ಶಾಸ್ತ್ರಿಯ ಭಾಷೆಗಳು
(ತಮಿಳಗಂ-ಸಂಗ : ಎಷ್ಟು ಪ್ರಾಚೀನ ಕೃತಿಯ ಆಯ್ದ ಭಾಗ)
ತಮಿಳಿಗೆ ಶಾಸ್ತ್ರಿಯ ಭಾಷೆಯ ಸ್ಥಾನ ಕುರಿತಾದ ಹೇಳಿಕೆ : ಏಪ್ರಿಲ್ 11 , 2000
ಪ್ರೊಫೆಸರ್ ಮರಿಮಲೈ ತಮಿಳಿನ ಶಾಸ್ತ್ರೀಯ ಸ್ಥಾನಮಾನ ಕುರಿತಾಗಿ ಬರೆಯುವಂತೆ ನನ್ನನ್ನು ಕೇಳಿದ್ದಾರೆ. ಈ ಕೋರಿಕೆಗೆ ಪ್ರತಿಕ್ರಿಯಿಸಲು ನನಗೆ ಹರ್ಷವಾಗುತ್ತದೆ.
1975ರಿಂದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ-ಬಕ್ರ್ಲೆಯಲ್ಲಿ ನಾನು ತಮಿಳು ಪ್ರಾಧ್ಯಾಪಕನಾಗಿದ್ದು , ಸಧ್ಯದಲ್ಲಿ ಇದೇ ವಿಶ್ವವಿದ್ಯಾಲಯದಲ್ಲಿ ತಮಿಳು ಪೀಠ ಅಲಂಕರಿಸಿದ್ದೇನೆ. 1970ರಲ್ಲಿ ನಾನು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಪದವಿ ಗಳಿಸಿದೆನು. 1969ರಲ್ಲಿ ನಾನು ಮ್ಯಾಡಿಸನ್ನ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನಾಗುವ ಮೂಲಕ ನನ್ನ ವೃತ್ತಿ ಜೀವನ ಪ್ರಾರಂಭವಾಯಿತು. ತಮಿಳು ಸಂಸ್ಕೃತಗಳಲ್ಲದೆ ನನಗೆ ಶಾಸ್ತ್ರೀಯ ಭಾಷೆಗಳಾದ ಲ್ಯಾಟಿನ್ ಮತ್ತು ಗ್ರೀಕ್ಗಳು ತಿಳಿದಿವೆ. ಇವುಗಳ ಸಾಹಿತ್ಯವನ್ನು ಅವುಗಳ ಮೂಲದಲ್ಲಿಯೇ ಓದಿದ್ದೇನೆ. ಆಧುನಿಕ ಯುರೋಪಿನ ತೌಲನಿಕ ಭಾಷಾಶಾಸ್ತ್ರದ ಅರಿವು ನನಗಿದೆ. ( ನನಗೆ ರಷ್ಯನ್ , ಜರ್ಮನಿ ಹಾಗೂ ಫ್ರೆಂಚ್ ಗೊತ್ತಿದ್ದು , ಆ ಭಾಷೆಗಳಲ್ಲಿ ವ್ಯಾಪಕವಾಗಿ ಓದಿದ್ದೇನೆ.) ಭಾರತದ ಆಧುನಿಕ ಸಾಹಿತ್ಯದ ತಿಳುವಳಿಕೆ ನನಗಿದೆ. ವಿಶೇಷವಾಗಿ ತಮಿಳು ಭಾಷೆ ಮತ್ತು ಸ್ವಲ್ಪ ಮಟ್ಟದಲ್ಲಿ ಮಲಯಾಳಂ ಭಾಷೆಗಳಲ್ಲಿ ಪರಿಶ್ರಮ ಹೊಂದಿರುವ ನಾನು ಇತರ ಭಾರತೀಯ ಭಾಷೆಗಳ ಸಾಹಿತ್ಯವನ್ನು ಭಾಷಾಂತರಗಳ ಮೂಲಕ ಅರಿತಿದ್ದೇನೆ. ತೆಲುಗಿನ ಖ್ಯಾತ ವಿದ್ವಾಂಸರಾದ ವಿ.ನಾರಾಯಣರಾವ್ರೊಂದಿಗೆ ತೆಲುಗು ಸಾಹಿತ್ಯ ಕುರಿತಾಗಿ ಸುದೀರ್ಘ ಕಾಲ ಚರ್ಚಿಸಿದ್ದು ಅದರ ಪರಂಪರೆಯ ಅರಿವು ಸಾಕಷ್ಟು ಚೆನ್ನಾಗಿದೆ. ದಕ್ಷಿಣ ಏಷ್ಯಾ ಅಧ್ಯಯನ ಸಂಸ್ಥೆಯ ಸ್ಥಾಯಿ ಸದಸ್ಯನಾಗಿ ಹಿಂದಿ ಸಾಹಿತ್ಯದ ಶ್ರೀಮಂತಿಕೆಗೆ ಮೈಯೊಡ್ಡಿಕೊಂಡಿದ್ದೇನೆ. ಮಹಾದೇವಿ ವರ್ಮ , ತುಳಸಿ , ಕಬೀರರನ್ನು ಓದಿದ್ದೇನೆ.
ನನ್ನ ಜೀವನದ ಬಹುತೇಕ ಅವಧಿಯನ್ನು -1963 ರಿಂದ- ಸಂಸ್ಕೃತದ ಅಧ್ಯಯನದಲ್ಲಿ ಕಳೆದಿದ್ದೇನೆ. ಕಾಳಿದಾಸ , ಮಾಘ ಮತ್ತು ಭಾರವಿಯ ಕೆಲ ಕೃತಿಗಳು ಹಾಗೂ ಹರ್ಷನ ಸಾಹಿತ್ಯವನ್ನು ಮೂಲದಲ್ಲಿ ಓದಿದ್ದೇನೆ. ನಾನು ವೇದದ ಐದನೆಯ ಅಂಗವನ್ನು , ಮತ್ತಿತರ ಅಧ್ಯಾಯಗಳನ್ನು ,ಉಪನಿಷತ್ತುಗಳನ್ನು , ಬಹುತೇಕ ಮಹಾಭಾರತವನ್ನು , ಕಥಾಸರಿತ್ಸಾಗರ, ಆದಿಶಂಕರರ ಕೃತಿಗಳನ್ನು ಇತರರ ಹಲವಾರು ಸಾಹಿತ್ಯವನ್ನು ಮೂಲದಲ್ಲಿ ಓದಿದ್ದೇನೆ.
ನನ್ನ ವಿದ್ವತ್ತಿನ ತೋರ್ಪಡಿಕೆಗಾಗಿ ನಾನು ಹೀಗೆ ಹೇಳುತ್ತಿರುವೆನೆಂದು ಭಾವಿಸಬಾರದು. ಒಂದು ಭಾಷೆ ಶಾಸ್ತ್ರೀಯವೇ ಅಲ್ಲವೇ ಎಂದು ನಿರ್ಧರಿಸಲು ನನಗಿರುವ ಅರ್ಹತೆಯನ್ನು ಸ್ಥಾಪಿಸಲು ಇವನ್ನು ಹೇಳಿದ್ದೇನೆ. ಯಾವುದೇ ತಳಹದಿಯ ಮೇಲೆ ಪರಿಗಣಿಸಿದರೂ ತಮಿಳು ಜಗತ್ತಿನ ಮಹಾಶಾಸ್ತ್ರೀಯ ಸಾಹಿತ್ಯ ಹಾಗೂ ಪರಂಪರೆಯನ್ನು ಹೊಂದಿದೆಯೆಂದು ಯಾವ ಸಂದಿಗ್ಧವೂ ಇಲ್ಲದೆ ಘಂಟಾಘೋಷವಾಗಿ ಸಾರಬಲ್ಲೆ.
ನನ್ನ ಈ ಹೇಳಿಕೆಯ ಹಿಂದೆ ಹಲವಾರು ಕಾರಣಗಳಿವೆ. ಅವುಗಳನ್ನು ಒಂದೊಂದಾಗಿ ಪರಿಗಣಿಸುತ್ತೇನೆ.
ಮೊದಲನೆಯದಾಗಿ ತಮಿಳು ಸಾಕಷ್ಟು ಪ್ರಾಚೀನ . ಅದರ ಸಾಹಿತ್ಯ ಭಾರತದ ಇತರ ಆಧುನಿಕ ಭಾಷೆಗಳಿಗಿಂತ 1000 ವರ್ಷಗಳಷ್ಟು ಹಿಂದಿನಿಂದ ಪ್ರಾರಂಭವಾಗುತ್ತದೆ. ಆರಂಭಿಕ ಕಾಲದ ತಮಿಳಿನ ಶಿಲಾಶಾಸನಗಳೊಂದಿಗೆ ಪರಾಮರ್ಶಿಸಿದಾಗ ತಮಿಳಿನ ಅತ್ಯಂತ ಪ್ರಾಚೀನ ಗ್ರಂಥ ತೊಲ್ಕಾಪ್ಪಿಯಂನ ಕೆಲ ಭಾಗಗಳು ಕ್ರಿ.ಪೂ 200 ರ ಅವಧಿಗೆ ಸೇರಿವೆ ಎನ್ನಬಹುದು. ತಮಿಳಿನ ಮಹಾನ್ ಕೃತಿಗಳಾದ ಸಂಗಂ ಸಂಕಲನಗಳು ಮತ್ತು ಪತ್ತುಪ್ಪಾಟ್ಟು ಕ್ರಿ.ಶ ಆರಂಭ ಕಾಲದ ಮೊದಲೆರಡು ಶತಮಾನಗಳಿಗೆ ಸೇರಿವೆ. ಇವು ಕಾಳಿದಾಸನಿಗಿಂತ 200 ವರ್ಷ ಮೊದಲೇ ಬೆಳಕು ಕಂಡ ಭಾರತದ ಮೊದಲ ಲೌಕಿಕ ಸಾಹಿತ್ಯದ ಕೃತಿಗಳು.
ಎರಡನೆಯದಾಗಿ ತಮಿಳು ಸಾಹಿತ್ಯ ಪರಂಪರೆ ಸಂಸ್ಕೃತದಿಂದ ಪ್ರೇರಿತವಾಗದೆ , ಸ್ವಂತಿಕೆಯಿಂದ ಮೂಡಿಬಂದಿದೆ. ನಿಜವಾಗಿ ಹೇಳಬೇಕೆಂದರೆ ದಕ್ಷಿಣದಲ್ಲಿ ಸಂಸ್ಕೃತದ ಪ್ರಭಾವ ಪ್ರಬಲವಾಗುವ ಮುಂಚೆಯೇ ಹೊರಬಂದ ಸಾಹಿತ್ಯ ತಮಿಳಿನಲ್ಲಿದ್ದು ಇದರಂತಹ ಸಾಹಿತ್ಯ ಸಂಸ್ಕೃತದಲ್ಲಾಗಲಿ ಅಥವಾ ಇತರ ಭಾರತೀಯ ಭಾಷೆಗಳಲ್ಲಾಗಲಿ ಇಲ್ಲ. ಅದಕ್ಕೆ ಅದರದೇ ಆದ ಕಾವ್ಯ, ಲಕ್ಷಣ , ವ್ಯಾಕರಣ ಪರಂಪರೆ, ಸೌಂದರ್ಯ ಮೀಮಾಂಸೆಯಿದೆ. ಇದಕ್ಕಿಂತ ಮಿಗಿಲಾಗಿ ಅದರ ವಿಪುಲ ಸಾಹಿತ್ಯ ರಾಶಿ ಅನನ್ಯವಾದುದು. ಇದು ಸಂಸ್ಕೃತಕ್ಕಿಂತ ಅಥವಾ ಬೇರೆ ಭಾರತೀಯ ಭಾಷೆಗಳಿಗಿಂತ ಭಿನ್ನವಾದ ಭಾರತೀಯ ಸಂವೇದನೆಯನ್ನು ಹೊಂದಿದ್ದು, ಸಮೃದ್ಧವಾಗಿದ್ದು , ವ್ಯಾಪಕ ಬೌದ್ಧಿಕ ಪರಂಪರೆಯನ್ನು ಹೊಂದಿದೆ.
ಮೂರನೆಯದಾಗಿ ತಮಿಳಿನ ಅಭಿಜಾತ ಸಾಹಿತ್ಯ ಸಂಸ್ಕೃತಿ , ಗ್ರೀಕ್ , ಲ್ಯಾಟಿನ್ , ಚೀನಾ , ಪರ್ಷಿಯಾ , ಅರೇಬಿಕ್ನ ಮಹಾನ್ ಸಾಹಿತ್ಯಗಳೊಂದಿಗೆ ಹೆಗಲೆಣೆಯಾಗಿ ನಿಲ್ಲಬಲ್ಲುದು. ತಮಿಳಿನ ಸಾಹಿತ್ಯದ ಸಂವೇದನೆ ಮತ್ತು ಅಗಾಧತೆ , ಅದರ ವೈವಿಧ್ಯಮಯ ಸಾಹಿತ್ಯ (ಆಧುನಿಕ ಪೂರ್ವದ ಭಾರತೀಯ ಭಾಷೆಗಳಲ್ಲಿ ಸಂವೇದನೆಯನ್ನು ವ್ಯಾಪಕವಾಗಿ ತೋರಿಸಿರುವುದು ತಮಿಳು ಮಾತ್ರ) ಮತ್ತು ಸಾರ್ವತ್ರಿಕತೆ ತಮಿಳನ್ನು ಜಗತ್ತಿನ ಶಾಸ್ತ್ರೀಯ ಪರಂಪರೆಗಳಲ್ಲಿ ಒಂದನ್ನಾಗಿಸಿದೆ. ತಿರುಕ್ಕುರುಳ್ ಜಗತ್ತಿನ ಮಹಾನ್ ನೀತಿ ಸೂತ್ರವೆಂದು ತಿಳಿದಿದೆ. ಇದು ಮಹತ್ತರವಾದ , ವೈವಿಧ್ಯಮಯವಾದ ತಮಿಳು ಸಾಹಿತ್ಯ ಪರಂಪರೆಯ ಸೂಚಕ ಮಾತ್ರ. ಈ ಮಹಾನ್ ಸಾಹಿತ್ಯದಿಂದ ಮಾನವನ ಯಾವ ಚಟುವಟಿಕೆಯೂ ಹೊರಗುಳಿದಿಲ್ಲ.
ಅಂತಿಮವಾಗಿ ತಮಿಳು ಆಧುನಿಕ ಭಾರತದ ಸಂಸ್ಕೃತಿ ಮತ್ತು ಪರಂಪರೆಗಳ ಪ್ರಾಥಮಿಕ ಮತ್ತು ಸ್ವತಂತ್ರ ಆಕರವಾಗಿದೆ. ನಾನು ಸಂಸ್ಕೃತದ ಮೇಲೆ ದಕ್ಷಿಣದ ಪ್ರಭಾವವನ್ನು ಕುರಿತು ವ್ಯಾಪಕವಾಗಿ ಬರೆದಿದ್ದೇನೆ. ಆದರೆ ಅಷ್ಟೇ ಮುಖ್ಯವಾದ ವಿಚಾರವೆಂದರೆ ಸಂಗಂ ಸಂಕಲನಗಳಿಂದ ಪ್ರಾರಂಭಿಸಿ ತಮಿಳಿನ ಪವಿತ್ರ ಮಹಾನ್ ಕೃತಿಗಳು ಆಧುನಿಕ ಹಿಂದುಧರ್ಮ ರೂಪುಗೊಳ್ಳುವಲ್ಲಿ ನೆರವಾಗಿವೆ. ತಮಿಳಿನ ಪರಿಕಲ್ಪನೆಗಳು ಭಾಗವತ ಪುರಾಣ ಹಾಗೂ ಇನ್ನಿತರ ಕೃತಿಗಳಲ್ಲಿ (ಕನ್ನಡ , ಸಂಸ್ಕೃತ,ತೆಲುಗು ಸೇರಿದಂತೆ) ಭಾರತದಾದ್ಯಂತ ಹರಡಿವೆ. ವೇದಗಳಿಗೆ ಸಮಾನವಾವೆಂದು ಭಾವಿಸಲಾದ ತನ್ನದೇ ಆದ ಸಾಹಿತ್ಯವನ್ನು ತಮಿಳು ಹೊಂದಿದ್ದು ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ಇಂದಿಗೂ ಸಂಸ್ಕೃತದ ಮಂತ್ರಗಳೊಂದಿಗೆ ಇವುಗಳನ್ನು ಹಾಡಲಾಗುತ್ತಿದೆ (ತಿರುಪತಿ). ಸಂಸ್ಕೃತ ಆಧುನಿಕ ಇಂಡೋ-ಆರ್ಯನ್ ಭಾಷೆಗಳ ಮೂಲವಾಗಿರುವಂತೆ , ಶಾಸ್ತ್ರೀಯ ತಮಿಳು ಆಧುನಿಕ ತಮಿಳು ಮತ್ತು ಮಲಯಾಳಂಗಳ ಮೂಲ. ಇಂಡೋ-ಆರ್ಯನ್ ಭಾಷೆಗಳಲ್ಲಿ ಸಂಸ್ಕೃತ ಅತ್ಯಂತ ಅಬಾಧಿತ ಮತ್ತು ಅತ್ಯಲ್ಪ ಬದಲಾವಣೆಗೆ ಒಳಗಾದಂತೆ ದ್ರಾವಿಡ ಭಾಷೆಗಳಲ್ಲಿ ತಮಿಳು ಆ ಸ್ಥಾನ ಹೊಂದಿದೆ. ದ್ರಾವಿಡ ಭಾಷೆಗಳ ಸ್ವರೂಪ ಮತ್ತು ಬೆಳವಣಿಗೆಯನ್ನು ಅರಿಯುವ ಒರೆಗಲ್ಲು ಅದಾಗಿದೆ.
