ಹೊನ್ನು-ಮಣ್ಣು
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ರಾಮಕೃಷ್ಣ ಪರಮಹಂಸರ ಸನಿಹ ಹೆಣ್ಣು-ಹೊನ್ನು (ಕಾಮಿನಿ ಕಾಂಚನ) ಸುಳಿಯುವಂತಿರಲಿಲ್ಲ. ನರೇಂದ್ರನಾಥ ದತ್ತ ಒಮ್ಮೆ ಇದನ್ನು ಪರೀಕ್ಷಿಸಲು ಅವರ ಹಾಸಿಗೆ ಕೆಳಗೆ ಹಣವನ್ನು ಅಡಗಿಸಿಟ್ಟಿದ್ದ. ರಾಮಕೃಷ್ಣರು ಆ ಹಾಸಿಗೆಯ ಮೇಲೆ ಕುಳಿತಂತೆ ಅವರ ಮೈಯಲ್ಲಿ ಉರಿಯೆದ್ದು ಚಡಪಡಿಸತೊಡಗಿದರು. ಎನ್ನುವ ಕಥೆ ಸಾಕಷ್ಟು ಜನಪ್ರಿಯವಾಗಿದೆ. ೧೮೯೬ ರಲ್ಲಿ ನ್ಯೂಯಾರ್ಕ್ ಮತ್ತು ಇಂಗ್ಲೆಂಡ್’ಗಳಲ್ಲಿ ಸ್ವಾಮಿಗಳು ‘ನನ್ನ ಗುರು’ ಎನ್ನುವ ಭಾಷಣಗಳನ್ನು ಮಾಡಿದರು. ಅದರಲ್ಲಿ ನನ್ನ ಗುರುಗಳು ಹಣವನ್ನು ಮುಟ್ಟುವುದಿಲ್ಲ ಎನ್ನುವ ಶಪಥ ಮಾಡಿದರು. ಅವರು ನಿದ್ರಿಸಿದಾಗ ಹಣವನ್ನು ಅವರ ದೇಹಕ್ಕೆ ತಾಗಿಸಿದಾಗ ಅವರ ಕೈ ಬಾಗಿ , ದೇಹಕ್ಕೆ ಪಾರ್ಶ್ವ ವಾಯು ಬಂದಂತಾಗುತ್ತಿದ್ದಿತು ಎಂದಿದ್ದಾರೆ.(112) ಇದೇ ವಿಷಯವನ್ನು ಮನ್ಮಥನಾಥ ಗಂಗೂಲಿಗೂ ಹೇಳಿದ್ದರು. ಹೊನ್ನಿನ ಬಗ್ಗೆ ರಾಮಕೃಷ್ಣರಿಗಿದ್ದ ಈ ದಿವ್ಯ ಜುಗುಪ್ಸೆಯನ್ನು ಭಾವುಕತೆ ಮತ್ತು ಆರಾಧನೆಯನ್ನು ಬಿಟ್ಟು ಬೇರೆ ಮಗ್ಗುಲಿನಿಂದ ನೋಡಿದರೆ ಏನು ಕಾಣುತ್ತದೆ ? ಜಗತ್ತಿನಲ್ಲಿ ಎಲ್ಲ ಪ್ರಾಣಿಗಳು ಮೂಲ ಪ್ರವೃತ್ತಿಗಳೊಂದಿಗೆ – ಹಸಿವು, ಅಂಜಿಕೆ, ನಿದ್ರೆ, ಮೈಥುನ - ಬದುಕುತ್ತವೆ. ಇವುಗಳನ್ನು ಅವು ಸಹಜ ರೀತಿಯಲ್ಲಿ ಪೂರೈಸಿಕೊಳ್ಳುವುದರಿಂದ ಯಾವ ಚರ್ಚೆಗೂ ಅವಕಾಶವಿಲ್ಲ. ಬುದ್ಧಿಜೀವಿಯಾದ ಮನುಷ್ಯ ಇವುಗಳನ್ನು ಹೊಂದಿಸಿಕೊಳ್ಳುವ ದಾರಿ ಸಂಸ್ಕೃತಿ, ನಾಗರಿಕತೆ , ಮಾನವೀಯತೆ ಮುಂತಾಗಿ ಗುರುತಿಸಲ್ಪಟ್ಟಿದೆ. ಮೈಥುನ/ಕೂಟ ತೀರಾ ಖಾಸಗಿಯಾಗಿರುವುದರಿಂದ ರಾಮಕೃಷ್ಣರಿರಲಿ ಯಾರ ವಿಚಾರದಲ್ಲಿಯೂ ಹೀಗೆಂದು ಹೇಳಲು ಸಾದ್ಯವಿಲ್ಲ. ಆದರೆ ಉಳಿದ ಮೂರು ಪ್ರವೃತ್ತಿಗಳ ಬಗ್ಗೆ ಇತರರು ಗಮನಿಸಿ ಒಂದು ನಿರ್ಧಾರಕ್ಕೆ ಬರಬಹುದು. ಹೆತ್ತವರನ್ನು ಅವಲಂಬಿಸಿರುವ ಮಕ್ಕಳ ಹೊರತಾಗಿ ಹೊಟ್ಟೆ, ಬಟ್ಟೆಗೆ ಪ್ರತಿಯೊಬ್ಬ ವಯಸ್ಕನೂ ಒಂದಲ್ಲ ಒಂದು ರೀತಿಯಲ್ಲಿ ದುಡಿಯಲೇಬೇಕು. ಈ ದುಡಿತಕ್ಕೆ ದಕ್ಕುವ ಪ್ರತಿಫಲ ನೇರವಾಗಿ ಹಣವಾಗಿರಬಹುದು ಅಥವಾ ಪರೋಕ್ಷವಾಗಿ ವಸ್ತು , ಸೌಕರ್ಯಗಳ ರೂಪದಲ್ಲಿರಬಹುದು. ಸರ್ವಸಂಗ ಪರಿತ್ಯಾಗಿಗಳು ಬಿಕ್ಷೆ ಬೇಡಿ ಬದುಕಬಹುದು. ಆದರೆ ಬಿಕ್ಷೆ ನೀಡುವವರು ಅಂತಹ ಸಾಧುಗಳು ಧರ್ಮ/ಅಧ್ಯಾತ್ಮ ರೂಪದಲ್ಲಿ ಸಮಾಜಕ್ಕೆ ಏನನ್ನೋ ಕೊಡುತ್ತಿದ್ದಾರೆ ಅಥವಾ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದು ನಂಬಿರುತ್ತಾರೆ. ಎಂದರೆ ದುಡಿಮೆ ಅದಕ್ಕೆ ಪ್ರತಿಫಲ ಎನ್ನುವುದು ಸ್ಪಷ್ಟ.
ರಾಮಕೃಷ್ಣರದ್ದು ಅದೆಷ್ಟೇ ಅಧ್ಯಾತ್ಮಿಕ ಉತ್ಕಟತೆಯಿರಲಿ ಅವರು ಕಾಳಿಯ ಪೂಜಾರಿಯಾಗಿದ್ದರು. ಆದ್ದರಿಂದಲೇ ಅವರಿಗೆ ಆ ಗುಡಿಯ ಆವರಣದಲ್ಲಿ ನೆಲೆ ಸಿಕ್ಕಿ, ಗುಡಿಯ ಮೇಲ್ವಿಚಾರಕ ಮಥುರಾನಾಥ ಬಿಶ್ವಾಸ ಅವರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಲು ಕಾರಣವಾಗಿದ್ದಿತು. ಮನೆ , ಆಹಾರ ಧಾನ್ಯ , ಹಾಸಿಗೆ , ಚಾಪೆ , ಉರುವಲು , ಪಾತ್ರೆ ,ತಂಬಾಕು ಸೇರಿದಂತೆ ಬದುಕಲು ಬೇಕಾಗಿದ್ದ ರಾಮಕೃಷ್ಣರು ಬಳಸುತ್ತಿದ್ದ ಎಲ್ಲ ವಸ್ತುಗಳು ಹಣದ ಬೇರೆ ರೂಪಗಳಾಗಿದ್ದವು. ರಾಮಕೃಷ್ಣರು ಕುದುರೆ ಗಾಡಿಯಲ್ಲಿ , ದೋಣಿಯಲ್ಲಿ ಕಲ್ಕತ್ತದ ವಿವಿಧ ಜಾಗಗಳಿಗೆ ಹೋಗುತ್ತಿದ್ದರು. ವಾರಣಾಸಿಗೆ ತೀರ್ಥ ಯಾತ್ರೆಗೆ ಹೋಗಿದ್ದರು. ಶಾರದಾಮಣಿ ಎತ್ತಿನ ಗಾಡಿಯಲ್ಲಿ ತವರು ಮನೆ ಜಯರಾಮ ಬಾಟಿಗೆ ಹೋಗುತ್ತಿದ್ದಳು. ರಾಮಕೃಷ್ಣರು ನರೇಂದ್ರನಾಥದತ್ತನಿಗೆ ತಿನ್ನಿಸಲು ಸಿಹಿಯನ್ನು ಒಯ್ದಿದ್ದರು. ಕೇಶವಚಂದ್ರ ಸೇನನೊಂದಿಗೆ ದೋಣಿಯಲ್ಲಿ ಅಲೆದಿದ್ದರು. ಹಾಗೆ ಅಲೆಯುವಾಗ ನೀಡಿದ ಚುರುಪನ್ನು ತಿಂದಿದ್ದರು. ಸ್ಟುಡಿಯೊದಲ್ಲಿ ಫೊಟೊ ತೆಗೆಸಿಕೊಂಡಿದ್ದರು. ಕ್ಯಾನ್ಸರ್ ಪೀಡಿತ ರಾಮಕೃಷ್ಣರನ್ನು ಆ ಕಾಲದಲ್ಲಿ ಭಾರಿ ಶ್ರೀಮಂತರು ಮಾತ್ರ ವಾಸಿಸಬಹುದಾದ ತಿಂಗಳಿಗೆ ೮೦ ರೂ ಬಾಡಿಗೆಯ ಕಾಶಿಪುರ ತೋಟದ ಮನೆಗೆ ಸಾಗಿಸಲಾಯಿತು. ಸುರೇಂದ್ರನಾಥ ಮಿತ್ರ ಈ ಆರ್ಥಿಕ ಹೊಣೆ ಹೊತ್ತಿದ್ದನು. ಅವರು ಕಲ್ಕತ್ತದ ಖ್ಯಾತ ವೈದರಿಂದ ಚಿಕಿತ್ಸೆ ಪಡೆಯುತ್ತಿದ್ದರು. ರಾಮಕೃಷ್ಣ ಪುಂಥಿಯಿಂದ ರಾಮಕೃಷ್ಣರು ಕೊನೆಗಾಲದಲ್ಲಿ ಲಕ್ಷ್ಮೀನಾರಾಯಣ ಮಾರ್ವಾಡಿ ಕೊಟ್ಟ ೧೦,೦೦೦ ರೂಗಳನ್ನು ಒಪ್ಪಿಕೊಂಡು , ಅದನ್ನು ಕಾಶೀಪುರ ತೋಟದ ಸಮೀಪದಲ್ಲಿ ವಾಸವಾಗಿದ್ದ ಮಹಿಮಾಚರಣ ಚಕ್ರವರ್ತಿಯ ಸುಪರ್ದಿಯಲ್ಲಿರಿಸಿದ್ದರೆಂದು ತಿಳಿದು ಬರುತ್ತದೆ. ಭಾರಿ ಶ್ರೀಮಂತರು , ಉದ್ದಿಮೆದಾರರು , ಮಠಾಧಿಪತಿಗಳು , ಮಕ್ಕಳು ತಾವಾಗಿಯೇ ಹಣವನ್ನು ಎಂದಿಗೂ ಮುಟ್ಟುವುದಿಲ್ಲವಾದರೂ ಅದು ಕೊಡುವ ಎಲ್ಲ ಫಲಗಳನ್ನು ಅನುಭವಿಸುತ್ತಾರೆ.. ರಾಮಕೃಷ್ಣರ ಜೀವನ ಇದಕ್ಕಿಂತ ಬೇರೆಯದಾಗಿರಲಿಲ್ಲ. ಅವರು ಹಣ ಮುಟ್ಟುತ್ತಿರಲಿಲ್ಲವಾದರೂ ಇತರರು ಅವರ ಪರವಾಗಿ ಹಣವನ್ನು ಅಗತ್ಯಕ್ಕೆ ತಕ್ಕಂತೆ ಬಳಸುತ್ತಿದ್ದರು.
ರಾಮಕೃಷ್ಣರ ಧೀರ ಶಿಷ್ಯರಾದ ಸ್ವಾಮಿಗಳು ಹೊನ್ನಿನ ಬಗ್ಗೆ ಎಂತಹ ನಿಲುವನ್ನು ತಳೆದಿದ್ದರು ? ವಿಶ್ವ ಧರ್ಮ ಸಂಸತ್ತಿನ ಅವಧಿಯಲ್ಲಿ ಸ್ವಾಮಿಗಳಿಗೆ ವಸತಿ ಕಲ್ಪಿಸಿದ್ದ ಜಾನ್ ಬಿ.ಲೈಯಾನ್’ನ ಆರು ವರ್ಷದ ಮೊಮ್ಮಗಳು ಕಾರ್ನೇಲಿಯಾ ಕಾಂಗರ್ ಸ್ವಾಮಿ ಶಂಕರಾನಂದರ ಪ್ರೇರೇಪಣೆ ಮತ್ತು ಒತ್ತಾಯಕ್ಕೆ ಮಣಿದು ತನ್ನ ೬೮ ನೇ ವಯಸ್ಸಿನಲ್ಲಿ (೧೯೫೬-ಪ್ರಬುದ್ಧ ಭಾರತ) ಬರೆದ ನೆನಪುಗಳಲ್ಲಿ ಸ್ವಾಮಿಗಳು ಹಣವನ್ನು ಎಣಿಸಲೂ ಬಾರದಷ್ಟು ಮುಗ್ದರಾಗಿದ್ದರು. ಅವರ ಹತ್ತಿರ ಪರ್ಸ್ ಇರಲಿಲ್ಲವಾದ್ದರಿಂದ ಭಾಷಣಗಳನ್ನು ನೀಡಿದಾಗ ಕೊಟ್ಟ ಹಣವನ್ನು ಕರವಸ್ತ್ರದಲ್ಲಿ ಕಟ್ಟಿಕೊಂಡು ಬಂದು ಅಜ್ಜಿಯ ಮುಂದೆ ಮುಗ್ದ ಬಾಲಕನಂತೆ ನಿಲ್ಲುತ್ತಿದ್ದರು. ಆಗ ಅಜ್ಜಿ ಹಣವನ್ನು ಮುಖ ಬೆಲೆಗೆ ತಕ್ಕಂತೆ ಬೇರ್ಪಡಿಸಿ ಎಣಿಸಿ ಕೊಟ್ಟಾಗ ಅವರ ಮುಖ ಅರಳುತ್ತಿದ್ದಿತು ಎಂದು ಬರೆದಿದ್ದಾಳೆ.(113) ಇದರಂತಹ ಹಸಿ ಸುಳ್ಳು ಇನ್ನೊಂದಿರಲಾರದು. ಸ್ವಾಮಿಗಳು ೧೮೯೩ ಸೆಪ್ಟೆಂಬರ್ ೧೧ ರಿಂದ ೨೭ರವೆರೆಗೆ ಜಾನ್ ಬಿ. ಲೈಯಾನ್ ಮನೆಯಲ್ಲಿದ್ದರು. ಆಗ ಅವರು ಹಣ ಪಡೆದು ಭಾಷಣಗಳನ್ನು ಮಾಡಿರಲು ಪ್ರಾರಂಭಿಸಿರಲಿಲ್ಲ. ವಕೀಲ ವಿಶ್ವನಾಥದತ್ತನ ಮಗ ನರೇಂದ್ರನಾಥ ದತ್ತ ಹಣ ಎಣಿಸಲು ಬಾರದಷ್ಟು , ಅದರ ಪ್ರಾಮುಖ್ಯತೆ ತಿಳಿಯದಷ್ಟು ಮುಗ್ದ ಎನ್ನುವುದೇ ಒಂದು ನಗೆಯ ವಿಚಾರವಾಗಿದೆ.
ಹೊನ್ನು-ಹೆಣ್ಣನ್ನು ದೂರ ಇಡಬೇಕೆಂದು ರಾಮಕೃಷ್ಣರು ಬೋಧಿಸಿದ್ದರಾದರೂ ಹೊನ್ನಿಲ್ಲದೆ ಬದುಕುವುದು ಸಾದ್ಯವೇ ಇಲ್ಲ ಎಂದು ಅವರ ಯುವ ಸಂನ್ಯಾಸಿ ಶಿಷ್ಯರಿಗೆ ಮತ್ತು ಗೃಹಸ್ಥ ಭಕ್ತರಿಗೆ ಗೊತ್ತಾಗಿದ್ದಿತು. ಗುರುಗಳು ಬೋಧಿಸಿದ ಆದರ್ಶಗಳಿಗೆ ಅನುಗುಣವಾಗಿ ಯುವಕರುಗಳು ತಮ್ಮ ಮನೆಗಳಲ್ಲಿ ಜೀವನ ಸಾಗಿಸುವುದು ಕಷ್ಟ. ಅವರಿಗಾಗಿ ಒಂದು ಮಠ ಬೇಕೆಂದು ಬಲರಾಮ ಬಸು . ಸುರೇಂದ್ರನಾಥ ಮಿತ್ರ , ಮಹೇಂದ್ರ ನಾಥ ಗುಪ್ತ ಮುಂತಾದ ಗೃಹಸ್ಥ ಭಕ್ತರ ಅಭಿಪ್ರಾಯವಾಗಿದ್ದಿತು. ಯುವ ಶಿಷ್ಯರ ಬಗ್ಗೆ ಅನುಕಂಪ ಹೊಂದಿದ್ದ ಈ ಗೃಹಸ್ಥ ಭಕ್ತರಿಗೂ ಮೊದಮೊದಲಿಗೆ ನೆರವಾಗಲು ಸಾಧ್ಯವಾಗಲಿಲ್ಲ. ಒಂದೆರಡು ತಿಂಗಳುಗಳ ನಂತರ ಸುರೇಂದ್ರನಾಥ ಮಿತ್ರನ ಕನಸಿನಲ್ಲಿ ರಾಮಕೃಷ್ಣರು ಬಂದು ತಮ್ಮ ಹುಡುಗರಿಗೆ ತಕ್ಷಣವೇ ಏನಾದರೂ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು. ತಮ್ಮ ಕನಸಿನ ವಿಚಾರವನ್ನು ನರೇಂದ್ರನಾಥ ದತ್ತನಿಗೆ ತಿಳಿಸಿ ಬ್ರಹ್ಮಚಾರಿಗಳು ಇರಲು ಒಂದು ಬಾಡಿಗೆ ಮನೆಯನ್ನು ಹುಡುಕಲು ಹೇಳಿದರು. ಬ್ರಹ್ಮಚಾರಿಗಳು ಭವನಾಥ ಹುಡುಕಿದ್ದ ಬಾರಾನಗರದಲ್ಲಿದ್ದ ಭುವನದತ್ತರಿಗೆ ಸೇರಿದ್ದ ಶಿಥಿಲ ಮನೆಯನ್ನು ತಿಂಗಳಿಗೆ ರೂ ೧೧ ಬಾಡಿಗೆಗೆ ಪಡೆದರು. ಬಾರನಗರ ಮಠವನ್ನು ನಡೆಸಲು ಸುರೇಶ ಚಂದ್ರ ಆರಂಭದಲ್ಲಿ ತಿಂಗಳಿಗೆ ೩೦ ರೂ ಕೊಡುತ್ತಿದ್ದು ನಂತರದ ದಿನಗಳಲ್ಲಿ ರೂ ೧೦೦ಕ್ಕೆ ಹೆಚ್ಚಿಸಿದರು. ಆಗಾಗ್ಗೆ ಹೆಚ್ಚಿನ ದಿನಸಿ ಮತ್ತು ಆವಶ್ಯಕ ಸಾಮಗ್ರಿಗಳನ್ನು ಕಳಿಸುತ್ತಿದ್ದರು. ಕೆಲವೊಮ್ಮೆ ಅವರು ಕಳಿಸುತ್ತಿದ್ದ ಸಾಮಾನುಗಳು ಸಾಕಾಗದೆ ಯುವಕರು ಭಿಕ್ಷೆ ಬೇಡುತ್ತಿದ್ದರು. ೬/೭/೧೮೯೦, ರಂದು ಸ್ವಾಮಿಗಳು ಶಾರದಾನಂದನಿಗೆ ಬರೆದ ಪತ್ರದಿಂದ ಬಲರಾಮ ಬಸು ಮತ್ತು ಸತೀಶಚಂದ್ರರು ಸತ್ತು ಗುರುಭಾಯಿಗಳಿಗೆ ಆರ್ಥಿಕ ನೆರವು ನಿಂತಿದ್ದು ಗಿರೀಶ ಚಂದ್ರ ಘೋಷ್ ಆರ್ಥಿಕ ನೆರವು ನೀಡಿ ಅವರು ಬದುಕಲು ಸಹಾಯ ಮಾಡುತ್ತಿರುವುದು ಗೊತ್ತಾಗುತ್ತದೆ. ಸ್ವಾಮಿಗಳು ೧೫/೭/೧೮೯೦ ರಂದು ‘ ದಿವಂಗತ ಮಹೀಂದ್ರ ಮುಖರ್ಜಿಯವರ ಪತ್ನಿ ನಿಮಗಾಗಿ ಒಂದು ಮಠ ಕಟ್ಟಿಸಲು ಮನಸಾರೆ ಪ್ರಯತ್ನಿಸುತ್ತಿದ್ದಾಳೆ. ಸುರೇಂದ್ರನಾಥ ಮಿತ್ರ ರೂ ೧೦೦೦ ಬಿಟ್ಟು ಹೋಗಿರುವರು. ಇಲ್ಲಿಯ ಸಂಘದ ಬಗ್ಗೆ ನಿನ್ನದೇ ಆದ ಅಭಿಪ್ರಾಯವನ್ನು ಹೊಂದಿರುವುದು ಸಹಜ. ಸುದೃಶ್ಯ ಮತ್ತು ಸುಭಿಕ್ಷ ಇರುವ ಸ್ಥಳಗಳನ್ನು ನಾನು ಹುಡುಕುವೆ. ಅದೇ ನನಗೆ ಸಾಕು. ಸಂಘ ನನಗೇನೂ ದೊಡ್ದ ವಿಷಯವಲ್ಲ ಅಥವಾ ನನಗೆ ಅದರ ಅವಶ್ಯಕತೆಯಿಲ್ಲ ……….. ಮುಂದೆ ನನ್ನದೇ ಆದ ಯೋಜನೆಯಿದೆ. ಆದರೆ ಅದು ರಹಸ್ಯ.’ ಎಂದು ಶಾರದಾನಂದರಿಗೆ ಬರೆದ ಪತ್ರ ಗಮನಿಸಿದರೆ ಸ್ವಾಮಿಗಳಿಗೆ ಬೇರೆಯದೇ ಆದ ದೊಡ್ದ ಯೋಜನೆಯಿದ್ದಿತೆನ್ನುವುದು ಮುಂದಿನ ವಾರದಲ್ಲಿ ಪ್ರಮದದಾಸ ಮಿತ್ರರಿಗೆ ಬರೆದ ಪತ್ರದಿಂದ ಗೊತ್ತಾಗುತ್ತದೆ.
ಕಲಿಯುಗದ ಸಂನ್ಯಾಸಿಗಳಿಗೆ ಹಣ ಎಸೆದರೆ ಹೇಳಿದಂತೆ ಮಾಡುತ್ತಾರೆ ಎನ್ನುವ ಲೋಕ ಜ್ಞಾನ ಸ್ವಾಮಿಗಳಿಗೆ ಚೆನ್ನಾಗಿ ಗೊತ್ತಿದ್ದಿತು (೩/೩/೧೮೯೦). ಕಾಂಚನದಿಂದ ಕಾರ್ಯಸಿದ್ಧಿ ಎಂದು ತಿಳಿದಿದ್ದ ಸ್ವಾಮಿಗಳು ೨೬/೫/೧೮೯೦ ರಂದು ಪ್ರಮದದಾಸ ಮಿತ್ರರಿಗೆ ಪತ್ರ ಬರೆದು ರಾಮಕೃಷ್ಣರು ಬಂಗಾಳದಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ. ಅಂತಹ ಮಹಾತ್ಮರ ನೆನಪಿಗಾಗಿ ಅವರ ತಪೋಭೂಮಿ ಕಲ್ಕತೆಯಲ್ಲಿ ಒಂದು ಗುಡಿಯನ್ನು ಕಟ್ಟಬೇಕು. ಅದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ. ಇದಕ್ಕಾಗಿ ತಾವು ವಾರಣಾಸಿಯಲ್ಲಿ ಚಂದಾ ಎತ್ತಿರಿ ಎಂದು ಕೇಳಿಕೊಳ್ಳುವುದರ ಮೂಲಕ ಸ್ವಾಮಿಗಳು ಚಂದಾ ಎತ್ತುವ , ‘ಭಾರತದ ಕೆಲಸ’ಕ್ಕಾಗಿ (ರಾಮಕೃಷ್ಣ ಮಠದ ಸ್ಥಾಪನೆ) ಹಣ ಗಳಿಸುವ ದಾರಿಗಳನ್ನು ಹುಡುಕತೊಡಗಿದರು. ಪ್ರಮದದಾಸ ಮಿತ್ರರು ಇದಕ್ಕೆ ಒಪ್ಪದೆ ಸ್ವಾಮಿಗಳನ್ನು ಖಂಡಿಸಿದ್ದರು. ಇದಕ್ಕೆ ಉತ್ತರ ನೀಡುತ್ತ ರಾಮಕೃಷ್ಣ ಶಿಷ್ಯರ ಜೀವನಕ್ಕೆ ಒಂದು ಶಾಶ್ವತ ಮಠ ಮತ್ತು ರಾಮಕೃಷ್ಣರ ದೇವಾಲಯ ಕಟ್ಟಿಸಲು ದರೋಡೆ ಮಾಡಲು ಸಿದ್ಧ ಎನ್ನುವ “ದಿಟ್ಟ ನಿರ್ಧಾರ”ಕ್ಕೆ ಬಂದರು. (೨೬/೫/೧೮೯೦). ಮುಂದಿನ ದಿನಗಳಲ್ಲಿ ಅಲೆಮಾರಿಗಳಾಗಿ ಭಾರತ ಸಂಚಾರ ಕೈಗೊಂಡ ನಂತರ ಸಮಯ . ಸನ್ನಿವೇಶಗಳಿಗೆ ಅನುಗುಣವಾಗಿ ಸ್ವಾಮಿಗಳು ಈ ಮೂಲ ಉದ್ದೇಶ ಮುಂದಿನ ಮೂರುವರೆ ವರ್ಷ ಹಿನ್ನೆಲೆಗೆ ಸರಿಯಿತು.
ವಿಶ್ವ ಧರ್ಮ ಸಂಸತ್ತಿಗೆ ಬಂದ ಪ್ರತಿನಿಧಿಗಳೆಲ್ಲರೂ ಅದು ಮುಗಿದ ತಕ್ಷಣ ತಮ್ಮ ದೇಶಗಳಿಗೆ ಹಿಂದಿರುಗಲಿಲ್ಲ. ಅವರಲ್ಲಿ ಕೆಲವರಿಗೆ ವಿವಿಧ ಸಂಘ, ಸಂಸ್ಥೆ , ಚರ್ಚ್ , ಆಸಕ್ತರು ಮತ್ತು ವ್ಯಕ್ತಿಗಳಿಂದ ಭಾಷಣ ಕೊಡುವಂತೆ ಮನವಿಗಳು ಬರತೊಡಗಿದವು. ಆಯಾ ಧರ್ಮಗಳ ಅಧಿಕೃತ ಪ್ರತಿನಿಧಿಗಳ ಮೂಲಕ ವಿವಿಧ ಧರ್ಮಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಇದರ ಮೂಲ ಉದ್ದೇಶವಾಗಿದ್ದಿತು. ಭಾರತೀಯ ಪ್ರತಿನಿಧಿಗಳಿಗೆ ಇತರ ದೇಶಗಳ ಪ್ರತಿನಿಧಿಗಳಿಗಿಂತ ಚೆನ್ನಾಗಿ ಮಾತ್ರವಲ್ಲ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಬರುತ್ತಿದ್ದುದರಿಂದ ಅವರಿಗೆ ಹೆಚ್ಚಿನ ಅವಕಾಶಗಳಿದ್ದವು. ವಿಶ್ವ ಧರ್ಮ ಸಂಸತ್ತು ಮುಗಿದ ನಂತರ ಹಲವು ತಿಂಗಳುಗಳ ಕಾಲ ಪ್ರತಾಪಚಂದ್ರ ಮಜುಂದಾರ , ಬಿ.ಬಿ ನಗರ್ಕರ್, ಧರ್ಮಪಾಲ , ನರಸಿಂಹಾಚಾರಿ , ವೀರಚಂದ ಗಾಂಧಿ ; ಜಿಯಾನ್ನೆ ಸೊರಾಬ್ಜಿ ಭಾಷಣಗಳನ್ನು ನೀಡುತ್ತ ಅಮೆರಿಕ ಸುತ್ತ ತೊಡಗಿದರು. ಪ್ರತಾಪಚಂದ್ರ ಮಜುಂದಾರ , ವೀರಚಂದ ಗಾಂಧಿ ಮತ್ತು ಧರ್ಮಪಾಲರ ಭಾಷಣಗಳು ಅಮೆರಿಕದ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಅಮೆರಿಕದ ಸಂಘ , ಸಂಸ್ಥೆ . ಚರ್ಚ್’ಗಳು ತಮ್ಮಲ್ಲಿಗೆ ಉಪನ್ಯಾಸ ನೀಡಲು ಬರುತ್ತಿದ್ದ ಭಾಷಣಕಾರರಿಗೆ ಗೌರವ ಧನ ನೀಡುತ್ತಿದ್ದವು. ಕೆಲವು ಸಲ ಕೇಳುಗರೇ ಹಣ ಸಂಗ್ರಹಿಸಿ ಅವರಿಗೆ ಕೊಡುತ್ತಿದ್ದರು. ಇದು ಸ್ವಾಮಿಗಳಲ್ಲಿ ಹೊಸ ಆತ್ಮ ವಿಶ್ವಾಸ ಮತ್ತು ಕನಸುಗಳನ್ನು ಹುಟ್ಟು ಹಾಕಿದ್ದಿತು.
ಸ್ವಾಮಿಗಳು ಷಿಕಾಗೊದಿಂದ ೧೪೪ ಕಿ.ಮೀ ದೂರದ ಸ್ಟ್ರೀಟರ್ ಪಟ್ಟಣದಲ್ಲಿ ೫/೧೦/೧೮೯೩ ರಂದು ಉಪನ್ಯಾಸ ನೀಡಿದರು. ಇದರ ಪ್ರವೇಶ ಶುಲ್ಕ ನೆಲಮಹಡಿಗೆ ೨೫ ಸೆಂಟ್ಸ್ ಮತ್ತು ಬಾಲ್ಕನಿಗೆ ೩೫ ಸೆಂಟ್ಸ್ ನಿಗದಿಪಡಿಸಲಾಗಿದ್ದಿತು. (114) ಇದು ಅಮೆರಿಕದಲ್ಲಿ ಸ್ವಾಮಿಗಳ ಮೊದಲ ಸಂಪಾದನೆಯಂತೆ ಕಾಣುತ್ತದೆ. ಇಲ್ಲಿಂದ ಮುಂದೆ ಸ್ವಾಮಿಗಳ ಸಂಪಾದನೆಯ ವೃತ್ತಿ ವಿವಿಧ ಮಜಲುಗಳಲ್ಲಿ ಸಾಗತೊಡಗಿತು. ೧೦/೧೦/೧೮೯೩ ರಂದು ಶ್ರೀಮತಿ ಕೆನ್ನೆಟ್ ವುಡ್ಸ್’ಗೆ ‘ ಷಿಕಾಗೊ ವಿಶ್ವ ಧರ್ಮ ಸಂಸತ್ತಿನಿಂದ ಸಿಕ್ಕಿರುವ ಬಿಟ್ಟಿ ಪ್ರಚಾರವನ್ನು ಬಿಟ್ಟುಕೊಡುವಂತಿಲ್ಲ. ಇದಕ್ಕೆ ನಿಮ್ಮ ಸಹಮತವಿದೆ ಎಂದು ಖಂಡಿತವಾಗಿ ಭಾವಿಸುತ್ತೇನೆ…. ನಾನು ಸದ್ಯದಲ್ಲಿ ಷಿಕಾಗೊದ ಆಸುಪಾಸಿನಲ್ಲಿ ಭಾಷಣ ಮಾಡುತ್ತಿದ್ದೇನೆ. ಇಲ್ಲಿ ನನ್ನ ಕೆಲಸ ತೃಪ್ತಿಕರವಾಗಿದೆ ಎನಿಸುತ್ತಿದೆ. ನಾನೀಗ ಸ್ಟ್ರಿಟರ್’ನಿಂದ ಹಿಂದಿರುಗಿದೆ. ಅಲ್ಲಿ ನನ್ನ ಭಾಷಣಕ್ಕೆ ೩೦-೮೦ ಡಾಲರ್ ಸಿಕ್ಕಿತು’ ಎಂದಿದ್ದಾರೆ. ೨೬/೧೦/೧೮೯೩ ರಂದು ಜಾನ್ ಹೆನ್ರಿ ರೈಟ್’ಗೆ ‘ ಬಹಳ ದೂರದೇಶದಿಂದ ಇಲ್ಲಿಗೆ ಬಂದಿರುವ ಅನೇಕರು ಯಾವಯಾವುದೋ ಉದ್ದೇಶಗಳನ್ನು ಇಟ್ಟುಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿರುವರು. ಪ್ರತಿಯೊಂದಕ್ಕೂ ಗೆಲುವು ಸಿಕ್ಕುವುದು ಅಮೆರಿಕದಲ್ಲಿ ಮಾತ್ರ ಸಾದ್ಯ. ಆದರೆ ನಾನು ಚೆನ್ನಾಗಿ ಯೋಚಿಸಿ ನನ್ನ ಉದ್ದೇಶ ಕುರಿತಾಗಿ ಮಾತನಾಡುವುದನ್ನು ಬಿಟ್ಟಿದ್ದೇನೆ. ಏಕೆಂದರೆ ಈಗ ಕ್ರೈಸ್ತನಲ್ಲದವನು ತನ್ನ ಉದ್ದೇಶಕ್ಕಿಂತ ಹೆಚ್ಚಾಗಿ ಸಾಧಿಸುವನು ಎನ್ನುವುದರಲ್ಲಿ ಸಂದೇಹವಿಲ್ಲ. ನಾನು ನನ್ನ ಪಾಲಿಗಾಗಿ ಶ್ರದ್ಧೆಯಿಂದ ಕೆಲಸಕ್ಕೆ ತೊಡಗುತ್ತೇನೆ. ಆದರೆ ಉದ್ದೇಶವನ್ನು ಒಳಗೆ ಇಟ್ಟುಕೊಂಡು ಇತರ ಭಾಷಣಕಾರನಂತೆ ನಾನು ಕೆಲಸ ಮಾಡುತ್ತೇನೆ…..ಹಣ ಸಂಪಾದನೆ ಮಾಡುವ ವಿಚಾರದಲ್ಲಿ ನಾನು ಜಯಶೀಲನಾಗಬಹುದು. ಆದರೆ ಈ ಉದ್ಯಮದಲ್ಲಿ ನಾನು ಹೊಸಬ ; ಕ್ರಮೇಣ ಇದರ ರಹಸ್ಯವನ್ನು ತಿಳಿಯುತ್ತೇನೆ. ಷಿಕಾಗೊ ನಗರದಲ್ಲಿ ನಾನು ಬಹಳ ಜನಪ್ರಿಯನಾಗಿರುವೆನು. ಆದ್ದರಿಂದ ನಾನು ಇಲ್ಲಿ ಸ್ವಲ್ಪ ಕಾಲವಿದ್ದು ಹಣ ಗಳಿಸಬೇಕೆಂದಿರುವೆ ‘ ಎಂದು ತಮ್ಮ ಗುಪ್ತ ಕಾರ್ಯಸೂಚಿ ಬಿಚ್ಚಿಟ್ಟಿದ್ದರು.
೨/೧೧/೧೮೯೩ ರಂದು ಅಳಸಿಂಗ ಪೆರುಮಾಳ್’ಗೆ ಬರೆದ ಪತ್ರದಲ್ಲಿ ‘ ಪೂನಾದಿಂದ ಬಂದ ಕ್ರೈಸ್ತ ಮಹಿಳೆ ಸೊರಾಬ್ಜಿ ಎಂಬಾಕೆ ಮತ್ತು ಜೈನ ಧರ್ಮದ ಪ್ರತಿನಿಧಿ ಗಾಂಧಿ ಎನ್ನುವವರು ಈ ದೇಶದಲ್ಲಿ ಇನ್ನೂ ಕೆಲಕಾಲವಿದ್ದು ಅನಂತರ ಉಪನ್ಯಾಸ ಸಂಚಾರಕ್ಕೆ ಹೊರಡುವರು. ಅವರು ಜಯಶೀಲರಾಗಲಿ ಎನ್ನುವುದೇ ನನ್ನ ಹಾರೈಕೆ. ಇಲ್ಲಿ ಉಪನ್ಯಾಸ ಮಾಡುವದೊಂದು ಲಾಭದಾಯಕ ಕಸುಬು. ಕೆಲವು ವೇಳೆ ಅದರಿಂದ ಚೆನ್ನಾಗಿ ಸಂಪಾದನೆಯಾಗುವುದು. ಶ್ರೀಮಾನ್ ಇಂಗರ್’ಸಾಲ್ ಒಂದು ಉಪನ್ಯಾಸಕ್ಕೆ ೫೦೦ ಡಾಲರ್ ಸಂಪಾದಿಸುತ್ತಾನೆ. ಈತ ಈ ದೇಶದಲ್ಲಿ ಹೆಸರಾದ ವಾಗ್ಮಿ. ಈ ಪತ್ರವನ್ನು ಪ್ರಕಟಿಸಬೇಡ. (ಈ ಪತ್ರವನ್ನು) ನೀನು ಓದಿದ ನಂತರ ಖೇತ್ರಿ ಮಹಾರಾಜರಿಗೆ ಕಳಿಸು….’ ಎಂದು ಮತ್ತು ೨೧/೧೧/೧೮೯೩ ರಂದು ಶ್ರೀಮತಿ ಹೇಲ್’ಗೆ ಮಿನಿಯಾಪೊಲಿಸ್’ನಿಂದ ಬರೆದ ಪತ್ರದಲ್ಲಿ ‘ ಆಪ್'ಡೈಕ್ ಇಲ್ಲಿನ ಜಾಗಗಳನ್ನು ತೋರಿಸಿ ವಿಶ್ವವಿದ್ಯಾಲಯಕ್ಕೆ ಕರೆದುಕೊಂಡು ಹೋದರು. ಅಲ್ಲಿಯವರು ಒಳ್ಳೆಯ ಕೇಳುಗರು. ೧೦೦ ಡಾಲರ್ ಸಿಕ್ಕಿತು. ಇದನ್ನು ಬ್ಯಾಂಕ್ ಡ್ರಾಫ್ಟ್ ರೂಪದಲ್ಲಿ ಪಡೆದೆ ೪೦ ಸೆಂಟ್ ಖರ್ಚಾಯಿತು. ಪ್ರಚಾರಕರ ರೈಲ್ವೇ ಟಿಕೆಟ್ ಸಿಗಲಿಲ್ಲ.’ ಎಂದು ಬರೆದಿದ್ದಾರೆ.
