ಸಮಾಜ ಸುಧಾರಣೆ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ಹಿಂದೂ ಸಮಾಜದ ದುಸ್ಥಿತಿಯನ್ನು ಕಂಡು ಸ್ವಾಮಿಗಳಿಗೆ ಕಸಿವಿಸಿಯಾಗಿದ್ದಿತೆನ್ನುವುದು ಅವರ ಭಾಷಣಗಳು , ಪತ್ರಗಳು , ಮಾತುಕತೆಗಳು ಯಾವುದೇ ಸಂಶಯವಿಲ್ಲದೆ ಸಾಬೀತುಪಡಿಸುತ್ತವೆ. ವಿಧವೆಯರ ಕಣ್ಣೀರು ಒರೆಸದ , ಬಡವನ ಹೊಟ್ಟೆ ತುಂಬಿಸದ ಧರ್ಮ ಮತ್ತು ಆ ನಿಟ್ಟಿನಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ಸ್ವಾಮಿಗಳು ನೀಡಿರುವ ಕೆಲವು ಹೇಳಿಕೆಗಳು ಪುಳಕಗೊಳಿಸುವಂತೆ ಇವೆಯಾದರೂ ಅವು ಸ್ವಾಮಿಗಳ ಒಟ್ಟಾರೆ ದೃಷ್ಟಿ , ಪ್ರತಿಪಾದಿಸಿದ ಮಾರ್ಗಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನೇನೂ ಒದಗಿಸುವುದಿಲ್ಲ. ಅವುಗಳನ್ನು ಭಾಷಣಗಳಲ್ಲಿ ಮೆರುಗು ತರಲು ಬಳಸಬಹುದಷ್ಟೇ. ಸ್ವಾಮಿಗಳು ಹಿಂದೂ ಸಮಾಜ ಅನಕ್ಷರಸ್ಥತೆ , ಬಡತನ , ಬಾಲ್ಯ ವಿವಾಹ, ಜಾತೀಯತೆ, ನಿಷ್ಕ್ರಿಯತೆಯಿಂದಾಗಿ ಹಿಂದುಳಿದಿದೆ ಎಂದು ಗುರುತಿಸಿದ್ದರು. ಸಮಯ , ಸನ್ನಿವೇಶಗಳಿಗೆ ಅನುಗುಣವಾಗಿ ಇವುಗಳೊಂದಿಗೆ ಬೇರೆ ಅಂಶಗಳು ಸೇರುತ್ತಿದ್ದವು. ಪ್ರಾಚೀನ ವೈದಿಕ ಭಾರತದ ಸಮಾಜ ಸರ್ವಶ್ರೇಷ್ಟವಾಗಿದ್ದಿತು. ಅಲ್ಲಿ ವ್ಯಕ್ತಿ ಸಮಾನತೆ ಮತ್ತು ಸಮಾಜದ ಸಮಷ್ಟಿ ಈ ಎರಡರ ವಿಕಸನಕ್ಕೂ ಅವಕಾಶಗಳಿದ್ದವು. ಅಲ್ಲಿ ತಾರತಮ್ಯವಿರಲಿಲ್ಲ. ಕಾಲಾನುಕ್ರಮದಲ್ಲಿ ಅದು ಸಡಿಲಗೊಂಡು ಆಧುನಿಕ ಜಾತಿ ಪದ್ದತಿ ಬಂದಿತು. ಗುಣವೇ ಮೌಲ್ಯವಾಗಿದ್ದ ಆ ಕಾಲದ ವರ್ಣ , ಜಾತಿ, ಆಶ್ರಮ ಮುಂತಾದ ಪರಿಕಲ್ಪನೆಗಳನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲಿಸಿ ಮತ್ತೊಮ್ಮೆ ಜಾರಿಗೆ ತಂದದ್ದೇ ಅದರೆ ಭಾರತದ ಏಳ್ಗೆ ಸಾದ್ಯ. ಈ ಏಳ್ಗೆಯ ಮೂಲದಲ್ಲಿ ಧರ್ಮ ಹಾಸುಹೊಕ್ಕಾಗಿರುತ್ತದೆ ಎನ್ನುವುದು ಸ್ವಾಮಿಗಳ ಒಟ್ಟು ಚಿಂತನೆಯಾಗಿದ್ದಿತೆಂದು ಸ್ಥೂಲವಾಗಿ ಗುರುತಿಸಬಹುದು. ಬುದ್ಧನಿಂದ ಪ್ರಾರಂಭಿಸಿ ಆಧುನಿಕ ಕಾಲದ ಎಲ್ಲ ಸಮಾಜ ಸುಧಾರಕರು ಮಾನವನ ಸಮಾನತೆಯನ್ನು ಒಪ್ಪದ , ಹುಟ್ಟಿದ ಜಾತಿಯ ಮೂಲಕವೇ ವ್ಯಕ್ತಿಯ ಶ್ರೇಷ್ಟತೆಯನ್ನು ಗುರುತಿಸುವ ಪರಂಪರೆಯೇ ಹಿಂದೂ ಧರ್ಮದ ಮೊದಲ ಶತ್ರು ಎನ್ನುವುದನ್ನು ಎರಡನೆಯ ಮಾತಿಲ್ಲದೆ ಒಪ್ಪಿಕೊಂಡಿದ್ದರು. ಇದೇ ಅವರೆಲ್ಲರ ಖಡಾಖಂಡಿತ ನಿಲುವಾಗಿದ್ದಿತು. ಇದೇ ಸ್ವಾಮಿಗಳಿಗೂ ಇತರ ಸಮಾಜ ಸುಧಾರಕರಿಗೂ ಇದ್ದ ಪ್ರಮುಖ ವ್ಯತ್ಯಾಸ. ಸ್ವಾಮಿಗಳು ಹಲವು ಸಲ ಇದೇ ನಿಲುವಿಗೆ ಅಂಟಿಕೊಂಡಿದ್ದಾರಾದರೂ ಅದರಲ್ಲಿ ಧೃಡತೆಯಿರಲಿಲ್ಲ. ಅವಕಾಶ ಸಿಕ್ಕಿದಾಗ ಈ ನಿಲುವನ್ನು ಬದಲಾಯಿಸುವುದು ಸಾಮಾನ್ಯವಾಗಿದ್ದಿತು, ಕೆಲವು ಸಲ ಸ್ವಾಮಿಗಳ ಒಳಗಿನಿಂದ ತಾವು ಶ್ರೇಷ್ಟ ಜಾತಿಯವರೆಂಬ ಹೆಮ್ಮೆ ಎದ್ದು ಹೊರಬರುತ್ತಿದ್ದಿತು.
ಸ್ವಾಮಿಗಳಿಂದ ದೀಕ್ಷೆ ಪಡೆದಿದ್ದ ಹರಿಪದ ಮಿತ್ರನ ಹೆಂಡತಿ ಶ್ರೀಮತಿ ಇಂದುಮತಿ ಮಿತ್ರ ಸ್ವಾಮಿಗಳಿಗೆ ಬರೆದ ಪತ್ರ ತಲುಪಿದ್ದಿತು. ಅದರಲ್ಲಿ ಶ್ರೀಮತಿ ಇಂದುಮತಿ ಬಂಗಾಳಿ ಪದ್ದತಿಗೆ ಅನುಗುಣವಾಗಿ ತಮ್ಮ ಹೆಸರಿನ ಮುಂದೆ ದಾಸಿ ಎಂದು ಸಹಿ ಮಾಡಿದ್ದಳು. ( ಸ್ವಾಮಿಗಳ ತಾಯಿ ಭುವನೇಶ್ವರಿ ತನ್ನ ಹೆಸರಿನ ಮುಂದೆ ದಾಸಿ ಎಂದೇ ಸಹಿ ಮಾಡುತ್ತಿದ್ದಳು) . ಇದನ್ನು ಗಮನಿಸಿದ ಸ್ವಾಮಿಗಳು ‘ಪ್ರತಿ ದಿನ ಅವಕಾಶ ದಕ್ಕಿದಾಗ ಗೀತೆ ಓದಿರಿ. ದಾಸಿ ಎಂದು ನೀವೇಕೆ ಸಹಿ ಮಾಡುವಿರಿ ? ವೈಶ್ಯರು ಮತ್ತು ಶೂದ್ರರು ಮಾತ್ರ ದಾಸ , ದಾಸಿಯೆಂದು ಸಹಿ ಮಾಡಬೇಕು. ಆದರೆ ಬ್ರಾಹ್ಮಣರು , ಕ್ಷ್ಯತ್ರಿಯರು ದೇವ , ದೇವಿ ಎಂದು ಬರೆಯಬೇಕು. ಜಾತಿಭೇದ ಮುಂತಾದವನ್ನು ಈಗಿನ ಕಾಲದ ಕಪಟಿ ಬ್ರಾಹ್ಮಣರು ಕಂಡು ಹಿಡಿದರು. ಯಾರು ಯಾರಿಗೆ ಆಳು . ಎಲ್ಲರೂ ಹರಿಯ ದಾಸರು. ಅದ್ದರಿಂದ ಹೆಂಗಸರು ತಮ್ಮ ಗಂಡನ ಮನೆತನದ ಹೆಸರನ್ನು ತಮ್ಮ ಹೆಸರಿನ ಮುಂದೆ ಬಳಸಬೇಕು’ ಎನ್ನುವ ಸಲಹೆ ನೀಡಿದ್ದಾರೆ. (೨೪/೫/೧೮೯೩-ಇಂದುಮತಿ ಮಿತ್ರ). ಸ್ವಾಮಿಗಳ ಈ ಸಲಹೆಯೇ ಕುತೂಹಲಕರವಾಗಿದೆ. ಗುಣಗಳ ಆಧಾರದ ಮೇಲೆ ಬ್ರಾಹ್ಮಣ , ಕ್ಷತ್ರಿಯ , ವೈಶ್ಯ , ಶೂದ್ರ ಎನ್ನುವ ವರ್ಣ ವಿಭಜನೆಯನ್ನು ನಾನೇ ಮಾಡಿದ್ದೇನೆ’ (ಗೀತೆ ೪/೧೩) , ಪಾಪಯೋನಿಜರು , ಹೆಂಗಸರು ಅದರಂತೆಯೇ ಶೂದ್ರರು ನನ್ನಲ್ಲಿ ಶರಣಾಗಿ ಪರಮಗತಿ ಪಡೆಯುತ್ತಾರೆ. ಪುಣ್ಯಶೀಲ ಬ್ರಾಹ್ಮಣರು ಮತ್ತು ರಾಜರ್ಷಿ ಭಕ್ತರು ಅದನ್ನು ಪಡೆಯುವಲ್ಲಿ ಸಂಶಯ ಎಲ್ಲಿದೆ (ಗೀತೆ ೩೨, ೪೦/೯) ಎಂದು ಹೇಳಿರುವ ಕೃಷ್ಣನೇ ವರ್ಣ ವಿಂಗಡಣೆ ಮಾಡಿದ್ದಾನೆ. . ಪ್ರಾಚೀನರಾದ ಮನು , ಪರಾಶರ , ಯಾಜ್ಞ್ಯವಲ್ಕ ಸ್ಮೃತಿಗಳು ಮಾನವನ ಸಾಮಾಜಿಕ , ಧಾರ್ಮಿಕ ಜೀವನವನ್ನು ನಾಲ್ಕು ವರ್ಣಗಳಲ್ಲಿಯೇ ವಿಭಜಿಸಿದ್ದವು. ಇದಕ್ಕೆ ಅನುಗುಣವಾಗಿ ಸ್ವಾಮಿಗಳು ನಾವು (ದತ್ತರು), ನೀವು ( ಮಿತ್ರರು) ಜಾತಿಯಲ್ಲಿ ಕ್ಷತ್ರಿಯರು (ಬಂಗಾಳದ ಕಾಯಸ್ಥ ಪಂಗಡಗಳಾದ ಬಸು , ಮಿತ್ರ , ದತ್ತ , ಘೋಷ್ ಮತ್ತು ಗುಹ ತಾವು ಕ್ಷತ್ರಿಯ ಮೂಲದವರೆಂದು ಗುರುತಿಸಿಕೊಳ್ಳುತ್ತಾರೆ. ) ಆದ್ದರಿಂದ ದಾಸ, ದಾಸಿ ಎಂದು ಬರೆಯಬಾರದು. ದೇವ, ದೇವಿ ಎಂದು ಬರೆಯಬೇಕು. ನಾವು , ನೀವಲ್ಲದವರು ದಾಸ, ದಾಸಿಯರು, ಅವರು ಹಾಗೆ ಬರೆದು ಕೊಳ್ಳಬೇಕು ಎನ್ನುವ ಸನಾತನ ಸಲಹೆ ನೀಡಿದ್ದಾರೆ. ಜಾತಿ ಭೇದ ಈ ಕಾಲದ ಕಪಟಿ ಬ್ರಾಹ್ಮಣರ ಸಂಚು ಎನ್ನುವ ಸ್ವಾಮಿಗಳ ಆರೋಪದಲ್ಲಿ ಹುರುಳಿಲ್ಲ. ಏಕೆಂದರೆ ಬ್ರಾಹ್ಮಣರು ಯಾವಾಗಲೂ ಪ್ರಾಚೀನ ಗ್ರಂಥಗಳನ್ನೇ ತಮ್ಮ ಶ್ರೇಷ್ಟತೆಗೆ ಆಧಾರವಾಗಿ ಬಳಸುತ್ತಿದ್ದರು. ಬ್ರಾಹ್ಮಣರಿಗ ಮಂಗಳ ಸೂಚಕ , ಕ್ಷತ್ರಿಯನಿಗೆ ಬಲ ಸೂಚಕ , ವೈಶ್ಯನಿಗ ಧನ ಸೂಚಕ , ಶೂದ್ರನಿಗೆ ಜುಗುಪ್ಸೆ ಸೂಚಿಸುವ ಹೆಸರಗಳನ್ನಿಡಬೇಕು. ಬ್ರಾಹ್ಮಣರು ಶರ್ಮ , ಕ್ಷತ್ರಿಯರು ವರ್ಮ , ವೈಶ್ರರು ಶ್ರೇಷ್ಟಿ , ಶೂದ್ರರು ದಾಸ/ದಾಸಿ ಎಂದು ತಮ್ಮ ಹೆಸರಿನ ಮುಂದೆ ಬರೆದುಕೊಳ್ಳಬೇಕೆಂದು ಮನು ಹೇಳಿದ್ದಾನೆ. (ಮನುಸ್ಮೃತಿ: ೨/೩೧-೩೨). ಆ ದೃಷ್ಟಿಯಲ್ಲಿ ನರೇಂದ್ರನಾಥ ದತ್ತ ಅಥವಾ ವಿವೇಕಾನಂದ ಇವೆರಡೂ ಹೆಸರಗಳನ್ನು ಸ್ವಾಮಿಗಳು ಇಟ್ಟುಕೊಳ್ಳುವಂತಿಲ್ಲ.
ಮದ್ರಾಸ್’ನ ವಿಕ್ಟೊರಿಯಾ ಹಾಲ್’ನಲ್ಲಿ ನೀಡಿದ ‘ನನ್ನ ಅಭಿಯಾನ’ ಎನ್ನುವ ಭಾಷಣದಲ್ಲಿ ‘ ಸಮಾಜ ಸುಧಾರಕರ ಒಂದು ಮಾಸ ಪತ್ರಿಕೆಯಲ್ಲಿ ನನ್ನನ್ನು ಶೂದ್ರ ಎಂದು ಕರೆದು ಸಂನ್ಯಾಸಿಯಾಗಲು ಅಧಿಕಾರ ಇಲ್ಲವೆಂದು ಹೇಳಿರುವರು. ಬ್ರಾಹ್ಮಣರು ‘ಯಮಾಯ ಧರ್ಮರಾಜಾಯ ಚಿತ್ರಗುಪ್ತಾಯ ವೈ ನಮಃ ‘ ಎಂದು ಉಚ್ಛರಿಸಿ ಯಾರ ಪಾದಗಳನ್ನು ಪೂಜಿಸುವರೋ ಅವರು ನನ್ನ ವಂಶದ ಮೂಲ ಪುರುಷರು, ಪರಿಶುದ್ಧ ಕ್ಷತ್ರಿಯರು. ನೀವು ನಿಮ್ಮ ಪುರಾಣಗಳ ಪುಣ್ಯ ಕಥೆಗಳನ್ನು ನಂಬಿದರೆ ನನ್ನ ವರ್ಣವು ಮಾಡಿದ ಇತರ ಸೇವೆಯನ್ನು ಬಿಟ್ಟರೂ , ಅದು ಹಲವು ಶತಮಾನಗಳ ಕಾಲ ಅರ್ಧ ಭಾರತವನ್ನು ಆಳಿತು…. … ಬ್ರಾಹ್ಮಣ , ಕ್ಷತ್ರಿಯ , ವೈಶ್ಯ ಈ ಮೂರು ವರ್ಣದವರಿಗೂ ಸಂನ್ಯಾಸದ ಹಕ್ಕಿದೆ ‘ ಎಂದರು. (147) ಸ್ವಾಮಿಗಳು ಮೇರಿ ಹೇಲ್’ಗೆ ಉತ್ತರಿಸುತ್ತ ‘ …ನನ್ನನ್ನು ಬಹಿಷ್ಕರಿಸುವುದು ಅಷ್ಟು ಸುಲಭವಲ್ಲ. ನನ್ನ ಪೂರ್ವಾಶ್ರದ ಜಾತಿಗೆ ಸೇರಿದ ಪ್ರಖ್ಯಾತ ರಾಜನೊಬ್ಬನು ನನ್ನ ಗೌರವಾರ್ಥ ಒಂದು ಸಂತೋಷ ಕೂಟ ಏರ್ಪಡಿಸಿದ್ದನು. ಅದರಲ್ಲಿ ಆ ಜಾತಿಯ ಮುಖ್ಯಸ್ಥರೆಲ್ಲ ಇದ್ದರು. ….ಪ್ರಿಯ ಮೇರಿ ಈ ಪಾದಗಳು ರಾಜರ ಮನೆತನಕ್ಕೆ ಸೇರಿದವರಿಂದ ತೊಳೆದು ಆದರಿಸಿ ಪೂಜಿಸಲ್ಪಟ್ಟಿವೆ….ಎನ್ನುತ್ತ ತಮ್ಮ ಪೂರ್ವಾಶ್ರಮದ ಜಾತಿಯ ಬಗ್ಗೆ ಹೆಮ್ಮೆ ತಳೆದು ತಮಗೆದುರಾಗಬಹುದಾದ ಕಂಟಕದಿಂದ ಪಾರಾಗಿದ್ದಾರು. ಸ್ವಾಮಿಗಳು ಕ್ಷತ್ರಿಯರಾಗಿರದೆ ಶೂದ್ರನಾಗಿದ್ದರೆ ಈ ಆಕ್ಷೇಪವನ್ನು ಹೇಗೆ ಎದುರಿಸಬೇಕಿದ್ದಿತು ಎನ್ನುವುದು ಅವರ ವಿಷಯ ಸೂಚಿಯಿಂದ ಹೊರಗುಳಿದಿದೆ. (೯/೭/೧೮೯೭-ಮೇರಿ ಹೇಲ್).
ಮಾರ್ಗರೆಟ್ ನೋಬಲ್ ೧೮೯೮ ರಲ್ಲಿ ಮೇ ೧೧ ರಿಂದ ಆಗಸ್ಟ್ ೨೦ ರವರೆಗೆ ಸ್ವಾಮಿಗಳೊಂದಿಗೆ ಮಾಡಿದ ಹಿಮಾಲಯ , ಕಾಶ್ಮೀರ , ಅಮರನಾಥ ಪ್ರವಾಸಗಳ ನೆನಪುಗಳನ್ನು ದಿನಚರಿಯಾಗಿ ಬರೆದಿದ್ದಾಳೆ. ಅದರಲ್ಲಿ ಕೆಲವೊಮ್ಮೆ ಸ್ವಾಮಿಗಳು ಭಾರತದ ಚರಿತ್ರೆಯನ್ನು ಬ್ರಾಹ್ಮಣ ಮತ್ತು ಕ್ಷತ್ರಿಯರ ನಡುವಿನ ತಿಕ್ಕಾಟದಂತೆ ಚಿತ್ರಿಸುತ್ತಿದ್ದರು. ಗೆಲುವು ಯಾವಾಗಲೂ ಕ್ಷತ್ರಿಯರದ್ದೇ ಆಗಿರುತ್ತಿದ್ದಿತು. ಬಂಗಾಳದ ಕಾಯಸ್ಥರು ಮೌರ್ಯರಿಗಿಂತಲೂ ಮೊದಲಿನ ಕ್ಷತ್ರಿಯ ಕುಲದವರು ಎಂದು ಸಕಾರಣಗಳಿಂದ ಸಾಧಿಸಿದರು ಎಂದು ಬರೆದಿದ್ದಾಳೆ. ಹೀಗೆ ಕಾಯಸ್ಥ ಕುಲದ ಹೆಮ್ಮೆ ಸ್ವಾಮಿಗಳ ನರನಾಡಿಯಲ್ಲಿ ತುಂಬಿದ್ದಿತು.
ಭಾರತದಲ್ಲಿ ವೈದಿಕ ಮೂಲದ ಯಾವ ಧರ್ಮಶಾಸ್ತ್ರಗಳನ್ನು ಲೆಕ್ಕಿಸದೆ ಸಂನ್ಯಾಸಿಗಳಾಗಿ ತಮ್ಮದೇ ಆದ ದಾರಿಯಲ್ಲಿ ನಡೆದ ಶೂದ್ರರ ದೊಡ್ಡ ಪರಂಪರೆಯೇ ಇದೆ. ವೇದ, ವೇದಾಂತ , ಧರ್ಮ ಸೂತ್ರಗಳಿಗೆ ಹೆದರುತ್ತಿದ್ದ ಸ್ವಾಮಿಗಳು ಅವುಗಳ ಚೌಕಟ್ಟಿನಲ್ಲಿಯೇ ತಾವು ಸಂನ್ಯಾಸಿಗಳಾಗಲು ಅರ್ಹ ಎಂದು ಸಾಧಿಸಲು ಹೆಣಗುತ್ತ ತಮ್ಮ ಕಾಯಸ್ಥ ಜಾತಿಯ ಬಗ್ಗೆ ಹೆಮ್ಮೆ ತಳೆದಿದ್ದರು. ಅದರ ಬದಲು ಯಾವ ಗೊಡ್ದು ಧರ್ಮಶಾಸ್ತ್ರಗಳನ್ನು ನಾನು ಲೆಕ್ಕಿಸುವುದಿಲ್ಲ , ಯಾರು ಬೇಕಾದರೂ ಸಂನ್ಯಾಸಿಗಳಾಗಬಹುದು. ಆದರ್ಶಗಳು ಮುಖ್ಯವೇ ಹೊರತು ಹುಟ್ಟಿದ ಜಾತಿಯಲ್ಲ. ಶೂದ್ರ ಸಂನ್ಯಾಸಿಯಾಗುವುದರಿಂದ ವೇದ , ಉಪನಿಷತ್ತು , ಸೂತ್ರಗಳು ನಡುಗುವಂತಿದ್ದರೆ ನಡುಗಲಿ. ಅದರಿಂದ ಏನೂ ಬಾಧಕವಿಲ್ಲ ಎಂದಿದ್ದರೆ ಸ್ವಾಮಿಗಳನ್ನು ಮೆಚ್ಚಬಹುದಿದ್ದಿತು. ಸ್ವಾಮಿಗಳು ಹಾಗೆ ಏಕೆ ಹೇಳಲಿಲ್ಲ ಎನ್ನುವುದರ ಮೇಲೆ ನಾಲ್ಕು ವರ್ಷಗಳ ಹಿಂದೆ ಅವರು ಬರೆದ ಈ ಪತ್ರ ಬೆಳಕು ಚೆಲ್ಲುತ್ತದೆ - ‘ಹಿಂದೂ ತನ್ನ ಧರ್ಮವನ್ನು ಎಂದಿಗೂ ಬಿಡಬಾರದು. ಆದರೆ ಧರ್ಮವನ್ನು ಸರಿಯಾದ ಕಟ್ಟುನಿಟ್ಟಿನಲ್ಲಿಟ್ಟು ಸಮಾಜದ ಏಳ್ಗೆಗೆ ಅವಕಾಶ ಕೊಡಬೇಕು. ಭಾರತದಲ್ಲಿ ಪುರೋಹಿತರು ಮಾಡುತ್ತಿರುವ ಎಲ್ಲ ದೌರ್ಜನ್ಯಗಳಿಗೂ , ದೇಶದ ಹೀನ ಸ್ಥಿತಿಗೂ ಧರ್ಮವೇ ಕಾರಣವೆಂದು ಎಲ್ಲ ಸಮಾಜ ಸುಧಾರಕರು ತಪ್ಪು ತಿಳಿದರು , ಎಂದಿಗೂ ಅಲುಗದ ಧರ್ಮದ ಬುಡ ಕೀಳಲು ಯತ್ನಿಸಿದರು. ಇದರ ಫಲಿತಾಂಶ-ಉದ್ದೇಶದ ಸೋಲು.! ಬುದ್ಧನಿಂದ ರಾಮ ಮೋಹನ ರಾಯ್ ವರೆಗೆ ಜಾತಿ ಭೇದ ಧರ್ಮಕ್ಕೆ ಸಂಬಂಧಪಟ್ಟದ್ದೆಂದು ತಪ್ಪು ತಿಳಿದು ಜಾತಿ ಮತ್ತು ಧರ್ಮ ಎರಡನ್ನೂ ನಾಶ ಮಾಡಲು ಯತ್ನಿಸಿ ತಮ್ಮ ಪ್ರಯತ್ನದಲ್ಲಿ ವಿಫಲರಾದರು. ಪುರೋಹಿತರು ಏನು ಕೂಗಿದರೇನು , ಜಾತಿ ಒಂದು ಘನೀಭೂತವಾದ ಸಾಮಾಜಿಕ ಪದ್ದತಿ. ಈಗ ಅದು ತನ್ನ ಕೆಲಸ ಮುಗಿದ ಮೇಲೆ ಭಾರತದ ವಾತಾವರಣವನ್ನು ದುರ್ಗಂಧಗೊಳಿಸಿದೆ. ಜನರು ಕಳೆದುಕೊಂಡ ಸಾಮಾಜಿಕ ವ್ಯಕ್ತಿತ್ವವನ್ನು ಅವರಿಗೆ ಮರಳಿ ಕೊಡುವುದರಿಂದ ಈ ಕಟ್ಟು ತಾನಾಗಿಯೇ ಮಾಯವಾಗುವುದು ‘ (೨/೧೧/೧೮೯೩-ಅಳಸಿಂಗ ಪೆರುಮಾಳ್).
ಭಾರತದ ಸಮಾಜ ಸುಧಾರಕ ಚಿಂತಕರಲ್ಲಿ ಸ್ವಾಮಿಗಳಷ್ಟು ಗೊಂದಲದಲ್ಲಿ ಬಿದ್ದವರು ಮತ್ತೊಬ್ಬರಿಲ್ಲ. ಸ್ವಾಮಿಗಳಿಗೆ ಒಮ್ಮೊಮ್ಮೆ ಶೂದ್ರರ ಮೇಲೆ ಪ್ರೀತಿ ಉಕ್ಕಿ ಬ್ರಾಹ್ಮಣರ ಮೇಲೆ ರೋಷ ಬರುತ್ತಿದ್ದಿತು. ಹಾಗೆ ಬಂದಾಗ ಅವರನ್ನು ಪುರೋಹಿತರು ಎಂದು ಕರೆದು ಕೊಡವುತ್ತಿದ್ದರು. ಇದ್ದಕ್ಕಿಂದ್ದಂತೆ ವರ್ಣ , ಜಾತಿ ಹುಟ್ಟಿನಿಂದ ಬರುವುದಿಲ್ಲ , ಗುಣದಿಂದ ಎಂದು ಸಾರುತ್ತಿದ್ದರು. ಆಗ ಸ್ವಾಮಿಗಳು ಬಳಸುತ್ತಿದ್ದ ಬ್ರಾಹ್ಮಣ ಎಂಬ ಪದ ಜಾತಿ ಸೂಚಕವಾಗಿರದೆ , ಗುಣ ಸೂಚಕದಂತೆ ಕಾಣುತ್ತಿದ್ದಿತು. ಗುಣದ ಆಧಾರದ ಮೇಲೆ ಒಬ್ಬ ವ್ಯಕ್ತಿ ಯಾವ ವರ್ಣಕ್ಕೆ ಸೇರಿರುವನೆಂದು ನಿರ್ಧರಿಸುವವರು ಯಾರು ? ಸನ್ನಿವೇಶದ ಒತ್ತಡಕ್ಕೆ ಒಳಗಾಗಿ ಒಬ್ಬ ವ್ಯಕ್ತಿಯ ಗುಣಗಳಲ್ಲಿ ಕುಸಿತ ಅಥವಾ ಏರಿಕೆ ಉಂಟಾದರೆ ಅವರನ್ನು ಇರುವುದಕ್ಕಿಂತ ಕೆಳ ಅಥವಾ ಮೇಲಿನ ವರ್ಣಕ್ಕೆ ಸೇರಿಸುವ ವ್ಯವಸ್ಥೆ ಇದೆಯೇ ಎನ್ನುವುದಕ್ಕೆ ಅವರಲ್ಲಿ ಉತ್ತರವಿರಲಿಲ್ಲ. ಇನ್ನೂ ಕೆಲವೊಮ್ಮೆ ಜಾತಿ ಎಂದರೆ ಸಹಜ ವಿಕಸನ ಮಾರ್ಗ. ಒಂದು ಜಾತಿಯಿಂದ ಇನ್ನೊಂದು ಜಾತಿಗೆ ಮುಂದುವರೆಯುವುದೇ ಸುಧಾರಣೆ ಎಂದು ಪ್ರತಿಪಾದಿಸುತ್ತಿದ್ದರು. ಅವರಿಗೆ ಒಮ್ಮೊಮ್ಮೆ ಜನಿವಾರ ಹಾಕಿ ವೇದಗಳನ್ನು ಓದಿಸಿದರೆ ಸಮಾಜ ಸುಧಾರಣೆಯಾಗುತ್ತದೆ ಎನಿಸುತ್ತಿದ್ದಿತು. ಅದರಲ್ಲೂ ಮೊದಲ ಮೂರು ವರ್ಣದ ‘ದ್ವಿಜ’ರು ವೇದ ಓದಬೇಕೆನ್ನುವುದು ಅವರ ಕಾಳಜಿಯಾಗಿದ್ದಿತು.
‘ಈಗ ಜಾತಿಯ ವಿಚಾರ ; ಸಂಸ್ಕೃತದಲ್ಲಿ ಜಾತಿ ಎಂದರೆ ವೈವಿಧ್ಯ , ಬಗೆ ಎಂದರ್ಥ. ಸೃಷ್ಟಿ ಪದದ ಮೊದಲ ಅರ್ಥವೇ ಜಾತಿ. ಒಂದಾಗಿರುವ ನಾನು ಹಲವಾಗುತ್ತೇನೆ ಇದೇ ಸೃಷ್ಟಿ….. ಜಾತಿಯ ಮೊಟ್ಟ ಮೊದಲ ಅಭಿಪ್ರಾಯವೇ ವ್ಯಕ್ತಿಗೆ ತನ್ನ ಸ್ವಭಾವ ಅಥವಾ ಪ್ರಕೃತಿಯನ್ನು ವ್ಯಕ್ತಪಡಿಸುವ ಸ್ವಾತಂತ್ರ. ಅನೇಕ ಸಾವಿರ ವರ್ಷಗಳಿಂದ ಅದೇ ಅರ್ಥವೇ ಅದಕ್ಕೆ ಇದ್ದಿತು. ಬೇರೆ ಜಾತಿಯವರು ಕಲೆತು ಉಟಮಾಡುವುದನ್ನು ಅತ್ಯಂತ ಆಧುನಿಕ ಪುಸ್ತಕಗಳೂ ನಿಷೇಧಿಸಿಲ್ಲ. ಹಾಗಾದರೆ ಭಾರತದ ಹೀನಸ್ಥಿತಿಗೆ ಕಾರಣವೇನು ? ಜಾತಿ ಎನ್ನುವುದರ ಈ ಅರ್ಥ ಮರೆತದ್ದೇ. ….ಈಗಿರುವ ಜಾತಿ ನಿಜವಾದ ಜಾತಿಯಲ್ಲ. ಇದು ಜಾತಿಯ ವಿಕಾಸಕ್ಕೆ ತಂದೊಡ್ಡಿದ ಅಡಚಣೆ. . … ಇದೇ ಭಾರತದ ಅವನತಿಗೆ ಕಾರಣ . ಜ್ಯೋತಿಷಿಗಳು ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಯ ಜಾತಿಯನ್ನು ಅವರು ಹುಟ್ಟಿದ ಗಳಿಗೆಯ ಮೇಲೆ ನಿರ್ಧರಿಸುತ್ತಾರೆನ್ನುವುದು ಪ್ರತಿ ಭಾರತೀಯನಿಗೆ ಗೊತ್ತು. ಇದೇ ನಿಜವಾದ ಜಾತಿ , ವ್ಯಕ್ತಿತ್ವ. ಇದನ್ನು ಜ್ಯೋತಿಷ್ಯಶಾಸ್ತ್ರ ತಿಳಿದಿದ್ದಿತು. …… ನನ್ನ ಕಾರ್ಯ ವಿಧಾನ ಇದು. ಹಿಂದೂಗಳು ತಮ್ಮಲ್ಲಿರುವ ಯಾವುದನ್ನೂ ಬಿಡಬೇಕಾಗಿಲ್ಲ. ಹಿಂದಿನ ಋಷಿಗಳು ನಮಗೆ ತೋರಿದ ಮಾರ್ಗದಲ್ಲಿಯೇ ನಡೆಯಬೇಕು. (೩/೧/೧೮೯೫-ಸುಬ್ರಮಣ್ಯ ಅಯ್ಯರ್)
- ಜಾತಿ ವ್ಯವಸ್ಥೆಗೆ ಯಾವ ಕಾಲದಲ್ಲಿಯೂ ಇರದ ವೈವಿಧ್ಯತೆ , ವಿಕಸನ ಮುಂತಾದ ವಿವರಣೆಗಳನ್ನು ಕೊಡಲು ಸ್ವಾಮಿಗಳು ಯತ್ನಿಸಿದ್ದಾರೆ, ಸ್ವಾಮಿಗಳ ಲೆಕ್ಕದಲ್ಲಿ ಜಾತಿ ಒಂದು ಸಾಮಾಜಿಕ ಸತ್ಯವಲ್ಲ. ಅದನ್ನು ಹುಟ್ಟಿದ ಗಳಿಗೆಯ ಮೇಲೆ ಪುರೋಹಿತ ನಿರ್ಧರಿಸುತ್ತಾನೆ. ಎಂದರೆ ನೈಸರ್ಗಿಕವಾಗಿಯೇ ಜಾತಿ ನಿರ್ಧಾರವಾಗುತ್ತದೆ ಅದರ ನಿರ್ಧಾರ ಪುರೋಹಿತನ ವಶದಲ್ಲಿದೆ !!! ಸ್ವಾಮಿಗಳು ಒಂದೇ ಗಳಿಗೆಯಲ್ಲಿ ಬ್ರಾಹ್ಮಣನ ಮಗ ಬ್ರಾಹ್ಮಣನಾದರೆ ಅದೇ ಗಳಿಗೆಯಲ್ಲಿ ಹುಟ್ಟಿದ ಹೊಲೆಯನ ಮಗ ಹೊಲೆಯ ಹೇಗಾಗುತ್ತಾನೆ ಎನ್ನುವುದನ್ನು ತಿಳಿಸುವುದಿಲ್ಲ. ಸ್ವಾಮಿಗಳು ಸುಬ್ರಮಣ್ಯ ಅಯ್ಯರ್’ನನ್ನು ಸಂತೋಷಪಡಿಸಲು ಇಂತಹ ತಾವೇ ಕಂಡು ಹಿಡಿದ ಜಾತಿ ವ್ಯಾಖ್ಯಾನಕ್ಕೆ ಮುಂದಾಗಿದ್ದಾರೆ.
ಸ್ವಾಮಿಗಳು ಮೈಸೂರು ಮಹಾರಾಜ ಜಯಜಾಮರಾಜೇಂದ್ರ ಒಡೆಯರಿಗೆ ಬರೆದ ಪತ್ರದಲ್ಲಿ ಅಮೆರಿಕದ ಸಾಧನೆ , ಹೆಂಗಸರು , ಭಾರತದ ಹೀನ ಅವಸ್ಥೆಗೆ ಬಡಜನರನ್ನು ಕಡೆಗಣಿಸಿರುವುದನ್ನು ಭಾವಾವೇಶದಲ್ಲಿ ತಿಳಿಸುತ್ತ ‘….ಪಾಶ್ಚಾತ್ಯರು ನಮ್ಮ ಜಾತಿಯ ವಿಚಾರದಲ್ಲಿ ಎಷ್ಟು ದೂರಿದರೂ ಅವರಲ್ಲಿ ಇದಕ್ಕಿಂತ ನೀಚವಾದ ಜಾತಿ ಭೇದವಿದೆ. ಅದು ಹಣದ ಜಾತಿ… ಎಂದಿದ್ದರು. (೨೩/೬/೧೮೯೪).
-ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ನರಸಿಂಹಾಚಾರಿ ಆಲ್ಬರ್ಟ್ ಡೌಟಿಗೆ ನೀಡಿದ ಸಂದರ್ಶನದಲ್ಲಿ ಅಮೆರಿಕದಲ್ಲಿ ಹಣದ ಜಾತಿ ಇದೆ ಎಂದು ಮೊದಲ ಬಾರಿಗೆ ತಿಳಿಸಿದ್ದನು. ಇದನ್ನೇ ಸ್ವಾಮಿಗಳು ರಾಜರಿಗೆ ಹೇಳಿದ್ದರು. ಸ್ವಪ್ರಯತ್ನದಿಂದ ಅಮೆರಿಕದ ‘ಹಣದ ಜಾತಿ’ಗೆ ಯಾರು ಬೇಕಾದರೂ ಸೇರಬಹುದು , ಆದರೆ ಭಾರತದ ಸಾಮಾಜಿಕ ಜಾತಿಯಲ್ಲಿ ಅದು ಸಾಗದೆನ್ನುವ ಸತ್ಯವನ್ನು ಕೆಲಕಾಲ ಮರೆತಿದ್ದರು.
ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಗ್ರಾಜುಯೆಟ್ ಫಿಲಾಸಫಿಕಲ್ ಸೊಸೈಟಿಯಲ್ಲಿ ೨೫/೩/೧೮೯೬ ರಂದು ಸ್ವಾಮಿಗಳು ವೇದಾಂತ ತತ್ತ್ವದ ಮೇಲೆ ಭಾಷಣ ಮಾಡಿದ ನಂತರ ಪ್ರಶ್ನೋತ್ತರ ಕಲಾಪ ಜರುಗಿತು. ಆಗ ಜಾತಿ ಭಾವನೆಯೊಂದಿಗೆ ಅಧ್ಯಾತ್ಮಿಕ ಸ್ವಾತಂತ್ರ್ಯ ಹೊಂದಿಕೊಳ್ಳಬಲ್ಲುದೇ ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸುತ್ತ ಸ್ವಾಮಿಗಳು ‘ (ಅಧ್ಯಾತ್ಮವಾದಿಗಳು) ಜಾತಿ ಭೇದ ಎಂದಿಗೂ ಇರಬಾರದು ಎನ್ನುವರು. ಜಾತಿಯನ್ನು ಒಪ್ಪುವವರೂ ಕೂಡ ಆ ವ್ಯವಸ್ಥೆಯಲ್ಲಿ ಎಲ್ಲ ಒಳ್ಳೆಯದಿದೆ ಎನ್ನುವುದಿಲ್ಲ. ಇದಕ್ಕಿಂತ ಒಳ್ಳೆಯದು ಯಾವುದನ್ನಾದರೂ ತೋರಿಸಿದರೆ ಈಗಿರುವುದನ್ನು ಬಿಡುತ್ತೇವೆ ಎನ್ನುತ್ತಾರೆ. ನಿಮ್ಮ ದೇಶದಲ್ಲಿ ಒಂದು ಜಾತಿಯನ್ನು ಪ್ರಾರಂಭಿಸಲು ನೀವು ಪ್ರಯತ್ನಿಸುವಿರಿ. ಒಬ್ಬನಿಗೆ ಒಂದು ಚೀಲ ಡಾಲರ್ ಸಿಕ್ಕಿದರೆ ನಾನು ನಾಲ್ಕು ನೂರು ಸಿರಿವಂತರಲ್ಲಿ ಒಬ್ಬ ಎನ್ನುವನು. ನಾವು ಮಾತ್ರ ಸ್ಥಿರವಾದ ಜಾತಿ ವ್ಯವಸ್ಥೆಯನ್ನು ಮಾಡಿರುವೆವು. ಇತರ ದೇಶಗಳು ಅದಕ್ಕಾಗಿ ಹೋರಾಡುತ್ತಿವೆ. ….ಜಾತಿ ವ್ಯವಸ್ಥೆ ಇರುವುದರಿಂದ ಈಗ ೩೦ ಕೋಟಿ ಜನಕ್ಕೆ ಊಟ ಸಿಗುತ್ತಿದೆ. ..ಜಾತಿ ಪದ್ದತಿ ಇಲ್ಲದಿದ್ದರೆ ಓದುವುದಕ್ಕೆ ಸಂಸ್ಕೃತ ಪುಸ್ತಕಗಳೇ ಸಿಗುತ್ತಿರಲಿಲ್ಲ. ಈ ಸಂಸ್ಥೆಯಲ್ಲಿ ದೋಷವಿಲ್ಲ ಎಂದಲ್ಲ. ಜಾತಿ ಪದ್ದತಿ ಒಂದು ದೊಡ್ದ ಕೋಟೆಯಂತೆ ಆಗಿದೆ. ಹೊರಗಿನಿಂದ ಸೇನೆ ಅದೆಷ್ಟು ದಾಳಿ ಮಾಡಿದರೂ ಅದನ್ನು ಒಡೆಯಲು ಆಗಿಲ್ಲ. ಜಾತಿ ವ್ಯವಸ್ಥೆಯ ಆವಶ್ಯಕತೆ ಇನ್ನೂ ಹೋಗಿಲ್ಲ ‘
-ಭಾರತದ ಜಾತಿ ತಾರತಮ್ಯವನ್ನು ಸಾಮಾಜಿಕ, ನೈತಿಕ , ಅಧ್ಯಾತ್ಮಿಕ ಯಾವುದೇ ನೆಲೆಗಟ್ಟಿನಲ್ಲಿ ಸಮರ್ಥಿಸಿಕೊಳ್ಳುವುದು ಸಾದ್ಯವಿಲ್ಲವೆಂದು ಸ್ವಾಮಿಗಳಿಗೆ ಮನದಟ್ಟಾಗಿದ್ದಿತು. ಆದರೆ ಅದು ತಪ್ಪೆಂದು ಒಪ್ಪಿಕೊಳ್ಳುವ ತೆರೆದ ಮನಸ್ಸಿರಲಿಲ್ಲ. ಆದ್ದರಿಂದ ಮೂಲ ಸಮಸ್ಯೆಗೆ ಉತ್ತರ ಕೊಡುವ ಬದಲು ಅಮೆರಿಕದ ಸಮಾಜದಲ್ಲಿ ಹಣವಿರುವವರದೇ ಒಂದು ಜಾತಿ. ಭಾರತದ ಜಾತಿ ವ್ಯವಸ್ಥೆ ಅದಕ್ಕಿಂತ ಉತ್ತಮವಾದುದು ಎನ್ನುವ ಅಸಂಬದ್ಧ ತರ್ಕಕ್ಕೆ ಇಳಿದಿದ್ದರು. ಅಮೆರಿಕದಲ್ಲಿ ಹಣ ವರ್ಗವೇ ಹೊರತು ದಾಟಲಾಗದ ಸಾಮಾಜಿಕ ವರ್ಣ, ಜಾತಿಯಲ್ಲ ಎನ್ನುವುದನ್ನು ಸ್ವಾಮಿಗಳು ತಮ್ಮ ಅನುಕೂಲಕ್ಕಾಗಿ ಹಿಂದಕ್ಕೆ ಸರಿಸಿದ್ದರು. ಅವರ ಲೆಕ್ಕದಲ್ಲಿ ಜಾತಿಯಿಂದ ೩೦ ಕೋಟಿ ಜನಕ್ಕೆ ಊಟ ಸಿಗುತ್ತಿದೆ , ಸಂಸ್ಕೃತ ಎನ್ನುವ ‘ಮಹಾ ಭಾಷೆ’ ಉಳಿದಿದೆ. ಜಾತಿ ಇಲ್ಲದ ಸಮಾಜ ಇರುವ ದೇಶಗಳು ಉಪವಾಸವಿವೆ , ಶ್ರೇಷ್ಟ ಭಾಷೆಯನ್ನು ಉಳಿಸಿಕೊಂಡಿಲ್ಲ.