ತಮಿಳಿಗೆ ಇನ್ನು ಏಕೆ ಶಾಸ್ತ್ರಿಯ ಸ್ಥಾನಮಾನ ದಕ್ಕಿಲ್ಲವೆಂದು ಅರಿಯಲು ನಾನು ಯತ್ನಿಸುತ್ತಿದ್ದೇನೆ. ಅದರ ಹಿಂದೆ ರಾಜಕೀಯ ಕಾರಣವಿರುವುದನ್ನು ನಾನು ಊಹಿಸಬಲ್ಲೆ – ತಮಿಳನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸಿದರೆ ಬೇರೆ ಭಾಷೆಗಳು ಸಹ ಅದನ್ನು ಕೇಳುವ ಭಯವಿರುವಂತೆ ಕಾಣುತ್ತದೆ. ಇದೊಂದು ಅನಾವಶ್ಯಕವಾದ ಚಿಂತೆ. ಭಾರತದ ಆಧುನಿಕ ಭಾಷೆಗಳ ಶ್ರೀಮಂತಿಕೆಯ ಅರಿವು ನನಗಿದೆ. ಅವುಗಳಲ್ಲಿ ಪ್ರತಿಯೊಂದು ಜಗತ್ತಿನ ಯಾವುದೇ ಭಾಷೆಗೆ ಸಮಾನವಾದ ಮಧ್ಯಕಾಲೀನ ಮತ್ತು ಆಧುನಿಕ ಸಾಹಿತ್ಯ ಹೊಂದಿವೆ. ಆದರೆ ಅವು ಯಾವುವು ಶಾಸ್ತ್ರಿಯ ಭಾಷೆಗಳಲ್ಲ. ಯುರೋಪ್ನಲ್ಲಿ ಇಂಗ್ಲೀಷ್ ಹಾಗೂ ಇತರ ಆಧುನಿಕ ಭಾಷೆಗಳು (ಗ್ರೀಕ್ ಹೊರತಾಗಿ) ಮೊದಲೇ ಅಸ್ತಿತ್ವದಲ್ಲಿದ್ದ ಪರಂಪರೆಯ ಮೇಲೆ ನಂತರದಲ್ಲಿ ವಿಕಸಿಸಿದ, ಎರಡನೇ ಸಹಸ್ರಮಾನದಲ್ಲಿ ಬೆಳೆದ ಭಾಷೆಗಳು. ಯುರೋಪ್ನಲ್ಲಿ ಗ್ರೀಕ್ ಭಾಷೆಯನ್ನು ಶಾಸ್ತ್ರೀಯ ಭಾಷೆ0iÉುಂದು ಗುರುತಿಸಿರುವುದು ¥sóÉ್ರಂಚ್ ಮತ್ತು ಇಂಗ್ಲೀಷ್ ಆ ಸ್ಥಾನವನ್ನು ಕೇಳುವಂತೆ ಮಾಡಲಾರದು.
ಒಂದು ಭಾಷೆ ಶಾಸ್ತ್ರೀಯ ಪರಂಪರೆಗೆ ಸೇರಬೇಕೆಂದರೆ ಹಲವಾರು ಅರ್ಹತೆಗಳನ್ನು ಹೊಂದಿರಬೇಕು. ಅದು ಪ್ರಾಚೀನವಾಗಿರಬೇಕು , ಅದು ಅನ್ಯ ಪರಂಪರೆಯಿಂದ ಮೂಡಿ ಬಂದಿರದೆ ಸ್ವತಂತ್ರ ಪರಂಪರೆ ಹೊಂದಿರಬೇಕು. ಅದು ಬಹು ಸಮೃದ್ಧವಾದ ಪ್ರಾಚೀನ ಸಾಹಿತ್ಯ ಹೊಂದಿರಬೇಕು. ಭಾರತದ ಬೇರೆ ಭಾಷೆಗಳಿಗಿಂತ ತಮಿಳು ಭಿನ್ನವಾಗಿದ್ದು ಇವೆಲ್ಲ ಅರ್ಹತೆಗಳನ್ನು ಹೊಂದಿ ಪ್ರತ್ಯೇಕವಾಗಿ ಹೊರ ನಿಲ್ಲುತ್ತದೆ. ಅದು ಅತ್ಯಂತ ಪ್ರಾಚೀನ ಲ್ಯಾಟಿನ್ ಹಾಗೂ ಹಳೆ ಅರೇಬಿಕ್ನಷ್ಟೇ ಹಳೆಯದು. ಅದು ಸ್ವತಂತ್ರ ಪರಂಪರೆಯಿಂದ ಉದಿಸಿದೆ. ಅದರ ಮೇಲೆ ಸಂಸ್ಕೃತ ಅಥವಾ ಇನ್ನಾವುದೇ ಭಾಷೆಯ ಪ್ರಭಾವವಿ¯್ಲ. ಅದರ ಪ್ರಾಚೀನ ಸಾಹಿತ್ಯ ವರ್ಣಿಸಲಾಗದಷ್ಟು ವ್ಯಾಪಕ ಮತ್ತು ಶ್ರೀಮಂತ.
ತಮಿಳನ್ನು ಶಾಸ್ತ್ರೀಯ ಭಾಷೆಯೆಂದು ಘೋಷಿಸಲು ನಾನೊಂದು ಪ್ರಬಂಧವನ್ನು ಬರೆಯುವ ಸ್ಥಿತಿಯಿದೆ ಎಂಬುದು ಸೊಜಿಗವನ್ನುಂಟು ಮಾಡುತ್ತಿದೆ – ಇದು ಭಾರತ ಮಹಾನ್ ದೇಶ ಅಥವಾ ಹಿಂದು ಧರ್ಮ ಜಗತ್ತಿನ ಮಹೋನ್ನತ ಧರ್ಮ ಎಂದು ಬರೆದಂತೆ. ತಮಿಳಿನ ಬಗ್ಗೆ ಬಲ್ಲ ಯಾರಾದರೂ ಅದು ಜಗತ್ತಿನ ಶಾಸ್ತ್ರೀಯ ಭಾಷೆಗಳೊಂದಿಗೆ ಸ್ಥಾನಮಾನ ಹೊಂದಿರುವ ಬಗ್ಗೆ ಸಂಶಯ ಹೊಂದಲಾರರು. ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ನಿರಾಕರಿಸುವುದೆಂದರೆ ಭಾರತೀಯ ಸಂಸ್ಕೃತಿಯ ಮಹತ್ತರತೆ ಹಾಗೂ ಶ್ರೀಮಂತಿಕೆಯನ್ನು ನಿರಾಕರಿಸಿದಂತೆ.
ಜಾರ್ಜ್ ಹಾರ್ಟ್
ತಮಿಳು ಪ್ರಾಧ್ಯಾಪಕರು
ತಮಿಳು ಅಧ್ಯಯನ ಪೀಠ
ಪ್ರೊಫೆಸರ್ ಮರಿಮಲೈಗಳ ಕೋರಿಕೆ ಮೇರೆಗೆ ಪತ್ರದ ಮೂಲಕ ,ಏಪ್ರಿಲ್ 11 , 2000 ರಂದು ಜಾರ್ಜ್ ಹಾರ್ಟ್ ಬರೆದ ಪ್ರತಿಕ್ರಿಯೆ ಅಂತರ್ಜಾಲದ ನೂರಾರು ತಾಣಗಳಲ್ಲಿ ಹರಿದಾಡಿ, ತಮಿಳರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿತು. ಇದಕ್ಕೆ ಪೂರಕವಾಗಿ 2004 ರಲ್ಲಿ ತಮಿಳುನಾಡಿನ ಡಿ.ಎಂ.ಕೆ ಪಕ್ಷದ ನೆರವಿನಿಂದ ಕೇಂದ್ರದಲ್ಲಿ ಯು.ಪಿ.ಎ. ಸರ್ಕಾರ ರಚಿಸಿತು. ಇದರ ಫಲಿತಾಂಶವಾಗಿ ಸಾಮಾನ್ಯ ಕನಿಷ್ಟ ಕಾರ್ಯಕ್ರಮದಲ್ಲಿ ತಮಿಳನ್ನು ಶಾಸ್ತ್ರಿಯ ಭಾಷೆಯಾಗಿ ಸಾರಬೇಕೆಂಬ ಅಂಶ ಸೇರ್ಪಡೆಗೊಂಡಿತು. ಶಾಸ್ತ್ರಿಯ ಭಾಷೆ ಯಾವುದು ಎಂಬುದರ ವಿದ್ವತ್ ಚರ್ಚೆಯನ್ನು ನಡೆಸದೆ ಜಾರ್ಜ್ಹಾರ್ಟ್ ಪತ್ರದಲ್ಲಿನ ಅಂಶಗಳನ್ನು ಹೊರತೆಗೆದು ಕೇಂದ್ರ ಸಾಹಿತ್ಯ ಅಕಾಡೆಮಿಯ ವಿರೋಧವನ್ನು ಲೆಕ್ಕಿಸದೆ ಶಾಸ್ತ್ರೀಯ ಭಾಷೆಗೆ ಬೇಕಾದ ನಾಲ್ಕು ಮಾನದಂಡಗಳನ್ನು ಕೇಂದ್ರ ಸರ್ಕಾರ 12/10/2004 ರಂದು ತನ್ನ ರಾಜ್ಯಪತ್ರದ ಮೂಲಕ ರೂಪಿಸಿ ‘ಶಾಸ್ತ್ರೀಯ ಭಾಷೆಗಳು’ ಎಂಬ ಹೊಸ ಭಾಷಾ ಸಮುದಾಯವನ್ನು ಸೃಷ್ಟಿಸಿತು.
ಇದರ ಪ್ರಕಾರ ಶಾಸ್ತ್ರಿಯ ಭಾಷೆಯ ಮಾನಕಗಳೆಂದರೆ -
1. ಸಾವಿರ ವರ್ಷಗಳಿಗಿಂತಲೂ ಅಧಿಕವಾದ ಪ್ರಾಚೀನ ಪಠ್ಯ /ದಾಖಲೆ ಹೊಂದಿರುವ ಇತಿಹಾಸ.
2. ಅಮೂಲ್ಯವೆಂದು ಆ ಭಾಷಾ ಸಮುದಾಯ ಭಾವಿಸುವ, ಪರಂಪರೆಯಾಗಿ ಪರಿಗಣಿತವಾಗಿರುವ ಪ್ರಾಚೀನ ಸಾಹಿತ್ಯದ ಅಸ್ತಿತ್ವ.
3. ಅನ್ಯ ಮೂಲದಿಂದ ಪ್ರೇರಿತವಾಗದ ತನ್ನದೇ ಆದ ಸ್ವೋಪಜ್ಞ ಸಾಹಿತ್ಯ ಸಂಪ್ರದಾಯ
4. ಆ ಭಾಷೆಯಲ್ಲಿ ಪ್ರಾಚೀನ ಮತ್ತು ಪ್ರಸಕ್ತ ಸಾಹಿತ್ಯಗಳು ಭಿನ್ನವಾಗಿರಬೇಕು ಆದರೆ ನಂತರ ಕಾಲದ ಸಾಹಿತ್ಯ ಪ್ರಕಾರಗಳು ಪ್ರಾಚೀನ ಸಾಹಿತ್ಯದಿಂದ ರೂಪುಗೊಳ್ಳುವ ಅಗತ್ಯವಿಲ್ಲ.
ಈ ಪ್ರಕಟಣೆಯ ನಂತರ ಭಾರತದಲ್ಲಿ ಶಾಸ್ತ್ರಿಯ ಭಾಷಾ ಸ್ಥಾನ ಕುರಿತಾದಂತೆ ದ್ರಾವಿಡ ಭಾಷೆಗಳ ನಡುವೆ ಮೊದಲು-ನಂತರ , ಸ್ವೋಪಜ್ಞ-ಅವಲಂಬಿತ , ಅನನ್ಯ-ಸಾಧಾರಣ ಎಂಬ ವಾದ ವಿವಾದಗಳಿಗೆ ಕಾರಣವಾಗಿ ನಂತರ ರಾಜಕೀಯ ಸ್ವರೂಪ ತಾಳಿತು. ಹಲವು ವರ್ಷಗಳ ಹೋರಾಟ , ಸಮಿತಿಗಳ ರಚನೆ ,ರಾಜಕೀಯ ಬೆದರಿಕೆಗಳ ನಂತರ ಕನ್ನಡ ಮತ್ತು ತೆಲುಗುಗಳು ಸಹ ಶಾಸ್ತ್ರೀಯವೆಂದು ಪರಿಗಣಿತವಾದವು. ಇದರ ಬೆನ್ನಲ್ಲೆ ತಮಿಳುನಾಡಿನ ವ್ಯಕ್ತಿಯೊಬ್ಬರು ಚೆನ್ನೈ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದರು. ಈ ಹಿನ್ನೆಲೆಯಲ್ಲಿ ಜಾರ್ಜ್ ಹಾರ್ಟ್ ತಮಿಳನ್ನು ಶಾಸ್ತ್ರೀಯ ಭಾಷೆಯೆಂದು ಘೋಷಿಸಲು ಬಳಸಿರುವ ಎಷ್ಟು ಅಂಶಗಳನ್ನು ತಮಿಳು ಯಾವ ಕಾಲದಲ್ಲಿ ಹೊಂದಿದ್ದಿತು , ಮತ್ತು ಅವರು ಪರಿಗಣಿಸಿದ ಅಂಶಗಳು ಮಾತ್ರ ಭಾಷೆಯನ್ನು ಶಾಸ್ತ್ರೀಯ ಸ್ಥಾನಕ್ಕೊಯ್ಯಬಲ್ಲವೇ ಹಾಗೂ ಸಂಸ್ಕೃತ , ಲ್ಯಾಟಿನ್ನಂತಹ ಶಾಸ್ತ್ರೀಯ ಭಾಷೆಗಳೊಂದಿಗೆ ದ್ರಾವಿಡ ಭಾಷೆಗಳನ್ನು ಹೋಲಿಸಿ ನೋಡಿದಾಗ ತಿಳಿದುಬರುವ ಅಂಶಗಳು ಯಾವುವೆಂಬುದನ್ನು ಮುಂದೆ ನೋಡೋಣ.
ಶಾಸ್ತ್ರಿಯ ಭಾಷೆ ಎಂದರೇನು ಎಂಬ ಬಗ್ಗೆ ಇತರ ವಿದ್ವಾಂಸರು ಯಾವ ಅಭಿಪ್ರಾಯ ತಾಳಿದ್ದಾರೆ ಎಂದು ಸಂಕ್ಷಿಪ್ತವಾಗಿ ಈ ಮುಂದೆ ನೀಡಲಾಗಿದೆ.
