತ್ತಿದ್ದಾನೆ ಎನ್ನುವ ತೃಪ್ತಿ ನನಗಿದೆ. ; ಆತನ ಪರೋಪಕಾರದ ಮೂಲ ಅದೇ. ಆದ್ದರಿಂದ ಪ್ರಿಯ ಲೇಡಿ ಹೆನ್ರಿ , ಆತನಿಗೆ ಕಳಂಕ ತರುವಂತಹುದನ್ನು ಹೇಳುವಂತಿದ್ದರೆ ಅದರೊಂದಿಗೆ ಆತ ಇಲ್ಲಿ ತಮ್ಮ ಹೃದಯ ಮತ್ತು ಮನೆಯ ಬಾಗಿಲುಗಳನ್ನು ಆತನಿಗಾಗಿ ತೆರೆದಿರುವಂತಹ ಸ್ನೇಹಿತರನ್ನು ಹೊಂದಿದ್ದಾನೆಂದು ತಿಳಿಸು. ಆತನನ್ನು ಸನಿಹದಿಂದ ಬಲ್ಲ ಯಾರೊಬ್ಬರೂ ಆತನ ಬಗ್ಗೆ ಇದಕ್ಕಿಂತ ಬೇರೆಯದನ್ನು ಹೇಳುವುದನ್ನು ನಾನು ಈವರೆಗೆ ಕೇಳಿಲ್ಲ.
ರಮಾಬಾಯಿ ಮತ್ತು ಮಜುಂದಾರರ ಕೆಲಸಗಳನ್ನು ನಾನು ಸಹಾನುಭೂತಿಯಿಂದ ಪರಿಗಣಿಸುತ್ತೇನೆ. ಭಾರತದ ಮಹಾ ಸುಧಾರಕರಾದ ರಾಜರಾಮ ಮೋಹನರಾಯ್ ಮತ್ತು ನಂತರದವರು ಹೆಂಗಸರ ಏಳ್ಗೆಗೆ ಮತ್ತು ಶಿಕ್ಷಣಕ್ಕೆ ಪಡುತ್ತಿರುವ ಶ್ರಮ ಬಹು ಮುಖ್ಯವಾದುದೆಂದು ಮತ್ತು ನಮಗೆ ಈಗ ಬೇಕಾಗಿರುವ ಅದರ ಪ್ರಾಚೀನ ತತ್ತ್ವಶಾಸ್ತ್ರ ಮತ್ತು ವಿವೇಕ ನೆರವಾಗುತ್ತಿವೆಯೆಂದು ಭಾವಿಸುತ್ತೇನೆ. ನನ್ನನ್ನು ಕ್ರೈಸ್ತಳಲ್ಲದೆ ಬೇರೆಯವಳೆಂದು ಪರಿಗಣಿಸುವುದನ್ನು ವಿಷಾದಿಸುವಂತೆ , ಅವರ ಪ್ರತಿಭಾವಂತ ಕೆಲಸಗಾರರು ತಮ್ಮದರಿಂದ ಹೊರಗೆ ಬಂದು , ವೇದಾಂತ ಹೊಸ ಒಡಂಬಡಿಕೆಯ ಸತ್ಯವನ್ನೇ ತಿಳಿಸುತ್ತದೆ ಎನ್ನುವುದೇ ಜನರಿಗೆ ಮಾಡುವ ಅತ್ಯುತ್ತಮ ಸೇವೆಯೆಂದು ನಾನು ಭಾವಿಸುತ್ತೇನೆ
ನನ್ನಲ್ಲಿ ನಂಬಿಕೆಯಿಡು ಪ್ರೀತಿಯ ಲೇಡಿ ಹೆನ್ರಿ
ಎಂದೆಂದಿಗೂ ಪ್ರಾಮಣಿಕವಾಗಿ ಪ್ರೀತುಯುತ ಗೌರವಗಳೊಂದಿಗೆ
ಸಾರಾ ಸಿ. ಬುಲ್ , (2)
ಈ ಪತ್ರವನ್ನು ಕೊಟ್ಟಿರುವ ಮಾರಿ ಲೂಯಿ ಬರ್ಕೆ, ಲೇಡಿ ಹೆನ್ರಿ ಸಾಮರ್’ಸೆಟ್ ಇಂಗ್ಲೆಂಡ್’ನಲ್ಲಿ ಸ್ವಾಮಿಗಳ ಬಗ್ಗೆ ಯಾವುದೇ ಅಹಿತಕಾರಿ ಮಾತುಗಳನ್ನಾದಲಿಲ್ಲ, ಅದರಂತೆ ಸ್ವಾಮಿಗಳು ತಮ್ಮ ತನ್ನ ನಡವಳಿಕೆಗಳನ್ನು ಬದಲಿಸಿಕೊಳ್ಳಲಿಲ್ಲ ಎನ್ನುವ ಷರಾ ಬರೆದಿದ್ದಾಳೆ.
************************
ಎ.ಓ ಹ್ಯೂಮ್ ಪತ್ರ
ಡೆಟ್ರಾಯಿಟ್ ಫ್ರೀ ಪ್ರೆಸ್ , ಏಪ್ರಿಲ್ ೮, ೧೮೯೪
ಭಾರತದಲ್ಲಿ ಮಿಷನರಿಗಳು -ತಮ್ಮನ್ನು ಕುರಿತಾಗಿ ಸ್ವಾಮಿ ವಿವೇಕಾನಂದನ ಹೇಳಿಕೆಗಳ ಖಂಡನೆ.
ಎರಡೂ ಕಡೆಗಳಿಂದಲೂ ಆಸಕ್ತಿದಾಯಕ ಮತ್ತು ಮುಖ್ಯವಾದ ಸಂಗತಿಗಳನ್ನು ತಿಳಿಯಿರಿ.
