ರಾಮಕೃಷ್ಣ –ವಿವೇಕಾನಂದ ಪ್ರಸಂಗ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ )
ಪದ್ಮನಾಥ ಭಟ್ಟಾಚಾರ್ಯ ಎನ್ನುವವರು ಬಂಗಾಳಿಯಲ್ಲಿ ಬರೆದಿರುವ ಈ ಪುಸ್ತಕದಲ್ಲಿ ಸ್ವಾಮಿಗಳು ಹಿಂದೂ ಧರ್ಮದ ಸಾಂಪ್ರದಾಯಿಕ ಪರಿಕಲ್ಪನೆಗಳಿಗೆ ಅನುಗುಣವಾಗಿ ಸಂನ್ಯಾಸಿಗಳಾಗಿರಲಿಲ್ಲ ಎಂದು ವಾದಿಸಿದ್ದಾರೆ. ಈ ಲೇಖಕ ‘ಸಾಹಿತ್ಯ’ ಪತ್ರಿಕೆಯಲ್ಲಿ ೧೯೨೦ ಡಿಸೆಂಬರ್’ನಿಂದ ಜುಲೈ ೧೯೨೧ ರವರೆಗೆ ಬರೆದ ಲೇಖನಗಳ ಸಂಗ್ರಹವಿದು. ಈ ಲೇಖನಗಳ ಪರ ಮತ್ತು ವಿರುದ್ಧವಾಗಿ ‘ಕಾಯಸ್ಥ ಪತ್ರಿಕೆ’ ಮತ್ತು ‘ಬ್ರಾಹ್ಮಣ ಸಮಾಜ’ ಪತ್ರಿಕೆಗಳಲ್ಲಿ ಹಲವು ಅಬಿಪ್ರಾಯಗಳು ಮೂಡಿಬಂದವು. ಈ ಪುಸ್ತಕದ ಆಯ್ದ ಭಾಗ ಮುಂದಿದೆ.
ಇಂದಿನಿಂದ (೧೯೨೧) ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ತಮ್ಮ ತಂಡದೊಂದಿಗೆ ಗುವಾಹತಿಗೆ ಬಂದಿದ್ದರು. ಕೆಲದಿನ ಇಲ್ಲಿ ಉಳಿದು , ಪವಿತ್ರ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಷಿಲ್ಲಾಂಗ್’ಗೆ ಹೋಗಿ ಮತ್ತೊಮ್ಮೆ ಮರಳಿ ಗುವಾಹತಿಗೆ ಬಂದು ಒಂದೆರಡು ದಿನ ಉಳಿದಿದ್ದರು. ಗುವಾಹತಿಯ ಜನಸಂಖ್ಯಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಷಿಲ್ಲಾಂಗ್’ಗೆ ಹೋಗುವ ಮೊದಲು ಮತ್ತು ಅಲ್ಲಿಂದ ಹಿಂದಿರುಗಿದ ನಂತರ ಸ್ವಾಮಿಗಳನ್ನು ಭೇಟಿ ಮಾಡುವ ಸದಾವಕಾಶ ದಕ್ಕಿದ್ದಿತು.
೧೯೦೧ ರಲ್ಲಿ ಮಹಾ ವಿಷುವ ಸಂಕ್ರಾತಿಗೆ ಮೊದಲು ಸ್ವಾಮಿ ವಿವೇಕಾನಂದರು ಗುವಾಹತಿ ನಗರಕ್ಕೆ ಬಂದರು. ಅವರ ಪ್ರವಾಸದ ತಂಡದಲ್ಲಿ ಹಲವಾರು ಗಂಡಸರು , ಇಬ್ಬರು ಹೆಂಗಸರು ಇದ್ದರು. ಅವರ ತಾಯಿ ಕಾಮಾಕ್ಯ ದರ್ಶನಕ್ಕೆ ಅವರೊಂದಿಗೆ ಬಂದಿದ್ದರು. ದೊಡ್ಡ ಬಂಗಲೆಯಲ್ಲಿ ಅವರ ವಸತಿಯನ್ನು ಏರ್ಪಡಿಸಲಾಗಿದ್ದು ಅವರ ಪ್ರವಾಸ , ವಸತಿ ಮತ್ತಿತರ ವೆಚ್ಚ ಭರಿಸಲು ಸಾರ್ವಜನಿಕರಿಂದ ಚಂದಾ ಎತ್ತಲಾಗಿದ್ದಿತು.
ಸಂಕ್ರಾತಿಯ ಹಿಂದಿನ ದಿನ ಸಜ್ಜನರೊಬ್ಬರೊಂದಿಗೆ ನಾನು ಅವರಿದ್ದ ಬಂಗಲೆಗೆ ಹೋದೆನು. ವರಾಂಡದಲ್ಲಿ ಸ್ಟೂಲಿನ ಮೇಲೆ ಕಾವಿ ಪಂಚೆ ಮತ್ತು ಬನಿಯನ್ ಉಟ್ಟ ವ್ಯಕ್ತಿಯೊಬ್ಬನನ್ನು ಕಂಡೆವು. ಆತನ ಕೂದಲು ಕೆದರಿದ್ದು , ಎಲೆ ಜಗಿದಿದ್ದರಿಂದ ತುಟಿಗಳು ಕೆಂಪಾಗಿದ್ದವು. ಈತ ಸ್ವಾಮಿಗಳ ಚೇಲಾ ಆಗಿರಬೇಕೆಮ್ದು ನಾನು ಭಾವಿಸಿದೆ. ನಾನು ಸ್ವಾಮಿಗಳ ಪ್ರಕಟಿತ ಫೋಟೊಗಳನ್ನು ಈ ಮೊದಲೇ ನೋಡಿದ್ದು , ಈ ವ್ಯಕ್ತಿಯನ್ನು ಅವರೊಂದಿಗೆ ಹೋಲಿಸಲು ಸಾದ್ಯವಿರಲಿಲ್ಲ. ( ನನ್ನ ಗಮನ ವಿಚಲಿತವಾಗಿದ್ದರಿಂದ ನನಗೆ ಸರಿಯಾಗಿ ನೆನಪಿಲ್ಲವಾದರೂ ಅವರ ಹಣೆಯ ಮೇಲೆ ಗಾಯದ ಗುರುತಿದ್ದಿತು ; ಆದರೆ ಅವರ ಫೋಟೊಗಳಲ್ಲಿ ಆ ಗುರುತು ಕಾಣುವುದಿಲ್ಲ ; ಪ್ರಮಥನಾಥ ಬಸು ಬರೆದ ಜೀವನ ಚರಿತ್ರೆಯಲ್ಲಿಯ ಇಂತಹ ಗುರುತು ಇರುವುದನ್ನು ತಿಳಿಸುತ್ತದೆ. ಭಕ್ತರ ಭಾವನೆಗಳಿಗೆ ಧಕ್ಕೆಯಾಗಬಾರದೆಂದು ಫೋಟೊಗಳಲ್ಲಿ ಆ ಗುರುತನ್ನು ಅಳಿಸಲಾಗಿದೆಯೇ ? ಅವರ ಜೀವನ ಚರಿತ್ರೆಗಳಲ್ಲಿಯೂ ಇಂತಹ ತಿದ್ದುಪಡಿ ಆಗಿದೆಯೇ ? ) ಅದೇನೇ ಇರಲಿ ನಾನು ಅಲ್ಲಿ ಕುಳಿತಿದ್ದ ವ್ಯಕ್ತಿಗೆ ‘ ನಾವು ಸ್ವಾಮಿಗಳನ್ನು ನೋಡಲು ಬಂದಿದ್ದೇವೆ. ಅವರು ಸಿಗುತ್ತಾರೆಯೇ ? ಎಂದು ಕೇಳಿದೆವು. ಆಗ ಆತ ಸ್ವಲ್ಪ ನಗುತ್ತ ‘ ನೀವು ಏತಕ್ಕೆ ಬಂದಿರುವಿರೆಂದು ನನಗೆ ತಿಳಿಸಿರಿ ‘ ಎಂದನು. ( ಇಪ್ಪತ್ತು ವರ್ಷಗಳ ನಂತರ ಆತ ಹೀಗೆಯೇ ಹೇಳಿದನೋ ಅಥವಾ ಬೇರೆ ರೀತಿಯಲ್ಲಿ ಹೇಳಿದನೋ ಎನ್ನುವುದು ಮತ್ತು ಆತನೊಂದಿಗೆ ಆಡಿದ ಮಾತುಗಳ ಸ್ಪಷ್ಟ ನೆನಪು ನನಗಿಲ್ಲವಾದರೂ , ನಾನು ದಿನಚರಿ ಬರೆಯದಿರುವುದರಿಂದ ಖಚಿತ ದಿನಾಂಕ ತಪ್ಪಿರಬಹುದಾದರೂ , ನಾವು ಮಾತನಾಡಿದ ವಿಷಯ ಮುಖ್ಯ ವಿಚಾರ ಸರಿಯಾಗಿ ನೆನಪಿದೆ. ). ಮಾತಿನ ನಡುವೆ ನನಗೆ ನಮ್ಮೊಂದಿಗೆ ಮಾತನಾಡುತ್ತಿರುವ ಈ ವ್ಯಕ್ತಿಯೇ ಜಗತ್ಪ್ರಸಿದ್ಧ ಸ್ವಾಮಿ ವಿವೇಕಾನಂದ ಎನ್ನುವುದು ಗೊತ್ತಾಯಿತು. ನನ್ನೊಂದಿಗೆ ಬಂದಾತ ಸ್ವಾಮಿಗಳಿಗೆ ನನ್ನನ್ನು ಪರಿಚಯಿಸಿದನು. ನಂತರ ಹಲವು ವಿಷಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದೆವು.