‘ದಿ ಲಾಂಗ್ವೇಜ್’ – ಎಡ್ವರ್ಡ್ ಸಪೀರ್ : ‘ ವಿದ್ಯಾವಂತ ಜಪಾನಿಯನೊಬ್ಬ ಚೀನಿ ಆಕರಗಳ ನೆರವಿಲ್ಲದೆ ಸಾಹಿತ್ಯಕವಾದ ಒಂದು ವಾಕ್ಯವನ್ನು ಸಹ ಬರೆಯಲು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಕಂಡರೆ , ಹಿಂದೂ-ಬೌದ್ಧ ಧರ್ಮದ ಮೂಲಕ ಪ್ರವೇಶಿಸಿದ ಸಂಸ್ಕೃತ ಮತ್ತು ಪಾಳಿಗಳು ಇಂದಿಗೂ ಸಯಾಮ್ , ಬರ್ಮಾ ದೇಶದ ಭಾಷೆಗಳ ಮೇಲೆ ಬೀರಿರುವ ಪ್ರಭಾವವನ್ನು ಗಮನಿಸಿದರೆ, ನಾವು ಲ್ಯಾಟಿನ್ ಮತ್ತು ಗ್ರೀಕ್ನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕೆ ಅಥವಾ ಬೇಡವೇ ಎಂದು ಚರ್ಚಿಸುವಾಗಲೆಲ್ಲ ನಮ್ಮ ವಾದಗಳಲ್ಲಿ ಗ್ರಿಕ್ ,ಲ್ಯಾಟಿನ್ ಪದಗಳು ತುಂಬಿ ತುಳುಕುತ್ತಿರುತ್ತವೆ. ಆರಂಭಿಕ ಚೀನಾದ ಸಂಸ್ಕೃತಿ , ಬೌದ್ಧ ಧರ್ಮ ಹಾಗೂ ಪ್ರಾಚೀನ ಮೆಡಿಟರೇನಿಯನ್ ನಾಗರಿಕತೆಗಳು ಜಗತ್ತಿನ ಇತಿಹಾಸಕ್ಕೆ ಎಂತಹ ಕಾಣಿಕೆಗಳನ್ನಿತ್ತಿವೆ ಎಂಬ ಅರಿವು ನಮಗೆ ದಕ್ಕುತ್ತದೆ. ಜಗತ್ತಿನ ಸಂಸ್ಕೃತಿಯ ಧಾರಕರಂತೆ ಎದ್ದು ಕಾಣಿಸುವ ಐದು ಭಾಷೆಗಳೆಂದರೆ ಅಭಿಜಾತ ಚೀನಿ ಭಾಷೆ , ಸಂಸ್ಕೃತ , ಲ್ಯಾಟಿನ್, ಗ್ರೀಕ್ ಮತ್ತು ಅರೇಬಿಕ್. ಇವುಗಳೊಂದಿಗೆ ಹೋಲಿಸಿದಾಗ ಸಾಂಸ್ಕೃತಿಕ ಹಿರಿಮೆ ಗರಿಮೆ ಗಳಿಸಿದ ಹೀಬ್ರೂ, ಫ್ರೆಂಚ್ ಭಾಷೆಗಳು ಸಹ ಎರಡನೇ ಸ್ಥಾನಕ್ಕಿಳಿಯುತ್ತವೆ. ಈ ದೃಷ್ಟಿಯಲ್ಲಿ ಇವು ಇಂದು ಯಾರ ಆಡು ಭಾಷೆಯಾಗಿಯೂ ಅಸ್ತಿತ್ವದಲ್ಲಿ ಇರದಿದ್ದರೂ ವ್ಯಾಪಕ ಪ್ರದೇಶದ ಮೇಲೆ , ಬಹು ದೀರ್ಘ ಕಾಲಾವಧಿಯಲ್ಲಿ ಪ್ರಭಾವ ಬೀರಿರುವ , ಇಂದಿಗೂ ಬೀರುತ್ತಿರುವ ಶಾಸ್ತ್ರೀಯ ಭಾಷೆಗಳು. ಯುರೋಪಿಯನ್ ಭಾಷೆಗಳು ಹೊಸ ಪದಗಳ ಸೃಷ್ಟಿಗೆ ಲ್ಯಾಟಿನ್ , ಗ್ರೀಕ್ ಭಾಷೆಗಳ ಧಾತುಗಳಿಗೆ ಇಂದಿಗೂ ಮೊರೆಹೋಗುತ್ತಿರುವುದು ಈ ಭಾಷೆಗಳ ಕಾಲಾತೀತವಾದ ಪ್ರಭಾವಕ್ಕೆ ಸಾಕ್ಷಿ.’ :
ಈ ಮಾನದಂಡಗಳಿಗೆ ಅನುಗುಣವಾಗಿ ತಮಿಳು , ಕನ್ನಡ , ತಮಿಳು ಇವು ಯಾವುವೂ ಶಾಸ್ತ್ರಿಯ ಭಾಷೆಗಳಾಗಿ ಅರ್ಹತೆ ಹೊಂದಲಾರವು.
ಉಲ್ರಿಖ್ ಆಮೊನ್ ತಮ್ಮ ‘ಸೋಷಿಯೋಲಿಂಗ್ಯುಸ್ಟಿಕ್’ ಕೃತಿಯಲ್ಲಿ ಶಾಸ್ತ್ರೀಯ ಭಾಷೆಗಳನ್ನು ಕುರಿತಾಗಿ ಮಾಡಿರುವ ಪಟ್ಟಿಯಲ್ಲಿನ ಪ್ರಮುಖಾಂಶಗಳು ಮುಂದಿವೆ :
ಶಾಸ್ತ್ರಿಯ ಭಾಷೆಗಳು
- ಬರವಣಿಗೆಯಲ್ಲಿ ಉನ್ನತತರವಾದ ಶಿಷ್ಟತೆಯನ್ನು ಸಾಧಿಸಿರುತ್ತವೆ. ಈ ಭಾಷೆಗಳಲ್ಲಿ ನಿರ್ದಿಷ್ಟ ಕಾಲಾವಧಿಯ ಪರಿಮಿತ ಸಂಖ್ಯೆಯ ಕೆಲ ಕೃತಿಗಾರರ ಸಾಹಿತ್ಯ ಶ್ರೇಷ್ಟವೆಂದು ಪರಿಗಣಿತವಾಗಿರುತ್ತದೆ . ಈ ಭಾಷೆಗಳ ವ್ಯಾಕರಣ ಅಭಿವೃದ್ಧಿಗೊಂಡು ಸೂತ್ರರೂಪದಲ್ಲಿ ದಾಖಲಾಗಿರುತ್ತದೆ ಮತ್ತು ಶಾಸ್ತ್ರೀಯವೆಂದು ಪರಿಗಣಿತವಾದ ಸಾಹಿತ್ಯದ ವ್ಯಾಕರಣ, ಬರವಣಿಗೆ , ಧ್ವನಿ ವ್ಯವಸ್ಥೆ ಬದಲಾಗದಂತೆ ಎಚ್ಚರ ವಹಿಸಿ ಅದು ಮೊದಲಿನ ಶುದ್ಧರೂಪದಲ್ಲಿರುವಂತೆ ಕಾಯ್ದಿಟ್ಟುಕೊಳ್ಳಲಾಗುತ್ತದೆ.
- ಆಡುಭಾಷೆಗಳಿಗಿಂತ ಭಿನ್ನವಾಗಿರುತ್ತವೆ. ಅಸ್ತಿತ್ವದಲ್ಲಿರುವ ಆಡುಭಾಷೆ ಶಾಸ್ತ್ರೀಯ ಭಾಷೆಯ ಸಹಜ ಮುಂದುವರಿಕೆಯಾಗಿದ್ದರೂ ಇವೆರಡರ ಮಧ್ಯೆ ವ್ಯತ್ಯಾಸಗಳಿರುತ್ತವೆ. (ಉದಾ: ಹಳೆಗನ್ನಡ ಮತ್ತು ಆಧುನಿಕ ಕನ್ನಡ) ಕೆಲವೊಮ್ಮೆ ಶಾಸ್ತ್ರಿಯ ಭಾಷೆ ಮತ್ತು ಆಡು ಭಾಷೆಗಳ ನಡುವೆ ಕಾಲದ ಅಂತರವಿಲ್ಲದಿರಬಹುದು.
- ಒಂದು ಪ್ರದೇಶ , ಜನಾಂಗದ ಚಾರಿತ್ರಿಕ ಮತ್ತು ಪಾರಂಪರಿಕ ಅಂಗಗಳಾಗಿರುತ್ತವೆ .
- ವಿಶಿಷ್ಟ ಸಾಂಕೇತಿಕ ಮತ್ತು ಕಾರ್ಯಸೂಚಿಯ ಅಂಗಗಳಾಗಿದ್ದು ಬೇರೆ ಭಾಷೆಗಳಲ್ಲು ಸಹ ಮನ್ನಣೆ ಪಡೆದಿರುತ್ತವೆ. ಇವು ಧಾರ್ಮಿಕ ವಿಧಿ ,ವಿಧಾನ , ಆಚರಣೆಗಳಲ್ಲಿ ಮನ್ನಣೆ ಗಳಿಸಿರುತ್ತವೆ. (ಉದಾ: ಸಂಸ್ಕೃತದಲ್ಲಿ ಪೂಜಾ ವಿಧಾನಗಳು)
- ಬಹು ವ್ಯಾಪಕ ಪ್ರದೇಶಗಳ, ವಿಭಿನ್ನ ಸಮುದಾಯಗಳನ್ನು ತಮ್ಮ ಸಂವಹನೆಯ ತೆಕ್ಕೆಗೆ ತೆಗೆದುಕೋಡಿರುತ್ತವೆ.
- ವಿಪುಲ ಸಾಹಿತ್ಯರಾಶಿ ಅಸ್ತಿತ್ವದಲ್ಲಿರುತ್ತದೆ. ಸಾಹಿತ್ಯ ಸೃಷ್ಟಿ ಮುಂದುವರೆಯುತ್ತಿರಬಹುದು ಅಥವಾ ಬಹು ಹಿಂದೆಯೇ ಸ್ಥಗಿತಗೊಂಡಿರಬಹುದು.
- ಇವು ಮೃತವಾಗಿರಬೇಕೆಂದಿಲ್ಲ , ಬದಲಾಣೆಗಳಿಗೊಳಗಾಗಿ ಆಧುನಿಕ ಭಾಷೆಗಳಾಗಿರಬಹುದು.
ಈ ಮಾನದಂಡಗಳಿಗೆ ಅನುಗುಣವಾಗಿ ತಮಿಳು , ಕನ್ನಡ ಮತ್ತು ತೆಲುಗುಗಳು ಶಾಸ್ತ್ರಿಯ ಭಾಷೆಗಳಾಗುತ್ತವೆ.
ಬಹು ಭಾಷೆಗಳ ಘನ ಪಂಡಿತರಾದ ಜಾರ್ಜ್ಹಾರ್ಟ್ , ಮರಿಮಲೈಗಳ ದಾಕ್ಷಿಣ್ಯಕ್ಕೆ ಬಿದ್ದು ಬರೆದ ಪತ್ರದಲ್ಲಿನ ಅಂಶಗಳು ಬಹು ತೆಳುವಾಗಿದ್ದು , ಸ್ವಲ್ಪವೇ ವಿಮರ್ಶಕ ದೃಷ್ಟಿಯಿಂದ ನೋಡಿದಾಗ ಬಹು ಸಡಿಲವಾಗಿ ಆತುರದಲ್ಲಿ ಜೋಡಿಸಿ ಬರೆದಂತೆ ಕಾಣುತ್ತವೆ. ಹಾರ್ಟ್ರವರು ಪರಿಗಣಿಸಿದ ಮಾನದಂಡಗಳನ್ನು ಮುಂದೆ ಸ್ವಲ್ಪ ಕೂಲಂಕಷವಾಗಿ ನೋಡಲಾಗಿದೆ.
ತಮಿಳು ಪ್ರಾಚೀನತೆ : ತಮಿಳು-ಬ್ರಾಹ್ಮಿ ಶಿಲಾಶಾಸನಗಳ ಭಾಷೆ, ತೊಲ್ಕಾಪ್ಪಿಯಂ ರಚನೆಯ ಕಾಲದ ಹಿಂದಿರುವ ವಿವಾದಗಳು , ಸಂಗಂ ಕಾಲದ ಸಾಹಿತ್ಯದ ಮೌಖಿಕ ಸ್ವರೂಪ ,ಲಿಪಿಕರಣ ಮತ್ತು ಸಂಪಾದನೆಯ ಕಾಲ ಇತ್ಯಾದಿಗಳನ್ನು ವಿದ್ವತ್ ದೃಷ್ಟಿಯಲ್ಲಿ ಪರಿಗಣಿಸದೆ ತಮಿಳಿನ ಸಾಹಿತ್ಯಕ ಪ್ರಾಚೀನತೆಯನ್ನು ಜನಪ್ರಿಯ ನಿಟ್ಟಿನಲ್ಲಿ ಪರಿಗಣಿಸಲಾಗಿದೆ. (ನೋಡಿರಿ : ಸಂಗಂ ಸಾಹಿತ್ಯ , ತೊಲ್ಕಾಪ್ಪಿಯಂ, ತಮಿಳು ಬ್ರಾಹ್ಮಿ). ಶ್ರೇಷ್ಟ ಸಾಹಿತ್ಯ ಹೊಂದಿರುವ 900 ಅಥವಾ 600 ವರ್ಷಗಳ ಇತಿಹಾಸ ಹೊಂದಿರುವ ಭಾಷೆ ಶಾಸ್ತ್ರಿಯವೇ ಅಲ್ಲವೇ ? ಒಟ್ಟು ತಮಿಳು ಸಂಗಂ ಸಾಹಿತ್ಯದ ಸರಿಸುಮಾರು ಅರ್ಧದಷ್ಟು ಗಾತ್ರವನ್ನು ಹೊಂದಿರುವ (15000 ಸಾಲುಗಳು) ಮೌಖಿಕ ಸಂಪ್ರದಾಯದ ತುಳುವಿನ ಸಿರಿ ಹಾಗೂ ಇನ್ನಿತರ ಪಾಡ್ದನಗಳನ್ನು ಲಭ್ಯವಿವೆ. ಇವುಗಳನ್ನು ಲಿಪಿಕರಣಗೊಳಿಸಿರುವ ಹಳೆಯ ಒಲೆಪ್ರತಿಗಳು ದಕ್ಕಿದರೆ ತುಳುವನ್ನು ಏನೆಂದು ಪರಿಗಣಿಸಬೇಕು ? ಮೌಖಿಕವಾದುದು ಬರೆದಾಗ ಮಾತ್ರ ಸಾಹಿತ್ಯವಾಗುತ್ತದೆಯೇ ? ಏಕತಾನತೆಯಿಂದ ಬರೆದುದಕ್ಕಿಂತಲೂ , ಹೆಚ್ಚಿನ ಒಳನೋಟ ಬೀರಬಲ್ಲ ಮೌಖಿಕ ಸಾಹಿತ್ಯ ಕೀಳೆಂದು ಭಾವಿಸಬೇಕೆ ? ಎಂಬಂತಹ ಪ್ರಶ್ನೆಗಳನ್ನು ಉತ್ತರಿಸುವ ಯತ್ನಮಾಡಿಲ್ಲ.