ಪಶ್ಚಿಮ ಭಾರತದ ಅಹಮದ್’ ನಗರದಲ್ಲಿ ಶಿಕ್ಷಕನಾಗಿರುವ ಅಮೆರಿಕ ಬೋರ್ಡ್’ನ ಮಿಷನರಿ ರೆ. ರಾಬರ್ಟ್ ಎ. ಹ್ಯೂಮ್ ಮತ್ತು ಡೆಟ್ರಾಯಿಟ್’ನಲ್ಲಿ ಭಾಣಗಳಿಂದ ಭಾರಿ ಗಮನ ಸೆಳೆದಿರುವ ಸ್ವಾಮಿ ವಿವೇಕಾನಂದ ಇವರಿಬ್ಬರ ನಡುವಿನ ಪತ್ರ ವ್ಯವಹಾರ ಫ್ರೀ ಪ್ರೆಸ್ ಓದುಗರಿಗೆ ಆಸಕ್ತಿದಾಯಕವಾಗಿರುತ್ತದೆ. ಶ್ರೀ ಹ್ಯೂಮ್ ಭಾರತದಲ್ಲಿ ಹುಟ್ಟಿದನು. ಆತನ ಕುಟುಂಬ ಆತನಿಗಿಂತ ಮುಂಚೆ ಮಿಷನರಿಗಳದ್ದಾಗಿದ್ದಿತು. ಆದ್ದರಿಂದ ಆತನಿಗೆ ಭಾರತದಲ್ಲಿ ಯಾವ ಸ್ಥಿತಿಯಲ್ಲಿ ಮಿಷನರಿ ಕೆಲಸ ಮಾಡಬೇಕೆನ್ನುವ ಅರಿವಿದೆ.
ಔಬರನ್’ಡೇಲ್ ಮಾಸ್ - ಮಾರ್ಚ್ ೨೧, ೧೮೯೪
ಸ್ವಾಮಿ ವಿವೇಕಾನಂದ , ಭಾರತದಿಂದ ಬಂದಿರುವ ನನ್ನ ದೇಶ ಬಾಂಧವ ,
ಮಾರ್ಚ್ ೧೧ ರಂದು ಡೆಟ್ರಾಯಿಟ್ ಒಪೆರಾ ಹೌಸ್’ನಲ್ಲಿ ನೀನು ಮಾಡಿದ ದೀರ್ಘ ಭಾಷಣವಿರುವ ಡೆಟ್ರಾಯಿಟ್ ಫ್ರೀ ಪ್ರೆಸ್ ಪತ್ರಿಕೆಯನ್ನು ನನಗೆ ಕಳಿಸಲಾಗಿದೆ. ನಾನು ಭಾರತದಲ್ಲಿ ಹುಟ್ಟಿ, ಜೀವನದ ಬಹು ಕಾಲವನ್ನು ಅಲ್ಲಿಯೇ ಕಳೆದು ವ್ಯಾಪಕವಾಗಿ ದೇಶಾದ್ಯಂತ ಸಂಚರಿಸಿ ಎಲ್ಲ ಭಾಗಗಳಲ್ಲಿರುವ ನಾಯಕರ ಭಾರತೀಯ ಚಿಂತನೆಗಳನ್ನು ತಿಳಿದು, ನೂರಾರು ಮಿಷನರಿಗಳ ಬಲ್ಲವನಾಗಿದ್ದು ನೀನು ಹೇಳಿದ ಬಹಳ ವಿಷಯಗಳ ಬಗ್ಗೆ ನನಗೆ ಸೋಜಿಗವಾಗಿದೆ. ಆದ್ದರಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ , ಮೊದಲು ನಾನು ಇದನ್ನು ನಿನಗೆ ಖಾಸಗಿಯಾಗಿ ಕಳಿಸಬೇಕೆಂದಿದ್ದು ಅದರಿಂದ ಪತ್ರಿಕೆಯಲ್ಲಿ ವರದಿಯಾದ ನಿಮ್ಮ ಅಭಿಪ್ರಾಯಗಳನ್ನು ಬದಲಾಯಿಸಿಕೊಳ್ಳುವಿಯೆಂದು ಭಾವಿಸಿದ್ದೆ. ಆದರೆ ಅದು ಈಗಾಗಲೇ ಮುದ್ರಣಗೊಂಡಿರುವುದರಿಂದ ಈ ಪತ್ರವೂ ಮುದ್ರಣಗೊಳ್ಳಬೇಕೆಂದು ನಂತರ ತೀರ್ಮಾನಿಸಿದೆ. ಬೇಕಿದ್ದರೆ ನಿಮ್ಮ ಉತ್ತರಗಳನ್ನು(ಪತ್ರಿಕೆಗಳಲ್ಲಿ) ಮುದ್ರಿಸು.
ನಿನ್ನ ಭಾಷಣದ ವರದಿಯಲ್ಲಿರುವ ಹೆಚ್ಚಿನ ವಿಷಯಗಳ ಬಗ್ಗೆ ಮಾತನಾಡಲು ಬಯಸುತ್ತೇನಾದರೂ ಕೆಲ ಅಂಶಗಳತ್ತ ಗಮನ ಹರಿಸುವುದು ಒಳ್ಳೆಯದು.