ಸ್ವಾಮಿಗಳ ಈ ಪತ್ರಗಳಿಂದ ಭಾರತದ ಇತರ ಪ್ರತಿನಿಧಿಗಳು ಭಾಷಣದ ಮೂಲಕ ಹಣ ಸಂಪಾದಿಸುತ್ತಿದ್ದರು. ಸ್ವಾಮಿಗಳು ಅದನ್ನೇ ಮಾಡಬೇಕೆಂದಿದ್ದಾರೆ. ಇದರ ಹಿಂದಿರುವ ಉದ್ದೇಶ ಭಾರತದಲ್ಲಿ ಒಂದು ಮಠ ಹಾಗೂ ಕಾಲೇಜನ್ನು ಕಟ್ಟಬೇಕೆಂದಿರುವುದು. ಆದರೆ ಈ ಉದ್ದೇಶ ಇತರರಿಗ ಗೊತ್ತಾಗದೆ ಸ್ವಾಮಿಗಳು ಧರ್ಮಪ್ರಚಾರ ಮಾಡುತ್ತಿದ್ದಾರೆ ಎನ್ನುವಂತೆ ಸಾಧಿಸಬೇಕು ಎನ್ನುವ ಹಂಬಲ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಕೆಲಸಕ್ಕೆ ಸೇರಿರುವವರು ಖುಷಿಯಿಂದ ತಮ್ಮ ಗಳಿಕೆಯನ್ನು ಹೇಳಿಕೊಳ್ಳುವಂತೆ ಸ್ವಾಮಿಗಳು ಹೇಳಿಕೊಳ್ಳುತ್ತಿದ್ದಾರೆ. ಈ ಸ್ಥಿತಿಯಲ್ಲಿ ಅಧ್ಯಾತ್ಮ , ಧರ್ಮ , ಮುಕ್ತಿಗಳು ಹಿಂದಕ್ಕೆ ಸರಿದು ಭಾಷಣ ನೀಡುವುದು ಅವರ ಕಸುಬಾಗುವ ಹಂತ ತಲುಪಿತು. ತಮ್ಮ ಭಾಷಣಗಳು ಗಳಿಕೆಯ ದೃಷ್ಟಿಯಿಂದ ಯಶಸ್ವಿಯಾಗುತ್ತಿರುವುದು ಸ್ವಾಮಿಗಳ ಚಿಂತನೆಗೆ ತಿರುವುಗಳನ್ನು ತರತೊಡಗಿ ಅವರು ಇತರರಿಗಿಂತ ಭಿನ್ನವಾದ ದಾರಿ ತುಳಿಯಲು ಕಾರಣವಾಯಿತು. ಅಮೆರಿಕದಲ್ಲಿ ಉತ್ತಮ ಭಾಷಣಕಾರರೊಂದಿಗೆ ಒಪ್ಪಂದ ಮಾಡಿಕೊಂಡು , ನಿರ್ದಿಷ್ಟ ಕರಾರುಗಳ ಮೂಲಕ ಅವರಿಗೆ ಹಣ ಸಂದಾಯ ಮಾಡಿ ಉಪನ್ಯಾಸಗಳನ್ನು ವಾಣಿಜ್ಯೀಕರಿಸುವ ಮತ್ತು ಉಪನ್ಯಾಸ ಸಂಚಾರಗಳನ್ನು ಏರ್ಪಡಿಸುವ ಪದ್ದತಿಯಿದ್ದಿತು. ಇದಕ್ಕಾಗಿ ಹಲವು ಖಾಸಗಿ ಸಂಸ್ಥೆಗಳಿದ್ದವು. ನ್ಯೂಯಾರ್ಕ್’ನ ಪಾಂಡ್ಸ್ ಲೆಕ್ಚರ್ ಬ್ಯೂರೋ ಮತ್ತು ಷಿಕಾಗೊದ ಕ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೋ ಬಹು ಖ್ಯಾತವಾಗಿದ್ದವು. ಭಾರತದಲ್ಲಿ ನೌಕರಿ ಹಿಡಿದು ಆದಾಯ ಗಳಿಸುವಲ್ಲಿ ಸೋತಿದ್ದ ಸ್ವಾಮಿಯವರಿಗೆ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಉಪನ್ಯಾಸ ಕೊಡುವುದನ್ನು ಆದಾಯದ ಮೂಲವಾಗಿ ಪರಿವರ್ತಿಸಬಹುದೆಂದು ಮನದಟ್ಟಾಗಿದ್ದಿತು. ಈ ಹಿನ್ನೆಲೆಯಲ್ಲಿ ಅವರು ಅಮೆರಿಕನ್ನರಲ್ಲಿ ದಾನ ಕೇಳುವ ಬದಲು ಉಪನ್ಯಾಸ ವೃತ್ತಿಯ ಮೂಲಕ ಹಣ ಗಳಿಸಲು ಯತ್ನಿಸತೊಡಗಿದರು. ಭಾಷಣಗಳನ್ನು ಮಾಡಿ ಸಂಪಾದಿಸುವ ಸ್ವಾಮಿಗಳ ಉತ್ಸಾಹ ಮುಂದಿನ ದಿನಗಳಲ್ಲಿಯ ಮುಂದುವರೆದಿದ್ದಿತು. ಸ್ವಾಮಿಗಳು ತನ್ನನ್ನು ಅಮೆರಿಕಕ್ಕೆ ಕರೆದೊಯ್ದು ಅಲ್ಲಿ ಯಾವುದಾದರೂ ಲೆಕ್ಚರ್ ಬ್ಯೂರೊ ಜೊತೆ ಒಪ್ಪಂದ ಮಾಡಿಕೊಂಡು , ಉಪನ್ಯಾಸಗಳನ್ನು ಕೊಡಿಸಿ ಹಣ ಸಂಪಾದಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆಂದು ಮಾರ್ಗರೆಟ್ ನೋಬಲ್ ೭/೬/೧೮೯೯ ರಂದು ಜೊಸೆಫಿನ್ ಮೆಕ್ಲಿಯಾಡ್’ಗೆ ಬರೆದ ಪತ್ರದಲ್ಲಿ ತಿಳಿಸಿದ್ದಳು. (115)
ಶಾಶ್ವತ ನೆಲೆ ಇಲ್ಲದಿದ್ದರೆ ಭಾರತದ ಅಸಂಖ್ಯಾತ ಅಲೆಮಾರಿ ಸಂನ್ಯಾಸಿಗಳಂತೆ ತಾವೂ ಕೂಡ ಕಾಲಗರ್ಭದಲ್ಲಿ ಕಣ್ಮರೆಯಾಗುವುದು ಖಚಿತವಾಗಿದ್ದಿತು. ರಾಮಕೃಷ್ಣರ ಮಠವನ್ನು ಕಟ್ಟಲು ಬೇಕಾದ ಸಂಪನ್ಮೂಲಗಳು ಭಾಷಣಗಳಲ್ಲಿ ಕಾಣತೊಡಗಿದವು. ಹಾಗಾಗಿ ವಿಶ್ವ ಧರ್ಮ ಸಂಸತ್ತಿನ ಕೊನೆ ಅವರ ಉಪನ್ಯಾಸ ವೃತ್ತಿಯ ಆರಂಭವಾಯಿತು. ಲೌಕಿಕ ಜೀವನದ ನಿರರ್ಥಕತೆ , ಶಾಶ್ವತವಾದ ಆತ್ಮ . ಧರ್ಮ, ಮುಕ್ತಿ ಮುಂತಾದವುಗಳ ಬಗ್ಗೆ ವೇದಿಕೆಗಳಿಂದ ಬೋಧಿಸುವ ಎಲ್ಲ ಗುರುಗಳ ಕೊನೆಯ ಗುರಿ ಈ ಅಶಾಶ್ವತ ಭೂಮಿಯ ಮೇಲೆ ಒಂದು ನಿರ್ದಿಷ್ಟ ವಿಳಾಸವಿರುವ ಒಂದು ಸಂಸ್ಥೆ ಅಥವಾ ಮಠವನ್ನು ಸ್ಥಾಪಿಸುವುದು. ಮಠ ಅಥವಾ ಆಶ್ರಮ ಸ್ಥಾಪನೆಗೆ ಸಾವಿರ ಧಾರ್ಮಿಕ , ಸಾಮಾಜಿಕ, ಸಾಂಸ್ಕೃತಿಕ ಸಮರ್ಥನೆಗಳನ್ನು ಕೊಡಬಹುದಾದರೂ ಆ ಎಲ್ಲ ಕೆಲಸಗಳು ಲೌಕಿಕವೇ. ಭವಬಂಧನದಲ್ಲಿ ಸಿಲುಕಿರುವ ಸಾಮಾನ್ಯ ಮನುಷ್ಯ ಒಂದು ಕಂಪೆನಿಯನ್ನು ಪ್ರಾರಂಭಿಸಿ ಬೆಳೆಸಲು ಮಾಡುವ ಹೋರಾಟಕ್ಕಿಂತ ಧಾರ್ಮಿಕ ಸಂಸ್ಥೆಯನ್ನು ಕಟ್ಟುವುದು ಬೇರೆಯಲ್ಲ. ಒಂದು ಅಧ್ಯಾತ್ಮದ ಸೋಗಿನಲ್ಲಿರುವ ಲೌಕಿಕ. ಇನ್ನೊಂದು ಶುದ್ಧ ಲೌಕಿಕ. ಸ್ವಾಮಿಗಳು ಬಹು ಹಿಂದಿನಿಂದ ಮಾಡಬೇಕೆಂದಿದ್ದ ಭಾರತದ ಕೆಲಸ ಇದೇ ಆಗಿದ್ದಿತು. ಆತ್ಮೋದ್ಧಾರದ ಎಲ್ಲ ಘೋಷಣೆಗಳು ಕೊನೆಗೆ ಲೌಕಿಕ, ಸಾಮಾಜಿಕವಾಗಿ ಪರಿವರ್ತನೆಯಾಗುವುದೇ ಹೀಗೆ .
ಭಾಷಣ ನಿರ್ವಹಣೆಯ ಕಂಪೆನಿಯ ಮುಖ್ಯಸ್ಥ ಸ್ಲೇಟನ್ ವ್ಯವಹಾರದ ಭಾಗವಾಗಿ ಹೊಸ ಭಾಷಣಕಾರರನ್ನು ಹುಡುಕುತ್ತಿದ್ದು , ಆತನ ಪರಿಚಿತನಾಗಿದ್ದ ರೆ. ಡಾ. ಡಬ್ಲ್ಯು.ಎಚ್. ಥಾಮಸ್ ಸ್ವಾಮಿಗಳ ಹೆಸರನ್ನು ಸೂಚಿಸದಂತಿದೆ. ನವೆಂಬರ್ ಮೊದಲ ವಾರದಲ್ಲಿ ( ೩/೧೧/೧೮೯೩ ಇರಬಹುದು) ಸ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೋ ಕಂಪೆನಿಯೊಂದಿಗೆ ಮೂರು ವರ್ಷಗಳ ಕಾಲ ಉಪನ್ಯಾಸಗಳನ್ನು ಕೊಡುವ ಅದಕ್ಕೆ ಪ್ರತಿಯಾಗಿ ಹಣ ಪಡೆಯುವ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಧೀರ ವೇದಾಂತಿ , ಲೌಕಿಕ ಅನಾಸಕ್ತ , ಹೆಣ್ಣು-ಹೊನ್ನುಗಳನ್ನು ಗೆದ್ದ ಸ್ವಾಮಿಗಳು ತಾವೇ ಹೆಣೆದುಕೊಂಡ ಭಾಷಣಗಳ ಮಾಯಾಜಾಲದಲ್ಲಿ ಬಂಧಿಯಾದರು. ಇದರ ಪರಿಣಾಮವಾಗಿ ಅವರ ನಡು ಪಡುವಣ ಪ್ರದೇಶದ ಉಪನ್ಯಾಸ ಸಂಚಾರಗಳು ೨೦ ನವೆಂಬರ್’ನಿಂದ ಅಧಿಕೃತವಾಗಿ ವೇಳಾಪಟ್ಟಿಯ ರೂಪದಲ್ಲಿ ಪ್ರಾರಂಭವಾದವು. (116)
ಸ್ವಾಮಿಗಳು ಸ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೋದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ ಅವರ ಪ್ರವಾಸ ಕಾರ್ಯಕ್ರಮದಿಂದ ಪ್ರಾರಂಭಿಸಿ , ಭಾಷಣಗಳ ಪ್ರಚಾರ , ನಿರ್ವಹಣೆಯನ್ನು ಸಂಪೂರ್ಣ ಅವರೇ ಹೊರತೊಡಗಿದರು. ನಿಗದಿತ ದಿನ , ನಿಗದಿತ ಸ್ಥಳದಲ್ಲಿ ಭಾಷಣ ಮಾಡುವುದಷ್ಟೇ ಸ್ವಾಮಿಗಳ ಕೆಲಸವಾಗಿದ್ದಿತು. ಅಮೆರಿಕದ ಉಪನ್ಯಾಸ ಸಂಚಾರಗಳನ್ನು ಏರ್ಪಡಿಸುತ್ತಿದ್ದ ಕಂಪೆನಿಗಳು ಆ ಕಾಲದಲ್ಲಿ ಕರ್ನಾಟಕದಲ್ಲಿದ್ದ ವೃತ್ತಿಪರ ನಾಟಕ ಕಂಪೆನಿಗಳಿಗಿಂತ ಭಿನ್ನವಾಗಿರಲಿಲ್ಲ. ಅವು “ ರಸಿಕರೇ ಕೇಳಲು ಮರೆಯದಿರಿ; ಮರೆತು ನಿರಾಶರಾಗದಿರಿ” ವೈಖರಿಯಲ್ಲಿಯೇ ಪ್ರಚಾರ ಮಾಡುತ್ತಿದ್ದವು. ಆಯೋಜಿಸಿದ್ದ ಕಾರ್ಯಕ್ರಮವನ್ನು ಸಾದ್ಯವಾದಷ್ಟು ಮಟ್ಟಿಗೆ ಪ್ರಚಾರ ಮಾಡಿ ಹಣ ಗಳಿಸುವುದೇ ಕಂಪೆನಿಗಳ ಗುರಿಯಾಗಿದ್ದಿತು. ಕಂಪೆನಿಗಳೊಂದಿಗೆ ಇಂತಹ ಉಪನ್ಯಾಸ ಸಂಚಾರಕ್ಕೆ ಒಪ್ಪಂದ ಮಾಡಿಕೊಂಡಿದ್ದ ಒಬ್ಬ ಭಾಷಣಕಾರ ೧೮೯೦ ರಲ್ಲಿ ತನ್ನ ಅನುಭವವನ್ನು ಹೀಗೆ ದಾಖಲಿಸಿದ್ದಾನೆ- ‘ನೀವು ಉಪನ್ಯಾಸ ಸಂಚಾರಕ್ಕೆ ಅಮೆರಿಕಕೆ ಬಂದರೆ ದೊಡ್ಡ ಗಾತ್ರದ ಕಲ್ಲಚ್ಚಿನ ನಿಮ್ಮ ಚಿತ್ರಗಳು ಊರಿನ ಗೋಡೆಗಳ ಮೇಲೆ , ಹೋಟೆಲ್’ಗಳ ಪ್ರವೇಶ ದ್ವಾರದಲ್ಲಿ , ಅಂಗಡಿಗಳ ಕಿಟಕಿಗಳ ಮೇಲೆ ಎಲ್ಲೆಂದರಲ್ಲಿ ಕಂಡುಬಂದು ನಿಮ್ಮ ಮುಖವನ್ನೇ ದಿಟ್ಟಿಸಿ ನೋಡುತ್ತಿವೆ ಎನಿಸುತ್ತದೆ. ನಿಮ್ಮ ಮುಖವೇ ಊರಿನ ತುಂಬ ಕಾಣುತ್ತದೆ. ನೀವು ಶಾಂತಿ ಮತ್ತು ಖಾಸಗಿತನ ಬಯಸುವಿರಾದರೆ ಅಮೆರಿಕದಲ್ಲಿ ಉಪನ್ಯಾಸ ಸಂಚಾರಕ್ಕೆ ಹೋಗಬೇಡಿ’ (117)
ಸ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೊ ನೀಡಿದ ಒಂದು ಜಾಹಿರಾತಿನಲ್ಲಿ ‘ ಖ್ಯಾತ ಹಿಂದೂ ಸಂನ್ಯಾಸಿ ಸ್ವಾಮಿ ವಿವೇಕಾನಂದ ಕೊನೆಯ ಬಾರಿ ಡೆ ಮೊಯಿನ್ಸ್’ನಲ್ಲಿ ಅತ್ಯಂತ ಆಸಕ್ತಿದಾಯಕವಾದ ‘ಲೈಫ್ ಇನ್ ಇಂಡಿಯಾ’ ಎನ್ನುವ ಭಾಷಣ ಮಾಡುತ್ತಾರೆ. ಈ ಖ್ಯಾತ ಹಿಂದೂ ೩೦ ವರ್ಷದ ಮೇಧಾವಿ. ಆತ ಅಮೆರಿಕದ ಹೆಂಗಸರು ಚೆಲುವೆಯರು , ಗಂಡಸರು ವ್ಯಾವಹಾರಿಕರು ಎನ್ನುತ್ತಾನೆ’ ಎಂದಿದ್ದಿತು. ಇನ್ನೊಂದು ಪ್ರಚಾರ ಪತ್ರದಲ್ಲಿ ಸ್ವಾಮಿಗಳ ದೊಡ್ಡ ಚಿತ್ರ ಅದರೊಂದಿಗೆ ‘ವೇದಿಕೆಯ ಮಹಾ ದೈತ್ಯ’ ಎನ್ನುವ ಘೋಷಣೆ. ಅದರ ನಾಲ್ಕು ಮೂಲೆಗಳಲ್ಲಿ ‘ ದೈವದತ್ತ ಮಹಾ ವಾಗ್ಮಿ’ , ‘ತನ್ನ ಜನಾಂಗದ ಮಾದರಿ ಪ್ರತಿನಿಧಿ’, ಇಂಗ್ಲಿಷ್ ಭಾಷೆಯ ಆಚಾರ್ಯ ‘ , ವಿಶ್ವ ಧರ್ಮ ಸಂಸತ್ತಿನ ಸಂವೇದಕ’ ಎಂದು ಬರೆಯಲಾಗಿದ್ದಿತು. ಇದರೊಂದಿಗೆ ಸ್ವಾಮಿಗಳ ನಿಲುವು , ಬಣ್ಣ, ಆಕರ್ಷಣೆ , ಉಡುಗೆ , ತೊಡುಗೆಗಳ ವರ್ಣನೆಗಳಿರುತ್ತಿದ್ದವು. (118) ಸ್ವಾಮಿ ವಿವೇಕಾನಂದ ಎನ್ನುವ ಹೆಸರು ಅಮೆರಿಕನ್ನರಿಗೆ ನೆನಪಿಡಲು ಮತ್ತು ಉಚ್ಛರಿಸಲು ತೊಡಕಿನದಾಗಿದ್ದರಿಂದ ಸ್ಲೇಟನ್ ಲೈಸಿಯಂ ಕಂಪೆನಿ ಅದನ್ನು Vive Kananada’ ಎಂದು ಬಿಡಿಸಿ ಬರೆಯತೊಡಗಿತು. ಬರಬರುತ್ತ Vive ಕಳಚಿ kananda ಮಾತ್ರ ಉಳಿದು ಪತ್ರಿಕೆಗಳು , ಜನ ಹಾಗೆಯೇ ಹೇಳತೊಡಗಿದರು. (119)
ಹಾಕಿದ ಬಂಡವಾಳಕ್ಕೆ ಕೊಡುವ ಸಂಬಳಕ್ಕೆ ತಕ್ಕಂತೆ ದುಡಿಸಿಕೊಳ್ಳುವ ಕಲೆ ಅಮೆರಿಕದ ಕಾರ್ಪೊರೆಟ್ ಕಂಪೆನಿಗಳ ಮಂತ್ರವಾಗಿದ್ದು ಅದಕ್ಕೆ ಸಂನ್ಯಾಸಿ , ಸಂಸಾರಿ ಎನ್ನುವ ಭೇದವಿರಲಿಲ್ಲ. ಕ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೋ ತನ್ನ ಒಪ್ಪಂದಕ್ಕೆ ಅನುಗುಣವಾಗಿ ಸ್ವಾಮಿಗಳನ್ನು ಭಾಷಣಗಳಿಗಾಗಿ ಊರಿಂದ ಊರಿಗೆ ಅಲೆಸತೊಡಗಿತು. ಸ್ವಾಮಿಗಳು ಶ್ರೀಮತಿ ಹೇಲ್’ಗೆ ೨೦/೨/೧೮೯೪ ರಂದು ಬರೆದ ಇದನ್ನು ಪತ್ರ ಖಚಿತಪಡಿಸುತ್ತದೆ. ‘ ಇಲ್ಲಿ ಮಾಡಬೇಕಾದ ಪ್ರವಚನಗಳು ಮುಗಿದವು. ಕೆಲವರು ಒಳ್ಳೆಯ ಸ್ನೇಹಿತರನ್ನು ಪಡೆದುಕೊಂಡೆ. ಅವರಲ್ಲಿ ಶ್ರೀ ಪಾಮರ್ ಒಬ್ಬರು. ಹಿಂದೆ ನಡೆದ ಜಾಗತಿಕ ಮೇಳದ ಅಧ್ಯಕ್ಷರು. ಸ್ಲೇಟನ್ ವ್ಯವಹಾರದಿಂದ ನನಗೆ ತೀವ್ರ ಜುಗುಪ್ಸೆ ಉಂಟಾಗಿದೆ. ಅದರಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿರುವೆನು. ಇವರ ಜೊತೆ ಸೇರಿದ್ದರಿಂದ ಕನಿಷ್ಟ ೫೦೦೦ ಡಾಲರ್ ನನ್ನ ಕೈಬಿಟ್ಟಿವೆ. ……..ಪ್ರವಚನಗಳನ್ನು ಇಲ್ಲಿ ಏರ್ಪಾಡು ಮಾಡಿದ್ದವರಿಗೆ ಕನಿಷ್ಟ ೧೦೦೦ ಡಾಲರ್ ದೊರೆಯಿತು. ….ಅಮೆರಿಕನ್ನರು ನನ್ನನ್ನು ಇಷ್ಟಪಡುವುದನ್ನು ನೋಡಿದರೆ ಈ ವೇಳೆಗೆ ನಾನು ಬಹಳಷ್ಟು ಹಣ ಪಡೆಯಬಹುದಿತ್ತು. ಆದರೆ ಹಾಗಾಗದಿರಲು ದೇವರು ಜಿಮ್ಮಿ ಮಿಲ್ಸ್ ಮತ್ತು ಸ್ಲೇಟನ್ ಅವರನ್ನು ಕಳಿಸಿದ್ದಾನೆ. ಅವನ ರೀತಿ ನೀತಿಗಳನ್ನು ತಿಳಿಯಲಾಗದು. ರಹಸ್ಯವಾದ ವಿಷಯವೊಂದಿದೆ. ಸುಳ್ಳುಗಾರ ಸ್ಲೇಟನ್’ನಿಂದ ಬಿಡಿಸಲು ಅವರು (ಪಾಮರ್) ಷಿಕಾಗೊಗೆ ಹೋಗಿದ್ದಾರೆ. ಅವರು ಆ ಪ್ರಯತ್ನದಲ್ಲಿ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ. ಅನೇಕ ನ್ಯಾಯವಾದಿಗಳು ನನ್ನ ಒಪ್ಪಂದವನ್ನು ನೋಡಿದ್ದಾರೆ. ಅದೊಂದು ಅವಮಾನಕರವೆಂದು ಮತ್ತು ಮೋಸವೆಂದು ಅದನ್ನು ಮುರಿದು ಹಾಕಬಹುದೆಂದು ಹೇಳಿದ್ದಾರೆ. ಆದರೆ ನಾನೊಬ್ಬ ಸಂನ್ಯಾಸಿ, ನನಗೆ ಸ್ವಯಂ ರಕ್ಷಣೆ ಬೇಡ. ಆದ್ದರಿಂದ ಇವುಗಳನ್ನೆಲ್ಲ ಬಿಸುಟು ಭಾರತಕ್ಕೆ ಹೋಗುವೆ ‘.
ಇದಾದ ಎರಡು ದಿನದ ನಂತರ ಶ್ರೀಮತಿ ಹೇಲ್’ಗೆ (೨೨/೨/೧೮೯೪) ‘ ಒಪ್ಪಂದಕ್ಕಾಗಿ ೨೦೦ , ಖಾಸಗಿ ಪ್ರವಚನದಿಂದ ೧೨೫ ಮತ್ತು ೧೧೩ ಮತ್ತು ಒಬ್ಬ ಮಹಿಳೆಯಿಂದ ಬಳುವಳಿಯಾಗಿ ೧೦೦ ಡಾಲರ್ ನನಗೆ ದೊರೆತಿವೆ- ದಯವಿಟ್ಟು ಸ್ಲೇಟನ್ ಅವರಿಗೆ ಉಳಿದ ಹಣದ ವಿಷಯ ತಿಳಿಯುವುದು ಬೇಡ. ಏಕೆಂದರೆ ನಾನು ಅವರಿಂದ ಬೇರೆಯಾಗುತ್ತಿದ್ದೇನೆ ‘ ಎಂದು ಬರೆದರು. ಸ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೊದಿಂದ ಸ್ವಾಮಿಗಳಿಗೆ ಅನ್ಯಾಯವಾಗಿದ್ದಿತೋ , ಸ್ವಾಮಿಗಳು ಒಂದು ರೀತಿಯಲ್ಲಿ ಶೋಷಣೆಗೆ ಒಳಗಾಗಿದ್ದರೋ ಅಥವಾ ಅನನುಭವದಿಂದಾಗಿ ಆ ಸಂಸ್ಥೆಯ ಕರಾರುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಒಪ್ಪಂದ ಮಾಡಿಕೊಂಡಿದ್ದರೋ ತಿಳಿಯದು. ಆದರೆ ಸ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೋ ಜೊತೆ ಮಾಡಿಕೊಂಡ ಒಪ್ಪಂದ ಜಾರಿಯಲಿರುವಾಗಲೇ ಸ್ವಾಮಿಗಳು ಅವರಿಗೆ ತಿಳಿಯದಂತೆ ಉಪನ್ಯಾಸಕ್ಕೆ ಮುಂಗಡ ಪಡೆದದ್ದು , ಉಪನ್ಯಾಸದಿಂದ ಹಣ ಗಳಿಸಿದ್ದು ವ್ಯಾವಹಾರಿಕ ದೃಷ್ಟಿಯಲ್ಲಿ ಅನೈತಿಕವಾಗಿದ್ದವು.
‘…ಒಬ್ಬ ಹುಡುಗಿ ತಿಳಿಸಿದಂತೆ ಟಿಕೆಟ್'ಗಳು ಬಿಸಿ ರೊಟ್ಟಿಯಂತೆ ಖರ್ಚಾಗುತ್ತಿವೆ……ಎಂದು ಹೆಮ್ಮೆಯಿಂದ ಇದ್ದ ಸ್ವಾಮಿಗಳು ಕ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೋ ಜೊತೆ ಒಪ್ಪಂದ ಮುರಿದುಕೊಂಡ ನಂತರ ತಮ್ಮ ಭಾಷಣಗಳನ್ನು ಹೋಲ್ಡನ್ ಎನ್ನುವ ಮತ್ತೊಬ್ಬ ದಲ್ಲಾಳಿಯ ಮೂಲಕ ಏರ್ಪಡಿಸಲು ಯೋಜಿಸಿದ್ದರು. (೧೦/೩/೧೮೯೪) . ಅದಕ್ಕಾಗಿ ಫೋಟೊಗಳನ್ನು ತೆಗೆಸಿಕೊಂಡಿದ್ದು ಅದರಲ್ಲಿ ತಾವು ಚೆನ್ನಾಗಿ ಕಾಣಿಸುತ್ತಿಲ್ಲ ಎಂದು ಬೇಸರ ಪಟ್ಟಿದ್ದರು. ಇದಾದ ಎರಡು ದಿನಗಳ ನಂತರ ೧೩/೩/೧೮೯೪ ರಂದು ಪಾಮರ್ ನೆರವಿನಿಂದ ಸ್ವಾಮಿಗಳು ಸ್ಲೆಟನ್ ಲೈಸಿಯಂ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಕಾನೂನಿನ ನೆರವಿನಿಂದ ಕೊನೆಗೊಳಿಸಿಕೊಂಡರು. ‘… ನಾನಿಂದು ಅಪೆರಾ ಹೌಸ’ನಲ್ಲಿ ಎರಡೂವರೆ ಗಂಟೆಗಳ ಕಾಲ ಮಾತನಾಡಿದೆ…..ನನ್ನ ಉಪನ್ಯಾಸ ಹೆಚ್ಚು ಜನಾದರಣೀಯವಾದಂತೆ ನನಗೆ ಅದರ ಮೇಲೆ ಜುಗುಪ್ಸೆ ಹುಟ್ಟುತ್ತಿದೆ. ನನ್ನ ಈ ಕಳೆದ ಉಪನ್ಯಾಸವೇ ಅತ್ಯುತ್ತಮವಾದುದು….. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವುದನ್ನು ೧೨/೩/೧೮೯೪ ರ ಪತ್ರದ ತಿರುಳಾಗಿದ್ದಿತು. ೧೯/೩/೧೮೯೪ ರಂದು ರಾಮಕೃಷ್ಣಾನಂದರಿಗೆ ‘……ಇಲ್ಲಿ ಭಿಕ್ಷೆ ಬೇಡುವುದು ವಾಡಿಕೆಯಿಲ್ಲ. ಅದಕ್ಕಾಗಿ ನಾನು ಕೆಲಸ ಮಾಡಬೇಕಿದೆ. ಎಂದರೆ ಉಪನ್ಯಾಸ ಮಾಡಬೇಕಿದೆ…ಮೊದಲು ನನಗೆ ಸ್ವಲ್ಪ ಅಂಜಿಕೆಯಾಯಿತು. ಆದರೆ ಆನಂತರ ಆವಶ್ಯಕತೆ ಇರುವುದರಿಂದ ಒಂದು ದಿನ ರೈಲಿನಲ್ಲಿ ಕೆನಡಾ ದೇಶದ ಸಮೀಪಕ್ಕೆ ಮತ್ತೊಂದು ದಿನ ದಕ್ಷಿಣ ಅಮೆರಿಕದ ದಕ್ಷಿಣ ಭಾಗಕ್ಕೆ ಉಪನ್ಯಾಸ ಮಾಡಲು ಹೋಗುತ್ತೇನೆ. ….ಕಲಾಕೌಶಲ್ಯದಲ್ಲಿ , ಭೋಗ ವಿಲಾಸದಲ್ಲಿ ಈ ಜನ ಅಗ್ಯಗಣ್ಯರು. .. ಒಂದು ಉಪನ್ಯಾಸಕ್ಕೆ ರೂ ೨೦೦ ರಿಂದ ೩೦೦೦ ವರೆಗೆ ದಕ್ಕುವುದು….ನನಗೆ ರೂ. ೫೦೦ ರೂವರೆಗೆ ದಕ್ಕುವುದು. ನಿಜವಾಗಿಯೂ ಈಗ ನನ್ನ ಅದೃಷ್ಟದ ಬಾಗಿಲು ತೆರೆದಿದೆ. ಇಲ್ಲಿಯ ಜನರಿಗೆ ನನ್ನ ಮೇಲೆ ಅಭಿಲಾಷೆ. ಸಾವಿರಾರು ಜನ ನನ್ನ ಉಪನ್ಯಾಸಗಳನ್ನು ಕೇಳುವುದಕ್ಕೆ ಬರುತ್ತಿದ್ದಾರೆ…ಎಂದು ತಮ್ಮ ಹೊಸ ಕೆಲಸದ ಬಗ್ಗೆ ಹೆಮ್ಮೆ ತಾಳಿದ್ದರು.
ಭಾರತದಲ್ಲಿ ರಾಮಕೃಷ್ಣರ ಹೆಸರಿನಲ್ಲಿ ಒಂದು ಮಠ ಕಟ್ಟುವುದು , ಅಧುನಿಕ ವಿದ್ಯಾಭ್ಯಾಸದೊಂದಿಗೆ ಅಧ್ಯಾತ್ಮ ಶಿಕ್ಷಣ ನೀಡುವ ಶಾಲೆ ತೆರೆಯುವುದು ಸ್ವಾಮಿಗಳ ಕನಸಿನ ಯೋಜನೆಗಳಾಗಿದ್ದವು. ಇದೇ ಅವರು ಮೇಲಿಂದ ಮೇಲೆ ಹೇಳುತ್ತಿದ್ದ ಭಾರತದ ಕೆಲಸವಾಗಿದ್ದಿತು. ಈ ಕೆಲಸವನ್ನು ಸಾಧಿಸಲು ಅಮೆರಿಕದಲ್ಲಿ ಭಾಷಣಗಳನ್ನು ಮಾಡಿ ಅದಕ್ಕೆ ಬೇಕಾದ ಹಣವನ್ನು ದುಡಿಯುವ ಯೋಚನೆ ಸ್ವಾಮಿಗಳಿಗಿದ್ದಿತು. ಭಾಷಣ ಮಾಡಿ ತಮ್ಮ ಯೋಜನೆಗೆ ಬೇಕಾದ ಹಣವನ್ನು ಗಳಿಸುವ ಯೋಜನೆ ವಿಫಲವಾಗುತ್ತಿದೆ ಎನ್ನುವುದು ಸ್ವಾಮಿಗಳಿಗೆ ದಿನದಿಂದ ದಿನಕ್ಕೆ ಮನದಟ್ಟಾಗತೊಡಗಿತು. ೧೬/೩/೧೮೯೪ ರಂದು ಶ್ರೀಮತಿ ಜಾರ್ಜ್ ಹೇಲ್’ಗೆ ಬರೆದ ಪತ್ರದಲ್ಲಿ ‘ ನಾನು ಜೀವನವನ್ನು ನೈಜವಾದ ರೀತಿಯಲ್ಲಿ , ಸುಲಭವಾಗಿ ತೆಗೆದುಕೊಳ್ಳತ್ತಿದ್ದೇನೆ. …..ಏನಾದರೂ ಬರಲಿ ಎನ್ನುವ ಸೊಗಸಾದ ಮನೋಸ್ಥಿತಿಯಲ್ಲಿ ಇದ್ದೇನೆ. ಒಳ್ಳೆಯದೋ ಕೆಟ್ಟದ್ದೋ ಏನೋ ಒಂದು ಆಗಬೇಕು. (ಭಾರತಕ್ಕೆ) ಹಿಂದಿರುಗಿ ಹೋಗುವಷ್ಟು ಮತ್ತು ಸ್ವಲ್ಪ ಸುತ್ತಾಡಲು ಸಾಕಾಗುವಷ್ಟು ಹಣವಿದೆ. ನನ್ನ ಕಾರ್ಯ ಯೋಜನೆಯ ಬಗ್ಗೆ ಹೇಳುವುದಾದರೆ ಅದನ್ನು ಯಾವುದೇ ಒಂದು ರೂಪಕ್ಕೆ ತರಬೇಕಾದರೂ ನಾನು ನಾಲ್ಕೈದು ಬಾರಿ ಹಿಂದಿರುಗಿ ಬರಬೇಕಾಗಬಹುದು ಎಂದು ನನಗೆ ಸಂಪೂರ್ಣ ಮನದಟ್ಟಾಗಿದೆ’….ಇತರರಿಗೆ ತಿಳಿವಳಿಕೆ ನೀಡುವುದರ ಮೂಲಕ ಅವರಿಗೆ ಒಳ್ಳೆಯದನ್ನು ಮಾಡುವುದರ ಬಗ್ಗೆ ನಾನು ಜಗತ್ತಿಗೆ ತಿಳಿಸಲು ನನ್ನಲ್ಲಿ ಯಾವ ಸಾರ್ಥಕವಾದ ವಿಷಯವೂ ಇಲ್ಲ. ಆದ್ದರಿಂದ ಸದ್ಯದಲ್ಲಿ ನಾನು ಆರಾಮವಾಗಿ ಇದ್ದೇನೆ. ನಿರ್ಜನವೆಂದೇ ಹೇಳಬಹುದಾದ ವಿಶಾಲವಾದ ಈ ಮನೆಯಲ್ಲಿ ನನ್ನ ತುಟಿಗಳ ನಡುವೆ ಚುಟ್ಟ ಇಟ್ಟುಕೊಂಡು ನಾನೀಗ ಕನಸು ಕಾಣುತ್ತಿದ್ದೇನೆ ಮತ್ತು ನನ್ನ ಕೆಲಸದ ಹುಚ್ಚನ್ನು ತಾತ್ತ್ವಿಕವಾಗಿ ಪರಿಶೀಲಿಸುತ್ತಿದ್ದೇನೆ. ಅದೆಲ್ಲ ಅರ್ಥ ಶೂನ್ಯ……..’ ಎಂದು ತಾವಿನ್ನು ಹಣ ಗಳಿಸುವಲ್ಲಿ ತಮ್ಮ ಗುರಿ ತಲುಪಿಲ್ಲವೆನ್ನುವುದನ್ನು ತೋಡಿಕೊಂಡಿದ್ದರು.
‘….. ಕೂಟಗಳಲ್ಲಿ ಪ್ರವಚನಗಳನ್ನು ಏರ್ಪಡಿಸುವುದು ಈ ನಗರದ ವಿಶೇಷ ಪದ್ದತಿ. ಬೇರೆ ಪಟ್ಟಣಗಳಲ್ಲಿರುವಂತೆ ವೇದಿಕೆ ಭಾಷಣ ಮಾಡುವುದಕ್ಕಿಂತ ಹೆಚ್ಚು ಹಣವನ್ನು ಇಂತಹ ಕೂಟಗಳಲ್ಲಿ ಮಾಡಬಹುದು’ ( ೨/೪/೧೮೯೪) ಮತ್ತು ಷಿಕಾಗೊದ ಶ್ರೀಮತಿ ಸ್ಮಿಥ್ ಎಂಬಾಕೆ ನನ್ನನ್ನು ಗೆರ್ನ್ಸಿ ದಂಪತಿಗಳಿಗೆ ಪರಿಚಯಿಸಿದಳು… ನಾನು ನ್ಯೂಯಾರ್ಕ್’ನಲ್ಲಿ ಭಾಷಣ ಮಾಡುತ್ತಲೇ ಇಲ್ಲ. … ಭಾಷಣದ ವಿಷಯ ಹೇಳುವುದಾದರೆ ಹಣ ಸಂಪಾದನೆ ಬಿಟ್ಟಿದ್ದೇನೆ. ಒಂದು ಉದ್ದೇಶವಿದ್ದಾಗ ಕೆಲಸ ಮಾಡಿದೆ. ಅದು ಮುಗಿದ ಮೇಲೆ ನನಗಾಗಿ ಹಣ ಸಂಪಾದಿಸಲಾರೆ. ಹಿಂದಿರುಗಿ ಹೋಗಲು ಬೇಕಾದಷ್ಟು ಹಣವಿದೆ…..ಡೆಟ್ರಾಯಿಟ್’ನಲ್ಲಿ ದಾನಿಗಳು ನೀಡಿದ ಹಣವನ್ನು ಹಿಂದಿರುಗಿಸಲು ಯತ್ನಿಸಿದೆ. ಅಲ್ಲಿ ನನ್ನ ಪ್ರಯತ್ನದಲ್ಲಿ ಯಶಸ್ವಿಯಾಗುವ ಸಂಭವ ಅಷ್ಟಾಗಿ ಇಲ್ಲವೆಂದು , ಆದ್ದರಿಂದ ಅವರ ಹಣವನ್ನು ನನ್ನಲ್ಲಿ ಇಟ್ಟುಕೊಳ್ಳುವ ಅಧಿಕಾರ ಇಲ್ಲವೆಂದೂ ತಿಳಿಸಿದೆ.. ನಾನು ಇನ್ನು ಮುಂದೆ ಹಣವನ್ನು ತೆಗೆದುಕೊಳ್ಳಲಾರೆ. ಎಲ್ಲೆಲ್ಲಿಯೂ ಭಗವಂತನ ಕರುಣಾಳುಗಳಾದ ಜನ ಮನೆಯನ್ನು ನನಗೆ ಒದಗಿಸುತ್ತಿದ್ದಾರೆ. ಆದ್ದರಿಂದ ಮೃಗೀಯ ಪ್ರಾಪಂಚಿಕತೆಯೆಡೆಗೆ ಹೋಗುವದು ನನಗೆ ಸಾದ್ಯವಿಲ್ಲ……(೧೦/೪/೧೮೯೪) ಎಂದರು. ಇದಾದ ಎರಡು ವಾರಗಳಲ್ಲಿಯೇ ನ್ಯೂಯಾರ್ಕ್’ನಲ್ಲಿ ೨೪/೪/೧೮೯೪ ರಂದು ವಾಲ್ ಡಾರ್ಫ್ ಹೋಟೆಲ್’ನಲ್ಲಿ ‘ಇಂಡಿಯಾ ಅಂಡ್ ಹಿಂದೂಯಿಸಂ’ ಎನ್ನುವ ಭಾಷಣ ಮಾಡಿ ೭೦ ಡಾಲರ್ ಗಳಿಸಿದ್ದರು. ಸ್ವಾಮಿಗಳು ಈ ಮೇಲಿನ ಎರಡು ಪತ್ರಗಳಲ್ಲಿ ಒಂದು ಕಡೆ ಕೂಟ ಭಾಷಣಗಳಲ್ಲಿ ಚೆನ್ನಾಗಿ ಹಣ ಮಾಡುಬಹುದು ಎನ್ನುತ್ತಲೇ ಒಂದೆರಡು ಮಾತುಗಳ ನಂತರ ಹಣದ ಗೊಡವೆಯೇ ಬೇಡ ಎನ್ನುವ ಚಂಚಲ ಚಿತ್ತರಾಗುತ್ತಾರೆ. ನಾನು ನಿನ್ನೆ ವಾಲ್ಡಾರ್ಫ್ ಹೋಟೆಲ್’ನಲ್ಲಿ ಮಾತನಾಡಿದೆ. ಶ್ರೀಮತಿ ಸ್ಮಿಥ್ ಟಿಕೆಟ್’ಗಳನ್ನು ತಲಾ ಎರಡು ಡಾಲರಿನಂತೆ ಮಾರಿದಳು… ನಾನು ಲಿನ್’ನಲ್ಲಿ ನೂರು ಡಾಲರ್ ಸಂಪಾದಿಸಿದೆ. ಆದರೆ ಅದನ್ನು ಕಳಿಸುವುದಿಲ್ಲ. ಏಕೆಂದರೆ ಅದು ನಿಲುವಂಗಿ ಮುಂತಾದ ಕೆಲಸಕ್ಕೆ ಬಾರದ ವಿಷಯಗಳಿಗೆ ಬೇಕಾಗಿದೆ. ಬೋಸ್ಟನ್’ನಲ್ಲಿ ನಾನು ಹೆಚ್ಚು ಹಣ ಮಾಡುವ ಅವಕಾಶವಿಲ್ಲ. ಆದರೂ ನಾನು ಅಮೆರಿಕದ ಬುದ್ಧಿಯ ಕೇಂದ್ರವನ್ನು ಮುಟ್ಟಿ ಕೆಣಕಬೇಕೆಂದಿರುವೆನು’ ಎಂದು ತಿಳಿಸಿದ್ದಾರೆ. (೨೫/೪/೧೮೯೪) . ಸ್ವಾಮಿಗಳ ಭಾರತದ ಕೆಲಸಕ್ಕೆ ಕೆಲವರು ಹಣ ನೀಡಿದ್ದರು. ತಮ್ಮ ಭಾರತದ ಕೆಲಸ ಯಶಸ್ವಿಯಾಗುವ ಅನುಮಾನ ಹೊಂದಿದ್ದ ಅವರು ನ್ಯೂಯಾರ್ಕ್’ನಲ್ಲಿ ಖ್ಯಾತ ವಕೀಲ ಮತ್ತು ಕಾಂಗ್ರೆಸ್’ಮ್ಯಾನ್ ವಿಲಿಯಂ ಜೋಸೆಫ್ ಫ್ಲಾಗ್ ದೇಣಿಗೆ ಕೊಡಲು ಮುಂದಾದಾಗ ಅದನ್ನು ನಿರಾಕರಿಸಿದ್ದರು.
೨/೫/೧೮೯೪ ರಂದು ಸ್ವಾಮಿಗಳು ಇಸಾಬೆಲ್ಲಾ ಮೆಕೆಂಡ್ಲಿಗೆ ‘…ಆಹಾರ ಸಿಗುತ್ತಿದೆ. ಸಾಕಷ್ಟು ಹಣ ಸಿಗುತ್ತಿದೆ. ಮುಂದಿನ ಉಪನ್ಯಾಸದ ನಂತರ ಸ್ವಲ್ಪ ಹಣವನ್ನು ಬ್ಯಾಂಕ್’ನಲ್ಲಿ ಇಡಬಹುದು…. ಆದರೆ ಆ ಹಾಳು ಉಪನ್ಯಾಸ ಮಾಡುವುದು ನನಗೆ ಸಾಕಾಗಿದೆ….ನಾನು ಷಿಕಾಗೊಗೆ ಹೋಗುವಾಗ ಮತ್ತೆ ನ್ಯೂಯಾರ್ಕ್’ಗೆ ಬರುತ್ತೇನೆ. ಅವರಿಗೆ ಒಂದಿಷ್ಟು ಬಲವಾಗಿ ಮಾತನಾಡಿ , ಅವರಿಂದ ಸ್ವಲ್ಪ ದುಡ್ಡನ್ನು ಕಸಿದುಕೊಂಡು ಷಿಕಾಗೊಗೆ ಓಡುವೆನು…..ನಿನಗೆ ಷಿಕಾಗೊದಲ್ಲಿ ಸಿಕ್ಕದ ಯಾವುದಾದರೂ ಸಾಮಾನು ನ್ಯೂಯಾರ್ಕ್’ ಮತ್ತು ಬೋಸ್ಟನ್’’ನಿಂದ ಬೇಕಾದರೆ ಕಾಗದ ಬರೆ. ಈಗ ನನ್ನಲ್ಲಿ ಬೇಕಾದಷ್ಟು ಹಣವಿದೆ. ನಿನಗೆ ಬೇಕಾದುದನ್ನು ಒಂದು ಕ್ಷಣದಲ್ಲಿ ಕಳಿಸಬಲ್ಲೆ. ನೀನು ನನ್ನನು ಅಣ್ಣ ಎಂದು ಭಾವಿಸುವುದಾದರೆ ಇದಕ್ಕೆ ಸಂಕೋಚಪಡಬೇಕಾಗಿಲ್ಲ , ನಟಿಸಬೇಕಾಗಿಲ್ಲ.ನನಗೆ ಆಷಾಢಭೂತಿತನ ಎಂದರೆ ಆಗದು…’ ಎಂದು ಹಣವಿರುವ ಅಣ್ಣನಾಗಿ ಬದಲಾಗಿದ್ದರು. ಸ್ವಾಮಿಗಳಿಗೆ ಕೆಲವು ವೇಳೆ ತಮ್ಮ ಹಣ ಸಂಪಾದನೆಯ ವೇಗ ಸಾಲದೆನಿಸಿದ್ದಿತು.