ಸಾಹಿತ್ಯದ ಸ್ವೋಪಜ್ಞತೆ : ಜಗತ್ತಿನಲ್ಲಿ ಯಾವುದರಿಂದಲೂ ಪ್ರಭಾವಿತವಾಗದ ವಸ್ತು ,ವಿಷಯ ಎಂಬುದಿಲ್ಲ. ಸ್ವೋಪಜ್ಞ-ಪ್ರಭಾವಿತ ಎಂಬುದು ಖಚಿತವಾಗಿ ನಿರ್ಧರಿಸಿ ಹೇಳುವಂತಹುದಲ್ಲ. ಕನ್ನಡದ ವಚನಗಳನ್ನು , ತೆಲುಗಿನ ಪ್ರಬಂಧಗಳನ್ನು ಸ್ವೋಪಜ್ಞವೆಂದು ಹಾಗೆಯೇ ಅಲ್ಲವೆಂದು ವಾದಿಸಲು ಸಾಧ್ಯವಿದೆ. ಅನ್ಯಮೂಲದಿಂದ ಬಂದ ಪರಿಕಲ್ಪನೆ, ತಂತ್ರಗಳನ್ನು ಬಳಸಿ ಒಂದು ಭಾಷೆಯಲ್ಲಿ ವಿಶಿಷ್ಟವಾದ ಸಾಹಿತ್ಯ ರಚಿಸಿದರೆ ಆಗ ಅದರ ಮೌಲ್ಯಮಾಪನಕ್ಕೆ ಸಾಹಿತ್ಯವನ್ನು ಪರಿಗಣಿಸಬೇಕೋ ಅಥವಾ ಎರವಲು ತಂತ್ರದ ದೃಷ್ಟಿಯಿಂದ ಅದನ್ನು ನಿರಾಕರಿಸಬೇಕೋ ಎಂಬುದು ಅಸ್ಪಷ್ಟವಾಗಿದೆ. ಸಂಖ್ಯೆಗಳ ಗೂಢಲಿಪಿಯಲ್ಲಿ ರಚನೆಗೊಂಡ ಸಿರಿಭೂವಲಯವನ್ನು ಹೋಲುವ ಕೃತಿ ಜಗತ್ತಿನಲ್ಲಿ ಮತ್ತೊಂದಿಲ್ಲ. ಆದ್ದರಿಂದ ಕನ್ನಡವನ್ನು ಏಕಮೇವಾದ್ವಿತೀಯವೆಂದು ಸಾರಬೇಕೆ ಅಥವಾ ಅದಕ್ಕೆ ಒಂದು ಪರಂಪರೆಯಿಲ್ಲವೆಂದು ನಿರಾಕರಿಸಬೇಕೆ ಎನ್ನುವಂತಹ ಗಹನವಾದ ಚರ್ಚೆಗಳು ಮೂಡಿಬರುತ್ತವೆ. ಸಂಗಂ ಸಾಹಿತ್ಯ ಮಾನವ ಸಹಜವಾದ ನೋಟ,ಬೇಟ,ಕೂಟ, ಆವೇಶಗಳ ಹಿನ್ನೆಲೆಯಲ್ಲಿ ಮೂಡಿಬಂದ ಬಿಡಿ ಕವನಗಳ ಜಾನಪದ ಮೂಲದ ಗೀತ ಸಾಹಿತ್ಯ. ಇಲ್ಲಿ ಕವಿಯ ಆಶಯ , ಕವನಗಳಿಂದ ದಕ್ಕುವ ರಸಾವೇಶ ಮತ್ತು ಅಂತಿಮ ಉದ್ದೇಶಗಳಿಗೆ ಕಾವ್ಯ ಮೀಮಾಂಸೆಯೆಂದು ಪರಿಗಣಿಸಬಹುದಾದ ಚೌಕಟ್ಟಿಲ್ಲ. ಈ ಸಾಹಿತ್ಯವನ್ನು ನಂತರ ಅರಿತುಕೊಳ್ಳಲು ಯತ್ನಿಸಿದ ಫಲವಾಗಿ ತಿಣೈ , ಅಹಂ , ಪುರಂ ಕಲ್ಪನೆಗಳು ಗೋಚರಿಸಿದವು. ಯಾವುದೇ ಭಾಷೆಯ ಸಾಹಿತ್ಯಕ್ಕೆ ವಿಪುಲತೆ ಮತ್ತು ವೈವಿಧ್ಯತೆಗಳೆರಡೂ ಅತ್ಯಗತ್ಯ. ತಮಿಳು ಸಾಹಿತ್ಯದಲ್ಲಿ 9ನೇ ಶತಮಾನದಿಂದ ವೈವಿಧ್ಯತೆ ಕಂಡುಬರುತ್ತದೆ. ಸರಿಸುಮಾರು ಇದೇ ಅವಧಿಯಲ್ಲಿ ಉಳಿದ ಭಾಷೆಗಳಲ್ಲು ಇದು ಕಂಡುಬರತೊಡಗುತ್ತದೆ. (ನೋಡಿರಿ : ಕೋಷ್ಟಕಗಳು)
ಸಾಹಿತ್ಯದ ಸಾರ್ವತ್ರಿಕತೆ : ಸಂಸ್ಕೃತ , ಲ್ಯಾಟಿನ್, ಗ್ರೀಕ್ ಹಾಗೂ ಇತರ ಶಾಸ್ತ್ರೀಯವೆಂದು ಪರಿಗಣಿತವಾದ ಭಾಷೆಗಳಲ್ಲಿ ಸಾಹಿತ್ಯದ ಅರುಣೋದಯದ ಕಾಲದಿಂದ ಕಾವ್ಯ , ನಾಟಕ ,ನೀತಿ, ಕಥೆ , ತತ್ವ ,ಆಧ್ಯಾತ್ಮ ,ರಾಜನೀತಿ , ವಿಜ್ಞಾನ ,ವೈದ್ಯಕೀಯ, ಚಿಕಿತ್ಸೆ, ಗಣಿತ, ಜೋತಿಷ್ಯ , ಛಂದಸ್ಸು , ತರ್ಕ , ಅರ್ಥ, ಕಾಮ, ಸಂಗೀತ , ಖಗೋಳ, ವಾಸ್ತು , ಸೌಂದರ್ಯ, ರತ್ನಪರೀಕ್ಷೆ , ಖನಿಜ , ನಿರ್ಮಾಣ , ಹಯ,ಗಜ , ವಿಷವೈದ್ಯ, ರಸವಿದ್ಯೆ, ಚರಿತ್ರೆ ,ಆತ್ಮಕಥೆ ಹೀಗೆ ಇನ್ನಿತರ ನೂರಾರು ಮಾನವನ ಎಲ್ಲ ಬೌದ್ಧಿಕ ರಂಗಗಳನ್ನು ಪ್ರತಿನಿಧಿಸಬಲ್ಲ ಸಾಹಿತ್ಯ ಮೂಡಿಬಂದಿವೆ. ಸಂಸ್ಕೃತ ಹೊರತು ಪಡಿಸಿ ಭಾರತದ ಯಾವುದೇ ಭಾಷೆಯಲ್ಲಿ ಇಂತಹ ವೈವಿಧ್ಯಮಯ ಸಾಹಿತ್ಯವಾಗಲಿ-ಅತ್ಯಲ್ಪ ಮಟ್ಟದಲ್ಲಿ ಸಂಸ್ಕೃತ ಅನುವಾದ ರೂಪದಲ್ಲಿ ಕಾಣಿಸಿಕೊಂಡಿರುವ ಹೊರತು- ಅಂತಹ ಸಾಹಿತ್ಯಕ್ಕೆ ಬೇಕಾದ ತಾಂತ್ರಿಕ ಪರಿಭಾಷೆಯಾಗಲಿ ಇಲ್ಲ. ಎಲ್ಲ ಭಾರತೀಯ ಭಾಷೆಗಳು ವಿದ್ವತ್ ಸಾಹಿತ್ಯ ಸೃಷ್ಟಿಗಾಗಿ ಸಂಸ್ಕೃತಕ್ಕೆ ಮೊರೆಹೋಗಿವೆ. ಈ ದೃಷ್ಟಿಯಲ್ಲಿ ತಮಿಳು , ಕನ್ನಡ , ತೆಲುಗು ತಮ್ಮ ಭಾಷಾ ಸಾಮಥ್ರ್ಯವನ್ನು ಸಾಹಿತ್ಯ ಸೃಷ್ಟಿಯಾಚೆಗೆ ಬಳಸಿಕ್ಕೊಳ್ಳಲು ಪ್ರಯತ್ನ ಮಾಡದ ದುರ್ಬಲ ಸೀಮಿತ ಭಾಷೆಗಳು. ಕನ್ನಡ , ತೆಲುಗುಗಳು ಆಧುನಿಕ ವಿಜ್ಞಾನದ ಪದಸೃಷ್ಟಿಗೆ ಸಂಪೂರ್ಣವಾಗಿ ಸಂಸ್ಕೃತವನ್ನು ಅವಲಂಬಿಸಿವೆ. ತಮಿಳು ಸಹ ಮುಸುಕಿನ ಮರೆಯಿಂದ ಇದನ್ನೇ ಮಾಡುತ್ತಿದೆ.
ಭಾಷೆ ಮತ್ತು ಸಾಹಿತ್ಯದ ವ್ಯಾಪಕ ಪ್ರಭಾವ : ಭಾರತದಲ್ಲಿನ ಎಲ್ಲ ಭಾಷೆಗಳಲ್ಲಿ ಈವರಗೆ ಸೃಜಿತವಾದ ಸಮಗ್ರ ಸಾಹಿತ್ಯವನ್ನು ಒಂದೆಡೆ ಪಟ್ಟಿ ಮಾಡಿ ನೋಡಿದರೆ ಮೇಲೆ ಹೇಳಿದ ಸಂಗತಿ ಸೂರ್ಯಪ್ರಖರವಾಗಿ ಎದ್ದು ಕಾಣುತ್ತದೆ. ಎಂದಿಗೂ ತಮಿಳು ಒಂದು ಭಾಷೆಯಾಗಿ ಮತ್ತು ಸಾಹಿತ್ಯ ಮಾರ್ಗವಾಗಿ ತಮಿಳಗಂನ ಸಾಂಪ್ರದಾಯಿಕ ಉತ್ತರದ ಗಡಿಯಾದ ವೇಂಗಡವನ್ನು ದಾಟಿ ಮುಂದೆ ಹೋಗಿ ಇತರ ಭಾಷೆಗಳನ್ನು ಗಮನಾರ್ಹವಾಗಿ ಪ್ರಭಾವಿಸಿದ ಕುರುಹುಗಳಿಲ್ಲ. ತಮಿಳು ಅಷ್ಟೊಂದು ಪ್ರಬಲ ಭಾಷೆಯೇ ಆಗಿದ್ದರೆ ಕನ್ನಡ ಮತ್ತು ತೆಲುಗುಗಳ ಮೇಲೆ ಅದರ ಪ್ರಭಾವ ಅಚ್ಚಳಿಯದೆ ಉಳಿಯಬೇಕಾಗಿತ್ತು. ಕನ್ನಡ , ತೆಲುಗುಗಳು ಭಾಷಿಕವಾದ ಯಾವುದೇ ಚಟುವಟಿಕೆಗಳಲ್ಲಿ ಸಂಸ್ಕೃತದ ಬದಲು ತಮಿಳನ್ನು ಅನುಕರಿಸಬೇಕಾಗಿದ್ದಿತು. ಆದರೆ ಅಂತಹ ಯಾವ ಕುರುಹುಗಳು ಕಂಡುಬಂದಿಲ್ಲ. ಜಾರ್ಜ್ಹಾರ್ಟ್ ಈ ಸತ್ಯಸಂಗತಿಗಳನ್ನು ಮರೆಮಾಚಿ ಯಾವುದೇ ತಳಹದಿಯ ಮೇಲೆ ಪರಿಗಣಿಸಿದರೂ ತಮಿಳು ಜಗತ್ತಿನ ಮಹಾಶಾಸ್ತ್ರೀಯ ಸಾಹಿತ್ಯ ಹಾಗೂ ಪರಂಪರೆಯನ್ನು ಹೊಂದಿದೆ0iÉುಂದು ಯಾವ ಸಂದಿಗ್ಧವೂ ಇಲ್ಲದೆ ಘಂಟಾಘೋಷವಾಗಿ ಸಾರಬಲ್ಲೆ ಮತ್ತು ತಮಿಳಿನ ಮಹಾನ್ ಸಾಹಿತ್ಯದಿಂದ ಮಾನವನ ಯಾವ ಚಟುವಟಿಕೆಯೂ ಹೊರಗುಳಿದಿಲ್ಲ ಎಂದು ಹೇಳಿ ತಮ್ಮ ವಿದ್ವತ್ತಿಗೆ ತಾವೇ ಬೇಲಿಹಾಕಿಕೊಡಿದ್ದಾರೆ.
ಸ್ವತಂತ್ರ ಆಕರ : ತಮಿಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳ ಪ್ರಾಥಮಿಕ ಮತ್ತು ಸ್ವತಂತ್ರ ಆಕರವೆಂದು ಘೋಷಿಸಿ ಜಾರ್ಜ್ ಹಾರ್ಟ್ ಭಾರತದ ಇತರ ಭಾಷೆ ಮತ್ತು ಪ್ರಾಂತ್ಯಗಳ ಬಗೆಗೆ ತಮಗಿರುವ ಅಜ್ಞಾನವನ್ನು ತೋರ್ಪಡಿಸಿದ್ದಾರೆ. ಇದನ್ನು ಕುರಿತಾದ ಚರ್ಚೆ ಸುದೀರ್ಘ ಮತ್ತು ಅನವಶ್ಯಕ.
ಪರಂಪರೆಯ ಅಸ್ತಿತ್ವ : ಈಗ ಅತ್ಯಂತ ಅಮೂಲ್ಯ , ಅನನ್ಯ ಎಂದು ಪರಿಗಣಿಸಿ ಶಾಸ್ತ್ರೀಯ ಸ್ಥಾನಮಾನಕ್ಕೆ ಒತ್ತಾಯಿಸಲು ಕಾರಣವಾದ ಸಂಗಂ ಸಾಹಿತ್ಯ 19ನೇ ಶತಮಾನದ ಉತ್ತರಾರ್ಧದಲ್ಲಿ ಮರುಶೋಧನೆಯಾಗುವವರೆಗೆ ತಮಿಳರಿಗೇ ತಿಳಿದಿರಲಿಲ್ಲ. ಮಧ್ಯಕಾಲದಲ್ಲಿ ಅದಕ್ಕೆ ಅಂತಹ ಪ್ರಾಶಸ್ತ್ಯವೂ ದಕ್ಕಿರಲಿಲ್ಲವೆಂದು ತೋರಿಬರುತ್ತದೆ. ತಮಿಳು ಸಾಹಿತ್ಯ ಕಳಭ್ರರ ಅಂಧಕಾರ ಕಾಲದ ಬಗೆಗೆ ಏನನ್ನೂ ಹೇಳದಿರುವುದು ಸಾಹಿತ್ಯದ ಸಾತತ್ಯದ ಬಗೆಗೆ ,ಅದರ ಪ್ರಾಚೀನತೆಯ ಬಗೆಗೆ ಸಂಶಯ ತಾಳುವಂತೆ ಮಾಡುತ್ತದೆ.
ಮೂಲ ಸ್ವರೂಪ : ದ್ರಾವಿಡ ಭಾಷೆಗಳ ಮೂಲ ಸ್ವರೂಪಗಳನ್ನು ಅರಿಯಲು ತಮಿಳು ಒಂದು ಅನನ್ಯ ಆಕರವೆನ್ನುವುದು ನಿಜ. ಆದರೆ ಅದೊಂದೇ ಎನ್ನುವುದು ತಪ್ಪು. ದ್ರಾವಿಡ ಭಾಷೆಗಳು ಇಂಡೋ-ಆರ್ಯನ್ ಭಾಷೆಗಳೊಂದಿಗೆ ಸಂವಹಿಸಿದಾಗ ಏನಾಯಿತೆಂದು ತಿಳಿಯಲು ಮತ್ತು ಎರಡು ವಿಭಿನ್ನ ಭಾಷಾ ಸಮುದಾಯಗಳು ಹೇಗೆ ಪರಸ್ಪರ ಪ್ರಭಾವ ಬೀರಬಲ್ಲವೆಂದು ಅರಿಯಲು ಇತರ ದ್ರಾವಿಡ ಭಾಷೆಗಳು ಬೇಕೇ ಬೇಕು. ವೈದರ್ಭಿ ಪ್ರಾಕೃತ ಮರಾಠಿಯಾಗುವಲ್ಲಿ ವಿಶೇಷತ:ವಾಗಿ ಕನ್ನಡ ಮತ್ತು ಸಾಕಷ್ಟು ಮಟ್ಟದಲ್ಲಿ ತೆಲುಗುಗಳು ಬೀರಿರುವ ಪ್ರಭಾವ ಭಾಷಾಶಾಸ್ತ್ರಿಯ ದೃಷ್ಟಿಯಿಂದ ತಮಿಳಿನಿಂದ ಮಲಯಾಳಂ ಮೂಡಿದಷ್ಟೇ ಪ್ರಬಲವಾದುದು.
ಮೇಲಿನ ಅಂಶಗಳನ್ನು ಪರಿಗಣಿಸಿದಾಗ ‘ದಿ ಲಾಂಗ್ವೇಜ್’ನಲ್ಲಿ ಎಡ್ವರ್ಡ್ ಸಪೀರ್ ಗುರುತಿಸಿದವುಗಳೇ ನಿಜವಾದ ಶಾಸ್ತ್ರಿಯ ಭಾಷೆಗಳು.
