(ಸ್ವಾಮಿ ವಿವೇಕಾನಂದ : ಕಪ್ಪು -ಬಿಳುಪು ಪುಸ್ತಕದ ಆಯ್ದ ಭಾಗ)
೧೮೮೭ ರಿಂದ ೧೮೯೩ ಜೂನ್ ತಿಂಗಳಿನವರೆಗೆ ಸ್ವಾಮಿಗಳು ಒಟ್ಟು ಆರುವರೆ ವರ್ಷಗಳ ಕಾಲ ಪರಿವ್ರಾಜಕ ಜೀವನ ನಡೆಸಿ ಭಾರತ ಸುತ್ತಿದರು. ಈ ಸುದೀರ್ಘ ಅವಧಿಯಲ್ಲಿ ೧೮೮೮ (೪ ಪತ್ರ) , ೧೮೮೯ (೧೬ ಪತ್ರ) , ೧೮೯೦ (೩೧ ಪತ್ರ) , ೧೮೯೧ (೩ ಪತ್ರ ) , ೧೮೯೨ (೪ ಪತ್ರ) ಒಟ್ಟು ೫೮ ಪತ್ರಗಳನ್ನು ಬರೆದರು. ಇದರಲ್ಲಿ ಪ್ರಮದದಾಸ ಮಿತ್ರರಿಗೆ ೪ (೧೮೮೮) , ೧೩ (೧೮೮೯) ಮತ್ತು ೧೪ (೧೮೯೦) ಒಟ್ಟು ೩೧ ಪತ್ರಗಳನ್ನು ( ೫೩.೪೪ % ) ಬರೆಯಲಾಗಿದೆ. ಘಾಜಿಪುರದಿಂದ ಅಖಂಡಾನಂದರಿಗೆ ಎರಡು ( ೧/೩/೧೮೯೦ , ದಿನಾಂಕ ಗೊತ್ತಿಲ್ಲ) , ಸದಾನಂದರಿಗೆ ಒಂದು (೧೪/೨/೧೮೯೦) ಮತ್ತು ಕಲ್ಕತ್ತಾದಿಂದ ಶಾರದಾನಂದರಿಗೆ ಎರಡು ( ೬/೭/೧೮೯೦ , ೧೫/೭/೧೮೯೦) ಒಟ್ಟು ಐದು ಪತ್ರಗಳನ್ನು ಮಾತ್ರ ಬರೆದರು. ಅಲೆಮಾರಿ ಜೀವನದ ಮೊದಲ ಮೂರುವರೆ ವರ್ಷ ಅವರು ಯಾವ ಗುರುಭಾಯಿಯನ್ನೂ ಸಂಪರ್ಕಿಸಲಿಲ್ಲ. ಕೃತಿಶ್ರೇಣಿ ಸ್ವಾಮಿಗಳು ರಾಮಕೃಷ್ಣಾನಂದರಿಗೆ ೫/೧/೧೮೯೦ ರಂದು ಬರೆದ ಮೂರು ಸಾಲಿನ ಪತ್ರವೊಂದನ್ನು ಪ್ರಕಟಿಸಿದೆ. ಪತ್ರದಲ್ಲಿರುವ ವಿಷಯ ಗಮನಿಸಿದರೆ ಈ ಪತ್ರ ಈ ಅವಧಿಯದಲ್ಲವೆಂದು ತೋರುತ್ತದೆ. ಘಾಜಿಪುರದಲ್ಲಿ ಸ್ವಾಮಿಗಳು ಪವಹಾರಿಬಾಬಾ ಸೋದರ ಮತ್ತು ಗಗನ ಬಾಬುಗಳ ಅತಿಥಿಗಳಾಗಿದ್ದರು. ತಮ್ಮ ಗುರು ರಾಮಕೃಷ್ಣರಿಗೆ ಗೊತ್ತಿಲ್ಲದ ಯೋಗವನ್ನು ಪವಹಾರಿ ಬಾಬಾರಿಂದ ಕಲಿಯಲು ಬಯಸಿದ್ದರು. ಅಖಂಡಾನಂದರೊಂದಿಗೆ ನೇಪಾಳ ,ಟಿಬೆಟ್ ಪ್ರವಾಸ ಮಾಡಬೇಕೆಂದು ಇಚ್ಛಿಸಿ ಅವರಿಗೆ ತಮ್ಮ ಘಾಜಿಪುರದ ವಿಳಾಸ ನೀಡುವುದೇ ಈ ಪತ್ರಗಳ ಮುಖ್ಯ ಉದ್ದೇಶವಾಗಿದ್ದಿತು.
ಶಾರದಾನಂದರಿಗೆ ೬/೭/೧೮೯೦ ರಂದು ಬಾಗಬಜಾರಿನಿಂದ ಬರೆದ ಪತ್ರದಿಂದ ಸ್ವಾಮಿಗಳಿಗೆ ಬ್ರಹ್ಮಾನಂದರೊಂದಿಗೆ ಸಂಪರ್ಕವಿದ್ದುದು ತಿಳಿಯುತ್ತದೆ. ಈ ಪತ್ರದಲ್ಲಿ ‘ ಕಲ್ಕತ್ತೆಗೆ ಬರುವ ವಿಚಾರವಾಗಿ ನೀವು ಅವಸರಪಡಬೇಕಾಗಿಲ್ಲ. ಈವರೆಗೆ ಅಲೆದದ್ದಾಯಿತು. ಆದರೇನು ? ಮಾಡಬೇಕಾಗಿರುವ ಮತ್ತೊಂದು ಕೆಲಸವೆಂದರೆ ಒಂದೇ ಸ್ಥಳದಲ್ಲಿ ನೆಲೆನಿಂತು ಧ್ಯಾನ ಮಾಡುವುದು. ಯಾವ ಯುಗದಲ್ಲಾದರು ಎಲ್ಲೋ ಅಲ್ಪ ಮಂದಿ ಜ್ಞಾನವನ್ನು ಪಡೆಯುತ್ತಾರೆ ಎನ್ನುವುದು ನನ್ನ ಅಭಿಪ್ರಾಯ. ಅದಕ್ಕಾಗಿಯೇ ಸಾಧನೆ , ಸಾಧನೆ. ಇದನ್ನು ನಾವು ಸಾಯುವವರೆಗೂ ಮಾಡಬೇಕು……’ ಎಂದಿದ್ದಾರೆ. ೧೫/೭/೧೮೯೦ ರಂದು ಬರೆದ ಪತ್ರದಲ್ಲಿ ದಿವಂಗತ ಮಹೀಂದ್ರನಾಥ ಮುಖರ್ಜಿಯವರ ಹೆಂಡತಿ ರಾಮಕೃಷ್ಣರ ಮಠ ಕಟ್ಟಲು ಯತ್ನಿಸುತ್ತಿರುವ , ಸಾಯುವ ಮೊದಲು ಸುರೇಂದ್ರನಾಥ ಬ್ಯಾನರ್ಜಿ ರಾಮಕೃಷ್ಣರ ಶಿಷ್ಯರಿಗೆ ೧೦೦೦ ರೂ ದಾನ ಮಾಡಿರುವ ಬಗ್ಗೆ ತಿಳಿಸಿ ‘ ಇಲ್ಲಿಯ ಸಂಘದ ಬಗ್ಗೆ ನಿನ್ನದೇ ಅಭಿಪ್ರಾಯ ಹೊಂದಿರುವುದು ಸಹಜವಾಗಿದೆ. ರಮಣೀಯ ಮತ್ತು ಸುಭಿಕ್ಷ ದೇಶಗಳನ್ನು ನಾನು ಹುಡುಕುವೆ. ಅದೇ ನನಗೆ ಸಾಕು . ಸಂಘ ನನಗೆ ದೊಡ್ದ ವಿಷಯವಲ್ಲ ಅಥವಾ ನನಗೆ ಅದರ ಆವಶ್ಯಕತೆಯಿಲ್ಲ’ ‘ ಎಂದಿದ್ದಾರೆ. ಈ ಪತ್ರಗಳು ಸ್ವಾಮಿಗಳು ಭಾರತವನ್ನು ಅರಿಯಲು ಅಲೆಮಾರಿಗಳಾದರು ಎನ್ನುವ ಜನಪ್ರಿಯ ನಂಬಿಕೆಯನ್ನು ಪ್ರಶ್ನಿಸುತ್ತವೆ. ಸ್ವಾಮಿಗಳು ಪರಿವ್ರಾಜಕ ದಿನಗಳಲ್ಲಿ ಹೇಗೆ ಪ್ರಯಾಣಿಸುತ್ತಿದ್ದರು , ಎಲ್ಲಿ ಉಳಿದುಕೊಳ್ಳುತ್ತಿದ್ದರು , ಹಸಿವನ್ನು ಹೇಗೆ ಹಿಂಗಿಸಿಕೊಳ್ಳುತ್ತಿದ್ದರು ಎನ್ನುವುದನ್ನು ಕೋಷ್ಟಕ-೧ ರಲ್ಲಿ ನೋಡಬಹುದು. ಇಲ್ಲಿ ದಕ್ಕುವ ಮಾಹಿತಿ ಸ್ವಾಮಿಗಳ ಪರಿವ್ರಾಜಕ ದಿನಗಳ ಮೇಲೆ ಈಗಿರುವ ನಂಬಿಕೆಗಳಿಗಿಂತ ಬೇರೆಯದೇ ಆದ ನೋಟ ಒದಗಿಸುತ್ತದೆ.
ಸ್ವಾಮಿಗಳು ಖ್ಯಾತರಾಗುವುದಕ್ಕೆ ಮೊದಲು ಮತ್ತು ನಂತರ ತಮಗೆ ಪರಿಚಿತರಾದ , ಸಂಪರ್ಕವನ್ನು ಬೆಳೆಸಲು ಅರ್ಹರೆನಿಸಿದ ಎಲ್ಲರಿಗೂ ಪತ್ರಗಳನ್ನು ಬರೆದಿದ್ದಾರೆ. ಈಗ ಲಭ್ಯವಿರುವಂತೆ ಸ್ವಾಮಿಗಳು ೧೨/೮/೧೮೮೮ ರಂದು ಪ್ರಮದದಾಸ ಮಿತ್ರರಿಗೆ ಬರೆದ ಮೊದಲ ಪತ್ರದಿಂದ ಪ್ರಾರಂಭಿಸಿ ೨೧/೬/೧೯೦೨ ರಂದು ಕ್ರಿಸ್ಟೈನಾ ಗ್ರೀನ್’ಸ್ಟೈಡಲ್’ಗೆ ಬರೆದ ಕೊನೆಯ ಪತ್ರ ಸೇರಿಸಿ ಒಟ್ಟು ೭೭೧ ಪತ್ರಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಮುಖ್ಯವೆನಿಸಿದ ವ್ಯಕ್ತಿವಾರು ವಿತರಣೆ ಹೀಗಿದೆ. (ಕೋಷ್ಟಕ-೨) .
ಸ್ವಾಮಿಗಳಿಂದ ಒಟ್ಟು ೪೦೧ (೫೨.೦೧ %) ಪತ್ರಗಳನ್ನು ಪಡೆದು ಅಮೆರಿಕದ ೧೪ ಹೆಂಗಸರು ಮೊದಲ ಸಾಲಿನಲ್ಲಿದ್ದರೆ , ೨೧೨ (೨೭.೪೯% ) ಪತ್ರಗಳನ್ನು ಪಡೆದ ಗುರುಭಾಯಿಗಳು , ಶಿಷ್ಯರು , ಹಿತೈಷಿಗಳು ಅವರ ಹಿಂದೆ ಉಳಿದಿದ್ದಾರೆ. ಇಂಗ್ಲೆಂಡ್’ನಲ್ಲಿ ಸ್ವಾಮಿಗಳ ಉಪನ್ಯಾಸಗಳನ್ನು ವ್ಯವಸ್ಥೆ ಮಾಡಿ ಒಂದು ರೀತಿಯಲ್ಲಿ ಶಿಷ್ಯನಂತಿದ್ದ ಆದರೆ ಸ್ವಾಮಿಗಳ ಜೀವನ ಶೈಲಿಯನ್ನು ತೀವ್ರವಾಗಿ ಪ್ರಶ್ನಿಸಿದ್ದ ಎಡ್ವರ್ಡ್ ಸ್ಟರ್ಡಿ-೩.೬೩ % (೨೮) ಸ್ವಾಮಿಗಳಿಂದ ಹೆಚ್ಚು ಪತ್ರಗಳನ್ನು ಪಡೆದವರಲ್ಲಿ ಒಬ್ಬ. ಸ್ವಾಮಿಗಳು ಪ್ರಮದದಾಸ ಮಿತ್ರರಿಗೆ ಬರೆದ ೩೨ (೪.೧೫ %) ಪತ್ರಗಳಲ್ಲಿ ಒಂದನ್ನು ಹೊರತಾಗಿ ಉಳಿದವೆಲ್ಲವೂ ಅಮೆರಿಕಕ್ಕೆ ಹೋಗುವ ಮೊದಲು ಅವರ ಮನಸ್ಸು ಪೂರ್ವಾಶ್ರಮದ ಕುಟುಂಬ ಮತ್ತು ಸಂನ್ಯಾಸದ ಆದರ್ಶಗಳ ನಡುವೆ ತೂಗುಯ್ಯಾಲೆಯಾಡುತ್ತಿರುವಾಗ ಬರೆದಂತಹವು. ಕಾಥೆವಾಡದ ದಿವಾನರಾಗಿದ್ದ ಹರಿದಾಸ ವಿಹಾರಿದಾಸ ದೇಸಾಯಿ -೧.೬೯ % (೧೩)- ಮತ್ತು ಲಾಲಾ ಬದ್ರಿ ಷಾ-೦.೫೨ % (೪) , ಲಾಲಾ ಗೋವಿಂದ ಸಹಾಯ್ -೦.೬೫ % (೫) , ಬಲರಾಮ ಬೋಸ್-೧.೩ % (೧೦) ಇವರಿಗೆ ಬರೆದ ಪತ್ರಗಳ ಉದ್ದೇಶ ಬೇರೆಯೇ ಆಗಿದ್ದಿತು. ಸ್ವಾಮಿಗಳಿಂದ ಪತ್ರ ಪಡೆದ ಅಮೆರಿಕದ ಗಂಡಸರೆಂದರೆ ಲ್ಯಾಂಡ್ಸ್’ಬರ್ಗ್-೦.೩೯ % (೩) , ಜಾನ್ ಜೆ. ಬ್ಯಾಗ್ಲಿ -೦.೧೩ % (೧) , ಜಾನ್ ಫಾಕ್ಸ್-೦.೧೩ % (೧) , ಜಾನ್ ಹೆನ್ರಿ ರೈಟ್-೧.೧೭ % (೯) , ಪೌಲ್ ಕ್ಯಾರಸ್-೦.೨ ೬ % (೨) , ಫ್ರಾಂಕಿನ್ಸನ್-೦.೧೩ % (೧) , ಫ್ರಾನ್ಸಿಸ್ ಲೆಗೆಟ್-೮ (೧.೦೪ %) ಎಂದರೆ ಒಟ್ಟು ೨೫ (೩.೨೫ %) ಮಾತ್ರ.