(೧) ವರದಿಯಲ್ಲಿರುವಂತೆ ನಿನಗೆ ಭಾರತದಲ್ಲಿರುವ ಮಿಷನರಿಗಳ ಬಗ್ಗೆ ಒಂದೇ ಒಂದು ಒಳ್ಳೆಯ ಅಭಿಪ್ರಾಯವಿಲ್ಲ ಎನ್ನುವುದು ಸೋಜಿಗವಾಗಿದೆ. ನಾವು ಇನ್ನೂ ಉತ್ತಮವಾಗಿರಬೇಕಿತ್ತು ಎನಿಸುತ್ತದೆ, ನಾವು ಪ್ರಾಮಾಣಿಕವಾಗಿ ಅತ್ಯುತ್ತಮವಾದುದನ್ನು ಮಾಡಲು ಯತ್ನಿಸುತ್ತಿದ್ದೇವೆ. ನಾವು ತಪ್ಪುಗಳನ್ನು ಮಾಡುತ್ತೇವೆ , ಅವುಗಳನ್ನು ತಿಳಿದು ತಿದ್ದಿಕೊಳ್ಳಲು ಯತ್ನಿಸುತ್ತೇವೆ. ನೀನು ಹಿಂದಿದ್ದ ಮಿಷನರಿಗಳ ಬಗ್ಗೆ ಒಂದೆರಡು ಗೌರವದ ಮಾತುಗಳನ್ನಾಡಿರುವೆ. ಆದರೆ ಈಗಿರುವ ಮಿಷನರಿಗಳ ಬಗ್ಗೆ-ಗಂಡಸರು , ಹೆಂಗಸರು- ಹಲವು ಕಟು ಮಾತುಗಳನ್ನಾಡಿ ಒಂದೂ ಒಳ್ಳೆಯ ಮಾತನಾಡಿಲ್ಲ. ಉದಾಹರಣೆಗೆ ನೀನು ‘ಮಿಷನರಿಗಳಿಗೆ ಜನರ ಬಗ್ಗೆ ಏನೂ ಗೊತ್ತಿಲ್ಲ ; ಆತ ಸ್ಥಳೀಯ ಭಾಷೆ ಮಾತನಾಡಲಾರ ; ಬಹುತೇಕ ಮಿಷನರಿಗಳು ಅಸಮರ್ಥರು , ಜನರ ಪರಂಪರೆ , ಪದ್ದತಿಗಳ ಬಗ್ಗೆ ಏನೂ ಗೊತ್ತಿಲ್ಲದ ಅಜ್ಞಾನಿಗಳಾಗಿದ್ದು ಜನರ ಸಹಾನುಭೂತಿ ಪಡೆಯಲು ಯತ್ನಿಸುತ್ತಾರೆ .; ಜನರನ್ನು ಮತಾಂತರ ಮಾಡುವ ಮಾರ್ಗ ಅಸಂಬದ್ಧ. . ಅವರು ತಮ್ಮೊಳಗೆ ಸೊಗಸಾದ ಸಾಮಾಜಿಕ ರಂಜನೆಯ ವೇಳೆಯನ್ನು ಕಳೆಯುವುದರ ಹೊರತಾಗಿ ಸಾಧಿಸುವುದು ಅಲ್ಪ’ ಎಂದಿರುವೆ.
ಈಗ , ಭಾರತದಲ್ಲಿರುವ ಮಿಷನರಿ ಸಂಘದ ಸಮರ್ಪಕವಾದ ವಿವರಣೆ ಇದೆಂದು ನೀನು ಭಾವಿಸುವಿಯೇನು ? ಭಾರತದಲ್ಲಿರುವ ಮಿಷನರಿಗಳಲ್ಲಿ ಹೆಚ್ಚಿನವರು ಕಾಲೇಜ್ ಪದವೀಧರರು , ಮತ್ತು ಆಯ್ದು ಕಳಿಸಲ್ಪಟ್ಟವರು. ಅವರಲ್ಲಿ ಕೆಲವರು ವಿದ್ವಾಂಸರು ಮತ್ತು ಖ್ಯಾತ ಬರಹಗಾರರು ಎನ್ನುವುದು ನಿನಗೆ ತಿಳಿದಿರಬಹುದು. ನೀನು ಕೊಟ್ಟ ವಿವರಣೆ ಕಾಲೇಜಿನಿಂದ , ಚರ್ಚಗಳಿಂದ ಹೋದ ಮಿಷನರಿಗಳಿಗೆ ಸಲ್ಲುತ್ತದೆಯೇ ಎಂದು ನಾನು ನಿನ್ನ ಸಭಿಕರನ್ನು ಕೇಳುತ್ತೇನೆ. ಅವರಿಗೆ ವೈಯಕ್ತಿಕವಾಗಿ ಯಾವುದೇ ಮಿಷನರಿಗಳು ಗೊತ್ತಿರದಿದ್ದರೆ ಗೊತ್ತಿರುವವರನ್ನು ಕೇಳಲಿ. ಮಿಷನರಿಗಳಿಗಿಂತ ಯಾವ ವಿದೇಶಿ ಸಂಸ್ಥೆ ಭಾರತೀಯರನ್ನು ಹೆಚ್ಚು ಚೆನ್ನಾಗಿ ತಿಳಿದುಕೊಂಡಿದೆ ಮತ್ತು ಸಹಾನುಭೂತಿ ಹೊಂದಿದೆ ಎಂದು ನಿನ್ನನ್ನು ಕೇಳುತ್ತೇನೆ .ಯಾವ ವಿದೇಶಿ ಸಂಸ್ಥೆಯವರು ಮಿಷನರಿಗಳಿಗಿಂತ ಚೆನ್ನಾಗಿ ದೇಶ ಭಾಷೆಗಳನ್ನು ಆಡುತ್ತಾರೆ ? ನಿನ್ನ ಹೇಳಿಕೆಯ ವಿರುದ್ಧ ಹಿಂದೂಗಳಿಗಾಗಿ ಹಿಂದುಗಳಿಂದಲೇ ನಡೆಸಲ್ಪಡುವ , ಬಹುತೇಕ ಹಿಂದೂಗಳೇ ಓದುವ ಬಹಳ ಪ್ರಭಾವಶಾಲಿಯಾದ ದಕ್ಷಿಣ ಭಾರತದ ‘ದಿ ಹಿಂದೂ’ ಹೆಸರಿನ ಮದ್ರಾಸ್ ಪತ್ರಿಕೆ ಏನು ಹೇಳಿದೆ ಎನ್ನುವುದನ್ನು ತಿಳಿಸುತ್ತೇನೆ. ದಿ ಹಿಂದೂ ‘ಮಿಷನರಿಗಳ ಬಗ್ಗೆ ಪೂರ್ವಾಗ್ರಹ ಇಲ್ಲದೆ ಅವರನ್ನು ಸನಿಹದಿಂದ ಬಲ್ಲವರು ಡಾ. ಪೆಂಟಕೋಸ್ಟ್ ವ್ಯಕ್ತಪಡಿಸುವ ಅಭಿಪ್ರಾಯವನ್ನು ಅನುಮೋದಿಸುತ್ತಾರೆ. ಅವರು ಪಂಡಿತಗಣ ಅಲ್ಲವಾದರೂ ಸಾಮಾನ್ಯ ಸರಾಸರಿ ಸಾಮರ್ಥ್ಯದವರಾಗಿದ್ದು , ಅವರಲ್ಲಿ ಕೆಲವರು ನಿಜವಾಗಿಯೂ ಅದ್ಭುತ ವ್ಯಕ್ತಿಗಳು. ಅವರ ಬುದ್ಧಿಗಿಂತ ಅವರ ನೈತಿಕ ಗುಣಗಳು ಮೆಚ್ಚುಗೆಗೆ ಪಾತ್ರವಾಗಿವೆ. ಅವರ ಸರಳ ಜೀವನ , ಬಡವರ ಬಗ್ಗೆ ಹೊಂದಿರುವ ಮರುಕ , ತ್ಯಾಗ ಗುಣಗಳು ಅವರ ಟೀಕಾಕಾರರೂ ಮೆಚ್ಚುವಂತೆ ಒತ್ತಾಯಿಸುತ್ತವೆ.
