ಗೊತ್ತುವಳಿಗಳ ಗುಟ್ಟು
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಗವಹಿಸಲು ಭಾರತದಿಂದ ಹೋದ ೨೦ ಜನರಲ್ಲಿ ನಾಲ್ವರು (ಪ್ರತಾಪಚಂದ್ರ ಮಜುಂದಾರ, ಬಲವಂತ ಬಾಹು ನಗರ್ಕರ್ , ಜ್ಞಾನೇಂದ್ರ ಚಕ್ರವರ್ತಿ , ಹೇವಿರತ್ನೆ ಧರ್ಮಪಾಲ) , ಸ್ವಾಮಿಗಳಿಗಿಂತ ಹೆಚ್ಚಲ್ಲದಿದ್ದರೂ ಸರಿಸಮಾನವಾಗಿ ಜನರನ್ನು ಸೆಳೆದದ್ದರು. ಹೀಗಿದ್ದರೂ ಭಾರತದಲ್ಲಿ ವಿಶ್ವ ಧರ್ಮ ಸಂಸತ್ತು ಎಂದರೆ ಸ್ವಾಮಿ ವಿವೇಕಾನಂದ ಎನ್ನುವ ಒಂದೇ ಹೆಸರು ಏಕೆ ಕಾಣುತ್ತದೆ ಎನ್ನುವ ಗುಟ್ಟನ್ನು ಸ್ವಾಮಿಗಳು ಬರೆದ ಪತ್ರಗಳಿಂದ ಬಿಡಿಸುವುದು ಸಾದ್ಯ. ಸ್ವಾಮಿಗಳು ಭಾರತದಲ್ಲಿ ತಮ್ಮ ಪರವಾಗಿ ಗೊತ್ತುವಳಿಗಳನ್ನು (Resolutions) ಅಂಗೀಕರಿಸುವ ಯೋಜನೆಯ ಹಿನ್ನೆಲೆ , ಅದನ್ನು ಕಾರ್ಯಗತಗೊಳಿಸಲು ಹೆಣೆದ ತಂತ್ರ , ಉಪಾಯವಾಗಿ ಮಾಡಿಕೊಂಡ ಸ್ವಪ್ರಚಾರದ ಘಟನೆಗಳ ಸರಣಿ ಮುಂದಿದೆ.
ವಿಶ್ವ ಧರ್ಮ ಸಂಸತ್ತಿಗೆ ಹೋದ ಸಂನ್ಯಾಸಿ ಭೋಗ ಭೂಮಿಯಾದ ಅಮೆರಿಕದಲ್ಲಿ ಬಹು ದೀರ್ಘ ಕಾಲ ಏಕಿರಬೇಕು ಎನ್ನುವ ಪ್ರಶ್ನೆ ಸ್ವಾಮಿಗಳ ಪರಿಚಿತರಲ್ಲಿ , ಬೆಂಬಲಿಗ , ಅನುಯಾಯಿಗಳಲ್ಲಿ ಮೂಡಿದ್ದಿತು. ಗುರುಭಾಯಿಗಳಲ್ಲಿ ಕೆಲವರಿಗೆ ಸ್ವಾಮಿಗಳು ಅಮೆರಿಕದಲ್ಲಿ ಉಳಿದಿರುವ ಉದ್ದೇಶವೇ ಸ್ಪಷ್ಟವಾಗಿರಲಿಲ್ಲ. ಸ್ವಾಮಿಗಳು ಅಮೆರಿಕ ಹೆಂಗಸರನ್ನು ಹೊಗಳಿ ಬರೆದಿದ್ದ ಪತ್ರಗಳು ಕಿವಿಯಿಂದ ಕಿವಿಗೆ ಹರಡಿದ್ದವು. ಕಲ್ಕತ್ತೆಗೆ ಮರಳಿದ್ದ ಪ್ರತಾಪಚಂದ್ರ ಮಜುಂದಾರ ಅಮೆರಿಕದಲ್ಲಿ ಸ್ವಾಮಿಗಳು ನಡೆಸುತ್ತಿರುವ ಜೀವನ ಭಾರತದ ಸಾಂಪ್ರದಾಯಿಕ ಸಂನ್ಯಾಸಿಯಂತಿಲ್ಲ ಎಂದು ಸ್ಪಷ್ಟವಾಗಿಯೇ ತಿಳಿಸಿದ್ದರು. ಅಮೆರಿಕದ ಲೌಕಿಕ ಮತ್ತು ಸಾಮಾಜಿಕ ಸಾಧನೆಗಳ ಮುಂದೆ ಭಾರತ ಸೊಲ್ಲೆತ್ತುವಂತಿರಲಿಲ್ಲ. ಭಾರತ ಸುತ್ತಿ ಬಂದಿದ್ದ ಅದರ ಬಗ್ಗೆ ಗೊತ್ತಿದ್ದ ಕೆಲ ಮಿಷನರಿಗಳು ಸ್ವಾಮಿಗಳು ಭಾಷಣಗಳಲ್ಲಿ ಅಮೆರಿಕದ ಕೇಳುಗರಿಗೆ ಹೇಳುತ್ತಿರುವುದು ವಾಸ್ತವ ಸ್ಥಿತಿಗೆ ಹೊಂದಾಣಿಕೆಯೇ ಆಗುತ್ತಿಲ್ಲ ಎಂದು ಎತ್ತಿ ತೋರಿಸುತ್ತಿದ್ದರು. ಅಮೆರಿಕರನ್ನು , ಕ್ರೈಸ್ತರನ್ನು ಅವರ ತತ್ತ್ವ , ವಿಚಾರಗಳನ್ನು , ಆಚಾರ ,ರೂಢಿಗಳನ್ನು ನೆರೆದಿದ್ದ ಸಭಿಕರೆದುರು ಎತ್ತಿ ಆಡಿಕೊಳ್ಳುತ್ತಿದ್ದ ಸ್ವಾಮಿಗಳಿಗೆ ಕ್ರೈಸ್ತ ಮಿಷನರಿಗಳು ಹಿಂದೂ ಸಾಮಾಜಿಕ ದುಸ್ಥಿತಿಯನ್ನು ಎತ್ತಿ ತೋರಿಸಿದಾಗ ಅದನ್ನು ಒಪ್ಪಿಕೊಳ್ಳುವ ಔದಾರ್ಯವಿರುತ್ತಿರಲಿಲ್ಲ. ಅದರ ಬದಲು ನೀವು ಹಣದ ದಾಸರು , ನಾವು ಅಧ್ಯಾತ್ಮ ಸಾಧಕರು ಎಂದು ಅಬ್ಬರಿಸಿ ಅವರ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದರು.
ಸ್ವಾಮಿಗಳು ಅಮೆರಿಕದಲ್ಲಿ ಭಾಷಣ ಮಾಡುತ್ತ ಸಂಚರಿಸುತ್ತಿದ್ದ ಕಾಲದಲ್ಲಿಯೇ ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ಭಾರತೀಯರಲ್ಲಿ ಪ್ರತಾಪಚಂದ್ರ ಮಜುಂದಾರ , ಬಲವಂತ ಬಾಹು ನಗರ್ಕರ್ , ಜಿಯಾನೆ ಸೊರಾಬ್ಜಿ. ವೀರಚಂದ ಗಾಂಧಿ ಸಾಕಷ್ಟು ಕಾಲ ಅಲ್ಲಿಯೇ ಉಳಿದಿದ್ದರು. ಅಯೋವಾ ಸ್ಟೇಟ್ ರಿಜಿಸ್ಟರ್ ಪತ್ರಿಕೆ ಡೆಸ್ ಮೊಯಿನ್ಸ್’ನಲ್ಲಿ ಸ್ವಾಮಿಗಳಿಗಿಂತ ಮೊದಲೇ ಬಲವಂತ ಬಾಹು ನಗರ್ಕರ್ ಉತ್ತಮ ಉಪನ್ಯಾಸಗಳನ್ನು ನೀಡಿ ಸ್ವಾಮಿಗಳಿಗೆ ಬೇಕಾದ ಸಜ್ಜಿಕೆಯನ್ನು ಸಿದ್ಧಪಡಿಸಿದ್ದಾರೆ ಎಂದು ಬರೆದಿದ್ದಿತು.( ೧/೧೨/೧೮೯೩). ಸ್ವಾಮಿಗಳಂತೆಯೇ ಪ್ರತಾಪಚಂದ್ರ ಮಜುಂದಾರರನ್ನು ಹಲವಾರು ಸಂಘ ಸಂಸ್ಥೆಗಳು ಭಾಷಣ ಮಾಡಲು ಕರೆಯುತ್ತಿದ್ದವು. ತಮ್ಮ ಯಶಸ್ಸನ್ನು ಕಂಡು ಪ್ರತಾಪಚಂದ್ರ ಮಜುಂದಾರ ಮತ್ತಿತರರು ಹೊಟ್ಟೆಕಿಚ್ಚಿನಿಂದ ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಸ್ವಾಮಿಗಳು ಬಲವಾಗಿ ನಂಬಿದ್ದರು.
ಪತ್ರಿಕೆಗಳಲ್ಲಿ ನನ್ನ ಬಗ್ಗೆ ಬಂದಿರುವ ಟೀಕೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದು ಹೆಚ್ಚು ಪ್ರಚಾರವಿಲ್ಲದ ಪತ್ರಿಕೆ. ಪೌರತ್ಯ ಭಾವನೆಗಳು ಇಲ್ಲಿ ಹಬ್ಬಿದ್ದರಿಂದ ಅವರ ಸುಖಕ್ಕೆ ಭಂಗ ಬಂದಿದೆ’ ಎಂದು ಶಿಷ್ಯರಿಗೆ ಬರೆದು ತಮ್ಮ ಜೀವನ ಶೈಲಿಯ ಬಗ್ಗೆ ಬಂದಿದ್ದ ಟೀಕೆಯನ್ನು ಸ್ವಾಮಿಗಳು ಹಿಂದಕ್ಕೆ ಸರಿಸಿದ್ದರು.(೨೪/೧/೧೮೯೪) , ಈ ಗುಲಾಮ ದೇಶದ (ಭಾರತ) ಪರಂಪರೆಯಲ್ಲಿ ಅಜ್ಞಾನ , ಜಾತೀಯತೆ , ಮೌಢ್ಯ ಮತ್ತು ಹೊಟ್ಟೆಕಿಚ್ಚು ಸೇರಿವೆ…. ಹೊಟ್ಟೆಕಿಚ್ಚು ಭಾರತದ ದೌರ್ಬಲ್ಯ ಎಂದು ಹರಿದಾಸ ವಿಹಾರಿದಾಸ ದೇಸಾಯಿಗಳಲ್ಲಿ ಗುಡುಗಿದ್ದರು. (೨೯/೧/೧೮೯೪) ಇನ್ನೂ ಮುಂದುವರೆದು ಅವರ ಮುಂದೆ ‘ಹೊಟ್ಟೆಕಿಚ್ಚು ಗುಲಾಮರ ಹುಟ್ಟುಗುಣ , ಅದೇ ಅವರನ್ನು ಗುಲಾಮಗಿರಿಯಲ್ಲಿಟ್ಟಿರುವುದು’ ಎಂದು ಘೋಷಿಸಿದ್ದರು. (?/೧೧/೧೮೯೪) , ನನ್ನ ಜನಪ್ರಿಯತೆಯಿಂದ ಮಜುಂದಾರರಿಗೆ ಹೊಟ್ಟೆಕಿಚ್ಚು ಉಂಟಾಗಿದೆ. ಇಲ್ಲಿನ ಪಾದ್ರಿಗಳು ನನ್ನನ್ನು ಮುಗಿಸಲು ಯತ್ನಿಸಿದರು. (೧೯/೩/೧೮೯೪-ರಾಮಕೃಷ್ಣಾನಂದ). ಕಾರ್ಯದರ್ಶಿಗಳು ಸ್ವದೇಶಕ್ಕೆ ಮರಳಲೇ ಬೇಕೆಂದು ಪತ್ರ ಬರೆದಿದ್ದಾರೆ. ..ಸಾಂಪ್ರದಾಯಿಕ ಪಾದ್ರಿಗಳು ವಿರೋಧವಾಗಿದ್ದಾರೆ. ಮಜುಂದಾರ್ ಪಾದ್ರಿಗಳ ಮೂಲಕ ನನ್ನ ಚಾರಿತ್ರ್ಯ ಹರಣ ಮಾಡುತ್ತಿದ್ದಾನೆ ಎಂದು ಕನಲಿದ್ದರು. (೯/೪/೧೮೯೪-ಅಳಸಿಂಗ ಪೆರುಮಾಳ್) .
ನನ್ನೊಡನೆ ಹೋರಾಡಿ ಜಯಗಳಿಸುವುದು ಸುಲಭವಲ್ಲ ಎಂದು ಗೊತ್ತಾಗಿ ಪಾದ್ರಿಗಳು ನನ್ನನ್ನು ನಿಂದಿಸಲು , ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ. ಮಜುಂದಾರ ಅವರಿಗೆ ನೆರವಾಗಿದ್ದಾನೆ. ಹೊಟ್ಟೆಕಿಚ್ಚಿನಿಂದ ಆತನಿಗೆ ಹುಚ್ಚು ಹಿಡಿದಿದೆ. (೯/೪/೧೮೯೪-ಅಳಸಿಂಗ ಪೆರುಮಾಳ್) .ದೇವರ ಇಚ್ಛೆಯಂತೆ ನಾನು ಇಲ್ಲಿ ಮೊದಲು ಮಜುಂದಾರರನ್ನು ಕಂಡೆನು. ಮೊದಲಿಗೆ ನನ್ನೊಡನೆ ವಿಶ್ವಾಸದಿಂದಿದ್ದನು. ಷಿಕಾಗೊ ಜನಸಂದಣಿ ತಂಡೋಪಾದಿಯಲ್ಲಿ ನನ್ನೆಡೆಗೆ ಬರಲು ತೊಡಗಿದ ನಂತರ ಆತನಿಗೆ ಹೊಟ್ಟೆಕಿಚ್ಚು ಉಂಟಾಗತೊಡಗಿತು (೧೩/೯/೧೮೯೪-ರಾಮಕೃಷ್ಣಾನಂದ), ಸ್ವಾಮಿಗಳು ಭಾರತಕ್ಕೆ ಬರೆದ ಪತ್ರಗಳಲ್ಲಿ ಈ ದೂರು ಮೇಲಿಂದ ಮೇಲೆ ಇರುತ್ತಿದ್ದಿತು. ಸ್ವಾಮಿಗಳು ಯಾವ ಊರಿಗೆ ಎಂದು ಹೋಗುತ್ತಿದ್ದಾರೆ, ಮುಂದಿನ ಭಾಷಣ ಎಲ್ಲಿ ಕೊಡುತ್ತಾರೆ , ಅವರ ಅಮೆರಿಕನ್ ಬೆಂಬಲಿಗರು ಮತ್ತು ಗೆಳೆಯರು ಯಾರು ಎಂದು ತಿಳಿದು ಅವರೆಲ್ಲರಿಗೂ ಸ್ವಾಮಿಗಳನ್ನು ಕುರಿತಾಗಿ ಇತರ ಭಾರತೀಯರು ಅದರಲ್ಲಿಯೂ ವಿಶೇಷವಾಗಿ ಮಜುಂದಾರ ಕಿವಿ ಕಚ್ಚುತ್ತಿದ್ದರು ಎನ್ನುವ ಕಲ್ಪನೆ ಹೊಂದಿದ್ದರು.
ತಾವಾಗಿಯೇ ಆರಿಸಿಕೊಂಡಿದ್ದ ಜೀವನ ಶೈಲಿಯಿಂದ ತಮ್ಮ ವರ್ಚಸ್ಸಿಗೆ ಧಕ್ಕೆ ಬರುತ್ತಿರುವುದು ಸ್ವಾಮಿಗಳಿಗೆ ಗೊತ್ತಾಗಿದ್ದಿತು. ಇದಕ್ಕೆ ಸ್ವಾಮಿಗಳು ಒಂದು ಸಲ ಪ್ರತಾಪಚಂದ್ರ ಮಜುಂದಾರ ಕಾರಣ ಎಂದು ಭಾವಿಸಿದರೆ ಮತ್ತೊಮ್ಮೆ ಅವರ ಅನುಮಾನ ಥಿಯೊಸೊಫಿಸ್ಟರ ಮೇಲೆ ಮಗದೊಮ್ಮೆ ಪ್ರೆಸ್’ಬೈಟೇರಿಯನ್ ಪಾದ್ರಿಗಳ ಮೇಲೆ ಬರುತ್ತಿದ್ದಿತು. ಒಂದು ಸಂದರ್ಭದಲ್ಲಿ ಶ್ರೀಮತಿ ಬ್ಯಾಗ್ಲಿಯವರು ತಮ್ಮ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆಂದು ಭಾವಿಸಿದ್ದರಾದರೂ ಇದಕ್ಕೆ ಯಾವುದೇ ಆಧಾರವಿರಲಿಲ್ಲ. (134) ತಮ್ಮ ಭಾರತದ ಕೆಲಸಗಳಿಗೆ ನಿರೀಕ್ಷಿಸಿದಷ್ಟು ಹಣ ಸಂಗ್ರಹವಾಗದಿರುವುದು , ಕ್ರೈಸ್ತ ಮಿಷನರಿಗಳು ತಮ್ಮನ್ನು ಪ್ರಶ್ನಿಸುವುದು ಮತ್ತು ಪ್ರತಾಪಚಂದ್ರ ಮಜುಂದಾರ ತಮ್ಮ ಬಗ್ಗೆ ಭಾರತದಲ್ಲಿ ಹೇಳುತ್ತಿರುವುದು ಇವೆಲ್ಲವೂ ಒಂದೇ ಸಂಘಟಿತ ಸಂಚಿನ ಹಲವು ಮುಖಗಳೆಂದು ಸ್ವಾಮಿಗಳಿಗೆ ಅದು ಹೇಗೋ ಭಾಸವಾಗಿದ್ದಿತು. ಈ ಭಾವನೆಯಿಂದಾಗಿ ತಮ್ಮ ಭಾಷಣಗಳನ್ನು ಏರ್ಪಡಿಸುತ್ತಿದ್ದವರೆಲ್ಲರೂ ಕ್ರೈಸ್ತ ಧರ್ಮೀಯರು ; ಅದೆಷ್ಟೋ ಭಾಷಣಗಳು ಚರ್ಚ್’ನಲ್ಲಿ ಸಾಗುತ್ತಿವೆ. ಅಮೆರಿಕದ ಜನ ಕ್ರೈಸ್ತ ಪಾದ್ರಿಗಳ ಮಾತನ್ನು ಕೇಳುವುದಿಲ್ಲ. ಹಾಗೆ ಕೇಳುವಂತಿದ್ದರೆ ತಾವು ಅಷ್ಟು ಮುಕ್ತವಾಗಿ ಮಾತನಾಡುತ್ತ ಅಮೆರಿಕದಲ್ಲಿ ಸಂಚರಿಸಲು , ಭಾಷಣ ಮಾಡಲು ಆಗುತ್ತಿರಲಿಲ್ಲ ಎನ್ನುವ ವಾಸ್ತವಾಂಶಗಳು ಸ್ವಾಮಿಗಳಿಗೆ ಕಾಣದಂತಾಗಿದ್ದವು. ತಾವು ಯಾವುದೇ ಸಂಘ , ಸಂಸ್ಥೆಯ ಬೆಂಬಲವಿಲ್ಲದೆ ಬಂದಿದ್ದು ಒಬ್ಬಂಟಿಯಾಗಿರುವುದರಿಂದ ಈ ದುಷ್ಟರು – ಕ್ರೈಸ್ತ ಪಾದ್ರಿಗಳು ,ಥಿಯೊಸೊಫಿಸ್ಟರು , ಬ್ರಾಹ್ಮಸಮಾಜಿಗಳು ಅದರಲ್ಲಿಯೂ ವಿಶೇಷವಾಗಿ ಪ್ರತಾಪಚಂದ್ರ ಮಜುಂದಾರ – ತಮ್ಮ ಮೇಲೆ ಎರಗುತ್ತಿದ್ದಾರೆ. ಭಾರತದಲ್ಲಿ ನನಗೂ ಬೆಂಬಲವಿದೆ ಎಂದು ತೋರಿಸಿದರೆ ಬಾಲ ಮುದುರಿಕೊಳ್ಳುತ್ತಾರೆ ಎನ್ನುವ ಪರಿಹಾರ ಅವರಿಗೆ ಹೊಳೆದಿದ್ದಿತು.
ಆ ನಿಟ್ಟಿನಲ್ಲಿ ತಕ್ಷಣ ಕಾರ್ಯೋನ್ಮುಖರಾಗಬೇಕೆಂದು ಅಳಸಿಂಗ ಪೆರುಮಾಳ , ಸೇರಿದಂತೆ ಕಲ್ಕತ್ತದ ಗುರುಭಾಯಿಗಳಿಗೆ , ಮದ್ರಾಸಿನ ಶಿಷ್ಯರಿಗೆ ತಂತಿ ಅಥವಾ ಪತ್ರಗಳ ಮೂಲಕ ತಿಳಿಸಿದ್ದರು. ಶ್ರೀಮತಿ ಹೇಲ್’ರವರಿಗೆ ಮಿಸ್ ಹೆಲೆನ್ ಗೌಲ್ಡ್’ಳ ಅರಮನೆಯನ್ನೂ ಮೀರಿಸುವ ವೈಭವೋಪೇತ ಮನೆಯನ್ನು ವರ್ಣಿಸಿ ಪತ್ರ ಬರೆಯುವ ಹಿಂದಿನ ದಿನ ಅದೇ ಮನೆಯಿಂದ- ೯/೪/೧೮೯೪- ರಂದು ಅಳಸಿಂಗ ಪೆರುಮಾಳ್’ಗೆ ಸ್ವಾಮಿಗಳು ಪತ್ರ ಬರೆದರು. ಅದರಲ್ಲಿ ‘ ಅನೇಕ ಮಂದಿ ಗೆಳೆಯರ ಮೈತ್ರಿ ಸಂಪಾದಿಸಿದ್ದೇನೆ. ಅವರಲ್ಲಿ ಕೆಲವರು ಅತ್ಯಂತ ಪ್ರಭಾವಶಾಲಿಗಳು. ಸಾಂಪ್ರದಾಯಿಕ ಪಾದ್ರಿಗಳು ನನಗೆ ವಿರುದ್ಧವಾಗಿದ್ದಾರೆ. ನನ್ನೊಡನ ಹೋರಾಡಿ ಗೆಲ್ಲುವದು ಸುಲಭವಲ್ಲವೆಂದು ತಿಳಿದು ನನ್ನನ್ನು ನಿಂದಿಸಲು , ನನ್ನ ಹೆಸರಿಗ ಕಳಂಕ ತರಲು ಯತ್ನಿಸುತ್ತಿದ್ದಾರೆ. ಮಜುಂದಾರ ಅವರಿಗ ನೆರವಾಗಿದ್ದಾನೆ. ಅಸೂಯೆಯಿಂದ ಆತನಿಗೆ ಹುಚ್ಚು ಹಿಡಿದಂತಾಗಿರಬೇಕು. ಅವನು ಆ ಕಲ್ಕತ್ತದ ಪಾದ್ರಿಗಳಿಗೆ ನಾನು ಅಮೆರಿಕದಲ್ಲಿ ಅತ್ಯಂತ ಪಾಪಮಯ , ಹೊಲಸಾದ ಜೀವನವನ್ನು ನಡೆಸುತ್ತಿದ್ದೇನೆಂದು ಹೇಳಿದ್ದಾನೆ. ದೇವರು ಆತನನ್ನು ಅಶೀರ್ವದಿಸಲಿ………….ಸೋದರನೇ ಅಡಚಣೆಗಳಿಲ್ಲದೆ ಯಾವೊಂದು ಒಳ್ಳೆಯ ಕೆಲಸವನ್ನು ಮಾಡಲಾಗದು’ ಎಂದಿದ್ದರು.
……ನಿನಗೆ ಸಾದ್ಯವಾದರೆ ಒಂದು ಕೆಲಸ ಮಾಡಬೇಕಾಗಿದೆ. ಮದ್ರಾಸಿನಲ್ಲಿ ಒಂದು ಬೃಹತ್ ಸಭೆಯನ್ನು ಸೇರಿಸಬೇಕು. ಅದಕ್ಕೆ ರಾಮನಾಡಿನ ರಾಜ ಅಥವಾ ಇನ್ನಾರಾದರೂ ದೊಡ್ದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿಸಿ ನೇಮಿಸಬೇಕು. ನಾನು ಇಲ್ಲಿ ಹಿಂದೂಧರ್ಮವನ್ನು ಅತ್ಯಂತ ತೃಪ್ತಿಕರವಾಗಿ ಪ್ರತಿನಿಧಿಸಿರುವುದಾಗಿ ಒಂದು ಗೊತ್ತುವಳಿಯನ್ನು ಆ ಸಭೆಯಲ್ಲಿ ಹೊರಡಿಸಿ ಅದನ್ನು ಷಿಕಾಗೊ ಹೆರಾಲ್ಡ್ , ‘ಇಂಟರ್ ಓಷನ್ , ನ್ಯೂಯಾರ್ಕ್ ಸನ್ ಮತ್ತು ಡೆಟ್ರಾಯಿಟ್’ನ ಕಮರ್ಷಿಯಲ್ ಅಡ್ವರ್ಟೈಸರ್ ಈ ಪತ್ರಿಕೆಗಳಿಗೆ ಕಳಿಸಬೇಕು. ಅದರ ಪ್ರತಿಗಳನ್ನು ವಿಶ್ವ ಧರ್ಮ ಸಂಸತ್ತಿನ ಅಧ್ಯಕ್ಷರಾದ ಡಾ. ಬರೋಸ್ ಅವರಿಗೂ ಡೆಟ್ರಾಯಿಟ್’ನ ಶ್ರೀಮತಿ ಜೆ.ಜೆ ಬ್ಯಾಗ್ಲಿಗೂ ಕಳಿಸು. ಆ ಸಭೆ ಸಾದ್ಯವಾದಷ್ಟು ಬೃಹತ್ ಪ್ರಮಾಣದಲ್ಲಿರಬೇಕು. ಧರ್ಮಕ್ಕಾಗಿ ದೇಶಕ್ಕಾಗಿ ದುಡಿಯಲಿಚ್ಛಿಸುವ ಎಲ್ಲ ದೊಡ್ಡ ವ್ಯಕ್ತಿಗಳನ್ನು ಸೇರಿಸು. ಮೈಸೂರು ಮಹಾರಾಜರಿಂದ ಮತ್ತು ದಿವಾನರಿಂದ ಸಭೆಗೆ ಮೆಚ್ಚುಗೆಯ ಪತ್ರವನು ಪಡೆ. ಹಾಗೆ ಖೇತ್ರಿಯಿಂದಲೂ ಸಭೆ ಅದ್ದೂರಿಯಾಗಿದ್ದು ಕಿಕ್ಕಿರಿದು ಜನ ಸೇರಿರಬೇಕು. ಆ ಗೊತ್ತುವಳಿಯಲ್ಲಿ ಮದ್ರಾಸಿನ ಹಿಂದೂ ಸಮುದಾಯವು ಇಲ್ಲಿ ನನ್ನ ಕಾರ್ಯದ ಬಗ್ಗೆ ಸಂಪೂರ್ಣ ತೃಪ್ತಿಯನ್ನು ವ್ಯಕ್ತಪಡಿಸಿರಬೇಕು. ಸಾಧ್ಯವಾದರೆ ಈ ಕೆಲಸವನ್ನು ಮಾಡು. ಇದೇನು ಅಷ್ಟು ದೊಡ್ದದಲ್ಲ. ಎಲ್ಲ ಕಡೆಗಳಿಂದಲೂ ಸಹಾನುಭೂತಿಯ ಪತ್ರಗಳನ್ನು ಪಡೆದು ಅದನ್ನು ಮುದ್ರಿಸಿ ಅಮೆರಿಕದ ಪತ್ರಿಕೆಗಳಿಗೆ ಕಳಿಸು. ಇದನ್ನು ಬೇಗ ಮಾಡಬೇಕು. ಇದು ಅತ್ಯಂತ ಆವಶ್ಯಕ. ಇಲ್ಲಿಯ ಜನರು ಏನೇನೋ ಅಸಂಬದ್ಧ ಹೇಳುತ್ತಿದ್ದಾರೆ. ಆದಷ್ಟು ಬೇಗ ಅವರ ಬಾಯನ್ನು ಮುಚ್ಚಿಸಬೇಕು…… ನಾನು ಬರುವವರೆಗೆ ನನ್ನ ಪತ್ರಗಳಲ್ಲಿ ಪ್ರಕಟಿಸಬಹುದಾದ ಭಾಗಗಳನ್ನು ನಮ್ಮ ಸ್ನೇಹಿತರಿಗಾಗಿ ಪ್ರಕಟಿಸಬಹುದು. ನಾವು ಕೆಲಸ ಪ್ರಾರಂಭಿಸಿದರೆ ಸಾಕು ಅದು ಕೂಡಲೇ ಬೃಹತ್ ಪ್ರಮಾಣ ತಾಳುವುದು. ಆದರೆ ನಾನು ಕೆಲಸ ಮಾಡದೆ ಮಾತನಾಡಲು ಇಚ್ಛಿಸುವುದಿಲ್ಲ. ಜಿ.ಸಿ ಘೋಷ್ ಮತ್ತು ಮಿತ್ರ (ಹರಮೋಹನ) ಇವರು ಹಾಗೂ ನನ್ನ ಗುರುದೇವರನ್ನು ಮೆಚ್ಚುವ ಎಲ್ಲರನ್ನೂ ಒಗ್ಗೂಡಿಸಿ ಕಲ್ಕತ್ತದಲ್ಲಿ ಇದೇ ರೀತಿ ಸಭೆ ಸೇರಿಸಬಹುದು. ಹಾಗೆ ಮಾಡಿದರೆ ಅದು ಒಳ್ಳೆಯದು. ಇದೇ ಗೊತ್ತುವಳಿಯನ್ನು ಹೊರಡಿಸಲು ಅವರಿಗೆ ತಿಳಿಸು. ಕಲ್ಕತ್ತದಲ್ಲಿ ನಮ್ಮ ಕಾರ್ಯವನ್ನು ಮೆಚ್ಚುವವರು ಸಾವಿರಾರು ಜನ ಇರುವರು. ಆದರು ಅವರಿಗಿಂತ ನಿಮ್ಮ ಮೇಲೆ ನನಗೆ ನಂಬಿಕೆ ಹೆಚ್ಚು’ ಎಂದು ಬರೆದರು.
ಈ ಪತ್ರ ಮುಂದಿನ ದಿನಗಳಲ್ಲಿ ಗರಿಗೆದರಲಿರುವ ಚಟುವಟಿಕೆಗಳಿಗೆ ಪ್ರೇರಣೆಯಾಯಿತು.
ಧರ್ಮ ಸಂಸತ್ತಿನಲ್ಲಿ ಸ್ವಾಮಿಗಳು ಭಾರಿ ಸಂಚಲನ ಉಂಟು ಮಾಡಿದ್ದರೆ ಅವರಿಗೆ ಇಂತಹ ಶಿಫಾರಸ್ಸು ಹಾಗೂ ಬೆಂಬಲ ಸೂಚಿಸುವ ಪತ್ರಗಳು ಬೇಕಿರಲಿಲ್ಲ. ೧೯/೩/೧೮೯೪ ರಂದು ರಾಮಕೃಷ್ಣಾನಂದರಿಗೆ ಬರೆದ ಪತ್ರದಲ್ಲಿ ‘ಇಲ್ಲಿಯ ಜನರಿಗೆ ನನ್ನ ಮೇಲೆ ಅಭಿಲಾಷೆ. ಸಾವಿರಾರು ಜನ ನನ್ನ ಉಪನ್ಯಾಸಗಳನ್ನು ಕೇಳುವುದಕ್ಕೆ ಬರುತ್ತಿದ್ದಾರೆ……. ಒಟ್ಟು ಅಮೆರಿಕ ಜನರೇ ನನ್ನ ಕಡೆ ಇರುವರು. ನನ್ನನ್ನು ಗುರುಭಾವದಿಂದ ಕಾಣುತ್ತಾರೆ. ಎಲ್ಲ ಖರ್ಚನ್ನು ಅವರೇ ವಹಿಸಿಕೊಳ್ಳುತ್ತಾರೆ. ನನಗೆ ವಿರೋಧವಾಗಿ ಏನನ್ನೂ ಮಾಡಲು ನಿಮ್ಮ ಪುರೋಹಿತರಿಂದ ಆಗಲಿಲ್ಲ…….’ ಎಂದಿದ್ದ ಸ್ವಾಮಿಗಳು ಕೇವಲ ಮುಂದಿನ ಇಪ್ಪತ್ತೇ ದಿನಗಳಲ್ಲಿ ಮದ್ರಾಸ್’ ಕಲ್ಕತ್ತಗಳಲ್ಲಿ ದೊಡ್ಡ ಮನುಷ್ಯರನ್ನು ಸೇರಿಸಿ ನನ್ನ ಪರವಾಗಿ ಗೊತ್ತುವಳಿ ಮಂಡಿಸಿರಿ ಎನ್ನುವುದು ಬೇಕಾಗಿರಲಿಲ್ಲ. ಒಂದು ಕಡೆ ನಾನು ಅಮೆರಿಕದಲ್ಲಿ ಭಾರಿ ಜಯಗಳಿಸುತ್ತಿದ್ದೇನೆ ಎನ್ನುತ್ತ ಮರುಕ್ಷಣದಲ್ಲೇ ಪಾದ್ರಿಗಳು , ಬ್ರಾಹ್ಮ ಸಮಾಜದವರು ನನಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎನ್ನುವ ವಿರೋಧಾಭಾಸದ ಹೇಳಿಕೆಗಳು ಬರುತ್ತಿರಲಿಲ್ಲ.
ಸ್ವಾಮಿಗಳು ಭಾರತದಿಂದ ತಮಗೆ ಬರುತ್ತಿದ್ದ ಖ್ಯಾತರ ಪತ್ರಗಳನ್ನು ಅಮೆರಿಕದ ಗೆಳೆಯರಿಗೆ ಕಳಿಸಿ ತಾವು ಎಷ್ಟು ಬಲಿಷ್ಟರೆಂದು ತೋರಿಸಿಕೊಳ್ಳಲು ಹಿಂಜರಿಯುತ್ತಿರಲಿಲ್ಲ. ಖೇತ್ರಿಯಿಂದ ಬಂದಿದ್ದ ಪತ್ರವನ್ನು ಓದಲು ಶ್ರೀಮತಿ ಹೇಲ್’ಗೆ ಕಳಿಸಿದ್ದರಲ್ಲದೆ ತಮ್ಮ ಸುದ್ದಿಯಿರುವ ಪತ್ರಿಕೆಗಳನ್ನು ಸಂಗ್ರಹಿಸಿ ಖೇತ್ರಿ ರಾಜನಿಗೆ ಕಳಿಸುವಂತೆ ತಿಳಿಸಿದ್ದರು. (೩೦/೩/೧೮೯೪). ಅಳಸಿಂಗ ಪೆರುಮಾಳ್’ಗೆ ತಿಳಿಸಿದಂತೆ ಕಲ್ಕತ್ತದಲ್ಲಿ ತಮ್ಮ ಪರವಾಗಿ ಏನನ್ನಾದರೂ ಎದ್ದು ಕಾಣುವಂತಹುದನ್ನು ಮಾಡುವಂತೆ ಗುರುಭಾಯಿಗಳಿಗೆ , ಅಭಿಮಾನಿಗಳಿಗೆ ಸೂಚಿಸಿದ್ದರು. ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿಗಳ ಉಗ್ರ ಅಭಿಮಾನಿಯಾಗಿದ್ದ ಕಲ್ಕತ್ತದ ಹರಮೋಹನ ಮಿತ್ರ ಸ್ವಾಮಿಗಳನ್ನು ಕುರಿತಾಗಿ ಅಮೆರಿಕ ಪತ್ರಿಕೆಗಳು ನೀಡಿದ ಸುದ್ದಿ , ಬರೆದಿದ್ದ ವರದಿ , ಭಾರತೀಯ ಪತ್ರಿಕೆಗಳ ಸಂಪಾದಕೀಯ , ಮೆರ್ವಿನ್ ಮಾರಿ ಸ್ನೆಲ್ ಪತ್ರ ಮುಂತಾದವುಗಳನ್ನೆಲ್ಲ ಸಂಗ್ರಹಿಸಿ ಒಂದು ಕರಪತ್ರ ಸಿದ್ಧಪಡಿಸಿದ್ದನು. ಸ್ವಾಮಿಗಳು ವಿಶ್ವ ಧರ್ಮ ಸಂಸತ್ತಿನಲ್ಲಿ ಹಿಂದೂ ಧರ್ಮ ಕುರಿತಾಗಿ ಮಾಡಿದ ಭಾಷಣ , ಅವರ ಅಮೆರಿಕ ಸಾಧನೆಗಗಳನ್ನು ಒಳಗೊಂಡ ೫೦೦೦ ಕರಪತ್ರಗಳನ್ನು ಮುದ್ರಿಸಿ ಮದ್ರಾಸ್ ಮತ್ತು ಕಲ್ಕತ್ತದಲ್ಲಿ ಹಂಚಲಾಗಿದ್ದಿತು.ಈ ಕರಪತ್ರಗಳನ್ನು ಸ್ವಾಮಿಗಳಿಗೆ ಕಳಿಸಲಾಯಿತು. ೨೪ ಏಪ್ರಿಲ್’ರಂದು ಹರಮೋಹನ ಮಿತ್ರ ಸಿದ್ಧಪಡಿಸಿದ್ದ ಕರಪತ್ರಗಳು ತಲುಪಿದಾಗ ಸ್ವಾಮಿಗಳು ಮೊದಲ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಇವುಗಳನ್ನು ಆದಷ್ಟು ಹೆಚ್ಚಿನ ಅಮೆರಿಕದ ಗೆಳೆಯರಿಗೆ , ಬೆಂಬಲಿಗರಿಗೆ ತಿಳಿಸಿ ತಾವು ಹಿಂದೂ ಧರ್ಮದ ಸಮರ್ಥ ಪ್ರತಿನಿಧಿಯೆಂದು ಭಾರತದಲ್ಲಿ ಗಣ್ಯರು ಒಪ್ಪಿದ್ದಾರೆಂದು ಅದಕ್ಕಾಗಿ ತಮ್ಮನ್ನು ಅನುಮೋದಿಸಿ , ಅಭಿನಂದಿಸುತ್ತಿದ್ದಾರೆಂದು ಸಾಬೀತು ಮಾಡುವ ಹವಣಿಕೆಯಲ್ಲಿದ್ದರು.