ಕಲ್ಕತ್ತದಲ್ಲಿ ‘ವೇದಾಂತ ದರ್ಶನದ ವಿವಿಧ ಮುಖಗಳು’ ವಿಷಯದ ಬಗ್ಗೆ ಮಾತನಾಡುವಾಗ ‘…ತಲೆಯೇ ಇಲ್ಲ ತಲೆನೋವು ಎನ್ನುವ ಬಂಗಾಳಿ ಗಾದೆಯಂತಿದೆ ಈಗಿನ ಪರಿಸ್ಥಿತಿ. ನಾಲ್ಕು ವರ್ಣಗಳಲ್ಲಿ ಕೇವಲ ಬ್ರಾಹ್ಮಣ ಮತ್ತು ಶೂದ್ರರನ್ನು ಮಾತ್ರ ನೋಡುತ್ತಿದ್ದೇವೆ. ಕ್ಷತ್ರಿಯ , ವೈಶ್ಯರು ಎಲ್ಲಿದ್ದಾರೆ. ಬ್ರಾಹ್ಮಣರು ಅವರಿಗೆ ಯಜ್ಞೋಪವೀತಗಳನ್ನು ಕೊಟ್ಟು ಹಿಂದೂಗಳಂತೆ ವೇದಗಳನ್ನು ಅಧ್ಯಯನ ಮಾಡಲು ಏಕೆ ಹೇಳಬಾರದು….ಇತರ ವರ್ಣದವರನ್ನು ಸ್ವೀಕರಿಸಿ ಮೇಲೆತ್ತಿ. ಅವರೂ ವೇದಗಳನ್ನು ಓದಲಿ. ಅವರೂ ಜಗತ್ತಿನ ಇತರ ಆರ್ಯರಂತೆ ಉತ್ತಮರಾಗಲಿ,,,’
೧೨/೧೧/೧೮೯೭ ಲಾಹೋರಿನಲ್ಲಿ ಮಾಡಿದ ಭಾಷಣದಲ್ಲಿ ಕೊಟ್ಟ ಆರ್ಯ–ಅನಾರ್ಯರ ವ್ಯಾಖ್ಯೆ ಹೀಗಿದೆ. ‘ ಒಂದು ಹೆಣ್ಣು ಅಥವಾ ಗಂಡು ತಮ್ಮ ಮನಸ್ಸಿಗೆ ಬಂದವರನ್ನು ಮದುವೆಯಾಗಲು ಬಿಟ್ಟರೆ ವೈಯಕ್ತಿಕ ಸುಖ , ಪಶು ಬಯಕೆಯ ತೃಪ್ತಿಗಳೇ ಮದುವೆಯ ಗುರಿಯಾದರೆ ಸಮಾಜಕ್ಕೆ ಕೇಡು ತಪ್ಪಿದ್ದಲ್ಲ. ಅಂತಹ ಮದುವೆಯಿಂದ ಕೆಡುಕರು , ನೀಚರೂ ಆದ ಮಕ್ಕಳು ಹುಟ್ಟುತ್ತಾರೆ. …ಒಬ್ಬನು ಸಮಾಜದಲ್ಲಿ ಇರುವವರೆಗೆ ಆತನಿಂದ ಸಮಾಜಕ್ಕೆ ಕೇಡಾಗಲಿ ಒಳಿತಾಗಲಿ ಸಂಭವಿಸುತ್ತದೆ. ಆದ್ದರಿಂದ ವ್ಯಕ್ತಿ ಯಾರನ್ನು ಮದುವೆಯಾಗಬೇಕು ಎನ್ನುವುದನ್ನು ನಿರ್ಧರಿಸುವ ಹಕ್ಕು ಸಮಾಜಕ್ಕಿದೆ. ಅದಕ್ಕಾಗಿಯೇ ಗಂಡು ಹೆಣ್ಣಿನ ಜಾತಕ ನೋಡುತ್ತಾರೆ. ಇನ್ನೊಂದು ವಿಷಯ ತಿಳಿಸುತ್ತೇನೆ. ಕಾಮ ಮಾತ್ರದಿಂದ ಹುಟ್ಟಿದವನು ಎಂದಿಗೂ ಆರ್ಯನಲ್ಲ ಎನ್ನುವುದು ಮನುವಿನ ವಚನ. ಯಾವ ಶಿಶುವಿನ ಹುಟ್ಟು ಮತ್ತು ಸಾವು ವೈದಿಕ ನಿಯಮಗಳ ಪ್ರಕಾರ ನಡೆಯುತ್ತದೆಯೋ ಅದು ಮಾತ್ರ ಆರ್ಯ. ಈಗ ಎಲ್ಲೆಲ್ಲಿಯೂ ಅನಾರ್ಯ ಶಿಶುಗಳೇ ಹುಟ್ಟುತ್ತಿರುವುದರಿಂದ ಕಲಿಯುಗವೆನ್ನುವ ಕೇಡುಗಾಲ ಪ್ರಾರಂಭವಾಗಿದೆ. (148)
೧೮/೧/೧೯೦೦- ಪಸಡೆನದ ಷೆಕ್ಸ್’ಸ್ಪಿಯರ್ ಕ್ಲಬ್’ನಲ್ಲಿ ಭಾರತದ ಮಹಿಳೆಯರನ್ನು ಕುರಿತಾಗಿ ಮಾಡಿದ ಭಾಷಣದ ಭಾಗ -‘ …ಭಾರತದ ಸಾಮಾಜಿಕ ತಳಹದಿ ಯಾವುದು ? ವರ್ಣ ವ್ಯವಸ್ಥೆ. ನಾನು ವರ್ಣದಲ್ಲಿ ಹುಟ್ಟಿರುವುದು , ವರ್ಣಕ್ಕೆ ಬದುಕಿರುವುದು…ಒಂದು ವರ್ಣದಲ್ಲಿ ಹುಟ್ಟಿದ ಮೇಲೆ ಇಡೀ ಜೀವನವನ್ನು ಅದರ ಕಟ್ಟಳೆಯಲ್ಲಿಯೇ ಕಳೆಯಬೇಕು. ನಿಮ್ಮ ಮಾತಿನಲ್ಲಿ ಹೇಳುವುದಾದರೆ ಪಾಶ್ಚಾತ್ಯರದ್ದು ವೈಯಕ್ತಿಕ ದೃಷ್ಟಿಯಾದರೆ ಭಾರತೀಯರದು ಸಾಮಾಜಿಕ ದೃಷ್ಟಿ. ವ್ಯಕ್ತಿಗಳ ಇಚ್ಛೆಯಂತೆ ಮದುವೆಯಾಗಲು ಸ್ವಾತಂತ್ರ ಕೊಟ್ಟರೆ ಪರಿಣಾಮ ಏನಾಗುವುದೆಂದು ಶಾಸ್ತ್ರ ಹೇಳುವುದು. ನೀವು ಒಬ್ಬಳನ್ನು ಪ್ರೀತಿಸಿದಿರಿ ಎಂದು ಭಾವಿಸಿರಿ. ಆ ಹೆಂಗಸಿನ ತಂದೆ ಹುಚ್ಚನಾಗಿರಬಹುದು. , ಕ್ಷಯ ರೋಗಿಯಾಗಿರಬಹುದು. .. ಒಬ್ಬ ಹೆಣ್ಣು ಪ್ರಿತಿಸುತ್ತಿರುವ ಗಂಡಿನ ತಂದೆ ಭಾರಿ ಕುಡುಕನಾಗಿರಬಹುದು. ಆಗ ಶಾಸ್ತ್ರ ಇಂತಹ ಮದುವೆ ಕಾನೂನಿಗೆ ವಿರೋಧ ಎನ್ನುವುದು. ಅಂಗಹೀನರು , ಗೂನು ಬೆನ್ನಿನವರು , ಪೆದ್ದರು , ಉನ್ಮತ್ತರು ಮದುವೆಯಾಗಬಾರದೆಂದು ಶಾಸ್ತ್ರ ಹೇಳುವುದು ……ಮದುವೆಯ ವಿಷಯದಲ್ಲಿ ನನಗಾಗಲಿ ನನ್ನ ಸಹೋದರಿಗಾಗಲಿ ಅಧಿಕಾರವಿಲ್ಲ. ವರ್ಣ ಇದನ್ನೆಲ್ಲ ನಿರ್ಣಯಿಸುವುದು . ಕೆಲವು ಸಲ ಬಾಲ್ಯದಲ್ಲಿಯೇ ನಮಗೆ ಮದುವೆಯಾಗಿರುವುದು . ಅದಕ್ಕೆ ಕಾರಣವೇನು ? ಹೇಗಿದ್ದರೂ ಹುಡುಗ , ಹುಡುಗಿಯರ ಒಪ್ಪಿಗೆಯಿಲ್ಲದೆ ಮದುಮೆಯಾಗುವುದರಿಂದ ಪ್ರೀತಿ ಹುಟ್ಟುವುದಕ್ಕೆ ಮೊದಲೇ –ಬಾಲ್ಯದಲ್ಲಿಯೇ-ಅವರು ಮದುವೆಯಾಗುವುದು ಒಳ್ಳೆಯದೆನ್ನುತ್ತದೆ ಶಾಸ್ತ್ರ. ಅವರನ್ನು ಬೇರೆ, ಬೇರೆ ಬೆಳೆಯುವವರೆಗೂ ಅವಕಾಶ ಕೊಟ್ಟರೆ ಹುಡುಗಿ ಮತ್ತೊಬ್ಬ ಹುಡುಗನನ್ನು ಪ್ರೀತಿಸಬಹುದು . ಇದರಿಂದ ಏನಾದರೂ ಅನಿಷ್ಟ ಉಂಟಾಗಬಹುದು. ಅದಕ್ಕೆ ವರ್ಣ ಇಲ್ಲೇ ನಿಲ್ಲಿ ಎನ್ನುವುದು (149)
೧೮೯೮ ರ ರಾಮಕೃಷ್ಣ ಪರಮಹಂಸರ ಜಯಂತಿಯಂದು ನೂರಾರು ಜನಿವಾರಗಳನ್ನು ತರಿಸಿ ಉತ್ಸವಕ್ಕೆ ಬಂದವರಿಗೆ ತೊಡಿಸಿ ದ್ವಿಜರಿಗೆ ಮಾತ್ರ ಉಪನಯನ ಸಂಸ್ಕಾರಕ್ಕೆ ಅಧಿಕಾರ. ಇದಕ್ಕೆ ವೇದವೇ ಪ್ರಮಾಣ ಎಂದರು. ಎಲ್ಲರೂ ಸ್ನಾನ ಮಾಡಿ ಜನಿವಾರ ಹಾಕಿಕೊಂಡಿದ್ದನ್ನು ಕಂಡು ಸ್ವಾಮಿಗಳ ಮುಖ ಅರಳಿತು. ಜನಿವಾರ ಹಾಕಿಕೊಂಡಿದ್ದ ಒಬ್ಬ ಗೃಹಸ್ಥನಿಗೆ ಸ್ವಾಮಿಗಳು ‘ನೀವು ದ್ವಿಜರಾಗಿದ್ದರೂ ಬಹಳ ಕಾಲದಿಂದ ವ್ರಾತ್ಯರಾಗಿದ್ದಿರಿ. ಇಂದಿನಿಂದ ಮತ್ತೆ ದ್ವಿಜರಾದಿರಿ , ಇಂದಿನಿಂದ ದಿನಕ್ಕೆ ನೂರು ಬಾರಿ ಗಾಯತ್ರಿ ಜಪ ಮಾಡಿರಿ’ ಎನ್ನುವ ಉಪದೇಶ ಮಾಡಿರುವುದು ಶಿಷ್ಯ ಶರತ್ ಚಂದ್ರ ಚಕ್ರವರ್ತಿ ನೆನಪುಗಳಲ್ಲಿದೆ. (150)
೨/೨/೧೯೦೦ ಪಸಡೆನ ಷೇಕ್ಸ್’ಸ್ಪಿಯರ್ ಕ್ಲಬ್’ನಲ್ಲಿ ಮಾಡಿದ ಬೌದ್ಧ ಭಾರತ ಭಾಷಣದಲ್ಲಿ ಸ್ವಾಮಿಗಳು ಜಾತಿಯ ಬಗ್ಗೆ ಮಂಡಿಸಿದ ವಿವರಣೆ ಹೀಗಿದೆ- ‘ಹಿಂದೂವಿನ ದೃಷ್ಟಿಯಲ್ಲಿ ಜಾತಿಯೆಂದರೆ ವಂಶ ಪಾರಂಪರ್ಯವಾಗಿ ಬಂದ ಒಂದು ವೃತ್ತಿ. ಸ್ಪರ್ಧೆ , ಹೋರಾಟ ವಂಶಪಾರಂಪರ್ಯ ಕಸುಬುಗಳಿಗೆ ಮಾರಕವಾಗಿವೆ. ಇದನ್ನು ತಪ್ಪಿಸುವುದೇ ಜಾತಿಯ ಉದ್ದೇಶ ….. ಅದರೆ ಅದು ವ್ಯಕ್ತಿ ವೈಶಿಷ್ಟ್ಯತೆ ಅಥವಾ ವ್ಯಕ್ತಿ ಸ್ವಾತಂತ್ರಕ್ಕೆ ಅಡ್ಡಿಯಾಗಿದೆ….. ಜಾತಿ ಎನ್ನುವುದರ ಅರ್ಥ ಎಲ್ಲಿಯವರೆಗೆ ರಕ್ತ ಪಾವಿತ್ರ್ಯವನ್ನು ಕಾಪಾಡಲು ಇರುತ್ತದೆಯೋ ಅಲ್ಲಿಯವರೆಗೆ ಈ ಜಾತಿ ಪ್ರತಿಷ್ಠೆ ಅಥವಾ ಕುಲ ಪ್ರತಿಷ್ಠೆಯಲ್ಲಿ ಏನೋ ಒಂದು ಅರ್ಥವಿದೆ. ಅನುವಂಶಿಕತೆ ಎನ್ನುವುದಂತೂ ಇದ್ದೇ ಇದೆ. ಇದನ್ನು ಸ್ವಲ್ಪ ಅರ್ಥ ಮಾಡಿಕೊಳ್ಳಲು ಯತ್ನಿಸಿ. ನೀವೇಕೆ ನೀಗ್ರೊ ಮತ್ತು ಅಮೆರಿಕನ್ ಇಂಡಿಯನ್ನರೊಂದಿಗೆ ರಕ್ತ ಸಂಪರ್ಕ ಮಾಡುವುದಿಲ್ಲ. ? ಪ್ರಕೃತಿಯೇ ನಿಮ್ಮನ್ನು ಹಾಗೆ ಮಾಡಲು ಬಿಡುವುದಿಲ್ಲ. ಅದರ ಅಡ್ಡಿಯಿಂದಲೆ ನೀವು ಅವರೊಂದಿಗೆ ರಕ್ತ ಸಂಬಂಧ ಬೆಳೆಸಲಾರಿರಿ. ಸುಪ್ತ ಪ್ರಜ್ಞೆಯಲ್ಲಿ ಯಾವುದೋ ಅಗೋಚರ ಶಕ್ತಿಗಳು ಕ್ರಿಯಾಶೀಲವಾಗಿದ್ದು ಈ ರೀತಿ ಜಾತಿ ಸಂರಕ್ಷಣೆಯಲ್ಲಿ ತೊಡಗಿರುತ್ತವೆ. ಇದೇ ಆರ್ಯರ ಜಾತಿ ಪದ್ದತಿ. …. ನೀವು ನೀಗ್ರೊ ಮತ್ತು ಅಮೆರಿಕನ್ ಇಂಡಿಯನ್ನರೊಂದಿಗೆ ಬೆರೆತರೆ ಖಂಡಿತವಾಗಿ ನಿಮ್ಮ ನಾಗರಿಕತೆ , ಸಭ್ಯತೆ ಕುಸಿಯುತ್ತದೆ. ಆದರೆ ನೂರಾರು , ಸಾವಿರಾರು ವರ್ಷಗಳ ನಂತರ ಈ ಕಲಬೆರಕೆಯಿಂದ ಅದ್ಭುತ ಜನಾಂಗ ಉದಿಸುತ್ತದೆ. .. ಆರ್ಯ ಜನಾಂಗದವರು ತಮ್ಮ ರಕ್ತವನ್ನು ದಾನ ಮಾಡುವವರೆಗೂ ಇತರ ಯಾವುದೇ ಜನಾಂಗ ಸಭ್ಯ ಜನಾಂಗವಾಗಿರಲು ಸಾದ್ಯವಿಲ್ಲ. ..ಒಂದು ಜನಾಂಗ ಆರ್ಯನಿಂದ ರಕ್ತ ಪಡೆಯಬೇಕು . ಆಗಲೆ ಅದು ಸಭ್ಯ ಜನಾಂಗವಾಗುವುದು. … ಹಿಂದೂಗಳಿಗೆ ವರ್ಣ ವಿಭಜನೆ ಮತ್ತು ಜಾತಿಯ ಬಗ್ಗೆ ವಿಶೇಷವಾದ ಒಲವು. ನನ್ನಲ್ಲೂ ಸಹ ಆ ಜನಾಂಗದ ಆ ಕುರುಡು ನಂಬಿಕೆಯ ಸೋಂಕು ಅಥವಾ ಕಲೆ ಇರಬಹುದೇನೋ ನನಗೆ ಗೊತ್ತಿಲ್ಲ. (151)
ಪ್ರಾಚ್ಯ ಮತ್ತು ಪಾಶ್ಚಾತ್ಯ ಲೇಖನದಲ್ಲಿ ಸ್ವಾಮಿಗಳ ನಿಲುವು ಹೀಗಿದೆ :‘ಉದ್ದೇಶ ಒಂದೇ ಆಗಿದ್ದರೂ ಸರಿಯಾದ ಯೋಜನೆಯ ಕೊರತೆಯಿಂದ ಬೌದ್ಧರು ಭಾರತವನ್ನು ಪಾತಾಳಕ್ಕೆ ಒಯ್ದರು. ..ವೈದಿಕ ದಾರಿಯೇ ಉಚಿತವಾದುದು. ಜಾತಿ ಧರ್ಮ , ಸ್ವಧರ್ಮವೇ ವೈದಿಕ ಧರ್ಮ.. ಇದೇ ಎಲ್ಲ ದೇಶಗಳಲ್ಲಿಯು ಸಾಮಾಜಿಕ ಉನ್ನತಿಯ ಉಪಾಯ. ಅದೇ ಮುಕ್ತಿ , ಅದೇ ಮೆಟ್ಟಿಲು. ಈ ಜಾತಿ ಧರ್ಮ , ಸ್ವಧರ್ಮ ನಾಶವಾದರೆ ನಮ್ಮ ದೇಶ ಪತನವಾಗುವುದು. …ನಾನು ಗುಣಗತ ಜಾತಿಯ ವಿಚಾರವನ್ನು ಹೇಳುತ್ತಿಲ್ಲ. ವಂಶಗತ , ಜನ್ಮಗತ ಜಾತಿಯನ್ನು ಕುರಿತು ಹೇಳುತ್ತಿರುವುದು. ಗುಣಗತ ಜಾತಿಯು ಪ್ರಾಚೀನವೆನ್ನುವುದು ನನಗೆ ಗೊತ್ತಿದೆ. ನಾಲ್ಕೈದು ತಲೆಮಾರುಗಳ ನಂತರ ಇದು ವಂಶಗತವಾಗುವುದು. … ಈಗ ಜಾತಿ ಧರ್ಮ ಹಾಳಾಗಿದೆ. ನೀವು ಮತ್ತೊಮ್ಮೆ ನಿಮ್ಮ ಪುರಾಣ , ಶಾಸ್ತ್ರಗಳನ್ನು ಓದಿರಿ. ಅಲ್ಲಿರುವ ಜಾತಿ ಧರ್ಮ ತರಲು ಯತ್ನಿಸಿ. ಅದರಿಂದ ದೇಶಕ್ಕೆ ಕಲ್ಯಾಣವಾಗುವುದು.
‘ಬ್ರಾಹ್ಮಣ ಜಾತಿ ಮತ್ತು ಬ್ರಾಹ್ಮಣ ಗುಣಗಳು ಎರಡು ಭಿನ್ನ. ಭಾರತದಲ್ಲಿ ಜಾತಿಯಿಂದ ಬ್ರಾಹ್ಮಣರನ್ನು ಗುರುತಿಸುವರು. ಪಶ್ಚಿಮದಲ್ಲಿ ಗುಣಗಳಿಂದ ಬ್ರಾಹ್ಮಣರನ್ನು ಗುರುತಿಸಬೇಕು. ಸತ್ತ್ವ , ರಜ , ತಮ ಎನ್ನುವ ಮೂರು ಗುಣಗಳಿರುವಂತೆಯೇ ಬ್ರಾಹ್ಮಣ, ಕ್ಷತ್ರಿಯ, ಶೂದ್ರರೆಂದು ತೋರಿಸಲು ಗುಣಗಳಿವೆ. ಬ್ರಾಹ್ಮಣ. ಕ್ಷತ್ರಿಯರಿಗೆ ಯೋಗ್ಯವಾದ ಗುಣಗಳು ದೇಶದಿಂದ ಮರೆಯಾಗುತ್ತಿವೆ. ಆದರೆ ಪಶ್ಚಿಮದವರು ಕ್ಷಾತ್ರ ಗುಣಗಳನ್ನು ಪಡೆದಿದ್ದಾರೆ. ಅವರ ನಂತರ ಮೆಟ್ಟಿಲೇ ಬ್ರಾಹ್ಮಣ್ಯ’ ಇದು ಸ್ವಾಮಿಗಳು ತಮ್ಮ ಸಹಪಾಠಿ , ಬಾಲ್ಯದ ಗೆಳೆಯ ಪ್ರಿಯನಾಥ ಸಿನ್ಹನ ಮುಂದಿರಿಸಿದ ‘ವರ್ಣ ಗುರುತಿಸಿಕೆ’ಯ ವಿಧಾನ. (152)
ಜಾಫ್ನಾ ಬಿನ್ನವತ್ತಳೆಗೆ ಉತ್ತರ : ನಮ್ಮ ಜಾತಿ ಪದ್ದತಿ ಮತ್ತು ಇನ್ನೂ ಹಲವು ಆಚಾರಗಳು ಧರ್ಮದೊಂದಿಗೆ ಬೆರೆತು ಹೋಗಿರುವಂತೆ ಕಂಡರೂ ನಿಜವಾಗಿಯೂ ಹಾಗಿಲ್ಲ. ನಮ್ಮ ಜನಾಂಗದ ರಕ್ಷಣೆಗೆ ಇವು ಅಗತ್ಯವಷ್ಟೇ. ರಾಷ್ಟ್ರ ರಕ್ಷಣೆಗೆ ಅವುಗಳ ಅವಶ್ಯಕತೆ ಯಾವಾಗ ಇಲ್ಲವಾಗುವುದೋ ಆಗ ಅವು ಮಾಯವಾಗುವುವು. ನನಗೆ ವಯಸ್ಸಾದಂತೆಲ್ಲ ಪುರಾತನಕಾಲದಿಂದ ಬಂದ ಈ ಸಂಸ್ಥೆಗಳನ್ನು ಗೌರವದಿಂದ ಕಾಣುತ್ತೇನೆ. ಇವುಗಳಲ್ಲಿ ಹೆಚ್ಚಿನವು ಕೆಲಸಕ್ಕೆ ಬಾರದವು ಎಂದು ಯೋಚಿಸುತ್ತಿದ್ದ ಕಾಲವೊಂದಿತ್ತು. ಆದರೆ ವಯಸ್ಸಾದಂತೆ ಯಾವುದನ್ನೂ ನಾನು ತುಚ್ಛವಾಗಿ ಕಾಣಲಾರೆ. ಪ್ರತಿಯೊಂದರ ಹಿಂದೆಯೂ ಶತಮಾನಗಳ ಪ್ರಯೋಗವಿದೆ. ನಿನ್ನೆ ಹುಟ್ಟಿ ನಾಳೆ ತೀರಿಕೊಳ್ಳುವ ಮಗು ನನ್ನ ಬಳಿ ಬಂದು ನನ್ನ ಯೋಜನೆಗಳನ್ನು ಬದಲಾಯಿಸು ಎನ್ನುವುದು , ನಾನು ಅದರ ಮಾತಿನಂತೆ ಬದಲಾಯಿಸಿದರೆ ನನ್ನಂತಹ ಮೂರ್ಖ ಯಾರೂ ಇಲ್ಲ. (153)
ಭಾರತೀಯ ಜೀವನದಲ್ಲಿ ವೇದಾಂತದ ಅನುಷ್ಠಾನ- ಮದ್ರಾಸ್ ಭಾಷಣ : ಬೆಸ್ತ ಆತ್ಮನೆಂದು ತಿಳಿದರೆ ಅವನು ಒಳ್ಳೆಯ ಬೆಸ್ತನಾಗುವನು. ವಿದ್ಯಾರ್ಥಿ ತಾನು ಆತ್ಮನೆಂದು ತಿಳಿದರೆ ಒಳ್ಳೆಯ ವಿದ್ಯಾರ್ಥಿಯಾಗುವನು. ವಕೀಲ ತಾನು ಆತ್ಮನೆಂದು ತಿಳಿದರೆ ಒಳ್ಳೆಯ ವಕೀಲನಾಗುವನು. ಇದರ ಪರಿಣಾಮವಾಗಿ ಜಾತಿ ಯಾವಾಗಲೂ ಉಳಿಯುವುದು. ವಿವಿಧ ಜಾತಿಗಳಾಗಿ ಒಡೆಯುವುದೇ ಸಮಾಜದ ಸ್ವಭಾವ. ಆದರೆ ವಿಶೇಷ ಹಕ್ಕುಗಳು ಮಾತ್ರ ಹೋಗುವುವು. ಜಾತಿ ಪ್ರಕೃತಿ ನಿರ್ಮಿತ. (154)
- ಸ್ವಾಮಿಗಳಿಗೆ ಒಂದು ಸಲ ದೇಶ ರಕ್ಷಣೆಗೆ ಜಾತಿ ಆವಶ್ಯಕ ಎನಿಸಿದರೆ ಮತ್ತೊಮ್ಮೆ ಗುಡಿಸಲಿನಲ್ಲಿ , ಕೊಚ್ಚೆಯಲ್ಲಿ ಹಂದಿಗಳಿಗಿಂತ ಕೀಳಾಗಿ ಬದುಕಿದ್ದರೇನಂತೆ , ಶೂದ್ರರ ಸಾಮಾಜಿಕ ಉನ್ನತಿ ಜನಿವಾರ ಹಾಕುವುದರಲ್ಲಿ , ಬ್ರಾಹ್ಮಣರ ವೇದಗಳನ್ನು ಓದುವುದರಲ್ಲಿದೆ ಎಂದು ಭಾಸವಾಗುತ್ತದೆ . ಶೂದ್ರರು ಆರ್ಯರಾಗಲು ಇರುವ ಒಂದೇ ಒಂದು ದಾರಿಯಿದು ! ನಾನು ಬ್ರಹ್ಮನ್ , ಆತ್ಮನ್ ಎನ್ನುತ್ತ ಜನಕನಿಂದ ಪ್ರತಿ ಪ್ರಶ್ನೆಗೆ ಉತ್ತರ ನೀಡಲು ಸಾವಿರಾರು ಹಸುಗಳನ್ನು ಪಡೆಯುತ್ತಿದ್ದ ಯಾಜ್ಞವಲ್ಕ್ಯನೇ ಸ್ವಾಮಿಗಳು ಪ್ರತಿಪಾದಿಸುತ್ತಿರುವ ಮಹಾ ಆರ್ಯ. ಸ್ವಾಮಿಗಳ ವ್ಯಾಖ್ಯೆಯಂತೆ ಭಾರತದ ಗಂಡು-ಹೆಣ್ಣುಗಳು ಮನು ಹೇಳಿದಂತೆ ವೈದಿಕ ಮಾರ್ಗದಲ್ಲಿ ಒಂದಾಗುತ್ತಿಲ್ಲ , ಆದ್ದರಿಂದ ಕಲಿಗಾಲ ಬಂದು ಭಾರತ ದುಸ್ಥಿತಿಗೆ ಬಂದಿದೆ. ಮುಂದುವರೆದ ಪಾಶ್ಚಾತ್ಯರು ಮನುವಿನ ಧರ್ಮಸೂತ್ರವನ್ನು ಪರಿಗಣಿಸುವುದಿಲ್ಲ. ಹಾಗಾಗಿ ಅವರೂ ಅನಾರ್ಯರೇ. ಆದರೆ ಅವರದು ಮುಂದುವರೆದ ಸಮಾಜ – ಅವರ ಹೆಣ್ಣುಗಳು ಲಕ್ಷ್ಮೀ , ಸರಸ್ವತಿ.
ಸ್ವಾಮಿಗಳ ಅಭಿಪ್ರಾಯದಲ್ಲಿ ಮನುಷ್ಯ ಜೈವಿಕವಾಗಿ ಒಂದೇ ಅಲ್ಲ , ಆತ ವರ್ಣಗಳ ಆಧಾರದಲ್ಲಿ ಜೈವಿಕವಾಗಿ ವಿಭಜಿಸಲ್ಪಟ್ಟಿದ್ದಾನೆ. ವರ್ಣ ನಿಷ್ಠೆ ತಳಿಯ ಶ್ರೇಷ್ಟತೆ ಮತ್ತು ಸಂತಾನ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಆರೋಗ್ಯವಂತ ಬ್ರಾಹ್ಮಣ ಮತ್ತು ಶೂದ್ರರ ನಡುವಿನ ಕೂಟ ಉತ್ಪಾತಕ್ಕೆ ಕಾರಣ. ಕ್ಷಯ , ಕುಡಿತದ ದುರ್ವಸ್ಯನ ವಂಶಪಾರಂಪರ್ಯ. ಆದ್ದರಿಂದ ಗಂಡು-ಹೆಣ್ಣುಗಳ ನಡುವೆ ಕಾಮದ ಭಾವನೆ ಬರುವ ಮೊದಲೇ ಬಾಲ್ಯದಲ್ಲಿಯೇ ಮದುವೆ ಮಾಡಿದರೆ ವರ್ಣ ಶುದ್ಧತೆ ಉಳಿಯುತ್ತದೆ. ಭಾರತದ ಉಳಿವಿಗೆ ಅದು ಅತ್ಯಾವಶ್ಯಕ. ಸ್ವಾಮಿಗಳು ರೋಗ ಪೀಡಿತರ ಮದುವೆಗೆ ಹಾಕಿದ ನಿರ್ಬಂಧಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅದನ್ನು ವರ್ಣ ನಿಷ್ಠತೆಯೊಂದಿಗೆ ತಳುಕು ಹಾಕಿದ್ದಾರೆ. ಸ್ವಾಮಿಗಳು ವೃತ್ತಿ ಜಾತಿಗೆ ಕಾರಣ ಎನ್ನುತ್ತಾರಾದರೂ ಅದೇ ನಿಲುವನ್ನು ಉಳಿಸಿಕೊಳ್ಳದೆ ಅದನ್ನು ರಕ್ತ ಪಾವಿತ್ರ್ಯದೊಂದಿಗೆ ಗಂಟು ಹಾಕುತ್ತಾರೆ. ಈ ಪಾವಿತ್ರ್ಯ ಮತ್ತು ಬಿಳಿ ಅಮೆರಿಕನ್ನರ ಶ್ರೇಷ್ಟತೆಯನ್ನು ಕಾಪಾಡಲು ಅವರು ಕರಿ ನೀಗ್ರೋ ಅಥವಾ ಕೆಂಪು ಸ್ಥಳೀಯ ಜನಾಂಗದೊಂದಿಗೆ ಬೆರೆಯದಂತೆ ಅಗೋಚರ ನೈಸರ್ಗಿಕ ಬಲಗಳು ಅಸ್ತಿತ್ವದಲ್ಲಿರುವುದನ್ನು ಸ್ವಾಮಿಗಳು ಊಹಿಸಿದ್ದಾರೆ.
ಗುಣಗತ ಜಾತಿ ಕೆಲವು ತಲೆಮಾರುಗಳ ನಂತರ ಜನ್ಮ ಜಾತಿಯಾಗುವುದು. ಇದೇ ಸಾಮಾಜಿಕ ಉನ್ನತಿಗೆ ದಾರಿ ಎನ್ನುವ ಸ್ವಾಮಿಗಳು ಇನ್ನೊಂದು ಕಡೆ ವೃತ್ತಿಯಿಂದ ಜಾತಿ ಎನ್ನುತ್ತಾರೆ. ಅಲ್ಲಿ ಅವರು ಗುಣಗಳ ಪಾತ್ರವನ್ನೇನೂ ಹೇಳುತ್ತಿಲ್ಲ. ಬ್ರಾಹ್ಮಣ ಜಾತಿ ಮತ್ತು ಗುಣ ಎರಡು ಬೇರೆ ಎನ್ನುತ್ತಾರೆ ಸ್ವಾಮಿಗಳು. ಆದರೆ ಎಲ್ಲ ಧರ್ಮಸೂತ್ರಗಳು ಜಾತಿ ಬ್ರಾಹ್ಮಣರಲ್ಲಿ ಸದ್ಗುಣಗಳನ್ನು ಕಾಣುತ್ತವೆ. ಜಾತಿ ಬ್ರಾಹ್ಮಣನಿಗೆ ಬ್ರಾಹ್ಮಣ್ಯಕ್ಕೆ ತಕ್ಕದಾದ ಗುಣಗಳು ಇಲ್ಲದಿದ್ದಲ್ಲಿ ಅವನನ್ನು ಆ ಜಾತಿಯಿಂದ ಕೆಳಗೆ ಇಳಿಸುವ ವ್ಯವಸ್ಥೆ ಯಾವುದು? ಅದು ಯಾರ ಹಿಡಿತದಲ್ಲಿರುತ್ತದೆ ? ಎನ್ನುವಂತಹ ಉರಿಯುವ ಪ್ರಶ್ನೆಗಳಿಗೆ ಉತ್ತರಗಳಿಲ್ಲ.
ಕಿಡಿ (ಸುಂದರವೇಲು ಮೊದಲಿಯಾರ್) ಜಾತಿಯ ವಿಚಾರವಾಗಿ ಸ್ವಾಮಿಗಳನ್ನು ಪ್ರಶ್ನಿಸಿದ್ದನು. ಇದಕ್ಕೆ ೩/೩/೧೮೯೪ ರ ಪತ್ರದಲ್ಲಿ ಉತ್ತರಿಸುತ್ತ ‘ಜಾತಿಯು ಹೋಗಬೇಕೆ ಅಥವಾ ಇರಬೇಕೆ ಎನ್ನುವ ಪ್ರಶ್ನೆಗೂ ನನಗೂ ಸಂಬಂಧವಿಲ್ಲ. ಅತಿ ದೀನನೂ , ದರಿದ್ರನೂ ಆದವನ ಬಾಗಿಲಿಗೆ ಜಗತ್ತಿನ ಮಹಾವ್ಯಕ್ತಿಗಳ ಚಿಂತನೆಗಳನ್ನು ಒದಗಿಸಬೇಕೆಂಬುದೇ ನನ್ನ ಬಯಕೆ. ಆನಂತರ ಜಾತಿ ಬೇಕೆ ಬೇಡವೇ ಎನ್ನುವುದನ್ನು ಅವರೇ ನಿರ್ಧರಿಸಲಿ. ಹೆಂಗಸರು ಸಂಪೂರ್ಣ ಸ್ವತಂತ್ರರಾಗಿರಬೇಕೆ ಬೇಡವೇ ಎನ್ನುವುದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ಜೀವನ ಅದರ ಬೆಳವಣಿಗೆ ಮತ್ತು ಅರೋಗ್ಯದಿಂದ ಇರುವುದಕ್ಕೆ ಸ್ವತಂತ್ರ ಆಲೋಚನೆ ಮತ್ತು ಕಾರ್ಯ ಅತ್ಯಾವಶ್ಯಕ’…. ಧರ್ಮದ ಕೆಲಸ ಆತ್ಮಕ್ಕೆ ಸಂಬಂಧಿಸಿದುದು. ಸಾಮಾಜಿಕ ನೀತಿಗಳಲ್ಲಿ ಕೈ ಹಾಕಲು ಇದಕ್ಕೆ ಹಕ್ಕಿಲ್ಲ ಎನ್ನುವುದನ್ನು ನೀವು ಮರೆಯದಿರಿ. …. ಪ್ರತಿಯೊಂದು ಸಾಮಾಜಿಕ ವ್ಯವಹಾರದಲ್ಲಿ ಪುರೋಹಿತನು ಕೈ ಹಾಕಲು ಅವನಿಗೇನು ಹಕ್ಕಿದೆ. ಇದರಿಂದ ಕೋಟ್ಯನುಕೋಟಿ ಜನ ನರಳುವಂತಾಗಿದೆ…. ..ಬ್ರಾಹ್ಮಣರು ಎಂದು ಏನನ್ನು ಬರೆದರೂ ಅದಕ್ಕೆ ಅವರಿಗಲ್ಲದೆ ಬೇರೆಯವರಿಗೆ ಅರ್ಹತೆಯಿಲ್ಲ. ಗೀತೆಯಲ್ಲಿ ಮುಕ್ತಿಹೊಂದಲು ಎಲ್ಲ ಗಂಡಸು ,ಹೆಂಗಸರಿಗೆ ಅಧಿಕಾರವಿದೆ ಎಂದು ಕೃಷ್ಣ ಸಾರುತ್ತಾನೆ. ಆದರೆ ವ್ಯಾಸನಾದರೋ ಶೂದ್ರರನ್ನು ಮೋಸ ಮಾಡಲು ವೇದಕ್ಕೆ ಅಪಾರ್ಥವನ್ನು ಕಲ್ಪಿಸುತ್ತಾನೆ…’ ಎಂದಿದ್ದಾರೆ.
ಪುರೋಹಿತರ ಮೇಲೆ ಏರಿಹೋಗುತ್ತಿದ್ದ ಸ್ವಾಮಿಗಳು ೨೮/೧/೧೯೦೦ ರಂದು ಕ್ಯಾಲಿಫೋರ್ನಿಯಾದಲ್ಲಿ ನೀಡಿದ ‘ವಿಶ್ವಧರ್ಮ –ಸಾಕ್ಷಾತ್ಕಾರಕ್ಕೆ ಮಾರ್ಗ ‘ ಭಾಷಣದಲ್ಲಿ ‘ಪುರೋಹಿತರು ಜನರು ಬಯಸಿದ್ದನ್ನು ಕೊಡುತ್ತಾರೆ. ಅವರಿಗೆ ಸ್ವಂತಿಕೆ ಇಲ್ಲ. ಜನ ಶ್ರೇಷ್ಟವಾದುದನ್ನು ಬಯಸಿದರೆ ಅವರಿಗೆ ಅದನ್ನೇ ಕೊಡುವ ಅನಿವಾರ್ಯತೆ ಉಂಟಾಗುತ್ತದೆ. ಜನರ ಬಯಕೆಗೆ ಮಣಿಯದಿದ್ದರೆ ಅವರು ಉಪವಾಸ ಬೀಳಬೇಕಾಗುತ್ತದೆ . ಜನರು ಮುಂದುವರೆದರೆ ಅವರೂ ಮುಂದುವರೆಯಬೇಕು’ ಎಂದು ಪ್ರತಿಪಾದಿಸುತ್ತ ‘ ಪುರೋಹಿತ ವರ್ಗವನ್ನು ದೂರುವುದಕ್ಕೆ ಮುಂಚೆ ನಮ್ಮನ್ನು ನಾವು ದೂರಿಕೊಳ್ಳಬೇಕು. ನೀವು ಯಾವುದಕ್ಕೆ ಯೋಗ್ಯರೋ ಅದು ನಿಮಗೆ ದಕ್ಕುತ್ತದೆ ‘ ಎನ್ನುವ ಸಿದ್ಧಾಂತ ಮಂಡಿಸುತ್ತ ಯಾವುದೇ ಸ್ಥಿತಿಯಿರಲಿ ಪುರೋಹಿತರು ಆವಶ್ಯಕ ಎನ್ನುವ ನಿಲುವು ತಳೆದರು.
ನನ್ನ ಅಭಿಯಾನ –ಮದ್ರಾಸ್ ವಿಕ್ಟೊರಿಯಾ ಹಾಲ್ ಭಾಷಣ-‘ ಸದ್ಯಕ್ಕೆ ಧರ್ಮದ ತಳಹದಿಯ ಮೇಲೆ ಸಂಘ ನಿಲ್ಲಲಿ . ಈಗಲೇ ಯಾರೂ ಉಗ್ರ ಸಮಾಜ ಸುಧಾರಣೆಯನ್ನು ತರಬೇಡಿ. ಶಂಕರ , ರಾಮಾಜುಜ , ಚೈತನ್ಯರೇ ಮುಂತಾದ ನಮ್ಮ ಪ್ರಾಚೀನ ಆಚಾರ್ಯರು ವಿಧಿಸಿದಂತೆ ಮುಕ್ತಿ ಇದೆ ಎನ್ನುವ ಸರ್ವ ಸಮತ್ವದ ಆಧಾರಧ ಮೇಲೆ ಸಾಮಾಜಿಕ ಪುನರುಜ್ಜೀವನ ಕೈಗೊಳ್ಳಿ. (೧೯/೧೧/೧೮೯೪- ಅಳಸಿಂಗ ಪೆರುಮಾಳ್). ಭಾರತದಲ್ಲಿ ಸುಧಾರಕರ ಬರಗಾಲ ಎಂದಾದರೂ ಇದ್ದಿತೇ ? ಭಾರತದ ಇತಿಹಾಸವನ್ನು ಓದಿರುವಿರಾ? ರಾಮಾನುಜ ಯಾರು ? ಶಂಕರ ಯಾರು ? ನಾನಕ್ ಯಾರು ? ಚೈತನ್ಯ ಯಾರು ? ಕಬೀರ ಯಾರು ? ದಾದು ಯಾರು ? …(155)
ದಿನಾಂಕವಿಲ್ಲದ ಫೆಬ್ರವರಿ, ೧೮೯೫ ತಿಂಗಳಿಗೆ ಸೇರಿರಬಹುದಾದ ಅಳಸಿಂಗ ಪೆರುಮಾಳ್'ಗೆ ಬರೆದ ಇನ್ನೊಂದು ಪತ್ರದಲ್ಲಿ ‘…….ಮೊದಲು ಅಧ್ಯಾತ್ಮಿಕ ಸುಧಾರಣೆಯಲ್ಲದೆ ಬೇರೆ ಯಾವ ಸುಧಾರಣೆಯೂ ಆಗದು. ನಾನು ಸಮಾಜ ಸುಧಾರಣೆಯನ್ನು ಬಯಸುತ್ತೇನೆ ಎಂದು ಹೇಳಿದವರು ಯಾರು ? ನಾನಂತೂ ಅಲ್ಲ. ದೇವರ ವಿಷಯವಾಗಿ ಬೋಧಿಸಿ , ಸಾಮಾಜಿಕ ಕುಂದು ಕೊರತೆಯ ವಿಚಾರವಾಗಲಿ ಅಥವಾ ಮೂಢಾಚಾರದ ವಿಚಾರವಾಗಿ ಅವುಗಳ ಪರ ಅಥವಾ ವಿರುದ್ಧವಾಗಿ ಏನನ್ನೂ ಹೇಳಬೇಡಿ. …..’ ಎನ್ನುವ ಸೂಚನೆ ನೀಡಿದ್ದಾರೆ.
