ಕುಟುಂಬ ಪ್ರೇಮ
(ಸ್ವಾಮಿ ಅ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ವಿರಜ ಹೋಮದ ಮೂಲಕ ಸ್ವಂತ ಶ್ರಾದ್ಧವನ್ನು ಮಾಡಿಕೊಂಡು ಹಿಂದಿನ ಜೀವನದ ಎಲ್ಲ ಬಂಧನಗಳನ್ನು ಕಳಚಿಕೊಂಡೆನೆಂದು, ಇನ್ನು ಮುಂದೆ ತನಗೆ ತಂದೆ, ತಾಯಿ , ಅಣ್ಣ, ತಮ್ಮ ,ಬಂಧು ,ಬಾಂಧವರು ಯಾರೂ ಇಲ್ಲವೆಂದು ಘೋಷಿಸಿದ್ದ ನರೇಂದ್ರನಾಥ ದತ್ತ ಸಂನ್ಯಾಸಿಯಾದ ನಂತರವೂ ತನ್ನ ಕುಟುಂಬದ ಬಂಧನವನ್ನು ತೊರೆದಿರಲಿಲ್ಲ. ಸಂನ್ಯಾಸ ಸ್ವೀಕರಿಸಿದ ದಿನದಿಂದ ಪ್ರಾರಂಭಿಸಿ ಸಾಯುವ ಕೊನೆಯ ದಿನದ ತನಕವೂ ಸ್ವಾಮಿಗಳನ್ನು ಅವರ ಫೂರ್ವಾಶ್ರಮದ ಚಿಂತೆ ಬಿಟ್ಟಿರಲಿಲ್ಲ. ವಿಶ್ವನಾಥ ದತ್ತ ಬದುಕಿರುವಾಗಲೇ ಆಸ್ತಿ ಕುರಿತಾಗಿ ದಾಯಾದಿಗಳು ಹಾಕಿದ್ದ ಮೊಕದ್ದಮೆಗಳು ತೀವ್ರವಾಗತೊಡಗಿದವು. ಮನೆಯ ಹಿರಿ ಮಗನಾಗಿ ಸ್ವಾಮಿಗಳು ಆಗಾಗ್ಗೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತಿದ್ದಿತು. ತಮ್ಮಂದಿರು ಇನ್ನೂ ಬಾಲಕರಾಗಿದ್ದರು. ಒಂದು ಕಾಲದಲ್ಲಿ ಮೆರೆದಿದ್ದ ವಿಶ್ವನಾಥ ದತ್ತನ ಕುಟುಂಬ ಒಂದು ಹೊತ್ತಿನ ತುತ್ತು ಕೂಳಿಗಾಗಿ ಹೋರಾಡುವಂತಹ ಸ್ಥಿತಿ ಬಂದಿದ್ದಿತು, ಈ ಸಂಕಟವನ್ನು ತೋಡಿಕೊಂಡು ಸ್ವಾಮಿಗಳು ‘ಕಲ್ಕತ್ತದ ಹತ್ತಿರವಿದ್ದರೆ ನನ್ನ ಗುರಿಯಲ್ಲಿ ಸಫಲನಾಗುವುದಿಲ್ಲ. ಅಲ್ಲಿ ನನ್ನ ತಾಯಿ ಮತ್ತು ಇಬ್ಬರು ಸೋದರರಿದ್ದಾರೆ. ನಾನೇ ಹಿರಿಯ ಮಗ. ಎರಡನೆಯವನು ಮೊದಲ ವರ್ಷದ ಆರ್ಟ್ಸ್ ಪರೀಕ್ಷೆಗೆ ಓದುತ್ತಿದ್ದಾನೆ. ಮೂರನೆಯವನು ಇನ್ನೂ ಚಿಕ್ಕವನು….ತಂದೆ ಸತ್ತ ನಂತರ ಅವರಿಗೆ ಬಹಳ ಕಷ್ಟವಾಗಿದೆ. ಕೆಲವು ವೇಳೆ ಉಪವಾಸ ಇರಬೇಕಾಗಿದೆ. ಕೆಲ ಬಂಧುಗಳು ಅವರ ಸಂಕಟದ ಪರಿಸ್ಥಿತಿಯನ್ನು ಬಳಸಿಕೊಂಡು ಪಿತ್ರಾರ್ಜಿತ ಮನೆಯಿಂದ ಹೊರಗೆ ಓಡಿಸಿದ್ದರು. ಉಚ್ಛನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಮನೆಯ ಒಂದು ಭಾಗ ಪಡೆದುಕೊಂಡರೂ ಬಡತನದ ಹೊರೆ ಅವರ ಮೇಲಿದೆ. ವ್ಯಾಜ್ಯ ನ್ಯಾಯಾಲಯದಲ್ಲಿದೆ …ಕಲ್ಕತ್ತೆಯ ಹತ್ತಿರ ವಾಸ ಮಾಡುವುದರಿಂದ ಅವರ ಕಷ್ಟ ಸ್ಥಿತಿಯನ್ನು ನಾನು ನೋಡಬೇಕಾಗುವುದು. ಆಗ ರಾಜಸ ಗುಣ ಮೇಲಾಗಿ ನನ್ನ ಅಹಂಕಾರವು ಕೆಲವು ಸಲ ಕಾರ್ಯಮುಖವಾಗುವುದರಲ್ಲಿ ಕೊನೆಗೊಳ್ಳುವುದು. ಅಂತಹ ಸಮಯದಲ್ಲಿ ಮನಸ್ಸಿನಲ್ಲಿ ತುಮುಲಗಳೇಳುವುವು …’ ಎಂದು ಪ್ರಮದದಾಸ ಮಿತ್ರರಿಗೆ ಬರೆದಿದ್ದರು. (೪/೭/೧೮೮೯)
ಈಶ್ವರಕೋಟಿಗಳೆಂದು ಗುರುತಿಸಿದ್ದ ಶಿಷ್ಯರಿಗೆ ರಾಮಕೃಷ್ಣರು ಲೌಕಿಕವನ್ನು ತಿರಸ್ಕರಿಸಲು ಹೇಳಿದ್ದರಾದರೂ ಅವು ಯಾವುವೂ ಕಟು ವಾಸ್ತವಗಳೆದುರು ನಿಲ್ಲುವಂತಿರಲಿಲ್ಲ. ಸಂನ್ಯಾಸಿಯಾಗಿದ್ದರೂ ಮನೆಯ ಸೆಳೆತ ಬಲವಾಗಿದ್ದು , ವಿರಕ್ತಿ , ಮುಕ್ತಿಗಳು ಹಿಂದಕ್ಕೆ ಸರಿದಿದ್ದವು. ಇದರಿಂದ ತಪ್ಪಿಸಿಕೊಳ್ಳಲು ಸ್ವಾಮಿಗಳು ಪರಿವ್ರಾಜಕರಾಗಿದ್ದರು. ಈ ತಲ್ಲಣಗಳಿಗೆ ಸ್ವಾಮಿಗಳು ತಂದೆಯ ಸಮಾನರಾಗಿದ್ದ ಪ್ರಮದದಾಸ ಮಿತ್ರರಿಂದ ಪರಿಹಾರ ಹುಡುಕಲು ಯತ್ನಿಸಿರುವುದಕ್ಕೆ ೧೮೮೯ ರ ೭/೮, ೧೭/೮ , ೨/೯ , ೧೩/೧೨ , ೨೫/೧೨ ದಿನಾಂಕದ ಪತ್ರಗಳು ಸಾಕ್ಷಿಯಾಗಿವೆ. ಪ್ರಮದದಾಸ ಮಿತ್ರರು ತಮ್ಮಲ್ಲಿದ್ದ ವೇದಾಂತ ಗ್ರಂಥಗಳನ್ನು ಸ್ವಾಮಿಗಳಿಗೆ ಕೊಟ್ಟಿದ್ದರು. ಒಮ್ಮೆ ಸಂನ್ಯಾಸಿಯಾದ ನಂತರ ಫೂರ್ವಾಶ್ರಮದ ಬಗ್ಗೆ ಚಿಂತಿಸುವುದು , ಲೌಕಿಕ ಸ್ನೇಹಿತರ ಸಂಗ ಮಾಡುವುದು ತಪ್ಪು. ಅವು ಹಿಂದೂ ಧರ್ಮದ ಸಂನ್ಯಾಸಾಶ್ರಮದ ಆದರ್ಶಕ್ಕೆ ವಿರುದ್ಧ ಎಂದು ಅವರು ಸ್ವಾಮಿಗಳ ಗಮನಕ್ಕೆ ತಂದಿರುವುದು ಸ್ವಾಮಿಗಳು ಅವರಿಗೆ ನೀಡಿದ ಉತ್ತರದಿಂದ ಸ್ಪಷ್ಟವಾಗುತ್ತದೆ. ಸ್ವಾಮಿಗಳು ತಮ್ಮ ಕುಟುಂಬಕ್ಕೆ ಸೇರಿದ್ದ ಸ್ವಲ್ಪ ಜಮೀನನ್ನು ಮಾರಲು ಒಬ್ಬ ಮಧ್ಯವರ್ತಿಯನ್ನು ಗುರುತಿಸಲು ಯತ್ನಿಸತೊಡಗಿದ್ದು , ಆ ಕೆಲಸ ಕೆಲಸ ಮುಗಿದ ತಕ್ಷಣ ಸಂನ್ಯಾಸ ಜೀವನದತ್ತ ಪೂರ್ಣವಾಗಿ ಹೊರಳುವ ಆಶಯ ಹೊಂದಿದ್ದರು. (೧೪/೭/೧೮೮೯). ಇದಕ್ಕೆ ಉತ್ತರಿಸಿದ್ದ ಪ್ರಮದದಾಸ ಮಿತ್ರರು ಸ್ವಾಮಿಗಳನ್ನು ಮನ ಬಿಖಾರಿ (ದರಿದ್ರ ಆದರೂ ಗರ್ವಿ) , ಪೇಟ್ ವಿರಾಗಿ (ಹೊಟ್ಟೆಯೊರೆಯಲು ವೇಷ ಹಾಕಿದಾತ) , ಉಭಯಭ್ರಷ್ಟ ( ಸರಿಯಾದ ಸಂನ್ಯಾಸಿಯೂ ಅಲ್ಲ, ಸಂಸಾರಿಯೂ ಅಲ್ಲ) ಎಂದು ಲಘುವಾಗಿ ಚಾಟಿ ಬೀಸಿದ್ದು ಅದನ್ನು ಸ್ವಾಮಿಗಳು ವಿನಮ್ರತೆಯಿಂದ ಒಪ್ಪಿಕೊಂಡಿರುವಂತೆ ಕಾಣುತ್ತದೆ. (೧೭/೮/೧೮೮೯). ಸ್ವಾಮಿಗಳು ಎತ್ತಿದ್ದ ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಪ್ರಮದದಾಸ ಮಿತ್ರರು ಮೊದಲು ವಾದ-ವಿವಾದಗಳನ್ನು ಬಿಟ್ಟು ಸಾಧನೆಯಲ್ಲಿ ನಿರತನಾಗು ಎಂದಿದ್ದರು. (೨/೯/೧೮೮೯)
ಭಾರತದಲ್ಲಿ ಒಬ್ಬ ವ್ಯಕ್ತಿ ಸಂನ್ಯಾಸಿಯಾದರೆ ಆತ ತನ್ನ ಕುಟುಂಬ , ಹುಟ್ಟೂರು , ಬಂಧು-ಬಾಂಧವರು ತನ್ನನ್ನು ಗುರುತಿಸಬಹುದಾದ ಜಾಗಗಳಿಂದ ದೂರ ಹೋಗಿ ಬಿಡುತ್ತಾನೆ. ಸಂನ್ಯಾಸಿಯಾದ ನಂತರ ಪೂರ್ವಾಶ್ರಮದ ಕುಟುಂಬಕ್ಕೆ ಸಂಬಂಧಿಸಿದ ಯಾವ ಸುದ್ದಿಯೂ ತಿಳಿಯಬಾರದು, ಹಾಗೆ ತಿಳಿದರೆ ಮನಸ್ಸು ಮತ್ತೊಮ್ಮೆ ಆ ಕಡೆ ಹರಿಯುತ್ತದೆ ಎನ್ನುವುದೇ ಇದಕ್ಕೆ ಕಾರಣ. ಸಂನ್ಯಾಸಿಯಾಗಿ ಮನೆ ಬಿಟ್ಟವರು ಎಲ್ಲಿ ಹೋದರು , ಹೇಗಿದ್ದಾರೆ , ಬದುಕಿದ್ದಾರೆಯೇ ಸತ್ತಿದ್ದಾರೆಯೇ ಎನ್ನುವುದು ಕೂಡ ತಿಳಿಯದಂತಾಗುತ್ತದೆ. ಸಂನ್ಯಾಸಿಯೂ ಪತ್ರ, ಸುದ್ದಿ ಯಾವುದರ ಮುಖಾಂತರವೂ ತನ್ನ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಆತನ ಕುಟುಂಬದವರು ಆ ವ್ಯಕ್ತಿ ಸತ್ತನೆಂದೇ ಪರಿಗಣಿಸಿ ಎಲ್ಲ ಸವಾಲುಗಳನ್ನು ಸ್ವತಂತ್ರವಾಗಿ ಎದುರಿಸತೊಡಗುತ್ತಾರೆ. ಕುಟುಂಬದಿಂದ ಬಿಡುಗಡೆ ಹೊಂದುವುದೆಂದರೆ ನಿಜವಾಗಿಯೂ ಇದೇ. ರಾಮಕೃಷ್ಣರ ಸಂನ್ಯಾಸಿ ಶಿಷ್ಯರ ಬದುಕು ಈ ಸಾಂಪ್ರದಾಯಿಕ ಪದ್ದತಿಗಿಂತ ಬಹಳ ಭಿನ್ನವಾಗಿದ್ದಿತು. ಈ ಸಂನ್ಯಾಸಿಗಳೆಲ್ಲರೂ ಕಲ್ಕತ್ತದ ಪರಿಚಿತ ಜಾಗ , ಮಧ್ಯಮ ವರ್ಗದ ಮನೆತನಗಳಿಂದ ಬಂದಿದ್ದರು. ಆಧುನಿಕ ಕಛೇರಿಗಳಲ್ಲಿ ಒಟ್ಟಿಗೆ ದುಡಿಯುವ ಕೆಲಸಗಾರರ ನಡುವೆ ಇರುವಂತಹುದೇ ಸಂಬಂಧ ಇವರ ನಡುವೆ ಇದ್ದಿತು. ಇವರಿಗೆ ಇತರ ಗುರುಭಾಯಿಗಳ ಕುಟುಂಬ , ಅದರ ಹಿನ್ನೆಲೆಗಳು ಚೆನ್ನಾಗಿ ಗೊತ್ತಿದ್ದವು. ಇವರೆಲ್ಲರೂ ಹುಟ್ಟೂರಿನಲ್ಲಿಯೇ ಬರಾನಗರ ಮಠ ಎನ್ನುವ ನಿರ್ದಿಷ್ಟ ವಿಳಾಸ ಹೊಂದಿದ್ದರು. ತೀರ್ಥಯಾತ್ರೆಗೆ ಅಥವಾ ಸಂಚಾರಕ್ಕೆ ಹೋದಾಗ ಪತ್ರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಗುರುಭಾಯಿಗಳಲ್ಲಿ ಯಾರೊಬ್ಬರಿಗೆ ಅನಾನುಕೂಲ, ಅನಾರೋಗ್ಯ ಉಂಟಾದರೂ ಇತರರು ಅವರ ನೆರವಿಗೆ ಧಾವಿಸುತ್ತಿದ್ದರು. ಬರಾನಗರ ಮಠ ಎನ್ನುವ ಕೆಂದ್ರಕ್ಕೆ ಬಂದರೆ ಯಾವುದೇ ಗುರುಭಾಯಿಯ ಸುಳಿವನ್ನು ಹಿಡಿಯುವುದು ಅತ್ಯಂತ ಸುಲಭವಾಗಿದ್ದಿತು. ಸ್ವಾಮಿಗಳು ಎಲ್ಲೇ ಇರಲಿ ಅವರಿಗೆ ಕುಟುಂಬದ ಸ್ಥಿತಿ , ನ್ಯಾಯಾಲಯದಲ್ಲಿ ಮೊಕದ್ದಮೆಯ ಮುನ್ನಡೆ ತಮ್ಮಂದಿರ ವಿದ್ಯಾಭ್ಯಾಸ ತಿಳಿಯುತ್ತಿದ್ದವು. ಸಂನ್ಯಾಸ ಸ್ವೀಕರಿಸಿದ ಹತ್ತೊಂಬತ್ತು ವರ್ಷಗಳ ನಂತರವೂ (೧೯೦೨) ಸ್ವಾಮಿಗಳಿಗೆ ಅವರ ಕುಟುಂಬದ ಸೆಳೆತವಿದ್ದಿತೇ ಹೊರತು ಪರಮ ವೈರಾಗ್ಯವಲ್ಲ. ಸ್ವಾಮಿಗಳು ಬದುಕಿರುವವರೆಗೂ ತಮ್ಮ ಪೂರ್ವಾಶ್ರಮದ ಕುಟುಂಬದ ಹಿತ ಸಾಧನೆಗೆ ಶ್ರಮಿಸುತ್ತಿದ್ದರು.
೧೮೯೦ ರಲ್ಲಿ ಸ್ವಾಮಿಗಳ ತಂಗಿ ಯೋಗೇಂದ್ರ ಬಾಲ ಆತ್ಮಹತ್ಯೆ ಮಾಡಿಕೊಂಡಿದ್ದ ಸುದ್ದಿ ಭುವನೇಶ್ವರಿದೇವಿಗೆ ತಲುಪಿತು. ಆಗ ಸ್ವಾಮಿಗಳು ಆಲ್ಮೋರಾದಲ್ಲಿದ್ದರು. ಯೋಗಾನಂದ ( ಜೋಗಿಂದ್ರನಾಥ ಚೌಧುರಿ) ಮತ್ತು ಶಾರದಾನಂದ (ಶರತ್ ಚಂದ್ರ ಚಕ್ರವರ್ತಿ) ಮನೆಗೆ ಹೋಗಿ ಭುವನೇಶ್ವರಿ ದೇವಿಯನ್ನು ಸಂತೈಸಿದ್ದರು. ಶಾರದಾನಂದ ಕಳಿಸಿದ ತಂತಿಯಿಂದ ಸುದ್ದಿ ತಿಳಿದು ಸ್ವಾಮಿಗಳು ದುಃಖಿತರಾಗಿದ್ದರು. ‘ಹಲವು ವರ್ಷಗಳ ಹಿಂದೆ ಮತ್ತೆ ಮರಳಿ ಬರಬಾರದೆಂದು ಹಿಮಾಲಯ ಪ್ರದೇಶಕ್ಕೆ ಹೋದೆ. ನನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಳು. ಈ ಸುದ್ದಿ ನನಗೆ ತಲುಪಿತು. ದುರ್ಬಲ ಹೃದಯದಿಂದಾಗಿ ಶಾಂತಿಯ ಆಸೆಯನ್ನು ಬಿಡಬೇಕಾಯಿತು. ಈ ದುರ್ಬಲ ಹೃದಯವೇ ನಾನು ಪ್ರೀತಿಸುವ ಕೆಲವರ ಸಹಾಯಕ್ಕಾಗಿ ಹುಡುಕಿಕೊಂಡು ಹೋಗುವಂತ ನನ್ನನ್ನು ಭಾರತದಿಂದ ಓಡಿಸಿತು. ….ಎಂದು ಈ ಘಟನೆಯನ್ನು ಸ್ವಾಮಿಗಳು ೯ ವರ್ಷಗಳ ನಂತರ ನೆನೆದಿದ್ದರು. (೧೨/೧೨/೧೮೯೯).
ಸ್ವಾಮಿಗಳು ಪರಿವ್ರಾಜಕರಾಗಿದ್ದಾಗಲೂ ಕುಟುಂಬದ ಪರೋಕ್ಷ ಸಂಪರ್ಕ ಕಳೆದುಕೊಂಡಿರಲಿಲ್ಲ. ೧೮೯೨ ರಲ್ಲಿ ಬೆಳಗಾವಿಯಲ್ಲ ತೆಗೆಸಿಕೊಂಡಿದ್ದ ಫೋಟೊಗಳನ್ನು ಮಹೇಂದ್ರನಾಥ ದತ್ತರಿಗೆ ಕಳಿಸಿದ್ದರು. ಇದರಿಂದ ಕುಟುಂಬದವರಿಗೆ ಸ್ವಾಮಿಗಳು ಹೇಗಿರುವರು , ಎಲ್ಲಿರುವರು ಎಂದು ತಿಳಿದಿದ್ದಿತು. ೧೮೯೩ ಫೆಬ್ರವರಿಯಲ್ಲಿ ಮದ್ರಾಸಿನಲ್ಲಿರುವಾಗ ಸ್ವಾಮಿಗಳಿಗೆ ಕುಟುಂಬ ಮತ್ತು ತಾಯಿಯ ಚಿಂತೆ ಬಹಳವಾಗಿ ಕಾಡಿದ್ದಿತು. ಭುವನೇಶ್ವರಿ ದೇವಿ ಸತ್ತಂತೆ ಕನಸು ಬಿದ್ದಿದ್ದಿತು. ಇದರಿಂದ ಕಳವಳಗೊಂಡಿದ್ದ ಅವರು ಜ್ಯೋತಿಷಿಯ ಬಳಿ ತಾಯಿಯ ಆರೋಗ್ಯ ವಿಚಾರಿಸಲು ಕುಂಬಕ್ಕೋಣಂಗೆ ಹೋಗಿದ್ದರು. “ಆ ಜ್ಯೋತಿಷಿ ‘ಎದೆಗೆ ಗುಂಡು ಹೊಡೆದಂತೆ ನೇರವಾಗಿ ‘ಸಂನ್ಯಾಸಿಯಾಗಿರುವ ನೀನು ನಿನ್ನ ತಾಯಿಯ ಬಗ್ಗೆ ಏಕೆ ಚಿಂತಿಸುತ್ತಿರುವೆ’ ಎಂದು ಕೇಳಿದನು . ಆಗ ನಾನು ‘ಮಹಾ ಶಂಕರಾಚಾರ್ಯರೇ ಅವರ ತಾಯಿಯನ್ನು ನೋಡಿಕೊಳ್ಳಬೇಕಾಯಿತು’ ಎಂದು ಉತ್ತರಿಸಿದೆ. ಆಗ ಆತ ‘ಅದಿರಲಿ ನಿನ್ನ ತಾಯಿ ಚೆನ್ನಾಗಿದ್ದಾರೆ. ಆಕೆಯ ಹೆಸರನ್ನು ನಿನ್ನ ಸ್ನೇಹಿತನ ಬಳಿ ಇರುವ ಚೀಟಿಯಲ್ಲಿ ಬರೆದಿದ್ದೇನೆ ‘ ಎಂದು ತಿಳಿಸಿದ . ……ಇನ್ನೆರಡು ಮೂರು ವಾರಗಳಲ್ಲಿ ನಾನು ಯುರೋಪಿಗೆ ಹೋಗುತ್ತೇನೆ. (ನಿರರ್ಥಕ ನಿರೀಕ್ಷೆ). ಈ ದೇಹ ಮುಂದೇನಾಗುವುದೋ ಎಂದು ಹೇಳಲಾರೆ. ನನ್ನ ತಾಯಿ ಹಸಿವಿನಿಂದ ಸಾಯದಂತೆ ನೋಡಿಕೊಳ್ಳಬೇಕೆಂದು ಪ್ರಭುಗಳಲ್ಲಿ ಕೇಳಿಕೊಳ್ಳುತ್ತೇನೆ” ಎಂದು ಖೇತ್ರಿ ರಾಜ ಅಜಿತ್ ಸಿಂಗ್’ನಲ್ಲಿ ಮನವಿ ಮಾಡಿಕೊಂಡಿದ್ದರು. (೧೫/೨/೧೮೯೩). ಭುವನೇಶ್ವರಿದೇವಿ ಸಾಯದಂತೆ ನೋಡಿಕೊಳ್ಳುವುದೆಂದರೆ ಆಕೆಯ ಕುಟುಂಬವನ್ನೇ ನೋಡಿಕೊಂಡಂತೆ. ಇದಾದ ನಂತರ ಖೇತ್ರಿ ರಾಜ ಅಜಿತ್ ಸಿಂಗ್ ಮತ್ತು ಭುವನೇಶ್ವರಿದೇವಿ ಕುಟುಂಬದ ನಡುವೆ ನಿರಂತರ ಸಂಪರ್ಕವಿದ್ದಿತು. ‘ಬಹಳ ದಿನಗಳಿಂದ ಅಣ್ಣನ ಪತ್ರ ಬಾರದೆ ಚಿಂತೆಯಾಗಿದ್ದಿತು. ಹದಿನೈದು ದಿನಗಳ ಹಿಂದೆ ಆತ ಮದ್ರಾಸ್’ನಲ್ಲಿರುವ ಸುದ್ದಿ ಬಂದಿದೆ ಎಂದು ಮಹೇಂದ್ರನಾಥ ಅಜಿತ್ ಸಿಂಗ್’ಗೆ ಬರೆದ ಪತ್ರದಿಂದ ಸ್ವಾಮಿಗಳು ತಮ್ಮ ಕುಟುಂಬಕ್ಕೆ ಬೇಕಾದ ನೆರವನ್ನು ಪರೋಕ್ಷ ರೀತಿಯಲ್ಲಿ ಏರ್ಪಡಿಸಿದ್ದರೆನ್ನುವುದು ಸ್ಪಷ್ಟವಾಗುತ್ತದೆ.