೧೯ ನೇ ಶತಮಾನದ ಕೊನೆಯ ದಶಕದ ವೇಳೆಗೆ ಅಮೆರಿಕದ ಹೆಂಗಸರಿಗೆ ಸಾಕಷ್ಟು ಉತ್ತಮವಾದ ಶಾಲಾ ಶಿಕ್ಷಣ ದಕ್ಕಿ ವಿದ್ಯಾವತಿಯರಾಗಿದ್ದರು. ಆದರೆ ಆ ಕಾಲದಲ್ಲಿ ಅವರು ವ್ಯಾಪಾರ ವಹಿವಾಟುಗಳಲ್ಲಿ ಭಾಗವಹಿಸುವಂತಿರಲಿಲ್ಲ, ರಾಜಕೀಯದಲ್ಲಿ ಪ್ರವೇಶವಿರಲಿಲ್ಲ, ಮತದಾನದ ಹಕ್ಕಿರಲಿಲ್ಲ. ಹೆಂಗಸರು ಮತದಾನಕ್ಕೆ ಅರ್ಹರೇ ಅಲ್ಲವೇ ಎನ್ನುವ ಚರ್ಚೆ ಸಾಗಿದ್ದಿತು. ಇಂತಹ ಕಾಲಾವಧಿಯಲ್ಲಿ ಮಧ್ಯಮ ಮತ್ತು ಶ್ರೀಮಂತ ವರ್ಗದ ಹೆಂಗಸರಿಗೆ ಮನೆಯಲ್ಲಿ ಯಾವುದೇ ಕೆಲಸವಿಲ್ಲದೆ ಜಡವಾಗಿರುವುದು ಅಸಹನೀಯವೆನಿಸಿದ್ದಿತು. ಅದಕ್ಕಾಗಿ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಯತ್ನಿಸುತ್ತಿದ್ದರು. ಹೊಸ ವ್ಯಕ್ತಿ , ಆಲೋಚನೆ , ಧರ್ಮ , ಕಲೆ ಮುಂತಾದ ವಿಷಯಗಳತ್ತ ಗಮನ ಹರಿಸಲು ದುಡಿಯುವ ಒತ್ತಡಕ್ಕೆ ಸಿಲುಕಿರುವ ಅಮೆರಿಕದ ಗಂಡಸರಿಗೆ ಸಾದ್ಯವಿರಲಿಲ್ಲ. ಆದರೆ ಅಲ್ಲಿನ ಮಧ್ಯಮ ಮತ್ತು ಶ್ರೀಮಂತ ವರ್ಗದ ಹೆಂಗಸರಿಗೆ ಇವು ಸಹಜ , ಅನಿವಾರ್ಯ ಆಸಕ್ತಿಗಳೆನಿಸಿದ್ದವು. ಶ್ರೀಮತಿ ಸಾರಾ ಬುಲ್ , ಶ್ರೀಮತಿ ಜೆ.ಜೆ ಬ್ಯಾಗ್ಲಿ , ಮಿಸ್ ಸಾರಾ ಫಾರ್ಮರ್ , ಮಿಸ್ ಮೇರಿ ಡಚೆಸ್ , ಶ್ರೀಮತಿ ಬೆಟ್ಟಿ ಸ್ಟರ್ಜಿಸ್ ಮತ್ತು ಆಕೆಯ ಸೋದರಿ ಜೊಸೆಫಿನ್ ಮೆಕ್ಲಿಯಾಡ್ , ಮಿಸ್ ಸಾರಾ ಎಲೆನ್ ವಾಲ್ಡೊ , ಶ್ರೀಮತಿ ಮೇರಿ ಫುಂಕೆ ಮುಂತಾದ ಹೆಂಗಸರು ಸ್ವಾಮಿಗಳ ಬೋಧನೆಗಳತ್ತ ಆಕರ್ಷಿತರಾಗಲು , ಅವರಿಗೆ ಬೆಂಬಲ ಕೊಡಲು ಅವರ ಇದೇ ಮುಖ್ಯ ಕಾರಣವಾಗಿದ್ದಿತು. ಬಡತನದ ಬೇಗೆಯಲ್ಲಿದ್ದ ಕ್ರಿಸ್ಟೈನಾ ಗ್ರೀನ್’ಸ್ಟೈಡಲ್ ಮಾತ್ರ ಇದಕ್ಕೊಂದು ಅಪವಾದ. ಯಾವುದೇ ಸಮಾಜದಲ್ಲಿ ಕಲಾವಿದರು ಭಾವುಕರಾಗಿರುತ್ತಾರೆ. ವಾಸ್ತವ ಸ್ಥಿತಿಗಳಿಗಿಂತ ಅನಿಸಿಕೆಗಳಿಗೆ ಬೇಗ ಮಾರುಹೋಗುತ್ತಾರೆ. ಸ್ವಾಮಿಗಳ ಪ್ರಭಾವಕ್ಕೆ ಒಳಗಾಗಿದ್ದ ಒಪೆರಾ ಹಾಡುಗಾರ್ತಿ ಎಮ್ಮಾ ಥರ್ಸ್’ಬಿ , ನಟಿ ಸಾರಾ ಬರ್ನ್’ಹಾರ್ಡ್ಟ್ , ಹಾಡುಗಾರ್ತಿ , ನಟಿ ಎಮಾ ಕಾಲ್ವೆ , ಶಿಲ್ಪಿ ಅಗಸ್ಟನ್ ರೊಡಿನ್ ಈ ಗುಂಪಿಗೆ ಸೇರಿದವರು.