ಭಾರತದಲ್ಲಿ ಸಂಚರಿಸುತ್ತಿದ್ದಾಗ ಎಲ್ಲಿಯೂ ಋಷಿಗಳ ನ್ಯಾಯಸೂತ್ರಗಳು ಬಳಕೆಯಲ್ಲಿರುವುದನ್ನು ನಾನು ಕಾಣಲಿಲ್ಲ. ಮನು , ಯಾಜ್ಞವಲ್ಕ್ಯರ ಧರ್ಮ ಶಾಸ್ತ್ರಗಳನ್ನು ಕಾಲ ಪರಿಸ್ಥಿತಿಗೆ ತಕ್ಕಂತೆ ಬದಲಿಸಿ ಜಾರಿಗೆ ತರಬೇಕು. ಮತ್ತೆ ಹಿಂದಿನಂತೆ ಭಾರತದ ಜನರನ್ನು ಬ್ರಾಹ್ಮಣ , ಕ್ಷತ್ರಿಯ , ವೈಶ್ಯ , ಶೂದ್ರ ಎನ್ನುವ ನಾಲ್ಕು ಪಂಗಡಗಳಾಗಿ ವಿಂಗಡಿಸಬೇಕು. ಈಗಿರುವ ಬ್ರಾಹ್ಮಣ ಪಂಗಡಗಳ ಬದಲು ಅವರು ಒಂದೇ ಆಗಬೇಕು. ಅದರಂತೆ ವೇದಗಳ ಕಾಲದಲ್ಲಿದ್ದಂತೆ ಇತರ ಮೂರು ವರ್ಣಗಳು ಮೈದಳೆಯಬೇಕು….. ಭಾರತದಲ್ಲಿ ಹಿಂದೆ ಶ್ರುತಿ , ಸ್ಮೃತಿಗಳಲ್ಲಿರುವ ಆಚರಣೆ , ಪದ್ದತಿಗಳು ಆಚರಣೆಯಲ್ಲಿದ್ದವು. ನಂತರದ ಕಾಲದಲ್ಲಿ ಸ್ಥಳೀಯ ಆಚಾರಗಳು ಮೆಲುಗೈ ಸಾಧಿಸಿ ಭಾರತ ಪತನಗೊಂಡಿತು. ನೀನು ಸಾಕಷ್ಟು ಹಣ ಖರ್ಚು ಮಾಡಿದರೆ ಪುರೋಹಿತ ವರ್ಗದವರು ನಿಮಗೆ ಬೇಕಾದ ಯಾವುದೇ ಸ್ಮೃತಿಯನ್ನು ಬರೆದುಕೊಡುವರು’ ಇದು ಸ್ವಾಮಿಗಳು ಶಿಷ್ಯ ಶರತ್ ಚಂದ್ರ ಚಕ್ರವರ್ತಿಗೆ ಮನದಟ್ಟು ಮಾಡಿಸಿದ ಸಮಾಜ ಸುಧಾರಣೆ. (156)
ಕುಂಬಕೋಣಂ ಬಿನ್ನವತ್ತಳೆಗೆ ಉತ್ತರ : ನಮ್ಮ ದೇಶದ ಜನರ ಮನಸ್ಸು ಹಲವು ಶತಮಾನಗಳಿಂದ ಬಹಳ ಕಾಡುತ್ತಿರುವ ಜಾತಿಪದ್ದತಿಗೆ , ಸಮಾಜ ಸುಧಾರಣೆಗೆ ಸಂಬಂಧಪಟ್ಟ ಕೆಲವು ಜಟಿಲ ಸಮಸ್ಯೆಗಳು ಹುಟ್ಟಿವೆ. ನಾನು ಸಮಾಜ ಸುಧಾರಕನೂ ಅಲ್ಲ, ಜಾತಿ ಪದ್ದತಿಯನ್ನು ನಾಶ ಮಾಡುವವನೂ ಅಲ್ಲ. ಎಂದು ಸ್ಪಷ್ಟವಾಗಿ ಹೇಳಬೇಕಾಗಿದೆ. …. ನಮ್ಮ ಹಿಂದಿನ ಸ್ಮೃತಿಕಾರರು ಬಹಳ ಹಿಂದೆಯೇ ಹೇಳಿದ್ದರು. ಸಮಾಜದಲ್ಲಿ ಆಗುವ ಬದಲಾವಣೆಗಳನ್ನು ಊಹಿಸಿದ್ದರು. ಅವರೂ ಜಾತಿ ಪದ್ದತಿಯನ್ನು ವಿರೋಧಿಸಿದರು. ಆದರೆ ಅದು ಇಂದಿನ ಆಧುನಿಕರಂತೆ ಅಲ್ಲ. ಜಾತಿ ಪದ್ದತಿಯನ್ನು ರದ್ದು ಮಾಡುವುದೆಂದರೆ ಊರಿನ ಜನರೆಲ್ಲ ಒಟ್ಟಿಗೆ ಕುಳಿತು ದನದ ಮಾಂಸವನ್ನು ತಿಂದು ಶರಾಬು ಕುಡಿಯಬೇಕೆಂದಲ್ಲ. ದೇಶದ ಮೂರ್ಖರು , ಮುಟ್ಠಾಳರು , ಹುಚ್ಚರೆಲ್ಲ ಎಲ್ಲಿ ಯಾವಾಗ ಯಾರನ್ನು ಬೇಕಾದರೂ ಮದುವೆ ಮಾಡಿಕೊಂಡು ಇಡಿಯ ದೇಶವನ್ನೆ ಒಂದು ಹುಚ್ಚರ ಆಸ್ಪತ್ರೆಯನ್ನಾಗಿ ಮಾಡಬೇಕೆಂದಲ್ಲ…….ನಮ್ಮ ಪೂರ್ವಿಕರ ಆದರ್ಶ ಬ್ರಾಹ್ಮಣ. ನಮ್ಮ ಶಾಸ್ತ್ರಗಳಲ್ಲೆಲ್ಲಾ ಇದು ಸ್ಪಷ್ಟವಾಗಿ ಚಿತ್ರಣವಾಗಿದೆ. …’ತ್ಯಾಗಿ ಮತ್ತು ಅಧ್ಯಾತ್ಮ ಸಂಪನ್ನನಾದ ಬ್ರಾಹ್ಮಣ ನಮ್ಮ ಆದರ್ಶ. .. ಆದರ್ಶ ಬ್ರಾಹ್ಮಣನಲ್ಲಿ ಸಾಂಸಾರಿಕತೆ ಸಂಪೂರ್ಣ ಮಾಯವಾಗಿ ಜ್ಞಾನ ತುಂಬಿ ತುಳುಕಾಡುತ್ತಿರುತ್ತದೆ….ವರ್ಣ ಸಮಸ್ಯೆಗೆ ಪರಿಹಾರ ಆಗಲೇ ಮೇಲೆ ಇರುವವರನ್ನು ಕೆಳಗೆ ಎಳೆಯುವುದಲ್ಲ . ಕೈಗೆ ಸಿಕ್ಕಿದ್ದನ್ನು ತಿಂದು , ಕುಡಿಯುವುದಲ್ಲ, ಮಿತಿ ಮೀರಿ ಸುಖ ಭೋಗಗಳನ್ನು ಅರಸುವುದಲ್ಲ. ವೇದಾಂತ ತತ್ತ್ವಗಳನ್ನು ಪಾಲಿಸುವುದರಿಂದ ಮಾತ್ರ ಅದು ಸಾದ್ಯ. (157)
ಭಾರತದ ಭವಿಷ್ಯ - ಮದ್ರಾಸ್ ಭಾಷಣ : ಸತ್ಯಯುಗದಲ್ಲಿ ಮೊದಲಿಗೆ ಬ್ರಾಹ್ಮಣರು ಮಾತ್ರ ಇರುವರು ನಂತರ ಅವರು ಭಿನ್ನ ಪಂಗಡಗಳಾಗಿ ಹೋದರು ಎನ್ನುವ ಮಹಾಭಾರತದ ವಿವರಣೆಯೇ ಸರಿ .ಮುಂದೆ ಬರುವ ಸತ್ಯಯುಗದಲ್ಲಿ ಎಲ್ಲಾ ಜಾತಿಗಳೂ ಒಂದಾಗಬೇಕು…. ವರ್ಣ ಸಮಸ್ಯೆ ಭಾರತದಲ್ಲಿ ಈ ರೂಪವನ್ನು ತಾಳುವುದು , ಮೇಲಿನ ವರ್ಗದವರನ್ನು ಕೆಳಕ್ಕೆ ಎಳೆಯುವುದಲ್ಲ. ಬ್ರಾಹ್ಮಣರನ್ನು ನಾಶಗೊಳಿಸುವುದಲ್ಲ. ಮಾನವಕೋಟಿಯ ಮಹಾ ಆದರ್ಶ ಬ್ರಾಹ್ಮಣ. ಶಂಕರಾಚಾರ್ಯರು ಗೀತಾಭಾಷ್ಯದಲ್ಲಿ ಇದನ್ನು ಸುಂದರವಾಗಿ ವಿವರಿಸಿದ್ದಾರೆ. ಬ್ರಾಹ್ಮಣರ ಬ್ರಹ್ಮತ್ವವನ್ನು ಪ್ರಚಾರ ಮಾಡಲು ಶ್ರಿಕೃಷ್ಣ ಅವತಾರ ಎತ್ತಿದನು ಎನ್ನುತ್ತಾರೆ ಅವರು. ಇದೇ ಅವತಾರದ ಪರಮ ಉದ್ದೇಶ. ಈ ಬ್ರಾಹ್ಮಣ ಬ್ರಹ್ಮಜ್ಞ ಪುರುಷ.ಈ ಆದರ್ಶ ಸಿದ್ಧ ಮಾನವ ಇರುವುದು ಅತ್ಯಾವಶ್ಯಕ. ಬ್ರಹ್ಮಜ್ಞ ಪುರುಷ ಎಂದಿಗೂ ಮರೆಯಾಗಬಾರದು. ಈಗ ಇರುವ ವರ್ಣಗಳಲ್ಲಿ ಅದೆಷ್ಟೋ ದೋಷಗಳಿವೆ. ಆದರೆ ಎಲ್ಲರೂ ಬ್ರಾಹ್ಮಣರಿಗೆ ಗೌರವ ಕೊಡಲು ಸಿದ್ಧರಿರಬೇಕು. ಉಳಿದ ವರ್ಗಗಳಿಗಿಂತ ಬ್ರಾಹ್ಮಣ ವರ್ಗದಲ್ಲಿ ಹೆಚ್ಚು ಬ್ರಹ್ಮಜ್ಞರಿರುವರು. ಇದು ಸತ್ಯ. ….. ಮಲಬಾರಿನಲ್ಲಿ ನಾನು ನೋಡಿರುವುದಕ್ಕಿಂತಲೂ ಹಾಸ್ಯಾಸ್ಪದವಾದುದು ಮತ್ತೆಲ್ಲಿಯಾದರೂ ಇರುವುದೇ ? ಸತ್ಕುಲ ಪ್ರಸೂತನಿರುವ ಬೀದಿಯಲ್ಲಿ ನಡೆಯಲು ಹೊಲೆಯನಿಗೆ ಅವಕಾಶವಿಲ್ಲ… ಮಲೆಯಾಳಿಗಳೆಲ್ಲ ಹುಚ್ಚರು. ಅವರದು ಹುಚ್ಚರ ಆಸ್ಪತ್ರೆ. ……. ಶೂದ್ರನು ವೇದವನ್ನು ಕೇಳಿದರೆ ಅವನ ಕಿವಿಗೆ ಕಾದ ಸೀಸ ಸುರಿಯಿರಿ. ಅವನು ಒಂದು ಶ್ಲೋಕ ಉಚ್ಛರಿಸಿದರೆ ನಾಲಗೆಯನ್ನು ಕತ್ತರಿಸಿ, ಬ್ರಾಹ್ಮಣನನ್ನು ‘ಎಲೈ ಬ್ರಾಹ್ಮಣನೇ ಎಂದರೆ ಅವನ ನಾಲಗೆಯನ್ನು ಸೀಳಿ. ಇದೊಂದು ನಿಸ್ಸಂದೇಹವಾಗಿ ಅನಾಗರಿಕ ರಾಕ್ಷಸಿ ಕೃತ್ಯ. ಅದನ್ನು ಹೇಳಬೇಕಾಗಿಲ್ಲ. ಸ್ಮೃತಿಕರರನ್ನು ದೂರಿ ಪ್ರಯೋಜನವಿಲ್ಲ. ಅವರು ಆ ಕಾಲದಲ್ಲಿ ಬಳಕೆಯಲ್ಲಿದ್ದ ಆಚಾರಗಳನ್ನು ಬರೆದಿಟ್ಟಿದ್ದಾರೆ…… ಭಾರತದಲ್ಲಿ ಇತರರ ಮುಕ್ತಿಗೆ ಕೆಲಸ ಮಾಡುವುದು ಬ್ರಾಹ್ಮಣರ ಕರ್ತವ್ಯ. ಅದನ್ನು ಬಿಟ್ಟು ಅವರು ಹಣ ಸಂಪಾದಿಸಲು ಹೊರಟರೆ ಅವರು ಬ್ರಾಹ್ಮಣರಲ್ಲ. (158)
ಭಗವಾನ್ ಬುದ್ಧ –ಡೆಟ್ರಾಯಿಟ್ ಭಾಷಣ : ಆಗಿನ ಕಾಲದಲ್ಲಿ ನಡೆಯುತ್ತಿದ್ದ ಅನವಶ್ಯಕ ಚರ್ಚೆ , ಆಚಾರ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜಾತಿ ಪದ್ದತಿ ಇವುಗಳನ್ನು ನೋಡಿ ರೋಸಿ ಬೌದ್ಧ ಧರ್ಮವನ್ನು ಸ್ಥಾಪಿಸಿದನು. ಕೆಲವರು ತಾವೊಂದು ಜಾತಿಯಲ್ಲಿ ಹುಟ್ಟಿರುವುದರಿಂದ ಹಾಗೆ ತಾಳದ ಇತರರಿಗಿಂತ ಮೇಲೆಂದು ಭಾವಿಸುವರು. ಗೌತಮ ಪೌರೋಹಿತ್ಯವನ್ನು ಕಟುವಾಗಿ ವಿರೋಧಿಸಿದ್ದನು. (159)
ಶರತ್ ಚಂದ್ರ ಚಕ್ರವರ್ತಿಗೆ ಹೇಳಿದ್ದು - ಶಂಕರರು ಉದಾರಿಗಳಲ್ಲ. ಆವರಲ್ಲಿ ಬ್ರಾಹ್ಮಣ ಅಭಿಮಾನ ಹೆಚ್ಚಾಗಿದ್ದಿತು. ದಕ್ಷಿಣದ ವೈದಿಕ ಬ್ರಾಹ್ಮಣನ ಮಗ . ಮತ್ತಿನ್ನೇನು ? ಬ್ರಾಹ್ಮಣೇತರರಿಗೆ ಬ್ರಹ್ಮಜ್ಞಾನವಿಲ್ಲ ಮುಂತಾದ ಅಂಶಗಳನ್ನು ವೇದಾಂತ ಭಾಷ್ಯದಲ್ಲಿ ಹೇಗೆ ಸಮರ್ಥನೆ ಮಾಡಿಕೊಂಡು ಹೋಗಿದ್ದಾರೆ. .. ವೇದವೇನೋ ತ್ರಿವರ್ಣದವರಿಗೆ ಮಾತ್ರ ವೇದಾಧ್ಯಯನ , ಬ್ರಹ್ಮಜ್ಞಾನಗಳ ಅಧಿಕಾರ ಕೊಟ್ಟಿದೆ. …. (160)
೧೮೯೭ ಫೆಬ್ರವರಿಯಲ್ಲಿ ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನ – ಒಂದೊಂದು ಕಾಲದಲ್ಲಿ ಒಂದೊಂದು ಸ್ಮೃತಿ ಜಾರಿಯಲ್ಲಿರುವುದು. ಕೆಲವು ಮಹಾತ್ಮರು ಅಂತ್ಯಜರಿಗೆ ಅನುಕೂಲ ಮಾಡಿಕೊಟ್ಟರು. ಮಧ್ವರಂತಹವರು ಹೆಂಗಸರಿಗೂ ವೇದ ಓದುವ ಅಧಿಕಾರ ಇದೆಯೆಂದರು. ಜಾತಿ ಪದ್ದತಿ ಹೋಗಬೇಕಾಗಿಲ್ಲ. ಅದು ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಹೋಗಬೇಕಷ್ಟೇ. ಆ ಹಳೆಯ ಪದ್ದತಿಯಲ್ಲಿಯೇ ಬೇಕಾದಷ್ಟು ಹೊಸದನ್ನು ಮಾಡುವ ಪ್ರಾಣಶಕ್ತಿಯಿದೆ. ವರ್ಣಗಳನ್ನು ಧ್ವಂಸ ಮಾಡುವುದು ತಿಳಿಗೆಡಿತನ. ಹಳೆಯದು ರೂಪಾಂತರ ಹೊದುವುದೇ ಸರಿಯಾದ ಮಾರ್ಗ. (161)
ಭಾರತದ ಮಹಾಪುರುಷರು- ಮದ್ರಾಸ್ ಭಾಷಣ : ರಾಮಾನುಜರ ಕಾಲದಿಂದ ನೀವು ಒಂದನ್ನು ಗಮನಿಸಬಹುದು. ಅದೇ ಪ್ರತಿಯೊಬ್ಬರಿಗೂ ಅಧ್ಯಾತ್ಮ ವಿದ್ಯೆಯ ಅಧಿಕಾರವನ್ನು ನೀಡಿದರು. ಶಂಕರಾಚಾರ್ಯರಿಗಿಂತ ಮುಂಚಿನ ಆಚಾರ್ಯರ ಮುಖ್ಯ ಪಲ್ಲವಿಯೂ ಇದೇ ಆಗಿತ್ತು. .. ಶಂಕರಾಚಾರ್ಯರು ಸಂಕುಚಿತ ಮನೋಧರ್ಮದವರು ಎಂದು ಏತಕ್ಕೆ ಹೇಳುವರೋ ಗೊತ್ತಿಲ್ಲ. (162)
ಸ್ವಾಮಿಗಳು ಮೇರಿ ಹೇಲ್’ಗೆ ಬರೆದ ಪತ್ರ (೧/೧೧/೧೮೯೬) - ‘ ಮಾನವ ಸಮಾಜ ಕ್ರಮವಾಗಿ ಬ್ರಾಹ್ಮಣ ,ಕ್ಷತ್ರಿಯ , ವೈಶ್ಯ , ಶೂದ್ರರೆಂಬ ನಾಲ್ಕು ವರ್ಣದವರಿಂದ ಆಳಲ್ಪಡುತ್ತಿದೆ. ಪ್ರತಿವರ್ಗದ ಆಳ್ವಿಕೆಯಲ್ಲಿ ಒಳ್ಳೆಯದು ಅದರಂತೆ ಕೆಟ್ಟದ್ದು ಇರುತ್ತದೆ. ಬ್ರಾಹ್ಮಣ ಆಳ್ವಿಕೆಯಲ್ಲಿ ಅನುವಂಶಿಕತೆಯನ್ನು ಆಧರಿಸಿದ ಅತಿಯಾದ ಪ್ರತ್ಯೇಕತಾ ಮನೋಭಾವ ಇರುತ್ತದೆ. ಬ್ರಾಹ್ಮಣರು ಮತ್ತು ಅವರ ವಂಶಗಳಿಗೆ ಸಾಕಷ್ಜ್ಟು ರಕ್ಷಣೆ ಇರುತ್ತದೆ. ಅವರಿಗಲ್ಲದೆ ಬೇರೆ ಯಾರಿಗೂ ಜ್ಞಾನಾರ್ಜನೆ , ಹಂಚಿಕೆಯ ಹಕ್ಕಿರುವುದಿಲ್ಲ. ಈ ಯುಗದ ಶ್ರೇಷ್ಟತೆ ಏನೆಂದರೆ ಎಲ್ಲ ಬಗೆಯ ವಿಜ್ಞಾನಗಳಿಗೂ ತಳಹದಿ ಹಾಕಲಾಯಿತು. ಬ್ರಾಹ್ಮಣರು ಬುದ್ದಿಯ ಪೋಷಕರು. ಏಕೆಂದರೆ ಬುದ್ದಿಯಿಂದಲೇ ಅವರು ಆಳುತ್ತಾರೆ. ಕ್ಷತ್ರಿಯನ ಕಾಲದಲ್ಲಿ ಕ್ರೌರ್ಯ ದಬ್ಬಾಳಿಕೆ ಪ್ರಧಾನವಾಗಿರುತ್ತದೆ. ಆದರೆ ಪ್ರತ್ಯೇಕತೆಯ ಪಿಡುಗಿರುವುದಿಲ್ಲ. ಆ ಕಾಲದಲ್ಲಿ ಕಲೆ, ಸಮಾಜ, ಸಂಸ್ಕೃತಿಗಳು ಹೆಚ್ಚು ಏಳ್ಗೆ ಹೊಂದುತ್ತವೆ. ವೈಶ್ಯರ ಆಳ್ವಿಕೆ ನಂತರ ಬರುವುದು ಮೌನವಾದ ದಬ್ಬಾಳಿಕೆ , ಜನರನ್ನು ಸುಲಿದು ತಿನ್ನುವುದರಲ್ಲಿ ಇದು ಮುಂದಿರುವುದು. ಇದರ ಅನುಕೂಲವೆಂದರೆ ವ್ಯಾಪಾರಸ್ಥರು ಎಲ್ಲ ಕಡೆಗೆ ಹಬ್ಬುವುದರಿಂದ ಹಿಂದಿನ ಇಬ್ಬರ ಆಳ್ವಿಕೆಯ ಕಾಲದಲ್ಲಿ ಶೇಖರಗೊಂಡಿದ್ದ ಭಾವನೆಗಳನ್ನು ಹರಡಲು ನೆರವಾಗುವರು. ಕ್ಷತ್ರಿಯರಿಗಿಂತ ಇವರು ಇನ್ನೊಬ್ಬರೊಂದಿಗೆ ಸಹಕರಿಸುವುದು ಹೆಚ್ಚು. ಆದರೆ ಸಂಸ್ಕೃತಿ ಕ್ಷೀಣಗೊಳ್ಳುವುದು. ಕೊನೆಗೆ ಶೂದ್ರನ ಆಳ್ವಿಕೆ ಬರುವುದು. ಅದರ ಅನುಕೂಲ ಏನೆಂದರೆ ಲೌಕಿಕ ಸೌಕರ್ಯಗಳು ಎಲ್ಲರಿಗೂ ಸಮವಾಗಿ ಹಂಚಲ್ಪಡುತ್ತವೆ. ಆದರ ಅನಾನುಕೂಲ ಸಂಸ್ಕೃತಿಯ ಹೀನತೆ. ಎಲ್ಲರಲ್ಲಿಯೂ ಸಾಧಾರಣ ವಿದ್ಯೆ. ಹರಡುವುದು, ಆದರೆ ಪ್ರತಿಭಾವಂತರು ಕಡಿಮೆಯಾಗುವರು.
ಮಾತಿನ ನಡುವೆ ಒಮ್ಮೆ ಶಿಷ್ಯ ಶರತ್ ಚಂದ್ರ ಚಕ್ರವರ್ತಿಯನ್ನು ಕೊಡವುತ್ತ ನಿಮ್ಮ ದೇಶದಲ್ಲಿ ಜಾತಿಯನ್ನು ದೊಡ್ಡದು ಮಾಡಿಕೊಂಡು ನಿಮಗೆ ಅನ್ನವೂ ಹುಟ್ಟದಂತಾಗಿದೆ , ನಿಮಗೆ ಸೂಜಿಯನ್ನೂ ತಯಾರಿಸುವ ಯೋಗ್ಯತೆಯಿಲ್ಲ. ಕೀಳು ಜಾತಿಯವರಲ್ಲಿ ಈಗ ಎಚ್ಚರ ಮೂಡುತ್ತಿದೆ. ಇನ್ನು ಸಾವಿರ ಸಲ ಯತ್ನಿಸಿದರೂ ಅದನ್ನು ಮೇಲು ಜಾತಿಯವರು ತಡೆಯಲಾಗದು . ಈಗ ಇತರ ಮೇಲು ಜಾತಿಯವರು ಅವರಿಗೆ ನೆರವಾದರೆ ಅವರಿಗೇ ಒಳ್ಳೆಯದಾಗುವುದು ಎಂದರು. ಆಗ ಶಿಷ್ಯ ಕೀಳು ಜಾತಿಯವರಿಗೆ ಶಿಕ್ಷಣ ದಕ್ಕಿದರೆ ಈಗ ಶಿಕ್ಷಣ ಪಡೆದ ಮೇಲು ಜಾತಿಯವರಂತೆ ಅವರೂ ಕೂಡ ಸೋಮಾರಿಗಳು , ನೌಕರಿ ಬಯಸುವವರು , (ದೈಹಿಕ) ಕೆಲಸ ಮಾಡದವರು ಆಗುತ್ತಾರೆ ಎನ್ನುವ ವಾದವನ್ನು ಮುಂದಿರಿಸಿದ. ಅದನ್ನು ಅಲ್ಲಗಳೆಯುತ್ತ ಸ್ವಾಮಿಗಳು ಅದು ಹಾಗೇ ಏಕಾಗುತ್ತದೆ. ಜ್ಞಾನೋದಯವಾದರೆ ಕುಂಬಾರ ಕುಂಬಾರನಾಗಿ , ರೈತ ರೈತನಾಗಿ , ಬೆಸ್ತ ಬೆಸ್ತನಾಗಿಯೇ ಇರುತ್ತಾನೆ. ಜಾತಿಯ ಕೆಲಸವನ್ನು ಏಕೆ ಬಿಡುತ್ತಾನೆ. ‘ದೋಷಪೂರ್ಣವಾದರೂ ನಿನಗೆ ಸಹಜವಾದ ಕರ್ಮವನ್ನು ಬಿಡಬೇಡ ಎಂದು ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ. ಜ್ಞಾನ ಬಲದಿಂದ ಅವರು ತಮ್ಮ ಸಕಜ ಕರ್ಮಗಳನ್ನು ಉತ್ತಮಗೊಳಿಸುತ್ತಾರೆ. ಕಾಲಾನುಕ್ರಮೇಣ ಅವರಲ್ಲಿ ಹತ್ತಾರು ಜನ ಪ್ರಭಾವಶಾಲಿಗಳಾದವರು ಅವರಲ್ಲಿ ಹುಟ್ಟುತ್ತಾರೆ. ಆಗ ಅವರನ್ನು ನೀವು ನಿಮ್ಮ ಶ್ರೇಣಿಗೆ ಸೇರಿಸಿಕೊಳ್ಳುತ್ತೀರಿ’ ಎನ್ನುವ ವಿವರಣೆ ನೀಡಿದರು. ಇನ್ನೊಂದು ದಿನ ಶಿಷ್ಯನಿಗೆ ತಮ್ಮ ಮುಂದಿನ ಯೋಜನೆಗಳನ್ನು ತಿಳಿಸುತ್ತ ತಾವು ಸ್ಥಾಪಿಸಿದ ವಿದ್ಯಾ ಸಂಸ್ಥೆಗಳಲ್ಲಿ ಜಾತಿ , ವರ್ಣಗಳ ತಾರತಮ್ಯವಿಲ್ಲದೆ ಶಿಕ್ಷಣ ದೊರೆಯುವ ಭರವಸೆ ನೀಡುತ್ತ ಯಾರು ಜಾತಿ , ವರ್ಣಾಶ್ರಮಗಳನ್ನು ಅನುಸರಿಸಲು ಇಚ್ಛಿಸುವರೋ ಅವರು ತಮ್ಮ ಊಟೋಪಾಚಾರಗಳನ್ನು ತಾವೇ ಏರ್ಪಾಡು ಮಾಡಿಕೊಳ್ಳಬೇಕೆಂದು ಸೂಚಿಸಿದರು. (163)
ಸುರೇಂದ್ರನಾಥ ಸೇನರಿಗೆ ಹೇಳಿದ್ದು ೨೪/೧೧/೧೮೯೮- ಪರಧರ್ಮವನ್ನು ಅವಲಂಬಿಸಿದ ಜನಾಂಗಗಳೊಡನೆ ಅಂತರ್ಜಾತಿ ವಿವಾಹ ಸೂಕ್ತವೆಂದು ನಾನು ಹೇಳುವುದಿಲ್ಲ. ಹಿಂದೂಗಳಲ್ಲಿಯೇ ಮೊದಲಿಗೆ ಒಂದೇ ಜಾತಿಯ ಒಳ ಪಂಗಡಗಳ ನಡುವೆ ಮೊದಲು ಮದುವೆ ಜಾರಿಯಾಗಬೇಕು. ಸುಧಾರಣೆ ಎಂದರೆ ಸಂಪುರ್ಣವಾಗಿ ಧ್ವಂಸ ಮಾಡುವುದಲ್ಲ’ ಎಂದು ಸುರೇಂದ್ರನಾಥ ಸೇನನಿಗೆ ತಿಳಿಸಿದ್ದರು. (164)
-ವೇದಗಳಿಗೆ ಅಪಾರ್ಥ ಮಾಡಲು ವ್ಯಾಸ ಹಿಂಜರಿಯುವುದಿಲ್ಲ ಎನ್ನುವ ಸ್ವಾಮಿಗಳು ಇನ್ನೊಂದು ಕಡೆ ಜಾತಿ ವಿಭಜನೆ ಇತ್ತೀಚಿನ ಕಪಟಿ ಬ್ರಾಹ್ಮಣರಿಂದ ಬಂದಿದೆ ಎನ್ನುತ್ತಾರೆ. ಧಾರ್ಮಿಕ ಮತ್ತು ಸಾಮಾಜಿಕ ವ್ಯವಹಾರ ಎರಡರಲ್ಲೂ ಕೈ ಹಾಕಿದವರು ಕೇವಲ ಪುರೋಹಿತರಲ್ಲ ; ಧರ್ಮಸೂತ್ರಗಳನ್ನು , ಸ್ಮೃತಿಗಳನ್ನು ಬರೆದ ಪ್ರಾಚೀನ ಋಷಿಗಳು. ಸ್ವಾಮಿಗಳು ಬ್ರಾಹ್ಮಣ್ಯ ಶ್ರೇಷ್ಟ ಎಂದಾಗ ಬ್ರಾಹ್ಮಣರು ವೇದಗಳನ್ನು ಓದುತ್ತಾರೆ ಆದ್ದರಿಂದ ಎನ್ನುವ ಕಾರಣ ಅವರ ಮನಸ್ಸಿನಲ್ಲಿರುವುದು ನಿಚ್ಚಳ ಶಂಕರರು ಹಾಕಿಕೊಟ್ಟ ಮಾದರಿ ಎಂದರೆ ಯಾವುದು ಎನ್ನುವುದನ್ನು ಸ್ಪಷ್ಟಪಡಿಸುವುದಿಲ್ಲ. ಶಂಕರರು ಭಾವನಾವಾದಿ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎನ್ನುತ್ತಾರೆಯೇ ಹೊರತು ಸಾಮಾಜಿಕ , ಲೌಕಿಕ ದೃಷ್ಟಿಯಲ್ಲಲ್ಲ. ಅವರು ಭಗವದ್ಗೀತೆಗೆ ಬರೆದ ಭಾಷ್ಯದಲ್ಲಿ ‘ವರ್ಣಗಳು ತಮಗೆ ಲಗತ್ತಾಗಿರುವ ಕೆಲಸಗಳನ್ನು ಮೀರುವಂತಿಲ್ಲ. ಸ್ವಂತ ಧರ್ಮದಲ್ಲಿ (=ವರ್ಣ) ಸಾಯುವುದೇ ಶ್ರೇಯ. ಅದನ್ನು ಮೀರಿದರೆ ಭಯ’ ಎನ್ನುತ್ತಾರೆ. ಖಾಸಗಿಯಾಗಿ ಶಿಷ್ಯನ ಮುಂದೆ ಶಂಕರ ಉದಾರಿಯಲ್ಲ ಎಂದಿದ್ದದವರು ಸಾರ್ವಾನಿಕವಾಗಿ ಆತನನ್ನು ಸಂಕುಚಿತನೆಂದು ಏಕೆ ಕರೆಯುತ್ತಾರೋ ಗೊತ್ತಿಲ್ಲ ಎನ್ನುತ್ತಾರೆ. ರಾಮಾನುಜರ ಸಮಾಜ ಸುಧಾರಣೆ ಮಾದರಿ ಯಶಸ್ವಿಯೇ ಆಗಿದ್ದರೆ ಹಿಂದೂ ಧರ್ಮದಲ್ಲಿ ಏಕೆ ತಾರತಮ್ಯ ಉಳಿದುಕೊಂಡಿದೆ ಎನ್ನುವುದನ್ನು ಸ್ವಾಮಿಗಳು ಬಿಚ್ಚಿ ಹೇಳುವುದಿಲ್ಲ. ಸ್ವಾಮಿಗಳ ಮದ್ರಾಸ್ ಶಿಷ್ಯರಲ್ಲಿ ತ್ರಿಮತಸ್ಥ ಬ್ರಾಹ್ಮಣರೇ ಅಧಿಕರಾಗಿದ್ದರಿಂದ ಅವರಿಗೆ ನೋವಾಗದಂತೆ ‘ಸಮಾಜ ಸುಧಾರಣೆ’ ಮಾಡುವ ಯೋಚನೆಯ ಫಲವಾಗಿ ಶಂಕರ, ರಾಮಾನುಜರ ಮಾರ್ಗಗಳು ಹೊಳೆದಿವೆ.
-ಮೊದಲಿನಂತೆ ಸಮಾಜವನ್ನು ನಾಲ್ಕು ವರ್ಣಗಳಲ್ಲಿ ವಿಭಜಿಸಬೇಕು ಎನ್ನುವ ಸ್ವಾಮಿಗಳು ಮುಂದಿನ ಉಸಿರಿನಲ್ಲಿ ವೇದ ಕಾಲದಲ್ಲಿದ್ದಂತೆ ಮೂರು ವರ್ಣಗಳು ಮತ್ತೊಮ್ಮೆ ಬರಬೇಕು ಎನ್ನುತ್ತಾರೆ. ಸ್ವಾಮಿಗಳು ಮೂರು ಗುಣಗಳಿಂದ ನಾಲ್ಕನೇ ಶೂದ್ರರನ್ನು , ಐದನೆಯ ಪಂಚಮರನ್ನು ಗುರುತಿಸುವ ಮಾರ್ಗ ಹೇಗೆಂದು ತಿಳಿಸುವುದಿಲ್ಲ. ಅಮೆರಿಕ , ಇಂಗ್ಲೆಂಡ್ ಸುತ್ತಿ ಬಂದ ನಂತರ ಸ್ವಾಮಿಗಳಲ್ಲಿ ಸಮಾಜದ ಬಗ್ಗೆ ಯಾವ ಹೊಸ ದೃಷ್ಟಿಕೋನವೂ ಉಂಟಾಗದೆ ಮನುವಿಗೆ ಶರಣಾಗಿದ್ದಾರೆ. ಹಣ ಕೊಟ್ಟರೆ – ತಮಗೆ ಲಾಭವಾಗುವಂತಿದ್ದರೆ – ಏನನ್ನು ಬೇಕಾದರೂ ಬರೆದುಕೊಡಬಲ್ಲ ಪುರೋಹಿತರಲ್ಲಿ ಮನು , ಯಾಜ್ಞವಲ್ಕ್ಯರೂ ಸೇರಿರುವ ಸಂಶಯ ಮೂಡಿಲ್ಲ. ಸ್ವಾಮಿಗಳ ಈ ಸುಧಾರಣೆಗಳಲ್ಲಿ ಧಾರ್ಮಿಕ , ಲೌಕಿಕ ಯಾವುದೇ ಉನ್ನತ ಜ್ಞಾನ ಗಳಿಸಿದರೂ ಕುಂಬಾರ ಕುಂಬಾರನೇ. ಆತ ಕೊನೆಗೆ ಅಡಿಯಾಳಾಗಬೇಕಾಗಿರುವುದು ಮನು , ಯಾಜ್ಞವಲ್ಕ್ಯರಿಗೇ ! ಶಿಷ್ಯ ಹಾಗೆ ಹಿಂದಿನ ಕಾಲಕ್ಕೆ ಹೋಗುವುದು ಸಾಧ್ಯವೇ ಎಂದಾಗ ಮನು , ಯಾಜ್ಞವಲ್ಕರದ್ದು ಪವಿತ್ರ ನಿಷ್ಕಾಮ ಕರ್ಮ ಎನ್ನುವುದೇ ಸ್ವಾಮಿಗಳ ಉತ್ತರವಾಗಿದ್ದಿತು. ಧರ್ಮದೊಳಗೆ ಮಾತ್ರ ಅಂತರ್ಜಾತೀಯ ವಿವಾಹ ಇರಬೇಕು. ಧರ್ಮಗಳ ನಡುವೆ ಇದ್ದರೆ ಅದು ಸಮಾಜದ ಕಟ್ಟುಪಾಡುಗಳನ್ನು ಸಡಿಲಿಸುವುದು ಎಂದು ಸುರೇಂದ್ರನಾಥ ಸೇನನಿಗೆ ತಿಳಿಸಿದ್ದರು. ಸ್ವಾಮಿಗಳ ಈ ಎಲ್ಲ ಹೇಳಿಕೆಗಳು ಯಾವುದೇ ಶಿಸ್ತುಬದ್ಧ ಸಾಮಾಜಿಕ ಅಧ್ಯಯನಗಳಿಂದ ಬಂದಿರದೆ ಸಾಂಪ್ರದಾಯಿಕ ವರ್ಣ ವಿವರಣೆಯನ್ನು ಆಧರಿಸಿವೆ. ಇದರಿಂದಾಗಿ ಸ್ವಾಮಿಗಳ ಸಮಾಜ ಸುಧಾರಣೆ ಒಮ್ಮೆಮ್ಮೆ ಒಂದೊಂದು ರೀತಿ ಕಾಣುತ್ತದೆ. ಶೂದ್ರರ ಆಳ್ವಿಕೆಯಲ್ಲಿ ಪ್ರತಿಭಾವಂತರು ಕಡಿಮೆಯಾಗುತ್ತಾರೆ ಎಂದಾಗ ಅದರಲ್ಲಿ ಮೊದಲಿನಿಂದಲೂ ಪ್ರತಿಭಾವಂತರಾಗಿದ್ದ ಬ್ರಾಹ್ಮಣರು ಸೇರಿರುತ್ತಾರೋ ಇಲ್ಲವೋ ಹೇಳುವುದಿಲ್ಲ. ಸ್ವಾಮಿಗಳು ಪ್ರತಿಭೆಯನ್ನು ‘ ವೇದ-ಉಪನಿಷತ್ತುಗಳ’ ಕಂಠಪಾಠ ಜ್ಞಾನದಿಂದ ಅಳೆಯುತ್ತಿದ್ದಾರೆ ಎನಿಸುತ್ತದೆ.
ಸ್ವಾಮಿಗಳು ಕ್ಯಾಸಲ್ ಕೆರ್ನಾನ್’ನಲ್ಲಿರುವಾಗ ನಡೆದ ಒಂದು ಘಟನೆಯನ್ನು ‘ರೆಮಿನಿಸೆನ್ಸಸ್’ನಲ್ಲಿ ಕೆ.ಸುಂದರರಾಮ ಅಯ್ಯರ್ ದಾಖಲಿಸಿದ್ದಾರೆ. ಸ್ವಾಮಿಗಳು ಮದ್ರಾಸ್ ಉಚ್ಛ ನ್ಯಾಯಾಲಯದ ವಕೀಲ ಕೆ.ಪಿ ಶಂಕರ ಮೆನನ್ ಜೊತೆಗೆ ಮಾತನಾಡುತ್ತ ಕುಳಿತಿದ್ದರು. ಆಗ ಅವರ ಮಾತುಕತೆ ಕೇರಳದಲ್ಲಿದ್ದ ಅಸ್ಪೃಶ್ಯತೆಯ ಬಗ್ಗೆ ಬಂದಿತು. ಆಗ ಸ್ವಾಮಿಗಳು ಮಲಬಾರಿನ ನಂಬೂದರಿ ಬ್ರಾಹ್ಮಣರು ಹಲವು ನೂರು ವರ್ಷಗಳು ಅಲ್ಲಲ್ಲ ಯುಗಗಳಿಂದಲೂ ನಾಯರ್ ಹೆಂಗಸರೊಂದಿಗೆ ಸಂಬಂಧ ಹೊಂದಿದ್ದಾರೆ. ಮನುಸ್ಮೃತಿಯ ಪ್ರಕಾರ ಏಳು ತಲೆಮಾರುಗಳಿಗೂ ಹೆಚ್ಚು ಬ್ರಾಹ್ಮಣರೊಂದಿಗೆ ಸಂಬಂಧ ಹೊಂದಿರುವವರು ಬ್ರಾಹ್ಮಣರೇ ಆಗುತ್ತಾರೆ. ಆದ್ದರಿಂದ ನಾಯರ್’ಗಳು ತಾವು ಬ್ರಾಹ್ಮಣರೆಂದು ಘೋಷಿಸಿಕೊಳ್ಳಲು ಇದು ಸಕಾಲ ಎಂದು ತಿಳಿಸಿದರು. ಸ್ವಾಮಿಗಳ ಈ ಸಲಹೆಯನ್ನು ಶಂಕರ ಮೆನನ್ ಗಂಭೀರವಾಗಿ ಚಿಂತಿಸುವಂತೆ ಮಾಡಿದ್ದಿತು. ಇದೇ ಸಮಯದಲ್ಲಿ ಶಂಕರನ್ ನಾಯರ್ ಸ್ವಾಮಿಗಳನ್ನು ಕಾಣಲು ಬಂದರು. ಆಗ ಶಂಕರ ಮೆನನ್ ಅವರಿಗೆ ಸ್ವಾಮಿಗಳ ನೀಡಿದ ಸಲಹೆಯನ್ನು ತಿಳಿಸಿದರು. ಜಾತಿ ಉನ್ನತೀಕರಣ ಮತ್ತು ಮಲಬಾರಿನಲ್ಲಿರುವ ಸೂಕ್ಷ್ಮವಾದ ಜಾತಿ ಸಮಸ್ಯೆಯನ್ನು ನನ್ನಂತಹ ಅಯ್ಯರ್ ಬ್ರಾಹ್ಮಣರ ಎದುರು ಚರ್ಚಿಸಲು ಇಚ್ಛಿಸದೆ ಶಂಕರನ್ ನಾಯರ್ ಆ ವಿಷಯವನ್ನು ಉಪಾಯವಾಗಿ ಬದಿಗೆ ಸರಿಸಿದರೆಂದು ಸುಂದರರಾಮ ಅಯ್ಯರ್ ಬರೆದಿದ್ದಾರೆ.
ಸ್ವಾಮಿಗಳು ಮನುವಿನ ಪ್ರಶಂಸಕರಾಗಿದ್ದರು. ವಿದೇಶಗಳಲ್ಲಿ ಜೀವಿಸಿ ಬಂದಿದ್ದರೂ ಹಿಂದೂ ಸಮಾಜದ ಸುಧಾರಣೆಗೆ ತಮ್ಮದೇ ಆದ ಒಂದು ಮಾದರಿ ಅವರಲ್ಲಿ ಇರಲಿಲ್ಲ . ಮನುಸ್ಮೃತಿಯನ್ನು ಸ್ವಲ್ಪ ಸುಧಾರಿಸಿ ಮತ್ತೊಮ್ಮೆ ಜಾರಿಗೆ ತಂದರೆ ಹಿಂದೂ ಸಮಾಜದ ಏಳ್ಗೆಯಾಗುವುದೆಂದು ಭಾವಿಸಿದ್ದರು. ‘ಶ್ರದ್ಧಾವಂತನು ಕೆಳಗಿನ ಜಾತಿಯವನಿಂದಲೂ ಒಳ್ಳೆಯ ವಿದ್ಯೆಯನ್ನು ಕಲಿಯಬೇಕು . ಸ್ತ್ರೀರತ್ನ ನೀಚ ಕುಲದಲ್ಲಿ ಹುಟ್ಟಿದ್ದರೂ ಅವಳನ್ನು ಸ್ವೀಕರಿಸಬೇಕು ‘ ಎನ್ನುವ ಮನುವಿನ ಶ್ಲೋಕವನ್ನು ಸ್ವಾಮಿಗಳು ಮದ್ರಾಸ್ ತಿರುವಳ್ಳುಕೇಣಿಯಲ್ಲಿ ನೀಡಿದ ‘ನಮ್ಮ ಪ್ರಸ್ತುತ ಕರ್ತವ್ಯ’ ಲಾಹೋರಿನಲ್ಲಿ ನೀಡಿದ ‘ಹಿಂದೂ ಧರ್ಮದ ಸಾಮಾನ್ಯ ತತ್ತ್ವಗಳು ‘ ಭಾಷಣಗಳಲ್ಲಿ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಸಂವಾದಗಳ ನಡುವೆ ಹೇಳಿದ್ದರು. ಈ ಹೇಳಿಕೆ ಕೊಟ್ಟು ಮನು ಮಹರ್ಷಿ ಎಷ್ಟು ಉದಾತ್ತ ಚಿಂತಕ ಎಂದು ಹೊಗಳುತ್ತಿದ್ದರು. ಸ್ವಾಮಿಗಳ ಮಾತುಗಳನ್ನು ಕೇಳುತ್ತಿದ್ದ , ಸಂಸ್ಕೃತದಲ್ಲಿದೆ ಎನ್ನುವ ಒಂದೇ ಕಾರಣಕ್ಕೆ ಪೂಜ್ಯ ಭಾವನೆ ತಳೆಯುತ್ತಿದ್ದ ಕೇಳುಗರಿಗೆ ಮನುಸ್ಮೃತಿಯಲ್ಲಿ ನಿಜವಾಗಿಯೂ ಏನಿದೆಯೆಂದು ತಿಳಿಯುತ್ತಿರಲಿಲ್ಲ. ಅಷ್ಟೇ ಅಲ್ಲ ಹಿಂದೂ ಧರ್ಮ ‘ಮುಟ್ಟದಿರಿ’ ಎನ್ನುವ ಧರ್ಮವಾಗಿದೆ ಎಂದು ಮೇಲಿಂದ ಮೇಲೆ ಟೀಕಿಸುತ್ತಿದ್ದ ಸ್ವಾಮಿಗಳು ಈ ‘ಮುಟ್ಟದಿರಿ’ ಧರ್ಮದ ಮೂಲ ಮಾದರಿ ಮನುಸ್ಮೃತಿಯ ೧೦ನೇ ಅಧ್ಯಾಯದಲ್ಲಿದೆ ಎಂದು ತಿಳಿಯುವಲ್ಲಿ ವಿಫಲರಾಗಿದ್ದರು.