ಏಪ್ರಿಲ್ ತಿಂಗಳ ಕೊನೆಯ ವೇಳೆಗೆ ಹಣ ಸ್ವಾಮಿಗಳಿಗೆ ಸಿಕ್ಕು ಸಿಗದಂತಹ ಬಣ್ಣದ ಚಟ್ಟೆಯಾಗಿಯೇ ಉಳಿದಿದ್ದಿತು. ಸ್ವಾಮಿಗಳು ಭಾಷಣ ಮಾಡಿ ಹಣ ಸಂಪಾದಿಸಲು ಯತ್ನಿಸಿ ಸೋತಿದ್ದರು. ‘ಸಹಜವಾಗಿ ಇಲ್ಲಿ ಭಾಷಣಗಳಿಗೆ ನೀಡುವ ಸಂಭಾವನೆ ಬಹಳ ಕಡಿಮೆ. ಮತ್ತು ಪ್ರತಿಯೊಬ್ಬರಿಗೂ ಒಂದು ಒಳ ಉದ್ದೇಶವಿರುವುದು. ನಿಮ್ಮ ನಗರ ನ್ಯೂಯಾರ್ಕ್ , ಬೋಸ್ಟನ್'ಗಿಂತ ಹೆಚ್ಚು ಸಂಭಾವನೆ ನೀಡುವುದು. ಆದಕಾರಣ ಅಲ್ಲಿಗೆ ಹಿಂದಿರುಗಲು ಯತ್ನಿಸುವೆ’ನೆಂದು ಶ್ರೀಮತಿ ಜಾರ್ಜ್ ಹೇಲ್’ಗೆ ಮುಂದಿನ ನಡೆ ತಿಳಿಸಿದ್ದರು. (೧೧/೫/೧೮೯೪) . ಸ್ವಾಮಿಗಳಿಗೆ ದಾನ ಕೊಡಲು ಬೆರಳೆಣಿಕೆಯ ಜನ ಮಾತ್ರ ಮುಂದೆ ಬಂದಿದ್ದು ಅದು ಹೇಳಿಕೊಳ್ಳುವಂತಹ ಮೊತ್ತವೂ ಆಗಿರಲಿಲ್ಲ. ಆದ್ದರಿಂದ ಸ್ವಾಮಿಗಳು ಹಣ ಸಂಗ್ರಹ ಮಾಡುವುದನ್ನು ಬಿಟ್ಟು ಬಿಡುತ್ತೇನೆ ಎಂದು ಹಲವು ಪತ್ರಗಳಲ್ಲಿ ತಿಳಿಸಿದ್ದರು. ಕ್ರೈಸ್ತ ಪಾದ್ರಿಗಳು ತಮ್ಮ ಚಾರಿತ್ರ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದರಿಂದ ಅವರಿಗೆ ದಾನ ಕೊಡಲು ಹೆಚ್ಚು ಜನ ಮುಂದೆ ಬರುತ್ತಿಲ್ಲ ಎಂದು ಹರಿದಾಸ ವಿಹಾರಿದಾಸ ದೇಸಾಯಿಗಳಲ್ಲಿ ತೋಡಿಕೊಂಡಿದ್ದರು. (ಪತ್ರ ೨೦/೬/೧೮೯೪). ಆದರೆ ಸನ್ನಿವೇಶಗಳನ್ನು ಗಮನಿಸಿದಾಗ ಇದಕ್ಕೆ ಪುರಾವೆಗಳಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಸ್ವಾಮಿಗಳು ಬಯಸಿದಷ್ಟು ಅಲ್ಲದಿದ್ದರೂ ಜುಲೈ ೧೮೯೪ ರ ವೇಳೆಗೆ ಅವರು ಸಾಕಷ್ಟು ದುಡ್ಡು ಮಾಡಿಕೊಂಡಿರುವುದಕ್ಕೆ ಪುರಾವೆಗಳಿವೆ. ‘ ಡೆಟ್ರಾಯಿಟ್’ನಲ್ಲಿ ಕೊಟ್ಟ ಭಾಷಣದಿಂದ ನನಗೆ ೯೩೦ ಡಾಲರ್ ಎಂದರೆ ೨೭೦೦ ರೂಪಾಯಿ , ಉಳಿದ ಭಾಷಣಗಳಲ್ಲಿ ಒಂದಕ್ಕೆ ೨೫೦೦ ಡಾಲರ್ ಎಂದರೆ ೭೫೦೦ ರೂಗಳು ಒಂದು ಗಂಟೆಯಲ್ಲಿ ಬಂದವು. ಆದರೆ ನನ್ನ ಕೈಗೆ ಕೇವಲ ೨೦೦ ಡಾಲರ್’ಗಳು ಮಾತ್ರ ಸಿಕ್ಕಿತು. ಒಂದು ದಗಾಕೋರ ಭಾಷಣ ಕಾರ್ಯ ಶಾಖೆಯವರು ನನಗೆ ಮೋಸ ಮಾಡಿದರು.’ ನಾನವರನ್ನು ಬಿಟ್ಟುಬಿಟ್ಟೆ. ನನಗೆ ಇಲ್ಲಿ ಖರ್ಚು ಬಹಳ. ಕೇವಲ ೩೦೦೦ ಡಾಲರ್ ಮಾತ್ರ ಉಳಿದಿದೆ ‘ ಎಂದು ತಿಳಿಸುವ ಅಳಸಿಂಗ ಪೆರಿಮಾಳ್’ಗೆ ಬರೆದ ಪತ್ರ ಪುರಾವೆಯಾಗಿದೆ. ಆ ಕಾಲದಲ್ಲಿ ಅಮೆರಿಕದ ಬಡವನ ಆದಾಯ ವರ್ಷಕ್ಕೆ ೬೦೦-೮೦೦ ಡಾಲರ್ ಇರುತ್ತಿದ್ದಿತು. ಗ್ರೀನೇಕರ್’ನಲ್ಲಿರುವಾಗ ಶ್ರೀಮತಿ ಪ್ರಟ್ ಎನ್ನುವಾಕೆ ಸ್ವಾಮಿಗಳಿಗೆ ೫೦೦ ಡಾಲರ್ ಕೊಡಲು ಬಂದಾಗ ಅದನ್ನು ನಿರಾಕರಿಸಿದ್ದರು. (೧೧/೮/೧೮೯೪). ಇದಕ್ಕೆ ಕಾರಣಗಳೂ ಇಲ್ಲದಿರಲಿಲ್ಲ. ಸ್ವಾಮಿಗಳು ತಮ್ಮ ‘ಭಾರತದ ಕೆಲಸ’ಕ್ಕೆ ಇಡುಗಂಟಿನ ರೂಪದಲ್ಲಿ ಹಣವನ್ನು ನಿರೀಕ್ಷಿಸುತ್ತಿದ್ದರು. ಅದರ ಬದಲು ದಕ್ಕುವ ಅಲ್ಪ ಹಣ ಖರ್ಚಾಗುತ್ತದೆ ಮತ್ತು ತಮ್ಮ ಉದ್ದೇಶ ಸಾಧನೆಗೆ ನೆರವಾಗುವುದಿಲ್ಲ ಎನ್ನುವುದು ಅವರಿಗೆ ಮನದಟ್ಟಾಗಿದ್ದಿತು. (೧೧/೮/೧೮೯೪)
ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ಮದ್ರಾಸ್’ನ ನರಸಿಂಹಾಚಾರಿ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಭಾರತಕ್ಕೆ ಹಿಂದಿರುಗಲು ಹಣ ಹೊಂದಿಕೆಯಾಗದೆ ತ್ರಿಶಂಕು ಸ್ಥಿತಿ ತಲುಪಿ ಸ್ವಾಮಿಗಳ ನೆರವು ಬೇಡಿದ್ದನು. ಅಮೆರಿಕ ಕೆಲ ಪಾದ್ರಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಸಾಕಷ್ಟು ದುಡ್ದನ್ನು ಆತನಿಗೆ ಕೊಡುವುದಾಗಿ ಪುಸಲಾಯಿಸಿದ್ದರು. ಅಂತಿಮವಾಗಿ ಸ್ವಾಮಿಗಳು ಭಾರತಕ್ಕೆ ಹೋದ ನಂತರ ಹಿಂದಿರುಗಿಸಬೇಕೆಂದು ತಾಕೀತು ಮಾಡಿ ಆತನಿಗೆ ಸ್ವಲ್ಪ ಹಣ ಸಹಾಯ ಮಾಡಿದರು. ‘ನರಸಿಂಹನ ಪ್ರಯಾಣದ ವೆಚ್ಚವನ್ನು ಕೊಟ್ಟೆ. ಆದ್ದರಿಂದ ಬಿಳಿ ಆನೆ ಸದ್ಯಕ್ಕೆ ನನ್ನನ್ನು ಕೈಬಿಟ್ಟಿತೆಂದು ಭಾವಿಸುವೆ. ನರಸಿಂಹ ನನ್ನ ಜೇಬನ್ನು ಬರಿದು ಮಾಡಿದ. ‘ ಎಂದು ಸ್ವಾಮಿಗಳು ಶ್ರೀಮತಿ ಜಾರ್ಜ್ ಹೇಲ್’ರವರಲ್ಲಿ ಅಲವತ್ತುಕೊಂಡಿದ್ದರು. (೯/೬/೧೮೯೪). ಇದಾದ ಒಂದೇ ತಿಂಗಳಿನಲ್ಲಿ ತಮ್ಮ ಬಳಿ ೩೦೦೦ ಡಾಲರ್ ಉಳಿದಿವೆಯೆಂದು ಅಳಸಿಂಗ ಪೆರುಮಾಳ್’ಗೆ ತಿಳಿಸಿದ್ದರು. (೧೧/೭/೧೮೯೪). ಈ ಹಣದಿಂದ ಅಮೆರಿಕದಲ್ಲಿ ಸಾಮಾನ್ಯ ರೀತಿಯ ಜೀವನ ನಡೆಸಿ ಎರಡು ವರ್ಷ ಬದುಕಬಹುದಿದ್ದಿತು. ಇಸಾಬೆಲ್ಲಾ ಮೆಕೆಂಡ್ಲಿಗೆ ಬರೆದ ಪತ್ರದಿಂದ ಸ್ವಾಮಿಗಳು ತಮ್ಮ ಮೂಲಧನವನ್ನು ಬಳಸಿಕೊಂಡಿಲ್ಲ ಎನ್ನುವುದು ತಿಳಿಯುವುದಾದರೂ ಅದರ ಮೊತ್ತ ಎಷ್ಟೆಂದು ಗೊತ್ತಾಗದು. ೫/೮/೧೮೯೪ ರಂದು ಶ್ರೀಮತಿ ಹೇಲ್’ಗೆ ‘ಅವರು (ಮೈಸೂರು ಮಹಾರಾಜ ಚಾಮರಾಜೆಂದ್ರ ಒಡೆಯರ್) ಮನಸ್ಸು ಮಾಡಿದರೆ , ೫ ದಿನಗಳಲ್ಲಿ ನನ್ನೆಲ್ಲ ಯೋಜನೆಗಳನ್ನು ಕಾರ್ಯಗತ ಮಾಡಬಹುದು. ಅವರ ಆದಾಯ ೧೫೦ ದಶಲಕ್ಷ ಡಾಲರ್. ಅದನ್ನು ಯೋಚಿಸು …..’ಎಂದಿದ್ದಾರೆ. ನನಗೆ ಅಮೆರಿಕದಲ್ಲಿ ಬದುಕಲು ಸಾಕಷ್ಟು ಹಣವಿದೆ ಭಾರತದ ಒಬ್ಬ ರಾಜ ಮನಸ್ಸು ಮಾಡಿದರೆ ತಮ್ಮ ಕಾರ್ಯ ಸಾಧನೆಗೆ ಬೇಕಾದ ಹಣ ಪಡೆಯಲು ಚಿಟಿಕೆ ಹೊಡೆದಷ್ಟು ಕಾಲ ಸಾಕು ಎನ್ನುವ ಆಶೆಯಿದೆ.
೨೧/೯/೧೮೯೪ ರಂದು ಬೊಸ್ಟನ್ ಬೆಲ್ಲೆವ್ಯೂ ಹೊಟೆಲ್’ನಲ್ಲಿ ಕಾಲು ಚಾಚಿ ಕುಳಿತು ಸ್ವಾಮಿಗಳು ಅಳಸಿಂಗ ಪೆರುಮಾಳನಿಗೆ ಒಂದು ವಿಲಕ್ಷಣವಾದ ಪತ್ರ ಬರೆದರು. ‘….. ಬೇಗ ಭಾರತಕ್ಕೆ ಹಿಂದಿರುಗಬಹುದೆಂದು ಎಣಿಸಿದ್ದೇನೆ. ಈ ದೇಶ ಸಾಕಾಗಿದೆ. ಹೆಚ್ಚು ಕೆಲಸ ದುರ್ಬಲನನ್ನಾಗಿ ಮಾಡುತ್ತಿದೆ. ಸಾರ್ವಜನಿಕ ಉಪನ್ಯಾಸಗಳು ಸದಾ ಆವಾಂತರ ಮತ್ತು ಈ ಅಸ್ವಸ್ಥತೆಗೆ ಕಾರಣ. ……..ಜನರೆದುರು ಮಾಡುವ ನಟನೆ ನನಗೆ ಸಾಕಾಗಿದೆ. ನನಗೆ ಇದು ಸ್ವಲ್ಪವೂ ಬೇಕಾಗಿಲ್ಲ. ಇಲ್ಲಿ ನಮ್ಮ ಕೆಲಸಕಾಗಿ ಹಣ ದೊರೆಯುವ ಸಂಭವವಿಲ್ಲ. ಅದನ್ನು ನಿರೀಕ್ಷಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಕೇವಲ ದಯೆಯಿಂದ ಮಾತ್ರ ಪ್ರೇರಿತರಾಗಿ ಯಾವ ದೇಶದಲ್ಲಿಯೂ ಜನರು ಹೆಚ್ಚು ಒಳಿತನ್ನು ಮಾಡುವುದಿಲ್ಲ………..ನಮ್ಮ ಜನಾಂಗದೊಂದಿಗೆ ಹೋಲಿಸಿದರೆ ಪಾಶ್ಚಾತ್ಯರು ಅತಿ ಜಿಪುಣರು. ಪ್ರಪಂಚದಲ್ಲಿಯೇ ಅತಿ ಧಾರಾಳಿಗಳು ಏಷ್ಯನ್ನರು ಎಂದು ನಾನು ನಂಬತ್ತೇನೆ. ಆದರೆ ಅವರು ಬಹಳ ಬಡವರು….. ಪಾಶ್ಚಾತ್ಯರು ಉತ್ತಮ ಅಧ್ಯಾತ್ಮಿಕ ಜೀವನವನ್ನು ಗ್ರಹಿಸಲು ಇನ್ನೂ ಬಹಳ ಕಾಲ ಬೇಕು. ಪೌಂಡ್, ಡಾಲರ್ , ಷಿಲ್ಲಿಂಗ್ ಇವೇ ಇವರ ಧರ್ಮ. ಏನಾದರೂ ಹಣ , ಆರೋಗ್ಯ , ಸೌಂದರ್ಯ ದೀರ್ಘಾಯಸ್ಸು ಇವನ್ನು ಕೊಟ್ಟರೆ ಅಲ್ಲಿಗೆ ಓಡುವರು…..’ ಮೊದಲ ಬಾರಿಗೆ ಸ್ವಾಮಿಗಳು ಯಾರೂ ಕೇವಲ ದಯೆಯಿಂದ ಪ್ರೇರಿತರಾಗಿ ಆರ್ಥಿಕ ನೆರವು ನೀಡುವುದಿಲ್ಲ ಎನ್ನುವ ಕಟು ಸತ್ಯವನ್ನು ಮನಗಂಡಿದ್ದರು. ಇದರ ಹಿಂದೆಯೇ ‘ನೀವು ನೋಡುತ್ತಿಲ್ಲವೇ ತಾಯಿ. ನಾನು ಯೋಜನೆಗಳನ್ನು ಕಾರ್ಯಗತ ಮಾಡುವುದರಲ್ಲಿ ದೃಢಮನಸ್ಕನಾಗಿರುವೆನು. ನನಗೆ ಬೆಳಕು ಕಾಣಲೇ ಬೇಕು. ಭಾರತ ಕೇವಲ ಚೀತ್ಕಾರ ಮಾಡುವುದು. ಅದರ ಹತ್ತಿರ ಹಣವಿಲ್ಲ ‘ ಎಂದು ಶ್ರೀಮತಿ ಹೇಲ್ ಮಂದೆ ತೋಡಿಕೊಂಡಿದ್ದರು. (೨೧/೧೨/೧೮೯೪)
ಖಾಸಗಿ ರೈಲ್ವೇ ಕಂಪೆನಿಯ ಒಡೆಯ , ಭಾರಿ ಶ್ರೀಮಂತ ಅಸ್ಟಿನ್ ಕೊರ್ಬಿನ್ ಮಗಳು ಮಿಸ್ ಅನ್ನಾ ಕೋರ್ಬಿನ್. ಈಕೆ ಸ್ವಾಮಿಗಳನ್ನು ೫ ನೇ ಅವೆನ್ಯೂ ಮ್ಯಾನ್ಷನ್’ನಲ್ಲಿದ್ದ ತನ್ನ ಮನೆಯಲ್ಲಿ ಆಯೋಜಿಸಿದ್ದ ಔತಣಕೂಟಕ್ಕೆ ಆಹ್ವಾನಿಸಿ ಅವರಿಂದ ಒಂದು ಭಾಷಣ ಕೊಡಿಸಿದ್ದಳು. ಈ ಔತಣ ಕೂಟಕ್ಕೆ ಅಮೆರಿಕ ಗಣ್ಯರು , ಭಾರಿ ಶ್ರೀಮಂತರು , ವ್ಯಾಪಾರಿಗಳು , ಅಧಿಕಾರಿಗಳು , ಯುರೋಪ್ ದೇಶಗಳ ಶ್ರೀಮಂತರು ಬಂದಿದ್ದರು. ಈ ಔತಣ ಕೂಟದಲ್ಲಿ ಭಾಗವಹಿಸಿ ಸ್ವಾಮಿಗಳು ರಾತ್ರಿ ೧ ಗಂಟೆಗೆ ತಮ್ಮ ವಸತಿಗೆ ಹಿಂದಿರುಗಿದ್ದರು. ಅವರಿಗೆ ಅಮೆರಿಕ ಶ್ರೀಮಂತರಿಗಿಂತ ಯುರೋಪಿಯನ್ ಗಣ್ಯರು ಹೆಚ್ಚು ಆಸಕ್ತರಾಗಿ ಕಂಡುಬಂದಿದ್ದರು. (120) ಭಾರಿ ಶ್ರೀಮಂತರಿಂದ ಶುಲ್ಕ ಅಥವಾ ದೇಣಿಗೆ ರೂಪದಲ್ಲಿ ಹಣ ಗಳಿಸುವ ಆಶೆ ಸ್ವಾಮಿಗಳಿಗಿದ್ದಿತು. ದೊಡ್ದ ಬೊಕ್ಕುಣ’ದ (ಲಾಂಗ್ ಪಾಕೆಟ್ಸ್ =ಶ್ರೀಮಂತರು) ಕೆಲವರ ಆಶ್ವಾಸನೆಗೆ ಮಣಿದು ಮಿಸ್ ಅನ್ನಾ ಕಾರ್ಬಿನ್ ಕನ್ಸರ್ವೇಟರಿಯಲ್ಲಿ ತರಗತಿಗಳನ್ನು ಪ್ರಾರಂಭಿಸಿದರು. ನಾಲ್ಕು ಉಪನ್ಯಾಸಗಳನ್ನು ಕೊಡುವುದರಲ್ಲಿ ‘ದೊಡ್ದ ಬೊಕ್ಕುಣ’ದ ಜನ ಕೈಕೊಡುತ್ತಿರುವುದು ಸ್ವಾಮಿಗಳಿಗೆ ಖಚಿತವಾಗಿ ತರಗತಿಗಳನ್ನು ಮುಂದುವರೆಸಲಿಲ್ಲ. ೨೧/೩/೧೮೯೫ ರಲ್ಲಿ ಸಾರಾ ಬುಲ್’ಗೆ ಬರೆದ ಪತ್ರದಲ್ಲಿ ‘ ಜಗತ್ತಿನ ಇತಿಹಾಸದಲ್ಲಿ ಶ್ರೀಮಂತರಿಂದ ಯಾವುದಾದರೂ ಘನ ಕಾರ್ಯ ಆಗಿದೆಯೇ ? ….ಹೃದಯ ಮತ್ತು ಬುದ್ದಿಗಳು ಅಂತಹ ಕೆಲಸವನ್ನು ಸಾಧಿಸಬಲ್ಲವೇ ಹೊರತು ಹಣದ ಥೈಲಿಯಲ್ಲ. ನನ್ನ ಜೀವನದುದ್ದಕೂ ದೇವರ ಹೊರತು ಬೇರೆ ಯಾರೂ ನೆರವಾಗಲಾರರೆಂಬ ಆದರ್ಶ ಮತ್ತು ನಂಬಿಕೆಯಿದೆ……….. ಇನ್ನು ಮುಂದೆ ಪ್ರವಚನಗಳನ್ನು ಮಾಡುವುದಿಲ್ಲವೆಂದು ಶ್ರೀಮತಿ ಕಾರ್ಬಿನ್ಸ್'ಗೆ ತಿಳಿಸಿದೆ ಎಂದಿದ್ದಾರೆ. ತಮ್ಮ ಭಾಷಣಗಳನ್ನು ಕೇಳುತ್ತಿದ್ದ ಜನ ತಾವು ಭಾವಿಸಿದಂತೆ ಹಣವನ್ನು ಬಿಚ್ಚುವುದಿಲ್ಲವೆಂದು ಸ್ವಾಮಿಗಳಿಗೆ ಸಾಕ್ಷಾತ್ಕಾರವಾಗಿದ್ದಿತು.
‘….ಒಳ್ಳೆಯ ಕೆಲಸಕ್ಕಾಗಿ ಹಣ ಕೂಡಿಸುವುದು ಕೂಡ ಸಂನ್ಯಾಸಿಗೆ ತರವಲ್ಲ ಎಂದು ಮನು ಹೇಳಿದ್ದಾನೆ. …ಅದನ್ನು ಮಾಡಬೇಕು , ಇದನ್ನು ಮಾಡಬೇಕು ಎನ್ನುವ ಹುಡುಗುತನದ ಅಭಿಪ್ರಾಯಗಳು ನನ್ನಲ್ಲಿದ್ದವು. ಅವೆಲ್ಲ ಭ್ರಾಂತಿಯೆಂದು ನನಗೆ ತಿಳಿಯುತ್ತಿದೆ. …ಐಶ್ವರ್ಯಕ್ಕೆ ದಾರಿದ್ರ್ಯದ , ಅಜ್ಞಾನಕ್ಕೆ ಜ್ಞಾನದ, ರೂಪಕ್ಕೆ ವಯಸ್ಸಿನ , ದೇಹಕ್ಕೆ ಸಾವಿನ ಅಂಜಿಕೆ. ಈ ಜಗತ್ತೇ ಅಂಜಿಕೆಯಿಂದ ಸುತ್ತುವರೆದಿದೆ. ತ್ಯಾಗಿ ಮಾತ್ರ ಅಂಜಿಕೆ ಇರದವನು…. ನೀವು ಈ ವರ್ಷ ಶ್ರೀಮತಿ ಫಾರ್ಮರ್’ರವರ ಗ್ರಿನೇಕರ್ ಕೆಲಸಕ್ಕೆ ನೆರವಾಗಿರಿ. ಶತಮಾನಗಳಿಂದಲೂ ಭರತ ಖಂಡ ಕಾಯುತ್ತಿರುವಂತೆ ಈಗಲೂ ಕಾಯಬಲ್ಲದು. ತುರ್ತಾದ ಕೆಲಸ ಇಲ್ಲೇ ಇರುವುದರಿಂದ ಅದಕ್ಕೆ ಹೆಚ್ಚು ಗಮನ ಕೊಡಬೇಕು ’ ಎಂದು ತೋರಿಕೆಯ ಸಂತೃಪ್ತಿ ಮತ್ತು ಹಣ ಸಂಗ್ರಹಿಸಲಾಗದ ಹತಾಶೆಗಳ ಮಿಶ್ರ ಭಾವಗಳಲ್ಲಿ ಸಾರಾ ಬುಲ್’ಗೆ ೧೪/೨/೧೮೯೫ ರಂದು ಪತ್ರ ಬರೆದರು. ಸಂನ್ಯಾಸಿ ಒಳ್ಳೆಯ ಕೆಲಸಕ್ಕಾಗಿಯೂ ಹಣವನ್ನು ಕೂಡಿಡಬಾರದು , ಅದರ ಬಗ್ಗೆ ಚಿಂತಿಸಬಾರದು ಎಂದು ಸಾರಾ ಬುಲ್’ಗೆ ಹೇಳಿದ್ದ ಸ್ವಾಮಿಗಳು ಅಲ್ಲಿಂದ ಮುಂದಿನ ೨೫ ದಿನಗಳಲ್ಲಿ ‘ ನನ್ನ ಬಳಿ ಇರುವ ಕುಕ್ ಸಾಲ ಪತ್ರಗಳ ಗಡುವು ಮುಗಿದಿದೆಯೋ ಇಲ್ಲವೋ ನನಗೆ ನೆನಪಿಲ್ಲ. ಈಗ ಅವುಗಳನ್ನು ನೋಡಬೇಕಾದ ಸಮಯ ಬಂದಿದೆ. ಅವಕ್ಕೆ ಮಿತಿ ಇರುವುದಾದರೆ ಒಂದು ಬ್ಯಾಂಕ್’ಗೆ ಹಾಕುವುದು ಒಳ್ಳೆಯದಲ್ಲವೇ ? ನನ್ನ ಸುಮಾರು ೧೦೦೦ ಡಾಲರ್'ಗಳು ಬೋಸ್ಟನ್ ಬ್ಯಾಂಕ್'ನಲ್ಲಿ ಮತ್ತು ೧೦೦ ನ್ಯೂಯಾರ್ಕ್ ಬ್ಯಾಂಕ್'ನಲ್ಲಿ ಇವೆ. ಅವೆಲ್ಲ ಈ ವಾರ ಅಥವಾ ಮುಂದಿನ ವಾರ ಭಾರತಕ್ಕೆ ರವಾನೆಯಾಗುವುವು ‘ ಎಂದು ೧೧/೩/೧೮೯೫ ರಂದು ಶ್ರೀಮತಿ ಹೇಲ್’ಗೆ ಪತ್ರ ಬರೆದು ಸನ್ನಿವೇಶಕ್ಕೆ ತಕ್ಕಂತೆ ಬದಲಾಗಿ ಮನು ಪ್ರತಿಪಾದಿಸಿದ ಸಂನ್ಯಾಸಿಯ ಆದರ್ಶ ಸ್ಥಿತಿಯನ್ನು ಹೇಳಿಕೆಯಾಗಿಯೇ ಉಳಿಸಿದರು.
ಸ್ವಾಮಿಗಳು ಮ್ಯಾಗ್ನೋಲಿಯಾಕ್ಕೆ ಹೋದಾಗ ‘ಶ್ರೀಮತಿ ಸ್ಮಿತ್ ಮತ್ತು ಸಾಯರ್ (ಸ್ಮಿಥ್ ಮಗಳು) ಅಲ್ಲಿ ನೀಡಿದ ಉಪನ್ಯಾಸಕ್ಕೆ ೪೩ ಡಾಲರ್ ಕೊಟ್ಟರು. ….. ಈ ಸಮಯದಲ್ಲಿ ಬರೆದಿರಬಹುದಾದ ಒಂದು ಪತ್ರದಲ್ಲಿ ರಾಮಕೃಷ್ಣಾನಂದರಿಗೆ -ಹಿಂದೂ ಧರ್ಮದ ವಿಚಾರವಾಗಿ ಮಾತನಾಡಿದರೆ ಇಲ್ಲಿ ಹೆಚ್ಚು ಜನರನ್ನು ಸೆಳೆಯಬಹುದೆಂದು ತಿಳಿದಿರುವೆಯೇನು ? ಸಂಕುಚಿತ ಬುದ್ಧಿಯ ಹೆಸರನ್ನು ಕೇಳಿದರೆ ಸಾಕು, ಇಲ್ಲಿಯ ಜನ ಓಡಿ ಹೋಗುವರು…. ಇಲ್ಲಿಯ ಜನ ಬಹಳ ಹಣವಂತರು. ಧೈರ್ಯದಿಂದ ನನಗೆ ಸಹಾಯ ಮಾಡುವರು. ಆದರೆ ನಮ್ಮ ದೇಶದ ಜನರಲ್ಲಿ ಹಣವೂ ಇಲ್ಲ. ಧೈರ್ಯವೂ ಇಲ್ಲ. ಗಂಗಾಧರನನ್ನು (ಅಖಂಡಾನಂದ) ರಾಜಪುತಾನದಲ್ಲಿ ಕೆಲ ಜಮೀನ್ದಾರರು ಗೌರವಿಸುವರು. ಅವರಿಂದ ಸ್ವಲ್ಪ ಹಣವನ್ನು ಭಿಕ್ಷಾರೂಪದಲ್ಲಿ ಪಡೆಯಲು ಹೇಳು. ಆಗ ಅವನು ಧೀರ ಎನ್ನುತ್ತ ಅಖಂಡಾನಂದ ಹಣ ಹೊಂಚುವ ಕೆಲಸ ಮಾಡಬೇಕೆಂದು ತಿಳಿಸಿದರು. ಇದೇ ಕಾಲದ ಮತ್ತೊಂದು ಪತ್ರದಲ್ಲಿ ಅಳಸಿಂಗ ಪೆರುಮಾಳ್’ಗೆ ‘ನನ್ನ ಕೆಲಸ ಅಮೆರಿಕದಲ್ಲಿ ಚೆನ್ನಾಗಿ ಬೇರೂರಿದೆ. ಇಲ್ಲಿಂದ ನಾನು ಭಾರತಕ್ಕೆ ಬಂದ ನಂತರವೂ ಅದು ಮುಂದುವರೆಯುತ್ತದೆ. ಆರ್ಥಿಕವಾಗಿ ಸೋಲುಂಟಾಗಿದೆ ಆದರೆ ಮನುಷ್ಯರು ಹಣಕ್ಕಿಂತ ಮುಖ್ಯ‘ ಎಂದು ಬರೆದರು. (೧೪/೫/೧೮೯೫). ತಿಂಗಳ ಕೊನೆಯಲ್ಲಿ ಮದ್ರಾಸಿನಲ್ಲಿ ಪತ್ರಿಕೆ ಪ್ರಾರಂಭಿಸಲು ಅಳಸಿಂಗ ಪೆರುಮಾಳ್’ಗೆ ೧೦೦ ಡಾಲರ್ (೨೦ ಪೌಂಡ್) ಕಳಿಸಿದರು.
ಸ್ವಾಮಿಗಳು ಗುರುಭಾಯಿಗಳಿಗೆ ಶಿಷ್ಯರಿಗೆ ಏಳಿ , ಎದ್ದೇಳಿ , ಕಾರ್ಯ ನಿರತರಾಗಿ ಎಂದು ಮೇಲಿಂದ ಮೇಲೆ ಕರೆ ಕೊಡುತ್ತಿದ್ದರು. ಈ ಯಾವ ಕರೆಯೂ ಅವರ ಅಧ್ಯಾತ್ಮಿಕ , ನೈತಿಕ , ಸಾಮಾಜಿಕ ಜೀವನ ಕುರಿತಾಗಿರದೆ ಮಠ ಮತ್ತು ಅದರ ಶಾಖೆಗಳ ಸ್ಥಾಪನೆ , ಪತ್ರಿಕೆ ಪ್ರಾರಂಭ , ಜಗತ್ತಿನಲ್ಲಿ ಧಾರ್ಮಿಕ ಪ್ರಚಾರ ಮುಂತಾದ ಲೌಕಿಕ ತಳಹದಿಯ ಕೆಲಸಗಳೇ ಆಗಿರುತ್ತಿದ್ದವು. ಇಂತಹ ಕೆಲಸಗಳನ್ನು ಅದೆಷ್ಟೇ ನಿರಾಸಕ್ತ , ಬ್ರಹ್ಮಜ್ಞಾನಿ ಸಂನ್ಯಾಸಿ ಮಾಡಿದರೂ ಹಣವೇ ಅದರ ಮೂಲ. ಯಾವುದೇ ಸಂನ್ಯಾಸಿ ತಾನಾಗಿ ದುಡಿಯುದಿಲ್ಲವಾದ್ದರಿಂದ ಆತನಿಗೆ ಹಣ ಬೇರೆಯ ಮೂಲಗಳಿಂದಲೇ ಬರಬೇಕು. ಚಂದಾ ಎತ್ತುವುದು ಅಂತಹ ಒಂದು ಮಾರ್ಗ, ಸ್ವಾಮಿಗಳ ಪ್ರೇರಣೆಯಿಂದ ಅಖಂಡಾನಂದರು ಚಂದಾ ಎತ್ತಿ ಹಣ ಸಂಗ್ರಹಿಸಲು ಉತ್ಸುಕರಾಗಿದ್ದರು. ಸ್ವಾಮಿಗಳು ಅವರನ್ನು ೧೩/೧೧/೧೮೯೫ ರ ಪತ್ರದ ಮೂಲಕ ಎಂದಿಗೂ ಆಶ್ರಮ , ಮಠ ಸ್ಥಾಪನೆಗಾಗಿ ಹಣ ಎತ್ತಲು ನೀನೇ ನುಗ್ಗಿ ಮುಂದಾಗಬೇಡ. ಗೃಹಸ್ಥರು ಅದರಲ್ಲೂ ಬಡವರು ಹಾಗೆ ಮುಂದಾದಾಗ ಬಹಳ ಎಚ್ಚರದಿಂದಿರು. ಒಂದು ವೇಳೆ ಹಾಗೆ ಹಣ ಸಂಗ್ರಹಿಸಿದ್ದೇ ಆದರೆ ಸ್ಥಿತಿವಂತ ಶ್ರೀಮಂತರಲ್ಲಿ ಆ ಹಣವನ್ನು ಇರಿಸುವುದು ಒಳ್ಳೆಯದು ಎಂದು ಎಚ್ಚರಿಸಿದರು. ಬಡವರು ಚಂದಾ ಎತ್ತಿದ ಹಣವನ್ನು ಸ್ವಂತಕ್ಕೆ ಬಳಸಬಹುದು, ಶ್ರೀಮಂತರು ಹಾಗೆ ಮಾಡುವುದಿಲ್ಲ ಎನ್ನುವುದೇ ಇದರ ಹಿನ್ನೆಲೆ.
೨೩/೨/೧೮೯೬ ರಂದು ನ್ಯೂಯಾರ್ಕ್’ನ ಮ್ಯಾಡಿಸನ್ ಪಾರ್ಕ್ ಸಭಾಂಗಣದಲ್ಲಿ ಸ್ವಾಮಿಗಳು ‘ಮೈ ಮಾಸ್ಟರ್ ಅಂಡ್ ಹಿಸ್ ಟೀಚಿಂಗ್ಸ್’ ಎನ್ನುವ ಭಾಷಣ ಮಾಡಿದರು. ನ್ಯೂಯಾರ್ಕ್’ನಲ್ಲಿ ಮಾಡಿದ ಭಾಷಣದಲ್ಲಿ ಸ್ವಾಮಿಗಳು ಅಮೆರಿಕದ ‘ಡಾಲರ್ ಪೂಜೆ’ಯ ಬಗ್ಗೆ ಹರಿಹಾಯ್ದಿದ್ದರು. ಇದಾದ ಒಂದು ವರ್ಷದ ಈ ಭಾಷಣವನ್ನು ಮುದ್ರಿಸಲು ಹೋದಾಗ ಅಮೆರಿಕದವರನ್ನು ಅಷ್ಟೊಂದು ತೀವ್ರವಾಗಿ ಟೀಕಿಸಿದ್ದು ಸರಿಯಲ್ಲವೆಂದು ಸ್ವಾಮಿಗಳಿಗೆ ಭಾಸವಾಗಿ , ಮನ ನೋಯಿಸುವ ಭಾಗಗಳನ್ನು ಮುದ್ರಣದಲ್ಲಿ ಕೈಬಿಡಲು ನಿರ್ಧರಿಸಿದರು. ನನ್ನ ಗುರುಗಳು ಯಾರನ್ನೂ ದೂಷಿಸಿದವರಲ್ಲ ,ಯಾವುದನ್ನೂ ಖಂಡಿಸಿದವರಲ್ಲ. ನಾನು ಅಮೆರಿಕರನ್ನು ಅಷ್ಟೊಂದು ತೀವ್ರವಾಗಿ ಟೀಕಿಸಬಾರದಿದ್ದಿತು ಎಂದು ಸ್ವಾಮಿಗಳು ತಾವು ಮೂಲ ಭಾಷಣದ ಆಕ್ಷೇಪಾರ್ಹ ಅಂಶಗಳನ್ನು ಕೈಬಿಟ್ಟಿದ್ದಕ್ಕೇ ನೀಡಿದ ಸಮರ್ಥನೆಯಾಗಿದ್ದಿತು. ಆದರ ನಿಜವಾದ ಕಾರಣ ಬೇರೆಯ ಆಗಿದ್ದಿತು. ಸ್ವಾಮಿಗಳಿಗೆ ಭಾಷಣದ ನಂತರ ತಮ್ಮ ಗುರುಗಳ ಬಗ್ಗೆ ಕೊಚ್ಚಿದ್ದ ಬಡಾಯಿ ಮತ್ತು ಅಮೆರಿಕನ್ನರನ್ನು ಹೀಗಳೆದದ್ದು ಸಹನೆ, ಸಭ್ಯತೆಯ ಗಡಿಯನ್ನು ದಾಟಿದೆ ಮತ್ತು ಭಾರತೀಯರಲ್ಲಿ ಭೋಗ ಇಲ್ಲವೇ ಎನ್ನುವ ಮುಜುಗರದ ಪ್ರಶ್ನೆಗಳು ಹೊರಬರಲು ಆಸ್ಪದ ಕೊಡುತ್ತದೆ ಎನ್ನುವುದೇ ಕಾರಣವಾಗಿದ್ದಿತು. ಸ್ವಾಮಿಗಳು ‘…..ಒಟ್ಟುಗೂಡುತ್ತಿರುವ ಭೋಗ ಸಂಸ್ಕೃತಿಯ ಕಾರ್ಮೋಡಗಳನ್ನು ಹೊಡೆದೋಡಿಸುವ ಬಿರುಗಾಳಿಯೊಂದು ಬರುತ್ತಿದೆ. ಅಂತಹ ಬಿರುಗಾಳಿಯ ಹಿಂದಿರುವ ಶಕ್ತಿ ಶ್ರೀ ರಾಮಕೃಷ್ಣರೆಂದು ಘೋಷಿಸಿದರು. (121) ‘ ….ಮೊನ್ನೆ ಸಂಜೆ ಮುಂದಿನ ಚಳಿಗಾಲದ ಕೆಲಸಕ್ಕಾಗಿ ಹೊಸ ಸ್ಥಳಕ್ಕೆ ಹೋಗಲು, ನನ್ನ ಭಾಷಣದಲ್ಲಿ ಮೂರೇ ನಿಮಿಷದಲ್ಲಿ ೧೫೦ ಡಾಲರ್ ಸಂಗ್ರಹಿಸಲಾಯಿತು. ಅಲ್ಲೇ ಇಚ್ಛೆ ಪಟ್ಟಿದ್ದರೆ ಇನ್ನೂ ೫೦೦ ಡಾಲರ್ ಕೊಡುತ್ತಿದ್ದರು. ನಾನು ಸಾವಕಾಶವಾಗಿ ಹೆಚ್ಚು ದುಬಾರಿಯಾಗದಂತೆ ಹೋಗಬೇಕೆಂದಿದ್ದೇನೆ ‘ ಎಂದು ಸಾರಾ ಬುಲ್’ಗೆ ತಿಳಿಸಿ ಕಾರ್ಮೋಡದ ಸುಳಿಗಾಳಿಗೆ ತಾವೇ ಸಿಲುಕಿದ್ದರು. (೮/೭/೧೮೯೬).
ಸ್ವಾಮಿಗಳು ಹಣಕ್ಕೆ ಪ್ರಾಶಸ್ತ್ಯ ಕೊಡುವುದರಲ್ಲಿ ಯಾವುದೇ ರಹಸ್ಯವಿರಲಿಲ್ಲ. ಅವರು ಭಾರತಕ್ಕೆ ಮರಳಿದ ನಂತರ ಮದ್ರಾಸ್; ಕಲ್ಕತದಲ್ಲಿ ಜನ ಸನ್ನಿಗೆ ಒಳಗಾದವರಂತೆ ಜಯಕಾರ ಕೂಗಿದ್ದರಾದರೂ ಅದರ ನಡುವೆಯೇ ಸ್ವಾಮಿಗಳ ಹೃದಯದಲ್ಲಿ ಸಣ್ಣದೊಂದು ಅತೃಪ್ತಿ ಹೊಗೆಯಾಡುತ್ತಿದ್ದಿತು. ‘‘ಹಿಂದೂಗಳು ಮೆರವಣಿಗೆ ಮಾಡುತ್ತಾರೆ. ಹಣ ಕೊಡುವುದಿಲ್ಲ. ಈ ಜಗತ್ತಿನಲ್ಲಿ ನನಗೆ ಒದಗಿದ ಏಕಮಾತ್ರ ಸಹಾಯ ಎಂದರೆ ಇಂಗ್ಲೆಂಡ್'ನಲ್ಲಿ ಮಿಸ್ ಮುಲ್ಲರ್ ಮತ್ತು ಶ್ರಿಯುತ ಸೇವಿಯರ್'ರವರಿಂದ. ಕಲ್ಕತ್ತದಲ್ಲಿ ಮುಖ್ಯ ಕೆಂದ್ರ ತೆರೆಯಲು ಹತ್ತು ಸಾವಿರ ಪೌಂಡ್ ಸಾಕಾಗಬಹುದೆಂದು ಅಂದಾಜಿಸಿದ್ದೆ. ಆದರೆ ಆಗಿನ ನನ್ನ ಲೆಕ್ಕಾಚಾರ ೧೦-೧೨ ವರ್ಷಗಳ ಹಿಂದಿನ ಅನುಭವದಿಂದ ಕೂಡಿತ್ತು. ಅಲ್ಲಿಂದೀಚೆಗೆ ಕ್ರಯ ೩-೪ ಪಟ್ಟು ಹೆಚ್ಚಿದೆ ‘ ಎನ್ನುತ್ತ ೫/೫/೧೮೯೭ ರಂದು ಮಾರ್ಗರೆಟ್ ನೋಬಲ್’ಗೆ ಬರೆದ ಪತ್ರದ ಮೂಲಕ ಅಸಮಾಧಾನದ ಹೊಗೆಯನ್ನು ಹೊರಹಾಕಿದ್ದರು.