ಸ್ವಾಮಿಗಳು ಅಮೆರಿಕಕ್ಕೆ ಹೋದ ನಂತರ ಹರಿದಾಸ ವಿಹಾರಿದಾಸ ದೇಸಾಯಿಯವರು ಕಲ್ಕತ್ತಕ್ಕೆ ಹೋಗಿದ್ದಾಗ ಸ್ವಾಮಿಗಳ ಕುಟುಂಬವನ್ನು ಭೇಟಿ ಮಾಡಿದ್ದರು. ತಾಯಿಯನ್ನು ಬಹಳ ಆದರಿಸುವ ಅದೇ ವೇಳೆಗೆ ಮನೆಯ ಹಿರಿಯ ಮಗನಾಗಿ ಕುಟುಂಬದ ಸಮಸ್ಯೆಗಳನ್ನು ಬಗೆ ಹರಿಸುವ ಮೊದಲು ಸಂನ್ಯಾಸವನ್ನು ತೆಗೆದುಕೊಂಡಿದ್ದ ಸ್ವಾಮಿಗಳ ಇಬ್ಬಂದಿತನದ ಔಚಿತ್ಯವನ್ನು ಪ್ರಶ್ನಿಸಿದ್ದರು. ಈ ಹಿಂದೆ ಪ್ರಮದದಾಸ ಮಿತ್ರರೂ ಇದೇ ಪ್ರಶ್ನೆಯನ್ನು ಎತ್ತಿದ್ದು ಸ್ವಾಮಿಗಳು ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದ್ದರು (೧೪/೭/೧೮೯೯) . ಹರಿದಾಸ ವಿಹಾರಿದಾಸ ದೇಸಾಯಿಗೆ ನೀಡಿದ ಉತ್ತರ ಪ್ರಮದದಾಸರಿಗೆ ನೀಡಿದ್ದಕ್ಕಿಂತಲೂ ಬೇರೆಯದಾಗಿದ್ದಿತು. ‘ಕೆಲವು ದಿನಗಳ ಹಿಂದೆ ನಿಮ್ಮ ಕಾಗದ ತಲುಪಿತು. ನೀವು ನನ್ನ ಬಡ ತಾಯಿಯನ್ನು ಮತ್ತು ಸಹೋದರರನ್ನು ನೋಡುವುದಕ್ಕೆ ಹೋಗಿದ್ದಿರೆಂದು ತಿಳಿದೆ. ನೀವು ಹಾಗೆ ಮಾಡಿದ್ದು ಸಂತೋಷ. ನನ್ನ ಹೃದಯದ ಏಕಮಾತ್ರ ಮರ್ಮದ ಸ್ಥಳವನ್ನು ತಾಗಿದಿರಿ. ನಾನು ನಿರ್ದಯನಾಗುವ ಮೂರ್ಖನಲ್ಲವೆಂದು ನಿಮಗೆ ಗೊತ್ತಿರಬೇಕು. ದಿವಾನರೇ , ನಾನು ಪ್ರೀತಿಸುವ ಯಾವುದಾದರೂ ಒಂದು ವಸ್ತುವಿದ್ದರೆ ಅದೇ ನನ್ನ ತಾಯಿ ‘ ಎಂದು ಉತ್ತರಿಸುತ್ತ ಭಾರತದ ಬಡವರ ಉದ್ಧಾರದ ಮುಂದೆ ಕುಟುಂಬ ಸಣ್ಣದೆಂದು ಬಗೆದು ಸಂನ್ಯಾಸ ತೆಗೆದುಕೊಂಡರುವುದಾಗಿ ಸಮರ್ಥಿಸಿಕೊಂಡಿದ್ದರು. (೨೯/೧/೧೮೯೪)
ಕುಟುಂಬದ ಹೊಣೆಗಾರಿಕೆಯನ್ನು ತೊರೆಯದೆ ಚಿಕ್ಕ ಮಗಳಿಗೆ ಮದುವೆ ಮಾಡಲು ಓಡಾಡುತ್ತಿದ್ದ ನಿಷ್ಟೆಯಿಂದ ಸಂನ್ಯಾಸಾಶ್ರಮಕ್ಕೆ ಬರದ ವೈಕುಂಠನಾಥ ಸನ್ಯಾಲನ ಎಡಬಿಡಂಗಿತನದ ಬಗ್ಗೆ ತಮ್ಮ ಅಸಹನೆಯನ್ನು ತೋರಿ ಸ್ವಾಮಿಗಳು ಶಾರದಾನಂದರಿಗೆ ಪತ್ರ ಬರೆದಿದ್ದು ಅದರಲ್ಲಿ ತೀವ್ರ ವಿರಾಗಿಗಳಲ್ಲದವರು ಸಂನ್ಯಾಸದ ಯೋಚನೆಯೇ ಮಾಡುವುದು ಬೇಡ ಎಂದು ತಿಳಿಸಿದ್ದರು. (೨೩/೧೨/೧೮೯೫) ಸ್ವಾಮಿಗಳು ಸಾರಾ ಬುಲ್’ಗೆ ಒಂದು ಪತ್ರ ಬರೆದಿದ್ದರು.. ಅದರಲ್ಲಿ ‘ ನನ್ನ ತಂದೆ ವಕೀಲರಾಗಿದ್ದರು. ನನ್ನ ರಕ್ತ ಸಂಬಂಧಿಗಳಲ್ಲಿ ಯಾರೂ ವಕೀಲರಾಗಲು ನಾನು ಇಚ್ಛೆ ಪಡುವುದಿಲ್ಲ. ನನ್ನ ಆಚಾರ್ಯರು ಅದನ್ನು ವಿರೋಧಿಸುತ್ತಿದ್ದರು. ಬಹು ಮಂದಿ ವಕೀಲರಿರುವ ಸಂಸಾರದಲ್ಲಿರುವವರು ಖಂಡಿತ ದುಃಖಕ್ಕೆ ಈಡಾಗುತ್ತಾರೆಂದು ನನ್ನ ನಂಬಿಕೆ. ನಮ್ಮ ದೇಶ ಅವರಿಂದ ತುಂಬಿದೆ. ವಿಶ್ವವಿದ್ಯಾಲಯಗಳು ನೂರಾರು ವಕೀಲರನ್ನು ತಯಾರಿಸುತ್ತವೆ. ನಮ್ಮ ಜನಾಂಗಕ್ಕೆ ಈಗ ಕೆಚ್ಚೆದೆಯ ವೈಜ್ಞಾನಿಕ ಮನೋಭಾವವುಳ್ಳ ಪ್ರತಿಭಾಶಾಲಿಗಳ ಅವಶ್ಯಕತೆಯಿದೆ. ಆದ್ದರಿಂದ ಮಹಿಮನು (ಮಹೇಂದ್ರನಾಥ ದತ್ತ) ಒಬ್ಬ ವೈದ್ಯುತ್ ಇಂಜಿನಿಯರ್ ಆಗಬೇಕೆನ್ನುವುದು ನನ್ನ ಇಚ್ಚೆ. ಅವನು ಜೀವನದಲ್ಲಿ ಜಯಶೀಲನಾಗದಿದ್ದರೂ ಉನ್ನತ ಪದವಿಗೇರಲು ಮತ್ತು ತನ್ನ ದೇಶಕ್ಕೆ ನಿಜವಾಗಿ ಸಹಾಯ ಮಾಡಲು ಶ್ರಮಿಸಿದನು ಎನ್ನುವುದು ನನಗೆ ಸಮಾಧಾನ ನೀಡುವುದು. ಕೇವಲ ಅಮೆರಿಕದಲ್ಲಿ ಮತ್ತು ಅಲ್ಲಿನ ವಾತಾವರಣದಲ್ಲಿಯೇ ,ಯಾರಲ್ಲಿ ಯಾವ ಉತ್ತಮ ಯೋಗ್ಯತೆಯಿದೆಯೋ ಅದು ಹೊರಗೆ ಬರುವುದು. ಅವನು ನಿರ್ಭೀತನಾಗಿ ಕೆಚ್ಚೆದೆಯಿಂದ ತನಗೆ ಮತ್ತು ತನ್ನ ಜನಾಂಗಕ್ಕೆ ಒಂದು ಹೊಸ ದಾರಿಯನ್ನು ಹಾಕಬೇಕೆನ್ನುವುದೇ ನನ್ನ ಬಯಕೆ. ವೈದ್ಯುತ್ ತಜ್ಞ ಭಾರತದಲ್ಲಿ ಚೆನ್ನಾಗಿ ಬದುಕಬಹುದು’ ಎಂದಿದ್ದಾರೆ. (೫/೬/೧೮೯೬)
ಸ್ವಾಮಿಗಳು ೧೮೯೫ ರಲ್ಲಿ ಲಂಡನ್’ನಲ್ಲಿರುವಾಗ ಅವರ ಜೊತೆ ಮಹೇಂದ್ರನಾಥ ದತ್ತ ಇದ್ದನು. ಈ ಹಿಂದೆ ಅಮೆರಿಕದಲ್ಲಿರುವಾಗ ಸಾರಾ ಬುಲ್ ಸ್ವಾಮಿಗಳ ಸ್ವಂತ ಖರ್ಚಿಗೆ ವರ್ಷಕ್ಕೆ ೧೦೦ ಡಾಲರ್ ಕೊಡುವುದಾಗಿ ಹೇಳಿದ್ದಳು. ಈ ಪತ್ರದ ಮೂಲಕ ಸ್ವಾಮಿಗಳು ಮಹೇಂದ್ರನಾಥ ದತ್ತ ಅಮೆರಿಕದಲ್ಲಿ ವೈದ್ಯುತ್ ಇಂಜಿನಿಯರಿಂಗ ಕಲಿಯಲು ವಾರ್ಷಿಕ ೧೦೦ ಡಾಲರ್ ಕೊಡುವಂತೆ ಕೇಳಿದ್ದರೆಂದು ತಿಳಿದು ಬರುತ್ತದೆ. ಆ ಹಣವನ್ನು ತಮ್ಮ ಬದಲಿಗೆ ತಮ್ಮನಿಗೆ ಕೊಡುವಂತೆ ಕೇಳಿದ್ದರೋ ಅಥವಾ ತಮ್ಮದಲ್ಲದೆ ಇನ್ನೂ ೧೦೦ ಡಾಲರ್ ಮಹೇಂದ್ರನಾಥ ದತ್ತರಿಗೆ ಕೇಳಿದ್ದರೋ ಗೊತ್ತಿಲ್ಲ. ಸಾರಾ ಬುಲ್ ಇದನ್ನು ಒಪ್ಪಿದಳೊ ಇಲ್ಲವೋ ಗೊತ್ತಿಲ್ಲ. (124). ಖೇತ್ರಿ ರಾಜ ಅಜಿತ್ ಸಿಂಗ್’ನಿಂದ ಸ್ವಾಮಿಗಳು ತಮಗಾಗಿ ನೆರವು ಪಡೆಯುವುದರಲ್ಲಿ ಯಾವ ವಿಶೇಷವೂ ಇರಲಿಲ್ಲ. ಆದರೆ ಅದನ್ನು ತಮ್ಮ ಕುಟುಂಬಕ್ಕೂ ವಿಸ್ತರಿಸಿದ್ದರು. ೧೨/೮/೧೮೯೬ ರಂದು ಎಡ್ವರ್ಡ್ ಸ್ಟರ್ಡಿಗೆ ಬರೆದ ಪತ್ರ ಇದನ್ನು ಸ್ಪಷ್ಟಗೊಳಿಸುತ್ತದೆ. ಈ ಪತ್ರದಲ್ಲಿ ‘ಇಷ್ಟರಲ್ಲಿ ರಾಜನಿಂದ ಮೋಹಿನ್'ಗೆ ಬರುವ ದುಡ್ಡು ನಿನ್ನ ವಿಳಾಸಕ್ಕೆ ಬಂದಿರಬಹುದೆಂದು ಯೋಚಿಸುತ್ತೇನೆ. ಹಾಗೆ ಬಂದಿದ್ದರೆ ನಾನು ಅವನಿಗೆ ಕೊಟ್ಟ ದುಡ್ಡು ನನಗೇನೂ ಬೇಕಿಲ್ಲ. ಆವನಿಗೆ ದುಡ್ಡನ್ನೆಲ್ಲಾ ಕೊಡಬಹುದು ‘ ಎಂದಿದ್ದಾರೆ. ಯಾವುದೇ ಆದಾಯ ಮೂಲವಿಲ್ಲದ ಮಹೇಂದ್ರನಾಥ ದತ್ತ ಲಂಡನ್’ಗೆ ಲಾಯರ್ ಪದವಿ ಗಳಿಸಲು ಹೇಗೆ ಬಂದಿರಬಹುದು ಎನ್ನುವುದಕ್ಕೆ ಈ ಪತ್ರ ಒಂದು ಸುಳಿವು ನೀಡುತ್ತದೆ. ಸ್ವಾಮಿಗಳು ಖೇತ್ರಿ ಮಹಾರಾಜರಿಂದ ಮಹೇಂದ್ರನಾಥ ದತ್ತನ ಪ್ರಯಾಣ ಮತ್ತು ವೆಚ್ಚದ ಹಣವನ್ನು ನಿಭಾಯಿಸುತ್ತಿದ್ದರೆಂದು ಖಚಿತವಾಗುತ್ತದೆ. ಇದರಲ್ಲಿ ಇನ್ನೊಂದು ವಿಚಿತ್ರವೆಂದರೆ ಸ್ವಾಮಿಗಳು ಮಹೇಂದ್ರನಾಥ ದತ್ತನಿಗೆ ಪತ್ರ ಬರೆದು ನೇರವಾಗಿ ವಿಷಯವನ್ನು ತಿಳಿಸದಿರುವುದು. ಇದು ಕೊನೆಯ ತನಕವೂ ಹೀಗೆಯ ಉಳಿದಿದ್ದಿತು. ಇದನ್ನು ಗಮನಿಸಿದರೆ ಕುಟುಂಬದ ಹೊಣೆ ಹೊತ್ತ ಅಣ್ಣ ತನ್ನ ತಮ್ಮಂದಿರನ್ನು ದಡಕ್ಕೆ ಸಾಗಿಸಲು ಎಲ್ಲ ಯತ್ನ ಮಾಡುವುದಕ್ಕಿಂತ ವಿರಾಗಿಗಳಾದ ಸ್ವಾಮಿಗಳ ಯತ್ನ ಬೇರೆಯಾಗಿರಲಿಲ್ಲ. ಗುರುಭಾಯಿಗಳಿಗೆ , ಶಿಷ್ಯರಿಗೆ ವಿರಾಗಿಗಳಾದ ಧೀರ ಯುವಕರೆಲ್ಲಿ ? ಭರತಖಂಡದಲ್ಲಿ ಹಳ್ಳಿಯಿಂದ ಹಳ್ಳಿಗೆ ಲೌಕಿಕ ಮತ್ತು ಧಾರ್ಮಿಕ ಬೋಧನೆಗಳನ್ನು ಮಾಡುತ್ತ ಸಂಚರಿಸಲು ಸಿದ್ಧರಾಗಿರುವ ತ್ಯಾಗಿಗಳೆಲ್ಲಿ ? ಎಂದು ಪ್ರತಿ ಪತ್ರದಲ್ಲಿ ಕೆಣಕುತ್ತಿದ್ದ ಸ್ವಾಮಿಗಳು ಮಹೇಂದ್ರನಾಥ ದತ್ತ ವೈದ್ಯುತ್ ಇಂಜಿನಿಯರ್ ಆಗಿ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಯಶಸ್ಸನು ಕಾಣಬೇಕೆಂದು ಬಯಸುತ್ತಿದ್ದಾರೆ. ತಮ್ಮ ವೈಯಕ್ತಿಕ ಅನುಭವವನ್ನು ಸಾರ್ವತ್ರೀಕರಿಸಿ ವಕೀಲರರಿರುವ ಕುಟುಂಬಗಳು ನರಳುತ್ತವೆ ಎನ್ನುವ ಕುರುಡು ನಂಬಿಕೆ ತಾಳಿದ್ದಾರೆ. ಆಧುನಿಕ ವಿದ್ಯೆ ಕಲಿಯಲು ಹೋಗುವ ಇತರ ಭಾರತೀಯರನ್ನು ಹಲವು ಕಡೆ ಕಾಮಿನಿ ಕಾಂಚನಗಳ ದಾಸರೆಂದು ತಿರಸ್ಕರಿಸುವ ಸ್ವಾಮಿಗಳು ಮಹೇಂದ್ರನಾಥ ದತ್ತನ ವಿಷಯದಲ್ಲಿ ಬೇರೆಯದೇ ಆದ ನಿಲುವು ತಾಳಿದ್ದಾರೆ.
‘ …ನಮಗೆ ದಾರಿ ತೋರುವುದು ಭವಿಷ್ಯವಲ್ಲ-ತಾತ್ಕಾಲಿಕ ಪರಿಸ್ಥಿತಿ. ಯಾವುದರಿಂದ ನಮಗೆ ಈಗ ಅಲ್ಪ ಸಂತೋಷ ಸಿಗುತ್ತದೆಯೋ ಅದು ನಮ್ಮನ್ನು ಸೆಳೆದುಕೊಂಡ ಹೋಗುತ್ತದೆ… ನನ್ನನ್ನು ಯಾರೂ ಪ್ರೀತಿಸುವರಿಲ್ಲದೆ ಚಿಕ್ಕಂದಿನಿಂದಲೆ ತಬ್ಬಲಿಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿದ್ದಿತು ಎಂದು ಯೋಚಿಸುತ್ತೇನೆ. ನನ್ನ ಜೀವನದಲ್ಲಿ ಕೇವಲ ನನ್ನ ಆತ್ಮೀಯರೇ –ನನ್ನ ಅಕ್ಕ, ತಂಗಿ, ತಮ್ಮ , ತಾಯಿ ಮುಂತಾದವರೇ –ನನಗೆ ದಾರುಣ ವ್ಯಥೆ ಉಂಟು ಮಾಡಿದರು. ವ್ಯಕ್ತಿಯ ಪ್ರಗತಿಗೆ ಆತನ ಬಂಧುಗಳೇ ಅಡೆತಡೆ. ಆದರೂ ಜನ ಮದುವೆಯ ಮೂಲಕ ಹೊಸಬರನ್ನು ಹುಡುಕಿಕೊಂಡು ಹೋಗುವರು –ಇದು ಎಷ್ಟು ವಿಚಿತ್ರ…ಒಬ್ಬಂಟಿಗನೇ ಸುಖಿ. ಎಲ್ಲರಿಗೂ ಒಳಿತನ್ನು ಮಾಡು. ಇಷ್ಟಪಡು. ಆದರೆ ಯಾರನ್ನೂ ಪ್ರೀತಿಸದಿರು. ಅದು ಬಂಧನ (೨೫/೭/೧೮೯೭). ಕೌಟುಂಬಿಕ ಸಮಸ್ಯೆಗಳು ಹೆಚ್ಚಾದಾಗ ಸ್ವಾಮಿಗಳು ಮೇರಿ ಹಾಲ್ ಬಾಯಿಸ್ಟರ್’’ಗೆ ಉಪದೇಶಿಸಿದ ತಾತ್ತ್ವಿಕತೆ. ಆದರೆ ಇದು ಸ್ಥಿರವಾದ ಭಾವವಾಗಿರಲಿಲ್ಲ. ಸ್ವಾಮಿಗಳು ಕುಟುಂಬದ ತಾಕಲಾಟಗಳನ್ನು ಮೈಮೇಲೆ ಹಾಕಿಕೊಂಡಿದ್ದರು. ‘ ಕೆಲವು ಮಂದಿಗೆ ನಾನು ಹೇಳಿದಂತೆ ದುಡ್ದುಕೊಡು. ನಾನು ಮಠದಿಂದ ಹಣವನ್ನು ಸಾಲ ತೆಗೆದುಕೊಳ್ಳುತ್ತಿರುವೆನು. ಅದಕ್ಕೆ ಬಡ್ಡಿ ಸೇರಿಸಿ ಹಿಂದಿರುಗಿಸುವೆನು … ಎಂದು ಬ್ರಹ್ಮಾನಂದರಲ್ಲಿ ಕೋರಿದ್ದರು. ’ ( ಪತ್ರ ೧೭/೭/ ಮತ್ತು ೧/೮/೧೮೯೮). ಈ ಹಣ ಸ್ವಾಮಿಗಳ ಪೂರ್ವಾಶ್ರಮದ ಕುಟುಂಬದ ಖರ್ಚು/ವ್ಯಾಜ್ಯಕ್ಕೆ ಮತ್ತು ಮನೆಕಟ್ಟಲು ಬೇಕಾಗಿದ್ದಿತು. ಸ್ವಾಮಿಗಳ ಕೆಡುತ್ತಿದ್ದ ಆರೋಗ್ಯ , ಕೌಟುಂಬಿಕ ಖರ್ಚುಗಳು ಬೆಳೆಯುತ್ತಿದ್ದು ಐದು ಸಾವಿರ ಎಲ್ಲಿಗೂ ಸಾಲದಂತಾಯಿತೆಂದು ಕಾಣುತ್ತದೆ. ಅದಕ್ಕಾಗಿ ಸ್ವಾಮಿಗಳು ತಮ್ಮ ಆಪ್ತಮಿತ್ರ , ಶಿಷ್ಯ , ಅಭಿಮಾನಿ ಖೇತ್ರಿ ರಾಜ ಅಜಿತ್ ಸಿಂಗ್’ಗೆ ಒಂದು ಪತ್ರ ಬರೆದರು. ಅದು ಹೀಗಿದೆ -
‘ಬೇಲೂರು ಮಠ – ೨೨/೧೧/೧೮೯೮ ಮಹಾರಾಜರೇ , ನಿಮ್ಮ ಪತ್ರಕ್ಕಾಗಿ ಮತ್ತು ಜಗಮೋಹನ್ ಲಾಲಜಿಯವರ ಮೂಲಕ ತಲುಪಿದ ನಿಂಬಾರ್ಕ ಭಾಷ್ಯಕ್ಕಾಗಿ ಅನೇಕ ಧನ್ಯವಾದಗಳು. ನನ್ನ ಮನಸ್ಸನ್ನು ನಿಮ್ಮ ಮುಂದೆ ತೆರೆದಿಡಲು ಸ್ವಲ್ಪವೂ ಸಂಕೋಚವಿಲ್ಲವೆಂದು ನಾನು ಭಾವಿಸಿದ್ದು ನಿಮ್ಮ ಮುಂದೆ ನನ್ನ ಒಂದು ವೈಯಕ್ತಿಕ ವಿಚಾರವನ್ನು ಇರಿಸುತ್ತಿದ್ದೇನೆ. ಈ ಜೀವನದಲ್ಲಿ ನೀವು ನನ್ನ ಏಕೈಕ ಗೆಳೆಯರೆಂದು ಪರಿಗಣಿಸಿದ್ದೇನೆ. ಈಗ ನಾನು ಪ್ರಸ್ತಾಪ ಮಾಡುತ್ತಿರುವುದು ನಿಮಗೆ ಒಪ್ಪಿಗೆಯಾದರೆ ಒಳ್ಳೆಯದು , ಆಗದಿದ್ದರೆ ನನ್ನ ಮೂರ್ಖತನವನ್ನು ಒಳ್ಳೆಯ ಗೆಳೆಯನಂತೆ ಕ್ಷಮಿಸಿ. ನಿಮಗೆ ತಿಳಿದಿರುವಂತೆ ನಾನು ಹಿಂದಿರುಗಿದ ದಿನದಿಂದ ಕಾಯಿಲೆಯಿಂದ ನರಳುತ್ತಿದ್ದೇನೆ. ಕಲ್ಕತ್ತದಲ್ಲಿ ನನಗೆ ವೈಯಕ್ತಿಕವಾಗಿ ಸ್ನೇಹ ಮತ್ತು ನೆರವಿನ ಆಶ್ವಾಸನೆ ನೀಡಿ ವಾಸಿಯಾಗದ ಕಾಯಿಲೆಯನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದೆಂದು ತಿಳಿಯ ಹೇಳಿದ್ದಿರಿ. ನರಗಳ ಉದ್ವಿಗ್ನತೆಯಿಂದ ಈ ಕಾಯಿಲೆ ಬಂದಿದೆ. ಚಿಂತೆ , ಆತಂಕ , ಉದ್ವೇಗಗಳನ್ನು ಹೊರಹಾಕದ ಹೊರತು ಅದೆಷ್ಟೇ ಜಾಗ ಬದಲಾವಣೆಯಿಂದಲೂ ಲಾಭವಿಲ್ಲ.
ಈ ಎರಡು ವರ್ಷ ಹವಾ ಬದಲಾವಣೆ ಮಾಡಿ ಯತ್ನಿಸಿದ ಮೇಲೆ ನನ್ನ ಆರೋಗ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಈಗ ಸಾವಿನ ಬಾಗಿಲಿಗೆ ತಂದಿರಿಸಿದೆ. ಸದಾ ನನ್ನ ಎದೆಯಲ್ಲಿ ಒಂದು ಪಾಪ ಕೊರೆಯುತ್ತಿದೆ. ಅದು ಒಂದು ಲೌಕಿಕ ಕಾರ್ಯ ಮಾಡುವುದು. ನಾನು ನನ್ನ ತಾಯಿಯನ್ನು ಬಹಳ ನಿರ್ಲಕ್ಷಿಸಿದೆ. ತನ್ನ ಎರಡನೆಯ ಮಗ (ಮನೆ ತೊರೆದು) ಹೋದ ಮೇಲೆ ನೋವಿನಲ್ಲಿ ಆಕೆ ನಲುಗಿರುವಳು. ಆಕೆಗೆ ಕೆಲವರ್ಷಗಳ ಸೇವೆ ಮಾಡುವುದೇ ನನ್ನ ಕೊನೆಯ ಆಸೆ. ನಾನು ನನ್ನ ತಾಯಿಯೊಂದಿಗೆ ಇದ್ದು ವಂಶ ನಾಶವಾಗದಂತೆ ಕಿರಿಯ ತಮ್ಮನಿಗೆ ಮದುವೆ ಮಾಡಿಸಬೇಕೆಂದಿದ್ದೇನೆ. ಇದರಿಂದ ಕೊನೆಯ ದಿನಗಳಲ್ಲಿ ನನ್ನ ತಾಯಿಯ ಮನಸ್ಸು ಹಗುರವಾಗುವುದು. ಈಗ ಆಕೆ ವಾಸಿಸಲು ಅಯೋಗ್ಯವಾದ ಮುರುಕಲು ಮನೆಯಲ್ಲಿರುವಳು. ನಾನೀಗ ಆಕೆಗೆ ಒಂದು ಸಣ್ಣದಾದ , ಚೊಕ್ಕಟವಾದ ಮನೆಯನ್ನು ಕಟ್ಟಿ ಕಿರಿಯ ತಮ್ಮನಿಗೂ ಅದರಲ್ಲಿ ಅವಕಾಶಮಾಡಬೇಕೆಂದಿರುವೆ. ಏಕೆಂದರೆ ಅವನು ಹೆಚ್ಚು ಹಣ ಸಂಪಾದಿಸುವ ಸಾದ್ಯತೆ ಕಡಿಮೆ. ರಾಮಚಂದ್ರನ ವಂಶಜರಾದ ನೀವು ಪ್ರೀತಿಸುವ ಮತ್ತು ಗೆಳೆಯನೆಂದು ಪರಿಗಣಿಸಲಾದ ನನಗೆ ಇದನ್ನು ನೆರವೇರಿಸುವುದು ಒಂದು ಹೊರೆಯೇ ? ನಿಮ್ಮನ್ನಲ್ಲದೆ ಬೇರೆ ಯಾರನ್ನು ಕೇಳಬೇಕೋ ನನಗೆ ಗೊತ್ತಾಗದು. ಯುರೋಪ್’ನಿಂದ ನನಗೆ ಸಿಕ್ಕ ಹಣ ‘ಕೆಲಸಕ್ಕಾಗಿ (ಭಾರತದ ಕೆಲಸ) ಮತ್ತು ಪ್ರತಿಯೊಂದು ಪೈಸೆ ಅದಕ್ಕಾಗಿ ಕೊಡಲಾಗಿದೆ. ನನ್ನ ನೆರವಿಗಾಗಿ ನಾನು ಬೇರೆ ಯಾರಲ್ಲೂ ಬೇಡಲಾರೆ. ನನ್ನ ಕುಟುಂಬದ ಎಲ್ಲ ವಿಷಯವನ್ನು ಬಿಚ್ಚಿ ತಿಳಿಸಿದ್ದೇನೆ. ಈ ವಿಷಯ ಬೇರೆ ಯಾರಿಗೂ ತಿಳಿಯದಿರಲಿ. ನನಗೆ ಸಾಕಾಗಿದ್ದು, ಬೇಸತ್ತಿದ್ದೇನೆ ಮತ್ತು ಸಾಯುತ್ತಿದ್ದೇನೆ. ನಿಮ್ಮ ಘನತೆ ಮತ್ತು ಔದಾರ್ಯಕ್ಕೆ ತಕ್ಕಂತೆ ಮತ್ತು ನನಗೆ ನೀವು ತೋರಿಸಿರುವ ಅನೇಕ ಔದಾರ್ಯಗಳಿಗೆ ಕಳಶವಿಟ್ಟಂತೆ ಈ ಕೊನೆಯ ಕರುಣೆಯ ಮಹಾ ಕಾರ್ಯವನ್ನು ದಯವಿಟ್ಟು ಮಾಡಬೇಕು. ನನ್ನ ಕೊನೆಯ ದಿನಗಳನ್ನು ಹಗುರಗೊಳಿಸುವ ನಿಮಗೆ ಮತ್ತು ನಿಮ್ಮವರ ಮೇಲೆ ನನ್ನ ಜೀವನವನ್ನು ಯಾರ ಸೇವೆಗೆ ಮುಡಿಪಿಟ್ಟಿದ್ದೆನೋ ಆ ದೇವರು ತನ್ನ ಶ್ರೇಷ್ಟ ಆಶೀರ್ವಾದಗಳನ್ನು ಹರಿಸಲಿ.- ಭಗವಂತನಲಿ ಎಂದಿಗೂ ನಿಮ್ಮವನಾದ-ವಿವೇಕಾನಂದ ವಿ.ಸೂ – ಇದು ಖಂಡಿತ ವೈಯಕ್ತಿಕವಾದುದು. ತಾವು ಇದನ್ನು ಮಾಡುವಿರೋ ಎಲ್ಲವೋ ಎನ್ನುವ ಬಗ್ಗೆ ತಂತಿ ಸಂದೇಶ ಕಳಿಸುವಿರಾ ? –ಎಂದಿಗೂ ನಿಮ್ಮವ-ವಿವೇಕಾನಂದ ‘
ಇದಕ್ಕೆ ಸಕಾರಾತ್ಮಕವಾಗಿ ಖೇತ್ರಿ ರಾಜ ಅಜಿತ್ ಸಿಂಗ್ ತಂತಿ ಕಳಿಸಿದ್ದಕ್ಕೆ ಸ್ವಾಮಿಗಳಿಗೆ ಸಂತೋಷವಾಗಿ ಅದಕ್ಕೆ ಮಾರುತ್ತರ ಬರೆದಿದ್ದರು. ಅದರಲ್ಲಿ ತಮ್ಮ ಬೇಕುಗಳ ಪಟ್ಟಿಯನ್ನು ಕೊಟ್ಟಿದ್ದರು. ಸಣ್ಣ ಮನೆ ಕಟ್ಟಲು ಕನಿಷ್ಟ ೧೦,೦೦೦=೦೦ ಬೇಕೆನ್ನುವ ಅಂದಾಜು ಮಂಡಿಸಿದ್ದರು. ಪ್ರತಿ ತಿಂಗಳು ತಾಯಿಗೆ ಕಳಿಸುತ್ತಿರುವ ರೂ.೧೦೦ ಆಕೆಯ ಜೀವನಕ್ಕೆ ಸಾಕಾಗುತ್ತದೆ ಎನ್ನುತ್ತ ಇದರ ಜೊತೆಗೆ ತಾವು ಬದುಕಿರುವವರೆಗೆ ತಮಗೂ ತಿಂಗಳಿಗೆ ರೂ ೧೦೦ ಕೊಡುವಂತೆ ಕೇಳಿಕೊಂಡಿದ್ದರು. ನಾನು ಕೆಲವೇ ವರ್ಷ ಬದುಕುವುದರಿಂದ ನಿಮಗೆ ಇದರಿಂದ ಹೆಚ್ಚಿನ ತೊಂದರೆಯಾಗದೆನ್ನುವ ಆಶ್ವಾಸನೆ ನೀಡಿದ್ದರು. ತಾವು ಸತ್ತ ನಂತರವೂ ತಾಯಿಗೆ ಕೊಡುತ್ತಿರುವ ತಿಂಗಳ ಹಣ ರೂ ೧೦೦ ಮುಂದುವರೆಸುವಂತೆ ಕೋರಿಕೊಂಡಿದ್ದರು. ಈ ಹಿಂದೆ ಬಡ ಸಾಧುವಿನ ಮೇಲೆ ತೋರಿಸಿದ ಪ್ರೀತಿಯನ್ನೇ ತಾಯಿಗೆ ತೋರಿಸಬೇಕೆಂದು ಅಲವತ್ತುಕೊಂಡಿದ್ದರು. …ನಾನು ಈ ಪ್ರಪಂಚದಲ್ಲಿ ಏನಾಗಿರುವೆನೋ ಅದೆಲ್ಲ ನಿಮ್ಮ ನೆರವಿನಿಂದ ಎನ್ನಲು ಮರೆತಿರಲಿಲ್ಲ. (೧/೧೨/೧೮೯೮). ಸ್ವಾಮಿಗಳು ಬರೆದಿರುವ ಈ ಪತ್ರಗಳು ಬಹಳ ಕರುಣಾಜನಕವಾಗಿದ್ದು ಅವುಗಳಿಗೆ ಯಾವುದೇ ವಿವರಣೆ ಬೇಕಿಲ್ಲ.