(ತಮಿಳಗಂ-ಸಂಗ : ಎಷ್ಟು ಪ್ರಾಚೀನ ಕೃತಿಯ ಆಯ್ದ ಭಾಗ)
ತಮಿಳಿಗೆ ಶಾಸ್ತ್ರಿಯ ಭಾಷೆಯ ಸ್ಥಾನ ಕುರಿತಾದ ಹೇಳಿಕೆ : ಏಪ್ರಿಲ್ 11 , 2000
ಪ್ರೊಫೆಸರ್ ಮರಿಮಲೈ ತಮಿಳಿನ ಶಾಸ್ತ್ರೀಯ ಸ್ಥಾನಮಾನ ಕುರಿತಾಗಿ ಬರೆಯುವಂತೆ ನನ್ನನ್ನು ಕೇಳಿದ್ದಾರೆ. ಈ ಕೋರಿಕೆಗೆ ಪ್ರತಿಕ್ರಿಯಿಸಲು ನನಗೆ ಹರ್ಷವಾಗುತ್ತದೆ.
1975ರಿಂದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ-ಬಕ್ರ್ಲೆಯಲ್ಲಿ ನಾನು ತಮಿಳು ಪ್ರಾಧ್ಯಾಪಕನಾಗಿದ್ದು , ಸಧ್ಯದಲ್ಲಿ ಇದೇ ವಿಶ್ವವಿದ್ಯಾಲಯದಲ್ಲಿ ತಮಿಳು ಪೀಠ ಅಲಂಕರಿಸಿದ್ದೇನೆ. 1970ರಲ್ಲಿ ನಾನು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಪದವಿ ಗಳಿಸಿದೆನು. 1969ರಲ್ಲಿ ನಾನು ಮ್ಯಾಡಿಸನ್ನ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನಾಗುವ ಮೂಲಕ ನನ್ನ ವೃತ್ತಿ ಜೀವನ ಪ್ರಾರಂಭವಾಯಿತು. ತಮಿಳು ಸಂಸ್ಕೃತಗಳಲ್ಲದೆ ನನಗೆ ಶಾಸ್ತ್ರೀಯ ಭಾಷೆಗಳಾದ ಲ್ಯಾಟಿನ್ ಮತ್ತು ಗ್ರೀಕ್ಗಳು ತಿಳಿದಿವೆ. ಇವುಗಳ ಸಾಹಿತ್ಯವನ್ನು ಅವುಗಳ ಮೂಲದಲ್ಲಿಯೇ ಓದಿದ್ದೇನೆ. ಆಧುನಿಕ ಯುರೋಪಿನ ತೌಲನಿಕ ಭಾಷಾಶಾಸ್ತ್ರದ ಅರಿವು ನನಗಿದೆ. ( ನನಗೆ ರಷ್ಯನ್ , ಜರ್ಮನಿ ಹಾಗೂ ಫ್ರೆಂಚ್ ಗೊತ್ತಿದ್ದು , ಆ ಭಾಷೆಗಳಲ್ಲಿ ವ್ಯಾಪಕವಾಗಿ ಓದಿದ್ದೇನೆ.) ಭಾರತದ ಆಧುನಿಕ ಸಾಹಿತ್ಯದ ತಿಳುವಳಿಕೆ ನನಗಿದೆ. ವಿಶೇಷವಾಗಿ ತಮಿಳು ಭಾಷೆ ಮತ್ತು ಸ್ವಲ್ಪ ಮಟ್ಟದಲ್ಲಿ ಮಲಯಾಳಂ ಭಾಷೆಗಳಲ್ಲಿ ಪರಿಶ್ರಮ ಹೊಂದಿರುವ ನಾನು ಇತರ ಭಾರತೀಯ ಭಾಷೆಗಳ ಸಾಹಿತ್ಯವನ್ನು ಭಾಷಾಂತರಗಳ ಮೂಲಕ ಅರಿತಿದ್ದೇನೆ. ತೆಲುಗಿನ ಖ್ಯಾತ ವಿದ್ವಾಂಸರಾದ ವಿ.ನಾರಾಯಣರಾವ್ರೊಂದಿಗೆ ತೆಲುಗು ಸಾಹಿತ್ಯ ಕುರಿತಾಗಿ ಸುದೀರ್ಘ ಕಾಲ ಚರ್ಚಿಸಿದ್ದು ಅದರ ಪರಂಪರೆಯ ಅರಿವು ಸಾಕಷ್ಟು ಚೆನ್ನಾಗಿದೆ. ದಕ್ಷಿಣ ಏಷ್ಯಾ ಅಧ್ಯಯನ ಸಂಸ್ಥೆಯ ಸ್ಥಾಯಿ ಸದಸ್ಯನಾಗಿ ಹಿಂದಿ ಸಾಹಿತ್ಯದ ಶ್ರೀಮಂತಿಕೆಗೆ ಮೈಯೊಡ್ಡಿಕೊಂಡಿದ್ದೇನೆ. ಮಹಾದೇವಿ ವರ್ಮ , ತುಳಸಿ , ಕಬೀರರನ್ನು ಓದಿದ್ದೇನೆ.
ನನ್ನ ಜೀವನದ ಬಹುತೇಕ ಅವಧಿಯನ್ನು -1963 ರಿಂದ- ಸಂಸ್ಕೃತದ ಅಧ್ಯಯನದಲ್ಲಿ ಕಳೆದಿದ್ದೇನೆ. ಕಾಳಿದಾಸ , ಮಾಘ ಮತ್ತು ಭಾರವಿಯ ಕೆಲ ಕೃತಿಗಳು ಹಾಗೂ ಹರ್ಷನ ಸಾಹಿತ್ಯವನ್ನು ಮೂಲದಲ್ಲಿ ಓದಿದ್ದೇನೆ. ನಾನು ವೇದದ ಐದನೆಯ ಅಂಗವನ್ನು , ಮತ್ತಿತರ ಅಧ್ಯಾಯಗಳನ್ನು ,ಉಪನಿಷತ್ತುಗಳನ್ನು , ಬಹುತೇಕ ಮಹಾಭಾರತವನ್ನು , ಕಥಾಸರಿತ್ಸಾಗರ, ಆದಿಶಂಕರರ ಕೃತಿಗಳನ್ನು ಇತರರ ಹಲವಾರು ಸಾಹಿತ್ಯವನ್ನು ಮೂಲದಲ್ಲಿ ಓದಿದ್ದೇನೆ.
ನನ್ನ ವಿದ್ವತ್ತಿನ ತೋರ್ಪಡಿಕೆಗಾಗಿ ನಾನು ಹೀಗೆ ಹೇಳುತ್ತಿರುವೆನೆಂದು ಭಾವಿಸಬಾರದು. ಒಂದು ಭಾಷೆ ಶಾಸ್ತ್ರೀಯವೇ ಅಲ್ಲವೇ ಎಂದು ನಿರ್ಧರಿಸಲು ನನಗಿರುವ ಅರ್ಹತೆಯನ್ನು ಸ್ಥಾಪಿಸಲು ಇವನ್ನು ಹೇಳಿದ್ದೇನೆ. ಯಾವುದೇ ತಳಹದಿಯ ಮೇಲೆ ಪರಿಗಣಿಸಿದರೂ ತಮಿಳು ಜಗತ್ತಿನ ಮಹಾಶಾಸ್ತ್ರೀಯ ಸಾಹಿತ್ಯ ಹಾಗೂ ಪರಂಪರೆಯನ್ನು ಹೊಂದಿದೆಯೆಂದು ಯಾವ ಸಂದಿಗ್ಧವೂ ಇಲ್ಲದೆ ಘಂಟಾಘೋಷವಾಗಿ ಸಾರಬಲ್ಲೆ.
ನನ್ನ ಈ ಹೇಳಿಕೆಯ ಹಿಂದೆ ಹಲವಾರು ಕಾರಣಗಳಿವೆ. ಅವುಗಳನ್ನು ಒಂದೊಂದಾಗಿ ಪರಿಗಣಿಸುತ್ತೇನೆ.
ಮೊದಲನೆಯದಾಗಿ ತಮಿಳು ಸಾಕಷ್ಟು ಪ್ರಾಚೀನ . ಅದರ ಸಾಹಿತ್ಯ ಭಾರತದ ಇತರ ಆಧುನಿಕ ಭಾಷೆಗಳಿಗಿಂತ 1000 ವರ್ಷಗಳಷ್ಟು ಹಿಂದಿನಿಂದ ಪ್ರಾರಂಭವಾಗುತ್ತದೆ. ಆರಂಭಿಕ ಕಾಲದ ತಮಿಳಿನ ಶಿಲಾಶಾಸನಗಳೊಂದಿಗೆ ಪರಾಮರ್ಶಿಸಿದಾಗ ತಮಿಳಿನ ಅತ್ಯಂತ ಪ್ರಾಚೀನ ಗ್ರಂಥ ತೊಲ್ಕಾಪ್ಪಿಯಂನ ಕೆಲ ಭಾಗಗಳು ಕ್ರಿ.ಪೂ 200 ರ ಅವಧಿಗೆ ಸೇರಿವೆ ಎನ್ನಬಹುದು. ತಮಿಳಿನ ಮಹಾನ್ ಕೃತಿಗಳಾದ ಸಂಗಂ ಸಂಕಲನಗಳು ಮತ್ತು ಪತ್ತುಪ್ಪಾಟ್ಟು ಕ್ರಿ.ಶ ಆರಂಭ ಕಾಲದ ಮೊದಲೆರಡು ಶತಮಾನಗಳಿಗೆ ಸೇರಿವೆ. ಇವು ಕಾಳಿದಾಸನಿಗಿಂತ 200 ವರ್ಷ ಮೊದಲೇ ಬೆಳಕು ಕಂಡ ಭಾರತದ ಮೊದಲ ಲೌಕಿಕ ಸಾಹಿತ್ಯದ ಕೃತಿಗಳು.
ಎರಡನೆಯದಾಗಿ ತಮಿಳು ಸಾಹಿತ್ಯ ಪರಂಪರೆ ಸಂಸ್ಕೃತದಿಂದ ಪ್ರೇರಿತವಾಗದೆ , ಸ್ವಂತಿಕೆಯಿಂದ ಮೂಡಿಬಂದಿದೆ. ನಿಜವಾಗಿ ಹೇಳಬೇಕೆಂದರೆ ದಕ್ಷಿಣದಲ್ಲಿ ಸಂಸ್ಕೃತದ ಪ್ರಭಾವ ಪ್ರಬಲವಾಗುವ ಮುಂಚೆಯೇ ಹೊರಬಂದ ಸಾಹಿತ್ಯ ತಮಿಳಿನಲ್ಲಿದ್ದು ಇದರಂತಹ ಸಾಹಿತ್ಯ ಸಂಸ್ಕೃತದಲ್ಲಾಗಲಿ ಅಥವಾ ಇತರ ಭಾರತೀಯ ಭಾಷೆಗಳಲ್ಲಾಗಲಿ ಇಲ್ಲ. ಅದಕ್ಕೆ ಅದರದೇ ಆದ ಕಾವ್ಯ, ಲಕ್ಷಣ , ವ್ಯಾಕರಣ ಪರಂಪರೆ, ಸೌಂದರ್ಯ ಮೀಮಾಂಸೆಯಿದೆ. ಇದಕ್ಕಿಂತ ಮಿಗಿಲಾಗಿ ಅದರ ವಿಪುಲ ಸಾಹಿತ್ಯ ರಾಶಿ ಅನನ್ಯವಾದುದು. ಇದು ಸಂಸ್ಕೃತಕ್ಕಿಂತ ಅಥವಾ ಬೇರೆ ಭಾರತೀಯ ಭಾಷೆಗಳಿಗಿಂತ ಭಿನ್ನವಾದ ಭಾರತೀಯ ಸಂವೇದನೆಯನ್ನು ಹೊಂದಿದ್ದು, ಸಮೃದ್ಧವಾಗಿದ್ದು , ವ್ಯಾಪಕ ಬೌದ್ಧಿಕ ಪರಂಪರೆಯನ್ನು ಹೊಂದಿದೆ.
ಮೂರನೆಯದಾಗಿ ತಮಿಳಿನ ಅಭಿಜಾತ ಸಾಹಿತ್ಯ ಸಂಸ್ಕೃತಿ , ಗ್ರೀಕ್ , ಲ್ಯಾಟಿನ್ , ಚೀನಾ , ಪರ್ಷಿಯಾ , ಅರೇಬಿಕ್ನ ಮಹಾನ್ ಸಾಹಿತ್ಯಗಳೊಂದಿಗೆ ಹೆಗಲೆಣೆಯಾಗಿ ನಿಲ್ಲಬಲ್ಲುದು. ತಮಿಳಿನ ಸಾಹಿತ್ಯದ ಸಂವೇದನೆ ಮತ್ತು ಅಗಾಧತೆ , ಅದರ ವೈವಿಧ್ಯಮಯ ಸಾಹಿತ್ಯ (ಆಧುನಿಕ ಪೂರ್ವದ ಭಾರತೀಯ ಭಾಷೆಗಳಲ್ಲಿ ಸಂವೇದನೆಯನ್ನು ವ್ಯಾಪಕವಾಗಿ ತೋರಿಸಿರುವುದು ತಮಿಳು ಮಾತ್ರ) ಮತ್ತು ಸಾರ್ವತ್ರಿಕತೆ ತಮಿಳನ್ನು ಜಗತ್ತಿನ ಶಾಸ್ತ್ರೀಯ ಪರಂಪರೆಗಳಲ್ಲಿ ಒಂದನ್ನಾಗಿಸಿದೆ. ತಿರುಕ್ಕುರುಳ್ ಜಗತ್ತಿನ ಮಹಾನ್ ನೀತಿ ಸೂತ್ರವೆಂದು ತಿಳಿದಿದೆ. ಇದು ಮಹತ್ತರವಾದ , ವೈವಿಧ್ಯಮಯವಾದ ತಮಿಳು ಸಾಹಿತ್ಯ ಪರಂಪರೆಯ ಸೂಚಕ ಮಾತ್ರ. ಈ ಮಹಾನ್ ಸಾಹಿತ್ಯದಿಂದ ಮಾನವನ ಯಾವ ಚಟುವಟಿಕೆಯೂ ಹೊರಗುಳಿದಿಲ್ಲ.
ಅಂತಿಮವಾಗಿ ತಮಿಳು ಆಧುನಿಕ ಭಾರತದ ಸಂಸ್ಕೃತಿ ಮತ್ತು ಪರಂಪರೆಗಳ ಪ್ರಾಥಮಿಕ ಮತ್ತು ಸ್ವತಂತ್ರ ಆಕರವಾಗಿದೆ. ನಾನು ಸಂಸ್ಕೃತದ ಮೇಲೆ ದಕ್ಷಿಣದ ಪ್ರಭಾವವನ್ನು ಕುರಿತು ವ್ಯಾಪಕವಾಗಿ ಬರೆದಿದ್ದೇನೆ. ಆದರೆ ಅಷ್ಟೇ ಮುಖ್ಯವಾದ ವಿಚಾರವೆಂದರೆ ಸಂಗಂ ಸಂಕಲನಗಳಿಂದ ಪ್ರಾರಂಭಿಸಿ ತಮಿಳಿನ ಪವಿತ್ರ ಮಹಾನ್ ಕೃತಿಗಳು ಆಧುನಿಕ ಹಿಂದುಧರ್ಮ ರೂಪುಗೊಳ್ಳುವಲ್ಲಿ ನೆರವಾಗಿವೆ. ತಮಿಳಿನ ಪರಿಕಲ್ಪನೆಗಳು ಭಾಗವತ ಪುರಾಣ ಹಾಗೂ ಇನ್ನಿತರ ಕೃತಿಗಳಲ್ಲಿ (ಕನ್ನಡ , ಸಂಸ್ಕೃತ,ತೆಲುಗು ಸೇರಿದಂತೆ) ಭಾರತದಾದ್ಯಂತ ಹರಡಿವೆ. ವೇದಗಳಿಗೆ ಸಮಾನವಾವೆಂದು ಭಾವಿಸಲಾದ ತನ್ನದೇ ಆದ ಸಾಹಿತ್ಯವನ್ನು ತಮಿಳು ಹೊಂದಿದ್ದು ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ಇಂದಿಗೂ ಸಂಸ್ಕೃತದ ಮಂತ್ರಗಳೊಂದಿಗೆ ಇವುಗಳನ್ನು ಹಾಡಲಾಗುತ್ತಿದೆ (ತಿರುಪತಿ). ಸಂಸ್ಕೃತ ಆಧುನಿಕ ಇಂಡೋ-ಆರ್ಯನ್ ಭಾಷೆಗಳ ಮೂಲವಾಗಿರುವಂತೆ , ಶಾಸ್ತ್ರೀಯ ತಮಿಳು ಆಧುನಿಕ ತಮಿಳು ಮತ್ತು ಮಲಯಾಳಂಗಳ ಮೂಲ. ಇಂಡೋ-ಆರ್ಯನ್ ಭಾಷೆಗಳಲ್ಲಿ ಸಂಸ್ಕೃತ ಅತ್ಯಂತ ಅಬಾಧಿತ ಮತ್ತು ಅತ್ಯಲ್ಪ ಬದಲಾವಣೆಗೆ ಒಳಗಾದಂತೆ ದ್ರಾವಿಡ ಭಾಷೆಗಳಲ್ಲಿ ತಮಿಳು ಆ ಸ್ಥಾನ ಹೊಂದಿದೆ. ದ್ರಾವಿಡ ಭಾಷೆಗಳ ಸ್ವರೂಪ ಮತ್ತು ಬೆಳವಣಿಗೆಯನ್ನು ಅರಿಯುವ ಒರೆಗಲ್ಲು ಅದಾಗಿದೆ.