ಸ್ವಾಮಿಗಳು ಷಿಕಾಗೊಧರ್ಮ ಸಂಸತ್ತಿನಲ್ಲಿ ಭಾಗವಹಿಸಲು ಪರಿಚಯ ಪತ್ರ ಕೊಟ್ಟವರು ಜಾನ್ ಹೆನ್ರಿ ರೈಟ್ , ಷಿಕಾಗೊದಲ್ಲಿ ಅವರಿಗೆ ಆಶ್ರಯ ನೀಡಿದವರು ಜಾರ್ಜ್ ಹೇಲ್. ಈ ಹೇಲ್ ದಂಪತಿಗಳಿಗೆ ಮೇರಿ ಮತ್ತು ಇಸಾಬೆಲ್ಲಾ ಎನ್ನುವ ಇಬ್ಬರು ಮಕ್ಕಳು. ಇವರೊಂದಿಗೆ ಸೋದರ ಸೊಸೆಯರಾದ ಹ್ಯಾರಿಯೆಟ್ ಮತ್ತು ಇಸಾಬೆಲ್ಲಾ ಮೆಕೆಂಡ್ಲಿ ಸೋದರಿಯರು. ಇವರನ್ನು ಸ್ವಾಮಿಗಳು ತಂಗಿಯರೆಂದೇ ಪರಿಗಣಿಸಿದ್ದರು. ಸ್ವಾಮಿಗಳಿಗಿಂತ ಹದಿನೈದು ವರ್ಷ ದೊಡ್ದವಳಾದ ಆಗರ್ಭ ಶ್ರೀಮಂತೆ ಸಾರಾ ಬುಲ್ ಸ್ವಾಮಿಗಳ ಪೋಷಕಳು, ತಾಯಿ, ಸ್ಥಾನದಲ್ಲಿದ್ದಾಕೆ-ಧೀರ ಮಾತಾ. ಶ್ರೀಮಂತ ಫ್ರಾನ್ಸಿಸ್ ಲೆಗ್ಗಟ್’ನನ್ನು ಮದುವೆಯಾಗಿ ಸಂಪತ್ತಿನಲ್ಲಿ ಮುಳುಗೇಳತ್ತಿದ್ದ ಬೆಟ್ಟಿ ಸ್ಟರ್ಜಿಸ್. ಈಕೆಯ ಮದುವೆಯಾಗದ ತಂಗಿ ಸ್ವಾಮಿಗಳಿಗಿಂತ ಐದು ವರ್ಷ ಹಿರಿಯಳಾದ ಮಿಸ್ ಜೊಸೆಫಿನ್ ಮೆಕ್ಲಿಯಾಡ್, ಆರು ಸೋದರಿಯರ ಬಡ ಕುಟುಂಬದ ಹಿರಿಯಕ್ಕಳಾಗಿದ್ದ ಕ್ರಿಸ್ಟೈನಾ ಗ್ರೀ’ನ್’ ಸ್ಟೈಡಲ್. ಇವರಿಗೆ ಮತ್ತು ಇವರಂತಹವರಿಗೆ ಸ್ವಾಮಿಗಳು ಹೇಳುತ್ತಿದ್ದ ಪ್ರತಿಯೊಂದು ವಿಷಯವೂ ಹೊಸತು ಮತ್ತು ಅದ್ಭುತ ಎಂದು ಭಾಸವಾಗುತ್ತಿದ್ದಿತು. ಅವರು ಸ್ವಾಮಿಗಳನ್ನು ಪ್ರಶ್ನಿಸುವುದು , ಕೆಣಕುವುದು ಮಾಡುತ್ತಿರಲಿಲ್ಲ. ಸ್ವಾಮಿಗಳಿಗೆ ಬೇಕಾದ ವಸತಿ , ಊಟ , ವಿಶ್ರಾಂತಿ , ಪ್ರಚಾರ , ಬೆಂಬಲ , ಹಣ ಸಹಾಯ ಎಲ್ಲವನ್ನೂ ಇವರೇ ಮಾಡುತ್ತಿದ್ದರು. ಸ್ವಾಮಿಗಳು ರಾಮಕೃಷ್ಣ ಮಠ ಕಟ್ಟಲು ಪಡೆದ ಆರ್ಥಿಕ ನೆರವಿನ ಮೂಲದಲ್ಲಿ ಸಾರಾ ಬುಲ್ ಮೊದಲ ಸ್ಥಾನದಲ್ಲಿದ್ದಳು. ಆದ್ದರಿಂದ ಸ್ವಾಮಿಗಳು ಅತಿ ಹೆಚ್ಚಿನ ಪತ್ರಗಳನ್ನು ಬರೆದಿದ್ದು ಈಕೆಗೆ. ಸ್ವಾಮಿಗಳು ಇವರಿಗೆ ಬರೆದ ಪತ್ರಗಳಲ್ಲಿ ತಮ್ಮ ಪ್ರಯಾಣ , ಪ್ರವಾಸ , ನಿವಾಸ , ಹಣ ಗಳಿಕೆ , ಸುದ್ದಿ , ಸೆಣಸಾಟಗಳಂತಹ ಸಾಮಾನ್ಯ ಸಂಗತಿಗಳಿವೆ. ಸ್ವಾಮಿಗಳೊಂದಿಗೆ ಸುದೀರ್ಘ ಸಂಪರ್ಕ ಇಟ್ಟುಕೊಂಡಿದ್ದ , ನೂರಾರು ಪತ್ರಗಳನ ವಿನಿಮಯ ಮಾಡಿಕೊಂಡಿದ್ದ ಹೆಂಗಸರಲ್ಲಿ ಯಾರೊಬ್ಬರೂ ತಮ್ಮ ಕ್ರೈಸ್ತ ಧರ್ಮವನ್ನು ಬಿಡಲಿಲ್ಲ, ಸ್ವಾಮಿಗಳ ಹೇಳುತ್ತಿದ್ದ ಶ್ರೇಷ್ಟವಾದ ಹಿಂದೂ ಧರ್ಮದ ಯಾವುದೇ ಆಚರಣೆ , ತತ್ತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಿಲ್ಲ. ಇವರಲ್ಲಿ ಸಾರಾ ಬುಲ್ ಮಾತ್ರ ಕೆಲ ಮಟ್ಟಿಗೆ ಹಿಂದೂ ಧಾರ್ಮಿಕ ಆಚರಣೆಗಳಿಗೆ ಮೊರೆಹೋಗಿದ್ದಳು , ಸ್ವಾಮಿಗಳು ತೀರಿಕೊಂಡ ಹಲವು ವರ್ಷಗಳ ನಂತರ ಸ್ವಾಮಿಗಳು ಸ್ಥಾಪಿಸಿದ್ದ ವೇದಾಂತ ಸೊಸೈಟಿಗೆ ದೊಡ್ದ ಪ್ರಮಾಣದ ಹಣ ದೇಣಿಗೆ ನೀಡಿದಳು. ಸ್ವಾಮಿಗಳಿಗೆ ಚೆನ್ನಾಗಿ ಪರಿಚಯವಿದ್ದ ಆಕೆಯ ಮಗಳು ಓಲಿಯಾ ವಾಘ್ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದಳು. ನ್ಯಾಯಾಲಯದ ತೀರ್ಪು ಓಲಿಯಾ ಪರವಾಗಿ ಬಂದಿತು.