ಮಾರ್ಗರೆಟ್ ನೋಬಲ್’ಗೆ ಜನವರಿ ತಿಂಗಳಿನಲ್ಲಿ ಬರೆದಿರಬಹುದಾದ ಬರೆದ ಪತ್ರವೊಂದರಲ್ಲಿ ಸ್ವಾಮಿಗಳು ತಮ್ಮ ದಾಯಾದಿ ದುರ್ಗಾ ಪ್ರಸನ್ನ ಬೋಸ್ ೧೨೭, ಮಾಣಿಕ್ ತಾಲ ಬೀದಿಯಲ್ಲಿ ವಾಸಿಸುತ್ತಿದ್ದಾನೆಂದು ತಿಳಿಸಿದ್ದರು. ನಿವೇದಿತಾರನ್ನು ಯಾವ ಕಾರಣಕ್ಕೆ ಸ್ವಾಮಿಗಳು ಅಲ್ಲಿಗೆ ಕಳಿಸಿದ್ದರು , ಆಕೆಯ ಜೊತೆಗೆ ಇನ್ನು ಬೇರೆ ಯಾರಿದ್ದರು ಎಂದು ತಿಳಿಯುವುದಿಲ್ಲ. ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆಕೆಯನ್ನು ಅಲ್ಲಿಗೆ ಕಳಿಸಿರಬಹುದು. ಸಾರಾ ಬುಲ್’ಗೆ ಬರೆದ ಪತ್ರದಿಂದ ಆಕೆ ತಾನು ಕೊಟ್ಟ ಹಣ ಹೇಗೆ ಬಳಸಲ್ಪಟ್ಟಿದೆ ಎಂದು ತಿಳಿಯಲು ಬಯಸಿದಂತಿದೆ. ಇದರೊಂದಿಗೆ ಸ್ವಾಮಿಗಳು ಮನೆಯನ್ನು ದಾಯಾದಿಗಳ ವಶದಿಂದ ತಪ್ಪಿಸಿ ತಾಯಿಗೆ ಕೊಡಿಸಲು ಬಹು ಪ್ರಯತ್ನ ನಡೆಸಿದಂತೆ ಮತ್ತು ಸಾರಾ ಬುಲ್’ಗೆ ದಾಯಾದಿಗಳನ್ನು ಪರಿಚಯಿಸಿದಂತೆ ಕಾಣುತ್ತದೆ. ಕೌಟುಂಬಿಕ ಸಮಸ್ಯೆಗಳಿಂದ ಸ್ವಾಮಿಗಳು ಜರ್ಝರಿತರಾಗಿದ್ದರು. ಅವರ ಮನಸ್ಸು ಗೊಂದಲದ ಗೂಡಾಗಿದ್ದಿತು.
‘ನನ್ನ ವಿಷಯದಲ್ಲಿ ನಾನು ಏನು ಮಾಡಬೇಕೆಂದು ತಿಳಿಯದು. ಅಥವಾ ನಾನು ಇನ್ನೇನನ್ನಾದರೂ ಮಾಡಬೇಕಾಗಿದೆಯೋ ತಿಳಿಯದು. ಹಡಗಿನಲ್ಲಿದ್ದಾಗ ಆರೋಗ್ಯವಾಗಿದ್ದೆ. ಭೂಮಿಗೆ ಇಳಿದ ಮೇಲೆ ಮತ್ತೆ ತೊಂದರೆಯಾಗುತ್ತಿದೆ. ಮಾನಸಿಕ ಚಿಂತೆ ಇತ್ತೀಚೆಗೆ ಸಾಕಷ್ಟಿದೆ. ನೀವು ನೋಡಿದ ಮಹಿಳೆಗೆ ಮೋಸ ಮಾಡುವ ಅಳವಾದ ತಂತ್ರವಿದೆ. ಆಕೆ ಮತ್ತು ಆಕೆಯ ಜನರು ಒಂದು ಮನೆಯನ್ನು ರೂ ೬೦೦೦ ಅಥವಾ ೪೦೦ ಪೌಂಡ್’ಗಳಿಗೆ ಮಾರಲು ಪಿತೂರಿ ಮಾಡಿದರು. ನಾನು ಅದನ್ನು ನನ್ನ ತಾಯಿಗಾಗಿ ನಂಬಿಕೆಯಿಂದ ಕೊಂಡುಕೊಂಡೆನು. ನಂತರ ಅವರು ಮನೆಯನ್ನು ನಮಗೆ ಬಿಟ್ಟುಕೊಡಲಿಲ್ಲ. ಸಂನ್ಯಾಸಿಯಾಗಿ ನಾನು ನ್ಯಾಯಾಲಯಕ್ಕೆ ನಾಚಿಕೆಯಿಲ್ಲದೆ ಹೋಗಿ ಬಲತ್ಕಾರದಿಂದ ಅದನ್ನು ವಶಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಅವರು ಭಾವಿಸಿದರು.. … ನೀವು ಮತ್ತು ಇತರರು ಕೊಟ್ಟ ಹಣದಲ್ಲಿ ನಾನು ಒಂದು ರೂಪಾಯಿಯನ್ನೂ ಆ ಕೆಲಸಕ್ಕೆ ಖರ್ಚು ಮಾಡಿಲ್ಲವೆಂದು ತೋರುವುದು. ನನ್ನ ತಾಯಿಗೆ ಸಹಾಯ ಮಾಡುವುದಕ್ಕೆಂದೇ ಕ್ಯಾಪ್ಟನ್ ಸೇವಿಯರ್ ೮೦೦೦ ರೂಗಳನ್ನು ಕೊಟ್ಟರು. ಈ ಹಣವೂ ಕೂಡ ಹಾಳಾಯಿತೆಂದು ತೋರುವುದು. ಇದಲ್ಲದೆ ನನ್ನ ಕುಟುಂಬಕ್ಕಾಗಲಿ ಅಥವಾ ಆಹಾರ ಮುಂತಾದ ನನ್ನ ಸ್ವಂತ ಖರ್ಚಿಗೆಂದು ಖೇತ್ರಿಯ ರಾಜ ಕೊಟ್ಟಿದ್ದು ಖರ್ಚಾಗಿಲ್ಲ. ಅದರ ಅರ್ಧ ಭಾಗ ಪ್ರತಿ ತಿಂಗಳು ಮಠಕ್ಕೆ ಹೋಯಿತು. (ಪಡೆದಿದ್ದ ೫೦೦೦ ರೂ ಸಾಲ ತೀರಿಸಲು) ನಾನು ಆ ಹೆಂಗಸಿನಿಂದ ದೋಚಲ್ಪಡಬಾರದೆಂದು ಬ್ರಹ್ಮಾನಂದ ಏನಾದರೂ ಆಕೆಯ ಮೇಲೆ ಮೊಕದ್ದಮೆ ಹೂಡಲು ಖರ್ಚು ಮಾಡಿದಲ್ಲಿ ಆ ಹಣ ನನಗೇ ಉಳಿಯುವುದು-ನಾನು ಬದುಕಿದ್ದಲ್ಲಿ ತೀರಿಸುತ್ತೇನೆ. … ಯುರೋಪ್ ಮತ್ತು ಅಮೆರಿಕಾದಲ್ಲಿ ಕೇವಲ ಉಪನ್ಯಾಸಗಳಿಂದ ನನಗೆ ಬಂದ ಹಣವನ್ನು ನನಗೆ ಇಚ್ಛೆ ಬಂದಂತೆ ಬಳಸಿದೆನು ; ಆದ ನನ್ನ ಕಾರ್ಯೋದ್ದೇಶಕ್ಕೆ ಬಂದ ಹಣದ ಪ್ರತಿಯಂದು ಪೈಸೆಗೂ ಲೆಕ್ಕ ಇಡಲಾಗಿದೆ. ಅದು ಮಠದಲ್ಲಿದೆ. …. ಸದ್ಯಕ್ಕೆ ನನ್ನಲ್ಲಿ ಯಾವ ಯೋಜನೆಗಳೂ ಇಲ್ಲ. ಏನನ್ನೂ ಮಾಡಲು ಯೋಚಿಸುತ್ತಿಲ್ಲ. ಕೆಲಸ ಮಾಡುವ ಇಚ್ಛೆಯೂ ಇಲ್ಲ. ಜಗನ್ಮಾತೆ ತನ್ನ ಕೆಲಸಕ್ಕೆ ಬೇರೆಯವರನ್ನು ಆರಿಸಿಕೊಳ್ಳಲಿ..’ (೬/೮/೧೮೯೯-ಸಾರಾ ಬುಲ್)
ಅತ (ಕ್ರಿಸ್ತ) ತ್ಯಾಗವನ್ನು ಬೋಧಿಸಿದನು. ಪ್ರಪಂಚ ಆನಂದಿಸುವ ಸ್ಥಳವೆಂದು ಆತ ಎಂದು ಹೇಳಲಿಲ್ಲ. ತೋರಿಕೆಯ ಎಲ್ಲ ಜಂಬಗಳನ್ನೂ- ಮಕ್ಕಳು ಮತ್ತು ಗಂಡನ ಮೇಲಿನ ಪ್ರೀತಿಯನ್ನೂ ಸಹ- ಬಿಟ್ಟು ಭಗವಂತನೊಬ್ಬನನ್ನು ಮಾತ್ರ ಚಿಂತಿಸುವ ಕಾಲ ನಿನಗೆ ಬಂದಿದೆ ಎಂದು ಸ್ವಾಮಿಗಳು ೫/೧೦/೧೮೯೯ ರಂದು (ಕೃತಿಶ್ರೇಣಿಯಲ್ಲಿ ದಿನಾಂಕ ಇಲ್ಲ) ರಿಡ್ಜ್’ಲಿ ಮ್ಯಾನೊರ್’ನಿಂದ ಶ್ರೀಮತಿ ಜಾರ್ಜ್ ಹೇಲ್’ಗೆ ಬೋಧಿಸಿದ್ದರು. ‘ಸ್ಟರ್ಡಿ ಹತ್ತಿರ ಇದ್ದ ರಾಜಯೋಗದ ಹಣದ ಜೊತೆಗೆ ಖೇತ್ರಿ ರಾಜರು ಕೊಟ್ಟದ್ದು ಸೇರಿ ಎಲ್ಲಾ ಒಟ್ಟಿಗೆ ೫೦೦ ಪೌಂಡಿಗಿಂತ ಹೆಚ್ಚು ಲೆಗೆಟ್ ಬಳಿ ಇದೆ. ಈಗ ಲೆಗೆಟ್ ಹತ್ತಿರ ನನ್ನ ೧೦೦೦ ಡಾಲರ್’ಗಳಿವೆ. ನಾನು ಕಾಲವಾದರೆ ದಯವಿಟ್ಟು ಆ ಹಣವನ್ನು ನನ್ನ ತಾಯಿಗೆ ಕಳಿಸಿರಿ’ ಎಂದು ಸ್ಪಷ್ಟವಾಗಿ ತಿಳಿಸಿ ತಮ್ಮ ಪೂರ್ವಾಶ್ರಮದ ಕುಟುಂಬವೇ ತಮ್ಮ ಪ್ರಿತಿಪಾತ್ರರು ಎನ್ನುವುದನ್ನು ಖಚಿತಪಡಿಸಿದ್ದರು. (೨೭/೧೨/೧೮೯೯-ಸಾರಾ ಬುಲ್) . ….ಇಷ್ಟು ವರ್ಷ ನನ್ನ ಸೋದರಿಯ ಮಗಳು ಇಚ್ಛಾಶಕ್ತಿಯಿಂದ ತನ್ನ ಮನಸ್ಸನ್ನು ವಿಕಾಸಗೊಳಿಸಿಕೊಂಡಿರುವುದನ್ನು ನೋಡಿದ್ದೇನೆ. ಬಂಗಾಳಿ ಸಾಹಿತ್ಯವೆಲ್ಲ ಆಕೆಗೆ ಚೆನ್ನಾಗಿ ಗೊತ್ತು. ಅದು ಒಳ್ಳೆಯದು ‘ ಎಂದು ಸಾರಾಬುಲ್’ಗೆ (೨೯/೧೨/೧೮೯೯) ಮತ್ತು ಇದೇ ಸಮಯದಲ್ಲಿ ಮಾರ್ಗರೆಟ್ ನೋಬಲ್’ಗೆ ‘ ‘ನನ್ನ ದಾಯಾದಿಗೆ ಪಾಠ ಹೇಳಿಕೊಡುವುದನ್ನು ಬಿಟ್ಟುಬಿಟ್ಟೆಯಾ? ಎಂದು ಪ್ರಶ್ನಿಸಿದ್ದರು. ಸ್ವಾಮಿಗಳ ನಡವಳಿಕೆ ಅವರು ಕೊಡುತ್ತಿದ್ದ ಸಲಹೆಗಳಿಗಿಂತ ಭಿನ್ನವಾಗಿರುತ್ತಿದ್ದವು.
‘ಈಗ ನನಗೆ ನಿಚ್ಚಳವಾಗಿ ಕಾಣುತ್ತಿದೆ ; ಮಠದ ಉಸಾಬರಿಗಳನ್ನೆಲ್ಲಾ ಬಿಟ್ಟು ಕೆಲ ಕಾಲ ನನ್ನ ತಾಯಿಯೊಂದಿಗೆ ಇರಬೇಕೆನಿಸುತ್ತಿದೆ. ಅಕೆ ನನ್ನಿಂದ ತುಂಬಾ ನೋವುಂಡಿದ್ದಾಳೆ. ಖ್ಯಾತ ಶಂಕರಾಚಾರ್ಯರು ಇದನ್ನೇ ಮಾಡಬೇಕಾಯಿತು ಗೊತ್ತೆ ? ಕೊನೆಗಾಲದಲ್ಲಿ ಸ್ವಲ್ಪ ದಿನ ಆಕೆಯೊಂದಿಗೆ ಇರಬೇಕಾಯಿತು….. ನಾನು ಎಂದಿಗಿಂತ ಹೆಚ್ಚು ಶಾಂತಚಿತ್ತನಾಗಿರುವೆನು. ಹಣದ ವಿಷಯದಲ್ಲಿ ಮಾತ್ರ ಸ್ವಲ್ಪ ಕಷ್ಟವಿದೆ. ಅಲ್ಲದೇ ಭಾರತದವರೂ ಕೂಡ ನನಗೇನನ್ನಾದರೂ ಕೊಡಬೇಕಾಗಿದೆ. …ನನ್ನ ತಾಯಿ ಇನ್ನೂ ಹೆಚ್ಚು ದಿನ ಬದುಕಲಾರಳು ಎಂದು ನನಗೆನಿಸುತ್ತಿದೆ. ಅದೂ ಅಲ್ಲದೆ ಸರ್ವಶ್ರೇಷ್ಟವಾದ ತ್ಯಾಗವನ್ನು ನಾನು ಮಾಡಬೇಕಾಗಿದೆ. …ನೀವು ನನ್ನನ್ನು ಭಾರತಕ್ಕೆ ಹಿಂದಕ್ಕೆ ಕಳಿಸುವಿರಾ ? ನಾನು ಯಾವಾಗ ಬೇಕಾದರೂ ಹೋಗಲು ಸಿದ್ಧನಾಗಿರುವೆನು. ೧೮೮೪ ರಲ್ಲಿ ನನ್ನ ತಾಯಿಯನ್ನು ತ್ಯಜಿಸಿದ್ದು ದೊಡ್ಡ ತ್ಯಾಗ. ಆದರೆ ಈಗ ತಾಯಿಯ ಬಳಿಗೆ ಹೋಗುವುದು ಅದಕ್ಕಿಂತಲೂ ದೊಡ್ದ ತ್ಯಾಗ..’ ಎಂದು ಬಡಬಡಿಸಿದ್ದರು. (೧೭/೧/೧೯೦೦-ಸಾರಾ ಬುಲ್).
‘ ನೀವು ನನ್ನದೊಂದು ದೊಡ್ದ ಜವಾಬ್ದಾರಿಯನ್ನು ವಹಿಸಿಕೊಂಡಿರುವಿರಿ-ಎಂದರೆ ನನ್ನ ಬಡ ಸೋದರ ಸೊಸೆಯ ಹೊಣೆ ನಿಮ್ಮದಾಗಿದೆ. ಇದರಿಂದ ನನಗೆ ಅದೆಷ್ಟೋ ತೃಪ್ತಿ. ನನ್ನ ತಾಯಿಯ ವಿಷಯವಾದರೋ ಬೇರೆ. ನನ್ನ ಮತ್ತು ಆಕೆಯ ಕೊನೆಗಾಲವನ್ನು ಕಳೆಯಲು ಆಕೆಯಲ್ಲಿಗೆ ಹೋಗುತ್ತೇನೆ. ನ್ಯೂಯಾರ್ಕ್’ನಲ್ಲಿರುವ ೧೦೦೦ ಡಾಲರ್’ಗಳಿಂದ ತಿಂಗಳಿಗೆ ೯ ರೂಪಾಯಿ ಬರುವುದು. ನಾನು ಆಕೆಗಾಗಿ ಸ್ವಲ್ಪ ಜಾಗವನ್ನು ಖರೀದಿಸಿದ್ದೇನೆ. ಅದರಿಂದ ೬ ರೂಪಾಯಿ ಬರುವುದು. ಆಕೆಯ ಹಳೆಯ ಮನೆಯಿಂದ ೬ ರೂಪಾಯಿ ಬರುವುದು. ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವದರಂದ ನಾನು ಆ ಮನೆಯತ್ತ ಗಮನ ಹರಿಸಿರಲಿಲ್ಲ. ನಾನು , ನನ್ನ ತಾಯಿ ಮತ್ತು ನನ್ನ ಅಜ್ಜಿ ತಿಂಗಳಿಗೆ ೨೦ ರೂಪಾಯಿಯಲ್ಲಿ ಜೀವನ ಮಾಡಿಕೊಳ್ಳುತ್ತೇವೆ. ನ್ಯೂಯಾರ್ಕ್’ನಲ್ಲಿರುವ ೧೦೦೦ ಡಾಲರ್ ಮುಟ್ಟದೆ ಭಾರತಕ್ಕೆ ಹೋಗಲು ಪ್ರಯತ್ನ ಮಾಡುತ್ತೇನೆ ‘ ಎನ್ನುತ್ತ ಸಂಸಾರಿಗಳಿಗಿಂತ ಸಂಸಾರಿಯಾಗಲು ತಯಾರಿ ನಡೆಸಿದ್ದರು. ವೇದಾಂತ ಬೋಧಿಸಲು ಹೋಗಿ ಸೋದರ ಸೊಸೆಯ ಹೊಣೆಯನ್ನು ಅಭಿಮಾನಿಗಳ ಹೆಗಲಿಗೇರಿಸಿದ್ದರು. (೭/೩/೧೯೦೦-ಸಾರಾ ಬುಲ್)
೧೨/೩/೧೯೦೦ ರಂದು ಸ್ಯಾನ್’ಫ್ರಾನ್ಸಿಸ್ಕೊದ ವೆಂಡಟ್ ಸಭಾಂಗಣದಲ್ಲಿ ಉಪನ್ಯಾಸ ಸ್ವಾಮಿಗಳು ಯಶಸ್ವಿಯಾಗಿ ಸರಣಿಯ ಕೊನೆಯ ಭಾಷಣ ಮಾಡಿದ ದಿನವೇ-೧೨/೩/೧೯೦೦-ಬರೆದ ಪತ್ರಗಳಲ್ಲಿ ‘ಭಗವದ್ಗೀತೆಯಲ್ಲಿ ತಿಳಿಸಿದಂತೆ ಎಲ್ಲವನ್ನೂ ತೊರೆದು ಭಗವಂತನತ್ತ ಹೋಗಲು ಯತ್ನಿಸುತ್ತಿದ್ದೇನೆ ಎಂದು ಮೇರಿ ಹೇಲ್’ಗೆ ‘ .. ನಾನು ಅವಳನ್ನು (ನಿವೇದಿತಾ) ನಿಮಗೆ ಒಪ್ಪಿಸಿರುವೆನು. …ನಾನೀಗ ಸಂಪೂರ್ಣ ಶರಣಾಗತನಾಗಿ ಅವನನ್ನು ಮೊರೆ ಹೊಕ್ಕಿದ್ದು ನನ್ನಲ್ಲಿ ಒಂದು ಪೂರ್ಣ ಬದಲಾವಣೆಯಾಗುತ್ತಿದೆ, ಅದು ಜಗನ್ಮಾತೆಗೆ ಗೊತ್ತು…. ನಾನು ಸಂನ್ಯಾಸಿಯಂತೆ ಸಾಯುತ್ತೇನೆ. ನೀವು ನನ್ನ ಪಾಲಿಗೆ ನನ್ನ ತಾಯಿಗಿಂತ ಹೆಚ್ಚಾಗಿರುವಿರಿ’ ಎಂದು ಸಾರಾ ಬುಲ್’ಗೆ , ‘ನಾನೀಗ ಪ್ರಶಾಂತನಾಗಿರುವೆ’ ಎಂದು ಕ್ರಿಸ್ಟೈನಾಗೆ ಬರೆದಿದ್ದರು. ಬ್ರಹ್ಮಾನಂದರಿಗೆ ‘ …..ನನ್ನ ಜೀವನೋಪಾಯಕ್ಕಾಗಿ ಕೆಲಸ ಮಾಡದಿದ್ದರೆ ಉಪವಾಸದಿಂದ ನರಳಬೇಕಾಗುತ್ತದೆ. ಕಾಂಪೌಂಡ್ ಕಟ್ಟಲು ಬೇಕಾದುದನ್ನು ದುರ್ಗಾಪ್ರಸನ್ನ ಮಾಡಿದ್ದಾನೆ ಎಂದು ಭಾವಿಸುತ್ತೇನೆ. ಒಂದು ಕಾಂಪೌಂಡ್ ಕಟ್ಟಿಸುವುದು ಅಂತಹ ಕಷ್ಟದ ಕೆಲಸವಲ್ಲ. ಸಾಧ್ಯವಾದರೆ ಅಲ್ಲಿ ನಾನೊಂದು ಸಣ್ಣ ಮನೆಯನ್ನು ಕಟ್ಟಿ ತಾಯಿ ಮತ್ತು ಅಜ್ಜಿಯ ಸೇವೆ ಸಲ್ಲಿಸುತ್ತೇನೆ. ಪಾಪ ಕೃತ್ಯಗಳು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ..ನಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳುತ್ತೇನೆ. ಈಗ ನನ್ನ ಸೋದರರೇ ನೀವೆಲ್ಲ ದೊಡ್ದ ಸಾಧುಗಳು ಮತ್ತು ಮಹಾತ್ಮರು. ... ನನಗೆ ಶಾಂತಿ ಸಿಗುವಂತೆ ಜಗನ್ಮಾತೆಯಲ್ಲಿ ಪ್ರಾರ್ಥಿಸಿ…. ನಾನು ಅಧಮಾಧಮನು . ಗುರುಗಳ ಪಾದ ಧೂಳಿಯನ್ನು ನನ್ನ ತಲೆಯ ಮೇಲೆ ಹಾಕು. ಮನಸ್ಸು ಶಾಂತವಾಗುವುದು. ಜೈ ಗುರುದೇವ, ಜೈ ಗುರುದೇವ…ನಾನು ಇನ್ನು ಮೇಲೆ ಕೆಲವು ಜಪ , ಧ್ಯಾನಗಳನ್ನು ಮಾಡುವೆ. ಇನ್ನೇನನ್ನೂ ಮಾಡುವುದಿಲ್ಲ. ಉಳಿದದ್ದು ಜಗನ್ಮಾತೆಗೆ ಗೊತ್ತು .’ ಎಂದು ಆತ್ಮ ನಿಂದನೆ ಮಾಡಿಕೊಂಡಿದ್ದರು. ತಂದೆಯ ಸಾವಿನ ನಂತರ ಕುಟುಂಬದ ಸಣ್ಣ ಮಕ್ಕಳನ್ನು ಸಾಕಲು ಹೆಣಗುತ್ತಿದ್ದ ತಾಯಿಯ ನೆರವಿಗೆ ಹೋಗದ ಪಾಪ ಪ್ರಜ್ಞೆ ಸ್ವಾಮಿಗಳನ್ನು ಕಾಡುತ್ತಿದ್ದಿತು. ಇದು ಆತ್ಮ ನಿಂದನೆ , ವಿಮರ್ಶೆ , ಪಶ್ಚಾತ್ತಾಪಗಳಲ್ಲಿ ಹೊರಬರುತ್ತಿದ್ದಿತು.
ಸ್ವಾಮಿಗಳು ತಮ್ಮ ಕಟುಂಬದ ಖರ್ಚಿಗಾಗಿ ಮಠದ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು. ಈ ಬಗ್ಗೆ ಶಾರದಾನಂದ ಅತೃಪ್ತಿ ತೋರಿಸಿದ್ದರು. ‘ ಶ್ರೀಮತಿ ಜೇಮ್ಸ್ ಹೆನ್ರಿ ಸೇವಿಯರ್ ನನ್ನ ಮನೆಯವರಿಗಾಗಿ ೬೦೦೦ ರೂ ಕೊಟ್ಟರು. ಅದನ್ನು ನನ್ನ ದಾಯಾದಿಗಳಿಗೆ , ಚಿಕ್ಕಮ್ಮ, ದೊಡ್ಡಮ್ಮ ಮುಂತಾದವರಿಗೆ ಹಂಚಲಾಯಿತು. ಶಾರದಾನಂದ ಏನು ಹೇಳಿದನೆಂದು ನನಗೆ ಗೊತ್ತಿಲ್ಲ. ಆತ ಏನೇ ಹೇಳಿರಲಿ ಮನೆಯನ್ನು ಕೊಳ್ಳಲೆಂದು ಉಪಯೋಗಿಸಿದ ರೂ ೫೦೦೦ ವನ್ನು ಮಠದ ಹಣದಿಂದ ಎರವಲು ಪಡೆಯಲಾಯಿತು. ನನ್ನಲ್ಲಿ ಹಣವಿಲ್ಲದ ಕಾರಣ ಗಂಗಾ ತೀರದ ಒಂದು ಸಣ್ಣ ಮನೆಯನ್ನು ತೆಗದುಕೊಳ್ಳುವ ಆಲೋಚನೆ ಬಹಳ ಕಾಲದ ಹಿಂದೆಯೇ ಕೈಬಿಟ್ಟಿರುವೆನು . ಆದರ ಕಲ್ಕತ್ತಯಲ್ಲಿ ಮತ್ತು ಲೆಗಟ್ ದಂಪತಿಗಳ ಬಳಿ ನನ್ನ ಹಣ ಸ್ವಲ್ಪ ಇರುವುದು. ನೀವು ಇನ್ನೊಂದು ಸಾವಿರ ಕೊಟ್ಟರೆ ನನ್ನ ಸ್ವಂತ ಖರ್ಚಿಗೆ ಉಪಯೋಗವಾಗುವುದು. ನಾನು ಎಂದಿಗೂ ನಿಮಗೆ ತಿಳಿದಂತೆ ನನ್ನ ಖರ್ಚಿಗಾಗಲಿ ಅಥವಾ ನನ್ನ ತಾಯಿಗಾಗಲಿ ಮಠದ ಹಣವನ್ನು ತೆಗ್ದುಕೊಳ್ಳಲಿಲ್ಲ. ಸಣ್ಣ ಮನೆಯೊಂದನ್ನು ಕೊಳ್ಳುವ ಯೋಜನೆಯನ್ನು ಕೈಬಿಡುವಂತೆ ಶಾರದಾನಂದರಿಗೆ ಬರೆಯಿರಿ. ನಾನು ಸಂಪೂರ್ಣ ಗುಣಮುಖನಾಗುವವರೆಗೆ ಇನ್ನು ಪತ್ರ ಬರೆಯುವುದಿಲ್ಲ. ವಿವಿಧ ಜನಗಳೊಂದಿಗೆ ಒಡನಾಡುವುದು ಸನ್ಯಾಸಿಗೆ ತರವಲ್ಲ. ಸನ್ಯಾಸಿ ಮೌನವಾಗಿ , ವ್ಯವಹಾರಗಳ ಹಿಂದೆ ಸರಿದು ಜನರಿಗೆ ಕಾಣದಂತೆ ಇರಬೇಕು ಎನ್ನುವ ಒಂದು ಸಂದೇಶದೊಂದಿಗೆ ಜೋಗೆ ಹೇಳಿ’ ಎಂದು ತತ್ತ್ವಾದರ್ಶದ ಮಾತುಗಳನ್ನಾಡಿದ್ದರು. (೧೮/೫/೧೯೦೦-ಸಾರಾ ಬುಲ್). ಈ ಪತ್ರದಲ್ಲಿ ಸ್ವಾಮಿಗಳು ಸಾರಾ ಬುಲ್ ಕೊಟ್ಟ ೩೫೦೦೦ ಹಣವನ್ನು ಹೇಗೆ ಬಳಸಲಾಗಿದೆಯೆಂದ ವಿವರಿಸಿದ್ದರು. ಅದರಲ್ಲಿ ೫೦೦೦ ರೂಗಳನ್ನು ತಮ್ಮ ಸ್ವಂತ ಬಳಕೆಗೆ ಪಡೆದಿದ್ದು ಅದರಲ್ಲಿ ೨೦೦೦ ರೂಗಳನ್ನು ಆಗಲೇ ಮರಳಿಸಿರುವುದನ್ನು ತಿಳಿಸಿ ಉಳಿದ ವಿಚಾರದಲ್ಲಿ ಸಾರಾ ಬುಲ್ ಸೂಕ್ತ ನಿರ್ಧಾರ ಕೈಗೊಳ್ಳಲು ಕೇಳಿಕೊಂಡಿದ್ದರು.