ಮನುಸ್ಮೃತಿಯ ಮೂರನೆಯ ಅಧ್ಯಾಯ ವಿವಿಧ ವರ್ಣಗಳ ಮದುವೆಯ ವಿಚಾರಗಳನ್ನು ತಿಳಿಸುತ್ತದೆ. ‘ದ್ವಿಜರಿಗೆ ( ಬ್ರಾಹ್ಮಣ , ಕ್ಷತ್ರಿಯ , ವೈಶ್ಯ) ಮೊದಲ ಮದುವೆಯಲ್ಲಿ ಅವರ ಜಾತಿಯ ಹೆಣ್ಣೇ ಆಗಬೇಕು. ದೇಹ ಸುಖಕ್ಕಾಗಿ ಆಗುವ ನಂತರದ ಮದುವೆಗಳಲ್ಲಿ ಬೇರೆ ಜಾತಿಯವರಾಗಬಹುದು. (೩/೧೨) , ಪ್ರತಿ ವರ್ಣದವರು ತಮ್ಮ ಕೆಳವರ್ಣದ ಹೆಣ್ಣುಗಳನ್ನು(ದೇಹ ಸುಖಕ್ಕಾಗಿ) ಮದುವೆಯಾಗಬಹುದು. (೩/೧೩) , ಎಂತಹುದೇ ಸಂದರ್ಭದಲ್ಲಿ ಬ್ರಾಹ್ಮಣ , ಕ್ಷತ್ರಿಯರ ಮೊದಲ ಹೆಂಡತಿ ಶೂದ್ರಳಾಗಿರಬಾರದು (೩/೧೪) ಹಾಗೆ ಮದುವೆಯಾದರೆ ಕುಲನಾಶ (೩/೧೫) ಶೂದ್ರಳಿಗೆ ಹಾಸಿಗೆ ಸುಖ ನೀಡಿದರೆ ಬ್ರಾಹ್ಮಣನು ಪತಿತನಾಗುತ್ತಾನೆ. ಆಕೆಯಲ್ಲಿ ಮಕ್ಕಳನ್ನು ಹುಟ್ಟಿಸಿದರೆ (ಎಂದರೆ ಹುಟ್ಟಿಸದಂತೆ ಸುಖಿಸಬಹುದು ) ಬ್ರಾಹ್ಮಣ್ಯದಿಂದ ದೂರವಾಗುತ್ತಾನೆ (೩/೧೭) ಮೇಲಿನ ವರ್ಣದ ಗಂಡು ಕೆಳವರ್ಣದ ಹೆಣ್ಣಿನ ಅನುಲೋಮ ಮದುವೆಯಿಂದ ಹುಟ್ಟಿದ ಮಕ್ಕಳು ತಂದೆಯ ಸದೃಶ್ಯರೇ ಹೊರತು ಆತನ ಜಾತಿಗೆ ಸೇರುವುದಿಲ್ಲ (೧೦/೬) ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮನುಸ್ಮೃತಿ ೧೦ ನೇ ಅಧ್ಯಾಯ (೧೦/೬೫) ಮತ್ತು ಯಾಜ್ಞವಲ್ಕ್ಯ ಸ್ಮೃತಿ ವರ್ಣ ಜಾತಿ ವಿವೇಕ ಪ್ರಕರಣದಲ್ಲಿ ಬ್ರಾಹ್ಮಣನಿಂದ ಶೂದ್ರ ಹೆಣ್ಣಿನಲ್ಲಿ ಉತ್ಪನ್ನಳಾದ ನಿಷಾಧಿಯನ್ನು ಬ್ರಾಹ್ಮಣನು ಮದುವೆಯಾದರೆ , ಅವಳಲ್ಲಿ ಹುಟ್ಟುವ ಕನ್ಯೆಯನ್ನು ಮತ್ತೆ ಬ್ರಾಹ್ಮಣನೇ ಮದುವೆಯಾದರೆ ಅದರಂತೆ ಮುಂದುವರೆದರೆ ಏಳನೇ ತಲೆಮಾರಿನವರು ಬ್ರಾಹ್ಮಣರಾಗುತ್ತಾರೆ , ಹೀಗೆ ಬ್ರಾಹ್ಮಣ-ವೈಶ್ಯ , ಬ್ರಾಹ್ಮಣ-ಕ್ಷತ್ರಿಯ ಅನುಲೋಮ ರಕ್ತ ಸಂಬಂಧಗಳು ಆರು ಮತ್ತು ಐದನೇ ತಲೆಮಾರಿನಲ್ಲಿ ಬ್ರಾಹ್ಮಣರಾಗುತ್ತವೆ ಎಂದು ಹೇಳಲಾಗಿದೆ. ಸ್ವಾಮಿಗಳು ಮಲಬಾರಿನ ಸಾಮಾಜಿಕ ಸ್ಥಿತಿಗತಿಗಳನ್ನು ವಿವರಿಸುತ್ತ ೨೦/೯/೧೮೯೨ ರಂದು ಬರೆದ ಪತ್ರದಲ್ಲಿ the females, even of the royal family, hold it as high honor to live in concubinage with the Brahmin (ರಾಜಮನೆತನದವರು ಸೇರಿದಂತೆ ಎಲ್ಲ ಹೆಂಗಸರು ಬ್ರಾಹ್ಮಣರ ಉಪಪತ್ನಿಯರಾಗಿರುವುದು ಗೌರವವೆಂದು ಭಾವಿಸುತ್ತಾರೆ’) ಎಂದು ಬರೆದಿದ್ದರು. ಇದು ಮನು ಪ್ರತಿಪಾದಿಸಿದ ಕೆಳವರ್ಣದ ಹೆಣ್ಣುಗಳನ್ನು ದೇಹ ಸುಖಕ್ಕಾಗಿ ಮದುವೆಯಾಗುವ ಬ್ರಾಹ್ಮಣನ ದಿವ್ಯ ಅಧಿಕಾರದಿಂದ ಮೂಡಿಬಂದಿದ್ದ ಪದ್ದತಿಯಾಗಿದ್ದಿತು. ಸ್ವಾಮಿಗಳು ಧರ್ಮಸ್ಮೃತಿಗಳನ್ನು ಅಧ್ಯಯನಶೀಲರಾಗಿ ಓದಿರಲಿಲ್ಲ. ಆಸಕ್ತಿದಾಯಕವೆನಿಸುವ ಒಂದೆರಡು ಶ್ಲೋಕಗಳನ್ನು ನೆನಪಿನಲ್ಲಿರಿಸಿಕೊಂಡು ಭಾಷಣಗಳಲ್ಲಿ ಆಕರ್ಷಕವಾಗಿ ಹೇಳುತ್ತಿದ್ದರಷ್ಟೇ. ಅಮೆರಿಕದಲ್ಲಿರುವಂತೆ ಸಾಮಾಜಿಕ ಕಾನೂನುಗಳು ಎಲ್ಲ ನಾಗರಿಕರಿಗೂ ಒಂದೇ ಎನ್ನುವಂತಹ ಚಿಂತನೆ ಅಥವಾ ದಿಟ್ಟತನ ಸ್ವಾಮಿಗಳಿಗೆ ಇರಲಿಲ್ಲ.
ಪ್ರಬುದ್ಧ ಭಾರತ ಪತ್ರಿಕೆಗಾಗಿ ಗಂಗಾನದಿಯ ಮೇಲೆ ತೇಲುವ ದೊಣಿಯಲ್ಲಿದ್ದ ಸ್ವಾಮಿಗಳನ್ನು ನಿವೇದಿತಾ ಸಂದರ್ಶನ ಮಾಡಿದ್ದಳು. ಆಗ ಬೇರೆ ಧರ್ಮಕ್ಕೆ ಹೋದವರು ಮರಳಿ ಹಿಂದೂ ಧರ್ಮಕ್ಕೆ ಬರುವ ಬಗ್ಗೆ ಸ್ವಾಮಿಗಳ ಅಭಿಪ್ರಾಯ ಕೇಳಿದಾಗ ಹಾಗೆ ಬರುವವರನ್ನು ಶುಧ್ಹೀಕರಣ್ದ ಮೂಲಕ ಒಳಕ್ಕೆ ಕರೆದುಕೊಳ್ಳಬೇಕೆಂದು ತಿಳಿಸಿದರು. ಅವರು ಹಿಂದಕ್ಕೆ ಬಂದಾಗ ಯಾವ ವರ್ಣಕ್ಕೆ ಸೇರುತ್ತಾರೆ ಎನ್ನುವ ಪ್ರಶ್ನೆಗೆ ‘ಮರಳಿ ಬರುವವರಿಗೆ ಅವರು ಹಿಂದೆ ಇದ್ದ ವರ್ಣವೇ ಇದೆ. ಹೊಸದಾಗಿ ಬರುವವರು ಅವರೇ ಒಂದು ವರ್ಣ ಮಾಡಿಕೊಳ್ಳುವರು. ವೈಷ್ಣವರು ಇದನ್ನು ಈಗಾಗಲೇ ಮಾಡಿರುವರು ನೆನಪಿರಲಿ’….’ ಎಂದರು. ಹೊಸದಾಗಿ ಸೇರಿರುವವರು ಯಾರೊಡನೆ ಮದುವೆಯಾಗಬೇಕು ಎಂದಾಗ ‘ ಈಗಿನಂತೆ ತಮ್ಮ ತಮ್ಮೊಳಗೆ ‘ಎನ್ನುವ ಸಿದ್ಧ ಉತ್ತರ ನೀಡಿದರು. ಒಳಕ್ಕೆ ಬರುವವರಿಗೆ ಬೇರೆ , ಬೇರೆ ಹೆಸರುಗಳನ್ನು ಕೊಡುತ್ತೀರಾ ಎಂದು ಕೇಳಿದ್ದಕ್ಕೆ (ಚೆನ್ನಾಗಿ ಯೋಚಿಸಿ ಹೌದು ಅವರಿಗೊಂದು ಹೊಸ ಹೆಸರು ಬೇಕು. ಅದಕ್ಕೆ ಎಷ್ಟೋ ಮಹತ್ವವಿದೆ ಎಂದರು. (ಈ ವಿಷಯವನ್ನು ಅವರು ಮುಂದುವರೆಸಲಿಲ್ಲ) ಎಂದು ನಿವೇದಿತಾ ವರದಿ ಮಾಡಿದ್ದಾಳೆ. (165)
೩/೪/೧೮೯೭ ರಂದು ಮಾರ್ಗರೆಟ್ ನೋಬಲ್’ಗೆ ಬರೆದ ಪತ್ರ ಹಲವು ದೃಷ್ಟಿಯಿಂದ ಇತರ ಪತ್ರಗಳಿಗಿಂತ ವಿಭಿನ್ನವಾಗಿದೆ. ‘ ಶಿಷ್ಟ ವ್ಯಕ್ತಿಯೊಬ್ಬನನ್ನು ನಿನಗೆ ಪರಿಚಯಿಸುವ ಸ್ವಾತಂತ್ರ ಪಡೆದಿದ್ದೇನೆ. ಮಲಬಾರ್ ಪ್ರಾಂತದ ತೀಯ ಎಂಬ ಸಾಧಾರಣ ದರ್ಜೆಯ ಪಂಗಡಕ್ಕೆ ಸೇರಿದ ಈತ ಇಂಗ್ಲೆಂಡ್'ನಲ್ಲಿದ್ದಾನೆ. ಈತ ಬಡವನಾದ್ದರಿಂದ ಹಿಂಸಾಚಾರಕ್ಕೆ ತುತ್ತಾಗಿದ್ದಾನೆ. ರಾಜ್ಯಗಳ ಒಳಾಡಳಿತ ಎಂದು ಭಾರತ ಸರ್ಕಾರ ಇದರಲ್ಲಿ ತಲೆ ಹಾಕಲು ತಿರಸ್ಕರಿಸಿದೆ. ಈ ಜನಗಳ ಒಂದೇ ಭರವಸೆಯೆಂದರೆ ಇಂಗ್ಲೆಂಡ್ ಪಾರ್ಲಿಮೆಂಟ್. ಬ್ರಿಟಿಷ್ ನಾಗರಿಕರ ಮುಂದೆ ಈ ವಿಷಯ ಬರುವಂತೆ ನಿನ್ನಿಂದಾದ ಶಕ್ತಿಯನ್ನೆಲ್ಲ ಉಪಯೋಗಿಸು ‘ ಎಂದಿದ್ದಾರೆ. ತೀಯ ಜನಾಂಗದ ಈ ವ್ಯಕ್ತಿ ಯಾರು ? ಆತ ಇಂಗ್ಲೆಂಡ್’ಗೆ ಹೇಗೆ ಮತ್ತು ಏಕೆ ಹೋಗಿದ್ದನು ? ಆತ ಜಾತಿ ಕಾರಣದಿಂದ ತುಳಿತಕ್ಕೆ ಒಳಗಾಗಿದ್ದನೇ ? ಆತನಿಗೆ ಯಾವ ತೊಂದರೆ ಉಂಟಾಗಿದ್ದಿತು ? ಅದು ವೈಯಕ್ತಿಕವೇ ಅಥವಾ ಸಾಮಾಜಿಕ ಸ್ವರೂಪದ್ದೇ ? ಮುಂತಾದ ಯಾವ ವಿಚಾರಗಳು ನಮಗೆ ತಿಳಿದು ಬರುವುದಿಲ್ಲ. ಸ್ವಾಮಿಗಳ ಜೀವನ ಚರಿತ್ರೆಕಾರರು ಈ ಬಗ್ಗೆ ಮೌನವಾಗಿದ್ದಾರೆ.
ಸ್ವಾಮಿಗಳು ಭಾರತದ ದಲಿತರನ್ನು , ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಕೆಲಸಕ್ಕೆ ಮುಂದಾಗುವಂತೆ ತಮ್ಮ ಶಿಷ್ಯರಿಗೆ ಪ್ರಚೋದಕ ಪತ್ರಗಳನ್ನು ಬರೆದು , ಅದಕ್ಕಾಗಿ ತಮಗೆ ತರುಣ ಸಂನ್ಯಾಸಿಗಳ ಒಂದು ದಂಡೇ ಬೇಕಾಗಿದೆ ಎನ್ನುತ್ತಿದ್ದರು. ೧೯/೩/೧೮೯೪ ರಾಮಕೃಷ್ಣಾನಂದ ,೧೯/೧೧/೯೪ ಮತ್ತು ೯/೯/೧೮೯೫ ಅಳಸಿಂಗ ಪೆರುಮಾಳ್, ೩/೧/೧೮೯೫ ಸುಬ್ರಮಣ್ಯ ಅಯ್ಯರ್ ಮತ್ತು ಸೆಪ್ಟೆಂಬರ್ ೧೮೯೫ ರಂದು ಬ್ರಹ್ಮಾನಂದರಿಗೆ ಬರೆದ ಖಂಡಿಸುವ , ಕೆರಳಿಸುವ ಪತ್ರಗಳಲ್ಲಿ ಇದ್ದುದೇ ಇದೇ ವಿಷಯ. ಬ್ರಹ್ಮಾನಂದರಿಗೆ ಬರೆದ ಪತ್ರದಲ್ಲಿ ಮಲಬಾರಿನಲ್ಲಿ ರಾಜ ಬ್ರಾಹ್ಮಣ ಪುರೋಹಿತರ ಗುಲಾಮನಾಗಿದ್ದಾನೆ ಎಂದು ತಿಳಿಸಿ ಬದಲಾವಣೆ ಬೇಕು ಎಂದು ಆವೇಶಗೊಂಡಿದ್ದರು. ಬಾಲ್ಯವಿವಾಹ , ಅಶ್ವಮೇಧ ಯಾಗಗಳನ್ನು ಹಿಗ್ಗಾಮುಗ್ಗ ಖಂಡಿಸಿದ್ದರು. ಸ್ವಾಮಿಗಳು ತಾವು ಪ್ರತಿಪಾದಿಸುತ್ತಿದ್ದ ತತ್ತ್ವಗಳನ್ನು ಅನುಷ್ಠಾನಕ್ಕೆ ತರಲು ಇದೊಂದು ಒಳ್ಳೆಯ ಸುವರ್ಣಾವಾಕಾಶವಾಗಿದ್ದಿತು. ಮಾರ್ಗರೆಟ್ ನೋಬಲ್’ಗೆ ಪತ್ರ ಬರೆದು ಇಂಗ್ಲೆಂಡ್ ಪಾರ್ಲಿಮೆಂಟ್ ಮೂಲಕ ಅದಕ್ಕೆ ಪರಿಹಾರ ಹುಡುಕುವ ಬದಲು ಸ್ವಾಮಿಗಳು ನೇರವಾಗಿ ತಾವೇ ತಿರುವಾಂಕೂರಿನ ರಾಜ ಮೂಲ ಮೂಲಂ ತಿರುನಾಳ್ ರಾಮವರ್ಮ ( ೧೮೫೭-೧೯೨೪) ಅಥವಾ ಕೊಚ್ಚಿಯ ರಾಜ ರಾಮವರ್ವ-೨೫ ಇವರಿಗೆ ಪತ್ರ ಬರೆದು ಹಿಂದೂ ಧರ್ಮದಲ್ಲಿರುವ ಜಾತಿ ಮೂಲದ ಅಸಮಾನತೆಯನ್ನು ಕಿತ್ತೊಗೆಯಲು ಸಲಹೆ ನೀಡಬಹುದಾಗಿದ್ದಿತು. ಹಾಗೆ ಮಾಡುವಂತೆ ಒತ್ತಾಯಿಸಬಹುದಾಗಿದ್ದಿತು. ಸಂಪ್ರದಾಯವಾದಿಗಳ ಹಿಡಿತದಲ್ಲಿದ್ದ ಈ ರಾಜರುಗಳು ತಮ್ಮ ಮಾತುಗಳನ್ನು ಕೇಳುವುದಿಲ್ಲ ಎಂದು ಸ್ವಾಮಿಗಳಿಗೆ ಗೊತ್ತಿದ್ದಿತು. ಆದ್ದರಿಂದ ಸಮಸ್ಯೆಯನ್ನು ಪರಿಹರಿಸಲು ತಾವೇ ಕಣಕ್ಕೆ ಇಳಿಯುವ ಬದಲು ಅದನ್ನು ಮಾರ್ಗರೆಟ್ ನೋಬಲ್’ಗೆ ಆ ಮೂಲಕ ಇಂಗ್ಲೆಂಡ್ ಸಂಸತ್ತಿಗೆ ವರ್ಗಾಯಿಸಿದ್ದರು. ಸ್ವಾಮಿಗಳು ಭಾವತೃಪ್ತಿಗಾಗಿ ಆಗಿಂದಾಗ್ಗೆ ತುಳಿತಕ್ಕೆ ಒಳಗಾದವರ ಪರವಾಗಿ ಆವೇಶದ ಮಾತುಗಳನ್ನು ಆಡುತ್ತಿದ್ದರಷ್ಟೇ.
ಸ್ವಾಮಿಗಳ ಈ ಚಿಂತನೆಗಳನ್ನು ನೋಡಿದರೆ ಹಿಂದೂ ಸಮಾಜದ ಸಮಸ್ಯೆಗಳನ್ನು ಮುಖಾಮುಖಿಯಾಗಿ ಎದುರಿಸದೆ ಜನ ಮನ್ನಣೆ ಅಥವಾ ತೆಗಳಿಕೆ ಎರಡರಿಂದಲೂ ಅವರು ತಪ್ಪಿಸಿಕೊಂಡರು. ಯಾವ ಸಾಮಾಜಿಕ ಸಮಸ್ಯೆಯನ್ನೂ ವಾಸ್ತವ ನೆಲೆಯಲ್ಲಿ ಎದುರಿಸಲಾರದ ಅಧ್ಯಾತ್ಮಿಕ ಮುಂದಾಳು ಯಾವಾಗಲೂ ಕೀರ್ತಿಶಾಲಿಯೇ ಆಗಿರುತ್ತಾನೆ. ಏಕೆಂದರೆ ಆತ ಹೇಳುವ ಬೋಧನೆ ಸಮಾಜದ ಎಲ್ಲ ಸ್ತರಗಳನ್ನು ಯಥಾಸ್ಥಿತಿಯಲ್ಲಿಯೇ ಇಟ್ಟಿರುತ್ತದೆ. ಅದು ಯಾರ ಹುಸಿ ಮೇಲರಿಮೆಗೂ ಧಕ್ಕೆ ತರುವುದಿಲ್ಲ ಮತ್ತು ಯಾರನ್ನೂ ಎದುರು ಹಾಕಿಕೊಳ್ಳುವುದಿಲ್ಲ.
ಭಾರತ ಮತ್ತು ಹಿಂದೂ ಸಮಾಜ ಹಿಂದುಳಿದಿರುವ ಮುಖ್ಯ ಕಾರಣಗಳಲ್ಲಿ ಬಾಲ್ಯವಿವಾಹವೂ ಒಂದೆಂದು ಸ್ವಾಮಿಗಳು ಗುರುತಿಸಿದ್ದರು. ವೈಕುಂಠನಾಥ ಸನ್ಯಾಲ ತನ್ನ ಸಣ್ಣ ಮಗಳ ಮದುವೆಗೆ ಹೆಣಗುತ್ತಿರುವುದನ್ನು ಗಂಡು ಹುಡುಕುತ್ತಿರುವುದನ್ನು ಖಂಡಿಸುತ್ತ ಸಣ್ಣ ಮಕ್ಕಳಿಗೆ ಮದುವೆ ಮಾಡಿಸಲು ಗಂಡು ಹುಡುಕುತ್ತಿರುವವರನ್ನು ಕೊಲ್ಲಲೂ ನಾನು ಹೇಸುವುದಿಲ್ಲ ಎಂದು ಸ್ವಾಮಿಗಳು ಶಾರದಾನಂದನಿಗೆ ತಿಳಿಸಿದ್ದರು. (೨೩/೧೨/೧೮೯೫). ತಮ್ಮ ಮದ್ರಾಸಿನ ಶಿಷ್ಯರಿಗೆ ಬರೆದ ಪತ್ರಗಳಲ್ಲಿ ಈ ಅನಿಷ್ಟ ಕುರಿತಾಗಿ ಕೆಂಡ ಕಾರಿದ್ದರು. ಮನ್ಮಥನಾಥ ಭಟ್ಟಾಚಾರ್ಯನಿಗೆ ಬರೆದ ಪತ್ರದಲ್ಲಿ ಅಮೆರಿಕದ ಹೆಂಗಸರು ೨೫ ವಯಸ್ಸಿನವರೆಗೆ ಮದುವೆಯಾಗದೆ ಸ್ವತಂತ್ರರಾಗಿವುದನ್ನು ಮೆಚ್ಚುಗೆಯಲ್ಲಿ ತಿಳಿಸಿದ್ದರು. ಇದಕ್ಕೆ ತದ್ವಿರುದ್ಧವಾಗಿ ಪಸಡೆನದಲ್ಲಿ ಮಾಡಿದ ಭಾಷಣದಲ್ಲಿ ನವಿರಾಗಿ , ಪರೋಕ್ಷವಾಗಿ ಬಾಲ್ಯ ವಿವಾಹವನ್ನು ಸಮರ್ಥಿಸಿದ್ದರು. ಸ್ವಾಮಿಗಳು ಬಾಲ್ಯ ವಿವಾಹವನ್ನು ಸಮರ್ಥಿಸುವುದು ಇದು ಮೊದಲ ಬಾರಿಯೇನೂ ಆಗಿರಲಿಲ್ಲ. ಲಂಡನ್’ನಲ್ಲಿ ನೀಡಿದ ‘ಮಾಯೆ ಮತ್ತು ಭ್ರಮೆ’ ಎನ್ನುವ ಉಪನ್ಯಾಸದಲ್ಲಿ ಸಮಾಜ ಸುಧಾಣೆಯ ಹಲವು ಯತ್ನಗಳನ್ನು ವಿಶ್ಲೇಷಿಸುತ್ತ ‘ಹಿಂದೂ ಧರ್ಮದಲ್ಲಿ ಉತ್ತಮ ಪಾತಿವ್ರತ್ಯದ ಆದರ್ಶ ಕಾಪಾಡಲು ಬಾಲ್ಯ ವಿವಾಹಕ್ಕೆ ಅನುಮತಿ ಕೊಡಲಾಗಿದೆ. ಕಾಲಕ್ರಮೇಣ ಇದು ಜನಾಂಗವನ್ನು ಅಧೋಗತಿಗೆ ತಂದಿದೆ. ಬಾಲ್ಯ ವಿವಾಹ ಆಚರಣೆಯಲ್ಲಿರುವ ಜನಾಂಗದಲ್ಲಿ ಹೆಚ್ಚು ಪಾವಿತ್ರ್ಯವಿದೆ ಎನ್ನುವುದನ್ನು ನಾನು ಒಪ್ಪದೇ ಇರಲಾರೆ. ನಿಮಗೆ ಏನು ಬೇಕು ? ಜನಾಂಗದಲ್ಲಿ ಚಾರಿತ್ಯ್ರ ಶುದ್ಧಿ ತರಬೇಕೆಂದರೆ ಗಂಡು , ಹೆಣ್ಣುಗಳನ್ನು ಬಾಲ್ಯ ವಿವಾಹದಿಂದ ದುರ್ಬಲಗೊಳಿಸುವಿರಿ. ಆದರೆ ಇಂಗ್ಲೆಂಡ್’ನಲ್ಲಿ ನೀವು ಅದಕ್ಕಿಂತ ಮೇಲಾಗಿರುವಿರಾ ? ಇಲ್ಲ. …….ತಂದೆ ತಾಯಿಗಳು ಮಕ್ಕಳಿಗೆ ವರ, ವಧುಗಳನ್ನು ಆರಿಸಿದರೆ ಈ ದುಃಖ ತಗ್ಗಿಸಬಹುದು. ಭಾರತದ ಹೆಂಗಸರು ಭಾವುಕತೆಗಿಂತ ಹೆಚ್ಚು ವಸ್ತುನಿಷ್ಟರು. ಆದರೆ ಅವರ ಜೀವನದಲ್ಲಿ ಕಲ್ಪನೆಗೆ ಅವಕಾಶವಿಲ್ಲ. ಸಾಧಾರಣವಾಗಿ ಭಾರತದ ಹೆಂಗಸು ಸುಖವಾಗಿರುವಳು. ಗಂಡ ಹೆಂಡತಿ ನಡುವೆ ಅಷ್ಟೊಂದು ಮನಸ್ತಾಪ ಇಲ್ಲ. ಆದರೆ ಎಲ್ಲರಿಗಿಂತ ಹೆಚ್ಚು ಸ್ವಾತಂತ್ರವಿರುವ ಅಮೆರಿಕದಲ್ಲಿ ವಿರಸದ ಮದುವೆಗಳಿಗೆ ಲೆಕ್ಕವಿಲ್ಲ…. ಎಂದಿದ್ದರು. (166)
೩/೩/೧೮೯೪ ರಂದು ಕಿಡಿಗೆ ಹೆಂಗಸರಿಗೆ ವಿದ್ಯಾಭ್ಯಾಸ ಒದಗಿಸುವುದಷ್ಟೇ ನನ್ನ ಕೆಲಸ. ಅದೊಂದನ್ನು ಒದಗಿಸಿದರೆ ಅವರು ತಮ್ಮ ವಿಷಯಗಳ ಬಗ್ಗೆ ತಾವೇ ಸ್ವತಂತ್ರ ನಿರ್ಧಾರ ತಳೆಯುತ್ತಾರೆ ಎಂದು ತಿಳಿಸಿದ್ದರು. ಅಂತಹ ವಿದ್ಯಾಭ್ಯಾಸ ದಕ್ಕಿದ್ದರಿಂದಲೇ ಅಮೆರಿಕದ ಹೆಂಗಸರು ತಮ್ಮದೇ ಆದ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಅಮೆರಿಕದಲ್ಲಿ ಸ್ವಾಮಿಗಳಿಗೆ ನೆರವಾಗುತ್ತಿದ್ದ ಹೆಂಗಸರು ಅವರ ಅಪ್ಪ , ಗಂಡಂದಿರ ಒಪ್ಪಿಗೆಯನ್ನೇನೂ ಪಡೆದಿರಲಿಲ್ಲ. ಸ್ವಾಮಿಗಳಿಗೆ ವಸತಿ ಒದಗಿಸಿದ , ನೆರವಾದ ಹಲವು ಹೆಂಗಸರ ಗಂಡಂದಿರ ಹೆಸರು ಹೊರತು ಮತ್ತೇನೂ ತಿಳಿಯುವುದಿಲ್ಲ. ತಮ್ಮ ನೆರವಿಗಾಗಿ ನಾಲ್ಕು ವರ್ಷದ ಮಗಳನ್ನು ಮನೆಯಲ್ಲಿ ಬಿಟ್ಟು , ಗಂಡ, ಮನೆಯ ಬಗ್ಗೆ ಸ್ವಲ್ಪವೂ ಚಿಂತಿಸದೆ ಒಂದೂವರೆ ತಿಂಗಳುಗಳ ಕಾಲ ತಮ್ಮೊಂದಿಗಿದ್ದ ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ಸ್ವಾತಂತ್ರದ ಬಗ್ಗೆ ಸ್ವಾಮಿಗಳು ಏನೂ ಹೇಳುವುದಿಲ್ಲ. ಏಕೆಂದರೆ ಆಕೆ ತಮ್ಮ ಶಿಷ್ಯೆ. ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ಗಂಡ ಮನೆ ಕೆಲಸ ಬಿಟ್ಟು ಈ ಹಿಂದೂ ಸಂನ್ಯಾಸಿಯ ಹಿಂದೆ ಏಕೆ ಅಲೆಯುತ್ತಿಯಾ ಎಂದು ಕೇಳಿದ್ದರೆ ಏನಾಗುತ್ತಿದ್ದಿತು ? ಮನಸ್ತಾಪ. ಸ್ವಾಮಿಗಳು ಅನುಕೂಲಕ್ಕೆ ತಕ್ಕಂತೆ ಬಾಲ್ಯ ವಿವಾಹ , ಹೆಣ್ಣಿನ ಸ್ವಾತಂತ್ರ ಮುಂದಾವುಗಳ ಬಗ್ಗೆ ಮಾತನಾಡುತ್ತಿದ್ದರೇ ಹೊರತು ಯಾವುದೇ ನಿರ್ದಿಷ್ಟ ಚಿಂತನಾ ಸೂತ್ರವಿರಲಿಲ್ಲ. ಭಾರತದ ವಿಷಯಕ್ಕೆ ಬಂದಾಗ ವಿದ್ಯಾವಂತ ಹೆಂಗಸು ಮೀರಾಬಾಯಿ , ಮೈತ್ರೇಯಿ , ಲೀಲಾವತಿಯರ ಆದರ್ಶ ಸೂಚಿಸುತ್ತಿದ್ದರು.
ಶಿಷ್ಯ ಶರತ್ ಚಂದ್ರ ಚಕ್ರವರ್ತಿ ಸಮಾಜ ಸುಧಾರಣೆಯ ಬಗ್ಗೆ ಕೆಲವು ಸಲಹೆಗಳನ್ನು ಕೊಡುವಂತೆ ಸ್ವಾಮಿಗಳನ್ನು ಕೇಳಿದಾಗ ‘ ಮನು ಧರ್ಮಶಾಸ್ತ್ರ ಮುಂತಾದವುಗಳನ್ನು ಅಧ್ಯಯನ ಮಾಡಿ , ಅವುಗಳ ತಳಹದಿಯನ್ನು ಅಲುಗಿಸದೆ ಆಧುನಿಕ ಕಾಲಕ್ಕೆ ತಕ್ಕಂತಹ ಭಾವನೆಗಳನ್ನು ಸೇರಿಸಿ , ಇಡೀ ಭಾರತ ಅನುಸರಿಸುವಂತಹ ಸ್ಮೃತಿಯನ್ನು ಬರೆ. ನಾನು ಅದನ್ನು ತಿದ್ದಿಕೊಡುತ್ತೇನೆ’ ಎಂದರು. ಸ್ಮೃತಿಗಳನ್ನು ಅಲುಗಿಸದಿರುವುದು ಎಂದರೆ ಬ್ರಾಹ್ಮಣನೇ ಶ್ರೇಷ್ಟ. ಉಳಿದೆಲ್ಲವದೂ ಆತನ ಸೇವೆಗೆ ಸೃಷ್ಟಿಯಾಗಿರುವುದು ಎನ್ನುವ ಮೂಲವನ್ನು ಪ್ರಶ್ನಿಸದಿರುವುದೇ ಆಗಿದೆ. ಸ್ವಾಮಿಗಳಿಗೆ ಮುಂದುವರೆದ ದೇಶಗಳಲ್ಲಿರುವ ನಾಗರಿಕ ಕಾನೂನುಗಳ ಅಧ್ಯಯನ , ಅವುಗಳನ್ನು ಭಾರತಕ್ಕೆ ಹೊಂದುವಂತೆ ಅಳವಡಿಸಿಕೊಂಡು ಹೊಸಸ್ಮೃತಿಯನ್ನು (ಸಂವಿಧಾನ) ಬರೆಯುವ ಅಗತ್ಯವಿದೆ , ಅದು ಸಂನ್ಯಾಸಿಯೊಬ್ಬನಿಂದ ಆಗುವಂತಹುದಲ್ಲ ಎನ್ನುವ ಇತಿ ಮಿತಿಯ ತಿಳಿವಳಿಕೆಗಳೂ ಇರಲಿಲ್ಲ.
ಶ್ರೀಮತಿ ಮೃಣಾಲಿನಿ ಬಸು ಸ್ವಾಮಿಗಳು ತ್ಯಾಗ ಮತ್ತು ಸಂನ್ಯಾಸವನ್ನು ಒತ್ತಿ ಒತ್ತಿ ಹೇಳುತ್ತಿದ್ದುದನ್ನು ಒಪ್ಪದೆ , ಭಾರತದ ಸಾಮಾಜಿಕ ಸ್ಥಿತಿ ಗತಿಗಳ ಸುಧಾರಣೆಗೆ ತಮ್ಮದೇ ಆದ ಚಿಂತನೆಗಳನ್ನು ತಿಳಿಸಿದ್ದರೆಂದು ಕಾಣುತ್ತದೆ. ಅದಕ್ಕೆ ೨೩/೧೨/೧೮೯೮ ರಂದು ಮತ್ತು ೩/೧/೧೮೯೯ ರಂದು ಸ್ವಾಮಿಗಳು ಉತ್ತರಿಸಿದ್ದರು. ಈ ಪತ್ರಗಳಲ್ಲಿದ್ದ ಉತ್ತರಗಳು ಅವರು ಎಂದಿನಂತೆ ಕೊಡುತ್ತಿದ್ದ ಅಧ್ಯಾತ್ಮ ಲೇಪಿತ ಕಾಲ್ಪನಿಕ ಪರಿಹಾರಗಳಿಗಿಂತ ಹೆಚ್ಚು ಭಿನ್ನವಾಗಿದ್ದವು. ‘ಒಬ್ಬನಿಗಾಗಿ ಆತ್ಮ ತ್ಯಾಗ ಮಾಡುವುದಕ್ಕಾದರೆ ಆಗ ಸಮಾಜಕ್ಕಾಗಿ ಆತ್ಮ ತ್ಯಾಗದ ಮಾತು ಸರಿ ಅದಕ್ಕೆ ಮುಂಚೆ ಅಲ್ಲ. ಸಕಾಮದಿಂದ ನಿಷ್ಕಾಮ. ಕಾಮವಿಲ್ಲದೆ ನಿಷ್ಕಾಮ ಎಂದರೇನು ‘ ಎಂದು ಪತ್ರದ ಆಶಯವನ್ನು ಒತ್ತಿ ಹೇಳಿದ್ದರು. ಇನ್ನೂ ಮುಂದುವರೆದು ‘ ……. ನಿಯಮ , ಶಿಕ್ಷೆ , ಶಾಸನಗಳ ಮೂಲಕ ವ್ಯಕ್ತಿಯನ್ನು ಸಮಾಜದ ಅಧೀನಕ್ಕೆ ಒಳಪಾಡಿಸುವುದು , ದಾಸ್ಯ , ಬಲಾತ್ಕಾರದಿಂದ ಆತ್ಮಾರ್ಪಣೆ ಇವುಗಳ ಫಲ ಮತ್ತು ಪರಿಣಾಮಗಳಿಗೆ ಭಾರತವೇ ಅತ್ಯುತ್ತಮ ಉದಾಹರಣೆ. ….. ಎಲ್ಲ ಕೆಲಸಗಳನ್ನು ಜನ ಹೇಗೆ ಮಾಡುತ್ತಾರೆ ಎಂದರೆ ಪ್ರಾಣವಿಲ್ಲಸ ಯಂತ್ರದಂತೆ. ಅದರಲ್ಲಿ ಮಾನಸಿಕ ಒಳಗೊಳ್ಳುವಿಕೆಯಿಲ್ಲ , ಹೃದಯ ವಿಕಾಸವಿಲ್ಲ, ಚೇತನದ ಚಿಹ್ನೆಯಿಲ್ಲ, ಅಶಾ ತರಂಗವಿಲ್ಲ , ತೀವ್ರ ಸುಖಾನುಭೂತಿಯಿಲ್ಲ, ನಿಕಟ ದುಃಖಸ್ಪರ್ಶವಿಲ್ಲ, ಹೊಸ ವಿಚಾರಗಳನ್ನು ಕಂಡುಹಿಡಿಯಬೇಕೆಂಬ ಬುದ್ಧಿ ವೈಭವದ ಚಲನೆಯಿಲ್ಲ , ಹೊಸತನದ ಇಚ್ಛೆಯಿಲ್ಲ, ನವೀನ ವಸ್ತುಗಳ ಆದರಣೆಯಿಲ್ಲ, . ಇಂತಹ ಈ ಮನಸ್ಸನ್ನು ಕವಿದಿರುವ ಮೋಡಗಳು ಚದುರುವುದೇ ಇಲ್ಲ ……ಪ್ರಯತ್ನದಿಂದಲೂ , ಬಲಾತ್ಕಾರದಿಂದಲೂ ಪ್ರೀತಿ ಹುಟ್ಟುವುದೇ ? ನಿತ್ಯ ತಿರುಕನ ತ್ಯಾಗದಲ್ಲಿ ಹೆಚ್ಚುಗಾರಿಕೆ ಯಾವುದು ? ನಪುಂಸಕನ ಇಂದ್ರಿಯ ನಿಗ್ರಹ ಪುಣ್ಯವೇನು ? ಭಾವಹೀನ , ಹೃದಯಹೀನ , ಉನ್ನತ ಅಶಾರಹಿತ ಸಮಾಜ ಎಂದರೆ ಏನು ಎಂದು ತಿಳಿಯದ ಮೂರ್ಖನ ತ್ಯಾಗ ಎಂತಹುದು ? ಬಲಾತ್ಕಾರದಲ್ಲಿ ಸತಿಯಾಗಿಸುವಲ್ಲಿ ಆಕೆಯ ಪರಿ ಭಕ್ತಿ ಎಂತಹುದು ? ಮೂಢ ನಂಬಿಕೆಯ ಮೂಲಕ ಜನರಿಂದ ಪುಣ್ಯ ಕೆಲಸಗಳನ್ನು ಏಕೆ ಮಾಡ್ಶಿಸಬೇಕು ? ಅವರನ್ನು ಸ್ವತಂತ್ರರನ್ನಾಗಿ ಮಾಡಿ , ಜನಗಳ ಬಂಧನಗಳನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿ ಎಂದು ನಾನು ಹೇಳುತ್ತೇನೆ. ಕೊಳೆಯಿಂದ ಕೊಳೆಯನ್ನು ತೆಗೆಯಲು ಸಾಧ್ಯವೇ?.......’ ಎಂದಿದ್ದರು.
ಸ್ವಾಮಿಗಳ ಈ ಎಲ್ಲ ಮಾತುಗಳಲ್ಲಿ ಯಾವುವೂ ಹೊಸವಾದುವಲ್ಲ. ಬಹು ಹಿಂದೆಯ ಸಮಾಜ ಸುಧಾರಕರು ಇದನ್ನೇ ಹೇಳಿದ್ದರು., ಕ್ರೈಸ್ತ ಪಾದ್ರಿಗಳು ಇವೇ ಅಂಶಗಳನ್ನು ಪ್ರಸ್ತಾಪಿಸುತ್ತಿದ್ದರು. ಸ್ವಾಮಿಗಳು ಇವೆರೆಲ್ಲರನ್ನೂ ಒಪ್ಪದೆ , ಈ ಹಿಂದಿನ ವ್ಯವಸ್ಥೆಯನ್ನು ಬದಲಿಸಿದೇ ನಾನು ಅಧ್ಯಾತ್ಮ ಜಾಗೃತಿಯಿಂದ ಸಮಾಜವನ್ನು ಸುಧಾರಿಸುತ್ತೇನೆ ಎನ್ನುತ್ತಿದ್ದರು. ಆದರೆ ಇಲ್ಲಿ ಅವರ ಅಭಿಪ್ರಾಯಗಳತ್ತ ಸರಿದಿದ್ದರು.