ಮಾತಿನ ನಡುವೆ ನಮ್ಮ ಪ್ರಾಚೀನ ಸಂಸ್ಕೃತಿಯ ಚರ್ಚೆಯೂ ಬಂದಿತು. ಆಗ ಸ್ವಾಮಿಗಳು ‘ಬೌದ್ಧರಿಗಿಂತ ಮೊದಲು ಭಾರತದ ಶಿಲ್ಪಕಲೆ ಸಾಮಾನ್ಯವಾಗಿ ಹೇಳಿಕೊಳ್ಳುವಂತಿರಲಿಲ್ಲ’ ಎಂದರು. ಆಗ ನಾನು ರಾಮಾಯಣ , ಮಹಾಭಾರತಗಳಲ್ಲಿ ಭವ್ಯ ಭವನಗಳ ವರ್ಣನೆ ಇದೆಯಲ್ಲ ‘ ಎಂದು ಮರುಪ್ರಶ್ನಿಸಿದೆನು. ಆಗ ಅವರು ‘ಓ ಅದೆಲ್ಲ ಉತ್ಪ್ರೇಕ್ಷೆ’ ಎಂದರು. ಸ್ವಲ್ಪ ಹೊತ್ತಿನ ನಂತರ ‘ ನೀನು ತೊಟ್ಟಿರುವ ಆ ಪವಿತ್ರ ದಾರ (ಯಜ್ಞೋಪವೀತ) ಪರ್ಷಿಯಾದಿಂದ ಬಂದಿದೆ’ ಎಂದು ತಿಳಿಸಿದರು. ಆಗ ನಾನು ‘ಅದನ್ನು ಹೇಗೆ ಹೇಳುತ್ತೀರಿ ? ‘ ಎಂದು ಪ್ರಶ್ನಿಸಿದೆ. ‘ವೇದದಲ್ಲಿ ಯಜ್ಞೋಪವೀತವನ್ನು ಶುದ್ಧೀಕರಿಸಿಕೊಳ್ಳುವ ಒಂದು ಮಂತ್ರವಿದೆ . ಆ ಮಂತ್ರವನ್ನು ನನಗೆ ಹೇಳಬಲ್ಲೆಯಾ ? ಎಂದು ಕೇಳಿದರು. ಆಗ ನಾನು ‘ಯಜ್ಞೋಪವೀತಂ ಪರಮಂ ಪವಿತ್ರಂ…ಮುಂತಾದ ಆ ಮಂತ್ರವನ್ನು ಹೇಳಿದೆ. ಆಗ ತಕ್ಷಣ ಅವರು ಈ ಮಂತ್ರ ಪ್ರಕ್ಷಿಪ್ತ , ಅದರ ಛಂದಸ್ಸು ಪ್ರಾಚೀನವಾದುದಲ್ಲ ಎಂದರು. ಇದರಿಂದ ತಕ್ಷಣ ಹುರುಪೇರಿದ ನಾನು ಸ್ವಾಮಿಗಳೇ ‘ನೀವು ಮತ್ತು ದಯಾನಂದರ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ನಾವು ನಮ್ಮ ಚರ್ಚೆಯನ್ನು ಮುಂದುವರೆಸಲಾಗದು ‘ ಎಂದು ತಿಳಿಸಿದೆ. ಇದರಿಂದ ನಮ್ಮ ಚರ್ಚೆ ಕೊನೆಗೊಂಡಿತು-ನಾನು ವಾದವನ್ನು ಮುಂದುವರೆಸಲಿಲ್ಲ. ಮುಂದಿನ ಮಾತುಕತೆಯ ನಡುವೆ ಅವರು ನಾಳೆ ನಾನು ಕಾಮಾಕ್ಯ ದೇವಾಲಯಕ್ಕೆ , ನಾಡಿದ್ದು ವಶಿಷ್ಟಾಶ್ರಮಕ್ಕೆ ಭೇಟಿ ಕೊಡುತ್ತೇನೆ ಎಂದು ಹೇಳಿದರು.
ಎರಡು ದಿನಗಳ ನಂತರ ನಾನು ಹಾಗೂ ನನ್ನ ಕೆಲ ಸಂಗಡಿಗರು ಮೊದಲೇ ಯೋಜಿಸಿದಂತೆ ಸ್ವಾಮಿಗಳನ್ನು ಭೇಟಿಯಾಗಿ ಇನ್ನೂ ಸ್ವಲ್ಪ ಚರ್ಚೆ ನಡೆಸಲು ವಶಿಷ್ಟಾಶ್ರಮಕ್ಕೆ ಹೋದೆವು. ಯಾವುದೋ ಕಾರಣಕ್ಕೆ ಅವರು ಅಲ್ಲಿಗೆ ಬಂದಿಲ್ಲವೆಂದು ತಿಳಿದು ನಮಗೆ ಬೇಸರವಾಯಿತು. ಭಾರವಾದ ಹೃದಯದಿಂದ ನಗರಕ್ಕೆ ನಾವು ಮರಳಿದಾಗ ಅವರು ಭಾಷಣ ಮಾಡುತ್ತಿದ್ದಾರೆಂದು ತಿಳಿಯಿತು. ಜನರಿಂದ ತುಂಬಿ ತುಳುಕುತ್ತಿದ್ದ ಭಾಷಣದ ಮೈದಾನದತ್ತ ನಾವು ತ್ವರೆಯಲ್ಲಿ ಹೋದೆವು. ಜನರ ಗುಂಪಿನಲ್ಲಿ ನುಗ್ಗಿ ಅವರ ಸನಿಹ ಹೋಗುವುದು ಅಸಾದ್ಯವಾಗಿದ್ದಿತು. ಸ್ವಾಮಿಗಳು ಪಂಡಿತ ಧೀರೇಶ್ವರಾಚಾರ್ಯರೊಂದಿಗೆ ಸಂಸ್ಕೃತದಲ್ಲಿ ಸಂಭಾಷಣೆ ನಡೆಸುತ್ತಿದ್ದು ಅಲ್ಲಿದ್ದವರೆಲ್ಲ ಸ್ವಾಮಿಗಳ ಸಂಸ್ಕೃತ ಜ್ಞಾನಕ್ಕೆ ಮರುಳಾಗಿದ್ದರು.
ನಾನು ಗುಂಪಿನ ಹಿಂದೆ ನಿಂತು ಮೌನವಾಗಿ ಕಾದಿದ್ದೆನು. ಭಾಷಣದ ಸಮಯದಲ್ಲಿ ಸ್ವಾಮಿಗಳು ನಿಲ್ಲಲಾಗದೆ ಕುಳಿತುಕೊಂಡರೆಂದು ತಿಳಿಯಿತು. ನನಗೆ ಮಾತನಾಡಲು ಯಾವುದಾದರೂ ವಿಷಯವನ್ನು ಸೂಚಿಸಿರಿ ಎಂದು ಮೇಲಿಂದ ಮೇಲೆ ಹೇಳುತ್ತಿದ್ದರು. ಜನರ ಗುಂಪು ಸ್ವಾಮಿಗಳಿಗೆ ಯಾವುದೊಂದು ವಿಷಯವನ್ನು ಸೂಚಿಸಲು ಹಿಂಜರಿಕೆಯಲ್ಲಿದ್ದಿತು. ಆಗ ಸ್ವಾಮಿಗಳು ಆ ಭಟ್ಟಾಚಾರ್ಯ ಎಲ್ಲಿ ಹೋಗಿದ್ದಾನೆ ಎಂದು ಕೇಳಿದರು. ಆಗ ಗುಂಪಿನಲ್ಲಿದ್ದ ಯಾರೋ ಆತ ವಶಿಷ್ಟಾಶ್ರಮಕ್ಕೆ ಹೋಗಿದ್ದಾನೆ ಎಂದು ತಿಳಿಸಿದರು. ಆದರೆ ಗುಂಪಿನಲ್ಲಿ ಒಬ್ಬನಾಗಿ ನಿಂತಿದ್ದ ನಾನು ಭಟ್ಟಾಚಾರ್ಯ ಸುಮ್ಮನಿದ್ದೆನು. ಸ್ವಾಮಿಗಳು ಹೀಗೆ ಕೇಳಿದ್ದು ಮೌನ ಮುರಿಯಲು ಕಾರಣವಾಗಿ ಯಾರೋ ಒಬ್ಬರು ಜಾತಿ ನಿಯಮಗಳ ಬಗ್ಗೆ ಹೇಳಿರಿ ಎಂದು ಸೂಚಿಸಿದರು. ಇದಕ್ಕೆ ಉತ್ತರವಾಗಿ ಸ್ವಾಮಿಗಳು ಜಾತಿ ಕಟ್ಟಳೆಯ ಉಪಯುಕ್ತತೆಯ ಬಗ್ಗೆ ಮಾತನಾಡಿ ನಂತರ ಅದರ ವಿರುದ್ಧದ ಅಂಶಗಳನ್ನು ತಿಳಿಸಿದರು. ಅಗ ಅವರ ಬಾಯಿಂದ ಅಡುಗೆ ಮನೆ ಪಾತ್ರೆಯ ಮತ್ತು ಮುಟ್ಟದಿರು ಎನ್ನುವ ಎರಡು ಧರ್ಮಗಳ ಬಗ್ಗೆ ಕೇಳಿದೆನು. ನಂತರ ಅವರ ತೆರೆದ ಬಾಯಿ ಮುಚ್ಚಲಿಲ್ಲ – ಮುಂದೆ ಇತರ ವಿಷಯಗಳತ್ತ ಹರಿಯಿತು. ಮನುವಿನ ಕಾಲದಿಂದ ನಮ್ಮ ದೇಶ ಜೀವವಿಲ್ಲದಂತಾಗಿದೆ. ಈ ತಾಮಸ ದೇಶಕ್ಕೆ ಒಳ್ಳೆಯದಲ್ಲ. ಕದಿಯುವುದು , ದರೊಡೆ ಮುಂತಾದ ಕೆಲಸಗಳೂ ಕೂಡ ಕ್ರಿಯಾಶೀಲತೆಯ ದೃಷ್ಟಿಯಿಂದ ಕೆಟ್ಟವಲ್ಲ , ಅವು ಹೊಸ ಎಚ್ಚರ ತರುತ್ತವೆ ಮುಂತಾಗಿ ಹೇಳಿದರು. ಅದನ್ನು ಕೇಳಿದ ಮೇಲೆ ಅವರ ಬಗ್ಗೆ ನನಗಿದ್ದ ಭಾವನೆ ಬದಲಾಯಿತು. ಷಿಕಾಗೊ ಮತ್ತು ಪಶ್ಚಿಮದಲ್ಲಿ ಮಾಡಿದ ಭಾಷಣಗಳಿಂದ ನಾನು ಅವರನ್ನು ವೇದಾಂತ ಬೋಧಕನೆಂದು ಭಾವಿಸಿದ್ದೆ. ಆ ದಿನ ನಾನು ಅದು ಆತನ ಹೊರ ಕವಚ ಮಾತ್ರ , ಒಳಗೆ ಬೇರೆಯದೇ ಇದೆ ಎಂದು ತಿಳಿದುಕೊಂಡೆ. ಅವರ ಅಭಿಪ್ರಾಯದಲ್ಲಿ ದೇಶ ಮಲಗಿದೆ, ಅದು ಎದ್ದು ಸ್ವಲ್ಪ ಸರಿದಾಡಬೇಕು. ಜಾತಿಗಳಲ್ಲಿರವ ಆಹಾರದ ಭಾವನೆಗಳು ದೇಶ ಒಂದಾಗಲು ಬಿಡುತ್ತಿಲ್ಲ. ಅದು ತೊಲಗಬೇಕು. ನಿಜವಾದ ಧಾರ್ಮಿಕ ನಾಯಕ ಮೌಢ್ಯವನ್ನು ಕಳೆದೆಸೆಯಲು ಯತ್ನಿಸುತ್ತಾನೆ , ಆದರೆ ನಮ್ಮ ವೈಶಿಷ್ಟ್ಯತೆ , ಪರಂಪರೆಗಳನ್ನು ಬಲಿಗೊಟ್ಟಲ್ಲ. ಕಳ್ಳತನ ,ದರೋಡೆಯಂತಹ ಮಾತುಗಳು ಧಾರ್ಮಿಕ ನಾಯಕನ ಬಾಯಿಂದ ಬರುವ ಮಾತುಗಳಲ್ಲ.