ಸ್ವಾಮಿಗಳು ಹಣದ ವಿಚಾರದಲ್ಲಿ ಸಂಸಾರಿಗಳಿಗಿಂತಲೂ ಕಡಿಮೆ ವ್ಯಾವಹಾರಿಕರಾಗಿರಲಿಲ್ಲ. ‘ ಕಾಶೀಪುರ ತೋಟದ ಮನೆಯನ್ನು (ರಾಮಕೃಷ್ಣರು ಕೊನೆಯ ದಿನಗಳನ್ನು ಕಳೆದ ಜಾಗ) ನಾವು ತೆಗೆದುಕೊಳ್ಳುವುಸು ಒಳ್ಳೆಯದು. ಇದು ನಿನಗೇನೆನಿಸುತ್ತದೆ ? ಇದಕ್ಕೆ ನಿನಗೆ ಒಪ್ಪಿಗೆಯಿದ್ದರೆ ಯಾರಿಗೂ ತಿಳಿಸಬೇಡ - ಮಠದಲ್ಲಿಯೂ ಕೂಡ. ಖುದ್ದಾಗಿ ನೀನೇ ವಿಚಾರಿಸು. ಯೋಜನೆಗಳನ್ನು ರಹಸ್ಯವಾಗಿಡದಿದ್ದರೆ ಕೆಲಸ ಹಾಳಾಗುತ್ತದೆ. ನಿನಗೆ ಸರಿಯೆನಿಸಿದರೆ ೧೫-೧೬ ಸಾವಿರಕ್ಕೆ ಸಿಗುವಂತಿದ್ದರೆ ಕೊಂಡಕೋ. ಹೆಚ್ಚು ಬೆಲೆ ಕೇಳಿದರೆ ಮುಂಗಡ ಹಣ ಕೊಟ್ಟು ಏಳು ವಾರಗಳ ತನಕ ತಡೆ. …ಗುಟ್ಟಿನಲ್ಲಿ ಈ ಕೆಲಸವನ್ನು ಮಾಡಬೇಕು… ಇಂದೋ ನಾಳೆಯೋ ಈ ತೋಟವನ್ನು ನಾವು ಪಡೆಯಲೇ ಬೇಕು. ..ಯಾರಾದರೂ ಮಧ್ಯವರ್ತಿಗಳ ಮೂಲಕ ಈ ವಿಷಯವನ್ನು ಪ್ರಸ್ತಾಪಿಸಿದರೂ ಸರಿಯೇ…..ನಾವು ಕೊಂಡುಕೊಳ್ಳಲು ಇಚ್ಛಿಸುತ್ತೇವೆ ಎಂದು ಗೊತ್ತಾದರೆ ಬೆಲೆ ಹೆಚ್ಚಿಸುವರು. ಆದ್ದರಿಂದ ಗುಟ್ಟಾಗಿ ಇದು ನಡೆಯಲಿ. ರಾಮಕೃಷ್ಣರು ನಮ್ಮ ಜೊತೆಗಿದ್ದಾರೆ….’ (೧೩/೭/೧೮೯೭-ಬ್ರಹ್ಮಾನಂದ). ಹಣ ತಾಗಿದರೆ ಅಸ್ವಸ್ಥರಾಗುತ್ತಿದ್ದ ಗುರುದೇವ ರಾಮಕೃಷ್ಣರು ತಮ್ಮ ಮಠ ಸ್ಥಾಪಿಸಲು ಹೆಣಗುತ್ತಿದ್ದ ಶಿಷ್ಯರ ಜೊತೆಗಿರುವುದು ಅನಿವಾರ್ಯವೇ ಆಗಿದ್ದಿತು !
ಸಾರಾ ಬುಲ್ ಮತ್ತು ಜೊಸೆಫಿನ್ ಮೆಕ್ಲಿಯಾಡ್ ಭಾರತಕ್ಕೆ ಬರುವರಿದ್ದರು. ಅಮೆರಿಕದಲ್ಲಿ ಅವರಿಂದ ಸಾಕಷ್ಟು ನೆರವನ್ನು ಪಡೆದು , ಅವರ ಮನೆಗಳಲ್ಲಿ ದೀರ್ಘ ಕಾಲ ಇದ್ದ ಸ್ವಾಮಿಗಳಿಗೆ ಅವರನ್ನು ಭಾರತದಲ್ಲಿ ಸತ್ಕರಿಸಿ , ಆತಿಥ್ಯ ನೀಡಿ ಮುದಗೊಳಿಸುವ ಅನಿವಾರ್ಯತೆ ಇದ್ದಿತು. ಅದರೆ ಸ್ವಾಮಿಗಳ ಹತ್ತಿರ ಅದಕ್ಕೆ ಬೇಕಾದಷ್ಟು ಹಣವಿರದೆ ಸಂದಿಗ್ದಕ್ಕೆ ಸಿಕ್ಕಿಕೊಂಡಿದ್ದರು. ‘ನನ್ನ ದೇಶದ ಜನ ನನ್ನ ಪ್ರಯಾಣದ ಖರ್ಚಿಗೆ ಒಂದು ಚಿಕ್ಕಾಸನ್ನೂ ಕೊಟ್ಟಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಒಂದು ದೊಡ್ದ ತಂಡವನ್ನೇ ಕರೆದೊಯ್ಯಬೇಕಿದೆ. ಇದು ಎಷ್ಟು ಕಷ್ಟ ಎಂದು ನೀನೇ ಊಹಿಸಬಹುದು. ಇಂಗ್ಲಿಷ್ ಶಿಷ್ಯರ ಹತ್ತಿರ ಯಾವಾಗಲೂ ಕೇಳುವುದು ನಾಚಿಕೆಗೇಡು. ಆದ್ದರಿಂದ ಹಿಂದಿನಂತೆ ನಾನು ಬರಿ ಒಂದು ಕಂಬಳಿಯನ್ನು ತೆಗೆದುಕೊಂಡು ಹೋಗಿರುವೆನು. ಈ ಸ್ಥಳದಲ್ಲಿ ನೀನೇ ನೋಡುವಂತೆ ಗುಡ್ವಿನ್ ತರದವರು ಬೇಕಿಲ್ಲ… ಎಂದು ತಮಗೆ ಎದುರಾದ ಸಂಕಟವನ್ನು ರಾಮಕೃಷ್ಣಾನಂದರಿಗೆ ತೋಡಿಕೊಂಡಿದ್ದರು. (ಪತ್ರ-೩೦/೯/೧೮೯೭).
ಸಾಮಾನ್ಯವಾಗಿ ಭಾರತದಲ್ಲಿ ಅಣ್ಣ ಎಂದೂ ತಂಗಿಯಿಂದ ಹಣವನ್ನು ನಿರೀಕ್ಷಿಸುವುದಿಲ್ಲ. ಅದೆಷ್ಟೇ ಕಷ್ಟವಾದರೂ ಆಕೆಗೆ ತಾನೇ ಹಣ ಕೊಡಲು ಯತ್ನಿಸುತ್ತಾನೆ. ಇದಕ್ಕೆ ವಿರುದ್ಧವಾಗಿ ಸ್ವಾಮಿಗಳು ತಂಗಿಯರಾದ ಮೇರಿ ಮತ್ತು ಹ್ಯಾರಿಯೆಟ್ ಹೇಲ್’ ಕಡೆಯಿಂದಲೂ ಹಣವನ್ನು ನಿರೀಕ್ಷಿಸುತ್ತಿದ್ದರು. ಹ್ಯಾರಿಯೆಟ್ ಹೇಲ್ ಕ್ಲಾರೆನ್ಸ್ ವೂಲಿಯನ್ನು ಮದುವೆಯಾಗಿದ್ದಳು. ಬೇಲೂರು ಮಠ ಖರೀದಿ ಒಪ್ಪಂದ ಮಾಡಿಕೊಳ್ಳುವ ಹಿಂದಿನ ದಿನ ಸ್ವಾಮಿಗಳು ಮೇರಿ ಹೇಲ್’ಗೆ ಪತ್ರ ಬರೆದಿದ್ದರು. (೨/೩/೧೮೯೮) ‘..ಹಿಂದೂಗಳು ಭಾವಿಸುವಂತೆ ಹಿಂದಿನ ಜನ್ಮಗಳಲ್ಲಿ ನಾನು ನಿಮ್ಮವನಾಗಿರಬಹುದು. ನಾನು ಒಂದು ವಿಷಯಕ್ಕೆ ಮಾತ್ರ ವಿಷಾದಿಸುತ್ತೇನೆ. ಈಗ ನಾನು ಬಹುವಾಗಿ ಬಯಸುತ್ತಿರುವ ಲಕ್ಷಾಧಿಪತಿಗಳು ಕಾಣುತ್ತಿಲ್ಲವಲ್ಲ ! ಸಂಘ ಸ್ಥಾಪನೆ , ಕಟ್ಟಡ ಮುಂತಾದ ಕೆಲಸಗಳ ನಡುವೆ ನಾನು ಹಣ್ಣುಗಾಯಿ ನೀರುಗಾಯಿಯಾಗಿ ಕುಗ್ಗಿ ಉದ್ರೇಕಗೊಳ್ಳುತ್ತಿದ್ದೇನೆ. ಹ್ಯಾರಿಯೆಟ್’ಗೆ ಲಕ್ಷಾಂತರ ಸುಗುಣಗಳ ಬದಲು ಅವಳಲ್ಲಿ ಲಕ್ಷಾಂತರ ಹಣ ಇದ್ದರೆ ಹೆಚ್ಚು ಉಪಯೋಗವಾಗುತ್ತಿದ್ದಿತೆಂದು ನನ್ನ ನಂಬಿಕೆ. ಆದ್ದರಿಂದ ನೀನು ಅದೇ ತಪ್ಪನ್ನು ಮಾಡಬೇಡ….ನಿನಗೆ ಲಕ್ಷಾಧಿಪತಿ ಸಿಗಲಿಲ್ಲ. ಆದ್ದರಿಂದ ನನಗೆ ಹಣ ಸಿಗಲಿಲ್ಲ. ಆದ್ದರಿಂದಲೇ ನಾನು ಇಷ್ಟೊಂದು ತಾಪತ್ರಯಕ್ಕೆ ಸಿಕ್ಕು ವ್ಯರ್ಥವಾಗಿ ಇಷ್ಟೊಂದು ಕೆಲಸ ಮಾಡಬೇಕಾಯಿತು’ ಎಂದಿದ್ದಾರೆ. ‘ ನಾನು ಬೇಕಾದಷ್ಟು ದುಡ್ದು ಮಾಡಿದರೆ ಸಂತೊಷವಾಗುವುದು. ನಾನು ಸಾಕಷ್ಟು ಹಣ ಮಾಡಿ ಜಪಾನ್ , ಹೊನಲುಲು , ಜಾವಾ ಮೂಲಕ ಭಾರತಕ್ಕೆ ಹೋಗುತ್ತೇನೆ. ನಿನಗೆ ಕೋಟ್ಯಾಧೀಶ ಸಿಕ್ಕಲಿಲ್ಲ. ನೀನು ಏತಕ್ಕೆ ಅರ್ಧ , ಕಾಲು ಕೋಟಿಯವಳಾಗಲು ಯತ್ನಿಸಬಾರದು..ನನಗೆ ಹಣ ಬೇಕು. ಬೇಕಾದರೆ ಮಿಷಿಗನ್ ಸರೋವರಕ್ಕೆ ಹೋಗಲೂ ನನ್ನ ಅಭ್ಯಂತರವೇನಿಲ್ಲ ‘ ಮೇರಿ ಹೇಲ್’ಗೆ ಮಾಡಿದ ಇನ್ನೊಂದು ಮನವಿ. (೨೭/೧೨/೧೮೯೯).
ಶ್ರೀಮಂತನನ್ನು ಮದುವೆಯಾಗಿದ್ದರೂ ಹ್ಯಾರಿಯೆಟ್ ತಮಗೆ ಆರ್ಥಿಕ ನೆರವು ನೀಡುತ್ತಿಲ್ಲ ಎನ್ನುವ ಅಸಮಾಧಾನ ಸ್ವಾಮಿಗಳಿಗೆ ಇದ್ದಿರುವಂತೆ ಕಾಣತ್ತದೆ. ಅದನ್ನು ಅವರು ನೇರವಾಗಿ ಹ್ಯಾರಿಯೆಟ್’ಗೆ ಹೇಳಲು ಸಾಧ್ಯಾವಾಗದೆ ಮೇರಿ ಹೇಲ್ ಮುಖಾಂತರ ತಿಳಿಸಲು ಯತ್ನಿಸುತ್ತಿದ್ದರು. ರೀಡ್ಜ್’ಲೆ ಮ್ಯಾನೊರ್’ನಿಂದ ೧೮೯೯ ಸೆಪ್ಟೆಂಬರ್ ಮೊದಲ ವಾರ ಬರೆದ ಪತ್ರದಲ್ಲಿಯೂ ‘ ನೀನು ಹ್ಯಾರಿಯೆಟ್ ಪ್ರತಿ ತಿಂಗಳು ಕೆಲವು ಡಾಲರ್’ಗಳನ್ನು ನನಗೆ ಕೊಡುವುದಕ್ಕೆ ಒಪ್ಪಿಸಬೇಕು. ನಾನು ಇನ್ನಿತರ ಕೆಲವು ಗೆಳೆಯರಿಗ ಇದನ್ನು ಹೇಳುತ್ತೇನೆ. ಇದರಲ್ಲಿ ಗೆಲವು ಸಿಕ್ಕರೆ ನಾನು ಭಾರತಕ್ಕೆ ಹಾರಿ ಹೋಗುತ್ತೇನೆ. ‘ಜೀವನೋಪಾಯಕ್ಕೆ ಉಪನ್ಯಾಸ ಕೊಟ್ಟು ಸಾಕಾಗಿದೆ …. ನಾನು ಷಿಕಾಗೊಗೆ ಬರುತ್ತೇನೆ. ಭಾರತಕ್ಕೆ ಹಿಂದಿರುಗಿ ಹೋಗಲು ಹಣ ಸಂಪಾದಿಸಲು ಶ್ರೀಮತಿ ಆಡಮ್ಸ್ ಕೆಲ ಉಪನ್ಯಾಸಗಳನ್ನು ಏರ್ಪಡಿಸಲಾರಳೇ ?......ಭಾರತ ಅಥವಾ ಮತ್ತೆ ಯಾವುದೇ ದೇಶದ ವಿಷಯವನ್ನೆಲ್ಲ ನಾನು ಈಗ ತ್ಯಜಿಸಿದ್ದೇನೆ. ಈಗ ನಾನು ಕೇವಲ ಸ್ವಾರ್ಥಿಯಾಗುತ್ತೇನೆ ‘ ಎಂದು ಗೋಳಾಡಿದ್ದರು. (ಪತ್ರ-೧೭/೬/೧೯೦೦). ಮಾರ್ಚ್ ೧೮೯೯ ರಲ್ಲಿ ‘…ಮೇರಿ ನೀನು ಗಂಡನ ಬೇಟೆಯಲ್ಲಿ ಹಾಗೂ ನಾಟ್ಯ ಮತ್ತು ಸಂಗೀತ ಗೋಷ್ಟಿಗಳಲ್ಲಿ ಬಹಳ ತೊಡಗಿರುವೆಯೆಂದು ಕೆಲ ದಿನಗಳ ಹಿಂದೆ ಕೇಳಿದೆ. ಸರಿ , ಅದೇನೋ ನನಗೆ ಪತ್ರ ಬರೆಯದಿದ್ದುದಕ್ಕೆ ಸಮರ್ಥನೆಯಾಯಿತು. ಆದರೆ ನಿನಗೆ ಗಂಡ ಸಿಗಲಿ ಬಿಡಲಿ ನನಗೆ ಗೊತ್ತಿಲ್ಲ , ನನ್ನ ಹಣ ನನಗೆ ಸಲ್ಲಬೇಕು. ಅದನ್ನು ಮರೆಯಬೇಡ. ಹ್ಯಾರಿಯೆಟ್ ಗಂಡ ಸಿಕ್ಕ ನಂತರ ಜಾಣತನದ ಮೌನವ್ರತ ತಾಳಿದ್ದಾಳೆ. ಆದರೆ ದಯವಿಟ್ಟು ನನ್ನ ಹಣವೆಲ್ಲಿ ? ಆಕೆಗೂ ಅಕೆಯ ಗಂಡನಿಗೂ ಇದನ್ನು ಜ್ಞಾಪಿಸು. ಅವಳು ವೂಲಿ. ಉಣ್ಣೆಯಂತೆ ಮೃದುವಾಗಿದ್ದು ಕೈಯಿಂದ ನುಣುಚಿಕೊಂಡು –ಇಲ್ಲಿ ಬ್ರಿಟಿಷರು ನಮ್ಮನ್ನು ಜಿಡ್ಡಿನಂತೆ ಜಾರುವ ಬಂಗಾಳಿ ಎಂದು ಕರೆಯುವಂತೆ- ಹೋಗವಂತಿದ್ದರೆ , ದೇವರೇ ನನ್ನ ಹಣವೆಲ್ಲಿ ? ‘ ಎಂದಿದ್ದರು . ಮೇರಿ , ಹ್ಯಾರಿಯೆಟ್ ಸೋದರಿಯರು ಸ್ವಾಮಿಗಳು ಏನೇ ಹೇಳಲಿ ಒಂದು ಚಿಕ್ಕಾಸನ್ನೂ ಬಿಚ್ಚಲಿಲ್ಲ. ತಂಗಿಯರನ್ನು ಛೇಡಿಸಲು ಲಘು ಹಾಸ್ಯದ ದಾಟಿಯಲ್ಲಿ ಪತ್ರ ಬರೆದಿರುವರೆಂದು ಅಭಿಮಾನಿಗಳು ಮತ್ತು ಭಕ್ತರು ಸಮರ್ಥಿಸಬಹುದಾದರೂ ಸ್ವಾಮಿಗಳು ಹ್ಯಾರಿಯೆಟ್’ಳಲ್ಲಿ ಗುಣಕ್ಕಿಂತ ಹಣ ಹೆಚ್ಚಿದ್ದರೆ ಒಳ್ಳೆಯದಿದ್ದಿತು ಎನ್ನುವುದು ಉತ್ತಮ ಚಿಂತನೆಯೇನಲ್ಲ.
ಬಹು ದೀರ್ಘ ಕಾಲದಿಂದ ಶ್ರೀನಗರದಲ್ಲಿ ಉಳಿದಿದ್ದ ಸ್ವಾಮಿಗಳ ವಸತಿ ಮತ್ತು ಊಟಕ್ಕೆ ಕಾಶ್ಮೀರದ ರಾಜ ನೆರವು ನೀಡಿದ್ದರಿಂದ ಆ ಕುರಿತು ಚಿಂತೆ ಇರಲಿಲ್ಲ. ಆದರೆ ಇತರ ಬಳಕೆಗಾಗಿ ಕೈಯಲ್ಲಿದ್ದ ಅಲ್ಪ ಕಾಸು ಖರ್ಚಾಗಿ ಹೋಗಿದ್ದಿತು. ಅದನ್ನು ಸಾರಾ ಬುಲ್ , ಜೊಸೆಫಿನ್ ಮೆಕ್ಲಿಯಾಡ್ ಮುಂದೆ ಹೇಳಿಕೊಳ್ಳುವಂತಿರಲಿಲ್ಲ. ಸ್ವಾಮಿಗಳನ್ನು ಕಾಣಬೇಕೆಂದು ಹರಿಪದ ಮಿತ್ರ ಮತ್ತು ಇಂದುಮತಿ ಮಿತ್ರ ಬಹಳ ಚಡಪಡಿಸಿ , ಕರಾಚಿಗೆ ಬಂದು ನಿರಾಶರಾಗಿ ಹಿಂದಿರುಗಿದ್ದರು. ಹರಿಪದ ಮಿತ್ರ ಸರ್ಕಾರ ನಡೆಸುವ ಸಿಂಧಿ ಭಾಷೆಯ ಪರೀಕ್ಷೆ ತೆಗೆದುಕೊಂಡಿದ್ದು ಸ್ವಾಮಿಗಳನ್ನು ವಿಚಾರಿಸಿ ಪತ್ರ ಬರೆದಿದ್ದನು. ೧೭/೯/೧೮೯೮ ರಂದು ಸ್ವಾಮಿಗಳು ಹರಿಪದ ಮಿತ್ರ ಮತ್ತು ಖೇತ್ರಿ ಮಹಾರಾಜರಿಗೆ ಪತ್ರಗಳನ್ನು ಬರೆದರು. ಈ ಎರಡು ಪತ್ರಗಳ ವಿಷಯ ಒಂದೇ ಆಗಿದ್ದಿತು. ಹರಿಪದಮಿತ್ರನಿಗೆ ‘ …. ಮೇಲೆ ಹೇಳಿದ ಅಮೆರಿಕ ಗೆಳೆಯರು ನನ್ನ ಖರ್ಚನ್ನೆಲ್ಲಾ ವಹಿಸಿಕೊಳ್ಳುವರು. ನಾನು ಅವರಿಂದ ಕರಾಚಿಯವೆರೆಗಿನ ರೈಲು ಖರ್ಚನ್ನು ತೆಗೆಕೊಳ್ಳುತ್ತೇನೆ. ಆದರೆ ನಿನಗೆ ಸಾಧ್ಯವಾದರೆ ೫೦ ರೂಪಾಯಿಗಳನ್ನು ತಂತಿಯ ಮೂಲಕ ಕೇರ್ ಆಫ್ ಋಷಿವರ ಮುಖ್ಯೋಪಾಧ್ಯಾಯ , ಮುಖ್ಯ ನ್ಯಾಯಾಧೀಶ , ಕಾಶ್ಮೀರ ರಾಜ್ಯ , ಶ್ರೀನಗರ ಇವರಿಗೆ ಕಳಿಸು. ಇದರಿಂದ ನನಗೆ ಸಹಾಯವಾಗುವುದು. ಏಕೆಂದರೆ ಇತ್ತೀಚೆಗೆ ನನ್ನ ಖಾಯಿಲೆಯಂದ ತುಂಬಾ ಖರ್ಚು ಮಾಡಬೇಕಾಯಿತು. ಯಾವಾಗಲೂ ನನ್ನ ವಿದೇಶಿ ಭಕ್ತರಿಂದ ಕೇಳಲು ನಾಚಿಕೆಯಾಗುವುದು. ಶುಭೇಚ್ಛೆಗಳು. ಅಜಿತ್ ಸಿಂಗ್’ಗೆ : ‘ ಎರಡು ವಾರಗಳಿಂದ ನಾನು ಅನಾರೋಗ್ಯದಿಂದ ನರಳುತ್ತಿದ್ದೇನೆ. ನನಗೆ ಈಗ ಹಣ ಬೇಕಾಗಿದೆ. ನನಗೆ ಬೇಕಾದುದೆಲ್ಲವನ್ನೂ ಅಮೆರಿಕ ಗೆಳೆಯರು ಮಾಡುತ್ತಿದ್ದರೂ ಅವರನ್ನು ಮತ್ತೆ ಮತ್ತೆ ಕೇಳಲು ನನಗೆ ನಾಚಿಕೆಯಾಗುತ್ತಿದೆ. ಅದಲ್ಲದೆ ಕಾಯಿಲೆ ಬಿದ್ದರೆ ಯಾವ ಯಾವುದಕ್ಕೋ ಹಣ ಖರ್ಚು ಆಗುವುದು. ಈ ಪ್ರಪಂಚದಲ್ಲಿ ಒಬ್ಬರನ್ನು ಮಾತ್ರ ಕೇಳುವುದಕ್ಕೆ ನನಗೆ ನಾಚಿಕೆಯಾಗುವುದಿಲ್ಲ. ಅವರು ನೀವೇ. ಅದರೆ ನೀವು ಕೊಡಲಿ ,ಬಿಡಲಿ ಎಲ್ಲಾ ಒಂದೇ ನನಗೆ. ಸಾಧ್ಯವಾದರೆ ಸ್ವಲ್ಪ ಹಣವನ್ನು ಕಳಿಸಿರಿ…..೧೬/೧೦/೧೮೯೮). ಲಾಹೋರ್’ನಿಂದ ಇವರಿಬ್ಬರಿಗೆ ಬರೆದಿರುವುದಕ್ಕೆ ಪ್ರತಿಯಾಗಿ ಸ್ವಾಮಿಗಳಿಗೆ ಹರಿಪದ ಮಿತ್ರ ಮತ್ತು ಅಜಿತ್ ಸಿಂಗ್ ಹಣದ ನೆರವು ನೀಡಿದರು. ಶಾರದಾನಂದನ ಮೂಲಕ ಹರಿಪದ ಮಿತ್ರನ ಹಣವನ್ನು ಹಿಂದಿರುಗಿಸಿದ್ದರು. ರಾಮಕೃಷ್ಣ ಪರಮಹಂಸರು ಹಣವನ್ನು ಮುಟ್ಟದೇ ಎಲ್ಲ ಅಗತ್ಯಗಳನ್ನು ಪೂರೈಸಿಕೊಂಡಿದ್ದರು. ಆದರೆ ಸ್ವಾಮಿಗಳಿಗೆ ಅದು ಅಸಾಧ್ಯವೇ ಅಗಿದ್ದಿತು.
‘……….ನಾನು ಮುಖ್ಯವಾಗಿ ಆರೋಗ್ಯದ ನಿಮಿತ್ತ ಬಂದೆ ಅದು ನನಗೆ ದೊರೆಯಿತು. ಮತ್ತು ಜೊತೆಗೆ ನ್ಯಾಯಾಲಯದ ಖರ್ಚಿಗೆ ೨೦೦೦ ದೊರೆತವು. ಒಳ್ಳೆಯದು. ಉಪನ್ಯಾಸ ವೇದಿಕೆಯಿಂದ ಮಾಡುವ ಕೆಲಸ ಇನ್ನು ಮೇಲೆ ತೀರಿತು ಎಂದು ಭಾವಿಸುತ್ತೇನೆ. ನಾನೊಂದು ಮಗು. ನಾನೇನು ಕೆಲಸ ಮಾಡಬಲ್ಲೆ. ನನ್ನ ಶಕ್ತಿಯೆನ್ನೆಲ್ಲ ನಿನಗೆ ವರ್ಗಾಂತರಿಸಿದ್ದೇನೆ. ಇನ್ನು ಮೇಲೆ ನಾನು ಉಪನ್ಯಾಸ ವೇದಿಕೆಯಿಂದ ಕೆಲಸ ಮಾಡಲಾರೆ. ಇದನ್ನು ಜೋ ಗೆ ಹೇಳಬೇಡ …..(೧೭/೧/೧೯೦೦- ಸಾರಾ ಬುಲ್’) . ಹಣ ಗಳಿಸಲು ಮುಂದಾಗುವುದಿಲ್ಲ ಎನ್ನುವ ಸ್ವಾಮಿಗಳ ನಿರ್ಧಾರ ಕೆಲದಿನಗಳಲ್ಲಿಯೇ ಮುರಿದುಬಿದ್ದಿತು. ‘ಲಾಸ್ ಏಂಜೆಲಿಸ್'ನಲ್ಲಿ ೩೦೦ ಡಾಲರ್ , ಮಿಸೆಸ್ ಬೌಲರ್ ಬಳಿ ೧೦೦ ಡಾಲರ್ ನಗದು ಇದೆ. ಮಿಸೆಸ್ ಹೆಂಡ್ರಿಕ್ ೩೦೦ ಡಾಲರ್ ಹಣ ಕೊಡಬೇಕು. ಯೂನಿಟೇರಿಯನ್ ಚರ್ಚ್’ನ ರೆ. ಫೆ ಮಿಲ್ಸ್ ನನ್ನನು ಇಲ್ಲಿಗೆ ಆಹ್ವಾನಿಸಿ ಸ್ಯಾನ್’ಫ್ರಾನ್ಸಿಸ್ಕೊಗೆ ಹೋಗಲು ಹಣ ಕೊಟ್ಟರು. ಓಕ್ ಲ್ಯಾಂಡ್’ನಲ್ಲಿ ಎರಡು ಬಾರಿ ಮಾತನಾಡಿದೆ. ಪ್ರತಿ ಬಾರಿ ೧೫೦೦ ಜನರಿದ್ದರು. ಕಳೆದ ಬಾರಿ ೩೦ ಡಾಲರ್ ಹಣ ಸಂಗ್ರಹವಾಯಿತು. ತಲಾ ೫೦ ಸೆಂಟ್’ಗಳ ತರಗತಿ ನಡೆಸುತ್ತೇನೆ. ಒಂದು ರಾತ್ರಿ (ಫೆಬ್ರವರಿ ೨೩) ಸ್ಯಾನ್’ಫ್ರಾನ್ಸಿಸ್ಕೊದಲ್ಲಿ ತಲಾ ೫೦ ಸೆಂಟ್’ಗಳ ತರಗತಿ ಇತ್ತು. ಅದರ ಖರ್ಚು ಅದರಂದಲೇ ಬಂದಿತು. (೨/೩/೧೯೦೦- ಮಿಸ್ ಜೊಸೆಫಿನ್ ಮೆಕ್ಲಿಯಾಡ್).
‘ನೀನು ಷಿಕಾಗೊಗೆ ಕರೆದಿರುವೆ. ನನಗೆ ಬರಲು ಸಂತೋಷವೇ. ಆದರೆ ನಾನು ಈಗ ಹಣ ಮಾಡುವುದರಲ್ಲಿ ನಿರತನಾಗಿದ್ದೇನೆ. ಆದರೆ ಹೆಚ್ಚಿಗೆ ಮಾಡಲಾಗಲಿಲ್ಲ. ಹಣ ಮಾಡುವುದು ಬಹು ನಿಧಾನ ಮತ್ತು ಶ್ರಮದ ಕೆಲಸ. ನಾನು ಹಿಂದಿರುಗಿ ಹೋಗುವುದಕ್ಕೆ ಬೇಕಾದಷ್ಟನ್ನಾದರೂ ಮಾಡಬೇಕಾಗಿದೆ….ಉಪನ್ಯಾಸದಿಂದ ನಾನು ಹಣ ಮಾಡಬೇಕಾದರೆ ಇತರ ಕೆಲಸಗಳಿಗೆ ಬಹಳ ಕಡಿಮೆ ಕಾಲ ಉಳಿಯುವುದು. ….ಅದರಲ್ಲಿಯೂ ಕಳೆದ ಎರಡು ವರ್ಷಗಳು ನನ್ನ ಪಾಲಿಗೆ ಉತ್ತಮವಾಗಿರಲಿಲ್ಲ. ನಾನೊಂದು ಮನೋನರಕದಲ್ಲಿ ಬದುಕುತ್ತಿರುವೆನು. ಪರಮಶಾಂತಿಯ ಕ್ಷಣವೊಂದನ್ನೂ ನಾನು ಅರಿಯೆ. ಯಾವಾಗಲೂ ನಾನು ಮಾನಸಿಕ ಪ್ರಚಂಡ ವೇದನೆಯಲ್ಲಿರುವೆ….. ಮೇರಿ ನನ್ನ ಜೀವನ ಜಂಜಾಟದಲ್ಲಿ ನಿನ್ನದು ಯಾವಾಗಲೂ ಒಂದು ಮೃದು ಮಧುರ ಗಾನವಿದ್ದಂತೆ. ನಿನ್ನ ಸತ್ಕರ್ಮಗಳಿಂಗಾಗಿ ನಿನಗೆ ಜೀವನದಲ್ಲಿ ಯಾವ ವಿರೋಧ ವಾತಾವರಣವೂ ಇರಲಿಲ್ಲ. ಪರಮ ಶಾಂತಿಯ ಕ್ಷಣವೊಂದನ್ನೂ ನಾನರಿಯೆ…..’ ಇದು ೨/೩/೧೯೦೦ ರಂದು ಮೇರಿ ಹೇಲ್’ಗೆ ಬರೆದ ಪತ್ರದ ತಿರುಳು.
ಸ್ವಾಮಿಗಳು ೬/೪/೧೯೦೦ ರಂದು‘ ..ಇಲ್ಲಿ ನನ್ನ ಕೆಲಸ ಪೂರೈಸಿತು, ಮೇರಿ ಷಿಕಾಗೊದಲ್ಲಿ ಇದ್ದರೆ ಅಲ್ಲಿ ಹದಿನೈದು ದಿನ ಇರಬೇಕೆಂದಿರುವೆ ಎಂದು ಬರೆದಿದ್ದರು. ಅದರ ಮರುದಿನವೇ ಸಾರಾ ಬುಲ್’ಗೆ ‘ಇಂದು ಮಠದಿಂದ ನನಗೆ ಬಂದ ಪತ್ರದಲ್ಲಿ ರಾಜ ಅಜಿತ್ ಸಿಂಗ್ ನನಗೆ ಹಣ ಕೊಡುತ್ತಿದ್ದ ಹಣವನ್ನು ನಿಲ್ಲಿಸಿರುವುದಾಗಿ ತಿಳಿಸಲಾಗಿದೆ.- ಎಲ್ಲ ತಾಯಿಯ ಇಚ್ಛೆ. ವರ್ಷಗಳ ಕಾಲ ರಾಜ ಬಹಳ ಒಳ್ಳೆಯವನಾಗಿದ್ದ. ಆತನಿಗೆ ಎಲ್ಲಾ ಆಶೀರ್ವಾದಗಳು. ಈಗ ನಾನು ಹಿಂದೆಂದಿಗಿಂತಲೂ ಹೆಚ್ಚು ನಿಶ್ಚಿಂತನಾಗಿದ್ದೇನೆ. ಈಗ ನಾನು ನನ್ನ ಕಾಲ ಮೇಲೆ ನಿಂತುಕೊಂಡು ಶ್ರಮದಿಂದ , ಆನಂದದಿಂದ ಕೆಲಸ ಮಾಡುತ್ತಿರುವೆ . ಕೆಲಸದಲ್ಲಿ ಮಾತ್ರ ನನಗೆ ಅಧಿಕಾರ. ಉಳಿದುದೆಲ್ಲ ತಾಯಿಗೆ ಗೊತ್ತು. ಆದ್ದರಿಂದ ನಾನು ಇಲ್ಲಿ ಉಳಿಯಬೇಕಾಗಿದೆ….’ (122) ರಾಜ ಅಜಿತ್ ಸಿಂಗ್ ಸ್ವಾಮಿಗಳಿಗೆ ನೀಡುತ್ತಿದ್ದ ಮಾಸಿಕ ಹಣವನ್ನು ನಿಲ್ಲಿಸಿದ್ದರಿಂದ ಆ ಕೊರತೆಯನ್ನು ನೀಗಿಸಿಕೊಳ್ಳಲು ಇನ್ನೂ ಕೆಲ ಕಾಲ ಉಪನ್ಯಾಸಗಳನ್ನು ಮುಂದುವರೆಸಿದರು. ಸ್ವಾಮಿಗಳು ನಗದನ್ನು ಇಟ್ಟುಕೊಳ್ಲಲು ಕಷ್ಟ ಎಂದು ಗುರುತಿಸಿದ್ದ ಅಲೈಸ್ ಹ್ಯಾನ್ಸ್’ಬ್ರೋ ಉಪನ್ಯಾಸಗಳಿಂದ ಬರುತ್ತಿದ್ದ ಹಣದಿಂದ ೨೦ ಡಾಲರ್ ಮೌಲ್ಯದ ಚಿನ್ನದ ಬಿಲ್ಲೆಗಳನ್ನು ಖರೀದಿಸಿ ಡಬ್ಬಿಯಲ್ಲಿ ತುಂಬಿಸಿಡುತ್ತಿದ್ದಳು. ಒಂದು ಡಬ್ಬಿ ತುಂಬಿದರೆ ಇನ್ನೊಂದು ಡಬ್ಬಿ ಸಿದ್ದವಿರುತ್ತಿದ್ದಿತು. ಸ್ವಾಮಿಗಳು ಕೆಲವೊಮ್ಮೆ ಈ ಡಬ್ಬಿಯಲ್ಲಿರುವ ಬಿಲ್ಲೆಗಳನ್ನು ಎಣಿಸಿ ತಾವು ಸಂಪಾದಿಸಿದ ಹಣ ಸಾಲದೆನಿಸಿ ಮತ್ತೊಮ್ದು ಉಪನ್ಯಾಸ ಸರಣಿಯನ್ನು ಪ್ರಾರಂಭಿಸುತ್ತಿದ್ದರು. (123) ಅಂತಿಮದಲ್ಲಿ ಯಾರನ್ನೂ ತೃಪ್ತಿಯಿಂದಿರಲು ಬಿಡದಿರುವ ಹಣವೇ ಗೆಲುವನ್ನು ಸಾಧಿಸಿದ್ದಿತು.
ಭಾರತದಲ್ಲಿ ತಮ್ಮ ಗುರು , ದೈವಗಳ ಮಠ , ದೇವಸ್ಥಾನ ಕಟ್ಟುವುದು ಮೊದಲಿನಿಂದಲೂ ನಡೆದು ಬಂದಿದ್ದಿತು. ಅದಕ್ಕಾಗಿ ಭಕ್ತರು , ಸಮಾನ ಮನಸ್ಕರು ಹಣ ನೀಡುತ್ತಿದ್ದರು ಅಥವಾ ಅಂಥಹವರಿಂದ ಚಂದಾ ಎತ್ತುತ್ತಿದ್ದರು. ಸ್ವಾಮಿಗಳು ಈ ಯಾವುದನ್ನೂ ಮಾಡಲಿಲ್ಲ. ಅಮೆರಿಕದಲ್ಲಿ ಸ್ವಾಮಿಗಳು ಭಾರತದ ನೈಜ ಚಿತ್ರಣ ನೀಡಿ ವಂತಿಗೆ ಕೇಳಿದ್ದರೆ ಅದಕ್ಕೆ ಪ್ರತಿಕ್ರಿಯೆ ಹೇಗಿರುತ್ತಿದ್ದಿತೋ ಗೊತ್ತಿಲ್ಲ. ಇವೆಲ್ಲವಕ್ಕಿಂತ ಹೆಚ್ಚಾಗಿ ಸ್ವಾಮಿಗಳಿಗೆ ವಂತಿಗೆ ಎತ್ತುವ , ದಾನ ಮಾಡುವಂತೆ ಪ್ರೇರೇಪಿಸುವ ಗುಣಗಳಿರಲಿಲ್ಲ. ಮುಂದೆ ಭಾರತದಲ್ಲಿಯೂ ಅವರು ಹಣ ಸಂಗ್ರಹದಲ್ಲಿ ಸಂಪೂರ್ಣ ವಿಫಲವಾದದ್ದು ಇದೇ ಕಾರಣದಿಂದ. ಹಣ ಸಂಗ್ರಹ ಮಾಡಲು ಮುಂದಾಗುವ ಧಾರ್ಮಿಕ ಮುಂದಾಳು , ಗುರುಗಳಲ್ಲಿ ಒಂದು ನಿರ್ದಿಷ್ಟ ಗುಣ, ಲಕ್ಷಣಗಳನ್ನು ಜನ ಅರಸುತ್ತಾರೆ ಮತ್ತು ಬಯಸುತ್ತಾರೆ. ಈ ಗುಣಗಳಿಲ್ಲದಿದ್ದರೆ ಅವರು ಆತನನ್ನು ಮೆಚ್ಚಬಹುದಾದರೂ ಹಣ ಕೊಡುವುದಿಲ್ಲ. ಹಣ ಸಂಗ್ರಹಿಸುವ ಗುರುಗಳು ಸಾರ್ವಜನಿಕ ಅಪೇಕ್ಷೆ , ಆಕ್ಷೇಪಣೆಗಳಿಗೆ ತಕ್ಕಂತೆ ತಮ್ಮನ್ನು ತಾವೇ ತಿದ್ದಿಕೊಳ್ಳಬೇಕು. ಆದರೆ ಸ್ವಾಮಿಗಳಿಗೆ ಇಂತಹ ಗುಣಗಳಿರಲಿಲ್ಲ. ಅಷ್ಟೇ ಅಲ್ಲ ಕ್ರೈಸ್ತ ಧರ್ಮವನ್ನು ಹಿಗ್ಗಾ ಮುಗ್ಗ ಟೀಕಿಸಲು ಸದಾ ಮುಂದಾಗುತ್ತಿದ್ದ ಸ್ವಾಮಿಗಳು ಹಿಂದೂ ಧರ್ಮದ ಕೊರತೆಗಳ ಬಗ್ಗೆ ಚರ್ಚಿಸುವ ಬದಲು ಉಪಾಯವಾಗಿ ಬದಿಗೆ ತಳ್ಳಿಬಿಡುತ್ತಿದ್ದರು. ಇದು ವಿದ್ಯಾವಂತರಾದ ಅಮೆರಿಕನ್ನರಿಗೆ ತಿಳಿಯುತ್ತಿದ್ದಿತು. ಅವರಲ್ಲಿ ಎಷ್ಟೋ ಜನ ಸ್ವಾಮಿಗಳ ವಿಚಾರಧಾರೆಯನ್ನು ವಿರೋಧಿಸದಿದ್ದರೂ ಕ್ರೈಸ್ತ ಧರ್ಮಕ್ಕಿಂತ ಅದೆಷ್ಟೋ ವಿಶಾಲವಾಗಿರುವ ಹಿಂದೂ ಧರ್ಮ ಅಥವಾ ಭಾರತೀಯ ಸಮಾಜ ಏಕೆ ಹಿಂದುಳಿದಿದೆ ಎಂದು ಪ್ರಶ್ನಿಸಿಕೊಳ್ಳುತ್ತಿದ್ದರು. ಅವರಿಗೆ ದಕ್ಕುತ್ತಿದ್ದ ಉತ್ತರಗಳು ಕ್ರೈಸ್ತ ಮಿಷನರಿಗಳು ಭಾರತೀಯ ಸಮಾಜದ ಹಿಂದುಳಿಯಲು ಕೊಡುತ್ತಿದ್ದ ಕಾರಣಗಳಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ. ಇದು ಅವರು ಮುಕ್ತಹಸ್ತದಿಂದ ದಾನ ಕೊಡುವುದಕ್ಕೆ ಅಡಚಣೆಯಾಗಿದ್ದಿತು.