ಸ್ವಾಮಿಗಳ ಸಮಾಜ ಸುಧಾರಣೆಯ ಚಿಂತನೆಗಳನ್ನು ಘಟನೆಯೊಂದರ ಉಲ್ಲೇಖದ ಮೂಲಕ ಮುಗಿಸಬಹುದು. ಸ್ವಾಮಿಗಳು ತಮ್ಮ ಶಿಷ್ಯ ಶರತ್ ಚಂದ್ರ ಚಕ್ರವರ್ತಿಯೊಂದಿಗೆ ವೇದಾಂತದ ಬಗ್ಗೆ ಮಾತನಾಡುತ್ತಿದ್ದಾಗ ಗಿರೀಶ್’ಚಂದ್ರ ಘೊಷ್ ಬಂದು ವೇದ , ವೇದಾಂತ ಬೇಕಾದಷ್ಟಿದೆ. ಈಗ ನಮಗೆ ಎದುರಾಗಿರುವ ಸಾಮಾಜಿಕ ಸಂಕಷ್ಟಗಳಿಗೆ ಅವುಗಳಲ್ಲಿ ಯಾವುದಾದರೂ ಪರಿಹಾರವಿದೆಯೇ ಎಂದು ಪ್ರಶ್ನಿಸುತ್ತ ಅವುಗಳನ್ನು ವಿವರಿಸಿದರು. ಆಗ ಸ್ವಾಮಿಗಳು ಮಾತು ಹೊರಡದೆ ಕಣ್ಣೀರು ಹಾಕಿ ಹೊರಗೆ ಹೊರಟರು.(167)
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ಹಿಂದೂ ಸಮಾಜದ ದುಸ್ಥಿತಿಯನ್ನು ಕಂಡು ಸ್ವಾಮಿಗಳಿಗೆ ಕಸಿವಿಸಿಯಾಗಿದ್ದಿತೆನ್ನುವುದು ಅವರ ಭಾಷಣಗಳು , ಪತ್ರಗಳು , ಮಾತುಕತೆಗಳು ಯಾವುದೇ ಸಂಶಯವಿಲ್ಲದೆ ಸಾಬೀತುಪಡಿಸುತ್ತವೆ. ವಿಧವೆಯರ ಕಣ್ಣೀರು ಒರೆಸದ , ಬಡವನ ಹೊಟ್ಟೆ ತುಂಬಿಸದ ಧರ್ಮ ಮತ್ತು ಆ ನಿಟ್ಟಿನಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ಸ್ವಾಮಿಗಳು ನೀಡಿರುವ ಕೆಲವು ಹೇಳಿಕೆಗಳು ಪುಳಕಗೊಳಿಸುವಂತೆ ಇವೆಯಾದರೂ ಅವು ಸ್ವಾಮಿಗಳ ಒಟ್ಟಾರೆ ದೃಷ್ಟಿ , ಪ್ರತಿಪಾದಿಸಿದ ಮಾರ್ಗಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನೇನೂ ಒದಗಿಸುವುದಿಲ್ಲ. ಅವುಗಳನ್ನು ಭಾಷಣಗಳಲ್ಲಿ ಮೆರುಗು ತರಲು ಬಳಸಬಹುದಷ್ಟೇ. ಸ್ವಾಮಿಗಳು ಹಿಂದೂ ಸಮಾಜ ಅನಕ್ಷರಸ್ಥತೆ , ಬಡತನ , ಬಾಲ್ಯ ವಿವಾಹ, ಜಾತೀಯತೆ, ನಿಷ್ಕ್ರಿಯತೆಯಿಂದಾಗಿ ಹಿಂದುಳಿದಿದೆ ಎಂದು ಗುರುತಿಸಿದ್ದರು. ಸಮಯ , ಸನ್ನಿವೇಶಗಳಿಗೆ ಅನುಗುಣವಾಗಿ ಇವುಗಳೊಂದಿಗೆ ಬೇರೆ ಅಂಶಗಳು ಸೇರುತ್ತಿದ್ದವು. ಪ್ರಾಚೀನ ವೈದಿಕ ಭಾರತದ ಸಮಾಜ ಸರ್ವಶ್ರೇಷ್ಟವಾಗಿದ್ದಿತು. ಅಲ್ಲಿ ವ್ಯಕ್ತಿ ಸಮಾನತೆ ಮತ್ತು ಸಮಾಜದ ಸಮಷ್ಟಿ ಈ ಎರಡರ ವಿಕಸನಕ್ಕೂ ಅವಕಾಶಗಳಿದ್ದವು. ಅಲ್ಲಿ ತಾರತಮ್ಯವಿರಲಿಲ್ಲ. ಕಾಲಾನುಕ್ರಮದಲ್ಲಿ ಅದು ಸಡಿಲಗೊಂಡು ಆಧುನಿಕ ಜಾತಿ ಪದ್ದತಿ ಬಂದಿತು. ಗುಣವೇ ಮೌಲ್ಯವಾಗಿದ್ದ ಆ ಕಾಲದ ವರ್ಣ , ಜಾತಿ, ಆಶ್ರಮ ಮುಂತಾದ ಪರಿಕಲ್ಪನೆಗಳನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲಿಸಿ ಮತ್ತೊಮ್ಮೆ ಜಾರಿಗೆ ತಂದದ್ದೇ ಅದರೆ ಭಾರತದ ಏಳ್ಗೆ ಸಾದ್ಯ. ಈ ಏಳ್ಗೆಯ ಮೂಲದಲ್ಲಿ ಧರ್ಮ ಹಾಸುಹೊಕ್ಕಾಗಿರುತ್ತದೆ ಎನ್ನುವುದು ಸ್ವಾಮಿಗಳ ಒಟ್ಟು ಚಿಂತನೆಯಾಗಿದ್ದಿತೆಂದು ಸ್ಥೂಲವಾಗಿ ಗುರುತಿಸಬಹುದು. ಬುದ್ಧನಿಂದ ಪ್ರಾರಂಭಿಸಿ ಆಧುನಿಕ ಕಾಲದ ಎಲ್ಲ ಸಮಾಜ ಸುಧಾರಕರು ಮಾನವನ ಸಮಾನತೆಯನ್ನು ಒಪ್ಪದ , ಹುಟ್ಟಿದ ಜಾತಿಯ ಮೂಲಕವೇ ವ್ಯಕ್ತಿಯ ಶ್ರೇಷ್ಟತೆಯನ್ನು ಗುರುತಿಸುವ ಪರಂಪರೆಯೇ ಹಿಂದೂ ಧರ್ಮದ ಮೊದಲ ಶತ್ರು ಎನ್ನುವುದನ್ನು ಎರಡನೆಯ ಮಾತಿಲ್ಲದೆ ಒಪ್ಪಿಕೊಂಡಿದ್ದರು. ಇದೇ ಅವರೆಲ್ಲರ ಖಡಾಖಂಡಿತ ನಿಲುವಾಗಿದ್ದಿತು. ಇದೇ ಸ್ವಾಮಿಗಳಿಗೂ ಇತರ ಸಮಾಜ ಸುಧಾರಕರಿಗೂ ಇದ್ದ ಪ್ರಮುಖ ವ್ಯತ್ಯಾಸ. ಸ್ವಾಮಿಗಳು ಹಲವು ಸಲ ಇದೇ ನಿಲುವಿಗೆ ಅಂಟಿಕೊಂಡಿದ್ದಾರಾದರೂ ಅದರಲ್ಲಿ ಧೃಡತೆಯಿರಲಿಲ್ಲ. ಅವಕಾಶ ಸಿಕ್ಕಿದಾಗ ಈ ನಿಲುವನ್ನು ಬದಲಾಯಿಸುವುದು ಸಾಮಾನ್ಯವಾಗಿದ್ದಿತು, ಕೆಲವು ಸಲ ಸ್ವಾಮಿಗಳ ಒಳಗಿನಿಂದ ತಾವು ಶ್ರೇಷ್ಟ ಜಾತಿಯವರೆಂಬ ಹೆಮ್ಮೆ ಎದ್ದು ಹೊರಬರುತ್ತಿದ್ದಿತು.
ಸ್ವಾಮಿಗಳಿಂದ ದೀಕ್ಷೆ ಪಡೆದಿದ್ದ ಹರಿಪದ ಮಿತ್ರನ ಹೆಂಡತಿ ಶ್ರೀಮತಿ ಇಂದುಮತಿ ಮಿತ್ರ ಸ್ವಾಮಿಗಳಿಗೆ ಬರೆದ ಪತ್ರ ತಲುಪಿದ್ದಿತು. ಅದರಲ್ಲಿ ಶ್ರೀಮತಿ ಇಂದುಮತಿ ಬಂಗಾಳಿ ಪದ್ದತಿಗೆ ಅನುಗುಣವಾಗಿ ತಮ್ಮ ಹೆಸರಿನ ಮುಂದೆ ದಾಸಿ ಎಂದು ಸಹಿ ಮಾಡಿದ್ದಳು. ( ಸ್ವಾಮಿಗಳ ತಾಯಿ ಭುವನೇಶ್ವರಿ ತನ್ನ ಹೆಸರಿನ ಮುಂದೆ ದಾಸಿ ಎಂದೇ ಸಹಿ ಮಾಡುತ್ತಿದ್ದಳು) . ಇದನ್ನು ಗಮನಿಸಿದ ಸ್ವಾಮಿಗಳು ‘ಪ್ರತಿ ದಿನ ಅವಕಾಶ ದಕ್ಕಿದಾಗ ಗೀತೆ ಓದಿರಿ. ದಾಸಿ ಎಂದು ನೀವೇಕೆ ಸಹಿ ಮಾಡುವಿರಿ ? ವೈಶ್ಯರು ಮತ್ತು ಶೂದ್ರರು ಮಾತ್ರ ದಾಸ , ದಾಸಿಯೆಂದು ಸಹಿ ಮಾಡಬೇಕು. ಆದರೆ ಬ್ರಾಹ್ಮಣರು , ಕ್ಷ್ಯತ್ರಿಯರು ದೇವ , ದೇವಿ ಎಂದು ಬರೆಯಬೇಕು. ಜಾತಿಭೇದ ಮುಂತಾದವನ್ನು ಈಗಿನ ಕಾಲದ ಕಪಟಿ ಬ್ರಾಹ್ಮಣರು ಕಂಡು ಹಿಡಿದರು. ಯಾರು ಯಾರಿಗೆ ಆಳು . ಎಲ್ಲರೂ ಹರಿಯ ದಾಸರು. ಅದ್ದರಿಂದ ಹೆಂಗಸರು ತಮ್ಮ ಗಂಡನ ಮನೆತನದ ಹೆಸರನ್ನು ತಮ್ಮ ಹೆಸರಿನ ಮುಂದೆ ಬಳಸಬೇಕು’ ಎನ್ನುವ ಸಲಹೆ ನೀಡಿದ್ದಾರೆ. (೨೪/೫/೧೮೯೩-ಇಂದುಮತಿ ಮಿತ್ರ). ಸ್ವಾಮಿಗಳ ಈ ಸಲಹೆಯೇ ಕುತೂಹಲಕರವಾಗಿದೆ. ಗುಣಗಳ ಆಧಾರದ ಮೇಲೆ ಬ್ರಾಹ್ಮಣ , ಕ್ಷತ್ರಿಯ , ವೈಶ್ಯ , ಶೂದ್ರ ಎನ್ನುವ ವರ್ಣ ವಿಭಜನೆಯನ್ನು ನಾನೇ ಮಾಡಿದ್ದೇನೆ’ (ಗೀತೆ ೪/೧೩) , ಪಾಪಯೋನಿಜರು , ಹೆಂಗಸರು ಅದರಂತೆಯೇ ಶೂದ್ರರು ನನ್ನಲ್ಲಿ ಶರಣಾಗಿ ಪರಮಗತಿ ಪಡೆಯುತ್ತಾರೆ. ಪುಣ್ಯಶೀಲ ಬ್ರಾಹ್ಮಣರು ಮತ್ತು ರಾಜರ್ಷಿ ಭಕ್ತರು ಅದನ್ನು ಪಡೆಯುವಲ್ಲಿ ಸಂಶಯ ಎಲ್ಲಿದೆ (ಗೀತೆ ೩೨, ೪೦/೯) ಎಂದು ಹೇಳಿರುವ ಕೃಷ್ಣನೇ ವರ್ಣ ವಿಂಗಡಣೆ ಮಾಡಿದ್ದಾನೆ. . ಪ್ರಾಚೀನರಾದ ಮನು , ಪರಾಶರ , ಯಾಜ್ಞ್ಯವಲ್ಕ ಸ್ಮೃತಿಗಳು ಮಾನವನ ಸಾಮಾಜಿಕ , ಧಾರ್ಮಿಕ ಜೀವನವನ್ನು ನಾಲ್ಕು ವರ್ಣಗಳಲ್ಲಿಯೇ ವಿಭಜಿಸಿದ್ದವು. ಇದಕ್ಕೆ ಅನುಗುಣವಾಗಿ ಸ್ವಾಮಿಗಳು ನಾವು (ದತ್ತರು), ನೀವು ( ಮಿತ್ರರು) ಜಾತಿಯಲ್ಲಿ ಕ್ಷತ್ರಿಯರು (ಬಂಗಾಳದ ಕಾಯಸ್ಥ ಪಂಗಡಗಳಾದ ಬಸು , ಮಿತ್ರ , ದತ್ತ , ಘೋಷ್ ಮತ್ತು ಗುಹ ತಾವು ಕ್ಷತ್ರಿಯ ಮೂಲದವರೆಂದು ಗುರುತಿಸಿಕೊಳ್ಳುತ್ತಾರೆ. ) ಆದ್ದರಿಂದ ದಾಸ, ದಾಸಿ ಎಂದು ಬರೆಯಬಾರದು. ದೇವ, ದೇವಿ ಎಂದು ಬರೆಯಬೇಕು. ನಾವು , ನೀವಲ್ಲದವರು ದಾಸ, ದಾಸಿಯರು, ಅವರು ಹಾಗೆ ಬರೆದು ಕೊಳ್ಳಬೇಕು ಎನ್ನುವ ಸನಾತನ ಸಲಹೆ ನೀಡಿದ್ದಾರೆ. ಜಾತಿ ಭೇದ ಈ ಕಾಲದ ಕಪಟಿ ಬ್ರಾಹ್ಮಣರ ಸಂಚು ಎನ್ನುವ ಸ್ವಾಮಿಗಳ ಆರೋಪದಲ್ಲಿ ಹುರುಳಿಲ್ಲ. ಏಕೆಂದರೆ ಬ್ರಾಹ್ಮಣರು ಯಾವಾಗಲೂ ಪ್ರಾಚೀನ ಗ್ರಂಥಗಳನ್ನೇ ತಮ್ಮ ಶ್ರೇಷ್ಟತೆಗೆ ಆಧಾರವಾಗಿ ಬಳಸುತ್ತಿದ್ದರು. ಬ್ರಾಹ್ಮಣರಿಗ ಮಂಗಳ ಸೂಚಕ , ಕ್ಷತ್ರಿಯನಿಗೆ ಬಲ ಸೂಚಕ , ವೈಶ್ಯನಿಗ ಧನ ಸೂಚಕ , ಶೂದ್ರನಿಗೆ ಜುಗುಪ್ಸೆ ಸೂಚಿಸುವ ಹೆಸರಗಳನ್ನಿಡಬೇಕು. ಬ್ರಾಹ್ಮಣರು ಶರ್ಮ , ಕ್ಷತ್ರಿಯರು ವರ್ಮ , ವೈಶ್ರರು ಶ್ರೇಷ್ಟಿ , ಶೂದ್ರರು ದಾಸ/ದಾಸಿ ಎಂದು ತಮ್ಮ ಹೆಸರಿನ ಮುಂದೆ ಬರೆದುಕೊಳ್ಳಬೇಕೆಂದು ಮನು ಹೇಳಿದ್ದಾನೆ. (ಮನುಸ್ಮೃತಿ: ೨/೩೧-೩೨). ಆ ದೃಷ್ಟಿಯಲ್ಲಿ ನರೇಂದ್ರನಾಥ ದತ್ತ ಅಥವಾ ವಿವೇಕಾನಂದ ಇವೆರಡೂ ಹೆಸರಗಳನ್ನು ಸ್ವಾಮಿಗಳು ಇಟ್ಟುಕೊಳ್ಳುವಂತಿಲ್ಲ.
ಮದ್ರಾಸ್’ನ ವಿಕ್ಟೊರಿಯಾ ಹಾಲ್’ನಲ್ಲಿ ನೀಡಿದ ‘ನನ್ನ ಅಭಿಯಾನ’ ಎನ್ನುವ ಭಾಷಣದಲ್ಲಿ ‘ ಸಮಾಜ ಸುಧಾರಕರ ಒಂದು ಮಾಸ ಪತ್ರಿಕೆಯಲ್ಲಿ ನನ್ನನ್ನು ಶೂದ್ರ ಎಂದು ಕರೆದು ಸಂನ್ಯಾಸಿಯಾಗಲು ಅಧಿಕಾರ ಇಲ್ಲವೆಂದು ಹೇಳಿರುವರು. ಬ್ರಾಹ್ಮಣರು ‘ಯಮಾಯ ಧರ್ಮರಾಜಾಯ ಚಿತ್ರಗುಪ್ತಾಯ ವೈ ನಮಃ ‘ ಎಂದು ಉಚ್ಛರಿಸಿ ಯಾರ ಪಾದಗಳನ್ನು ಪೂಜಿಸುವರೋ ಅವರು ನನ್ನ ವಂಶದ ಮೂಲ ಪುರುಷರು, ಪರಿಶುದ್ಧ ಕ್ಷತ್ರಿಯರು. ನೀವು ನಿಮ್ಮ ಪುರಾಣಗಳ ಪುಣ್ಯ ಕಥೆಗಳನ್ನು ನಂಬಿದರೆ ನನ್ನ ವರ್ಣವು ಮಾಡಿದ ಇತರ ಸೇವೆಯನ್ನು ಬಿಟ್ಟರೂ , ಅದು ಹಲವು ಶತಮಾನಗಳ ಕಾಲ ಅರ್ಧ ಭಾರತವನ್ನು ಆಳಿತು…. … ಬ್ರಾಹ್ಮಣ , ಕ್ಷತ್ರಿಯ , ವೈಶ್ಯ ಈ ಮೂರು ವರ್ಣದವರಿಗೂ ಸಂನ್ಯಾಸದ ಹಕ್ಕಿದೆ ‘ ಎಂದರು. (147) ಸ್ವಾಮಿಗಳು ಮೇರಿ ಹೇಲ್’ಗೆ ಉತ್ತರಿಸುತ್ತ ‘ …ನನ್ನನ್ನು ಬಹಿಷ್ಕರಿಸುವುದು ಅಷ್ಟು ಸುಲಭವಲ್ಲ. ನನ್ನ ಪೂರ್ವಾಶ್ರದ ಜಾತಿಗೆ ಸೇರಿದ ಪ್ರಖ್ಯಾತ ರಾಜನೊಬ್ಬನು ನನ್ನ ಗೌರವಾರ್ಥ ಒಂದು ಸಂತೋಷ ಕೂಟ ಏರ್ಪಡಿಸಿದ್ದನು. ಅದರಲ್ಲಿ ಆ ಜಾತಿಯ ಮುಖ್ಯಸ್ಥರೆಲ್ಲ ಇದ್ದರು. ….ಪ್ರಿಯ ಮೇರಿ ಈ ಪಾದಗಳು ರಾಜರ ಮನೆತನಕ್ಕೆ ಸೇರಿದವರಿಂದ ತೊಳೆದು ಆದರಿಸಿ ಪೂಜಿಸಲ್ಪಟ್ಟಿವೆ….ಎನ್ನುತ್ತ ತಮ್ಮ ಪೂರ್ವಾಶ್ರಮದ ಜಾತಿಯ ಬಗ್ಗೆ ಹೆಮ್ಮೆ ತಳೆದು ತಮಗೆದುರಾಗಬಹುದಾದ ಕಂಟಕದಿಂದ ಪಾರಾಗಿದ್ದಾರು. ಸ್ವಾಮಿಗಳು ಕ್ಷತ್ರಿಯರಾಗಿರದೆ ಶೂದ್ರನಾಗಿದ್ದರೆ ಈ ಆಕ್ಷೇಪವನ್ನು ಹೇಗೆ ಎದುರಿಸಬೇಕಿದ್ದಿತು ಎನ್ನುವುದು ಅವರ ವಿಷಯ ಸೂಚಿಯಿಂದ ಹೊರಗುಳಿದಿದೆ. (೯/೭/೧೮೯೭-ಮೇರಿ ಹೇಲ್).
ಮಾರ್ಗರೆಟ್ ನೋಬಲ್ ೧೮೯೮ ರಲ್ಲಿ ಮೇ ೧೧ ರಿಂದ ಆಗಸ್ಟ್ ೨೦ ರವರೆಗೆ ಸ್ವಾಮಿಗಳೊಂದಿಗೆ ಮಾಡಿದ ಹಿಮಾಲಯ , ಕಾಶ್ಮೀರ , ಅಮರನಾಥ ಪ್ರವಾಸಗಳ ನೆನಪುಗಳನ್ನು ದಿನಚರಿಯಾಗಿ ಬರೆದಿದ್ದಾಳೆ. ಅದರಲ್ಲಿ ಕೆಲವೊಮ್ಮೆ ಸ್ವಾಮಿಗಳು ಭಾರತದ ಚರಿತ್ರೆಯನ್ನು ಬ್ರಾಹ್ಮಣ ಮತ್ತು ಕ್ಷತ್ರಿಯರ ನಡುವಿನ ತಿಕ್ಕಾಟದಂತೆ ಚಿತ್ರಿಸುತ್ತಿದ್ದರು. ಗೆಲುವು ಯಾವಾಗಲೂ ಕ್ಷತ್ರಿಯರದ್ದೇ ಆಗಿರುತ್ತಿದ್ದಿತು. ಬಂಗಾಳದ ಕಾಯಸ್ಥರು ಮೌರ್ಯರಿಗಿಂತಲೂ ಮೊದಲಿನ ಕ್ಷತ್ರಿಯ ಕುಲದವರು ಎಂದು ಸಕಾರಣಗಳಿಂದ ಸಾಧಿಸಿದರು ಎಂದು ಬರೆದಿದ್ದಾಳೆ. ಹೀಗೆ ಕಾಯಸ್ಥ ಕುಲದ ಹೆಮ್ಮೆ ಸ್ವಾಮಿಗಳ ನರನಾಡಿಯಲ್ಲಿ ತುಂಬಿದ್ದಿತು.
ಭಾರತದಲ್ಲಿ ವೈದಿಕ ಮೂಲದ ಯಾವ ಧರ್ಮಶಾಸ್ತ್ರಗಳನ್ನು ಲೆಕ್ಕಿಸದೆ ಸಂನ್ಯಾಸಿಗಳಾಗಿ ತಮ್ಮದೇ ಆದ ದಾರಿಯಲ್ಲಿ ನಡೆದ ಶೂದ್ರರ ದೊಡ್ಡ ಪರಂಪರೆಯೇ ಇದೆ. ವೇದ, ವೇದಾಂತ , ಧರ್ಮ ಸೂತ್ರಗಳಿಗೆ ಹೆದರುತ್ತಿದ್ದ ಸ್ವಾಮಿಗಳು ಅವುಗಳ ಚೌಕಟ್ಟಿನಲ್ಲಿಯೇ ತಾವು ಸಂನ್ಯಾಸಿಗಳಾಗಲು ಅರ್ಹ ಎಂದು ಸಾಧಿಸಲು ಹೆಣಗುತ್ತ ತಮ್ಮ ಕಾಯಸ್ಥ ಜಾತಿಯ ಬಗ್ಗೆ ಹೆಮ್ಮೆ ತಳೆದಿದ್ದರು. ಅದರ ಬದಲು ಯಾವ ಗೊಡ್ದು ಧರ್ಮಶಾಸ್ತ್ರಗಳನ್ನು ನಾನು ಲೆಕ್ಕಿಸುವುದಿಲ್ಲ , ಯಾರು ಬೇಕಾದರೂ ಸಂನ್ಯಾಸಿಗಳಾಗಬಹುದು. ಆದರ್ಶಗಳು ಮುಖ್ಯವೇ ಹೊರತು ಹುಟ್ಟಿದ ಜಾತಿಯಲ್ಲ. ಶೂದ್ರ ಸಂನ್ಯಾಸಿಯಾಗುವುದರಿಂದ ವೇದ , ಉಪನಿಷತ್ತು , ಸೂತ್ರಗಳು ನಡುಗುವಂತಿದ್ದರೆ ನಡುಗಲಿ. ಅದರಿಂದ ಏನೂ ಬಾಧಕವಿಲ್ಲ ಎಂದಿದ್ದರೆ ಸ್ವಾಮಿಗಳನ್ನು ಮೆಚ್ಚಬಹುದಿದ್ದಿತು. ಸ್ವಾಮಿಗಳು ಹಾಗೆ ಏಕೆ ಹೇಳಲಿಲ್ಲ ಎನ್ನುವುದರ ಮೇಲೆ ನಾಲ್ಕು ವರ್ಷಗಳ ಹಿಂದೆ ಅವರು ಬರೆದ ಈ ಪತ್ರ ಬೆಳಕು ಚೆಲ್ಲುತ್ತದೆ - ‘ಹಿಂದೂ ತನ್ನ ಧರ್ಮವನ್ನು ಎಂದಿಗೂ ಬಿಡಬಾರದು. ಆದರೆ ಧರ್ಮವನ್ನು ಸರಿಯಾದ ಕಟ್ಟುನಿಟ್ಟಿನಲ್ಲಿಟ್ಟು ಸಮಾಜದ ಏಳ್ಗೆಗೆ ಅವಕಾಶ ಕೊಡಬೇಕು. ಭಾರತದಲ್ಲಿ ಪುರೋಹಿತರು ಮಾಡುತ್ತಿರುವ ಎಲ್ಲ ದೌರ್ಜನ್ಯಗಳಿಗೂ , ದೇಶದ ಹೀನ ಸ್ಥಿತಿಗೂ ಧರ್ಮವೇ ಕಾರಣವೆಂದು ಎಲ್ಲ ಸಮಾಜ ಸುಧಾರಕರು ತಪ್ಪು ತಿಳಿದರು , ಎಂದಿಗೂ ಅಲುಗದ ಧರ್ಮದ ಬುಡ ಕೀಳಲು ಯತ್ನಿಸಿದರು. ಇದರ ಫಲಿತಾಂಶ-ಉದ್ದೇಶದ ಸೋಲು.! ಬುದ್ಧನಿಂದ ರಾಮ ಮೋಹನ ರಾಯ್ ವರೆಗೆ ಜಾತಿ ಭೇದ ಧರ್ಮಕ್ಕೆ ಸಂಬಂಧಪಟ್ಟದ್ದೆಂದು ತಪ್ಪು ತಿಳಿದು ಜಾತಿ ಮತ್ತು ಧರ್ಮ ಎರಡನ್ನೂ ನಾಶ ಮಾಡಲು ಯತ್ನಿಸಿ ತಮ್ಮ ಪ್ರಯತ್ನದಲ್ಲಿ ವಿಫಲರಾದರು. ಪುರೋಹಿತರು ಏನು ಕೂಗಿದರೇನು , ಜಾತಿ ಒಂದು ಘನೀಭೂತವಾದ ಸಾಮಾಜಿಕ ಪದ್ದತಿ. ಈಗ ಅದು ತನ್ನ ಕೆಲಸ ಮುಗಿದ ಮೇಲೆ ಭಾರತದ ವಾತಾವರಣವನ್ನು ದುರ್ಗಂಧಗೊಳಿಸಿದೆ. ಜನರು ಕಳೆದುಕೊಂಡ ಸಾಮಾಜಿಕ ವ್ಯಕ್ತಿತ್ವವನ್ನು ಅವರಿಗೆ ಮರಳಿ ಕೊಡುವುದರಿಂದ ಈ ಕಟ್ಟು ತಾನಾಗಿಯೇ ಮಾಯವಾಗುವುದು ‘ (೨/೧೧/೧೮೯೩-ಅಳಸಿಂಗ ಪೆರುಮಾಳ್).
ಭಾರತದ ಸಮಾಜ ಸುಧಾರಕ ಚಿಂತಕರಲ್ಲಿ ಸ್ವಾಮಿಗಳಷ್ಟು ಗೊಂದಲದಲ್ಲಿ ಬಿದ್ದವರು ಮತ್ತೊಬ್ಬರಿಲ್ಲ. ಸ್ವಾಮಿಗಳಿಗೆ ಒಮ್ಮೊಮ್ಮೆ ಶೂದ್ರರ ಮೇಲೆ ಪ್ರೀತಿ ಉಕ್ಕಿ ಬ್ರಾಹ್ಮಣರ ಮೇಲೆ ರೋಷ ಬರುತ್ತಿದ್ದಿತು. ಹಾಗೆ ಬಂದಾಗ ಅವರನ್ನು ಪುರೋಹಿತರು ಎಂದು ಕರೆದು ಕೊಡವುತ್ತಿದ್ದರು. ಇದ್ದಕ್ಕಿಂದ್ದಂತೆ ವರ್ಣ , ಜಾತಿ ಹುಟ್ಟಿನಿಂದ ಬರುವುದಿಲ್ಲ , ಗುಣದಿಂದ ಎಂದು ಸಾರುತ್ತಿದ್ದರು. ಆಗ ಸ್ವಾಮಿಗಳು ಬಳಸುತ್ತಿದ್ದ ಬ್ರಾಹ್ಮಣ ಎಂಬ ಪದ ಜಾತಿ ಸೂಚಕವಾಗಿರದೆ , ಗುಣ ಸೂಚಕದಂತೆ ಕಾಣುತ್ತಿದ್ದಿತು. ಗುಣದ ಆಧಾರದ ಮೇಲೆ ಒಬ್ಬ ವ್ಯಕ್ತಿ ಯಾವ ವರ್ಣಕ್ಕೆ ಸೇರಿರುವನೆಂದು ನಿರ್ಧರಿಸುವವರು ಯಾರು ? ಸನ್ನಿವೇಶದ ಒತ್ತಡಕ್ಕೆ ಒಳಗಾಗಿ ಒಬ್ಬ ವ್ಯಕ್ತಿಯ ಗುಣಗಳಲ್ಲಿ ಕುಸಿತ ಅಥವಾ ಏರಿಕೆ ಉಂಟಾದರೆ ಅವರನ್ನು ಇರುವುದಕ್ಕಿಂತ ಕೆಳ ಅಥವಾ ಮೇಲಿನ ವರ್ಣಕ್ಕೆ ಸೇರಿಸುವ ವ್ಯವಸ್ಥೆ ಇದೆಯೇ ಎನ್ನುವುದಕ್ಕೆ ಅವರಲ್ಲಿ ಉತ್ತರವಿರಲಿಲ್ಲ. ಇನ್ನೂ ಕೆಲವೊಮ್ಮೆ ಜಾತಿ ಎಂದರೆ ಸಹಜ ವಿಕಸನ ಮಾರ್ಗ. ಒಂದು ಜಾತಿಯಿಂದ ಇನ್ನೊಂದು ಜಾತಿಗೆ ಮುಂದುವರೆಯುವುದೇ ಸುಧಾರಣೆ ಎಂದು ಪ್ರತಿಪಾದಿಸುತ್ತಿದ್ದರು. ಅವರಿಗೆ ಒಮ್ಮೊಮ್ಮೆ ಜನಿವಾರ ಹಾಕಿ ವೇದಗಳನ್ನು ಓದಿಸಿದರೆ ಸಮಾಜ ಸುಧಾರಣೆಯಾಗುತ್ತದೆ ಎನಿಸುತ್ತಿದ್ದಿತು. ಅದರಲ್ಲೂ ಮೊದಲ ಮೂರು ವರ್ಣದ ‘ದ್ವಿಜ’ರು ವೇದ ಓದಬೇಕೆನ್ನುವುದು ಅವರ ಕಾಳಜಿಯಾಗಿದ್ದಿತು.
‘ಈಗ ಜಾತಿಯ ವಿಚಾರ ; ಸಂಸ್ಕೃತದಲ್ಲಿ ಜಾತಿ ಎಂದರೆ ವೈವಿಧ್ಯ , ಬಗೆ ಎಂದರ್ಥ. ಸೃಷ್ಟಿ ಪದದ ಮೊದಲ ಅರ್ಥವೇ ಜಾತಿ. ಒಂದಾಗಿರುವ ನಾನು ಹಲವಾಗುತ್ತೇನೆ ಇದೇ ಸೃಷ್ಟಿ….. ಜಾತಿಯ ಮೊಟ್ಟ ಮೊದಲ ಅಭಿಪ್ರಾಯವೇ ವ್ಯಕ್ತಿಗೆ ತನ್ನ ಸ್ವಭಾವ ಅಥವಾ ಪ್ರಕೃತಿಯನ್ನು ವ್ಯಕ್ತಪಡಿಸುವ ಸ್ವಾತಂತ್ರ. ಅನೇಕ ಸಾವಿರ ವರ್ಷಗಳಿಂದ ಅದೇ ಅರ್ಥವೇ ಅದಕ್ಕೆ ಇದ್ದಿತು. ಬೇರೆ ಜಾತಿಯವರು ಕಲೆತು ಉಟಮಾಡುವುದನ್ನು ಅತ್ಯಂತ ಆಧುನಿಕ ಪುಸ್ತಕಗಳೂ ನಿಷೇಧಿಸಿಲ್ಲ. ಹಾಗಾದರೆ ಭಾರತದ ಹೀನಸ್ಥಿತಿಗೆ ಕಾರಣವೇನು ? ಜಾತಿ ಎನ್ನುವುದರ ಈ ಅರ್ಥ ಮರೆತದ್ದೇ. ….ಈಗಿರುವ ಜಾತಿ ನಿಜವಾದ ಜಾತಿಯಲ್ಲ. ಇದು ಜಾತಿಯ ವಿಕಾಸಕ್ಕೆ ತಂದೊಡ್ಡಿದ ಅಡಚಣೆ. . … ಇದೇ ಭಾರತದ ಅವನತಿಗೆ ಕಾರಣ . ಜ್ಯೋತಿಷಿಗಳು ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಯ ಜಾತಿಯನ್ನು ಅವರು ಹುಟ್ಟಿದ ಗಳಿಗೆಯ ಮೇಲೆ ನಿರ್ಧರಿಸುತ್ತಾರೆನ್ನುವುದು ಪ್ರತಿ ಭಾರತೀಯನಿಗೆ ಗೊತ್ತು. ಇದೇ ನಿಜವಾದ ಜಾತಿ , ವ್ಯಕ್ತಿತ್ವ. ಇದನ್ನು ಜ್ಯೋತಿಷ್ಯಶಾಸ್ತ್ರ ತಿಳಿದಿದ್ದಿತು. …… ನನ್ನ ಕಾರ್ಯ ವಿಧಾನ ಇದು. ಹಿಂದೂಗಳು ತಮ್ಮಲ್ಲಿರುವ ಯಾವುದನ್ನೂ ಬಿಡಬೇಕಾಗಿಲ್ಲ. ಹಿಂದಿನ ಋಷಿಗಳು ನಮಗೆ ತೋರಿದ ಮಾರ್ಗದಲ್ಲಿಯೇ ನಡೆಯಬೇಕು. (೩/೧/೧೮೯೫-ಸುಬ್ರಮಣ್ಯ ಅಯ್ಯರ್)
- ಜಾತಿ ವ್ಯವಸ್ಥೆಗೆ ಯಾವ ಕಾಲದಲ್ಲಿಯೂ ಇರದ ವೈವಿಧ್ಯತೆ , ವಿಕಸನ ಮುಂತಾದ ವಿವರಣೆಗಳನ್ನು ಕೊಡಲು ಸ್ವಾಮಿಗಳು ಯತ್ನಿಸಿದ್ದಾರೆ, ಸ್ವಾಮಿಗಳ ಲೆಕ್ಕದಲ್ಲಿ ಜಾತಿ ಒಂದು ಸಾಮಾಜಿಕ ಸತ್ಯವಲ್ಲ. ಅದನ್ನು ಹುಟ್ಟಿದ ಗಳಿಗೆಯ ಮೇಲೆ ಪುರೋಹಿತ ನಿರ್ಧರಿಸುತ್ತಾನೆ. ಎಂದರೆ ನೈಸರ್ಗಿಕವಾಗಿಯೇ ಜಾತಿ ನಿರ್ಧಾರವಾಗುತ್ತದೆ ಅದರ ನಿರ್ಧಾರ ಪುರೋಹಿತನ ವಶದಲ್ಲಿದೆ !!! ಸ್ವಾಮಿಗಳು ಒಂದೇ ಗಳಿಗೆಯಲ್ಲಿ ಬ್ರಾಹ್ಮಣನ ಮಗ ಬ್ರಾಹ್ಮಣನಾದರೆ ಅದೇ ಗಳಿಗೆಯಲ್ಲಿ ಹುಟ್ಟಿದ ಹೊಲೆಯನ ಮಗ ಹೊಲೆಯ ಹೇಗಾಗುತ್ತಾನೆ ಎನ್ನುವುದನ್ನು ತಿಳಿಸುವುದಿಲ್ಲ. ಸ್ವಾಮಿಗಳು ಸುಬ್ರಮಣ್ಯ ಅಯ್ಯರ್’ನನ್ನು ಸಂತೋಷಪಡಿಸಲು ಇಂತಹ ತಾವೇ ಕಂಡು ಹಿಡಿದ ಜಾತಿ ವ್ಯಾಖ್ಯಾನಕ್ಕೆ ಮುಂದಾಗಿದ್ದಾರೆ.
ಸ್ವಾಮಿಗಳು ಮೈಸೂರು ಮಹಾರಾಜ ಜಯಜಾಮರಾಜೇಂದ್ರ ಒಡೆಯರಿಗೆ ಬರೆದ ಪತ್ರದಲ್ಲಿ ಅಮೆರಿಕದ ಸಾಧನೆ , ಹೆಂಗಸರು , ಭಾರತದ ಹೀನ ಅವಸ್ಥೆಗೆ ಬಡಜನರನ್ನು ಕಡೆಗಣಿಸಿರುವುದನ್ನು ಭಾವಾವೇಶದಲ್ಲಿ ತಿಳಿಸುತ್ತ ‘….ಪಾಶ್ಚಾತ್ಯರು ನಮ್ಮ ಜಾತಿಯ ವಿಚಾರದಲ್ಲಿ ಎಷ್ಟು ದೂರಿದರೂ ಅವರಲ್ಲಿ ಇದಕ್ಕಿಂತ ನೀಚವಾದ ಜಾತಿ ಭೇದವಿದೆ. ಅದು ಹಣದ ಜಾತಿ… ಎಂದಿದ್ದರು. (೨೩/೬/೧೮೯೪).
-ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ನರಸಿಂಹಾಚಾರಿ ಆಲ್ಬರ್ಟ್ ಡೌಟಿಗೆ ನೀಡಿದ ಸಂದರ್ಶನದಲ್ಲಿ ಅಮೆರಿಕದಲ್ಲಿ ಹಣದ ಜಾತಿ ಇದೆ ಎಂದು ಮೊದಲ ಬಾರಿಗೆ ತಿಳಿಸಿದ್ದನು. ಇದನ್ನೇ ಸ್ವಾಮಿಗಳು ರಾಜರಿಗೆ ಹೇಳಿದ್ದರು. ಸ್ವಪ್ರಯತ್ನದಿಂದ ಅಮೆರಿಕದ ‘ಹಣದ ಜಾತಿ’ಗೆ ಯಾರು ಬೇಕಾದರೂ ಸೇರಬಹುದು , ಆದರೆ ಭಾರತದ ಸಾಮಾಜಿಕ ಜಾತಿಯಲ್ಲಿ ಅದು ಸಾಗದೆನ್ನುವ ಸತ್ಯವನ್ನು ಕೆಲಕಾಲ ಮರೆತಿದ್ದರು.
ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಗ್ರಾಜುಯೆಟ್ ಫಿಲಾಸಫಿಕಲ್ ಸೊಸೈಟಿಯಲ್ಲಿ ೨೫/೩/೧೮೯೬ ರಂದು ಸ್ವಾಮಿಗಳು ವೇದಾಂತ ತತ್ತ್ವದ ಮೇಲೆ ಭಾಷಣ ಮಾಡಿದ ನಂತರ ಪ್ರಶ್ನೋತ್ತರ ಕಲಾಪ ಜರುಗಿತು. ಆಗ ಜಾತಿ ಭಾವನೆಯೊಂದಿಗೆ ಅಧ್ಯಾತ್ಮಿಕ ಸ್ವಾತಂತ್ರ್ಯ ಹೊಂದಿಕೊಳ್ಳಬಲ್ಲುದೇ ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸುತ್ತ ಸ್ವಾಮಿಗಳು ‘ (ಅಧ್ಯಾತ್ಮವಾದಿಗಳು) ಜಾತಿ ಭೇದ ಎಂದಿಗೂ ಇರಬಾರದು ಎನ್ನುವರು. ಜಾತಿಯನ್ನು ಒಪ್ಪುವವರೂ ಕೂಡ ಆ ವ್ಯವಸ್ಥೆಯಲ್ಲಿ ಎಲ್ಲ ಒಳ್ಳೆಯದಿದೆ ಎನ್ನುವುದಿಲ್ಲ. ಇದಕ್ಕಿಂತ ಒಳ್ಳೆಯದು ಯಾವುದನ್ನಾದರೂ ತೋರಿಸಿದರೆ ಈಗಿರುವುದನ್ನು ಬಿಡುತ್ತೇವೆ ಎನ್ನುತ್ತಾರೆ. ನಿಮ್ಮ ದೇಶದಲ್ಲಿ ಒಂದು ಜಾತಿಯನ್ನು ಪ್ರಾರಂಭಿಸಲು ನೀವು ಪ್ರಯತ್ನಿಸುವಿರಿ. ಒಬ್ಬನಿಗೆ ಒಂದು ಚೀಲ ಡಾಲರ್ ಸಿಕ್ಕಿದರೆ ನಾನು ನಾಲ್ಕು ನೂರು ಸಿರಿವಂತರಲ್ಲಿ ಒಬ್ಬ ಎನ್ನುವನು. ನಾವು ಮಾತ್ರ ಸ್ಥಿರವಾದ ಜಾತಿ ವ್ಯವಸ್ಥೆಯನ್ನು ಮಾಡಿರುವೆವು. ಇತರ ದೇಶಗಳು ಅದಕ್ಕಾಗಿ ಹೋರಾಡುತ್ತಿವೆ. ….ಜಾತಿ ವ್ಯವಸ್ಥೆ ಇರುವುದರಿಂದ ಈಗ ೩೦ ಕೋಟಿ ಜನಕ್ಕೆ ಊಟ ಸಿಗುತ್ತಿದೆ. ..ಜಾತಿ ಪದ್ದತಿ ಇಲ್ಲದಿದ್ದರೆ ಓದುವುದಕ್ಕೆ ಸಂಸ್ಕೃತ ಪುಸ್ತಕಗಳೇ ಸಿಗುತ್ತಿರಲಿಲ್ಲ. ಈ ಸಂಸ್ಥೆಯಲ್ಲಿ ದೋಷವಿಲ್ಲ ಎಂದಲ್ಲ. ಜಾತಿ ಪದ್ದತಿ ಒಂದು ದೊಡ್ದ ಕೋಟೆಯಂತೆ ಆಗಿದೆ. ಹೊರಗಿನಿಂದ ಸೇನೆ ಅದೆಷ್ಟು ದಾಳಿ ಮಾಡಿದರೂ ಅದನ್ನು ಒಡೆಯಲು ಆಗಿಲ್ಲ. ಜಾತಿ ವ್ಯವಸ್ಥೆಯ ಆವಶ್ಯಕತೆ ಇನ್ನೂ ಹೋಗಿಲ್ಲ ‘
-ಭಾರತದ ಜಾತಿ ತಾರತಮ್ಯವನ್ನು ಸಾಮಾಜಿಕ, ನೈತಿಕ , ಅಧ್ಯಾತ್ಮಿಕ ಯಾವುದೇ ನೆಲೆಗಟ್ಟಿನಲ್ಲಿ ಸಮರ್ಥಿಸಿಕೊಳ್ಳುವುದು ಸಾದ್ಯವಿಲ್ಲವೆಂದು ಸ್ವಾಮಿಗಳಿಗೆ ಮನದಟ್ಟಾಗಿದ್ದಿತು. ಆದರೆ ಅದು ತಪ್ಪೆಂದು ಒಪ್ಪಿಕೊಳ್ಳುವ ತೆರೆದ ಮನಸ್ಸಿರಲಿಲ್ಲ. ಆದ್ದರಿಂದ ಮೂಲ ಸಮಸ್ಯೆಗೆ ಉತ್ತರ ಕೊಡುವ ಬದಲು ಅಮೆರಿಕದ ಸಮಾಜದಲ್ಲಿ ಹಣವಿರುವವರದೇ ಒಂದು ಜಾತಿ. ಭಾರತದ ಜಾತಿ ವ್ಯವಸ್ಥೆ ಅದಕ್ಕಿಂತ ಉತ್ತಮವಾದುದು ಎನ್ನುವ ಅಸಂಬದ್ಧ ತರ್ಕಕ್ಕೆ ಇಳಿದಿದ್ದರು. ಅಮೆರಿಕದಲ್ಲಿ ಹಣ ವರ್ಗವೇ ಹೊರತು ದಾಟಲಾಗದ ಸಾಮಾಜಿಕ ವರ್ಣ, ಜಾತಿಯಲ್ಲ ಎನ್ನುವುದನ್ನು ಸ್ವಾಮಿಗಳು ತಮ್ಮ ಅನುಕೂಲಕ್ಕಾಗಿ ಹಿಂದಕ್ಕೆ ಸರಿಸಿದ್ದರು. ಅವರ ಲೆಕ್ಕದಲ್ಲಿ ಜಾತಿಯಿಂದ ೩೦ ಕೋಟಿ ಜನಕ್ಕೆ ಊಟ ಸಿಗುತ್ತಿದೆ , ಸಂಸ್ಕೃತ ಎನ್ನುವ ‘ಮಹಾ ಭಾಷೆ’ ಉಳಿದಿದೆ. ಜಾತಿ ಇಲ್ಲದ ಸಮಾಜ ಇರುವ ದೇಶಗಳು ಉಪವಾಸವಿವೆ , ಶ್ರೇಷ್ಟ ಭಾಷೆಯನ್ನು ಉಳಿಸಿಕೊಂಡಿಲ್ಲ.