(೨) ಎರಡನೇ ಸೋಜಿಗದ ಸಂಗತಿಯೆಂದರೆ ದೇಶವಾಸಿ ಕ್ರಿಶ್ಚಿಯನ್ನರ ಬಗ್ಗೆ ನಿನಗೆ ಹೇಳಲು ಒಂದೇ ಒಂದು ಒಳ್ಳೆಯ ಗುಣ ಕಾಣದಿರುವುದು. ‘ಮತಾಂತರಗೊಂಡವರು ಅಲ್ಪ , ಅವರು ಒಂದು ಬಗೆಯಲ್ಲಿ ಜೀವನ ಸಾಗಿಸಲು ಮಿಷನರಿಗಳನ್ನು ಸುತ್ತುತ್ತಾರೆ . ಮತಾಂತರಗೊಂಡವರಿಗೆ ನೆರವು ಸಿಗದಿದ್ದರೆ ಅವರು ಮತಾಂತರದಿಂದ ಹೊರಗಾಗುತ್ತಾರೆ ; ಹಿಂದೂ ಜಾಣ ; ಆತ ಕೊಕ್ಕೆಗೆ ಸಿಕ್ಕದೆ ಬಲಿಯನ್ನು ಹಿಡಿಯುತ್ತಾನೆ ‘ ಮುಂತಾಗಿ ಹೇಳಿರುವೆ. ನಿಜ , ತಾನು ಏನಾಗಿಲ್ಲವೋ ಅದು ಆದಂತೆ ತೋರಿಸಿಕೊಳ್ಳುವವರು ಕುತಂತ್ರಿಗಳು ಮತ್ತು ಕೀಳು ವ್ಯಕ್ತಿಗಳು. ನೀನು ಇಂತಹ ಬೀಸು ಹೇಳಿಕೆ ನೀಡುವಾಗ ದೇಶಬಾಂಧವರು , ಹಿಂದೂಗಳೇ ನಿನ್ನ ಟೀಕೆಗೆ ಒಳಗಾದವರು ಎನ್ನುವುದು ನಿನಗೆ ಕಾಣಿಸದೇ ? ಕೊಕ್ಕೆಯನ್ನು ತಪ್ಪಿಸಿ ಬಲಿಯನ್ನು ಸೆಳೆಯುವವರು ಎಂದು ನೀನು ಹೇಳಿದಾಗ ಅಂತಹ ಕುತಂತ್ರಿಗಳು ಕ್ರೈಸ್ತರಲ್ಲ ಹಿಂದೂಗಳೆ ಎಂದು ಅಗುವುದಿಲ್ಲವೇ ? ಭಾರತದ ಕ್ರೈಸ್ತರಲ್ಲಿ ಹೆಚ್ಚಿನವರು ಕೆಳಜಾತಿಗೆ ಸೇರಿದವರು. ಕ್ರೈಸ್ತ ಧರ್ಮ ಅವರನ್ನು ಉನ್ನತೀಕರಿಸುತ್ತದೆ. ಆದರೆ ಮಿಷನರಿಗಳು ಎಲ್ಲರ ಉದ್ದೇಶಗಳ ಮೇಲೆ ಕಣ್ಣಿಟ್ಟಿರುತ್ತಾರೆ ; ಕೆಳಜಾತಿಯವರು ಸೇರಿದಂತೆ ಹೆಚ್ಚಿನ ಕ್ರಿಶ್ಚಿಯನ್ನರು ತಾವು ಮತಾಂತರಗೊಂಡ ಧರ್ಮಕ್ಕೆ ಪ್ರಾಮಾಣಿಕರಲ್ಲ ಎನ್ನುವುದು ತಪ್ಪು. ಎಲ್ಲಾದರೂ ಇಂತಹ ಕುತಂತ್ರ , ಅಪ್ರಾಮಾಣಿಕತೆ ಇದ್ದಿದ್ದೇ ಆದರೆ ಅದಕ್ಕೆ ಹಿಂದೂ ಧರ್ಮ ಕಾರಣವೇ ಹೊರತು ಕ್ರೈಸ್ತ ಧರ್ಮ ಅಲ್ಲ. ನಿನಗೆ ಗೊತ್ತಿರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಮೇಲಿನ ಜಾತಿಯವರು ತಾವು ಕ್ರೈಸ್ತ ಧರ್ಮಕ್ಕೆ ಸೇರಿದೆವೆಂದು ತಿಳಿಸಿದಾಗ ಬಹಳ ಸಂಕಷ್ಟಕ್ಕೆ ಒಳಗಾಗುತ್ತಾರೆ. ಕೆ.ಎಂ. ಬ್ಯಾನರ್ಜಿ , ಎಲ್.ಎಲ್. ಡಿ , ಕೆ.ಸಿ.ಬ್ಯಾನರ್ಜಿ ಎಂ.ಎ , ಜೆ.ಜಿ ಷೋಮ್ ಎಂ.ಎ ,ಇಮಾಂ ಉದ್ದೀನ್ ಡಿ.ಡಿ , ನೀಲಕಂಠ ಶಾಸ್ತ್ರಿ ಗೋರೆ , ಆರ್.ಸಿ ಬೋಸ್ ಎಂ.ಎ ಬಾಬಾ ಪದ್ಮಜಿ , ಎಸ್. ಸತ್ಯನಾಥನ್ ಎಂ.ಎ ಎಲ್.ಎಲ್.ಡಿ ಯಂತಹ ಅತ್ಯುತ್ತಮ ವಿದ್ಯಾವಂತ ಕ್ರೈಸ್ತರು ಭಾರತದಲ್ಲಿ ಉನ್ನತ ಗೌರವ ಹೊಂದಿದ್ದಾರೆ. ಕೆಲವು ಸಲ ಹಿಂದೂಗಳು ತಮ್ಮ ಪ್ರತಿನಿಧಿಯಾಗಿ ಭಾರತದ ನ್ಯಾಷನಲ್ ಕಾಂಗ್ರೆಸ್’ಗೆ ಕ್ರೈಸ್ತರನ್ನು ಕಳಿಸುತ್ತಾರೆ.