ಭಾರತದಲ್ಲಿದ್ದಾಗ ಸ್ವಾಮಿಗಳಿಗೆ ಅಮೆರಿಕದಿಂದ ಬರುತ್ತಿದ್ದ ಪತ್ರಗಳಲ್ಲಿ ಸಾರಾ ಬುಲ್ ಹಾಗೂ ಶಾರದಾನಂದರ ಪತ್ರಗಳು ಮಾತ್ರ ಮಠಕ್ಕೆ ಸಂಬಂಧಿಸಿರುತ್ತಿದ್ದವು. ಹೇಲ್ ಸೋದರಿಯರು , ಮಿಸ್ ಜೊಸೈಫಿನ್ ಮೆಕ್ಲಿಯಾಡ್, ಶ್ರೀಮತಿ ಬೆಟ್ಟಿ ಲೆಗೆಟ್ , ಕ್ರಿಸ್ಟೈನಾ ಗ್ರೀನ್’ಸ್ಟೈಡಲ್ , ಮಾರ್ಗರೆಟ್ ನೋಬಲ್ ಮುಂತಾದವರು ಸ್ವಾಮಿಗಳಿಗೆ ಬರೆಯುತ್ತಿದ್ದ ಪತ್ರಗಳು ವೈಯಕ್ತಿಕ ಮಟ್ಟದಲ್ಲಿ ಇರುತ್ತಿದ್ದವು. ಇವು ಗುರುಭಾಯಿಗಳ ಗಮನಕ್ಕೆ ಬಂದು ತಮ್ಮ ಬಿಂಬಕ್ಕೆ ಧಕ್ಕೆಯಾಗುವುದು ಸ್ವಾಮಿಗಳಿಗೆ ಬೇಕಿರಲಿಲ್ಲ. ಸಂನ್ಯಾಸಿಯ ಜೀವನ ನಿಯಮಗಳಲ್ಲಿ ಖಾಸಗಿ ಪತ್ರಗಳ ಪಾತ್ರವನ್ನು ರಾಮಕೃಷ್ಣರು ತಿಳಿಸಿರಲಿಲ್ಲ. ಏಕೆಂದರೆ ಅವರಿಗೆ ಅಂತಹ ಸಾದ್ಯತೆಯೇ ಊಹಾತೀತವಾಗಿದ್ದಿತು. ಸ್ವಾಮಿಗಳ ಲೆಕ್ಕದಲ್ಲಿ ಹೆಂಗಸರೊಂದಿಗೆ ಖಾಸಗಿ ಮಟ್ಟದಲ್ಲಿ ಪತ್ರಗಳ ಮೂಲಕ ವ್ಯವಹರಿಸುವುದು ಸಂಯಮದ ವ್ರತಗಳಲ್ಲಿ ಸೇರಿರಲಿಲ್ಲ. ‘ಇಂಗ್ಲೆಂಡ್’ನಿಂದ ಬಂದಿರುವ ನನ್ನ ಪತ್ರಗಳನ್ನು ಯಾರೋ ಒಡೆದು ನೋಡಿದ್ದಾರೆ ಎಂದು ಬ್ರಹ್ಮಾನಂದರಿಗೆ ದೂರಿದ್ದರು. (೧೧/೧೧/೧೮೯೭). ಈ ಬಗ್ಗೆ ಮತ್ತೊಮ್ಮೆ ಎಚ್ಚರಿಸಿ ‘ ಅಮೆರಿಕದಿಂದ ಬರುವ ಪತ್ರಗಳಲ್ಲಿ ಯಾವುದರ ಮೇಲೆ ಬೋಸ್ಟನ್ ಅಂಚೆ ಮುದ್ರೆ ಇರುವುದೋ ಅದನ್ನು ಮಾತ್ರ ಒಡೆದು ನೋಡು. ಇತರ ಪತ್ರಗಳನ್ನು ಒಡೆಯಬೇಡ. ನನ್ನ ಪತ್ರಗಳನ್ನೆಲ್ಲಾ ಖೇತ್ರಿಗೆ ಕಳಿಸು’ ಎಂದು ಸ್ವಾಮಿಗಳು ಆದೇಶಿಸಿದ್ದರು. (ಪತ್ರ-೮/೧೨/೧೮೯೭).
ಸ್ವಾಮಿಗಳು ತಮ್ಮ ಅಭಿಮಾನಿ , ಅನುಯಾಯಿ . ಶಿಷ್ಯ ಹೆಂಗಸರಿಗೆ ಬರೆದ ಪತ್ರಗಳಲ್ಲಿ ಧರ್ಮ ಮತ್ತು ಅಧ್ಯಾತ್ಮವನ್ನು ಮೀರಿದ ನೂರಾರು ಲೌಕಿಕ ಸಂಗತಿಗಳಿರುತ್ತಿದ್ದವು. ಹಿರಿಯರಾದ ಶ್ರೀಮತಿ ಜಾರ್ಜ್ ಹೇಲ್ , ಶ್ರೀಮತಿ ಸಾರಾ ಬುಲ್’ಗೆ ಬರೆದ ಪತ್ರಗಳಲ್ಲಿ ಖಾಸಗಿ ವಿಷಯಗಳಿರುತ್ತಿರಲಿಲ್ಲ. ಬೋಸ್ಟನ್’ನಿಂದ ಸಾರಾ ಬುಲ್ ಬರೆಯುತ್ತಿದ್ದ ಪತ್ರಗಳು ಯಾರು ಬೇಕಾದರೂ ಓದುವಂತಿರುತ್ತಿದ್ದವು. ಹೇಲ್ ಮತ್ತು ಮೆಕೆಂಡ್ಲಿ ಸೋದರಿಯರಿಗೆ ಬರೆದ ಪತ್ರಗಳಲ್ಲಿ ಹಿರಿಯಣ್ಣನ ತಂಟೆ , ತಕರಾರು , ಛೇಡಿಸಿಕೆ , ಆಪ್ತತೆ ತುಂಬಿರುತ್ತಿದ್ದವು ; ಆರ್ಥಿಕ ಲಾಭ , ನಷ್ಟ ,ಸೋಲು-ಗೆಲುವು , ಸುಖ-ದುಃಖ ಎಲ್ಲವನ್ನೂ ಜಾರ್ಜ್ ಹೇಲ್ ಕುಟಂಬ ಹಾಗೂ ಸಾರಾ ಬುಲ್ , ಮಿಸ್ ಜೊಸೆಫಿನ್ ಮೆಕ್ಲಿಯಾಡ್ ಮುಂದಿರಿಸಲು ಸ್ವಾಮಿಗಳು ಹಿಂಜರಿಯುತ್ತಿರಲಿಲ್ಲ. ಮೇರಿ ಹೇಲ್ ಸಂದರ್ಭ ಬಂದಾಗ ಸ್ವಾಮಿಗಳನ್ನು ಟೀಕಿಸಲು ಹಿಂಜರಿಯುತ್ತಿರಲಿಲ್ಲ. ಪ್ರೆಸ್ಬೈಟೇರಿಯನ್ ಪಾದ್ರಿಯೊಂದಿಗೆ ಒರಟಾಗಿ ವರ್ತಿಸಿದ್ದ ಸ್ವಾಮಿಗಳ ನಡವಳಿಕೆಯನ್ನು ಆಕ್ಷೇಪಿಸುವಷ್ಟು