ಕಲ್ಕತ್ತದಲ್ಲಿ ‘ವೇದಾಂತ ದರ್ಶನದ ವಿವಿಧ ಮುಖಗಳು’ ವಿಷಯದ ಬಗ್ಗೆ ಮಾತನಾಡುವಾಗ ‘…ತಲೆಯೇ ಇಲ್ಲ ತಲೆನೋವು ಎನ್ನುವ ಬಂಗಾಳಿ ಗಾದೆಯಂತಿದೆ ಈಗಿನ ಪರಿಸ್ಥಿತಿ. ನಾಲ್ಕು ವರ್ಣಗಳಲ್ಲಿ ಕೇವಲ ಬ್ರಾಹ್ಮಣ ಮತ್ತು ಶೂದ್ರರನ್ನು ಮಾತ್ರ ನೋಡುತ್ತಿದ್ದೇವೆ. ಕ್ಷತ್ರಿಯ , ವೈಶ್ಯರು ಎಲ್ಲಿದ್ದಾರೆ. ಬ್ರಾಹ್ಮಣರು ಅವರಿಗೆ ಯಜ್ಞೋಪವೀತಗಳನ್ನು ಕೊಟ್ಟು ಹಿಂದೂಗಳಂತೆ ವೇದಗಳನ್ನು ಅಧ್ಯಯನ ಮಾಡಲು ಏಕೆ ಹೇಳಬಾರದು….ಇತರ ವರ್ಣದವರನ್ನು ಸ್ವೀಕರಿಸಿ ಮೇಲೆತ್ತಿ. ಅವರೂ ವೇದಗಳನ್ನು ಓದಲಿ. ಅವರೂ ಜಗತ್ತಿನ ಇತರ ಆರ್ಯರಂತೆ ಉತ್ತಮರಾಗಲಿ,,,’
೧೨/೧೧/೧೮೯೭ ಲಾಹೋರಿನಲ್ಲಿ ಮಾಡಿದ ಭಾಷಣದಲ್ಲಿ ಕೊಟ್ಟ ಆರ್ಯ–ಅನಾರ್ಯರ ವ್ಯಾಖ್ಯೆ ಹೀಗಿದೆ. ‘ ಒಂದು ಹೆಣ್ಣು ಅಥವಾ ಗಂಡು ತಮ್ಮ ಮನಸ್ಸಿಗೆ ಬಂದವರನ್ನು ಮದುವೆಯಾಗಲು ಬಿಟ್ಟರೆ ವೈಯಕ್ತಿಕ ಸುಖ , ಪಶು ಬಯಕೆಯ ತೃಪ್ತಿಗಳೇ ಮದುವೆಯ ಗುರಿಯಾದರೆ ಸಮಾಜಕ್ಕೆ ಕೇಡು ತಪ್ಪಿದ್ದಲ್ಲ. ಅಂತಹ ಮದುವೆಯಿಂದ ಕೆಡುಕರು , ನೀಚರೂ ಆದ ಮಕ್ಕಳು ಹುಟ್ಟುತ್ತಾರೆ. …ಒಬ್ಬನು ಸಮಾಜದಲ್ಲಿ ಇರುವವರೆಗೆ ಆತನಿಂದ ಸಮಾಜಕ್ಕೆ ಕೇಡಾಗಲಿ ಒಳಿತಾಗಲಿ ಸಂಭವಿಸುತ್ತದೆ. ಆದ್ದರಿಂದ ವ್ಯಕ್ತಿ ಯಾರನ್ನು ಮದುವೆಯಾಗಬೇಕು ಎನ್ನುವುದನ್ನು ನಿರ್ಧರಿಸುವ ಹಕ್ಕು ಸಮಾಜಕ್ಕಿದೆ. ಅದಕ್ಕಾಗಿಯೇ ಗಂಡು ಹೆಣ್ಣಿನ ಜಾತಕ ನೋಡುತ್ತಾರೆ. ಇನ್ನೊಂದು ವಿಷಯ ತಿಳಿಸುತ್ತೇನೆ. ಕಾಮ ಮಾತ್ರದಿಂದ ಹುಟ್ಟಿದವನು ಎಂದಿಗೂ ಆರ್ಯನಲ್ಲ ಎನ್ನುವುದು ಮನುವಿನ ವಚನ. ಯಾವ ಶಿಶುವಿನ ಹುಟ್ಟು ಮತ್ತು ಸಾವು ವೈದಿಕ ನಿಯಮಗಳ ಪ್ರಕಾರ ನಡೆಯುತ್ತದೆಯೋ ಅದು ಮಾತ್ರ ಆರ್ಯ. ಈಗ ಎಲ್ಲೆಲ್ಲಿಯೂ ಅನಾರ್ಯ ಶಿಶುಗಳೇ ಹುಟ್ಟುತ್ತಿರುವುದರಿಂದ ಕಲಿಯುಗವೆನ್ನುವ ಕೇಡುಗಾಲ ಪ್ರಾರಂಭವಾಗಿದೆ. (148)
೧೮/೧/೧೯೦೦- ಪಸಡೆನದ ಷೆಕ್ಸ್’ಸ್ಪಿಯರ್ ಕ್ಲಬ್’ನಲ್ಲಿ ಭಾರತದ ಮಹಿಳೆಯರನ್ನು ಕುರಿತಾಗಿ ಮಾಡಿದ ಭಾಷಣದ ಭಾಗ -‘ …ಭಾರತದ ಸಾಮಾಜಿಕ ತಳಹದಿ ಯಾವುದು ? ವರ್ಣ ವ್ಯವಸ್ಥೆ. ನಾನು ವರ್ಣದಲ್ಲಿ ಹುಟ್ಟಿರುವುದು , ವರ್ಣಕ್ಕೆ ಬದುಕಿರುವುದು…ಒಂದು ವರ್ಣದಲ್ಲಿ ಹುಟ್ಟಿದ ಮೇಲೆ ಇಡೀ ಜೀವನವನ್ನು ಅದರ ಕಟ್ಟಳೆಯಲ್ಲಿಯೇ ಕಳೆಯಬೇಕು. ನಿಮ್ಮ ಮಾತಿನಲ್ಲಿ ಹೇಳುವುದಾದರೆ ಪಾಶ್ಚಾತ್ಯರದ್ದು ವೈಯಕ್ತಿಕ ದೃಷ್ಟಿಯಾದರೆ ಭಾರತೀಯರದು ಸಾಮಾಜಿಕ ದೃಷ್ಟಿ. ವ್ಯಕ್ತಿಗಳ ಇಚ್ಛೆಯಂತೆ ಮದುವೆಯಾಗಲು ಸ್ವಾತಂತ್ರ ಕೊಟ್ಟರೆ ಪರಿಣಾಮ ಏನಾಗುವುದೆಂದು ಶಾಸ್ತ್ರ ಹೇಳುವುದು. ನೀವು ಒಬ್ಬಳನ್ನು ಪ್ರೀತಿಸಿದಿರಿ ಎಂದು ಭಾವಿಸಿರಿ. ಆ ಹೆಂಗಸಿನ ತಂದೆ ಹುಚ್ಚನಾಗಿರಬಹುದು. , ಕ್ಷಯ ರೋಗಿಯಾಗಿರಬಹುದು. .. ಒಬ್ಬ ಹೆಣ್ಣು ಪ್ರಿತಿಸುತ್ತಿರುವ ಗಂಡಿನ ತಂದೆ ಭಾರಿ ಕುಡುಕನಾಗಿರಬಹುದು. ಆಗ ಶಾಸ್ತ್ರ ಇಂತಹ ಮದುವೆ ಕಾನೂನಿಗೆ ವಿರೋಧ ಎನ್ನುವುದು. ಅಂಗಹೀನರು , ಗೂನು ಬೆನ್ನಿನವರು , ಪೆದ್ದರು , ಉನ್ಮತ್ತರು ಮದುವೆಯಾಗಬಾರದೆಂದು ಶಾಸ್ತ್ರ ಹೇಳುವುದು ……ಮದುವೆಯ ವಿಷಯದಲ್ಲಿ ನನಗಾಗಲಿ ನನ್ನ ಸಹೋದರಿಗಾಗಲಿ ಅಧಿಕಾರವಿಲ್ಲ. ವರ್ಣ ಇದನ್ನೆಲ್ಲ ನಿರ್ಣಯಿಸುವುದು . ಕೆಲವು ಸಲ ಬಾಲ್ಯದಲ್ಲಿಯೇ ನಮಗೆ ಮದುವೆಯಾಗಿರುವುದು . ಅದಕ್ಕೆ ಕಾರಣವೇನು ? ಹೇಗಿದ್ದರೂ ಹುಡುಗ , ಹುಡುಗಿಯರ ಒಪ್ಪಿಗೆಯಿಲ್ಲದೆ ಮದುಮೆಯಾಗುವುದರಿಂದ ಪ್ರೀತಿ ಹುಟ್ಟುವುದಕ್ಕೆ ಮೊದಲೇ –ಬಾಲ್ಯದಲ್ಲಿಯೇ-ಅವರು ಮದುವೆಯಾಗುವುದು ಒಳ್ಳೆಯದೆನ್ನುತ್ತದೆ ಶಾಸ್ತ್ರ. ಅವರನ್ನು ಬೇರೆ, ಬೇರೆ ಬೆಳೆಯುವವರೆಗೂ ಅವಕಾಶ ಕೊಟ್ಟರೆ ಹುಡುಗಿ ಮತ್ತೊಬ್ಬ ಹುಡುಗನನ್ನು ಪ್ರೀತಿಸಬಹುದು . ಇದರಿಂದ ಏನಾದರೂ ಅನಿಷ್ಟ ಉಂಟಾಗಬಹುದು. ಅದಕ್ಕೆ ವರ್ಣ ಇಲ್ಲೇ ನಿಲ್ಲಿ ಎನ್ನುವುದು (149)
೧೮೯೮ ರ ರಾಮಕೃಷ್ಣ ಪರಮಹಂಸರ ಜಯಂತಿಯಂದು ನೂರಾರು ಜನಿವಾರಗಳನ್ನು ತರಿಸಿ ಉತ್ಸವಕ್ಕೆ ಬಂದವರಿಗೆ ತೊಡಿಸಿ ದ್ವಿಜರಿಗೆ ಮಾತ್ರ ಉಪನಯನ ಸಂಸ್ಕಾರಕ್ಕೆ ಅಧಿಕಾರ. ಇದಕ್ಕೆ ವೇದವೇ ಪ್ರಮಾಣ ಎಂದರು. ಎಲ್ಲರೂ ಸ್ನಾನ ಮಾಡಿ ಜನಿವಾರ ಹಾಕಿಕೊಂಡಿದ್ದನ್ನು ಕಂಡು ಸ್ವಾಮಿಗಳ ಮುಖ ಅರಳಿತು. ಜನಿವಾರ ಹಾಕಿಕೊಂಡಿದ್ದ ಒಬ್ಬ ಗೃಹಸ್ಥನಿಗೆ ಸ್ವಾಮಿಗಳು ‘ನೀವು ದ್ವಿಜರಾಗಿದ್ದರೂ ಬಹಳ ಕಾಲದಿಂದ ವ್ರಾತ್ಯರಾಗಿದ್ದಿರಿ. ಇಂದಿನಿಂದ ಮತ್ತೆ ದ್ವಿಜರಾದಿರಿ , ಇಂದಿನಿಂದ ದಿನಕ್ಕೆ ನೂರು ಬಾರಿ ಗಾಯತ್ರಿ ಜಪ ಮಾಡಿರಿ’ ಎನ್ನುವ ಉಪದೇಶ ಮಾಡಿರುವುದು ಶಿಷ್ಯ ಶರತ್ ಚಂದ್ರ ಚಕ್ರವರ್ತಿ ನೆನಪುಗಳಲ್ಲಿದೆ. (150)
೨/೨/೧೯೦೦ ಪಸಡೆನ ಷೇಕ್ಸ್’ಸ್ಪಿಯರ್ ಕ್ಲಬ್’ನಲ್ಲಿ ಮಾಡಿದ ಬೌದ್ಧ ಭಾರತ ಭಾಷಣದಲ್ಲಿ ಸ್ವಾಮಿಗಳು ಜಾತಿಯ ಬಗ್ಗೆ ಮಂಡಿಸಿದ ವಿವರಣೆ ಹೀಗಿದೆ- ‘ಹಿಂದೂವಿನ ದೃಷ್ಟಿಯಲ್ಲಿ ಜಾತಿಯೆಂದರೆ ವಂಶ ಪಾರಂಪರ್ಯವಾಗಿ ಬಂದ ಒಂದು ವೃತ್ತಿ. ಸ್ಪರ್ಧೆ , ಹೋರಾಟ ವಂಶಪಾರಂಪರ್ಯ ಕಸುಬುಗಳಿಗೆ ಮಾರಕವಾಗಿವೆ. ಇದನ್ನು ತಪ್ಪಿಸುವುದೇ ಜಾತಿಯ ಉದ್ದೇಶ ….. ಅದರೆ ಅದು ವ್ಯಕ್ತಿ ವೈಶಿಷ್ಟ್ಯತೆ ಅಥವಾ ವ್ಯಕ್ತಿ ಸ್ವಾತಂತ್ರಕ್ಕೆ ಅಡ್ಡಿಯಾಗಿದೆ….. ಜಾತಿ ಎನ್ನುವುದರ ಅರ್ಥ ಎಲ್ಲಿಯವರೆಗೆ ರಕ್ತ ಪಾವಿತ್ರ್ಯವನ್ನು ಕಾಪಾಡಲು ಇರುತ್ತದೆಯೋ ಅಲ್ಲಿಯವರೆಗೆ ಈ ಜಾತಿ ಪ್ರತಿಷ್ಠೆ ಅಥವಾ ಕುಲ ಪ್ರತಿಷ್ಠೆಯಲ್ಲಿ ಏನೋ ಒಂದು ಅರ್ಥವಿದೆ. ಅನುವಂಶಿಕತೆ ಎನ್ನುವುದಂತೂ ಇದ್ದೇ ಇದೆ. ಇದನ್ನು ಸ್ವಲ್ಪ ಅರ್ಥ ಮಾಡಿಕೊಳ್ಳಲು ಯತ್ನಿಸಿ. ನೀವೇಕೆ ನೀಗ್ರೊ ಮತ್ತು ಅಮೆರಿಕನ್ ಇಂಡಿಯನ್ನರೊಂದಿಗೆ ರಕ್ತ ಸಂಪರ್ಕ ಮಾಡುವುದಿಲ್ಲ. ? ಪ್ರಕೃತಿಯೇ ನಿಮ್ಮನ್ನು ಹಾಗೆ ಮಾಡಲು ಬಿಡುವುದಿಲ್ಲ. ಅದರ ಅಡ್ಡಿಯಿಂದಲೆ ನೀವು ಅವರೊಂದಿಗೆ ರಕ್ತ ಸಂಬಂಧ ಬೆಳೆಸಲಾರಿರಿ. ಸುಪ್ತ ಪ್ರಜ್ಞೆಯಲ್ಲಿ ಯಾವುದೋ ಅಗೋಚರ ಶಕ್ತಿಗಳು ಕ್ರಿಯಾಶೀಲವಾಗಿದ್ದು ಈ ರೀತಿ ಜಾತಿ ಸಂರಕ್ಷಣೆಯಲ್ಲಿ ತೊಡಗಿರುತ್ತವೆ. ಇದೇ ಆರ್ಯರ ಜಾತಿ ಪದ್ದತಿ. …. ನೀವು ನೀಗ್ರೊ ಮತ್ತು ಅಮೆರಿಕನ್ ಇಂಡಿಯನ್ನರೊಂದಿಗೆ ಬೆರೆತರೆ ಖಂಡಿತವಾಗಿ ನಿಮ್ಮ ನಾಗರಿಕತೆ , ಸಭ್ಯತೆ ಕುಸಿಯುತ್ತದೆ. ಆದರೆ ನೂರಾರು , ಸಾವಿರಾರು ವರ್ಷಗಳ ನಂತರ ಈ ಕಲಬೆರಕೆಯಿಂದ ಅದ್ಭುತ ಜನಾಂಗ ಉದಿಸುತ್ತದೆ. .. ಆರ್ಯ ಜನಾಂಗದವರು ತಮ್ಮ ರಕ್ತವನ್ನು ದಾನ ಮಾಡುವವರೆಗೂ ಇತರ ಯಾವುದೇ ಜನಾಂಗ ಸಭ್ಯ ಜನಾಂಗವಾಗಿರಲು ಸಾದ್ಯವಿಲ್ಲ. ..ಒಂದು ಜನಾಂಗ ಆರ್ಯನಿಂದ ರಕ್ತ ಪಡೆಯಬೇಕು . ಆಗಲೆ ಅದು ಸಭ್ಯ ಜನಾಂಗವಾಗುವುದು. … ಹಿಂದೂಗಳಿಗೆ ವರ್ಣ ವಿಭಜನೆ ಮತ್ತು ಜಾತಿಯ ಬಗ್ಗೆ ವಿಶೇಷವಾದ ಒಲವು. ನನ್ನಲ್ಲೂ ಸಹ ಆ ಜನಾಂಗದ ಆ ಕುರುಡು ನಂಬಿಕೆಯ ಸೋಂಕು ಅಥವಾ ಕಲೆ ಇರಬಹುದೇನೋ ನನಗೆ ಗೊತ್ತಿಲ್ಲ. (151)
ಪ್ರಾಚ್ಯ ಮತ್ತು ಪಾಶ್ಚಾತ್ಯ ಲೇಖನದಲ್ಲಿ ಸ್ವಾಮಿಗಳ ನಿಲುವು ಹೀಗಿದೆ :‘ಉದ್ದೇಶ ಒಂದೇ ಆಗಿದ್ದರೂ ಸರಿಯಾದ ಯೋಜನೆಯ ಕೊರತೆಯಿಂದ ಬೌದ್ಧರು ಭಾರತವನ್ನು ಪಾತಾಳಕ್ಕೆ ಒಯ್ದರು. ..ವೈದಿಕ ದಾರಿಯೇ ಉಚಿತವಾದುದು. ಜಾತಿ ಧರ್ಮ , ಸ್ವಧರ್ಮವೇ ವೈದಿಕ ಧರ್ಮ.. ಇದೇ ಎಲ್ಲ ದೇಶಗಳಲ್ಲಿಯು ಸಾಮಾಜಿಕ ಉನ್ನತಿಯ ಉಪಾಯ. ಅದೇ ಮುಕ್ತಿ , ಅದೇ ಮೆಟ್ಟಿಲು. ಈ ಜಾತಿ ಧರ್ಮ , ಸ್ವಧರ್ಮ ನಾಶವಾದರೆ ನಮ್ಮ ದೇಶ ಪತನವಾಗುವುದು. …ನಾನು ಗುಣಗತ ಜಾತಿಯ ವಿಚಾರವನ್ನು ಹೇಳುತ್ತಿಲ್ಲ. ವಂಶಗತ , ಜನ್ಮಗತ ಜಾತಿಯನ್ನು ಕುರಿತು ಹೇಳುತ್ತಿರುವುದು. ಗುಣಗತ ಜಾತಿಯು ಪ್ರಾಚೀನವೆನ್ನುವುದು ನನಗೆ ಗೊತ್ತಿದೆ. ನಾಲ್ಕೈದು ತಲೆಮಾರುಗಳ ನಂತರ ಇದು ವಂಶಗತವಾಗುವುದು. … ಈಗ ಜಾತಿ ಧರ್ಮ ಹಾಳಾಗಿದೆ. ನೀವು ಮತ್ತೊಮ್ಮೆ ನಿಮ್ಮ ಪುರಾಣ , ಶಾಸ್ತ್ರಗಳನ್ನು ಓದಿರಿ. ಅಲ್ಲಿರುವ ಜಾತಿ ಧರ್ಮ ತರಲು ಯತ್ನಿಸಿ. ಅದರಿಂದ ದೇಶಕ್ಕೆ ಕಲ್ಯಾಣವಾಗುವುದು.
‘ಬ್ರಾಹ್ಮಣ ಜಾತಿ ಮತ್ತು ಬ್ರಾಹ್ಮಣ ಗುಣಗಳು ಎರಡು ಭಿನ್ನ. ಭಾರತದಲ್ಲಿ ಜಾತಿಯಿಂದ ಬ್ರಾಹ್ಮಣರನ್ನು ಗುರುತಿಸುವರು. ಪಶ್ಚಿಮದಲ್ಲಿ ಗುಣಗಳಿಂದ ಬ್ರಾಹ್ಮಣರನ್ನು ಗುರುತಿಸಬೇಕು. ಸತ್ತ್ವ , ರಜ , ತಮ ಎನ್ನುವ ಮೂರು ಗುಣಗಳಿರುವಂತೆಯೇ ಬ್ರಾಹ್ಮಣ, ಕ್ಷತ್ರಿಯ, ಶೂದ್ರರೆಂದು ತೋರಿಸಲು ಗುಣಗಳಿವೆ. ಬ್ರಾಹ್ಮಣ. ಕ್ಷತ್ರಿಯರಿಗೆ ಯೋಗ್ಯವಾದ ಗುಣಗಳು ದೇಶದಿಂದ ಮರೆಯಾಗುತ್ತಿವೆ. ಆದರೆ ಪಶ್ಚಿಮದವರು ಕ್ಷಾತ್ರ ಗುಣಗಳನ್ನು ಪಡೆದಿದ್ದಾರೆ. ಅವರ ನಂತರ ಮೆಟ್ಟಿಲೇ ಬ್ರಾಹ್ಮಣ್ಯ’ ಇದು ಸ್ವಾಮಿಗಳು ತಮ್ಮ ಸಹಪಾಠಿ , ಬಾಲ್ಯದ ಗೆಳೆಯ ಪ್ರಿಯನಾಥ ಸಿನ್ಹನ ಮುಂದಿರಿಸಿದ ‘ವರ್ಣ ಗುರುತಿಸಿಕೆ’ಯ ವಿಧಾನ. (152)
ಜಾಫ್ನಾ ಬಿನ್ನವತ್ತಳೆಗೆ ಉತ್ತರ : ನಮ್ಮ ಜಾತಿ ಪದ್ದತಿ ಮತ್ತು ಇನ್ನೂ ಹಲವು ಆಚಾರಗಳು ಧರ್ಮದೊಂದಿಗೆ ಬೆರೆತು ಹೋಗಿರುವಂತೆ ಕಂಡರೂ ನಿಜವಾಗಿಯೂ ಹಾಗಿಲ್ಲ. ನಮ್ಮ ಜನಾಂಗದ ರಕ್ಷಣೆಗೆ ಇವು ಅಗತ್ಯವಷ್ಟೇ. ರಾಷ್ಟ್ರ ರಕ್ಷಣೆಗೆ ಅವುಗಳ ಅವಶ್ಯಕತೆ ಯಾವಾಗ ಇಲ್ಲವಾಗುವುದೋ ಆಗ ಅವು ಮಾಯವಾಗುವುವು. ನನಗೆ ವಯಸ್ಸಾದಂತೆಲ್ಲ ಪುರಾತನಕಾಲದಿಂದ ಬಂದ ಈ ಸಂಸ್ಥೆಗಳನ್ನು ಗೌರವದಿಂದ ಕಾಣುತ್ತೇನೆ. ಇವುಗಳಲ್ಲಿ ಹೆಚ್ಚಿನವು ಕೆಲಸಕ್ಕೆ ಬಾರದವು ಎಂದು ಯೋಚಿಸುತ್ತಿದ್ದ ಕಾಲವೊಂದಿತ್ತು. ಆದರೆ ವಯಸ್ಸಾದಂತೆ ಯಾವುದನ್ನೂ ನಾನು ತುಚ್ಛವಾಗಿ ಕಾಣಲಾರೆ. ಪ್ರತಿಯೊಂದರ ಹಿಂದೆಯೂ ಶತಮಾನಗಳ ಪ್ರಯೋಗವಿದೆ. ನಿನ್ನೆ ಹುಟ್ಟಿ ನಾಳೆ ತೀರಿಕೊಳ್ಳುವ ಮಗು ನನ್ನ ಬಳಿ ಬಂದು ನನ್ನ ಯೋಜನೆಗಳನ್ನು ಬದಲಾಯಿಸು ಎನ್ನುವುದು , ನಾನು ಅದರ ಮಾತಿನಂತೆ ಬದಲಾಯಿಸಿದರೆ ನನ್ನಂತಹ ಮೂರ್ಖ ಯಾರೂ ಇಲ್ಲ. (153)
ಭಾರತೀಯ ಜೀವನದಲ್ಲಿ ವೇದಾಂತದ ಅನುಷ್ಠಾನ- ಮದ್ರಾಸ್ ಭಾಷಣ : ಬೆಸ್ತ ಆತ್ಮನೆಂದು ತಿಳಿದರೆ ಅವನು ಒಳ್ಳೆಯ ಬೆಸ್ತನಾಗುವನು. ವಿದ್ಯಾರ್ಥಿ ತಾನು ಆತ್ಮನೆಂದು ತಿಳಿದರೆ ಒಳ್ಳೆಯ ವಿದ್ಯಾರ್ಥಿಯಾಗುವನು. ವಕೀಲ ತಾನು ಆತ್ಮನೆಂದು ತಿಳಿದರೆ ಒಳ್ಳೆಯ ವಕೀಲನಾಗುವನು. ಇದರ ಪರಿಣಾಮವಾಗಿ ಜಾತಿ ಯಾವಾಗಲೂ ಉಳಿಯುವುದು. ವಿವಿಧ ಜಾತಿಗಳಾಗಿ ಒಡೆಯುವುದೇ ಸಮಾಜದ ಸ್ವಭಾವ. ಆದರೆ ವಿಶೇಷ ಹಕ್ಕುಗಳು ಮಾತ್ರ ಹೋಗುವುವು. ಜಾತಿ ಪ್ರಕೃತಿ ನಿರ್ಮಿತ. (154)
- ಸ್ವಾಮಿಗಳಿಗೆ ಒಂದು ಸಲ ದೇಶ ರಕ್ಷಣೆಗೆ ಜಾತಿ ಆವಶ್ಯಕ ಎನಿಸಿದರೆ ಮತ್ತೊಮ್ಮೆ ಗುಡಿಸಲಿನಲ್ಲಿ , ಕೊಚ್ಚೆಯಲ್ಲಿ ಹಂದಿಗಳಿಗಿಂತ ಕೀಳಾಗಿ ಬದುಕಿದ್ದರೇನಂತೆ , ಶೂದ್ರರ ಸಾಮಾಜಿಕ ಉನ್ನತಿ ಜನಿವಾರ ಹಾಕುವುದರಲ್ಲಿ , ಬ್ರಾಹ್ಮಣರ ವೇದಗಳನ್ನು ಓದುವುದರಲ್ಲಿದೆ ಎಂದು ಭಾಸವಾಗುತ್ತದೆ . ಶೂದ್ರರು ಆರ್ಯರಾಗಲು ಇರುವ ಒಂದೇ ಒಂದು ದಾರಿಯಿದು ! ನಾನು ಬ್ರಹ್ಮನ್ , ಆತ್ಮನ್ ಎನ್ನುತ್ತ ಜನಕನಿಂದ ಪ್ರತಿ ಪ್ರಶ್ನೆಗೆ ಉತ್ತರ ನೀಡಲು ಸಾವಿರಾರು ಹಸುಗಳನ್ನು ಪಡೆಯುತ್ತಿದ್ದ ಯಾಜ್ಞವಲ್ಕ್ಯನೇ ಸ್ವಾಮಿಗಳು ಪ್ರತಿಪಾದಿಸುತ್ತಿರುವ ಮಹಾ ಆರ್ಯ. ಸ್ವಾಮಿಗಳ ವ್ಯಾಖ್ಯೆಯಂತೆ ಭಾರತದ ಗಂಡು-ಹೆಣ್ಣುಗಳು ಮನು ಹೇಳಿದಂತೆ ವೈದಿಕ ಮಾರ್ಗದಲ್ಲಿ ಒಂದಾಗುತ್ತಿಲ್ಲ , ಆದ್ದರಿಂದ ಕಲಿಗಾಲ ಬಂದು ಭಾರತ ದುಸ್ಥಿತಿಗೆ ಬಂದಿದೆ. ಮುಂದುವರೆದ ಪಾಶ್ಚಾತ್ಯರು ಮನುವಿನ ಧರ್ಮಸೂತ್ರವನ್ನು ಪರಿಗಣಿಸುವುದಿಲ್ಲ. ಹಾಗಾಗಿ ಅವರೂ ಅನಾರ್ಯರೇ. ಆದರೆ ಅವರದು ಮುಂದುವರೆದ ಸಮಾಜ – ಅವರ ಹೆಣ್ಣುಗಳು ಲಕ್ಷ್ಮೀ , ಸರಸ್ವತಿ.
ಸ್ವಾಮಿಗಳ ಅಭಿಪ್ರಾಯದಲ್ಲಿ ಮನುಷ್ಯ ಜೈವಿಕವಾಗಿ ಒಂದೇ ಅಲ್ಲ , ಆತ ವರ್ಣಗಳ ಆಧಾರದಲ್ಲಿ ಜೈವಿಕವಾಗಿ ವಿಭಜಿಸಲ್ಪಟ್ಟಿದ್ದಾನೆ. ವರ್ಣ ನಿಷ್ಠೆ ತಳಿಯ ಶ್ರೇಷ್ಟತೆ ಮತ್ತು ಸಂತಾನ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಆರೋಗ್ಯವಂತ ಬ್ರಾಹ್ಮಣ ಮತ್ತು ಶೂದ್ರರ ನಡುವಿನ ಕೂಟ ಉತ್ಪಾತಕ್ಕೆ ಕಾರಣ. ಕ್ಷಯ , ಕುಡಿತದ ದುರ್ವಸ್ಯನ ವಂಶಪಾರಂಪರ್ಯ. ಆದ್ದರಿಂದ ಗಂಡು-ಹೆಣ್ಣುಗಳ ನಡುವೆ ಕಾಮದ ಭಾವನೆ ಬರುವ ಮೊದಲೇ ಬಾಲ್ಯದಲ್ಲಿಯೇ ಮದುವೆ ಮಾಡಿದರೆ ವರ್ಣ ಶುದ್ಧತೆ ಉಳಿಯುತ್ತದೆ. ಭಾರತದ ಉಳಿವಿಗೆ ಅದು ಅತ್ಯಾವಶ್ಯಕ. ಸ್ವಾಮಿಗಳು ರೋಗ ಪೀಡಿತರ ಮದುವೆಗೆ ಹಾಕಿದ ನಿರ್ಬಂಧಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅದನ್ನು ವರ್ಣ ನಿಷ್ಠತೆಯೊಂದಿಗೆ ತಳುಕು ಹಾಕಿದ್ದಾರೆ. ಸ್ವಾಮಿಗಳು ವೃತ್ತಿ ಜಾತಿಗೆ ಕಾರಣ ಎನ್ನುತ್ತಾರಾದರೂ ಅದೇ ನಿಲುವನ್ನು ಉಳಿಸಿಕೊಳ್ಳದೆ ಅದನ್ನು ರಕ್ತ ಪಾವಿತ್ರ್ಯದೊಂದಿಗೆ ಗಂಟು ಹಾಕುತ್ತಾರೆ. ಈ ಪಾವಿತ್ರ್ಯ ಮತ್ತು ಬಿಳಿ ಅಮೆರಿಕನ್ನರ ಶ್ರೇಷ್ಟತೆಯನ್ನು ಕಾಪಾಡಲು ಅವರು ಕರಿ ನೀಗ್ರೋ ಅಥವಾ ಕೆಂಪು ಸ್ಥಳೀಯ ಜನಾಂಗದೊಂದಿಗೆ ಬೆರೆಯದಂತೆ ಅಗೋಚರ ನೈಸರ್ಗಿಕ ಬಲಗಳು ಅಸ್ತಿತ್ವದಲ್ಲಿರುವುದನ್ನು ಸ್ವಾಮಿಗಳು ಊಹಿಸಿದ್ದಾರೆ.
ಗುಣಗತ ಜಾತಿ ಕೆಲವು ತಲೆಮಾರುಗಳ ನಂತರ ಜನ್ಮ ಜಾತಿಯಾಗುವುದು. ಇದೇ ಸಾಮಾಜಿಕ ಉನ್ನತಿಗೆ ದಾರಿ ಎನ್ನುವ ಸ್ವಾಮಿಗಳು ಇನ್ನೊಂದು ಕಡೆ ವೃತ್ತಿಯಿಂದ ಜಾತಿ ಎನ್ನುತ್ತಾರೆ. ಅಲ್ಲಿ ಅವರು ಗುಣಗಳ ಪಾತ್ರವನ್ನೇನೂ ಹೇಳುತ್ತಿಲ್ಲ. ಬ್ರಾಹ್ಮಣ ಜಾತಿ ಮತ್ತು ಗುಣ ಎರಡು ಬೇರೆ ಎನ್ನುತ್ತಾರೆ ಸ್ವಾಮಿಗಳು. ಆದರೆ ಎಲ್ಲ ಧರ್ಮಸೂತ್ರಗಳು ಜಾತಿ ಬ್ರಾಹ್ಮಣರಲ್ಲಿ ಸದ್ಗುಣಗಳನ್ನು ಕಾಣುತ್ತವೆ. ಜಾತಿ ಬ್ರಾಹ್ಮಣನಿಗೆ ಬ್ರಾಹ್ಮಣ್ಯಕ್ಕೆ ತಕ್ಕದಾದ ಗುಣಗಳು ಇಲ್ಲದಿದ್ದಲ್ಲಿ ಅವನನ್ನು ಆ ಜಾತಿಯಿಂದ ಕೆಳಗೆ ಇಳಿಸುವ ವ್ಯವಸ್ಥೆ ಯಾವುದು? ಅದು ಯಾರ ಹಿಡಿತದಲ್ಲಿರುತ್ತದೆ ? ಎನ್ನುವಂತಹ ಉರಿಯುವ ಪ್ರಶ್ನೆಗಳಿಗೆ ಉತ್ತರಗಳಿಲ್ಲ.
ಕಿಡಿ (ಸುಂದರವೇಲು ಮೊದಲಿಯಾರ್) ಜಾತಿಯ ವಿಚಾರವಾಗಿ ಸ್ವಾಮಿಗಳನ್ನು ಪ್ರಶ್ನಿಸಿದ್ದನು. ಇದಕ್ಕೆ ೩/೩/೧೮೯೪ ರ ಪತ್ರದಲ್ಲಿ ಉತ್ತರಿಸುತ್ತ ‘ಜಾತಿಯು ಹೋಗಬೇಕೆ ಅಥವಾ ಇರಬೇಕೆ ಎನ್ನುವ ಪ್ರಶ್ನೆಗೂ ನನಗೂ ಸಂಬಂಧವಿಲ್ಲ. ಅತಿ ದೀನನೂ , ದರಿದ್ರನೂ ಆದವನ ಬಾಗಿಲಿಗೆ ಜಗತ್ತಿನ ಮಹಾವ್ಯಕ್ತಿಗಳ ಚಿಂತನೆಗಳನ್ನು ಒದಗಿಸಬೇಕೆಂಬುದೇ ನನ್ನ ಬಯಕೆ. ಆನಂತರ ಜಾತಿ ಬೇಕೆ ಬೇಡವೇ ಎನ್ನುವುದನ್ನು ಅವರೇ ನಿರ್ಧರಿಸಲಿ. ಹೆಂಗಸರು ಸಂಪೂರ್ಣ ಸ್ವತಂತ್ರರಾಗಿರಬೇಕೆ ಬೇಡವೇ ಎನ್ನುವುದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ಜೀವನ ಅದರ ಬೆಳವಣಿಗೆ ಮತ್ತು ಅರೋಗ್ಯದಿಂದ ಇರುವುದಕ್ಕೆ ಸ್ವತಂತ್ರ ಆಲೋಚನೆ ಮತ್ತು ಕಾರ್ಯ ಅತ್ಯಾವಶ್ಯಕ’…. ಧರ್ಮದ ಕೆಲಸ ಆತ್ಮಕ್ಕೆ ಸಂಬಂಧಿಸಿದುದು. ಸಾಮಾಜಿಕ ನೀತಿಗಳಲ್ಲಿ ಕೈ ಹಾಕಲು ಇದಕ್ಕೆ ಹಕ್ಕಿಲ್ಲ ಎನ್ನುವುದನ್ನು ನೀವು ಮರೆಯದಿರಿ. …. ಪ್ರತಿಯೊಂದು ಸಾಮಾಜಿಕ ವ್ಯವಹಾರದಲ್ಲಿ ಪುರೋಹಿತನು ಕೈ ಹಾಕಲು ಅವನಿಗೇನು ಹಕ್ಕಿದೆ. ಇದರಿಂದ ಕೋಟ್ಯನುಕೋಟಿ ಜನ ನರಳುವಂತಾಗಿದೆ…. ..ಬ್ರಾಹ್ಮಣರು ಎಂದು ಏನನ್ನು ಬರೆದರೂ ಅದಕ್ಕೆ ಅವರಿಗಲ್ಲದೆ ಬೇರೆಯವರಿಗೆ ಅರ್ಹತೆಯಿಲ್ಲ. ಗೀತೆಯಲ್ಲಿ ಮುಕ್ತಿಹೊಂದಲು ಎಲ್ಲ ಗಂಡಸು ,ಹೆಂಗಸರಿಗೆ ಅಧಿಕಾರವಿದೆ ಎಂದು ಕೃಷ್ಣ ಸಾರುತ್ತಾನೆ. ಆದರೆ ವ್ಯಾಸನಾದರೋ ಶೂದ್ರರನ್ನು ಮೋಸ ಮಾಡಲು ವೇದಕ್ಕೆ ಅಪಾರ್ಥವನ್ನು ಕಲ್ಪಿಸುತ್ತಾನೆ…’ ಎಂದಿದ್ದಾರೆ.
ಪುರೋಹಿತರ ಮೇಲೆ ಏರಿಹೋಗುತ್ತಿದ್ದ ಸ್ವಾಮಿಗಳು ೨೮/೧/೧೯೦೦ ರಂದು ಕ್ಯಾಲಿಫೋರ್ನಿಯಾದಲ್ಲಿ ನೀಡಿದ ‘ವಿಶ್ವಧರ್ಮ –ಸಾಕ್ಷಾತ್ಕಾರಕ್ಕೆ ಮಾರ್ಗ ‘ ಭಾಷಣದಲ್ಲಿ ‘ಪುರೋಹಿತರು ಜನರು ಬಯಸಿದ್ದನ್ನು ಕೊಡುತ್ತಾರೆ. ಅವರಿಗೆ ಸ್ವಂತಿಕೆ ಇಲ್ಲ. ಜನ ಶ್ರೇಷ್ಟವಾದುದನ್ನು ಬಯಸಿದರೆ ಅವರಿಗೆ ಅದನ್ನೇ ಕೊಡುವ ಅನಿವಾರ್ಯತೆ ಉಂಟಾಗುತ್ತದೆ. ಜನರ ಬಯಕೆಗೆ ಮಣಿಯದಿದ್ದರೆ ಅವರು ಉಪವಾಸ ಬೀಳಬೇಕಾಗುತ್ತದೆ . ಜನರು ಮುಂದುವರೆದರೆ ಅವರೂ ಮುಂದುವರೆಯಬೇಕು’ ಎಂದು ಪ್ರತಿಪಾದಿಸುತ್ತ ‘ ಪುರೋಹಿತ ವರ್ಗವನ್ನು ದೂರುವುದಕ್ಕೆ ಮುಂಚೆ ನಮ್ಮನ್ನು ನಾವು ದೂರಿಕೊಳ್ಳಬೇಕು. ನೀವು ಯಾವುದಕ್ಕೆ ಯೋಗ್ಯರೋ ಅದು ನಿಮಗೆ ದಕ್ಕುತ್ತದೆ ‘ ಎನ್ನುವ ಸಿದ್ಧಾಂತ ಮಂಡಿಸುತ್ತ ಯಾವುದೇ ಸ್ಥಿತಿಯಿರಲಿ ಪುರೋಹಿತರು ಆವಶ್ಯಕ ಎನ್ನುವ ನಿಲುವು ತಳೆದರು.
ನನ್ನ ಅಭಿಯಾನ –ಮದ್ರಾಸ್ ವಿಕ್ಟೊರಿಯಾ ಹಾಲ್ ಭಾಷಣ-‘ ಸದ್ಯಕ್ಕೆ ಧರ್ಮದ ತಳಹದಿಯ ಮೇಲೆ ಸಂಘ ನಿಲ್ಲಲಿ . ಈಗಲೇ ಯಾರೂ ಉಗ್ರ ಸಮಾಜ ಸುಧಾರಣೆಯನ್ನು ತರಬೇಡಿ. ಶಂಕರ , ರಾಮಾಜುಜ , ಚೈತನ್ಯರೇ ಮುಂತಾದ ನಮ್ಮ ಪ್ರಾಚೀನ ಆಚಾರ್ಯರು ವಿಧಿಸಿದಂತೆ ಮುಕ್ತಿ ಇದೆ ಎನ್ನುವ ಸರ್ವ ಸಮತ್ವದ ಆಧಾರಧ ಮೇಲೆ ಸಾಮಾಜಿಕ ಪುನರುಜ್ಜೀವನ ಕೈಗೊಳ್ಳಿ. (೧೯/೧೧/೧೮೯೪- ಅಳಸಿಂಗ ಪೆರುಮಾಳ್). ಭಾರತದಲ್ಲಿ ಸುಧಾರಕರ ಬರಗಾಲ ಎಂದಾದರೂ ಇದ್ದಿತೇ ? ಭಾರತದ ಇತಿಹಾಸವನ್ನು ಓದಿರುವಿರಾ? ರಾಮಾನುಜ ಯಾರು ? ಶಂಕರ ಯಾರು ? ನಾನಕ್ ಯಾರು ? ಚೈತನ್ಯ ಯಾರು ? ಕಬೀರ ಯಾರು ? ದಾದು ಯಾರು ? …(155)
ದಿನಾಂಕವಿಲ್ಲದ ಫೆಬ್ರವರಿ, ೧೮೯೫ ತಿಂಗಳಿಗೆ ಸೇರಿರಬಹುದಾದ ಅಳಸಿಂಗ ಪೆರುಮಾಳ್'ಗೆ ಬರೆದ ಇನ್ನೊಂದು ಪತ್ರದಲ್ಲಿ ‘…….ಮೊದಲು ಅಧ್ಯಾತ್ಮಿಕ ಸುಧಾರಣೆಯಲ್ಲದೆ ಬೇರೆ ಯಾವ ಸುಧಾರಣೆಯೂ ಆಗದು. ನಾನು ಸಮಾಜ ಸುಧಾರಣೆಯನ್ನು ಬಯಸುತ್ತೇನೆ ಎಂದು ಹೇಳಿದವರು ಯಾರು ? ನಾನಂತೂ ಅಲ್ಲ. ದೇವರ ವಿಷಯವಾಗಿ ಬೋಧಿಸಿ , ಸಾಮಾಜಿಕ ಕುಂದು ಕೊರತೆಯ ವಿಚಾರವಾಗಲಿ ಅಥವಾ ಮೂಢಾಚಾರದ ವಿಚಾರವಾಗಿ ಅವುಗಳ ಪರ ಅಥವಾ ವಿರುದ್ಧವಾಗಿ ಏನನ್ನೂ ಹೇಳಬೇಡಿ. …..’ ಎನ್ನುವ ಸೂಚನೆ ನೀಡಿದ್ದಾರೆ.