ಸ್ವಾಮಿಗಳು ಇಸಾಬೆಲ್ ಮೆಕೆಂಡ್ಲಿಗೆ ೨೫/೪/೧೮೯೪ ರಂದು ಬರೆದ ಪತ್ರ ಈ ನಿಟ್ಟಿನ ಮಾಹಿತಿಗಳನ್ನು ನೀಡುತ್ತದೆ. ಅದರಲ್ಲಿ ‘…. ನೀನು ನಿನ್ನೆ ಕಳಿಸಿದ ಭಾರತದ ಟಪಾಲುಗಳಲ್ಲಿ ತಾಯಿ ಚರ್ಚ್ ಹೇಳುವಂತೆ ಬಹಳ ಕಾಲದ ಮೇಲೆ ಬಂದ ಸಂತೋಷದ ಸುದ್ದಿಯಿದೆ. ದಿವಾನ್’ಜಿಯವರಿಂದ ಒಂದು ಒಳ್ಳೆಯ ಪತ್ರ ಬಂದಿದೆ. ಆ ವೃದ್ಧ ಎಂದಿನಂತೆ ನನಗೆ ಸಹಾಯ ಮಾಡಲು ಸಿದ್ಧನಿರುವನು. ( ಹರಿದಾಸ ವಿಹಾರಿದಾಸ ದೇಸಾಯಿ ) ಕಲ್ಕತ್ತೆಯಲ್ಲಿ ನನ್ನ ವಿಷಯವಾಗಿ ಸಣ್ಣ ಪುಸ್ತಕ ಪ್ರಕಟಿಸಿರುವರು. ಸದ್ಯಕ್ಕೆ ಪ್ರವಾದಿಯನ್ನು ಅವನ ದೇಶ ಗೌರವಿಸಿದ್ದಕ್ಕೆ ಇದು ಒಂದಾದರೂ ಸಾಕ್ಷಿಯಾಗಿದೆ. ಈ ಪುಸ್ತಕದಲ್ಲಿ ನನ್ನ ವಿಷಯದಲ್ಲಿ ಅಮೆರಿಕ ಮತ್ತು ಭಾರತದ ಪತ್ರಿಕೆಗಳಲ್ಲಿ ಬಂದ ಆಯ್ದ ಭಾಗಗಳಿವೆ. ಆದರೆ ಅಲ್ಲಿ ಅವು ನನ್ನನ್ನು ‘ಪ್ರಖ್ಯಾತನಾದ’, ‘ಅದ್ಭುತವಾದ’ ಮುಂತಾದ ಕೆಲಸಕ್ಕೆ ಬಾರದ ಗುಣವಾಚಕಗಳಿಂದ ಕರೆಯುತ್ತವೆ. ಇಡೀ ದೇಶದ ಕೃತಜ್ಞತೆಯನ್ನು ಅವರು ನನಗೆ ತೋರುತ್ತಿರುವರು. ನನ್ನವರು ಕೂಡ ನನ್ನ ವಿಷಯದಲ್ಲಿ ಏನು ಹೇಳುವರು ಎನ್ನುವುದನ್ನು ನಾನು ಲೆಕ್ಕಿಸುವುದಿಲ್ಲ. …. ನನಗೆ ಒಬ್ಬ ವೃದ್ಧ ತಾಯಿ ಇರುವಳು….. ತನ್ನ ಅತ್ಯಂತ ಪ್ರೀತಿಪಾತ್ರ ಮಗ, ಮಜುಂದಾರ ಹೇಳುವಂತೆ ದೂರದೇಶದಲ್ಲಿ ಹೀನ ಜೀವನ ನಡೆಸುತ್ತಿದ್ದಾನೆ ಎನ್ನುವುದು ನಿಜವಾಗಿದ್ದರೆ ಅವಳು ಬದುಕುತ್ತಿರಲಿಲ್ಲ….ಯಾರೂ ಅವಳ ಮಕ್ಕಳಿಗೆ ಅಪಾಯ ತರಲಾರರು…. ಈಗ ಅವರ ಗುಟ್ಟು ರಟ್ಟಾಗಿದೆ. ನಾನು ಅದಕ್ಕೆ ಪ್ರಯತ್ನವನ್ನೇ ಮಾಡಲಿಲ್ಲ. ನನ್ನನ್ನು ಇಷ್ಟೊಂದು ಹೊಗಳುವ , ನಾನು ಹಿಂದೂ ಧರ್ಮದ ಪರವಾಗಿ ಅಮೆರಿಕ ದೇಶಕ್ಕೆ ಬಂದೆ ಎಂದು ಹೇಳುವ ಬಹಳ ಪ್ರಮುಖವಾದ ದೈನಂದಿನ ಪತ್ರಿಕೆಯ ಸಂಪಾದಕ ಯಾರು ಎಂದು ತಿಳಿದಿರುವೆ? ದೇವರಿಗೆ ಧನ್ಯವಾದ.- ಆ ವ್ಯಕ್ತಿಯೇ ಮಜುಂದಾರನ ತಂದೆಯ ಸಹೋದರನ ಮಗ (ನರೇಂದ್ರನಾಥ ಸೇನ) . ಪಾಪ ಮಜುಂದಾರ ಅಸೂಯೆಯಿಂದ ಸುಳ್ಳನ್ನು ಹೇಳಿ ತನ್ನ ಕೆಲಸಕ್ಕೆ ಅಡಚಣೆ ಮಾಡಿಕೊಂಡ. ದೇವರಿಗೆ ಗೊತ್ತು. ನಾನು ನಿರಪರಾಧಿ ಎಂದು ಸಾಧಿಸಲು ಸ್ವಲ್ಪವೂ ಯತ್ನಿಸಲಿಲ್ಲ……(೨೫/೪/೧೮೯೪)
ಹುಮ್ಮಸ್ಸಿನಲ್ಲಿದ್ದ ಸ್ವಾಮಿಗಳು ಮುಂದಿನ ವಾರ (೨/೫/೧೮೯೪) ಇಸಾಬೆಲ್ಲಾ ಮೆಕೆಂಡ್ಲಿಗೆ ಮತ್ತು ಜಾನ್ ಹೆನ್ರಿ ರೈಟ್’ಗೆ ಪತ್ರ ಬರೆದರು. ‘ ನಿನಗೆ ಈಗಲೇ ಕಿರಿಯ ಪುಸ್ತಕವನ್ನು ಕಳಿಸಲಾರೆ. (ಕಲ್ಕತ್ತದಿಂದ ಬಂದಿದ್ದ ಕರಪತ್ರ). ಆದರೆ ಭಾರತದಿಂದ ಬಂದಿರುವ ಪತ್ರಿಕೆಯ ಸುದ್ದಿ ತುಣುಕುಗಳನ್ನು ಕಳಿಸುತ್ತೇನೆ. ನೀನು ಓದಿದ ಮೇಲೆ ಅದನ್ನು ಶ್ರೀಮತಿ ಬ್ಯಾಗ್ಲಿಗೆ ಕಳಿಸಿಕೊಡು. ಈ ಪತ್ರಿಕೆಯ ಸಂಪಾದಕ ಮಜುಂದಾರನ ನೆಂಟ…… ‘ ಎಂದು ತಿಳಿಸಿದ್ದರೆ ‘ ನೀವು ಇಚ್ಛೆಪಟ್ಟರೆ ಭಾರತದಿಂದ ಬಂದಿರುವ ಕೆಲವು ರಾಜರ , ಮಂತ್ರಿಗಳ ಪತ್ರಗಳನ್ನು ಕಳಿಸುತ್ತೇನೆ. ಇವರಲ್ಲಿ ಒಬ್ಬ ಮಂತ್ರಿಗಳು ಓಪಿಯಂ ಕಮಿಷನ್ ಸದಸ್ಯರಾಗಿದ್ದರು. (ಹರಿದಾಸ ವಿಹಾರಿದಾಸ ದೇಸಾಯಿ) ಓಪಿಯಂ ಕಮಿಷನ್ ಭಾರತದ ರಾಯಲ್ ಕಮಿಷನ್ ಕೆಳಗಿರುವ ಸಂಸ್ಥೆ. ನಿಮಗೆ ಇಚ್ಛೆ ಇದ್ದರೆ ನಾನೇ ಅವರಿಗೆ ಪತ್ರ ಬರೆಯುವಂತೆ ಹೇಳುತ್ತೇನೆ. ಇದರಿಂದ ನಾನು ಮೋಸಗಾರನಲ್ಲ ಎನ್ನುವುದು ತಿಳಿಯುವುದು. …. ಸಂನ್ಯಾಸಿ ತಾನು ಸರಿ ಎಂದು ಸಾಧಿಸಲು ರುಜುವಾತುಗಳನ್ನು ಕೊಡುವುದಿಲ್ಲ. ಆದಕಾರಣ ಈ ಪುಸ್ತಕಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಏನಿದೆಯೋ ಅದನ್ನು ಯಾರಿಗೂ ತೋರಿಸಬೇಡಿ ಮತ್ತು ಪ್ರಕಟಿಸಬೇಡಿ ಎಂದು ಕೇಳಿಕೊಳ್ಳುತ್ತೇನೆ.,…’ ತಮ್ಮ ಸಮರ್ಥನೆಗಾಗಿ ಸ್ವಾಮಿಗಳ ಇರಿಸಿದ್ದ ಮೊದಲನೇ ಹೆಜ್ಜೆ ಇದಾಗಿದ್ದಿತು.
ಬೋಳೆ ಸ್ವಭಾವದ ಅಳಸಿಂಗ ಪೆರುಮಾಳ ಬೀದಿ, ಬೀದಿ ಅಲೆದು ಸ್ವಾಮಿಗಳ ಆದೇಶದಂತೆ ಜನರನ್ನು ಒಗ್ಗೂಡಿಸಿ ಸಾರ್ವಜನಿಕ ಸಭೆಯನ್ನು ಸೇರಿಸಿ ಅವರಿಗೆ ಬೆಂಬಲ ಸೂಚಿಸಿ ೨೮/೪/೧೮೯೪ ರಂದು ಮದ್ರಾಸಿನಲ್ಲಿ ಗೊತ್ತುವಳಿಯನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದನು. . ಅದನ್ನು ಅಮೆರಿಕದ ಪತ್ರಿಕೆಗಳಿಗೆ ಕಳಿಸುವುದನ್ನು ಸಹಾಯಕ ಮರೆತಿದ್ದು ಅಳಸಿಂಗ ಪೆರುಮಾಳನ ಮೇಜಿನ ಡ್ರಾಯರ್’ನಲ್ಲಿಯೇ ಉಳಿದಿದ್ದಿತು.(135). ಇದರಿಂದಾಗಿ ಸ್ವಾಮಿಗಳಿಗೆ ಮದ್ರಾಸಿನಲ್ಲಿ ತಮ್ಮ ಪರವಾಗಿ ಗೊತ್ತುವಳಿ ಸಿದ್ಧವಾಗಿರುವುದು ತಿಳಿಯಲಿಲ್ಲ.
ಸುಮಾರು ಆರು ತಿಂಗಳ ಹಿಂದೆ -೨೯/೧/೧೮೯೪- ಸ್ವಾಮಿಗಳು ಮತ್ತು ಹರಿದಾಸ ವಿಹಾರಿದಾಸ ದೇಸಾಯಿಯವರ ನಡುವೆ ಪತ್ರ ವ್ಯವಹಾರ ನಡೆದಿದ್ದಿತು. ಅದಾದ ನಂತರ ಸುಮ್ಮನಿದ್ದ ಹರಿದಾಸ ವಿಹಾರಿದಾಸ ದೇಸಾಯಿಗಳು ನಂತರ ಮರುಪತ್ರ ಬರೆದಿದ್ದರು. ಅದರಲ್ಲಿ ಏನಿದ್ದಿತೋ ತಿಳಿಯದಾದರೂ ಸ್ವಾಮಿಗಳು ಅವರಿಗೆ ಬರೆದ ಪತ್ರದಲ್ಲಿ ಅವರು ಕಷ್ಟದ ಸಮಯದಲ್ಲಿ ತಮಗೆ ನೆರವಾಗಲಿಲ್ಲ ಎಂದು ದೂರಿದ್ದಿತು. ‘ ಹಿಂದೂ ದೇಶದ ಜನರು ನಾನು ಅವರ ಪ್ರತಿನಿಧಿ ಎಂದು ಅಮೆರಿಕ ದೇಶೀಯರಿಗೆ ಹೇಳುವುದಕ್ಕೆ ಒಂದು ಬೆರಳನ್ನೂ ಎತ್ತಲಿಲ್ಲ, ಏನಾದರೂ ನಮ್ಮ ಜನ ಅವರ ಪ್ರತಿನಿಧಿ ಎಂದು ಹೇಳಿ ನನಗೆ ಸಹಾಯ ಮಾಡಲು ಅಮೆರಿಕಾಕ್ಕೆ ಕೃತಜ್ಞತೆ ತೋರಿಸಿ ಒಂದು ಪತ್ರ ಬರೆದಿದ್ದರೆ ? ನಾನು ಒಂದು ವರ್ಷದಿಂದ ಇಲ್ಲಿದ್ದೇನೆ ಒಬ್ಬ ಪ್ರಮುಖ ಭಾರತೀಯನಿಗೂ ನಾನು ಮೋಸಗಾರನಲ್ಲ ಎಂದು ಬರೆದು ತಿಳಿಸಲಾಗಲಿಲ್ಲ…ಅವರು ನಾನು ಸಂನ್ಯಾಸಿ ಬಟ್ಟೆಯನ್ನು ಅಮೆರಿಕದಲ್ಲಿ ಮಾತ್ರ ಹಾಕಿಕೊಂಡಿರುವೆನೆಂದು . ನನ್ನನ್ನು ಕಪಟಿಯೆಂದೂ , ವಂಚಕನೆಂದೂ ಸಾರುತ್ತಿರುವರು. ಇದು ಅಮೆರಿಕಾದವರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಆದರೆ ಅವರು ನನಗೆ ಧನ ಸಹಾಯ ಮಾಡುವ ದೃಷ್ಟಿಯಿಂದ ಮಾತ್ರ ಬಹಳ ಅನಾನುಕೂಲವಾಯಿತು……….. …..ನಮ್ಮಲ್ಲಿ ಯಾರಾದರೂ ಪ್ರಖ್ಯಾತ ಪುರುಷರು ಕಾಲವಾದರೆ ಅಂತಹ ವ್ಯಕ್ತಿ ಬರುವುದಕ್ಕೆ ಅನೇಕ ಶತಮಾನಗಳು ಕಾಯಬೇಕು. ಇಲ್ಲಾದರೋ ಸತ್ತ ಮರುಕ್ಷಣವೇ ದೇಶ ಅಂತಹ ಪ್ರಖ್ಯಾತ ಪುರುಷನನ್ನು ಮುಂದಕ್ಕೆ ತರುವುದು……..ನಮ್ಮಲ್ಲಿ ಮಹಾಪುರುಷರ ಅಭಾವವಿರುವುದು….ಬಡಜನರ ಸಹಾಯಕ್ಕೆ ಒಂದು ಸಂಸ್ಥೆ ಬೇಕು. ಅದಕ್ಕೆ ಬೇಕಾದ ಹಣ ಎತ್ತಲು ಅಮೆರಿಕಕ್ಕೆ ಬಂದೆನು. ಇದಕ್ಕೆ ಬೇಕಾದ ಹಣವನ್ನು ಬಡವರಿಂದ ಚಂದಾ ಎತ್ತಿದೆ. ಶ್ರೀಮಂತರಿಂದ ಕಾಸನ್ನೂ ಸ್ವೀಕರಿಸಲಿಲ್ಲ…ಪಾದ್ರಿಗಳು , ಬ್ರಾಹ್ಮ ಸಮಾಜದವರು ನನಗೆ ಭಾರಿ ಅಡ್ಡಿಯಾಗಿದ್ದಾರೆ….’ (೨೦/೬/೧೮೯೪) ಸ್ವಾಮಿಗಳು ದಿವಾನರನ್ನು ಸುತ್ತಿ ಬಳಸಿ ಟೀಕಿಸಿದ್ದರು. ಅಮೆರಿಕಕ್ಕೆ ಹೋಗಲು ನಾನು ನಿಮ್ಮಂತಹ ದಿವಾನರ ನೆರವನ್ನು ಕೇಳಲಿಲ್ಲ. ಬಡವರಿಂದ ಚಂದಾ ಎತ್ತಿದೆ ಎಂದು ಕುಟುಕಿದ್ದಾರೆ. ಬಡವರು ಸ್ವಾಮಿಗಳಿಗೆ ೫೦ ಪೈಸೆ , ಒಂದು ರೂಪಾಯಿ ಕೊಡಬಲ್ಲರಾಗಿದ್ದರಷ್ಟೇ, ನಮಗೆ ಈಗ ತಿಳಿದಿರುವಂತೆ ಸ್ವಾಮಿಗಳ ಪ್ರವಾಸಕ್ಕೆ ಬೇಕಾದ ಹೆಚ್ಚಿನ ಮೊತ್ತ ಕೈಬೆರಳೆಣಿಕೆಯ ವಿದ್ಯಾವಂತ ಶ್ರೀಮಂತರಿಂದ ಬಂದಿದ್ದಿತು.
ಹೇಲ್ ಸೋದರಿಯರೊಂದಿಗೆ ಕಾಲ ಕಳೆಯುತ್ತಿದ್ದ ನೋವು-ನಲಿವು , ಗೆಲುವು-ಸೋಲು , ತಂಪು-ಬಿಸಿಗಳ ದ್ವಂದ್ವಗಳನ್ನು ಮೀರಿದ್ದ ಸ್ಥಿತಪ್ರಜ್ಞ , ವೇದಾಂತ ಕೇಸರಿ ಸ್ವಾಮಿಗಳು ಎರಡು ತಿಂಗಳುಗಳು ಕಳೆಯುತ್ತ ಬಂದರೂ ಒಂದು ಗೊತ್ತುವಳಿಯೂ ಬರದಿದ್ದುದ್ದಕ್ಕೆ ಕನಲಿ ಕೆರಳಿದ್ದರು. ೨೮/೬/೧೮೯೪ ರಂದು ಒಂದೇ ದಿನ ಮದ್ರಾಸಿನ ಇಬ್ಬರು ಶಿಷ್ಯರಿಗೆ (ಅಳಸಿಂಗ + ?) ಬರೆದ ಪತ್ರದಲ್ಲಿ ಒಂದು ಸಣ್ಣ ಕೆಲಸ ಮಾಡಲಾಗದ ಬಗ್ಗೆ ಛೇಡಿಸಿ, ಹೀಗಳೆದಿದ್ದರು. ಒಬ್ಬರ ಬದಲು ಇಬ್ಬರಿಗೆ ಚಾಟಿ ಬೀಸುವುದರಿಂದ ತಮಗೆ ಕೆಲಸವಾಗಬಹುದೆಂದು ಭಾವಿಸಿದ್ದರು.
ಮೊದಲನೆ ಶಿಷ್ಯನಿಗೆ ‘ ….ಇಲ್ಲಿ ನನ್ನ ಭವಿಷ್ಯದ ವಿಷಯ ಸೊನ್ನೆ ಎಂದೇ ಹೇಳಬೇಕು. .. ..ನಿನ್ನ ಪತ್ರ ಮತ್ತೆ ಮತ್ತೆ ನನ್ನನ್ನು ಭಾರತೀಯ ಪತ್ರಿಕೆಗಳು ಹೇಗೆ ಹೊಗಳುತ್ತಿವೆ ಎಂದು ತಿಳಿಸುತ್ತದೆ. ಅದು ನನಗೆ ಮತ್ತು ನಿನಗೆ ಮಾತ್ರ ಸಂಬಂಧಿಸಿರುವ ವಿಷಯ. ಏಕೆಂದರೆ ಭಾರತದಲ್ಲಿ ಯಾವ ವೃತ್ತ ಪತ್ರಿಕೆಗಳು ನನ್ನ ವಿಷಯವಾಗಿ ಬರೆದಿರುವುದನ್ನು ನಾನು ನೋಡಿಲ್ಲ. ಅಳಸಿಂಗ ನನಗೆ ಕಳಿಸಿರುವ ಮೂರು ಇಂಚು ಸುತ್ತಳತೆಯ ಪತ್ರಿಕೆ ಹೊರತು ಬೇರೆ ಏನಿಲ್ಲ. ಭರತಖಂಡದಲ್ಲಿ ಕ್ರೈಸ್ತರು ನನ್ನ ವಿಷಯವಾಗಿ ಏನು ಪ್ರಚಾರ ಮಾಡುತ್ತಿರುವರೋ ಅದನ್ನು ಸ್ವಲ್ಪವೂ ಬಿಡದೆ ಸಂಗ್ರಹಿಸಿ ಮನೆಯಿಂದ ಮನೆಗೆ ಪ್ರಚಾರ ಮಾಡುತ್ತಿದ್ದಾರೆ.ಅವರು ಅಪಪ್ರಚಾರ ಕಾರ್ಯದಲ್ಲಿ ಯಶಸ್ವಿಗಳಾಗಿದ್ದಾರೆ. ಏಕೆಂದರೆ ಅದನ್ನು ವಿರೋಧಿಸುವ ಒಂದು ವಾಕ್ಯವೂ ಭರತಖಂಡದಿಂದ ಬಂದಿಲ್ಲ. ಹಿಂದೂ ಪತ್ರಿಕೆಗಳು ನನ್ನನ್ನು ಬೇಕಾದಷ್ಟು ಹೊಗಳಬಹುದು. ಆದರೆ ಅಮೆರಿಕ ದೇಶಕ್ಕೆ ಒಂದು ಪದವೂ ಮುಟ್ಟಿಲ್ಲ…….ಮದ್ರಾಸಿನ ಹುಡುಗರ ಮಾತನ್ನು ಕೇಳಿಕೊಂಡು ನಾನು ವಿಶ್ವ ಧರ್ಮ ಸಂಸತ್ತಿಗೆ ಬಂದಿದ್ದೇ ತಪ್ಪೆನಿಸುತ್ತಿದೆ. ಎಷ್ಟಾದರೂ ಅವರು ಹುಡುಗರು. ಆದರೆ ಅವರಿಗೆ ನಾನೆಂದಿಗೂ ಋಣಿ. ಅವರಿಗೆ ಯಾವ ಕಾರ್ಯ ನಿರ್ವಹಣೆಯ ಶಕ್ತಿಯ ಇಲ್ಲ. ಕೇವಲ ಆವೇಶಭರಿತರು. ಯಾವ ಪರಿಚಯವೂ ಇಲ್ಲದೆ ಬಂದ ನಾನು ಮೋಸಗಾರನಲ್ಲ ಎಂದು ಮಿಷನರಿ ಮತ್ತು ಬ್ರಾಹ್ಮಸಮಾಜದವರಿಗೆ ತೋರಿಸುವುದು ಹೇಗೆ ? …….ಕೆಲವು ಪದಗಳನ್ನು ಖರ್ಚು ಮಾಡುವುದು ತುಂಬಾ ಸುಲಭ ಎಂದು ಭಾವಿಸಿದ್ದೆ. ….ಆದರೆ ಭಾರತೀಯರಿಗೆ ಕೆಲಸ ಮಾಡುವುದು ತುಂಬಾ ಕಷ್ಟ ಎಂದು ತಿಳಿಯಿತು.
ಎರಡು ತಿಂಗಳಿನ ಹಿಂದೆ ಅಳಸಿಂಗನಿಗೆ ಪತ್ರ ಬರೆದೆ. ಅವನ ಉತ್ಸಾಹವೆಲ್ಲ ಬತ್ತಿಹೋಗಿದೆ ಎನಿಸುತ್ತದೆ. …..ದೇವರ ದಯದಿಂದ ಭರತಖಂಡದಲ್ಲಿ ನನಗೆ ಸಹಾಯಕನಾಗಿ ನಿಲ್ಲಬಲ್ಲ ಒಬ್ಬ ಮೇಧಾವಿಯಾದ ಕಾರ್ಯಕರ್ತ ಇದ್ದಿದ್ದರೆ !... ಪರಿಚಯ ಪತ್ರವಿಲ್ಲದೆ ಇಲ್ಲಿಗೆ ಬಂದಿದ್ದೇ ತಪ್ಪು. ಒಟ್ಟಿನಲ್ಲಿ ಅಮೆರಿಕಾದವರು ಹಿಂದೂಗಳಿಗಿಂತ ಕೋಟಿ ಪಾಲು ಮೇಲು. ನಿರ್ದಯರಾದ ಕೃತಘ್ನರಾದ ಹಿಂದೂಗಳಿರುವ ದೇಶಕ್ಕಿಂತ ನಾನು ಇಲ್ಲಿ ಚೆನ್ನಾಗಿ ಕೆಲಸ ಮಾಡಬಹುದು . ಅಂತೂ ನನ್ನ ಕರ್ಮ ಕ್ಷಯ ಮಾಡಿಕೊಳ್ಳಬೇಕಾಗಿದೆ. ಹಣದ ದೃಷ್ಟಿಯಿಂದ ಈಗ ನಾನು ಚೆನ್ನಾಗಿರುವೆನು….ಅಮೆರಿಕಾದಲ್ಲಿ ಕಳೆದ ಜನಗಣತಿಯಂತೆ ಥಿಯೊಸೊಫಿಸ್ಟರ ಸಂಖ್ಯೆ ೬೨೫. ……..ಐವತ್ತು ಜನರ ಒಂದು ಸಭೆ ಮಾಡಿ ಒಂದು ಗೊತ್ತುವಳಿ ಕಳಿಸಲು ಯೋಗ್ಯತೆ ಇಲ್ಲದವರು. ಪ್ರಪಂಚವನ್ನೇ ತಲೆ ಕೆಳಗು ಮಾಡುವ ಮಾತನ್ನಾಡುವರು……. ನನಗೆ ಹಿಂದೂಗಳ ವಿಷಯದಲ್ಲಿ ಸಾಕಾಗಿ ಹೋಗಿದೆ…. ನನ್ನನ್ನು ಕೃತಘ್ನ ಎಂದು ಭಾವಿಸಬೇಡ. ನನ್ನ ಯೋಗ್ಯತೆ ಎಷ್ಟೋ ಅದಕ್ಕಿಂತ ಹೆಚ್ಚು ಮದ್ರಾಸಿನ ಜನ ಮಾಡಿರುವರು….ಇದು ನನ್ನ ಮೌಢ್ಯ. ಹಿಂದೂಗಳು ಇನ್ನೂ ಮಾನವರಾಗಿಲ್ಲ ಎನ್ನುವುದನ್ನು ತಾತ್ಕಾಲಿಕವಾಗಿ ಮರೆತೆ. ಅವರನ್ನು ನೆಚ್ಚಿ ಕೆಟ್ಟೆ. ಭರತಖಂಡದಿಂದ ಏನೋ ಬರುವುದೆಂದು ನಿರೀಕ್ಷಿಸಿದ್ದೆ. ಅದೆಂದಿಗೂ ಬರಲೇ ಇಲ್ಲ….ಯಾವುದಾದರೂ ಒಂದು ಯೋಗ್ಯ ಭಾವನೆಯನ್ನು ಬಿತ್ತಲು ಅಮೆರಿಕ ಯೋಗ್ಯವಾದ ಕ್ಷೇತ್ರ. ಅದಕ್ಕಾಗಿ ಅಮೆರಿಕವನ್ನು ಬೇಗ ಬಿಡುವ ಆಲೋಚನೆಯಿಲ್ಲ. ನಾನು ಏತಕ್ಕೆ ಬಿಡಬೇಕು? ಇಲ್ಲಿ ನನಗೆ ತಿನ್ನಲು , ಕುಡಿಯಲು , ಹೊದೆಯಲು ಎಲ್ಲ ಸಿಕ್ಕುವುದು. ಇದು ನಾನು ಆಡುವ ಕೆಲವು ಒಳ್ಳೆಯ ಮಾತುಗಳಿಗಾಗಿ. ಇಂತಹ ಉತ್ತಮ ದೇಶವನ್ನು ಬಿಟ್ಟು ಕೃತಘ್ನರು , ಬುದ್ಧಿಹೀನರು , ಮೂರ್ಖರು , ಕುರುಡು ನಂಬಿಕೆಯ ಬಂಧನದಲ್ಲಿ ಯಾವಾಗಲೂ ನರಳುತ್ತಿರುವವರು ನಿರ್ದಯರು , ನಿಷ್ಕರುಣಿಗಳು ಇರುವ ನಾಡಿಗೆ ನಾನು ಬರಬೇಕೇನು ? ಆದಕಾರಣ ಹೋಗಿ ಬರುತ್ತೇನೆ ನಮಸ್ಕಾರ ! ನೀನು ವಿಚಾರ ಮಾಡಿ ಈ ಕಾಗದವನ್ನು ಯಾರಿಗೆ ತೋರಿಸಬೇಕೋ ಅವರಿಗೆ ತೋರಿಸು. ……….ಮಜುಂದಾರ ಬರೆದ ಶ್ರೀರಾಮಕೃಷ್ಣರ ಕೆಲವು ಪ್ರತಿಗಳನ್ನು ನನ್ನ ಷಿಕಾಗೊ ವಿಳಾಸಕ್ಕೆ ಕಳಿಸಲು ಸಾದ್ಯವೇ ? …… ಜಿ.ಜಿ, ಅಳಸಿಂಗ , ಸೆಕ್ರೆಟರಿ ಮುಂತಾದವರಿಗೆ ನನ್ನ ಅನಂತ ಆಶೀರ್ವಾದಗಳನ್ನು ತಿಳಿಸು. ಅವರ ಮೇಲೆ ನನಗೆ ಸ್ವಲ್ಪವೂ ಅತೃಪ್ತಿಯಿಲ್ಲ……..ಅವರು ಬಂಗಾಳಿಗಳಿಗಿಂತ ಎಷ್ಟೋ ಮೇಲು. ಅವರು ಬರೀ ಮೂಢರು. ಅವರಲ್ಲಿ ಹೃದಯವಿಲ್ಲ., ಸ್ವಲ್ಪವೂ ಸತ್ತ್ವವಿಲ್ಲ. ಬೀಳ್ಕೊಡುವೆನು ! ಬೀಳ್ಕೊಡುವೆನು !....... ವಿ.ಸೂ : ಕಿಡಿ ನನ್ನನ್ನು ಆಗಲೇ ಮರೆತ ಬಿಟ್ಟಿದ್ದಾನೆ ಎಂದು ಊಹಿಸುತ್ತೇನೆ...’ .
ಎರಡನೇ ಶಿಷ್ಯನಿಗೆ ಬರೆದ ಪತ್ರದಲ್ಲಿ ಮೇಲಿನ ಪತ್ರದ ಕೆಲ ಆಯ್ದ ಭಾಗ ಇದ್ದು ‘ಇಂತಹ ಒಂದು ಭವ್ಯ ದೇಶವನ್ನು ಬಿಟ್ಟು ಮೃಗೀಯರು , ಕೃತಘ್ನರೂ , ಕಡುಮೂರ್ಖರು , ಚಿರಕಾಲ ಕುರುಡು ನಂಬಿಕೆಯಲ್ಲಿ ನರಳುತ್ತಿರುವ ನಿಷ್ಕರುಣಿ ದಯಾಹೀನರು ಇವರ ಬಳಿಗೆ (ಭಾರತ) ಏತಕ್ಕೆ ಹೋಗಬೇಕು’ ಎಂದು ಪ್ರಶ್ನಿಸಿ ಪತ್ರವನ್ನು ಮುಗಿಸಿದ್ದರು.
ಕಲ್ಕತ್ತದ ಮಿನರ್ವ ಥಿಯೇಟರ್’ನಲ್ಲಿ ೧೪/೫/೧೮೯೪ ರಂದು ಸಾರ್ವಜನಿಕ ಸಭೆ ಸೇರಿ ಕಲ್ಕತ್ತದ ಖ್ಯಾತರ ಸಮ್ಮುಖದಲ್ಲಿ ಸ್ವಾಮಿಗಳ ಪರವಾಗಿ ಗೊತ್ತುವಳಿಯೊಂದನ್ನು ಅಂಗೀಕರಿಸಲಾಯಿತು. ಇದರ ವರದಿಗಳು ಸ್ವಾಮಿಗಳನ್ನು ತಲುಪಿದವು. ಮದ್ರಾಸ್ ಶಿಷ್ಯರು ಇದಕ್ಕಿಂತಲೂ ಮುಂಚೆ -೨೮/೪/೧೮೯೪- ಸ್ವಾಮಿಗಳನ್ನು ಬೆಂಬಲಿಸಿ , ಹೊಗಳಿ ಗೊತ್ತುವಳಿಗಳನ್ನು ಮಂಡಿಸಿದ್ದರಾದರೂ ಅವುಗಳನ್ನು ಅಮೆರಿಕದ ಪತ್ರಿಕೆಗಳಿಗೆ ಕಳಿಸಲು ಮರೆತಿದ್ದರು. ಆದ್ದರಿಂದ ಮಿನರ್ವ ಥಿಯೇಟರ್’ನಲ್ಲಿ ನಡೆದ ಸಭೆಯೇ ಸ್ವಾಮಿಗಳಿಗೆ ನೆಮ್ಮದಿ ನೀಡಿದ ಮೊದಲ ಸುದ್ದಿಯಾಗಿದ್ದಿತು. ಇದೊಂದು ರೀತಿಯಲ್ಲಿ ಅವರಿಗೆ ತೃಪ್ತಿ ಮತ್ತು ಚೇತರಿಕೆಯನ್ನು , ಅದರೊಂದಿಗೆ ಭಾರತದಲ್ಲಿ ತಮಗೆ ಎಷ್ಟು ಬೆಂಬಲ ಮತ್ತು ಗೌರವ ದಕ್ಕುತ್ತಿದೆ ಎನ್ನುವುದನ್ನು ಸಾಕ್ಷ್ಯಾಧಾರಗಳೊಂದಿಗೆ ಅಮೆರಿಕದ ತಮ್ಮ ಶಿಷ್ಯ , ಶಿಷ್ಯೆ , ಗೆಳೆಯ , ಗೆಳತಿಯರ ಮುಂದಿರಿಸುವ ವಿಶ್ವಾಸ ಮೂಡಿಸಿದ್ದಿತು.
ಸ್ವಾಮಿಗಳ ಒತ್ತಾಸೆಯಂತೆ ಮದ್ರಾಸಿನ ಶಿಷ್ಯರು ಡಾ.ಬರೋಸ್ ಮತ್ತು ಅಮೆರಿಕದ ಪತ್ರಿಕೆಗಳಿಗೆ ಗೊತ್ತುವಳಿಗಳನ್ನು ಕಳಿಸಿದ್ದರು. ಅದಕ್ಕೆ ಡಾ, ಬರೋಸ್ ಉತ್ತರಿಸಿದ್ದರು. ಅದು ಭಾರತದ ಪತ್ರಿಕೆಯಲ್ಲಿ ಮುದ್ರಿತವಾಗಿದ್ದಿತು. ಆ ಸುದ್ದಿಯ ತುಣುಕನ್ನು ಭಾರತದಿಂದ ತರಿಸಿ ಅದನ್ನು ಎಮ್ಮಾ ಥರ್ಸ್’ಬಿಯವರಿಗೆ ಕಳಿಸಿದ್ದರು. ಆಕೆ ಓದಿದ ನಂತರ ಶ್ರೀಮತಿ ಓಲ್’ಬುಲ್’ಗೆ ಕಳಿಸುವ ಏರ್ಪಾಡು ಮಾಡಿ ೭/೫/೧೮೯೫ ರಂದು ಆಕೆಗೆ ಪತ್ರವನ್ನು ಬರೆದಿದ್ದರು. ಇದಾದ ೭ ದಿನಗಳಲ್ಲಿ (೧೪/೫/೧೮೯೫) ಅಳಸಿಂಗ ಪೆರುಮಾಳ್’ಗೆ ‘ ನೋಡಿದೆಯಾ ಮಗು, ಈ ಪತ್ರಿಕೆಗಳ ಉಜ್ವಲವಾದ ಉಲ್ಲೇಖಗಳೆಲ್ಲ ನಿಷ್ಪ್ರಯೋಜಕ ಎನ್ನುವುದನ್ನು ? ನಾನು ಹೋಗುವಾಗ ನನ್ನ ಹಿಂದೆ ಶಾಶ್ವತವಾದ ಪ್ರಭಾವವನ್ನು ಬಿಟ್ಟು ಹೋಗುವಂತಾಗಬೇಕು…… ಇಷ್ಟರಲ್ಲೇ ಅದು ಆಗುವುದು….’ ಎಂದು ಬರೆದರು. ಇದಾದ ಒಂದೇ ದಿನದ ನಂತರ (೧೬/೫/೧೮೯೫) ಶ್ರೀಮತಿ ಜಾರ್ಜ್ ಹೇಲ್’ಗೆ ‘ ….ದೊಡ್ಡ ಪೊಟ್ಟಣ ಖೇತ್ರಿಯಿಂದ ಬಂದಿದೆ. ಅದರಲ್ಲಿ ನಾನು ಈ ದೇಶದಲ್ಲಿ ಮಾಡಿದ ಕೆಲಸದ ಬಗ್ಗೆ ಅಬು ಪರ್ವತದಲ್ಲಿ ರಾಜವಂಶದವರು ಸಭೆಯೊಂದರಲ್ಲಿ ಮಾಡಿದ ಭಾಷಣದ ವರದಿಯಿದೆ ’ ಎಂದು ತಿಳಿಸಿದರು.
ಭಾರತದಿಂದ ಪತ್ರಿಕೆಯ ಕಂತೆಗಳು ಬರುತ್ತಿದ್ದಂತೆಯೇ ಸ್ವಾಮಿಗಳ ಉತ್ಸಾಹ ಗರಿಗೆದರುತ್ತಿದ್ದಿತು. ಸ್ವಾಮಿಗಳು ೯/೭/೧೮೯೪ ರಂದು ಹೇಲ್ ಸೋದರಿಯರಿಗೆ ‘ ಜೈ, ಜಗದಾಂಬ ! ನಿರೀಕ್ಷಣೆಗಿಂತ ಹೆಚ್ಚಿನದನ್ನು ಸಂಪಾದಿಸಿದ್ದೇನೆ. ದೇವದೂತನನ್ನು ಬೇಕಾದಷ್ಟು ಸನ್ಮಾನಿಸಿದರು. ದೇವರ ಅಪಾರ ಕರುಣೆಯನ್ನು ನೋಡಿ ನಾನು ಚಿಕ್ಕ ಮಗುವಿನಂತೆ ಅಳುತ್ತಿದ್ದೇನೆ. ..ಸೋದರಿಯರೇ ನಾನು ಕಳಿಸುತ್ತಿರುವ ಪತ್ರ ನಿಮಗೆಲ್ಲವನ್ನೂ ವಿವರಿಸುವುದು. ಮುದ್ರಿಸಿದ ಪತ್ರಿಕೆಗಳು ಅಮೆರಿಕ ದೇಶೀಯರಿಗೆ ಬರುತ್ತಿವೆ. ಅದರಲ್ಲಿ ಬರುವ ಹೆಸರುಗಳು ನಮ್ಮ ದೇಶದ ಶ್ರೇಷ್ಟ ಪುಷ್ಪಗಳು. ಕಲ್ಕತ್ತೆಯ ಪ್ರಮುಖ ವ್ಯಕ್ತಿಯೇ ಅಧ್ಯಕ್ಷರಾಗಿದ್ದರು. ಮತ್ತೊಬ್ಬ ವ್ಯಕ್ತಿ ಸಂಸ್ಕೃತ ವಿಶ್ವವಿದ್ಯಾಲಯದ ಅಧ್ಯಕ್ಷರು ಮತ್ತು ಇಡೀ ಭಾರತ ದೇಶದಲ್ಲಿಯೇ ಪ್ರಮುಖ ಬ್ರಾಹ್ಮಣರೆಂದು ಸರ್ಕಾರವೇ ಅಂಗೀಕರಿಸಿರುವ ಮಹೇಶಚಂದ್ರ ನ್ಯಾಯರತ್ನರು. ಪತ್ರ ನಿಮಗೆಲ್ಲ ತಿಳಿಸುತ್ತದೆ………..’ ಎಂದಿದ್ದರು.