ಸ್ವಾಮಿಗಳು ಕೊನೆಯ ದಿನಗಳಲ್ಲಿ ತಾಯಿಯ ಜೊತೆ ಕಳೆಯಬೇಕೆಂದಿದ್ದು ದಿನದಿಂದ ದಿನಕ್ಕೆ ತಮ್ಮ ಪೂರ್ವಾಶ್ರಮದ ಕುಟುಂಬದತ್ತ ವಾಲುತ್ತಿರುವುದನ್ನು ಗಮನಿಸಿದ ಶಾರದಾನಂದ ಈ ಬಗ್ಗೆ ತನ್ನ ಭಯ ವ್ಯಕ್ತಪಡಿಸಿ ಸಾರಾ ಬುಲ್’ಗೆ ಪತ್ರ ಬರೆದಿದ್ದನು. ಸ್ವಾಮಿಗಳು ನಡುವೆ ಕೆಲವೊಮ್ಮೆ ಎಲ್ಲವನ್ನೂ ಬಿಟ್ಟು ಹಿಮಾಲಯ ಸೇರಿ , ಧ್ಯಾನ ಮಾಡುತ್ತ , ಪುಸ್ತಕಗಳನ್ನು ಬರೆಯುತ್ತೇನೆ ಎನ್ನುತ್ತ ಮನಸ್ಸಿಗೆ ಬಂದಂತೆ ಬದಲಾಗುತ್ತಿದ್ದರು. (125) ಸ್ವಾಮಿಗಳ ಈ ಮಾನಸಿಕ ತೊಳಲಾಟಗಳು , ನನ್ನನ್ನು ಭಾರತಕ್ಕೆ ಮರಳಿ ಕಳಿಸುವಿರಾ ಎಂದು ಅಮೆರಿಕನ್ ಹೆಂಗಸರಲ್ಲಿ ಗೋಗರೆಯುವಿಕೆ ವೇದಾಂತದ ಅದ್ವೈತಿಯನ್ನು ಸಾಮಾನ್ಯ ಮನುಷ್ಯನನ್ನಾಗಿಸಿದ್ದವು.
ಜನ ಸಾಮಾನ್ಯರ ಜೀವನ ಸೀಮಿತ-ಅದು ಅವರ ಕುಟುಂಬದ ಸುತ್ತ ತಿರುಗುತ್ತದೆ. ಹೆಣ್ಣು , ಹೊನ್ನುಗಳೇ ಆ ತಿರುಗಣಿಯ ಗೂಟಗಳು. ಈ ಜಗತ್ತಿನಲ್ಲಿ ಎಲ್ಲರಿಗಿಂತಲೂ ಸಂನ್ಯಾಸಿಯ ಜೀವನವೇ ಶ್ರೇಷ್ಟ . ಏಕೆಂದರೆ ಅವನು ತ್ಯಾಗಿ. ಅವನು ಯಾವುದಕ್ಕೂ ಬದ್ಧನಲ್ಲ. ಸಂಸಾರ ಅವನನ್ನು ಕಟ್ಟಿಡಲಾರದು. ಆದ್ದರಿಂದಲೇ ಆತ ವಿಶ್ವಪ್ರೇಮಿ ಎಂದು ಮೇಲಿಂದ ಮೇಲೆ ಕೊಚ್ಚಿಕೊಳ್ಳುತ್ತಿದ್ದ , ಮದ್ರಾಸಿನ ಶಿಷ್ಯರಿಗೆ ಮದುವೆ ಎಂಬ ಬಂಧನಕ್ಕೆ ಒಳಗಾಗದ ಧೀರ ತ್ಯಾಗಿಗಳೆಲ್ಲಿ ಎಂದು ಕಟುವಾಗಿ ಪ್ರಶ್ನಿಸಿ , ಹೀಗಳೆದಿದ್ದ ಸ್ವಾಮಿಗಳು ತಮ್ಮ ಪೂರ್ವಾಶ್ರಮದ ಕುಟಂಬಕ್ಕೆ ನೆರವಾಗಲು ಅಮೆರಿಕದ ಶಿಷ್ಯರ ಮೊರೆ ಹೊಕ್ಕು ಸಂಸಾರಿಗಿಂತಲೂ ಮಿಗಿಲಾಗಿ ಕಳವಳಗೊಂಡು. ಹಣದ ಬಗ್ಗೆ ಚಿಂತಿತರಾಗಿದ್ದರು. ಈ ಎಲ್ಲ ತಾಕಲಾಟಗಳಿಗೆ ತಲೆಗೊಡದೆ ಸ್ವಾಮಿಗಳ ತಮ್ಮ ಮಹೇಂದ್ರನಾಥ ದತ್ತ ಅವಧೂತನಂತೆ ವಿದೇಶಗಳಲ್ಲಿ ಅಲೆದಾಡುತ್ತಿದ್ದನು. ೧೮೯೬ ರಲ್ಲಿ ಸ್ವಾಮಿಗಳ ಲಂಡನ್’ನಲ್ಲಿ ತರಗತಿಗಳನ್ನು ನಡೆಸುತ್ತಿದ್ದಾಗ ಅವರ ತಮ್ಮ ಮಹೇಂದ್ರನಾಥ ದತ್ತ ಇರುತ್ತಿದ್ದನು. ಮಹೇಂದ್ರನಾಥ ದತ್ತನಿಗೂ ಮತ್ತು ಸ್ವಾಮಿಗಳು ಮಾಡುತ್ತಿರುವ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೆನ್ರಿಯೆಟ್ಟಾ ಮುಲ್ಲರ್ ಆತನನ್ನು ಮನೆಯಿಂದ ಹೊರ ಹಾಕಿದ್ದಳು. ಅದಾದ ನಂತರ ಆತ ಜಾನ್ ಫಾಕ್ಸ್ ಜೊತೆ ಇದ್ದನು. ಸ್ವಾಮಿಗಳಿಗೆ ತಿಳಿಯದಂತೆ ಆ ಸಮಯದಲ್ಲಿ ವೈದ್ಯುತ್ ಇಂಜಿನಿಯರಿಂಗ್’ನಲ್ಲಿ ಆಸಕ್ತಿ ಇರದಿದ್ದ ಮಹೇಂದ್ರನಾಥ ಕಣ್ಮರೆಯಾಗಿದ್ದು ಆತ ಎಲ್ಲಿರುವನೆಂದು ಸ್ವಾಮಿಗಳಿಗೆ ತಿಳಿದಿರಲಿಲ್ಲ. ಮುಂದಿನ ನಾಲ್ಕು ವರ್ಷಗಳ ಕಾಲ ಸಂನ್ಯಾಸಿಗಳಾಗಿದ್ದ ಸ್ವಾಮಿಗಳು ತಮ್ಮ ಪೂರ್ವಾಶ್ರಮದ ಕುಟುಂಬವನ್ನು ಸುಸ್ಥಿತಿಗೆ ತರಲು ಹೆಣಗುತ್ತಿದ್ದರೆ , ಆ ಹೊಣೆ ಹೊರಬೇಕಾದ ಮಹೇಂದ್ರನಾಥ ದತ್ತ ಸಂನ್ಯಾಸಿಯಂತೆ ಎಲ್ಲ ಬಂಧನಗಳನ್ನು ಕಳಚಿಕೊಂಡವನಂತೆ ಕಣ್ಮರೆಯಾಗಿದ್ದನು. ನಾಲ್ಕು ವರ್ಷಗಳ ನಂತರ ಆತನ ಚಲನವಲನಗಳ ಬಗ್ಗೆ ಸುದ್ದಿಗಳು ಸ್ವಾಮಿಗಳ ಕಿವಿಯನ್ನು ತಲುಪಿದ್ದವು.
‘.. ನೀನು ಬಹಳ ಒಳ್ಳೆಯವಳು. ನಾನೊಬ್ಬ ರೋಗಿ ಅದರ ವಿಷಯ ಅಷ್ಟೇ. …….. ಕಾಣೆಯಾಗಿದ್ದ ನನ್ನ ಸಹೋದರ (ಮಹೇಂದ್ರನಾಥ ದತ್ತ) ಬಗ್ಗೆ ಸಮಾಚಾರ ಬಂದಿದೆ. ಅವನೊಬ್ಬ ದೊಡ್ದ ಪ್ರವಾಸಿ. ಅದು ಒಳ್ಳೆಯದು . ಕವಿದಿರುವ ಮೋಡ ನಿಧಾನವಾಗಿ ಸರಿಯುತ್ತಿರುವುದನ್ನು ನೀನು ನೋಡಬಹುದು ‘ ಎಂದು ೧೪/೮/೧೯೦೦ ರಂದು ಕ್ರಿಸ್ಟೈನಾಗೆ ಬರೆದರು. ಅದೇ ದಿನ ‘ ದಯವಿಟ್ಟು ಮೊಹಿನ್'ಗೆ ಅವನು ಏನು ಮಾಡಿದರೂ ನನ್ನ ಆಶೀರ್ವಾದಗಳಿವೆ ಎಂದು ತಿಳಿಸು. ಅವನೀಗ ಮಾಡುತ್ತಿರುವುದು ವಕೀಲಿಕೆ ಮುಂತಾದವುಗಳಿಗಿಂತ ಅದೆಷ್ಟೋ ಮೇಲು. ನನಗೆ ಧೈರ್ಯ ಮತ್ತು ಸಾಹಸ ಬೇಕು. ದೇಶಕ್ಕೆ ಇಂತಹ ಜನರು ಬೇಕಾಗಿದ್ದಾರೆ. ನನ್ನ ಆರೋಗ್ಯ ಹದಗೆಡುತ್ತಿರುವುದರಿಂದ ನಾನು ಬಹಳ ಕಾಲ ಬದುಕುವ ಯೋಚನೆ ಇಲ್ಲ. ಮೋಹಿನ್ ತಾಯಿ ಮತ್ತು ಸಂಸಾರವನ್ನು ನೋಡಿಕೊಳ್ಳಲು ದಾರಿಯನ್ನು ಹುಡುಕಿಕೊಳ್ಳಬೇಕಿದೆ. ನಾನು ಎಂದು ಬೇಕಾದರೂ ತೀರಿಹೋಗಬಹುದು. ನಾನೀಗ ಅವನ ವಿಷಯಲ್ಲಿ ಹೆಮ್ಮಯಿಂದ ಇರುವೆನು’ ಎನ್ನುತ್ತ ತಮ್ಮನ ಬಗ್ಗೆ ಚಿಂತಿಸಿದ್ದರು.
ಸ್ವಾಮಿಗಳು ೧೫/೧೨/೧೯೦೦ ರಂದು ಮತ್ತು ೧/೬/೧೯೦೧ ರಂದು ತಮ್ಮ ಕಾಮಧೇನುವಾದ ಸಾರಾ ಬುಲ್’ಗೆ ಬರೆದ ಪತ್ರಗಳಲ್ಲಿ ‘ನನ್ನ ಸೋದರತ್ತೆಯ ಮಗಳು ಒಂದು ಕಾಗದ ಬರೆದಿದ್ದಳು. ಅದರಲ್ಲಿ ಅವಳ ಮಗಳು (ದತ್ತು ಮಗಳು) ತೀರಿಹೋದಳು ಎಂದು ತಿಳಿಸಿದ್ದಾಳೆ. ದುಃಖಪಡುವುದೇ ಭಾರತದ ಹಣೆಯಬರಹ ಮತ್ತು ‘ ನೀವು ಎಲ್ಲಿದ್ದೀರಿ ? ಹೇಗಿದ್ದೀರಿ ? ಇಲ್ಲಿ ಆದಷ್ಟು ಬೇಗ ನನ್ನ ಕೆಲಸಗಳು ಸರಿಹೋಗುವುವು.ಎನಿಸುತ್ತದೆ. ಅವುಗಳನ್ನು ಸರಿ ಮಾಡಲ ಆದಷ್ಟು ಯತ್ನಿಸುತ್ತಿದ್ದೇನೆ……ನೀವು ನನ್ನ ಸೋದರ ಸೊಸೆಗೆ ಕಳಿಸುತ್ತಿದ್ದ ಹಣವನ್ನು ಇನ್ನು ಮೇಲೆ ನನ ವಿಳಾಸಕ್ಕೆ ಕಳಿಸಿರಿ. ಚೆಕ್ಕನ್ನು ನನ್ನ ಹೆಸರಿಗೆ ಕಳಿಸಿರಿ. ಅದನ್ನು ನಗದು ಮಾಡಿ ಆಕೆಗೆ ಕಳಿಸುತ್ತೇನೆ. ಆಕೆಗೆ ನನ್ನ ಮೂಲಕ ಹಣ ಹೋಗುವುದು ಒಳ್ಳೆಯದು’ ಎಂದಿದ್ದಿತು. ಹಣ ಇಲ್ಲದೆ ಬರಿಗೈಯಾಗಿದ್ದ ಸ್ವಾಮಿಗಳ ಸಾರಾ ಬುಲ್ ಸೋದರ ಸೊಸೆಗೆ ಕಳಿಸುತ್ತಿದ್ದ ಹಣದಲ್ಲಿ ಸ್ವಲ್ಪ ಮೊತ್ತವನ್ನು ಅಗತ್ಯ ಬಿದ್ದರೆ ತಾವು ಬಳಸಿಕೊಳ್ಳಲು ಯೋಚಿಸಿರುವ ಸಾಧ್ಯತೆಗಳಿವೆ.
ಸ್ವಾಮಿಗಳು ತಮ್ಮ ತಾಯಿ ಮತ್ತು ಕುಟುಂಬದವರನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗಬೇಕೆಂದು ನಿರ್ಧರಿಸಿದ್ದರು.‘ ಢಾಕಾದಲ್ಲಿ ಬ್ರಹ್ಮಪುತ್ರದಲ್ಲಿ ಸ್ನಾನದ ಪ್ರಯುಕ್ತ ನನ್ನ ತಾಯಿ , ಚಿಕ್ಕಮ್ಮ ಮತ್ತು ಸೋದರ ಸೊಸೆ ಬಂದಿರುವರು. ಬಂಗಾಳದ ಅತಿ ಪೂರ್ವದ ಚಂದ್ರನಾಥ ಎನ್ನುವಲ್ಲಿಗೆ ನಾನು ನನ್ನ ತಾಯಿ ಮತ್ತು ಇತರ ಹೆಂಗಸರನ್ನು ಕರೆದೊಯ್ಯುತ್ತೇನೆ ‘ ಎಂದು ಸಾರಾ ಬುಲ್’ಗೆ ತಿಳಿಸಿದ್ದರು. (೨೯/೩/೧೯೦೧). ಇದನ್ನು ತಿಳಿದ ರಾಮಕೃಷ್ಣಾನಂದರು ಅವರೊಂದಿಗೆ ಇನ್ನೂ ಕೆಲವರನ್ನು ಕರೆದುಕೊಂಡು ಹೋಗುವಂತೆ ಸ್ವಾಮಿಗಳಲ್ಲಿ ಕೋರಿದ್ದರು. ಇದು ಸ್ವಾಮಿಗಳಿಗೆ ತಾವು ಹಗ್ಗ ತಿನ್ನುತ್ತಿರುವಾಗ ಬೇರೆಯವರಿಗೆ ಶಾವಿಗೆ ಕೊಡು ಎಂದು ಹೇಳಿದಂತಾಗಿದ್ದಿತು. ೨೬/೧/೧೯೦೧ ರಂದು ರಾಮಕೃಷ್ಣಾನಂದರಿಗೆ ಇಂತಹ ಸುದ್ದಿ ಎತ್ತದಂತೆ ತಾಕೀತು ಮಾಡಿದರು. ‘ನಾನು ತಾಯಿಯೊಂದಿಗೆ ರಾಮೇಶ್ವರಕ್ಕೆ ಹೋಗುತ್ತೇನೆ. ಮದ್ರಾಸಿಗೆ ಹೋಗುತ್ತೇನೋ ಇಲ್ಲವೋ ಗೊತ್ತಿಲ್ಲ. ಒಮ್ಮೆ ಹೋದರೂ ಅದು ಕೇವಲ ಖಾಸಗಿಯಾಗಿ ಮಾತ್ರ. ನನ್ನ ಮೈ, ಮನಸ್ಸಿಗೆ ತುಂಬಾ ಸಾಕಾಗಿದೆ. ನನಗೆ ಯಾರನ್ನೂ ಸಹಿಸಲಾಗುತ್ತಿಲ್ಲ. ನನಗೆ ಯಾರೂ ಬೇಕಿಲ್ಲ. ಬೇರೆ ಯಾರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲು ಇಚ್ಛೆಯಿಲ್ಲ. ಹಣವೂ ಇಲ್ಲ. ಗುರುಮಹಾರಾಜರ ಭಕ್ತರೋ ಅಲ್ಲವೋ ಯಾರಾಗಿದ್ದರೂ ಚಿಂತೆಯಿಲ್ಲ. ನೀನು ಅಂತಹ ಪ್ರಶ್ನೆಯನ್ನು ಹಾಕಿದ್ದೇ ಮೂರ್ಖತನ. ನಾನು ನಿನಗೆ ಮತ್ತೆ ಹೇಳುತ್ತೇನೆ. ನಾನು ಬದುಕಿರುವದಕ್ಕಿಂತ ಹೆಚ್ಚಾಗಿ ಸತ್ತಿದ್ದೇನೆ. ನಾನು ಖಂಡಿತವಾಗಿ ಯಾರನ್ನೂ ನೋಡುವುದಿಲ್ಲ. ನೀನು ಇದನ್ನು ನೋಡಿಕೊಳ್ಳದೆ ಇದ್ದರೆ ಮದ್ರಾಸಿಗೆ ಬರುವುದಿಲ್ಲ. ಯೋಗಿನ್ ಮಾ ಮುಂತಾದವರು ತಮ್ಮ ದಾರಿ ತಾವು ಹಿಡಿಯಲಿ. ನನ್ನ ಈಗಿನ ಆರೋಗ್ಯ ಪರಿಸ್ಥಿತಿಯಲ್ಲಿ ಯಾರ ಸಹವಾಸವನ್ನೂ ನಾನು ಇಚ್ಚಿಸೆನು’ ಎಂದು ಸ್ಪಷ್ಟವಾಗಿ ಹೇಳಿದ್ದರು.
ತಾಯಿಗೆ ಮತ್ತು ಕುಟುಂಬದವರಿಗೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿಸಿದ ನಂತರ ಸ್ವಾಮಿಗಳಲ್ಲಿ ಒಂದು ಬಗೆಯ ಸಂತೃಪ್ತಿ ಮನೆ ಮಾಡಿದ್ದಿತು. ಇದೇ ಸಮಯದಲ್ಲಿ ತಮ್ಮ ಮಹೇಂದ್ರನಾಥ ದತ್ತ ಎಲ್ಲಿರುವೆನೆಂಬ ಸುಳಿವು ಸಿಕ್ಕು ನೆಮ್ಮದಿ ಹೆಚ್ಚಿದ್ದಿತು. ೨೦/೩/೧೯೦೧ ರಂದು ಸಾರಾ ಬುಲ್ ಹತ್ತಿರ ತಮ್ಮನ ಬಗ್ಗೆ ಹೇಳಿದ್ದಾರ. ‘‘ನನ್ನ ಸೋದರ ಮೊಹಿನ್ ಭಾರತದಲ್ಲಿ ಬಾಂಬೆ ಹತ್ತಿರ ಕರಾಚಿಯಲ್ಲಿದ್ದು ಶಾರದಾನಂದರೊಡನೆ ಪತ್ರದ ಮೂಲಕ ಸಂಪರ್ಕದಲ್ಲಿದ್ದಾನೆ. ಅವನು ಬರ್ಮಾ, ಚೈನಾ ಇತ್ಯಾದಿ ದೇಶಗಳಿಗೆ ಹೋಗುವುದಾಗಿ ಬರೆದಿರುವನು. ಅವನಿಗೆ ಆಸೆ ತೋರಿಸುವ ವ್ಯಾಪಾರಿಗಳು ಅಲ್ಲಿರುವರು. ಅವನ ಬಗ್ಗೆ ನನಗೇನೂ ಕಾತರವಿಲ್ಲ. ಅವನು ಬಹಳ ಸ್ವಾರ್ಥಿ.’ ಮಾತಿನ ವರಸೆಯಿಂದ ಜಗತ್ತನ್ನೇ ಗೆದ್ದಿದ್ದ , ಸಾವಿರಾರು ಶಿಷ್ಯರನ್ನು ಹೊಂದಿದ್ದ ಸ್ವಾಮಿಗಳು ಮಹೇಂದ್ರನಾಥ ದತ್ತನೊಂದಿಗೆ ನೇರ ಸಂಪರ್ಕ ಹೊಂದದಿರುವುದು , ಅದರಂತೆ ಆತ ಸ್ವಾಮಿಗಳಿಗೆ ಯಾವುದೇ ಪತ್ರವನ್ನು ಬರೆಯದಿರುವುದು , ತನ್ನ ಚಲನವಲನಗಳನ್ನು ತಿಳಿಸದೇ ಇರುವುದು ಕುತೂಹಲಕಾರಿಯಾಗಿದೆ. ತಂದೆಯ ಸಾವಿನ ನಂತರ ನಾವಿನ್ನೂ ಬಾಲಕರಾಗಿರುವಾಗ ಸಂಕಷ್ಟದ ಸಮಯದಲ್ಲಿ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವಾಗ ಮನೆಯ ಹಿರಿಯನಾಗಿ ಕುಟುಂಬಕ್ಕ ಆಸರೆಯಾಗಿ ನಿಲ್ಲಬೇಕಾಗಿದ್ದ ಅಣ್ಣ ಸಂನ್ಯಾಸಿಯಾಗಿ ಹೊರಟನು. ಹಲವು ವರ್ಷಗಳ ಕಾಲ ಆತ ಎಲ್ಲಿರುವನೆಂದೇ ಗೊತ್ತಿರಲಿಲ್ಲ. ಈಗ ಖ್ಯಾತನಾದ ಮೇಲೆ ತಾಯಿಯನ್ನು ನೋಡಿಕೊಳ್ಳುವ ಮಾತನಾಡುತ್ತಿದ್ದಾನೆ. ಬೇಕಿದ್ದರೆ ಆತ ಆ ಬಗ್ಗೆ ಚಿಂತಿಸಲಿ . ಯಾವುದನ್ನೂ ಲೆಕ್ಕಿಸದೆ ಆತ ಹೇಗೆ ಹೊರಹೋದನೋ ಅದರಂತೆ ನಾನು ಕುಟುಂಬದ ಬಗ್ಗೆ ಚಿಂತಿಸದೆ ನನ್ನ ದಾರಿಯಲ್ಲಿ ನಾನು ಸಾಗುತ್ತೇನೆ ನಾನು ಯಾರಿಗೂ ಉತ್ತರಿಸಬೇಕಾಗಿಲ್ಲ ಎನ್ನುವ ಧೋರಣೆ ಮಹೇಂದ್ರನಾಥ ದತ್ತನಿಗೆ ಇರುವಂತಿದೆ. ಹಿರಿಯಕ್ಕ ಹಾಕಿದ ಚಾಳಿ ಮನೆ ಮಂದಿಗೆಲ್ಲ ಬರುವುದು ಸಹಜ.
ಸ್ವಾಮಿಗಳು ತಮ್ಮ ಕೌಟಂಬಿಕ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ದಾಯಾದಿಗಳಿಗೆ ಹಣ ಕೊಡಬೇಕಾಗಿದ್ದಿತು. ಅದಕ್ಕೆ ಅವರು ಸಾರಾ ಬುಲ್ ನೆರವು ಕೇಳಿದ್ದರು. ದಾಯಾದಿಗಳನ್ನು ಕೌಟುಂಬಿಕ ವ್ಯಾಜ್ಯದಲ್ಲಿ ಕಠಿಣವಾಗಿ ವರ್ತಿಸದಂತೆ ಮಾಡಲು ಅವರಲ್ಲಿ ಕೆಲವರನ್ನು ತಾಯಿಯೊಂದಿಗೆ ತೀರ್ಥ ಯಾತ್ರೆಗೆ ಕರೆದೊಯ್ದಿದ್ದರು. ಸ್ವಾಮಿಗಳು ಕಲ್ಕತ್ತ ತಲುಪಿದಾಗ ಅವರು ಬಯಸಿದ್ದ ನೆರವು ಬಂದಿದ್ದಿತು. ‘ ನನ್ನ ದಾಯಾದಿಗೆಂದು ನೀವು ಕಳಿಸಿದ ಮೂರು ಚೆಕ್'ಗಳು ಮತ್ತು ಪತ್ರ ತಲುಪಿದವು’ ಎಂದು /೧/೧೯೦೧ ಮತ್ತು ೧೩/೫/೧೯೦೧ ರಂದು ಸಾರಾ ಬುಲ್’ಗೆ ಪತ್ರ ಬರೆದರು. ೨೧/೨/೧೯೦೨ ರಂದು ಬ್ರಹ್ಮಾನಂದರಿಗೆ ಬರೆದ ಪತ್ರದಲ್ಲಿ ಅಮ್ಮ ಮತ್ತು ಅಜ್ಜಿ ಇಲ್ಲಿಗೆ ಬರುವ ಇಚ್ಚೆ ಇದ್ದರೆ ಬರಲಿ. ಪ್ಲೇಗ್ ಪೀಡಿತ ಕಲ್ಕತ್ತದಲ್ಲಿ ಇರುವುದಕ್ಕಿಂತ ದೂರವಿರುವುದು ಒಳ್ಳೆಯದು ಎಂದಿದ್ದಾರೆ.
ಭಾರತಕ್ಕೆ ಬಂದು ಆಲ್ಮೋರಾದಲ್ಲಿ ಸೇವಿಯರ್ ದಂಪತಿಗಳೊಂದಿಗಿದ್ದ ಕ್ರಿಸ್ಟೈನಾ ಗ್ರೀನ್’ಸ್ಟೈಡಲ್’ಗೆ ತೀರಿಕೊಳ್ಳುವುದಕ್ಕಿಂತ ಇಪ್ಪತ್ತು ದಿನ ಮೊದಲು (೧೪/೬/೧೯೦೨) ‘ಆ ಹುಡುಗ ನನ್ನ ಸೋದರಳಿಯ, ಆಶ್ರಮದಲ್ಲಿ ಇನ್ನೂ ಸ್ವಲ್ಪ ಕಾಲ ಇರುವನು. ಅವನು ಒಳ್ಳೆಯ ಉಚ್ಛಾರಣೆಯಿಂದ ಇಂಗ್ಲಿಷ್ ಮಾತನಾಡುವಂತೆ ಮಾಡು. ತಪ್ಪದೆ ಬಾಲ್ಯದಿಂದ ಮಾತನಾಡದ ಹೊರತು ಯಾವ ವಿದೇಶಿ ಭಾಷೆ ಸರಿಯಾಗಿ ಬರದು ‘ಎಂದು ಕಾಳಜಿ ವಹಿಸುತ್ತ ಭಾರತದ ದೀನರನ್ನು ಬಿಟ್ಟು ಸೋದರಳಿಯನನ್ನು ತಯಾರು ಮಾಡಲು ಸಿದ್ಧರಾಗಿದ್ದರು. ಸ್ವಾಮಿಗಳು ಸಾಯುವ ಕೊನೆಯ ಗಳಿಗೆಯ ತನಕ ತಾಯಿಗೆ ಮನೆ ಕಟ್ಟಲು , ಜೀವನಾಂಶ ಒದಗಿಸಲು ಹೆಣಗುತ್ತಿದ್ದು ತೀರಿಕೊಳ್ಳುವ ಕೆಲ ದಿನಗಳ ಮೊದಲಷ್ಟೇ ದಾಯಾದಿಗಳೊಂದಿಗೆ ರಾಜಿ ಸಂಧಾನ ಮಾಡಿಕೊಂಡು , ಅವರಿಗೆ ಹಣ ಕೊಟ್ಟು ತಮ್ಮ ಫೂರ್ವಾಶ್ರಮದ ಮನೆಯನ್ನು ಉಳಿಸಿಕೊಂಡರು. ಇದಕ್ಕಾಗಿ ಅಮೆರಿಕದಲ್ಲಿ ಉಪನ್ಯಾಸಗಳನ್ನು ನೀಡಿ ಹಣ ಸಂಪಾದಿಸಿದರು , ಅಮೆರಿಕನ್ ಶಿಷ್ಯರನ್ನು ಕಾಡಿದರು , ಬೇಡಿದರು , ಓಲೈಸಿದರು. ಕೊನೆಯಲ್ಲಿ ಅವರ ಈ ಎಲ್ಲ ಯತ್ನಗಳು ಸಾಮಾನ್ಯ ಸಂಸಾರಿಯ ಸಾಧನೆಗಳಿಗೆ ಸಮವಾಗಿದ್ದವು.