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ರಾಮಕೃಷ್ಣ ಪರಮಹಂಸರ ಸನಿಹ ಹೆಣ್ಣು-ಹೊನ್ನು (ಕಾಮಿನಿ ಕಾಂಚನ) ಸುಳಿಯುವಂತಿರಲಿಲ್ಲ. ನರೇಂದ್ರನಾಥ ದತ್ತ ಒಮ್ಮೆ ಇದನ್ನು ಪರೀಕ್ಷಿಸಲು ಅವರ ಹಾಸಿಗೆ ಕೆಳಗೆ ಹಣವನ್ನು ಅಡಗಿಸಿಟ್ಟಿದ್ದ. ರಾಮಕೃಷ್ಣರು ಆ ಹಾಸಿಗೆಯ ಮೇಲೆ ಕುಳಿತಂತೆ ಅವರ ಮೈಯಲ್ಲಿ ಉರಿಯೆದ್ದು ಚಡಪಡಿಸತೊಡಗಿದರು. ಎನ್ನುವ ಕಥೆ ಸಾಕಷ್ಟು ಜನಪ್ರಿಯವಾಗಿದೆ. ೧೮೯೬ ರಲ್ಲಿ ನ್ಯೂಯಾರ್ಕ್ ಮತ್ತು ಇಂಗ್ಲೆಂಡ್’ಗಳಲ್ಲಿ ಸ್ವಾಮಿಗಳು ‘ನನ್ನ ಗುರು’ ಎನ್ನುವ ಭಾಷಣಗಳನ್ನು ಮಾಡಿದರು. ಅದರಲ್ಲಿ ನನ್ನ ಗುರುಗಳು ಹಣವನ್ನು ಮುಟ್ಟುವುದಿಲ್ಲ ಎನ್ನುವ ಶಪಥ ಮಾಡಿದರು. ಅವರು ನಿದ್ರಿಸಿದಾಗ ಹಣವನ್ನು ಅವರ ದೇಹಕ್ಕೆ ತಾಗಿಸಿದಾಗ ಅವರ ಕೈ ಬಾಗಿ , ದೇಹಕ್ಕೆ ಪಾರ್ಶ್ವ ವಾಯು ಬಂದಂತಾಗುತ್ತಿದ್ದಿತು ಎಂದಿದ್ದಾರೆ.(112) ಇದೇ ವಿಷಯವನ್ನು ಮನ್ಮಥನಾಥ ಗಂಗೂಲಿಗೂ ಹೇಳಿದ್ದರು. ಹೊನ್ನಿನ ಬಗ್ಗೆ ರಾಮಕೃಷ್ಣರಿಗಿದ್ದ ಈ ದಿವ್ಯ ಜುಗುಪ್ಸೆಯನ್ನು ಭಾವುಕತೆ ಮತ್ತು ಆರಾಧನೆಯನ್ನು ಬಿಟ್ಟು ಬೇರೆ ಮಗ್ಗುಲಿನಿಂದ ನೋಡಿದರೆ ಏನು ಕಾಣುತ್ತದೆ ? ಜಗತ್ತಿನಲ್ಲಿ ಎಲ್ಲ ಪ್ರಾಣಿಗಳು ಮೂಲ ಪ್ರವೃತ್ತಿಗಳೊಂದಿಗೆ – ಹಸಿವು, ಅಂಜಿಕೆ, ನಿದ್ರೆ, ಮೈಥುನ - ಬದುಕುತ್ತವೆ. ಇವುಗಳನ್ನು ಅವು ಸಹಜ ರೀತಿಯಲ್ಲಿ ಪೂರೈಸಿಕೊಳ್ಳುವುದರಿಂದ ಯಾವ ಚರ್ಚೆಗೂ ಅವಕಾಶವಿಲ್ಲ. ಬುದ್ಧಿಜೀವಿಯಾದ ಮನುಷ್ಯ ಇವುಗಳನ್ನು ಹೊಂದಿಸಿಕೊಳ್ಳುವ ದಾರಿ ಸಂಸ್ಕೃತಿ, ನಾಗರಿಕತೆ , ಮಾನವೀಯತೆ ಮುಂತಾಗಿ ಗುರುತಿಸಲ್ಪಟ್ಟಿದೆ. ಮೈಥುನ/ಕೂಟ ತೀರಾ ಖಾಸಗಿಯಾಗಿರುವುದರಿಂದ ರಾಮಕೃಷ್ಣರಿರಲಿ ಯಾರ ವಿಚಾರದಲ್ಲಿಯೂ ಹೀಗೆಂದು ಹೇಳಲು ಸಾದ್ಯವಿಲ್ಲ. ಆದರೆ ಉಳಿದ ಮೂರು ಪ್ರವೃತ್ತಿಗಳ ಬಗ್ಗೆ ಇತರರು ಗಮನಿಸಿ ಒಂದು ನಿರ್ಧಾರಕ್ಕೆ ಬರಬಹುದು. ಹೆತ್ತವರನ್ನು ಅವಲಂಬಿಸಿರುವ ಮಕ್ಕಳ ಹೊರತಾಗಿ ಹೊಟ್ಟೆ, ಬಟ್ಟೆಗೆ ಪ್ರತಿಯೊಬ್ಬ ವಯಸ್ಕನೂ ಒಂದಲ್ಲ ಒಂದು ರೀತಿಯಲ್ಲಿ ದುಡಿಯಲೇಬೇಕು. ಈ ದುಡಿತಕ್ಕೆ ದಕ್ಕುವ ಪ್ರತಿಫಲ ನೇರವಾಗಿ ಹಣವಾಗಿರಬಹುದು ಅಥವಾ ಪರೋಕ್ಷವಾಗಿ ವಸ್ತು , ಸೌಕರ್ಯಗಳ ರೂಪದಲ್ಲಿರಬಹುದು. ಸರ್ವಸಂಗ ಪರಿತ್ಯಾಗಿಗಳು ಬಿಕ್ಷೆ ಬೇಡಿ ಬದುಕಬಹುದು. ಆದರೆ ಬಿಕ್ಷೆ ನೀಡುವವರು ಅಂತಹ ಸಾಧುಗಳು ಧರ್ಮ/ಅಧ್ಯಾತ್ಮ ರೂಪದಲ್ಲಿ ಸಮಾಜಕ್ಕೆ ಏನನ್ನೋ ಕೊಡುತ್ತಿದ್ದಾರೆ ಅಥವಾ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದು ನಂಬಿರುತ್ತಾರೆ. ಎಂದರೆ ದುಡಿಮೆ ಅದಕ್ಕೆ ಪ್ರತಿಫಲ ಎನ್ನುವುದು ಸ್ಪಷ್ಟ.
ರಾಮಕೃಷ್ಣರದ್ದು ಅದೆಷ್ಟೇ ಅಧ್ಯಾತ್ಮಿಕ ಉತ್ಕಟತೆಯಿರಲಿ ಅವರು ಕಾಳಿಯ ಪೂಜಾರಿಯಾಗಿದ್ದರು. ಆದ್ದರಿಂದಲೇ ಅವರಿಗೆ ಆ ಗುಡಿಯ ಆವರಣದಲ್ಲಿ ನೆಲೆ ಸಿಕ್ಕಿ, ಗುಡಿಯ ಮೇಲ್ವಿಚಾರಕ ಮಥುರಾನಾಥ ಬಿಶ್ವಾಸ ಅವರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಲು ಕಾರಣವಾಗಿದ್ದಿತು. ಮನೆ , ಆಹಾರ ಧಾನ್ಯ , ಹಾಸಿಗೆ , ಚಾಪೆ , ಉರುವಲು , ಪಾತ್ರೆ ,ತಂಬಾಕು ಸೇರಿದಂತೆ ಬದುಕಲು ಬೇಕಾಗಿದ್ದ ರಾಮಕೃಷ್ಣರು ಬಳಸುತ್ತಿದ್ದ ಎಲ್ಲ ವಸ್ತುಗಳು ಹಣದ ಬೇರೆ ರೂಪಗಳಾಗಿದ್ದವು. ರಾಮಕೃಷ್ಣರು ಕುದುರೆ ಗಾಡಿಯಲ್ಲಿ , ದೋಣಿಯಲ್ಲಿ ಕಲ್ಕತ್ತದ ವಿವಿಧ ಜಾಗಗಳಿಗೆ ಹೋಗುತ್ತಿದ್ದರು. ವಾರಣಾಸಿಗೆ ತೀರ್ಥ ಯಾತ್ರೆಗೆ ಹೋಗಿದ್ದರು. ಶಾರದಾಮಣಿ ಎತ್ತಿನ ಗಾಡಿಯಲ್ಲಿ ತವರು ಮನೆ ಜಯರಾಮ ಬಾಟಿಗೆ ಹೋಗುತ್ತಿದ್ದಳು. ರಾಮಕೃಷ್ಣರು ನರೇಂದ್ರನಾಥದತ್ತನಿಗೆ ತಿನ್ನಿಸಲು ಸಿಹಿಯನ್ನು ಒಯ್ದಿದ್ದರು. ಕೇಶವಚಂದ್ರ ಸೇನನೊಂದಿಗೆ ದೋಣಿಯಲ್ಲಿ ಅಲೆದಿದ್ದರು. ಹಾಗೆ ಅಲೆಯುವಾಗ ನೀಡಿದ ಚುರುಪನ್ನು ತಿಂದಿದ್ದರು. ಸ್ಟುಡಿಯೊದಲ್ಲಿ ಫೊಟೊ ತೆಗೆಸಿಕೊಂಡಿದ್ದರು. ಕ್ಯಾನ್ಸರ್ ಪೀಡಿತ ರಾಮಕೃಷ್ಣರನ್ನು ಆ ಕಾಲದಲ್ಲಿ ಭಾರಿ ಶ್ರೀಮಂತರು ಮಾತ್ರ ವಾಸಿಸಬಹುದಾದ ತಿಂಗಳಿಗೆ ೮೦ ರೂ ಬಾಡಿಗೆಯ ಕಾಶಿಪುರ ತೋಟದ ಮನೆಗೆ ಸಾಗಿಸಲಾಯಿತು. ಸುರೇಂದ್ರನಾಥ ಮಿತ್ರ ಈ ಆರ್ಥಿಕ ಹೊಣೆ ಹೊತ್ತಿದ್ದನು. ಅವರು ಕಲ್ಕತ್ತದ ಖ್ಯಾತ ವೈದರಿಂದ ಚಿಕಿತ್ಸೆ ಪಡೆಯುತ್ತಿದ್ದರು. ರಾಮಕೃಷ್ಣ ಪುಂಥಿಯಿಂದ ರಾಮಕೃಷ್ಣರು ಕೊನೆಗಾಲದಲ್ಲಿ ಲಕ್ಷ್ಮೀನಾರಾಯಣ ಮಾರ್ವಾಡಿ ಕೊಟ್ಟ ೧೦,೦೦೦ ರೂಗಳನ್ನು ಒಪ್ಪಿಕೊಂಡು , ಅದನ್ನು ಕಾಶೀಪುರ ತೋಟದ ಸಮೀಪದಲ್ಲಿ ವಾಸವಾಗಿದ್ದ ಮಹಿಮಾಚರಣ ಚಕ್ರವರ್ತಿಯ ಸುಪರ್ದಿಯಲ್ಲಿರಿಸಿದ್ದರೆಂದು ತಿಳಿದು ಬರುತ್ತದೆ. ಭಾರಿ ಶ್ರೀಮಂತರು , ಉದ್ದಿಮೆದಾರರು , ಮಠಾಧಿಪತಿಗಳು , ಮಕ್ಕಳು ತಾವಾಗಿಯೇ ಹಣವನ್ನು ಎಂದಿಗೂ ಮುಟ್ಟುವುದಿಲ್ಲವಾದರೂ ಅದು ಕೊಡುವ ಎಲ್ಲ ಫಲಗಳನ್ನು ಅನುಭವಿಸುತ್ತಾರೆ.. ರಾಮಕೃಷ್ಣರ ಜೀವನ ಇದಕ್ಕಿಂತ ಬೇರೆಯದಾಗಿರಲಿಲ್ಲ. ಅವರು ಹಣ ಮುಟ್ಟುತ್ತಿರಲಿಲ್ಲವಾದರೂ ಇತರರು ಅವರ ಪರವಾಗಿ ಹಣವನ್ನು ಅಗತ್ಯಕ್ಕೆ ತಕ್ಕಂತೆ ಬಳಸುತ್ತಿದ್ದರು.
ರಾಮಕೃಷ್ಣರ ಧೀರ ಶಿಷ್ಯರಾದ ಸ್ವಾಮಿಗಳು ಹೊನ್ನಿನ ಬಗ್ಗೆ ಎಂತಹ ನಿಲುವನ್ನು ತಳೆದಿದ್ದರು ? ವಿಶ್ವ ಧರ್ಮ ಸಂಸತ್ತಿನ ಅವಧಿಯಲ್ಲಿ ಸ್ವಾಮಿಗಳಿಗೆ ವಸತಿ ಕಲ್ಪಿಸಿದ್ದ ಜಾನ್ ಬಿ.ಲೈಯಾನ್’ನ ಆರು ವರ್ಷದ ಮೊಮ್ಮಗಳು ಕಾರ್ನೇಲಿಯಾ ಕಾಂಗರ್ ಸ್ವಾಮಿ ಶಂಕರಾನಂದರ ಪ್ರೇರೇಪಣೆ ಮತ್ತು ಒತ್ತಾಯಕ್ಕೆ ಮಣಿದು ತನ್ನ ೬೮ ನೇ ವಯಸ್ಸಿನಲ್ಲಿ (೧೯೫೬-ಪ್ರಬುದ್ಧ ಭಾರತ) ಬರೆದ ನೆನಪುಗಳಲ್ಲಿ ಸ್ವಾಮಿಗಳು ಹಣವನ್ನು ಎಣಿಸಲೂ ಬಾರದಷ್ಟು ಮುಗ್ದರಾಗಿದ್ದರು. ಅವರ ಹತ್ತಿರ ಪರ್ಸ್ ಇರಲಿಲ್ಲವಾದ್ದರಿಂದ ಭಾಷಣಗಳನ್ನು ನೀಡಿದಾಗ ಕೊಟ್ಟ ಹಣವನ್ನು ಕರವಸ್ತ್ರದಲ್ಲಿ ಕಟ್ಟಿಕೊಂಡು ಬಂದು ಅಜ್ಜಿಯ ಮುಂದೆ ಮುಗ್ದ ಬಾಲಕನಂತೆ ನಿಲ್ಲುತ್ತಿದ್ದರು. ಆಗ ಅಜ್ಜಿ ಹಣವನ್ನು ಮುಖ ಬೆಲೆಗೆ ತಕ್ಕಂತೆ ಬೇರ್ಪಡಿಸಿ ಎಣಿಸಿ ಕೊಟ್ಟಾಗ ಅವರ ಮುಖ ಅರಳುತ್ತಿದ್ದಿತು ಎಂದು ಬರೆದಿದ್ದಾಳೆ.(113) ಇದರಂತಹ ಹಸಿ ಸುಳ್ಳು ಇನ್ನೊಂದಿರಲಾರದು. ಸ್ವಾಮಿಗಳು ೧೮೯೩ ಸೆಪ್ಟೆಂಬರ್ ೧೧ ರಿಂದ ೨೭ರವೆರೆಗೆ ಜಾನ್ ಬಿ. ಲೈಯಾನ್ ಮನೆಯಲ್ಲಿದ್ದರು. ಆಗ ಅವರು ಹಣ ಪಡೆದು ಭಾಷಣಗಳನ್ನು ಮಾಡಿರಲು ಪ್ರಾರಂಭಿಸಿರಲಿಲ್ಲ. ವಕೀಲ ವಿಶ್ವನಾಥದತ್ತನ ಮಗ ನರೇಂದ್ರನಾಥ ದತ್ತ ಹಣ ಎಣಿಸಲು ಬಾರದಷ್ಟು , ಅದರ ಪ್ರಾಮುಖ್ಯತೆ ತಿಳಿಯದಷ್ಟು ಮುಗ್ದ ಎನ್ನುವುದೇ ಒಂದು ನಗೆಯ ವಿಚಾರವಾಗಿದೆ.
ಹೊನ್ನು-ಹೆಣ್ಣನ್ನು ದೂರ ಇಡಬೇಕೆಂದು ರಾಮಕೃಷ್ಣರು ಬೋಧಿಸಿದ್ದರಾದರೂ ಹೊನ್ನಿಲ್ಲದೆ ಬದುಕುವುದು ಸಾದ್ಯವೇ ಇಲ್ಲ ಎಂದು ಅವರ ಯುವ ಸಂನ್ಯಾಸಿ ಶಿಷ್ಯರಿಗೆ ಮತ್ತು ಗೃಹಸ್ಥ ಭಕ್ತರಿಗೆ ಗೊತ್ತಾಗಿದ್ದಿತು. ಗುರುಗಳು ಬೋಧಿಸಿದ ಆದರ್ಶಗಳಿಗೆ ಅನುಗುಣವಾಗಿ ಯುವಕರುಗಳು ತಮ್ಮ ಮನೆಗಳಲ್ಲಿ ಜೀವನ ಸಾಗಿಸುವುದು ಕಷ್ಟ. ಅವರಿಗಾಗಿ ಒಂದು ಮಠ ಬೇಕೆಂದು ಬಲರಾಮ ಬಸು . ಸುರೇಂದ್ರನಾಥ ಮಿತ್ರ , ಮಹೇಂದ್ರ ನಾಥ ಗುಪ್ತ ಮುಂತಾದ ಗೃಹಸ್ಥ ಭಕ್ತರ ಅಭಿಪ್ರಾಯವಾಗಿದ್ದಿತು. ಯುವ ಶಿಷ್ಯರ ಬಗ್ಗೆ ಅನುಕಂಪ ಹೊಂದಿದ್ದ ಈ ಗೃಹಸ್ಥ ಭಕ್ತರಿಗೂ ಮೊದಮೊದಲಿಗೆ ನೆರವಾಗಲು ಸಾಧ್ಯವಾಗಲಿಲ್ಲ. ಒಂದೆರಡು ತಿಂಗಳುಗಳ ನಂತರ ಸುರೇಂದ್ರನಾಥ ಮಿತ್ರನ ಕನಸಿನಲ್ಲಿ ರಾಮಕೃಷ್ಣರು ಬಂದು ತಮ್ಮ ಹುಡುಗರಿಗೆ ತಕ್ಷಣವೇ ಏನಾದರೂ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು. ತಮ್ಮ ಕನಸಿನ ವಿಚಾರವನ್ನು ನರೇಂದ್ರನಾಥ ದತ್ತನಿಗೆ ತಿಳಿಸಿ ಬ್ರಹ್ಮಚಾರಿಗಳು ಇರಲು ಒಂದು ಬಾಡಿಗೆ ಮನೆಯನ್ನು ಹುಡುಕಲು ಹೇಳಿದರು. ಬ್ರಹ್ಮಚಾರಿಗಳು ಭವನಾಥ ಹುಡುಕಿದ್ದ ಬಾರಾನಗರದಲ್ಲಿದ್ದ ಭುವನದತ್ತರಿಗೆ ಸೇರಿದ್ದ ಶಿಥಿಲ ಮನೆಯನ್ನು ತಿಂಗಳಿಗೆ ರೂ ೧೧ ಬಾಡಿಗೆಗೆ ಪಡೆದರು. ಬಾರನಗರ ಮಠವನ್ನು ನಡೆಸಲು ಸುರೇಶ ಚಂದ್ರ ಆರಂಭದಲ್ಲಿ ತಿಂಗಳಿಗೆ ೩೦ ರೂ ಕೊಡುತ್ತಿದ್ದು ನಂತರದ ದಿನಗಳಲ್ಲಿ ರೂ ೧೦೦ಕ್ಕೆ ಹೆಚ್ಚಿಸಿದರು. ಆಗಾಗ್ಗೆ ಹೆಚ್ಚಿನ ದಿನಸಿ ಮತ್ತು ಆವಶ್ಯಕ ಸಾಮಗ್ರಿಗಳನ್ನು ಕಳಿಸುತ್ತಿದ್ದರು. ಕೆಲವೊಮ್ಮೆ ಅವರು ಕಳಿಸುತ್ತಿದ್ದ ಸಾಮಾನುಗಳು ಸಾಕಾಗದೆ ಯುವಕರು ಭಿಕ್ಷೆ ಬೇಡುತ್ತಿದ್ದರು. ೬/೭/೧೮೯೦, ರಂದು ಸ್ವಾಮಿಗಳು ಶಾರದಾನಂದನಿಗೆ ಬರೆದ ಪತ್ರದಿಂದ ಬಲರಾಮ ಬಸು ಮತ್ತು ಸತೀಶಚಂದ್ರರು ಸತ್ತು ಗುರುಭಾಯಿಗಳಿಗೆ ಆರ್ಥಿಕ ನೆರವು ನಿಂತಿದ್ದು ಗಿರೀಶ ಚಂದ್ರ ಘೋಷ್ ಆರ್ಥಿಕ ನೆರವು ನೀಡಿ ಅವರು ಬದುಕಲು ಸಹಾಯ ಮಾಡುತ್ತಿರುವುದು ಗೊತ್ತಾಗುತ್ತದೆ. ಸ್ವಾಮಿಗಳು ೧೫/೭/೧೮೯೦ ರಂದು ‘ ದಿವಂಗತ ಮಹೀಂದ್ರ ಮುಖರ್ಜಿಯವರ ಪತ್ನಿ ನಿಮಗಾಗಿ ಒಂದು ಮಠ ಕಟ್ಟಿಸಲು ಮನಸಾರೆ ಪ್ರಯತ್ನಿಸುತ್ತಿದ್ದಾಳೆ. ಸುರೇಂದ್ರನಾಥ ಮಿತ್ರ ರೂ ೧೦೦೦ ಬಿಟ್ಟು ಹೋಗಿರುವರು. ಇಲ್ಲಿಯ ಸಂಘದ ಬಗ್ಗೆ ನಿನ್ನದೇ ಆದ ಅಭಿಪ್ರಾಯವನ್ನು ಹೊಂದಿರುವುದು ಸಹಜ. ಸುದೃಶ್ಯ ಮತ್ತು ಸುಭಿಕ್ಷ ಇರುವ ಸ್ಥಳಗಳನ್ನು ನಾನು ಹುಡುಕುವೆ. ಅದೇ ನನಗೆ ಸಾಕು. ಸಂಘ ನನಗೇನೂ ದೊಡ್ದ ವಿಷಯವಲ್ಲ ಅಥವಾ ನನಗೆ ಅದರ ಅವಶ್ಯಕತೆಯಿಲ್ಲ ……….. ಮುಂದೆ ನನ್ನದೇ ಆದ ಯೋಜನೆಯಿದೆ. ಆದರೆ ಅದು ರಹಸ್ಯ.’ ಎಂದು ಶಾರದಾನಂದರಿಗೆ ಬರೆದ ಪತ್ರ ಗಮನಿಸಿದರೆ ಸ್ವಾಮಿಗಳಿಗೆ ಬೇರೆಯದೇ ಆದ ದೊಡ್ದ ಯೋಜನೆಯಿದ್ದಿತೆನ್ನುವುದು ಮುಂದಿನ ವಾರದಲ್ಲಿ ಪ್ರಮದದಾಸ ಮಿತ್ರರಿಗೆ ಬರೆದ ಪತ್ರದಿಂದ ಗೊತ್ತಾಗುತ್ತದೆ.
ಕಲಿಯುಗದ ಸಂನ್ಯಾಸಿಗಳಿಗೆ ಹಣ ಎಸೆದರೆ ಹೇಳಿದಂತೆ ಮಾಡುತ್ತಾರೆ ಎನ್ನುವ ಲೋಕ ಜ್ಞಾನ ಸ್ವಾಮಿಗಳಿಗೆ ಚೆನ್ನಾಗಿ ಗೊತ್ತಿದ್ದಿತು (೩/೩/೧೮೯೦). ಕಾಂಚನದಿಂದ ಕಾರ್ಯಸಿದ್ಧಿ ಎಂದು ತಿಳಿದಿದ್ದ ಸ್ವಾಮಿಗಳು ೨೬/೫/೧೮೯೦ ರಂದು ಪ್ರಮದದಾಸ ಮಿತ್ರರಿಗೆ ಪತ್ರ ಬರೆದು ರಾಮಕೃಷ್ಣರು ಬಂಗಾಳದಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ. ಅಂತಹ ಮಹಾತ್ಮರ ನೆನಪಿಗಾಗಿ ಅವರ ತಪೋಭೂಮಿ ಕಲ್ಕತೆಯಲ್ಲಿ ಒಂದು ಗುಡಿಯನ್ನು ಕಟ್ಟಬೇಕು. ಅದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ. ಇದಕ್ಕಾಗಿ ತಾವು ವಾರಣಾಸಿಯಲ್ಲಿ ಚಂದಾ ಎತ್ತಿರಿ ಎಂದು ಕೇಳಿಕೊಳ್ಳುವುದರ ಮೂಲಕ ಸ್ವಾಮಿಗಳು ಚಂದಾ ಎತ್ತುವ , ‘ಭಾರತದ ಕೆಲಸ’ಕ್ಕಾಗಿ (ರಾಮಕೃಷ್ಣ ಮಠದ ಸ್ಥಾಪನೆ) ಹಣ ಗಳಿಸುವ ದಾರಿಗಳನ್ನು ಹುಡುಕತೊಡಗಿದರು. ಪ್ರಮದದಾಸ ಮಿತ್ರರು ಇದಕ್ಕೆ ಒಪ್ಪದೆ ಸ್ವಾಮಿಗಳನ್ನು ಖಂಡಿಸಿದ್ದರು. ಇದಕ್ಕೆ ಉತ್ತರ ನೀಡುತ್ತ ರಾಮಕೃಷ್ಣ ಶಿಷ್ಯರ ಜೀವನಕ್ಕೆ ಒಂದು ಶಾಶ್ವತ ಮಠ ಮತ್ತು ರಾಮಕೃಷ್ಣರ ದೇವಾಲಯ ಕಟ್ಟಿಸಲು ದರೋಡೆ ಮಾಡಲು ಸಿದ್ಧ ಎನ್ನುವ “ದಿಟ್ಟ ನಿರ್ಧಾರ”ಕ್ಕೆ ಬಂದರು. (೨೬/೫/೧೮೯೦). ಮುಂದಿನ ದಿನಗಳಲ್ಲಿ ಅಲೆಮಾರಿಗಳಾಗಿ ಭಾರತ ಸಂಚಾರ ಕೈಗೊಂಡ ನಂತರ ಸಮಯ . ಸನ್ನಿವೇಶಗಳಿಗೆ ಅನುಗುಣವಾಗಿ ಸ್ವಾಮಿಗಳು ಈ ಮೂಲ ಉದ್ದೇಶ ಮುಂದಿನ ಮೂರುವರೆ ವರ್ಷ ಹಿನ್ನೆಲೆಗೆ ಸರಿಯಿತು.
ವಿಶ್ವ ಧರ್ಮ ಸಂಸತ್ತಿಗೆ ಬಂದ ಪ್ರತಿನಿಧಿಗಳೆಲ್ಲರೂ ಅದು ಮುಗಿದ ತಕ್ಷಣ ತಮ್ಮ ದೇಶಗಳಿಗೆ ಹಿಂದಿರುಗಲಿಲ್ಲ. ಅವರಲ್ಲಿ ಕೆಲವರಿಗೆ ವಿವಿಧ ಸಂಘ, ಸಂಸ್ಥೆ , ಚರ್ಚ್ , ಆಸಕ್ತರು ಮತ್ತು ವ್ಯಕ್ತಿಗಳಿಂದ ಭಾಷಣ ಕೊಡುವಂತೆ ಮನವಿಗಳು ಬರತೊಡಗಿದವು. ಆಯಾ ಧರ್ಮಗಳ ಅಧಿಕೃತ ಪ್ರತಿನಿಧಿಗಳ ಮೂಲಕ ವಿವಿಧ ಧರ್ಮಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಇದರ ಮೂಲ ಉದ್ದೇಶವಾಗಿದ್ದಿತು. ಭಾರತೀಯ ಪ್ರತಿನಿಧಿಗಳಿಗೆ ಇತರ ದೇಶಗಳ ಪ್ರತಿನಿಧಿಗಳಿಗಿಂತ ಚೆನ್ನಾಗಿ ಮಾತ್ರವಲ್ಲ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಬರುತ್ತಿದ್ದುದರಿಂದ ಅವರಿಗೆ ಹೆಚ್ಚಿನ ಅವಕಾಶಗಳಿದ್ದವು. ವಿಶ್ವ ಧರ್ಮ ಸಂಸತ್ತು ಮುಗಿದ ನಂತರ ಹಲವು ತಿಂಗಳುಗಳ ಕಾಲ ಪ್ರತಾಪಚಂದ್ರ ಮಜುಂದಾರ , ಬಿ.ಬಿ ನಗರ್ಕರ್, ಧರ್ಮಪಾಲ , ನರಸಿಂಹಾಚಾರಿ , ವೀರಚಂದ ಗಾಂಧಿ ; ಜಿಯಾನ್ನೆ ಸೊರಾಬ್ಜಿ ಭಾಷಣಗಳನ್ನು ನೀಡುತ್ತ ಅಮೆರಿಕ ಸುತ್ತ ತೊಡಗಿದರು. ಪ್ರತಾಪಚಂದ್ರ ಮಜುಂದಾರ , ವೀರಚಂದ ಗಾಂಧಿ ಮತ್ತು ಧರ್ಮಪಾಲರ ಭಾಷಣಗಳು ಅಮೆರಿಕದ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಅಮೆರಿಕದ ಸಂಘ , ಸಂಸ್ಥೆ . ಚರ್ಚ್’ಗಳು ತಮ್ಮಲ್ಲಿಗೆ ಉಪನ್ಯಾಸ ನೀಡಲು ಬರುತ್ತಿದ್ದ ಭಾಷಣಕಾರರಿಗೆ ಗೌರವ ಧನ ನೀಡುತ್ತಿದ್ದವು. ಕೆಲವು ಸಲ ಕೇಳುಗರೇ ಹಣ ಸಂಗ್ರಹಿಸಿ ಅವರಿಗೆ ಕೊಡುತ್ತಿದ್ದರು. ಇದು ಸ್ವಾಮಿಗಳಲ್ಲಿ ಹೊಸ ಆತ್ಮ ವಿಶ್ವಾಸ ಮತ್ತು ಕನಸುಗಳನ್ನು ಹುಟ್ಟು ಹಾಕಿದ್ದಿತು.
ಸ್ವಾಮಿಗಳು ಷಿಕಾಗೊದಿಂದ ೧೪೪ ಕಿ.ಮೀ ದೂರದ ಸ್ಟ್ರೀಟರ್ ಪಟ್ಟಣದಲ್ಲಿ ೫/೧೦/೧೮೯೩ ರಂದು ಉಪನ್ಯಾಸ ನೀಡಿದರು. ಇದರ ಪ್ರವೇಶ ಶುಲ್ಕ ನೆಲಮಹಡಿಗೆ ೨೫ ಸೆಂಟ್ಸ್ ಮತ್ತು ಬಾಲ್ಕನಿಗೆ ೩೫ ಸೆಂಟ್ಸ್ ನಿಗದಿಪಡಿಸಲಾಗಿದ್ದಿತು. (114) ಇದು ಅಮೆರಿಕದಲ್ಲಿ ಸ್ವಾಮಿಗಳ ಮೊದಲ ಸಂಪಾದನೆಯಂತೆ ಕಾಣುತ್ತದೆ. ಇಲ್ಲಿಂದ ಮುಂದೆ ಸ್ವಾಮಿಗಳ ಸಂಪಾದನೆಯ ವೃತ್ತಿ ವಿವಿಧ ಮಜಲುಗಳಲ್ಲಿ ಸಾಗತೊಡಗಿತು. ೧೦/೧೦/೧೮೯೩ ರಂದು ಶ್ರೀಮತಿ ಕೆನ್ನೆಟ್ ವುಡ್ಸ್’ಗೆ ‘ ಷಿಕಾಗೊ ವಿಶ್ವ ಧರ್ಮ ಸಂಸತ್ತಿನಿಂದ ಸಿಕ್ಕಿರುವ ಬಿಟ್ಟಿ ಪ್ರಚಾರವನ್ನು ಬಿಟ್ಟುಕೊಡುವಂತಿಲ್ಲ. ಇದಕ್ಕೆ ನಿಮ್ಮ ಸಹಮತವಿದೆ ಎಂದು ಖಂಡಿತವಾಗಿ ಭಾವಿಸುತ್ತೇನೆ…. ನಾನು ಸದ್ಯದಲ್ಲಿ ಷಿಕಾಗೊದ ಆಸುಪಾಸಿನಲ್ಲಿ ಭಾಷಣ ಮಾಡುತ್ತಿದ್ದೇನೆ. ಇಲ್ಲಿ ನನ್ನ ಕೆಲಸ ತೃಪ್ತಿಕರವಾಗಿದೆ ಎನಿಸುತ್ತಿದೆ. ನಾನೀಗ ಸ್ಟ್ರಿಟರ್’ನಿಂದ ಹಿಂದಿರುಗಿದೆ. ಅಲ್ಲಿ ನನ್ನ ಭಾಷಣಕ್ಕೆ ೩೦-೮೦ ಡಾಲರ್ ಸಿಕ್ಕಿತು’ ಎಂದಿದ್ದಾರೆ. ೨೬/೧೦/೧೮೯೩ ರಂದು ಜಾನ್ ಹೆನ್ರಿ ರೈಟ್’ಗೆ ‘ ಬಹಳ ದೂರದೇಶದಿಂದ ಇಲ್ಲಿಗೆ ಬಂದಿರುವ ಅನೇಕರು ಯಾವಯಾವುದೋ ಉದ್ದೇಶಗಳನ್ನು ಇಟ್ಟುಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿರುವರು. ಪ್ರತಿಯೊಂದಕ್ಕೂ ಗೆಲುವು ಸಿಕ್ಕುವುದು ಅಮೆರಿಕದಲ್ಲಿ ಮಾತ್ರ ಸಾದ್ಯ. ಆದರೆ ನಾನು ಚೆನ್ನಾಗಿ ಯೋಚಿಸಿ ನನ್ನ ಉದ್ದೇಶ ಕುರಿತಾಗಿ ಮಾತನಾಡುವುದನ್ನು ಬಿಟ್ಟಿದ್ದೇನೆ. ಏಕೆಂದರೆ ಈಗ ಕ್ರೈಸ್ತನಲ್ಲದವನು ತನ್ನ ಉದ್ದೇಶಕ್ಕಿಂತ ಹೆಚ್ಚಾಗಿ ಸಾಧಿಸುವನು ಎನ್ನುವುದರಲ್ಲಿ ಸಂದೇಹವಿಲ್ಲ. ನಾನು ನನ್ನ ಪಾಲಿಗಾಗಿ ಶ್ರದ್ಧೆಯಿಂದ ಕೆಲಸಕ್ಕೆ ತೊಡಗುತ್ತೇನೆ. ಆದರೆ ಉದ್ದೇಶವನ್ನು ಒಳಗೆ ಇಟ್ಟುಕೊಂಡು ಇತರ ಭಾಷಣಕಾರನಂತೆ ನಾನು ಕೆಲಸ ಮಾಡುತ್ತೇನೆ…..ಹಣ ಸಂಪಾದನೆ ಮಾಡುವ ವಿಚಾರದಲ್ಲಿ ನಾನು ಜಯಶೀಲನಾಗಬಹುದು. ಆದರೆ ಈ ಉದ್ಯಮದಲ್ಲಿ ನಾನು ಹೊಸಬ ; ಕ್ರಮೇಣ ಇದರ ರಹಸ್ಯವನ್ನು ತಿಳಿಯುತ್ತೇನೆ. ಷಿಕಾಗೊ ನಗರದಲ್ಲಿ ನಾನು ಬಹಳ ಜನಪ್ರಿಯನಾಗಿರುವೆನು. ಆದ್ದರಿಂದ ನಾನು ಇಲ್ಲಿ ಸ್ವಲ್ಪ ಕಾಲವಿದ್ದು ಹಣ ಗಳಿಸಬೇಕೆಂದಿರುವೆ ‘ ಎಂದು ತಮ್ಮ ಗುಪ್ತ ಕಾರ್ಯಸೂಚಿ ಬಿಚ್ಚಿಟ್ಟಿದ್ದರು.
೨/೧೧/೧೮೯೩ ರಂದು ಅಳಸಿಂಗ ಪೆರುಮಾಳ್’ಗೆ ಬರೆದ ಪತ್ರದಲ್ಲಿ ‘ ಪೂನಾದಿಂದ ಬಂದ ಕ್ರೈಸ್ತ ಮಹಿಳೆ ಸೊರಾಬ್ಜಿ ಎಂಬಾಕೆ ಮತ್ತು ಜೈನ ಧರ್ಮದ ಪ್ರತಿನಿಧಿ ಗಾಂಧಿ ಎನ್ನುವವರು ಈ ದೇಶದಲ್ಲಿ ಇನ್ನೂ ಕೆಲಕಾಲವಿದ್ದು ಅನಂತರ ಉಪನ್ಯಾಸ ಸಂಚಾರಕ್ಕೆ ಹೊರಡುವರು. ಅವರು ಜಯಶೀಲರಾಗಲಿ ಎನ್ನುವುದೇ ನನ್ನ ಹಾರೈಕೆ. ಇಲ್ಲಿ ಉಪನ್ಯಾಸ ಮಾಡುವದೊಂದು ಲಾಭದಾಯಕ ಕಸುಬು. ಕೆಲವು ವೇಳೆ ಅದರಿಂದ ಚೆನ್ನಾಗಿ ಸಂಪಾದನೆಯಾಗುವುದು. ಶ್ರೀಮಾನ್ ಇಂಗರ್’ಸಾಲ್ ಒಂದು ಉಪನ್ಯಾಸಕ್ಕೆ ೫೦೦ ಡಾಲರ್ ಸಂಪಾದಿಸುತ್ತಾನೆ. ಈತ ಈ ದೇಶದಲ್ಲಿ ಹೆಸರಾದ ವಾಗ್ಮಿ. ಈ ಪತ್ರವನ್ನು ಪ್ರಕಟಿಸಬೇಡ. (ಈ ಪತ್ರವನ್ನು) ನೀನು ಓದಿದ ನಂತರ ಖೇತ್ರಿ ಮಹಾರಾಜರಿಗೆ ಕಳಿಸು….’ ಎಂದು ಮತ್ತು ೨೧/೧೧/೧೮೯೩ ರಂದು ಶ್ರೀಮತಿ ಹೇಲ್’ಗೆ ಮಿನಿಯಾಪೊಲಿಸ್’ನಿಂದ ಬರೆದ ಪತ್ರದಲ್ಲಿ ‘ ಆಪ್'ಡೈಕ್ ಇಲ್ಲಿನ ಜಾಗಗಳನ್ನು ತೋರಿಸಿ ವಿಶ್ವವಿದ್ಯಾಲಯಕ್ಕೆ ಕರೆದುಕೊಂಡು ಹೋದರು. ಅಲ್ಲಿಯವರು ಒಳ್ಳೆಯ ಕೇಳುಗರು. ೧೦೦ ಡಾಲರ್ ಸಿಕ್ಕಿತು. ಇದನ್ನು ಬ್ಯಾಂಕ್ ಡ್ರಾಫ್ಟ್ ರೂಪದಲ್ಲಿ ಪಡೆದೆ ೪೦ ಸೆಂಟ್ ಖರ್ಚಾಯಿತು. ಪ್ರಚಾರಕರ ರೈಲ್ವೇ ಟಿಕೆಟ್ ಸಿಗಲಿಲ್ಲ.’ ಎಂದು ಬರೆದಿದ್ದಾರೆ.