ಷಿಲ್ಲಾಂಗ್’ಗೆ ಹೋಗುವ ಮೊದಲು ಸ್ವಾಮಿಗಳು ಒಂದೆರಡು ಸಲ ಮಾತನಾಡಿದರು. ಈ ಭಾಷಣಗಳ ವಿಷಯ ಮೊದಲೇ ನಿರ್ಧಾರಗೊಂಡಿದ್ದು ಅವುಗಳನ್ನು ಪ್ರಚಾರ ಮಾಡಲಾಗಿದ್ದಿತು. ಮೊದಲನೆಯ ದಿನ ಸ್ಥಳೀಯ ಹಿರಿಯ ಬಂಗಾಳಿ ವಕೀಲರು ಅಧ್ಯಕ್ಷರಾಗಿದ್ದರೆ , ಎರಡನೇ ದಿನ ಅಸ್ಸಾಂ ವ್ಯಾಲಿ ಡಿವಿಷನ್ ಕಮಿಷನರ್ ಪೋರ್ಟಿಯರ್ಸ್ ಅಧ್ಯಕ್ಷರಾಗಿದ್ದರು. ಭಾಷಣದ ಒಂದು ವಿಷಯ ಆತ್ಮದ ಆವಿರ್ಭಾವವಾಗಿದ್ದಿತೆನ್ನುವುದು ನನಗೆ ಚೆನ್ನಾಗಿ ನೆನಪಿದೆ. ಎರಡನೆ ಭಾಷಣದ ವಿಷಯ ನೆನಪಿನಲ್ಲಿಲ್ಲವಾದರೂ ಭಾರತದ ಜೀವನದಲ್ಲಿ ವೇದಾಂತ ಅಥವಾ ಅದರಂತಹ ವಿಷಯವೋ ಇದ್ದಿರುವಂತಿದೆ. ಆ ಭಾಷಣದಲ್ಲಿ ಸ್ವಾಮಿಗಳು ಉಪನಿಷತ್ತಿನ ‘ದ್ವಾ ಸುಪರ್ಣಾ ಸಾಯುಜ ಸಖಾಯ….’ ಉದ್ಧರಿಸಿದರು. ( ನಂತರ ಸ್ಥಳೀಯ ವಕೀಲರ ಸಭೆಯಲ್ಲಿ ಒಬ್ಬರು ಸ್ವಾಮಿಗಳು ಏನೂ ಹೊಸದನ್ನು ಹೇಳಲಿಲ್ಲ ಎಂದು ತಿಳಿಸಿದರು. ಇದೇ ಭಾಷಣವನ್ನು ಮದ್ರಾಸ್’ನಲ್ಲಿ ಕೊಟ್ಟಿದ್ದು ಇದನ್ನು ಮದ್ರಾಸ್’ನ ನಟೇಸನ್ ಅಂಡ್ ಕಂಪೆನಿ ಪ್ರಕಟಿಸಿದ್ದಿತು)
ಅವರ ಭಾಷಣಗಳನ್ನು ಕೇಳುವುದೇ ಒಂದು ರಸಾನುಭವ. ಧ್ವನಿ ಅದೆಷ್ಟು ಮದುರ , ಉಚ್ಛಾರ ಅದೆಷ್ಟು ಚೆಂದ , ಪದಗಳ ಆಯ್ಕೆ ಅದೆಷ್ಟು ಚೊಕ್ಕಟ ! ವಿಶೇಷವಾಗಿ ಮೊದಲ ಸಲ ನಾನು ಆತನನ್ನು ಸ್ವಾಮಿ ವಿವೇಕಾನಂದ ಎಂದು ಗುರುತಿಸಿರಲಿಲ್ಲ, ಆದರೆ ಈ ದಿನ ಸರಿಯಾದ ಬಟ್ಟೆಯುಟ್ಟು , ನಿಲುವಂಗಿ ತೊಟ್ಟು , ತಲೆಗೆ ಮುಂಡಾಸು ಸುದ್ದಿರುವುದನ್ನು ಕಂಡಾಗ ಹೌದು ಫೊಟೊಗಳಲ್ಲಿ ನೋಡಿದ ವಿವೇಕಾನಂದ ಈತನೇ ಎನಿಸಿತು. ಆತ ವೇದಿಕೆಯ ಮೇಲೆ ಸುತ್ತುತ್ತ ಮಾಡುವ ಭಾಷಣ ನಾಟಕದ ಅಭಿನಯದಂತಿದ್ದಿತು. ಆತನ ದೊಡ್ದ ಕಣ್ಣುಗಳು , ಹೊಳೆಯುವ ಮುಖ ( ಹಾಗೆ ಹೊಳೆಯುವಂತೆ ಕಾಣಲು ಆತ ಗ್ಲಿಸರಿನ್ ಹಚ್ಚುವನೆಂದು ಕೇಳಿದ್ದೇನೆ) ನೋಡಬೇಕಾದಂತಹ ದೃಶ್ಯಗಳೇ. ಹಾಗಾಗಿಯೇ ಇಪ್ಪತ್ತು ವರ್ಷಗಳ ನಂತರವೂ ಈಗಲೂ ಕಿವಿಯಲ್ಲಿ ಗುಂಯಗುಟ್ಟುತ್ತಿರುವಂತೆ ನೆನಪಿಸಿಕೊಳ್ಳುತ್ತಿದ್ದೇನೆ. ಈತನ ಮಾತುಗಳಿಗೆ ಅಮೆರಿಕನ್ನರು ಹುಚ್ಚರಾಗಿದ್ದರಲ್ಲಿ ಯಾವ ಸೋಜಿಗವೂ ಇಲ್ಲ ! ಈ ಎರಡು ದಿನ ಯುರೋಪಿಯನ್ ಗಂಡಸರು ,ಹೆಂಗಸರು ಬಂದಿದ್ದು ಭಾಷಣದ ನಡುವೆ ಚಪ್ಪಾಳೆ ಹೊಡೆಯುತ್ತಿದ್ದರು.
ಸ್ವಾಮಿಗಳು ಷಿಲ್ಲಾಂಗ್’ಗೆ ಹೋದರು. ( ಜನಸಂಖ್ಯಾ ಗಣತಿಯ ಕೆಲಸದ ಮೇಲೆ ನಾನೂ ಹೋಗಿದ್ದು , ದಾರಿಯಲ್ಲಿ ಅನೇಕ ಸಂಗತಿಗಳನ್ನು ತಿಳಿದೆನು). ಸ್ಥಳೀಯ ಬಂಗಾಳಿಗಳು ಅಲ್ಲಿಯೂ ಅವರ ಖರ್ಚಿಗೆ ಚಂದಾ ಎತ್ತಿದರು. ಅಲ್ಲಿ ಒಂದು ಭಾಷಣ ಮಾತ್ರ ಮಾಡಿದರು. ಅಸ್ತಮಾ ತೀವ್ರವಾಗಿ ನಂತರ ಪಡಸಾಲೆ ಸಂವಾದ , ಚರ್ಚೆಗಳನ್ನು ಮಾತ್ರ ಮಾಡಿದರು. ಜನಪ್ರಿಯ ಮುಖ್ಯ ಕಮಿಷನರ್ ಆಗಿದ್ದ ಹೆನ್ರಿ ಕಾಟನ್ ಸ್ವಾಮಿಗಳ ಬಗ್ಗೆ ಬಹಳ ಕಾಳಜಿ ವಹಿಸಿದ್ದನು. ‘ತೀರ್ಥಯಾತ್ರೆಗೆ ಹೋಗುವುದು ಸಂನ್ಯಾಸಿಗಳ ಕರ್ತವ್ಯ. ಆದ್ದರಿಂದಲೇ ನಾನು ಕಾಮ್ಯಾಕ್ಯದಿಂದ ಷಿಲ್ಲಾಂಗ್’ಗೆ ಬಂದಿದ್ದೇನೆ. ಇಲ್ಲಿ ಹೆನ್ರಿ ಕಾಟನ್’ನಂತಹ ಮಹಾತ್ಮರಿದ್ದಾರೆ. ಆದ್ದರಿಂದ ಇದೂ ತೀರ್ಥಕ್ಷೇತ್ರ ಮುಂತಾಗಿ ಹೇಳಿದ್ದರು. ಷಿಲ್ಲಾಂಗ್’ನಲ್ಲಿ ಆಡುಗಳು ಅಗ್ಗ. ಸ್ವಾಮಿಗಳ ತಮ್ಡ ಯಥೇಚ್ಛವಾಗಿ ಆಡಿನ ಮಾಂಸ ತಿನ್ನುತ್ತಿದ್ದಿತು. ತಮಗೆ ಸರಿಯಾದ ವ್ಯವಸ್ಥೆ ಮಾಡಿಲ್ಲವೆಂದು ಸ್ವಾಮಿಗಳೊಂದಿಗೆ ಬಂದಿದ್ದ ಒಬ್ಬರು ಸಿಟ್ಟಾಗಿದ್ದರು. ಷಿಲ್ಲಾಂಗ್’ನಿಂದ ಹಿಂದಿರುಗುವಾಗ ಶೀಷೆಗಳಲ್ಲಿ ಯಾವುದೋ ದ್ರವವನ್ನು ತಂದಿದ್ದರು. ಈ ವಿಚಾರವಾಗಿ ಮತ್ತು ಸಾಂಪ್ರದಾಯಿಕ ಪಂಡಿತನೊಬ್ಬ ಕೇಳಿದ ಪ್ರಶ್ನೆಗೆ ಸ್ವಾಮಿಗಳು ನೀಡಿದ ಒರಟು ಉತ್ತರದಿಂದ ಅಲ್ಲಿಯ ವೈಷ್ಣವರು ಮತ್ತು ಇತರ ಜನ ಸ್ವಾಮಿಗಳ ಮೇಲೆ ಗೌರವ ಕಳೆದುಕೊಂಡರು. ಅವರಿಗೆ ಚಂದಾ ನೀಡಿದ್ದ ಒಬ್ಬ ವೈಷ್ಣವ ಪಶ್ಚಾತ್ತಾಪವಾಗಿ ಉಪವಾಸ ಮಾಡಿದನು.