ಭಾರತದಿಂದ ತಮಗೆ ಬೆಂಬಲ ಸಿಕ್ಕಿತೆಂದು ಹಿಗ್ಗಿ ಹೀರೇಕಾಯಿಯಾಗಿದ್ದ ಸ್ವಾಮಿಗಳು ಎರಡು ದಿನಗಳ ನಂತರ (೧೧/೭/೧೮೯೪) ಅಳಸಿಂಗ ಪೆರುಮಾಳ್’ನನ್ನು ನೆನೆಸಿಕೊಂಡು ಮೆದುವಾದ ದನಿಯಲ್ಲಿ ಬರೆದರು. ‘…. ಷಿಕಾಗೊ ಈ ವಿಳಾಸಕ್ಕಲ್ಲದೆ ಬೇರೆ ಯಾವ ವಿಳಾಸಕ್ಕೂ ಪತ್ರ ಬರೆಯಬೇಡ (ಜಾರ್ಜ್ ಹೇಲ್ ಮನೆ) . ನಿನ್ನ ಹಿಂದಿನ ಪತ್ರ ಸುತ್ತಾಡಿಕೊಂಡು ಬಂದು ನನ್ನನ್ನು ತಲುಪಿತು. ನಾನು ಅಷ್ಟೊಂದು ಪ್ರಸಿದ್ಧನಾಗಿರುವುದರಿಂದ ಅದು ಸಾದ್ಯವಾಯಿತು. ಕೆಲವು ಗೊತ್ತುವಳಿಗಳನ್ನು ಡಾ. ಜೆ.ಎಚ್ ಬರೋಸ್ ಅವರಿಗೆ ಕಳಿಸಬೇಕು. ಆ ಪತ್ರದಲ್ಲಿ ನನಗೆ ಅವರು ತೋರಿದ ದಯೆಗಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ , ಆ ಪತ್ರವನ್ನು ಅಮೆರಿಕದ ಪತ್ರಿಕೆಗಳಲ್ಲಿ ಪ್ರಕಟಿಸಬೇಕೆಂದು ಕೋರಿಕೊಳ್ಳಬೇಕು. ನಾನು ಯಾರನ್ನೂ ಪ್ರತಿನಿಧಿಸುತ್ತಿಲ್ಲ ಎನ್ನುವ ಮಿಷನರಿಗಳ ಸುಳ್ಳು ಅಪವಾದಕ್ಕೆ ತಕ್ಕ ಉತ್ತರವಾಗುತ್ತದೆ. ವ್ಯವಹಾರವನ್ನು ಕಲಿತುಕೋ ಮಗು ……..ಕಿಡಿ ತನ್ನ ದಾರಿಯಲ್ಲಿ ಹೋಗಲು ಬಿಟ್ಟುಬಿಡು. ಸಕಾಲದಲ್ಲಿ ಅವನು ಸರಿಯಾದ ದಾರಿಗೆ ಬರುತ್ತಾನೆ. ಅವನು ಸ್ವಂತ ಅಭಿಪ್ರಾಯಗಳನ್ನು ಹೊಂದಲು ಸಂಪೂರ್ಣ ಅಧಿಕಾರವಿದೆ. ಅವನು ಪತ್ರಿಕೆಗೆ ಬರೆಯುವಂತೆ ಮಾಡು. ಅದು ಅವನು ಪ್ರಸನ್ನನಾಗುವಂತೆ ಮಾಡುತ್ತದೆ… ಪತ್ರಿಕೆಯನ್ನು ಪ್ರಾರಂಭಿಸು. ನಾನು ಆಗಾಗ ಲೇಖನಗಳನ್ನು ಕಳಿಸುತ್ತೇನೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಾಪಕ ಜಾನ್ ರೈಟ್ ಎಂಬುವರೇ ನನ್ನ ಮಿತ್ರರಾದವರಲ್ಲಿ ಮೊದಲಿಗರು. ಅದಕ್ಕಾಗಿ ಕೃತಜ್ಞತೆಯನ್ನು ಅರ್ಪಿಸಿ ಒಂದು ಕರಪತ್ರವನ್ನೂ ಮತ್ತು ಒಂದು ಪತ್ರವನ್ನು ನೀನು ಅವರಿಗೆ ಕಳಿಸಬೇಕು….ನೀವು ಹೊರಡಿಸಿದ ಗೊತ್ತುವಳಿಯನ್ನು ಡಾ. ಬರೊಸ್ , ಡಾ. ಪೌಲ್ ಕ್ಯಾರಸ್ , ಸೆನೆಟರ್ ಪಾಮರ್ , ಶ್ರೀಮತಿ ಜೆ’ಜೆ ಬ್ಯಾಗ್ಲಿ ಇವರಿಗೆ ಕಳಿಸಬೇಕು. ಅದು ಅಧಿಕೃತವಾಗಿ ಬರಬೇಕು. ಹೊರದೇಶಗಳ ವಿಧಾನಗಳು ನಿಮಗೆ ಗೊತ್ತಿಲ್ಲದೆ ಇರುವುದರಿಂದ ನಾನಿದನ್ನು ಬರೆಯುತ್ತಿದ್ದೇನೆ…..’.
ಸ್ವಾಮಿಗಳ ೨೮/೬/೧೮೯೪ ರ ಪತ್ರವನ್ನು ಓದಿ ಬೆವರಿಳಿಸಿಕೊಂಡಿದ್ದ ಅಳಸಿಂಗ ಪೆರುಮಾಳ್ ಮತು ಸ್ನೇಹಿತರು ಸುಮ್ಮನೆ ಕೂರದೆ ಇನ್ನೂ ಹೆಚ್ಚಿನ ಸಭೆಗಳನ್ನು ಏರ್ಪಡಿಸತೊಡಗಿದರು. ೨೨/೮/೧೮೯೪ ರಲ್ಲಿ ಕುಂಭಕೋಣಂನಲ್ಲಿ , ೨೬/೮/೧೮೯೪ ರಲ್ಲಿ ಬೆಂಗಳೂರಿನಲ್ಲಿ ಸ್ವಾಮಿಗಳನ್ನು ಅಭಿನಂದಿಸಿ ಸಭೆಗಳು ನಡೆದವು. ಅಳಸಿಂಗ ಪೆರುಮಾಳ್ ಮದ್ರಾಸಿನಲ್ಲಿ ಮಾಡಿದ ಗೊತ್ತುವಳಿಗಳನ್ನು ಅಮೆರಿಕದ ವಿವಿಧ ಪತ್ರಿಕೆಗಳಿಗೆ ಕಳಿಸಿದ್ದನು. ಇದರ ಪರಿಣಾಮವಾಗಿ ೩೦/೮/೧೮೯೪ ರಂದು ‘ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಕ್ರಿಪ್ಟ್ ಪತ್ರಿಕೆಯಲ್ಲಿ ಮದ್ರಾಸ್ ಸಮಿತಿ ಸ್ವಾಮಿಗಳನ್ನು ಅಭಿನಂದಿಸಿರುವ ಸುದ್ದಿ ಮತ್ತು ಗೊತ್ತುವಳಿಯನ್ನು ಪ್ರಕಟಿಸಿತು. ಇದರಿಂದ ಅತೀವ ಸಂತೋಷಗೊಂಡಿದ್ದ ಸ್ವಾಮಿಗಳು ಮರುದಿನ ಅಳಸಿಂಗ ಪೆರುಮಾಳ್ ಕೆಲಸವನ್ನು ಶ್ಲಾಘಿಸಿ ಬೋಸ್ಟನ್’ನಿಂದ ಪತ್ರ ಬರೆದರು. ಈ ಸಂತೋಷವನ್ನು ಮೇರಿ ಹೇಲ್ ಜೊತೆ ತಕ್ಷಣ ಹಂಚಿಕೊಂಡರು. ‘ಪ್ರಿಯ ಅಳಸಿಂಗ ಇದೀಗ ಬೋಸ್ಟನ್ ಟ್ರಾನ್ಸ್’ಸ್ಕ್ರಿಪ್ಟ್’ನಲ್ಲಿ ನನ್ನ ಬಗ್ಗೆ ಮದ್ರಾಸಿನಲ್ಲಿ ಪ್ರಕಟವಾಗಿರುವ ವಿಷಯ ಓದಿದೆ. ಆದರೆ ಅದು ನನಗಿನ್ನೂ ತಲುಪಿಲ್ಲ. ನೀನು ಆಗಲೇ ಕಳಿಸಿದ್ದರೆ ನನಗೆ ಅದು ಬೇಗ ತಲುಪುತ್ತಿತ್ತು, ಇದುವರೆಗೆ ನೀನು ಬಹಳ ಚೆನ್ನಾಗಿಯೇ ಕೆಲಸ ಮಾಡಿರುವೆ. ನಾನು ಉದ್ವೇಗದ ಸಮಯದಲ್ಲಿ ಬರೆದುದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ. ಹದಿನೈದು ಸಾವಿರ ಮೈಲಿ ದೂರದ ದೇಶದಲ್ಲಿ ಒಬ್ಬನೇ ಅನೇಕ ವಿರೋಧಗಳನ್ನು ಎದುರಿಸುತ್ತಿರುವಾಗ ಕೆಲವೊಮ್ಮೆ ಉದ್ವೇಗಕ್ಕೆ ಒಳಗಾಗುವುದು ಸ್ವಾಭಾವಿಕ. ಇದನ್ನು ನೀನು ಗಮನಕ್ಕೆ ತೆಗೆದುಕೊಳ್ಳಬೇಡ….. ಈಗ ನನ್ನ ಬಗೆಗಿನ ಭಾರತೀಯ ಪತ್ರಿಕೆಗಳ ವರದಿಯನ್ನು ಯಾವಾಗಲೂ ಇಲ್ಲಿಗೆ ಕಳಿಸು. ನಾನು ಪತ್ರಿಕೆಯಲ್ಲಿಯೇ ಅದನ್ನು ಓದಬೇಕು. ….ಈಗ ಇಲ್ಲಿ ಥಿಯೊಸೊಫಿಸ್ಟರು ನನ್ನನ್ನು ಇಷ್ಟ ಪಡುತ್ತಾರೆ. ….ಕ್ರೈಸ್ತ ಶ್ರದ್ಧಾ ಚಿಕಿತ್ಸಕರಿರುವರು. ಅವರೆಲ್ಲ ನನ್ನನ್ನು ಮೆಚ್ಚುತ್ತಾರೆ. ಅವರು ಸಮಾರು ೧೦ ಲಕ್ಷ ಜನ. ಈ ಎರಡೂ ಗಂಪಿನವರೊಂದಿಗೂ ನಾನು ಕೆಲಸ ಮಾಡುತ್ತೇನೆ. ಯಾವ ಗುಂಪಿಗೂ ಸೇರುವುದಿಲ್ಲ. ಆ ಎರಡೂ ಪಂಗಡಗಳ ತಪ್ಪುಗಳನ್ನು ತಿದ್ದಲು ಯತ್ನಿಸುತ್ತೇನೆ…..ಪತ್ರಿಕೆಯನ್ನು ಪ್ರಾರಂಭಿಸುವುದರೊಂದಿಗೆ ನೀನು ಕಾರ್ಯದರ್ಶಿಯಾಗುವೆ. ಪತ್ರಿಕೆ ಪ್ರಾರಂಭಿಸಲು ಬೇಕಾದ ಖರ್ಚನ್ನು ಲೆಕ್ಕ ಹಾಕಿ ಕಳಿಸು ಮತ್ತು ಸಂಘದ ವಿಳಾಸವನ್ನು ತಿಳಿಸು. ನಾನೇ ಹಣವನ್ನು ಕಳಿಸುತ್ತೇನೆ. (೩೧/೮/೧೮೯೪)
ಸೆಪ್ಟೆಂಬರ್-೧೮೯೪ ಆರಂಭದ ವೇಳೆಗೆ ಮೈಸೂರು ಮಹಾರಾಜ ಚಾಮರಾಜೇಂದ್ರರ ಸಹಿಯಿದ್ದ ಪತ್ರ ಸ್ವಾಮಿಗಳನ್ನು ತಲುಪಿದ್ದಿತು. ಇದರಿಂದ ಅವರು ರೋಮಾಂಚಿತರಾಗಿದ್ದರು. ಏಕೆಂದರೆ ಖೇತ್ರಿಯ ರಾಜ ಅಜಿತ್ ಸಿಂಗ್ ಮತ್ತು ಜುನಾಗಢದ ದಿವಾನ ಹರಿದಾಸ ವಿಹಾರಿದಾಸ ದೇಸಾಯ ಹೊರತಾಗಿ ಅವರು ಅಮೆರಿಕಕ್ಕೆ ಹೋಗುವ ಮೊದಲು ಭೇಟಿಯಾಗಿದ್ದ ಬೇರೆ ಯಾವುದೇ ರಾಜ , ಮಂತ್ರಿಗಳು ಸ್ವಾಮಿಗಳನ್ನು ಅಭಿನಂದಿಸಿ ಪತ್ರ ಬರೆದಿರಲಿಲ್ಲ. ತಕ್ಷಣವೇ ಲೇಖನಿ ಎತ್ತಿಕೊಂಡು ‘ …..ಇದರೊಂದಿಗೆ ನಾನು ಮೈಸೂರಿನ ಮಹಾರಾಜರ ಸಹಿ ಇರುವ ಪತ್ರವನ್ನು ಕಳಿಸುತ್ತಿದ್ದೇನೆ. ಅವರು ಭಾರತದ ಮುಖ್ಯ ರಾಜರು. ಅವರ ರಾಜ್ಯ ದಕ್ಷಿಣ ಭಾರತದ ಬಹು ಭಾಗವನ್ನು ಒಳಗೊಂಡಿರುವುದನ್ನು ನೀನು ಭೂಪಟದಲ್ಲಿ ನೋಡಬಹುದು. ಅವರು ಕ್ರಮೇಣ ನನ್ನ ಬಗ್ಗೆ ಅಭಿಮಾನ ತಾಳುತ್ತಿರುವುದು ಸಂತೋಷದ ವಿಷಯ. ಅವರು ಮನಸ್ಸು ಮಾಡಿದರೆ , ೫ ದಿನಗಳಲ್ಲಿ ನನ್ನೆಲ್ಲ ಯೋಜನೆಗಳನ್ನು ಕಾರ್ಯಗತ ಮಾಡಬಹುದು. ಅವರ ಆದಾಯ ೧೫೦ ದಶಲಕ್ಷ ಡಾಲರ್. ಅದನ್ನು ಯೋಚಿಸು …..’ಅವರು ನನ್ನ ಒಳ್ಳೆಯ ಮಾತುಗಳನ್ನು ಬಹಳ ಇಷ್ಟಪಡುವರೆಂದು ಹೇಳುವರು. ಅವು ಬಡವರಿಗೆ ವಿದ್ಯೆಯನ್ನು ಕೊಡುವ ನನ್ನ ಯೋಜನೆಗಳು….’ ರಾಜ , ಮಹಾರಾಜರುಗಳೂ ನನಗೆ ಪತ್ರ ಬರೆಯುತ್ತಾರೆನ್ನುವ ಹೆಮ್ಮೆಯಲ್ಲಿ ಬೀಗಿದ್ದರು. (೫/೮/೧೮೯೪-ಶ್ರೀಮತಿ ಹೇಲ್)
ಸ್ವಾಮಿಗಳ ಪರವಾಗಿದ್ದ ಗೊತ್ತುವಳಿಗಳನ್ನು ಮತ್ತು ದಿ ಇಂಡಿಯನ್ ಮಿರರ ಪತ್ರಿಕೆಯ ತುಣುಕಗಳನ್ನು ಜೆ.ಎಚ್ ಬರೋಸ್;ಗೆ ಕಳಿಸಲಾಗಿದ್ದಿತು. ಅವುಗಳನ್ನು ಆತ ಪ್ರಕಟಿಸುವುದಿಲ್ಲ ಎನ್ನುವ ಸಂಶಯವನ್ನು ಸ್ವಾಮಿಗಳು ಶ್ರೀಮತಿ ಜಾರ್ಜ್ ಹೇಲ್ ಮುಂದೆ ವ್ಯಕ್ತಪಡಿಸಿದ್ದರು. (೪/೯/೧೮೯೪). ‘ನಾನು ನಿಮಗೆ ಕಳಿಸಿದ ನನ್ನ ಡೆಟ್ರಾಯಿಟ್ ಭಾಷಣವನ್ನು ಕುರಿತ 'ದಿ ಇಂಡಿಯನ್ ಮಿರರ್' ಪತ್ರಿಕೆಯ ತುಣುಕನ್ನು ನೀವು ನನಗೆ ಕಳಿಸಿರುವುದಾಗಿ ನಂಬಿದ್ದೇನೆ ‘ ( ೧೨/೯/೧೮೯೪- ಶ್ರೀಮತಿ ಜಾರ್ಜ್ ಹೇಲ್) , ‘ ವೃತ್ತ ಪತ್ರಿಕೆಗಳ ಭಾಗಗಳು ಮಿಸೆಸ್ ಬ್ಯಾಗ್ಲಿಯವರ ಬಳಿಯಿವೆ ; ಅವುಗಳ ಪ್ರತಿಯನ್ನು ಮಾತ್ರ ನಿಮಗೆ ಕಳಿಸಲಾಗಿತ್ತು. ಅಂದ ಹಾಗೆ ಎಲ್ಲವನ್ನೂ ನಿಮಗೆ ಕಳಿಸಿದರೆ ಶ್ರೀಮತಿ ಬ್ಯಾಗ್ಲಿಯವರಿಗೆ ಅಸೂಯೆ ಉಂಟಾಗುವುದು. ಇದು ನಮ್ಮ ನಿಮ್ಮಲ್ಲಿ ಮಾತ್ರ. ಇಂಡಿಯನ್ ಮಿರರ್ ಶ್ರೀ ರೈಟ್ ಬಳಿ ಇದೆ. ಈ ವೇಳೆಗೆ ಮೈಸೂರು ಮಹಾರಾಜರ ಪತ್ರ ನಿಮಗೆ ತಲುಪಿರಬಹುದು. ‘(೧೩/೯/೧೮೯೪- ಶ್ರೀಮತಿ ಜಾರ್ಜ್ ಹೇಲ್) , ‘ಕಳೆದ ತಿಂಗಳು ಭಾರತದಿಂದ ಬೇಕಾದಷ್ಟು ಕಾಗದಗಳು ಬಂದವು. ಜನ ನನ್ನ ಕೆಲಸಗಳನ್ನು ಮುಕ್ತ ಕಂಠದಿಂದ ಹೊಗಳುತ್ತಿರುವುದನ್ನು ಕಂಡು ನನಗೆ ಸಂತೋಷವಾಗಿದೆ ( ೧೩/೯/೧೮೯೪-ಮೇರಿ ಹೇಲ್) ,’ ಭಾರಿ ಗಾತ್ರದ ಪೊಟ್ಟಣ ತಲುಪಿತು. ಕಲ್ಕತ್ತೆಯ ನಮ್ಮ ಮಠದಿಂದ ನನಗೆ ಕಳಿಸಿರುವ ಪ್ರಚಾರ ಪತ್ರಗಳು. ವೃತ್ತ ಪತ್ರಿಕೆಗಳ ಭಾಗಗಳನ್ನು ಟೈಪ್ ಮಾಡಿ ಕಳಿಸಲು ನಾನು ಕೇಳಿರಲಿಲ್ಲ. ಸ್ವಲ್ಪ ದಿನಗಳ ಹಿಂದೆ ನಾನು ನಿಮಗೆ ಕಳಿಸಿದ್ದು ‘ದಿ ಇಂಡಿಯನ್ ಮಿರರ್ ‘ ಪತ್ರಿಕೆಯ ಸಣ್ಣ ಭಾಗವನ್ನು ಮಾತ್ರ. (೧೪/೯/೧೮೯೪-ಶ್ರೀಮತಿ ಜಾರ್ಜ್ ಹೇಲ್ ), ನನಗೆ ಮದ್ರಾಸ್’ನಲ್ಲಿ ಅರ್ಪಿಸಿದ್ದ ಗೊತ್ತುವಳಿ ಮತ್ತು ನೆನೆಕೆಯನ್ನು ನೀವು ನೋಡಿರಬಹುದು. ನಿಮಗೆ ಕಳಿಸಲು ಲಿಯಾನ್ ಲ್ಯಾಂಡ್ಸ್’ಬರ್ಗ್’ಗೆ ಕೆಲವನ್ನು ಕಳಿಸಿದ್ದೇನೆ ‘ ಎಂದಾಗ ತೃಪ್ತಿ ತುಂಬಿದ ಭಾವವಿದ್ದಿತು. ( ೧೯/೯/೧೮೯೪-ಸಾರಾ ಬುಲ್) , ನಿನ್ನ ಪತ್ರ ಮತ್ತು ಭಾರತದ ಟಪಾಲುಗಳು ತಲುಪಿವೆ. ಭಾರತದ ಪತ್ರಿಕೆಯ ತುಣುಕುಗಳನ್ನು ಕಳಿಸಿದ್ದಾರೆ. ಅವುಗಳನ್ನು ಓದಿ , ಕಾಯ್ದಿಡಲು ನಿನಗೆ ಕಳಿಸುತ್ತೇನೆ. (೨೬/೯/೧೮೯೪-ಇಸಾಬೆಲ್ಲಾ ಮೆಕೆಂಡ್ಲಿ) . ಗೊತ್ತುವಳಿ ಕಳಿಸಿದ್ದ ಮದ್ರಾಸ್ ಹುಡಗರಿಗೆ ‘ನನ್ನ ಕೆಚ್ಚೆದೆಯ ನಿಸ್ವಾರ್ಥ ಮಕ್ಕಳೇ ! ನೀವು ಅದ್ಭುತವಾಗಿ ಕೆಲಸ ಮಾಡಿದ್ದೀರಿ. ನನಗೆ ಅದೆಷ್ಟೋ ಹೆಮ್ಮೆಯಾಗಿದೆ. ಭರವಸೆ ಇರಲಿ , ನಿರಾಶರಾಗದಿರಿ ಎನ್ನುವ ಭರವಸೆಯ ನುಡಿಗಳು ಬಂದಿದ್ದವು. ( ೨೯/೯/೧೮೯೪-ಅಳಸಿಂಗ ಪೆರುಮಾಳ್)
‘ಅಂಚೆಯಲ್ಲಿ ಭಾರಿ ವಸ್ತುಗಳು ತಲುಪಿವೆ. ಅವುಗಳಲ್ಲಿ ಮೊದಲದರಲ್ಲಿ ಭಾರತದ ವರ್ತಮಾನ ಪತ್ರಿಕೆ ಮತ್ತು ಎರಡನೆಯದರಲ್ಲಿ ಮಜುಂದಾರ ನನ್ನ ಗುರುಗಳನ್ನು ಕುರಿತು ಬರೆದ ಪುಸ್ತಕ-ಪ್ರಚಾರಕ್ಕಾಗಿ. ಕೇಶವ ಚಂದ್ರ ಸೇನ ಮತ್ತು ಪ್ರತಾಪಚಂದ್ರ ಮಜುಂದಾರ ನನ್ನ ಗುರುವಿನ ಚರಿತ್ರೆಯಿಂದ ಕದ್ದು ಅದನ್ನು ತಮ್ಮ ನವಸಿದ್ಧಾಂತಗಳೆಂದು ಸಾರಿದುದು ಹೇಗೆಂದು ತೋರಿಸುತ್ತದೆ’ ನ್ಯೂಯಾರ್ಕ್’ನ ಫಿಷ್ ಕಿಲ್ ಆನ್ ಹಡ್ಸನ್’ನ್ ಶ್ರೀಮತಿ ಗರ್ನ್ಸೆ, ನ್ಯೂಯಾರ್ಕ್’ನ ಶ್ರೀಮತಿ ಆರ್ಥರ್ ಸ್ಮಿಥ್ ಮತ್ತು ಮಿಸ್ ಮೇರಿ ಫಿಲಿಫ್ , ಮೆಸಾಷುಸೆಟ್ಸ್’ನ ಶ್ರೀಮತಿ ಬ್ಯಾಗ್ಲಿ , ಹಾರ್ವರ್ಡ್’ನ ಗ್ರೀಕ್ ಪ್ರಾಧ್ಯಾಪಕ ಜೆ. ರೈಟ್ ಅವರಿಗೆ ಕೆಲವು ಪ್ರತಿಗಳನ್ನು ಕಳಿಸಲು ಕೇಳಿಕೊಳ್ಳುತ್ತೇನೆ. ( ೨೭/೯/೧೮೯೪-ಶ್ರೀಮತಿ ಜಾರ್ಜ್ ಹೇಲ್) . ನಿಮ್ಮ ಕಡೆಯಿಂದ ಭಾರತದ ರಾಶಿ ಪತ್ರಗಳು ಬಂದವು….. ಮೈಸೂರಿನಿಂದ ಬಂದ ಎರಡು ಪತ್ರಗಳು ನಿಮಗೆ ನೆನಪಿರಬಹುದು –ಅವೆರಡರಲ್ಲಿ ಒಂದರ ಮೇಲೆ ಮೈಸೂರು ಮಹಾರಾಜರ ಮೊಹರು ಇದೆ. ಅದನ್ನು ಮಿಸ್ ಫಿಲಿಫ್ಸ್ ೧೯, ವೆಸ್ಟ್ ೩೮ ನೇ ಬೀದಿಗೆ , ನ್ಯೂಯಾರ್ಕ್’ಗೆ ಕಳಿಸಿ (೧೦/೧೦/೧೮೯೪-ಶ್ರೀಮತಿ ಜಾರ್ಜ್ ಹೇಲ್) , ನಿಮಗೆ ಕಳಿಸಿದ ಭಾರತದಿಂದ ಪತ್ರಗಳಲ್ಲಿ ಕಲ್ಕತ್ತದಿಂದ ನನ್ನವರು ನನ್ನ ಇಲ್ಲಿನ ಕೆಲಸಕ್ಕಾಗಿ ಕಳಿಸಿದ ವಿಳಾಸ ಮತ್ತು ವೃತ್ತ ಪತ್ರಿಕೆಗಳ ಭಾಗಗಳಿದ್ದವು. ( ೧೭/೧೦/೧೮೯೪-ಸಾರಾ ಬುಲ್) , ನೀವು ಬರೆದ ಪತ್ರ ಮತ್ತು ಕಳಿಸಿದ ಭಾರತದ ಪತ್ರಗಳು ತಲುಪಿದವು (೨೭/೧೦/೧೮೯೪-ಶ್ರೀಮತಿ ಜಾರ್ಜ್ ಹೇಲ್)
ಭಾರತದಲ್ಲಿ ಸ್ವಾಮಿಗಳನ್ನು ಕುರಿತಾಗಿ ಬಂದ ಸುದ್ದಿಗಳನ್ನು ನಕಲು ಮಾಡಿ ಅವರ ಶಿಷ್ಯರು ಕಳಿಸುತ್ತಿದ್ದರು. ಅಮೆರಿಕದಲ್ಲಿ ಸ್ವಾಮಿಗಳು ಅವುಗಳನ್ನೇ ತಮ್ಮ ಗೆಳೆಯರಿಗೆ , ಬೆಂಬಲಿಗರಿಗೆ ಕಳಿಸಿದರೆ ಅವು ಅಧಿಕೃತ ಮೂಲಗಳಂತೆ ಕಾಣುತ್ತಿರಲಿಲ್ಲ. ಆದ್ದರಿಂದ ಅವರು ಭಾರತದಿಂದ ಪತ್ರಿಕೆಯ ಮೂಲ ಪ್ರತಿಗಳನ್ನು ಕೇಳಿದ್ದರು. ಸ್ವಾಮಿಗಳು ಎಲ್ಲ ಪತ್ರಗಳನ್ನು ಷಿಕಾಗೊದ ಡಿಯರ್ ಬೋರ್ನ್ ರಸ್ತೆಯ ಜಾರ್ಜ್ ಹೇಲ್ ಮನೆಗೆ ಕಳಿಸಬೇಕೆಂದು ಶಿಷ್ಯರಿಗೆ ತಾಕೀತು ಮಾಡಿದ್ದರು. ಭಾರತದ ಎಲ್ಲ ಅಂಚೆ ಹೇಲ್ ಮನೆಯನ್ನು ತಲುತ್ತಿದ್ದಿತು. ಅವರು ಅವುಗಳನ್ನು ಸ್ವಾಮಿಗಳು ಇದ್ದ ಜಾಗಕ್ಕೆ ಕಳಿಸುತ್ತಿದ್ದರು. ಅವನ್ನು ಪಡೆದ ನಂತರ ಒಡೆದು , ಓದಿ ತಮಗೆ ಬೇಕಾದವರಿಗೆ ಕಳಿಸುತ್ತಿದ್ದರು. ಕೆಲವು ಹೇಲ್ ಮನೆಯವರಿಗೇ ಓದಲು ಮರಳುತ್ತಿದ್ದವು. ಸ್ವಾಮಿಗಳ ಮೇಲಿನ ಪತ್ರ ವ್ಯವಹಾರಗಳಿಂದ ಆಗಸ್ಟ್-ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಅಮೆರಿಕದ ತಮ್ಮ ಗೆಳೆಯ , ಬೆಂಬಲಿಗರಿಗೆ ಪತ್ರಿಕೆಯ ತುಣುಕಗಳನ್ನು ಕಳಿಸಿ ಹಿಂದಕ್ಕೆ ಪಡೆದು ನಂತರ ಮತ್ತೊಬ್ಬರಿಗೆ ಕಳಿಸುತ್ತಿದ್ದು ಸ್ವಯಂ ಪ್ರಚಾರದಲ್ಲಿ ನಿರತರಾಗಿದ್ದರು.
ಸ್ವಾಮಿಗಳು ತಮ್ಮ ಪ್ರಚಾರಕ್ಕೆ ಶ್ರೀಮತಿ ಹೇಲ್’ರನ್ನು ಇಳಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಅದರ ಅಂಗವಾಗಿ ‘ ಹರಿದಾಸ ವಿಹಾರಿದಾಸರಿಗೆ ತಮ್ಮನ್ನು ಸಮರ್ಥಿಸಿ ನೇರವಾಗಿ ಶ್ರೀಮತಿ ಜಾರ್ಜ್ ಹೇಲ್’ಗೆ ಪತ್ರ ಬರೆಯುವಂತೆ ಮಾಡಿದ್ದರು. ಶ್ರೀಮತಿ ಹೇಲ್ ಹರಿದಾಸ ವಿಹಾರಿದಾಸ ದೇಸಾಯಿಯವರ ಪತ್ರಕ್ಕೆ ಉತ್ತರಿಸಲು ನೆರವಾಗುತ್ತ ಅವರನ್ನು ಶ್ರೀ ಎಂದು ಸಂಬೋಧಿಸಬೇಕು. ಲಕೋಟೆಯ ಮೇಲೆ ದಿವಾನ್ ಬಹದ್ದೂರ ಎಂದು ಬರೆಯಬೇಕು ‘ ಎಂದು ಮಾರ್ಗದರ್ಶ ಮಾಡಿದ್ದರು. (೧೩/೯/೧೮೯೪). ಶ್ರೀಮತಿ ಜಾರ್ಜ್ ಹೇಲ್’ಗೆ ಹರಿದಾಸ ವಿಹಾರಿದಾಸ ದೇಸಾಯಿ ಬರೆದ ಪತ್ರವನ್ನು ಓದಿದ್ದರೂ ಕೂಡ, ‘ ನೀವು ಶ್ರೀಮತಿ ಹೇಲ್’ಗೆ ಬರೆದ ಪ್ರೀತಿಯ ಪತ್ರ ಬಹಳ ತೃಪ್ತಿಕರವಾಗಿದೆ’ ಎನ್ನುತ್ತ ಅವರಿಗೆ ಋಣ ಸಂದಾಯ ಮಾಡಿದ್ದರು. (?/೯/೧೮೯೪-ಹರಿದಾಸ ವಿಹಾರಿದಾಸ ದೇಸಾಯಿ) . ೨೭/೧೦/೧೮೯೪ ರ ಪತ್ರದಲ್ಲಿ ‘ನೀವು ದಯವಿಟ್ಟು ಹ್ಯಾರಿಸನ್ ಅವರಿಂದ ೧೦೦ ಫೋಟೋಗಳನ್ನು ಕೇಳಿ ಅವನ್ನು ಭಾರತಕ್ಕೆ ರಾಮದಯಾಳ ಚಕ್ರವರ್ತಿಯವರ ಈ ವಿಳಾಸಕ್ಕೆ ಕಳಿಸುವಿರಾ? ಕೇ/ಆ ಸ್ವಾಮಿ ರಾಮಕೃಷ್ಣಾನಂದ ಆಲಂಬಜಾರ್, ಕಲ್ಕತ್ತ’ ಎಂದು ತಿಳಿಸಿದ್ದಾರೆ. ಇಷ್ಟೊಂದು ಫೋಟೊಗಳು ಭಾರತದಲ್ಲಿ ವಿವಿಧ ಪತ್ರಿಕೆಗಳಿಗೆ ಒದಗಿಸಲು ಇರಬಹುದು.
ಅಮೆರಿಕದ ಪತ್ರಿಕೆಗಳಲ್ಲಿ ಕಲ್ಕತ್ತ ಮತ್ತು ಮದ್ರಾಸ್ ಬಿನ್ನವತ್ತಳೆಗಳು ಆದಷ್ಟು ಬೇಗ ಅಮೆರಿಕದ ಪತ್ರಿಕೆಗಳಲ್ಲಿ ಪ್ರಕಟಗೊಂಡು ಮತ್ತೊಮ್ಮೆ ಬೆಳಕಿಗೆ ಬರಲು ಸ್ವಾಮಿಗಳು ತವಕಿಸುತ್ತಿದ್ದರು. ಬಾಲ್ಟಿಮೋರ್’ನಲ್ಲಿದ್ದ ಸ್ವಾಮಿಗಳು ಭಾರತದಿಂದ ಬಂದ ತಂತಿಯನ್ನು-ಕಲ್ಕತ್ತ ಬಿನ್ನವತ್ತಳೆ- ಷಿಕಾಗೊ ಟ್ರಿಬ್ಯೂನ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆಯೇ ಎಂದು ಶ್ರೀಮತಿ ಹೇಲ್’ರವರನ್ನು ವಿಚಾರಿಸಿದ್ದರು. (೩೦/೧೦/೧೮೯೪) ಷಿಕಾಗೊ ಇಂಟರ್ ಓಷನ್ -೧/೯/೧೮೯೪- ಬಿಟ್ಟು ಬೇರೆ ಪತ್ರಿಕೆಗಳಲ್ಲಿ ಈ ಸುದ್ದಿ ಬಂದಿರಲಿಲ್ಲ. ಇದರಿಂದ ತಾವು ಸೂಚಿಸಿದಂತೆ ಮದ್ರಾಸಿನ ಶಿಷ್ಯರು ಇತರ ಪತ್ರಿಕೆಗಳಿಗೆ ಗೊತ್ತುವಳಿಗಳನ್ನು ಕಳಿಸಿದ್ದಾರೋ ಇಲ್ಲವೋ ಎನ್ನುವ ಸಣ್ಣ ಸಂಶಯ ಬಂದಿದ್ದಿತು. ಇದಾದ ಒಂದು ತಿಂಗಳಿನ ನಂತರ ಅಭೇದಾನಂದರಿಗೆ ಬರೆದ ಪತ್ರದಲ್ಲಿ ಷಿಕಾಗೊ ಟ್ರಿಬ್ಯೂನ್ ಪತ್ರಿಕೆಯಲ್ಲಿ ಗೊತ್ತುವಳಿ ಬಂದಿರುವ ಸುದ್ದಿ ಗೊತ್ತಿಲ್ಲ ಎಂದು ತಿಳಿಸಿದ್ದರು. ಅಮೆರಿಕ ಪತ್ರಿಕೆಗಳಲ್ಲಿ ಕಲ್ಕತ್ತ ಗೊತ್ತುವಳಿ ಪ್ರಕಟವಾದ ನಂತರ ‘ ಮದ್ರಾಸಿನ ಗೊತ್ತುವಳಿಯನ್ನು ಎಲ್ಲ ಪತ್ರಿಕೆಗಳು ಪ್ರಕಟಿಸಿವೆ.ಅವುಗಳಲ್ಲಿ ಕೆಲವನ್ನು ನಿನಗೆ ಕಳಿಸುತ್ತೇನೆ. ಇದನ್ನು ದಿ ಇಂಡಿಯನ್ ಮಿರರ್ ನಲ್ಲಿ ಪ್ರಕಟಿಸು ‘ ಎಂದು ಗುರುಭಾಯಿಗೆ ತಿಳಿಸಿದ್ದರು. (೨೫/೯/೧೮೯೪)
ಸ್ವಾಮಿಗಳು ತಮ್ಮ ಪ್ರಾಮಾಣಿಕತೆ , ಅಧಿಕೃತತೆ, ಸಚ್ಛಾರಿತ್ರ್ಯ ಕುರಿತಾಗಿ ಅಮೆರಿಕದಲ್ಲಿ ಯಾರಿಗೆ ಮನದಟ್ಟು ಮಾಡಿಸಬೇಕೆಂದು ಸೂಚಿಸಿ ಹರಿದಾಸ ವಿಹಾರಿದಾಸ ದೇಸಾಯಿಗಳಿಗೆ ತಿಳಿಸಿದ್ದರು. ಇದರೊಂದಿಗೆ ಅಮೆರಿಕದ ಗೆಳೆಯರನ್ನು ಉಲ್ಲಾಸದಲ್ಲಿಡುವ ಕ್ರಮಕ್ಕೆ ಮುಂದಾಗಿ ಅವರಿಗೆ ಉಡುಗೊರೆ ಕೊಡಲು ಭಾರತದಿಂದ ನೆಲಗಂಬಳಿಗಳನ್ನು ಕಳಿಸುವಂತೆ ಕೇಳಿಕೊಂಡಿದ್ದರು. ಇದರ ಪರಿಣಾಮವಾಗಿ ಹರಿದಾಸ ವಿಹಾರಿದಾಸ ದೇಸಾಯಿ ಶ್ರೀಮತಿ ಹೇಲ್’ಗೆ ನೇರವಾಗಿ ಪತ್ರ ಬರೆದಿದ್ದರು. ಅದು ದಿವಾನರು ಭಾರತದಿಂದ ಸ್ವಾಮಿಗಳಿಗೆ ಕಳಿಸಿದ ಕಟ್ಟಿನಲ್ಲಿದ್ದಿತು. ‘ ಈ ಕಂತೆ ಒಂದು ಸಭೆಯ ವರದಿ. ಷಿಕಾಗೊದ ಪತ್ರಿಕೆಗಳಲ್ಲಿ ಅದರಲ್ಲಿ ಕೆಲವನ್ನು ಪ್ರಕಟಿಸಲು ನಿಮಗೆ ಸಾದ್ಯವಾಗುವುದೆಂದು ನಾನು ಭಾವಿಸುತ್ತೇನೆ. ದಿವಾನರಿಂದ ನಿಮಗೊಂದು ಪತ್ರವಿದೆ…..ಕೆಲವು ಪತ್ರಿಕೆಗಳ ಕತ್ತರಿಸಿದ ಭಾಗಗಳು ಮತ್ತು ಒಂದು ‘ದಿ ಇಂಡಿಯನ್ ಮಿರರ್ ಪತ್ರಿಕೆ’ ಇವೆ. ನಂತರ ಕಳಿಸುತ್ತೇನೆ. ಕೆಲವನ್ನು ಜೆ.ಎಚ್.ಬ್ಯಾರೊಸ್’ಗೆ ಕಳಿಸಲಾಗಿದೆ . ಅವರು ಪ್ರಕಟಿಸುವರೆಂದು ಭಾವಿಸದಿರಿ…’. ತಮ್ಮನ್ನು ಕುರಿತಾಗಿ ‘ದಿ ಇಂಡಿಯನ್ ಮಿರರ್ ‘ ಪತ್ರಿಕೆಯಲ್ಲಿ ಬಂದಿದ್ದ ಸುದ್ದಿ ಅಮೆರಿಕದ ಪತ್ರಿಕೆಗಳಲ್ಲಿ ಬರಬೇಕು ಆದರೆ ಅದು ಬ್ಯಾರೋಸ್ ಕಡೆಯಿಂದ ಆಗಲಾರದು. ಅದಕ್ಕೆ ತಮ್ಮ ಆಪ್ತರೇ ಆಗಬೆಕೆಂದು ಸ್ವಾಮಿಗಳಿಗೆ ಖಚಿತವಾಗಿದ್ದಿತು. (೪/೯/೧೮೯೪) .