ಸ್ವಾಮಿಗಳ ಈ ಪತ್ರಗಳಿಂದ ಭಾರತದ ಇತರ ಪ್ರತಿನಿಧಿಗಳು ಭಾಷಣದ ಮೂಲಕ ಹಣ ಸಂಪಾದಿಸುತ್ತಿದ್ದರು. ಸ್ವಾಮಿಗಳು ಅದನ್ನೇ ಮಾಡಬೇಕೆಂದಿದ್ದಾರೆ. ಇದರ ಹಿಂದಿರುವ ಉದ್ದೇಶ ಭಾರತದಲ್ಲಿ ಒಂದು ಮಠ ಹಾಗೂ ಕಾಲೇಜನ್ನು ಕಟ್ಟಬೇಕೆಂದಿರುವುದು. ಆದರೆ ಈ ಉದ್ದೇಶ ಇತರರಿಗ ಗೊತ್ತಾಗದೆ ಸ್ವಾಮಿಗಳು ಧರ್ಮಪ್ರಚಾರ ಮಾಡುತ್ತಿದ್ದಾರೆ ಎನ್ನುವಂತೆ ಸಾಧಿಸಬೇಕು ಎನ್ನುವ ಹಂಬಲ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಕೆಲಸಕ್ಕೆ ಸೇರಿರುವವರು ಖುಷಿಯಿಂದ ತಮ್ಮ ಗಳಿಕೆಯನ್ನು ಹೇಳಿಕೊಳ್ಳುವಂತೆ ಸ್ವಾಮಿಗಳು ಹೇಳಿಕೊಳ್ಳುತ್ತಿದ್ದಾರೆ. ಈ ಸ್ಥಿತಿಯಲ್ಲಿ ಅಧ್ಯಾತ್ಮ , ಧರ್ಮ , ಮುಕ್ತಿಗಳು ಹಿಂದಕ್ಕೆ ಸರಿದು ಭಾಷಣ ನೀಡುವುದು ಅವರ ಕಸುಬಾಗುವ ಹಂತ ತಲುಪಿತು. ತಮ್ಮ ಭಾಷಣಗಳು ಗಳಿಕೆಯ ದೃಷ್ಟಿಯಿಂದ ಯಶಸ್ವಿಯಾಗುತ್ತಿರುವುದು ಸ್ವಾಮಿಗಳ ಚಿಂತನೆಗೆ ತಿರುವುಗಳನ್ನು ತರತೊಡಗಿ ಅವರು ಇತರರಿಗಿಂತ ಭಿನ್ನವಾದ ದಾರಿ ತುಳಿಯಲು ಕಾರಣವಾಯಿತು. ಅಮೆರಿಕದಲ್ಲಿ ಉತ್ತಮ ಭಾಷಣಕಾರರೊಂದಿಗೆ ಒಪ್ಪಂದ ಮಾಡಿಕೊಂಡು , ನಿರ್ದಿಷ್ಟ ಕರಾರುಗಳ ಮೂಲಕ ಅವರಿಗೆ ಹಣ ಸಂದಾಯ ಮಾಡಿ ಉಪನ್ಯಾಸಗಳನ್ನು ವಾಣಿಜ್ಯೀಕರಿಸುವ ಮತ್ತು ಉಪನ್ಯಾಸ ಸಂಚಾರಗಳನ್ನು ಏರ್ಪಡಿಸುವ ಪದ್ದತಿಯಿದ್ದಿತು. ಇದಕ್ಕಾಗಿ ಹಲವು ಖಾಸಗಿ ಸಂಸ್ಥೆಗಳಿದ್ದವು. ನ್ಯೂಯಾರ್ಕ್’ನ ಪಾಂಡ್ಸ್ ಲೆಕ್ಚರ್ ಬ್ಯೂರೋ ಮತ್ತು ಷಿಕಾಗೊದ ಕ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೋ ಬಹು ಖ್ಯಾತವಾಗಿದ್ದವು. ಭಾರತದಲ್ಲಿ ನೌಕರಿ ಹಿಡಿದು ಆದಾಯ ಗಳಿಸುವಲ್ಲಿ ಸೋತಿದ್ದ ಸ್ವಾಮಿಯವರಿಗೆ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಉಪನ್ಯಾಸ ಕೊಡುವುದನ್ನು ಆದಾಯದ ಮೂಲವಾಗಿ ಪರಿವರ್ತಿಸಬಹುದೆಂದು ಮನದಟ್ಟಾಗಿದ್ದಿತು. ಈ ಹಿನ್ನೆಲೆಯಲ್ಲಿ ಅವರು ಅಮೆರಿಕನ್ನರಲ್ಲಿ ದಾನ ಕೇಳುವ ಬದಲು ಉಪನ್ಯಾಸ ವೃತ್ತಿಯ ಮೂಲಕ ಹಣ ಗಳಿಸಲು ಯತ್ನಿಸತೊಡಗಿದರು. ಭಾಷಣಗಳನ್ನು ಮಾಡಿ ಸಂಪಾದಿಸುವ ಸ್ವಾಮಿಗಳ ಉತ್ಸಾಹ ಮುಂದಿನ ದಿನಗಳಲ್ಲಿಯ ಮುಂದುವರೆದಿದ್ದಿತು. ಸ್ವಾಮಿಗಳು ತನ್ನನ್ನು ಅಮೆರಿಕಕ್ಕೆ ಕರೆದೊಯ್ದು ಅಲ್ಲಿ ಯಾವುದಾದರೂ ಲೆಕ್ಚರ್ ಬ್ಯೂರೊ ಜೊತೆ ಒಪ್ಪಂದ ಮಾಡಿಕೊಂಡು , ಉಪನ್ಯಾಸಗಳನ್ನು ಕೊಡಿಸಿ ಹಣ ಸಂಪಾದಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆಂದು ಮಾರ್ಗರೆಟ್ ನೋಬಲ್ ೭/೬/೧೮೯೯ ರಂದು ಜೊಸೆಫಿನ್ ಮೆಕ್ಲಿಯಾಡ್’ಗೆ ಬರೆದ ಪತ್ರದಲ್ಲಿ ತಿಳಿಸಿದ್ದಳು. (115)
ಶಾಶ್ವತ ನೆಲೆ ಇಲ್ಲದಿದ್ದರೆ ಭಾರತದ ಅಸಂಖ್ಯಾತ ಅಲೆಮಾರಿ ಸಂನ್ಯಾಸಿಗಳಂತೆ ತಾವೂ ಕೂಡ ಕಾಲಗರ್ಭದಲ್ಲಿ ಕಣ್ಮರೆಯಾಗುವುದು ಖಚಿತವಾಗಿದ್ದಿತು. ರಾಮಕೃಷ್ಣರ ಮಠವನ್ನು ಕಟ್ಟಲು ಬೇಕಾದ ಸಂಪನ್ಮೂಲಗಳು ಭಾಷಣಗಳಲ್ಲಿ ಕಾಣತೊಡಗಿದವು. ಹಾಗಾಗಿ ವಿಶ್ವ ಧರ್ಮ ಸಂಸತ್ತಿನ ಕೊನೆ ಅವರ ಉಪನ್ಯಾಸ ವೃತ್ತಿಯ ಆರಂಭವಾಯಿತು. ಲೌಕಿಕ ಜೀವನದ ನಿರರ್ಥಕತೆ , ಶಾಶ್ವತವಾದ ಆತ್ಮ . ಧರ್ಮ, ಮುಕ್ತಿ ಮುಂತಾದವುಗಳ ಬಗ್ಗೆ ವೇದಿಕೆಗಳಿಂದ ಬೋಧಿಸುವ ಎಲ್ಲ ಗುರುಗಳ ಕೊನೆಯ ಗುರಿ ಈ ಅಶಾಶ್ವತ ಭೂಮಿಯ ಮೇಲೆ ಒಂದು ನಿರ್ದಿಷ್ಟ ವಿಳಾಸವಿರುವ ಒಂದು ಸಂಸ್ಥೆ ಅಥವಾ ಮಠವನ್ನು ಸ್ಥಾಪಿಸುವುದು. ಮಠ ಅಥವಾ ಆಶ್ರಮ ಸ್ಥಾಪನೆಗೆ ಸಾವಿರ ಧಾರ್ಮಿಕ , ಸಾಮಾಜಿಕ, ಸಾಂಸ್ಕೃತಿಕ ಸಮರ್ಥನೆಗಳನ್ನು ಕೊಡಬಹುದಾದರೂ ಆ ಎಲ್ಲ ಕೆಲಸಗಳು ಲೌಕಿಕವೇ. ಭವಬಂಧನದಲ್ಲಿ ಸಿಲುಕಿರುವ ಸಾಮಾನ್ಯ ಮನುಷ್ಯ ಒಂದು ಕಂಪೆನಿಯನ್ನು ಪ್ರಾರಂಭಿಸಿ ಬೆಳೆಸಲು ಮಾಡುವ ಹೋರಾಟಕ್ಕಿಂತ ಧಾರ್ಮಿಕ ಸಂಸ್ಥೆಯನ್ನು ಕಟ್ಟುವುದು ಬೇರೆಯಲ್ಲ. ಒಂದು ಅಧ್ಯಾತ್ಮದ ಸೋಗಿನಲ್ಲಿರುವ ಲೌಕಿಕ. ಇನ್ನೊಂದು ಶುದ್ಧ ಲೌಕಿಕ. ಸ್ವಾಮಿಗಳು ಬಹು ಹಿಂದಿನಿಂದ ಮಾಡಬೇಕೆಂದಿದ್ದ ಭಾರತದ ಕೆಲಸ ಇದೇ ಆಗಿದ್ದಿತು. ಆತ್ಮೋದ್ಧಾರದ ಎಲ್ಲ ಘೋಷಣೆಗಳು ಕೊನೆಗೆ ಲೌಕಿಕ, ಸಾಮಾಜಿಕವಾಗಿ ಪರಿವರ್ತನೆಯಾಗುವುದೇ ಹೀಗೆ .
ಭಾಷಣ ನಿರ್ವಹಣೆಯ ಕಂಪೆನಿಯ ಮುಖ್ಯಸ್ಥ ಸ್ಲೇಟನ್ ವ್ಯವಹಾರದ ಭಾಗವಾಗಿ ಹೊಸ ಭಾಷಣಕಾರರನ್ನು ಹುಡುಕುತ್ತಿದ್ದು , ಆತನ ಪರಿಚಿತನಾಗಿದ್ದ ರೆ. ಡಾ. ಡಬ್ಲ್ಯು.ಎಚ್. ಥಾಮಸ್ ಸ್ವಾಮಿಗಳ ಹೆಸರನ್ನು ಸೂಚಿಸದಂತಿದೆ. ನವೆಂಬರ್ ಮೊದಲ ವಾರದಲ್ಲಿ ( ೩/೧೧/೧೮೯೩ ಇರಬಹುದು) ಸ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೋ ಕಂಪೆನಿಯೊಂದಿಗೆ ಮೂರು ವರ್ಷಗಳ ಕಾಲ ಉಪನ್ಯಾಸಗಳನ್ನು ಕೊಡುವ ಅದಕ್ಕೆ ಪ್ರತಿಯಾಗಿ ಹಣ ಪಡೆಯುವ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಧೀರ ವೇದಾಂತಿ , ಲೌಕಿಕ ಅನಾಸಕ್ತ , ಹೆಣ್ಣು-ಹೊನ್ನುಗಳನ್ನು ಗೆದ್ದ ಸ್ವಾಮಿಗಳು ತಾವೇ ಹೆಣೆದುಕೊಂಡ ಭಾಷಣಗಳ ಮಾಯಾಜಾಲದಲ್ಲಿ ಬಂಧಿಯಾದರು. ಇದರ ಪರಿಣಾಮವಾಗಿ ಅವರ ನಡು ಪಡುವಣ ಪ್ರದೇಶದ ಉಪನ್ಯಾಸ ಸಂಚಾರಗಳು ೨೦ ನವೆಂಬರ್’ನಿಂದ ಅಧಿಕೃತವಾಗಿ ವೇಳಾಪಟ್ಟಿಯ ರೂಪದಲ್ಲಿ ಪ್ರಾರಂಭವಾದವು. (116)
ಸ್ವಾಮಿಗಳು ಸ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೋದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ ಅವರ ಪ್ರವಾಸ ಕಾರ್ಯಕ್ರಮದಿಂದ ಪ್ರಾರಂಭಿಸಿ , ಭಾಷಣಗಳ ಪ್ರಚಾರ , ನಿರ್ವಹಣೆಯನ್ನು ಸಂಪೂರ್ಣ ಅವರೇ ಹೊರತೊಡಗಿದರು. ನಿಗದಿತ ದಿನ , ನಿಗದಿತ ಸ್ಥಳದಲ್ಲಿ ಭಾಷಣ ಮಾಡುವುದಷ್ಟೇ ಸ್ವಾಮಿಗಳ ಕೆಲಸವಾಗಿದ್ದಿತು. ಅಮೆರಿಕದ ಉಪನ್ಯಾಸ ಸಂಚಾರಗಳನ್ನು ಏರ್ಪಡಿಸುತ್ತಿದ್ದ ಕಂಪೆನಿಗಳು ಆ ಕಾಲದಲ್ಲಿ ಕರ್ನಾಟಕದಲ್ಲಿದ್ದ ವೃತ್ತಿಪರ ನಾಟಕ ಕಂಪೆನಿಗಳಿಗಿಂತ ಭಿನ್ನವಾಗಿರಲಿಲ್ಲ. ಅವು “ ರಸಿಕರೇ ಕೇಳಲು ಮರೆಯದಿರಿ; ಮರೆತು ನಿರಾಶರಾಗದಿರಿ” ವೈಖರಿಯಲ್ಲಿಯೇ ಪ್ರಚಾರ ಮಾಡುತ್ತಿದ್ದವು. ಆಯೋಜಿಸಿದ್ದ ಕಾರ್ಯಕ್ರಮವನ್ನು ಸಾದ್ಯವಾದಷ್ಟು ಮಟ್ಟಿಗೆ ಪ್ರಚಾರ ಮಾಡಿ ಹಣ ಗಳಿಸುವುದೇ ಕಂಪೆನಿಗಳ ಗುರಿಯಾಗಿದ್ದಿತು. ಕಂಪೆನಿಗಳೊಂದಿಗೆ ಇಂತಹ ಉಪನ್ಯಾಸ ಸಂಚಾರಕ್ಕೆ ಒಪ್ಪಂದ ಮಾಡಿಕೊಂಡಿದ್ದ ಒಬ್ಬ ಭಾಷಣಕಾರ ೧೮೯೦ ರಲ್ಲಿ ತನ್ನ ಅನುಭವವನ್ನು ಹೀಗೆ ದಾಖಲಿಸಿದ್ದಾನೆ- ‘ನೀವು ಉಪನ್ಯಾಸ ಸಂಚಾರಕ್ಕೆ ಅಮೆರಿಕಕೆ ಬಂದರೆ ದೊಡ್ಡ ಗಾತ್ರದ ಕಲ್ಲಚ್ಚಿನ ನಿಮ್ಮ ಚಿತ್ರಗಳು ಊರಿನ ಗೋಡೆಗಳ ಮೇಲೆ , ಹೋಟೆಲ್’ಗಳ ಪ್ರವೇಶ ದ್ವಾರದಲ್ಲಿ , ಅಂಗಡಿಗಳ ಕಿಟಕಿಗಳ ಮೇಲೆ ಎಲ್ಲೆಂದರಲ್ಲಿ ಕಂಡುಬಂದು ನಿಮ್ಮ ಮುಖವನ್ನೇ ದಿಟ್ಟಿಸಿ ನೋಡುತ್ತಿವೆ ಎನಿಸುತ್ತದೆ. ನಿಮ್ಮ ಮುಖವೇ ಊರಿನ ತುಂಬ ಕಾಣುತ್ತದೆ. ನೀವು ಶಾಂತಿ ಮತ್ತು ಖಾಸಗಿತನ ಬಯಸುವಿರಾದರೆ ಅಮೆರಿಕದಲ್ಲಿ ಉಪನ್ಯಾಸ ಸಂಚಾರಕ್ಕೆ ಹೋಗಬೇಡಿ’ (117)
ಸ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೊ ನೀಡಿದ ಒಂದು ಜಾಹಿರಾತಿನಲ್ಲಿ ‘ ಖ್ಯಾತ ಹಿಂದೂ ಸಂನ್ಯಾಸಿ ಸ್ವಾಮಿ ವಿವೇಕಾನಂದ ಕೊನೆಯ ಬಾರಿ ಡೆ ಮೊಯಿನ್ಸ್’ನಲ್ಲಿ ಅತ್ಯಂತ ಆಸಕ್ತಿದಾಯಕವಾದ ‘ಲೈಫ್ ಇನ್ ಇಂಡಿಯಾ’ ಎನ್ನುವ ಭಾಷಣ ಮಾಡುತ್ತಾರೆ. ಈ ಖ್ಯಾತ ಹಿಂದೂ ೩೦ ವರ್ಷದ ಮೇಧಾವಿ. ಆತ ಅಮೆರಿಕದ ಹೆಂಗಸರು ಚೆಲುವೆಯರು , ಗಂಡಸರು ವ್ಯಾವಹಾರಿಕರು ಎನ್ನುತ್ತಾನೆ’ ಎಂದಿದ್ದಿತು. ಇನ್ನೊಂದು ಪ್ರಚಾರ ಪತ್ರದಲ್ಲಿ ಸ್ವಾಮಿಗಳ ದೊಡ್ಡ ಚಿತ್ರ ಅದರೊಂದಿಗೆ ‘ವೇದಿಕೆಯ ಮಹಾ ದೈತ್ಯ’ ಎನ್ನುವ ಘೋಷಣೆ. ಅದರ ನಾಲ್ಕು ಮೂಲೆಗಳಲ್ಲಿ ‘ ದೈವದತ್ತ ಮಹಾ ವಾಗ್ಮಿ’ , ‘ತನ್ನ ಜನಾಂಗದ ಮಾದರಿ ಪ್ರತಿನಿಧಿ’, ಇಂಗ್ಲಿಷ್ ಭಾಷೆಯ ಆಚಾರ್ಯ ‘ , ವಿಶ್ವ ಧರ್ಮ ಸಂಸತ್ತಿನ ಸಂವೇದಕ’ ಎಂದು ಬರೆಯಲಾಗಿದ್ದಿತು. ಇದರೊಂದಿಗೆ ಸ್ವಾಮಿಗಳ ನಿಲುವು , ಬಣ್ಣ, ಆಕರ್ಷಣೆ , ಉಡುಗೆ , ತೊಡುಗೆಗಳ ವರ್ಣನೆಗಳಿರುತ್ತಿದ್ದವು. (118) ಸ್ವಾಮಿ ವಿವೇಕಾನಂದ ಎನ್ನುವ ಹೆಸರು ಅಮೆರಿಕನ್ನರಿಗೆ ನೆನಪಿಡಲು ಮತ್ತು ಉಚ್ಛರಿಸಲು ತೊಡಕಿನದಾಗಿದ್ದರಿಂದ ಸ್ಲೇಟನ್ ಲೈಸಿಯಂ ಕಂಪೆನಿ ಅದನ್ನು Vive Kananada’ ಎಂದು ಬಿಡಿಸಿ ಬರೆಯತೊಡಗಿತು. ಬರಬರುತ್ತ Vive ಕಳಚಿ kananda ಮಾತ್ರ ಉಳಿದು ಪತ್ರಿಕೆಗಳು , ಜನ ಹಾಗೆಯೇ ಹೇಳತೊಡಗಿದರು. (119)
ಹಾಕಿದ ಬಂಡವಾಳಕ್ಕೆ ಕೊಡುವ ಸಂಬಳಕ್ಕೆ ತಕ್ಕಂತೆ ದುಡಿಸಿಕೊಳ್ಳುವ ಕಲೆ ಅಮೆರಿಕದ ಕಾರ್ಪೊರೆಟ್ ಕಂಪೆನಿಗಳ ಮಂತ್ರವಾಗಿದ್ದು ಅದಕ್ಕೆ ಸಂನ್ಯಾಸಿ , ಸಂಸಾರಿ ಎನ್ನುವ ಭೇದವಿರಲಿಲ್ಲ. ಕ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೋ ತನ್ನ ಒಪ್ಪಂದಕ್ಕೆ ಅನುಗುಣವಾಗಿ ಸ್ವಾಮಿಗಳನ್ನು ಭಾಷಣಗಳಿಗಾಗಿ ಊರಿಂದ ಊರಿಗೆ ಅಲೆಸತೊಡಗಿತು. ಸ್ವಾಮಿಗಳು ಶ್ರೀಮತಿ ಹೇಲ್’ಗೆ ೨೦/೨/೧೮೯೪ ರಂದು ಬರೆದ ಇದನ್ನು ಪತ್ರ ಖಚಿತಪಡಿಸುತ್ತದೆ. ‘ ಇಲ್ಲಿ ಮಾಡಬೇಕಾದ ಪ್ರವಚನಗಳು ಮುಗಿದವು. ಕೆಲವರು ಒಳ್ಳೆಯ ಸ್ನೇಹಿತರನ್ನು ಪಡೆದುಕೊಂಡೆ. ಅವರಲ್ಲಿ ಶ್ರೀ ಪಾಮರ್ ಒಬ್ಬರು. ಹಿಂದೆ ನಡೆದ ಜಾಗತಿಕ ಮೇಳದ ಅಧ್ಯಕ್ಷರು. ಸ್ಲೇಟನ್ ವ್ಯವಹಾರದಿಂದ ನನಗೆ ತೀವ್ರ ಜುಗುಪ್ಸೆ ಉಂಟಾಗಿದೆ. ಅದರಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿರುವೆನು. ಇವರ ಜೊತೆ ಸೇರಿದ್ದರಿಂದ ಕನಿಷ್ಟ ೫೦೦೦ ಡಾಲರ್ ನನ್ನ ಕೈಬಿಟ್ಟಿವೆ. ……..ಪ್ರವಚನಗಳನ್ನು ಇಲ್ಲಿ ಏರ್ಪಾಡು ಮಾಡಿದ್ದವರಿಗೆ ಕನಿಷ್ಟ ೧೦೦೦ ಡಾಲರ್ ದೊರೆಯಿತು. ….ಅಮೆರಿಕನ್ನರು ನನ್ನನ್ನು ಇಷ್ಟಪಡುವುದನ್ನು ನೋಡಿದರೆ ಈ ವೇಳೆಗೆ ನಾನು ಬಹಳಷ್ಟು ಹಣ ಪಡೆಯಬಹುದಿತ್ತು. ಆದರೆ ಹಾಗಾಗದಿರಲು ದೇವರು ಜಿಮ್ಮಿ ಮಿಲ್ಸ್ ಮತ್ತು ಸ್ಲೇಟನ್ ಅವರನ್ನು ಕಳಿಸಿದ್ದಾನೆ. ಅವನ ರೀತಿ ನೀತಿಗಳನ್ನು ತಿಳಿಯಲಾಗದು. ರಹಸ್ಯವಾದ ವಿಷಯವೊಂದಿದೆ. ಸುಳ್ಳುಗಾರ ಸ್ಲೇಟನ್’ನಿಂದ ಬಿಡಿಸಲು ಅವರು (ಪಾಮರ್) ಷಿಕಾಗೊಗೆ ಹೋಗಿದ್ದಾರೆ. ಅವರು ಆ ಪ್ರಯತ್ನದಲ್ಲಿ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ. ಅನೇಕ ನ್ಯಾಯವಾದಿಗಳು ನನ್ನ ಒಪ್ಪಂದವನ್ನು ನೋಡಿದ್ದಾರೆ. ಅದೊಂದು ಅವಮಾನಕರವೆಂದು ಮತ್ತು ಮೋಸವೆಂದು ಅದನ್ನು ಮುರಿದು ಹಾಕಬಹುದೆಂದು ಹೇಳಿದ್ದಾರೆ. ಆದರೆ ನಾನೊಬ್ಬ ಸಂನ್ಯಾಸಿ, ನನಗೆ ಸ್ವಯಂ ರಕ್ಷಣೆ ಬೇಡ. ಆದ್ದರಿಂದ ಇವುಗಳನ್ನೆಲ್ಲ ಬಿಸುಟು ಭಾರತಕ್ಕೆ ಹೋಗುವೆ ‘.
ಇದಾದ ಎರಡು ದಿನದ ನಂತರ ಶ್ರೀಮತಿ ಹೇಲ್’ಗೆ (೨೨/೨/೧೮೯೪) ‘ ಒಪ್ಪಂದಕ್ಕಾಗಿ ೨೦೦ , ಖಾಸಗಿ ಪ್ರವಚನದಿಂದ ೧೨೫ ಮತ್ತು ೧೧೩ ಮತ್ತು ಒಬ್ಬ ಮಹಿಳೆಯಿಂದ ಬಳುವಳಿಯಾಗಿ ೧೦೦ ಡಾಲರ್ ನನಗೆ ದೊರೆತಿವೆ- ದಯವಿಟ್ಟು ಸ್ಲೇಟನ್ ಅವರಿಗೆ ಉಳಿದ ಹಣದ ವಿಷಯ ತಿಳಿಯುವುದು ಬೇಡ. ಏಕೆಂದರೆ ನಾನು ಅವರಿಂದ ಬೇರೆಯಾಗುತ್ತಿದ್ದೇನೆ ‘ ಎಂದು ಬರೆದರು. ಸ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೊದಿಂದ ಸ್ವಾಮಿಗಳಿಗೆ ಅನ್ಯಾಯವಾಗಿದ್ದಿತೋ , ಸ್ವಾಮಿಗಳು ಒಂದು ರೀತಿಯಲ್ಲಿ ಶೋಷಣೆಗೆ ಒಳಗಾಗಿದ್ದರೋ ಅಥವಾ ಅನನುಭವದಿಂದಾಗಿ ಆ ಸಂಸ್ಥೆಯ ಕರಾರುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಒಪ್ಪಂದ ಮಾಡಿಕೊಂಡಿದ್ದರೋ ತಿಳಿಯದು. ಆದರೆ ಸ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೋ ಜೊತೆ ಮಾಡಿಕೊಂಡ ಒಪ್ಪಂದ ಜಾರಿಯಲಿರುವಾಗಲೇ ಸ್ವಾಮಿಗಳು ಅವರಿಗೆ ತಿಳಿಯದಂತೆ ಉಪನ್ಯಾಸಕ್ಕೆ ಮುಂಗಡ ಪಡೆದದ್ದು , ಉಪನ್ಯಾಸದಿಂದ ಹಣ ಗಳಿಸಿದ್ದು ವ್ಯಾವಹಾರಿಕ ದೃಷ್ಟಿಯಲ್ಲಿ ಅನೈತಿಕವಾಗಿದ್ದವು.
‘…ಒಬ್ಬ ಹುಡುಗಿ ತಿಳಿಸಿದಂತೆ ಟಿಕೆಟ್'ಗಳು ಬಿಸಿ ರೊಟ್ಟಿಯಂತೆ ಖರ್ಚಾಗುತ್ತಿವೆ……ಎಂದು ಹೆಮ್ಮೆಯಿಂದ ಇದ್ದ ಸ್ವಾಮಿಗಳು ಕ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೋ ಜೊತೆ ಒಪ್ಪಂದ ಮುರಿದುಕೊಂಡ ನಂತರ ತಮ್ಮ ಭಾಷಣಗಳನ್ನು ಹೋಲ್ಡನ್ ಎನ್ನುವ ಮತ್ತೊಬ್ಬ ದಲ್ಲಾಳಿಯ ಮೂಲಕ ಏರ್ಪಡಿಸಲು ಯೋಜಿಸಿದ್ದರು. (೧೦/೩/೧೮೯೪) . ಅದಕ್ಕಾಗಿ ಫೋಟೊಗಳನ್ನು ತೆಗೆಸಿಕೊಂಡಿದ್ದು ಅದರಲ್ಲಿ ತಾವು ಚೆನ್ನಾಗಿ ಕಾಣಿಸುತ್ತಿಲ್ಲ ಎಂದು ಬೇಸರ ಪಟ್ಟಿದ್ದರು. ಇದಾದ ಎರಡು ದಿನಗಳ ನಂತರ ೧೩/೩/೧೮೯೪ ರಂದು ಪಾಮರ್ ನೆರವಿನಿಂದ ಸ್ವಾಮಿಗಳು ಸ್ಲೆಟನ್ ಲೈಸಿಯಂ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಕಾನೂನಿನ ನೆರವಿನಿಂದ ಕೊನೆಗೊಳಿಸಿಕೊಂಡರು. ‘… ನಾನಿಂದು ಅಪೆರಾ ಹೌಸ’ನಲ್ಲಿ ಎರಡೂವರೆ ಗಂಟೆಗಳ ಕಾಲ ಮಾತನಾಡಿದೆ…..ನನ್ನ ಉಪನ್ಯಾಸ ಹೆಚ್ಚು ಜನಾದರಣೀಯವಾದಂತೆ ನನಗೆ ಅದರ ಮೇಲೆ ಜುಗುಪ್ಸೆ ಹುಟ್ಟುತ್ತಿದೆ. ನನ್ನ ಈ ಕಳೆದ ಉಪನ್ಯಾಸವೇ ಅತ್ಯುತ್ತಮವಾದುದು….. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವುದನ್ನು ೧೨/೩/೧೮೯೪ ರ ಪತ್ರದ ತಿರುಳಾಗಿದ್ದಿತು. ೧೯/೩/೧೮೯೪ ರಂದು ರಾಮಕೃಷ್ಣಾನಂದರಿಗೆ ‘……ಇಲ್ಲಿ ಭಿಕ್ಷೆ ಬೇಡುವುದು ವಾಡಿಕೆಯಿಲ್ಲ. ಅದಕ್ಕಾಗಿ ನಾನು ಕೆಲಸ ಮಾಡಬೇಕಿದೆ. ಎಂದರೆ ಉಪನ್ಯಾಸ ಮಾಡಬೇಕಿದೆ…ಮೊದಲು ನನಗೆ ಸ್ವಲ್ಪ ಅಂಜಿಕೆಯಾಯಿತು. ಆದರೆ ಆನಂತರ ಆವಶ್ಯಕತೆ ಇರುವುದರಿಂದ ಒಂದು ದಿನ ರೈಲಿನಲ್ಲಿ ಕೆನಡಾ ದೇಶದ ಸಮೀಪಕ್ಕೆ ಮತ್ತೊಂದು ದಿನ ದಕ್ಷಿಣ ಅಮೆರಿಕದ ದಕ್ಷಿಣ ಭಾಗಕ್ಕೆ ಉಪನ್ಯಾಸ ಮಾಡಲು ಹೋಗುತ್ತೇನೆ. ….ಕಲಾಕೌಶಲ್ಯದಲ್ಲಿ , ಭೋಗ ವಿಲಾಸದಲ್ಲಿ ಈ ಜನ ಅಗ್ಯಗಣ್ಯರು. .. ಒಂದು ಉಪನ್ಯಾಸಕ್ಕೆ ರೂ ೨೦೦ ರಿಂದ ೩೦೦೦ ವರೆಗೆ ದಕ್ಕುವುದು….ನನಗೆ ರೂ. ೫೦೦ ರೂವರೆಗೆ ದಕ್ಕುವುದು. ನಿಜವಾಗಿಯೂ ಈಗ ನನ್ನ ಅದೃಷ್ಟದ ಬಾಗಿಲು ತೆರೆದಿದೆ. ಇಲ್ಲಿಯ ಜನರಿಗೆ ನನ್ನ ಮೇಲೆ ಅಭಿಲಾಷೆ. ಸಾವಿರಾರು ಜನ ನನ್ನ ಉಪನ್ಯಾಸಗಳನ್ನು ಕೇಳುವುದಕ್ಕೆ ಬರುತ್ತಿದ್ದಾರೆ…ಎಂದು ತಮ್ಮ ಹೊಸ ಕೆಲಸದ ಬಗ್ಗೆ ಹೆಮ್ಮೆ ತಾಳಿದ್ದರು.
ಭಾರತದಲ್ಲಿ ರಾಮಕೃಷ್ಣರ ಹೆಸರಿನಲ್ಲಿ ಒಂದು ಮಠ ಕಟ್ಟುವುದು , ಅಧುನಿಕ ವಿದ್ಯಾಭ್ಯಾಸದೊಂದಿಗೆ ಅಧ್ಯಾತ್ಮ ಶಿಕ್ಷಣ ನೀಡುವ ಶಾಲೆ ತೆರೆಯುವುದು ಸ್ವಾಮಿಗಳ ಕನಸಿನ ಯೋಜನೆಗಳಾಗಿದ್ದವು. ಇದೇ ಅವರು ಮೇಲಿಂದ ಮೇಲೆ ಹೇಳುತ್ತಿದ್ದ ಭಾರತದ ಕೆಲಸವಾಗಿದ್ದಿತು. ಈ ಕೆಲಸವನ್ನು ಸಾಧಿಸಲು ಅಮೆರಿಕದಲ್ಲಿ ಭಾಷಣಗಳನ್ನು ಮಾಡಿ ಅದಕ್ಕೆ ಬೇಕಾದ ಹಣವನ್ನು ದುಡಿಯುವ ಯೋಚನೆ ಸ್ವಾಮಿಗಳಿಗಿದ್ದಿತು. ಭಾಷಣ ಮಾಡಿ ತಮ್ಮ ಯೋಜನೆಗೆ ಬೇಕಾದ ಹಣವನ್ನು ಗಳಿಸುವ ಯೋಜನೆ ವಿಫಲವಾಗುತ್ತಿದೆ ಎನ್ನುವುದು ಸ್ವಾಮಿಗಳಿಗೆ ದಿನದಿಂದ ದಿನಕ್ಕೆ ಮನದಟ್ಟಾಗತೊಡಗಿತು. ೧೬/೩/೧೮೯೪ ರಂದು ಶ್ರೀಮತಿ ಜಾರ್ಜ್ ಹೇಲ್’ಗೆ ಬರೆದ ಪತ್ರದಲ್ಲಿ ‘ ನಾನು ಜೀವನವನ್ನು ನೈಜವಾದ ರೀತಿಯಲ್ಲಿ , ಸುಲಭವಾಗಿ ತೆಗೆದುಕೊಳ್ಳತ್ತಿದ್ದೇನೆ. …..ಏನಾದರೂ ಬರಲಿ ಎನ್ನುವ ಸೊಗಸಾದ ಮನೋಸ್ಥಿತಿಯಲ್ಲಿ ಇದ್ದೇನೆ. ಒಳ್ಳೆಯದೋ ಕೆಟ್ಟದ್ದೋ ಏನೋ ಒಂದು ಆಗಬೇಕು. (ಭಾರತಕ್ಕೆ) ಹಿಂದಿರುಗಿ ಹೋಗುವಷ್ಟು ಮತ್ತು ಸ್ವಲ್ಪ ಸುತ್ತಾಡಲು ಸಾಕಾಗುವಷ್ಟು ಹಣವಿದೆ. ನನ್ನ ಕಾರ್ಯ ಯೋಜನೆಯ ಬಗ್ಗೆ ಹೇಳುವುದಾದರೆ ಅದನ್ನು ಯಾವುದೇ ಒಂದು ರೂಪಕ್ಕೆ ತರಬೇಕಾದರೂ ನಾನು ನಾಲ್ಕೈದು ಬಾರಿ ಹಿಂದಿರುಗಿ ಬರಬೇಕಾಗಬಹುದು ಎಂದು ನನಗೆ ಸಂಪೂರ್ಣ ಮನದಟ್ಟಾಗಿದೆ’….ಇತರರಿಗೆ ತಿಳಿವಳಿಕೆ ನೀಡುವುದರ ಮೂಲಕ ಅವರಿಗೆ ಒಳ್ಳೆಯದನ್ನು ಮಾಡುವುದರ ಬಗ್ಗೆ ನಾನು ಜಗತ್ತಿಗೆ ತಿಳಿಸಲು ನನ್ನಲ್ಲಿ ಯಾವ ಸಾರ್ಥಕವಾದ ವಿಷಯವೂ ಇಲ್ಲ. ಆದ್ದರಿಂದ ಸದ್ಯದಲ್ಲಿ ನಾನು ಆರಾಮವಾಗಿ ಇದ್ದೇನೆ. ನಿರ್ಜನವೆಂದೇ ಹೇಳಬಹುದಾದ ವಿಶಾಲವಾದ ಈ ಮನೆಯಲ್ಲಿ ನನ್ನ ತುಟಿಗಳ ನಡುವೆ ಚುಟ್ಟ ಇಟ್ಟುಕೊಂಡು ನಾನೀಗ ಕನಸು ಕಾಣುತ್ತಿದ್ದೇನೆ ಮತ್ತು ನನ್ನ ಕೆಲಸದ ಹುಚ್ಚನ್ನು ತಾತ್ತ್ವಿಕವಾಗಿ ಪರಿಶೀಲಿಸುತ್ತಿದ್ದೇನೆ. ಅದೆಲ್ಲ ಅರ್ಥ ಶೂನ್ಯ……..’ ಎಂದು ತಾವಿನ್ನು ಹಣ ಗಳಿಸುವಲ್ಲಿ ತಮ್ಮ ಗುರಿ ತಲುಪಿಲ್ಲವೆನ್ನುವುದನ್ನು ತೋಡಿಕೊಂಡಿದ್ದರು.
‘….. ಕೂಟಗಳಲ್ಲಿ ಪ್ರವಚನಗಳನ್ನು ಏರ್ಪಡಿಸುವುದು ಈ ನಗರದ ವಿಶೇಷ ಪದ್ದತಿ. ಬೇರೆ ಪಟ್ಟಣಗಳಲ್ಲಿರುವಂತೆ ವೇದಿಕೆ ಭಾಷಣ ಮಾಡುವುದಕ್ಕಿಂತ ಹೆಚ್ಚು ಹಣವನ್ನು ಇಂತಹ ಕೂಟಗಳಲ್ಲಿ ಮಾಡಬಹುದು’ ( ೨/೪/೧೮೯೪) ಮತ್ತು ಷಿಕಾಗೊದ ಶ್ರೀಮತಿ ಸ್ಮಿಥ್ ಎಂಬಾಕೆ ನನ್ನನ್ನು ಗೆರ್ನ್ಸಿ ದಂಪತಿಗಳಿಗೆ ಪರಿಚಯಿಸಿದಳು… ನಾನು ನ್ಯೂಯಾರ್ಕ್’ನಲ್ಲಿ ಭಾಷಣ ಮಾಡುತ್ತಲೇ ಇಲ್ಲ. … ಭಾಷಣದ ವಿಷಯ ಹೇಳುವುದಾದರೆ ಹಣ ಸಂಪಾದನೆ ಬಿಟ್ಟಿದ್ದೇನೆ. ಒಂದು ಉದ್ದೇಶವಿದ್ದಾಗ ಕೆಲಸ ಮಾಡಿದೆ. ಅದು ಮುಗಿದ ಮೇಲೆ ನನಗಾಗಿ ಹಣ ಸಂಪಾದಿಸಲಾರೆ. ಹಿಂದಿರುಗಿ ಹೋಗಲು ಬೇಕಾದಷ್ಟು ಹಣವಿದೆ…..ಡೆಟ್ರಾಯಿಟ್’ನಲ್ಲಿ ದಾನಿಗಳು ನೀಡಿದ ಹಣವನ್ನು ಹಿಂದಿರುಗಿಸಲು ಯತ್ನಿಸಿದೆ. ಅಲ್ಲಿ ನನ್ನ ಪ್ರಯತ್ನದಲ್ಲಿ ಯಶಸ್ವಿಯಾಗುವ ಸಂಭವ ಅಷ್ಟಾಗಿ ಇಲ್ಲವೆಂದು , ಆದ್ದರಿಂದ ಅವರ ಹಣವನ್ನು ನನ್ನಲ್ಲಿ ಇಟ್ಟುಕೊಳ್ಳುವ ಅಧಿಕಾರ ಇಲ್ಲವೆಂದೂ ತಿಳಿಸಿದೆ.. ನಾನು ಇನ್ನು ಮುಂದೆ ಹಣವನ್ನು ತೆಗೆದುಕೊಳ್ಳಲಾರೆ. ಎಲ್ಲೆಲ್ಲಿಯೂ ಭಗವಂತನ ಕರುಣಾಳುಗಳಾದ ಜನ ಮನೆಯನ್ನು ನನಗೆ ಒದಗಿಸುತ್ತಿದ್ದಾರೆ. ಆದ್ದರಿಂದ ಮೃಗೀಯ ಪ್ರಾಪಂಚಿಕತೆಯೆಡೆಗೆ ಹೋಗುವದು ನನಗೆ ಸಾದ್ಯವಿಲ್ಲ……(೧೦/೪/೧೮೯೪) ಎಂದರು. ಇದಾದ ಎರಡು ವಾರಗಳಲ್ಲಿಯೇ ನ್ಯೂಯಾರ್ಕ್’ನಲ್ಲಿ ೨೪/೪/೧೮೯೪ ರಂದು ವಾಲ್ ಡಾರ್ಫ್ ಹೋಟೆಲ್’ನಲ್ಲಿ ‘ಇಂಡಿಯಾ ಅಂಡ್ ಹಿಂದೂಯಿಸಂ’ ಎನ್ನುವ ಭಾಷಣ ಮಾಡಿ ೭೦ ಡಾಲರ್ ಗಳಿಸಿದ್ದರು. ಸ್ವಾಮಿಗಳು ಈ ಮೇಲಿನ ಎರಡು ಪತ್ರಗಳಲ್ಲಿ ಒಂದು ಕಡೆ ಕೂಟ ಭಾಷಣಗಳಲ್ಲಿ ಚೆನ್ನಾಗಿ ಹಣ ಮಾಡುಬಹುದು ಎನ್ನುತ್ತಲೇ ಒಂದೆರಡು ಮಾತುಗಳ ನಂತರ ಹಣದ ಗೊಡವೆಯೇ ಬೇಡ ಎನ್ನುವ ಚಂಚಲ ಚಿತ್ತರಾಗುತ್ತಾರೆ. ನಾನು ನಿನ್ನೆ ವಾಲ್ಡಾರ್ಫ್ ಹೋಟೆಲ್’ನಲ್ಲಿ ಮಾತನಾಡಿದೆ. ಶ್ರೀಮತಿ ಸ್ಮಿಥ್ ಟಿಕೆಟ್’ಗಳನ್ನು ತಲಾ ಎರಡು ಡಾಲರಿನಂತೆ ಮಾರಿದಳು… ನಾನು ಲಿನ್’ನಲ್ಲಿ ನೂರು ಡಾಲರ್ ಸಂಪಾದಿಸಿದೆ. ಆದರೆ ಅದನ್ನು ಕಳಿಸುವುದಿಲ್ಲ. ಏಕೆಂದರೆ ಅದು ನಿಲುವಂಗಿ ಮುಂತಾದ ಕೆಲಸಕ್ಕೆ ಬಾರದ ವಿಷಯಗಳಿಗೆ ಬೇಕಾಗಿದೆ. ಬೋಸ್ಟನ್’ನಲ್ಲಿ ನಾನು ಹೆಚ್ಚು ಹಣ ಮಾಡುವ ಅವಕಾಶವಿಲ್ಲ. ಆದರೂ ನಾನು ಅಮೆರಿಕದ ಬುದ್ಧಿಯ ಕೇಂದ್ರವನ್ನು ಮುಟ್ಟಿ ಕೆಣಕಬೇಕೆಂದಿರುವೆನು’ ಎಂದು ತಿಳಿಸಿದ್ದಾರೆ. (೨೫/೪/೧೮೯೪) . ಸ್ವಾಮಿಗಳ ಭಾರತದ ಕೆಲಸಕ್ಕೆ ಕೆಲವರು ಹಣ ನೀಡಿದ್ದರು. ತಮ್ಮ ಭಾರತದ ಕೆಲಸ ಯಶಸ್ವಿಯಾಗುವ ಅನುಮಾನ ಹೊಂದಿದ್ದ ಅವರು ನ್ಯೂಯಾರ್ಕ್’ನಲ್ಲಿ ಖ್ಯಾತ ವಕೀಲ ಮತ್ತು ಕಾಂಗ್ರೆಸ್’ಮ್ಯಾನ್ ವಿಲಿಯಂ ಜೋಸೆಫ್ ಫ್ಲಾಗ್ ದೇಣಿಗೆ ಕೊಡಲು ಮುಂದಾದಾಗ ಅದನ್ನು ನಿರಾಕರಿಸಿದ್ದರು.
೨/೫/೧೮೯೪ ರಂದು ಸ್ವಾಮಿಗಳು ಇಸಾಬೆಲ್ಲಾ ಮೆಕೆಂಡ್ಲಿಗೆ ‘…ಆಹಾರ ಸಿಗುತ್ತಿದೆ. ಸಾಕಷ್ಟು ಹಣ ಸಿಗುತ್ತಿದೆ. ಮುಂದಿನ ಉಪನ್ಯಾಸದ ನಂತರ ಸ್ವಲ್ಪ ಹಣವನ್ನು ಬ್ಯಾಂಕ್’ನಲ್ಲಿ ಇಡಬಹುದು…. ಆದರೆ ಆ ಹಾಳು ಉಪನ್ಯಾಸ ಮಾಡುವುದು ನನಗೆ ಸಾಕಾಗಿದೆ….ನಾನು ಷಿಕಾಗೊಗೆ ಹೋಗುವಾಗ ಮತ್ತೆ ನ್ಯೂಯಾರ್ಕ್’ಗೆ ಬರುತ್ತೇನೆ. ಅವರಿಗೆ ಒಂದಿಷ್ಟು ಬಲವಾಗಿ ಮಾತನಾಡಿ , ಅವರಿಂದ ಸ್ವಲ್ಪ ದುಡ್ಡನ್ನು ಕಸಿದುಕೊಂಡು ಷಿಕಾಗೊಗೆ ಓಡುವೆನು…..ನಿನಗೆ ಷಿಕಾಗೊದಲ್ಲಿ ಸಿಕ್ಕದ ಯಾವುದಾದರೂ ಸಾಮಾನು ನ್ಯೂಯಾರ್ಕ್’ ಮತ್ತು ಬೋಸ್ಟನ್’’ನಿಂದ ಬೇಕಾದರೆ ಕಾಗದ ಬರೆ. ಈಗ ನನ್ನಲ್ಲಿ ಬೇಕಾದಷ್ಟು ಹಣವಿದೆ. ನಿನಗೆ ಬೇಕಾದುದನ್ನು ಒಂದು ಕ್ಷಣದಲ್ಲಿ ಕಳಿಸಬಲ್ಲೆ. ನೀನು ನನ್ನನು ಅಣ್ಣ ಎಂದು ಭಾವಿಸುವುದಾದರೆ ಇದಕ್ಕೆ ಸಂಕೋಚಪಡಬೇಕಾಗಿಲ್ಲ , ನಟಿಸಬೇಕಾಗಿಲ್ಲ.ನನಗೆ ಆಷಾಢಭೂತಿತನ ಎಂದರೆ ಆಗದು…’ ಎಂದು ಹಣವಿರುವ ಅಣ್ಣನಾಗಿ ಬದಲಾಗಿದ್ದರು. ಸ್ವಾಮಿಗಳಿಗೆ ಕೆಲವು ವೇಳೆ ತಮ್ಮ ಹಣ ಸಂಪಾದನೆಯ ವೇಗ ಸಾಲದೆನಿಸಿದ್ದಿತು.
