ಜಾನ್ ಹೆನ್ರಿ ರೈಟ್ ಪತ್ರ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ )
‘ದಿ ಲೈಫ್-೧೯೧೪ ‘ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಾನ್ ಹೆನ್ರಿ ರೈಟ್ ಧರ್ಮ ಸಂಸತ್ತಿನ ಪದಾಧಿಕಾರಿಗಳಿಗೆ ಸ್ವಾಮಿಗಳನ್ನು ಪರಿಚಯಿಸಿ ಪತ್ರವೊಂದನ್ನು ನೀಡಿದರು. ಆ ಪತ್ರದಲ್ಲಿ ಅವರು ‘ ಈ ವ್ಯಕ್ತಿ ನಮ್ಮ ಎಲ್ಲ ವಿದ್ವಾಂಸ ಪ್ರಾಧ್ಯಾಪಕರನ್ನು ಒಟ್ಟಿಗೆ ಸೇರಿಸಿದ್ದಕ್ಕಿಂತಲೂ ಹೆಚ್ಚಿನ ಜ್ಞಾನಿ ‘ ಎಂದು ತಿಳಿಸಿದ್ದರು ಎಂದು ‘ದಿ ಲೈಪ್-೧೯೧೪’ ದಾಖಲಿಸಿದೆ. ಈವೆರೆಗೆ ಜಾನ್ ಹೆನ್ರಿ ರೈಟ್ ಬರೆದ ಮೂಲ ಪತ್ರ ಬೆಳಕಿಗೆ ಬಂದಿಲ್ಲ. ಜಾನ್ ಹೆನ್ರಿ ರೈಟ್ ಹೆಂಡತಿ ಮೇರಿ ಟಪ್ಪನ್ ರೈಟ್ ಸ್ವಾಮಿಗಳ ಬಗ್ಗೆ ಹೊಂದಿದ್ದ ಅಭಿಪ್ರಾಯದಲ್ಲಿ ಇಂತಹ ಉತ್ಪ್ರೇಕ್ಷೆ ಕಂಡುಬರುವುದಿಲ್ಲ. ‘ಆಕೆ ‘ಆತ ವಿದ್ಯಾವಂತ ಸಜ್ಜನ , ಬೇರೆಯವರಷ್ಟೇ ತಿಳಿದಿದ್ದಾನೆ’ ಎಂದು ಬರೆದಿದ್ದಾಳೆ. ಧರ್ಮ ಸಂಸತ್ತು ಪ್ರಾರಂಭವಾದ ಮರುದಿನ ೧೨/೯/೧೮೯೩ ರಂದು ನೀಡಿದ ಸುದ್ದಿಯಲ್ಲಿ ‘ದಿ ಷಿಕಾಗೊ ಟೈಮ್ಸ್’ ‘ವಿವೇಕಾನಂದ ಒಬ್ಬ ಬ್ರಾಹ್ಮಣ ಸಂನ್ಯಾಸಿ. ಹಾರ್ವರ್ಡ್’ನ ಪ್ರಾಧ್ಯಾಪಕ ರೈಟ್ ಆತ ಜಗತ್ತಿನಲ್ಲಿರುವ ಅತ್ಯುತ್ತಮ ಸುಶಿಕ್ಷಿತ ವ್ಯಕ್ತಿಗಳಲ್ಲಿ ಒಬ್ಬ ಎಂದಿದ್ದಾರೆ ಎಂದು ಹೇಳಲಾಗುತ್ತಿದೆ’ ಎಂದು ಬರೆದಿದೆ. ‘ದಿ ಷಿಕಾಗೊ ಟೈಮ್ಸ್’ ಈ ಮಾಹಿತಿಯನ್ನು ಧರ್ಮ ಸಂಸತ್ತಿನ ಪದಾಧಿಕಾರಿಗಳಿಂದ ಪಡೆದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಈ ಹೇಳಿಕೆ ಸ್ವಾಮಿಗಳು ಅಮೆರಿಕದ ಎಲ್ಲ ಪ್ರಾಧ್ಯಾಪಕರ ಒಟ್ಟು ತಿಳಿವಳಿಕೆಗಿಂತ ಹೆಚ್ಚಿನದನ್ನು ಬಲ್ಲರು ಎನ್ನುವುದಿಲ್ಲ.