ಭಾರತದಲ್ಲಿ ಸಂಚರಿಸುತ್ತಿದ್ದಾಗ ಎಲ್ಲಿಯೂ ಋಷಿಗಳ ನ್ಯಾಯಸೂತ್ರಗಳು ಬಳಕೆಯಲ್ಲಿರುವುದನ್ನು ನಾನು ಕಾಣಲಿಲ್ಲ. ಮನು , ಯಾಜ್ಞವಲ್ಕ್ಯರ ಧರ್ಮ ಶಾಸ್ತ್ರಗಳನ್ನು ಕಾಲ ಪರಿಸ್ಥಿತಿಗೆ ತಕ್ಕಂತೆ ಬದಲಿಸಿ ಜಾರಿಗೆ ತರಬೇಕು. ಮತ್ತೆ ಹಿಂದಿನಂತೆ ಭಾರತದ ಜನರನ್ನು ಬ್ರಾಹ್ಮಣ , ಕ್ಷತ್ರಿಯ , ವೈಶ್ಯ , ಶೂದ್ರ ಎನ್ನುವ ನಾಲ್ಕು ಪಂಗಡಗಳಾಗಿ ವಿಂಗಡಿಸಬೇಕು. ಈಗಿರುವ ಬ್ರಾಹ್ಮಣ ಪಂಗಡಗಳ ಬದಲು ಅವರು ಒಂದೇ ಆಗಬೇಕು. ಅದರಂತೆ ವೇದಗಳ ಕಾಲದಲ್ಲಿದ್ದಂತೆ ಇತರ ಮೂರು ವರ್ಣಗಳು ಮೈದಳೆಯಬೇಕು….. ಭಾರತದಲ್ಲಿ ಹಿಂದೆ ಶ್ರುತಿ , ಸ್ಮೃತಿಗಳಲ್ಲಿರುವ ಆಚರಣೆ , ಪದ್ದತಿಗಳು ಆಚರಣೆಯಲ್ಲಿದ್ದವು. ನಂತರದ ಕಾಲದಲ್ಲಿ ಸ್ಥಳೀಯ ಆಚಾರಗಳು ಮೆಲುಗೈ ಸಾಧಿಸಿ ಭಾರತ ಪತನಗೊಂಡಿತು. ನೀನು ಸಾಕಷ್ಟು ಹಣ ಖರ್ಚು ಮಾಡಿದರೆ ಪುರೋಹಿತ ವರ್ಗದವರು ನಿಮಗೆ ಬೇಕಾದ ಯಾವುದೇ ಸ್ಮೃತಿಯನ್ನು ಬರೆದುಕೊಡುವರು’ ಇದು ಸ್ವಾಮಿಗಳು ಶಿಷ್ಯ ಶರತ್ ಚಂದ್ರ ಚಕ್ರವರ್ತಿಗೆ ಮನದಟ್ಟು ಮಾಡಿಸಿದ ಸಮಾಜ ಸುಧಾರಣೆ. (156)
ಕುಂಬಕೋಣಂ ಬಿನ್ನವತ್ತಳೆಗೆ ಉತ್ತರ : ನಮ್ಮ ದೇಶದ ಜನರ ಮನಸ್ಸು ಹಲವು ಶತಮಾನಗಳಿಂದ ಬಹಳ ಕಾಡುತ್ತಿರುವ ಜಾತಿಪದ್ದತಿಗೆ , ಸಮಾಜ ಸುಧಾರಣೆಗೆ ಸಂಬಂಧಪಟ್ಟ ಕೆಲವು ಜಟಿಲ ಸಮಸ್ಯೆಗಳು ಹುಟ್ಟಿವೆ. ನಾನು ಸಮಾಜ ಸುಧಾರಕನೂ ಅಲ್ಲ, ಜಾತಿ ಪದ್ದತಿಯನ್ನು ನಾಶ ಮಾಡುವವನೂ ಅಲ್ಲ. ಎಂದು ಸ್ಪಷ್ಟವಾಗಿ ಹೇಳಬೇಕಾಗಿದೆ. …. ನಮ್ಮ ಹಿಂದಿನ ಸ್ಮೃತಿಕಾರರು ಬಹಳ ಹಿಂದೆಯೇ ಹೇಳಿದ್ದರು. ಸಮಾಜದಲ್ಲಿ ಆಗುವ ಬದಲಾವಣೆಗಳನ್ನು ಊಹಿಸಿದ್ದರು. ಅವರೂ ಜಾತಿ ಪದ್ದತಿಯನ್ನು ವಿರೋಧಿಸಿದರು. ಆದರೆ ಅದು ಇಂದಿನ ಆಧುನಿಕರಂತೆ ಅಲ್ಲ. ಜಾತಿ ಪದ್ದತಿಯನ್ನು ರದ್ದು ಮಾಡುವುದೆಂದರೆ ಊರಿನ ಜನರೆಲ್ಲ ಒಟ್ಟಿಗೆ ಕುಳಿತು ದನದ ಮಾಂಸವನ್ನು ತಿಂದು ಶರಾಬು ಕುಡಿಯಬೇಕೆಂದಲ್ಲ. ದೇಶದ ಮೂರ್ಖರು , ಮುಟ್ಠಾಳರು , ಹುಚ್ಚರೆಲ್ಲ ಎಲ್ಲಿ ಯಾವಾಗ ಯಾರನ್ನು ಬೇಕಾದರೂ ಮದುವೆ ಮಾಡಿಕೊಂಡು ಇಡಿಯ ದೇಶವನ್ನೆ ಒಂದು ಹುಚ್ಚರ ಆಸ್ಪತ್ರೆಯನ್ನಾಗಿ ಮಾಡಬೇಕೆಂದಲ್ಲ…….ನಮ್ಮ ಪೂರ್ವಿಕರ ಆದರ್ಶ ಬ್ರಾಹ್ಮಣ. ನಮ್ಮ ಶಾಸ್ತ್ರಗಳಲ್ಲೆಲ್ಲಾ ಇದು ಸ್ಪಷ್ಟವಾಗಿ ಚಿತ್ರಣವಾಗಿದೆ. …’ತ್ಯಾಗಿ ಮತ್ತು ಅಧ್ಯಾತ್ಮ ಸಂಪನ್ನನಾದ ಬ್ರಾಹ್ಮಣ ನಮ್ಮ ಆದರ್ಶ. .. ಆದರ್ಶ ಬ್ರಾಹ್ಮಣನಲ್ಲಿ ಸಾಂಸಾರಿಕತೆ ಸಂಪೂರ್ಣ ಮಾಯವಾಗಿ ಜ್ಞಾನ ತುಂಬಿ ತುಳುಕಾಡುತ್ತಿರುತ್ತದೆ….ವರ್ಣ ಸಮಸ್ಯೆಗೆ ಪರಿಹಾರ ಆಗಲೇ ಮೇಲೆ ಇರುವವರನ್ನು ಕೆಳಗೆ ಎಳೆಯುವುದಲ್ಲ . ಕೈಗೆ ಸಿಕ್ಕಿದ್ದನ್ನು ತಿಂದು , ಕುಡಿಯುವುದಲ್ಲ, ಮಿತಿ ಮೀರಿ ಸುಖ ಭೋಗಗಳನ್ನು ಅರಸುವುದಲ್ಲ. ವೇದಾಂತ ತತ್ತ್ವಗಳನ್ನು ಪಾಲಿಸುವುದರಿಂದ ಮಾತ್ರ ಅದು ಸಾದ್ಯ. (157)
ಭಾರತದ ಭವಿಷ್ಯ - ಮದ್ರಾಸ್ ಭಾಷಣ : ಸತ್ಯಯುಗದಲ್ಲಿ ಮೊದಲಿಗೆ ಬ್ರಾಹ್ಮಣರು ಮಾತ್ರ ಇರುವರು ನಂತರ ಅವರು ಭಿನ್ನ ಪಂಗಡಗಳಾಗಿ ಹೋದರು ಎನ್ನುವ ಮಹಾಭಾರತದ ವಿವರಣೆಯೇ ಸರಿ .ಮುಂದೆ ಬರುವ ಸತ್ಯಯುಗದಲ್ಲಿ ಎಲ್ಲಾ ಜಾತಿಗಳೂ ಒಂದಾಗಬೇಕು…. ವರ್ಣ ಸಮಸ್ಯೆ ಭಾರತದಲ್ಲಿ ಈ ರೂಪವನ್ನು ತಾಳುವುದು , ಮೇಲಿನ ವರ್ಗದವರನ್ನು ಕೆಳಕ್ಕೆ ಎಳೆಯುವುದಲ್ಲ. ಬ್ರಾಹ್ಮಣರನ್ನು ನಾಶಗೊಳಿಸುವುದಲ್ಲ. ಮಾನವಕೋಟಿಯ ಮಹಾ ಆದರ್ಶ ಬ್ರಾಹ್ಮಣ. ಶಂಕರಾಚಾರ್ಯರು ಗೀತಾಭಾಷ್ಯದಲ್ಲಿ ಇದನ್ನು ಸುಂದರವಾಗಿ ವಿವರಿಸಿದ್ದಾರೆ. ಬ್ರಾಹ್ಮಣರ ಬ್ರಹ್ಮತ್ವವನ್ನು ಪ್ರಚಾರ ಮಾಡಲು ಶ್ರಿಕೃಷ್ಣ ಅವತಾರ ಎತ್ತಿದನು ಎನ್ನುತ್ತಾರೆ ಅವರು. ಇದೇ ಅವತಾರದ ಪರಮ ಉದ್ದೇಶ. ಈ ಬ್ರಾಹ್ಮಣ ಬ್ರಹ್ಮಜ್ಞ ಪುರುಷ.ಈ ಆದರ್ಶ ಸಿದ್ಧ ಮಾನವ ಇರುವುದು ಅತ್ಯಾವಶ್ಯಕ. ಬ್ರಹ್ಮಜ್ಞ ಪುರುಷ ಎಂದಿಗೂ ಮರೆಯಾಗಬಾರದು. ಈಗ ಇರುವ ವರ್ಣಗಳಲ್ಲಿ ಅದೆಷ್ಟೋ ದೋಷಗಳಿವೆ. ಆದರೆ ಎಲ್ಲರೂ ಬ್ರಾಹ್ಮಣರಿಗೆ ಗೌರವ ಕೊಡಲು ಸಿದ್ಧರಿರಬೇಕು. ಉಳಿದ ವರ್ಗಗಳಿಗಿಂತ ಬ್ರಾಹ್ಮಣ ವರ್ಗದಲ್ಲಿ ಹೆಚ್ಚು ಬ್ರಹ್ಮಜ್ಞರಿರುವರು. ಇದು ಸತ್ಯ. ….. ಮಲಬಾರಿನಲ್ಲಿ ನಾನು ನೋಡಿರುವುದಕ್ಕಿಂತಲೂ ಹಾಸ್ಯಾಸ್ಪದವಾದುದು ಮತ್ತೆಲ್ಲಿಯಾದರೂ ಇರುವುದೇ ? ಸತ್ಕುಲ ಪ್ರಸೂತನಿರುವ ಬೀದಿಯಲ್ಲಿ ನಡೆಯಲು ಹೊಲೆಯನಿಗೆ ಅವಕಾಶವಿಲ್ಲ… ಮಲೆಯಾಳಿಗಳೆಲ್ಲ ಹುಚ್ಚರು. ಅವರದು ಹುಚ್ಚರ ಆಸ್ಪತ್ರೆ. ……. ಶೂದ್ರನು ವೇದವನ್ನು ಕೇಳಿದರೆ ಅವನ ಕಿವಿಗೆ ಕಾದ ಸೀಸ ಸುರಿಯಿರಿ. ಅವನು ಒಂದು ಶ್ಲೋಕ ಉಚ್ಛರಿಸಿದರೆ ನಾಲಗೆಯನ್ನು ಕತ್ತರಿಸಿ, ಬ್ರಾಹ್ಮಣನನ್ನು ‘ಎಲೈ ಬ್ರಾಹ್ಮಣನೇ ಎಂದರೆ ಅವನ ನಾಲಗೆಯನ್ನು ಸೀಳಿ. ಇದೊಂದು ನಿಸ್ಸಂದೇಹವಾಗಿ ಅನಾಗರಿಕ ರಾಕ್ಷಸಿ ಕೃತ್ಯ. ಅದನ್ನು ಹೇಳಬೇಕಾಗಿಲ್ಲ. ಸ್ಮೃತಿಕರರನ್ನು ದೂರಿ ಪ್ರಯೋಜನವಿಲ್ಲ. ಅವರು ಆ ಕಾಲದಲ್ಲಿ ಬಳಕೆಯಲ್ಲಿದ್ದ ಆಚಾರಗಳನ್ನು ಬರೆದಿಟ್ಟಿದ್ದಾರೆ…… ಭಾರತದಲ್ಲಿ ಇತರರ ಮುಕ್ತಿಗೆ ಕೆಲಸ ಮಾಡುವುದು ಬ್ರಾಹ್ಮಣರ ಕರ್ತವ್ಯ. ಅದನ್ನು ಬಿಟ್ಟು ಅವರು ಹಣ ಸಂಪಾದಿಸಲು ಹೊರಟರೆ ಅವರು ಬ್ರಾಹ್ಮಣರಲ್ಲ. (158)
ಭಗವಾನ್ ಬುದ್ಧ –ಡೆಟ್ರಾಯಿಟ್ ಭಾಷಣ : ಆಗಿನ ಕಾಲದಲ್ಲಿ ನಡೆಯುತ್ತಿದ್ದ ಅನವಶ್ಯಕ ಚರ್ಚೆ , ಆಚಾರ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜಾತಿ ಪದ್ದತಿ ಇವುಗಳನ್ನು ನೋಡಿ ರೋಸಿ ಬೌದ್ಧ ಧರ್ಮವನ್ನು ಸ್ಥಾಪಿಸಿದನು. ಕೆಲವರು ತಾವೊಂದು ಜಾತಿಯಲ್ಲಿ ಹುಟ್ಟಿರುವುದರಿಂದ ಹಾಗೆ ತಾಳದ ಇತರರಿಗಿಂತ ಮೇಲೆಂದು ಭಾವಿಸುವರು. ಗೌತಮ ಪೌರೋಹಿತ್ಯವನ್ನು ಕಟುವಾಗಿ ವಿರೋಧಿಸಿದ್ದನು. (159)
ಶರತ್ ಚಂದ್ರ ಚಕ್ರವರ್ತಿಗೆ ಹೇಳಿದ್ದು - ಶಂಕರರು ಉದಾರಿಗಳಲ್ಲ. ಆವರಲ್ಲಿ ಬ್ರಾಹ್ಮಣ ಅಭಿಮಾನ ಹೆಚ್ಚಾಗಿದ್ದಿತು. ದಕ್ಷಿಣದ ವೈದಿಕ ಬ್ರಾಹ್ಮಣನ ಮಗ . ಮತ್ತಿನ್ನೇನು ? ಬ್ರಾಹ್ಮಣೇತರರಿಗೆ ಬ್ರಹ್ಮಜ್ಞಾನವಿಲ್ಲ ಮುಂತಾದ ಅಂಶಗಳನ್ನು ವೇದಾಂತ ಭಾಷ್ಯದಲ್ಲಿ ಹೇಗೆ ಸಮರ್ಥನೆ ಮಾಡಿಕೊಂಡು ಹೋಗಿದ್ದಾರೆ. .. ವೇದವೇನೋ ತ್ರಿವರ್ಣದವರಿಗೆ ಮಾತ್ರ ವೇದಾಧ್ಯಯನ , ಬ್ರಹ್ಮಜ್ಞಾನಗಳ ಅಧಿಕಾರ ಕೊಟ್ಟಿದೆ. …. (160)
೧೮೯೭ ಫೆಬ್ರವರಿಯಲ್ಲಿ ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನ – ಒಂದೊಂದು ಕಾಲದಲ್ಲಿ ಒಂದೊಂದು ಸ್ಮೃತಿ ಜಾರಿಯಲ್ಲಿರುವುದು. ಕೆಲವು ಮಹಾತ್ಮರು ಅಂತ್ಯಜರಿಗೆ ಅನುಕೂಲ ಮಾಡಿಕೊಟ್ಟರು. ಮಧ್ವರಂತಹವರು ಹೆಂಗಸರಿಗೂ ವೇದ ಓದುವ ಅಧಿಕಾರ ಇದೆಯೆಂದರು. ಜಾತಿ ಪದ್ದತಿ ಹೋಗಬೇಕಾಗಿಲ್ಲ. ಅದು ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಹೋಗಬೇಕಷ್ಟೇ. ಆ ಹಳೆಯ ಪದ್ದತಿಯಲ್ಲಿಯೇ ಬೇಕಾದಷ್ಟು ಹೊಸದನ್ನು ಮಾಡುವ ಪ್ರಾಣಶಕ್ತಿಯಿದೆ. ವರ್ಣಗಳನ್ನು ಧ್ವಂಸ ಮಾಡುವುದು ತಿಳಿಗೆಡಿತನ. ಹಳೆಯದು ರೂಪಾಂತರ ಹೊದುವುದೇ ಸರಿಯಾದ ಮಾರ್ಗ. (161)
ಭಾರತದ ಮಹಾಪುರುಷರು- ಮದ್ರಾಸ್ ಭಾಷಣ : ರಾಮಾನುಜರ ಕಾಲದಿಂದ ನೀವು ಒಂದನ್ನು ಗಮನಿಸಬಹುದು. ಅದೇ ಪ್ರತಿಯೊಬ್ಬರಿಗೂ ಅಧ್ಯಾತ್ಮ ವಿದ್ಯೆಯ ಅಧಿಕಾರವನ್ನು ನೀಡಿದರು. ಶಂಕರಾಚಾರ್ಯರಿಗಿಂತ ಮುಂಚಿನ ಆಚಾರ್ಯರ ಮುಖ್ಯ ಪಲ್ಲವಿಯೂ ಇದೇ ಆಗಿತ್ತು. .. ಶಂಕರಾಚಾರ್ಯರು ಸಂಕುಚಿತ ಮನೋಧರ್ಮದವರು ಎಂದು ಏತಕ್ಕೆ ಹೇಳುವರೋ ಗೊತ್ತಿಲ್ಲ. (162)
ಸ್ವಾಮಿಗಳು ಮೇರಿ ಹೇಲ್’ಗೆ ಬರೆದ ಪತ್ರ (೧/೧೧/೧೮೯೬) - ‘ ಮಾನವ ಸಮಾಜ ಕ್ರಮವಾಗಿ ಬ್ರಾಹ್ಮಣ ,ಕ್ಷತ್ರಿಯ , ವೈಶ್ಯ , ಶೂದ್ರರೆಂಬ ನಾಲ್ಕು ವರ್ಣದವರಿಂದ ಆಳಲ್ಪಡುತ್ತಿದೆ. ಪ್ರತಿವರ್ಗದ ಆಳ್ವಿಕೆಯಲ್ಲಿ ಒಳ್ಳೆಯದು ಅದರಂತೆ ಕೆಟ್ಟದ್ದು ಇರುತ್ತದೆ. ಬ್ರಾಹ್ಮಣ ಆಳ್ವಿಕೆಯಲ್ಲಿ ಅನುವಂಶಿಕತೆಯನ್ನು ಆಧರಿಸಿದ ಅತಿಯಾದ ಪ್ರತ್ಯೇಕತಾ ಮನೋಭಾವ ಇರುತ್ತದೆ. ಬ್ರಾಹ್ಮಣರು ಮತ್ತು ಅವರ ವಂಶಗಳಿಗೆ ಸಾಕಷ್ಜ್ಟು ರಕ್ಷಣೆ ಇರುತ್ತದೆ. ಅವರಿಗಲ್ಲದೆ ಬೇರೆ ಯಾರಿಗೂ ಜ್ಞಾನಾರ್ಜನೆ , ಹಂಚಿಕೆಯ ಹಕ್ಕಿರುವುದಿಲ್ಲ. ಈ ಯುಗದ ಶ್ರೇಷ್ಟತೆ ಏನೆಂದರೆ ಎಲ್ಲ ಬಗೆಯ ವಿಜ್ಞಾನಗಳಿಗೂ ತಳಹದಿ ಹಾಕಲಾಯಿತು. ಬ್ರಾಹ್ಮಣರು ಬುದ್ದಿಯ ಪೋಷಕರು. ಏಕೆಂದರೆ ಬುದ್ದಿಯಿಂದಲೇ ಅವರು ಆಳುತ್ತಾರೆ. ಕ್ಷತ್ರಿಯನ ಕಾಲದಲ್ಲಿ ಕ್ರೌರ್ಯ ದಬ್ಬಾಳಿಕೆ ಪ್ರಧಾನವಾಗಿರುತ್ತದೆ. ಆದರೆ ಪ್ರತ್ಯೇಕತೆಯ ಪಿಡುಗಿರುವುದಿಲ್ಲ. ಆ ಕಾಲದಲ್ಲಿ ಕಲೆ, ಸಮಾಜ, ಸಂಸ್ಕೃತಿಗಳು ಹೆಚ್ಚು ಏಳ್ಗೆ ಹೊಂದುತ್ತವೆ. ವೈಶ್ಯರ ಆಳ್ವಿಕೆ ನಂತರ ಬರುವುದು ಮೌನವಾದ ದಬ್ಬಾಳಿಕೆ , ಜನರನ್ನು ಸುಲಿದು ತಿನ್ನುವುದರಲ್ಲಿ ಇದು ಮುಂದಿರುವುದು. ಇದರ ಅನುಕೂಲವೆಂದರೆ ವ್ಯಾಪಾರಸ್ಥರು ಎಲ್ಲ ಕಡೆಗೆ ಹಬ್ಬುವುದರಿಂದ ಹಿಂದಿನ ಇಬ್ಬರ ಆಳ್ವಿಕೆಯ ಕಾಲದಲ್ಲಿ ಶೇಖರಗೊಂಡಿದ್ದ ಭಾವನೆಗಳನ್ನು ಹರಡಲು ನೆರವಾಗುವರು. ಕ್ಷತ್ರಿಯರಿಗಿಂತ ಇವರು ಇನ್ನೊಬ್ಬರೊಂದಿಗೆ ಸಹಕರಿಸುವುದು ಹೆಚ್ಚು. ಆದರೆ ಸಂಸ್ಕೃತಿ ಕ್ಷೀಣಗೊಳ್ಳುವುದು. ಕೊನೆಗೆ ಶೂದ್ರನ ಆಳ್ವಿಕೆ ಬರುವುದು. ಅದರ ಅನುಕೂಲ ಏನೆಂದರೆ ಲೌಕಿಕ ಸೌಕರ್ಯಗಳು ಎಲ್ಲರಿಗೂ ಸಮವಾಗಿ ಹಂಚಲ್ಪಡುತ್ತವೆ. ಆದರ ಅನಾನುಕೂಲ ಸಂಸ್ಕೃತಿಯ ಹೀನತೆ. ಎಲ್ಲರಲ್ಲಿಯೂ ಸಾಧಾರಣ ವಿದ್ಯೆ. ಹರಡುವುದು, ಆದರೆ ಪ್ರತಿಭಾವಂತರು ಕಡಿಮೆಯಾಗುವರು.
ಮಾತಿನ ನಡುವೆ ಒಮ್ಮೆ ಶಿಷ್ಯ ಶರತ್ ಚಂದ್ರ ಚಕ್ರವರ್ತಿಯನ್ನು ಕೊಡವುತ್ತ ನಿಮ್ಮ ದೇಶದಲ್ಲಿ ಜಾತಿಯನ್ನು ದೊಡ್ಡದು ಮಾಡಿಕೊಂಡು ನಿಮಗೆ ಅನ್ನವೂ ಹುಟ್ಟದಂತಾಗಿದೆ , ನಿಮಗೆ ಸೂಜಿಯನ್ನೂ ತಯಾರಿಸುವ ಯೋಗ್ಯತೆಯಿಲ್ಲ. ಕೀಳು ಜಾತಿಯವರಲ್ಲಿ ಈಗ ಎಚ್ಚರ ಮೂಡುತ್ತಿದೆ. ಇನ್ನು ಸಾವಿರ ಸಲ ಯತ್ನಿಸಿದರೂ ಅದನ್ನು ಮೇಲು ಜಾತಿಯವರು ತಡೆಯಲಾಗದು . ಈಗ ಇತರ ಮೇಲು ಜಾತಿಯವರು ಅವರಿಗೆ ನೆರವಾದರೆ ಅವರಿಗೇ ಒಳ್ಳೆಯದಾಗುವುದು ಎಂದರು. ಆಗ ಶಿಷ್ಯ ಕೀಳು ಜಾತಿಯವರಿಗೆ ಶಿಕ್ಷಣ ದಕ್ಕಿದರೆ ಈಗ ಶಿಕ್ಷಣ ಪಡೆದ ಮೇಲು ಜಾತಿಯವರಂತೆ ಅವರೂ ಕೂಡ ಸೋಮಾರಿಗಳು , ನೌಕರಿ ಬಯಸುವವರು , (ದೈಹಿಕ) ಕೆಲಸ ಮಾಡದವರು ಆಗುತ್ತಾರೆ ಎನ್ನುವ ವಾದವನ್ನು ಮುಂದಿರಿಸಿದ. ಅದನ್ನು ಅಲ್ಲಗಳೆಯುತ್ತ ಸ್ವಾಮಿಗಳು ಅದು ಹಾಗೇ ಏಕಾಗುತ್ತದೆ. ಜ್ಞಾನೋದಯವಾದರೆ ಕುಂಬಾರ ಕುಂಬಾರನಾಗಿ , ರೈತ ರೈತನಾಗಿ , ಬೆಸ್ತ ಬೆಸ್ತನಾಗಿಯೇ ಇರುತ್ತಾನೆ. ಜಾತಿಯ ಕೆಲಸವನ್ನು ಏಕೆ ಬಿಡುತ್ತಾನೆ. ‘ದೋಷಪೂರ್ಣವಾದರೂ ನಿನಗೆ ಸಹಜವಾದ ಕರ್ಮವನ್ನು ಬಿಡಬೇಡ ಎಂದು ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ. ಜ್ಞಾನ ಬಲದಿಂದ ಅವರು ತಮ್ಮ ಸಕಜ ಕರ್ಮಗಳನ್ನು ಉತ್ತಮಗೊಳಿಸುತ್ತಾರೆ. ಕಾಲಾನುಕ್ರಮೇಣ ಅವರಲ್ಲಿ ಹತ್ತಾರು ಜನ ಪ್ರಭಾವಶಾಲಿಗಳಾದವರು ಅವರಲ್ಲಿ ಹುಟ್ಟುತ್ತಾರೆ. ಆಗ ಅವರನ್ನು ನೀವು ನಿಮ್ಮ ಶ್ರೇಣಿಗೆ ಸೇರಿಸಿಕೊಳ್ಳುತ್ತೀರಿ’ ಎನ್ನುವ ವಿವರಣೆ ನೀಡಿದರು. ಇನ್ನೊಂದು ದಿನ ಶಿಷ್ಯನಿಗೆ ತಮ್ಮ ಮುಂದಿನ ಯೋಜನೆಗಳನ್ನು ತಿಳಿಸುತ್ತ ತಾವು ಸ್ಥಾಪಿಸಿದ ವಿದ್ಯಾ ಸಂಸ್ಥೆಗಳಲ್ಲಿ ಜಾತಿ , ವರ್ಣಗಳ ತಾರತಮ್ಯವಿಲ್ಲದೆ ಶಿಕ್ಷಣ ದೊರೆಯುವ ಭರವಸೆ ನೀಡುತ್ತ ಯಾರು ಜಾತಿ , ವರ್ಣಾಶ್ರಮಗಳನ್ನು ಅನುಸರಿಸಲು ಇಚ್ಛಿಸುವರೋ ಅವರು ತಮ್ಮ ಊಟೋಪಾಚಾರಗಳನ್ನು ತಾವೇ ಏರ್ಪಾಡು ಮಾಡಿಕೊಳ್ಳಬೇಕೆಂದು ಸೂಚಿಸಿದರು. (163)
ಸುರೇಂದ್ರನಾಥ ಸೇನರಿಗೆ ಹೇಳಿದ್ದು ೨೪/೧೧/೧೮೯೮- ಪರಧರ್ಮವನ್ನು ಅವಲಂಬಿಸಿದ ಜನಾಂಗಗಳೊಡನೆ ಅಂತರ್ಜಾತಿ ವಿವಾಹ ಸೂಕ್ತವೆಂದು ನಾನು ಹೇಳುವುದಿಲ್ಲ. ಹಿಂದೂಗಳಲ್ಲಿಯೇ ಮೊದಲಿಗೆ ಒಂದೇ ಜಾತಿಯ ಒಳ ಪಂಗಡಗಳ ನಡುವೆ ಮೊದಲು ಮದುವೆ ಜಾರಿಯಾಗಬೇಕು. ಸುಧಾರಣೆ ಎಂದರೆ ಸಂಪುರ್ಣವಾಗಿ ಧ್ವಂಸ ಮಾಡುವುದಲ್ಲ’ ಎಂದು ಸುರೇಂದ್ರನಾಥ ಸೇನನಿಗೆ ತಿಳಿಸಿದ್ದರು. (164)
-ವೇದಗಳಿಗೆ ಅಪಾರ್ಥ ಮಾಡಲು ವ್ಯಾಸ ಹಿಂಜರಿಯುವುದಿಲ್ಲ ಎನ್ನುವ ಸ್ವಾಮಿಗಳು ಇನ್ನೊಂದು ಕಡೆ ಜಾತಿ ವಿಭಜನೆ ಇತ್ತೀಚಿನ ಕಪಟಿ ಬ್ರಾಹ್ಮಣರಿಂದ ಬಂದಿದೆ ಎನ್ನುತ್ತಾರೆ. ಧಾರ್ಮಿಕ ಮತ್ತು ಸಾಮಾಜಿಕ ವ್ಯವಹಾರ ಎರಡರಲ್ಲೂ ಕೈ ಹಾಕಿದವರು ಕೇವಲ ಪುರೋಹಿತರಲ್ಲ ; ಧರ್ಮಸೂತ್ರಗಳನ್ನು , ಸ್ಮೃತಿಗಳನ್ನು ಬರೆದ ಪ್ರಾಚೀನ ಋಷಿಗಳು. ಸ್ವಾಮಿಗಳು ಬ್ರಾಹ್ಮಣ್ಯ ಶ್ರೇಷ್ಟ ಎಂದಾಗ ಬ್ರಾಹ್ಮಣರು ವೇದಗಳನ್ನು ಓದುತ್ತಾರೆ ಆದ್ದರಿಂದ ಎನ್ನುವ ಕಾರಣ ಅವರ ಮನಸ್ಸಿನಲ್ಲಿರುವುದು ನಿಚ್ಚಳ ಶಂಕರರು ಹಾಕಿಕೊಟ್ಟ ಮಾದರಿ ಎಂದರೆ ಯಾವುದು ಎನ್ನುವುದನ್ನು ಸ್ಪಷ್ಟಪಡಿಸುವುದಿಲ್ಲ. ಶಂಕರರು ಭಾವನಾವಾದಿ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎನ್ನುತ್ತಾರೆಯೇ ಹೊರತು ಸಾಮಾಜಿಕ , ಲೌಕಿಕ ದೃಷ್ಟಿಯಲ್ಲಲ್ಲ. ಅವರು ಭಗವದ್ಗೀತೆಗೆ ಬರೆದ ಭಾಷ್ಯದಲ್ಲಿ ‘ವರ್ಣಗಳು ತಮಗೆ ಲಗತ್ತಾಗಿರುವ ಕೆಲಸಗಳನ್ನು ಮೀರುವಂತಿಲ್ಲ. ಸ್ವಂತ ಧರ್ಮದಲ್ಲಿ (=ವರ್ಣ) ಸಾಯುವುದೇ ಶ್ರೇಯ. ಅದನ್ನು ಮೀರಿದರೆ ಭಯ’ ಎನ್ನುತ್ತಾರೆ. ಖಾಸಗಿಯಾಗಿ ಶಿಷ್ಯನ ಮುಂದೆ ಶಂಕರ ಉದಾರಿಯಲ್ಲ ಎಂದಿದ್ದದವರು ಸಾರ್ವಾನಿಕವಾಗಿ ಆತನನ್ನು ಸಂಕುಚಿತನೆಂದು ಏಕೆ ಕರೆಯುತ್ತಾರೋ ಗೊತ್ತಿಲ್ಲ ಎನ್ನುತ್ತಾರೆ. ರಾಮಾನುಜರ ಸಮಾಜ ಸುಧಾರಣೆ ಮಾದರಿ ಯಶಸ್ವಿಯೇ ಆಗಿದ್ದರೆ ಹಿಂದೂ ಧರ್ಮದಲ್ಲಿ ಏಕೆ ತಾರತಮ್ಯ ಉಳಿದುಕೊಂಡಿದೆ ಎನ್ನುವುದನ್ನು ಸ್ವಾಮಿಗಳು ಬಿಚ್ಚಿ ಹೇಳುವುದಿಲ್ಲ. ಸ್ವಾಮಿಗಳ ಮದ್ರಾಸ್ ಶಿಷ್ಯರಲ್ಲಿ ತ್ರಿಮತಸ್ಥ ಬ್ರಾಹ್ಮಣರೇ ಅಧಿಕರಾಗಿದ್ದರಿಂದ ಅವರಿಗೆ ನೋವಾಗದಂತೆ ‘ಸಮಾಜ ಸುಧಾರಣೆ’ ಮಾಡುವ ಯೋಚನೆಯ ಫಲವಾಗಿ ಶಂಕರ, ರಾಮಾನುಜರ ಮಾರ್ಗಗಳು ಹೊಳೆದಿವೆ.
-ಮೊದಲಿನಂತೆ ಸಮಾಜವನ್ನು ನಾಲ್ಕು ವರ್ಣಗಳಲ್ಲಿ ವಿಭಜಿಸಬೇಕು ಎನ್ನುವ ಸ್ವಾಮಿಗಳು ಮುಂದಿನ ಉಸಿರಿನಲ್ಲಿ ವೇದ ಕಾಲದಲ್ಲಿದ್ದಂತೆ ಮೂರು ವರ್ಣಗಳು ಮತ್ತೊಮ್ಮೆ ಬರಬೇಕು ಎನ್ನುತ್ತಾರೆ. ಸ್ವಾಮಿಗಳು ಮೂರು ಗುಣಗಳಿಂದ ನಾಲ್ಕನೇ ಶೂದ್ರರನ್ನು , ಐದನೆಯ ಪಂಚಮರನ್ನು ಗುರುತಿಸುವ ಮಾರ್ಗ ಹೇಗೆಂದು ತಿಳಿಸುವುದಿಲ್ಲ. ಅಮೆರಿಕ , ಇಂಗ್ಲೆಂಡ್ ಸುತ್ತಿ ಬಂದ ನಂತರ ಸ್ವಾಮಿಗಳಲ್ಲಿ ಸಮಾಜದ ಬಗ್ಗೆ ಯಾವ ಹೊಸ ದೃಷ್ಟಿಕೋನವೂ ಉಂಟಾಗದೆ ಮನುವಿಗೆ ಶರಣಾಗಿದ್ದಾರೆ. ಹಣ ಕೊಟ್ಟರೆ – ತಮಗೆ ಲಾಭವಾಗುವಂತಿದ್ದರೆ – ಏನನ್ನು ಬೇಕಾದರೂ ಬರೆದುಕೊಡಬಲ್ಲ ಪುರೋಹಿತರಲ್ಲಿ ಮನು , ಯಾಜ್ಞವಲ್ಕ್ಯರೂ ಸೇರಿರುವ ಸಂಶಯ ಮೂಡಿಲ್ಲ. ಸ್ವಾಮಿಗಳ ಈ ಸುಧಾರಣೆಗಳಲ್ಲಿ ಧಾರ್ಮಿಕ , ಲೌಕಿಕ ಯಾವುದೇ ಉನ್ನತ ಜ್ಞಾನ ಗಳಿಸಿದರೂ ಕುಂಬಾರ ಕುಂಬಾರನೇ. ಆತ ಕೊನೆಗೆ ಅಡಿಯಾಳಾಗಬೇಕಾಗಿರುವುದು ಮನು , ಯಾಜ್ಞವಲ್ಕ್ಯರಿಗೇ ! ಶಿಷ್ಯ ಹಾಗೆ ಹಿಂದಿನ ಕಾಲಕ್ಕೆ ಹೋಗುವುದು ಸಾಧ್ಯವೇ ಎಂದಾಗ ಮನು , ಯಾಜ್ಞವಲ್ಕರದ್ದು ಪವಿತ್ರ ನಿಷ್ಕಾಮ ಕರ್ಮ ಎನ್ನುವುದೇ ಸ್ವಾಮಿಗಳ ಉತ್ತರವಾಗಿದ್ದಿತು. ಧರ್ಮದೊಳಗೆ ಮಾತ್ರ ಅಂತರ್ಜಾತೀಯ ವಿವಾಹ ಇರಬೇಕು. ಧರ್ಮಗಳ ನಡುವೆ ಇದ್ದರೆ ಅದು ಸಮಾಜದ ಕಟ್ಟುಪಾಡುಗಳನ್ನು ಸಡಿಲಿಸುವುದು ಎಂದು ಸುರೇಂದ್ರನಾಥ ಸೇನನಿಗೆ ತಿಳಿಸಿದ್ದರು. ಸ್ವಾಮಿಗಳ ಈ ಎಲ್ಲ ಹೇಳಿಕೆಗಳು ಯಾವುದೇ ಶಿಸ್ತುಬದ್ಧ ಸಾಮಾಜಿಕ ಅಧ್ಯಯನಗಳಿಂದ ಬಂದಿರದೆ ಸಾಂಪ್ರದಾಯಿಕ ವರ್ಣ ವಿವರಣೆಯನ್ನು ಆಧರಿಸಿವೆ. ಇದರಿಂದಾಗಿ ಸ್ವಾಮಿಗಳ ಸಮಾಜ ಸುಧಾರಣೆ ಒಮ್ಮೆಮ್ಮೆ ಒಂದೊಂದು ರೀತಿ ಕಾಣುತ್ತದೆ. ಶೂದ್ರರ ಆಳ್ವಿಕೆಯಲ್ಲಿ ಪ್ರತಿಭಾವಂತರು ಕಡಿಮೆಯಾಗುತ್ತಾರೆ ಎಂದಾಗ ಅದರಲ್ಲಿ ಮೊದಲಿನಿಂದಲೂ ಪ್ರತಿಭಾವಂತರಾಗಿದ್ದ ಬ್ರಾಹ್ಮಣರು ಸೇರಿರುತ್ತಾರೋ ಇಲ್ಲವೋ ಹೇಳುವುದಿಲ್ಲ. ಸ್ವಾಮಿಗಳು ಪ್ರತಿಭೆಯನ್ನು ‘ ವೇದ-ಉಪನಿಷತ್ತುಗಳ’ ಕಂಠಪಾಠ ಜ್ಞಾನದಿಂದ ಅಳೆಯುತ್ತಿದ್ದಾರೆ ಎನಿಸುತ್ತದೆ.
ಸ್ವಾಮಿಗಳು ಕ್ಯಾಸಲ್ ಕೆರ್ನಾನ್’ನಲ್ಲಿರುವಾಗ ನಡೆದ ಒಂದು ಘಟನೆಯನ್ನು ‘ರೆಮಿನಿಸೆನ್ಸಸ್’ನಲ್ಲಿ ಕೆ.ಸುಂದರರಾಮ ಅಯ್ಯರ್ ದಾಖಲಿಸಿದ್ದಾರೆ. ಸ್ವಾಮಿಗಳು ಮದ್ರಾಸ್ ಉಚ್ಛ ನ್ಯಾಯಾಲಯದ ವಕೀಲ ಕೆ.ಪಿ ಶಂಕರ ಮೆನನ್ ಜೊತೆಗೆ ಮಾತನಾಡುತ್ತ ಕುಳಿತಿದ್ದರು. ಆಗ ಅವರ ಮಾತುಕತೆ ಕೇರಳದಲ್ಲಿದ್ದ ಅಸ್ಪೃಶ್ಯತೆಯ ಬಗ್ಗೆ ಬಂದಿತು. ಆಗ ಸ್ವಾಮಿಗಳು ಮಲಬಾರಿನ ನಂಬೂದರಿ ಬ್ರಾಹ್ಮಣರು ಹಲವು ನೂರು ವರ್ಷಗಳು ಅಲ್ಲಲ್ಲ ಯುಗಗಳಿಂದಲೂ ನಾಯರ್ ಹೆಂಗಸರೊಂದಿಗೆ ಸಂಬಂಧ ಹೊಂದಿದ್ದಾರೆ. ಮನುಸ್ಮೃತಿಯ ಪ್ರಕಾರ ಏಳು ತಲೆಮಾರುಗಳಿಗೂ ಹೆಚ್ಚು ಬ್ರಾಹ್ಮಣರೊಂದಿಗೆ ಸಂಬಂಧ ಹೊಂದಿರುವವರು ಬ್ರಾಹ್ಮಣರೇ ಆಗುತ್ತಾರೆ. ಆದ್ದರಿಂದ ನಾಯರ್’ಗಳು ತಾವು ಬ್ರಾಹ್ಮಣರೆಂದು ಘೋಷಿಸಿಕೊಳ್ಳಲು ಇದು ಸಕಾಲ ಎಂದು ತಿಳಿಸಿದರು. ಸ್ವಾಮಿಗಳ ಈ ಸಲಹೆಯನ್ನು ಶಂಕರ ಮೆನನ್ ಗಂಭೀರವಾಗಿ ಚಿಂತಿಸುವಂತೆ ಮಾಡಿದ್ದಿತು. ಇದೇ ಸಮಯದಲ್ಲಿ ಶಂಕರನ್ ನಾಯರ್ ಸ್ವಾಮಿಗಳನ್ನು ಕಾಣಲು ಬಂದರು. ಆಗ ಶಂಕರ ಮೆನನ್ ಅವರಿಗೆ ಸ್ವಾಮಿಗಳ ನೀಡಿದ ಸಲಹೆಯನ್ನು ತಿಳಿಸಿದರು. ಜಾತಿ ಉನ್ನತೀಕರಣ ಮತ್ತು ಮಲಬಾರಿನಲ್ಲಿರುವ ಸೂಕ್ಷ್ಮವಾದ ಜಾತಿ ಸಮಸ್ಯೆಯನ್ನು ನನ್ನಂತಹ ಅಯ್ಯರ್ ಬ್ರಾಹ್ಮಣರ ಎದುರು ಚರ್ಚಿಸಲು ಇಚ್ಛಿಸದೆ ಶಂಕರನ್ ನಾಯರ್ ಆ ವಿಷಯವನ್ನು ಉಪಾಯವಾಗಿ ಬದಿಗೆ ಸರಿಸಿದರೆಂದು ಸುಂದರರಾಮ ಅಯ್ಯರ್ ಬರೆದಿದ್ದಾರೆ.
ಸ್ವಾಮಿಗಳು ಮನುವಿನ ಪ್ರಶಂಸಕರಾಗಿದ್ದರು. ವಿದೇಶಗಳಲ್ಲಿ ಜೀವಿಸಿ ಬಂದಿದ್ದರೂ ಹಿಂದೂ ಸಮಾಜದ ಸುಧಾರಣೆಗೆ ತಮ್ಮದೇ ಆದ ಒಂದು ಮಾದರಿ ಅವರಲ್ಲಿ ಇರಲಿಲ್ಲ . ಮನುಸ್ಮೃತಿಯನ್ನು ಸ್ವಲ್ಪ ಸುಧಾರಿಸಿ ಮತ್ತೊಮ್ಮೆ ಜಾರಿಗೆ ತಂದರೆ ಹಿಂದೂ ಸಮಾಜದ ಏಳ್ಗೆಯಾಗುವುದೆಂದು ಭಾವಿಸಿದ್ದರು. ‘ಶ್ರದ್ಧಾವಂತನು ಕೆಳಗಿನ ಜಾತಿಯವನಿಂದಲೂ ಒಳ್ಳೆಯ ವಿದ್ಯೆಯನ್ನು ಕಲಿಯಬೇಕು . ಸ್ತ್ರೀರತ್ನ ನೀಚ ಕುಲದಲ್ಲಿ ಹುಟ್ಟಿದ್ದರೂ ಅವಳನ್ನು ಸ್ವೀಕರಿಸಬೇಕು ‘ ಎನ್ನುವ ಮನುವಿನ ಶ್ಲೋಕವನ್ನು ಸ್ವಾಮಿಗಳು ಮದ್ರಾಸ್ ತಿರುವಳ್ಳುಕೇಣಿಯಲ್ಲಿ ನೀಡಿದ ‘ನಮ್ಮ ಪ್ರಸ್ತುತ ಕರ್ತವ್ಯ’ ಲಾಹೋರಿನಲ್ಲಿ ನೀಡಿದ ‘ಹಿಂದೂ ಧರ್ಮದ ಸಾಮಾನ್ಯ ತತ್ತ್ವಗಳು ‘ ಭಾಷಣಗಳಲ್ಲಿ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಸಂವಾದಗಳ ನಡುವೆ ಹೇಳಿದ್ದರು. ಈ ಹೇಳಿಕೆ ಕೊಟ್ಟು ಮನು ಮಹರ್ಷಿ ಎಷ್ಟು ಉದಾತ್ತ ಚಿಂತಕ ಎಂದು ಹೊಗಳುತ್ತಿದ್ದರು. ಸ್ವಾಮಿಗಳ ಮಾತುಗಳನ್ನು ಕೇಳುತ್ತಿದ್ದ , ಸಂಸ್ಕೃತದಲ್ಲಿದೆ ಎನ್ನುವ ಒಂದೇ ಕಾರಣಕ್ಕೆ ಪೂಜ್ಯ ಭಾವನೆ ತಳೆಯುತ್ತಿದ್ದ ಕೇಳುಗರಿಗೆ ಮನುಸ್ಮೃತಿಯಲ್ಲಿ ನಿಜವಾಗಿಯೂ ಏನಿದೆಯೆಂದು ತಿಳಿಯುತ್ತಿರಲಿಲ್ಲ. ಅಷ್ಟೇ ಅಲ್ಲ ಹಿಂದೂ ಧರ್ಮ ‘ಮುಟ್ಟದಿರಿ’ ಎನ್ನುವ ಧರ್ಮವಾಗಿದೆ ಎಂದು ಮೇಲಿಂದ ಮೇಲೆ ಟೀಕಿಸುತ್ತಿದ್ದ ಸ್ವಾಮಿಗಳು ಈ ‘ಮುಟ್ಟದಿರಿ’ ಧರ್ಮದ ಮೂಲ ಮಾದರಿ ಮನುಸ್ಮೃತಿಯ ೧೦ನೇ ಅಧ್ಯಾಯದಲ್ಲಿದೆ ಎಂದು ತಿಳಿಯುವಲ್ಲಿ ವಿಫಲರಾಗಿದ್ದರು.