ಜನಸಂಖ್ಯಾ ಗಣತಿಯಂತೆ ಭಾರತದಲ್ಲಿ ಕ್ರೈಸ್ತರ ಸಂಖ್ಯೆ ೨,೧,೫೦,೭೮೧. ಇದರಲ್ಲಿ ವಿದೇಶಿಯರ ಸಂಖ್ಯೆಯನ್ನು ಕಳೆದರೆ – ಪ್ರಾಟೆಸ್ಟೆಂಟ್ , ರೋಮನ್ ಕ್ಯಾಥೊಲಿಕ್- ಹತ್ತೂವರೆ ಲಕ್ಷ ಭಾರತೀಯ ಕ್ರೈಸ್ತರಿದ್ದಾರೆ. ೧೮೯೦ ರ ಪ್ರಾಟೆಸ್ಟೆಂಟ್ ಮಿಷನರಿ ವರದಿಯಂತೆ ಎಲ್ಲ ಹಂತಗಳಲ್ಲಿ-ಗಂಡಸರು ,ಹೆಂಗಸರು - ಸೇರಿ ೧೨೮೬೩ ಜನ ಕ್ರೈಸ್ತ ಪ್ರಚಾರಕರಿದ್ದಾರೆ. ಇದಕ್ಕೆ ಸೇವಕರು , ಶಾಲೆಗಳಲ್ಲಿ ನೆರಪು ಪಡೆಯುವವರು ಸೇರಿದಂತೆ ಕೆಲವು ಸಾವಿರವನ್ನು ಸೇರಿಸಿದರೂ ಅವರ ಸಂಖ್ಯೆ ಅಲ್ಪವೇ. ಕ್ರೈಸ್ತ ಧರ್ಮಕ್ಕೆ ಸೇರಿದವರಲ್ಲಿ ಹೆಚ್ಚಿನವರು ನೆರವು ಅಥವಾ ಕೆಲಸವನ್ನು ಪಡೆಯದಿದ್ದರೆ ಅದನ್ನು ತೊರೆಯುತ್ತಾರೆ ಎನ್ನುವ ಸಾಕ್ಷ್ಯಾಧಾರಗಳಿಲ್ಲದ ನಿನ್ನ ಆರೋಪಕ್ಕೆ ವಿರುದ್ಧವಾಗಿ ಇತರ ಬಹುಸಂಖ್ಯಾತರು ಕ್ರೈಸ್ತ ಧರ್ಮವನ್ನು ಬಿಡದಿರುವುದರಿಂದ ಅವರು ಅತ್ಯುತ್ತಮ ಕೆಲಸಗಳನ್ನು ಹೊಂದಿದ್ದಾರೆಂದು ತಿಳಿಯಬೇಕಾಗುತ್ತದೆ.
ಎಲ್ಲ ಧರ್ಮಗಳ ಬಗ್ಗೆ ತಟಸ್ಥ ಧೋರಣೆ ತಳೆದಿರುವ ಮದ್ರಾಸ್ ಸಂಸ್ಥಾನದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಹೇಳಿಕೆ ಆ ಭಾರತ ಭಾಗದ ಕ್ರೈಸ್ತರ ಸ್ಥಿತಿಯನ್ನು ತಿಳಿಸುತ್ತದೆ. (ಆ ಭಾಗದಲ್ಲಿರುವ ಕ್ರೈಸ್ತರು ಕೆಳಜಾತಿಯಿಂದ ಬಂದವರಾಗಿದ್ದರೂ ಅವರು ಸರಾಸರಿ ಅಳತೆಯಲ್ಲಿ ಭಾರತದ ಇತರ ಭಾಗದ ಕ್ರೈಸ್ತರಿಗಿಂತ ಹೆಚ್ಚು ಮುಂದುವರೆದಿದ್ದಾರೆ.) ‘ ನಾನು ಆಗಾಗ್ಗೆ ದೇಶೀಯ ಕ್ರೈಸ್ತ ಸಮುದಾಯದ ಶೈಕ್ಷಣಿಕ ಮುನ್ನಡೆಯ ಬಗ್ಗೆ ಗಮನ ಸೆಳೆದಿದ್ದೇನೆ. ಈಗಿರುವ ಕಾರ್ಯಕ್ರಮವನ್ನು ಈ ಸಮುದಾಯ ಮುಂದುವರೆಸಿದರೆ , ಅದಕ್ಕಿರುವ ಭಾರಿ ಅನುಕೂಲಗಳ ಹಿನ್ನೆಲೆಯಲ್ಲಿ ಅದು ಎಲ್ಲ ಹುದ್ದೆಗಳಲ್ಲಿ ಬಹುಶಃ ದೇಶದ ಕೈಗಾರಿಕೆಯಲ್ಲಿಯೂ ಮುಂಚೂಣಿಯಲ್ಲಿರುತ್ತದೆ.