(ಸ್ವಾಮಿ ಅ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ವಿರಜ ಹೋಮದ ಮೂಲಕ ಸ್ವಂತ ಶ್ರಾದ್ಧವನ್ನು ಮಾಡಿಕೊಂಡು ಹಿಂದಿನ ಜೀವನದ ಎಲ್ಲ ಬಂಧನಗಳನ್ನು ಕಳಚಿಕೊಂಡೆನೆಂದು, ಇನ್ನು ಮುಂದೆ ತನಗೆ ತಂದೆ, ತಾಯಿ , ಅಣ್ಣ, ತಮ್ಮ ,ಬಂಧು ,ಬಾಂಧವರು ಯಾರೂ ಇಲ್ಲವೆಂದು ಘೋಷಿಸಿದ್ದ ನರೇಂದ್ರನಾಥ ದತ್ತ ಸಂನ್ಯಾಸಿಯಾದ ನಂತರವೂ ತನ್ನ ಕುಟುಂಬದ ಬಂಧನವನ್ನು ತೊರೆದಿರಲಿಲ್ಲ. ಸಂನ್ಯಾಸ ಸ್ವೀಕರಿಸಿದ ದಿನದಿಂದ ಪ್ರಾರಂಭಿಸಿ ಸಾಯುವ ಕೊನೆಯ ದಿನದ ತನಕವೂ ಸ್ವಾಮಿಗಳನ್ನು ಅವರ ಫೂರ್ವಾಶ್ರಮದ ಚಿಂತೆ ಬಿಟ್ಟಿರಲಿಲ್ಲ. ವಿಶ್ವನಾಥ ದತ್ತ ಬದುಕಿರುವಾಗಲೇ ಆಸ್ತಿ ಕುರಿತಾಗಿ ದಾಯಾದಿಗಳು ಹಾಕಿದ್ದ ಮೊಕದ್ದಮೆಗಳು ತೀವ್ರವಾಗತೊಡಗಿದವು. ಮನೆಯ ಹಿರಿ ಮಗನಾಗಿ ಸ್ವಾಮಿಗಳು ಆಗಾಗ್ಗೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತಿದ್ದಿತು. ತಮ್ಮಂದಿರು ಇನ್ನೂ ಬಾಲಕರಾಗಿದ್ದರು. ಒಂದು ಕಾಲದಲ್ಲಿ ಮೆರೆದಿದ್ದ ವಿಶ್ವನಾಥ ದತ್ತನ ಕುಟುಂಬ ಒಂದು ಹೊತ್ತಿನ ತುತ್ತು ಕೂಳಿಗಾಗಿ ಹೋರಾಡುವಂತಹ ಸ್ಥಿತಿ ಬಂದಿದ್ದಿತು, ಈ ಸಂಕಟವನ್ನು ತೋಡಿಕೊಂಡು ಸ್ವಾಮಿಗಳು ‘ಕಲ್ಕತ್ತದ ಹತ್ತಿರವಿದ್ದರೆ ನನ್ನ ಗುರಿಯಲ್ಲಿ ಸಫಲನಾಗುವುದಿಲ್ಲ. ಅಲ್ಲಿ ನನ್ನ ತಾಯಿ ಮತ್ತು ಇಬ್ಬರು ಸೋದರರಿದ್ದಾರೆ. ನಾನೇ ಹಿರಿಯ ಮಗ. ಎರಡನೆಯವನು ಮೊದಲ ವರ್ಷದ ಆರ್ಟ್ಸ್ ಪರೀಕ್ಷೆಗೆ ಓದುತ್ತಿದ್ದಾನೆ. ಮೂರನೆಯವನು ಇನ್ನೂ ಚಿಕ್ಕವನು….ತಂದೆ ಸತ್ತ ನಂತರ ಅವರಿಗೆ ಬಹಳ ಕಷ್ಟವಾಗಿದೆ. ಕೆಲವು ವೇಳೆ ಉಪವಾಸ ಇರಬೇಕಾಗಿದೆ. ಕೆಲ ಬಂಧುಗಳು ಅವರ ಸಂಕಟದ ಪರಿಸ್ಥಿತಿಯನ್ನು ಬಳಸಿಕೊಂಡು ಪಿತ್ರಾರ್ಜಿತ ಮನೆಯಿಂದ ಹೊರಗೆ ಓಡಿಸಿದ್ದರು. ಉಚ್ಛನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಮನೆಯ ಒಂದು ಭಾಗ ಪಡೆದುಕೊಂಡರೂ ಬಡತನದ ಹೊರೆ ಅವರ ಮೇಲಿದೆ. ವ್ಯಾಜ್ಯ ನ್ಯಾಯಾಲಯದಲ್ಲಿದೆ …ಕಲ್ಕತ್ತೆಯ ಹತ್ತಿರ ವಾಸ ಮಾಡುವುದರಿಂದ ಅವರ ಕಷ್ಟ ಸ್ಥಿತಿಯನ್ನು ನಾನು ನೋಡಬೇಕಾಗುವುದು. ಆಗ ರಾಜಸ ಗುಣ ಮೇಲಾಗಿ ನನ್ನ ಅಹಂಕಾರವು ಕೆಲವು ಸಲ ಕಾರ್ಯಮುಖವಾಗುವುದರಲ್ಲಿ ಕೊನೆಗೊಳ್ಳುವುದು. ಅಂತಹ ಸಮಯದಲ್ಲಿ ಮನಸ್ಸಿನಲ್ಲಿ ತುಮುಲಗಳೇಳುವುವು …’ ಎಂದು ಪ್ರಮದದಾಸ ಮಿತ್ರರಿಗೆ ಬರೆದಿದ್ದರು. (೪/೭/೧೮೮೯)
ಈಶ್ವರಕೋಟಿಗಳೆಂದು ಗುರುತಿಸಿದ್ದ ಶಿಷ್ಯರಿಗೆ ರಾಮಕೃಷ್ಣರು ಲೌಕಿಕವನ್ನು ತಿರಸ್ಕರಿಸಲು ಹೇಳಿದ್ದರಾದರೂ ಅವು ಯಾವುವೂ ಕಟು ವಾಸ್ತವಗಳೆದುರು ನಿಲ್ಲುವಂತಿರಲಿಲ್ಲ. ಸಂನ್ಯಾಸಿಯಾಗಿದ್ದರೂ ಮನೆಯ ಸೆಳೆತ ಬಲವಾಗಿದ್ದು , ವಿರಕ್ತಿ , ಮುಕ್ತಿಗಳು ಹಿಂದಕ್ಕೆ ಸರಿದಿದ್ದವು. ಇದರಿಂದ ತಪ್ಪಿಸಿಕೊಳ್ಳಲು ಸ್ವಾಮಿಗಳು ಪರಿವ್ರಾಜಕರಾಗಿದ್ದರು. ಈ ತಲ್ಲಣಗಳಿಗೆ ಸ್ವಾಮಿಗಳು ತಂದೆಯ ಸಮಾನರಾಗಿದ್ದ ಪ್ರಮದದಾಸ ಮಿತ್ರರಿಂದ ಪರಿಹಾರ ಹುಡುಕಲು ಯತ್ನಿಸಿರುವುದಕ್ಕೆ ೧೮೮೯ ರ ೭/೮, ೧೭/೮ , ೨/೯ , ೧೩/೧೨ , ೨೫/೧೨ ದಿನಾಂಕದ ಪತ್ರಗಳು ಸಾಕ್ಷಿಯಾಗಿವೆ. ಪ್ರಮದದಾಸ ಮಿತ್ರರು ತಮ್ಮಲ್ಲಿದ್ದ ವೇದಾಂತ ಗ್ರಂಥಗಳನ್ನು ಸ್ವಾಮಿಗಳಿಗೆ ಕೊಟ್ಟಿದ್ದರು. ಒಮ್ಮೆ ಸಂನ್ಯಾಸಿಯಾದ ನಂತರ ಫೂರ್ವಾಶ್ರಮದ ಬಗ್ಗೆ ಚಿಂತಿಸುವುದು , ಲೌಕಿಕ ಸ್ನೇಹಿತರ ಸಂಗ ಮಾಡುವುದು ತಪ್ಪು. ಅವು ಹಿಂದೂ ಧರ್ಮದ ಸಂನ್ಯಾಸಾಶ್ರಮದ ಆದರ್ಶಕ್ಕೆ ವಿರುದ್ಧ ಎಂದು ಅವರು ಸ್ವಾಮಿಗಳ ಗಮನಕ್ಕೆ ತಂದಿರುವುದು ಸ್ವಾಮಿಗಳು ಅವರಿಗೆ ನೀಡಿದ ಉತ್ತರದಿಂದ ಸ್ಪಷ್ಟವಾಗುತ್ತದೆ. ಸ್ವಾಮಿಗಳು ತಮ್ಮ ಕುಟುಂಬಕ್ಕೆ ಸೇರಿದ್ದ ಸ್ವಲ್ಪ ಜಮೀನನ್ನು ಮಾರಲು ಒಬ್ಬ ಮಧ್ಯವರ್ತಿಯನ್ನು ಗುರುತಿಸಲು ಯತ್ನಿಸತೊಡಗಿದ್ದು , ಆ ಕೆಲಸ ಕೆಲಸ ಮುಗಿದ ತಕ್ಷಣ ಸಂನ್ಯಾಸ ಜೀವನದತ್ತ ಪೂರ್ಣವಾಗಿ ಹೊರಳುವ ಆಶಯ ಹೊಂದಿದ್ದರು. (೧೪/೭/೧೮೮೯). ಇದಕ್ಕೆ ಉತ್ತರಿಸಿದ್ದ ಪ್ರಮದದಾಸ ಮಿತ್ರರು ಸ್ವಾಮಿಗಳನ್ನು ಮನ ಬಿಖಾರಿ (ದರಿದ್ರ ಆದರೂ ಗರ್ವಿ) , ಪೇಟ್ ವಿರಾಗಿ (ಹೊಟ್ಟೆಯೊರೆಯಲು ವೇಷ ಹಾಕಿದಾತ) , ಉಭಯಭ್ರಷ್ಟ ( ಸರಿಯಾದ ಸಂನ್ಯಾಸಿಯೂ ಅಲ್ಲ, ಸಂಸಾರಿಯೂ ಅಲ್ಲ) ಎಂದು ಲಘುವಾಗಿ ಚಾಟಿ ಬೀಸಿದ್ದು ಅದನ್ನು ಸ್ವಾಮಿಗಳು ವಿನಮ್ರತೆಯಿಂದ ಒಪ್ಪಿಕೊಂಡಿರುವಂತೆ ಕಾಣುತ್ತದೆ. (೧೭/೮/೧೮೮೯). ಸ್ವಾಮಿಗಳು ಎತ್ತಿದ್ದ ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಪ್ರಮದದಾಸ ಮಿತ್ರರು ಮೊದಲು ವಾದ-ವಿವಾದಗಳನ್ನು ಬಿಟ್ಟು ಸಾಧನೆಯಲ್ಲಿ ನಿರತನಾಗು ಎಂದಿದ್ದರು. (೨/೯/೧೮೮೯)
ಭಾರತದಲ್ಲಿ ಒಬ್ಬ ವ್ಯಕ್ತಿ ಸಂನ್ಯಾಸಿಯಾದರೆ ಆತ ತನ್ನ ಕುಟುಂಬ , ಹುಟ್ಟೂರು , ಬಂಧು-ಬಾಂಧವರು ತನ್ನನ್ನು ಗುರುತಿಸಬಹುದಾದ ಜಾಗಗಳಿಂದ ದೂರ ಹೋಗಿ ಬಿಡುತ್ತಾನೆ. ಸಂನ್ಯಾಸಿಯಾದ ನಂತರ ಪೂರ್ವಾಶ್ರಮದ ಕುಟುಂಬಕ್ಕೆ ಸಂಬಂಧಿಸಿದ ಯಾವ ಸುದ್ದಿಯೂ ತಿಳಿಯಬಾರದು, ಹಾಗೆ ತಿಳಿದರೆ ಮನಸ್ಸು ಮತ್ತೊಮ್ಮೆ ಆ ಕಡೆ ಹರಿಯುತ್ತದೆ ಎನ್ನುವುದೇ ಇದಕ್ಕೆ ಕಾರಣ. ಸಂನ್ಯಾಸಿಯಾಗಿ ಮನೆ ಬಿಟ್ಟವರು ಎಲ್ಲಿ ಹೋದರು , ಹೇಗಿದ್ದಾರೆ , ಬದುಕಿದ್ದಾರೆಯೇ ಸತ್ತಿದ್ದಾರೆಯೇ ಎನ್ನುವುದು ಕೂಡ ತಿಳಿಯದಂತಾಗುತ್ತದೆ. ಸಂನ್ಯಾಸಿಯೂ ಪತ್ರ, ಸುದ್ದಿ ಯಾವುದರ ಮುಖಾಂತರವೂ ತನ್ನ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಆತನ ಕುಟುಂಬದವರು ಆ ವ್ಯಕ್ತಿ ಸತ್ತನೆಂದೇ ಪರಿಗಣಿಸಿ ಎಲ್ಲ ಸವಾಲುಗಳನ್ನು ಸ್ವತಂತ್ರವಾಗಿ ಎದುರಿಸತೊಡಗುತ್ತಾರೆ. ಕುಟುಂಬದಿಂದ ಬಿಡುಗಡೆ ಹೊಂದುವುದೆಂದರೆ ನಿಜವಾಗಿಯೂ ಇದೇ. ರಾಮಕೃಷ್ಣರ ಸಂನ್ಯಾಸಿ ಶಿಷ್ಯರ ಬದುಕು ಈ ಸಾಂಪ್ರದಾಯಿಕ ಪದ್ದತಿಗಿಂತ ಬಹಳ ಭಿನ್ನವಾಗಿದ್ದಿತು. ಈ ಸಂನ್ಯಾಸಿಗಳೆಲ್ಲರೂ ಕಲ್ಕತ್ತದ ಪರಿಚಿತ ಜಾಗ , ಮಧ್ಯಮ ವರ್ಗದ ಮನೆತನಗಳಿಂದ ಬಂದಿದ್ದರು. ಆಧುನಿಕ ಕಛೇರಿಗಳಲ್ಲಿ ಒಟ್ಟಿಗೆ ದುಡಿಯುವ ಕೆಲಸಗಾರರ ನಡುವೆ ಇರುವಂತಹುದೇ ಸಂಬಂಧ ಇವರ ನಡುವೆ ಇದ್ದಿತು. ಇವರಿಗೆ ಇತರ ಗುರುಭಾಯಿಗಳ ಕುಟುಂಬ , ಅದರ ಹಿನ್ನೆಲೆಗಳು ಚೆನ್ನಾಗಿ ಗೊತ್ತಿದ್ದವು. ಇವರೆಲ್ಲರೂ ಹುಟ್ಟೂರಿನಲ್ಲಿಯೇ ಬರಾನಗರ ಮಠ ಎನ್ನುವ ನಿರ್ದಿಷ್ಟ ವಿಳಾಸ ಹೊಂದಿದ್ದರು. ತೀರ್ಥಯಾತ್ರೆಗೆ ಅಥವಾ ಸಂಚಾರಕ್ಕೆ ಹೋದಾಗ ಪತ್ರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಗುರುಭಾಯಿಗಳಲ್ಲಿ ಯಾರೊಬ್ಬರಿಗೆ ಅನಾನುಕೂಲ, ಅನಾರೋಗ್ಯ ಉಂಟಾದರೂ ಇತರರು ಅವರ ನೆರವಿಗೆ ಧಾವಿಸುತ್ತಿದ್ದರು. ಬರಾನಗರ ಮಠ ಎನ್ನುವ ಕೆಂದ್ರಕ್ಕೆ ಬಂದರೆ ಯಾವುದೇ ಗುರುಭಾಯಿಯ ಸುಳಿವನ್ನು ಹಿಡಿಯುವುದು ಅತ್ಯಂತ ಸುಲಭವಾಗಿದ್ದಿತು. ಸ್ವಾಮಿಗಳು ಎಲ್ಲೇ ಇರಲಿ ಅವರಿಗೆ ಕುಟುಂಬದ ಸ್ಥಿತಿ , ನ್ಯಾಯಾಲಯದಲ್ಲಿ ಮೊಕದ್ದಮೆಯ ಮುನ್ನಡೆ ತಮ್ಮಂದಿರ ವಿದ್ಯಾಭ್ಯಾಸ ತಿಳಿಯುತ್ತಿದ್ದವು. ಸಂನ್ಯಾಸ ಸ್ವೀಕರಿಸಿದ ಹತ್ತೊಂಬತ್ತು ವರ್ಷಗಳ ನಂತರವೂ (೧೯೦೨) ಸ್ವಾಮಿಗಳಿಗೆ ಅವರ ಕುಟುಂಬದ ಸೆಳೆತವಿದ್ದಿತೇ ಹೊರತು ಪರಮ ವೈರಾಗ್ಯವಲ್ಲ. ಸ್ವಾಮಿಗಳು ಬದುಕಿರುವವರೆಗೂ ತಮ್ಮ ಪೂರ್ವಾಶ್ರಮದ ಕುಟುಂಬದ ಹಿತ ಸಾಧನೆಗೆ ಶ್ರಮಿಸುತ್ತಿದ್ದರು.
೧೮೯೦ ರಲ್ಲಿ ಸ್ವಾಮಿಗಳ ತಂಗಿ ಯೋಗೇಂದ್ರ ಬಾಲ ಆತ್ಮಹತ್ಯೆ ಮಾಡಿಕೊಂಡಿದ್ದ ಸುದ್ದಿ ಭುವನೇಶ್ವರಿದೇವಿಗೆ ತಲುಪಿತು. ಆಗ ಸ್ವಾಮಿಗಳು ಆಲ್ಮೋರಾದಲ್ಲಿದ್ದರು. ಯೋಗಾನಂದ ( ಜೋಗಿಂದ್ರನಾಥ ಚೌಧುರಿ) ಮತ್ತು ಶಾರದಾನಂದ (ಶರತ್ ಚಂದ್ರ ಚಕ್ರವರ್ತಿ) ಮನೆಗೆ ಹೋಗಿ ಭುವನೇಶ್ವರಿ ದೇವಿಯನ್ನು ಸಂತೈಸಿದ್ದರು. ಶಾರದಾನಂದ ಕಳಿಸಿದ ತಂತಿಯಿಂದ ಸುದ್ದಿ ತಿಳಿದು ಸ್ವಾಮಿಗಳು ದುಃಖಿತರಾಗಿದ್ದರು. ‘ಹಲವು ವರ್ಷಗಳ ಹಿಂದೆ ಮತ್ತೆ ಮರಳಿ ಬರಬಾರದೆಂದು ಹಿಮಾಲಯ ಪ್ರದೇಶಕ್ಕೆ ಹೋದೆ. ನನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಳು. ಈ ಸುದ್ದಿ ನನಗೆ ತಲುಪಿತು. ದುರ್ಬಲ ಹೃದಯದಿಂದಾಗಿ ಶಾಂತಿಯ ಆಸೆಯನ್ನು ಬಿಡಬೇಕಾಯಿತು. ಈ ದುರ್ಬಲ ಹೃದಯವೇ ನಾನು ಪ್ರೀತಿಸುವ ಕೆಲವರ ಸಹಾಯಕ್ಕಾಗಿ ಹುಡುಕಿಕೊಂಡು ಹೋಗುವಂತ ನನ್ನನ್ನು ಭಾರತದಿಂದ ಓಡಿಸಿತು. ….ಎಂದು ಈ ಘಟನೆಯನ್ನು ಸ್ವಾಮಿಗಳು ೯ ವರ್ಷಗಳ ನಂತರ ನೆನೆದಿದ್ದರು. (೧೨/೧೨/೧೮೯೯).
ಸ್ವಾಮಿಗಳು ಪರಿವ್ರಾಜಕರಾಗಿದ್ದಾಗಲೂ ಕುಟುಂಬದ ಪರೋಕ್ಷ ಸಂಪರ್ಕ ಕಳೆದುಕೊಂಡಿರಲಿಲ್ಲ. ೧೮೯೨ ರಲ್ಲಿ ಬೆಳಗಾವಿಯಲ್ಲ ತೆಗೆಸಿಕೊಂಡಿದ್ದ ಫೋಟೊಗಳನ್ನು ಮಹೇಂದ್ರನಾಥ ದತ್ತರಿಗೆ ಕಳಿಸಿದ್ದರು. ಇದರಿಂದ ಕುಟುಂಬದವರಿಗೆ ಸ್ವಾಮಿಗಳು ಹೇಗಿರುವರು , ಎಲ್ಲಿರುವರು ಎಂದು ತಿಳಿದಿದ್ದಿತು. ೧೮೯೩ ಫೆಬ್ರವರಿಯಲ್ಲಿ ಮದ್ರಾಸಿನಲ್ಲಿರುವಾಗ ಸ್ವಾಮಿಗಳಿಗೆ ಕುಟುಂಬ ಮತ್ತು ತಾಯಿಯ ಚಿಂತೆ ಬಹಳವಾಗಿ ಕಾಡಿದ್ದಿತು. ಭುವನೇಶ್ವರಿ ದೇವಿ ಸತ್ತಂತೆ ಕನಸು ಬಿದ್ದಿದ್ದಿತು. ಇದರಿಂದ ಕಳವಳಗೊಂಡಿದ್ದ ಅವರು ಜ್ಯೋತಿಷಿಯ ಬಳಿ ತಾಯಿಯ ಆರೋಗ್ಯ ವಿಚಾರಿಸಲು ಕುಂಬಕ್ಕೋಣಂಗೆ ಹೋಗಿದ್ದರು. “ಆ ಜ್ಯೋತಿಷಿ ‘ಎದೆಗೆ ಗುಂಡು ಹೊಡೆದಂತೆ ನೇರವಾಗಿ ‘ಸಂನ್ಯಾಸಿಯಾಗಿರುವ ನೀನು ನಿನ್ನ ತಾಯಿಯ ಬಗ್ಗೆ ಏಕೆ ಚಿಂತಿಸುತ್ತಿರುವೆ’ ಎಂದು ಕೇಳಿದನು . ಆಗ ನಾನು ‘ಮಹಾ ಶಂಕರಾಚಾರ್ಯರೇ ಅವರ ತಾಯಿಯನ್ನು ನೋಡಿಕೊಳ್ಳಬೇಕಾಯಿತು’ ಎಂದು ಉತ್ತರಿಸಿದೆ. ಆಗ ಆತ ‘ಅದಿರಲಿ ನಿನ್ನ ತಾಯಿ ಚೆನ್ನಾಗಿದ್ದಾರೆ. ಆಕೆಯ ಹೆಸರನ್ನು ನಿನ್ನ ಸ್ನೇಹಿತನ ಬಳಿ ಇರುವ ಚೀಟಿಯಲ್ಲಿ ಬರೆದಿದ್ದೇನೆ ‘ ಎಂದು ತಿಳಿಸಿದ . ……ಇನ್ನೆರಡು ಮೂರು ವಾರಗಳಲ್ಲಿ ನಾನು ಯುರೋಪಿಗೆ ಹೋಗುತ್ತೇನೆ. (ನಿರರ್ಥಕ ನಿರೀಕ್ಷೆ). ಈ ದೇಹ ಮುಂದೇನಾಗುವುದೋ ಎಂದು ಹೇಳಲಾರೆ. ನನ್ನ ತಾಯಿ ಹಸಿವಿನಿಂದ ಸಾಯದಂತೆ ನೋಡಿಕೊಳ್ಳಬೇಕೆಂದು ಪ್ರಭುಗಳಲ್ಲಿ ಕೇಳಿಕೊಳ್ಳುತ್ತೇನೆ” ಎಂದು ಖೇತ್ರಿ ರಾಜ ಅಜಿತ್ ಸಿಂಗ್’ನಲ್ಲಿ ಮನವಿ ಮಾಡಿಕೊಂಡಿದ್ದರು. (೧೫/೨/೧೮೯೩). ಭುವನೇಶ್ವರಿದೇವಿ ಸಾಯದಂತೆ ನೋಡಿಕೊಳ್ಳುವುದೆಂದರೆ ಆಕೆಯ ಕುಟುಂಬವನ್ನೇ ನೋಡಿಕೊಂಡಂತೆ. ಇದಾದ ನಂತರ ಖೇತ್ರಿ ರಾಜ ಅಜಿತ್ ಸಿಂಗ್ ಮತ್ತು ಭುವನೇಶ್ವರಿದೇವಿ ಕುಟುಂಬದ ನಡುವೆ ನಿರಂತರ ಸಂಪರ್ಕವಿದ್ದಿತು. ‘ಬಹಳ ದಿನಗಳಿಂದ ಅಣ್ಣನ ಪತ್ರ ಬಾರದೆ ಚಿಂತೆಯಾಗಿದ್ದಿತು. ಹದಿನೈದು ದಿನಗಳ ಹಿಂದೆ ಆತ ಮದ್ರಾಸ್’ನಲ್ಲಿರುವ ಸುದ್ದಿ ಬಂದಿದೆ ಎಂದು ಮಹೇಂದ್ರನಾಥ ಅಜಿತ್ ಸಿಂಗ್’ಗೆ ಬರೆದ ಪತ್ರದಿಂದ ಸ್ವಾಮಿಗಳು ತಮ್ಮ ಕುಟುಂಬಕ್ಕೆ ಬೇಕಾದ ನೆರವನ್ನು ಪರೋಕ್ಷ ರೀತಿಯಲ್ಲಿ ಏರ್ಪಡಿಸಿದ್ದರೆನ್ನುವುದು ಸ್ಪಷ್ಟವಾಗುತ್ತದೆ.