ತಮ್ಮ ಮೇಲೆ ಕ್ರೈಸ್ತ ಪಾದ್ರಿಗಳು ದಾಳಿ ಮಾಡುತ್ತಿದ್ದಾರೆ ಅವರಿಗೆ ಸಮರ್ಪಕ ಉತ್ತರ ಕೊಡಲು ನನ್ನ ಪರವಾಗಿ ಗೊತ್ತುವಳಿ ಮಂಡಿಸಿ ಕಳಿಸಿ ಎಂದು ಶಿಷ್ಯ, ಗುರುಭಾಯಿಗಳ ಮೇಲೆ ರೇಗಿದ್ದ ಸ್ವಾಮಿಗಳಿಗೆ ಒಳಮನಸ್ಸು ಆಗಾಗ ಕುಟುಕುತ್ತಿದ್ದಿತು. ‘’ಗೆಳೆಯರ ಗುಂಪು ಹಬ್ಬುತ್ತದೆ. ಅವರು ನಾನು ಇಲ್ಲೇ (ಅಮೆರಿಕ) ಇರಬೇಕೆಂದು ಇಲ್ಲಿನ ಜನ ಬಯಸುತ್ತಾರೆ. ವೃತ್ತ ಪತ್ರಿಕೆಗಳಿಂದ ಬಂದ ಯಶಸ್ಸು , ಜನರೆದುರು ಮಾಡುವ ನಟನೆ ನನಗೆ ಸಾಕಾಗಿದೆ. ಇದು ಸ್ವಲ್ಪವೂ ಬೇಕಾಗಿಲ್ಲ. ಇಲ್ಲಿ ನಮ್ಮ ಕೆಲಸಕ್ಕೆ ಹಣ ಸಿಗುವ ಸಾದ್ಯತೆಯಿಲ್ಲ. ( ೨೧/೯/೧೮೯೪-ಅಳಸಿಂಗ ಪೆರುಮಾಳ್) , . ‘ಅತ್ಯಂತ ಗೊಡ್ಡು ಕ್ರೈಸ್ತನೂ ನನಗೆ ಹಾಗೆ (ಅನ್ನ, ವಸತಿ , ರಕ್ಷಣೆ ಕೊಟ್ಟು) ಸಹಾಯ ಮಾಡಿರುವನು. ! ಆದರೆ ಪಾದ್ರಿಗಳಲ್ಲಿ ಒಬ್ಬರು ನಿಮ್ಮ ದೇಶಕ್ಕೆ ಬಂದರೆ ನೀವು ಅವರಿಗೆ ಏನು ಮಾಡುತ್ತೀರಿ ! ಅವರನ್ನು ನೀವು ಮುಟ್ಟುವುದೂ ಕೂಡ ಇಲ್ಲ. ಅವರು ಮ್ಲೇಚ್ಛರು !...(೨೭/೧೦/೧೮೯೪-ಅಳಸಿಂಗ ಪೆರುಮಾಳ) ವೇದಿಕೆಗಳ ಮೇಲೆ ಆವೇಶಭರಿತರಾಗಿ ಕ್ರೈಸ್ತ ಪಾದ್ರಿಗಳನ್ನು ಕಟುವಾಗಿ ಟೀಕಿಸುತ್ತಿದ್ದ ಸ್ವಾಮಿಗಳಿಗೆ ಈ ಬಗ್ಗೆ ಒಳಗೊಳಗೆ ಅಳುಕಿದ್ದಿತು. ಭಾರತದಲ್ಲಿ ಪೆಟ್ರೊನನ್ನು ಕೆಟ್ಟದಾಗಿ ನಡೆಸಕೊಂಡಿದ್ದಕ್ಕೆ ತಪ್ಪಿತಸ್ಥ ಮನೋಭಾವ ಮೂಡಿದ್ದಿತು. ತಾವು ಪ್ರತಿಪಾದಿಸುತ್ತಿದ್ದ ಸರ್ವ ಸಹನೆಯ , ಸ್ವೀಕರಣದ ಭಾರತ ಅಮೆರಿಕದಿಂದ ಭಾರತಕ್ಕೆ ಬಂದಿದ್ದ ಪೆಟ್ರೊ ಎನ್ನುವಾತನಿಗೆ ಅವಮಾನಿಸಿದ್ದರೆ ಮತಾಂಧರೆಂದು ತಾವು ಟೀಕಿಸುತ್ತಿದ್ದ ಕ್ರೈಸ್ತ ಪಾದ್ರಿಗಳು ತಮ್ಮನ್ನು ಅವರ ಮನೆ , ಚರ್ಚ್’ಗಳಿಗೆ ಕರೆದು ಸತ್ಕರಿಸಿದ್ದು ಸ್ವಾಮಿಗಳ ಮನಸ್ಸಿನಲ್ಲಿ ತಳಮಳವನ್ನುಂಟು ಮಾಡಿದ್ದಿತು.
ಹರಿದಾಸ ವಿಹಾರಿದಾಸ ದೇಸಾಯಿಗಳು ಸಂನ್ಯಾಸಿ ಬಹಳ ದಿನ ಅಮೆರಿಕದಲ್ಲಿ ಇರುವ ಆವಶ್ಯಕತೆ ಏನಿದೆ? ನದಿಯಾದ್’ನವರಾದ ಮಣಿಲಾಲ ದ್ವಿವೇದಿಯವರು ಕಳಿಸಿದ ಲೇಖನಕ್ಕೆ ಎಂತಹ ಪ್ರತಿಕ್ರಿಯೆ ಸಿಕ್ಕಿತು ಎಂದು ಕೇಳಿದ್ದರು. ಇದಕ್ಕೆ ಉತ್ತರ ನೀಡುತ್ತ ೧೫/೧೧/೧೮೯೪ ರಂದು ಹರಿದಾಸ ವಿಹಾರಿದಾಸ ದೇಸಾಯಿಯವರಿಗೆ ಬರೆದ ಪತ್ರದಲ್ಲಿ ‘…ಜಗತ್ತಿನ ದೇಶಗಳಿಗೆ ನಾವು ಅನಾಗರಿಕರಲ್ಲ ಎಂದು ತೋರಿಸಲು , ಧರ್ಮ ನಮ್ಮ ಮೂಲ ಸಂಪತ್ತು ಎಂದು ಸಾಧಿಸಲು ಅಮೆರಿಕದಲ್ಲಿರಬೇಕಾಗಿದೆ’ ಎನ್ನುತ್ತ ಮಣಿಲಾಲ ದ್ವಿವೇದಿಯವರ ಲೇಖನ ಬಹಳ ದೀರ್ಘವಾಗಿದ್ದರಿಂದ ಅದರ ಸ್ವಲ್ಪ ಭಾಗವನ್ನು ತೆಗೆದುಹಾಕಲಾಯಿತು ಎಂದು ತಿಳಿಸಿ ‘.ಧರ್ಮ ಸಂಸತ್ತಿನಲ್ಲಿ ನಾನು ಮಾತನಾಡಿದೆ. ಅದರ ಪರಿಣಾಮ ಏನೆನ್ನುವುದನ್ನು ಇಲ್ಲಿರುವ ಪತ್ರಿಕೆಗಳಿಂದ , ನಿಯತ ಕಾಲಿಕೆಗಳಿಂದ ಹೇಳಬಲ್ಲೆ. ಇದರಿಂದ ನಾನು ಜಂಬ ಪಡಬೇಕಾದುದಿಲ್ಲ. ಆದರೆ ನಿಮ್ಮ ಮೇಲಿನ ಪ್ರೀತಿಯಿಂದ ಮತ್ತಾವ ಭಾರತೀಯನೂ ಅಮೆರಿಕದಲ್ಲಿ ಇಂತಹ ಪರಿಣಾಮ ಉಂಟುಮಾಡಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಲ್ಲೆ......... ನ್ಯೂಯಾರ್ಕ್ ಕ್ರಿಟಿಕ್ ನನ್ನ ಬಗ್ಗೆ ಬರೆದುದನ್ನು ಇಲ್ಲಿ ಉದ್ಧರಿಸುತ್ತೇನೆ. “ವಿವೇಕಾನಂದ ಯಾವುದೇ ಸಂಶಯವಿಲ್ಲದೆ ಧರ್ಮ ಸಂಸತ್ತಿನಲ್ಲಿಯೇ ಮಹೋನ್ನತ ವ್ಯಕ್ತಿ. ಆತನ ಮಾತುಗಳನ್ನು ಕೇಳಿದ ನಂತರ ಇಂತಹ ತಿಳಿದ ದೇಶಕ್ಕೆ ಮಿಷನರಿಗಳನ್ನು ಕಳಿಸುವುದು ಎಷ್ಟು ಮೂರ್ಖತನ ಎಂದು ನಮಗೆ ಎನಿಸುತ್ತದೆ’ ( ಹೆರಾಲ್ಡ್ ಇಲ್ಲಿಯ ಅತಿ ಮುಖ್ಯವಾದ ಪತ್ರಿಕೆ) …’ದಯವಿಟ್ಟು ಇದನ್ನು ಪ್ರಕಟಿಸಬೇಡಿ. ನಾನು ಭರತಖಂಡದಲ್ಲಿ ಇದ್ದಂತೆಯೇ ಇಲ್ಲಿಯೂ ಕೀರ್ತಿಯನ್ನು , ಪ್ರಖ್ಯಾತಿಯನ್ನು ದ್ವೇಷಿಸುತ್ತೇನೆ….’ ಆತ್ಮ ಪ್ರಶಂಸೆಯಿಂದ ಕೂಡಿದ್ದ ಈ ಹೇಳಿಕೆಗಳು ಸ್ವಾಮಿಗಳು ದೂರದಲ್ಲಿದ್ದ ಹರಿದಾಸ ವಿಹಾರಿದಾಸ ದೇಸಾಯಿಗಳನ್ನು ಬೆರಗಾಗಿಸುವ ತಂತ್ರವಾಗಿದ್ದವು. ಸ್ವಾಮಿಗಳು ತಮ್ಮನ್ನು ಹೊಗಳಿಕೊಂಡು ಪತ್ರ ಬರೆದಾಗ ಅದು ನಮ್ಮಿಬ್ಬರ ನಡುವೆ ಇರಲಿ , ಮೂರನೆಯವರಿಗೆ ಗೊತ್ತಾಗುವುದು ಬೇಡ ಎಂದು ಜಾನ್ ಹೆನ್ರಿ ರೈಟ್ , ಶ್ರೀಮತಿ ಹೇಲ್ ಮತ್ತು ಅಳಸಿಂಗ ಪೆರುಮಾಳ್’ಗೆ ತಿಳಿಸಿದ್ದರು. ಇದರಿಂದ ತಮ್ಮ ಬಗ್ಗೆ ಪತ್ರ ಪಡೆದವರು ವಿಶ್ವಾಸ ತಳೆಯಬೇಕು , ಅದೇ ವೇಳೆಗೆ ಅದು ಬೇರೆಯವರಿಗೆ ಗೊತ್ತಾಗಿ ಪ್ರಶ್ನಾರ್ಹವಾಗಬಾರದೆನ್ನುವ ಮುಂದಾಲೋಚನೆಯಿದ್ದಿತು.
ಸ್ವಾಮಿಗಳು ಈ ಹಿಂದೆ ಹರಿದಾಸರಿಗೆ ಮೂರು ಪತ್ರಗಳನ್ನು ಬರೆದಿದ್ದರು ( ೨೯/೧, ೨೦/೬, ೧/೯/೧೮೯೪) . ಮೊದಲನೆಯ ಪತ್ರದಲ್ಲಿ ತಮ್ಮ ತಾಯಿಯನ್ನು ಕಂಡು ಬಂದಿದ್ದಕ್ಕೆ ಕೃತಜ್ಞತೆ , ಎರಡನೆಯದರಲ್ಲಿ ತಮ್ಮನ್ನು ಬೆಂಬಲಿಸದಿದ್ದಕ್ಕೆ ಹೀಯಾಳಿಕೆ ಮತ್ತು ಮೂರನೆಯದರಲ್ಲಿ ತಮ್ಮನ್ನು ಬೆಂಬಲಿಸಿದ್ದಕ್ಕೆ ಮೆಚ್ಚುಗೆ ಸೂಚಿಸಿದ್ದರು. ಈ ಯಾವ ಪತ್ರಗಳಲ್ಲಿಯೂ ಭಾರತದಿಂದ ಧರ್ಮ ಸಂಸತ್ತಿಗೆ ಹೋಗಿದ್ದ ಯಾವ ಪ್ರತಿನಿಧಿಯ ಬಗ್ಗೆಯೂ ಒಂದೂ ಮಾತನ್ನು ಮಾಹಿತಿಗಾಗಿಯಾದರೂ ಕೂಡ ಹೇಳಿರಲಿಲ್ಲ. ಹರಿದಾಸ ವಿಹಾರಿದಾಸ ದೇಸಾಯಿ ಮತ್ತು ಮಣಿಲಾಲ ದ್ವಿವೇದಿ ಇಬ್ಬರೂ ನಾದಿಯಾದ್ ಪ್ರದೇಶದವರು. ಆದ್ದರಿಂದ ದೇಸಾಯಿಯವರು, ಧರ್ಮ ಸಂಸತ್ತಿನಲ್ಲಿ ಮಣಿಲಾಲ ದ್ವಿವೇದಿಯವರು ಪ್ರಬಂಧ ಹೇಗೆ ಸ್ವೀಕರಿಸಲ್ಪಟ್ಟಿತೆಂದು ಕೇಳಿದ್ದರು. (೨೬/೪/೧೮೯೨ ರಲ್ಲಿ ಬರೋಡಾದಲ್ಲಿ ಸ್ವಾಮಿಗಳು ಮಣಿಲಾಲ ದ್ವಿವೇದಿಯನ್ನು ಭೇಟಿ ಮಾಡಿದ್ದರು). ಅವರ ಬಗ್ಗೆ ದಿ ನ್ಯೂಯಾರ್ಕ್ ಹೆರಾಲ್ಡ್ (೧೨/೯/೧೮೯೩) ಮತ್ತು ಷಿಕಾಗೊ ಇಂಟರ್ ಓಷನ್’ಗಳಲ್ಲಿ (೧೩/೯/೧೮೯೩) ಬಂದಿದ್ದ ಮೆಚ್ಚುಗೆಯನ್ನಾಗಲಿ , ಷಿಕಾಗೊ ಹೆರಾಲ್ಡ್ ( ೧೩/೯/೧೮೯೩) ಪ್ರಕಟಿಸಿದ್ದ ಚಿತ್ರಗಳ ಬಗ್ಗೆಯಾಗಲಿ ಸ್ವಾಮಿಗಳು ಏನನ್ನೂ ಹೇಳದೆ ತಮ್ಮನ್ನು ಹೊಗಳಿರುವ ಹೆರಾಲ್ಡ್ ಪತ್ರಿಕೆಯ ಹೇಳಿಕೆಯನ್ನು ಉದ್ಧರಿಸಿದರು. ತಮಗೆ ಸಂಬಂಧಿಸಿದ ತಾವೇ ತಿದ್ದುಪಡಿ ಮಾಡಿದ ‘ನ್ಯೂಯಾರ್ಕ್ ಕ್ರಿಟಿಕ್’ ಮತ್ತು ‘ನ್ಯೂಯಾರ್ಕ್ ಹೆರಾಲ್ಡ್ ‘ ಸುದ್ದಿಗಳನ್ನು ಕಳಿಸಲು ಮರೆಯಲಿಲ್ಲ. ಸ್ಥಳೀಯ ಪತ್ರಿಕೆಗಳು ಮಣಿಲಾಲ ದ್ವಿವೇದಿಯವರ ಪ್ರಬಂಧದ ಬಗ್ಗೆ ಒಳ್ಳೆಯ ಅಭಿಪ್ರಾಯ ಸೂಚಿಸಿ ಬರೆದಿದ್ದವು. ಅದನ್ನು ತಿಳಿಸುವುದಾಗಲಿ ಅಥವಾ ಆ ಪತ್ರಿಕೆಯ ತುಣುಕುಗಳನ್ನು ಕಳಿಸುವುದಾಗಲಿ ಮಾಡಲಿಲ್ಲ. ಹೆರಾಲ್ಡ್ ಹೆಸರಿನ ಯಾವ ಪತ್ರಿಕೆಯೂ ಅಸ್ತಿತ್ವದಲ್ಲಿ ಇರಲಿಲ್ಲ. ಇದೇ ಪತ್ರದಲ್ಲಿ (೧೫/೧೧/೧೮೯೪) ‘ ಈ ಪತ್ರವನ್ನು ಪ್ರಕಟಿಸಬೇಡಿ. ಭಾರತದಲ್ಲಿದ್ದಂತೆ ನಾನು ಈಗಲೂ ಕೀರ್ತಿ ದ್ವೇಷಿ ಎಂದಿದ್ದಾರೆ. ಇದಾದ ಹನ್ನೆರಡೇ ದಿನಗಳ ನಂತರ ‘ ಮದ್ರಾಸಿನ ಜನ ನನಗೆ ಅರ್ಪಿಸಿದ ಗೊತ್ತುವಳಿಗೆ ಉತ್ತರ ಸಿದ್ಧಪಡಿಸುತ್ತಿದ್ದೇನೆ. ಅದನ್ನು ಇಲ್ಲಿಯ ಪತ್ರಿಕೆಗಳು ಪ್ರಸಿದ್ಧಪಡಿಸಿವೆ. ಅಗ್ಗದಲ್ಲಿ ಆಗುವುದಾದರೆ ಅದನ್ನು ಮುದ್ರಿಸಿ , ತುಟ್ಟಿಯಾದರೆ ಒಂದು ಪ್ರತಿಯನ್ನು ಟೈಪ್ ಮಾಡಿಸಿ ನಿನಗೂ ಒಂದು ಪ್ರತಿ ಕಳಿಸುತ್ತೇನೆ. ಅದನ್ನು ‘ದಿ ಇಂಡಿಯನ್ ಮಿರರ್’ನಲ್ಲಿ ಪ್ರಚಾರಪಡಿಸು ‘ ಹಂಬಲಿಕೆಯನ್ನು ವ್ಯಕ್ತಪಡಿಸುತ್ತ ಕೀರ್ತಿದ್ವೇಷಿ ಸ್ವಾಮಿಗಳು ರಾಮಕೃಷ್ಣಾನಂದರಿಗೆ ಪತ್ರ ಬರೆದಿದ್ದಾರೆ. (೨೫/೯/೧೮೯೪) .
ಸ್ವಾಮಿಗಳ ಆದೇಶದಂತೆ ಮದ್ರಾಸ್ , ಕಲ್ಕತ್ತದ ಗೊತ್ತುವಳಿ ಮತ್ತು ಅವನ್ನು ಕುರಿತಾಗಿ ಭಾರತದ ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಶಿಷ್ಯರು , ಗುರುಭಾಯಿಗಳು ಭಾರಿ ಕಂತೆಗಳಲ್ಲಿ ಅಮೆರಿಕಕ್ಕೆ ಕಳಿಸತೊಡಗಿದರು. ಈ ಕೆಲಸ ಮದ್ರಾಸ್ ಮತ್ತು ಕಲ್ಕತ್ತ ಎರಡೂ ಕಡೆಯಿಂದ ನಡೆಯುತ್ತಿರುವಂತಿದೆ. ಗೊತ್ತುವಳಿಗಳ ಮೂಲಕ ಸ್ವಾಮಿಗಳು ಭಾರತ ಮತ್ತು ಅಮೆರಿಕದಲ್ಲಿ ಮತ್ತೆ ಬೆಳಕಿಗೆ ಬಂದಿದ್ದರು. ಭಾರತದ ಶಿಷ್ಯರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರ ಫಲ ಬೇಕಾದ ರೂಪದಲ್ಲಿ ದಕ್ಕಿದ್ದಿತು. ಹೀಗಾಗಿ ‘….ಭಾರತದಿಂದ ಗಾಡಿಗಟ್ಟಲೆ ಪತ್ರಿಕೆಯ ಹೊರೆ ಬಂದು ನನಗೆ ಬೇಸರವಾಯಿತು. ಮದರ್ ಚರ್ಚ್’ಗೆ (ಶ್ರೀಮತಿ ಜಾರ್ಜ್ ಹೇಲ್) ಒಂದು ಹೊರೆ, ಶ್ರೀಮತಿ ಗರ್ನ್ಸೆಗೆ ಒಂದು ಹೊರೆ ಕಳಿಸಿದ ನಂತರ ಇನ್ನು ಮೇಲೆ ಪತ್ರಿಕೆಗಳನ್ನು ಕಳಿಸಬೇಡಿ ಎಂದು ತಿಳಿಸಿದ್ದೇನೆ. ಭರತಖಂಡದಲ್ಲಿ ನನಗೆ ಬೇಕಾದಷ್ಟು ಕೀರ್ತಿ ಬಂದಾಯಿತು. ಈಗ ಅಲ್ಲಿ ಪ್ರತಿ ಹಳ್ಳಿಯಲ್ಲಿ ನನ್ನ ವಿಷಯ ತಿಳಿದಿದೆ ಎಂದು ಅಳಸಿಂಗ ಬರೆಯುತ್ತಾನೆ. …ಈ ಭಾರತದ ಪತ್ರಿಕೆಗಳು ನನಗೆ ಮೃತ್ಯುಪ್ರಾಯವಾಗುವುದರಲ್ಲಿ ಸಂದೇಹವಿಲ್ಲ. ಇನ್ನು ಮೇಲೆ ನಾನು ಸೀನಿದ್ದು , ಉಂಡಿದ್ದು ಎಲ್ಲ ಬರೆಯುವುವು. ದೇವರು ಅವರನ್ನು ಆಶೀರ್ವರ್ದಿಸಲಿ. ಇದೆಲ್ಲಾ ನನ್ನ ಹುಚ್ಚುತನ. ಯಾರಿಗೂ ಗೊತ್ತಾಗದಂತೆ ನಾನು ಇಲ್ಲಿ ಸ್ವಲ್ಪ ಹಣ ಸಂಗ್ರಹಿಸಿಕೊಂಡು ಹೋಗಲು ಬಂದೆ. ಬಲೆಗೆ ಬಿದ್ದೆ. ಇನ್ನ್ನು ಮೇಲೆ ಅಜ್ಞಾತವಾಸವೆಲ್ಲ ಕೊನೆಗೊಂಡಿತು’ ಎಂದು ಮೇರಿ ಹೇಲ್ ಮುಂದೆ ಚಡಪಡಿಸಿದರು. (೧/೧೧/೧೮೯೪). ಅಭೇದಾನಂದರಿಗೆ ‘ಇನ್ನು ಮಂದೆ ಕಂತೆ , ಕಂತೆ ಪತ್ರಿಕೆಗಳನ್ನು ಕಳಿಸಬೇಡ’ , ಶಿವಾನಂದರಿಗೆ ‘ ಅತಿಯಾದರೆ ಎಲ್ಲವದೂ ಕೆಟ್ಟದ್ದೇ. ಪತ್ರಿಕೆಗಳ ಹೊಗಳಿಕೆಯಿಂದ ನಾನೇನೋ ಖ್ಯಾತನಾಗಿರುವೆನು. ಅದರೆ ಪರಿಣಾಮ ಇಲ್ಲಿಗಿಂತ ಭಾರತದಲ್ಲಿ ಹೆಚ್ಚು. ಯಾವಾಗಲೂ ಹೊಗಳುತ್ತಿದ್ದರೆ ಉನ್ನತ ವರ್ಗದಲ್ಲಿ ಒಂದು ಬಗೆಯ ಜುಗಪ್ಸೆ ಹುಟ್ಟುತ್ತದೆ, ಆದ್ದರಿಂದ ಅದು ಇಲ್ಲಿಗೆ ಸಾಕು ‘ ಎಂದು ತಾಕೀತು ಮಾಡಿದರು. (?/೧೨/೧೮೯೪) ,
ಸ್ವಾಮಿಗಳು ತಮ್ಮ ಪರವಾಗಿ ಗೊತ್ತುವಳಿಗಳನ್ನು ಪಡೆಯಲು ಏಕೆ ಅಷ್ಟು ಕಾತರರಾಗಿದ್ದರು ? ಅಮೆರಿಕದ ಪಾದ್ರಿಗಳು , ಬ್ರಾಹ್ಮ ಸಮಾಜಿಗಳು , ಥಿಯೋಸೊಫಿಸ್ಟರು ಅವರ ವಿರುದ್ಧ ಸಂಚು ಹೂಡಿದ್ದರೆ ? ಹಾಗೆ ಹೂಡಿರುವುದುಕ್ಕೆ ಈವರೆಗೆ ಯಾರೂ ಒಂದೇ ಒಂದು ಪುರಾವೆಯನ್ನು ಮುಂದಿರಿಸಿಲ್ಲ. ಸ್ವಾಮಿಗಳು ಧರ್ಮಪಾಲ (?/?/೧೮೯೪) , ಅಳಸಿಂಗ ಪೆರುಮಾಳ್ (೨೭/೯/೧೮೯೪) ಇವರಿಗೆ ಬರೆದ ಪತ್ರಗಳಿಂದ , ಅಯೋವಾ ರಿಜಿಸ್ಟರ್’ನಂತಹ ಅಮೆರಿಕ ಪತ್ರಿಕೆಗಳ ವರದಿಯಿಂದ ಉದಾರವಾದಿ ಕ್ರೈಸ್ತರು , ಪಾದ್ರಿಗಳು , ಚರ್ಚ್’ಗಳು ಸ್ವಾಮಿಗಳ ಪರ ನಿಂತಿರುವುದು ಸ್ಪಷ್ಟವಾಗುತ್ತದೆ. ಸ್ವಾಮಿಗಳು ಭಾರತದ ಸಂಘ , ಸಂಸ್ಥೆಗಳಿಂದ ಪ್ರತಿನಿಧಿಸಲ್ಪಟ್ಟಿಲ್ಲ ಎಂದು ಅಮೆರಿಕದ ಜನ ತಿರಸ್ಕರಿಸಿದ್ದರೇ ? ಅದು ಸಾದ್ಯವಿಲ್ಲ. ಏಕೆಂದರೆ ಸ್ವಾಮಿಗಳು ೧೮೯೩ ಸೆಪ್ಟೆಂಬರ್’ನಿಂದ ೧೮೯೪ ರ ಡಿಸೆಂಬರ್ ವೇಳೆಗೆ ೨೮ ಸಾರ್ವಜನಿಕ , ೧೬ ಪಡಸಾಲೆ , ೧೯ ಚರ್ಚ್ ಮತ್ತು ೨೯ ಕೂಟ ಹೀಗೆ ಆವರೆಗೆ ಅಮೆರಿಕದಲ್ಲಿದ್ದ ೫೨೫ ದಿನಗಳಲ್ಲಿ ಒಟ್ಟು ೯೨ ಭಾಷಣಗಳನ್ನು , ಎಂದರೆ ಸರಾಸರಿ ಆರು ದಿನಕ್ಕೆ ಒಂದರಂತೆ ಭಾಷಣಗಳನ್ನು ಮಾಡಿದ್ದರು. ವಿದೇಶಿ ನೆಲದಲ್ಲಿ ಸಾಂಘಿಕ ವಿರೋಧವಿದ್ದರೆ ಇಷ್ಟೊಂದು ಭಾಷಣಗಳನ್ನು ಮಾಡಲು ಸಾದ್ಯವೇ ಇಲ್ಲ. ಸ್ವಾಮಿಗಳ ಭಾಷಣಗಳಿಗೆ ಬಹುತೇಕ ವೇಳೆ ಜನ ಸ್ಪಷ್ಟತೆಯನ್ನು ಬಯಸಿ ಪ್ರಶ್ನಿಸುತ್ತಿದ್ದರು. ಅದನ್ನು ವಿರೋಧ ಎನ್ನುವಂತಿಲ್ಲ. ಯಾರಾದರೂ , ಎಲ್ಲಿಯಾದರೂ ಎಂದಾದರೂ ವ್ಯಕ್ತಿ ಅಥವಾ ಸಂಘ , ಸಂಸ್ಥೆಯ ರೂಪದಲ್ಲಿ ಸ್ವಾಮಿಗಳ ಭಾಷಣಕ್ಕೆ ಅಡ್ಡಿ ಪಡಿಸಿದ್ದಕ್ಕೂ ಯಾವುದೇ ಸಾಕ್ಷ್ಯಾದಾರಗಳಿಲ್ಲ. ಸ್ವಾಮಿಗಳ ದೀರ್ಘ ಭಾಷಣಗಳನ್ನು ಪ್ರಕಟಿಸಿದ ಪತ್ರಿಕೆಗಳು ಅಂತಹ ಘಟನೆಯನ್ನು ತಿಳಿಸದೆ ಬಿಡುತ್ತಿರಲಿಲ್ಲ. ಹಾಗಾದರೆ ಸ್ವಾಮಿಗಳು ಏಕೆ ಗೊತ್ತುವಳಿಗಳನ್ನು ಬಯಸಿದ್ದರು ? ತಮ್ಮ ಜೀವನ ಶೈಲಿಯನ್ನು ಕುರಿತಾಗಿ ಮಾಡಿದ ಟೀಕೆಗಳನ್ನು ಆತ್ಮ ವಿಮರ್ಶೆಯ ಮೂಲಕ ತಿದ್ದಿಕೊಳ್ಳುವುದು ಅವರಿಗೆ ಬೇಕಿರಲಿಲ್ಲ. ಭಾರತದಲ್ಲಿದ್ದ ಶಿಷ್ಯ , ಗುರುಭಾಯಿ ಮತ್ತು ದೇಶ ಬಾಂಧವರಿಗೆ ಸ್ವಾಮಿಗಳು ಏಕಾಂಗಿಯಾಗಿ ವಿದೇಶಿ ನೆಲದಲ್ಲಿ ಹೋರಾಡುತ್ತಿರುವರೆನ್ನುವ ನಂಬಿಕೆ ಹುಟ್ಟಿಸಿದ್ದರು. ಅದರ ಮುಂದುವರಿಕೆಯಾಗಿ ಗೊತ್ತುವಳಿಗಳು ಬೇಕಾಗಿದ್ದವು. ಅಮೆರಿಕದಲ್ಲಿ ಪ್ರಚಾರವೂ ಬೇಕಾಗಿದ್ದಿತು. ಅದು ಸಾಧನೆಯಾದ ನಂತರ ಪತ್ರಿಕೆ ಪ್ರಚಾರ , ಸುದ್ದಿಗಳನ್ನು ಜುಗುಪ್ಸೆಯಿಂದ ನೋಡುತ್ತಿದ್ದಾರೆ ಎನ್ನುವಂತೆ ವರ್ತಿಸಿದರು.
ಸ್ವಾಮಿಗಳ ಗೊತ್ತುವಳಿಯ ಗುರಿಯನ್ನು ಅವರ ಬಾಯಿಂದಲೇ ಕೇಳಬಹುದು. ‘ಭಾರತದಲ್ಲಿ ಪ್ರಚಾರವಾಗುತ್ತಿರುವ ವಿಷಯಗಳನ್ನು ಇಲ್ಲಿಗೆ ಕಳಿಸಿದರೆ ಬುಟ್ಟಿಗೆ ಎಸೆಯುತ್ತೇನೆ. ನಮ್ಮ ಕೆಲಸಕ್ಕೆ ಕೊಂಚ ಉರುಬು ಬೇಕಾಗಿದ್ದಿತು. ಅದು ಈಗ ಸಾಕಷ್ಟು ಸಿಕ್ಕಿದೆ. (ಆದ್ದರಿಂದ) ಜನರು ನನ್ನ ಬಗ್ಗೆ ಹೇಳುವ ಒಳ್ಳೆಯ ಅಥವಾ ಕೆಟ್ಟ ವಿಷಯಗಳಿಗೆ ಗಮನ ಕೊಡಬೇಡ. …..ಇಲ್ಲಿನ ಜನ ಪ್ರತಿದಿನ ನನ್ನನ್ನು ಮೆಚ್ಚುತ್ತಿರುವರು. ಈ ವಿಷಯ ನಮ್ಮಿಬ್ಬರ ನಡುವಿರಲಿ. ಇಲ್ಲಿ ನನ್ನ ಪ್ರಭಾವ ಎಷ್ಟಿದೆಯೆಂದು ನೀನು ಊಹಿಸಲೂ ಸಾದ್ಯವಿಲ್ಲ. ..ಹಿಂದೆಯೂ ಬರೆದಿದ್ದೆ ಮತ್ತು ಈಗಲೂ ಬರೆಯುತ್ತಿದ್ದೇನೆ. ಪತ್ರಿಕೆಗಳಲ್ಲಿ ಬರುವ ಹೊಗಳಿಕೆ , ತೆಗಳಿಕೆಗಳಿಗೆ ನಾನು ಬೆಲೆ ಕೊಡುವುದಿಲ್ಲ. ಅವೆಲ್ಲವನ್ನೂ ಬೆಂಕಿಗೆ ಹಾಕುತ್ತೇನೆ. ( ೨೬/೧೨/೧೮೯೪-ಅಳಸಿಂಗ ಪೆರುಮಾಳ್) . ಬೋಸ್ಟನ್ ನಗರವನ್ನು ಅಮೆರಿಕದ ಮಿದುಳೆಂತಲೂ , ನ್ಯೂಯಾರ್ಕ್ ನಗರವನ್ನು ಹಣದ ಥೈಲಿಯೆಂತಲೂ ಕರೆಯಬಹುದು. ಈ ಎರಡು ನಗರಗಳಲ್ಲಿ ನಾನು ಸಾಧಾರಣಕ್ಕಿಂತ ಹೆಚ್ಚಿನ ಜಯ ಸಾಧಿಸಿದ್ದೇನೆ. ನೀವು ನನ್ನಿಂದ ಪತ್ರಿಕೆಗಳ ವರದಿಯನ್ನು ನಿರೀಕ್ಷಿಸಬೇಡಿ. ಕೆಲಸದ ಆರಂಭದಲ್ಲಿ ಇಂತಹ ಒಂದು ಗದ್ದಲದ ಆವಶ್ಯಕತೆಯಿತ್ತು. ಅದರಿಂದ ನಮಗೆ ಬೇಕಾದುದಕ್ಕಿಂತ ಹೆಚ್ಚೇ ಪಡೆದದ್ದಾಯಿತು. ಎಲ್ಲ ವೃತ್ತ ಪತ್ರಿಕೆಗಳು ಹೊಗಳುತ್ತಿರುವುದಕ್ಕಿಂತ ನನ್ನ ಪ್ರಭಾವ ಹೆಚ್ಚಿನದು-ಯಾರಿಂದಲೂ ನನ್ನ ದೇಹದ ಒಂದು ಕೂದಲನ್ನು ಕೊಂಕಿಸಲೂ ಆಗುವುದಿಲ್ಲ’’ (೧೧/೧/೧೮೯೫-ಜಿ.ಜಿ ನರಸಿಂಹಾಚಾರಿ). ಭಾರತದಿಂದ ಕಳಿಸಿರುವ ಕೃತಜ್ಞತೆಯ ಪತ್ರಕ್ಕೆ ಡಾಕ್ಟರ್ ಬರೋಸ್ ನೀಡಿದ್ದ ಸಂಕ್ಷಿಪ್ತ ಉತ್ತರವನ್ನು ಪ್ರಕಟಸಿದ್ದ ಪತ್ರಿಕೆಯೊಂದನ್ನು ಭಾರತದಿಂದ ತರಿಸಿದ್ದೇನೆ. ಶ್ರೀಮತಿ ಥರ್ಸ್’ಬಿ ಅದನ್ನು ನಿಮಗೆ ಕಳಿಸುವರು. ನಿನ್ನೆ ಭಾರತದಿಂದ ಬಂದ ಮತ್ತೊಂದು ಪತ್ರದಲ್ಲಿ ಮದ್ರಾಸ್ ಸಭೆಯ ಅಧ್ಯಕ್ಷರು ಅಮೆರಿಕನ್ನರಿಗೆ ವಂದನೆಗಳನ್ನರ್ಪಿಸಿ, ನನಗೆ ಒಂದು ಗೊತ್ತುವಳಿ ಕಳಿಸುವಂತೆ ಬರೆದಿರುವರು. ಇವರು ಮದ್ರಾಸಿನ ಒಬ್ಬ ಮುಖ್ಯ ವ್ಯಕ್ತಿ ಮತ್ತ ಭಾರತದ ಅತ್ಯಂತ ಉಚ್ಛ ಪದವಿಯಾದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು’ (೭/೫/೧೮೯೫-ಸಾರಾ ಬುಲ್). ಹೀಗೆ ಸ್ವಾಮಿಗಳು ತಮ್ಮ ಪರವಾಗಿ ಭಾರತದಿಂದ ಗೊತ್ತುವಳಿಗಳನ್ನು ಪಡೆದುಕೊಂಡು ಅವುಗಳನ್ನು ಅಮೆರಿಕ ಪತ್ರಿಕೆಗಳಲ್ಲಿ , ಅವು ಅಮೆರಿಕ ಪತ್ರಿಕೆಗಳಲ್ಲಿ ಬಂದಿವೆಯೆಂದು ಭಾರತದ ಪತ್ರಿಕೆಗಳಲ್ಲಿ ಸುದ್ದಿಗಳನ್ನು ಹಬ್ಬಿಸುವಲ್ಲಿ ಯಶಸ್ವಿಗಳಾದರು.