ಏಪ್ರಿಲ್ ತಿಂಗಳ ಕೊನೆಯ ವೇಳೆಗೆ ಹಣ ಸ್ವಾಮಿಗಳಿಗೆ ಸಿಕ್ಕು ಸಿಗದಂತಹ ಬಣ್ಣದ ಚಟ್ಟೆಯಾಗಿಯೇ ಉಳಿದಿದ್ದಿತು. ಸ್ವಾಮಿಗಳು ಭಾಷಣ ಮಾಡಿ ಹಣ ಸಂಪಾದಿಸಲು ಯತ್ನಿಸಿ ಸೋತಿದ್ದರು. ‘ಸಹಜವಾಗಿ ಇಲ್ಲಿ ಭಾಷಣಗಳಿಗೆ ನೀಡುವ ಸಂಭಾವನೆ ಬಹಳ ಕಡಿಮೆ. ಮತ್ತು ಪ್ರತಿಯೊಬ್ಬರಿಗೂ ಒಂದು ಒಳ ಉದ್ದೇಶವಿರುವುದು. ನಿಮ್ಮ ನಗರ ನ್ಯೂಯಾರ್ಕ್ , ಬೋಸ್ಟನ್'ಗಿಂತ ಹೆಚ್ಚು ಸಂಭಾವನೆ ನೀಡುವುದು. ಆದಕಾರಣ ಅಲ್ಲಿಗೆ ಹಿಂದಿರುಗಲು ಯತ್ನಿಸುವೆ’ನೆಂದು ಶ್ರೀಮತಿ ಜಾರ್ಜ್ ಹೇಲ್’ಗೆ ಮುಂದಿನ ನಡೆ ತಿಳಿಸಿದ್ದರು. (೧೧/೫/೧೮೯೪) . ಸ್ವಾಮಿಗಳಿಗೆ ದಾನ ಕೊಡಲು ಬೆರಳೆಣಿಕೆಯ ಜನ ಮಾತ್ರ ಮುಂದೆ ಬಂದಿದ್ದು ಅದು ಹೇಳಿಕೊಳ್ಳುವಂತಹ ಮೊತ್ತವೂ ಆಗಿರಲಿಲ್ಲ. ಆದ್ದರಿಂದ ಸ್ವಾಮಿಗಳು ಹಣ ಸಂಗ್ರಹ ಮಾಡುವುದನ್ನು ಬಿಟ್ಟು ಬಿಡುತ್ತೇನೆ ಎಂದು ಹಲವು ಪತ್ರಗಳಲ್ಲಿ ತಿಳಿಸಿದ್ದರು. ಕ್ರೈಸ್ತ ಪಾದ್ರಿಗಳು ತಮ್ಮ ಚಾರಿತ್ರ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದರಿಂದ ಅವರಿಗೆ ದಾನ ಕೊಡಲು ಹೆಚ್ಚು ಜನ ಮುಂದೆ ಬರುತ್ತಿಲ್ಲ ಎಂದು ಹರಿದಾಸ ವಿಹಾರಿದಾಸ ದೇಸಾಯಿಗಳಲ್ಲಿ ತೋಡಿಕೊಂಡಿದ್ದರು. (ಪತ್ರ ೨೦/೬/೧೮೯೪). ಆದರೆ ಸನ್ನಿವೇಶಗಳನ್ನು ಗಮನಿಸಿದಾಗ ಇದಕ್ಕೆ ಪುರಾವೆಗಳಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಸ್ವಾಮಿಗಳು ಬಯಸಿದಷ್ಟು ಅಲ್ಲದಿದ್ದರೂ ಜುಲೈ ೧೮೯೪ ರ ವೇಳೆಗೆ ಅವರು ಸಾಕಷ್ಟು ದುಡ್ಡು ಮಾಡಿಕೊಂಡಿರುವುದಕ್ಕೆ ಪುರಾವೆಗಳಿವೆ. ‘ ಡೆಟ್ರಾಯಿಟ್’ನಲ್ಲಿ ಕೊಟ್ಟ ಭಾಷಣದಿಂದ ನನಗೆ ೯೩೦ ಡಾಲರ್ ಎಂದರೆ ೨೭೦೦ ರೂಪಾಯಿ , ಉಳಿದ ಭಾಷಣಗಳಲ್ಲಿ ಒಂದಕ್ಕೆ ೨೫೦೦ ಡಾಲರ್ ಎಂದರೆ ೭೫೦೦ ರೂಗಳು ಒಂದು ಗಂಟೆಯಲ್ಲಿ ಬಂದವು. ಆದರೆ ನನ್ನ ಕೈಗೆ ಕೇವಲ ೨೦೦ ಡಾಲರ್’ಗಳು ಮಾತ್ರ ಸಿಕ್ಕಿತು. ಒಂದು ದಗಾಕೋರ ಭಾಷಣ ಕಾರ್ಯ ಶಾಖೆಯವರು ನನಗೆ ಮೋಸ ಮಾಡಿದರು.’ ನಾನವರನ್ನು ಬಿಟ್ಟುಬಿಟ್ಟೆ. ನನಗೆ ಇಲ್ಲಿ ಖರ್ಚು ಬಹಳ. ಕೇವಲ ೩೦೦೦ ಡಾಲರ್ ಮಾತ್ರ ಉಳಿದಿದೆ ‘ ಎಂದು ತಿಳಿಸುವ ಅಳಸಿಂಗ ಪೆರಿಮಾಳ್’ಗೆ ಬರೆದ ಪತ್ರ ಪುರಾವೆಯಾಗಿದೆ. ಆ ಕಾಲದಲ್ಲಿ ಅಮೆರಿಕದ ಬಡವನ ಆದಾಯ ವರ್ಷಕ್ಕೆ ೬೦೦-೮೦೦ ಡಾಲರ್ ಇರುತ್ತಿದ್ದಿತು. ಗ್ರೀನೇಕರ್’ನಲ್ಲಿರುವಾಗ ಶ್ರೀಮತಿ ಪ್ರಟ್ ಎನ್ನುವಾಕೆ ಸ್ವಾಮಿಗಳಿಗೆ ೫೦೦ ಡಾಲರ್ ಕೊಡಲು ಬಂದಾಗ ಅದನ್ನು ನಿರಾಕರಿಸಿದ್ದರು. (೧೧/೮/೧೮೯೪). ಇದಕ್ಕೆ ಕಾರಣಗಳೂ ಇಲ್ಲದಿರಲಿಲ್ಲ. ಸ್ವಾಮಿಗಳು ತಮ್ಮ ‘ಭಾರತದ ಕೆಲಸ’ಕ್ಕೆ ಇಡುಗಂಟಿನ ರೂಪದಲ್ಲಿ ಹಣವನ್ನು ನಿರೀಕ್ಷಿಸುತ್ತಿದ್ದರು. ಅದರ ಬದಲು ದಕ್ಕುವ ಅಲ್ಪ ಹಣ ಖರ್ಚಾಗುತ್ತದೆ ಮತ್ತು ತಮ್ಮ ಉದ್ದೇಶ ಸಾಧನೆಗೆ ನೆರವಾಗುವುದಿಲ್ಲ ಎನ್ನುವುದು ಅವರಿಗೆ ಮನದಟ್ಟಾಗಿದ್ದಿತು. (೧೧/೮/೧೮೯೪)
ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ಮದ್ರಾಸ್’ನ ನರಸಿಂಹಾಚಾರಿ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಭಾರತಕ್ಕೆ ಹಿಂದಿರುಗಲು ಹಣ ಹೊಂದಿಕೆಯಾಗದೆ ತ್ರಿಶಂಕು ಸ್ಥಿತಿ ತಲುಪಿ ಸ್ವಾಮಿಗಳ ನೆರವು ಬೇಡಿದ್ದನು. ಅಮೆರಿಕ ಕೆಲ ಪಾದ್ರಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಸಾಕಷ್ಟು ದುಡ್ದನ್ನು ಆತನಿಗೆ ಕೊಡುವುದಾಗಿ ಪುಸಲಾಯಿಸಿದ್ದರು. ಅಂತಿಮವಾಗಿ ಸ್ವಾಮಿಗಳು ಭಾರತಕ್ಕೆ ಹೋದ ನಂತರ ಹಿಂದಿರುಗಿಸಬೇಕೆಂದು ತಾಕೀತು ಮಾಡಿ ಆತನಿಗೆ ಸ್ವಲ್ಪ ಹಣ ಸಹಾಯ ಮಾಡಿದರು. ‘ನರಸಿಂಹನ ಪ್ರಯಾಣದ ವೆಚ್ಚವನ್ನು ಕೊಟ್ಟೆ. ಆದ್ದರಿಂದ ಬಿಳಿ ಆನೆ ಸದ್ಯಕ್ಕೆ ನನ್ನನ್ನು ಕೈಬಿಟ್ಟಿತೆಂದು ಭಾವಿಸುವೆ. ನರಸಿಂಹ ನನ್ನ ಜೇಬನ್ನು ಬರಿದು ಮಾಡಿದ. ‘ ಎಂದು ಸ್ವಾಮಿಗಳು ಶ್ರೀಮತಿ ಜಾರ್ಜ್ ಹೇಲ್’ರವರಲ್ಲಿ ಅಲವತ್ತುಕೊಂಡಿದ್ದರು. (೯/೬/೧೮೯೪). ಇದಾದ ಒಂದೇ ತಿಂಗಳಿನಲ್ಲಿ ತಮ್ಮ ಬಳಿ ೩೦೦೦ ಡಾಲರ್ ಉಳಿದಿವೆಯೆಂದು ಅಳಸಿಂಗ ಪೆರುಮಾಳ್’ಗೆ ತಿಳಿಸಿದ್ದರು. (೧೧/೭/೧೮೯೪). ಈ ಹಣದಿಂದ ಅಮೆರಿಕದಲ್ಲಿ ಸಾಮಾನ್ಯ ರೀತಿಯ ಜೀವನ ನಡೆಸಿ ಎರಡು ವರ್ಷ ಬದುಕಬಹುದಿದ್ದಿತು. ಇಸಾಬೆಲ್ಲಾ ಮೆಕೆಂಡ್ಲಿಗೆ ಬರೆದ ಪತ್ರದಿಂದ ಸ್ವಾಮಿಗಳು ತಮ್ಮ ಮೂಲಧನವನ್ನು ಬಳಸಿಕೊಂಡಿಲ್ಲ ಎನ್ನುವುದು ತಿಳಿಯುವುದಾದರೂ ಅದರ ಮೊತ್ತ ಎಷ್ಟೆಂದು ಗೊತ್ತಾಗದು. ೫/೮/೧೮೯೪ ರಂದು ಶ್ರೀಮತಿ ಹೇಲ್’ಗೆ ‘ಅವರು (ಮೈಸೂರು ಮಹಾರಾಜ ಚಾಮರಾಜೆಂದ್ರ ಒಡೆಯರ್) ಮನಸ್ಸು ಮಾಡಿದರೆ , ೫ ದಿನಗಳಲ್ಲಿ ನನ್ನೆಲ್ಲ ಯೋಜನೆಗಳನ್ನು ಕಾರ್ಯಗತ ಮಾಡಬಹುದು. ಅವರ ಆದಾಯ ೧೫೦ ದಶಲಕ್ಷ ಡಾಲರ್. ಅದನ್ನು ಯೋಚಿಸು …..’ಎಂದಿದ್ದಾರೆ. ನನಗೆ ಅಮೆರಿಕದಲ್ಲಿ ಬದುಕಲು ಸಾಕಷ್ಟು ಹಣವಿದೆ ಭಾರತದ ಒಬ್ಬ ರಾಜ ಮನಸ್ಸು ಮಾಡಿದರೆ ತಮ್ಮ ಕಾರ್ಯ ಸಾಧನೆಗೆ ಬೇಕಾದ ಹಣ ಪಡೆಯಲು ಚಿಟಿಕೆ ಹೊಡೆದಷ್ಟು ಕಾಲ ಸಾಕು ಎನ್ನುವ ಆಶೆಯಿದೆ.
೨೧/೯/೧೮೯೪ ರಂದು ಬೊಸ್ಟನ್ ಬೆಲ್ಲೆವ್ಯೂ ಹೊಟೆಲ್’ನಲ್ಲಿ ಕಾಲು ಚಾಚಿ ಕುಳಿತು ಸ್ವಾಮಿಗಳು ಅಳಸಿಂಗ ಪೆರುಮಾಳನಿಗೆ ಒಂದು ವಿಲಕ್ಷಣವಾದ ಪತ್ರ ಬರೆದರು. ‘….. ಬೇಗ ಭಾರತಕ್ಕೆ ಹಿಂದಿರುಗಬಹುದೆಂದು ಎಣಿಸಿದ್ದೇನೆ. ಈ ದೇಶ ಸಾಕಾಗಿದೆ. ಹೆಚ್ಚು ಕೆಲಸ ದುರ್ಬಲನನ್ನಾಗಿ ಮಾಡುತ್ತಿದೆ. ಸಾರ್ವಜನಿಕ ಉಪನ್ಯಾಸಗಳು ಸದಾ ಆವಾಂತರ ಮತ್ತು ಈ ಅಸ್ವಸ್ಥತೆಗೆ ಕಾರಣ. ……..ಜನರೆದುರು ಮಾಡುವ ನಟನೆ ನನಗೆ ಸಾಕಾಗಿದೆ. ನನಗೆ ಇದು ಸ್ವಲ್ಪವೂ ಬೇಕಾಗಿಲ್ಲ. ಇಲ್ಲಿ ನಮ್ಮ ಕೆಲಸಕಾಗಿ ಹಣ ದೊರೆಯುವ ಸಂಭವವಿಲ್ಲ. ಅದನ್ನು ನಿರೀಕ್ಷಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಕೇವಲ ದಯೆಯಿಂದ ಮಾತ್ರ ಪ್ರೇರಿತರಾಗಿ ಯಾವ ದೇಶದಲ್ಲಿಯೂ ಜನರು ಹೆಚ್ಚು ಒಳಿತನ್ನು ಮಾಡುವುದಿಲ್ಲ………..ನಮ್ಮ ಜನಾಂಗದೊಂದಿಗೆ ಹೋಲಿಸಿದರೆ ಪಾಶ್ಚಾತ್ಯರು ಅತಿ ಜಿಪುಣರು. ಪ್ರಪಂಚದಲ್ಲಿಯೇ ಅತಿ ಧಾರಾಳಿಗಳು ಏಷ್ಯನ್ನರು ಎಂದು ನಾನು ನಂಬತ್ತೇನೆ. ಆದರೆ ಅವರು ಬಹಳ ಬಡವರು….. ಪಾಶ್ಚಾತ್ಯರು ಉತ್ತಮ ಅಧ್ಯಾತ್ಮಿಕ ಜೀವನವನ್ನು ಗ್ರಹಿಸಲು ಇನ್ನೂ ಬಹಳ ಕಾಲ ಬೇಕು. ಪೌಂಡ್, ಡಾಲರ್ , ಷಿಲ್ಲಿಂಗ್ ಇವೇ ಇವರ ಧರ್ಮ. ಏನಾದರೂ ಹಣ , ಆರೋಗ್ಯ , ಸೌಂದರ್ಯ ದೀರ್ಘಾಯಸ್ಸು ಇವನ್ನು ಕೊಟ್ಟರೆ ಅಲ್ಲಿಗೆ ಓಡುವರು…..’ ಮೊದಲ ಬಾರಿಗೆ ಸ್ವಾಮಿಗಳು ಯಾರೂ ಕೇವಲ ದಯೆಯಿಂದ ಪ್ರೇರಿತರಾಗಿ ಆರ್ಥಿಕ ನೆರವು ನೀಡುವುದಿಲ್ಲ ಎನ್ನುವ ಕಟು ಸತ್ಯವನ್ನು ಮನಗಂಡಿದ್ದರು. ಇದರ ಹಿಂದೆಯೇ ‘ನೀವು ನೋಡುತ್ತಿಲ್ಲವೇ ತಾಯಿ. ನಾನು ಯೋಜನೆಗಳನ್ನು ಕಾರ್ಯಗತ ಮಾಡುವುದರಲ್ಲಿ ದೃಢಮನಸ್ಕನಾಗಿರುವೆನು. ನನಗೆ ಬೆಳಕು ಕಾಣಲೇ ಬೇಕು. ಭಾರತ ಕೇವಲ ಚೀತ್ಕಾರ ಮಾಡುವುದು. ಅದರ ಹತ್ತಿರ ಹಣವಿಲ್ಲ ‘ ಎಂದು ಶ್ರೀಮತಿ ಹೇಲ್ ಮಂದೆ ತೋಡಿಕೊಂಡಿದ್ದರು. (೨೧/೧೨/೧೮೯೪)
ಖಾಸಗಿ ರೈಲ್ವೇ ಕಂಪೆನಿಯ ಒಡೆಯ , ಭಾರಿ ಶ್ರೀಮಂತ ಅಸ್ಟಿನ್ ಕೊರ್ಬಿನ್ ಮಗಳು ಮಿಸ್ ಅನ್ನಾ ಕೋರ್ಬಿನ್. ಈಕೆ ಸ್ವಾಮಿಗಳನ್ನು ೫ ನೇ ಅವೆನ್ಯೂ ಮ್ಯಾನ್ಷನ್’ನಲ್ಲಿದ್ದ ತನ್ನ ಮನೆಯಲ್ಲಿ ಆಯೋಜಿಸಿದ್ದ ಔತಣಕೂಟಕ್ಕೆ ಆಹ್ವಾನಿಸಿ ಅವರಿಂದ ಒಂದು ಭಾಷಣ ಕೊಡಿಸಿದ್ದಳು. ಈ ಔತಣ ಕೂಟಕ್ಕೆ ಅಮೆರಿಕ ಗಣ್ಯರು , ಭಾರಿ ಶ್ರೀಮಂತರು , ವ್ಯಾಪಾರಿಗಳು , ಅಧಿಕಾರಿಗಳು , ಯುರೋಪ್ ದೇಶಗಳ ಶ್ರೀಮಂತರು ಬಂದಿದ್ದರು. ಈ ಔತಣ ಕೂಟದಲ್ಲಿ ಭಾಗವಹಿಸಿ ಸ್ವಾಮಿಗಳು ರಾತ್ರಿ ೧ ಗಂಟೆಗೆ ತಮ್ಮ ವಸತಿಗೆ ಹಿಂದಿರುಗಿದ್ದರು. ಅವರಿಗೆ ಅಮೆರಿಕ ಶ್ರೀಮಂತರಿಗಿಂತ ಯುರೋಪಿಯನ್ ಗಣ್ಯರು ಹೆಚ್ಚು ಆಸಕ್ತರಾಗಿ ಕಂಡುಬಂದಿದ್ದರು. (120) ಭಾರಿ ಶ್ರೀಮಂತರಿಂದ ಶುಲ್ಕ ಅಥವಾ ದೇಣಿಗೆ ರೂಪದಲ್ಲಿ ಹಣ ಗಳಿಸುವ ಆಶೆ ಸ್ವಾಮಿಗಳಿಗಿದ್ದಿತು. ದೊಡ್ದ ಬೊಕ್ಕುಣ’ದ (ಲಾಂಗ್ ಪಾಕೆಟ್ಸ್ =ಶ್ರೀಮಂತರು) ಕೆಲವರ ಆಶ್ವಾಸನೆಗೆ ಮಣಿದು ಮಿಸ್ ಅನ್ನಾ ಕಾರ್ಬಿನ್ ಕನ್ಸರ್ವೇಟರಿಯಲ್ಲಿ ತರಗತಿಗಳನ್ನು ಪ್ರಾರಂಭಿಸಿದರು. ನಾಲ್ಕು ಉಪನ್ಯಾಸಗಳನ್ನು ಕೊಡುವುದರಲ್ಲಿ ‘ದೊಡ್ದ ಬೊಕ್ಕುಣ’ದ ಜನ ಕೈಕೊಡುತ್ತಿರುವುದು ಸ್ವಾಮಿಗಳಿಗೆ ಖಚಿತವಾಗಿ ತರಗತಿಗಳನ್ನು ಮುಂದುವರೆಸಲಿಲ್ಲ. ೨೧/೩/೧೮೯೫ ರಲ್ಲಿ ಸಾರಾ ಬುಲ್’ಗೆ ಬರೆದ ಪತ್ರದಲ್ಲಿ ‘ ಜಗತ್ತಿನ ಇತಿಹಾಸದಲ್ಲಿ ಶ್ರೀಮಂತರಿಂದ ಯಾವುದಾದರೂ ಘನ ಕಾರ್ಯ ಆಗಿದೆಯೇ ? ….ಹೃದಯ ಮತ್ತು ಬುದ್ದಿಗಳು ಅಂತಹ ಕೆಲಸವನ್ನು ಸಾಧಿಸಬಲ್ಲವೇ ಹೊರತು ಹಣದ ಥೈಲಿಯಲ್ಲ. ನನ್ನ ಜೀವನದುದ್ದಕೂ ದೇವರ ಹೊರತು ಬೇರೆ ಯಾರೂ ನೆರವಾಗಲಾರರೆಂಬ ಆದರ್ಶ ಮತ್ತು ನಂಬಿಕೆಯಿದೆ……….. ಇನ್ನು ಮುಂದೆ ಪ್ರವಚನಗಳನ್ನು ಮಾಡುವುದಿಲ್ಲವೆಂದು ಶ್ರೀಮತಿ ಕಾರ್ಬಿನ್ಸ್'ಗೆ ತಿಳಿಸಿದೆ ಎಂದಿದ್ದಾರೆ. ತಮ್ಮ ಭಾಷಣಗಳನ್ನು ಕೇಳುತ್ತಿದ್ದ ಜನ ತಾವು ಭಾವಿಸಿದಂತೆ ಹಣವನ್ನು ಬಿಚ್ಚುವುದಿಲ್ಲವೆಂದು ಸ್ವಾಮಿಗಳಿಗೆ ಸಾಕ್ಷಾತ್ಕಾರವಾಗಿದ್ದಿತು.
‘….ಒಳ್ಳೆಯ ಕೆಲಸಕ್ಕಾಗಿ ಹಣ ಕೂಡಿಸುವುದು ಕೂಡ ಸಂನ್ಯಾಸಿಗೆ ತರವಲ್ಲ ಎಂದು ಮನು ಹೇಳಿದ್ದಾನೆ. …ಅದನ್ನು ಮಾಡಬೇಕು , ಇದನ್ನು ಮಾಡಬೇಕು ಎನ್ನುವ ಹುಡುಗುತನದ ಅಭಿಪ್ರಾಯಗಳು ನನ್ನಲ್ಲಿದ್ದವು. ಅವೆಲ್ಲ ಭ್ರಾಂತಿಯೆಂದು ನನಗೆ ತಿಳಿಯುತ್ತಿದೆ. …ಐಶ್ವರ್ಯಕ್ಕೆ ದಾರಿದ್ರ್ಯದ , ಅಜ್ಞಾನಕ್ಕೆ ಜ್ಞಾನದ, ರೂಪಕ್ಕೆ ವಯಸ್ಸಿನ , ದೇಹಕ್ಕೆ ಸಾವಿನ ಅಂಜಿಕೆ. ಈ ಜಗತ್ತೇ ಅಂಜಿಕೆಯಿಂದ ಸುತ್ತುವರೆದಿದೆ. ತ್ಯಾಗಿ ಮಾತ್ರ ಅಂಜಿಕೆ ಇರದವನು…. ನೀವು ಈ ವರ್ಷ ಶ್ರೀಮತಿ ಫಾರ್ಮರ್’ರವರ ಗ್ರಿನೇಕರ್ ಕೆಲಸಕ್ಕೆ ನೆರವಾಗಿರಿ. ಶತಮಾನಗಳಿಂದಲೂ ಭರತ ಖಂಡ ಕಾಯುತ್ತಿರುವಂತೆ ಈಗಲೂ ಕಾಯಬಲ್ಲದು. ತುರ್ತಾದ ಕೆಲಸ ಇಲ್ಲೇ ಇರುವುದರಿಂದ ಅದಕ್ಕೆ ಹೆಚ್ಚು ಗಮನ ಕೊಡಬೇಕು ’ ಎಂದು ತೋರಿಕೆಯ ಸಂತೃಪ್ತಿ ಮತ್ತು ಹಣ ಸಂಗ್ರಹಿಸಲಾಗದ ಹತಾಶೆಗಳ ಮಿಶ್ರ ಭಾವಗಳಲ್ಲಿ ಸಾರಾ ಬುಲ್’ಗೆ ೧೪/೨/೧೮೯೫ ರಂದು ಪತ್ರ ಬರೆದರು. ಸಂನ್ಯಾಸಿ ಒಳ್ಳೆಯ ಕೆಲಸಕ್ಕಾಗಿಯೂ ಹಣವನ್ನು ಕೂಡಿಡಬಾರದು , ಅದರ ಬಗ್ಗೆ ಚಿಂತಿಸಬಾರದು ಎಂದು ಸಾರಾ ಬುಲ್’ಗೆ ಹೇಳಿದ್ದ ಸ್ವಾಮಿಗಳು ಅಲ್ಲಿಂದ ಮುಂದಿನ ೨೫ ದಿನಗಳಲ್ಲಿ ‘ ನನ್ನ ಬಳಿ ಇರುವ ಕುಕ್ ಸಾಲ ಪತ್ರಗಳ ಗಡುವು ಮುಗಿದಿದೆಯೋ ಇಲ್ಲವೋ ನನಗೆ ನೆನಪಿಲ್ಲ. ಈಗ ಅವುಗಳನ್ನು ನೋಡಬೇಕಾದ ಸಮಯ ಬಂದಿದೆ. ಅವಕ್ಕೆ ಮಿತಿ ಇರುವುದಾದರೆ ಒಂದು ಬ್ಯಾಂಕ್’ಗೆ ಹಾಕುವುದು ಒಳ್ಳೆಯದಲ್ಲವೇ ? ನನ್ನ ಸುಮಾರು ೧೦೦೦ ಡಾಲರ್'ಗಳು ಬೋಸ್ಟನ್ ಬ್ಯಾಂಕ್'ನಲ್ಲಿ ಮತ್ತು ೧೦೦ ನ್ಯೂಯಾರ್ಕ್ ಬ್ಯಾಂಕ್'ನಲ್ಲಿ ಇವೆ. ಅವೆಲ್ಲ ಈ ವಾರ ಅಥವಾ ಮುಂದಿನ ವಾರ ಭಾರತಕ್ಕೆ ರವಾನೆಯಾಗುವುವು ‘ ಎಂದು ೧೧/೩/೧೮೯೫ ರಂದು ಶ್ರೀಮತಿ ಹೇಲ್’ಗೆ ಪತ್ರ ಬರೆದು ಸನ್ನಿವೇಶಕ್ಕೆ ತಕ್ಕಂತೆ ಬದಲಾಗಿ ಮನು ಪ್ರತಿಪಾದಿಸಿದ ಸಂನ್ಯಾಸಿಯ ಆದರ್ಶ ಸ್ಥಿತಿಯನ್ನು ಹೇಳಿಕೆಯಾಗಿಯೇ ಉಳಿಸಿದರು.
ಸ್ವಾಮಿಗಳು ಮ್ಯಾಗ್ನೋಲಿಯಾಕ್ಕೆ ಹೋದಾಗ ‘ಶ್ರೀಮತಿ ಸ್ಮಿತ್ ಮತ್ತು ಸಾಯರ್ (ಸ್ಮಿಥ್ ಮಗಳು) ಅಲ್ಲಿ ನೀಡಿದ ಉಪನ್ಯಾಸಕ್ಕೆ ೪೩ ಡಾಲರ್ ಕೊಟ್ಟರು. ….. ಈ ಸಮಯದಲ್ಲಿ ಬರೆದಿರಬಹುದಾದ ಒಂದು ಪತ್ರದಲ್ಲಿ ರಾಮಕೃಷ್ಣಾನಂದರಿಗೆ -ಹಿಂದೂ ಧರ್ಮದ ವಿಚಾರವಾಗಿ ಮಾತನಾಡಿದರೆ ಇಲ್ಲಿ ಹೆಚ್ಚು ಜನರನ್ನು ಸೆಳೆಯಬಹುದೆಂದು ತಿಳಿದಿರುವೆಯೇನು ? ಸಂಕುಚಿತ ಬುದ್ಧಿಯ ಹೆಸರನ್ನು ಕೇಳಿದರೆ ಸಾಕು, ಇಲ್ಲಿಯ ಜನ ಓಡಿ ಹೋಗುವರು…. ಇಲ್ಲಿಯ ಜನ ಬಹಳ ಹಣವಂತರು. ಧೈರ್ಯದಿಂದ ನನಗೆ ಸಹಾಯ ಮಾಡುವರು. ಆದರೆ ನಮ್ಮ ದೇಶದ ಜನರಲ್ಲಿ ಹಣವೂ ಇಲ್ಲ. ಧೈರ್ಯವೂ ಇಲ್ಲ. ಗಂಗಾಧರನನ್ನು (ಅಖಂಡಾನಂದ) ರಾಜಪುತಾನದಲ್ಲಿ ಕೆಲ ಜಮೀನ್ದಾರರು ಗೌರವಿಸುವರು. ಅವರಿಂದ ಸ್ವಲ್ಪ ಹಣವನ್ನು ಭಿಕ್ಷಾರೂಪದಲ್ಲಿ ಪಡೆಯಲು ಹೇಳು. ಆಗ ಅವನು ಧೀರ ಎನ್ನುತ್ತ ಅಖಂಡಾನಂದ ಹಣ ಹೊಂಚುವ ಕೆಲಸ ಮಾಡಬೇಕೆಂದು ತಿಳಿಸಿದರು. ಇದೇ ಕಾಲದ ಮತ್ತೊಂದು ಪತ್ರದಲ್ಲಿ ಅಳಸಿಂಗ ಪೆರುಮಾಳ್’ಗೆ ‘ನನ್ನ ಕೆಲಸ ಅಮೆರಿಕದಲ್ಲಿ ಚೆನ್ನಾಗಿ ಬೇರೂರಿದೆ. ಇಲ್ಲಿಂದ ನಾನು ಭಾರತಕ್ಕೆ ಬಂದ ನಂತರವೂ ಅದು ಮುಂದುವರೆಯುತ್ತದೆ. ಆರ್ಥಿಕವಾಗಿ ಸೋಲುಂಟಾಗಿದೆ ಆದರೆ ಮನುಷ್ಯರು ಹಣಕ್ಕಿಂತ ಮುಖ್ಯ‘ ಎಂದು ಬರೆದರು. (೧೪/೫/೧೮೯೫). ತಿಂಗಳ ಕೊನೆಯಲ್ಲಿ ಮದ್ರಾಸಿನಲ್ಲಿ ಪತ್ರಿಕೆ ಪ್ರಾರಂಭಿಸಲು ಅಳಸಿಂಗ ಪೆರುಮಾಳ್’ಗೆ ೧೦೦ ಡಾಲರ್ (೨೦ ಪೌಂಡ್) ಕಳಿಸಿದರು.
ಸ್ವಾಮಿಗಳು ಗುರುಭಾಯಿಗಳಿಗೆ ಶಿಷ್ಯರಿಗೆ ಏಳಿ , ಎದ್ದೇಳಿ , ಕಾರ್ಯ ನಿರತರಾಗಿ ಎಂದು ಮೇಲಿಂದ ಮೇಲೆ ಕರೆ ಕೊಡುತ್ತಿದ್ದರು. ಈ ಯಾವ ಕರೆಯೂ ಅವರ ಅಧ್ಯಾತ್ಮಿಕ , ನೈತಿಕ , ಸಾಮಾಜಿಕ ಜೀವನ ಕುರಿತಾಗಿರದೆ ಮಠ ಮತ್ತು ಅದರ ಶಾಖೆಗಳ ಸ್ಥಾಪನೆ , ಪತ್ರಿಕೆ ಪ್ರಾರಂಭ , ಜಗತ್ತಿನಲ್ಲಿ ಧಾರ್ಮಿಕ ಪ್ರಚಾರ ಮುಂತಾದ ಲೌಕಿಕ ತಳಹದಿಯ ಕೆಲಸಗಳೇ ಆಗಿರುತ್ತಿದ್ದವು. ಇಂತಹ ಕೆಲಸಗಳನ್ನು ಅದೆಷ್ಟೇ ನಿರಾಸಕ್ತ , ಬ್ರಹ್ಮಜ್ಞಾನಿ ಸಂನ್ಯಾಸಿ ಮಾಡಿದರೂ ಹಣವೇ ಅದರ ಮೂಲ. ಯಾವುದೇ ಸಂನ್ಯಾಸಿ ತಾನಾಗಿ ದುಡಿಯುದಿಲ್ಲವಾದ್ದರಿಂದ ಆತನಿಗೆ ಹಣ ಬೇರೆಯ ಮೂಲಗಳಿಂದಲೇ ಬರಬೇಕು. ಚಂದಾ ಎತ್ತುವುದು ಅಂತಹ ಒಂದು ಮಾರ್ಗ, ಸ್ವಾಮಿಗಳ ಪ್ರೇರಣೆಯಿಂದ ಅಖಂಡಾನಂದರು ಚಂದಾ ಎತ್ತಿ ಹಣ ಸಂಗ್ರಹಿಸಲು ಉತ್ಸುಕರಾಗಿದ್ದರು. ಸ್ವಾಮಿಗಳು ಅವರನ್ನು ೧೩/೧೧/೧೮೯೫ ರ ಪತ್ರದ ಮೂಲಕ ಎಂದಿಗೂ ಆಶ್ರಮ , ಮಠ ಸ್ಥಾಪನೆಗಾಗಿ ಹಣ ಎತ್ತಲು ನೀನೇ ನುಗ್ಗಿ ಮುಂದಾಗಬೇಡ. ಗೃಹಸ್ಥರು ಅದರಲ್ಲೂ ಬಡವರು ಹಾಗೆ ಮುಂದಾದಾಗ ಬಹಳ ಎಚ್ಚರದಿಂದಿರು. ಒಂದು ವೇಳೆ ಹಾಗೆ ಹಣ ಸಂಗ್ರಹಿಸಿದ್ದೇ ಆದರೆ ಸ್ಥಿತಿವಂತ ಶ್ರೀಮಂತರಲ್ಲಿ ಆ ಹಣವನ್ನು ಇರಿಸುವುದು ಒಳ್ಳೆಯದು ಎಂದು ಎಚ್ಚರಿಸಿದರು. ಬಡವರು ಚಂದಾ ಎತ್ತಿದ ಹಣವನ್ನು ಸ್ವಂತಕ್ಕೆ ಬಳಸಬಹುದು, ಶ್ರೀಮಂತರು ಹಾಗೆ ಮಾಡುವುದಿಲ್ಲ ಎನ್ನುವುದೇ ಇದರ ಹಿನ್ನೆಲೆ.
೨೩/೨/೧೮೯೬ ರಂದು ನ್ಯೂಯಾರ್ಕ್’ನ ಮ್ಯಾಡಿಸನ್ ಪಾರ್ಕ್ ಸಭಾಂಗಣದಲ್ಲಿ ಸ್ವಾಮಿಗಳು ‘ಮೈ ಮಾಸ್ಟರ್ ಅಂಡ್ ಹಿಸ್ ಟೀಚಿಂಗ್ಸ್’ ಎನ್ನುವ ಭಾಷಣ ಮಾಡಿದರು. ನ್ಯೂಯಾರ್ಕ್’ನಲ್ಲಿ ಮಾಡಿದ ಭಾಷಣದಲ್ಲಿ ಸ್ವಾಮಿಗಳು ಅಮೆರಿಕದ ‘ಡಾಲರ್ ಪೂಜೆ’ಯ ಬಗ್ಗೆ ಹರಿಹಾಯ್ದಿದ್ದರು. ಇದಾದ ಒಂದು ವರ್ಷದ ಈ ಭಾಷಣವನ್ನು ಮುದ್ರಿಸಲು ಹೋದಾಗ ಅಮೆರಿಕದವರನ್ನು ಅಷ್ಟೊಂದು ತೀವ್ರವಾಗಿ ಟೀಕಿಸಿದ್ದು ಸರಿಯಲ್ಲವೆಂದು ಸ್ವಾಮಿಗಳಿಗೆ ಭಾಸವಾಗಿ , ಮನ ನೋಯಿಸುವ ಭಾಗಗಳನ್ನು ಮುದ್ರಣದಲ್ಲಿ ಕೈಬಿಡಲು ನಿರ್ಧರಿಸಿದರು. ನನ್ನ ಗುರುಗಳು ಯಾರನ್ನೂ ದೂಷಿಸಿದವರಲ್ಲ ,ಯಾವುದನ್ನೂ ಖಂಡಿಸಿದವರಲ್ಲ. ನಾನು ಅಮೆರಿಕರನ್ನು ಅಷ್ಟೊಂದು ತೀವ್ರವಾಗಿ ಟೀಕಿಸಬಾರದಿದ್ದಿತು ಎಂದು ಸ್ವಾಮಿಗಳು ತಾವು ಮೂಲ ಭಾಷಣದ ಆಕ್ಷೇಪಾರ್ಹ ಅಂಶಗಳನ್ನು ಕೈಬಿಟ್ಟಿದ್ದಕ್ಕೇ ನೀಡಿದ ಸಮರ್ಥನೆಯಾಗಿದ್ದಿತು. ಆದರ ನಿಜವಾದ ಕಾರಣ ಬೇರೆಯ ಆಗಿದ್ದಿತು. ಸ್ವಾಮಿಗಳಿಗೆ ಭಾಷಣದ ನಂತರ ತಮ್ಮ ಗುರುಗಳ ಬಗ್ಗೆ ಕೊಚ್ಚಿದ್ದ ಬಡಾಯಿ ಮತ್ತು ಅಮೆರಿಕನ್ನರನ್ನು ಹೀಗಳೆದದ್ದು ಸಹನೆ, ಸಭ್ಯತೆಯ ಗಡಿಯನ್ನು ದಾಟಿದೆ ಮತ್ತು ಭಾರತೀಯರಲ್ಲಿ ಭೋಗ ಇಲ್ಲವೇ ಎನ್ನುವ ಮುಜುಗರದ ಪ್ರಶ್ನೆಗಳು ಹೊರಬರಲು ಆಸ್ಪದ ಕೊಡುತ್ತದೆ ಎನ್ನುವುದೇ ಕಾರಣವಾಗಿದ್ದಿತು. ಸ್ವಾಮಿಗಳು ‘…..ಒಟ್ಟುಗೂಡುತ್ತಿರುವ ಭೋಗ ಸಂಸ್ಕೃತಿಯ ಕಾರ್ಮೋಡಗಳನ್ನು ಹೊಡೆದೋಡಿಸುವ ಬಿರುಗಾಳಿಯೊಂದು ಬರುತ್ತಿದೆ. ಅಂತಹ ಬಿರುಗಾಳಿಯ ಹಿಂದಿರುವ ಶಕ್ತಿ ಶ್ರೀ ರಾಮಕೃಷ್ಣರೆಂದು ಘೋಷಿಸಿದರು. (121) ‘ ….ಮೊನ್ನೆ ಸಂಜೆ ಮುಂದಿನ ಚಳಿಗಾಲದ ಕೆಲಸಕ್ಕಾಗಿ ಹೊಸ ಸ್ಥಳಕ್ಕೆ ಹೋಗಲು, ನನ್ನ ಭಾಷಣದಲ್ಲಿ ಮೂರೇ ನಿಮಿಷದಲ್ಲಿ ೧೫೦ ಡಾಲರ್ ಸಂಗ್ರಹಿಸಲಾಯಿತು. ಅಲ್ಲೇ ಇಚ್ಛೆ ಪಟ್ಟಿದ್ದರೆ ಇನ್ನೂ ೫೦೦ ಡಾಲರ್ ಕೊಡುತ್ತಿದ್ದರು. ನಾನು ಸಾವಕಾಶವಾಗಿ ಹೆಚ್ಚು ದುಬಾರಿಯಾಗದಂತೆ ಹೋಗಬೇಕೆಂದಿದ್ದೇನೆ ‘ ಎಂದು ಸಾರಾ ಬುಲ್’ಗೆ ತಿಳಿಸಿ ಕಾರ್ಮೋಡದ ಸುಳಿಗಾಳಿಗೆ ತಾವೇ ಸಿಲುಕಿದ್ದರು. (೮/೭/೧೮೯೬).
ಸ್ವಾಮಿಗಳು ಹಣಕ್ಕೆ ಪ್ರಾಶಸ್ತ್ಯ ಕೊಡುವುದರಲ್ಲಿ ಯಾವುದೇ ರಹಸ್ಯವಿರಲಿಲ್ಲ. ಅವರು ಭಾರತಕ್ಕೆ ಮರಳಿದ ನಂತರ ಮದ್ರಾಸ್; ಕಲ್ಕತದಲ್ಲಿ ಜನ ಸನ್ನಿಗೆ ಒಳಗಾದವರಂತೆ ಜಯಕಾರ ಕೂಗಿದ್ದರಾದರೂ ಅದರ ನಡುವೆಯೇ ಸ್ವಾಮಿಗಳ ಹೃದಯದಲ್ಲಿ ಸಣ್ಣದೊಂದು ಅತೃಪ್ತಿ ಹೊಗೆಯಾಡುತ್ತಿದ್ದಿತು. ‘‘ಹಿಂದೂಗಳು ಮೆರವಣಿಗೆ ಮಾಡುತ್ತಾರೆ. ಹಣ ಕೊಡುವುದಿಲ್ಲ. ಈ ಜಗತ್ತಿನಲ್ಲಿ ನನಗೆ ಒದಗಿದ ಏಕಮಾತ್ರ ಸಹಾಯ ಎಂದರೆ ಇಂಗ್ಲೆಂಡ್'ನಲ್ಲಿ ಮಿಸ್ ಮುಲ್ಲರ್ ಮತ್ತು ಶ್ರಿಯುತ ಸೇವಿಯರ್'ರವರಿಂದ. ಕಲ್ಕತ್ತದಲ್ಲಿ ಮುಖ್ಯ ಕೆಂದ್ರ ತೆರೆಯಲು ಹತ್ತು ಸಾವಿರ ಪೌಂಡ್ ಸಾಕಾಗಬಹುದೆಂದು ಅಂದಾಜಿಸಿದ್ದೆ. ಆದರೆ ಆಗಿನ ನನ್ನ ಲೆಕ್ಕಾಚಾರ ೧೦-೧೨ ವರ್ಷಗಳ ಹಿಂದಿನ ಅನುಭವದಿಂದ ಕೂಡಿತ್ತು. ಅಲ್ಲಿಂದೀಚೆಗೆ ಕ್ರಯ ೩-೪ ಪಟ್ಟು ಹೆಚ್ಚಿದೆ ‘ ಎನ್ನುತ್ತ ೫/೫/೧೮೯೭ ರಂದು ಮಾರ್ಗರೆಟ್ ನೋಬಲ್’ಗೆ ಬರೆದ ಪತ್ರದ ಮೂಲಕ ಅಸಮಾಧಾನದ ಹೊಗೆಯನ್ನು ಹೊರಹಾಕಿದ್ದರು.