ತಮಿಳಿಗೆ ಇನ್ನು ಏಕೆ ಶಾಸ್ತ್ರಿಯ ಸ್ಥಾನಮಾನ ದಕ್ಕಿಲ್ಲವೆಂದು ಅರಿಯಲು ನಾನು ಯತ್ನಿಸುತ್ತಿದ್ದೇನೆ. ಅದರ ಹಿಂದೆ ರಾಜಕೀಯ ಕಾರಣವಿರುವುದನ್ನು ನಾನು ಊಹಿಸಬಲ್ಲೆ – ತಮಿಳನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸಿದರೆ ಬೇರೆ ಭಾಷೆಗಳು ಸಹ ಅದನ್ನು ಕೇಳುವ ಭಯವಿರುವಂತೆ ಕಾಣುತ್ತದೆ. ಇದೊಂದು ಅನಾವಶ್ಯಕವಾದ ಚಿಂತೆ. ಭಾರತದ ಆಧುನಿಕ ಭಾಷೆಗಳ ಶ್ರೀಮಂತಿಕೆಯ ಅರಿವು ನನಗಿದೆ. ಅವುಗಳಲ್ಲಿ ಪ್ರತಿಯೊಂದು ಜಗತ್ತಿನ ಯಾವುದೇ ಭಾಷೆಗೆ ಸಮಾನವಾದ ಮಧ್ಯಕಾಲೀನ ಮತ್ತು ಆಧುನಿಕ ಸಾಹಿತ್ಯ ಹೊಂದಿವೆ. ಆದರೆ ಅವು ಯಾವುವು ಶಾಸ್ತ್ರಿಯ ಭಾಷೆಗಳಲ್ಲ. ಯುರೋಪ್ನಲ್ಲಿ ಇಂಗ್ಲೀಷ್ ಹಾಗೂ ಇತರ ಆಧುನಿಕ ಭಾಷೆಗಳು (ಗ್ರೀಕ್ ಹೊರತಾಗಿ) ಮೊದಲೇ ಅಸ್ತಿತ್ವದಲ್ಲಿದ್ದ ಪರಂಪರೆಯ ಮೇಲೆ ನಂತರದಲ್ಲಿ ವಿಕಸಿಸಿದ, ಎರಡನೇ ಸಹಸ್ರಮಾನದಲ್ಲಿ ಬೆಳೆದ ಭಾಷೆಗಳು. ಯುರೋಪ್ನಲ್ಲಿ ಗ್ರೀಕ್ ಭಾಷೆಯನ್ನು ಶಾಸ್ತ್ರೀಯ ಭಾಷೆ0iÉುಂದು ಗುರುತಿಸಿರುವುದು ¥sóÉ್ರಂಚ್ ಮತ್ತು ಇಂಗ್ಲೀಷ್ ಆ ಸ್ಥಾನವನ್ನು ಕೇಳುವಂತೆ ಮಾಡಲಾರದು.
ಒಂದು ಭಾಷೆ ಶಾಸ್ತ್ರೀಯ ಪರಂಪರೆಗೆ ಸೇರಬೇಕೆಂದರೆ ಹಲವಾರು ಅರ್ಹತೆಗಳನ್ನು ಹೊಂದಿರಬೇಕು. ಅದು ಪ್ರಾಚೀನವಾಗಿರಬೇಕು , ಅದು ಅನ್ಯ ಪರಂಪರೆಯಿಂದ ಮೂಡಿ ಬಂದಿರದೆ ಸ್ವತಂತ್ರ ಪರಂಪರೆ ಹೊಂದಿರಬೇಕು. ಅದು ಬಹು ಸಮೃದ್ಧವಾದ ಪ್ರಾಚೀನ ಸಾಹಿತ್ಯ ಹೊಂದಿರಬೇಕು. ಭಾರತದ ಬೇರೆ ಭಾಷೆಗಳಿಗಿಂತ ತಮಿಳು ಭಿನ್ನವಾಗಿದ್ದು ಇವೆಲ್ಲ ಅರ್ಹತೆಗಳನ್ನು ಹೊಂದಿ ಪ್ರತ್ಯೇಕವಾಗಿ ಹೊರ ನಿಲ್ಲುತ್ತದೆ. ಅದು ಅತ್ಯಂತ ಪ್ರಾಚೀನ ಲ್ಯಾಟಿನ್ ಹಾಗೂ ಹಳೆ ಅರೇಬಿಕ್ನಷ್ಟೇ ಹಳೆಯದು. ಅದು ಸ್ವತಂತ್ರ ಪರಂಪರೆಯಿಂದ ಉದಿಸಿದೆ. ಅದರ ಮೇಲೆ ಸಂಸ್ಕೃತ ಅಥವಾ ಇನ್ನಾವುದೇ ಭಾಷೆಯ ಪ್ರಭಾವವಿ¯್ಲ. ಅದರ ಪ್ರಾಚೀನ ಸಾಹಿತ್ಯ ವರ್ಣಿಸಲಾಗದಷ್ಟು ವ್ಯಾಪಕ ಮತ್ತು ಶ್ರೀಮಂತ.
ತಮಿಳನ್ನು ಶಾಸ್ತ್ರೀಯ ಭಾಷೆಯೆಂದು ಘೋಷಿಸಲು ನಾನೊಂದು ಪ್ರಬಂಧವನ್ನು ಬರೆಯುವ ಸ್ಥಿತಿಯಿದೆ ಎಂಬುದು ಸೊಜಿಗವನ್ನುಂಟು ಮಾಡುತ್ತಿದೆ – ಇದು ಭಾರತ ಮಹಾನ್ ದೇಶ ಅಥವಾ ಹಿಂದು ಧರ್ಮ ಜಗತ್ತಿನ ಮಹೋನ್ನತ ಧರ್ಮ ಎಂದು ಬರೆದಂತೆ. ತಮಿಳಿನ ಬಗ್ಗೆ ಬಲ್ಲ ಯಾರಾದರೂ ಅದು ಜಗತ್ತಿನ ಶಾಸ್ತ್ರೀಯ ಭಾಷೆಗಳೊಂದಿಗೆ ಸ್ಥಾನಮಾನ ಹೊಂದಿರುವ ಬಗ್ಗೆ ಸಂಶಯ ಹೊಂದಲಾರರು. ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ನಿರಾಕರಿಸುವುದೆಂದರೆ ಭಾರತೀಯ ಸಂಸ್ಕೃತಿಯ ಮಹತ್ತರತೆ ಹಾಗೂ ಶ್ರೀಮಂತಿಕೆಯನ್ನು ನಿರಾಕರಿಸಿದಂತೆ.
ಜಾರ್ಜ್ ಹಾರ್ಟ್
ತಮಿಳು ಪ್ರಾಧ್ಯಾಪಕರು
ತಮಿಳು ಅಧ್ಯಯನ ಪೀಠ
ಪ್ರೊಫೆಸರ್ ಮರಿಮಲೈಗಳ ಕೋರಿಕೆ ಮೇರೆಗೆ ಪತ್ರದ ಮೂಲಕ ,ಏಪ್ರಿಲ್ 11 , 2000 ರಂದು ಜಾರ್ಜ್ ಹಾರ್ಟ್ ಬರೆದ ಪ್ರತಿಕ್ರಿಯೆ ಅಂತರ್ಜಾಲದ ನೂರಾರು ತಾಣಗಳಲ್ಲಿ ಹರಿದಾಡಿ, ತಮಿಳರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿತು. ಇದಕ್ಕೆ ಪೂರಕವಾಗಿ 2004 ರಲ್ಲಿ ತಮಿಳುನಾಡಿನ ಡಿ.ಎಂ.ಕೆ ಪಕ್ಷದ ನೆರವಿನಿಂದ ಕೇಂದ್ರದಲ್ಲಿ ಯು.ಪಿ.ಎ. ಸರ್ಕಾರ ರಚಿಸಿತು. ಇದರ ಫಲಿತಾಂಶವಾಗಿ ಸಾಮಾನ್ಯ ಕನಿಷ್ಟ ಕಾರ್ಯಕ್ರಮದಲ್ಲಿ ತಮಿಳನ್ನು ಶಾಸ್ತ್ರಿಯ ಭಾಷೆಯಾಗಿ ಸಾರಬೇಕೆಂಬ ಅಂಶ ಸೇರ್ಪಡೆಗೊಂಡಿತು. ಶಾಸ್ತ್ರಿಯ ಭಾಷೆ ಯಾವುದು ಎಂಬುದರ ವಿದ್ವತ್ ಚರ್ಚೆಯನ್ನು ನಡೆಸದೆ ಜಾರ್ಜ್ಹಾರ್ಟ್ ಪತ್ರದಲ್ಲಿನ ಅಂಶಗಳನ್ನು ಹೊರತೆಗೆದು ಕೇಂದ್ರ ಸಾಹಿತ್ಯ ಅಕಾಡೆಮಿಯ ವಿರೋಧವನ್ನು ಲೆಕ್ಕಿಸದೆ ಶಾಸ್ತ್ರೀಯ ಭಾಷೆಗೆ ಬೇಕಾದ ನಾಲ್ಕು ಮಾನದಂಡಗಳನ್ನು ಕೇಂದ್ರ ಸರ್ಕಾರ 12/10/2004 ರಂದು ತನ್ನ ರಾಜ್ಯಪತ್ರದ ಮೂಲಕ ರೂಪಿಸಿ ‘ಶಾಸ್ತ್ರೀಯ ಭಾಷೆಗಳು’ ಎಂಬ ಹೊಸ ಭಾಷಾ ಸಮುದಾಯವನ್ನು ಸೃಷ್ಟಿಸಿತು.
ಇದರ ಪ್ರಕಾರ ಶಾಸ್ತ್ರಿಯ ಭಾಷೆಯ ಮಾನಕಗಳೆಂದರೆ -
1. ಸಾವಿರ ವರ್ಷಗಳಿಗಿಂತಲೂ ಅಧಿಕವಾದ ಪ್ರಾಚೀನ ಪಠ್ಯ /ದಾಖಲೆ ಹೊಂದಿರುವ ಇತಿಹಾಸ.
2. ಅಮೂಲ್ಯವೆಂದು ಆ ಭಾಷಾ ಸಮುದಾಯ ಭಾವಿಸುವ, ಪರಂಪರೆಯಾಗಿ ಪರಿಗಣಿತವಾಗಿರುವ ಪ್ರಾಚೀನ ಸಾಹಿತ್ಯದ ಅಸ್ತಿತ್ವ.
3. ಅನ್ಯ ಮೂಲದಿಂದ ಪ್ರೇರಿತವಾಗದ ತನ್ನದೇ ಆದ ಸ್ವೋಪಜ್ಞ ಸಾಹಿತ್ಯ ಸಂಪ್ರದಾಯ
4. ಆ ಭಾಷೆಯಲ್ಲಿ ಪ್ರಾಚೀನ ಮತ್ತು ಪ್ರಸಕ್ತ ಸಾಹಿತ್ಯಗಳು ಭಿನ್ನವಾಗಿರಬೇಕು ಆದರೆ ನಂತರ ಕಾಲದ ಸಾಹಿತ್ಯ ಪ್ರಕಾರಗಳು ಪ್ರಾಚೀನ ಸಾಹಿತ್ಯದಿಂದ ರೂಪುಗೊಳ್ಳುವ ಅಗತ್ಯವಿಲ್ಲ.
ಈ ಪ್ರಕಟಣೆಯ ನಂತರ ಭಾರತದಲ್ಲಿ ಶಾಸ್ತ್ರಿಯ ಭಾಷಾ ಸ್ಥಾನ ಕುರಿತಾದಂತೆ ದ್ರಾವಿಡ ಭಾಷೆಗಳ ನಡುವೆ ಮೊದಲು-ನಂತರ , ಸ್ವೋಪಜ್ಞ-ಅವಲಂಬಿತ , ಅನನ್ಯ-ಸಾಧಾರಣ ಎಂಬ ವಾದ ವಿವಾದಗಳಿಗೆ ಕಾರಣವಾಗಿ ನಂತರ ರಾಜಕೀಯ ಸ್ವರೂಪ ತಾಳಿತು. ಹಲವು ವರ್ಷಗಳ ಹೋರಾಟ , ಸಮಿತಿಗಳ ರಚನೆ ,ರಾಜಕೀಯ ಬೆದರಿಕೆಗಳ ನಂತರ ಕನ್ನಡ ಮತ್ತು ತೆಲುಗುಗಳು ಸಹ ಶಾಸ್ತ್ರೀಯವೆಂದು ಪರಿಗಣಿತವಾದವು. ಇದರ ಬೆನ್ನಲ್ಲೆ ತಮಿಳುನಾಡಿನ ವ್ಯಕ್ತಿಯೊಬ್ಬರು ಚೆನ್ನೈ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದರು. ಈ ಹಿನ್ನೆಲೆಯಲ್ಲಿ ಜಾರ್ಜ್ ಹಾರ್ಟ್ ತಮಿಳನ್ನು ಶಾಸ್ತ್ರೀಯ ಭಾಷೆಯೆಂದು ಘೋಷಿಸಲು ಬಳಸಿರುವ ಎಷ್ಟು ಅಂಶಗಳನ್ನು ತಮಿಳು ಯಾವ ಕಾಲದಲ್ಲಿ ಹೊಂದಿದ್ದಿತು , ಮತ್ತು ಅವರು ಪರಿಗಣಿಸಿದ ಅಂಶಗಳು ಮಾತ್ರ ಭಾಷೆಯನ್ನು ಶಾಸ್ತ್ರೀಯ ಸ್ಥಾನಕ್ಕೊಯ್ಯಬಲ್ಲವೇ ಹಾಗೂ ಸಂಸ್ಕೃತ , ಲ್ಯಾಟಿನ್ನಂತಹ ಶಾಸ್ತ್ರೀಯ ಭಾಷೆಗಳೊಂದಿಗೆ ದ್ರಾವಿಡ ಭಾಷೆಗಳನ್ನು ಹೋಲಿಸಿ ನೋಡಿದಾಗ ತಿಳಿದುಬರುವ ಅಂಶಗಳು ಯಾವುವೆಂಬುದನ್ನು ಮುಂದೆ ನೋಡೋಣ.
ಶಾಸ್ತ್ರಿಯ ಭಾಷೆ ಎಂದರೇನು ಎಂಬ ಬಗ್ಗೆ ಇತರ ವಿದ್ವಾಂಸರು ಯಾವ ಅಭಿಪ್ರಾಯ ತಾಳಿದ್ದಾರೆ ಎಂದು ಸಂಕ್ಷಿಪ್ತವಾಗಿ ಈ ಮುಂದೆ ನೀಡಲಾಗಿದೆ.