ಧರ್ಮ ಸಂಸತ್ತು ಮುಗಿದ ಏಳು ತಿಂಗಳಿನ ನಂತರ ‘ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಸ್ಕ್ರಿಪ್ಟ್’ ‘೪/೪/೧೮೯೪ ರ ಸಂಚಿಕೆಯಲ್ಲಿ ‘ಅವರ್ ಕಮಿಂಗ್ ಹಿಂದೂ ಗೆಸ್ಟ್’ ತಲೆಬರಹದ ಸುದ್ದಿಯಲ್ಲಿ ಮತ್ತೊಮ್ಮೆ ಇದೇ ಸಂಗತಿ ಪ್ರಸ್ತಾಪವಾಗಿದೆ. ಇದನ್ನು ೮/೮/೧೮೯೪ ‘ದಿ ಇಂಡಿಯನ್ ಮಿರರ್’ ಮರು ಪ್ರಕಟಿಸಿದೆ. ಅದರಲ್ಲಿ ‘ ಹಾರ್ವರ್ಡ್’ನ ಪ್ರಾಧ್ಯಾಪಕರೊಬ್ಬರು ‘ ಈ ವ್ಯಕ್ತಿ ನಮ್ಮ ಎಲ್ಲ ವಿದ್ವಾಂಸ ಪ್ರಾಧ್ಯಾಪಕರನ್ನು ಒಟ್ಟಿಗೆ ಸೇರಿಸಿದ್ದಕ್ಕಿಂತಲೂ ಹೆಚ್ಚಿನ ಜ್ಞಾನಿ’ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಚಿಂತಕರು , ಕ್ರಿಯಾಶೀಲರು , ಸುಧಾರಕರು ಸೇರಿದಂತೆ ಹಲವರಿಂದ ಪಡೆದ ಬೋಸ್ಟನ್ನ ಗಣ್ಯರನ್ನು ಪರಿಚಯಿಸುವ ಒಂದು ಡಜನ್ ಶಿಫಾರಸ್ಸು ಪತ್ರಗಳೊಂದಿಗೆ ಇಲ್ಲಿಗೆ ಬರುತ್ತಿದ್ದಾನೆ..’ ಎಂದು ಬರೆಯಿತು. ಪತ್ರಿಕೆಯ ಈ ಸುದ್ದಿಯನ್ನು ಗಮನಿಸಿದರೆ ಈ ಸುದ್ದಿಯನ್ನು ಸ್ವಾಮಿಗಳೇ ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಸ್ಕ್ರಿಪ್ಟ್’ಗೆ ನೀಡಿದ್ದಾರೆ. ಇಲ್ಲದಿದ್ದರೆ ಸ್ವಾಮಿಗಳು ಡಜನ್ ಶಿಫಾರಸ್ಸು ಪತ್ರಗಳನ್ನು ಹೊಂದಿರುವುದು ವರದಿಗಾರನಿಗೆ ತಿಳಿಯುವುದು ಸಾಧ್ಯವೇ ಇರಲಿಲ್ಲ, ಜುಲೈ ೧೮೯೪ ಕ್ಕಿಂತ ಮುಂಚೆ ಸ್ವಾಮಿಗಳಿಗೆ ಸಾರಾ ಬುಲ್ ಪರಿಚಯವಾಗಿರಲಿಲ್ಲ. ಹಾರ್ವರ್ಡ್ ವಿಶ್ವವಿದ್ಯಾಲಯದ ‘ಹಾರ್ವರ್ಡ್ ಕ್ರಿಮ್’ಸನ್’ ಪತ್ರಿಕೆಯ ೧೧/೫/೧೮೯೪ ಸಂಚಿಕೆಯಲ್ಲಿ ಸ್ವಾಮಿಗಳು ೧೬/೫/೧೮೯೪ ರಂದು ಜಾರ್ಜ್ ಹೆನ್ರಿ ರೈಟ್ ಸೆವೆರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾಡಲಿರುವ ಭಾಷಣದ ಸುದ್ದಿಯನ್ನು ತಿಳಿಸುತ್ತ ‘ …..ಆತ ಸುಶಿಕ್ಷಿತ , ತನ್ನ ಧರ್ಮದ ಬಗ್ಗೆ ತಿಳಿವಳಿಕೆ ಮತ್ತು ಅಪರೂಪದ ನಿರರ್ಗಳೆತೆಯ ಪ್ರತಿಭೆ ಹೊಂದಿರುವ ಆತ ಪಾಶ್ಚಾತ್ಯ ಕೇಳುಗರಿಗೆ ತನ್ನ ದೇಶ ಮತ್ತು ಜನರನ್ನು ಕುರಿತಾಗಿ ಮಾತನಾಡುತ್ತಾನೆ….’ ಎಂದು ತಿಳಿಸಲಾಗಿದೆ. ಈ ಪತ್ರಿಕೆಯಲ್ಲಿ ಬಂದಿರುವ ಹೇಳಿಕೆಗಳು ಭಾಷಣ ಆಯೋಜಿಸಿದ್ದ ಜಾನ್ ಹೆನ್ರಿ ರೈಟ್ ನೀಡಿರುವ ಮಾಹಿತಿಯೇ ಆಗಿದ್ದು ಇದರಲ್ಲಿ ಯಾವುದೇ ಅತಿಶಯಗಳಿಲ್ಲ. ಈ ಹೇಳಿಕೆ ಜಾನ್ ಹೆನ್ರಿ ರೈಟ್ ಸ್ವಾಮಿಗಳ ಬಗ್ಗೆ ಹೊಂದಿದ್ದ ಅಭಿಪ್ರಾಯವೆಂದು ಹೇಳಬಹುದು. ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಸ್ಕ್ರಿಪ್ಟ್ ೫/೯/೧೮೯೪ ರಂದು ‘ನಮ್ಮ ಎಲ್ಲ ಪ್ರಾಧ್ಯಾಪ್ಕರನ್ನು ಒಗ್ಗೂಡಿಸಿದ್ದಕ್ಕಿಂತಲೂ ಆತ ವಿದ್ವಾಂಸ’ ಎಂದು ರೈಟ್ ಹೇಳಿದ್ದಾರೆ ಎನ್ನುವ ಸುದ್ದಿ ಪ್ರಕಟವಾಯಿತು. ಒಂದು ವರ್ಷದ ಹಿಂದೆ ಸ್ವಾಮಿಗಳ ಬಗ್ಗೆ ರೈಟ್ ತಮ್ಮ ಅಭಿಪ್ರಾಯ ತಿಳಿಸಿದ್ದರು. ಮತ್ತೊಮ್ಮೆ ಅವರು ಇನ್ನೊಂದು ಹೇಳಿಕೆ ಕೊಡುವ ಅಗತ್ಯವಿರಲಿಲ್ಲ. ಸಾರಾ ಬುಲ್ ಅಥವಾ ಸ್ವಾಮಿಗಳು ಒಂದು ವರ್ಷದ ಹಿಂದೆ ಜಾನ್ ಹೆನ್ರಿ ರೈಟ್ ನೀಡಿದ್ದ ಹೇಳಿಕೆಯನ್ನು ಮಾರ್ಪಡಿಸಿ ಬೋಸ್ಟನ್ ಈವೆನಿಂಗ್ ಪತ್ರಿಕೆಗೆ ತಿಳಿಸಿದ್ದರು ಎಂದು ಊಹಿಸಬಹುದು.