ಸ್ವಾಮಿಗಳು ಹಣದ ವಿಚಾರದಲ್ಲಿ ಸಂಸಾರಿಗಳಿಗಿಂತಲೂ ಕಡಿಮೆ ವ್ಯಾವಹಾರಿಕರಾಗಿರಲಿಲ್ಲ. ‘ ಕಾಶೀಪುರ ತೋಟದ ಮನೆಯನ್ನು (ರಾಮಕೃಷ್ಣರು ಕೊನೆಯ ದಿನಗಳನ್ನು ಕಳೆದ ಜಾಗ) ನಾವು ತೆಗೆದುಕೊಳ್ಳುವುಸು ಒಳ್ಳೆಯದು. ಇದು ನಿನಗೇನೆನಿಸುತ್ತದೆ ? ಇದಕ್ಕೆ ನಿನಗೆ ಒಪ್ಪಿಗೆಯಿದ್ದರೆ ಯಾರಿಗೂ ತಿಳಿಸಬೇಡ - ಮಠದಲ್ಲಿಯೂ ಕೂಡ. ಖುದ್ದಾಗಿ ನೀನೇ ವಿಚಾರಿಸು. ಯೋಜನೆಗಳನ್ನು ರಹಸ್ಯವಾಗಿಡದಿದ್ದರೆ ಕೆಲಸ ಹಾಳಾಗುತ್ತದೆ. ನಿನಗೆ ಸರಿಯೆನಿಸಿದರೆ ೧೫-೧೬ ಸಾವಿರಕ್ಕೆ ಸಿಗುವಂತಿದ್ದರೆ ಕೊಂಡಕೋ. ಹೆಚ್ಚು ಬೆಲೆ ಕೇಳಿದರೆ ಮುಂಗಡ ಹಣ ಕೊಟ್ಟು ಏಳು ವಾರಗಳ ತನಕ ತಡೆ. …ಗುಟ್ಟಿನಲ್ಲಿ ಈ ಕೆಲಸವನ್ನು ಮಾಡಬೇಕು… ಇಂದೋ ನಾಳೆಯೋ ಈ ತೋಟವನ್ನು ನಾವು ಪಡೆಯಲೇ ಬೇಕು. ..ಯಾರಾದರೂ ಮಧ್ಯವರ್ತಿಗಳ ಮೂಲಕ ಈ ವಿಷಯವನ್ನು ಪ್ರಸ್ತಾಪಿಸಿದರೂ ಸರಿಯೇ…..ನಾವು ಕೊಂಡುಕೊಳ್ಳಲು ಇಚ್ಛಿಸುತ್ತೇವೆ ಎಂದು ಗೊತ್ತಾದರೆ ಬೆಲೆ ಹೆಚ್ಚಿಸುವರು. ಆದ್ದರಿಂದ ಗುಟ್ಟಾಗಿ ಇದು ನಡೆಯಲಿ. ರಾಮಕೃಷ್ಣರು ನಮ್ಮ ಜೊತೆಗಿದ್ದಾರೆ….’ (೧೩/೭/೧೮೯೭-ಬ್ರಹ್ಮಾನಂದ). ಹಣ ತಾಗಿದರೆ ಅಸ್ವಸ್ಥರಾಗುತ್ತಿದ್ದ ಗುರುದೇವ ರಾಮಕೃಷ್ಣರು ತಮ್ಮ ಮಠ ಸ್ಥಾಪಿಸಲು ಹೆಣಗುತ್ತಿದ್ದ ಶಿಷ್ಯರ ಜೊತೆಗಿರುವುದು ಅನಿವಾರ್ಯವೇ ಆಗಿದ್ದಿತು !
ಸಾರಾ ಬುಲ್ ಮತ್ತು ಜೊಸೆಫಿನ್ ಮೆಕ್ಲಿಯಾಡ್ ಭಾರತಕ್ಕೆ ಬರುವರಿದ್ದರು. ಅಮೆರಿಕದಲ್ಲಿ ಅವರಿಂದ ಸಾಕಷ್ಟು ನೆರವನ್ನು ಪಡೆದು , ಅವರ ಮನೆಗಳಲ್ಲಿ ದೀರ್ಘ ಕಾಲ ಇದ್ದ ಸ್ವಾಮಿಗಳಿಗೆ ಅವರನ್ನು ಭಾರತದಲ್ಲಿ ಸತ್ಕರಿಸಿ , ಆತಿಥ್ಯ ನೀಡಿ ಮುದಗೊಳಿಸುವ ಅನಿವಾರ್ಯತೆ ಇದ್ದಿತು. ಅದರೆ ಸ್ವಾಮಿಗಳ ಹತ್ತಿರ ಅದಕ್ಕೆ ಬೇಕಾದಷ್ಟು ಹಣವಿರದೆ ಸಂದಿಗ್ದಕ್ಕೆ ಸಿಕ್ಕಿಕೊಂಡಿದ್ದರು. ‘ನನ್ನ ದೇಶದ ಜನ ನನ್ನ ಪ್ರಯಾಣದ ಖರ್ಚಿಗೆ ಒಂದು ಚಿಕ್ಕಾಸನ್ನೂ ಕೊಟ್ಟಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಒಂದು ದೊಡ್ದ ತಂಡವನ್ನೇ ಕರೆದೊಯ್ಯಬೇಕಿದೆ. ಇದು ಎಷ್ಟು ಕಷ್ಟ ಎಂದು ನೀನೇ ಊಹಿಸಬಹುದು. ಇಂಗ್ಲಿಷ್ ಶಿಷ್ಯರ ಹತ್ತಿರ ಯಾವಾಗಲೂ ಕೇಳುವುದು ನಾಚಿಕೆಗೇಡು. ಆದ್ದರಿಂದ ಹಿಂದಿನಂತೆ ನಾನು ಬರಿ ಒಂದು ಕಂಬಳಿಯನ್ನು ತೆಗೆದುಕೊಂಡು ಹೋಗಿರುವೆನು. ಈ ಸ್ಥಳದಲ್ಲಿ ನೀನೇ ನೋಡುವಂತೆ ಗುಡ್ವಿನ್ ತರದವರು ಬೇಕಿಲ್ಲ… ಎಂದು ತಮಗೆ ಎದುರಾದ ಸಂಕಟವನ್ನು ರಾಮಕೃಷ್ಣಾನಂದರಿಗೆ ತೋಡಿಕೊಂಡಿದ್ದರು. (ಪತ್ರ-೩೦/೯/೧೮೯೭).
ಸಾಮಾನ್ಯವಾಗಿ ಭಾರತದಲ್ಲಿ ಅಣ್ಣ ಎಂದೂ ತಂಗಿಯಿಂದ ಹಣವನ್ನು ನಿರೀಕ್ಷಿಸುವುದಿಲ್ಲ. ಅದೆಷ್ಟೇ ಕಷ್ಟವಾದರೂ ಆಕೆಗೆ ತಾನೇ ಹಣ ಕೊಡಲು ಯತ್ನಿಸುತ್ತಾನೆ. ಇದಕ್ಕೆ ವಿರುದ್ಧವಾಗಿ ಸ್ವಾಮಿಗಳು ತಂಗಿಯರಾದ ಮೇರಿ ಮತ್ತು ಹ್ಯಾರಿಯೆಟ್ ಹೇಲ್’ ಕಡೆಯಿಂದಲೂ ಹಣವನ್ನು ನಿರೀಕ್ಷಿಸುತ್ತಿದ್ದರು. ಹ್ಯಾರಿಯೆಟ್ ಹೇಲ್ ಕ್ಲಾರೆನ್ಸ್ ವೂಲಿಯನ್ನು ಮದುವೆಯಾಗಿದ್ದಳು. ಬೇಲೂರು ಮಠ ಖರೀದಿ ಒಪ್ಪಂದ ಮಾಡಿಕೊಳ್ಳುವ ಹಿಂದಿನ ದಿನ ಸ್ವಾಮಿಗಳು ಮೇರಿ ಹೇಲ್’ಗೆ ಪತ್ರ ಬರೆದಿದ್ದರು. (೨/೩/೧೮೯೮) ‘..ಹಿಂದೂಗಳು ಭಾವಿಸುವಂತೆ ಹಿಂದಿನ ಜನ್ಮಗಳಲ್ಲಿ ನಾನು ನಿಮ್ಮವನಾಗಿರಬಹುದು. ನಾನು ಒಂದು ವಿಷಯಕ್ಕೆ ಮಾತ್ರ ವಿಷಾದಿಸುತ್ತೇನೆ. ಈಗ ನಾನು ಬಹುವಾಗಿ ಬಯಸುತ್ತಿರುವ ಲಕ್ಷಾಧಿಪತಿಗಳು ಕಾಣುತ್ತಿಲ್ಲವಲ್ಲ ! ಸಂಘ ಸ್ಥಾಪನೆ , ಕಟ್ಟಡ ಮುಂತಾದ ಕೆಲಸಗಳ ನಡುವೆ ನಾನು ಹಣ್ಣುಗಾಯಿ ನೀರುಗಾಯಿಯಾಗಿ ಕುಗ್ಗಿ ಉದ್ರೇಕಗೊಳ್ಳುತ್ತಿದ್ದೇನೆ. ಹ್ಯಾರಿಯೆಟ್’ಗೆ ಲಕ್ಷಾಂತರ ಸುಗುಣಗಳ ಬದಲು ಅವಳಲ್ಲಿ ಲಕ್ಷಾಂತರ ಹಣ ಇದ್ದರೆ ಹೆಚ್ಚು ಉಪಯೋಗವಾಗುತ್ತಿದ್ದಿತೆಂದು ನನ್ನ ನಂಬಿಕೆ. ಆದ್ದರಿಂದ ನೀನು ಅದೇ ತಪ್ಪನ್ನು ಮಾಡಬೇಡ….ನಿನಗೆ ಲಕ್ಷಾಧಿಪತಿ ಸಿಗಲಿಲ್ಲ. ಆದ್ದರಿಂದ ನನಗೆ ಹಣ ಸಿಗಲಿಲ್ಲ. ಆದ್ದರಿಂದಲೇ ನಾನು ಇಷ್ಟೊಂದು ತಾಪತ್ರಯಕ್ಕೆ ಸಿಕ್ಕು ವ್ಯರ್ಥವಾಗಿ ಇಷ್ಟೊಂದು ಕೆಲಸ ಮಾಡಬೇಕಾಯಿತು’ ಎಂದಿದ್ದಾರೆ. ‘ ನಾನು ಬೇಕಾದಷ್ಟು ದುಡ್ದು ಮಾಡಿದರೆ ಸಂತೊಷವಾಗುವುದು. ನಾನು ಸಾಕಷ್ಟು ಹಣ ಮಾಡಿ ಜಪಾನ್ , ಹೊನಲುಲು , ಜಾವಾ ಮೂಲಕ ಭಾರತಕ್ಕೆ ಹೋಗುತ್ತೇನೆ. ನಿನಗೆ ಕೋಟ್ಯಾಧೀಶ ಸಿಕ್ಕಲಿಲ್ಲ. ನೀನು ಏತಕ್ಕೆ ಅರ್ಧ , ಕಾಲು ಕೋಟಿಯವಳಾಗಲು ಯತ್ನಿಸಬಾರದು..ನನಗೆ ಹಣ ಬೇಕು. ಬೇಕಾದರೆ ಮಿಷಿಗನ್ ಸರೋವರಕ್ಕೆ ಹೋಗಲೂ ನನ್ನ ಅಭ್ಯಂತರವೇನಿಲ್ಲ ‘ ಮೇರಿ ಹೇಲ್’ಗೆ ಮಾಡಿದ ಇನ್ನೊಂದು ಮನವಿ. (೨೭/೧೨/೧೮೯೯).
ಶ್ರೀಮಂತನನ್ನು ಮದುವೆಯಾಗಿದ್ದರೂ ಹ್ಯಾರಿಯೆಟ್ ತಮಗೆ ಆರ್ಥಿಕ ನೆರವು ನೀಡುತ್ತಿಲ್ಲ ಎನ್ನುವ ಅಸಮಾಧಾನ ಸ್ವಾಮಿಗಳಿಗೆ ಇದ್ದಿರುವಂತೆ ಕಾಣತ್ತದೆ. ಅದನ್ನು ಅವರು ನೇರವಾಗಿ ಹ್ಯಾರಿಯೆಟ್’ಗೆ ಹೇಳಲು ಸಾಧ್ಯಾವಾಗದೆ ಮೇರಿ ಹೇಲ್ ಮುಖಾಂತರ ತಿಳಿಸಲು ಯತ್ನಿಸುತ್ತಿದ್ದರು. ರೀಡ್ಜ್’ಲೆ ಮ್ಯಾನೊರ್’ನಿಂದ ೧೮೯೯ ಸೆಪ್ಟೆಂಬರ್ ಮೊದಲ ವಾರ ಬರೆದ ಪತ್ರದಲ್ಲಿಯೂ ‘ ನೀನು ಹ್ಯಾರಿಯೆಟ್ ಪ್ರತಿ ತಿಂಗಳು ಕೆಲವು ಡಾಲರ್’ಗಳನ್ನು ನನಗೆ ಕೊಡುವುದಕ್ಕೆ ಒಪ್ಪಿಸಬೇಕು. ನಾನು ಇನ್ನಿತರ ಕೆಲವು ಗೆಳೆಯರಿಗ ಇದನ್ನು ಹೇಳುತ್ತೇನೆ. ಇದರಲ್ಲಿ ಗೆಲವು ಸಿಕ್ಕರೆ ನಾನು ಭಾರತಕ್ಕೆ ಹಾರಿ ಹೋಗುತ್ತೇನೆ. ‘ಜೀವನೋಪಾಯಕ್ಕೆ ಉಪನ್ಯಾಸ ಕೊಟ್ಟು ಸಾಕಾಗಿದೆ …. ನಾನು ಷಿಕಾಗೊಗೆ ಬರುತ್ತೇನೆ. ಭಾರತಕ್ಕೆ ಹಿಂದಿರುಗಿ ಹೋಗಲು ಹಣ ಸಂಪಾದಿಸಲು ಶ್ರೀಮತಿ ಆಡಮ್ಸ್ ಕೆಲ ಉಪನ್ಯಾಸಗಳನ್ನು ಏರ್ಪಡಿಸಲಾರಳೇ ?......ಭಾರತ ಅಥವಾ ಮತ್ತೆ ಯಾವುದೇ ದೇಶದ ವಿಷಯವನ್ನೆಲ್ಲ ನಾನು ಈಗ ತ್ಯಜಿಸಿದ್ದೇನೆ. ಈಗ ನಾನು ಕೇವಲ ಸ್ವಾರ್ಥಿಯಾಗುತ್ತೇನೆ ‘ ಎಂದು ಗೋಳಾಡಿದ್ದರು. (ಪತ್ರ-೧೭/೬/೧೯೦೦). ಮಾರ್ಚ್ ೧೮೯೯ ರಲ್ಲಿ ‘…ಮೇರಿ ನೀನು ಗಂಡನ ಬೇಟೆಯಲ್ಲಿ ಹಾಗೂ ನಾಟ್ಯ ಮತ್ತು ಸಂಗೀತ ಗೋಷ್ಟಿಗಳಲ್ಲಿ ಬಹಳ ತೊಡಗಿರುವೆಯೆಂದು ಕೆಲ ದಿನಗಳ ಹಿಂದೆ ಕೇಳಿದೆ. ಸರಿ , ಅದೇನೋ ನನಗೆ ಪತ್ರ ಬರೆಯದಿದ್ದುದಕ್ಕೆ ಸಮರ್ಥನೆಯಾಯಿತು. ಆದರೆ ನಿನಗೆ ಗಂಡ ಸಿಗಲಿ ಬಿಡಲಿ ನನಗೆ ಗೊತ್ತಿಲ್ಲ , ನನ್ನ ಹಣ ನನಗೆ ಸಲ್ಲಬೇಕು. ಅದನ್ನು ಮರೆಯಬೇಡ. ಹ್ಯಾರಿಯೆಟ್ ಗಂಡ ಸಿಕ್ಕ ನಂತರ ಜಾಣತನದ ಮೌನವ್ರತ ತಾಳಿದ್ದಾಳೆ. ಆದರೆ ದಯವಿಟ್ಟು ನನ್ನ ಹಣವೆಲ್ಲಿ ? ಆಕೆಗೂ ಅಕೆಯ ಗಂಡನಿಗೂ ಇದನ್ನು ಜ್ಞಾಪಿಸು. ಅವಳು ವೂಲಿ. ಉಣ್ಣೆಯಂತೆ ಮೃದುವಾಗಿದ್ದು ಕೈಯಿಂದ ನುಣುಚಿಕೊಂಡು –ಇಲ್ಲಿ ಬ್ರಿಟಿಷರು ನಮ್ಮನ್ನು ಜಿಡ್ಡಿನಂತೆ ಜಾರುವ ಬಂಗಾಳಿ ಎಂದು ಕರೆಯುವಂತೆ- ಹೋಗವಂತಿದ್ದರೆ , ದೇವರೇ ನನ್ನ ಹಣವೆಲ್ಲಿ ? ‘ ಎಂದಿದ್ದರು . ಮೇರಿ , ಹ್ಯಾರಿಯೆಟ್ ಸೋದರಿಯರು ಸ್ವಾಮಿಗಳು ಏನೇ ಹೇಳಲಿ ಒಂದು ಚಿಕ್ಕಾಸನ್ನೂ ಬಿಚ್ಚಲಿಲ್ಲ. ತಂಗಿಯರನ್ನು ಛೇಡಿಸಲು ಲಘು ಹಾಸ್ಯದ ದಾಟಿಯಲ್ಲಿ ಪತ್ರ ಬರೆದಿರುವರೆಂದು ಅಭಿಮಾನಿಗಳು ಮತ್ತು ಭಕ್ತರು ಸಮರ್ಥಿಸಬಹುದಾದರೂ ಸ್ವಾಮಿಗಳು ಹ್ಯಾರಿಯೆಟ್’ಳಲ್ಲಿ ಗುಣಕ್ಕಿಂತ ಹಣ ಹೆಚ್ಚಿದ್ದರೆ ಒಳ್ಳೆಯದಿದ್ದಿತು ಎನ್ನುವುದು ಉತ್ತಮ ಚಿಂತನೆಯೇನಲ್ಲ.
ಬಹು ದೀರ್ಘ ಕಾಲದಿಂದ ಶ್ರೀನಗರದಲ್ಲಿ ಉಳಿದಿದ್ದ ಸ್ವಾಮಿಗಳ ವಸತಿ ಮತ್ತು ಊಟಕ್ಕೆ ಕಾಶ್ಮೀರದ ರಾಜ ನೆರವು ನೀಡಿದ್ದರಿಂದ ಆ ಕುರಿತು ಚಿಂತೆ ಇರಲಿಲ್ಲ. ಆದರೆ ಇತರ ಬಳಕೆಗಾಗಿ ಕೈಯಲ್ಲಿದ್ದ ಅಲ್ಪ ಕಾಸು ಖರ್ಚಾಗಿ ಹೋಗಿದ್ದಿತು. ಅದನ್ನು ಸಾರಾ ಬುಲ್ , ಜೊಸೆಫಿನ್ ಮೆಕ್ಲಿಯಾಡ್ ಮುಂದೆ ಹೇಳಿಕೊಳ್ಳುವಂತಿರಲಿಲ್ಲ. ಸ್ವಾಮಿಗಳನ್ನು ಕಾಣಬೇಕೆಂದು ಹರಿಪದ ಮಿತ್ರ ಮತ್ತು ಇಂದುಮತಿ ಮಿತ್ರ ಬಹಳ ಚಡಪಡಿಸಿ , ಕರಾಚಿಗೆ ಬಂದು ನಿರಾಶರಾಗಿ ಹಿಂದಿರುಗಿದ್ದರು. ಹರಿಪದ ಮಿತ್ರ ಸರ್ಕಾರ ನಡೆಸುವ ಸಿಂಧಿ ಭಾಷೆಯ ಪರೀಕ್ಷೆ ತೆಗೆದುಕೊಂಡಿದ್ದು ಸ್ವಾಮಿಗಳನ್ನು ವಿಚಾರಿಸಿ ಪತ್ರ ಬರೆದಿದ್ದನು. ೧೭/೯/೧೮೯೮ ರಂದು ಸ್ವಾಮಿಗಳು ಹರಿಪದ ಮಿತ್ರ ಮತ್ತು ಖೇತ್ರಿ ಮಹಾರಾಜರಿಗೆ ಪತ್ರಗಳನ್ನು ಬರೆದರು. ಈ ಎರಡು ಪತ್ರಗಳ ವಿಷಯ ಒಂದೇ ಆಗಿದ್ದಿತು. ಹರಿಪದಮಿತ್ರನಿಗೆ ‘ …. ಮೇಲೆ ಹೇಳಿದ ಅಮೆರಿಕ ಗೆಳೆಯರು ನನ್ನ ಖರ್ಚನ್ನೆಲ್ಲಾ ವಹಿಸಿಕೊಳ್ಳುವರು. ನಾನು ಅವರಿಂದ ಕರಾಚಿಯವೆರೆಗಿನ ರೈಲು ಖರ್ಚನ್ನು ತೆಗೆಕೊಳ್ಳುತ್ತೇನೆ. ಆದರೆ ನಿನಗೆ ಸಾಧ್ಯವಾದರೆ ೫೦ ರೂಪಾಯಿಗಳನ್ನು ತಂತಿಯ ಮೂಲಕ ಕೇರ್ ಆಫ್ ಋಷಿವರ ಮುಖ್ಯೋಪಾಧ್ಯಾಯ , ಮುಖ್ಯ ನ್ಯಾಯಾಧೀಶ , ಕಾಶ್ಮೀರ ರಾಜ್ಯ , ಶ್ರೀನಗರ ಇವರಿಗೆ ಕಳಿಸು. ಇದರಿಂದ ನನಗೆ ಸಹಾಯವಾಗುವುದು. ಏಕೆಂದರೆ ಇತ್ತೀಚೆಗೆ ನನ್ನ ಖಾಯಿಲೆಯಂದ ತುಂಬಾ ಖರ್ಚು ಮಾಡಬೇಕಾಯಿತು. ಯಾವಾಗಲೂ ನನ್ನ ವಿದೇಶಿ ಭಕ್ತರಿಂದ ಕೇಳಲು ನಾಚಿಕೆಯಾಗುವುದು. ಶುಭೇಚ್ಛೆಗಳು. ಅಜಿತ್ ಸಿಂಗ್’ಗೆ : ‘ ಎರಡು ವಾರಗಳಿಂದ ನಾನು ಅನಾರೋಗ್ಯದಿಂದ ನರಳುತ್ತಿದ್ದೇನೆ. ನನಗೆ ಈಗ ಹಣ ಬೇಕಾಗಿದೆ. ನನಗೆ ಬೇಕಾದುದೆಲ್ಲವನ್ನೂ ಅಮೆರಿಕ ಗೆಳೆಯರು ಮಾಡುತ್ತಿದ್ದರೂ ಅವರನ್ನು ಮತ್ತೆ ಮತ್ತೆ ಕೇಳಲು ನನಗೆ ನಾಚಿಕೆಯಾಗುತ್ತಿದೆ. ಅದಲ್ಲದೆ ಕಾಯಿಲೆ ಬಿದ್ದರೆ ಯಾವ ಯಾವುದಕ್ಕೋ ಹಣ ಖರ್ಚು ಆಗುವುದು. ಈ ಪ್ರಪಂಚದಲ್ಲಿ ಒಬ್ಬರನ್ನು ಮಾತ್ರ ಕೇಳುವುದಕ್ಕೆ ನನಗೆ ನಾಚಿಕೆಯಾಗುವುದಿಲ್ಲ. ಅವರು ನೀವೇ. ಅದರೆ ನೀವು ಕೊಡಲಿ ,ಬಿಡಲಿ ಎಲ್ಲಾ ಒಂದೇ ನನಗೆ. ಸಾಧ್ಯವಾದರೆ ಸ್ವಲ್ಪ ಹಣವನ್ನು ಕಳಿಸಿರಿ…..೧೬/೧೦/೧೮೯೮). ಲಾಹೋರ್’ನಿಂದ ಇವರಿಬ್ಬರಿಗೆ ಬರೆದಿರುವುದಕ್ಕೆ ಪ್ರತಿಯಾಗಿ ಸ್ವಾಮಿಗಳಿಗೆ ಹರಿಪದ ಮಿತ್ರ ಮತ್ತು ಅಜಿತ್ ಸಿಂಗ್ ಹಣದ ನೆರವು ನೀಡಿದರು. ಶಾರದಾನಂದನ ಮೂಲಕ ಹರಿಪದ ಮಿತ್ರನ ಹಣವನ್ನು ಹಿಂದಿರುಗಿಸಿದ್ದರು. ರಾಮಕೃಷ್ಣ ಪರಮಹಂಸರು ಹಣವನ್ನು ಮುಟ್ಟದೇ ಎಲ್ಲ ಅಗತ್ಯಗಳನ್ನು ಪೂರೈಸಿಕೊಂಡಿದ್ದರು. ಆದರೆ ಸ್ವಾಮಿಗಳಿಗೆ ಅದು ಅಸಾಧ್ಯವೇ ಅಗಿದ್ದಿತು.
‘……….ನಾನು ಮುಖ್ಯವಾಗಿ ಆರೋಗ್ಯದ ನಿಮಿತ್ತ ಬಂದೆ ಅದು ನನಗೆ ದೊರೆಯಿತು. ಮತ್ತು ಜೊತೆಗೆ ನ್ಯಾಯಾಲಯದ ಖರ್ಚಿಗೆ ೨೦೦೦ ದೊರೆತವು. ಒಳ್ಳೆಯದು. ಉಪನ್ಯಾಸ ವೇದಿಕೆಯಿಂದ ಮಾಡುವ ಕೆಲಸ ಇನ್ನು ಮೇಲೆ ತೀರಿತು ಎಂದು ಭಾವಿಸುತ್ತೇನೆ. ನಾನೊಂದು ಮಗು. ನಾನೇನು ಕೆಲಸ ಮಾಡಬಲ್ಲೆ. ನನ್ನ ಶಕ್ತಿಯೆನ್ನೆಲ್ಲ ನಿನಗೆ ವರ್ಗಾಂತರಿಸಿದ್ದೇನೆ. ಇನ್ನು ಮೇಲೆ ನಾನು ಉಪನ್ಯಾಸ ವೇದಿಕೆಯಿಂದ ಕೆಲಸ ಮಾಡಲಾರೆ. ಇದನ್ನು ಜೋ ಗೆ ಹೇಳಬೇಡ …..(೧೭/೧/೧೯೦೦- ಸಾರಾ ಬುಲ್’) . ಹಣ ಗಳಿಸಲು ಮುಂದಾಗುವುದಿಲ್ಲ ಎನ್ನುವ ಸ್ವಾಮಿಗಳ ನಿರ್ಧಾರ ಕೆಲದಿನಗಳಲ್ಲಿಯೇ ಮುರಿದುಬಿದ್ದಿತು. ‘ಲಾಸ್ ಏಂಜೆಲಿಸ್'ನಲ್ಲಿ ೩೦೦ ಡಾಲರ್ , ಮಿಸೆಸ್ ಬೌಲರ್ ಬಳಿ ೧೦೦ ಡಾಲರ್ ನಗದು ಇದೆ. ಮಿಸೆಸ್ ಹೆಂಡ್ರಿಕ್ ೩೦೦ ಡಾಲರ್ ಹಣ ಕೊಡಬೇಕು. ಯೂನಿಟೇರಿಯನ್ ಚರ್ಚ್’ನ ರೆ. ಫೆ ಮಿಲ್ಸ್ ನನ್ನನು ಇಲ್ಲಿಗೆ ಆಹ್ವಾನಿಸಿ ಸ್ಯಾನ್’ಫ್ರಾನ್ಸಿಸ್ಕೊಗೆ ಹೋಗಲು ಹಣ ಕೊಟ್ಟರು. ಓಕ್ ಲ್ಯಾಂಡ್’ನಲ್ಲಿ ಎರಡು ಬಾರಿ ಮಾತನಾಡಿದೆ. ಪ್ರತಿ ಬಾರಿ ೧೫೦೦ ಜನರಿದ್ದರು. ಕಳೆದ ಬಾರಿ ೩೦ ಡಾಲರ್ ಹಣ ಸಂಗ್ರಹವಾಯಿತು. ತಲಾ ೫೦ ಸೆಂಟ್’ಗಳ ತರಗತಿ ನಡೆಸುತ್ತೇನೆ. ಒಂದು ರಾತ್ರಿ (ಫೆಬ್ರವರಿ ೨೩) ಸ್ಯಾನ್’ಫ್ರಾನ್ಸಿಸ್ಕೊದಲ್ಲಿ ತಲಾ ೫೦ ಸೆಂಟ್’ಗಳ ತರಗತಿ ಇತ್ತು. ಅದರ ಖರ್ಚು ಅದರಂದಲೇ ಬಂದಿತು. (೨/೩/೧೯೦೦- ಮಿಸ್ ಜೊಸೆಫಿನ್ ಮೆಕ್ಲಿಯಾಡ್).
‘ನೀನು ಷಿಕಾಗೊಗೆ ಕರೆದಿರುವೆ. ನನಗೆ ಬರಲು ಸಂತೋಷವೇ. ಆದರೆ ನಾನು ಈಗ ಹಣ ಮಾಡುವುದರಲ್ಲಿ ನಿರತನಾಗಿದ್ದೇನೆ. ಆದರೆ ಹೆಚ್ಚಿಗೆ ಮಾಡಲಾಗಲಿಲ್ಲ. ಹಣ ಮಾಡುವುದು ಬಹು ನಿಧಾನ ಮತ್ತು ಶ್ರಮದ ಕೆಲಸ. ನಾನು ಹಿಂದಿರುಗಿ ಹೋಗುವುದಕ್ಕೆ ಬೇಕಾದಷ್ಟನ್ನಾದರೂ ಮಾಡಬೇಕಾಗಿದೆ….ಉಪನ್ಯಾಸದಿಂದ ನಾನು ಹಣ ಮಾಡಬೇಕಾದರೆ ಇತರ ಕೆಲಸಗಳಿಗೆ ಬಹಳ ಕಡಿಮೆ ಕಾಲ ಉಳಿಯುವುದು. ….ಅದರಲ್ಲಿಯೂ ಕಳೆದ ಎರಡು ವರ್ಷಗಳು ನನ್ನ ಪಾಲಿಗೆ ಉತ್ತಮವಾಗಿರಲಿಲ್ಲ. ನಾನೊಂದು ಮನೋನರಕದಲ್ಲಿ ಬದುಕುತ್ತಿರುವೆನು. ಪರಮಶಾಂತಿಯ ಕ್ಷಣವೊಂದನ್ನೂ ನಾನು ಅರಿಯೆ. ಯಾವಾಗಲೂ ನಾನು ಮಾನಸಿಕ ಪ್ರಚಂಡ ವೇದನೆಯಲ್ಲಿರುವೆ….. ಮೇರಿ ನನ್ನ ಜೀವನ ಜಂಜಾಟದಲ್ಲಿ ನಿನ್ನದು ಯಾವಾಗಲೂ ಒಂದು ಮೃದು ಮಧುರ ಗಾನವಿದ್ದಂತೆ. ನಿನ್ನ ಸತ್ಕರ್ಮಗಳಿಂಗಾಗಿ ನಿನಗೆ ಜೀವನದಲ್ಲಿ ಯಾವ ವಿರೋಧ ವಾತಾವರಣವೂ ಇರಲಿಲ್ಲ. ಪರಮ ಶಾಂತಿಯ ಕ್ಷಣವೊಂದನ್ನೂ ನಾನರಿಯೆ…..’ ಇದು ೨/೩/೧೯೦೦ ರಂದು ಮೇರಿ ಹೇಲ್’ಗೆ ಬರೆದ ಪತ್ರದ ತಿರುಳು.
ಸ್ವಾಮಿಗಳು ೬/೪/೧೯೦೦ ರಂದು‘ ..ಇಲ್ಲಿ ನನ್ನ ಕೆಲಸ ಪೂರೈಸಿತು, ಮೇರಿ ಷಿಕಾಗೊದಲ್ಲಿ ಇದ್ದರೆ ಅಲ್ಲಿ ಹದಿನೈದು ದಿನ ಇರಬೇಕೆಂದಿರುವೆ ಎಂದು ಬರೆದಿದ್ದರು. ಅದರ ಮರುದಿನವೇ ಸಾರಾ ಬುಲ್’ಗೆ ‘ಇಂದು ಮಠದಿಂದ ನನಗೆ ಬಂದ ಪತ್ರದಲ್ಲಿ ರಾಜ ಅಜಿತ್ ಸಿಂಗ್ ನನಗೆ ಹಣ ಕೊಡುತ್ತಿದ್ದ ಹಣವನ್ನು ನಿಲ್ಲಿಸಿರುವುದಾಗಿ ತಿಳಿಸಲಾಗಿದೆ.- ಎಲ್ಲ ತಾಯಿಯ ಇಚ್ಛೆ. ವರ್ಷಗಳ ಕಾಲ ರಾಜ ಬಹಳ ಒಳ್ಳೆಯವನಾಗಿದ್ದ. ಆತನಿಗೆ ಎಲ್ಲಾ ಆಶೀರ್ವಾದಗಳು. ಈಗ ನಾನು ಹಿಂದೆಂದಿಗಿಂತಲೂ ಹೆಚ್ಚು ನಿಶ್ಚಿಂತನಾಗಿದ್ದೇನೆ. ಈಗ ನಾನು ನನ್ನ ಕಾಲ ಮೇಲೆ ನಿಂತುಕೊಂಡು ಶ್ರಮದಿಂದ , ಆನಂದದಿಂದ ಕೆಲಸ ಮಾಡುತ್ತಿರುವೆ . ಕೆಲಸದಲ್ಲಿ ಮಾತ್ರ ನನಗೆ ಅಧಿಕಾರ. ಉಳಿದುದೆಲ್ಲ ತಾಯಿಗೆ ಗೊತ್ತು. ಆದ್ದರಿಂದ ನಾನು ಇಲ್ಲಿ ಉಳಿಯಬೇಕಾಗಿದೆ….’ (122) ರಾಜ ಅಜಿತ್ ಸಿಂಗ್ ಸ್ವಾಮಿಗಳಿಗೆ ನೀಡುತ್ತಿದ್ದ ಮಾಸಿಕ ಹಣವನ್ನು ನಿಲ್ಲಿಸಿದ್ದರಿಂದ ಆ ಕೊರತೆಯನ್ನು ನೀಗಿಸಿಕೊಳ್ಳಲು ಇನ್ನೂ ಕೆಲ ಕಾಲ ಉಪನ್ಯಾಸಗಳನ್ನು ಮುಂದುವರೆಸಿದರು. ಸ್ವಾಮಿಗಳು ನಗದನ್ನು ಇಟ್ಟುಕೊಳ್ಲಲು ಕಷ್ಟ ಎಂದು ಗುರುತಿಸಿದ್ದ ಅಲೈಸ್ ಹ್ಯಾನ್ಸ್’ಬ್ರೋ ಉಪನ್ಯಾಸಗಳಿಂದ ಬರುತ್ತಿದ್ದ ಹಣದಿಂದ ೨೦ ಡಾಲರ್ ಮೌಲ್ಯದ ಚಿನ್ನದ ಬಿಲ್ಲೆಗಳನ್ನು ಖರೀದಿಸಿ ಡಬ್ಬಿಯಲ್ಲಿ ತುಂಬಿಸಿಡುತ್ತಿದ್ದಳು. ಒಂದು ಡಬ್ಬಿ ತುಂಬಿದರೆ ಇನ್ನೊಂದು ಡಬ್ಬಿ ಸಿದ್ದವಿರುತ್ತಿದ್ದಿತು. ಸ್ವಾಮಿಗಳು ಕೆಲವೊಮ್ಮೆ ಈ ಡಬ್ಬಿಯಲ್ಲಿರುವ ಬಿಲ್ಲೆಗಳನ್ನು ಎಣಿಸಿ ತಾವು ಸಂಪಾದಿಸಿದ ಹಣ ಸಾಲದೆನಿಸಿ ಮತ್ತೊಮ್ದು ಉಪನ್ಯಾಸ ಸರಣಿಯನ್ನು ಪ್ರಾರಂಭಿಸುತ್ತಿದ್ದರು. (123) ಅಂತಿಮದಲ್ಲಿ ಯಾರನ್ನೂ ತೃಪ್ತಿಯಿಂದಿರಲು ಬಿಡದಿರುವ ಹಣವೇ ಗೆಲುವನ್ನು ಸಾಧಿಸಿದ್ದಿತು.
ಭಾರತದಲ್ಲಿ ತಮ್ಮ ಗುರು , ದೈವಗಳ ಮಠ , ದೇವಸ್ಥಾನ ಕಟ್ಟುವುದು ಮೊದಲಿನಿಂದಲೂ ನಡೆದು ಬಂದಿದ್ದಿತು. ಅದಕ್ಕಾಗಿ ಭಕ್ತರು , ಸಮಾನ ಮನಸ್ಕರು ಹಣ ನೀಡುತ್ತಿದ್ದರು ಅಥವಾ ಅಂಥಹವರಿಂದ ಚಂದಾ ಎತ್ತುತ್ತಿದ್ದರು. ಸ್ವಾಮಿಗಳು ಈ ಯಾವುದನ್ನೂ ಮಾಡಲಿಲ್ಲ. ಅಮೆರಿಕದಲ್ಲಿ ಸ್ವಾಮಿಗಳು ಭಾರತದ ನೈಜ ಚಿತ್ರಣ ನೀಡಿ ವಂತಿಗೆ ಕೇಳಿದ್ದರೆ ಅದಕ್ಕೆ ಪ್ರತಿಕ್ರಿಯೆ ಹೇಗಿರುತ್ತಿದ್ದಿತೋ ಗೊತ್ತಿಲ್ಲ. ಇವೆಲ್ಲವಕ್ಕಿಂತ ಹೆಚ್ಚಾಗಿ ಸ್ವಾಮಿಗಳಿಗೆ ವಂತಿಗೆ ಎತ್ತುವ , ದಾನ ಮಾಡುವಂತೆ ಪ್ರೇರೇಪಿಸುವ ಗುಣಗಳಿರಲಿಲ್ಲ. ಮುಂದೆ ಭಾರತದಲ್ಲಿಯೂ ಅವರು ಹಣ ಸಂಗ್ರಹದಲ್ಲಿ ಸಂಪೂರ್ಣ ವಿಫಲವಾದದ್ದು ಇದೇ ಕಾರಣದಿಂದ. ಹಣ ಸಂಗ್ರಹ ಮಾಡಲು ಮುಂದಾಗುವ ಧಾರ್ಮಿಕ ಮುಂದಾಳು , ಗುರುಗಳಲ್ಲಿ ಒಂದು ನಿರ್ದಿಷ್ಟ ಗುಣ, ಲಕ್ಷಣಗಳನ್ನು ಜನ ಅರಸುತ್ತಾರೆ ಮತ್ತು ಬಯಸುತ್ತಾರೆ. ಈ ಗುಣಗಳಿಲ್ಲದಿದ್ದರೆ ಅವರು ಆತನನ್ನು ಮೆಚ್ಚಬಹುದಾದರೂ ಹಣ ಕೊಡುವುದಿಲ್ಲ. ಹಣ ಸಂಗ್ರಹಿಸುವ ಗುರುಗಳು ಸಾರ್ವಜನಿಕ ಅಪೇಕ್ಷೆ , ಆಕ್ಷೇಪಣೆಗಳಿಗೆ ತಕ್ಕಂತೆ ತಮ್ಮನ್ನು ತಾವೇ ತಿದ್ದಿಕೊಳ್ಳಬೇಕು. ಆದರೆ ಸ್ವಾಮಿಗಳಿಗೆ ಇಂತಹ ಗುಣಗಳಿರಲಿಲ್ಲ. ಅಷ್ಟೇ ಅಲ್ಲ ಕ್ರೈಸ್ತ ಧರ್ಮವನ್ನು ಹಿಗ್ಗಾ ಮುಗ್ಗ ಟೀಕಿಸಲು ಸದಾ ಮುಂದಾಗುತ್ತಿದ್ದ ಸ್ವಾಮಿಗಳು ಹಿಂದೂ ಧರ್ಮದ ಕೊರತೆಗಳ ಬಗ್ಗೆ ಚರ್ಚಿಸುವ ಬದಲು ಉಪಾಯವಾಗಿ ಬದಿಗೆ ತಳ್ಳಿಬಿಡುತ್ತಿದ್ದರು. ಇದು ವಿದ್ಯಾವಂತರಾದ ಅಮೆರಿಕನ್ನರಿಗೆ ತಿಳಿಯುತ್ತಿದ್ದಿತು. ಅವರಲ್ಲಿ ಎಷ್ಟೋ ಜನ ಸ್ವಾಮಿಗಳ ವಿಚಾರಧಾರೆಯನ್ನು ವಿರೋಧಿಸದಿದ್ದರೂ ಕ್ರೈಸ್ತ ಧರ್ಮಕ್ಕಿಂತ ಅದೆಷ್ಟೋ ವಿಶಾಲವಾಗಿರುವ ಹಿಂದೂ ಧರ್ಮ ಅಥವಾ ಭಾರತೀಯ ಸಮಾಜ ಏಕೆ ಹಿಂದುಳಿದಿದೆ ಎಂದು ಪ್ರಶ್ನಿಸಿಕೊಳ್ಳುತ್ತಿದ್ದರು. ಅವರಿಗೆ ದಕ್ಕುತ್ತಿದ್ದ ಉತ್ತರಗಳು ಕ್ರೈಸ್ತ ಮಿಷನರಿಗಳು ಭಾರತೀಯ ಸಮಾಜದ ಹಿಂದುಳಿಯಲು ಕೊಡುತ್ತಿದ್ದ ಕಾರಣಗಳಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ. ಇದು ಅವರು ಮುಕ್ತಹಸ್ತದಿಂದ ದಾನ ಕೊಡುವುದಕ್ಕೆ ಅಡಚಣೆಯಾಗಿದ್ದಿತು.
Comment Box is loading comments...