ಮನುಸ್ಮೃತಿಯ ಮೂರನೆಯ ಅಧ್ಯಾಯ ವಿವಿಧ ವರ್ಣಗಳ ಮದುವೆಯ ವಿಚಾರಗಳನ್ನು ತಿಳಿಸುತ್ತದೆ. ‘ದ್ವಿಜರಿಗೆ ( ಬ್ರಾಹ್ಮಣ , ಕ್ಷತ್ರಿಯ , ವೈಶ್ಯ) ಮೊದಲ ಮದುವೆಯಲ್ಲಿ ಅವರ ಜಾತಿಯ ಹೆಣ್ಣೇ ಆಗಬೇಕು. ದೇಹ ಸುಖಕ್ಕಾಗಿ ಆಗುವ ನಂತರದ ಮದುವೆಗಳಲ್ಲಿ ಬೇರೆ ಜಾತಿಯವರಾಗಬಹುದು. (೩/೧೨) , ಪ್ರತಿ ವರ್ಣದವರು ತಮ್ಮ ಕೆಳವರ್ಣದ ಹೆಣ್ಣುಗಳನ್ನು(ದೇಹ ಸುಖಕ್ಕಾಗಿ) ಮದುವೆಯಾಗಬಹುದು. (೩/೧೩) , ಎಂತಹುದೇ ಸಂದರ್ಭದಲ್ಲಿ ಬ್ರಾಹ್ಮಣ , ಕ್ಷತ್ರಿಯರ ಮೊದಲ ಹೆಂಡತಿ ಶೂದ್ರಳಾಗಿರಬಾರದು (೩/೧೪) ಹಾಗೆ ಮದುವೆಯಾದರೆ ಕುಲನಾಶ (೩/೧೫) ಶೂದ್ರಳಿಗೆ ಹಾಸಿಗೆ ಸುಖ ನೀಡಿದರೆ ಬ್ರಾಹ್ಮಣನು ಪತಿತನಾಗುತ್ತಾನೆ. ಆಕೆಯಲ್ಲಿ ಮಕ್ಕಳನ್ನು ಹುಟ್ಟಿಸಿದರೆ (ಎಂದರೆ ಹುಟ್ಟಿಸದಂತೆ ಸುಖಿಸಬಹುದು ) ಬ್ರಾಹ್ಮಣ್ಯದಿಂದ ದೂರವಾಗುತ್ತಾನೆ (೩/೧೭) ಮೇಲಿನ ವರ್ಣದ ಗಂಡು ಕೆಳವರ್ಣದ ಹೆಣ್ಣಿನ ಅನುಲೋಮ ಮದುವೆಯಿಂದ ಹುಟ್ಟಿದ ಮಕ್ಕಳು ತಂದೆಯ ಸದೃಶ್ಯರೇ ಹೊರತು ಆತನ ಜಾತಿಗೆ ಸೇರುವುದಿಲ್ಲ (೧೦/೬) ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮನುಸ್ಮೃತಿ ೧೦ ನೇ ಅಧ್ಯಾಯ (೧೦/೬೫) ಮತ್ತು ಯಾಜ್ಞವಲ್ಕ್ಯ ಸ್ಮೃತಿ ವರ್ಣ ಜಾತಿ ವಿವೇಕ ಪ್ರಕರಣದಲ್ಲಿ ಬ್ರಾಹ್ಮಣನಿಂದ ಶೂದ್ರ ಹೆಣ್ಣಿನಲ್ಲಿ ಉತ್ಪನ್ನಳಾದ ನಿಷಾಧಿಯನ್ನು ಬ್ರಾಹ್ಮಣನು ಮದುವೆಯಾದರೆ , ಅವಳಲ್ಲಿ ಹುಟ್ಟುವ ಕನ್ಯೆಯನ್ನು ಮತ್ತೆ ಬ್ರಾಹ್ಮಣನೇ ಮದುವೆಯಾದರೆ ಅದರಂತೆ ಮುಂದುವರೆದರೆ ಏಳನೇ ತಲೆಮಾರಿನವರು ಬ್ರಾಹ್ಮಣರಾಗುತ್ತಾರೆ , ಹೀಗೆ ಬ್ರಾಹ್ಮಣ-ವೈಶ್ಯ , ಬ್ರಾಹ್ಮಣ-ಕ್ಷತ್ರಿಯ ಅನುಲೋಮ ರಕ್ತ ಸಂಬಂಧಗಳು ಆರು ಮತ್ತು ಐದನೇ ತಲೆಮಾರಿನಲ್ಲಿ ಬ್ರಾಹ್ಮಣರಾಗುತ್ತವೆ ಎಂದು ಹೇಳಲಾಗಿದೆ. ಸ್ವಾಮಿಗಳು ಮಲಬಾರಿನ ಸಾಮಾಜಿಕ ಸ್ಥಿತಿಗತಿಗಳನ್ನು ವಿವರಿಸುತ್ತ ೨೦/೯/೧೮೯೨ ರಂದು ಬರೆದ ಪತ್ರದಲ್ಲಿ the females, even of the royal family, hold it as high honor to live in concubinage with the Brahmin (ರಾಜಮನೆತನದವರು ಸೇರಿದಂತೆ ಎಲ್ಲ ಹೆಂಗಸರು ಬ್ರಾಹ್ಮಣರ ಉಪಪತ್ನಿಯರಾಗಿರುವುದು ಗೌರವವೆಂದು ಭಾವಿಸುತ್ತಾರೆ’) ಎಂದು ಬರೆದಿದ್ದರು. ಇದು ಮನು ಪ್ರತಿಪಾದಿಸಿದ ಕೆಳವರ್ಣದ ಹೆಣ್ಣುಗಳನ್ನು ದೇಹ ಸುಖಕ್ಕಾಗಿ ಮದುವೆಯಾಗುವ ಬ್ರಾಹ್ಮಣನ ದಿವ್ಯ ಅಧಿಕಾರದಿಂದ ಮೂಡಿಬಂದಿದ್ದ ಪದ್ದತಿಯಾಗಿದ್ದಿತು. ಸ್ವಾಮಿಗಳು ಧರ್ಮಸ್ಮೃತಿಗಳನ್ನು ಅಧ್ಯಯನಶೀಲರಾಗಿ ಓದಿರಲಿಲ್ಲ. ಆಸಕ್ತಿದಾಯಕವೆನಿಸುವ ಒಂದೆರಡು ಶ್ಲೋಕಗಳನ್ನು ನೆನಪಿನಲ್ಲಿರಿಸಿಕೊಂಡು ಭಾಷಣಗಳಲ್ಲಿ ಆಕರ್ಷಕವಾಗಿ ಹೇಳುತ್ತಿದ್ದರಷ್ಟೇ. ಅಮೆರಿಕದಲ್ಲಿರುವಂತೆ ಸಾಮಾಜಿಕ ಕಾನೂನುಗಳು ಎಲ್ಲ ನಾಗರಿಕರಿಗೂ ಒಂದೇ ಎನ್ನುವಂತಹ ಚಿಂತನೆ ಅಥವಾ ದಿಟ್ಟತನ ಸ್ವಾಮಿಗಳಿಗೆ ಇರಲಿಲ್ಲ.
ಪ್ರಬುದ್ಧ ಭಾರತ ಪತ್ರಿಕೆಗಾಗಿ ಗಂಗಾನದಿಯ ಮೇಲೆ ತೇಲುವ ದೊಣಿಯಲ್ಲಿದ್ದ ಸ್ವಾಮಿಗಳನ್ನು ನಿವೇದಿತಾ ಸಂದರ್ಶನ ಮಾಡಿದ್ದಳು. ಆಗ ಬೇರೆ ಧರ್ಮಕ್ಕೆ ಹೋದವರು ಮರಳಿ ಹಿಂದೂ ಧರ್ಮಕ್ಕೆ ಬರುವ ಬಗ್ಗೆ ಸ್ವಾಮಿಗಳ ಅಭಿಪ್ರಾಯ ಕೇಳಿದಾಗ ಹಾಗೆ ಬರುವವರನ್ನು ಶುಧ್ಹೀಕರಣ್ದ ಮೂಲಕ ಒಳಕ್ಕೆ ಕರೆದುಕೊಳ್ಳಬೇಕೆಂದು ತಿಳಿಸಿದರು. ಅವರು ಹಿಂದಕ್ಕೆ ಬಂದಾಗ ಯಾವ ವರ್ಣಕ್ಕೆ ಸೇರುತ್ತಾರೆ ಎನ್ನುವ ಪ್ರಶ್ನೆಗೆ ‘ಮರಳಿ ಬರುವವರಿಗೆ ಅವರು ಹಿಂದೆ ಇದ್ದ ವರ್ಣವೇ ಇದೆ. ಹೊಸದಾಗಿ ಬರುವವರು ಅವರೇ ಒಂದು ವರ್ಣ ಮಾಡಿಕೊಳ್ಳುವರು. ವೈಷ್ಣವರು ಇದನ್ನು ಈಗಾಗಲೇ ಮಾಡಿರುವರು ನೆನಪಿರಲಿ’….’ ಎಂದರು. ಹೊಸದಾಗಿ ಸೇರಿರುವವರು ಯಾರೊಡನೆ ಮದುವೆಯಾಗಬೇಕು ಎಂದಾಗ ‘ ಈಗಿನಂತೆ ತಮ್ಮ ತಮ್ಮೊಳಗೆ ‘ಎನ್ನುವ ಸಿದ್ಧ ಉತ್ತರ ನೀಡಿದರು. ಒಳಕ್ಕೆ ಬರುವವರಿಗೆ ಬೇರೆ , ಬೇರೆ ಹೆಸರುಗಳನ್ನು ಕೊಡುತ್ತೀರಾ ಎಂದು ಕೇಳಿದ್ದಕ್ಕೆ (ಚೆನ್ನಾಗಿ ಯೋಚಿಸಿ ಹೌದು ಅವರಿಗೊಂದು ಹೊಸ ಹೆಸರು ಬೇಕು. ಅದಕ್ಕೆ ಎಷ್ಟೋ ಮಹತ್ವವಿದೆ ಎಂದರು. (ಈ ವಿಷಯವನ್ನು ಅವರು ಮುಂದುವರೆಸಲಿಲ್ಲ) ಎಂದು ನಿವೇದಿತಾ ವರದಿ ಮಾಡಿದ್ದಾಳೆ. (165)
೩/೪/೧೮೯೭ ರಂದು ಮಾರ್ಗರೆಟ್ ನೋಬಲ್’ಗೆ ಬರೆದ ಪತ್ರ ಹಲವು ದೃಷ್ಟಿಯಿಂದ ಇತರ ಪತ್ರಗಳಿಗಿಂತ ವಿಭಿನ್ನವಾಗಿದೆ. ‘ ಶಿಷ್ಟ ವ್ಯಕ್ತಿಯೊಬ್ಬನನ್ನು ನಿನಗೆ ಪರಿಚಯಿಸುವ ಸ್ವಾತಂತ್ರ ಪಡೆದಿದ್ದೇನೆ. ಮಲಬಾರ್ ಪ್ರಾಂತದ ತೀಯ ಎಂಬ ಸಾಧಾರಣ ದರ್ಜೆಯ ಪಂಗಡಕ್ಕೆ ಸೇರಿದ ಈತ ಇಂಗ್ಲೆಂಡ್'ನಲ್ಲಿದ್ದಾನೆ. ಈತ ಬಡವನಾದ್ದರಿಂದ ಹಿಂಸಾಚಾರಕ್ಕೆ ತುತ್ತಾಗಿದ್ದಾನೆ. ರಾಜ್ಯಗಳ ಒಳಾಡಳಿತ ಎಂದು ಭಾರತ ಸರ್ಕಾರ ಇದರಲ್ಲಿ ತಲೆ ಹಾಕಲು ತಿರಸ್ಕರಿಸಿದೆ. ಈ ಜನಗಳ ಒಂದೇ ಭರವಸೆಯೆಂದರೆ ಇಂಗ್ಲೆಂಡ್ ಪಾರ್ಲಿಮೆಂಟ್. ಬ್ರಿಟಿಷ್ ನಾಗರಿಕರ ಮುಂದೆ ಈ ವಿಷಯ ಬರುವಂತೆ ನಿನ್ನಿಂದಾದ ಶಕ್ತಿಯನ್ನೆಲ್ಲ ಉಪಯೋಗಿಸು ‘ ಎಂದಿದ್ದಾರೆ. ತೀಯ ಜನಾಂಗದ ಈ ವ್ಯಕ್ತಿ ಯಾರು ? ಆತ ಇಂಗ್ಲೆಂಡ್’ಗೆ ಹೇಗೆ ಮತ್ತು ಏಕೆ ಹೋಗಿದ್ದನು ? ಆತ ಜಾತಿ ಕಾರಣದಿಂದ ತುಳಿತಕ್ಕೆ ಒಳಗಾಗಿದ್ದನೇ ? ಆತನಿಗೆ ಯಾವ ತೊಂದರೆ ಉಂಟಾಗಿದ್ದಿತು ? ಅದು ವೈಯಕ್ತಿಕವೇ ಅಥವಾ ಸಾಮಾಜಿಕ ಸ್ವರೂಪದ್ದೇ ? ಮುಂತಾದ ಯಾವ ವಿಚಾರಗಳು ನಮಗೆ ತಿಳಿದು ಬರುವುದಿಲ್ಲ. ಸ್ವಾಮಿಗಳ ಜೀವನ ಚರಿತ್ರೆಕಾರರು ಈ ಬಗ್ಗೆ ಮೌನವಾಗಿದ್ದಾರೆ.
ಸ್ವಾಮಿಗಳು ಭಾರತದ ದಲಿತರನ್ನು , ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಕೆಲಸಕ್ಕೆ ಮುಂದಾಗುವಂತೆ ತಮ್ಮ ಶಿಷ್ಯರಿಗೆ ಪ್ರಚೋದಕ ಪತ್ರಗಳನ್ನು ಬರೆದು , ಅದಕ್ಕಾಗಿ ತಮಗೆ ತರುಣ ಸಂನ್ಯಾಸಿಗಳ ಒಂದು ದಂಡೇ ಬೇಕಾಗಿದೆ ಎನ್ನುತ್ತಿದ್ದರು. ೧೯/೩/೧೮೯೪ ರಾಮಕೃಷ್ಣಾನಂದ ,೧೯/೧೧/೯೪ ಮತ್ತು ೯/೯/೧೮೯೫ ಅಳಸಿಂಗ ಪೆರುಮಾಳ್, ೩/೧/೧೮೯೫ ಸುಬ್ರಮಣ್ಯ ಅಯ್ಯರ್ ಮತ್ತು ಸೆಪ್ಟೆಂಬರ್ ೧೮೯೫ ರಂದು ಬ್ರಹ್ಮಾನಂದರಿಗೆ ಬರೆದ ಖಂಡಿಸುವ , ಕೆರಳಿಸುವ ಪತ್ರಗಳಲ್ಲಿ ಇದ್ದುದೇ ಇದೇ ವಿಷಯ. ಬ್ರಹ್ಮಾನಂದರಿಗೆ ಬರೆದ ಪತ್ರದಲ್ಲಿ ಮಲಬಾರಿನಲ್ಲಿ ರಾಜ ಬ್ರಾಹ್ಮಣ ಪುರೋಹಿತರ ಗುಲಾಮನಾಗಿದ್ದಾನೆ ಎಂದು ತಿಳಿಸಿ ಬದಲಾವಣೆ ಬೇಕು ಎಂದು ಆವೇಶಗೊಂಡಿದ್ದರು. ಬಾಲ್ಯವಿವಾಹ , ಅಶ್ವಮೇಧ ಯಾಗಗಳನ್ನು ಹಿಗ್ಗಾಮುಗ್ಗ ಖಂಡಿಸಿದ್ದರು. ಸ್ವಾಮಿಗಳು ತಾವು ಪ್ರತಿಪಾದಿಸುತ್ತಿದ್ದ ತತ್ತ್ವಗಳನ್ನು ಅನುಷ್ಠಾನಕ್ಕೆ ತರಲು ಇದೊಂದು ಒಳ್ಳೆಯ ಸುವರ್ಣಾವಾಕಾಶವಾಗಿದ್ದಿತು. ಮಾರ್ಗರೆಟ್ ನೋಬಲ್’ಗೆ ಪತ್ರ ಬರೆದು ಇಂಗ್ಲೆಂಡ್ ಪಾರ್ಲಿಮೆಂಟ್ ಮೂಲಕ ಅದಕ್ಕೆ ಪರಿಹಾರ ಹುಡುಕುವ ಬದಲು ಸ್ವಾಮಿಗಳು ನೇರವಾಗಿ ತಾವೇ ತಿರುವಾಂಕೂರಿನ ರಾಜ ಮೂಲ ಮೂಲಂ ತಿರುನಾಳ್ ರಾಮವರ್ಮ ( ೧೮೫೭-೧೯೨೪) ಅಥವಾ ಕೊಚ್ಚಿಯ ರಾಜ ರಾಮವರ್ವ-೨೫ ಇವರಿಗೆ ಪತ್ರ ಬರೆದು ಹಿಂದೂ ಧರ್ಮದಲ್ಲಿರುವ ಜಾತಿ ಮೂಲದ ಅಸಮಾನತೆಯನ್ನು ಕಿತ್ತೊಗೆಯಲು ಸಲಹೆ ನೀಡಬಹುದಾಗಿದ್ದಿತು. ಹಾಗೆ ಮಾಡುವಂತೆ ಒತ್ತಾಯಿಸಬಹುದಾಗಿದ್ದಿತು. ಸಂಪ್ರದಾಯವಾದಿಗಳ ಹಿಡಿತದಲ್ಲಿದ್ದ ಈ ರಾಜರುಗಳು ತಮ್ಮ ಮಾತುಗಳನ್ನು ಕೇಳುವುದಿಲ್ಲ ಎಂದು ಸ್ವಾಮಿಗಳಿಗೆ ಗೊತ್ತಿದ್ದಿತು. ಆದ್ದರಿಂದ ಸಮಸ್ಯೆಯನ್ನು ಪರಿಹರಿಸಲು ತಾವೇ ಕಣಕ್ಕೆ ಇಳಿಯುವ ಬದಲು ಅದನ್ನು ಮಾರ್ಗರೆಟ್ ನೋಬಲ್’ಗೆ ಆ ಮೂಲಕ ಇಂಗ್ಲೆಂಡ್ ಸಂಸತ್ತಿಗೆ ವರ್ಗಾಯಿಸಿದ್ದರು. ಸ್ವಾಮಿಗಳು ಭಾವತೃಪ್ತಿಗಾಗಿ ಆಗಿಂದಾಗ್ಗೆ ತುಳಿತಕ್ಕೆ ಒಳಗಾದವರ ಪರವಾಗಿ ಆವೇಶದ ಮಾತುಗಳನ್ನು ಆಡುತ್ತಿದ್ದರಷ್ಟೇ.
ಸ್ವಾಮಿಗಳ ಈ ಚಿಂತನೆಗಳನ್ನು ನೋಡಿದರೆ ಹಿಂದೂ ಸಮಾಜದ ಸಮಸ್ಯೆಗಳನ್ನು ಮುಖಾಮುಖಿಯಾಗಿ ಎದುರಿಸದೆ ಜನ ಮನ್ನಣೆ ಅಥವಾ ತೆಗಳಿಕೆ ಎರಡರಿಂದಲೂ ಅವರು ತಪ್ಪಿಸಿಕೊಂಡರು. ಯಾವ ಸಾಮಾಜಿಕ ಸಮಸ್ಯೆಯನ್ನೂ ವಾಸ್ತವ ನೆಲೆಯಲ್ಲಿ ಎದುರಿಸಲಾರದ ಅಧ್ಯಾತ್ಮಿಕ ಮುಂದಾಳು ಯಾವಾಗಲೂ ಕೀರ್ತಿಶಾಲಿಯೇ ಆಗಿರುತ್ತಾನೆ. ಏಕೆಂದರೆ ಆತ ಹೇಳುವ ಬೋಧನೆ ಸಮಾಜದ ಎಲ್ಲ ಸ್ತರಗಳನ್ನು ಯಥಾಸ್ಥಿತಿಯಲ್ಲಿಯೇ ಇಟ್ಟಿರುತ್ತದೆ. ಅದು ಯಾರ ಹುಸಿ ಮೇಲರಿಮೆಗೂ ಧಕ್ಕೆ ತರುವುದಿಲ್ಲ ಮತ್ತು ಯಾರನ್ನೂ ಎದುರು ಹಾಕಿಕೊಳ್ಳುವುದಿಲ್ಲ.
ಭಾರತ ಮತ್ತು ಹಿಂದೂ ಸಮಾಜ ಹಿಂದುಳಿದಿರುವ ಮುಖ್ಯ ಕಾರಣಗಳಲ್ಲಿ ಬಾಲ್ಯವಿವಾಹವೂ ಒಂದೆಂದು ಸ್ವಾಮಿಗಳು ಗುರುತಿಸಿದ್ದರು. ವೈಕುಂಠನಾಥ ಸನ್ಯಾಲ ತನ್ನ ಸಣ್ಣ ಮಗಳ ಮದುವೆಗೆ ಹೆಣಗುತ್ತಿರುವುದನ್ನು ಗಂಡು ಹುಡುಕುತ್ತಿರುವುದನ್ನು ಖಂಡಿಸುತ್ತ ಸಣ್ಣ ಮಕ್ಕಳಿಗೆ ಮದುವೆ ಮಾಡಿಸಲು ಗಂಡು ಹುಡುಕುತ್ತಿರುವವರನ್ನು ಕೊಲ್ಲಲೂ ನಾನು ಹೇಸುವುದಿಲ್ಲ ಎಂದು ಸ್ವಾಮಿಗಳು ಶಾರದಾನಂದನಿಗೆ ತಿಳಿಸಿದ್ದರು. (೨೩/೧೨/೧೮೯೫). ತಮ್ಮ ಮದ್ರಾಸಿನ ಶಿಷ್ಯರಿಗೆ ಬರೆದ ಪತ್ರಗಳಲ್ಲಿ ಈ ಅನಿಷ್ಟ ಕುರಿತಾಗಿ ಕೆಂಡ ಕಾರಿದ್ದರು. ಮನ್ಮಥನಾಥ ಭಟ್ಟಾಚಾರ್ಯನಿಗೆ ಬರೆದ ಪತ್ರದಲ್ಲಿ ಅಮೆರಿಕದ ಹೆಂಗಸರು ೨೫ ವಯಸ್ಸಿನವರೆಗೆ ಮದುವೆಯಾಗದೆ ಸ್ವತಂತ್ರರಾಗಿವುದನ್ನು ಮೆಚ್ಚುಗೆಯಲ್ಲಿ ತಿಳಿಸಿದ್ದರು. ಇದಕ್ಕೆ ತದ್ವಿರುದ್ಧವಾಗಿ ಪಸಡೆನದಲ್ಲಿ ಮಾಡಿದ ಭಾಷಣದಲ್ಲಿ ನವಿರಾಗಿ , ಪರೋಕ್ಷವಾಗಿ ಬಾಲ್ಯ ವಿವಾಹವನ್ನು ಸಮರ್ಥಿಸಿದ್ದರು. ಸ್ವಾಮಿಗಳು ಬಾಲ್ಯ ವಿವಾಹವನ್ನು ಸಮರ್ಥಿಸುವುದು ಇದು ಮೊದಲ ಬಾರಿಯೇನೂ ಆಗಿರಲಿಲ್ಲ. ಲಂಡನ್’ನಲ್ಲಿ ನೀಡಿದ ‘ಮಾಯೆ ಮತ್ತು ಭ್ರಮೆ’ ಎನ್ನುವ ಉಪನ್ಯಾಸದಲ್ಲಿ ಸಮಾಜ ಸುಧಾಣೆಯ ಹಲವು ಯತ್ನಗಳನ್ನು ವಿಶ್ಲೇಷಿಸುತ್ತ ‘ಹಿಂದೂ ಧರ್ಮದಲ್ಲಿ ಉತ್ತಮ ಪಾತಿವ್ರತ್ಯದ ಆದರ್ಶ ಕಾಪಾಡಲು ಬಾಲ್ಯ ವಿವಾಹಕ್ಕೆ ಅನುಮತಿ ಕೊಡಲಾಗಿದೆ. ಕಾಲಕ್ರಮೇಣ ಇದು ಜನಾಂಗವನ್ನು ಅಧೋಗತಿಗೆ ತಂದಿದೆ. ಬಾಲ್ಯ ವಿವಾಹ ಆಚರಣೆಯಲ್ಲಿರುವ ಜನಾಂಗದಲ್ಲಿ ಹೆಚ್ಚು ಪಾವಿತ್ರ್ಯವಿದೆ ಎನ್ನುವುದನ್ನು ನಾನು ಒಪ್ಪದೇ ಇರಲಾರೆ. ನಿಮಗೆ ಏನು ಬೇಕು ? ಜನಾಂಗದಲ್ಲಿ ಚಾರಿತ್ಯ್ರ ಶುದ್ಧಿ ತರಬೇಕೆಂದರೆ ಗಂಡು , ಹೆಣ್ಣುಗಳನ್ನು ಬಾಲ್ಯ ವಿವಾಹದಿಂದ ದುರ್ಬಲಗೊಳಿಸುವಿರಿ. ಆದರೆ ಇಂಗ್ಲೆಂಡ್’ನಲ್ಲಿ ನೀವು ಅದಕ್ಕಿಂತ ಮೇಲಾಗಿರುವಿರಾ ? ಇಲ್ಲ. …….ತಂದೆ ತಾಯಿಗಳು ಮಕ್ಕಳಿಗೆ ವರ, ವಧುಗಳನ್ನು ಆರಿಸಿದರೆ ಈ ದುಃಖ ತಗ್ಗಿಸಬಹುದು. ಭಾರತದ ಹೆಂಗಸರು ಭಾವುಕತೆಗಿಂತ ಹೆಚ್ಚು ವಸ್ತುನಿಷ್ಟರು. ಆದರೆ ಅವರ ಜೀವನದಲ್ಲಿ ಕಲ್ಪನೆಗೆ ಅವಕಾಶವಿಲ್ಲ. ಸಾಧಾರಣವಾಗಿ ಭಾರತದ ಹೆಂಗಸು ಸುಖವಾಗಿರುವಳು. ಗಂಡ ಹೆಂಡತಿ ನಡುವೆ ಅಷ್ಟೊಂದು ಮನಸ್ತಾಪ ಇಲ್ಲ. ಆದರೆ ಎಲ್ಲರಿಗಿಂತ ಹೆಚ್ಚು ಸ್ವಾತಂತ್ರವಿರುವ ಅಮೆರಿಕದಲ್ಲಿ ವಿರಸದ ಮದುವೆಗಳಿಗೆ ಲೆಕ್ಕವಿಲ್ಲ…. ಎಂದಿದ್ದರು. (166)
೩/೩/೧೮೯೪ ರಂದು ಕಿಡಿಗೆ ಹೆಂಗಸರಿಗೆ ವಿದ್ಯಾಭ್ಯಾಸ ಒದಗಿಸುವುದಷ್ಟೇ ನನ್ನ ಕೆಲಸ. ಅದೊಂದನ್ನು ಒದಗಿಸಿದರೆ ಅವರು ತಮ್ಮ ವಿಷಯಗಳ ಬಗ್ಗೆ ತಾವೇ ಸ್ವತಂತ್ರ ನಿರ್ಧಾರ ತಳೆಯುತ್ತಾರೆ ಎಂದು ತಿಳಿಸಿದ್ದರು. ಅಂತಹ ವಿದ್ಯಾಭ್ಯಾಸ ದಕ್ಕಿದ್ದರಿಂದಲೇ ಅಮೆರಿಕದ ಹೆಂಗಸರು ತಮ್ಮದೇ ಆದ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಅಮೆರಿಕದಲ್ಲಿ ಸ್ವಾಮಿಗಳಿಗೆ ನೆರವಾಗುತ್ತಿದ್ದ ಹೆಂಗಸರು ಅವರ ಅಪ್ಪ , ಗಂಡಂದಿರ ಒಪ್ಪಿಗೆಯನ್ನೇನೂ ಪಡೆದಿರಲಿಲ್ಲ. ಸ್ವಾಮಿಗಳಿಗೆ ವಸತಿ ಒದಗಿಸಿದ , ನೆರವಾದ ಹಲವು ಹೆಂಗಸರ ಗಂಡಂದಿರ ಹೆಸರು ಹೊರತು ಮತ್ತೇನೂ ತಿಳಿಯುವುದಿಲ್ಲ. ತಮ್ಮ ನೆರವಿಗಾಗಿ ನಾಲ್ಕು ವರ್ಷದ ಮಗಳನ್ನು ಮನೆಯಲ್ಲಿ ಬಿಟ್ಟು , ಗಂಡ, ಮನೆಯ ಬಗ್ಗೆ ಸ್ವಲ್ಪವೂ ಚಿಂತಿಸದೆ ಒಂದೂವರೆ ತಿಂಗಳುಗಳ ಕಾಲ ತಮ್ಮೊಂದಿಗಿದ್ದ ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ಸ್ವಾತಂತ್ರದ ಬಗ್ಗೆ ಸ್ವಾಮಿಗಳು ಏನೂ ಹೇಳುವುದಿಲ್ಲ. ಏಕೆಂದರೆ ಆಕೆ ತಮ್ಮ ಶಿಷ್ಯೆ. ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ಗಂಡ ಮನೆ ಕೆಲಸ ಬಿಟ್ಟು ಈ ಹಿಂದೂ ಸಂನ್ಯಾಸಿಯ ಹಿಂದೆ ಏಕೆ ಅಲೆಯುತ್ತಿಯಾ ಎಂದು ಕೇಳಿದ್ದರೆ ಏನಾಗುತ್ತಿದ್ದಿತು ? ಮನಸ್ತಾಪ. ಸ್ವಾಮಿಗಳು ಅನುಕೂಲಕ್ಕೆ ತಕ್ಕಂತೆ ಬಾಲ್ಯ ವಿವಾಹ , ಹೆಣ್ಣಿನ ಸ್ವಾತಂತ್ರ ಮುಂದಾವುಗಳ ಬಗ್ಗೆ ಮಾತನಾಡುತ್ತಿದ್ದರೇ ಹೊರತು ಯಾವುದೇ ನಿರ್ದಿಷ್ಟ ಚಿಂತನಾ ಸೂತ್ರವಿರಲಿಲ್ಲ. ಭಾರತದ ವಿಷಯಕ್ಕೆ ಬಂದಾಗ ವಿದ್ಯಾವಂತ ಹೆಂಗಸು ಮೀರಾಬಾಯಿ , ಮೈತ್ರೇಯಿ , ಲೀಲಾವತಿಯರ ಆದರ್ಶ ಸೂಚಿಸುತ್ತಿದ್ದರು.
ಶಿಷ್ಯ ಶರತ್ ಚಂದ್ರ ಚಕ್ರವರ್ತಿ ಸಮಾಜ ಸುಧಾರಣೆಯ ಬಗ್ಗೆ ಕೆಲವು ಸಲಹೆಗಳನ್ನು ಕೊಡುವಂತೆ ಸ್ವಾಮಿಗಳನ್ನು ಕೇಳಿದಾಗ ‘ ಮನು ಧರ್ಮಶಾಸ್ತ್ರ ಮುಂತಾದವುಗಳನ್ನು ಅಧ್ಯಯನ ಮಾಡಿ , ಅವುಗಳ ತಳಹದಿಯನ್ನು ಅಲುಗಿಸದೆ ಆಧುನಿಕ ಕಾಲಕ್ಕೆ ತಕ್ಕಂತಹ ಭಾವನೆಗಳನ್ನು ಸೇರಿಸಿ , ಇಡೀ ಭಾರತ ಅನುಸರಿಸುವಂತಹ ಸ್ಮೃತಿಯನ್ನು ಬರೆ. ನಾನು ಅದನ್ನು ತಿದ್ದಿಕೊಡುತ್ತೇನೆ’ ಎಂದರು. ಸ್ಮೃತಿಗಳನ್ನು ಅಲುಗಿಸದಿರುವುದು ಎಂದರೆ ಬ್ರಾಹ್ಮಣನೇ ಶ್ರೇಷ್ಟ. ಉಳಿದೆಲ್ಲವದೂ ಆತನ ಸೇವೆಗೆ ಸೃಷ್ಟಿಯಾಗಿರುವುದು ಎನ್ನುವ ಮೂಲವನ್ನು ಪ್ರಶ್ನಿಸದಿರುವುದೇ ಆಗಿದೆ. ಸ್ವಾಮಿಗಳಿಗೆ ಮುಂದುವರೆದ ದೇಶಗಳಲ್ಲಿರುವ ನಾಗರಿಕ ಕಾನೂನುಗಳ ಅಧ್ಯಯನ , ಅವುಗಳನ್ನು ಭಾರತಕ್ಕೆ ಹೊಂದುವಂತೆ ಅಳವಡಿಸಿಕೊಂಡು ಹೊಸಸ್ಮೃತಿಯನ್ನು (ಸಂವಿಧಾನ) ಬರೆಯುವ ಅಗತ್ಯವಿದೆ , ಅದು ಸಂನ್ಯಾಸಿಯೊಬ್ಬನಿಂದ ಆಗುವಂತಹುದಲ್ಲ ಎನ್ನುವ ಇತಿ ಮಿತಿಯ ತಿಳಿವಳಿಕೆಗಳೂ ಇರಲಿಲ್ಲ.
ಶ್ರೀಮತಿ ಮೃಣಾಲಿನಿ ಬಸು ಸ್ವಾಮಿಗಳು ತ್ಯಾಗ ಮತ್ತು ಸಂನ್ಯಾಸವನ್ನು ಒತ್ತಿ ಒತ್ತಿ ಹೇಳುತ್ತಿದ್ದುದನ್ನು ಒಪ್ಪದೆ , ಭಾರತದ ಸಾಮಾಜಿಕ ಸ್ಥಿತಿ ಗತಿಗಳ ಸುಧಾರಣೆಗೆ ತಮ್ಮದೇ ಆದ ಚಿಂತನೆಗಳನ್ನು ತಿಳಿಸಿದ್ದರೆಂದು ಕಾಣುತ್ತದೆ. ಅದಕ್ಕೆ ೨೩/೧೨/೧೮೯೮ ರಂದು ಮತ್ತು ೩/೧/೧೮೯೯ ರಂದು ಸ್ವಾಮಿಗಳು ಉತ್ತರಿಸಿದ್ದರು. ಈ ಪತ್ರಗಳಲ್ಲಿದ್ದ ಉತ್ತರಗಳು ಅವರು ಎಂದಿನಂತೆ ಕೊಡುತ್ತಿದ್ದ ಅಧ್ಯಾತ್ಮ ಲೇಪಿತ ಕಾಲ್ಪನಿಕ ಪರಿಹಾರಗಳಿಗಿಂತ ಹೆಚ್ಚು ಭಿನ್ನವಾಗಿದ್ದವು. ‘ಒಬ್ಬನಿಗಾಗಿ ಆತ್ಮ ತ್ಯಾಗ ಮಾಡುವುದಕ್ಕಾದರೆ ಆಗ ಸಮಾಜಕ್ಕಾಗಿ ಆತ್ಮ ತ್ಯಾಗದ ಮಾತು ಸರಿ ಅದಕ್ಕೆ ಮುಂಚೆ ಅಲ್ಲ. ಸಕಾಮದಿಂದ ನಿಷ್ಕಾಮ. ಕಾಮವಿಲ್ಲದೆ ನಿಷ್ಕಾಮ ಎಂದರೇನು ‘ ಎಂದು ಪತ್ರದ ಆಶಯವನ್ನು ಒತ್ತಿ ಹೇಳಿದ್ದರು. ಇನ್ನೂ ಮುಂದುವರೆದು ‘ ……. ನಿಯಮ , ಶಿಕ್ಷೆ , ಶಾಸನಗಳ ಮೂಲಕ ವ್ಯಕ್ತಿಯನ್ನು ಸಮಾಜದ ಅಧೀನಕ್ಕೆ ಒಳಪಾಡಿಸುವುದು , ದಾಸ್ಯ , ಬಲಾತ್ಕಾರದಿಂದ ಆತ್ಮಾರ್ಪಣೆ ಇವುಗಳ ಫಲ ಮತ್ತು ಪರಿಣಾಮಗಳಿಗೆ ಭಾರತವೇ ಅತ್ಯುತ್ತಮ ಉದಾಹರಣೆ. ….. ಎಲ್ಲ ಕೆಲಸಗಳನ್ನು ಜನ ಹೇಗೆ ಮಾಡುತ್ತಾರೆ ಎಂದರೆ ಪ್ರಾಣವಿಲ್ಲಸ ಯಂತ್ರದಂತೆ. ಅದರಲ್ಲಿ ಮಾನಸಿಕ ಒಳಗೊಳ್ಳುವಿಕೆಯಿಲ್ಲ , ಹೃದಯ ವಿಕಾಸವಿಲ್ಲ, ಚೇತನದ ಚಿಹ್ನೆಯಿಲ್ಲ, ಅಶಾ ತರಂಗವಿಲ್ಲ , ತೀವ್ರ ಸುಖಾನುಭೂತಿಯಿಲ್ಲ, ನಿಕಟ ದುಃಖಸ್ಪರ್ಶವಿಲ್ಲ, ಹೊಸ ವಿಚಾರಗಳನ್ನು ಕಂಡುಹಿಡಿಯಬೇಕೆಂಬ ಬುದ್ಧಿ ವೈಭವದ ಚಲನೆಯಿಲ್ಲ , ಹೊಸತನದ ಇಚ್ಛೆಯಿಲ್ಲ, ನವೀನ ವಸ್ತುಗಳ ಆದರಣೆಯಿಲ್ಲ, . ಇಂತಹ ಈ ಮನಸ್ಸನ್ನು ಕವಿದಿರುವ ಮೋಡಗಳು ಚದುರುವುದೇ ಇಲ್ಲ ……ಪ್ರಯತ್ನದಿಂದಲೂ , ಬಲಾತ್ಕಾರದಿಂದಲೂ ಪ್ರೀತಿ ಹುಟ್ಟುವುದೇ ? ನಿತ್ಯ ತಿರುಕನ ತ್ಯಾಗದಲ್ಲಿ ಹೆಚ್ಚುಗಾರಿಕೆ ಯಾವುದು ? ನಪುಂಸಕನ ಇಂದ್ರಿಯ ನಿಗ್ರಹ ಪುಣ್ಯವೇನು ? ಭಾವಹೀನ , ಹೃದಯಹೀನ , ಉನ್ನತ ಅಶಾರಹಿತ ಸಮಾಜ ಎಂದರೆ ಏನು ಎಂದು ತಿಳಿಯದ ಮೂರ್ಖನ ತ್ಯಾಗ ಎಂತಹುದು ? ಬಲಾತ್ಕಾರದಲ್ಲಿ ಸತಿಯಾಗಿಸುವಲ್ಲಿ ಆಕೆಯ ಪರಿ ಭಕ್ತಿ ಎಂತಹುದು ? ಮೂಢ ನಂಬಿಕೆಯ ಮೂಲಕ ಜನರಿಂದ ಪುಣ್ಯ ಕೆಲಸಗಳನ್ನು ಏಕೆ ಮಾಡ್ಶಿಸಬೇಕು ? ಅವರನ್ನು ಸ್ವತಂತ್ರರನ್ನಾಗಿ ಮಾಡಿ , ಜನಗಳ ಬಂಧನಗಳನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿ ಎಂದು ನಾನು ಹೇಳುತ್ತೇನೆ. ಕೊಳೆಯಿಂದ ಕೊಳೆಯನ್ನು ತೆಗೆಯಲು ಸಾಧ್ಯವೇ?.......’ ಎಂದಿದ್ದರು.
ಸ್ವಾಮಿಗಳ ಈ ಎಲ್ಲ ಮಾತುಗಳಲ್ಲಿ ಯಾವುವೂ ಹೊಸವಾದುವಲ್ಲ. ಬಹು ಹಿಂದೆಯ ಸಮಾಜ ಸುಧಾರಕರು ಇದನ್ನೇ ಹೇಳಿದ್ದರು., ಕ್ರೈಸ್ತ ಪಾದ್ರಿಗಳು ಇವೇ ಅಂಶಗಳನ್ನು ಪ್ರಸ್ತಾಪಿಸುತ್ತಿದ್ದರು. ಸ್ವಾಮಿಗಳು ಇವೆರೆಲ್ಲರನ್ನೂ ಒಪ್ಪದೆ , ಈ ಹಿಂದಿನ ವ್ಯವಸ್ಥೆಯನ್ನು ಬದಲಿಸಿದೇ ನಾನು ಅಧ್ಯಾತ್ಮ ಜಾಗೃತಿಯಿಂದ ಸಮಾಜವನ್ನು ಸುಧಾರಿಸುತ್ತೇನೆ ಎನ್ನುತ್ತಿದ್ದರು. ಆದರೆ ಇಲ್ಲಿ ಅವರ ಅಭಿಪ್ರಾಯಗಳತ್ತ ಸರಿದಿದ್ದರು.
ಸ್ವಾಮಿಗಳ ಸಮಾಜ ಸುಧಾರಣೆಯ ಚಿಂತನೆಗಳನ್ನು ಘಟನೆಯೊಂದರ ಉಲ್ಲೇಖದ ಮೂಲಕ ಮುಗಿಸಬಹುದು. ಸ್ವಾಮಿಗಳು ತಮ್ಮ ಶಿಷ್ಯ ಶರತ್ ಚಂದ್ರ ಚಕ್ರವರ್ತಿಯೊಂದಿಗೆ ವೇದಾಂತದ ಬಗ್ಗೆ ಮಾತನಾಡುತ್ತಿದ್ದಾಗ ಗಿರೀಶ್’ಚಂದ್ರ ಘೊಷ್ ಬಂದು ವೇದ , ವೇದಾಂತ ಬೇಕಾದಷ್ಟಿದೆ. ಈಗ ನಮಗೆ ಎದುರಾಗಿರುವ ಸಾಮಾಜಿಕ ಸಂಕಷ್ಟಗಳಿಗೆ ಅವುಗಳಲ್ಲಿ ಯಾವುದಾದರೂ ಪರಿಹಾರವಿದೆಯೇ ಎಂದು ಪ್ರಶ್ನಿಸುತ್ತ ಅವುಗಳನ್ನು ವಿವರಿಸಿದರು. ಆಗ ಸ್ವಾಮಿಗಳು ಮಾತು ಹೊರಡದೆ ಕಣ್ಣೀರು ಹಾಕಿ ಹೊರಗೆ ಹೊರಟರು.(167)
Comment Box is loading comments...