‘ದಿ ಲಾಂಗ್ವೇಜ್’ – ಎಡ್ವರ್ಡ್ ಸಪೀರ್ : ‘ ವಿದ್ಯಾವಂತ ಜಪಾನಿಯನೊಬ್ಬ ಚೀನಿ ಆಕರಗಳ ನೆರವಿಲ್ಲದೆ ಸಾಹಿತ್ಯಕವಾದ ಒಂದು ವಾಕ್ಯವನ್ನು ಸಹ ಬರೆಯಲು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಕಂಡರೆ , ಹಿಂದೂ-ಬೌದ್ಧ ಧರ್ಮದ ಮೂಲಕ ಪ್ರವೇಶಿಸಿದ ಸಂಸ್ಕೃತ ಮತ್ತು ಪಾಳಿಗಳು ಇಂದಿಗೂ ಸಯಾಮ್ , ಬರ್ಮಾ ದೇಶದ ಭಾಷೆಗಳ ಮೇಲೆ ಬೀರಿರುವ ಪ್ರಭಾವವನ್ನು ಗಮನಿಸಿದರೆ, ನಾವು ಲ್ಯಾಟಿನ್ ಮತ್ತು ಗ್ರೀಕ್ನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕೆ ಅಥವಾ ಬೇಡವೇ ಎಂದು ಚರ್ಚಿಸುವಾಗಲೆಲ್ಲ ನಮ್ಮ ವಾದಗಳಲ್ಲಿ ಗ್ರಿಕ್ ,ಲ್ಯಾಟಿನ್ ಪದಗಳು ತುಂಬಿ ತುಳುಕುತ್ತಿರುತ್ತವೆ. ಆರಂಭಿಕ ಚೀನಾದ ಸಂಸ್ಕೃತಿ , ಬೌದ್ಧ ಧರ್ಮ ಹಾಗೂ ಪ್ರಾಚೀನ ಮೆಡಿಟರೇನಿಯನ್ ನಾಗರಿಕತೆಗಳು ಜಗತ್ತಿನ ಇತಿಹಾಸಕ್ಕೆ ಎಂತಹ ಕಾಣಿಕೆಗಳನ್ನಿತ್ತಿವೆ ಎಂಬ ಅರಿವು ನಮಗೆ ದಕ್ಕುತ್ತದೆ. ಜಗತ್ತಿನ ಸಂಸ್ಕೃತಿಯ ಧಾರಕರಂತೆ ಎದ್ದು ಕಾಣಿಸುವ ಐದು ಭಾಷೆಗಳೆಂದರೆ ಅಭಿಜಾತ ಚೀನಿ ಭಾಷೆ , ಸಂಸ್ಕೃತ , ಲ್ಯಾಟಿನ್, ಗ್ರೀಕ್ ಮತ್ತು ಅರೇಬಿಕ್. ಇವುಗಳೊಂದಿಗೆ ಹೋಲಿಸಿದಾಗ ಸಾಂಸ್ಕೃತಿಕ ಹಿರಿಮೆ ಗರಿಮೆ ಗಳಿಸಿದ ಹೀಬ್ರೂ, ಫ್ರೆಂಚ್ ಭಾಷೆಗಳು ಸಹ ಎರಡನೇ ಸ್ಥಾನಕ್ಕಿಳಿಯುತ್ತವೆ. ಈ ದೃಷ್ಟಿಯಲ್ಲಿ ಇವು ಇಂದು ಯಾರ ಆಡು ಭಾಷೆಯಾಗಿಯೂ ಅಸ್ತಿತ್ವದಲ್ಲಿ ಇರದಿದ್ದರೂ ವ್ಯಾಪಕ ಪ್ರದೇಶದ ಮೇಲೆ , ಬಹು ದೀರ್ಘ ಕಾಲಾವಧಿಯಲ್ಲಿ ಪ್ರಭಾವ ಬೀರಿರುವ , ಇಂದಿಗೂ ಬೀರುತ್ತಿರುವ ಶಾಸ್ತ್ರೀಯ ಭಾಷೆಗಳು. ಯುರೋಪಿಯನ್ ಭಾಷೆಗಳು ಹೊಸ ಪದಗಳ ಸೃಷ್ಟಿಗೆ ಲ್ಯಾಟಿನ್ , ಗ್ರೀಕ್ ಭಾಷೆಗಳ ಧಾತುಗಳಿಗೆ ಇಂದಿಗೂ ಮೊರೆಹೋಗುತ್ತಿರುವುದು ಈ ಭಾಷೆಗಳ ಕಾಲಾತೀತವಾದ ಪ್ರಭಾವಕ್ಕೆ ಸಾಕ್ಷಿ.’ :
ಈ ಮಾನದಂಡಗಳಿಗೆ ಅನುಗುಣವಾಗಿ ತಮಿಳು , ಕನ್ನಡ , ತಮಿಳು ಇವು ಯಾವುವೂ ಶಾಸ್ತ್ರಿಯ ಭಾಷೆಗಳಾಗಿ ಅರ್ಹತೆ ಹೊಂದಲಾರವು.
ಉಲ್ರಿಖ್ ಆಮೊನ್ ತಮ್ಮ ‘ಸೋಷಿಯೋಲಿಂಗ್ಯುಸ್ಟಿಕ್’ ಕೃತಿಯಲ್ಲಿ ಶಾಸ್ತ್ರೀಯ ಭಾಷೆಗಳನ್ನು ಕುರಿತಾಗಿ ಮಾಡಿರುವ ಪಟ್ಟಿಯಲ್ಲಿನ ಪ್ರಮುಖಾಂಶಗಳು ಮುಂದಿವೆ :
ಶಾಸ್ತ್ರಿಯ ಭಾಷೆಗಳು
- ಬರವಣಿಗೆಯಲ್ಲಿ ಉನ್ನತತರವಾದ ಶಿಷ್ಟತೆಯನ್ನು ಸಾಧಿಸಿರುತ್ತವೆ. ಈ ಭಾಷೆಗಳಲ್ಲಿ ನಿರ್ದಿಷ್ಟ ಕಾಲಾವಧಿಯ ಪರಿಮಿತ ಸಂಖ್ಯೆಯ ಕೆಲ ಕೃತಿಗಾರರ ಸಾಹಿತ್ಯ ಶ್ರೇಷ್ಟವೆಂದು ಪರಿಗಣಿತವಾಗಿರುತ್ತದೆ . ಈ ಭಾಷೆಗಳ ವ್ಯಾಕರಣ ಅಭಿವೃದ್ಧಿಗೊಂಡು ಸೂತ್ರರೂಪದಲ್ಲಿ ದಾಖಲಾಗಿರುತ್ತದೆ ಮತ್ತು ಶಾಸ್ತ್ರೀಯವೆಂದು ಪರಿಗಣಿತವಾದ ಸಾಹಿತ್ಯದ ವ್ಯಾಕರಣ, ಬರವಣಿಗೆ , ಧ್ವನಿ ವ್ಯವಸ್ಥೆ ಬದಲಾಗದಂತೆ ಎಚ್ಚರ ವಹಿಸಿ ಅದು ಮೊದಲಿನ ಶುದ್ಧರೂಪದಲ್ಲಿರುವಂತೆ ಕಾಯ್ದಿಟ್ಟುಕೊಳ್ಳಲಾಗುತ್ತದೆ.
- ಆಡುಭಾಷೆಗಳಿಗಿಂತ ಭಿನ್ನವಾಗಿರುತ್ತವೆ. ಅಸ್ತಿತ್ವದಲ್ಲಿರುವ ಆಡುಭಾಷೆ ಶಾಸ್ತ್ರೀಯ ಭಾಷೆಯ ಸಹಜ ಮುಂದುವರಿಕೆಯಾಗಿದ್ದರೂ ಇವೆರಡರ ಮಧ್ಯೆ ವ್ಯತ್ಯಾಸಗಳಿರುತ್ತವೆ. (ಉದಾ: ಹಳೆಗನ್ನಡ ಮತ್ತು ಆಧುನಿಕ ಕನ್ನಡ) ಕೆಲವೊಮ್ಮೆ ಶಾಸ್ತ್ರಿಯ ಭಾಷೆ ಮತ್ತು ಆಡು ಭಾಷೆಗಳ ನಡುವೆ ಕಾಲದ ಅಂತರವಿಲ್ಲದಿರಬಹುದು.
- ಒಂದು ಪ್ರದೇಶ , ಜನಾಂಗದ ಚಾರಿತ್ರಿಕ ಮತ್ತು ಪಾರಂಪರಿಕ ಅಂಗಗಳಾಗಿರುತ್ತವೆ .
- ವಿಶಿಷ್ಟ ಸಾಂಕೇತಿಕ ಮತ್ತು ಕಾರ್ಯಸೂಚಿಯ ಅಂಗಗಳಾಗಿದ್ದು ಬೇರೆ ಭಾಷೆಗಳಲ್ಲು ಸಹ ಮನ್ನಣೆ ಪಡೆದಿರುತ್ತವೆ. ಇವು ಧಾರ್ಮಿಕ ವಿಧಿ ,ವಿಧಾನ , ಆಚರಣೆಗಳಲ್ಲಿ ಮನ್ನಣೆ ಗಳಿಸಿರುತ್ತವೆ. (ಉದಾ: ಸಂಸ್ಕೃತದಲ್ಲಿ ಪೂಜಾ ವಿಧಾನಗಳು)
- ಬಹು ವ್ಯಾಪಕ ಪ್ರದೇಶಗಳ, ವಿಭಿನ್ನ ಸಮುದಾಯಗಳನ್ನು ತಮ್ಮ ಸಂವಹನೆಯ ತೆಕ್ಕೆಗೆ ತೆಗೆದುಕೋಡಿರುತ್ತವೆ.
- ವಿಪುಲ ಸಾಹಿತ್ಯರಾಶಿ ಅಸ್ತಿತ್ವದಲ್ಲಿರುತ್ತದೆ. ಸಾಹಿತ್ಯ ಸೃಷ್ಟಿ ಮುಂದುವರೆಯುತ್ತಿರಬಹುದು ಅಥವಾ ಬಹು ಹಿಂದೆಯೇ ಸ್ಥಗಿತಗೊಂಡಿರಬಹುದು.
- ಇವು ಮೃತವಾಗಿರಬೇಕೆಂದಿಲ್ಲ , ಬದಲಾಣೆಗಳಿಗೊಳಗಾಗಿ ಆಧುನಿಕ ಭಾಷೆಗಳಾಗಿರಬಹುದು.
ಈ ಮಾನದಂಡಗಳಿಗೆ ಅನುಗುಣವಾಗಿ ತಮಿಳು , ಕನ್ನಡ ಮತ್ತು ತೆಲುಗುಗಳು ಶಾಸ್ತ್ರಿಯ ಭಾಷೆಗಳಾಗುತ್ತವೆ.
ಬಹು ಭಾಷೆಗಳ ಘನ ಪಂಡಿತರಾದ ಜಾರ್ಜ್ಹಾರ್ಟ್ , ಮರಿಮಲೈಗಳ ದಾಕ್ಷಿಣ್ಯಕ್ಕೆ ಬಿದ್ದು ಬರೆದ ಪತ್ರದಲ್ಲಿನ ಅಂಶಗಳು ಬಹು ತೆಳುವಾಗಿದ್ದು , ಸ್ವಲ್ಪವೇ ವಿಮರ್ಶಕ ದೃಷ್ಟಿಯಿಂದ ನೋಡಿದಾಗ ಬಹು ಸಡಿಲವಾಗಿ ಆತುರದಲ್ಲಿ ಜೋಡಿಸಿ ಬರೆದಂತೆ ಕಾಣುತ್ತವೆ. ಹಾರ್ಟ್ರವರು ಪರಿಗಣಿಸಿದ ಮಾನದಂಡಗಳನ್ನು ಮುಂದೆ ಸ್ವಲ್ಪ ಕೂಲಂಕಷವಾಗಿ ನೋಡಲಾಗಿದೆ.
ತಮಿಳು ಪ್ರಾಚೀನತೆ : ತಮಿಳು-ಬ್ರಾಹ್ಮಿ ಶಿಲಾಶಾಸನಗಳ ಭಾಷೆ, ತೊಲ್ಕಾಪ್ಪಿಯಂ ರಚನೆಯ ಕಾಲದ ಹಿಂದಿರುವ ವಿವಾದಗಳು , ಸಂಗಂ ಕಾಲದ ಸಾಹಿತ್ಯದ ಮೌಖಿಕ ಸ್ವರೂಪ ,ಲಿಪಿಕರಣ ಮತ್ತು ಸಂಪಾದನೆಯ ಕಾಲ ಇತ್ಯಾದಿಗಳನ್ನು ವಿದ್ವತ್ ದೃಷ್ಟಿಯಲ್ಲಿ ಪರಿಗಣಿಸದೆ ತಮಿಳಿನ ಸಾಹಿತ್ಯಕ ಪ್ರಾಚೀನತೆಯನ್ನು ಜನಪ್ರಿಯ ನಿಟ್ಟಿನಲ್ಲಿ ಪರಿಗಣಿಸಲಾಗಿದೆ. (ನೋಡಿರಿ : ಸಂಗಂ ಸಾಹಿತ್ಯ , ತೊಲ್ಕಾಪ್ಪಿಯಂ, ತಮಿಳು ಬ್ರಾಹ್ಮಿ). ಶ್ರೇಷ್ಟ ಸಾಹಿತ್ಯ ಹೊಂದಿರುವ 900 ಅಥವಾ 600 ವರ್ಷಗಳ ಇತಿಹಾಸ ಹೊಂದಿರುವ ಭಾಷೆ ಶಾಸ್ತ್ರಿಯವೇ ಅಲ್ಲವೇ ? ಒಟ್ಟು ತಮಿಳು ಸಂಗಂ ಸಾಹಿತ್ಯದ ಸರಿಸುಮಾರು ಅರ್ಧದಷ್ಟು ಗಾತ್ರವನ್ನು ಹೊಂದಿರುವ (15000 ಸಾಲುಗಳು) ಮೌಖಿಕ ಸಂಪ್ರದಾಯದ ತುಳುವಿನ ಸಿರಿ ಹಾಗೂ ಇನ್ನಿತರ ಪಾಡ್ದನಗಳನ್ನು ಲಭ್ಯವಿವೆ. ಇವುಗಳನ್ನು ಲಿಪಿಕರಣಗೊಳಿಸಿರುವ ಹಳೆಯ ಒಲೆಪ್ರತಿಗಳು ದಕ್ಕಿದರೆ ತುಳುವನ್ನು ಏನೆಂದು ಪರಿಗಣಿಸಬೇಕು ? ಮೌಖಿಕವಾದುದು ಬರೆದಾಗ ಮಾತ್ರ ಸಾಹಿತ್ಯವಾಗುತ್ತದೆಯೇ ? ಏಕತಾನತೆಯಿಂದ ಬರೆದುದಕ್ಕಿಂತಲೂ , ಹೆಚ್ಚಿನ ಒಳನೋಟ ಬೀರಬಲ್ಲ ಮೌಖಿಕ ಸಾಹಿತ್ಯ ಕೀಳೆಂದು ಭಾವಿಸಬೇಕೆ ? ಎಂಬಂತಹ ಪ್ರಶ್ನೆಗಳನ್ನು ಉತ್ತರಿಸುವ ಯತ್ನಮಾಡಿಲ್ಲ.