ಷಿಲ್ಲಾಂಗ್’ನಿಂದ ಮರಳಿದ ನಂತರ ಸ್ವಾಮಿಗಳು ಕೆಲ ದಿನ ಗುವಾಹತಿಯಲ್ಲಿ ಉಳಿದಿದ್ದರು. ಈ ಸಂದರ್ಭದಲ್ಲಿಯೂ ನಾನು ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದೆನು. ಒಂದು ಕೋಣೆಯಲ್ಲಿ ನಾವಿಬ್ಬರೇ ಇದ್ದೆವು. ಅವರು ತೆರೆದ ಮನಸ್ಸುಳ್ಳ ಮತ್ತು ಆತ್ಮೀಯರಾಗಿದ್ದರು. ಅವರಿಗಿದ್ದ ಉಸಿರಾಟದ ತೊಂದರೆಯನ್ನು ಕಂಡಿದ್ದ ನಾನು ‘ಸ್ವಾಮೀಜಿ ಯೋಗಿಗಳು ಉಸಿರನ್ನು ನಿಯಂತ್ರಿಸುತ್ತಾರೆಂದು ಹೇಳುತ್ತಾರೆ. ಆದರೆ ಉಸಿರು ನಿಮ್ಮನ್ನು ನಿಯಂತ್ರಿಸುತ್ತಿದೆ’ ಎಂದು ಕೇಳಿದೆನು. ಅದಕ್ಕೆ ‘ಹಾಗೆಂದರೇನು, ಭಟ್ಟಾಚಾರ್ಯ ಮಹಾಶಯ ನಿಮಗೆ ಉತ್ತರ ಹೇಳುತ್ತೇನೆ ಎಂದರು. ನಾನು ಅದನ್ನು ಮುಂದುವರೆಸಲಿಲ್ಲ. -ನನ್ನೊಳಗೆ ನಾನು ಆಲೋಚಿಸಿದೆ.ಅದನ್ನು ಬರೆಯದಿರುವುದೇ ವಾಸಿ- ಅದಕ್ಕೆ ಪ್ರಶ್ನಿಸುವ ಧೈರ್ಯ ನನಗೆ ಬರಲಿಲ್ಲ.
ಮಾತಿನ ನಡುವೆ ಅವರ ಅಮೆರಿಕ ಕೆಲಸದ ಚರ್ಚೆ ಬಂದಿತು. ಆಗ ಅವರು ತಮ್ಮ ಮುಂಚೂಣಿ ಕೆಲಸಗಳು ಫಲಪ್ರದವಾಗುತ್ತವೆ ಎಂದು ಕೊಚ್ಚಿಕೊಂಡು ಅಲ್ಲಿ ಈಗ ಅದನ್ನು ಯಾರು ಬೇಕಾದರೂ ಮುಂದುವರೆಸಬಹುದೆಂದರು. ನಾನು ಥಿಯೊಸೊಫಿಸ್ಟರನ್ನು ಸ್ವಲ್ಪ ಹೊಗಳಿ ಅವರು ನಮ್ಮ ಧರ್ಮದ ಬಗ್ಗೆ ತಿಳಿಸುತ್ತಿದ್ದಾರೆ ಎಂದೆನು. ಅದಕ್ಕೆ ಕೆರಳಿದ ಅವರು ‘ಸಾಹೇಬರು ಎಲ್ಲದರಲ್ಲಿಯೂ ನಮ್ಮ ಒಡೆಯರಾಗುತ್ತಿದ್ದಾರೆ, ಧಾರ್ಮಿಕ ವಿಷಯದಲ್ಲಿಯೂ ಅವರು ಹಾಗಾಗುವುದನ್ನು ಸಹಿಸಲಾರೆ ಎಂದರು. (ಇದು ನನಗೆ ಮೆಚ್ಚುಗೆಯಾಯಿತು) . ಅವರನ್ನು ಗೆಲ್ಲಬೇಕೆನ್ನುವುದು ನನ್ನ ಗುರಿಗಳಲ್ಲಿ ಒಂದಾಗಿದ್ದಿತು. ಬೇಕಾದಷ್ಟು ಪಾಶ್ಚಾತ್ಯ ಗಂಡಸರು . ಹೆಂಗಸರು ಗೌರವದಿಂದ ನನ್ನ ಅಡಿಗಳಿಗೆ ಎರಗಿದ್ದಾರೆ ಎಂದರು. ಅಲ್ಲಿಂದ ನಮ್ಮ ಮಾತು ಷಿಕಾಗೊ ಭಾಷಣಗಳತ್ತ ಹೊರಳಿತು. ಆಗ ನಾನು ಸ್ವಾಮಿಗಳೇ ನಿಮ್ಮ ಗುರು ರಾಮಕೃಷ್ಣರು ವಿಗ್ರಹಾರಾಧನೆಯಿಂದ ಪರಮ ಪದ ಪಡೆದರು. ಹಾಗಿರುವಾಗ ನೀವು ಷಿಕಾಗೊ ಭಾಷಣದಲ್ಲಿ ವೇದಾಂತದ ಉನ್ನತ ಮಟ್ಟದಿಂದ ಕೀಳು ವಿಗ್ರಹಾರಾಧನೆಯವರೆಗೆ ಎಂದು ಹೇಗೆ ಹೇಳಬಲ್ಲಿರಿ ಎಂದು ಕೇಳಿದೆನು. (ನಂತರ ಅವರು ವೇದಾಂತ ತತ್ತ್ವದ ಉನ್ನತ ಅಧ್ಯಾತ್ಮಿಕದಿಂದ ಕೆಳಮಟ್ಟದ ವಿಗ್ರಹಾರಾಧನೆ ಎಂದು ಹೇಳಿರುವುದು ತಿಳಿಯಿತು ). ಆಗ ಸ್ವಾಮಿಗಳು ನಾನು ಕೀಳು ಎಂದೆನೇ ಎಂದು ಮರು ಪರ್ಶ್ನಿಸಿದರು. ಆಗ ನಾನು ನನಗೆ ನೆನಪಿರುವಂತೆ ಎಂದೆನು. ಆಗ ಅವರು ಕೀಳು ಎಂದರೆ (ವಲ್ಗಸ್=ಜನ) ಜನಪ್ರಿಯ ಎಂದರ್ಥ ಎಂದರು. ಆಗ ನಾನು ಕೀಳು ಎನ್ನುವ ಬದಲು ಜನಪ್ರಿಯ ಎನ್ನಬಹುದಿತ್ತು ಎಂದೆನು. ಅಲ್ಲಿಗೆ ನಮ್ಮ ಚರ್ಚೆ ಮುಗಿಯಿತು. ಆ ದಿನ ನಾವು ಬಹಳ ಮಾತನಾಡಿದೆವು. ಎಲ್ಲವದೂ ನನಗೆ ನೆನಪಿಲ್ಲ. ನನಗೆ ಒಂದೆರಡು ಸಂಗತಿಗಳು ಗೊತ್ತು , ಆದರೆ ಅವು ಪ್ರಕಟಣೆಗೆ ಯೋಗ್ಯವಲ್ಲ. ಈ ಬಗ್ಗೆ ನಾನು ಹಿಂದೆ ಕೇಳಿದ್ದುದು ನಿಜವೆಂದು ಈ ಚರ್ಚೆಯಿಂದ ನನಗೆ ಗೊತ್ತಾಯಿತು. ಈ ಸಂನ್ಯಾಸಿ ಕುರಿಯ ಚರ್ಮ ಹೊದ್ದ ತೋಳ ಎಂದು ನನಗೆ ಮನದಟ್ಟಾಯಿತು. ನಾನು ಹೊರಡಬೇಕೆಂದಿದ್ದಾಗ ಒಂದೆರಡು ಫ್ರೆಂಚ್ ಕಾದಂಬರಿಗಳನ್ನು ತಂದುಕೊಡುವಂತೆ ಕೇಳಿದರು. ಇದನ್ನು ನಾನು ಬರೆದು ಪೋರ್ಟೆಯೆರ್ಸ್’ಗೆ ತಿಳಿಸಿದೆನು. ಅವು ಸಿಕ್ಕವೋ ಇಲ್ಲವೋ ನನಗೆ ಗೊತ್ತಿಲ್ಲ.
ಅಸ್ಸಾಂನಿಂದ ಬೇಲೂರು ಮಠಕ್ಕೆ ಹಿಂದಿರುಗಿದ ನಂತರ ಪೂರ್ವ ಬಂಗಾಳದ ಬಗ್ಗೆ ಮಾತನಾಡತೊಡಗಿ ‘ಹಂಕರದೇವ’ನ ಬಗ್ಗೆ ಹೇಳಿದರು. ಅಸ್ಸಾಂ ಬಗ್ಗೆ ತಿಳಿದಿರುವವರು ಹಂಕರ ದೇವ ಒಬ್ಬ ತಾಂತ್ರಿಕ ಅಥವಾ ಶಂಕರಾಚಾರ್ಯರ ಪರಂಪರೆಯವನು ಎಂದು ತಿಳಿದಿರುವುದು ಸೋಜಿಅಗವನ್ನುಂಟು ಮಾಡುತ್ತದೆ. ಸ್ವಾಮಿಗಳು ಉದಾಸೀನವಾಗಿ ಹೇಳಿದಂತೆ ಹಂಕರದೇವ ಇರದೆ ವೈಷ್ಣವ ಬೋಧಕ ಶಂಕರದೇವ ಇದ್ದರು. ಸ್ವಾಮಿಗಳು ಆ ಸ್ಥಳದ ಧಾರ್ಮಿಕ ವ್ಯಕ್ತಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದಿರುವುದು , ಯತ್ನಿಸದಿರುವುದು ಖೇದಕರವಾಗಿದೆ. ಹಾಗೆ ಪ್ರಯತ್ನ ಮಾಡಿದ್ದರೆ ೫೦೦ ವರ್ಷಗಳ ಹಿಂದೆ ವರ್ಷಗಳ ಹಿಂದೆ ಆ ಹೆಸರಿನ ಕಾಯಸ್ಥ ಜಾತಿಯ ಧಾರ್ಮಿಕ ಪುನರುಜ್ಜೀವಕ ಇರುವುದು ತಿಳಿಯುತ್ತಿದ್ದಿತು. ಶ್ರೀ ಚೈತನ್ಯ ಬಂಗಾಳದ ಸಾಹಿತ್ಯದ ಬೀಜವನ್ನು ಬಿತ್ತಿದಂತೆ ಈ ಮಹಾತ್ಮನೂ ಅಂತಹ ಪ್ರಭಾವವನ್ನು ಬಿಟ್ಟುಹೋಗಿದ್ದಾನೆ. ಗುಡ್ಡಗಾಡಿನ ಜನ ಈಗಲೂ ಈತನ ಭಕ್ತರಾಗಿದ್ದು , ಹಿಂದೂ ಧರ್ಮದ ತೆಕ್ಕೆಯೊಳಕ್ಕೆ ಬರುತ್ತಿದ್ದಾರೆ. ಅಸ್ಸಾಮಿ ಭಾಷೆ ಅತನ ಕೀರ್ತನ , ಭಾವನೆಗಳಿಂದ ಸಮೃದ್ಧವಾಗಿದೆ.