(೩) ಭಾರತದಲ್ಲಿ ಕ್ರೈಸ್ತ ಮಿಷನರಿ ಚಟುವಟಿಕೆಗಳು ತಗ್ಗಿರುವುದರಿಂದ ಅಮೆರಿಕದಲ್ಲಿ ವಿದೇಶಿ ಮಿಷನರಿಗಳು ಆಸಕ್ತಿ ತೋರಿಸುತ್ತಿದ್ದಾರೆ ಎನ್ನುವುದು ಮೂರನೆಯ ಸೋಜಿಗದ ಸಂಗತಿ. ಅಮೆರಿಕದಲ್ಲಿ ತಲೆ ಎತ್ತುತ್ತಿರುವ ನಾಸ್ತಿಕತೆ ಮತ್ತು ಅಜ್ಞೇಯವಾದಗಳು ಮಿಷನರಿಗಳು ನುಗ್ಗಲು ಪ್ರೇರೇಪಣೆಯಾಗಿದೆ ಎಂದು ನೀನು ತಿಳಿಸಿದಿಯೆಂದು ವರದಿಯಾಗಿದೆ. ಇದು ನಿಜವೇ ಆಗಿದ್ದರೆ ಕ್ರೈಸ್ತರು ತಮ್ಮ ಧರ್ಮವನ್ನು ಹೆಚ್ಚು ನಂಬುತ್ತ ಆಚರಿಸುತ್ತಿದ್ದರೆ ಅವರು ಅದನ್ನು ಹರಡಲು ಪ್ರಯತ್ನ ಮಾಡುವುದಿಲ್ಲ ಎನ್ನುವುದನ್ನು ಒಪ್ಪಬೇಕಾಗುತ್ತದೆ ! ಅಮೆರಿಕಕ್ಕೆ ನೀನು ನೀಡಿದ ಭೇಟಿ ಇಲ್ಲಿನ ಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನೆರವಾಗದಿದ್ದರೆ ನೀನು ಹೇಳಿದ ಸಂಗತಿಗಳು ಎಷ್ಟು ಸರಿ ಎನ್ನುವುದನ್ನು ನಿರ್ಧರಿಸುವುದನ್ನು ಇತರರ ವಿವೇಚನೆಗೆ ಬಿಡುತ್ತೇನೆ.
(೪) ನೀನು ಕ್ರೈಸ್ತ ಮಿಷನರಿಗಳು ಭಾರತೀಯರನ್ನು ತೆಗಳುತ್ತಾರೆ ಅಥವಾ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾರೆ ಎಂದು ಹೇಳಿರುವೆ. ಕೆಲ ಮಿಷನರಿಗಳು ಒಂದು ನಿರ್ದಿಷ್ಟ ಬಗೆಯ ಜನ , ಪರಿಸ್ಥಿತಿ , ಧಾರ್ಮಿಕ ಪರಿಸರ , ದೇಶ , ಧರ್ಮಗಳಲ್ಲಿ ಕೆಲಸ ಮಾಡಿದ್ದು ಅನುದ್ದೇಶಪೂರ್ವಕವಾಗಿ ಅಂತಹ ತಪ್ಪುಗಳನ್ನು ಮಾಡಿದ್ದಾರೆಂದು ನಾನು ಒಪ್ಪಿಕೊಳ್ಳುತ್ತೇನೆ. ನೀನು ನೋಡದಿರುವುದನ್ನು ವಿಶ್ವಾಸಾರ್ಹ ಮೂಲಗಳಿಂದ ದಕ್ಕಿದ್ದರೂ ನಂಬಲು ಸಿದ್ಧನಿಲ್ಲ. ನೀನು ಮತ್ತು ನಾನು ಇಬ್ಬರೂ ಭಾರತದಲ್ಲಿ ಹುಟ್ಟಿ ,ಬದುಕಿ , ವ್ಯಾಪಕವಾಗಿ ಸಂಚರಿಸಿದ್ದರೂ ನಮ್ಮಿಬ್ಬರಿಗೂ ಗೊತ್ತಿರದ ಸಾವಿರ ಸಂಗತಿಗಳು ಭಾರತದಲ್ಲಿವೆ.