ದಿಟ್ಟತನ ಮೇರಿ ಹೇಲ್’ಗಿದ್ದಿತು. ಮಿಸ್ ಜೊಸೆಫಿನ್ ಮೆಕ್ಲಿಯಾಡ್ ಸ್ವಾಮಿಗಳಿಂದ ಮಂತ್ರ ದೀಕ್ಷೆಯನ್ನು ಪಡೆದಿದ್ದಳು , ಆದ್ದರಿಂದ ಆಕೆ ಅವರ ಶಿಷ್ಯೆ ಎಂದು ಮಾರಿ ಲೂಯಿ ಬರ್ಕೆ ವಾದಿಸಿದ್ದಾಳೆ. ಆದರೆ ಜೊಸೆಫಿನ್ ಮೆಕ್ಲಿಯಾಡ್ ನಾನು ಸ್ವಾಮಿಯ ಗೆಳತಿಯೇ ಹೊರತು ಶಿಷ್ಯಳಲ್ಲ ಎಂದು ಸ್ಪಷ್ಟಪಡಿಸಿದ್ದಳು. ‘ಸಗ್ಗದ ಹಕ್ಕಿಗಳೊಂದಿಗೆ (ಶ್ರೀಮತಿ ಮತ್ತು ಶ್ರೀ ಲೆಗೆಟ್) ನಾನು ಈ ಕ್ರಿಸ್’ಮಸ್’ನಲ್ಲಿ ರಿಡ್ಜ್’ಗ ಹೋಗುತ್ತೇನೆ ನೀನೂ ಕೂಡ ಅಲ್ಲಿಗೆ ಬಂದರೆ ಚೆನ್ನಾಗಿರುತ್ತದೆ (೮/೧೨/೧೮೯೫) ‘ ‘ಯಾರ ಮುಖದಲ್ಲಿ ಅಧೈರ್ಯದ ಗೆರೆ ಎಂದಿಗೂ ಇರದೋ , ಯಾವಾಗಲೂ ನಸುನಗುತ್ತ ಒತ್ತಾಸೆಯ ಪ್ರೋತ್ಸಾಹ ನೀಡುತ್ತಿತ್ತೋ ಆ ಆಪ್ತ ಸ್ನೇಹ ಮುದ್ರಿತ ಮುಖವನ್ನು ಕಾಣಲು ನಾನು ಸುತ್ತ ನೋಡಿದೆ (೭/೧೦/೧೮೯೬) , ನಾನು ಕಲ್ಕತ್ತದಲ್ಲಿ ಒಂದು ಪತ್ರಿಕೆಯನ್ನು ಪ್ರಾರಂಭಿಸಬೇಕೆಂದರುವೆ , ಅದಕ್ಕೆ ನೀನು ನೆರವಾದರೆ ನಾನು ನಿನಗೆ ಎಂದೆಂದಗೂ ಋಣಿ ( ೨೯/೪/೧೮೯೮) , ನಿನಗೆ ಒಂದು ಹರಟೆಯ ಕಾಗದ ಬೇಕಲ್ಲವೆ. ಅದಕ್ಕೆ ನನ್ನಲ್ಲಿ ಸರಕಿಲ್ಲ (?/೮/೧೮೯೯) , ನಾನು ಎಷ್ಟಕ್ಕೆ ಅರ್ಹನೋ ಅದಕ್ಕಿಂತ ಹೆಚ್ಚು ಮಾಡಿರುವೆ. ದೇವರು ನಿನ್ನನ್ನು ಹರಸಲಿ. ಅನಂತ ಪ್ರೀತಿ ಮತ್ತು ಕೃತಜ್ಞತೆಗಳೊಂದಿಗೆ’ (೭/೩/೧೯೦೦) ಮಾತುಗಳಿಂದ ಜೊಸೆಫಿನ್ ಅವರ ಗೆಳತಿಯಾಗದ್ದಳೇ ಹೊರತು ಶಿಷ್ಯಳಲ್ಲ ಎಂದು ಊಹಿಸಬಹುದು.
ಸ್ವಾಮಿಗಳು ತಮ್ಮ ಪತ್ರಗಳಲ್ಲಿ ಸಾರಾ ಬುಲ್ –ಧೀರ ಮಾತಾ , ಶ್ರೀಮತಿ ಜಾರ್ಜ್ ಹೇಲ್ –ಮದರ್ ಚರ್ಚ್ , ಮಿಸ್ ಜೊಸೆಫಿನ್ ಮೆಕ್ಲಿಯಾಡ್-ಪ್ರಿಯ ಜೋ ಟಾಂಟೈನ್, ಮಾರ್ಗರೆಟ್ ನೋಬಲ್-ಪ್ರಿಯ ಮಾರ್ಗಾಟ್ , ಹೇಲ್ ಮತ್ತು ಮೆಕೆಂಡ್ಲಿ ಸೋದರಿಯರು-ಪ್ರಿಯ ಸೋದರಿ ಎಂದು ಬರೆಯುತ್ತಿದ್ದರು. ಐದು ಜನ ತಂಗಿಯರ ಬಡ ಕುಟುಂಬದಲ್ಲಿ ಹಿರಿಯಕ್ಕನಾಗಿ ಹುಟ್ಟಿದ್ದ ಕ್ರಿಸ್ಟೈನಾ ಗ್ರೀನ್’ಸ್ಟೈಡಲ್ ಸ್ವಾಮಿಗಳಿಗಿಂತ ವಯಸ್ಸಿನಲ್ಲಿ ಮೂರು ವರ್ಷ ಚಿಕ್ಕವಳು. ೯/೮/೧೮೯೫ ರಿಂದ ಸ್ವಾಮಿಗಳು ಕ್ರಿಸ್ಟೈನಾ ಗ್ರೀನ್’ಸ್ಟೈಡಲ್’ಗೆ ಪತ್ರ ಬರೆಯಲು ಪ್ರಾರಂಭಿಸಿದರು. ೨೧/೬/೧೯೦೨ ರಂದು ಎಂದರೆ ಸಾಯುವುದಕ್ಕೆ ೧೩ ದಿನ ಮೊದಲು ಬರೆದ ಕೊನೆಯ ಪತ್ರವೂ ಆಕೆಗಾಗಿದ್ದಿತು. ಸ್ವಾಮಿಗಳಿಂದ ಅತಿ ಹೆಚ್ಚು ಪತ್ರಗಳನ್ನು ಪಡೆದಿರುವ ಸಾರಾ ಬುಲ್ (೮೦) ಸನಿಹ ಕ್ರಿಸ್ಟೈನಾ ಗ್ರೀನ್’ಸ್ಟೈಡಲ್ ಇದ್ದಾಳೆ. (೭೨). ಮಾರಿ ಲೂಯಿ ಬರ್ಕೆ ಗುರುತಿಸಿದಂತೆ ಹೆಸರಿಲ್ಲದ ೨ ಪತ್ರಗಳನ್ನು ಸಾರಾ ಬುಲ್ ಮತ್ತು ಕ್ರಿಸ್ಟೈನಾ ಗ್ರೀನ್’ಸ್ಠೈಡಲ್ ಖಾತೆಗೆ ಸೇರಿಸಿದರೆ ಅವರ ಪತ್ರಗಳ ಸಂಖ್ಯೆ ೮೨ ಮತ್ತು ೭೪ ಆಗುತ್ತವೆ.