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಗವಹಿಸಲು ಭಾರತದಿಂದ ಹೋದ ೨೦ ಜನರಲ್ಲಿ ನಾಲ್ವರು (ಪ್ರತಾಪಚಂದ್ರ ಮಜುಂದಾರ, ಬಲವಂತ ಬಾಹು ನಗರ್ಕರ್ , ಜ್ಞಾನೇಂದ್ರ ಚಕ್ರವರ್ತಿ , ಹೇವಿರತ್ನೆ ಧರ್ಮಪಾಲ) , ಸ್ವಾಮಿಗಳಿಗಿಂತ ಹೆಚ್ಚಲ್ಲದಿದ್ದರೂ ಸರಿಸಮಾನವಾಗಿ ಜನರನ್ನು ಸೆಳೆದದ್ದರು. ಹೀಗಿದ್ದರೂ ಭಾರತದಲ್ಲಿ ವಿಶ್ವ ಧರ್ಮ ಸಂಸತ್ತು ಎಂದರೆ ಸ್ವಾಮಿ ವಿವೇಕಾನಂದ ಎನ್ನುವ ಒಂದೇ ಹೆಸರು ಏಕೆ ಕಾಣುತ್ತದೆ ಎನ್ನುವ ಗುಟ್ಟನ್ನು ಸ್ವಾಮಿಗಳು ಬರೆದ ಪತ್ರಗಳಿಂದ ಬಿಡಿಸುವುದು ಸಾದ್ಯ. ಸ್ವಾಮಿಗಳು ಭಾರತದಲ್ಲಿ ತಮ್ಮ ಪರವಾಗಿ ಗೊತ್ತುವಳಿಗಳನ್ನು (Resolutions) ಅಂಗೀಕರಿಸುವ ಯೋಜನೆಯ ಹಿನ್ನೆಲೆ , ಅದನ್ನು ಕಾರ್ಯಗತಗೊಳಿಸಲು ಹೆಣೆದ ತಂತ್ರ , ಉಪಾಯವಾಗಿ ಮಾಡಿಕೊಂಡ ಸ್ವಪ್ರಚಾರದ ಘಟನೆಗಳ ಸರಣಿ ಮುಂದಿದೆ.
ವಿಶ್ವ ಧರ್ಮ ಸಂಸತ್ತಿಗೆ ಹೋದ ಸಂನ್ಯಾಸಿ ಭೋಗ ಭೂಮಿಯಾದ ಅಮೆರಿಕದಲ್ಲಿ ಬಹು ದೀರ್ಘ ಕಾಲ ಏಕಿರಬೇಕು ಎನ್ನುವ ಪ್ರಶ್ನೆ ಸ್ವಾಮಿಗಳ ಪರಿಚಿತರಲ್ಲಿ , ಬೆಂಬಲಿಗ , ಅನುಯಾಯಿಗಳಲ್ಲಿ ಮೂಡಿದ್ದಿತು. ಗುರುಭಾಯಿಗಳಲ್ಲಿ ಕೆಲವರಿಗೆ ಸ್ವಾಮಿಗಳು ಅಮೆರಿಕದಲ್ಲಿ ಉಳಿದಿರುವ ಉದ್ದೇಶವೇ ಸ್ಪಷ್ಟವಾಗಿರಲಿಲ್ಲ. ಸ್ವಾಮಿಗಳು ಅಮೆರಿಕ ಹೆಂಗಸರನ್ನು ಹೊಗಳಿ ಬರೆದಿದ್ದ ಪತ್ರಗಳು ಕಿವಿಯಿಂದ ಕಿವಿಗೆ ಹರಡಿದ್ದವು. ಕಲ್ಕತ್ತೆಗೆ ಮರಳಿದ್ದ ಪ್ರತಾಪಚಂದ್ರ ಮಜುಂದಾರ ಅಮೆರಿಕದಲ್ಲಿ ಸ್ವಾಮಿಗಳು ನಡೆಸುತ್ತಿರುವ ಜೀವನ ಭಾರತದ ಸಾಂಪ್ರದಾಯಿಕ ಸಂನ್ಯಾಸಿಯಂತಿಲ್ಲ ಎಂದು ಸ್ಪಷ್ಟವಾಗಿಯೇ ತಿಳಿಸಿದ್ದರು. ಅಮೆರಿಕದ ಲೌಕಿಕ ಮತ್ತು ಸಾಮಾಜಿಕ ಸಾಧನೆಗಳ ಮುಂದೆ ಭಾರತ ಸೊಲ್ಲೆತ್ತುವಂತಿರಲಿಲ್ಲ. ಭಾರತ ಸುತ್ತಿ ಬಂದಿದ್ದ ಅದರ ಬಗ್ಗೆ ಗೊತ್ತಿದ್ದ ಕೆಲ ಮಿಷನರಿಗಳು ಸ್ವಾಮಿಗಳು ಭಾಷಣಗಳಲ್ಲಿ ಅಮೆರಿಕದ ಕೇಳುಗರಿಗೆ ಹೇಳುತ್ತಿರುವುದು ವಾಸ್ತವ ಸ್ಥಿತಿಗೆ ಹೊಂದಾಣಿಕೆಯೇ ಆಗುತ್ತಿಲ್ಲ ಎಂದು ಎತ್ತಿ ತೋರಿಸುತ್ತಿದ್ದರು. ಅಮೆರಿಕರನ್ನು , ಕ್ರೈಸ್ತರನ್ನು ಅವರ ತತ್ತ್ವ , ವಿಚಾರಗಳನ್ನು , ಆಚಾರ ,ರೂಢಿಗಳನ್ನು ನೆರೆದಿದ್ದ ಸಭಿಕರೆದುರು ಎತ್ತಿ ಆಡಿಕೊಳ್ಳುತ್ತಿದ್ದ ಸ್ವಾಮಿಗಳಿಗೆ ಕ್ರೈಸ್ತ ಮಿಷನರಿಗಳು ಹಿಂದೂ ಸಾಮಾಜಿಕ ದುಸ್ಥಿತಿಯನ್ನು ಎತ್ತಿ ತೋರಿಸಿದಾಗ ಅದನ್ನು ಒಪ್ಪಿಕೊಳ್ಳುವ ಔದಾರ್ಯವಿರುತ್ತಿರಲಿಲ್ಲ. ಅದರ ಬದಲು ನೀವು ಹಣದ ದಾಸರು , ನಾವು ಅಧ್ಯಾತ್ಮ ಸಾಧಕರು ಎಂದು ಅಬ್ಬರಿಸಿ ಅವರ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದರು.
ಸ್ವಾಮಿಗಳು ಅಮೆರಿಕದಲ್ಲಿ ಭಾಷಣ ಮಾಡುತ್ತ ಸಂಚರಿಸುತ್ತಿದ್ದ ಕಾಲದಲ್ಲಿಯೇ ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ಭಾರತೀಯರಲ್ಲಿ ಪ್ರತಾಪಚಂದ್ರ ಮಜುಂದಾರ , ಬಲವಂತ ಬಾಹು ನಗರ್ಕರ್ , ಜಿಯಾನೆ ಸೊರಾಬ್ಜಿ. ವೀರಚಂದ ಗಾಂಧಿ ಸಾಕಷ್ಟು ಕಾಲ ಅಲ್ಲಿಯೇ ಉಳಿದಿದ್ದರು. ಅಯೋವಾ ಸ್ಟೇಟ್ ರಿಜಿಸ್ಟರ್ ಪತ್ರಿಕೆ ಡೆಸ್ ಮೊಯಿನ್ಸ್’ನಲ್ಲಿ ಸ್ವಾಮಿಗಳಿಗಿಂತ ಮೊದಲೇ ಬಲವಂತ ಬಾಹು ನಗರ್ಕರ್ ಉತ್ತಮ ಉಪನ್ಯಾಸಗಳನ್ನು ನೀಡಿ ಸ್ವಾಮಿಗಳಿಗೆ ಬೇಕಾದ ಸಜ್ಜಿಕೆಯನ್ನು ಸಿದ್ಧಪಡಿಸಿದ್ದಾರೆ ಎಂದು ಬರೆದಿದ್ದಿತು.( ೧/೧೨/೧೮೯೩). ಸ್ವಾಮಿಗಳಂತೆಯೇ ಪ್ರತಾಪಚಂದ್ರ ಮಜುಂದಾರರನ್ನು ಹಲವಾರು ಸಂಘ ಸಂಸ್ಥೆಗಳು ಭಾಷಣ ಮಾಡಲು ಕರೆಯುತ್ತಿದ್ದವು. ತಮ್ಮ ಯಶಸ್ಸನ್ನು ಕಂಡು ಪ್ರತಾಪಚಂದ್ರ ಮಜುಂದಾರ ಮತ್ತಿತರರು ಹೊಟ್ಟೆಕಿಚ್ಚಿನಿಂದ ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಸ್ವಾಮಿಗಳು ಬಲವಾಗಿ ನಂಬಿದ್ದರು.
ಪತ್ರಿಕೆಗಳಲ್ಲಿ ನನ್ನ ಬಗ್ಗೆ ಬಂದಿರುವ ಟೀಕೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದು ಹೆಚ್ಚು ಪ್ರಚಾರವಿಲ್ಲದ ಪತ್ರಿಕೆ. ಪೌರತ್ಯ ಭಾವನೆಗಳು ಇಲ್ಲಿ ಹಬ್ಬಿದ್ದರಿಂದ ಅವರ ಸುಖಕ್ಕೆ ಭಂಗ ಬಂದಿದೆ’ ಎಂದು ಶಿಷ್ಯರಿಗೆ ಬರೆದು ತಮ್ಮ ಜೀವನ ಶೈಲಿಯ ಬಗ್ಗೆ ಬಂದಿದ್ದ ಟೀಕೆಯನ್ನು ಸ್ವಾಮಿಗಳು ಹಿಂದಕ್ಕೆ ಸರಿಸಿದ್ದರು.(೨೪/೧/೧೮೯೪) , ಈ ಗುಲಾಮ ದೇಶದ (ಭಾರತ) ಪರಂಪರೆಯಲ್ಲಿ ಅಜ್ಞಾನ , ಜಾತೀಯತೆ , ಮೌಢ್ಯ ಮತ್ತು ಹೊಟ್ಟೆಕಿಚ್ಚು ಸೇರಿವೆ…. ಹೊಟ್ಟೆಕಿಚ್ಚು ಭಾರತದ ದೌರ್ಬಲ್ಯ ಎಂದು ಹರಿದಾಸ ವಿಹಾರಿದಾಸ ದೇಸಾಯಿಗಳಲ್ಲಿ ಗುಡುಗಿದ್ದರು. (೨೯/೧/೧೮೯೪) ಇನ್ನೂ ಮುಂದುವರೆದು ಅವರ ಮುಂದೆ ‘ಹೊಟ್ಟೆಕಿಚ್ಚು ಗುಲಾಮರ ಹುಟ್ಟುಗುಣ , ಅದೇ ಅವರನ್ನು ಗುಲಾಮಗಿರಿಯಲ್ಲಿಟ್ಟಿರುವುದು’ ಎಂದು ಘೋಷಿಸಿದ್ದರು. (?/೧೧/೧೮೯೪) , ನನ್ನ ಜನಪ್ರಿಯತೆಯಿಂದ ಮಜುಂದಾರರಿಗೆ ಹೊಟ್ಟೆಕಿಚ್ಚು ಉಂಟಾಗಿದೆ. ಇಲ್ಲಿನ ಪಾದ್ರಿಗಳು ನನ್ನನ್ನು ಮುಗಿಸಲು ಯತ್ನಿಸಿದರು. (೧೯/೩/೧೮೯೪-ರಾಮಕೃಷ್ಣಾನಂದ). ಕಾರ್ಯದರ್ಶಿಗಳು ಸ್ವದೇಶಕ್ಕೆ ಮರಳಲೇ ಬೇಕೆಂದು ಪತ್ರ ಬರೆದಿದ್ದಾರೆ. ..ಸಾಂಪ್ರದಾಯಿಕ ಪಾದ್ರಿಗಳು ವಿರೋಧವಾಗಿದ್ದಾರೆ. ಮಜುಂದಾರ್ ಪಾದ್ರಿಗಳ ಮೂಲಕ ನನ್ನ ಚಾರಿತ್ರ್ಯ ಹರಣ ಮಾಡುತ್ತಿದ್ದಾನೆ ಎಂದು ಕನಲಿದ್ದರು. (೯/೪/೧೮೯೪-ಅಳಸಿಂಗ ಪೆರುಮಾಳ್) .
ನನ್ನೊಡನೆ ಹೋರಾಡಿ ಜಯಗಳಿಸುವುದು ಸುಲಭವಲ್ಲ ಎಂದು ಗೊತ್ತಾಗಿ ಪಾದ್ರಿಗಳು ನನ್ನನ್ನು ನಿಂದಿಸಲು , ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ. ಮಜುಂದಾರ ಅವರಿಗೆ ನೆರವಾಗಿದ್ದಾನೆ. ಹೊಟ್ಟೆಕಿಚ್ಚಿನಿಂದ ಆತನಿಗೆ ಹುಚ್ಚು ಹಿಡಿದಿದೆ. (೯/೪/೧೮೯೪-ಅಳಸಿಂಗ ಪೆರುಮಾಳ್) .ದೇವರ ಇಚ್ಛೆಯಂತೆ ನಾನು ಇಲ್ಲಿ ಮೊದಲು ಮಜುಂದಾರರನ್ನು ಕಂಡೆನು. ಮೊದಲಿಗೆ ನನ್ನೊಡನೆ ವಿಶ್ವಾಸದಿಂದಿದ್ದನು. ಷಿಕಾಗೊ ಜನಸಂದಣಿ ತಂಡೋಪಾದಿಯಲ್ಲಿ ನನ್ನೆಡೆಗೆ ಬರಲು ತೊಡಗಿದ ನಂತರ ಆತನಿಗೆ ಹೊಟ್ಟೆಕಿಚ್ಚು ಉಂಟಾಗತೊಡಗಿತು (೧೩/೯/೧೮೯೪-ರಾಮಕೃಷ್ಣಾನಂದ), ಸ್ವಾಮಿಗಳು ಭಾರತಕ್ಕೆ ಬರೆದ ಪತ್ರಗಳಲ್ಲಿ ಈ ದೂರು ಮೇಲಿಂದ ಮೇಲೆ ಇರುತ್ತಿದ್ದಿತು. ಸ್ವಾಮಿಗಳು ಯಾವ ಊರಿಗೆ ಎಂದು ಹೋಗುತ್ತಿದ್ದಾರೆ, ಮುಂದಿನ ಭಾಷಣ ಎಲ್ಲಿ ಕೊಡುತ್ತಾರೆ , ಅವರ ಅಮೆರಿಕನ್ ಬೆಂಬಲಿಗರು ಮತ್ತು ಗೆಳೆಯರು ಯಾರು ಎಂದು ತಿಳಿದು ಅವರೆಲ್ಲರಿಗೂ ಸ್ವಾಮಿಗಳನ್ನು ಕುರಿತಾಗಿ ಇತರ ಭಾರತೀಯರು ಅದರಲ್ಲಿಯೂ ವಿಶೇಷವಾಗಿ ಮಜುಂದಾರ ಕಿವಿ ಕಚ್ಚುತ್ತಿದ್ದರು ಎನ್ನುವ ಕಲ್ಪನೆ ಹೊಂದಿದ್ದರು.
ತಾವಾಗಿಯೇ ಆರಿಸಿಕೊಂಡಿದ್ದ ಜೀವನ ಶೈಲಿಯಿಂದ ತಮ್ಮ ವರ್ಚಸ್ಸಿಗೆ ಧಕ್ಕೆ ಬರುತ್ತಿರುವುದು ಸ್ವಾಮಿಗಳಿಗೆ ಗೊತ್ತಾಗಿದ್ದಿತು. ಇದಕ್ಕೆ ಸ್ವಾಮಿಗಳು ಒಂದು ಸಲ ಪ್ರತಾಪಚಂದ್ರ ಮಜುಂದಾರ ಕಾರಣ ಎಂದು ಭಾವಿಸಿದರೆ ಮತ್ತೊಮ್ಮೆ ಅವರ ಅನುಮಾನ ಥಿಯೊಸೊಫಿಸ್ಟರ ಮೇಲೆ ಮಗದೊಮ್ಮೆ ಪ್ರೆಸ್’ಬೈಟೇರಿಯನ್ ಪಾದ್ರಿಗಳ ಮೇಲೆ ಬರುತ್ತಿದ್ದಿತು. ಒಂದು ಸಂದರ್ಭದಲ್ಲಿ ಶ್ರೀಮತಿ ಬ್ಯಾಗ್ಲಿಯವರು ತಮ್ಮ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆಂದು ಭಾವಿಸಿದ್ದರಾದರೂ ಇದಕ್ಕೆ ಯಾವುದೇ ಆಧಾರವಿರಲಿಲ್ಲ. (134) ತಮ್ಮ ಭಾರತದ ಕೆಲಸಗಳಿಗೆ ನಿರೀಕ್ಷಿಸಿದಷ್ಟು ಹಣ ಸಂಗ್ರಹವಾಗದಿರುವುದು , ಕ್ರೈಸ್ತ ಮಿಷನರಿಗಳು ತಮ್ಮನ್ನು ಪ್ರಶ್ನಿಸುವುದು ಮತ್ತು ಪ್ರತಾಪಚಂದ್ರ ಮಜುಂದಾರ ತಮ್ಮ ಬಗ್ಗೆ ಭಾರತದಲ್ಲಿ ಹೇಳುತ್ತಿರುವುದು ಇವೆಲ್ಲವೂ ಒಂದೇ ಸಂಘಟಿತ ಸಂಚಿನ ಹಲವು ಮುಖಗಳೆಂದು ಸ್ವಾಮಿಗಳಿಗೆ ಅದು ಹೇಗೋ ಭಾಸವಾಗಿದ್ದಿತು. ಈ ಭಾವನೆಯಿಂದಾಗಿ ತಮ್ಮ ಭಾಷಣಗಳನ್ನು ಏರ್ಪಡಿಸುತ್ತಿದ್ದವರೆಲ್ಲರೂ ಕ್ರೈಸ್ತ ಧರ್ಮೀಯರು ; ಅದೆಷ್ಟೋ ಭಾಷಣಗಳು ಚರ್ಚ್’ನಲ್ಲಿ ಸಾಗುತ್ತಿವೆ. ಅಮೆರಿಕದ ಜನ ಕ್ರೈಸ್ತ ಪಾದ್ರಿಗಳ ಮಾತನ್ನು ಕೇಳುವುದಿಲ್ಲ. ಹಾಗೆ ಕೇಳುವಂತಿದ್ದರೆ ತಾವು ಅಷ್ಟು ಮುಕ್ತವಾಗಿ ಮಾತನಾಡುತ್ತ ಅಮೆರಿಕದಲ್ಲಿ ಸಂಚರಿಸಲು , ಭಾಷಣ ಮಾಡಲು ಆಗುತ್ತಿರಲಿಲ್ಲ ಎನ್ನುವ ವಾಸ್ತವಾಂಶಗಳು ಸ್ವಾಮಿಗಳಿಗೆ ಕಾಣದಂತಾಗಿದ್ದವು. ತಾವು ಯಾವುದೇ ಸಂಘ , ಸಂಸ್ಥೆಯ ಬೆಂಬಲವಿಲ್ಲದೆ ಬಂದಿದ್ದು ಒಬ್ಬಂಟಿಯಾಗಿರುವುದರಿಂದ ಈ ದುಷ್ಟರು – ಕ್ರೈಸ್ತ ಪಾದ್ರಿಗಳು ,ಥಿಯೊಸೊಫಿಸ್ಟರು , ಬ್ರಾಹ್ಮಸಮಾಜಿಗಳು ಅದರಲ್ಲಿಯೂ ವಿಶೇಷವಾಗಿ ಪ್ರತಾಪಚಂದ್ರ ಮಜುಂದಾರ – ತಮ್ಮ ಮೇಲೆ ಎರಗುತ್ತಿದ್ದಾರೆ. ಭಾರತದಲ್ಲಿ ನನಗೂ ಬೆಂಬಲವಿದೆ ಎಂದು ತೋರಿಸಿದರೆ ಬಾಲ ಮುದುರಿಕೊಳ್ಳುತ್ತಾರೆ ಎನ್ನುವ ಪರಿಹಾರ ಅವರಿಗೆ ಹೊಳೆದಿದ್ದಿತು.
ಆ ನಿಟ್ಟಿನಲ್ಲಿ ತಕ್ಷಣ ಕಾರ್ಯೋನ್ಮುಖರಾಗಬೇಕೆಂದು ಅಳಸಿಂಗ ಪೆರುಮಾಳ , ಸೇರಿದಂತೆ ಕಲ್ಕತ್ತದ ಗುರುಭಾಯಿಗಳಿಗೆ , ಮದ್ರಾಸಿನ ಶಿಷ್ಯರಿಗೆ ತಂತಿ ಅಥವಾ ಪತ್ರಗಳ ಮೂಲಕ ತಿಳಿಸಿದ್ದರು. ಶ್ರೀಮತಿ ಹೇಲ್’ರವರಿಗೆ ಮಿಸ್ ಹೆಲೆನ್ ಗೌಲ್ಡ್’ಳ ಅರಮನೆಯನ್ನೂ ಮೀರಿಸುವ ವೈಭವೋಪೇತ ಮನೆಯನ್ನು ವರ್ಣಿಸಿ ಪತ್ರ ಬರೆಯುವ ಹಿಂದಿನ ದಿನ ಅದೇ ಮನೆಯಿಂದ- ೯/೪/೧೮೯೪- ರಂದು ಅಳಸಿಂಗ ಪೆರುಮಾಳ್’ಗೆ ಸ್ವಾಮಿಗಳು ಪತ್ರ ಬರೆದರು. ಅದರಲ್ಲಿ ‘ ಅನೇಕ ಮಂದಿ ಗೆಳೆಯರ ಮೈತ್ರಿ ಸಂಪಾದಿಸಿದ್ದೇನೆ. ಅವರಲ್ಲಿ ಕೆಲವರು ಅತ್ಯಂತ ಪ್ರಭಾವಶಾಲಿಗಳು. ಸಾಂಪ್ರದಾಯಿಕ ಪಾದ್ರಿಗಳು ನನಗೆ ವಿರುದ್ಧವಾಗಿದ್ದಾರೆ. ನನ್ನೊಡನ ಹೋರಾಡಿ ಗೆಲ್ಲುವದು ಸುಲಭವಲ್ಲವೆಂದು ತಿಳಿದು ನನ್ನನ್ನು ನಿಂದಿಸಲು , ನನ್ನ ಹೆಸರಿಗ ಕಳಂಕ ತರಲು ಯತ್ನಿಸುತ್ತಿದ್ದಾರೆ. ಮಜುಂದಾರ ಅವರಿಗ ನೆರವಾಗಿದ್ದಾನೆ. ಅಸೂಯೆಯಿಂದ ಆತನಿಗೆ ಹುಚ್ಚು ಹಿಡಿದಂತಾಗಿರಬೇಕು. ಅವನು ಆ ಕಲ್ಕತ್ತದ ಪಾದ್ರಿಗಳಿಗೆ ನಾನು ಅಮೆರಿಕದಲ್ಲಿ ಅತ್ಯಂತ ಪಾಪಮಯ , ಹೊಲಸಾದ ಜೀವನವನ್ನು ನಡೆಸುತ್ತಿದ್ದೇನೆಂದು ಹೇಳಿದ್ದಾನೆ. ದೇವರು ಆತನನ್ನು ಅಶೀರ್ವದಿಸಲಿ………….ಸೋದರನೇ ಅಡಚಣೆಗಳಿಲ್ಲದೆ ಯಾವೊಂದು ಒಳ್ಳೆಯ ಕೆಲಸವನ್ನು ಮಾಡಲಾಗದು’ ಎಂದಿದ್ದರು.
……ನಿನಗೆ ಸಾದ್ಯವಾದರೆ ಒಂದು ಕೆಲಸ ಮಾಡಬೇಕಾಗಿದೆ. ಮದ್ರಾಸಿನಲ್ಲಿ ಒಂದು ಬೃಹತ್ ಸಭೆಯನ್ನು ಸೇರಿಸಬೇಕು. ಅದಕ್ಕೆ ರಾಮನಾಡಿನ ರಾಜ ಅಥವಾ ಇನ್ನಾರಾದರೂ ದೊಡ್ದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿಸಿ ನೇಮಿಸಬೇಕು. ನಾನು ಇಲ್ಲಿ ಹಿಂದೂಧರ್ಮವನ್ನು ಅತ್ಯಂತ ತೃಪ್ತಿಕರವಾಗಿ ಪ್ರತಿನಿಧಿಸಿರುವುದಾಗಿ ಒಂದು ಗೊತ್ತುವಳಿಯನ್ನು ಆ ಸಭೆಯಲ್ಲಿ ಹೊರಡಿಸಿ ಅದನ್ನು ಷಿಕಾಗೊ ಹೆರಾಲ್ಡ್ , ‘ಇಂಟರ್ ಓಷನ್ , ನ್ಯೂಯಾರ್ಕ್ ಸನ್ ಮತ್ತು ಡೆಟ್ರಾಯಿಟ್’ನ ಕಮರ್ಷಿಯಲ್ ಅಡ್ವರ್ಟೈಸರ್ ಈ ಪತ್ರಿಕೆಗಳಿಗೆ ಕಳಿಸಬೇಕು. ಅದರ ಪ್ರತಿಗಳನ್ನು ವಿಶ್ವ ಧರ್ಮ ಸಂಸತ್ತಿನ ಅಧ್ಯಕ್ಷರಾದ ಡಾ. ಬರೋಸ್ ಅವರಿಗೂ ಡೆಟ್ರಾಯಿಟ್’ನ ಶ್ರೀಮತಿ ಜೆ.ಜೆ ಬ್ಯಾಗ್ಲಿಗೂ ಕಳಿಸು. ಆ ಸಭೆ ಸಾದ್ಯವಾದಷ್ಟು ಬೃಹತ್ ಪ್ರಮಾಣದಲ್ಲಿರಬೇಕು. ಧರ್ಮಕ್ಕಾಗಿ ದೇಶಕ್ಕಾಗಿ ದುಡಿಯಲಿಚ್ಛಿಸುವ ಎಲ್ಲ ದೊಡ್ಡ ವ್ಯಕ್ತಿಗಳನ್ನು ಸೇರಿಸು. ಮೈಸೂರು ಮಹಾರಾಜರಿಂದ ಮತ್ತು ದಿವಾನರಿಂದ ಸಭೆಗೆ ಮೆಚ್ಚುಗೆಯ ಪತ್ರವನು ಪಡೆ. ಹಾಗೆ ಖೇತ್ರಿಯಿಂದಲೂ ಸಭೆ ಅದ್ದೂರಿಯಾಗಿದ್ದು ಕಿಕ್ಕಿರಿದು ಜನ ಸೇರಿರಬೇಕು. ಆ ಗೊತ್ತುವಳಿಯಲ್ಲಿ ಮದ್ರಾಸಿನ ಹಿಂದೂ ಸಮುದಾಯವು ಇಲ್ಲಿ ನನ್ನ ಕಾರ್ಯದ ಬಗ್ಗೆ ಸಂಪೂರ್ಣ ತೃಪ್ತಿಯನ್ನು ವ್ಯಕ್ತಪಡಿಸಿರಬೇಕು. ಸಾಧ್ಯವಾದರೆ ಈ ಕೆಲಸವನ್ನು ಮಾಡು. ಇದೇನು ಅಷ್ಟು ದೊಡ್ದದಲ್ಲ. ಎಲ್ಲ ಕಡೆಗಳಿಂದಲೂ ಸಹಾನುಭೂತಿಯ ಪತ್ರಗಳನ್ನು ಪಡೆದು ಅದನ್ನು ಮುದ್ರಿಸಿ ಅಮೆರಿಕದ ಪತ್ರಿಕೆಗಳಿಗೆ ಕಳಿಸು. ಇದನ್ನು ಬೇಗ ಮಾಡಬೇಕು. ಇದು ಅತ್ಯಂತ ಆವಶ್ಯಕ. ಇಲ್ಲಿಯ ಜನರು ಏನೇನೋ ಅಸಂಬದ್ಧ ಹೇಳುತ್ತಿದ್ದಾರೆ. ಆದಷ್ಟು ಬೇಗ ಅವರ ಬಾಯನ್ನು ಮುಚ್ಚಿಸಬೇಕು…… ನಾನು ಬರುವವರೆಗೆ ನನ್ನ ಪತ್ರಗಳಲ್ಲಿ ಪ್ರಕಟಿಸಬಹುದಾದ ಭಾಗಗಳನ್ನು ನಮ್ಮ ಸ್ನೇಹಿತರಿಗಾಗಿ ಪ್ರಕಟಿಸಬಹುದು. ನಾವು ಕೆಲಸ ಪ್ರಾರಂಭಿಸಿದರೆ ಸಾಕು ಅದು ಕೂಡಲೇ ಬೃಹತ್ ಪ್ರಮಾಣ ತಾಳುವುದು. ಆದರೆ ನಾನು ಕೆಲಸ ಮಾಡದೆ ಮಾತನಾಡಲು ಇಚ್ಛಿಸುವುದಿಲ್ಲ. ಜಿ.ಸಿ ಘೋಷ್ ಮತ್ತು ಮಿತ್ರ (ಹರಮೋಹನ) ಇವರು ಹಾಗೂ ನನ್ನ ಗುರುದೇವರನ್ನು ಮೆಚ್ಚುವ ಎಲ್ಲರನ್ನೂ ಒಗ್ಗೂಡಿಸಿ ಕಲ್ಕತ್ತದಲ್ಲಿ ಇದೇ ರೀತಿ ಸಭೆ ಸೇರಿಸಬಹುದು. ಹಾಗೆ ಮಾಡಿದರೆ ಅದು ಒಳ್ಳೆಯದು. ಇದೇ ಗೊತ್ತುವಳಿಯನ್ನು ಹೊರಡಿಸಲು ಅವರಿಗೆ ತಿಳಿಸು. ಕಲ್ಕತ್ತದಲ್ಲಿ ನಮ್ಮ ಕಾರ್ಯವನ್ನು ಮೆಚ್ಚುವವರು ಸಾವಿರಾರು ಜನ ಇರುವರು. ಆದರು ಅವರಿಗಿಂತ ನಿಮ್ಮ ಮೇಲೆ ನನಗೆ ನಂಬಿಕೆ ಹೆಚ್ಚು’ ಎಂದು ಬರೆದರು.
ಈ ಪತ್ರ ಮುಂದಿನ ದಿನಗಳಲ್ಲಿ ಗರಿಗೆದರಲಿರುವ ಚಟುವಟಿಕೆಗಳಿಗೆ ಪ್ರೇರಣೆಯಾಯಿತು.
ಧರ್ಮ ಸಂಸತ್ತಿನಲ್ಲಿ ಸ್ವಾಮಿಗಳು ಭಾರಿ ಸಂಚಲನ ಉಂಟು ಮಾಡಿದ್ದರೆ ಅವರಿಗೆ ಇಂತಹ ಶಿಫಾರಸ್ಸು ಹಾಗೂ ಬೆಂಬಲ ಸೂಚಿಸುವ ಪತ್ರಗಳು ಬೇಕಿರಲಿಲ್ಲ. ೧೯/೩/೧೮೯೪ ರಂದು ರಾಮಕೃಷ್ಣಾನಂದರಿಗೆ ಬರೆದ ಪತ್ರದಲ್ಲಿ ‘ಇಲ್ಲಿಯ ಜನರಿಗೆ ನನ್ನ ಮೇಲೆ ಅಭಿಲಾಷೆ. ಸಾವಿರಾರು ಜನ ನನ್ನ ಉಪನ್ಯಾಸಗಳನ್ನು ಕೇಳುವುದಕ್ಕೆ ಬರುತ್ತಿದ್ದಾರೆ……. ಒಟ್ಟು ಅಮೆರಿಕ ಜನರೇ ನನ್ನ ಕಡೆ ಇರುವರು. ನನ್ನನ್ನು ಗುರುಭಾವದಿಂದ ಕಾಣುತ್ತಾರೆ. ಎಲ್ಲ ಖರ್ಚನ್ನು ಅವರೇ ವಹಿಸಿಕೊಳ್ಳುತ್ತಾರೆ. ನನಗೆ ವಿರೋಧವಾಗಿ ಏನನ್ನೂ ಮಾಡಲು ನಿಮ್ಮ ಪುರೋಹಿತರಿಂದ ಆಗಲಿಲ್ಲ…….’ ಎಂದಿದ್ದ ಸ್ವಾಮಿಗಳು ಕೇವಲ ಮುಂದಿನ ಇಪ್ಪತ್ತೇ ದಿನಗಳಲ್ಲಿ ಮದ್ರಾಸ್’ ಕಲ್ಕತ್ತಗಳಲ್ಲಿ ದೊಡ್ಡ ಮನುಷ್ಯರನ್ನು ಸೇರಿಸಿ ನನ್ನ ಪರವಾಗಿ ಗೊತ್ತುವಳಿ ಮಂಡಿಸಿರಿ ಎನ್ನುವುದು ಬೇಕಾಗಿರಲಿಲ್ಲ. ಒಂದು ಕಡೆ ನಾನು ಅಮೆರಿಕದಲ್ಲಿ ಭಾರಿ ಜಯಗಳಿಸುತ್ತಿದ್ದೇನೆ ಎನ್ನುತ್ತ ಮರುಕ್ಷಣದಲ್ಲೇ ಪಾದ್ರಿಗಳು , ಬ್ರಾಹ್ಮ ಸಮಾಜದವರು ನನಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎನ್ನುವ ವಿರೋಧಾಭಾಸದ ಹೇಳಿಕೆಗಳು ಬರುತ್ತಿರಲಿಲ್ಲ.
ಸ್ವಾಮಿಗಳು ಭಾರತದಿಂದ ತಮಗೆ ಬರುತ್ತಿದ್ದ ಖ್ಯಾತರ ಪತ್ರಗಳನ್ನು ಅಮೆರಿಕದ ಗೆಳೆಯರಿಗೆ ಕಳಿಸಿ ತಾವು ಎಷ್ಟು ಬಲಿಷ್ಟರೆಂದು ತೋರಿಸಿಕೊಳ್ಳಲು ಹಿಂಜರಿಯುತ್ತಿರಲಿಲ್ಲ. ಖೇತ್ರಿಯಿಂದ ಬಂದಿದ್ದ ಪತ್ರವನ್ನು ಓದಲು ಶ್ರೀಮತಿ ಹೇಲ್’ಗೆ ಕಳಿಸಿದ್ದರಲ್ಲದೆ ತಮ್ಮ ಸುದ್ದಿಯಿರುವ ಪತ್ರಿಕೆಗಳನ್ನು ಸಂಗ್ರಹಿಸಿ ಖೇತ್ರಿ ರಾಜನಿಗೆ ಕಳಿಸುವಂತೆ ತಿಳಿಸಿದ್ದರು. (೩೦/೩/೧೮೯೪). ಅಳಸಿಂಗ ಪೆರುಮಾಳ್’ಗೆ ತಿಳಿಸಿದಂತೆ ಕಲ್ಕತ್ತದಲ್ಲಿ ತಮ್ಮ ಪರವಾಗಿ ಏನನ್ನಾದರೂ ಎದ್ದು ಕಾಣುವಂತಹುದನ್ನು ಮಾಡುವಂತೆ ಗುರುಭಾಯಿಗಳಿಗೆ , ಅಭಿಮಾನಿಗಳಿಗೆ ಸೂಚಿಸಿದ್ದರು. ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿಗಳ ಉಗ್ರ ಅಭಿಮಾನಿಯಾಗಿದ್ದ ಕಲ್ಕತ್ತದ ಹರಮೋಹನ ಮಿತ್ರ ಸ್ವಾಮಿಗಳನ್ನು ಕುರಿತಾಗಿ ಅಮೆರಿಕ ಪತ್ರಿಕೆಗಳು ನೀಡಿದ ಸುದ್ದಿ , ಬರೆದಿದ್ದ ವರದಿ , ಭಾರತೀಯ ಪತ್ರಿಕೆಗಳ ಸಂಪಾದಕೀಯ , ಮೆರ್ವಿನ್ ಮಾರಿ ಸ್ನೆಲ್ ಪತ್ರ ಮುಂತಾದವುಗಳನ್ನೆಲ್ಲ ಸಂಗ್ರಹಿಸಿ ಒಂದು ಕರಪತ್ರ ಸಿದ್ಧಪಡಿಸಿದ್ದನು. ಸ್ವಾಮಿಗಳು ವಿಶ್ವ ಧರ್ಮ ಸಂಸತ್ತಿನಲ್ಲಿ ಹಿಂದೂ ಧರ್ಮ ಕುರಿತಾಗಿ ಮಾಡಿದ ಭಾಷಣ , ಅವರ ಅಮೆರಿಕ ಸಾಧನೆಗಗಳನ್ನು ಒಳಗೊಂಡ ೫೦೦೦ ಕರಪತ್ರಗಳನ್ನು ಮುದ್ರಿಸಿ ಮದ್ರಾಸ್ ಮತ್ತು ಕಲ್ಕತ್ತದಲ್ಲಿ ಹಂಚಲಾಗಿದ್ದಿತು.ಈ ಕರಪತ್ರಗಳನ್ನು ಸ್ವಾಮಿಗಳಿಗೆ ಕಳಿಸಲಾಯಿತು. ೨೪ ಏಪ್ರಿಲ್’ರಂದು ಹರಮೋಹನ ಮಿತ್ರ ಸಿದ್ಧಪಡಿಸಿದ್ದ ಕರಪತ್ರಗಳು ತಲುಪಿದಾಗ ಸ್ವಾಮಿಗಳು ಮೊದಲ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಇವುಗಳನ್ನು ಆದಷ್ಟು ಹೆಚ್ಚಿನ ಅಮೆರಿಕದ ಗೆಳೆಯರಿಗೆ , ಬೆಂಬಲಿಗರಿಗೆ ತಿಳಿಸಿ ತಾವು ಹಿಂದೂ ಧರ್ಮದ ಸಮರ್ಥ ಪ್ರತಿನಿಧಿಯೆಂದು ಭಾರತದಲ್ಲಿ ಗಣ್ಯರು ಒಪ್ಪಿದ್ದಾರೆಂದು ಅದಕ್ಕಾಗಿ ತಮ್ಮನ್ನು ಅನುಮೋದಿಸಿ , ಅಭಿನಂದಿಸುತ್ತಿದ್ದಾರೆಂದು ಸಾಬೀತು ಮಾಡುವ ಹವಣಿಕೆಯಲ್ಲಿದ್ದರು.