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ )
‘ದಿ ಲೈಫ್-೧೯೧೪ ‘ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಾನ್ ಹೆನ್ರಿ ರೈಟ್ ಧರ್ಮ ಸಂಸತ್ತಿನ ಪದಾಧಿಕಾರಿಗಳಿಗೆ ಸ್ವಾಮಿಗಳನ್ನು ಪರಿಚಯಿಸಿ ಪತ್ರವೊಂದನ್ನು ನೀಡಿದರು. ಆ ಪತ್ರದಲ್ಲಿ ಅವರು ‘ ಈ ವ್ಯಕ್ತಿ ನಮ್ಮ ಎಲ್ಲ ವಿದ್ವಾಂಸ ಪ್ರಾಧ್ಯಾಪಕರನ್ನು ಒಟ್ಟಿಗೆ ಸೇರಿಸಿದ್ದಕ್ಕಿಂತಲೂ ಹೆಚ್ಚಿನ ಜ್ಞಾನಿ ‘ ಎಂದು ತಿಳಿಸಿದ್ದರು ಎಂದು ‘ದಿ ಲೈಪ್-೧೯೧೪’ ದಾಖಲಿಸಿದೆ. ಈವೆರೆಗೆ ಜಾನ್ ಹೆನ್ರಿ ರೈಟ್ ಬರೆದ ಮೂಲ ಪತ್ರ ಬೆಳಕಿಗೆ ಬಂದಿಲ್ಲ. ಜಾನ್ ಹೆನ್ರಿ ರೈಟ್ ಹೆಂಡತಿ ಮೇರಿ ಟಪ್ಪನ್ ರೈಟ್ ಸ್ವಾಮಿಗಳ ಬಗ್ಗೆ ಹೊಂದಿದ್ದ ಅಭಿಪ್ರಾಯದಲ್ಲಿ ಇಂತಹ ಉತ್ಪ್ರೇಕ್ಷೆ ಕಂಡುಬರುವುದಿಲ್ಲ. ‘ಆಕೆ ‘ಆತ ವಿದ್ಯಾವಂತ ಸಜ್ಜನ , ಬೇರೆಯವರಷ್ಟೇ ತಿಳಿದಿದ್ದಾನೆ’ ಎಂದು ಬರೆದಿದ್ದಾಳೆ. ಧರ್ಮ ಸಂಸತ್ತು ಪ್ರಾರಂಭವಾದ ಮರುದಿನ ೧೨/೯/೧೮೯೩ ರಂದು ನೀಡಿದ ಸುದ್ದಿಯಲ್ಲಿ ‘ದಿ ಷಿಕಾಗೊ ಟೈಮ್ಸ್’ ‘ವಿವೇಕಾನಂದ ಒಬ್ಬ ಬ್ರಾಹ್ಮಣ ಸಂನ್ಯಾಸಿ. ಹಾರ್ವರ್ಡ್’ನ ಪ್ರಾಧ್ಯಾಪಕ ರೈಟ್ ಆತ ಜಗತ್ತಿನಲ್ಲಿರುವ ಅತ್ಯುತ್ತಮ ಸುಶಿಕ್ಷಿತ ವ್ಯಕ್ತಿಗಳಲ್ಲಿ ಒಬ್ಬ ಎಂದಿದ್ದಾರೆ ಎಂದು ಹೇಳಲಾಗುತ್ತಿದೆ’ ಎಂದು ಬರೆದಿದೆ. ‘ದಿ ಷಿಕಾಗೊ ಟೈಮ್ಸ್’ ಈ ಮಾಹಿತಿಯನ್ನು ಧರ್ಮ ಸಂಸತ್ತಿನ ಪದಾಧಿಕಾರಿಗಳಿಂದ ಪಡೆದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಈ ಹೇಳಿಕೆ ಸ್ವಾಮಿಗಳು ಅಮೆರಿಕದ ಎಲ್ಲ ಪ್ರಾಧ್ಯಾಪಕರ ಒಟ್ಟು ತಿಳಿವಳಿಕೆಗಿಂತ ಹೆಚ್ಚಿನದನ್ನು ಬಲ್ಲರು ಎನ್ನುವುದಿಲ್ಲ.