ಸ್ವಾಮಿಗಳು ಅಮೆರಿಕಕ್ಕೆ ಹೋದ ನಂತರ ಹರಿದಾಸ ವಿಹಾರಿದಾಸ ದೇಸಾಯಿಯವರು ಕಲ್ಕತ್ತಕ್ಕೆ ಹೋಗಿದ್ದಾಗ ಸ್ವಾಮಿಗಳ ಕುಟುಂಬವನ್ನು ಭೇಟಿ ಮಾಡಿದ್ದರು. ತಾಯಿಯನ್ನು ಬಹಳ ಆದರಿಸುವ ಅದೇ ವೇಳೆಗೆ ಮನೆಯ ಹಿರಿಯ ಮಗನಾಗಿ ಕುಟುಂಬದ ಸಮಸ್ಯೆಗಳನ್ನು ಬಗೆ ಹರಿಸುವ ಮೊದಲು ಸಂನ್ಯಾಸವನ್ನು ತೆಗೆದುಕೊಂಡಿದ್ದ ಸ್ವಾಮಿಗಳ ಇಬ್ಬಂದಿತನದ ಔಚಿತ್ಯವನ್ನು ಪ್ರಶ್ನಿಸಿದ್ದರು. ಈ ಹಿಂದೆ ಪ್ರಮದದಾಸ ಮಿತ್ರರೂ ಇದೇ ಪ್ರಶ್ನೆಯನ್ನು ಎತ್ತಿದ್ದು ಸ್ವಾಮಿಗಳು ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದ್ದರು (೧೪/೭/೧೮೯೯) . ಹರಿದಾಸ ವಿಹಾರಿದಾಸ ದೇಸಾಯಿಗೆ ನೀಡಿದ ಉತ್ತರ ಪ್ರಮದದಾಸರಿಗೆ ನೀಡಿದ್ದಕ್ಕಿಂತಲೂ ಬೇರೆಯದಾಗಿದ್ದಿತು. ‘ಕೆಲವು ದಿನಗಳ ಹಿಂದೆ ನಿಮ್ಮ ಕಾಗದ ತಲುಪಿತು. ನೀವು ನನ್ನ ಬಡ ತಾಯಿಯನ್ನು ಮತ್ತು ಸಹೋದರರನ್ನು ನೋಡುವುದಕ್ಕೆ ಹೋಗಿದ್ದಿರೆಂದು ತಿಳಿದೆ. ನೀವು ಹಾಗೆ ಮಾಡಿದ್ದು ಸಂತೋಷ. ನನ್ನ ಹೃದಯದ ಏಕಮಾತ್ರ ಮರ್ಮದ ಸ್ಥಳವನ್ನು ತಾಗಿದಿರಿ. ನಾನು ನಿರ್ದಯನಾಗುವ ಮೂರ್ಖನಲ್ಲವೆಂದು ನಿಮಗೆ ಗೊತ್ತಿರಬೇಕು. ದಿವಾನರೇ , ನಾನು ಪ್ರೀತಿಸುವ ಯಾವುದಾದರೂ ಒಂದು ವಸ್ತುವಿದ್ದರೆ ಅದೇ ನನ್ನ ತಾಯಿ ‘ ಎಂದು ಉತ್ತರಿಸುತ್ತ ಭಾರತದ ಬಡವರ ಉದ್ಧಾರದ ಮುಂದೆ ಕುಟುಂಬ ಸಣ್ಣದೆಂದು ಬಗೆದು ಸಂನ್ಯಾಸ ತೆಗೆದುಕೊಂಡರುವುದಾಗಿ ಸಮರ್ಥಿಸಿಕೊಂಡಿದ್ದರು. (೨೯/೧/೧೮೯೪)
ಕುಟುಂಬದ ಹೊಣೆಗಾರಿಕೆಯನ್ನು ತೊರೆಯದೆ ಚಿಕ್ಕ ಮಗಳಿಗೆ ಮದುವೆ ಮಾಡಲು ಓಡಾಡುತ್ತಿದ್ದ ನಿಷ್ಟೆಯಿಂದ ಸಂನ್ಯಾಸಾಶ್ರಮಕ್ಕೆ ಬರದ ವೈಕುಂಠನಾಥ ಸನ್ಯಾಲನ ಎಡಬಿಡಂಗಿತನದ ಬಗ್ಗೆ ತಮ್ಮ ಅಸಹನೆಯನ್ನು ತೋರಿ ಸ್ವಾಮಿಗಳು ಶಾರದಾನಂದರಿಗೆ ಪತ್ರ ಬರೆದಿದ್ದು ಅದರಲ್ಲಿ ತೀವ್ರ ವಿರಾಗಿಗಳಲ್ಲದವರು ಸಂನ್ಯಾಸದ ಯೋಚನೆಯೇ ಮಾಡುವುದು ಬೇಡ ಎಂದು ತಿಳಿಸಿದ್ದರು. (೨೩/೧೨/೧೮೯೫) ಸ್ವಾಮಿಗಳು ಸಾರಾ ಬುಲ್’ಗೆ ಒಂದು ಪತ್ರ ಬರೆದಿದ್ದರು.. ಅದರಲ್ಲಿ ‘ ನನ್ನ ತಂದೆ ವಕೀಲರಾಗಿದ್ದರು. ನನ್ನ ರಕ್ತ ಸಂಬಂಧಿಗಳಲ್ಲಿ ಯಾರೂ ವಕೀಲರಾಗಲು ನಾನು ಇಚ್ಛೆ ಪಡುವುದಿಲ್ಲ. ನನ್ನ ಆಚಾರ್ಯರು ಅದನ್ನು ವಿರೋಧಿಸುತ್ತಿದ್ದರು. ಬಹು ಮಂದಿ ವಕೀಲರಿರುವ ಸಂಸಾರದಲ್ಲಿರುವವರು ಖಂಡಿತ ದುಃಖಕ್ಕೆ ಈಡಾಗುತ್ತಾರೆಂದು ನನ್ನ ನಂಬಿಕೆ. ನಮ್ಮ ದೇಶ ಅವರಿಂದ ತುಂಬಿದೆ. ವಿಶ್ವವಿದ್ಯಾಲಯಗಳು ನೂರಾರು ವಕೀಲರನ್ನು ತಯಾರಿಸುತ್ತವೆ. ನಮ್ಮ ಜನಾಂಗಕ್ಕೆ ಈಗ ಕೆಚ್ಚೆದೆಯ ವೈಜ್ಞಾನಿಕ ಮನೋಭಾವವುಳ್ಳ ಪ್ರತಿಭಾಶಾಲಿಗಳ ಅವಶ್ಯಕತೆಯಿದೆ. ಆದ್ದರಿಂದ ಮಹಿಮನು (ಮಹೇಂದ್ರನಾಥ ದತ್ತ) ಒಬ್ಬ ವೈದ್ಯುತ್ ಇಂಜಿನಿಯರ್ ಆಗಬೇಕೆನ್ನುವುದು ನನ್ನ ಇಚ್ಚೆ. ಅವನು ಜೀವನದಲ್ಲಿ ಜಯಶೀಲನಾಗದಿದ್ದರೂ ಉನ್ನತ ಪದವಿಗೇರಲು ಮತ್ತು ತನ್ನ ದೇಶಕ್ಕೆ ನಿಜವಾಗಿ ಸಹಾಯ ಮಾಡಲು ಶ್ರಮಿಸಿದನು ಎನ್ನುವುದು ನನಗೆ ಸಮಾಧಾನ ನೀಡುವುದು. ಕೇವಲ ಅಮೆರಿಕದಲ್ಲಿ ಮತ್ತು ಅಲ್ಲಿನ ವಾತಾವರಣದಲ್ಲಿಯೇ ,ಯಾರಲ್ಲಿ ಯಾವ ಉತ್ತಮ ಯೋಗ್ಯತೆಯಿದೆಯೋ ಅದು ಹೊರಗೆ ಬರುವುದು. ಅವನು ನಿರ್ಭೀತನಾಗಿ ಕೆಚ್ಚೆದೆಯಿಂದ ತನಗೆ ಮತ್ತು ತನ್ನ ಜನಾಂಗಕ್ಕೆ ಒಂದು ಹೊಸ ದಾರಿಯನ್ನು ಹಾಕಬೇಕೆನ್ನುವುದೇ ನನ್ನ ಬಯಕೆ. ವೈದ್ಯುತ್ ತಜ್ಞ ಭಾರತದಲ್ಲಿ ಚೆನ್ನಾಗಿ ಬದುಕಬಹುದು’ ಎಂದಿದ್ದಾರೆ. (೫/೬/೧೮೯೬)
ಸ್ವಾಮಿಗಳು ೧೮೯೫ ರಲ್ಲಿ ಲಂಡನ್’ನಲ್ಲಿರುವಾಗ ಅವರ ಜೊತೆ ಮಹೇಂದ್ರನಾಥ ದತ್ತ ಇದ್ದನು. ಈ ಹಿಂದೆ ಅಮೆರಿಕದಲ್ಲಿರುವಾಗ ಸಾರಾ ಬುಲ್ ಸ್ವಾಮಿಗಳ ಸ್ವಂತ ಖರ್ಚಿಗೆ ವರ್ಷಕ್ಕೆ ೧೦೦ ಡಾಲರ್ ಕೊಡುವುದಾಗಿ ಹೇಳಿದ್ದಳು. ಈ ಪತ್ರದ ಮೂಲಕ ಸ್ವಾಮಿಗಳು ಮಹೇಂದ್ರನಾಥ ದತ್ತ ಅಮೆರಿಕದಲ್ಲಿ ವೈದ್ಯುತ್ ಇಂಜಿನಿಯರಿಂಗ ಕಲಿಯಲು ವಾರ್ಷಿಕ ೧೦೦ ಡಾಲರ್ ಕೊಡುವಂತೆ ಕೇಳಿದ್ದರೆಂದು ತಿಳಿದು ಬರುತ್ತದೆ. ಆ ಹಣವನ್ನು ತಮ್ಮ ಬದಲಿಗೆ ತಮ್ಮನಿಗೆ ಕೊಡುವಂತೆ ಕೇಳಿದ್ದರೋ ಅಥವಾ ತಮ್ಮದಲ್ಲದೆ ಇನ್ನೂ ೧೦೦ ಡಾಲರ್ ಮಹೇಂದ್ರನಾಥ ದತ್ತರಿಗೆ ಕೇಳಿದ್ದರೋ ಗೊತ್ತಿಲ್ಲ. ಸಾರಾ ಬುಲ್ ಇದನ್ನು ಒಪ್ಪಿದಳೊ ಇಲ್ಲವೋ ಗೊತ್ತಿಲ್ಲ. (124). ಖೇತ್ರಿ ರಾಜ ಅಜಿತ್ ಸಿಂಗ್’ನಿಂದ ಸ್ವಾಮಿಗಳು ತಮಗಾಗಿ ನೆರವು ಪಡೆಯುವುದರಲ್ಲಿ ಯಾವ ವಿಶೇಷವೂ ಇರಲಿಲ್ಲ. ಆದರೆ ಅದನ್ನು ತಮ್ಮ ಕುಟುಂಬಕ್ಕೂ ವಿಸ್ತರಿಸಿದ್ದರು. ೧೨/೮/೧೮೯೬ ರಂದು ಎಡ್ವರ್ಡ್ ಸ್ಟರ್ಡಿಗೆ ಬರೆದ ಪತ್ರ ಇದನ್ನು ಸ್ಪಷ್ಟಗೊಳಿಸುತ್ತದೆ. ಈ ಪತ್ರದಲ್ಲಿ ‘ಇಷ್ಟರಲ್ಲಿ ರಾಜನಿಂದ ಮೋಹಿನ್'ಗೆ ಬರುವ ದುಡ್ಡು ನಿನ್ನ ವಿಳಾಸಕ್ಕೆ ಬಂದಿರಬಹುದೆಂದು ಯೋಚಿಸುತ್ತೇನೆ. ಹಾಗೆ ಬಂದಿದ್ದರೆ ನಾನು ಅವನಿಗೆ ಕೊಟ್ಟ ದುಡ್ಡು ನನಗೇನೂ ಬೇಕಿಲ್ಲ. ಆವನಿಗೆ ದುಡ್ಡನ್ನೆಲ್ಲಾ ಕೊಡಬಹುದು ‘ ಎಂದಿದ್ದಾರೆ. ಯಾವುದೇ ಆದಾಯ ಮೂಲವಿಲ್ಲದ ಮಹೇಂದ್ರನಾಥ ದತ್ತ ಲಂಡನ್’ಗೆ ಲಾಯರ್ ಪದವಿ ಗಳಿಸಲು ಹೇಗೆ ಬಂದಿರಬಹುದು ಎನ್ನುವುದಕ್ಕೆ ಈ ಪತ್ರ ಒಂದು ಸುಳಿವು ನೀಡುತ್ತದೆ. ಸ್ವಾಮಿಗಳು ಖೇತ್ರಿ ಮಹಾರಾಜರಿಂದ ಮಹೇಂದ್ರನಾಥ ದತ್ತನ ಪ್ರಯಾಣ ಮತ್ತು ವೆಚ್ಚದ ಹಣವನ್ನು ನಿಭಾಯಿಸುತ್ತಿದ್ದರೆಂದು ಖಚಿತವಾಗುತ್ತದೆ. ಇದರಲ್ಲಿ ಇನ್ನೊಂದು ವಿಚಿತ್ರವೆಂದರೆ ಸ್ವಾಮಿಗಳು ಮಹೇಂದ್ರನಾಥ ದತ್ತನಿಗೆ ಪತ್ರ ಬರೆದು ನೇರವಾಗಿ ವಿಷಯವನ್ನು ತಿಳಿಸದಿರುವುದು. ಇದು ಕೊನೆಯ ತನಕವೂ ಹೀಗೆಯ ಉಳಿದಿದ್ದಿತು. ಇದನ್ನು ಗಮನಿಸಿದರೆ ಕುಟುಂಬದ ಹೊಣೆ ಹೊತ್ತ ಅಣ್ಣ ತನ್ನ ತಮ್ಮಂದಿರನ್ನು ದಡಕ್ಕೆ ಸಾಗಿಸಲು ಎಲ್ಲ ಯತ್ನ ಮಾಡುವುದಕ್ಕಿಂತ ವಿರಾಗಿಗಳಾದ ಸ್ವಾಮಿಗಳ ಯತ್ನ ಬೇರೆಯಾಗಿರಲಿಲ್ಲ. ಗುರುಭಾಯಿಗಳಿಗೆ , ಶಿಷ್ಯರಿಗೆ ವಿರಾಗಿಗಳಾದ ಧೀರ ಯುವಕರೆಲ್ಲಿ ? ಭರತಖಂಡದಲ್ಲಿ ಹಳ್ಳಿಯಿಂದ ಹಳ್ಳಿಗೆ ಲೌಕಿಕ ಮತ್ತು ಧಾರ್ಮಿಕ ಬೋಧನೆಗಳನ್ನು ಮಾಡುತ್ತ ಸಂಚರಿಸಲು ಸಿದ್ಧರಾಗಿರುವ ತ್ಯಾಗಿಗಳೆಲ್ಲಿ ? ಎಂದು ಪ್ರತಿ ಪತ್ರದಲ್ಲಿ ಕೆಣಕುತ್ತಿದ್ದ ಸ್ವಾಮಿಗಳು ಮಹೇಂದ್ರನಾಥ ದತ್ತ ವೈದ್ಯುತ್ ಇಂಜಿನಿಯರ್ ಆಗಿ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಯಶಸ್ಸನು ಕಾಣಬೇಕೆಂದು ಬಯಸುತ್ತಿದ್ದಾರೆ. ತಮ್ಮ ವೈಯಕ್ತಿಕ ಅನುಭವವನ್ನು ಸಾರ್ವತ್ರೀಕರಿಸಿ ವಕೀಲರರಿರುವ ಕುಟುಂಬಗಳು ನರಳುತ್ತವೆ ಎನ್ನುವ ಕುರುಡು ನಂಬಿಕೆ ತಾಳಿದ್ದಾರೆ. ಆಧುನಿಕ ವಿದ್ಯೆ ಕಲಿಯಲು ಹೋಗುವ ಇತರ ಭಾರತೀಯರನ್ನು ಹಲವು ಕಡೆ ಕಾಮಿನಿ ಕಾಂಚನಗಳ ದಾಸರೆಂದು ತಿರಸ್ಕರಿಸುವ ಸ್ವಾಮಿಗಳು ಮಹೇಂದ್ರನಾಥ ದತ್ತನ ವಿಷಯದಲ್ಲಿ ಬೇರೆಯದೇ ಆದ ನಿಲುವು ತಾಳಿದ್ದಾರೆ.
‘ …ನಮಗೆ ದಾರಿ ತೋರುವುದು ಭವಿಷ್ಯವಲ್ಲ-ತಾತ್ಕಾಲಿಕ ಪರಿಸ್ಥಿತಿ. ಯಾವುದರಿಂದ ನಮಗೆ ಈಗ ಅಲ್ಪ ಸಂತೋಷ ಸಿಗುತ್ತದೆಯೋ ಅದು ನಮ್ಮನ್ನು ಸೆಳೆದುಕೊಂಡ ಹೋಗುತ್ತದೆ… ನನ್ನನ್ನು ಯಾರೂ ಪ್ರೀತಿಸುವರಿಲ್ಲದೆ ಚಿಕ್ಕಂದಿನಿಂದಲೆ ತಬ್ಬಲಿಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿದ್ದಿತು ಎಂದು ಯೋಚಿಸುತ್ತೇನೆ. ನನ್ನ ಜೀವನದಲ್ಲಿ ಕೇವಲ ನನ್ನ ಆತ್ಮೀಯರೇ –ನನ್ನ ಅಕ್ಕ, ತಂಗಿ, ತಮ್ಮ , ತಾಯಿ ಮುಂತಾದವರೇ –ನನಗೆ ದಾರುಣ ವ್ಯಥೆ ಉಂಟು ಮಾಡಿದರು. ವ್ಯಕ್ತಿಯ ಪ್ರಗತಿಗೆ ಆತನ ಬಂಧುಗಳೇ ಅಡೆತಡೆ. ಆದರೂ ಜನ ಮದುವೆಯ ಮೂಲಕ ಹೊಸಬರನ್ನು ಹುಡುಕಿಕೊಂಡು ಹೋಗುವರು –ಇದು ಎಷ್ಟು ವಿಚಿತ್ರ…ಒಬ್ಬಂಟಿಗನೇ ಸುಖಿ. ಎಲ್ಲರಿಗೂ ಒಳಿತನ್ನು ಮಾಡು. ಇಷ್ಟಪಡು. ಆದರೆ ಯಾರನ್ನೂ ಪ್ರೀತಿಸದಿರು. ಅದು ಬಂಧನ (೨೫/೭/೧೮೯೭). ಕೌಟುಂಬಿಕ ಸಮಸ್ಯೆಗಳು ಹೆಚ್ಚಾದಾಗ ಸ್ವಾಮಿಗಳು ಮೇರಿ ಹಾಲ್ ಬಾಯಿಸ್ಟರ್’’ಗೆ ಉಪದೇಶಿಸಿದ ತಾತ್ತ್ವಿಕತೆ. ಆದರೆ ಇದು ಸ್ಥಿರವಾದ ಭಾವವಾಗಿರಲಿಲ್ಲ. ಸ್ವಾಮಿಗಳು ಕುಟುಂಬದ ತಾಕಲಾಟಗಳನ್ನು ಮೈಮೇಲೆ ಹಾಕಿಕೊಂಡಿದ್ದರು. ‘ ಕೆಲವು ಮಂದಿಗೆ ನಾನು ಹೇಳಿದಂತೆ ದುಡ್ದುಕೊಡು. ನಾನು ಮಠದಿಂದ ಹಣವನ್ನು ಸಾಲ ತೆಗೆದುಕೊಳ್ಳುತ್ತಿರುವೆನು. ಅದಕ್ಕೆ ಬಡ್ಡಿ ಸೇರಿಸಿ ಹಿಂದಿರುಗಿಸುವೆನು … ಎಂದು ಬ್ರಹ್ಮಾನಂದರಲ್ಲಿ ಕೋರಿದ್ದರು. ’ ( ಪತ್ರ ೧೭/೭/ ಮತ್ತು ೧/೮/೧೮೯೮). ಈ ಹಣ ಸ್ವಾಮಿಗಳ ಪೂರ್ವಾಶ್ರಮದ ಕುಟುಂಬದ ಖರ್ಚು/ವ್ಯಾಜ್ಯಕ್ಕೆ ಮತ್ತು ಮನೆಕಟ್ಟಲು ಬೇಕಾಗಿದ್ದಿತು. ಸ್ವಾಮಿಗಳ ಕೆಡುತ್ತಿದ್ದ ಆರೋಗ್ಯ , ಕೌಟುಂಬಿಕ ಖರ್ಚುಗಳು ಬೆಳೆಯುತ್ತಿದ್ದು ಐದು ಸಾವಿರ ಎಲ್ಲಿಗೂ ಸಾಲದಂತಾಯಿತೆಂದು ಕಾಣುತ್ತದೆ. ಅದಕ್ಕಾಗಿ ಸ್ವಾಮಿಗಳು ತಮ್ಮ ಆಪ್ತಮಿತ್ರ , ಶಿಷ್ಯ , ಅಭಿಮಾನಿ ಖೇತ್ರಿ ರಾಜ ಅಜಿತ್ ಸಿಂಗ್’ಗೆ ಒಂದು ಪತ್ರ ಬರೆದರು. ಅದು ಹೀಗಿದೆ -
‘ಬೇಲೂರು ಮಠ – ೨೨/೧೧/೧೮೯೮ ಮಹಾರಾಜರೇ , ನಿಮ್ಮ ಪತ್ರಕ್ಕಾಗಿ ಮತ್ತು ಜಗಮೋಹನ್ ಲಾಲಜಿಯವರ ಮೂಲಕ ತಲುಪಿದ ನಿಂಬಾರ್ಕ ಭಾಷ್ಯಕ್ಕಾಗಿ ಅನೇಕ ಧನ್ಯವಾದಗಳು. ನನ್ನ ಮನಸ್ಸನ್ನು ನಿಮ್ಮ ಮುಂದೆ ತೆರೆದಿಡಲು ಸ್ವಲ್ಪವೂ ಸಂಕೋಚವಿಲ್ಲವೆಂದು ನಾನು ಭಾವಿಸಿದ್ದು ನಿಮ್ಮ ಮುಂದೆ ನನ್ನ ಒಂದು ವೈಯಕ್ತಿಕ ವಿಚಾರವನ್ನು ಇರಿಸುತ್ತಿದ್ದೇನೆ. ಈ ಜೀವನದಲ್ಲಿ ನೀವು ನನ್ನ ಏಕೈಕ ಗೆಳೆಯರೆಂದು ಪರಿಗಣಿಸಿದ್ದೇನೆ. ಈಗ ನಾನು ಪ್ರಸ್ತಾಪ ಮಾಡುತ್ತಿರುವುದು ನಿಮಗೆ ಒಪ್ಪಿಗೆಯಾದರೆ ಒಳ್ಳೆಯದು , ಆಗದಿದ್ದರೆ ನನ್ನ ಮೂರ್ಖತನವನ್ನು ಒಳ್ಳೆಯ ಗೆಳೆಯನಂತೆ ಕ್ಷಮಿಸಿ. ನಿಮಗೆ ತಿಳಿದಿರುವಂತೆ ನಾನು ಹಿಂದಿರುಗಿದ ದಿನದಿಂದ ಕಾಯಿಲೆಯಿಂದ ನರಳುತ್ತಿದ್ದೇನೆ. ಕಲ್ಕತ್ತದಲ್ಲಿ ನನಗೆ ವೈಯಕ್ತಿಕವಾಗಿ ಸ್ನೇಹ ಮತ್ತು ನೆರವಿನ ಆಶ್ವಾಸನೆ ನೀಡಿ ವಾಸಿಯಾಗದ ಕಾಯಿಲೆಯನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದೆಂದು ತಿಳಿಯ ಹೇಳಿದ್ದಿರಿ. ನರಗಳ ಉದ್ವಿಗ್ನತೆಯಿಂದ ಈ ಕಾಯಿಲೆ ಬಂದಿದೆ. ಚಿಂತೆ , ಆತಂಕ , ಉದ್ವೇಗಗಳನ್ನು ಹೊರಹಾಕದ ಹೊರತು ಅದೆಷ್ಟೇ ಜಾಗ ಬದಲಾವಣೆಯಿಂದಲೂ ಲಾಭವಿಲ್ಲ.
ಈ ಎರಡು ವರ್ಷ ಹವಾ ಬದಲಾವಣೆ ಮಾಡಿ ಯತ್ನಿಸಿದ ಮೇಲೆ ನನ್ನ ಆರೋಗ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಈಗ ಸಾವಿನ ಬಾಗಿಲಿಗೆ ತಂದಿರಿಸಿದೆ. ಸದಾ ನನ್ನ ಎದೆಯಲ್ಲಿ ಒಂದು ಪಾಪ ಕೊರೆಯುತ್ತಿದೆ. ಅದು ಒಂದು ಲೌಕಿಕ ಕಾರ್ಯ ಮಾಡುವುದು. ನಾನು ನನ್ನ ತಾಯಿಯನ್ನು ಬಹಳ ನಿರ್ಲಕ್ಷಿಸಿದೆ. ತನ್ನ ಎರಡನೆಯ ಮಗ (ಮನೆ ತೊರೆದು) ಹೋದ ಮೇಲೆ ನೋವಿನಲ್ಲಿ ಆಕೆ ನಲುಗಿರುವಳು. ಆಕೆಗೆ ಕೆಲವರ್ಷಗಳ ಸೇವೆ ಮಾಡುವುದೇ ನನ್ನ ಕೊನೆಯ ಆಸೆ. ನಾನು ನನ್ನ ತಾಯಿಯೊಂದಿಗೆ ಇದ್ದು ವಂಶ ನಾಶವಾಗದಂತೆ ಕಿರಿಯ ತಮ್ಮನಿಗೆ ಮದುವೆ ಮಾಡಿಸಬೇಕೆಂದಿದ್ದೇನೆ. ಇದರಿಂದ ಕೊನೆಯ ದಿನಗಳಲ್ಲಿ ನನ್ನ ತಾಯಿಯ ಮನಸ್ಸು ಹಗುರವಾಗುವುದು. ಈಗ ಆಕೆ ವಾಸಿಸಲು ಅಯೋಗ್ಯವಾದ ಮುರುಕಲು ಮನೆಯಲ್ಲಿರುವಳು. ನಾನೀಗ ಆಕೆಗೆ ಒಂದು ಸಣ್ಣದಾದ , ಚೊಕ್ಕಟವಾದ ಮನೆಯನ್ನು ಕಟ್ಟಿ ಕಿರಿಯ ತಮ್ಮನಿಗೂ ಅದರಲ್ಲಿ ಅವಕಾಶಮಾಡಬೇಕೆಂದಿರುವೆ. ಏಕೆಂದರೆ ಅವನು ಹೆಚ್ಚು ಹಣ ಸಂಪಾದಿಸುವ ಸಾದ್ಯತೆ ಕಡಿಮೆ. ರಾಮಚಂದ್ರನ ವಂಶಜರಾದ ನೀವು ಪ್ರೀತಿಸುವ ಮತ್ತು ಗೆಳೆಯನೆಂದು ಪರಿಗಣಿಸಲಾದ ನನಗೆ ಇದನ್ನು ನೆರವೇರಿಸುವುದು ಒಂದು ಹೊರೆಯೇ ? ನಿಮ್ಮನ್ನಲ್ಲದೆ ಬೇರೆ ಯಾರನ್ನು ಕೇಳಬೇಕೋ ನನಗೆ ಗೊತ್ತಾಗದು. ಯುರೋಪ್’ನಿಂದ ನನಗೆ ಸಿಕ್ಕ ಹಣ ‘ಕೆಲಸಕ್ಕಾಗಿ (ಭಾರತದ ಕೆಲಸ) ಮತ್ತು ಪ್ರತಿಯೊಂದು ಪೈಸೆ ಅದಕ್ಕಾಗಿ ಕೊಡಲಾಗಿದೆ. ನನ್ನ ನೆರವಿಗಾಗಿ ನಾನು ಬೇರೆ ಯಾರಲ್ಲೂ ಬೇಡಲಾರೆ. ನನ್ನ ಕುಟುಂಬದ ಎಲ್ಲ ವಿಷಯವನ್ನು ಬಿಚ್ಚಿ ತಿಳಿಸಿದ್ದೇನೆ. ಈ ವಿಷಯ ಬೇರೆ ಯಾರಿಗೂ ತಿಳಿಯದಿರಲಿ. ನನಗೆ ಸಾಕಾಗಿದ್ದು, ಬೇಸತ್ತಿದ್ದೇನೆ ಮತ್ತು ಸಾಯುತ್ತಿದ್ದೇನೆ. ನಿಮ್ಮ ಘನತೆ ಮತ್ತು ಔದಾರ್ಯಕ್ಕೆ ತಕ್ಕಂತೆ ಮತ್ತು ನನಗೆ ನೀವು ತೋರಿಸಿರುವ ಅನೇಕ ಔದಾರ್ಯಗಳಿಗೆ ಕಳಶವಿಟ್ಟಂತೆ ಈ ಕೊನೆಯ ಕರುಣೆಯ ಮಹಾ ಕಾರ್ಯವನ್ನು ದಯವಿಟ್ಟು ಮಾಡಬೇಕು. ನನ್ನ ಕೊನೆಯ ದಿನಗಳನ್ನು ಹಗುರಗೊಳಿಸುವ ನಿಮಗೆ ಮತ್ತು ನಿಮ್ಮವರ ಮೇಲೆ ನನ್ನ ಜೀವನವನ್ನು ಯಾರ ಸೇವೆಗೆ ಮುಡಿಪಿಟ್ಟಿದ್ದೆನೋ ಆ ದೇವರು ತನ್ನ ಶ್ರೇಷ್ಟ ಆಶೀರ್ವಾದಗಳನ್ನು ಹರಿಸಲಿ.- ಭಗವಂತನಲಿ ಎಂದಿಗೂ ನಿಮ್ಮವನಾದ-ವಿವೇಕಾನಂದ ವಿ.ಸೂ – ಇದು ಖಂಡಿತ ವೈಯಕ್ತಿಕವಾದುದು. ತಾವು ಇದನ್ನು ಮಾಡುವಿರೋ ಎಲ್ಲವೋ ಎನ್ನುವ ಬಗ್ಗೆ ತಂತಿ ಸಂದೇಶ ಕಳಿಸುವಿರಾ ? –ಎಂದಿಗೂ ನಿಮ್ಮವ-ವಿವೇಕಾನಂದ ‘
ಇದಕ್ಕೆ ಸಕಾರಾತ್ಮಕವಾಗಿ ಖೇತ್ರಿ ರಾಜ ಅಜಿತ್ ಸಿಂಗ್ ತಂತಿ ಕಳಿಸಿದ್ದಕ್ಕೆ ಸ್ವಾಮಿಗಳಿಗೆ ಸಂತೋಷವಾಗಿ ಅದಕ್ಕೆ ಮಾರುತ್ತರ ಬರೆದಿದ್ದರು. ಅದರಲ್ಲಿ ತಮ್ಮ ಬೇಕುಗಳ ಪಟ್ಟಿಯನ್ನು ಕೊಟ್ಟಿದ್ದರು. ಸಣ್ಣ ಮನೆ ಕಟ್ಟಲು ಕನಿಷ್ಟ ೧೦,೦೦೦=೦೦ ಬೇಕೆನ್ನುವ ಅಂದಾಜು ಮಂಡಿಸಿದ್ದರು. ಪ್ರತಿ ತಿಂಗಳು ತಾಯಿಗೆ ಕಳಿಸುತ್ತಿರುವ ರೂ.೧೦೦ ಆಕೆಯ ಜೀವನಕ್ಕೆ ಸಾಕಾಗುತ್ತದೆ ಎನ್ನುತ್ತ ಇದರ ಜೊತೆಗೆ ತಾವು ಬದುಕಿರುವವರೆಗೆ ತಮಗೂ ತಿಂಗಳಿಗೆ ರೂ ೧೦೦ ಕೊಡುವಂತೆ ಕೇಳಿಕೊಂಡಿದ್ದರು. ನಾನು ಕೆಲವೇ ವರ್ಷ ಬದುಕುವುದರಿಂದ ನಿಮಗೆ ಇದರಿಂದ ಹೆಚ್ಚಿನ ತೊಂದರೆಯಾಗದೆನ್ನುವ ಆಶ್ವಾಸನೆ ನೀಡಿದ್ದರು. ತಾವು ಸತ್ತ ನಂತರವೂ ತಾಯಿಗೆ ಕೊಡುತ್ತಿರುವ ತಿಂಗಳ ಹಣ ರೂ ೧೦೦ ಮುಂದುವರೆಸುವಂತೆ ಕೋರಿಕೊಂಡಿದ್ದರು. ಈ ಹಿಂದೆ ಬಡ ಸಾಧುವಿನ ಮೇಲೆ ತೋರಿಸಿದ ಪ್ರೀತಿಯನ್ನೇ ತಾಯಿಗೆ ತೋರಿಸಬೇಕೆಂದು ಅಲವತ್ತುಕೊಂಡಿದ್ದರು. …ನಾನು ಈ ಪ್ರಪಂಚದಲ್ಲಿ ಏನಾಗಿರುವೆನೋ ಅದೆಲ್ಲ ನಿಮ್ಮ ನೆರವಿನಿಂದ ಎನ್ನಲು ಮರೆತಿರಲಿಲ್ಲ. (೧/೧೨/೧೮೯೮). ಸ್ವಾಮಿಗಳು ಬರೆದಿರುವ ಈ ಪತ್ರಗಳು ಬಹಳ ಕರುಣಾಜನಕವಾಗಿದ್ದು ಅವುಗಳಿಗೆ ಯಾವುದೇ ವಿವರಣೆ ಬೇಕಿಲ್ಲ.