ಸ್ವಾಮಿಗಳು ಇಸಾಬೆಲ್ ಮೆಕೆಂಡ್ಲಿಗೆ ೨೫/೪/೧೮೯೪ ರಂದು ಬರೆದ ಪತ್ರ ಈ ನಿಟ್ಟಿನ ಮಾಹಿತಿಗಳನ್ನು ನೀಡುತ್ತದೆ. ಅದರಲ್ಲಿ ‘…. ನೀನು ನಿನ್ನೆ ಕಳಿಸಿದ ಭಾರತದ ಟಪಾಲುಗಳಲ್ಲಿ ತಾಯಿ ಚರ್ಚ್ ಹೇಳುವಂತೆ ಬಹಳ ಕಾಲದ ಮೇಲೆ ಬಂದ ಸಂತೋಷದ ಸುದ್ದಿಯಿದೆ. ದಿವಾನ್’ಜಿಯವರಿಂದ ಒಂದು ಒಳ್ಳೆಯ ಪತ್ರ ಬಂದಿದೆ. ಆ ವೃದ್ಧ ಎಂದಿನಂತೆ ನನಗೆ ಸಹಾಯ ಮಾಡಲು ಸಿದ್ಧನಿರುವನು. ( ಹರಿದಾಸ ವಿಹಾರಿದಾಸ ದೇಸಾಯಿ ) ಕಲ್ಕತ್ತೆಯಲ್ಲಿ ನನ್ನ ವಿಷಯವಾಗಿ ಸಣ್ಣ ಪುಸ್ತಕ ಪ್ರಕಟಿಸಿರುವರು. ಸದ್ಯಕ್ಕೆ ಪ್ರವಾದಿಯನ್ನು ಅವನ ದೇಶ ಗೌರವಿಸಿದ್ದಕ್ಕೆ ಇದು ಒಂದಾದರೂ ಸಾಕ್ಷಿಯಾಗಿದೆ. ಈ ಪುಸ್ತಕದಲ್ಲಿ ನನ್ನ ವಿಷಯದಲ್ಲಿ ಅಮೆರಿಕ ಮತ್ತು ಭಾರತದ ಪತ್ರಿಕೆಗಳಲ್ಲಿ ಬಂದ ಆಯ್ದ ಭಾಗಗಳಿವೆ. ಆದರೆ ಅಲ್ಲಿ ಅವು ನನ್ನನ್ನು ‘ಪ್ರಖ್ಯಾತನಾದ’, ‘ಅದ್ಭುತವಾದ’ ಮುಂತಾದ ಕೆಲಸಕ್ಕೆ ಬಾರದ ಗುಣವಾಚಕಗಳಿಂದ ಕರೆಯುತ್ತವೆ. ಇಡೀ ದೇಶದ ಕೃತಜ್ಞತೆಯನ್ನು ಅವರು ನನಗೆ ತೋರುತ್ತಿರುವರು. ನನ್ನವರು ಕೂಡ ನನ್ನ ವಿಷಯದಲ್ಲಿ ಏನು ಹೇಳುವರು ಎನ್ನುವುದನ್ನು ನಾನು ಲೆಕ್ಕಿಸುವುದಿಲ್ಲ. …. ನನಗೆ ಒಬ್ಬ ವೃದ್ಧ ತಾಯಿ ಇರುವಳು….. ತನ್ನ ಅತ್ಯಂತ ಪ್ರೀತಿಪಾತ್ರ ಮಗ, ಮಜುಂದಾರ ಹೇಳುವಂತೆ ದೂರದೇಶದಲ್ಲಿ ಹೀನ ಜೀವನ ನಡೆಸುತ್ತಿದ್ದಾನೆ ಎನ್ನುವುದು ನಿಜವಾಗಿದ್ದರೆ ಅವಳು ಬದುಕುತ್ತಿರಲಿಲ್ಲ….ಯಾರೂ ಅವಳ ಮಕ್ಕಳಿಗೆ ಅಪಾಯ ತರಲಾರರು…. ಈಗ ಅವರ ಗುಟ್ಟು ರಟ್ಟಾಗಿದೆ. ನಾನು ಅದಕ್ಕೆ ಪ್ರಯತ್ನವನ್ನೇ ಮಾಡಲಿಲ್ಲ. ನನ್ನನ್ನು ಇಷ್ಟೊಂದು ಹೊಗಳುವ , ನಾನು ಹಿಂದೂ ಧರ್ಮದ ಪರವಾಗಿ ಅಮೆರಿಕ ದೇಶಕ್ಕೆ ಬಂದೆ ಎಂದು ಹೇಳುವ ಬಹಳ ಪ್ರಮುಖವಾದ ದೈನಂದಿನ ಪತ್ರಿಕೆಯ ಸಂಪಾದಕ ಯಾರು ಎಂದು ತಿಳಿದಿರುವೆ? ದೇವರಿಗೆ ಧನ್ಯವಾದ.- ಆ ವ್ಯಕ್ತಿಯೇ ಮಜುಂದಾರನ ತಂದೆಯ ಸಹೋದರನ ಮಗ (ನರೇಂದ್ರನಾಥ ಸೇನ) . ಪಾಪ ಮಜುಂದಾರ ಅಸೂಯೆಯಿಂದ ಸುಳ್ಳನ್ನು ಹೇಳಿ ತನ್ನ ಕೆಲಸಕ್ಕೆ ಅಡಚಣೆ ಮಾಡಿಕೊಂಡ. ದೇವರಿಗೆ ಗೊತ್ತು. ನಾನು ನಿರಪರಾಧಿ ಎಂದು ಸಾಧಿಸಲು ಸ್ವಲ್ಪವೂ ಯತ್ನಿಸಲಿಲ್ಲ……(೨೫/೪/೧೮೯೪)
ಹುಮ್ಮಸ್ಸಿನಲ್ಲಿದ್ದ ಸ್ವಾಮಿಗಳು ಮುಂದಿನ ವಾರ (೨/೫/೧೮೯೪) ಇಸಾಬೆಲ್ಲಾ ಮೆಕೆಂಡ್ಲಿಗೆ ಮತ್ತು ಜಾನ್ ಹೆನ್ರಿ ರೈಟ್’ಗೆ ಪತ್ರ ಬರೆದರು. ‘ ನಿನಗೆ ಈಗಲೇ ಕಿರಿಯ ಪುಸ್ತಕವನ್ನು ಕಳಿಸಲಾರೆ. (ಕಲ್ಕತ್ತದಿಂದ ಬಂದಿದ್ದ ಕರಪತ್ರ). ಆದರೆ ಭಾರತದಿಂದ ಬಂದಿರುವ ಪತ್ರಿಕೆಯ ಸುದ್ದಿ ತುಣುಕುಗಳನ್ನು ಕಳಿಸುತ್ತೇನೆ. ನೀನು ಓದಿದ ಮೇಲೆ ಅದನ್ನು ಶ್ರೀಮತಿ ಬ್ಯಾಗ್ಲಿಗೆ ಕಳಿಸಿಕೊಡು. ಈ ಪತ್ರಿಕೆಯ ಸಂಪಾದಕ ಮಜುಂದಾರನ ನೆಂಟ…… ‘ ಎಂದು ತಿಳಿಸಿದ್ದರೆ ‘ ನೀವು ಇಚ್ಛೆಪಟ್ಟರೆ ಭಾರತದಿಂದ ಬಂದಿರುವ ಕೆಲವು ರಾಜರ , ಮಂತ್ರಿಗಳ ಪತ್ರಗಳನ್ನು ಕಳಿಸುತ್ತೇನೆ. ಇವರಲ್ಲಿ ಒಬ್ಬ ಮಂತ್ರಿಗಳು ಓಪಿಯಂ ಕಮಿಷನ್ ಸದಸ್ಯರಾಗಿದ್ದರು. (ಹರಿದಾಸ ವಿಹಾರಿದಾಸ ದೇಸಾಯಿ) ಓಪಿಯಂ ಕಮಿಷನ್ ಭಾರತದ ರಾಯಲ್ ಕಮಿಷನ್ ಕೆಳಗಿರುವ ಸಂಸ್ಥೆ. ನಿಮಗೆ ಇಚ್ಛೆ ಇದ್ದರೆ ನಾನೇ ಅವರಿಗೆ ಪತ್ರ ಬರೆಯುವಂತೆ ಹೇಳುತ್ತೇನೆ. ಇದರಿಂದ ನಾನು ಮೋಸಗಾರನಲ್ಲ ಎನ್ನುವುದು ತಿಳಿಯುವುದು. …. ಸಂನ್ಯಾಸಿ ತಾನು ಸರಿ ಎಂದು ಸಾಧಿಸಲು ರುಜುವಾತುಗಳನ್ನು ಕೊಡುವುದಿಲ್ಲ. ಆದಕಾರಣ ಈ ಪುಸ್ತಕಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಏನಿದೆಯೋ ಅದನ್ನು ಯಾರಿಗೂ ತೋರಿಸಬೇಡಿ ಮತ್ತು ಪ್ರಕಟಿಸಬೇಡಿ ಎಂದು ಕೇಳಿಕೊಳ್ಳುತ್ತೇನೆ.,…’ ತಮ್ಮ ಸಮರ್ಥನೆಗಾಗಿ ಸ್ವಾಮಿಗಳ ಇರಿಸಿದ್ದ ಮೊದಲನೇ ಹೆಜ್ಜೆ ಇದಾಗಿದ್ದಿತು.
ಬೋಳೆ ಸ್ವಭಾವದ ಅಳಸಿಂಗ ಪೆರುಮಾಳ ಬೀದಿ, ಬೀದಿ ಅಲೆದು ಸ್ವಾಮಿಗಳ ಆದೇಶದಂತೆ ಜನರನ್ನು ಒಗ್ಗೂಡಿಸಿ ಸಾರ್ವಜನಿಕ ಸಭೆಯನ್ನು ಸೇರಿಸಿ ಅವರಿಗೆ ಬೆಂಬಲ ಸೂಚಿಸಿ ೨೮/೪/೧೮೯೪ ರಂದು ಮದ್ರಾಸಿನಲ್ಲಿ ಗೊತ್ತುವಳಿಯನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದನು. . ಅದನ್ನು ಅಮೆರಿಕದ ಪತ್ರಿಕೆಗಳಿಗೆ ಕಳಿಸುವುದನ್ನು ಸಹಾಯಕ ಮರೆತಿದ್ದು ಅಳಸಿಂಗ ಪೆರುಮಾಳನ ಮೇಜಿನ ಡ್ರಾಯರ್’ನಲ್ಲಿಯೇ ಉಳಿದಿದ್ದಿತು.(135). ಇದರಿಂದಾಗಿ ಸ್ವಾಮಿಗಳಿಗೆ ಮದ್ರಾಸಿನಲ್ಲಿ ತಮ್ಮ ಪರವಾಗಿ ಗೊತ್ತುವಳಿ ಸಿದ್ಧವಾಗಿರುವುದು ತಿಳಿಯಲಿಲ್ಲ.
ಸುಮಾರು ಆರು ತಿಂಗಳ ಹಿಂದೆ -೨೯/೧/೧೮೯೪- ಸ್ವಾಮಿಗಳು ಮತ್ತು ಹರಿದಾಸ ವಿಹಾರಿದಾಸ ದೇಸಾಯಿಯವರ ನಡುವೆ ಪತ್ರ ವ್ಯವಹಾರ ನಡೆದಿದ್ದಿತು. ಅದಾದ ನಂತರ ಸುಮ್ಮನಿದ್ದ ಹರಿದಾಸ ವಿಹಾರಿದಾಸ ದೇಸಾಯಿಗಳು ನಂತರ ಮರುಪತ್ರ ಬರೆದಿದ್ದರು. ಅದರಲ್ಲಿ ಏನಿದ್ದಿತೋ ತಿಳಿಯದಾದರೂ ಸ್ವಾಮಿಗಳು ಅವರಿಗೆ ಬರೆದ ಪತ್ರದಲ್ಲಿ ಅವರು ಕಷ್ಟದ ಸಮಯದಲ್ಲಿ ತಮಗೆ ನೆರವಾಗಲಿಲ್ಲ ಎಂದು ದೂರಿದ್ದಿತು. ‘ ಹಿಂದೂ ದೇಶದ ಜನರು ನಾನು ಅವರ ಪ್ರತಿನಿಧಿ ಎಂದು ಅಮೆರಿಕ ದೇಶೀಯರಿಗೆ ಹೇಳುವುದಕ್ಕೆ ಒಂದು ಬೆರಳನ್ನೂ ಎತ್ತಲಿಲ್ಲ, ಏನಾದರೂ ನಮ್ಮ ಜನ ಅವರ ಪ್ರತಿನಿಧಿ ಎಂದು ಹೇಳಿ ನನಗೆ ಸಹಾಯ ಮಾಡಲು ಅಮೆರಿಕಾಕ್ಕೆ ಕೃತಜ್ಞತೆ ತೋರಿಸಿ ಒಂದು ಪತ್ರ ಬರೆದಿದ್ದರೆ ? ನಾನು ಒಂದು ವರ್ಷದಿಂದ ಇಲ್ಲಿದ್ದೇನೆ ಒಬ್ಬ ಪ್ರಮುಖ ಭಾರತೀಯನಿಗೂ ನಾನು ಮೋಸಗಾರನಲ್ಲ ಎಂದು ಬರೆದು ತಿಳಿಸಲಾಗಲಿಲ್ಲ…ಅವರು ನಾನು ಸಂನ್ಯಾಸಿ ಬಟ್ಟೆಯನ್ನು ಅಮೆರಿಕದಲ್ಲಿ ಮಾತ್ರ ಹಾಕಿಕೊಂಡಿರುವೆನೆಂದು . ನನ್ನನ್ನು ಕಪಟಿಯೆಂದೂ , ವಂಚಕನೆಂದೂ ಸಾರುತ್ತಿರುವರು. ಇದು ಅಮೆರಿಕಾದವರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಆದರೆ ಅವರು ನನಗೆ ಧನ ಸಹಾಯ ಮಾಡುವ ದೃಷ್ಟಿಯಿಂದ ಮಾತ್ರ ಬಹಳ ಅನಾನುಕೂಲವಾಯಿತು……….. …..ನಮ್ಮಲ್ಲಿ ಯಾರಾದರೂ ಪ್ರಖ್ಯಾತ ಪುರುಷರು ಕಾಲವಾದರೆ ಅಂತಹ ವ್ಯಕ್ತಿ ಬರುವುದಕ್ಕೆ ಅನೇಕ ಶತಮಾನಗಳು ಕಾಯಬೇಕು. ಇಲ್ಲಾದರೋ ಸತ್ತ ಮರುಕ್ಷಣವೇ ದೇಶ ಅಂತಹ ಪ್ರಖ್ಯಾತ ಪುರುಷನನ್ನು ಮುಂದಕ್ಕೆ ತರುವುದು……..ನಮ್ಮಲ್ಲಿ ಮಹಾಪುರುಷರ ಅಭಾವವಿರುವುದು….ಬಡಜನರ ಸಹಾಯಕ್ಕೆ ಒಂದು ಸಂಸ್ಥೆ ಬೇಕು. ಅದಕ್ಕೆ ಬೇಕಾದ ಹಣ ಎತ್ತಲು ಅಮೆರಿಕಕ್ಕೆ ಬಂದೆನು. ಇದಕ್ಕೆ ಬೇಕಾದ ಹಣವನ್ನು ಬಡವರಿಂದ ಚಂದಾ ಎತ್ತಿದೆ. ಶ್ರೀಮಂತರಿಂದ ಕಾಸನ್ನೂ ಸ್ವೀಕರಿಸಲಿಲ್ಲ…ಪಾದ್ರಿಗಳು , ಬ್ರಾಹ್ಮ ಸಮಾಜದವರು ನನಗೆ ಭಾರಿ ಅಡ್ಡಿಯಾಗಿದ್ದಾರೆ….’ (೨೦/೬/೧೮೯೪) ಸ್ವಾಮಿಗಳು ದಿವಾನರನ್ನು ಸುತ್ತಿ ಬಳಸಿ ಟೀಕಿಸಿದ್ದರು. ಅಮೆರಿಕಕ್ಕೆ ಹೋಗಲು ನಾನು ನಿಮ್ಮಂತಹ ದಿವಾನರ ನೆರವನ್ನು ಕೇಳಲಿಲ್ಲ. ಬಡವರಿಂದ ಚಂದಾ ಎತ್ತಿದೆ ಎಂದು ಕುಟುಕಿದ್ದಾರೆ. ಬಡವರು ಸ್ವಾಮಿಗಳಿಗೆ ೫೦ ಪೈಸೆ , ಒಂದು ರೂಪಾಯಿ ಕೊಡಬಲ್ಲರಾಗಿದ್ದರಷ್ಟೇ, ನಮಗೆ ಈಗ ತಿಳಿದಿರುವಂತೆ ಸ್ವಾಮಿಗಳ ಪ್ರವಾಸಕ್ಕೆ ಬೇಕಾದ ಹೆಚ್ಚಿನ ಮೊತ್ತ ಕೈಬೆರಳೆಣಿಕೆಯ ವಿದ್ಯಾವಂತ ಶ್ರೀಮಂತರಿಂದ ಬಂದಿದ್ದಿತು.
ಹೇಲ್ ಸೋದರಿಯರೊಂದಿಗೆ ಕಾಲ ಕಳೆಯುತ್ತಿದ್ದ ನೋವು-ನಲಿವು , ಗೆಲುವು-ಸೋಲು , ತಂಪು-ಬಿಸಿಗಳ ದ್ವಂದ್ವಗಳನ್ನು ಮೀರಿದ್ದ ಸ್ಥಿತಪ್ರಜ್ಞ , ವೇದಾಂತ ಕೇಸರಿ ಸ್ವಾಮಿಗಳು ಎರಡು ತಿಂಗಳುಗಳು ಕಳೆಯುತ್ತ ಬಂದರೂ ಒಂದು ಗೊತ್ತುವಳಿಯೂ ಬರದಿದ್ದುದ್ದಕ್ಕೆ ಕನಲಿ ಕೆರಳಿದ್ದರು. ೨೮/೬/೧೮೯೪ ರಂದು ಒಂದೇ ದಿನ ಮದ್ರಾಸಿನ ಇಬ್ಬರು ಶಿಷ್ಯರಿಗೆ (ಅಳಸಿಂಗ + ?) ಬರೆದ ಪತ್ರದಲ್ಲಿ ಒಂದು ಸಣ್ಣ ಕೆಲಸ ಮಾಡಲಾಗದ ಬಗ್ಗೆ ಛೇಡಿಸಿ, ಹೀಗಳೆದಿದ್ದರು. ಒಬ್ಬರ ಬದಲು ಇಬ್ಬರಿಗೆ ಚಾಟಿ ಬೀಸುವುದರಿಂದ ತಮಗೆ ಕೆಲಸವಾಗಬಹುದೆಂದು ಭಾವಿಸಿದ್ದರು.
ಮೊದಲನೆ ಶಿಷ್ಯನಿಗೆ ‘ ….ಇಲ್ಲಿ ನನ್ನ ಭವಿಷ್ಯದ ವಿಷಯ ಸೊನ್ನೆ ಎಂದೇ ಹೇಳಬೇಕು. .. ..ನಿನ್ನ ಪತ್ರ ಮತ್ತೆ ಮತ್ತೆ ನನ್ನನ್ನು ಭಾರತೀಯ ಪತ್ರಿಕೆಗಳು ಹೇಗೆ ಹೊಗಳುತ್ತಿವೆ ಎಂದು ತಿಳಿಸುತ್ತದೆ. ಅದು ನನಗೆ ಮತ್ತು ನಿನಗೆ ಮಾತ್ರ ಸಂಬಂಧಿಸಿರುವ ವಿಷಯ. ಏಕೆಂದರೆ ಭಾರತದಲ್ಲಿ ಯಾವ ವೃತ್ತ ಪತ್ರಿಕೆಗಳು ನನ್ನ ವಿಷಯವಾಗಿ ಬರೆದಿರುವುದನ್ನು ನಾನು ನೋಡಿಲ್ಲ. ಅಳಸಿಂಗ ನನಗೆ ಕಳಿಸಿರುವ ಮೂರು ಇಂಚು ಸುತ್ತಳತೆಯ ಪತ್ರಿಕೆ ಹೊರತು ಬೇರೆ ಏನಿಲ್ಲ. ಭರತಖಂಡದಲ್ಲಿ ಕ್ರೈಸ್ತರು ನನ್ನ ವಿಷಯವಾಗಿ ಏನು ಪ್ರಚಾರ ಮಾಡುತ್ತಿರುವರೋ ಅದನ್ನು ಸ್ವಲ್ಪವೂ ಬಿಡದೆ ಸಂಗ್ರಹಿಸಿ ಮನೆಯಿಂದ ಮನೆಗೆ ಪ್ರಚಾರ ಮಾಡುತ್ತಿದ್ದಾರೆ.ಅವರು ಅಪಪ್ರಚಾರ ಕಾರ್ಯದಲ್ಲಿ ಯಶಸ್ವಿಗಳಾಗಿದ್ದಾರೆ. ಏಕೆಂದರೆ ಅದನ್ನು ವಿರೋಧಿಸುವ ಒಂದು ವಾಕ್ಯವೂ ಭರತಖಂಡದಿಂದ ಬಂದಿಲ್ಲ. ಹಿಂದೂ ಪತ್ರಿಕೆಗಳು ನನ್ನನ್ನು ಬೇಕಾದಷ್ಟು ಹೊಗಳಬಹುದು. ಆದರೆ ಅಮೆರಿಕ ದೇಶಕ್ಕೆ ಒಂದು ಪದವೂ ಮುಟ್ಟಿಲ್ಲ…….ಮದ್ರಾಸಿನ ಹುಡುಗರ ಮಾತನ್ನು ಕೇಳಿಕೊಂಡು ನಾನು ವಿಶ್ವ ಧರ್ಮ ಸಂಸತ್ತಿಗೆ ಬಂದಿದ್ದೇ ತಪ್ಪೆನಿಸುತ್ತಿದೆ. ಎಷ್ಟಾದರೂ ಅವರು ಹುಡುಗರು. ಆದರೆ ಅವರಿಗೆ ನಾನೆಂದಿಗೂ ಋಣಿ. ಅವರಿಗೆ ಯಾವ ಕಾರ್ಯ ನಿರ್ವಹಣೆಯ ಶಕ್ತಿಯ ಇಲ್ಲ. ಕೇವಲ ಆವೇಶಭರಿತರು. ಯಾವ ಪರಿಚಯವೂ ಇಲ್ಲದೆ ಬಂದ ನಾನು ಮೋಸಗಾರನಲ್ಲ ಎಂದು ಮಿಷನರಿ ಮತ್ತು ಬ್ರಾಹ್ಮಸಮಾಜದವರಿಗೆ ತೋರಿಸುವುದು ಹೇಗೆ ? …….ಕೆಲವು ಪದಗಳನ್ನು ಖರ್ಚು ಮಾಡುವುದು ತುಂಬಾ ಸುಲಭ ಎಂದು ಭಾವಿಸಿದ್ದೆ. ….ಆದರೆ ಭಾರತೀಯರಿಗೆ ಕೆಲಸ ಮಾಡುವುದು ತುಂಬಾ ಕಷ್ಟ ಎಂದು ತಿಳಿಯಿತು.
ಎರಡು ತಿಂಗಳಿನ ಹಿಂದೆ ಅಳಸಿಂಗನಿಗೆ ಪತ್ರ ಬರೆದೆ. ಅವನ ಉತ್ಸಾಹವೆಲ್ಲ ಬತ್ತಿಹೋಗಿದೆ ಎನಿಸುತ್ತದೆ. …..ದೇವರ ದಯದಿಂದ ಭರತಖಂಡದಲ್ಲಿ ನನಗೆ ಸಹಾಯಕನಾಗಿ ನಿಲ್ಲಬಲ್ಲ ಒಬ್ಬ ಮೇಧಾವಿಯಾದ ಕಾರ್ಯಕರ್ತ ಇದ್ದಿದ್ದರೆ !... ಪರಿಚಯ ಪತ್ರವಿಲ್ಲದೆ ಇಲ್ಲಿಗೆ ಬಂದಿದ್ದೇ ತಪ್ಪು. ಒಟ್ಟಿನಲ್ಲಿ ಅಮೆರಿಕಾದವರು ಹಿಂದೂಗಳಿಗಿಂತ ಕೋಟಿ ಪಾಲು ಮೇಲು. ನಿರ್ದಯರಾದ ಕೃತಘ್ನರಾದ ಹಿಂದೂಗಳಿರುವ ದೇಶಕ್ಕಿಂತ ನಾನು ಇಲ್ಲಿ ಚೆನ್ನಾಗಿ ಕೆಲಸ ಮಾಡಬಹುದು . ಅಂತೂ ನನ್ನ ಕರ್ಮ ಕ್ಷಯ ಮಾಡಿಕೊಳ್ಳಬೇಕಾಗಿದೆ. ಹಣದ ದೃಷ್ಟಿಯಿಂದ ಈಗ ನಾನು ಚೆನ್ನಾಗಿರುವೆನು….ಅಮೆರಿಕಾದಲ್ಲಿ ಕಳೆದ ಜನಗಣತಿಯಂತೆ ಥಿಯೊಸೊಫಿಸ್ಟರ ಸಂಖ್ಯೆ ೬೨೫. ……..ಐವತ್ತು ಜನರ ಒಂದು ಸಭೆ ಮಾಡಿ ಒಂದು ಗೊತ್ತುವಳಿ ಕಳಿಸಲು ಯೋಗ್ಯತೆ ಇಲ್ಲದವರು. ಪ್ರಪಂಚವನ್ನೇ ತಲೆ ಕೆಳಗು ಮಾಡುವ ಮಾತನ್ನಾಡುವರು……. ನನಗೆ ಹಿಂದೂಗಳ ವಿಷಯದಲ್ಲಿ ಸಾಕಾಗಿ ಹೋಗಿದೆ…. ನನ್ನನ್ನು ಕೃತಘ್ನ ಎಂದು ಭಾವಿಸಬೇಡ. ನನ್ನ ಯೋಗ್ಯತೆ ಎಷ್ಟೋ ಅದಕ್ಕಿಂತ ಹೆಚ್ಚು ಮದ್ರಾಸಿನ ಜನ ಮಾಡಿರುವರು….ಇದು ನನ್ನ ಮೌಢ್ಯ. ಹಿಂದೂಗಳು ಇನ್ನೂ ಮಾನವರಾಗಿಲ್ಲ ಎನ್ನುವುದನ್ನು ತಾತ್ಕಾಲಿಕವಾಗಿ ಮರೆತೆ. ಅವರನ್ನು ನೆಚ್ಚಿ ಕೆಟ್ಟೆ. ಭರತಖಂಡದಿಂದ ಏನೋ ಬರುವುದೆಂದು ನಿರೀಕ್ಷಿಸಿದ್ದೆ. ಅದೆಂದಿಗೂ ಬರಲೇ ಇಲ್ಲ….ಯಾವುದಾದರೂ ಒಂದು ಯೋಗ್ಯ ಭಾವನೆಯನ್ನು ಬಿತ್ತಲು ಅಮೆರಿಕ ಯೋಗ್ಯವಾದ ಕ್ಷೇತ್ರ. ಅದಕ್ಕಾಗಿ ಅಮೆರಿಕವನ್ನು ಬೇಗ ಬಿಡುವ ಆಲೋಚನೆಯಿಲ್ಲ. ನಾನು ಏತಕ್ಕೆ ಬಿಡಬೇಕು? ಇಲ್ಲಿ ನನಗೆ ತಿನ್ನಲು , ಕುಡಿಯಲು , ಹೊದೆಯಲು ಎಲ್ಲ ಸಿಕ್ಕುವುದು. ಇದು ನಾನು ಆಡುವ ಕೆಲವು ಒಳ್ಳೆಯ ಮಾತುಗಳಿಗಾಗಿ. ಇಂತಹ ಉತ್ತಮ ದೇಶವನ್ನು ಬಿಟ್ಟು ಕೃತಘ್ನರು , ಬುದ್ಧಿಹೀನರು , ಮೂರ್ಖರು , ಕುರುಡು ನಂಬಿಕೆಯ ಬಂಧನದಲ್ಲಿ ಯಾವಾಗಲೂ ನರಳುತ್ತಿರುವವರು ನಿರ್ದಯರು , ನಿಷ್ಕರುಣಿಗಳು ಇರುವ ನಾಡಿಗೆ ನಾನು ಬರಬೇಕೇನು ? ಆದಕಾರಣ ಹೋಗಿ ಬರುತ್ತೇನೆ ನಮಸ್ಕಾರ ! ನೀನು ವಿಚಾರ ಮಾಡಿ ಈ ಕಾಗದವನ್ನು ಯಾರಿಗೆ ತೋರಿಸಬೇಕೋ ಅವರಿಗೆ ತೋರಿಸು. ……….ಮಜುಂದಾರ ಬರೆದ ಶ್ರೀರಾಮಕೃಷ್ಣರ ಕೆಲವು ಪ್ರತಿಗಳನ್ನು ನನ್ನ ಷಿಕಾಗೊ ವಿಳಾಸಕ್ಕೆ ಕಳಿಸಲು ಸಾದ್ಯವೇ ? …… ಜಿ.ಜಿ, ಅಳಸಿಂಗ , ಸೆಕ್ರೆಟರಿ ಮುಂತಾದವರಿಗೆ ನನ್ನ ಅನಂತ ಆಶೀರ್ವಾದಗಳನ್ನು ತಿಳಿಸು. ಅವರ ಮೇಲೆ ನನಗೆ ಸ್ವಲ್ಪವೂ ಅತೃಪ್ತಿಯಿಲ್ಲ……..ಅವರು ಬಂಗಾಳಿಗಳಿಗಿಂತ ಎಷ್ಟೋ ಮೇಲು. ಅವರು ಬರೀ ಮೂಢರು. ಅವರಲ್ಲಿ ಹೃದಯವಿಲ್ಲ., ಸ್ವಲ್ಪವೂ ಸತ್ತ್ವವಿಲ್ಲ. ಬೀಳ್ಕೊಡುವೆನು ! ಬೀಳ್ಕೊಡುವೆನು !....... ವಿ.ಸೂ : ಕಿಡಿ ನನ್ನನ್ನು ಆಗಲೇ ಮರೆತ ಬಿಟ್ಟಿದ್ದಾನೆ ಎಂದು ಊಹಿಸುತ್ತೇನೆ...’ .
ಎರಡನೇ ಶಿಷ್ಯನಿಗೆ ಬರೆದ ಪತ್ರದಲ್ಲಿ ಮೇಲಿನ ಪತ್ರದ ಕೆಲ ಆಯ್ದ ಭಾಗ ಇದ್ದು ‘ಇಂತಹ ಒಂದು ಭವ್ಯ ದೇಶವನ್ನು ಬಿಟ್ಟು ಮೃಗೀಯರು , ಕೃತಘ್ನರೂ , ಕಡುಮೂರ್ಖರು , ಚಿರಕಾಲ ಕುರುಡು ನಂಬಿಕೆಯಲ್ಲಿ ನರಳುತ್ತಿರುವ ನಿಷ್ಕರುಣಿ ದಯಾಹೀನರು ಇವರ ಬಳಿಗೆ (ಭಾರತ) ಏತಕ್ಕೆ ಹೋಗಬೇಕು’ ಎಂದು ಪ್ರಶ್ನಿಸಿ ಪತ್ರವನ್ನು ಮುಗಿಸಿದ್ದರು.
ಕಲ್ಕತ್ತದ ಮಿನರ್ವ ಥಿಯೇಟರ್’ನಲ್ಲಿ ೧೪/೫/೧೮೯೪ ರಂದು ಸಾರ್ವಜನಿಕ ಸಭೆ ಸೇರಿ ಕಲ್ಕತ್ತದ ಖ್ಯಾತರ ಸಮ್ಮುಖದಲ್ಲಿ ಸ್ವಾಮಿಗಳ ಪರವಾಗಿ ಗೊತ್ತುವಳಿಯೊಂದನ್ನು ಅಂಗೀಕರಿಸಲಾಯಿತು. ಇದರ ವರದಿಗಳು ಸ್ವಾಮಿಗಳನ್ನು ತಲುಪಿದವು. ಮದ್ರಾಸ್ ಶಿಷ್ಯರು ಇದಕ್ಕಿಂತಲೂ ಮುಂಚೆ -೨೮/೪/೧೮೯೪- ಸ್ವಾಮಿಗಳನ್ನು ಬೆಂಬಲಿಸಿ , ಹೊಗಳಿ ಗೊತ್ತುವಳಿಗಳನ್ನು ಮಂಡಿಸಿದ್ದರಾದರೂ ಅವುಗಳನ್ನು ಅಮೆರಿಕದ ಪತ್ರಿಕೆಗಳಿಗೆ ಕಳಿಸಲು ಮರೆತಿದ್ದರು. ಆದ್ದರಿಂದ ಮಿನರ್ವ ಥಿಯೇಟರ್’ನಲ್ಲಿ ನಡೆದ ಸಭೆಯೇ ಸ್ವಾಮಿಗಳಿಗೆ ನೆಮ್ಮದಿ ನೀಡಿದ ಮೊದಲ ಸುದ್ದಿಯಾಗಿದ್ದಿತು. ಇದೊಂದು ರೀತಿಯಲ್ಲಿ ಅವರಿಗೆ ತೃಪ್ತಿ ಮತ್ತು ಚೇತರಿಕೆಯನ್ನು , ಅದರೊಂದಿಗೆ ಭಾರತದಲ್ಲಿ ತಮಗೆ ಎಷ್ಟು ಬೆಂಬಲ ಮತ್ತು ಗೌರವ ದಕ್ಕುತ್ತಿದೆ ಎನ್ನುವುದನ್ನು ಸಾಕ್ಷ್ಯಾಧಾರಗಳೊಂದಿಗೆ ಅಮೆರಿಕದ ತಮ್ಮ ಶಿಷ್ಯ , ಶಿಷ್ಯೆ , ಗೆಳೆಯ , ಗೆಳತಿಯರ ಮುಂದಿರಿಸುವ ವಿಶ್ವಾಸ ಮೂಡಿಸಿದ್ದಿತು.
ಸ್ವಾಮಿಗಳ ಒತ್ತಾಸೆಯಂತೆ ಮದ್ರಾಸಿನ ಶಿಷ್ಯರು ಡಾ.ಬರೋಸ್ ಮತ್ತು ಅಮೆರಿಕದ ಪತ್ರಿಕೆಗಳಿಗೆ ಗೊತ್ತುವಳಿಗಳನ್ನು ಕಳಿಸಿದ್ದರು. ಅದಕ್ಕೆ ಡಾ, ಬರೋಸ್ ಉತ್ತರಿಸಿದ್ದರು. ಅದು ಭಾರತದ ಪತ್ರಿಕೆಯಲ್ಲಿ ಮುದ್ರಿತವಾಗಿದ್ದಿತು. ಆ ಸುದ್ದಿಯ ತುಣುಕನ್ನು ಭಾರತದಿಂದ ತರಿಸಿ ಅದನ್ನು ಎಮ್ಮಾ ಥರ್ಸ್’ಬಿಯವರಿಗೆ ಕಳಿಸಿದ್ದರು. ಆಕೆ ಓದಿದ ನಂತರ ಶ್ರೀಮತಿ ಓಲ್’ಬುಲ್’ಗೆ ಕಳಿಸುವ ಏರ್ಪಾಡು ಮಾಡಿ ೭/೫/೧೮೯೫ ರಂದು ಆಕೆಗೆ ಪತ್ರವನ್ನು ಬರೆದಿದ್ದರು. ಇದಾದ ೭ ದಿನಗಳಲ್ಲಿ (೧೪/೫/೧೮೯೫) ಅಳಸಿಂಗ ಪೆರುಮಾಳ್’ಗೆ ‘ ನೋಡಿದೆಯಾ ಮಗು, ಈ ಪತ್ರಿಕೆಗಳ ಉಜ್ವಲವಾದ ಉಲ್ಲೇಖಗಳೆಲ್ಲ ನಿಷ್ಪ್ರಯೋಜಕ ಎನ್ನುವುದನ್ನು ? ನಾನು ಹೋಗುವಾಗ ನನ್ನ ಹಿಂದೆ ಶಾಶ್ವತವಾದ ಪ್ರಭಾವವನ್ನು ಬಿಟ್ಟು ಹೋಗುವಂತಾಗಬೇಕು…… ಇಷ್ಟರಲ್ಲೇ ಅದು ಆಗುವುದು….’ ಎಂದು ಬರೆದರು. ಇದಾದ ಒಂದೇ ದಿನದ ನಂತರ (೧೬/೫/೧೮೯೫) ಶ್ರೀಮತಿ ಜಾರ್ಜ್ ಹೇಲ್’ಗೆ ‘ ….ದೊಡ್ಡ ಪೊಟ್ಟಣ ಖೇತ್ರಿಯಿಂದ ಬಂದಿದೆ. ಅದರಲ್ಲಿ ನಾನು ಈ ದೇಶದಲ್ಲಿ ಮಾಡಿದ ಕೆಲಸದ ಬಗ್ಗೆ ಅಬು ಪರ್ವತದಲ್ಲಿ ರಾಜವಂಶದವರು ಸಭೆಯೊಂದರಲ್ಲಿ ಮಾಡಿದ ಭಾಷಣದ ವರದಿಯಿದೆ ’ ಎಂದು ತಿಳಿಸಿದರು.
ಭಾರತದಿಂದ ಪತ್ರಿಕೆಯ ಕಂತೆಗಳು ಬರುತ್ತಿದ್ದಂತೆಯೇ ಸ್ವಾಮಿಗಳ ಉತ್ಸಾಹ ಗರಿಗೆದರುತ್ತಿದ್ದಿತು. ಸ್ವಾಮಿಗಳು ೯/೭/೧೮೯೪ ರಂದು ಹೇಲ್ ಸೋದರಿಯರಿಗೆ ‘ ಜೈ, ಜಗದಾಂಬ ! ನಿರೀಕ್ಷಣೆಗಿಂತ ಹೆಚ್ಚಿನದನ್ನು ಸಂಪಾದಿಸಿದ್ದೇನೆ. ದೇವದೂತನನ್ನು ಬೇಕಾದಷ್ಟು ಸನ್ಮಾನಿಸಿದರು. ದೇವರ ಅಪಾರ ಕರುಣೆಯನ್ನು ನೋಡಿ ನಾನು ಚಿಕ್ಕ ಮಗುವಿನಂತೆ ಅಳುತ್ತಿದ್ದೇನೆ. ..ಸೋದರಿಯರೇ ನಾನು ಕಳಿಸುತ್ತಿರುವ ಪತ್ರ ನಿಮಗೆಲ್ಲವನ್ನೂ ವಿವರಿಸುವುದು. ಮುದ್ರಿಸಿದ ಪತ್ರಿಕೆಗಳು ಅಮೆರಿಕ ದೇಶೀಯರಿಗೆ ಬರುತ್ತಿವೆ. ಅದರಲ್ಲಿ ಬರುವ ಹೆಸರುಗಳು ನಮ್ಮ ದೇಶದ ಶ್ರೇಷ್ಟ ಪುಷ್ಪಗಳು. ಕಲ್ಕತ್ತೆಯ ಪ್ರಮುಖ ವ್ಯಕ್ತಿಯೇ ಅಧ್ಯಕ್ಷರಾಗಿದ್ದರು. ಮತ್ತೊಬ್ಬ ವ್ಯಕ್ತಿ ಸಂಸ್ಕೃತ ವಿಶ್ವವಿದ್ಯಾಲಯದ ಅಧ್ಯಕ್ಷರು ಮತ್ತು ಇಡೀ ಭಾರತ ದೇಶದಲ್ಲಿಯೇ ಪ್ರಮುಖ ಬ್ರಾಹ್ಮಣರೆಂದು ಸರ್ಕಾರವೇ ಅಂಗೀಕರಿಸಿರುವ ಮಹೇಶಚಂದ್ರ ನ್ಯಾಯರತ್ನರು. ಪತ್ರ ನಿಮಗೆಲ್ಲ ತಿಳಿಸುತ್ತದೆ………..’ ಎಂದಿದ್ದರು.