(೫) ಭಾರತದ ಬಗ್ಗೆ ಮಿಷನರಿಗಳು ಏನು ಹೇಳುತ್ತಾರೆ ಎನ್ನುವುದನ್ನು ನಿನಗೆ ತಿಳಿಸುತ್ತೇನೆ. ಭಾರತದಲ್ಲಿ ಕೆಲ ವರ್ಗಗಳು ದುಸ್ಥಿತಿಯಲ್ಲಿವೆ , ಹೆಚ್ಚಿನ ಜನ ಓದಲಾರರು , ಬರೆಯಲಾರರು , ಕೆಳಜಾತಿಗಳನ್ನು ಹೀಗಳೆಯಲಾಗಿದೆ.; ಹೆಂಗಸರ ಶಿಕ್ಷಣಕ್ಕಿರುವ ಅವಕಾಶಗಳು ಅಲ್ಪ. ಇನ್ನೂ ಧರ್ಮ ಕುರಿತಾದಂತೆ ಉನ್ನತ ಹೇಳಿಕೆಗಳಿರುವ ಪಾಶ್ಚಾತ್ಯರು ಅದ್ವೈತ ಎಂದು ಗುರುತಿಸುವ ತತ್ತ್ವಶಾಸ್ತ್ರದ ಹಿಂದೂ ಧರ್ಮವಿದೆ. ಇದನ್ನು ಕೆಲ ಬ್ರಾಹ್ಮಣರು ಇತರ ಜಾತಿಯ ಕೈಬೆರಳೆಣಿಕೆಯ ಜನ ಅರಿತಿದ್ದಾರೆಯೇ ಹೊರತು ಬಹುಸಂಖ್ಯಾತ ಜನ ಸಮುದಾಯವಲ್ಲ. ಬಹುದೇವತೆಗಳನ್ನು ನಂಬುವ , ಪುರಾಣಗಳ , ಕೆಲವು ವೇಳೆ ಅನೈತಿಕ ಕಥೆಗಳ ತುಂಬಿರುವ , ಜನ ಸಮೂಹದ ಎಲ್ಲರ ಮೇಲೆ ಪರಿಣಾಮ ಬೀರುವ ಜನಪ್ರಿಯ ಹಿಂದೂಧರ್ಮ ಎನ್ನುವುದು ಇನ್ನೊಂದಿದೆ. ದೇವರತ್ತ ಸಾಗಲು ಇರುವ ವಿಗ್ರಹಾರಾಧನೆ ಮತ್ತು ಆಚರಣೆಗಳಿಂದ ತುಂಬಿರುವ ಧರ್ಮ ಜನಸಮೂಹಕ್ಕೆ ಅರ್ಥವಾಗದು. ಇವುಗಳಲ್ಲಿ ಜಾತಿ ಮತ್ತು ಅಸಂಬದ್ಧ ನಿಯಮಗಳಿವೆ. ಹೆಂಗಸರ ಸ್ಥಿತಿ ದಯನೀಯ ಎಂದು ಅವರು ಹೇಳುತ್ತಾರೆ. ; ಮದುವೆಯನ್ನು ಆದಷ್ಟು ಬೇಗ ಮಾಡಿ ಮಕ್ಕಳಾಗುವಂತೆ ಮಾಡುತ್ತಾರೆ ; ಇದರಿಂದಾಗಿ ಬಾಲ್ಯ ವಿಧವೆಯರ ಸ್ಥಿತಿ ಮತ್ತು ಎಳೆಯ ತಾಯಂದಿರ ಪಾಡು ಶೋಚನೀಯ.; ವಿಧವೆಯರದು ಅವಮಾನ ಮತ್ತು ಅನಗತ್ಯ ಸಂಕಷ್ಟಗಳ ಜೀವನ. ಹಿಂದೂ ಧರ್ಮಗ್ರಂಥಗಳು ಹೆಂಗಸರನ್ನು ಅಜ್ಞಾನ ಮತ್ತು ಸಂಕಷ್ಟದಲ್ಲಿರಿಸುತ್ತವೆ. ನಾನು ಹೇಳಿದ ಅಂಶಗಳು ಭಾರತೀಯರು ಸಿದ್ಧಪಡಿಸಿದ ಚಿತ್ರ , ಫೋಟೊ , ಪುಸ್ತಕಗಳಿಂದ , ಭಾರತದ ಸರ್ಕಾರದ ಕಾನೂನುಗಳಿಂದ ಮತ್ತು ಭಾರತೀಯರ ಹೇಳಿಕೆಗಳಿಂದ ನಿದರ್ಶಿಸಲ್ಪಟ್ಟಿವೆ. ತೀರಾ ಸಾಮಾನ್ಯವಾದ ಕೆಲ ಸಹಜ ತಪ್ಪು ಹೇಳಿಕೆಗಳನ್ನು ಹೊರತುಪಡಿಸಿ ಈ ಸಂಗತಿಗಳು ನಿಂದನೆಗಳಾಗಿರದೆ ಸತ್ಯಗಳಾಗಿವೆಯೆಂದು ನಾನು ಧೃಢಪಡಿಸುತ್ತೇನೆ. ನೀನು ಅಷ್ಟನ್ನು ಒಪ್ಪಿಕೊಳ್ಳುವೆಯಾ ? ಹಿಂದೂಗಳಲ್ಲಿ ಅತ್ಯುನ್ನತ ಧರ್ಮಸೂತ್ರಕಾರ ಮನುವಿನ ಸಂಹಿತೆಗಳು ಇವು – ‘ಹೆಂಗಸರಿಗೆ ಪವಿತ್ರ ಗ್ರಂಥಗಳೊಂದಿಗೆ ಯಾವುದೇ ಕೆಲಸವಿಲ್ಲ ‘ ಹೆಂಗಸು ಕಂಡ ತಕ್ಷಣ ಬ್ರಾಹ್ಮಣ ವೇದಗಳನ್ನು ಓದುವುದನ್ನು ನಿಲ್ಲಿಸಬೇಕು. . ಗಂಡ ನೀತಿಗೆಟ್ಟಿದ್ದರೂ , ಇನ್ನೊಂದು ಹೆಣ್ಣಿನಲ್ಲಿ ಅನುರಕ್ತನಾಗಿದ್ದರೂ , ಹೆಂಡತಿ ಆತನನ್ನು ದೇವರೆಂದು ಪರಿಗಣಿಸಬೇಕು. ಗಂಡ ಹೆಂಡತಿಗೆ ವಿಷ್ಣುವಿಗಿಂತಲೂ ದೊಡ್ಡವನು’
(೬) ಮಿಷನರಿಗಳು ತಮಗೆ ಸಾದ್ಯವಾದ ಎಲ್ಲ ರೀತಿಯಲ್ಲಿ ಭಾರತೀಯರಿಗೆ ನೆರವಾಗುತ್ತಾರೆ. ಅವರು ಜನರಿಗೆ ಬೋಧಿಸುತ್ತಾರೆ, ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ , ಜನರ ಲೌಕಿಕ ಉನ್ನತಿಗೆ ಬೇಕಾದುದೆಲ್ಲವನ್ನೂ ಮಾಡುತ್ತಾರೆ. ಇವೆಲ್ಲವುಗಳಿಗೆ ಪ್ರತಿಯಾಗಿ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುವ ಹುನ್ನಾರ ಇದೆನ್ನುವ ದೂಷಣೆಯ ಬಹುಮಾನ ದಕ್ಕುತ್ತದೆ. ಮಿಷನರಿಗಳ ಮುಖ್ಯ ಸಂದೇಶ ದೇವರು ಎಲ್ಲರ ತಂದೆ , ಆತ ಯೇಸುವಿನಂತೆ . ಪಾಪದಿಂದ ಜನರನ್ನು ರಕ್ಷಿಸಲು ಅಸು ನೀಗಿದ ಯೇಸು, ಪಾಪಿಗಳಿಗೆ ನೆರವಾಗುವ ಜೀವಂತ ರಕ್ಷಕ. ರಕ್ಷಕ ಈಗ ನೆರವಿಗೆ ಸಿದ್ಧನಿದ್ದಾನೆ, ಇದು ಭಾರತದ ಮಿಷನರಿ ಸಂಘಗಳ ಉದ್ದೇಶ.