ಮಾರ್ಗರೆಟ್ ನೋಬಲ್’ಗೆ ಜನವರಿ ತಿಂಗಳಿನಲ್ಲಿ ಬರೆದಿರಬಹುದಾದ ಬರೆದ ಪತ್ರವೊಂದರಲ್ಲಿ ಸ್ವಾಮಿಗಳು ತಮ್ಮ ದಾಯಾದಿ ದುರ್ಗಾ ಪ್ರಸನ್ನ ಬೋಸ್ ೧೨೭, ಮಾಣಿಕ್ ತಾಲ ಬೀದಿಯಲ್ಲಿ ವಾಸಿಸುತ್ತಿದ್ದಾನೆಂದು ತಿಳಿಸಿದ್ದರು. ನಿವೇದಿತಾರನ್ನು ಯಾವ ಕಾರಣಕ್ಕೆ ಸ್ವಾಮಿಗಳು ಅಲ್ಲಿಗೆ ಕಳಿಸಿದ್ದರು , ಆಕೆಯ ಜೊತೆಗೆ ಇನ್ನು ಬೇರೆ ಯಾರಿದ್ದರು ಎಂದು ತಿಳಿಯುವುದಿಲ್ಲ. ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆಕೆಯನ್ನು ಅಲ್ಲಿಗೆ ಕಳಿಸಿರಬಹುದು. ಸಾರಾ ಬುಲ್’ಗೆ ಬರೆದ ಪತ್ರದಿಂದ ಆಕೆ ತಾನು ಕೊಟ್ಟ ಹಣ ಹೇಗೆ ಬಳಸಲ್ಪಟ್ಟಿದೆ ಎಂದು ತಿಳಿಯಲು ಬಯಸಿದಂತಿದೆ. ಇದರೊಂದಿಗೆ ಸ್ವಾಮಿಗಳು ಮನೆಯನ್ನು ದಾಯಾದಿಗಳ ವಶದಿಂದ ತಪ್ಪಿಸಿ ತಾಯಿಗೆ ಕೊಡಿಸಲು ಬಹು ಪ್ರಯತ್ನ ನಡೆಸಿದಂತೆ ಮತ್ತು ಸಾರಾ ಬುಲ್’ಗೆ ದಾಯಾದಿಗಳನ್ನು ಪರಿಚಯಿಸಿದಂತೆ ಕಾಣುತ್ತದೆ. ಕೌಟುಂಬಿಕ ಸಮಸ್ಯೆಗಳಿಂದ ಸ್ವಾಮಿಗಳು ಜರ್ಝರಿತರಾಗಿದ್ದರು. ಅವರ ಮನಸ್ಸು ಗೊಂದಲದ ಗೂಡಾಗಿದ್ದಿತು.
‘ನನ್ನ ವಿಷಯದಲ್ಲಿ ನಾನು ಏನು ಮಾಡಬೇಕೆಂದು ತಿಳಿಯದು. ಅಥವಾ ನಾನು ಇನ್ನೇನನ್ನಾದರೂ ಮಾಡಬೇಕಾಗಿದೆಯೋ ತಿಳಿಯದು. ಹಡಗಿನಲ್ಲಿದ್ದಾಗ ಆರೋಗ್ಯವಾಗಿದ್ದೆ. ಭೂಮಿಗೆ ಇಳಿದ ಮೇಲೆ ಮತ್ತೆ ತೊಂದರೆಯಾಗುತ್ತಿದೆ. ಮಾನಸಿಕ ಚಿಂತೆ ಇತ್ತೀಚೆಗೆ ಸಾಕಷ್ಟಿದೆ. ನೀವು ನೋಡಿದ ಮಹಿಳೆಗೆ ಮೋಸ ಮಾಡುವ ಅಳವಾದ ತಂತ್ರವಿದೆ. ಆಕೆ ಮತ್ತು ಆಕೆಯ ಜನರು ಒಂದು ಮನೆಯನ್ನು ರೂ ೬೦೦೦ ಅಥವಾ ೪೦೦ ಪೌಂಡ್’ಗಳಿಗೆ ಮಾರಲು ಪಿತೂರಿ ಮಾಡಿದರು. ನಾನು ಅದನ್ನು ನನ್ನ ತಾಯಿಗಾಗಿ ನಂಬಿಕೆಯಿಂದ ಕೊಂಡುಕೊಂಡೆನು. ನಂತರ ಅವರು ಮನೆಯನ್ನು ನಮಗೆ ಬಿಟ್ಟುಕೊಡಲಿಲ್ಲ. ಸಂನ್ಯಾಸಿಯಾಗಿ ನಾನು ನ್ಯಾಯಾಲಯಕ್ಕೆ ನಾಚಿಕೆಯಿಲ್ಲದೆ ಹೋಗಿ ಬಲತ್ಕಾರದಿಂದ ಅದನ್ನು ವಶಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಅವರು ಭಾವಿಸಿದರು.. … ನೀವು ಮತ್ತು ಇತರರು ಕೊಟ್ಟ ಹಣದಲ್ಲಿ ನಾನು ಒಂದು ರೂಪಾಯಿಯನ್ನೂ ಆ ಕೆಲಸಕ್ಕೆ ಖರ್ಚು ಮಾಡಿಲ್ಲವೆಂದು ತೋರುವುದು. ನನ್ನ ತಾಯಿಗೆ ಸಹಾಯ ಮಾಡುವುದಕ್ಕೆಂದೇ ಕ್ಯಾಪ್ಟನ್ ಸೇವಿಯರ್ ೮೦೦೦ ರೂಗಳನ್ನು ಕೊಟ್ಟರು. ಈ ಹಣವೂ ಕೂಡ ಹಾಳಾಯಿತೆಂದು ತೋರುವುದು. ಇದಲ್ಲದೆ ನನ್ನ ಕುಟುಂಬಕ್ಕಾಗಲಿ ಅಥವಾ ಆಹಾರ ಮುಂತಾದ ನನ್ನ ಸ್ವಂತ ಖರ್ಚಿಗೆಂದು ಖೇತ್ರಿಯ ರಾಜ ಕೊಟ್ಟಿದ್ದು ಖರ್ಚಾಗಿಲ್ಲ. ಅದರ ಅರ್ಧ ಭಾಗ ಪ್ರತಿ ತಿಂಗಳು ಮಠಕ್ಕೆ ಹೋಯಿತು. (ಪಡೆದಿದ್ದ ೫೦೦೦ ರೂ ಸಾಲ ತೀರಿಸಲು) ನಾನು ಆ ಹೆಂಗಸಿನಿಂದ ದೋಚಲ್ಪಡಬಾರದೆಂದು ಬ್ರಹ್ಮಾನಂದ ಏನಾದರೂ ಆಕೆಯ ಮೇಲೆ ಮೊಕದ್ದಮೆ ಹೂಡಲು ಖರ್ಚು ಮಾಡಿದಲ್ಲಿ ಆ ಹಣ ನನಗೇ ಉಳಿಯುವುದು-ನಾನು ಬದುಕಿದ್ದಲ್ಲಿ ತೀರಿಸುತ್ತೇನೆ. … ಯುರೋಪ್ ಮತ್ತು ಅಮೆರಿಕಾದಲ್ಲಿ ಕೇವಲ ಉಪನ್ಯಾಸಗಳಿಂದ ನನಗೆ ಬಂದ ಹಣವನ್ನು ನನಗೆ ಇಚ್ಛೆ ಬಂದಂತೆ ಬಳಸಿದೆನು ; ಆದ ನನ್ನ ಕಾರ್ಯೋದ್ದೇಶಕ್ಕೆ ಬಂದ ಹಣದ ಪ್ರತಿಯಂದು ಪೈಸೆಗೂ ಲೆಕ್ಕ ಇಡಲಾಗಿದೆ. ಅದು ಮಠದಲ್ಲಿದೆ. …. ಸದ್ಯಕ್ಕೆ ನನ್ನಲ್ಲಿ ಯಾವ ಯೋಜನೆಗಳೂ ಇಲ್ಲ. ಏನನ್ನೂ ಮಾಡಲು ಯೋಚಿಸುತ್ತಿಲ್ಲ. ಕೆಲಸ ಮಾಡುವ ಇಚ್ಛೆಯೂ ಇಲ್ಲ. ಜಗನ್ಮಾತೆ ತನ್ನ ಕೆಲಸಕ್ಕೆ ಬೇರೆಯವರನ್ನು ಆರಿಸಿಕೊಳ್ಳಲಿ..’ (೬/೮/೧೮೯೯-ಸಾರಾ ಬುಲ್)
ಅತ (ಕ್ರಿಸ್ತ) ತ್ಯಾಗವನ್ನು ಬೋಧಿಸಿದನು. ಪ್ರಪಂಚ ಆನಂದಿಸುವ ಸ್ಥಳವೆಂದು ಆತ ಎಂದು ಹೇಳಲಿಲ್ಲ. ತೋರಿಕೆಯ ಎಲ್ಲ ಜಂಬಗಳನ್ನೂ- ಮಕ್ಕಳು ಮತ್ತು ಗಂಡನ ಮೇಲಿನ ಪ್ರೀತಿಯನ್ನೂ ಸಹ- ಬಿಟ್ಟು ಭಗವಂತನೊಬ್ಬನನ್ನು ಮಾತ್ರ ಚಿಂತಿಸುವ ಕಾಲ ನಿನಗೆ ಬಂದಿದೆ ಎಂದು ಸ್ವಾಮಿಗಳು ೫/೧೦/೧೮೯೯ ರಂದು (ಕೃತಿಶ್ರೇಣಿಯಲ್ಲಿ ದಿನಾಂಕ ಇಲ್ಲ) ರಿಡ್ಜ್’ಲಿ ಮ್ಯಾನೊರ್’ನಿಂದ ಶ್ರೀಮತಿ ಜಾರ್ಜ್ ಹೇಲ್’ಗೆ ಬೋಧಿಸಿದ್ದರು. ‘ಸ್ಟರ್ಡಿ ಹತ್ತಿರ ಇದ್ದ ರಾಜಯೋಗದ ಹಣದ ಜೊತೆಗೆ ಖೇತ್ರಿ ರಾಜರು ಕೊಟ್ಟದ್ದು ಸೇರಿ ಎಲ್ಲಾ ಒಟ್ಟಿಗೆ ೫೦೦ ಪೌಂಡಿಗಿಂತ ಹೆಚ್ಚು ಲೆಗೆಟ್ ಬಳಿ ಇದೆ. ಈಗ ಲೆಗೆಟ್ ಹತ್ತಿರ ನನ್ನ ೧೦೦೦ ಡಾಲರ್’ಗಳಿವೆ. ನಾನು ಕಾಲವಾದರೆ ದಯವಿಟ್ಟು ಆ ಹಣವನ್ನು ನನ್ನ ತಾಯಿಗೆ ಕಳಿಸಿರಿ’ ಎಂದು ಸ್ಪಷ್ಟವಾಗಿ ತಿಳಿಸಿ ತಮ್ಮ ಪೂರ್ವಾಶ್ರಮದ ಕುಟುಂಬವೇ ತಮ್ಮ ಪ್ರಿತಿಪಾತ್ರರು ಎನ್ನುವುದನ್ನು ಖಚಿತಪಡಿಸಿದ್ದರು. (೨೭/೧೨/೧೮೯೯-ಸಾರಾ ಬುಲ್) . ….ಇಷ್ಟು ವರ್ಷ ನನ್ನ ಸೋದರಿಯ ಮಗಳು ಇಚ್ಛಾಶಕ್ತಿಯಿಂದ ತನ್ನ ಮನಸ್ಸನ್ನು ವಿಕಾಸಗೊಳಿಸಿಕೊಂಡಿರುವುದನ್ನು ನೋಡಿದ್ದೇನೆ. ಬಂಗಾಳಿ ಸಾಹಿತ್ಯವೆಲ್ಲ ಆಕೆಗೆ ಚೆನ್ನಾಗಿ ಗೊತ್ತು. ಅದು ಒಳ್ಳೆಯದು ‘ ಎಂದು ಸಾರಾಬುಲ್’ಗೆ (೨೯/೧೨/೧೮೯೯) ಮತ್ತು ಇದೇ ಸಮಯದಲ್ಲಿ ಮಾರ್ಗರೆಟ್ ನೋಬಲ್’ಗೆ ‘ ‘ನನ್ನ ದಾಯಾದಿಗೆ ಪಾಠ ಹೇಳಿಕೊಡುವುದನ್ನು ಬಿಟ್ಟುಬಿಟ್ಟೆಯಾ? ಎಂದು ಪ್ರಶ್ನಿಸಿದ್ದರು. ಸ್ವಾಮಿಗಳ ನಡವಳಿಕೆ ಅವರು ಕೊಡುತ್ತಿದ್ದ ಸಲಹೆಗಳಿಗಿಂತ ಭಿನ್ನವಾಗಿರುತ್ತಿದ್ದವು.
‘ಈಗ ನನಗೆ ನಿಚ್ಚಳವಾಗಿ ಕಾಣುತ್ತಿದೆ ; ಮಠದ ಉಸಾಬರಿಗಳನ್ನೆಲ್ಲಾ ಬಿಟ್ಟು ಕೆಲ ಕಾಲ ನನ್ನ ತಾಯಿಯೊಂದಿಗೆ ಇರಬೇಕೆನಿಸುತ್ತಿದೆ. ಅಕೆ ನನ್ನಿಂದ ತುಂಬಾ ನೋವುಂಡಿದ್ದಾಳೆ. ಖ್ಯಾತ ಶಂಕರಾಚಾರ್ಯರು ಇದನ್ನೇ ಮಾಡಬೇಕಾಯಿತು ಗೊತ್ತೆ ? ಕೊನೆಗಾಲದಲ್ಲಿ ಸ್ವಲ್ಪ ದಿನ ಆಕೆಯೊಂದಿಗೆ ಇರಬೇಕಾಯಿತು….. ನಾನು ಎಂದಿಗಿಂತ ಹೆಚ್ಚು ಶಾಂತಚಿತ್ತನಾಗಿರುವೆನು. ಹಣದ ವಿಷಯದಲ್ಲಿ ಮಾತ್ರ ಸ್ವಲ್ಪ ಕಷ್ಟವಿದೆ. ಅಲ್ಲದೇ ಭಾರತದವರೂ ಕೂಡ ನನಗೇನನ್ನಾದರೂ ಕೊಡಬೇಕಾಗಿದೆ. …ನನ್ನ ತಾಯಿ ಇನ್ನೂ ಹೆಚ್ಚು ದಿನ ಬದುಕಲಾರಳು ಎಂದು ನನಗೆನಿಸುತ್ತಿದೆ. ಅದೂ ಅಲ್ಲದೆ ಸರ್ವಶ್ರೇಷ್ಟವಾದ ತ್ಯಾಗವನ್ನು ನಾನು ಮಾಡಬೇಕಾಗಿದೆ. …ನೀವು ನನ್ನನ್ನು ಭಾರತಕ್ಕೆ ಹಿಂದಕ್ಕೆ ಕಳಿಸುವಿರಾ ? ನಾನು ಯಾವಾಗ ಬೇಕಾದರೂ ಹೋಗಲು ಸಿದ್ಧನಾಗಿರುವೆನು. ೧೮೮೪ ರಲ್ಲಿ ನನ್ನ ತಾಯಿಯನ್ನು ತ್ಯಜಿಸಿದ್ದು ದೊಡ್ಡ ತ್ಯಾಗ. ಆದರೆ ಈಗ ತಾಯಿಯ ಬಳಿಗೆ ಹೋಗುವುದು ಅದಕ್ಕಿಂತಲೂ ದೊಡ್ದ ತ್ಯಾಗ..’ ಎಂದು ಬಡಬಡಿಸಿದ್ದರು. (೧೭/೧/೧೯೦೦-ಸಾರಾ ಬುಲ್).
‘ ನೀವು ನನ್ನದೊಂದು ದೊಡ್ದ ಜವಾಬ್ದಾರಿಯನ್ನು ವಹಿಸಿಕೊಂಡಿರುವಿರಿ-ಎಂದರೆ ನನ್ನ ಬಡ ಸೋದರ ಸೊಸೆಯ ಹೊಣೆ ನಿಮ್ಮದಾಗಿದೆ. ಇದರಿಂದ ನನಗೆ ಅದೆಷ್ಟೋ ತೃಪ್ತಿ. ನನ್ನ ತಾಯಿಯ ವಿಷಯವಾದರೋ ಬೇರೆ. ನನ್ನ ಮತ್ತು ಆಕೆಯ ಕೊನೆಗಾಲವನ್ನು ಕಳೆಯಲು ಆಕೆಯಲ್ಲಿಗೆ ಹೋಗುತ್ತೇನೆ. ನ್ಯೂಯಾರ್ಕ್’ನಲ್ಲಿರುವ ೧೦೦೦ ಡಾಲರ್’ಗಳಿಂದ ತಿಂಗಳಿಗೆ ೯ ರೂಪಾಯಿ ಬರುವುದು. ನಾನು ಆಕೆಗಾಗಿ ಸ್ವಲ್ಪ ಜಾಗವನ್ನು ಖರೀದಿಸಿದ್ದೇನೆ. ಅದರಿಂದ ೬ ರೂಪಾಯಿ ಬರುವುದು. ಆಕೆಯ ಹಳೆಯ ಮನೆಯಿಂದ ೬ ರೂಪಾಯಿ ಬರುವುದು. ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವದರಂದ ನಾನು ಆ ಮನೆಯತ್ತ ಗಮನ ಹರಿಸಿರಲಿಲ್ಲ. ನಾನು , ನನ್ನ ತಾಯಿ ಮತ್ತು ನನ್ನ ಅಜ್ಜಿ ತಿಂಗಳಿಗೆ ೨೦ ರೂಪಾಯಿಯಲ್ಲಿ ಜೀವನ ಮಾಡಿಕೊಳ್ಳುತ್ತೇವೆ. ನ್ಯೂಯಾರ್ಕ್’ನಲ್ಲಿರುವ ೧೦೦೦ ಡಾಲರ್ ಮುಟ್ಟದೆ ಭಾರತಕ್ಕೆ ಹೋಗಲು ಪ್ರಯತ್ನ ಮಾಡುತ್ತೇನೆ ‘ ಎನ್ನುತ್ತ ಸಂಸಾರಿಗಳಿಗಿಂತ ಸಂಸಾರಿಯಾಗಲು ತಯಾರಿ ನಡೆಸಿದ್ದರು. ವೇದಾಂತ ಬೋಧಿಸಲು ಹೋಗಿ ಸೋದರ ಸೊಸೆಯ ಹೊಣೆಯನ್ನು ಅಭಿಮಾನಿಗಳ ಹೆಗಲಿಗೇರಿಸಿದ್ದರು. (೭/೩/೧೯೦೦-ಸಾರಾ ಬುಲ್)
೧೨/೩/೧೯೦೦ ರಂದು ಸ್ಯಾನ್’ಫ್ರಾನ್ಸಿಸ್ಕೊದ ವೆಂಡಟ್ ಸಭಾಂಗಣದಲ್ಲಿ ಉಪನ್ಯಾಸ ಸ್ವಾಮಿಗಳು ಯಶಸ್ವಿಯಾಗಿ ಸರಣಿಯ ಕೊನೆಯ ಭಾಷಣ ಮಾಡಿದ ದಿನವೇ-೧೨/೩/೧೯೦೦-ಬರೆದ ಪತ್ರಗಳಲ್ಲಿ ‘ಭಗವದ್ಗೀತೆಯಲ್ಲಿ ತಿಳಿಸಿದಂತೆ ಎಲ್ಲವನ್ನೂ ತೊರೆದು ಭಗವಂತನತ್ತ ಹೋಗಲು ಯತ್ನಿಸುತ್ತಿದ್ದೇನೆ ಎಂದು ಮೇರಿ ಹೇಲ್’ಗೆ ‘ .. ನಾನು ಅವಳನ್ನು (ನಿವೇದಿತಾ) ನಿಮಗೆ ಒಪ್ಪಿಸಿರುವೆನು. …ನಾನೀಗ ಸಂಪೂರ್ಣ ಶರಣಾಗತನಾಗಿ ಅವನನ್ನು ಮೊರೆ ಹೊಕ್ಕಿದ್ದು ನನ್ನಲ್ಲಿ ಒಂದು ಪೂರ್ಣ ಬದಲಾವಣೆಯಾಗುತ್ತಿದೆ, ಅದು ಜಗನ್ಮಾತೆಗೆ ಗೊತ್ತು…. ನಾನು ಸಂನ್ಯಾಸಿಯಂತೆ ಸಾಯುತ್ತೇನೆ. ನೀವು ನನ್ನ ಪಾಲಿಗೆ ನನ್ನ ತಾಯಿಗಿಂತ ಹೆಚ್ಚಾಗಿರುವಿರಿ’ ಎಂದು ಸಾರಾ ಬುಲ್’ಗೆ , ‘ನಾನೀಗ ಪ್ರಶಾಂತನಾಗಿರುವೆ’ ಎಂದು ಕ್ರಿಸ್ಟೈನಾಗೆ ಬರೆದಿದ್ದರು. ಬ್ರಹ್ಮಾನಂದರಿಗೆ ‘ …..ನನ್ನ ಜೀವನೋಪಾಯಕ್ಕಾಗಿ ಕೆಲಸ ಮಾಡದಿದ್ದರೆ ಉಪವಾಸದಿಂದ ನರಳಬೇಕಾಗುತ್ತದೆ. ಕಾಂಪೌಂಡ್ ಕಟ್ಟಲು ಬೇಕಾದುದನ್ನು ದುರ್ಗಾಪ್ರಸನ್ನ ಮಾಡಿದ್ದಾನೆ ಎಂದು ಭಾವಿಸುತ್ತೇನೆ. ಒಂದು ಕಾಂಪೌಂಡ್ ಕಟ್ಟಿಸುವುದು ಅಂತಹ ಕಷ್ಟದ ಕೆಲಸವಲ್ಲ. ಸಾಧ್ಯವಾದರೆ ಅಲ್ಲಿ ನಾನೊಂದು ಸಣ್ಣ ಮನೆಯನ್ನು ಕಟ್ಟಿ ತಾಯಿ ಮತ್ತು ಅಜ್ಜಿಯ ಸೇವೆ ಸಲ್ಲಿಸುತ್ತೇನೆ. ಪಾಪ ಕೃತ್ಯಗಳು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ..ನಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳುತ್ತೇನೆ. ಈಗ ನನ್ನ ಸೋದರರೇ ನೀವೆಲ್ಲ ದೊಡ್ದ ಸಾಧುಗಳು ಮತ್ತು ಮಹಾತ್ಮರು. ... ನನಗೆ ಶಾಂತಿ ಸಿಗುವಂತೆ ಜಗನ್ಮಾತೆಯಲ್ಲಿ ಪ್ರಾರ್ಥಿಸಿ…. ನಾನು ಅಧಮಾಧಮನು . ಗುರುಗಳ ಪಾದ ಧೂಳಿಯನ್ನು ನನ್ನ ತಲೆಯ ಮೇಲೆ ಹಾಕು. ಮನಸ್ಸು ಶಾಂತವಾಗುವುದು. ಜೈ ಗುರುದೇವ, ಜೈ ಗುರುದೇವ…ನಾನು ಇನ್ನು ಮೇಲೆ ಕೆಲವು ಜಪ , ಧ್ಯಾನಗಳನ್ನು ಮಾಡುವೆ. ಇನ್ನೇನನ್ನೂ ಮಾಡುವುದಿಲ್ಲ. ಉಳಿದದ್ದು ಜಗನ್ಮಾತೆಗೆ ಗೊತ್ತು .’ ಎಂದು ಆತ್ಮ ನಿಂದನೆ ಮಾಡಿಕೊಂಡಿದ್ದರು. ತಂದೆಯ ಸಾವಿನ ನಂತರ ಕುಟುಂಬದ ಸಣ್ಣ ಮಕ್ಕಳನ್ನು ಸಾಕಲು ಹೆಣಗುತ್ತಿದ್ದ ತಾಯಿಯ ನೆರವಿಗೆ ಹೋಗದ ಪಾಪ ಪ್ರಜ್ಞೆ ಸ್ವಾಮಿಗಳನ್ನು ಕಾಡುತ್ತಿದ್ದಿತು. ಇದು ಆತ್ಮ ನಿಂದನೆ , ವಿಮರ್ಶೆ , ಪಶ್ಚಾತ್ತಾಪಗಳಲ್ಲಿ ಹೊರಬರುತ್ತಿದ್ದಿತು.
ಸ್ವಾಮಿಗಳು ತಮ್ಮ ಕಟುಂಬದ ಖರ್ಚಿಗಾಗಿ ಮಠದ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು. ಈ ಬಗ್ಗೆ ಶಾರದಾನಂದ ಅತೃಪ್ತಿ ತೋರಿಸಿದ್ದರು. ‘ ಶ್ರೀಮತಿ ಜೇಮ್ಸ್ ಹೆನ್ರಿ ಸೇವಿಯರ್ ನನ್ನ ಮನೆಯವರಿಗಾಗಿ ೬೦೦೦ ರೂ ಕೊಟ್ಟರು. ಅದನ್ನು ನನ್ನ ದಾಯಾದಿಗಳಿಗೆ , ಚಿಕ್ಕಮ್ಮ, ದೊಡ್ಡಮ್ಮ ಮುಂತಾದವರಿಗೆ ಹಂಚಲಾಯಿತು. ಶಾರದಾನಂದ ಏನು ಹೇಳಿದನೆಂದು ನನಗೆ ಗೊತ್ತಿಲ್ಲ. ಆತ ಏನೇ ಹೇಳಿರಲಿ ಮನೆಯನ್ನು ಕೊಳ್ಳಲೆಂದು ಉಪಯೋಗಿಸಿದ ರೂ ೫೦೦೦ ವನ್ನು ಮಠದ ಹಣದಿಂದ ಎರವಲು ಪಡೆಯಲಾಯಿತು. ನನ್ನಲ್ಲಿ ಹಣವಿಲ್ಲದ ಕಾರಣ ಗಂಗಾ ತೀರದ ಒಂದು ಸಣ್ಣ ಮನೆಯನ್ನು ತೆಗದುಕೊಳ್ಳುವ ಆಲೋಚನೆ ಬಹಳ ಕಾಲದ ಹಿಂದೆಯೇ ಕೈಬಿಟ್ಟಿರುವೆನು . ಆದರ ಕಲ್ಕತ್ತಯಲ್ಲಿ ಮತ್ತು ಲೆಗಟ್ ದಂಪತಿಗಳ ಬಳಿ ನನ್ನ ಹಣ ಸ್ವಲ್ಪ ಇರುವುದು. ನೀವು ಇನ್ನೊಂದು ಸಾವಿರ ಕೊಟ್ಟರೆ ನನ್ನ ಸ್ವಂತ ಖರ್ಚಿಗೆ ಉಪಯೋಗವಾಗುವುದು. ನಾನು ಎಂದಿಗೂ ನಿಮಗೆ ತಿಳಿದಂತೆ ನನ್ನ ಖರ್ಚಿಗಾಗಲಿ ಅಥವಾ ನನ್ನ ತಾಯಿಗಾಗಲಿ ಮಠದ ಹಣವನ್ನು ತೆಗ್ದುಕೊಳ್ಳಲಿಲ್ಲ. ಸಣ್ಣ ಮನೆಯೊಂದನ್ನು ಕೊಳ್ಳುವ ಯೋಜನೆಯನ್ನು ಕೈಬಿಡುವಂತೆ ಶಾರದಾನಂದರಿಗೆ ಬರೆಯಿರಿ. ನಾನು ಸಂಪೂರ್ಣ ಗುಣಮುಖನಾಗುವವರೆಗೆ ಇನ್ನು ಪತ್ರ ಬರೆಯುವುದಿಲ್ಲ. ವಿವಿಧ ಜನಗಳೊಂದಿಗೆ ಒಡನಾಡುವುದು ಸನ್ಯಾಸಿಗೆ ತರವಲ್ಲ. ಸನ್ಯಾಸಿ ಮೌನವಾಗಿ , ವ್ಯವಹಾರಗಳ ಹಿಂದೆ ಸರಿದು ಜನರಿಗೆ ಕಾಣದಂತೆ ಇರಬೇಕು ಎನ್ನುವ ಒಂದು ಸಂದೇಶದೊಂದಿಗೆ ಜೋಗೆ ಹೇಳಿ’ ಎಂದು ತತ್ತ್ವಾದರ್ಶದ ಮಾತುಗಳನ್ನಾಡಿದ್ದರು. (೧೮/೫/೧೯೦೦-ಸಾರಾ ಬುಲ್). ಈ ಪತ್ರದಲ್ಲಿ ಸ್ವಾಮಿಗಳು ಸಾರಾ ಬುಲ್ ಕೊಟ್ಟ ೩೫೦೦೦ ಹಣವನ್ನು ಹೇಗೆ ಬಳಸಲಾಗಿದೆಯೆಂದ ವಿವರಿಸಿದ್ದರು. ಅದರಲ್ಲಿ ೫೦೦೦ ರೂಗಳನ್ನು ತಮ್ಮ ಸ್ವಂತ ಬಳಕೆಗೆ ಪಡೆದಿದ್ದು ಅದರಲ್ಲಿ ೨೦೦೦ ರೂಗಳನ್ನು ಆಗಲೇ ಮರಳಿಸಿರುವುದನ್ನು ತಿಳಿಸಿ ಉಳಿದ ವಿಚಾರದಲ್ಲಿ ಸಾರಾ ಬುಲ್ ಸೂಕ್ತ ನಿರ್ಧಾರ ಕೈಗೊಳ್ಳಲು ಕೇಳಿಕೊಂಡಿದ್ದರು.