ಭಾರತದಿಂದ ತಮಗೆ ಬೆಂಬಲ ಸಿಕ್ಕಿತೆಂದು ಹಿಗ್ಗಿ ಹೀರೇಕಾಯಿಯಾಗಿದ್ದ ಸ್ವಾಮಿಗಳು ಎರಡು ದಿನಗಳ ನಂತರ (೧೧/೭/೧೮೯೪) ಅಳಸಿಂಗ ಪೆರುಮಾಳ್’ನನ್ನು ನೆನೆಸಿಕೊಂಡು ಮೆದುವಾದ ದನಿಯಲ್ಲಿ ಬರೆದರು. ‘…. ಷಿಕಾಗೊ ಈ ವಿಳಾಸಕ್ಕಲ್ಲದೆ ಬೇರೆ ಯಾವ ವಿಳಾಸಕ್ಕೂ ಪತ್ರ ಬರೆಯಬೇಡ (ಜಾರ್ಜ್ ಹೇಲ್ ಮನೆ) . ನಿನ್ನ ಹಿಂದಿನ ಪತ್ರ ಸುತ್ತಾಡಿಕೊಂಡು ಬಂದು ನನ್ನನ್ನು ತಲುಪಿತು. ನಾನು ಅಷ್ಟೊಂದು ಪ್ರಸಿದ್ಧನಾಗಿರುವುದರಿಂದ ಅದು ಸಾದ್ಯವಾಯಿತು. ಕೆಲವು ಗೊತ್ತುವಳಿಗಳನ್ನು ಡಾ. ಜೆ.ಎಚ್ ಬರೋಸ್ ಅವರಿಗೆ ಕಳಿಸಬೇಕು. ಆ ಪತ್ರದಲ್ಲಿ ನನಗೆ ಅವರು ತೋರಿದ ದಯೆಗಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ , ಆ ಪತ್ರವನ್ನು ಅಮೆರಿಕದ ಪತ್ರಿಕೆಗಳಲ್ಲಿ ಪ್ರಕಟಿಸಬೇಕೆಂದು ಕೋರಿಕೊಳ್ಳಬೇಕು. ನಾನು ಯಾರನ್ನೂ ಪ್ರತಿನಿಧಿಸುತ್ತಿಲ್ಲ ಎನ್ನುವ ಮಿಷನರಿಗಳ ಸುಳ್ಳು ಅಪವಾದಕ್ಕೆ ತಕ್ಕ ಉತ್ತರವಾಗುತ್ತದೆ. ವ್ಯವಹಾರವನ್ನು ಕಲಿತುಕೋ ಮಗು ……..ಕಿಡಿ ತನ್ನ ದಾರಿಯಲ್ಲಿ ಹೋಗಲು ಬಿಟ್ಟುಬಿಡು. ಸಕಾಲದಲ್ಲಿ ಅವನು ಸರಿಯಾದ ದಾರಿಗೆ ಬರುತ್ತಾನೆ. ಅವನು ಸ್ವಂತ ಅಭಿಪ್ರಾಯಗಳನ್ನು ಹೊಂದಲು ಸಂಪೂರ್ಣ ಅಧಿಕಾರವಿದೆ. ಅವನು ಪತ್ರಿಕೆಗೆ ಬರೆಯುವಂತೆ ಮಾಡು. ಅದು ಅವನು ಪ್ರಸನ್ನನಾಗುವಂತೆ ಮಾಡುತ್ತದೆ… ಪತ್ರಿಕೆಯನ್ನು ಪ್ರಾರಂಭಿಸು. ನಾನು ಆಗಾಗ ಲೇಖನಗಳನ್ನು ಕಳಿಸುತ್ತೇನೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಾಪಕ ಜಾನ್ ರೈಟ್ ಎಂಬುವರೇ ನನ್ನ ಮಿತ್ರರಾದವರಲ್ಲಿ ಮೊದಲಿಗರು. ಅದಕ್ಕಾಗಿ ಕೃತಜ್ಞತೆಯನ್ನು ಅರ್ಪಿಸಿ ಒಂದು ಕರಪತ್ರವನ್ನೂ ಮತ್ತು ಒಂದು ಪತ್ರವನ್ನು ನೀನು ಅವರಿಗೆ ಕಳಿಸಬೇಕು….ನೀವು ಹೊರಡಿಸಿದ ಗೊತ್ತುವಳಿಯನ್ನು ಡಾ. ಬರೊಸ್ , ಡಾ. ಪೌಲ್ ಕ್ಯಾರಸ್ , ಸೆನೆಟರ್ ಪಾಮರ್ , ಶ್ರೀಮತಿ ಜೆ’ಜೆ ಬ್ಯಾಗ್ಲಿ ಇವರಿಗೆ ಕಳಿಸಬೇಕು. ಅದು ಅಧಿಕೃತವಾಗಿ ಬರಬೇಕು. ಹೊರದೇಶಗಳ ವಿಧಾನಗಳು ನಿಮಗೆ ಗೊತ್ತಿಲ್ಲದೆ ಇರುವುದರಿಂದ ನಾನಿದನ್ನು ಬರೆಯುತ್ತಿದ್ದೇನೆ…..’.
ಸ್ವಾಮಿಗಳ ೨೮/೬/೧೮೯೪ ರ ಪತ್ರವನ್ನು ಓದಿ ಬೆವರಿಳಿಸಿಕೊಂಡಿದ್ದ ಅಳಸಿಂಗ ಪೆರುಮಾಳ್ ಮತು ಸ್ನೇಹಿತರು ಸುಮ್ಮನೆ ಕೂರದೆ ಇನ್ನೂ ಹೆಚ್ಚಿನ ಸಭೆಗಳನ್ನು ಏರ್ಪಡಿಸತೊಡಗಿದರು. ೨೨/೮/೧೮೯೪ ರಲ್ಲಿ ಕುಂಭಕೋಣಂನಲ್ಲಿ , ೨೬/೮/೧೮೯೪ ರಲ್ಲಿ ಬೆಂಗಳೂರಿನಲ್ಲಿ ಸ್ವಾಮಿಗಳನ್ನು ಅಭಿನಂದಿಸಿ ಸಭೆಗಳು ನಡೆದವು. ಅಳಸಿಂಗ ಪೆರುಮಾಳ್ ಮದ್ರಾಸಿನಲ್ಲಿ ಮಾಡಿದ ಗೊತ್ತುವಳಿಗಳನ್ನು ಅಮೆರಿಕದ ವಿವಿಧ ಪತ್ರಿಕೆಗಳಿಗೆ ಕಳಿಸಿದ್ದನು. ಇದರ ಪರಿಣಾಮವಾಗಿ ೩೦/೮/೧೮೯೪ ರಂದು ‘ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಕ್ರಿಪ್ಟ್ ಪತ್ರಿಕೆಯಲ್ಲಿ ಮದ್ರಾಸ್ ಸಮಿತಿ ಸ್ವಾಮಿಗಳನ್ನು ಅಭಿನಂದಿಸಿರುವ ಸುದ್ದಿ ಮತ್ತು ಗೊತ್ತುವಳಿಯನ್ನು ಪ್ರಕಟಿಸಿತು. ಇದರಿಂದ ಅತೀವ ಸಂತೋಷಗೊಂಡಿದ್ದ ಸ್ವಾಮಿಗಳು ಮರುದಿನ ಅಳಸಿಂಗ ಪೆರುಮಾಳ್ ಕೆಲಸವನ್ನು ಶ್ಲಾಘಿಸಿ ಬೋಸ್ಟನ್’ನಿಂದ ಪತ್ರ ಬರೆದರು. ಈ ಸಂತೋಷವನ್ನು ಮೇರಿ ಹೇಲ್ ಜೊತೆ ತಕ್ಷಣ ಹಂಚಿಕೊಂಡರು. ‘ಪ್ರಿಯ ಅಳಸಿಂಗ ಇದೀಗ ಬೋಸ್ಟನ್ ಟ್ರಾನ್ಸ್’ಸ್ಕ್ರಿಪ್ಟ್’ನಲ್ಲಿ ನನ್ನ ಬಗ್ಗೆ ಮದ್ರಾಸಿನಲ್ಲಿ ಪ್ರಕಟವಾಗಿರುವ ವಿಷಯ ಓದಿದೆ. ಆದರೆ ಅದು ನನಗಿನ್ನೂ ತಲುಪಿಲ್ಲ. ನೀನು ಆಗಲೇ ಕಳಿಸಿದ್ದರೆ ನನಗೆ ಅದು ಬೇಗ ತಲುಪುತ್ತಿತ್ತು, ಇದುವರೆಗೆ ನೀನು ಬಹಳ ಚೆನ್ನಾಗಿಯೇ ಕೆಲಸ ಮಾಡಿರುವೆ. ನಾನು ಉದ್ವೇಗದ ಸಮಯದಲ್ಲಿ ಬರೆದುದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ. ಹದಿನೈದು ಸಾವಿರ ಮೈಲಿ ದೂರದ ದೇಶದಲ್ಲಿ ಒಬ್ಬನೇ ಅನೇಕ ವಿರೋಧಗಳನ್ನು ಎದುರಿಸುತ್ತಿರುವಾಗ ಕೆಲವೊಮ್ಮೆ ಉದ್ವೇಗಕ್ಕೆ ಒಳಗಾಗುವುದು ಸ್ವಾಭಾವಿಕ. ಇದನ್ನು ನೀನು ಗಮನಕ್ಕೆ ತೆಗೆದುಕೊಳ್ಳಬೇಡ….. ಈಗ ನನ್ನ ಬಗೆಗಿನ ಭಾರತೀಯ ಪತ್ರಿಕೆಗಳ ವರದಿಯನ್ನು ಯಾವಾಗಲೂ ಇಲ್ಲಿಗೆ ಕಳಿಸು. ನಾನು ಪತ್ರಿಕೆಯಲ್ಲಿಯೇ ಅದನ್ನು ಓದಬೇಕು. ….ಈಗ ಇಲ್ಲಿ ಥಿಯೊಸೊಫಿಸ್ಟರು ನನ್ನನ್ನು ಇಷ್ಟ ಪಡುತ್ತಾರೆ. ….ಕ್ರೈಸ್ತ ಶ್ರದ್ಧಾ ಚಿಕಿತ್ಸಕರಿರುವರು. ಅವರೆಲ್ಲ ನನ್ನನ್ನು ಮೆಚ್ಚುತ್ತಾರೆ. ಅವರು ಸಮಾರು ೧೦ ಲಕ್ಷ ಜನ. ಈ ಎರಡೂ ಗಂಪಿನವರೊಂದಿಗೂ ನಾನು ಕೆಲಸ ಮಾಡುತ್ತೇನೆ. ಯಾವ ಗುಂಪಿಗೂ ಸೇರುವುದಿಲ್ಲ. ಆ ಎರಡೂ ಪಂಗಡಗಳ ತಪ್ಪುಗಳನ್ನು ತಿದ್ದಲು ಯತ್ನಿಸುತ್ತೇನೆ…..ಪತ್ರಿಕೆಯನ್ನು ಪ್ರಾರಂಭಿಸುವುದರೊಂದಿಗೆ ನೀನು ಕಾರ್ಯದರ್ಶಿಯಾಗುವೆ. ಪತ್ರಿಕೆ ಪ್ರಾರಂಭಿಸಲು ಬೇಕಾದ ಖರ್ಚನ್ನು ಲೆಕ್ಕ ಹಾಕಿ ಕಳಿಸು ಮತ್ತು ಸಂಘದ ವಿಳಾಸವನ್ನು ತಿಳಿಸು. ನಾನೇ ಹಣವನ್ನು ಕಳಿಸುತ್ತೇನೆ. (೩೧/೮/೧೮೯೪)
ಸೆಪ್ಟೆಂಬರ್-೧೮೯೪ ಆರಂಭದ ವೇಳೆಗೆ ಮೈಸೂರು ಮಹಾರಾಜ ಚಾಮರಾಜೇಂದ್ರರ ಸಹಿಯಿದ್ದ ಪತ್ರ ಸ್ವಾಮಿಗಳನ್ನು ತಲುಪಿದ್ದಿತು. ಇದರಿಂದ ಅವರು ರೋಮಾಂಚಿತರಾಗಿದ್ದರು. ಏಕೆಂದರೆ ಖೇತ್ರಿಯ ರಾಜ ಅಜಿತ್ ಸಿಂಗ್ ಮತ್ತು ಜುನಾಗಢದ ದಿವಾನ ಹರಿದಾಸ ವಿಹಾರಿದಾಸ ದೇಸಾಯ ಹೊರತಾಗಿ ಅವರು ಅಮೆರಿಕಕ್ಕೆ ಹೋಗುವ ಮೊದಲು ಭೇಟಿಯಾಗಿದ್ದ ಬೇರೆ ಯಾವುದೇ ರಾಜ , ಮಂತ್ರಿಗಳು ಸ್ವಾಮಿಗಳನ್ನು ಅಭಿನಂದಿಸಿ ಪತ್ರ ಬರೆದಿರಲಿಲ್ಲ. ತಕ್ಷಣವೇ ಲೇಖನಿ ಎತ್ತಿಕೊಂಡು ‘ …..ಇದರೊಂದಿಗೆ ನಾನು ಮೈಸೂರಿನ ಮಹಾರಾಜರ ಸಹಿ ಇರುವ ಪತ್ರವನ್ನು ಕಳಿಸುತ್ತಿದ್ದೇನೆ. ಅವರು ಭಾರತದ ಮುಖ್ಯ ರಾಜರು. ಅವರ ರಾಜ್ಯ ದಕ್ಷಿಣ ಭಾರತದ ಬಹು ಭಾಗವನ್ನು ಒಳಗೊಂಡಿರುವುದನ್ನು ನೀನು ಭೂಪಟದಲ್ಲಿ ನೋಡಬಹುದು. ಅವರು ಕ್ರಮೇಣ ನನ್ನ ಬಗ್ಗೆ ಅಭಿಮಾನ ತಾಳುತ್ತಿರುವುದು ಸಂತೋಷದ ವಿಷಯ. ಅವರು ಮನಸ್ಸು ಮಾಡಿದರೆ , ೫ ದಿನಗಳಲ್ಲಿ ನನ್ನೆಲ್ಲ ಯೋಜನೆಗಳನ್ನು ಕಾರ್ಯಗತ ಮಾಡಬಹುದು. ಅವರ ಆದಾಯ ೧೫೦ ದಶಲಕ್ಷ ಡಾಲರ್. ಅದನ್ನು ಯೋಚಿಸು …..’ಅವರು ನನ್ನ ಒಳ್ಳೆಯ ಮಾತುಗಳನ್ನು ಬಹಳ ಇಷ್ಟಪಡುವರೆಂದು ಹೇಳುವರು. ಅವು ಬಡವರಿಗೆ ವಿದ್ಯೆಯನ್ನು ಕೊಡುವ ನನ್ನ ಯೋಜನೆಗಳು….’ ರಾಜ , ಮಹಾರಾಜರುಗಳೂ ನನಗೆ ಪತ್ರ ಬರೆಯುತ್ತಾರೆನ್ನುವ ಹೆಮ್ಮೆಯಲ್ಲಿ ಬೀಗಿದ್ದರು. (೫/೮/೧೮೯೪-ಶ್ರೀಮತಿ ಹೇಲ್)
ಸ್ವಾಮಿಗಳ ಪರವಾಗಿದ್ದ ಗೊತ್ತುವಳಿಗಳನ್ನು ಮತ್ತು ದಿ ಇಂಡಿಯನ್ ಮಿರರ ಪತ್ರಿಕೆಯ ತುಣುಕಗಳನ್ನು ಜೆ.ಎಚ್ ಬರೋಸ್;ಗೆ ಕಳಿಸಲಾಗಿದ್ದಿತು. ಅವುಗಳನ್ನು ಆತ ಪ್ರಕಟಿಸುವುದಿಲ್ಲ ಎನ್ನುವ ಸಂಶಯವನ್ನು ಸ್ವಾಮಿಗಳು ಶ್ರೀಮತಿ ಜಾರ್ಜ್ ಹೇಲ್ ಮುಂದೆ ವ್ಯಕ್ತಪಡಿಸಿದ್ದರು. (೪/೯/೧೮೯೪). ‘ನಾನು ನಿಮಗೆ ಕಳಿಸಿದ ನನ್ನ ಡೆಟ್ರಾಯಿಟ್ ಭಾಷಣವನ್ನು ಕುರಿತ 'ದಿ ಇಂಡಿಯನ್ ಮಿರರ್' ಪತ್ರಿಕೆಯ ತುಣುಕನ್ನು ನೀವು ನನಗೆ ಕಳಿಸಿರುವುದಾಗಿ ನಂಬಿದ್ದೇನೆ ‘ ( ೧೨/೯/೧೮೯೪- ಶ್ರೀಮತಿ ಜಾರ್ಜ್ ಹೇಲ್) , ‘ ವೃತ್ತ ಪತ್ರಿಕೆಗಳ ಭಾಗಗಳು ಮಿಸೆಸ್ ಬ್ಯಾಗ್ಲಿಯವರ ಬಳಿಯಿವೆ ; ಅವುಗಳ ಪ್ರತಿಯನ್ನು ಮಾತ್ರ ನಿಮಗೆ ಕಳಿಸಲಾಗಿತ್ತು. ಅಂದ ಹಾಗೆ ಎಲ್ಲವನ್ನೂ ನಿಮಗೆ ಕಳಿಸಿದರೆ ಶ್ರೀಮತಿ ಬ್ಯಾಗ್ಲಿಯವರಿಗೆ ಅಸೂಯೆ ಉಂಟಾಗುವುದು. ಇದು ನಮ್ಮ ನಿಮ್ಮಲ್ಲಿ ಮಾತ್ರ. ಇಂಡಿಯನ್ ಮಿರರ್ ಶ್ರೀ ರೈಟ್ ಬಳಿ ಇದೆ. ಈ ವೇಳೆಗೆ ಮೈಸೂರು ಮಹಾರಾಜರ ಪತ್ರ ನಿಮಗೆ ತಲುಪಿರಬಹುದು. ‘(೧೩/೯/೧೮೯೪- ಶ್ರೀಮತಿ ಜಾರ್ಜ್ ಹೇಲ್) , ‘ಕಳೆದ ತಿಂಗಳು ಭಾರತದಿಂದ ಬೇಕಾದಷ್ಟು ಕಾಗದಗಳು ಬಂದವು. ಜನ ನನ್ನ ಕೆಲಸಗಳನ್ನು ಮುಕ್ತ ಕಂಠದಿಂದ ಹೊಗಳುತ್ತಿರುವುದನ್ನು ಕಂಡು ನನಗೆ ಸಂತೋಷವಾಗಿದೆ ( ೧೩/೯/೧೮೯೪-ಮೇರಿ ಹೇಲ್) ,’ ಭಾರಿ ಗಾತ್ರದ ಪೊಟ್ಟಣ ತಲುಪಿತು. ಕಲ್ಕತ್ತೆಯ ನಮ್ಮ ಮಠದಿಂದ ನನಗೆ ಕಳಿಸಿರುವ ಪ್ರಚಾರ ಪತ್ರಗಳು. ವೃತ್ತ ಪತ್ರಿಕೆಗಳ ಭಾಗಗಳನ್ನು ಟೈಪ್ ಮಾಡಿ ಕಳಿಸಲು ನಾನು ಕೇಳಿರಲಿಲ್ಲ. ಸ್ವಲ್ಪ ದಿನಗಳ ಹಿಂದೆ ನಾನು ನಿಮಗೆ ಕಳಿಸಿದ್ದು ‘ದಿ ಇಂಡಿಯನ್ ಮಿರರ್ ‘ ಪತ್ರಿಕೆಯ ಸಣ್ಣ ಭಾಗವನ್ನು ಮಾತ್ರ. (೧೪/೯/೧೮೯೪-ಶ್ರೀಮತಿ ಜಾರ್ಜ್ ಹೇಲ್ ), ನನಗೆ ಮದ್ರಾಸ್’ನಲ್ಲಿ ಅರ್ಪಿಸಿದ್ದ ಗೊತ್ತುವಳಿ ಮತ್ತು ನೆನೆಕೆಯನ್ನು ನೀವು ನೋಡಿರಬಹುದು. ನಿಮಗೆ ಕಳಿಸಲು ಲಿಯಾನ್ ಲ್ಯಾಂಡ್ಸ್’ಬರ್ಗ್’ಗೆ ಕೆಲವನ್ನು ಕಳಿಸಿದ್ದೇನೆ ‘ ಎಂದಾಗ ತೃಪ್ತಿ ತುಂಬಿದ ಭಾವವಿದ್ದಿತು. ( ೧೯/೯/೧೮೯೪-ಸಾರಾ ಬುಲ್) , ನಿನ್ನ ಪತ್ರ ಮತ್ತು ಭಾರತದ ಟಪಾಲುಗಳು ತಲುಪಿವೆ. ಭಾರತದ ಪತ್ರಿಕೆಯ ತುಣುಕುಗಳನ್ನು ಕಳಿಸಿದ್ದಾರೆ. ಅವುಗಳನ್ನು ಓದಿ , ಕಾಯ್ದಿಡಲು ನಿನಗೆ ಕಳಿಸುತ್ತೇನೆ. (೨೬/೯/೧೮೯೪-ಇಸಾಬೆಲ್ಲಾ ಮೆಕೆಂಡ್ಲಿ) . ಗೊತ್ತುವಳಿ ಕಳಿಸಿದ್ದ ಮದ್ರಾಸ್ ಹುಡಗರಿಗೆ ‘ನನ್ನ ಕೆಚ್ಚೆದೆಯ ನಿಸ್ವಾರ್ಥ ಮಕ್ಕಳೇ ! ನೀವು ಅದ್ಭುತವಾಗಿ ಕೆಲಸ ಮಾಡಿದ್ದೀರಿ. ನನಗೆ ಅದೆಷ್ಟೋ ಹೆಮ್ಮೆಯಾಗಿದೆ. ಭರವಸೆ ಇರಲಿ , ನಿರಾಶರಾಗದಿರಿ ಎನ್ನುವ ಭರವಸೆಯ ನುಡಿಗಳು ಬಂದಿದ್ದವು. ( ೨೯/೯/೧೮೯೪-ಅಳಸಿಂಗ ಪೆರುಮಾಳ್)
‘ಅಂಚೆಯಲ್ಲಿ ಭಾರಿ ವಸ್ತುಗಳು ತಲುಪಿವೆ. ಅವುಗಳಲ್ಲಿ ಮೊದಲದರಲ್ಲಿ ಭಾರತದ ವರ್ತಮಾನ ಪತ್ರಿಕೆ ಮತ್ತು ಎರಡನೆಯದರಲ್ಲಿ ಮಜುಂದಾರ ನನ್ನ ಗುರುಗಳನ್ನು ಕುರಿತು ಬರೆದ ಪುಸ್ತಕ-ಪ್ರಚಾರಕ್ಕಾಗಿ. ಕೇಶವ ಚಂದ್ರ ಸೇನ ಮತ್ತು ಪ್ರತಾಪಚಂದ್ರ ಮಜುಂದಾರ ನನ್ನ ಗುರುವಿನ ಚರಿತ್ರೆಯಿಂದ ಕದ್ದು ಅದನ್ನು ತಮ್ಮ ನವಸಿದ್ಧಾಂತಗಳೆಂದು ಸಾರಿದುದು ಹೇಗೆಂದು ತೋರಿಸುತ್ತದೆ’ ನ್ಯೂಯಾರ್ಕ್’ನ ಫಿಷ್ ಕಿಲ್ ಆನ್ ಹಡ್ಸನ್’ನ್ ಶ್ರೀಮತಿ ಗರ್ನ್ಸೆ, ನ್ಯೂಯಾರ್ಕ್’ನ ಶ್ರೀಮತಿ ಆರ್ಥರ್ ಸ್ಮಿಥ್ ಮತ್ತು ಮಿಸ್ ಮೇರಿ ಫಿಲಿಫ್ , ಮೆಸಾಷುಸೆಟ್ಸ್’ನ ಶ್ರೀಮತಿ ಬ್ಯಾಗ್ಲಿ , ಹಾರ್ವರ್ಡ್’ನ ಗ್ರೀಕ್ ಪ್ರಾಧ್ಯಾಪಕ ಜೆ. ರೈಟ್ ಅವರಿಗೆ ಕೆಲವು ಪ್ರತಿಗಳನ್ನು ಕಳಿಸಲು ಕೇಳಿಕೊಳ್ಳುತ್ತೇನೆ. ( ೨೭/೯/೧೮೯೪-ಶ್ರೀಮತಿ ಜಾರ್ಜ್ ಹೇಲ್) . ನಿಮ್ಮ ಕಡೆಯಿಂದ ಭಾರತದ ರಾಶಿ ಪತ್ರಗಳು ಬಂದವು….. ಮೈಸೂರಿನಿಂದ ಬಂದ ಎರಡು ಪತ್ರಗಳು ನಿಮಗೆ ನೆನಪಿರಬಹುದು –ಅವೆರಡರಲ್ಲಿ ಒಂದರ ಮೇಲೆ ಮೈಸೂರು ಮಹಾರಾಜರ ಮೊಹರು ಇದೆ. ಅದನ್ನು ಮಿಸ್ ಫಿಲಿಫ್ಸ್ ೧೯, ವೆಸ್ಟ್ ೩೮ ನೇ ಬೀದಿಗೆ , ನ್ಯೂಯಾರ್ಕ್’ಗೆ ಕಳಿಸಿ (೧೦/೧೦/೧೮೯೪-ಶ್ರೀಮತಿ ಜಾರ್ಜ್ ಹೇಲ್) , ನಿಮಗೆ ಕಳಿಸಿದ ಭಾರತದಿಂದ ಪತ್ರಗಳಲ್ಲಿ ಕಲ್ಕತ್ತದಿಂದ ನನ್ನವರು ನನ್ನ ಇಲ್ಲಿನ ಕೆಲಸಕ್ಕಾಗಿ ಕಳಿಸಿದ ವಿಳಾಸ ಮತ್ತು ವೃತ್ತ ಪತ್ರಿಕೆಗಳ ಭಾಗಗಳಿದ್ದವು. ( ೧೭/೧೦/೧೮೯೪-ಸಾರಾ ಬುಲ್) , ನೀವು ಬರೆದ ಪತ್ರ ಮತ್ತು ಕಳಿಸಿದ ಭಾರತದ ಪತ್ರಗಳು ತಲುಪಿದವು (೨೭/೧೦/೧೮೯೪-ಶ್ರೀಮತಿ ಜಾರ್ಜ್ ಹೇಲ್)
ಭಾರತದಲ್ಲಿ ಸ್ವಾಮಿಗಳನ್ನು ಕುರಿತಾಗಿ ಬಂದ ಸುದ್ದಿಗಳನ್ನು ನಕಲು ಮಾಡಿ ಅವರ ಶಿಷ್ಯರು ಕಳಿಸುತ್ತಿದ್ದರು. ಅಮೆರಿಕದಲ್ಲಿ ಸ್ವಾಮಿಗಳು ಅವುಗಳನ್ನೇ ತಮ್ಮ ಗೆಳೆಯರಿಗೆ , ಬೆಂಬಲಿಗರಿಗೆ ಕಳಿಸಿದರೆ ಅವು ಅಧಿಕೃತ ಮೂಲಗಳಂತೆ ಕಾಣುತ್ತಿರಲಿಲ್ಲ. ಆದ್ದರಿಂದ ಅವರು ಭಾರತದಿಂದ ಪತ್ರಿಕೆಯ ಮೂಲ ಪ್ರತಿಗಳನ್ನು ಕೇಳಿದ್ದರು. ಸ್ವಾಮಿಗಳು ಎಲ್ಲ ಪತ್ರಗಳನ್ನು ಷಿಕಾಗೊದ ಡಿಯರ್ ಬೋರ್ನ್ ರಸ್ತೆಯ ಜಾರ್ಜ್ ಹೇಲ್ ಮನೆಗೆ ಕಳಿಸಬೇಕೆಂದು ಶಿಷ್ಯರಿಗೆ ತಾಕೀತು ಮಾಡಿದ್ದರು. ಭಾರತದ ಎಲ್ಲ ಅಂಚೆ ಹೇಲ್ ಮನೆಯನ್ನು ತಲುತ್ತಿದ್ದಿತು. ಅವರು ಅವುಗಳನ್ನು ಸ್ವಾಮಿಗಳು ಇದ್ದ ಜಾಗಕ್ಕೆ ಕಳಿಸುತ್ತಿದ್ದರು. ಅವನ್ನು ಪಡೆದ ನಂತರ ಒಡೆದು , ಓದಿ ತಮಗೆ ಬೇಕಾದವರಿಗೆ ಕಳಿಸುತ್ತಿದ್ದರು. ಕೆಲವು ಹೇಲ್ ಮನೆಯವರಿಗೇ ಓದಲು ಮರಳುತ್ತಿದ್ದವು. ಸ್ವಾಮಿಗಳ ಮೇಲಿನ ಪತ್ರ ವ್ಯವಹಾರಗಳಿಂದ ಆಗಸ್ಟ್-ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಅಮೆರಿಕದ ತಮ್ಮ ಗೆಳೆಯ , ಬೆಂಬಲಿಗರಿಗೆ ಪತ್ರಿಕೆಯ ತುಣುಕಗಳನ್ನು ಕಳಿಸಿ ಹಿಂದಕ್ಕೆ ಪಡೆದು ನಂತರ ಮತ್ತೊಬ್ಬರಿಗೆ ಕಳಿಸುತ್ತಿದ್ದು ಸ್ವಯಂ ಪ್ರಚಾರದಲ್ಲಿ ನಿರತರಾಗಿದ್ದರು.
ಸ್ವಾಮಿಗಳು ತಮ್ಮ ಪ್ರಚಾರಕ್ಕೆ ಶ್ರೀಮತಿ ಹೇಲ್’ರನ್ನು ಇಳಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಅದರ ಅಂಗವಾಗಿ ‘ ಹರಿದಾಸ ವಿಹಾರಿದಾಸರಿಗೆ ತಮ್ಮನ್ನು ಸಮರ್ಥಿಸಿ ನೇರವಾಗಿ ಶ್ರೀಮತಿ ಜಾರ್ಜ್ ಹೇಲ್’ಗೆ ಪತ್ರ ಬರೆಯುವಂತೆ ಮಾಡಿದ್ದರು. ಶ್ರೀಮತಿ ಹೇಲ್ ಹರಿದಾಸ ವಿಹಾರಿದಾಸ ದೇಸಾಯಿಯವರ ಪತ್ರಕ್ಕೆ ಉತ್ತರಿಸಲು ನೆರವಾಗುತ್ತ ಅವರನ್ನು ಶ್ರೀ ಎಂದು ಸಂಬೋಧಿಸಬೇಕು. ಲಕೋಟೆಯ ಮೇಲೆ ದಿವಾನ್ ಬಹದ್ದೂರ ಎಂದು ಬರೆಯಬೇಕು ‘ ಎಂದು ಮಾರ್ಗದರ್ಶ ಮಾಡಿದ್ದರು. (೧೩/೯/೧೮೯೪). ಶ್ರೀಮತಿ ಜಾರ್ಜ್ ಹೇಲ್’ಗೆ ಹರಿದಾಸ ವಿಹಾರಿದಾಸ ದೇಸಾಯಿ ಬರೆದ ಪತ್ರವನ್ನು ಓದಿದ್ದರೂ ಕೂಡ, ‘ ನೀವು ಶ್ರೀಮತಿ ಹೇಲ್’ಗೆ ಬರೆದ ಪ್ರೀತಿಯ ಪತ್ರ ಬಹಳ ತೃಪ್ತಿಕರವಾಗಿದೆ’ ಎನ್ನುತ್ತ ಅವರಿಗೆ ಋಣ ಸಂದಾಯ ಮಾಡಿದ್ದರು. (?/೯/೧೮೯೪-ಹರಿದಾಸ ವಿಹಾರಿದಾಸ ದೇಸಾಯಿ) . ೨೭/೧೦/೧೮೯೪ ರ ಪತ್ರದಲ್ಲಿ ‘ನೀವು ದಯವಿಟ್ಟು ಹ್ಯಾರಿಸನ್ ಅವರಿಂದ ೧೦೦ ಫೋಟೋಗಳನ್ನು ಕೇಳಿ ಅವನ್ನು ಭಾರತಕ್ಕೆ ರಾಮದಯಾಳ ಚಕ್ರವರ್ತಿಯವರ ಈ ವಿಳಾಸಕ್ಕೆ ಕಳಿಸುವಿರಾ? ಕೇ/ಆ ಸ್ವಾಮಿ ರಾಮಕೃಷ್ಣಾನಂದ ಆಲಂಬಜಾರ್, ಕಲ್ಕತ್ತ’ ಎಂದು ತಿಳಿಸಿದ್ದಾರೆ. ಇಷ್ಟೊಂದು ಫೋಟೊಗಳು ಭಾರತದಲ್ಲಿ ವಿವಿಧ ಪತ್ರಿಕೆಗಳಿಗೆ ಒದಗಿಸಲು ಇರಬಹುದು.
ಅಮೆರಿಕದ ಪತ್ರಿಕೆಗಳಲ್ಲಿ ಕಲ್ಕತ್ತ ಮತ್ತು ಮದ್ರಾಸ್ ಬಿನ್ನವತ್ತಳೆಗಳು ಆದಷ್ಟು ಬೇಗ ಅಮೆರಿಕದ ಪತ್ರಿಕೆಗಳಲ್ಲಿ ಪ್ರಕಟಗೊಂಡು ಮತ್ತೊಮ್ಮೆ ಬೆಳಕಿಗೆ ಬರಲು ಸ್ವಾಮಿಗಳು ತವಕಿಸುತ್ತಿದ್ದರು. ಬಾಲ್ಟಿಮೋರ್’ನಲ್ಲಿದ್ದ ಸ್ವಾಮಿಗಳು ಭಾರತದಿಂದ ಬಂದ ತಂತಿಯನ್ನು-ಕಲ್ಕತ್ತ ಬಿನ್ನವತ್ತಳೆ- ಷಿಕಾಗೊ ಟ್ರಿಬ್ಯೂನ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆಯೇ ಎಂದು ಶ್ರೀಮತಿ ಹೇಲ್’ರವರನ್ನು ವಿಚಾರಿಸಿದ್ದರು. (೩೦/೧೦/೧೮೯೪) ಷಿಕಾಗೊ ಇಂಟರ್ ಓಷನ್ -೧/೯/೧೮೯೪- ಬಿಟ್ಟು ಬೇರೆ ಪತ್ರಿಕೆಗಳಲ್ಲಿ ಈ ಸುದ್ದಿ ಬಂದಿರಲಿಲ್ಲ. ಇದರಿಂದ ತಾವು ಸೂಚಿಸಿದಂತೆ ಮದ್ರಾಸಿನ ಶಿಷ್ಯರು ಇತರ ಪತ್ರಿಕೆಗಳಿಗೆ ಗೊತ್ತುವಳಿಗಳನ್ನು ಕಳಿಸಿದ್ದಾರೋ ಇಲ್ಲವೋ ಎನ್ನುವ ಸಣ್ಣ ಸಂಶಯ ಬಂದಿದ್ದಿತು. ಇದಾದ ಒಂದು ತಿಂಗಳಿನ ನಂತರ ಅಭೇದಾನಂದರಿಗೆ ಬರೆದ ಪತ್ರದಲ್ಲಿ ಷಿಕಾಗೊ ಟ್ರಿಬ್ಯೂನ್ ಪತ್ರಿಕೆಯಲ್ಲಿ ಗೊತ್ತುವಳಿ ಬಂದಿರುವ ಸುದ್ದಿ ಗೊತ್ತಿಲ್ಲ ಎಂದು ತಿಳಿಸಿದ್ದರು. ಅಮೆರಿಕ ಪತ್ರಿಕೆಗಳಲ್ಲಿ ಕಲ್ಕತ್ತ ಗೊತ್ತುವಳಿ ಪ್ರಕಟವಾದ ನಂತರ ‘ ಮದ್ರಾಸಿನ ಗೊತ್ತುವಳಿಯನ್ನು ಎಲ್ಲ ಪತ್ರಿಕೆಗಳು ಪ್ರಕಟಿಸಿವೆ.ಅವುಗಳಲ್ಲಿ ಕೆಲವನ್ನು ನಿನಗೆ ಕಳಿಸುತ್ತೇನೆ. ಇದನ್ನು ದಿ ಇಂಡಿಯನ್ ಮಿರರ್ ನಲ್ಲಿ ಪ್ರಕಟಿಸು ‘ ಎಂದು ಗುರುಭಾಯಿಗೆ ತಿಳಿಸಿದ್ದರು. (೨೫/೯/೧೮೯೪)
ಸ್ವಾಮಿಗಳು ತಮ್ಮ ಪ್ರಾಮಾಣಿಕತೆ , ಅಧಿಕೃತತೆ, ಸಚ್ಛಾರಿತ್ರ್ಯ ಕುರಿತಾಗಿ ಅಮೆರಿಕದಲ್ಲಿ ಯಾರಿಗೆ ಮನದಟ್ಟು ಮಾಡಿಸಬೇಕೆಂದು ಸೂಚಿಸಿ ಹರಿದಾಸ ವಿಹಾರಿದಾಸ ದೇಸಾಯಿಗಳಿಗೆ ತಿಳಿಸಿದ್ದರು. ಇದರೊಂದಿಗೆ ಅಮೆರಿಕದ ಗೆಳೆಯರನ್ನು ಉಲ್ಲಾಸದಲ್ಲಿಡುವ ಕ್ರಮಕ್ಕೆ ಮುಂದಾಗಿ ಅವರಿಗೆ ಉಡುಗೊರೆ ಕೊಡಲು ಭಾರತದಿಂದ ನೆಲಗಂಬಳಿಗಳನ್ನು ಕಳಿಸುವಂತೆ ಕೇಳಿಕೊಂಡಿದ್ದರು. ಇದರ ಪರಿಣಾಮವಾಗಿ ಹರಿದಾಸ ವಿಹಾರಿದಾಸ ದೇಸಾಯಿ ಶ್ರೀಮತಿ ಹೇಲ್’ಗೆ ನೇರವಾಗಿ ಪತ್ರ ಬರೆದಿದ್ದರು. ಅದು ದಿವಾನರು ಭಾರತದಿಂದ ಸ್ವಾಮಿಗಳಿಗೆ ಕಳಿಸಿದ ಕಟ್ಟಿನಲ್ಲಿದ್ದಿತು. ‘ ಈ ಕಂತೆ ಒಂದು ಸಭೆಯ ವರದಿ. ಷಿಕಾಗೊದ ಪತ್ರಿಕೆಗಳಲ್ಲಿ ಅದರಲ್ಲಿ ಕೆಲವನ್ನು ಪ್ರಕಟಿಸಲು ನಿಮಗೆ ಸಾದ್ಯವಾಗುವುದೆಂದು ನಾನು ಭಾವಿಸುತ್ತೇನೆ. ದಿವಾನರಿಂದ ನಿಮಗೊಂದು ಪತ್ರವಿದೆ…..ಕೆಲವು ಪತ್ರಿಕೆಗಳ ಕತ್ತರಿಸಿದ ಭಾಗಗಳು ಮತ್ತು ಒಂದು ‘ದಿ ಇಂಡಿಯನ್ ಮಿರರ್ ಪತ್ರಿಕೆ’ ಇವೆ. ನಂತರ ಕಳಿಸುತ್ತೇನೆ. ಕೆಲವನ್ನು ಜೆ.ಎಚ್.ಬ್ಯಾರೊಸ್’ಗೆ ಕಳಿಸಲಾಗಿದೆ . ಅವರು ಪ್ರಕಟಿಸುವರೆಂದು ಭಾವಿಸದಿರಿ…’. ತಮ್ಮನ್ನು ಕುರಿತಾಗಿ ‘ದಿ ಇಂಡಿಯನ್ ಮಿರರ್ ‘ ಪತ್ರಿಕೆಯಲ್ಲಿ ಬಂದಿದ್ದ ಸುದ್ದಿ ಅಮೆರಿಕದ ಪತ್ರಿಕೆಗಳಲ್ಲಿ ಬರಬೇಕು ಆದರೆ ಅದು ಬ್ಯಾರೋಸ್ ಕಡೆಯಿಂದ ಆಗಲಾರದು. ಅದಕ್ಕೆ ತಮ್ಮ ಆಪ್ತರೇ ಆಗಬೆಕೆಂದು ಸ್ವಾಮಿಗಳಿಗೆ ಖಚಿತವಾಗಿದ್ದಿತು. (೪/೯/೧೮೯೪) .