ಕೆಲವರು ಕ್ರಿಸ್ಟೈನಾ ಗ್ರೀನ್’ಸ್ಟೈಡೆಲ್’ಳನ್ನು ಸ್ವಾಮಿಗಳು ಮಗಳೆಂದು ಪರಿಗಣಿಸಿದ್ದರು ಎಂದಿದ್ದಾರೆ. ಸ್ವಾಮಿಗಳಿಗಿಂತ ಮೂರು ವರ್ಷ ಚಿಕ್ಕವಳಿದ್ದ ಆಕೆಯನ್ನು ಹಾಗೆ ಕರೆಯುವುದು ಕಷ್ಟವೇ. ಏಕೆಂದರೆ ೧೭ ವರ್ಷದ ಇಸಾಬೆಲ್ಲಾ ಮೆಕೆಂಡ್ಲಿಯನ್ನು ಸೋದರಿ ಎಂದು ಕರೆಯುತ್ತಿದ್ದರು. ಕೃತಿಶ್ರೇಣಿಯಲ್ಲಿರುವ ಪತ್ರಗಳಲ್ಲಿ ಕ್ರಿಸ್ಟೈನಾ ಗೀ’ನ್’ಸ್ಟೈಡಲ್’ಳನ್ನು ಸೋದರಿ ಎಂದು ಬರೆದಂತೆ ತೋರಿಸಲಾಗಿದೆ. ಆದರೆ ಸ್ವಾಮಿಗಳ ಮೂಲ ಪತ್ರದಲ್ಲಿ ‘ಡಿಯರ್’ ಎಂದಿದೆ. ಹೇಲ್ ಮತ್ತು ಮೆಕೆಂಡ್ಲಿ ಸೋದರಿಯರನ್ನು ಹೊರತಾಗಿ ಬೇರೆ ಯಾರನ್ನೂ ಸ್ವಾಮಿಗಳು ತಮ್ಮ ಪತ್ರಗಳಲ್ಲಿ ‘ಸೋದರಿ’ ಎಂದು ಕರೆದಿಲ್ಲ. ಗುರುಭಾಯಿಗಳು ಸ್ವಾಮಿಗಳ ವಿದೇಶಿ ಅನುಯಾಯಿ , ಹೆಣ್ಣು ಶಿಷ್ಯರನ್ನು ‘ಸೋದರಿ’ ಎಂದು ಕರೆಯುತ್ತಿದ್ದರೇ ಹೊರತು ಸ್ವಾಮಿಗಳಲ್ಲ. ಸ್ವಾಮಿಗಳು ಹೆಣ್ಣು ಶಿಷ್ಯರಿಗೆ ಬರೆದ ಎಲ್ಲ ಪತ್ರಗಳಲ್ಲಿ ಕ್ರಿಸ್ಟೈನಾ ಗ್ರೀನ್’ಸ್ಟೈಡಲ್’ಗೆ ಬರೆದ ಪತ್ರಗಳು ಕುತೂಹಲ ಮತ್ತು ವೈಲಕ್ಷಣಗಳಿಂದ ತುಂಬಿವೆ. ಇದನ್ನು ಮರೆಮಾಚಲು ಆಕೆಯನ್ನು ಸ್ವಾಮಿಗಳು ಮಗಳೆಂದು ಪರಿಗಣಿಸಿದ್ದರು ಎಂದು ಹೇಳಲು ತೊಡಗಿರುವಂತಿದೆ. ಸ್ವಾಮಿಗಳು ೬/೮/೧೮೯೫ ರಂದು ಥೌಸಂಡ್ ಐಲ್ಯಾಂಡ್ ಪಾರ್ಕ್’ನಿಂದ ಹೋಗುವಾಗ ಕ್ರಿಸ್ಟೈನಾಳನ್ನು ಕಂಡಿದ್ದರು. ಇದಾದ ಒಂದು ತಿಂಗಳಿನ ನಂತರ ‘ಎಂದಿನಂತೆ ಧ್ಯಾನ ಮಾಡಲು ನೀನು ಪರ್ವತಕ್ಕೆ ಹೋಗುವೆಯಾ ? ಕೃಪಾನಂದನಿಂದ ಪತ್ರ ಬಂತೆ ? ನೀನು ಸಾದ್ಯವಾದಷ್ಟು ಬೇಗ ಬರೆ. ನಿನ್ನ ಸಮಾಚಾರಕ್ಕಾಗಿ ನಾನು ಅಷ್ಟೊಂದು ಕಾತರನಾಗಿರುವೆ’ ಎಂದಿದ್ದಾರೆ. ( ೯/೮/೧೮೯೫). ಕೇವಲ ಒಂದು ತಿಂಗಳ ಹಿಂದೆ ಬೀಳ್ಕೊಟ್ಟಿದ್ದ ಕ್ರಿಸ್ಟೈನಾ ಬಹು ದಿನಗಳಾದರೂ ತಮಗೆ ಪತ್ರ ಬರೆದಿಲ್ಲವೆಂದು ಸ್ವಾಮಿಗಳಿಗೆ ಭಾಸವಾಗಿದೆ.
೨೨/೩/೧೮೯೬ ರಂದು ಬೋಸ್ಟನ್’ನಿಂದ ಸ್ವಾಮಿಗಳು ಕ್ರಿಸ್ಟೈನಾ ಗ್ರೀನ್’ಸ್ಟೈಡಲ್’ಗ ಬರೆದ ಪತ್ರ ಮತ್ತು ಅದರ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಬಹಳ ತೊಡಕಿನದಾಗಿದೆ. ಕೃತಿಶ್ರೇಣಿಯಲ್ಲಿ ಪ್ರಕಟವಾಗಿರುವ ಈ ಪತ್ರದ ಪೂರ್ಣ ಪಾಠ ಹೀಗಿದೆ. ‘ ಇದರೊಂದಿಗೆ (ಪದಗಳನ್ನು ಬಿಡಲಾಗಿದೆ) ಮತ್ತೊಮ್ಮೆ ಸಹಿ ಮಾಡಿ ಇಡುವುದು. (ಪದಗಳನ್ನು ಬಿಡಲಾಗಿದೆ). ನಿನ್ನ ಹೆಸರಿನ ಹಿಂದೆ ಮಿಸ್ ಎಂದು ಸೇರಿಸಿ ತಪ್ಪು ಮಾಡಿದ್ದೇನೆ. ಹಾಗಿದ್ದಲ್ಲಿ ನೀನೂ ಕೂಡ ಮಿಸ್ ಎಂದು ಸಹಿ ಮಾಡಬೇಕು. ….. ತಪ್ಪದೆ ಉತ್ತರ ಬರೆ. ನಂತರ ಪೂರ್ಣವಾಗಿ ಬರೆಯುವೆನು-ಅನಂತ ಪ್ರೀತಿ ಮತ್ತು ವಿಶ್ವಾಸಗಳೊಂದಿಗೆ –ನಿನ್ನವ ಇತ್ಯಾದಿ-ವಿವೇಕಾನಂದ . ಈ ಪತ್ರದಲ್ಲಿ ಬಿಡಲಾದ ಪದಗಳು ಯಾವುವು , ಅವುಗಳನ್ನು ಏಕೆ ಬಿಡಲಾಯಿತು ಮತ್ತು ಹಾಗೆ ಬಿಡುವ ನಿರ್ಧಾರ ಮಾಡಿದವರು ಯಾರು ಎನ್ನುವುದನ್ನು ಪತ್ರಗಳ ಸಂಪಾದಕರು ಎಲ್ಲಿಯೂ ತಿಳಿಸಿಲ್ಲ. ಪತ್ರದಲ್ಲಿರುವ ವಿಷಯವನ್ನು ಗಮನಿಸಿ ಸಾಂದರ್ಭಿಕವಾಗಿ ಕೆಲ ಸಾದ್ಯತೆಗಳನ್ನು ಊಹಿಸಬಹುದು. ಸ್ವಾಮಿಗಳು ಕ್ರಿಸ್ಟೈನಾ ಗೆ ಯಾವುದೋ ದಾಖಲೆಗಳನ್ನು ಕಳಿಸಿದಂತಿದೆ. ಅವುಗಳಿಗೆ ಅನುಮೋದನೆಯಾಗಿ ಕ್ರಿಸ್ಟೈನಾ ಮತ್ತೊಮ್ಮೆ ಸಹಿ ಮಾಡಲು ಕೋರಲಾಗಿದೆ. ಮದುವೆಯಾಗದಿದ್ದ ಕ್ರಿಸ್ಟೈನಾ ಮಿಸ್ ಎಂದು ಬರೆದುಕೊಳ್ಳುವುದು ಸಹಜ. ಹಾಗೆ ಬರೆದು ತಾವು ತಪ್ಪು ಮಾಡಿದ್ದೇನೆಂದು ಸ್ವಾಮಿಗಳು ಹೇಳುತ್ತಿರುವುದೇಕೆ ? ಕ್ರಿಸ್ಟೈನಾ ಗ್ರೀನ್’ಸ್ಟೈಡಲ್ ಈ ಸಮಯದಲ್ಲಿ ಸ್ವಾಮಿಗಳಿಗೆ ಬರೆದ ಪತ್ರಗಳು ಸಿಕ್ಕರೆ ಈ ಪತ್ರವನ್ನು ಅರ್ಥ ಮಾಡಿಕೊಳ್ಳುವುದು ಸಾದ್ಯ. ಇದೇ ದಿನ ಕ್ರಿಸ್ಟೈನಾಳ ಅತ್ಯಂತ ಆತ್ಮೀಯ ಗೆಳತಿ ಮೇರಿ ಫುಂಕೆಗೆ ಸ್ವಾಮಿಗಳು ಬರೆದ ಪತ್ರ ಇಂತಹ ಯಾವುದೇ ಛಾಯೆಯಿಲ್ಲದೆ, ಕುಶಲೋಪರಿ ವಿಚಾರಿಸುವ ಸಾಮಾನ್ಯ ಪತ್ರವಾಗಿದೆ.