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ )
ಪದ್ಮನಾಥ ಭಟ್ಟಾಚಾರ್ಯ ಎನ್ನುವವರು ಬಂಗಾಳಿಯಲ್ಲಿ ಬರೆದಿರುವ ಈ ಪುಸ್ತಕದಲ್ಲಿ ಸ್ವಾಮಿಗಳು ಹಿಂದೂ ಧರ್ಮದ ಸಾಂಪ್ರದಾಯಿಕ ಪರಿಕಲ್ಪನೆಗಳಿಗೆ ಅನುಗುಣವಾಗಿ ಸಂನ್ಯಾಸಿಗಳಾಗಿರಲಿಲ್ಲ ಎಂದು ವಾದಿಸಿದ್ದಾರೆ. ಈ ಲೇಖಕ ‘ಸಾಹಿತ್ಯ’ ಪತ್ರಿಕೆಯಲ್ಲಿ ೧೯೨೦ ಡಿಸೆಂಬರ್’ನಿಂದ ಜುಲೈ ೧೯೨೧ ರವರೆಗೆ ಬರೆದ ಲೇಖನಗಳ ಸಂಗ್ರಹವಿದು. ಈ ಲೇಖನಗಳ ಪರ ಮತ್ತು ವಿರುದ್ಧವಾಗಿ ‘ಕಾಯಸ್ಥ ಪತ್ರಿಕೆ’ ಮತ್ತು ‘ಬ್ರಾಹ್ಮಣ ಸಮಾಜ’ ಪತ್ರಿಕೆಗಳಲ್ಲಿ ಹಲವು ಅಬಿಪ್ರಾಯಗಳು ಮೂಡಿಬಂದವು. ಈ ಪುಸ್ತಕದ ಆಯ್ದ ಭಾಗ ಮುಂದಿದೆ.
ಇಂದಿನಿಂದ (೧೯೨೧) ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ತಮ್ಮ ತಂಡದೊಂದಿಗೆ ಗುವಾಹತಿಗೆ ಬಂದಿದ್ದರು. ಕೆಲದಿನ ಇಲ್ಲಿ ಉಳಿದು , ಪವಿತ್ರ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಷಿಲ್ಲಾಂಗ್’ಗೆ ಹೋಗಿ ಮತ್ತೊಮ್ಮೆ ಮರಳಿ ಗುವಾಹತಿಗೆ ಬಂದು ಒಂದೆರಡು ದಿನ ಉಳಿದಿದ್ದರು. ಗುವಾಹತಿಯ ಜನಸಂಖ್ಯಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಷಿಲ್ಲಾಂಗ್’ಗೆ ಹೋಗುವ ಮೊದಲು ಮತ್ತು ಅಲ್ಲಿಂದ ಹಿಂದಿರುಗಿದ ನಂತರ ಸ್ವಾಮಿಗಳನ್ನು ಭೇಟಿ ಮಾಡುವ ಸದಾವಕಾಶ ದಕ್ಕಿದ್ದಿತು.
೧೯೦೧ ರಲ್ಲಿ ಮಹಾ ವಿಷುವ ಸಂಕ್ರಾತಿಗೆ ಮೊದಲು ಸ್ವಾಮಿ ವಿವೇಕಾನಂದರು ಗುವಾಹತಿ ನಗರಕ್ಕೆ ಬಂದರು. ಅವರ ಪ್ರವಾಸದ ತಂಡದಲ್ಲಿ ಹಲವಾರು ಗಂಡಸರು , ಇಬ್ಬರು ಹೆಂಗಸರು ಇದ್ದರು. ಅವರ ತಾಯಿ ಕಾಮಾಕ್ಯ ದರ್ಶನಕ್ಕೆ ಅವರೊಂದಿಗೆ ಬಂದಿದ್ದರು. ದೊಡ್ಡ ಬಂಗಲೆಯಲ್ಲಿ ಅವರ ವಸತಿಯನ್ನು ಏರ್ಪಡಿಸಲಾಗಿದ್ದು ಅವರ ಪ್ರವಾಸ , ವಸತಿ ಮತ್ತಿತರ ವೆಚ್ಚ ಭರಿಸಲು ಸಾರ್ವಜನಿಕರಿಂದ ಚಂದಾ ಎತ್ತಲಾಗಿದ್ದಿತು.
ಸಂಕ್ರಾತಿಯ ಹಿಂದಿನ ದಿನ ಸಜ್ಜನರೊಬ್ಬರೊಂದಿಗೆ ನಾನು ಅವರಿದ್ದ ಬಂಗಲೆಗೆ ಹೋದೆನು. ವರಾಂಡದಲ್ಲಿ ಸ್ಟೂಲಿನ ಮೇಲೆ ಕಾವಿ ಪಂಚೆ ಮತ್ತು ಬನಿಯನ್ ಉಟ್ಟ ವ್ಯಕ್ತಿಯೊಬ್ಬನನ್ನು ಕಂಡೆವು. ಆತನ ಕೂದಲು ಕೆದರಿದ್ದು , ಎಲೆ ಜಗಿದಿದ್ದರಿಂದ ತುಟಿಗಳು ಕೆಂಪಾಗಿದ್ದವು. ಈತ ಸ್ವಾಮಿಗಳ ಚೇಲಾ ಆಗಿರಬೇಕೆಮ್ದು ನಾನು ಭಾವಿಸಿದೆ. ನಾನು ಸ್ವಾಮಿಗಳ ಪ್ರಕಟಿತ ಫೋಟೊಗಳನ್ನು ಈ ಮೊದಲೇ ನೋಡಿದ್ದು , ಈ ವ್ಯಕ್ತಿಯನ್ನು ಅವರೊಂದಿಗೆ ಹೋಲಿಸಲು ಸಾದ್ಯವಿರಲಿಲ್ಲ. ( ನನ್ನ ಗಮನ ವಿಚಲಿತವಾಗಿದ್ದರಿಂದ ನನಗೆ ಸರಿಯಾಗಿ ನೆನಪಿಲ್ಲವಾದರೂ ಅವರ ಹಣೆಯ ಮೇಲೆ ಗಾಯದ ಗುರುತಿದ್ದಿತು ; ಆದರೆ ಅವರ ಫೋಟೊಗಳಲ್ಲಿ ಆ ಗುರುತು ಕಾಣುವುದಿಲ್ಲ ; ಪ್ರಮಥನಾಥ ಬಸು ಬರೆದ ಜೀವನ ಚರಿತ್ರೆಯಲ್ಲಿಯ ಇಂತಹ ಗುರುತು ಇರುವುದನ್ನು ತಿಳಿಸುತ್ತದೆ. ಭಕ್ತರ ಭಾವನೆಗಳಿಗೆ ಧಕ್ಕೆಯಾಗಬಾರದೆಂದು ಫೋಟೊಗಳಲ್ಲಿ ಆ ಗುರುತನ್ನು ಅಳಿಸಲಾಗಿದೆಯೇ ? ಅವರ ಜೀವನ ಚರಿತ್ರೆಗಳಲ್ಲಿಯೂ ಇಂತಹ ತಿದ್ದುಪಡಿ ಆಗಿದೆಯೇ ? ) ಅದೇನೇ ಇರಲಿ ನಾನು ಅಲ್ಲಿ ಕುಳಿತಿದ್ದ ವ್ಯಕ್ತಿಗೆ ‘ ನಾವು ಸ್ವಾಮಿಗಳನ್ನು ನೋಡಲು ಬಂದಿದ್ದೇವೆ. ಅವರು ಸಿಗುತ್ತಾರೆಯೇ ? ಎಂದು ಕೇಳಿದೆವು. ಆಗ ಆತ ಸ್ವಲ್ಪ ನಗುತ್ತ ‘ ನೀವು ಏತಕ್ಕೆ ಬಂದಿರುವಿರೆಂದು ನನಗೆ ತಿಳಿಸಿರಿ ‘ ಎಂದನು. ( ಇಪ್ಪತ್ತು ವರ್ಷಗಳ ನಂತರ ಆತ ಹೀಗೆಯೇ ಹೇಳಿದನೋ ಅಥವಾ ಬೇರೆ ರೀತಿಯಲ್ಲಿ ಹೇಳಿದನೋ ಎನ್ನುವುದು ಮತ್ತು ಆತನೊಂದಿಗೆ ಆಡಿದ ಮಾತುಗಳ ಸ್ಪಷ್ಟ ನೆನಪು ನನಗಿಲ್ಲವಾದರೂ , ನಾನು ದಿನಚರಿ ಬರೆಯದಿರುವುದರಿಂದ ಖಚಿತ ದಿನಾಂಕ ತಪ್ಪಿರಬಹುದಾದರೂ , ನಾವು ಮಾತನಾಡಿದ ವಿಷಯ ಮುಖ್ಯ ವಿಚಾರ ಸರಿಯಾಗಿ ನೆನಪಿದೆ. ). ಮಾತಿನ ನಡುವೆ ನನಗೆ ನಮ್ಮೊಂದಿಗೆ ಮಾತನಾಡುತ್ತಿರುವ ಈ ವ್ಯಕ್ತಿಯೇ ಜಗತ್ಪ್ರಸಿದ್ಧ ಸ್ವಾಮಿ ವಿವೇಕಾನಂದ ಎನ್ನುವುದು ಗೊತ್ತಾಯಿತು. ನನ್ನೊಂದಿಗೆ ಬಂದಾತ ಸ್ವಾಮಿಗಳಿಗೆ ನನ್ನನ್ನು ಪರಿಚಯಿಸಿದನು. ನಂತರ ಹಲವು ವಿಷಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದೆವು.