ಧರ್ಮ ಸಂಸತ್ತು ಮುಗಿದ ಏಳು ತಿಂಗಳಿನ ನಂತರ ‘ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಸ್ಕ್ರಿಪ್ಟ್’ ‘೪/೪/೧೮೯೪ ರ ಸಂಚಿಕೆಯಲ್ಲಿ ‘ಅವರ್ ಕಮಿಂಗ್ ಹಿಂದೂ ಗೆಸ್ಟ್’ ತಲೆಬರಹದ ಸುದ್ದಿಯಲ್ಲಿ ಮತ್ತೊಮ್ಮೆ ಇದೇ ಸಂಗತಿ ಪ್ರಸ್ತಾಪವಾಗಿದೆ. ಇದನ್ನು ೮/೮/೧೮೯೪ ‘ದಿ ಇಂಡಿಯನ್ ಮಿರರ್’ ಮರು ಪ್ರಕಟಿಸಿದೆ. ಅದರಲ್ಲಿ ‘ ಹಾರ್ವರ್ಡ್’ನ ಪ್ರಾಧ್ಯಾಪಕರೊಬ್ಬರು ‘ ಈ ವ್ಯಕ್ತಿ ನಮ್ಮ ಎಲ್ಲ ವಿದ್ವಾಂಸ ಪ್ರಾಧ್ಯಾಪಕರನ್ನು ಒಟ್ಟಿಗೆ ಸೇರಿಸಿದ್ದಕ್ಕಿಂತಲೂ ಹೆಚ್ಚಿನ ಜ್ಞಾನಿ’ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಚಿಂತಕರು , ಕ್ರಿಯಾಶೀಲರು , ಸುಧಾರಕರು ಸೇರಿದಂತೆ ಹಲವರಿಂದ ಪಡೆದ ಬೋಸ್ಟನ್ನ ಗಣ್ಯರನ್ನು ಪರಿಚಯಿಸುವ ಒಂದು ಡಜನ್ ಶಿಫಾರಸ್ಸು ಪತ್ರಗಳೊಂದಿಗೆ ಇಲ್ಲಿಗೆ ಬರುತ್ತಿದ್ದಾನೆ..’ ಎಂದು ಬರೆಯಿತು. ಪತ್ರಿಕೆಯ ಈ ಸುದ್ದಿಯನ್ನು ಗಮನಿಸಿದರೆ ಈ ಸುದ್ದಿಯನ್ನು ಸ್ವಾಮಿಗಳೇ ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಸ್ಕ್ರಿಪ್ಟ್’ಗೆ ನೀಡಿದ್ದಾರೆ. ಇಲ್ಲದಿದ್ದರೆ ಸ್ವಾಮಿಗಳು ಡಜನ್ ಶಿಫಾರಸ್ಸು ಪತ್ರಗಳನ್ನು ಹೊಂದಿರುವುದು ವರದಿಗಾರನಿಗೆ ತಿಳಿಯುವುದು ಸಾಧ್ಯವೇ ಇರಲಿಲ್ಲ, ಜುಲೈ ೧೮೯೪ ಕ್ಕಿಂತ ಮುಂಚೆ ಸ್ವಾಮಿಗಳಿಗೆ ಸಾರಾ ಬುಲ್ ಪರಿಚಯವಾಗಿರಲಿಲ್ಲ. ಹಾರ್ವರ್ಡ್ ವಿಶ್ವವಿದ್ಯಾಲಯದ ‘ಹಾರ್ವರ್ಡ್ ಕ್ರಿಮ್’ಸನ್’ ಪತ್ರಿಕೆಯ ೧೧/೫/೧೮೯೪ ಸಂಚಿಕೆಯಲ್ಲಿ ಸ್ವಾಮಿಗಳು ೧೬/೫/೧೮೯೪ ರಂದು ಜಾರ್ಜ್ ಹೆನ್ರಿ ರೈಟ್ ಸೆವೆರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾಡಲಿರುವ ಭಾಷಣದ ಸುದ್ದಿಯನ್ನು ತಿಳಿಸುತ್ತ ‘ …..