ಸಾಹಿತ್ಯದ ಸ್ವೋಪಜ್ಞತೆ : ಜಗತ್ತಿನಲ್ಲಿ ಯಾವುದರಿಂದಲೂ ಪ್ರಭಾವಿತವಾಗದ ವಸ್ತು ,ವಿಷಯ ಎಂಬುದಿಲ್ಲ. ಸ್ವೋಪಜ್ಞ-ಪ್ರಭಾವಿತ ಎಂಬುದು ಖಚಿತವಾಗಿ ನಿರ್ಧರಿಸಿ ಹೇಳುವಂತಹುದಲ್ಲ. ಕನ್ನಡದ ವಚನಗಳನ್ನು , ತೆಲುಗಿನ ಪ್ರಬಂಧಗಳನ್ನು ಸ್ವೋಪಜ್ಞವೆಂದು ಹಾಗೆಯೇ ಅಲ್ಲವೆಂದು ವಾದಿಸಲು ಸಾಧ್ಯವಿದೆ. ಅನ್ಯಮೂಲದಿಂದ ಬಂದ ಪರಿಕಲ್ಪನೆ, ತಂತ್ರಗಳನ್ನು ಬಳಸಿ ಒಂದು ಭಾಷೆಯಲ್ಲಿ ವಿಶಿಷ್ಟವಾದ ಸಾಹಿತ್ಯ ರಚಿಸಿದರೆ ಆಗ ಅದರ ಮೌಲ್ಯಮಾಪನಕ್ಕೆ ಸಾಹಿತ್ಯವನ್ನು ಪರಿಗಣಿಸಬೇಕೋ ಅಥವಾ ಎರವಲು ತಂತ್ರದ ದೃಷ್ಟಿಯಿಂದ ಅದನ್ನು ನಿರಾಕರಿಸಬೇಕೋ ಎಂಬುದು ಅಸ್ಪಷ್ಟವಾಗಿದೆ. ಸಂಖ್ಯೆಗಳ ಗೂಢಲಿಪಿಯಲ್ಲಿ ರಚನೆಗೊಂಡ ಸಿರಿಭೂವಲಯವನ್ನು ಹೋಲುವ ಕೃತಿ ಜಗತ್ತಿನಲ್ಲಿ ಮತ್ತೊಂದಿಲ್ಲ. ಆದ್ದರಿಂದ ಕನ್ನಡವನ್ನು ಏಕಮೇವಾದ್ವಿತೀಯವೆಂದು ಸಾರಬೇಕೆ ಅಥವಾ ಅದಕ್ಕೆ ಒಂದು ಪರಂಪರೆಯಿಲ್ಲವೆಂದು ನಿರಾಕರಿಸಬೇಕೆ ಎನ್ನುವಂತಹ ಗಹನವಾದ ಚರ್ಚೆಗಳು ಮೂಡಿಬರುತ್ತವೆ. ಸಂಗಂ ಸಾಹಿತ್ಯ ಮಾನವ ಸಹಜವಾದ ನೋಟ,ಬೇಟ,ಕೂಟ, ಆವೇಶಗಳ ಹಿನ್ನೆಲೆಯಲ್ಲಿ ಮೂಡಿಬಂದ ಬಿಡಿ ಕವನಗಳ ಜಾನಪದ ಮೂಲದ ಗೀತ ಸಾಹಿತ್ಯ. ಇಲ್ಲಿ ಕವಿಯ ಆಶಯ , ಕವನಗಳಿಂದ ದಕ್ಕುವ ರಸಾವೇಶ ಮತ್ತು ಅಂತಿಮ ಉದ್ದೇಶಗಳಿಗೆ ಕಾವ್ಯ ಮೀಮಾಂಸೆಯೆಂದು ಪರಿಗಣಿಸಬಹುದಾದ ಚೌಕಟ್ಟಿಲ್ಲ. ಈ ಸಾಹಿತ್ಯವನ್ನು ನಂತರ ಅರಿತುಕೊಳ್ಳಲು ಯತ್ನಿಸಿದ ಫಲವಾಗಿ ತಿಣೈ , ಅಹಂ , ಪುರಂ ಕಲ್ಪನೆಗಳು ಗೋಚರಿಸಿದವು. ಯಾವುದೇ ಭಾಷೆಯ ಸಾಹಿತ್ಯಕ್ಕೆ ವಿಪುಲತೆ ಮತ್ತು ವೈವಿಧ್ಯತೆಗಳೆರಡೂ ಅತ್ಯಗತ್ಯ. ತಮಿಳು ಸಾಹಿತ್ಯದಲ್ಲಿ 9ನೇ ಶತಮಾನದಿಂದ ವೈವಿಧ್ಯತೆ ಕಂಡುಬರುತ್ತದೆ. ಸರಿಸುಮಾರು ಇದೇ ಅವಧಿಯಲ್ಲಿ ಉಳಿದ ಭಾಷೆಗಳಲ್ಲು ಇದು ಕಂಡುಬರತೊಡಗುತ್ತದೆ. (ನೋಡಿರಿ : ಕೋಷ್ಟಕಗಳು)
ಸಾಹಿತ್ಯದ ಸಾರ್ವತ್ರಿಕತೆ : ಸಂಸ್ಕೃತ , ಲ್ಯಾಟಿನ್, ಗ್ರೀಕ್ ಹಾಗೂ ಇತರ ಶಾಸ್ತ್ರೀಯವೆಂದು ಪರಿಗಣಿತವಾದ ಭಾಷೆಗಳಲ್ಲಿ ಸಾಹಿತ್ಯದ ಅರುಣೋದಯದ ಕಾಲದಿಂದ ಕಾವ್ಯ , ನಾಟಕ ,ನೀತಿ, ಕಥೆ , ತತ್ವ ,ಆಧ್ಯಾತ್ಮ ,ರಾಜನೀತಿ , ವಿಜ್ಞಾನ ,ವೈದ್ಯಕೀಯ, ಚಿಕಿತ್ಸೆ, ಗಣಿತ, ಜೋತಿಷ್ಯ , ಛಂದಸ್ಸು , ತರ್ಕ , ಅರ್ಥ, ಕಾಮ, ಸಂಗೀತ , ಖಗೋಳ, ವಾಸ್ತು , ಸೌಂದರ್ಯ, ರತ್ನಪರೀಕ್ಷೆ , ಖನಿಜ , ನಿರ್ಮಾಣ , ಹಯ,ಗಜ , ವಿಷವೈದ್ಯ, ರಸವಿದ್ಯೆ, ಚರಿತ್ರೆ ,ಆತ್ಮಕಥೆ ಹೀಗೆ ಇನ್ನಿತರ ನೂರಾರು ಮಾನವನ ಎಲ್ಲ ಬೌದ್ಧಿಕ ರಂಗಗಳನ್ನು ಪ್ರತಿನಿಧಿಸಬಲ್ಲ ಸಾಹಿತ್ಯ ಮೂಡಿಬಂದಿವೆ. ಸಂಸ್ಕೃತ ಹೊರತು ಪಡಿಸಿ ಭಾರತದ ಯಾವುದೇ ಭಾಷೆಯಲ್ಲಿ ಇಂತಹ ವೈವಿಧ್ಯಮಯ ಸಾಹಿತ್ಯವಾಗಲಿ-ಅತ್ಯಲ್ಪ ಮಟ್ಟದಲ್ಲಿ ಸಂಸ್ಕೃತ ಅನುವಾದ ರೂಪದಲ್ಲಿ ಕಾಣಿಸಿಕೊಂಡಿರುವ ಹೊರತು- ಅಂತಹ ಸಾಹಿತ್ಯಕ್ಕೆ ಬೇಕಾದ ತಾಂತ್ರಿಕ ಪರಿಭಾಷೆಯಾಗಲಿ ಇಲ್ಲ. ಎಲ್ಲ ಭಾರತೀಯ ಭಾಷೆಗಳು ವಿದ್ವತ್ ಸಾಹಿತ್ಯ ಸೃಷ್ಟಿಗಾಗಿ ಸಂಸ್ಕೃತಕ್ಕೆ ಮೊರೆಹೋಗಿವೆ. ಈ ದೃಷ್ಟಿಯಲ್ಲಿ ತಮಿಳು , ಕನ್ನಡ , ತೆಲುಗು ತಮ್ಮ ಭಾಷಾ ಸಾಮಥ್ರ್ಯವನ್ನು ಸಾಹಿತ್ಯ ಸೃಷ್ಟಿಯಾಚೆಗೆ ಬಳಸಿಕ್ಕೊಳ್ಳಲು ಪ್ರಯತ್ನ ಮಾಡದ ದುರ್ಬಲ ಸೀಮಿತ ಭಾಷೆಗಳು. ಕನ್ನಡ , ತೆಲುಗುಗಳು ಆಧುನಿಕ ವಿಜ್ಞಾನದ ಪದಸೃಷ್ಟಿಗೆ ಸಂಪೂರ್ಣವಾಗಿ ಸಂಸ್ಕೃತವನ್ನು ಅವಲಂಬಿಸಿವೆ. ತಮಿಳು ಸಹ ಮುಸುಕಿನ ಮರೆಯಿಂದ ಇದನ್ನೇ ಮಾಡುತ್ತಿದೆ.
ಭಾಷೆ ಮತ್ತು ಸಾಹಿತ್ಯದ ವ್ಯಾಪಕ ಪ್ರಭಾವ : ಭಾರತದಲ್ಲಿನ ಎಲ್ಲ ಭಾಷೆಗಳಲ್ಲಿ ಈವರಗೆ ಸೃಜಿತವಾದ ಸಮಗ್ರ ಸಾಹಿತ್ಯವನ್ನು ಒಂದೆಡೆ ಪಟ್ಟಿ ಮಾಡಿ ನೋಡಿದರೆ ಮೇಲೆ ಹೇಳಿದ ಸಂಗತಿ ಸೂರ್ಯಪ್ರಖರವಾಗಿ ಎದ್ದು ಕಾಣುತ್ತದೆ. ಎಂದಿಗೂ ತಮಿಳು ಒಂದು ಭಾಷೆಯಾಗಿ ಮತ್ತು ಸಾಹಿತ್ಯ ಮಾರ್ಗವಾಗಿ ತಮಿಳಗಂನ ಸಾಂಪ್ರದಾಯಿಕ ಉತ್ತರದ ಗಡಿಯಾದ ವೇಂಗಡವನ್ನು ದಾಟಿ ಮುಂದೆ ಹೋಗಿ ಇತರ ಭಾಷೆಗಳನ್ನು ಗಮನಾರ್ಹವಾಗಿ ಪ್ರಭಾವಿಸಿದ ಕುರುಹುಗಳಿಲ್ಲ. ತಮಿಳು ಅಷ್ಟೊಂದು ಪ್ರಬಲ ಭಾಷೆಯೇ ಆಗಿದ್ದರೆ ಕನ್ನಡ ಮತ್ತು ತೆಲುಗುಗಳ ಮೇಲೆ ಅದರ ಪ್ರಭಾವ ಅಚ್ಚಳಿಯದೆ ಉಳಿಯಬೇಕಾಗಿತ್ತು. ಕನ್ನಡ , ತೆಲುಗುಗಳು ಭಾಷಿಕವಾದ ಯಾವುದೇ ಚಟುವಟಿಕೆಗಳಲ್ಲಿ ಸಂಸ್ಕೃತದ ಬದಲು ತಮಿಳನ್ನು ಅನುಕರಿಸಬೇಕಾಗಿದ್ದಿತು. ಆದರೆ ಅಂತಹ ಯಾವ ಕುರುಹುಗಳು ಕಂಡುಬಂದಿಲ್ಲ. ಜಾರ್ಜ್ಹಾರ್ಟ್ ಈ ಸತ್ಯಸಂಗತಿಗಳನ್ನು ಮರೆಮಾಚಿ ಯಾವುದೇ ತಳಹದಿಯ ಮೇಲೆ ಪರಿಗಣಿಸಿದರೂ ತಮಿಳು ಜಗತ್ತಿನ ಮಹಾಶಾಸ್ತ್ರೀಯ ಸಾಹಿತ್ಯ ಹಾಗೂ ಪರಂಪರೆಯನ್ನು ಹೊಂದಿದೆ0iÉುಂದು ಯಾವ ಸಂದಿಗ್ಧವೂ ಇಲ್ಲದೆ ಘಂಟಾಘೋಷವಾಗಿ ಸಾರಬಲ್ಲೆ ಮತ್ತು ತಮಿಳಿನ ಮಹಾನ್ ಸಾಹಿತ್ಯದಿಂದ ಮಾನವನ ಯಾವ ಚಟುವಟಿಕೆಯೂ ಹೊರಗುಳಿದಿಲ್ಲ ಎಂದು ಹೇಳಿ ತಮ್ಮ ವಿದ್ವತ್ತಿಗೆ ತಾವೇ ಬೇಲಿಹಾಕಿಕೊಡಿದ್ದಾರೆ.
ಸ್ವತಂತ್ರ ಆಕರ : ತಮಿಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳ ಪ್ರಾಥಮಿಕ ಮತ್ತು ಸ್ವತಂತ್ರ ಆಕರವೆಂದು ಘೋಷಿಸಿ ಜಾರ್ಜ್ ಹಾರ್ಟ್ ಭಾರತದ ಇತರ ಭಾಷೆ ಮತ್ತು ಪ್ರಾಂತ್ಯಗಳ ಬಗೆಗೆ ತಮಗಿರುವ ಅಜ್ಞಾನವನ್ನು ತೋರ್ಪಡಿಸಿದ್ದಾರೆ. ಇದನ್ನು ಕುರಿತಾದ ಚರ್ಚೆ ಸುದೀರ್ಘ ಮತ್ತು ಅನವಶ್ಯಕ.
ಪರಂಪರೆಯ ಅಸ್ತಿತ್ವ : ಈಗ ಅತ್ಯಂತ ಅಮೂಲ್ಯ , ಅನನ್ಯ ಎಂದು ಪರಿಗಣಿಸಿ ಶಾಸ್ತ್ರೀಯ ಸ್ಥಾನಮಾನಕ್ಕೆ ಒತ್ತಾಯಿಸಲು ಕಾರಣವಾದ ಸಂಗಂ ಸಾಹಿತ್ಯ 19ನೇ ಶತಮಾನದ ಉತ್ತರಾರ್ಧದಲ್ಲಿ ಮರುಶೋಧನೆಯಾಗುವವರೆಗೆ ತಮಿಳರಿಗೇ ತಿಳಿದಿರಲಿಲ್ಲ. ಮಧ್ಯಕಾಲದಲ್ಲಿ ಅದಕ್ಕೆ ಅಂತಹ ಪ್ರಾಶಸ್ತ್ಯವೂ ದಕ್ಕಿರಲಿಲ್ಲವೆಂದು ತೋರಿಬರುತ್ತದೆ. ತಮಿಳು ಸಾಹಿತ್ಯ ಕಳಭ್ರರ ಅಂಧಕಾರ ಕಾಲದ ಬಗೆಗೆ ಏನನ್ನೂ ಹೇಳದಿರುವುದು ಸಾಹಿತ್ಯದ ಸಾತತ್ಯದ ಬಗೆಗೆ ,ಅದರ ಪ್ರಾಚೀನತೆಯ ಬಗೆಗೆ ಸಂಶಯ ತಾಳುವಂತೆ ಮಾಡುತ್ತದೆ.
ಮೂಲ ಸ್ವರೂಪ : ದ್ರಾವಿಡ ಭಾಷೆಗಳ ಮೂಲ ಸ್ವರೂಪಗಳನ್ನು ಅರಿಯಲು ತಮಿಳು ಒಂದು ಅನನ್ಯ ಆಕರವೆನ್ನುವುದು ನಿಜ. ಆದರೆ ಅದೊಂದೇ ಎನ್ನುವುದು ತಪ್ಪು. ದ್ರಾವಿಡ ಭಾಷೆಗಳು ಇಂಡೋ-ಆರ್ಯನ್ ಭಾಷೆಗಳೊಂದಿಗೆ ಸಂವಹಿಸಿದಾಗ ಏನಾಯಿತೆಂದು ತಿಳಿಯಲು ಮತ್ತು ಎರಡು ವಿಭಿನ್ನ ಭಾಷಾ ಸಮುದಾಯಗಳು ಹೇಗೆ ಪರಸ್ಪರ ಪ್ರಭಾವ ಬೀರಬಲ್ಲವೆಂದು ಅರಿಯಲು ಇತರ ದ್ರಾವಿಡ ಭಾಷೆಗಳು ಬೇಕೇ ಬೇಕು. ವೈದರ್ಭಿ ಪ್ರಾಕೃತ ಮರಾಠಿಯಾಗುವಲ್ಲಿ ವಿಶೇಷತ:ವಾಗಿ ಕನ್ನಡ ಮತ್ತು ಸಾಕಷ್ಟು ಮಟ್ಟದಲ್ಲಿ ತೆಲುಗುಗಳು ಬೀರಿರುವ ಪ್ರಭಾವ ಭಾಷಾಶಾಸ್ತ್ರಿಯ ದೃಷ್ಟಿಯಿಂದ ತಮಿಳಿನಿಂದ ಮಲಯಾಳಂ ಮೂಡಿದಷ್ಟೇ ಪ್ರಬಲವಾದುದು.
ಮೇಲಿನ ಅಂಶಗಳನ್ನು ಪರಿಗಣಿಸಿದಾಗ ‘ದಿ ಲಾಂಗ್ವೇಜ್’ನಲ್ಲಿ ಎಡ್ವರ್ಡ್ ಸಪೀರ್ ಗುರುತಿಸಿದವುಗಳೇ ನಿಜವಾದ ಶಾಸ್ತ್ರಿಯ ಭಾಷೆಗಳು.