ಮಾತಿನ ನಡುವೆ ನಮ್ಮ ಪ್ರಾಚೀನ ಸಂಸ್ಕೃತಿಯ ಚರ್ಚೆಯೂ ಬಂದಿತು. ಆಗ ಸ್ವಾಮಿಗಳು ‘ಬೌದ್ಧರಿಗಿಂತ ಮೊದಲು ಭಾರತದ ಶಿಲ್ಪಕಲೆ ಸಾಮಾನ್ಯವಾಗಿ ಹೇಳಿಕೊಳ್ಳುವಂತಿರಲಿಲ್ಲ’ ಎಂದರು. ಆಗ ನಾನು ರಾಮಾಯಣ , ಮಹಾಭಾರತಗಳಲ್ಲಿ ಭವ್ಯ ಭವನಗಳ ವರ್ಣನೆ ಇದೆಯಲ್ಲ ‘ ಎಂದು ಮರುಪ್ರಶ್ನಿಸಿದೆನು. ಆಗ ಅವರು ‘ಓ ಅದೆಲ್ಲ ಉತ್ಪ್ರೇಕ್ಷೆ’ ಎಂದರು. ಸ್ವಲ್ಪ ಹೊತ್ತಿನ ನಂತರ ‘ ನೀನು ತೊಟ್ಟಿರುವ ಆ ಪವಿತ್ರ ದಾರ (ಯಜ್ಞೋಪವೀತ) ಪರ್ಷಿಯಾದಿಂದ ಬಂದಿದೆ’ ಎಂದು ತಿಳಿಸಿದರು. ಆಗ ನಾನು ‘ಅದನ್ನು ಹೇಗೆ ಹೇಳುತ್ತೀರಿ ? ‘ ಎಂದು ಪ್ರಶ್ನಿಸಿದೆ. ‘ವೇದದಲ್ಲಿ ಯಜ್ಞೋಪವೀತವನ್ನು ಶುದ್ಧೀಕರಿಸಿಕೊಳ್ಳುವ ಒಂದು ಮಂತ್ರವಿದೆ . ಆ ಮಂತ್ರವನ್ನು ನನಗೆ ಹೇಳಬಲ್ಲೆಯಾ ? ಎಂದು ಕೇಳಿದರು. ಆಗ ನಾನು ‘ಯಜ್ಞೋಪವೀತಂ ಪರಮಂ ಪವಿತ್ರಂ…ಮುಂತಾದ ಆ ಮಂತ್ರವನ್ನು ಹೇಳಿದೆ. ಆಗ ತಕ್ಷಣ ಅವರು ಈ ಮಂತ್ರ ಪ್ರಕ್ಷಿಪ್ತ , ಅದರ ಛಂದಸ್ಸು ಪ್ರಾಚೀನವಾದುದಲ್ಲ ಎಂದರು. ಇದರಿಂದ ತಕ್ಷಣ ಹುರುಪೇರಿದ ನಾನು ಸ್ವಾಮಿಗಳೇ ‘ನೀವು ಮತ್ತು ದಯಾನಂದರ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ನಾವು ನಮ್ಮ ಚರ್ಚೆಯನ್ನು ಮುಂದುವರೆಸಲಾಗದು ‘ ಎಂದು ತಿಳಿಸಿದೆ. ಇದರಿಂದ ನಮ್ಮ ಚರ್ಚೆ ಕೊನೆಗೊಂಡಿತು-ನಾನು ವಾದವನ್ನು ಮುಂದುವರೆಸಲಿಲ್ಲ. ಮುಂದಿನ ಮಾತುಕತೆಯ ನಡುವೆ ಅವರು ನಾಳೆ ನಾನು ಕಾಮಾಕ್ಯ ದೇವಾಲಯಕ್ಕೆ , ನಾಡಿದ್ದು ವಶಿಷ್ಟಾಶ್ರಮಕ್ಕೆ ಭೇಟಿ ಕೊಡುತ್ತೇನೆ ಎಂದು ಹೇಳಿದರು.
ಎರಡು ದಿನಗಳ ನಂತರ ನಾನು ಹಾಗೂ ನನ್ನ ಕೆಲ ಸಂಗಡಿಗರು ಮೊದಲೇ ಯೋಜಿಸಿದಂತೆ ಸ್ವಾಮಿಗಳನ್ನು ಭೇಟಿಯಾಗಿ ಇನ್ನೂ ಸ್ವಲ್ಪ ಚರ್ಚೆ ನಡೆಸಲು ವಶಿಷ್ಟಾಶ್ರಮಕ್ಕೆ ಹೋದೆವು. ಯಾವುದೋ ಕಾರಣಕ್ಕೆ ಅವರು ಅಲ್ಲಿಗೆ ಬಂದಿಲ್ಲವೆಂದು ತಿಳಿದು ನಮಗೆ ಬೇಸರವಾಯಿತು. ಭಾರವಾದ ಹೃದಯದಿಂದ ನಗರಕ್ಕೆ ನಾವು ಮರಳಿದಾಗ ಅವರು ಭಾಷಣ ಮಾಡುತ್ತಿದ್ದಾರೆಂದು ತಿಳಿಯಿತು. ಜನರಿಂದ ತುಂಬಿ ತುಳುಕುತ್ತಿದ್ದ ಭಾಷಣದ ಮೈದಾನದತ್ತ ನಾವು ತ್ವರೆಯಲ್ಲಿ ಹೋದೆವು. ಜನರ ಗುಂಪಿನಲ್ಲಿ ನುಗ್ಗಿ ಅವರ ಸನಿಹ ಹೋಗುವುದು ಅಸಾದ್ಯವಾಗಿದ್ದಿತು. ಸ್ವಾಮಿಗಳು ಪಂಡಿತ ಧೀರೇಶ್ವರಾಚಾರ್ಯರೊಂದಿಗೆ ಸಂಸ್ಕೃತದಲ್ಲಿ ಸಂಭಾಷಣೆ ನಡೆಸುತ್ತಿದ್ದು ಅಲ್ಲಿದ್ದವರೆಲ್ಲ ಸ್ವಾಮಿಗಳ ಸಂಸ್ಕೃತ ಜ್ಞಾನಕ್ಕೆ ಮರುಳಾಗಿದ್ದರು.
ನಾನು ಗುಂಪಿನ ಹಿಂದೆ ನಿಂತು ಮೌನವಾಗಿ ಕಾದಿದ್ದೆನು. ಭಾಷಣದ ಸಮಯದಲ್ಲಿ ಸ್ವಾಮಿಗಳು ನಿಲ್ಲಲಾಗದೆ ಕುಳಿತುಕೊಂಡರೆಂದು ತಿಳಿಯಿತು. ನನಗೆ ಮಾತನಾಡಲು ಯಾವುದಾದರೂ ವಿಷಯವನ್ನು ಸೂಚಿಸಿರಿ ಎಂದು ಮೇಲಿಂದ ಮೇಲೆ ಹೇಳುತ್ತಿದ್ದರು. ಜನರ ಗುಂಪು ಸ್ವಾಮಿಗಳಿಗೆ ಯಾವುದೊಂದು ವಿಷಯವನ್ನು ಸೂಚಿಸಲು ಹಿಂಜರಿಕೆಯಲ್ಲಿದ್ದಿತು. ಆಗ ಸ್ವಾಮಿಗಳು ಆ ಭಟ್ಟಾಚಾರ್ಯ ಎಲ್ಲಿ ಹೋಗಿದ್ದಾನೆ ಎಂದು ಕೇಳಿದರು. ಆಗ ಗುಂಪಿನಲ್ಲಿದ್ದ ಯಾರೋ ಆತ ವಶಿಷ್ಟಾಶ್ರಮಕ್ಕೆ ಹೋಗಿದ್ದಾನೆ ಎಂದು ತಿಳಿಸಿದರು. ಆದರೆ ಗುಂಪಿನಲ್ಲಿ ಒಬ್ಬನಾಗಿ ನಿಂತಿದ್ದ ನಾನು ಭಟ್ಟಾಚಾರ್ಯ ಸುಮ್ಮನಿದ್ದೆನು. ಸ್ವಾಮಿಗಳು ಹೀಗೆ ಕೇಳಿದ್ದು ಮೌನ ಮುರಿಯಲು ಕಾರಣವಾಗಿ ಯಾರೋ ಒಬ್ಬರು ಜಾತಿ ನಿಯಮಗಳ ಬಗ್ಗೆ ಹೇಳಿರಿ ಎಂದು ಸೂಚಿಸಿದರು. ಇದಕ್ಕೆ ಉತ್ತರವಾಗಿ ಸ್ವಾಮಿಗಳು ಜಾತಿ ಕಟ್ಟಳೆಯ ಉಪಯುಕ್ತತೆಯ ಬಗ್ಗೆ ಮಾತನಾಡಿ ನಂತರ ಅದರ ವಿರುದ್ಧದ ಅಂಶಗಳನ್ನು ತಿಳಿಸಿದರು. ಅಗ ಅವರ ಬಾಯಿಂದ ಅಡುಗೆ ಮನೆ ಪಾತ್ರೆಯ ಮತ್ತು ಮುಟ್ಟದಿರು ಎನ್ನುವ ಎರಡು ಧರ್ಮಗಳ ಬಗ್ಗೆ ಕೇಳಿದೆನು. ನಂತರ ಅವರ ತೆರೆದ ಬಾಯಿ ಮುಚ್ಚಲಿಲ್ಲ – ಮುಂದೆ ಇತರ ವಿಷಯಗಳತ್ತ ಹರಿಯಿತು. ಮನುವಿನ ಕಾಲದಿಂದ ನಮ್ಮ ದೇಶ ಜೀವವಿಲ್ಲದಂತಾಗಿದೆ. ಈ ತಾಮಸ ದೇಶಕ್ಕೆ ಒಳ್ಳೆಯದಲ್ಲ. ಕದಿಯುವುದು , ದರೊಡೆ ಮುಂತಾದ ಕೆಲಸಗಳೂ ಕೂಡ ಕ್ರಿಯಾಶೀಲತೆಯ ದೃಷ್ಟಿಯಿಂದ ಕೆಟ್ಟವಲ್ಲ , ಅವು ಹೊಸ ಎಚ್ಚರ ತರುತ್ತವೆ ಮುಂತಾಗಿ ಹೇಳಿದರು. ಅದನ್ನು ಕೇಳಿದ ಮೇಲೆ ಅವರ ಬಗ್ಗೆ ನನಗಿದ್ದ ಭಾವನೆ ಬದಲಾಯಿತು. ಷಿಕಾಗೊ ಮತ್ತು ಪಶ್ಚಿಮದಲ್ಲಿ ಮಾಡಿದ ಭಾಷಣಗಳಿಂದ ನಾನು ಅವರನ್ನು ವೇದಾಂತ ಬೋಧಕನೆಂದು ಭಾವಿಸಿದ್ದೆ. ಆ ದಿನ ನಾನು ಅದು ಆತನ ಹೊರ ಕವಚ ಮಾತ್ರ , ಒಳಗೆ ಬೇರೆಯದೇ ಇದೆ ಎಂದು ತಿಳಿದುಕೊಂಡೆ. ಅವರ ಅಭಿಪ್ರಾಯದಲ್ಲಿ ದೇಶ ಮಲಗಿದೆ, ಅದು ಎದ್ದು ಸ್ವಲ್ಪ ಸರಿದಾಡಬೇಕು. ಜಾತಿಗಳಲ್ಲಿರವ ಆಹಾರದ ಭಾವನೆಗಳು ದೇಶ ಒಂದಾಗಲು ಬಿಡುತ್ತಿಲ್ಲ. ಅದು ತೊಲಗಬೇಕು. ನಿಜವಾದ ಧಾರ್ಮಿಕ ನಾಯಕ ಮೌಢ್ಯವನ್ನು ಕಳೆದೆಸೆಯಲು ಯತ್ನಿಸುತ್ತಾನೆ , ಆದರೆ ನಮ್ಮ ವೈಶಿಷ್ಟ್ಯತೆ , ಪರಂಪರೆಗಳನ್ನು ಬಲಿಗೊಟ್ಟಲ್ಲ. ಕಳ್ಳತನ ,ದರೋಡೆಯಂತಹ ಮಾತುಗಳು ಧಾರ್ಮಿಕ ನಾಯಕನ ಬಾಯಿಂದ ಬರುವ ಮಾತುಗಳಲ್ಲ.