ತಮ್ಮ ಮೇಲೆ ಕ್ರೈಸ್ತ ಪಾದ್ರಿಗಳು ದಾಳಿ ಮಾಡುತ್ತಿದ್ದಾರೆ ಅವರಿಗೆ ಸಮರ್ಪಕ ಉತ್ತರ ಕೊಡಲು ನನ್ನ ಪರವಾಗಿ ಗೊತ್ತುವಳಿ ಮಂಡಿಸಿ ಕಳಿಸಿ ಎಂದು ಶಿಷ್ಯ, ಗುರುಭಾಯಿಗಳ ಮೇಲೆ ರೇಗಿದ್ದ ಸ್ವಾಮಿಗಳಿಗೆ ಒಳಮನಸ್ಸು ಆಗಾಗ ಕುಟುಕುತ್ತಿದ್ದಿತು. ‘’ಗೆಳೆಯರ ಗುಂಪು ಹಬ್ಬುತ್ತದೆ. ಅವರು ನಾನು ಇಲ್ಲೇ (ಅಮೆರಿಕ) ಇರಬೇಕೆಂದು ಇಲ್ಲಿನ ಜನ ಬಯಸುತ್ತಾರೆ. ವೃತ್ತ ಪತ್ರಿಕೆಗಳಿಂದ ಬಂದ ಯಶಸ್ಸು , ಜನರೆದುರು ಮಾಡುವ ನಟನೆ ನನಗೆ ಸಾಕಾಗಿದೆ. ಇದು ಸ್ವಲ್ಪವೂ ಬೇಕಾಗಿಲ್ಲ. ಇಲ್ಲಿ ನಮ್ಮ ಕೆಲಸಕ್ಕೆ ಹಣ ಸಿಗುವ ಸಾದ್ಯತೆಯಿಲ್ಲ. ( ೨೧/೯/೧೮೯೪-ಅಳಸಿಂಗ ಪೆರುಮಾಳ್) , . ‘ಅತ್ಯಂತ ಗೊಡ್ಡು ಕ್ರೈಸ್ತನೂ ನನಗೆ ಹಾಗೆ (ಅನ್ನ, ವಸತಿ , ರಕ್ಷಣೆ ಕೊಟ್ಟು) ಸಹಾಯ ಮಾಡಿರುವನು. ! ಆದರೆ ಪಾದ್ರಿಗಳಲ್ಲಿ ಒಬ್ಬರು ನಿಮ್ಮ ದೇಶಕ್ಕೆ ಬಂದರೆ ನೀವು ಅವರಿಗೆ ಏನು ಮಾಡುತ್ತೀರಿ ! ಅವರನ್ನು ನೀವು ಮುಟ್ಟುವುದೂ ಕೂಡ ಇಲ್ಲ. ಅವರು ಮ್ಲೇಚ್ಛರು !...(೨೭/೧೦/೧೮೯೪-ಅಳಸಿಂಗ ಪೆರುಮಾಳ) ವೇದಿಕೆಗಳ ಮೇಲೆ ಆವೇಶಭರಿತರಾಗಿ ಕ್ರೈಸ್ತ ಪಾದ್ರಿಗಳನ್ನು ಕಟುವಾಗಿ ಟೀಕಿಸುತ್ತಿದ್ದ ಸ್ವಾಮಿಗಳಿಗೆ ಈ ಬಗ್ಗೆ ಒಳಗೊಳಗೆ ಅಳುಕಿದ್ದಿತು. ಭಾರತದಲ್ಲಿ ಪೆಟ್ರೊನನ್ನು ಕೆಟ್ಟದಾಗಿ ನಡೆಸಕೊಂಡಿದ್ದಕ್ಕೆ ತಪ್ಪಿತಸ್ಥ ಮನೋಭಾವ ಮೂಡಿದ್ದಿತು. ತಾವು ಪ್ರತಿಪಾದಿಸುತ್ತಿದ್ದ ಸರ್ವ ಸಹನೆಯ , ಸ್ವೀಕರಣದ ಭಾರತ ಅಮೆರಿಕದಿಂದ ಭಾರತಕ್ಕೆ ಬಂದಿದ್ದ ಪೆಟ್ರೊ ಎನ್ನುವಾತನಿಗೆ ಅವಮಾನಿಸಿದ್ದರೆ ಮತಾಂಧರೆಂದು ತಾವು ಟೀಕಿಸುತ್ತಿದ್ದ ಕ್ರೈಸ್ತ ಪಾದ್ರಿಗಳು ತಮ್ಮನ್ನು ಅವರ ಮನೆ , ಚರ್ಚ್’ಗಳಿಗೆ ಕರೆದು ಸತ್ಕರಿಸಿದ್ದು ಸ್ವಾಮಿಗಳ ಮನಸ್ಸಿನಲ್ಲಿ ತಳಮಳವನ್ನುಂಟು ಮಾಡಿದ್ದಿತು.
ಹರಿದಾಸ ವಿಹಾರಿದಾಸ ದೇಸಾಯಿಗಳು ಸಂನ್ಯಾಸಿ ಬಹಳ ದಿನ ಅಮೆರಿಕದಲ್ಲಿ ಇರುವ ಆವಶ್ಯಕತೆ ಏನಿದೆ? ನದಿಯಾದ್’ನವರಾದ ಮಣಿಲಾಲ ದ್ವಿವೇದಿಯವರು ಕಳಿಸಿದ ಲೇಖನಕ್ಕೆ ಎಂತಹ ಪ್ರತಿಕ್ರಿಯೆ ಸಿಕ್ಕಿತು ಎಂದು ಕೇಳಿದ್ದರು. ಇದಕ್ಕೆ ಉತ್ತರ ನೀಡುತ್ತ ೧೫/೧೧/೧೮೯೪ ರಂದು ಹರಿದಾಸ ವಿಹಾರಿದಾಸ ದೇಸಾಯಿಯವರಿಗೆ ಬರೆದ ಪತ್ರದಲ್ಲಿ ‘…ಜಗತ್ತಿನ ದೇಶಗಳಿಗೆ ನಾವು ಅನಾಗರಿಕರಲ್ಲ ಎಂದು ತೋರಿಸಲು , ಧರ್ಮ ನಮ್ಮ ಮೂಲ ಸಂಪತ್ತು ಎಂದು ಸಾಧಿಸಲು ಅಮೆರಿಕದಲ್ಲಿರಬೇಕಾಗಿದೆ’ ಎನ್ನುತ್ತ ಮಣಿಲಾಲ ದ್ವಿವೇದಿಯವರ ಲೇಖನ ಬಹಳ ದೀರ್ಘವಾಗಿದ್ದರಿಂದ ಅದರ ಸ್ವಲ್ಪ ಭಾಗವನ್ನು ತೆಗೆದುಹಾಕಲಾಯಿತು ಎಂದು ತಿಳಿಸಿ ‘.ಧರ್ಮ ಸಂಸತ್ತಿನಲ್ಲಿ ನಾನು ಮಾತನಾಡಿದೆ. ಅದರ ಪರಿಣಾಮ ಏನೆನ್ನುವುದನ್ನು ಇಲ್ಲಿರುವ ಪತ್ರಿಕೆಗಳಿಂದ , ನಿಯತ ಕಾಲಿಕೆಗಳಿಂದ ಹೇಳಬಲ್ಲೆ. ಇದರಿಂದ ನಾನು ಜಂಬ ಪಡಬೇಕಾದುದಿಲ್ಲ. ಆದರೆ ನಿಮ್ಮ ಮೇಲಿನ ಪ್ರೀತಿಯಿಂದ ಮತ್ತಾವ ಭಾರತೀಯನೂ ಅಮೆರಿಕದಲ್ಲಿ ಇಂತಹ ಪರಿಣಾಮ ಉಂಟುಮಾಡಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಲ್ಲೆ......... ನ್ಯೂಯಾರ್ಕ್ ಕ್ರಿಟಿಕ್ ನನ್ನ ಬಗ್ಗೆ ಬರೆದುದನ್ನು ಇಲ್ಲಿ ಉದ್ಧರಿಸುತ್ತೇನೆ. “ವಿವೇಕಾನಂದ ಯಾವುದೇ ಸಂಶಯವಿಲ್ಲದೆ ಧರ್ಮ ಸಂಸತ್ತಿನಲ್ಲಿಯೇ ಮಹೋನ್ನತ ವ್ಯಕ್ತಿ. ಆತನ ಮಾತುಗಳನ್ನು ಕೇಳಿದ ನಂತರ ಇಂತಹ ತಿಳಿದ ದೇಶಕ್ಕೆ ಮಿಷನರಿಗಳನ್ನು ಕಳಿಸುವುದು ಎಷ್ಟು ಮೂರ್ಖತನ ಎಂದು ನಮಗೆ ಎನಿಸುತ್ತದೆ’ ( ಹೆರಾಲ್ಡ್ ಇಲ್ಲಿಯ ಅತಿ ಮುಖ್ಯವಾದ ಪತ್ರಿಕೆ) …’ದಯವಿಟ್ಟು ಇದನ್ನು ಪ್ರಕಟಿಸಬೇಡಿ. ನಾನು ಭರತಖಂಡದಲ್ಲಿ ಇದ್ದಂತೆಯೇ ಇಲ್ಲಿಯೂ ಕೀರ್ತಿಯನ್ನು , ಪ್ರಖ್ಯಾತಿಯನ್ನು ದ್ವೇಷಿಸುತ್ತೇನೆ….’ ಆತ್ಮ ಪ್ರಶಂಸೆಯಿಂದ ಕೂಡಿದ್ದ ಈ ಹೇಳಿಕೆಗಳು ಸ್ವಾಮಿಗಳು ದೂರದಲ್ಲಿದ್ದ ಹರಿದಾಸ ವಿಹಾರಿದಾಸ ದೇಸಾಯಿಗಳನ್ನು ಬೆರಗಾಗಿಸುವ ತಂತ್ರವಾಗಿದ್ದವು. ಸ್ವಾಮಿಗಳು ತಮ್ಮನ್ನು ಹೊಗಳಿಕೊಂಡು ಪತ್ರ ಬರೆದಾಗ ಅದು ನಮ್ಮಿಬ್ಬರ ನಡುವೆ ಇರಲಿ , ಮೂರನೆಯವರಿಗೆ ಗೊತ್ತಾಗುವುದು ಬೇಡ ಎಂದು ಜಾನ್ ಹೆನ್ರಿ ರೈಟ್ , ಶ್ರೀಮತಿ ಹೇಲ್ ಮತ್ತು ಅಳಸಿಂಗ ಪೆರುಮಾಳ್’ಗೆ ತಿಳಿಸಿದ್ದರು. ಇದರಿಂದ ತಮ್ಮ ಬಗ್ಗೆ ಪತ್ರ ಪಡೆದವರು ವಿಶ್ವಾಸ ತಳೆಯಬೇಕು , ಅದೇ ವೇಳೆಗೆ ಅದು ಬೇರೆಯವರಿಗೆ ಗೊತ್ತಾಗಿ ಪ್ರಶ್ನಾರ್ಹವಾಗಬಾರದೆನ್ನುವ ಮುಂದಾಲೋಚನೆಯಿದ್ದಿತು.
ಸ್ವಾಮಿಗಳು ಈ ಹಿಂದೆ ಹರಿದಾಸರಿಗೆ ಮೂರು ಪತ್ರಗಳನ್ನು ಬರೆದಿದ್ದರು ( ೨೯/೧, ೨೦/೬, ೧/೯/೧೮೯೪) . ಮೊದಲನೆಯ ಪತ್ರದಲ್ಲಿ ತಮ್ಮ ತಾಯಿಯನ್ನು ಕಂಡು ಬಂದಿದ್ದಕ್ಕೆ ಕೃತಜ್ಞತೆ , ಎರಡನೆಯದರಲ್ಲಿ ತಮ್ಮನ್ನು ಬೆಂಬಲಿಸದಿದ್ದಕ್ಕೆ ಹೀಯಾಳಿಕೆ ಮತ್ತು ಮೂರನೆಯದರಲ್ಲಿ ತಮ್ಮನ್ನು ಬೆಂಬಲಿಸಿದ್ದಕ್ಕೆ ಮೆಚ್ಚುಗೆ ಸೂಚಿಸಿದ್ದರು. ಈ ಯಾವ ಪತ್ರಗಳಲ್ಲಿಯೂ ಭಾರತದಿಂದ ಧರ್ಮ ಸಂಸತ್ತಿಗೆ ಹೋಗಿದ್ದ ಯಾವ ಪ್ರತಿನಿಧಿಯ ಬಗ್ಗೆಯೂ ಒಂದೂ ಮಾತನ್ನು ಮಾಹಿತಿಗಾಗಿಯಾದರೂ ಕೂಡ ಹೇಳಿರಲಿಲ್ಲ. ಹರಿದಾಸ ವಿಹಾರಿದಾಸ ದೇಸಾಯಿ ಮತ್ತು ಮಣಿಲಾಲ ದ್ವಿವೇದಿ ಇಬ್ಬರೂ ನಾದಿಯಾದ್ ಪ್ರದೇಶದವರು. ಆದ್ದರಿಂದ ದೇಸಾಯಿಯವರು, ಧರ್ಮ ಸಂಸತ್ತಿನಲ್ಲಿ ಮಣಿಲಾಲ ದ್ವಿವೇದಿಯವರು ಪ್ರಬಂಧ ಹೇಗೆ ಸ್ವೀಕರಿಸಲ್ಪಟ್ಟಿತೆಂದು ಕೇಳಿದ್ದರು. (೨೬/೪/೧೮೯೨ ರಲ್ಲಿ ಬರೋಡಾದಲ್ಲಿ ಸ್ವಾಮಿಗಳು ಮಣಿಲಾಲ ದ್ವಿವೇದಿಯನ್ನು ಭೇಟಿ ಮಾಡಿದ್ದರು). ಅವರ ಬಗ್ಗೆ ದಿ ನ್ಯೂಯಾರ್ಕ್ ಹೆರಾಲ್ಡ್ (೧೨/೯/೧೮೯೩) ಮತ್ತು ಷಿಕಾಗೊ ಇಂಟರ್ ಓಷನ್’ಗಳಲ್ಲಿ (೧೩/೯/೧೮೯೩) ಬಂದಿದ್ದ ಮೆಚ್ಚುಗೆಯನ್ನಾಗಲಿ , ಷಿಕಾಗೊ ಹೆರಾಲ್ಡ್ ( ೧೩/೯/೧೮೯೩) ಪ್ರಕಟಿಸಿದ್ದ ಚಿತ್ರಗಳ ಬಗ್ಗೆಯಾಗಲಿ ಸ್ವಾಮಿಗಳು ಏನನ್ನೂ ಹೇಳದೆ ತಮ್ಮನ್ನು ಹೊಗಳಿರುವ ಹೆರಾಲ್ಡ್ ಪತ್ರಿಕೆಯ ಹೇಳಿಕೆಯನ್ನು ಉದ್ಧರಿಸಿದರು. ತಮಗೆ ಸಂಬಂಧಿಸಿದ ತಾವೇ ತಿದ್ದುಪಡಿ ಮಾಡಿದ ‘ನ್ಯೂಯಾರ್ಕ್ ಕ್ರಿಟಿಕ್’ ಮತ್ತು ‘ನ್ಯೂಯಾರ್ಕ್ ಹೆರಾಲ್ಡ್ ‘ ಸುದ್ದಿಗಳನ್ನು ಕಳಿಸಲು ಮರೆಯಲಿಲ್ಲ. ಸ್ಥಳೀಯ ಪತ್ರಿಕೆಗಳು ಮಣಿಲಾಲ ದ್ವಿವೇದಿಯವರ ಪ್ರಬಂಧದ ಬಗ್ಗೆ ಒಳ್ಳೆಯ ಅಭಿಪ್ರಾಯ ಸೂಚಿಸಿ ಬರೆದಿದ್ದವು. ಅದನ್ನು ತಿಳಿಸುವುದಾಗಲಿ ಅಥವಾ ಆ ಪತ್ರಿಕೆಯ ತುಣುಕುಗಳನ್ನು ಕಳಿಸುವುದಾಗಲಿ ಮಾಡಲಿಲ್ಲ. ಹೆರಾಲ್ಡ್ ಹೆಸರಿನ ಯಾವ ಪತ್ರಿಕೆಯೂ ಅಸ್ತಿತ್ವದಲ್ಲಿ ಇರಲಿಲ್ಲ. ಇದೇ ಪತ್ರದಲ್ಲಿ (೧೫/೧೧/೧೮೯೪) ‘ ಈ ಪತ್ರವನ್ನು ಪ್ರಕಟಿಸಬೇಡಿ. ಭಾರತದಲ್ಲಿದ್ದಂತೆ ನಾನು ಈಗಲೂ ಕೀರ್ತಿ ದ್ವೇಷಿ ಎಂದಿದ್ದಾರೆ. ಇದಾದ ಹನ್ನೆರಡೇ ದಿನಗಳ ನಂತರ ‘ ಮದ್ರಾಸಿನ ಜನ ನನಗೆ ಅರ್ಪಿಸಿದ ಗೊತ್ತುವಳಿಗೆ ಉತ್ತರ ಸಿದ್ಧಪಡಿಸುತ್ತಿದ್ದೇನೆ. ಅದನ್ನು ಇಲ್ಲಿಯ ಪತ್ರಿಕೆಗಳು ಪ್ರಸಿದ್ಧಪಡಿಸಿವೆ. ಅಗ್ಗದಲ್ಲಿ ಆಗುವುದಾದರೆ ಅದನ್ನು ಮುದ್ರಿಸಿ , ತುಟ್ಟಿಯಾದರೆ ಒಂದು ಪ್ರತಿಯನ್ನು ಟೈಪ್ ಮಾಡಿಸಿ ನಿನಗೂ ಒಂದು ಪ್ರತಿ ಕಳಿಸುತ್ತೇನೆ. ಅದನ್ನು ‘ದಿ ಇಂಡಿಯನ್ ಮಿರರ್’ನಲ್ಲಿ ಪ್ರಚಾರಪಡಿಸು ‘ ಹಂಬಲಿಕೆಯನ್ನು ವ್ಯಕ್ತಪಡಿಸುತ್ತ ಕೀರ್ತಿದ್ವೇಷಿ ಸ್ವಾಮಿಗಳು ರಾಮಕೃಷ್ಣಾನಂದರಿಗೆ ಪತ್ರ ಬರೆದಿದ್ದಾರೆ. (೨೫/೯/೧೮೯೪) .
ಸ್ವಾಮಿಗಳ ಆದೇಶದಂತೆ ಮದ್ರಾಸ್ , ಕಲ್ಕತ್ತದ ಗೊತ್ತುವಳಿ ಮತ್ತು ಅವನ್ನು ಕುರಿತಾಗಿ ಭಾರತದ ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಶಿಷ್ಯರು , ಗುರುಭಾಯಿಗಳು ಭಾರಿ ಕಂತೆಗಳಲ್ಲಿ ಅಮೆರಿಕಕ್ಕೆ ಕಳಿಸತೊಡಗಿದರು. ಈ ಕೆಲಸ ಮದ್ರಾಸ್ ಮತ್ತು ಕಲ್ಕತ್ತ ಎರಡೂ ಕಡೆಯಿಂದ ನಡೆಯುತ್ತಿರುವಂತಿದೆ. ಗೊತ್ತುವಳಿಗಳ ಮೂಲಕ ಸ್ವಾಮಿಗಳು ಭಾರತ ಮತ್ತು ಅಮೆರಿಕದಲ್ಲಿ ಮತ್ತೆ ಬೆಳಕಿಗೆ ಬಂದಿದ್ದರು. ಭಾರತದ ಶಿಷ್ಯರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರ ಫಲ ಬೇಕಾದ ರೂಪದಲ್ಲಿ ದಕ್ಕಿದ್ದಿತು. ಹೀಗಾಗಿ ‘….ಭಾರತದಿಂದ ಗಾಡಿಗಟ್ಟಲೆ ಪತ್ರಿಕೆಯ ಹೊರೆ ಬಂದು ನನಗೆ ಬೇಸರವಾಯಿತು. ಮದರ್ ಚರ್ಚ್’ಗೆ (ಶ್ರೀಮತಿ ಜಾರ್ಜ್ ಹೇಲ್) ಒಂದು ಹೊರೆ, ಶ್ರೀಮತಿ ಗರ್ನ್ಸೆಗೆ ಒಂದು ಹೊರೆ ಕಳಿಸಿದ ನಂತರ ಇನ್ನು ಮೇಲೆ ಪತ್ರಿಕೆಗಳನ್ನು ಕಳಿಸಬೇಡಿ ಎಂದು ತಿಳಿಸಿದ್ದೇನೆ. ಭರತಖಂಡದಲ್ಲಿ ನನಗೆ ಬೇಕಾದಷ್ಟು ಕೀರ್ತಿ ಬಂದಾಯಿತು. ಈಗ ಅಲ್ಲಿ ಪ್ರತಿ ಹಳ್ಳಿಯಲ್ಲಿ ನನ್ನ ವಿಷಯ ತಿಳಿದಿದೆ ಎಂದು ಅಳಸಿಂಗ ಬರೆಯುತ್ತಾನೆ. …ಈ ಭಾರತದ ಪತ್ರಿಕೆಗಳು ನನಗೆ ಮೃತ್ಯುಪ್ರಾಯವಾಗುವುದರಲ್ಲಿ ಸಂದೇಹವಿಲ್ಲ. ಇನ್ನು ಮೇಲೆ ನಾನು ಸೀನಿದ್ದು , ಉಂಡಿದ್ದು ಎಲ್ಲ ಬರೆಯುವುವು. ದೇವರು ಅವರನ್ನು ಆಶೀರ್ವರ್ದಿಸಲಿ. ಇದೆಲ್ಲಾ ನನ್ನ ಹುಚ್ಚುತನ. ಯಾರಿಗೂ ಗೊತ್ತಾಗದಂತೆ ನಾನು ಇಲ್ಲಿ ಸ್ವಲ್ಪ ಹಣ ಸಂಗ್ರಹಿಸಿಕೊಂಡು ಹೋಗಲು ಬಂದೆ. ಬಲೆಗೆ ಬಿದ್ದೆ. ಇನ್ನ್ನು ಮೇಲೆ ಅಜ್ಞಾತವಾಸವೆಲ್ಲ ಕೊನೆಗೊಂಡಿತು’ ಎಂದು ಮೇರಿ ಹೇಲ್ ಮುಂದೆ ಚಡಪಡಿಸಿದರು. (೧/೧೧/೧೮೯೪). ಅಭೇದಾನಂದರಿಗೆ ‘ಇನ್ನು ಮಂದೆ ಕಂತೆ , ಕಂತೆ ಪತ್ರಿಕೆಗಳನ್ನು ಕಳಿಸಬೇಡ’ , ಶಿವಾನಂದರಿಗೆ ‘ ಅತಿಯಾದರೆ ಎಲ್ಲವದೂ ಕೆಟ್ಟದ್ದೇ. ಪತ್ರಿಕೆಗಳ ಹೊಗಳಿಕೆಯಿಂದ ನಾನೇನೋ ಖ್ಯಾತನಾಗಿರುವೆನು. ಅದರೆ ಪರಿಣಾಮ ಇಲ್ಲಿಗಿಂತ ಭಾರತದಲ್ಲಿ ಹೆಚ್ಚು. ಯಾವಾಗಲೂ ಹೊಗಳುತ್ತಿದ್ದರೆ ಉನ್ನತ ವರ್ಗದಲ್ಲಿ ಒಂದು ಬಗೆಯ ಜುಗಪ್ಸೆ ಹುಟ್ಟುತ್ತದೆ, ಆದ್ದರಿಂದ ಅದು ಇಲ್ಲಿಗೆ ಸಾಕು ‘ ಎಂದು ತಾಕೀತು ಮಾಡಿದರು. (?/೧೨/೧೮೯೪) ,
ಸ್ವಾಮಿಗಳು ತಮ್ಮ ಪರವಾಗಿ ಗೊತ್ತುವಳಿಗಳನ್ನು ಪಡೆಯಲು ಏಕೆ ಅಷ್ಟು ಕಾತರರಾಗಿದ್ದರು ? ಅಮೆರಿಕದ ಪಾದ್ರಿಗಳು , ಬ್ರಾಹ್ಮ ಸಮಾಜಿಗಳು , ಥಿಯೋಸೊಫಿಸ್ಟರು ಅವರ ವಿರುದ್ಧ ಸಂಚು ಹೂಡಿದ್ದರೆ ? ಹಾಗೆ ಹೂಡಿರುವುದುಕ್ಕೆ ಈವರೆಗೆ ಯಾರೂ ಒಂದೇ ಒಂದು ಪುರಾವೆಯನ್ನು ಮುಂದಿರಿಸಿಲ್ಲ. ಸ್ವಾಮಿಗಳು ಧರ್ಮಪಾಲ (?/?/೧೮೯೪) , ಅಳಸಿಂಗ ಪೆರುಮಾಳ್ (೨೭/೯/೧೮೯೪) ಇವರಿಗೆ ಬರೆದ ಪತ್ರಗಳಿಂದ , ಅಯೋವಾ ರಿಜಿಸ್ಟರ್’ನಂತಹ ಅಮೆರಿಕ ಪತ್ರಿಕೆಗಳ ವರದಿಯಿಂದ ಉದಾರವಾದಿ ಕ್ರೈಸ್ತರು , ಪಾದ್ರಿಗಳು , ಚರ್ಚ್’ಗಳು ಸ್ವಾಮಿಗಳ ಪರ ನಿಂತಿರುವುದು ಸ್ಪಷ್ಟವಾಗುತ್ತದೆ. ಸ್ವಾಮಿಗಳು ಭಾರತದ ಸಂಘ , ಸಂಸ್ಥೆಗಳಿಂದ ಪ್ರತಿನಿಧಿಸಲ್ಪಟ್ಟಿಲ್ಲ ಎಂದು ಅಮೆರಿಕದ ಜನ ತಿರಸ್ಕರಿಸಿದ್ದರೇ ? ಅದು ಸಾದ್ಯವಿಲ್ಲ. ಏಕೆಂದರೆ ಸ್ವಾಮಿಗಳು ೧೮೯೩ ಸೆಪ್ಟೆಂಬರ್’ನಿಂದ ೧೮೯೪ ರ ಡಿಸೆಂಬರ್ ವೇಳೆಗೆ ೨೮ ಸಾರ್ವಜನಿಕ , ೧೬ ಪಡಸಾಲೆ , ೧೯ ಚರ್ಚ್ ಮತ್ತು ೨೯ ಕೂಟ ಹೀಗೆ ಆವರೆಗೆ ಅಮೆರಿಕದಲ್ಲಿದ್ದ ೫೨೫ ದಿನಗಳಲ್ಲಿ ಒಟ್ಟು ೯೨ ಭಾಷಣಗಳನ್ನು , ಎಂದರೆ ಸರಾಸರಿ ಆರು ದಿನಕ್ಕೆ ಒಂದರಂತೆ ಭಾಷಣಗಳನ್ನು ಮಾಡಿದ್ದರು. ವಿದೇಶಿ ನೆಲದಲ್ಲಿ ಸಾಂಘಿಕ ವಿರೋಧವಿದ್ದರೆ ಇಷ್ಟೊಂದು ಭಾಷಣಗಳನ್ನು ಮಾಡಲು ಸಾದ್ಯವೇ ಇಲ್ಲ. ಸ್ವಾಮಿಗಳ ಭಾಷಣಗಳಿಗೆ ಬಹುತೇಕ ವೇಳೆ ಜನ ಸ್ಪಷ್ಟತೆಯನ್ನು ಬಯಸಿ ಪ್ರಶ್ನಿಸುತ್ತಿದ್ದರು. ಅದನ್ನು ವಿರೋಧ ಎನ್ನುವಂತಿಲ್ಲ. ಯಾರಾದರೂ , ಎಲ್ಲಿಯಾದರೂ ಎಂದಾದರೂ ವ್ಯಕ್ತಿ ಅಥವಾ ಸಂಘ , ಸಂಸ್ಥೆಯ ರೂಪದಲ್ಲಿ ಸ್ವಾಮಿಗಳ ಭಾಷಣಕ್ಕೆ ಅಡ್ಡಿ ಪಡಿಸಿದ್ದಕ್ಕೂ ಯಾವುದೇ ಸಾಕ್ಷ್ಯಾದಾರಗಳಿಲ್ಲ. ಸ್ವಾಮಿಗಳ ದೀರ್ಘ ಭಾಷಣಗಳನ್ನು ಪ್ರಕಟಿಸಿದ ಪತ್ರಿಕೆಗಳು ಅಂತಹ ಘಟನೆಯನ್ನು ತಿಳಿಸದೆ ಬಿಡುತ್ತಿರಲಿಲ್ಲ. ಹಾಗಾದರೆ ಸ್ವಾಮಿಗಳು ಏಕೆ ಗೊತ್ತುವಳಿಗಳನ್ನು ಬಯಸಿದ್ದರು ? ತಮ್ಮ ಜೀವನ ಶೈಲಿಯನ್ನು ಕುರಿತಾಗಿ ಮಾಡಿದ ಟೀಕೆಗಳನ್ನು ಆತ್ಮ ವಿಮರ್ಶೆಯ ಮೂಲಕ ತಿದ್ದಿಕೊಳ್ಳುವುದು ಅವರಿಗೆ ಬೇಕಿರಲಿಲ್ಲ. ಭಾರತದಲ್ಲಿದ್ದ ಶಿಷ್ಯ , ಗುರುಭಾಯಿ ಮತ್ತು ದೇಶ ಬಾಂಧವರಿಗೆ ಸ್ವಾಮಿಗಳು ಏಕಾಂಗಿಯಾಗಿ ವಿದೇಶಿ ನೆಲದಲ್ಲಿ ಹೋರಾಡುತ್ತಿರುವರೆನ್ನುವ ನಂಬಿಕೆ ಹುಟ್ಟಿಸಿದ್ದರು. ಅದರ ಮುಂದುವರಿಕೆಯಾಗಿ ಗೊತ್ತುವಳಿಗಳು ಬೇಕಾಗಿದ್ದವು. ಅಮೆರಿಕದಲ್ಲಿ ಪ್ರಚಾರವೂ ಬೇಕಾಗಿದ್ದಿತು. ಅದು ಸಾಧನೆಯಾದ ನಂತರ ಪತ್ರಿಕೆ ಪ್ರಚಾರ , ಸುದ್ದಿಗಳನ್ನು ಜುಗುಪ್ಸೆಯಿಂದ ನೋಡುತ್ತಿದ್ದಾರೆ ಎನ್ನುವಂತೆ ವರ್ತಿಸಿದರು.
ಸ್ವಾಮಿಗಳ ಗೊತ್ತುವಳಿಯ ಗುರಿಯನ್ನು ಅವರ ಬಾಯಿಂದಲೇ ಕೇಳಬಹುದು. ‘ಭಾರತದಲ್ಲಿ ಪ್ರಚಾರವಾಗುತ್ತಿರುವ ವಿಷಯಗಳನ್ನು ಇಲ್ಲಿಗೆ ಕಳಿಸಿದರೆ ಬುಟ್ಟಿಗೆ ಎಸೆಯುತ್ತೇನೆ. ನಮ್ಮ ಕೆಲಸಕ್ಕೆ ಕೊಂಚ ಉರುಬು ಬೇಕಾಗಿದ್ದಿತು. ಅದು ಈಗ ಸಾಕಷ್ಟು ಸಿಕ್ಕಿದೆ. (ಆದ್ದರಿಂದ) ಜನರು ನನ್ನ ಬಗ್ಗೆ ಹೇಳುವ ಒಳ್ಳೆಯ ಅಥವಾ ಕೆಟ್ಟ ವಿಷಯಗಳಿಗೆ ಗಮನ ಕೊಡಬೇಡ. …..ಇಲ್ಲಿನ ಜನ ಪ್ರತಿದಿನ ನನ್ನನ್ನು ಮೆಚ್ಚುತ್ತಿರುವರು. ಈ ವಿಷಯ ನಮ್ಮಿಬ್ಬರ ನಡುವಿರಲಿ. ಇಲ್ಲಿ ನನ್ನ ಪ್ರಭಾವ ಎಷ್ಟಿದೆಯೆಂದು ನೀನು ಊಹಿಸಲೂ ಸಾದ್ಯವಿಲ್ಲ. ..ಹಿಂದೆಯೂ ಬರೆದಿದ್ದೆ ಮತ್ತು ಈಗಲೂ ಬರೆಯುತ್ತಿದ್ದೇನೆ. ಪತ್ರಿಕೆಗಳಲ್ಲಿ ಬರುವ ಹೊಗಳಿಕೆ , ತೆಗಳಿಕೆಗಳಿಗೆ ನಾನು ಬೆಲೆ ಕೊಡುವುದಿಲ್ಲ. ಅವೆಲ್ಲವನ್ನೂ ಬೆಂಕಿಗೆ ಹಾಕುತ್ತೇನೆ. ( ೨೬/೧೨/೧೮೯೪-ಅಳಸಿಂಗ ಪೆರುಮಾಳ್) . ಬೋಸ್ಟನ್ ನಗರವನ್ನು ಅಮೆರಿಕದ ಮಿದುಳೆಂತಲೂ , ನ್ಯೂಯಾರ್ಕ್ ನಗರವನ್ನು ಹಣದ ಥೈಲಿಯೆಂತಲೂ ಕರೆಯಬಹುದು. ಈ ಎರಡು ನಗರಗಳಲ್ಲಿ ನಾನು ಸಾಧಾರಣಕ್ಕಿಂತ ಹೆಚ್ಚಿನ ಜಯ ಸಾಧಿಸಿದ್ದೇನೆ. ನೀವು ನನ್ನಿಂದ ಪತ್ರಿಕೆಗಳ ವರದಿಯನ್ನು ನಿರೀಕ್ಷಿಸಬೇಡಿ. ಕೆಲಸದ ಆರಂಭದಲ್ಲಿ ಇಂತಹ ಒಂದು ಗದ್ದಲದ ಆವಶ್ಯಕತೆಯಿತ್ತು. ಅದರಿಂದ ನಮಗೆ ಬೇಕಾದುದಕ್ಕಿಂತ ಹೆಚ್ಚೇ ಪಡೆದದ್ದಾಯಿತು. ಎಲ್ಲ ವೃತ್ತ ಪತ್ರಿಕೆಗಳು ಹೊಗಳುತ್ತಿರುವುದಕ್ಕಿಂತ ನನ್ನ ಪ್ರಭಾವ ಹೆಚ್ಚಿನದು-ಯಾರಿಂದಲೂ ನನ್ನ ದೇಹದ ಒಂದು ಕೂದಲನ್ನು ಕೊಂಕಿಸಲೂ ಆಗುವುದಿಲ್ಲ’’ (೧೧/೧/೧೮೯೫-ಜಿ.ಜಿ ನರಸಿಂಹಾಚಾರಿ). ಭಾರತದಿಂದ ಕಳಿಸಿರುವ ಕೃತಜ್ಞತೆಯ ಪತ್ರಕ್ಕೆ ಡಾಕ್ಟರ್ ಬರೋಸ್ ನೀಡಿದ್ದ ಸಂಕ್ಷಿಪ್ತ ಉತ್ತರವನ್ನು ಪ್ರಕಟಸಿದ್ದ ಪತ್ರಿಕೆಯೊಂದನ್ನು ಭಾರತದಿಂದ ತರಿಸಿದ್ದೇನೆ. ಶ್ರೀಮತಿ ಥರ್ಸ್’ಬಿ ಅದನ್ನು ನಿಮಗೆ ಕಳಿಸುವರು. ನಿನ್ನೆ ಭಾರತದಿಂದ ಬಂದ ಮತ್ತೊಂದು ಪತ್ರದಲ್ಲಿ ಮದ್ರಾಸ್ ಸಭೆಯ ಅಧ್ಯಕ್ಷರು ಅಮೆರಿಕನ್ನರಿಗೆ ವಂದನೆಗಳನ್ನರ್ಪಿಸಿ, ನನಗೆ ಒಂದು ಗೊತ್ತುವಳಿ ಕಳಿಸುವಂತೆ ಬರೆದಿರುವರು. ಇವರು ಮದ್ರಾಸಿನ ಒಬ್ಬ ಮುಖ್ಯ ವ್ಯಕ್ತಿ ಮತ್ತ ಭಾರತದ ಅತ್ಯಂತ ಉಚ್ಛ ಪದವಿಯಾದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು’ (೭/೫/೧೮೯೫-ಸಾರಾ ಬುಲ್). ಹೀಗೆ ಸ್ವಾಮಿಗಳು ತಮ್ಮ ಪರವಾಗಿ ಭಾರತದಿಂದ ಗೊತ್ತುವಳಿಗಳನ್ನು ಪಡೆದುಕೊಂಡು ಅವುಗಳನ್ನು ಅಮೆರಿಕ ಪತ್ರಿಕೆಗಳಲ್ಲಿ , ಅವು ಅಮೆರಿಕ ಪತ್ರಿಕೆಗಳಲ್ಲಿ ಬಂದಿವೆಯೆಂದು ಭಾರತದ ಪತ್ರಿಕೆಗಳಲ್ಲಿ ಸುದ್ದಿಗಳನ್ನು ಹಬ್ಬಿಸುವಲ್ಲಿ ಯಶಸ್ವಿಗಳಾದರು.
Comment Box is loading comments...