ಆತ ಸುಶಿಕ್ಷಿತ , ತನ್ನ ಧರ್ಮದ ಬಗ್ಗೆ ತಿಳಿವಳಿಕೆ ಮತ್ತು ಅಪರೂಪದ ನಿರರ್ಗಳೆತೆಯ ಪ್ರತಿಭೆ ಹೊಂದಿರುವ ಆತ ಪಾಶ್ಚಾತ್ಯ ಕೇಳುಗರಿಗೆ ತನ್ನ ದೇಶ ಮತ್ತು ಜನರನ್ನು ಕುರಿತಾಗಿ ಮಾತನಾಡುತ್ತಾನೆ….’ ಎಂದು ತಿಳಿಸಲಾಗಿದೆ. ಈ ಪತ್ರಿಕೆಯಲ್ಲಿ ಬಂದಿರುವ ಹೇಳಿಕೆಗಳು ಭಾಷಣ ಆಯೋಜಿಸಿದ್ದ ಜಾನ್ ಹೆನ್ರಿ ರೈಟ್ ನೀಡಿರುವ ಮಾಹಿತಿಯೇ ಆಗಿದ್ದು ಇದರಲ್ಲಿ ಯಾವುದೇ ಅತಿಶಯಗಳಿಲ್ಲ. ಈ ಹೇಳಿಕೆ ಜಾನ್ ಹೆನ್ರಿ ರೈಟ್ ಸ್ವಾಮಿಗಳ ಬಗ್ಗೆ ಹೊಂದಿದ್ದ ಅಭಿಪ್ರಾಯವೆಂದು ಹೇಳಬಹುದು. ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಸ್ಕ್ರಿಪ್ಟ್ ೫/೯/೧೮೯೪ ರಂದು ‘ನಮ್ಮ ಎಲ್ಲ ಪ್ರಾಧ್ಯಾಪ್ಕರನ್ನು ಒಗ್ಗೂಡಿಸಿದ್ದಕ್ಕಿಂತಲೂ ಆತ ವಿದ್ವಾಂಸ’ ಎಂದು ರೈಟ್ ಹೇಳಿದ್ದಾರೆ ಎನ್ನುವ ಸುದ್ದಿ ಪ್ರಕಟವಾಯಿತು. ಒಂದು ವರ್ಷದ ಹಿಂದೆ ಸ್ವಾಮಿಗಳ ಬಗ್ಗೆ ರೈಟ್ ತಮ್ಮ ಅಭಿಪ್ರಾಯ ತಿಳಿಸಿದ್ದರು. ಮತ್ತೊಮ್ಮೆ ಅವರು ಇನ್ನೊಂದು ಹೇಳಿಕೆ ಕೊಡುವ ಅಗತ್ಯವಿರಲಿಲ್ಲ. ಸಾರಾ ಬುಲ್ ಅಥವಾ ಸ್ವಾಮಿಗಳು ಒಂದು ವರ್ಷದ ಹಿಂದೆ ಜಾನ್ ಹೆನ್ರಿ ರೈಟ್ ನೀಡಿದ್ದ ಹೇಳಿಕೆಯನ್ನು ಮಾರ್ಪಡಿಸಿ ಬೋಸ್ಟನ್ ಈವೆನಿಂಗ್ ಪತ್ರಿಕೆಗೆ ತಿಳಿಸಿದ್ದರು ಎಂದು ಊಹಿಸಬಹುದು.
Comment Box is loading comments...