(೭) ಡೆಟ್ರಾಯಿಟ್ ಮತ್ತಿತರ ಕಡೆ ನೀನು ಮಾಡಿದ ಭಾಷಣಗಳಿಂದ ಭಾರತ ಸರ್ಕಾರದಲ್ಲಿ ಇಷ್ಟವಿಲ್ಲದ ನಿನಗೆ ಈಗ ರಾಜಕೀಯ ಸ್ವಾತಂತ್ರ ಬೇಕೆನಿಸುತ್ತಿದೆ ಎಂದು ತೀರ್ಮಾನಿಸಬಹುದು. ನಮ್ಮ ನಂಬಿಕೆಯೆಂದರೆ ಕ್ರಿಸ್ತನ ತಿಳಿವಳಿಕೆ ಭಾರತದ ಒಳಿತಿನ ಮೂಲವಾಗಿದೆ. ಮಿಷನರಿ ಅಲ್ಲದ ರುಡ್’ಯಾರ್ಡ್ ಕಿಪ್ಲಿಂಗ್ ‘ ಈ ದೇಶಕ್ಕೆ ಏನಾಗಿದೆ ‘ ಎಂದಿರುವ ಮಾತು ಕೇವಲ ಕನಿಷ್ಟ ರಾಜಕೀಯಕ್ಕೆ ಮಾತ್ರವಲ್ಲ ಲೌಕಿಕ , ಸಾಮಾಜಿಕ , ನೈತಿಕ ರೂಪದ ಎಲ್ಲ ಬಗೆಯ ಕೆಡುಕು ಮತ್ತು ಭ್ರಷ್ಟತೆಗಳಿಗೆ ಮತ್ತು ಹೆಂಗಸರನ್ನು ಅಸಹಜ ರೀತಿಯಲ್ಲಿ ಕಾಣುವುದಕ್ಕೆ ಸಂಬಂಧಿಸಿದೆ. ಇಲ್ಲಿ ತೊಂದರೆ ಇದೆಯೇ ಹೊರತು ರಾಜಕೀಯದಲ್ಲಲ್ಲ. ಬದುಕಿನ ಬುನಾದಿಯೇ ಕುಸಿದಿದೆ , ಪೂರಾ ಕುಸಿದಿದೆ . ಜನ ತಮ್ಮ ಹಕ್ಕು ಮತ್ತು ಅನುಕೂಲಗಳ ಬಗ್ಗೆ ಮಾತನಾಡುತ್ತಾರೆ ! ಇಂತಹ ಗಂಡಸರನ್ನು ಹೆಂಗಸರು ಸಹಿಸುತ್ತಾರೆ, ದೇವರೇ ಗಂಡಸರನ್ನು ಮನ್ನಿಸು. ಮಿಷನರಿಯಲ್ಲದ ಜಾನ್ ಎಲ್. ಸ್ಟೊಡಾರ್ಡ್ ‘ನಂತಹ ಪ್ರವಾಸಿ ಭಾರತದ ಸಾಮಾಜಿಕ , ನೈತಿಕ ಸ್ಥಿತಿಯ ಬಗ್ಗೆ ಏನು ಹೇಳುತ್ತಾನೆ ಎನ್ನುವುದನ್ನು ಕೇಳು.
(೮) ಸ್ವಾಮಿಯೇ ಈಗ ನೀನು ಮಿಷನರಿಗಳನ್ನು ತಿರಸ್ಕರಿಸುವಾಗ , ಅಮೆರಿಕನ್ನರು ಅದಕ್ಕೆ ಚಪ್ಪಾಳೆ ತಟ್ಟುವಾಗ ಅವರಿಗೆ ಹೀಗೆಂದು ಹೇಳು ‘ ಈ ಚಪ್ಪಾಳೆಯಿಂದ ನನ್ನ ದೇಶಕ್ಕೇನೂ ಲಾಭವಿಲ್ಲ. ಮಿಷನರಿಗಳಿಗಿಂತ ಉತ್ತಮವಾದ ಜಾರಿಗೊಳಿಸಬಹುದಾದ ಯಾವ ಕೆಲಸಗಳನ್ನು ನೀವು ಭಾರತಕ್ಕೆ ಮಾಡಲು ಇಚ್ಛಿಸುತ್ತೀರಿ ? ಭಾರತಕ್ಕೆ ಬಂದು ಬದುಕಿರಿ…..’ ಆಗ ನಿಮಗೆ ಥಿಯೊಸೊಫಿ ಅಧ್ಯಯನ ಮಾಡುವ . ಕಣ್ಕಟ್ಟು ನೋಡಬಯಸುವ , ದೇಶ ಸುತ್ತ ಬಯಸುವ ಕೆಲ ಪ್ರವಾಸಿಗಳು ಸಿಗಬಹುದಷ್ಟೇ. ಬೇರೆಯವರು ಅನುಷ್ಠಾನಶೀಲ ಒಳ್ಳೆಯ ಕೆಲಸ ಪ್ರಾರಂಬಿಸುವವರೆಗೆ ಭಾರತಕ್ಕೆ ಒಳ್ಳೆಯದನ್ನು ಮಾಡಿರುವರನ್ನು ತಿರಸ್ಕರಿಸಬೇಡ – ನಿಮ್ಮ ದೇಶವಾಸಿ ಆರ್.ಎ. ಹ್ಯೂಮ್
Comment Box is loading comments...