ಷಿಲ್ಲಾಂಗ್’ಗೆ ಹೋಗುವ ಮೊದಲು ಸ್ವಾಮಿಗಳು ಒಂದೆರಡು ಸಲ ಮಾತನಾಡಿದರು. ಈ ಭಾಷಣಗಳ ವಿಷಯ ಮೊದಲೇ ನಿರ್ಧಾರಗೊಂಡಿದ್ದು ಅವುಗಳನ್ನು ಪ್ರಚಾರ ಮಾಡಲಾಗಿದ್ದಿತು. ಮೊದಲನೆಯ ದಿನ ಸ್ಥಳೀಯ ಹಿರಿಯ ಬಂಗಾಳಿ ವಕೀಲರು ಅಧ್ಯಕ್ಷರಾಗಿದ್ದರೆ , ಎರಡನೇ ದಿನ ಅಸ್ಸಾಂ ವ್ಯಾಲಿ ಡಿವಿಷನ್ ಕಮಿಷನರ್ ಪೋರ್ಟಿಯರ್ಸ್ ಅಧ್ಯಕ್ಷರಾಗಿದ್ದರು. ಭಾಷಣದ ಒಂದು ವಿಷಯ ಆತ್ಮದ ಆವಿರ್ಭಾವವಾಗಿದ್ದಿತೆನ್ನುವುದು ನನಗೆ ಚೆನ್ನಾಗಿ ನೆನಪಿದೆ. ಎರಡನೆ ಭಾಷಣದ ವಿಷಯ ನೆನಪಿನಲ್ಲಿಲ್ಲವಾದರೂ ಭಾರತದ ಜೀವನದಲ್ಲಿ ವೇದಾಂತ ಅಥವಾ ಅದರಂತಹ ವಿಷಯವೋ ಇದ್ದಿರುವಂತಿದೆ. ಆ ಭಾಷಣದಲ್ಲಿ ಸ್ವಾಮಿಗಳು ಉಪನಿಷತ್ತಿನ ‘ದ್ವಾ ಸುಪರ್ಣಾ ಸಾಯುಜ ಸಖಾಯ….’ ಉದ್ಧರಿಸಿದರು. ( ನಂತರ ಸ್ಥಳೀಯ ವಕೀಲರ ಸಭೆಯಲ್ಲಿ ಒಬ್ಬರು ಸ್ವಾಮಿಗಳು ಏನೂ ಹೊಸದನ್ನು ಹೇಳಲಿಲ್ಲ ಎಂದು ತಿಳಿಸಿದರು. ಇದೇ ಭಾಷಣವನ್ನು ಮದ್ರಾಸ್’ನಲ್ಲಿ ಕೊಟ್ಟಿದ್ದು ಇದನ್ನು ಮದ್ರಾಸ್’ನ ನಟೇಸನ್ ಅಂಡ್ ಕಂಪೆನಿ ಪ್ರಕಟಿಸಿದ್ದಿತು)
ಅವರ ಭಾಷಣಗಳನ್ನು ಕೇಳುವುದೇ ಒಂದು ರಸಾನುಭವ. ಧ್ವನಿ ಅದೆಷ್ಟು ಮದುರ , ಉಚ್ಛಾರ ಅದೆಷ್ಟು ಚೆಂದ , ಪದಗಳ ಆಯ್ಕೆ ಅದೆಷ್ಟು ಚೊಕ್ಕಟ ! ವಿಶೇಷವಾಗಿ ಮೊದಲ ಸಲ ನಾನು ಆತನನ್ನು ಸ್ವಾಮಿ ವಿವೇಕಾನಂದ ಎಂದು ಗುರುತಿಸಿರಲಿಲ್ಲ, ಆದರೆ ಈ ದಿನ ಸರಿಯಾದ ಬಟ್ಟೆಯುಟ್ಟು , ನಿಲುವಂಗಿ ತೊಟ್ಟು , ತಲೆಗೆ ಮುಂಡಾಸು ಸುದ್ದಿರುವುದನ್ನು ಕಂಡಾಗ ಹೌದು ಫೊಟೊಗಳಲ್ಲಿ ನೋಡಿದ ವಿವೇಕಾನಂದ ಈತನೇ ಎನಿಸಿತು. ಆತ ವೇದಿಕೆಯ ಮೇಲೆ ಸುತ್ತುತ್ತ ಮಾಡುವ ಭಾಷಣ ನಾಟಕದ ಅಭಿನಯದಂತಿದ್ದಿತು. ಆತನ ದೊಡ್ದ ಕಣ್ಣುಗಳು , ಹೊಳೆಯುವ ಮುಖ ( ಹಾಗೆ ಹೊಳೆಯುವಂತೆ ಕಾಣಲು ಆತ ಗ್ಲಿಸರಿನ್ ಹಚ್ಚುವನೆಂದು ಕೇಳಿದ್ದೇನೆ) ನೋಡಬೇಕಾದಂತಹ ದೃಶ್ಯಗಳೇ. ಹಾಗಾಗಿಯೇ ಇಪ್ಪತ್ತು ವರ್ಷಗಳ ನಂತರವೂ ಈಗಲೂ ಕಿವಿಯಲ್ಲಿ ಗುಂಯಗುಟ್ಟುತ್ತಿರುವಂತೆ ನೆನಪಿಸಿಕೊಳ್ಳುತ್ತಿದ್ದೇನೆ. ಈತನ ಮಾತುಗಳಿಗೆ ಅಮೆರಿಕನ್ನರು ಹುಚ್ಚರಾಗಿದ್ದರಲ್ಲಿ ಯಾವ ಸೋಜಿಗವೂ ಇಲ್ಲ ! ಈ ಎರಡು ದಿನ ಯುರೋಪಿಯನ್ ಗಂಡಸರು ,ಹೆಂಗಸರು ಬಂದಿದ್ದು ಭಾಷಣದ ನಡುವೆ ಚಪ್ಪಾಳೆ ಹೊಡೆಯುತ್ತಿದ್ದರು.
ಸ್ವಾಮಿಗಳು ಷಿಲ್ಲಾಂಗ್’ಗೆ ಹೋದರು. ( ಜನಸಂಖ್ಯಾ ಗಣತಿಯ ಕೆಲಸದ ಮೇಲೆ ನಾನೂ ಹೋಗಿದ್ದು , ದಾರಿಯಲ್ಲಿ ಅನೇಕ ಸಂಗತಿಗಳನ್ನು ತಿಳಿದೆನು). ಸ್ಥಳೀಯ ಬಂಗಾಳಿಗಳು ಅಲ್ಲಿಯೂ ಅವರ ಖರ್ಚಿಗೆ ಚಂದಾ ಎತ್ತಿದರು. ಅಲ್ಲಿ ಒಂದು ಭಾಷಣ ಮಾತ್ರ ಮಾಡಿದರು. ಅಸ್ತಮಾ ತೀವ್ರವಾಗಿ ನಂತರ ಪಡಸಾಲೆ ಸಂವಾದ , ಚರ್ಚೆಗಳನ್ನು ಮಾತ್ರ ಮಾಡಿದರು. ಜನಪ್ರಿಯ ಮುಖ್ಯ ಕಮಿಷನರ್ ಆಗಿದ್ದ ಹೆನ್ರಿ ಕಾಟನ್ ಸ್ವಾಮಿಗಳ ಬಗ್ಗೆ ಬಹಳ ಕಾಳಜಿ ವಹಿಸಿದ್ದನು. ‘ತೀರ್ಥಯಾತ್ರೆಗೆ ಹೋಗುವುದು ಸಂನ್ಯಾಸಿಗಳ ಕರ್ತವ್ಯ. ಆದ್ದರಿಂದಲೇ ನಾನು ಕಾಮ್ಯಾಕ್ಯದಿಂದ ಷಿಲ್ಲಾಂಗ್’ಗೆ ಬಂದಿದ್ದೇನೆ. ಇಲ್ಲಿ ಹೆನ್ರಿ ಕಾಟನ್’ನಂತಹ ಮಹಾತ್ಮರಿದ್ದಾರೆ. ಆದ್ದರಿಂದ ಇದೂ ತೀರ್ಥಕ್ಷೇತ್ರ ಮುಂತಾಗಿ ಹೇಳಿದ್ದರು. ಷಿಲ್ಲಾಂಗ್’ನಲ್ಲಿ ಆಡುಗಳು ಅಗ್ಗ. ಸ್ವಾಮಿಗಳ ತಮ್ಡ ಯಥೇಚ್ಛವಾಗಿ ಆಡಿನ ಮಾಂಸ ತಿನ್ನುತ್ತಿದ್ದಿತು. ತಮಗೆ ಸರಿಯಾದ ವ್ಯವಸ್ಥೆ ಮಾಡಿಲ್ಲವೆಂದು ಸ್ವಾಮಿಗಳೊಂದಿಗೆ ಬಂದಿದ್ದ ಒಬ್ಬರು ಸಿಟ್ಟಾಗಿದ್ದರು. ಷಿಲ್ಲಾಂಗ್’ನಿಂದ ಹಿಂದಿರುಗುವಾಗ ಶೀಷೆಗಳಲ್ಲಿ ಯಾವುದೋ ದ್ರವವನ್ನು ತಂದಿದ್ದರು. ಈ ವಿಚಾರವಾಗಿ ಮತ್ತು ಸಾಂಪ್ರದಾಯಿಕ ಪಂಡಿತನೊಬ್ಬ ಕೇಳಿದ ಪ್ರಶ್ನೆಗೆ ಸ್ವಾಮಿಗಳು ನೀಡಿದ ಒರಟು ಉತ್ತರದಿಂದ ಅಲ್ಲಿಯ ವೈಷ್ಣವರು ಮತ್ತು ಇತರ ಜನ ಸ್ವಾಮಿಗಳ ಮೇಲೆ ಗೌರವ ಕಳೆದುಕೊಂಡರು. ಅವರಿಗೆ ಚಂದಾ ನೀಡಿದ್ದ ಒಬ್ಬ ವೈಷ್ಣವ ಪಶ್ಚಾತ್ತಾಪವಾಗಿ ಉಪವಾಸ ಮಾಡಿದನು.