ಸ್ವಾಮಿಗಳು ಕೊನೆಯ ದಿನಗಳಲ್ಲಿ ತಾಯಿಯ ಜೊತೆ ಕಳೆಯಬೇಕೆಂದಿದ್ದು ದಿನದಿಂದ ದಿನಕ್ಕೆ ತಮ್ಮ ಪೂರ್ವಾಶ್ರಮದ ಕುಟುಂಬದತ್ತ ವಾಲುತ್ತಿರುವುದನ್ನು ಗಮನಿಸಿದ ಶಾರದಾನಂದ ಈ ಬಗ್ಗೆ ತನ್ನ ಭಯ ವ್ಯಕ್ತಪಡಿಸಿ ಸಾರಾ ಬುಲ್’ಗೆ ಪತ್ರ ಬರೆದಿದ್ದನು. ಸ್ವಾಮಿಗಳು ನಡುವೆ ಕೆಲವೊಮ್ಮೆ ಎಲ್ಲವನ್ನೂ ಬಿಟ್ಟು ಹಿಮಾಲಯ ಸೇರಿ , ಧ್ಯಾನ ಮಾಡುತ್ತ , ಪುಸ್ತಕಗಳನ್ನು ಬರೆಯುತ್ತೇನೆ ಎನ್ನುತ್ತ ಮನಸ್ಸಿಗೆ ಬಂದಂತೆ ಬದಲಾಗುತ್ತಿದ್ದರು. (125) ಸ್ವಾಮಿಗಳ ಈ ಮಾನಸಿಕ ತೊಳಲಾಟಗಳು , ನನ್ನನ್ನು ಭಾರತಕ್ಕೆ ಮರಳಿ ಕಳಿಸುವಿರಾ ಎಂದು ಅಮೆರಿಕನ್ ಹೆಂಗಸರಲ್ಲಿ ಗೋಗರೆಯುವಿಕೆ ವೇದಾಂತದ ಅದ್ವೈತಿಯನ್ನು ಸಾಮಾನ್ಯ ಮನುಷ್ಯನನ್ನಾಗಿಸಿದ್ದವು.
ಜನ ಸಾಮಾನ್ಯರ ಜೀವನ ಸೀಮಿತ-ಅದು ಅವರ ಕುಟುಂಬದ ಸುತ್ತ ತಿರುಗುತ್ತದೆ. ಹೆಣ್ಣು , ಹೊನ್ನುಗಳೇ ಆ ತಿರುಗಣಿಯ ಗೂಟಗಳು. ಈ ಜಗತ್ತಿನಲ್ಲಿ ಎಲ್ಲರಿಗಿಂತಲೂ ಸಂನ್ಯಾಸಿಯ ಜೀವನವೇ ಶ್ರೇಷ್ಟ . ಏಕೆಂದರೆ ಅವನು ತ್ಯಾಗಿ. ಅವನು ಯಾವುದಕ್ಕೂ ಬದ್ಧನಲ್ಲ. ಸಂಸಾರ ಅವನನ್ನು ಕಟ್ಟಿಡಲಾರದು. ಆದ್ದರಿಂದಲೇ ಆತ ವಿಶ್ವಪ್ರೇಮಿ ಎಂದು ಮೇಲಿಂದ ಮೇಲೆ ಕೊಚ್ಚಿಕೊಳ್ಳುತ್ತಿದ್ದ , ಮದ್ರಾಸಿನ ಶಿಷ್ಯರಿಗೆ ಮದುವೆ ಎಂಬ ಬಂಧನಕ್ಕೆ ಒಳಗಾಗದ ಧೀರ ತ್ಯಾಗಿಗಳೆಲ್ಲಿ ಎಂದು ಕಟುವಾಗಿ ಪ್ರಶ್ನಿಸಿ , ಹೀಗಳೆದಿದ್ದ ಸ್ವಾಮಿಗಳು ತಮ್ಮ ಪೂರ್ವಾಶ್ರಮದ ಕುಟಂಬಕ್ಕೆ ನೆರವಾಗಲು ಅಮೆರಿಕದ ಶಿಷ್ಯರ ಮೊರೆ ಹೊಕ್ಕು ಸಂಸಾರಿಗಿಂತಲೂ ಮಿಗಿಲಾಗಿ ಕಳವಳಗೊಂಡು. ಹಣದ ಬಗ್ಗೆ ಚಿಂತಿತರಾಗಿದ್ದರು. ಈ ಎಲ್ಲ ತಾಕಲಾಟಗಳಿಗೆ ತಲೆಗೊಡದೆ ಸ್ವಾಮಿಗಳ ತಮ್ಮ ಮಹೇಂದ್ರನಾಥ ದತ್ತ ಅವಧೂತನಂತೆ ವಿದೇಶಗಳಲ್ಲಿ ಅಲೆದಾಡುತ್ತಿದ್ದನು. ೧೮೯೬ ರಲ್ಲಿ ಸ್ವಾಮಿಗಳ ಲಂಡನ್’ನಲ್ಲಿ ತರಗತಿಗಳನ್ನು ನಡೆಸುತ್ತಿದ್ದಾಗ ಅವರ ತಮ್ಮ ಮಹೇಂದ್ರನಾಥ ದತ್ತ ಇರುತ್ತಿದ್ದನು. ಮಹೇಂದ್ರನಾಥ ದತ್ತನಿಗೂ ಮತ್ತು ಸ್ವಾಮಿಗಳು ಮಾಡುತ್ತಿರುವ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೆನ್ರಿಯೆಟ್ಟಾ ಮುಲ್ಲರ್ ಆತನನ್ನು ಮನೆಯಿಂದ ಹೊರ ಹಾಕಿದ್ದಳು. ಅದಾದ ನಂತರ ಆತ ಜಾನ್ ಫಾಕ್ಸ್ ಜೊತೆ ಇದ್ದನು. ಸ್ವಾಮಿಗಳಿಗೆ ತಿಳಿಯದಂತೆ ಆ ಸಮಯದಲ್ಲಿ ವೈದ್ಯುತ್ ಇಂಜಿನಿಯರಿಂಗ್’ನಲ್ಲಿ ಆಸಕ್ತಿ ಇರದಿದ್ದ ಮಹೇಂದ್ರನಾಥ ಕಣ್ಮರೆಯಾಗಿದ್ದು ಆತ ಎಲ್ಲಿರುವನೆಂದು ಸ್ವಾಮಿಗಳಿಗೆ ತಿಳಿದಿರಲಿಲ್ಲ. ಮುಂದಿನ ನಾಲ್ಕು ವರ್ಷಗಳ ಕಾಲ ಸಂನ್ಯಾಸಿಗಳಾಗಿದ್ದ ಸ್ವಾಮಿಗಳು ತಮ್ಮ ಪೂರ್ವಾಶ್ರಮದ ಕುಟುಂಬವನ್ನು ಸುಸ್ಥಿತಿಗೆ ತರಲು ಹೆಣಗುತ್ತಿದ್ದರೆ , ಆ ಹೊಣೆ ಹೊರಬೇಕಾದ ಮಹೇಂದ್ರನಾಥ ದತ್ತ ಸಂನ್ಯಾಸಿಯಂತೆ ಎಲ್ಲ ಬಂಧನಗಳನ್ನು ಕಳಚಿಕೊಂಡವನಂತೆ ಕಣ್ಮರೆಯಾಗಿದ್ದನು. ನಾಲ್ಕು ವರ್ಷಗಳ ನಂತರ ಆತನ ಚಲನವಲನಗಳ ಬಗ್ಗೆ ಸುದ್ದಿಗಳು ಸ್ವಾಮಿಗಳ ಕಿವಿಯನ್ನು ತಲುಪಿದ್ದವು.
‘.. ನೀನು ಬಹಳ ಒಳ್ಳೆಯವಳು. ನಾನೊಬ್ಬ ರೋಗಿ ಅದರ ವಿಷಯ ಅಷ್ಟೇ. …….. ಕಾಣೆಯಾಗಿದ್ದ ನನ್ನ ಸಹೋದರ (ಮಹೇಂದ್ರನಾಥ ದತ್ತ) ಬಗ್ಗೆ ಸಮಾಚಾರ ಬಂದಿದೆ. ಅವನೊಬ್ಬ ದೊಡ್ದ ಪ್ರವಾಸಿ. ಅದು ಒಳ್ಳೆಯದು . ಕವಿದಿರುವ ಮೋಡ ನಿಧಾನವಾಗಿ ಸರಿಯುತ್ತಿರುವುದನ್ನು ನೀನು ನೋಡಬಹುದು ‘ ಎಂದು ೧೪/೮/೧೯೦೦ ರಂದು ಕ್ರಿಸ್ಟೈನಾಗೆ ಬರೆದರು. ಅದೇ ದಿನ ‘ ದಯವಿಟ್ಟು ಮೊಹಿನ್'ಗೆ ಅವನು ಏನು ಮಾಡಿದರೂ ನನ್ನ ಆಶೀರ್ವಾದಗಳಿವೆ ಎಂದು ತಿಳಿಸು. ಅವನೀಗ ಮಾಡುತ್ತಿರುವುದು ವಕೀಲಿಕೆ ಮುಂತಾದವುಗಳಿಗಿಂತ ಅದೆಷ್ಟೋ ಮೇಲು. ನನಗೆ ಧೈರ್ಯ ಮತ್ತು ಸಾಹಸ ಬೇಕು. ದೇಶಕ್ಕೆ ಇಂತಹ ಜನರು ಬೇಕಾಗಿದ್ದಾರೆ. ನನ್ನ ಆರೋಗ್ಯ ಹದಗೆಡುತ್ತಿರುವುದರಿಂದ ನಾನು ಬಹಳ ಕಾಲ ಬದುಕುವ ಯೋಚನೆ ಇಲ್ಲ. ಮೋಹಿನ್ ತಾಯಿ ಮತ್ತು ಸಂಸಾರವನ್ನು ನೋಡಿಕೊಳ್ಳಲು ದಾರಿಯನ್ನು ಹುಡುಕಿಕೊಳ್ಳಬೇಕಿದೆ. ನಾನು ಎಂದು ಬೇಕಾದರೂ ತೀರಿಹೋಗಬಹುದು. ನಾನೀಗ ಅವನ ವಿಷಯಲ್ಲಿ ಹೆಮ್ಮಯಿಂದ ಇರುವೆನು’ ಎನ್ನುತ್ತ ತಮ್ಮನ ಬಗ್ಗೆ ಚಿಂತಿಸಿದ್ದರು.
ಸ್ವಾಮಿಗಳು ೧೫/೧೨/೧೯೦೦ ರಂದು ಮತ್ತು ೧/೬/೧೯೦೧ ರಂದು ತಮ್ಮ ಕಾಮಧೇನುವಾದ ಸಾರಾ ಬುಲ್’ಗೆ ಬರೆದ ಪತ್ರಗಳಲ್ಲಿ ‘ನನ್ನ ಸೋದರತ್ತೆಯ ಮಗಳು ಒಂದು ಕಾಗದ ಬರೆದಿದ್ದಳು. ಅದರಲ್ಲಿ ಅವಳ ಮಗಳು (ದತ್ತು ಮಗಳು) ತೀರಿಹೋದಳು ಎಂದು ತಿಳಿಸಿದ್ದಾಳೆ. ದುಃಖಪಡುವುದೇ ಭಾರತದ ಹಣೆಯಬರಹ ಮತ್ತು ‘ ನೀವು ಎಲ್ಲಿದ್ದೀರಿ ? ಹೇಗಿದ್ದೀರಿ ? ಇಲ್ಲಿ ಆದಷ್ಟು ಬೇಗ ನನ್ನ ಕೆಲಸಗಳು ಸರಿಹೋಗುವುವು.ಎನಿಸುತ್ತದೆ. ಅವುಗಳನ್ನು ಸರಿ ಮಾಡಲ ಆದಷ್ಟು ಯತ್ನಿಸುತ್ತಿದ್ದೇನೆ……ನೀವು ನನ್ನ ಸೋದರ ಸೊಸೆಗೆ ಕಳಿಸುತ್ತಿದ್ದ ಹಣವನ್ನು ಇನ್ನು ಮೇಲೆ ನನ ವಿಳಾಸಕ್ಕೆ ಕಳಿಸಿರಿ. ಚೆಕ್ಕನ್ನು ನನ್ನ ಹೆಸರಿಗೆ ಕಳಿಸಿರಿ. ಅದನ್ನು ನಗದು ಮಾಡಿ ಆಕೆಗೆ ಕಳಿಸುತ್ತೇನೆ. ಆಕೆಗೆ ನನ್ನ ಮೂಲಕ ಹಣ ಹೋಗುವುದು ಒಳ್ಳೆಯದು’ ಎಂದಿದ್ದಿತು. ಹಣ ಇಲ್ಲದೆ ಬರಿಗೈಯಾಗಿದ್ದ ಸ್ವಾಮಿಗಳ ಸಾರಾ ಬುಲ್ ಸೋದರ ಸೊಸೆಗೆ ಕಳಿಸುತ್ತಿದ್ದ ಹಣದಲ್ಲಿ ಸ್ವಲ್ಪ ಮೊತ್ತವನ್ನು ಅಗತ್ಯ ಬಿದ್ದರೆ ತಾವು ಬಳಸಿಕೊಳ್ಳಲು ಯೋಚಿಸಿರುವ ಸಾಧ್ಯತೆಗಳಿವೆ.
ಸ್ವಾಮಿಗಳು ತಮ್ಮ ತಾಯಿ ಮತ್ತು ಕುಟುಂಬದವರನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗಬೇಕೆಂದು ನಿರ್ಧರಿಸಿದ್ದರು.‘ ಢಾಕಾದಲ್ಲಿ ಬ್ರಹ್ಮಪುತ್ರದಲ್ಲಿ ಸ್ನಾನದ ಪ್ರಯುಕ್ತ ನನ್ನ ತಾಯಿ , ಚಿಕ್ಕಮ್ಮ ಮತ್ತು ಸೋದರ ಸೊಸೆ ಬಂದಿರುವರು. ಬಂಗಾಳದ ಅತಿ ಪೂರ್ವದ ಚಂದ್ರನಾಥ ಎನ್ನುವಲ್ಲಿಗೆ ನಾನು ನನ್ನ ತಾಯಿ ಮತ್ತು ಇತರ ಹೆಂಗಸರನ್ನು ಕರೆದೊಯ್ಯುತ್ತೇನೆ ‘ ಎಂದು ಸಾರಾ ಬುಲ್’ಗೆ ತಿಳಿಸಿದ್ದರು. (೨೯/೩/೧೯೦೧). ಇದನ್ನು ತಿಳಿದ ರಾಮಕೃಷ್ಣಾನಂದರು ಅವರೊಂದಿಗೆ ಇನ್ನೂ ಕೆಲವರನ್ನು ಕರೆದುಕೊಂಡು ಹೋಗುವಂತೆ ಸ್ವಾಮಿಗಳಲ್ಲಿ ಕೋರಿದ್ದರು. ಇದು ಸ್ವಾಮಿಗಳಿಗೆ ತಾವು ಹಗ್ಗ ತಿನ್ನುತ್ತಿರುವಾಗ ಬೇರೆಯವರಿಗೆ ಶಾವಿಗೆ ಕೊಡು ಎಂದು ಹೇಳಿದಂತಾಗಿದ್ದಿತು. ೨೬/೧/೧೯೦೧ ರಂದು ರಾಮಕೃಷ್ಣಾನಂದರಿಗೆ ಇಂತಹ ಸುದ್ದಿ ಎತ್ತದಂತೆ ತಾಕೀತು ಮಾಡಿದರು. ‘ನಾನು ತಾಯಿಯೊಂದಿಗೆ ರಾಮೇಶ್ವರಕ್ಕೆ ಹೋಗುತ್ತೇನೆ. ಮದ್ರಾಸಿಗೆ ಹೋಗುತ್ತೇನೋ ಇಲ್ಲವೋ ಗೊತ್ತಿಲ್ಲ. ಒಮ್ಮೆ ಹೋದರೂ ಅದು ಕೇವಲ ಖಾಸಗಿಯಾಗಿ ಮಾತ್ರ. ನನ್ನ ಮೈ, ಮನಸ್ಸಿಗೆ ತುಂಬಾ ಸಾಕಾಗಿದೆ. ನನಗೆ ಯಾರನ್ನೂ ಸಹಿಸಲಾಗುತ್ತಿಲ್ಲ. ನನಗೆ ಯಾರೂ ಬೇಕಿಲ್ಲ. ಬೇರೆ ಯಾರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲು ಇಚ್ಛೆಯಿಲ್ಲ. ಹಣವೂ ಇಲ್ಲ. ಗುರುಮಹಾರಾಜರ ಭಕ್ತರೋ ಅಲ್ಲವೋ ಯಾರಾಗಿದ್ದರೂ ಚಿಂತೆಯಿಲ್ಲ. ನೀನು ಅಂತಹ ಪ್ರಶ್ನೆಯನ್ನು ಹಾಕಿದ್ದೇ ಮೂರ್ಖತನ. ನಾನು ನಿನಗೆ ಮತ್ತೆ ಹೇಳುತ್ತೇನೆ. ನಾನು ಬದುಕಿರುವದಕ್ಕಿಂತ ಹೆಚ್ಚಾಗಿ ಸತ್ತಿದ್ದೇನೆ. ನಾನು ಖಂಡಿತವಾಗಿ ಯಾರನ್ನೂ ನೋಡುವುದಿಲ್ಲ. ನೀನು ಇದನ್ನು ನೋಡಿಕೊಳ್ಳದೆ ಇದ್ದರೆ ಮದ್ರಾಸಿಗೆ ಬರುವುದಿಲ್ಲ. ಯೋಗಿನ್ ಮಾ ಮುಂತಾದವರು ತಮ್ಮ ದಾರಿ ತಾವು ಹಿಡಿಯಲಿ. ನನ್ನ ಈಗಿನ ಆರೋಗ್ಯ ಪರಿಸ್ಥಿತಿಯಲ್ಲಿ ಯಾರ ಸಹವಾಸವನ್ನೂ ನಾನು ಇಚ್ಚಿಸೆನು’ ಎಂದು ಸ್ಪಷ್ಟವಾಗಿ ಹೇಳಿದ್ದರು.
ತಾಯಿಗೆ ಮತ್ತು ಕುಟುಂಬದವರಿಗೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿಸಿದ ನಂತರ ಸ್ವಾಮಿಗಳಲ್ಲಿ ಒಂದು ಬಗೆಯ ಸಂತೃಪ್ತಿ ಮನೆ ಮಾಡಿದ್ದಿತು. ಇದೇ ಸಮಯದಲ್ಲಿ ತಮ್ಮ ಮಹೇಂದ್ರನಾಥ ದತ್ತ ಎಲ್ಲಿರುವೆನೆಂಬ ಸುಳಿವು ಸಿಕ್ಕು ನೆಮ್ಮದಿ ಹೆಚ್ಚಿದ್ದಿತು. ೨೦/೩/೧೯೦೧ ರಂದು ಸಾರಾ ಬುಲ್ ಹತ್ತಿರ ತಮ್ಮನ ಬಗ್ಗೆ ಹೇಳಿದ್ದಾರ. ‘‘ನನ್ನ ಸೋದರ ಮೊಹಿನ್ ಭಾರತದಲ್ಲಿ ಬಾಂಬೆ ಹತ್ತಿರ ಕರಾಚಿಯಲ್ಲಿದ್ದು ಶಾರದಾನಂದರೊಡನೆ ಪತ್ರದ ಮೂಲಕ ಸಂಪರ್ಕದಲ್ಲಿದ್ದಾನೆ. ಅವನು ಬರ್ಮಾ, ಚೈನಾ ಇತ್ಯಾದಿ ದೇಶಗಳಿಗೆ ಹೋಗುವುದಾಗಿ ಬರೆದಿರುವನು. ಅವನಿಗೆ ಆಸೆ ತೋರಿಸುವ ವ್ಯಾಪಾರಿಗಳು ಅಲ್ಲಿರುವರು. ಅವನ ಬಗ್ಗೆ ನನಗೇನೂ ಕಾತರವಿಲ್ಲ. ಅವನು ಬಹಳ ಸ್ವಾರ್ಥಿ.’ ಮಾತಿನ ವರಸೆಯಿಂದ ಜಗತ್ತನ್ನೇ ಗೆದ್ದಿದ್ದ , ಸಾವಿರಾರು ಶಿಷ್ಯರನ್ನು ಹೊಂದಿದ್ದ ಸ್ವಾಮಿಗಳು ಮಹೇಂದ್ರನಾಥ ದತ್ತನೊಂದಿಗೆ ನೇರ ಸಂಪರ್ಕ ಹೊಂದದಿರುವುದು , ಅದರಂತೆ ಆತ ಸ್ವಾಮಿಗಳಿಗೆ ಯಾವುದೇ ಪತ್ರವನ್ನು ಬರೆಯದಿರುವುದು , ತನ್ನ ಚಲನವಲನಗಳನ್ನು ತಿಳಿಸದೇ ಇರುವುದು ಕುತೂಹಲಕಾರಿಯಾಗಿದೆ. ತಂದೆಯ ಸಾವಿನ ನಂತರ ನಾವಿನ್ನೂ ಬಾಲಕರಾಗಿರುವಾಗ ಸಂಕಷ್ಟದ ಸಮಯದಲ್ಲಿ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವಾಗ ಮನೆಯ ಹಿರಿಯನಾಗಿ ಕುಟುಂಬಕ್ಕ ಆಸರೆಯಾಗಿ ನಿಲ್ಲಬೇಕಾಗಿದ್ದ ಅಣ್ಣ ಸಂನ್ಯಾಸಿಯಾಗಿ ಹೊರಟನು. ಹಲವು ವರ್ಷಗಳ ಕಾಲ ಆತ ಎಲ್ಲಿರುವನೆಂದೇ ಗೊತ್ತಿರಲಿಲ್ಲ. ಈಗ ಖ್ಯಾತನಾದ ಮೇಲೆ ತಾಯಿಯನ್ನು ನೋಡಿಕೊಳ್ಳುವ ಮಾತನಾಡುತ್ತಿದ್ದಾನೆ. ಬೇಕಿದ್ದರೆ ಆತ ಆ ಬಗ್ಗೆ ಚಿಂತಿಸಲಿ . ಯಾವುದನ್ನೂ ಲೆಕ್ಕಿಸದೆ ಆತ ಹೇಗೆ ಹೊರಹೋದನೋ ಅದರಂತೆ ನಾನು ಕುಟುಂಬದ ಬಗ್ಗೆ ಚಿಂತಿಸದೆ ನನ್ನ ದಾರಿಯಲ್ಲಿ ನಾನು ಸಾಗುತ್ತೇನೆ ನಾನು ಯಾರಿಗೂ ಉತ್ತರಿಸಬೇಕಾಗಿಲ್ಲ ಎನ್ನುವ ಧೋರಣೆ ಮಹೇಂದ್ರನಾಥ ದತ್ತನಿಗೆ ಇರುವಂತಿದೆ. ಹಿರಿಯಕ್ಕ ಹಾಕಿದ ಚಾಳಿ ಮನೆ ಮಂದಿಗೆಲ್ಲ ಬರುವುದು ಸಹಜ.
ಸ್ವಾಮಿಗಳು ತಮ್ಮ ಕೌಟಂಬಿಕ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ದಾಯಾದಿಗಳಿಗೆ ಹಣ ಕೊಡಬೇಕಾಗಿದ್ದಿತು. ಅದಕ್ಕೆ ಅವರು ಸಾರಾ ಬುಲ್ ನೆರವು ಕೇಳಿದ್ದರು. ದಾಯಾದಿಗಳನ್ನು ಕೌಟುಂಬಿಕ ವ್ಯಾಜ್ಯದಲ್ಲಿ ಕಠಿಣವಾಗಿ ವರ್ತಿಸದಂತೆ ಮಾಡಲು ಅವರಲ್ಲಿ ಕೆಲವರನ್ನು ತಾಯಿಯೊಂದಿಗೆ ತೀರ್ಥ ಯಾತ್ರೆಗೆ ಕರೆದೊಯ್ದಿದ್ದರು. ಸ್ವಾಮಿಗಳು ಕಲ್ಕತ್ತ ತಲುಪಿದಾಗ ಅವರು ಬಯಸಿದ್ದ ನೆರವು ಬಂದಿದ್ದಿತು. ‘ ನನ್ನ ದಾಯಾದಿಗೆಂದು ನೀವು ಕಳಿಸಿದ ಮೂರು ಚೆಕ್'ಗಳು ಮತ್ತು ಪತ್ರ ತಲುಪಿದವು’ ಎಂದು /೧/೧೯೦೧ ಮತ್ತು ೧೩/೫/೧೯೦೧ ರಂದು ಸಾರಾ ಬುಲ್’ಗೆ ಪತ್ರ ಬರೆದರು. ೨೧/೨/೧೯೦೨ ರಂದು ಬ್ರಹ್ಮಾನಂದರಿಗೆ ಬರೆದ ಪತ್ರದಲ್ಲಿ ಅಮ್ಮ ಮತ್ತು ಅಜ್ಜಿ ಇಲ್ಲಿಗೆ ಬರುವ ಇಚ್ಚೆ ಇದ್ದರೆ ಬರಲಿ. ಪ್ಲೇಗ್ ಪೀಡಿತ ಕಲ್ಕತ್ತದಲ್ಲಿ ಇರುವುದಕ್ಕಿಂತ ದೂರವಿರುವುದು ಒಳ್ಳೆಯದು ಎಂದಿದ್ದಾರೆ.
ಭಾರತಕ್ಕೆ ಬಂದು ಆಲ್ಮೋರಾದಲ್ಲಿ ಸೇವಿಯರ್ ದಂಪತಿಗಳೊಂದಿಗಿದ್ದ ಕ್ರಿಸ್ಟೈನಾ ಗ್ರೀನ್’ಸ್ಟೈಡಲ್’ಗೆ ತೀರಿಕೊಳ್ಳುವುದಕ್ಕಿಂತ ಇಪ್ಪತ್ತು ದಿನ ಮೊದಲು (೧೪/೬/೧೯೦೨) ‘ಆ ಹುಡುಗ ನನ್ನ ಸೋದರಳಿಯ, ಆಶ್ರಮದಲ್ಲಿ ಇನ್ನೂ ಸ್ವಲ್ಪ ಕಾಲ ಇರುವನು. ಅವನು ಒಳ್ಳೆಯ ಉಚ್ಛಾರಣೆಯಿಂದ ಇಂಗ್ಲಿಷ್ ಮಾತನಾಡುವಂತೆ ಮಾಡು. ತಪ್ಪದೆ ಬಾಲ್ಯದಿಂದ ಮಾತನಾಡದ ಹೊರತು ಯಾವ ವಿದೇಶಿ ಭಾಷೆ ಸರಿಯಾಗಿ ಬರದು ‘ಎಂದು ಕಾಳಜಿ ವಹಿಸುತ್ತ ಭಾರತದ ದೀನರನ್ನು ಬಿಟ್ಟು ಸೋದರಳಿಯನನ್ನು ತಯಾರು ಮಾಡಲು ಸಿದ್ಧರಾಗಿದ್ದರು. ಸ್ವಾಮಿಗಳು ಸಾಯುವ ಕೊನೆಯ ಗಳಿಗೆಯ ತನಕ ತಾಯಿಗೆ ಮನೆ ಕಟ್ಟಲು , ಜೀವನಾಂಶ ಒದಗಿಸಲು ಹೆಣಗುತ್ತಿದ್ದು ತೀರಿಕೊಳ್ಳುವ ಕೆಲ ದಿನಗಳ ಮೊದಲಷ್ಟೇ ದಾಯಾದಿಗಳೊಂದಿಗೆ ರಾಜಿ ಸಂಧಾನ ಮಾಡಿಕೊಂಡು , ಅವರಿಗೆ ಹಣ ಕೊಟ್ಟು ತಮ್ಮ ಫೂರ್ವಾಶ್ರಮದ ಮನೆಯನ್ನು ಉಳಿಸಿಕೊಂಡರು. ಇದಕ್ಕಾಗಿ ಅಮೆರಿಕದಲ್ಲಿ ಉಪನ್ಯಾಸಗಳನ್ನು ನೀಡಿ ಹಣ ಸಂಪಾದಿಸಿದರು , ಅಮೆರಿಕನ್ ಶಿಷ್ಯರನ್ನು ಕಾಡಿದರು , ಬೇಡಿದರು , ಓಲೈಸಿದರು. ಕೊನೆಯಲ್ಲಿ ಅವರ ಈ ಎಲ್ಲ ಯತ್ನಗಳು ಸಾಮಾನ್ಯ ಸಂಸಾರಿಯ ಸಾಧನೆಗಳಿಗೆ ಸಮವಾಗಿದ್ದವು.
Comment Box is loading comments...