ಷಿಲ್ಲಾಂಗ್’ನಿಂದ ಮರಳಿದ ನಂತರ ಸ್ವಾಮಿಗಳು ಕೆಲ ದಿನ ಗುವಾಹತಿಯಲ್ಲಿ ಉಳಿದಿದ್ದರು. ಈ ಸಂದರ್ಭದಲ್ಲಿಯೂ ನಾನು ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದೆನು. ಒಂದು ಕೋಣೆಯಲ್ಲಿ ನಾವಿಬ್ಬರೇ ಇದ್ದೆವು. ಅವರು ತೆರೆದ ಮನಸ್ಸುಳ್ಳ ಮತ್ತು ಆತ್ಮೀಯರಾಗಿದ್ದರು. ಅವರಿಗಿದ್ದ ಉಸಿರಾಟದ ತೊಂದರೆಯನ್ನು ಕಂಡಿದ್ದ ನಾನು ‘ಸ್ವಾಮೀಜಿ ಯೋಗಿಗಳು ಉಸಿರನ್ನು ನಿಯಂತ್ರಿಸುತ್ತಾರೆಂದು ಹೇಳುತ್ತಾರೆ. ಆದರೆ ಉಸಿರು ನಿಮ್ಮನ್ನು ನಿಯಂತ್ರಿಸುತ್ತಿದೆ’ ಎಂದು ಕೇಳಿದೆನು. ಅದಕ್ಕೆ ‘ಹಾಗೆಂದರೇನು, ಭಟ್ಟಾಚಾರ್ಯ ಮಹಾಶಯ ನಿಮಗೆ ಉತ್ತರ ಹೇಳುತ್ತೇನೆ ಎಂದರು. ನಾನು ಅದನ್ನು ಮುಂದುವರೆಸಲಿಲ್ಲ. -ನನ್ನೊಳಗೆ ನಾನು ಆಲೋಚಿಸಿದೆ.ಅದನ್ನು ಬರೆಯದಿರುವುದೇ ವಾಸಿ- ಅದಕ್ಕೆ ಪ್ರಶ್ನಿಸುವ ಧೈರ್ಯ ನನಗೆ ಬರಲಿಲ್ಲ.
ಮಾತಿನ ನಡುವೆ ಅವರ ಅಮೆರಿಕ ಕೆಲಸದ ಚರ್ಚೆ ಬಂದಿತು. ಆಗ ಅವರು ತಮ್ಮ ಮುಂಚೂಣಿ ಕೆಲಸಗಳು ಫಲಪ್ರದವಾಗುತ್ತವೆ ಎಂದು ಕೊಚ್ಚಿಕೊಂಡು ಅಲ್ಲಿ ಈಗ ಅದನ್ನು ಯಾರು ಬೇಕಾದರೂ ಮುಂದುವರೆಸಬಹುದೆಂದರು. ನಾನು ಥಿಯೊಸೊಫಿಸ್ಟರನ್ನು ಸ್ವಲ್ಪ ಹೊಗಳಿ ಅವರು ನಮ್ಮ ಧರ್ಮದ ಬಗ್ಗೆ ತಿಳಿಸುತ್ತಿದ್ದಾರೆ ಎಂದೆನು. ಅದಕ್ಕೆ ಕೆರಳಿದ ಅವರು ‘ಸಾಹೇಬರು ಎಲ್ಲದರಲ್ಲಿಯೂ ನಮ್ಮ ಒಡೆಯರಾಗುತ್ತಿದ್ದಾರೆ, ಧಾರ್ಮಿಕ ವಿಷಯದಲ್ಲಿಯೂ ಅವರು ಹಾಗಾಗುವುದನ್ನು ಸಹಿಸಲಾರೆ ಎಂದರು. (ಇದು ನನಗೆ ಮೆಚ್ಚುಗೆಯಾಯಿತು) . ಅವರನ್ನು ಗೆಲ್ಲಬೇಕೆನ್ನುವುದು ನನ್ನ ಗುರಿಗಳಲ್ಲಿ ಒಂದಾಗಿದ್ದಿತು. ಬೇಕಾದಷ್ಟು ಪಾಶ್ಚಾತ್ಯ ಗಂಡಸರು . ಹೆಂಗಸರು ಗೌರವದಿಂದ ನನ್ನ ಅಡಿಗಳಿಗೆ ಎರಗಿದ್ದಾರೆ ಎಂದರು. ಅಲ್ಲಿಂದ ನಮ್ಮ ಮಾತು ಷಿಕಾಗೊ ಭಾಷಣಗಳತ್ತ ಹೊರಳಿತು. ಆಗ ನಾನು ಸ್ವಾಮಿಗಳೇ ನಿಮ್ಮ ಗುರು ರಾಮಕೃಷ್ಣರು ವಿಗ್ರಹಾರಾಧನೆಯಿಂದ ಪರಮ ಪದ ಪಡೆದರು. ಹಾಗಿರುವಾಗ ನೀವು ಷಿಕಾಗೊ ಭಾಷಣದಲ್ಲಿ ವೇದಾಂತದ ಉನ್ನತ ಮಟ್ಟದಿಂದ ಕೀಳು ವಿಗ್ರಹಾರಾಧನೆಯವರೆಗೆ ಎಂದು ಹೇಗೆ ಹೇಳಬಲ್ಲಿರಿ ಎಂದು ಕೇಳಿದೆನು. (ನಂತರ ಅವರು ವೇದಾಂತ ತತ್ತ್ವದ ಉನ್ನತ ಅಧ್ಯಾತ್ಮಿಕದಿಂದ ಕೆಳಮಟ್ಟದ ವಿಗ್ರಹಾರಾಧನೆ ಎಂದು ಹೇಳಿರುವುದು ತಿಳಿಯಿತು ). ಆಗ ಸ್ವಾಮಿಗಳು ನಾನು ಕೀಳು ಎಂದೆನೇ ಎಂದು ಮರು ಪರ್ಶ್ನಿಸಿದರು. ಆಗ ನಾನು ನನಗೆ ನೆನಪಿರುವಂತೆ ಎಂದೆನು. ಆಗ ಅವರು ಕೀಳು ಎಂದರೆ (ವಲ್ಗಸ್=ಜನ) ಜನಪ್ರಿಯ ಎಂದರ್ಥ ಎಂದರು. ಆಗ ನಾನು ಕೀಳು ಎನ್ನುವ ಬದಲು ಜನಪ್ರಿಯ ಎನ್ನಬಹುದಿತ್ತು ಎಂದೆನು. ಅಲ್ಲಿಗೆ ನಮ್ಮ ಚರ್ಚೆ ಮುಗಿಯಿತು. ಆ ದಿನ ನಾವು ಬಹಳ ಮಾತನಾಡಿದೆವು. ಎಲ್ಲವದೂ ನನಗೆ ನೆನಪಿಲ್ಲ. ನನಗೆ ಒಂದೆರಡು ಸಂಗತಿಗಳು ಗೊತ್ತು , ಆದರೆ ಅವು ಪ್ರಕಟಣೆಗೆ ಯೋಗ್ಯವಲ್ಲ. ಈ ಬಗ್ಗೆ ನಾನು ಹಿಂದೆ ಕೇಳಿದ್ದುದು ನಿಜವೆಂದು ಈ ಚರ್ಚೆಯಿಂದ ನನಗೆ ಗೊತ್ತಾಯಿತು. ಈ ಸಂನ್ಯಾಸಿ ಕುರಿಯ ಚರ್ಮ ಹೊದ್ದ ತೋಳ ಎಂದು ನನಗೆ ಮನದಟ್ಟಾಯಿತು. ನಾನು ಹೊರಡಬೇಕೆಂದಿದ್ದಾಗ ಒಂದೆರಡು ಫ್ರೆಂಚ್ ಕಾದಂಬರಿಗಳನ್ನು ತಂದುಕೊಡುವಂತೆ ಕೇಳಿದರು. ಇದನ್ನು ನಾನು ಬರೆದು ಪೋರ್ಟೆಯೆರ್ಸ್’ಗೆ ತಿಳಿಸಿದೆನು. ಅವು ಸಿಕ್ಕವೋ ಇಲ್ಲವೋ ನನಗೆ ಗೊತ್ತಿಲ್ಲ.
ಅಸ್ಸಾಂನಿಂದ ಬೇಲೂರು ಮಠಕ್ಕೆ ಹಿಂದಿರುಗಿದ ನಂತರ ಪೂರ್ವ ಬಂಗಾಳದ ಬಗ್ಗೆ ಮಾತನಾಡತೊಡಗಿ ‘ಹಂಕರದೇವ’ನ ಬಗ್ಗೆ ಹೇಳಿದರು. ಅಸ್ಸಾಂ ಬಗ್ಗೆ ತಿಳಿದಿರುವವರು ಹಂಕರ ದೇವ ಒಬ್ಬ ತಾಂತ್ರಿಕ ಅಥವಾ ಶಂಕರಾಚಾರ್ಯರ ಪರಂಪರೆಯವನು ಎಂದು ತಿಳಿದಿರುವುದು ಸೋಜಿಅಗವನ್ನುಂಟು ಮಾಡುತ್ತದೆ. ಸ್ವಾಮಿಗಳು ಉದಾಸೀನವಾಗಿ ಹೇಳಿದಂತೆ ಹಂಕರದೇವ ಇರದೆ ವೈಷ್ಣವ ಬೋಧಕ ಶಂಕರದೇವ ಇದ್ದರು. ಸ್ವಾಮಿಗಳು ಆ ಸ್ಥಳದ ಧಾರ್ಮಿಕ ವ್ಯಕ್ತಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದಿರುವುದು , ಯತ್ನಿಸದಿರುವುದು ಖೇದಕರವಾಗಿದೆ. ಹಾಗೆ ಪ್ರಯತ್ನ ಮಾಡಿದ್ದರೆ ೫೦೦ ವರ್ಷಗಳ ಹಿಂದೆ ವರ್ಷಗಳ ಹಿಂದೆ ಆ ಹೆಸರಿನ ಕಾಯಸ್ಥ ಜಾತಿಯ ಧಾರ್ಮಿಕ ಪುನರುಜ್ಜೀವಕ ಇರುವುದು ತಿಳಿಯುತ್ತಿದ್ದಿತು. ಶ್ರೀ ಚೈತನ್ಯ ಬಂಗಾಳದ ಸಾಹಿತ್ಯದ ಬೀಜವನ್ನು ಬಿತ್ತಿದಂತೆ ಈ ಮಹಾತ್ಮನೂ ಅಂತಹ ಪ್ರಭಾವವನ್ನು ಬಿಟ್ಟುಹೋಗಿದ್ದಾನೆ. ಗುಡ್ಡಗಾಡಿನ ಜನ ಈಗಲೂ ಈತನ ಭಕ್ತರಾಗಿದ್ದು , ಹಿಂದೂ ಧರ್ಮದ ತೆಕ್ಕೆಯೊಳಕ್ಕೆ ಬರುತ್ತಿದ್ದಾರೆ. ಅಸ್ಸಾಮಿ ಭಾಷೆ ಅತನ ಕೀರ್ತನ , ಭಾವನೆಗಳಿಂದ ಸಮೃದ್ಧವಾಗಿದೆ.
Comment Box is loading comments...