ಸ್ವಾಮಿಗಳು ೬/೪/೧೮೯೬ ರಂದು ಕ್ರಿಸ್ಟೈನಾ ಗ್ರೀನ್’ಸ್ಟೈಡೆಲ್’ಗೆ ಒಂದು ಪತ್ರವನ್ನು ಬರೆದಿದ್ದಾರೆ. ಪ್ರಕಾಶಕರು ಈ ಪತ್ರದಲ್ಲಿಯೂ ಒಂದು ಸಾಲನ್ನು ಕತ್ತರಿಸಿದ್ದಾರೆ. ಇದಕ್ಕೆ ಕಾರಣ ತಿಳಿಯದು. ಈ ಕಾಗದದಲ್ಲಿ ಸ್ವಾಮಿಗಳು ‘ ಈ ಜೀವಿತದಲ್ಲಿ ನಾವು ಮತ್ತೆ ಭೇಟಿಯಾಗುವೆವು ಮತ್ತು ಅಗಲುವೆವು ..’ ಎಂದು ತಿಳಿಸಿದ್ದಾರೆ. ‘ ಏನೇ ಆಗಲಿ ಈ ಬೇಸಿಗೆಯಲ್ಲಿ ನಾನು ಅಮೆರಿಕಕ್ಕೆ ಬರುತ್ತೇನೆ ಎಂದು ಆಶ್ವಾಸನೆ ನೀಡುತ್ತ ‘ದೀರ್ಘವಾದ ಪತ್ರವನ್ನು ಬರೆ. ನಿನ್ನ ಸಂಸಾರವನ್ನು ಹೇಗೆ ನಿರ್ವಹಿಸುವೆ-ಖರ್ಚು ಮುಂತಾಗಿ. ನಿನಗೆ ಇಚ್ಛೆಯಾದುದ್ದನ್ನೆಲ್ಲ ನನಗೆ ಬರೆ. ಎಲ್ಲ ವಿಷಯಗಳನ್ನು ಸೇರಿಸಿ ದೀರ್ಘ ಪತ್ರಗಳನ್ನು ಬರೆಯುವೆಯಾ? ……ಕೋರಿಕೆಯಿದೆ. (೨೫/೧೦/೧೮೯೮).
೨೬/೧/೧೮೯೯ರ ಪತ್ರದ ಒಕ್ಕಣಿಕೆ ವಿಭಿನ್ನ ರೀತಿಯಲ್ಲಿದೆ- ‘….. ನಿನ್ನ ಸುಂದರ ಪತ್ರಕ್ಕೆ ಉತ್ತರ ಬರೆಯಲು ಇಷ್ಟು ತಡ ಮಾಡಿದ್ದಕ್ಕೆ ಕ್ಷಮಿಸು…. ನೀನು ಇಲ್ಲಿಗೆ ಬರುವ ಯೋಜನೆಯ ಆಗು ಹೋಗುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇನೆ….. ಇಲ್ಲಿನ ಪರಿಸ್ಥಿತಿ ನಿಮ್ಮಲ್ಲಿಗಿಂತ ಭಿನ್ನವಾಗಿರುವುದು. ನಾನು ಕೌಪೀನ ಮಾತ್ರ ಧರಿಸಿ ಓಡಾಡಬೇಕಾಗುವುದು. ಅದು ನಿನಗೆ ದಿಗ್ಭ್ರಮೆ ಉಂಟು ಮಾಡುವುದೇ ? ಮುಕ್ಕಾಲು ಪಾಲು ಜನ ಸೊಂಟಕ್ಕೆ ಬಿಳಿ ಬಟ್ಟೆ ತುಂಡನ್ನು ಸುತ್ತಿಕೂಂಡು ಓಡಾಡುವರು. ಅದು ನಿನಗೆ ಸಹಿಸಲಾಗುವುದೇ ?. ಮಾರ್ಚ್ ಸಮಯಕ್ಕೆ ನಾನು ಗುಣಮುಖನಾಗದಿದ್ದರ ಇಲ್ಲಿಗೆ ಬರಲು ನಾನು ಬರೆಯುವೆ. ಏಕೆಂದರೆ ನಾನು ಕಾಲವಾಗುವುದಕ್ಕೆ ಮುಂಚೆ ನಿನ್ನನ್ನು ಒಮ್ಮೆ ನೋಡಬೇಕೆಂಬ ಬಹಳ ಇಚ್ಚೆ ನನಗಿದೆ…’ ನಿರ್ಮೋಹಿಗಳಾದ ಸ್ವಾಮಿಗಳಿಗೆ ತಮ್ಮ ಉಡುಗೆಯ ಬಗ್ಗೆ ಶಿಷ್ಯೆ/ಸೋದರಿ/ಮಗಳು ಏನೆಂದು ಭಾವಿಸಿಕೊಳ್ಳುವಳೋ ಎಂದು ಚಿಂತಿತರಾಗಿರುವುದು ವಿಚಿತ್ರವಾಗಿದೆ.
ಸ್ವಾಮಿಗಳು ಯುರೋಪ್’ನತ್ತ ಪ್ರಯಾಣದಲ್ಲಿರುವಾಗ ಹಡಗು ಸೂಯೆಜ್ ಬಂದರು (೧೪/೭/೧೮೯೯) ಮತ್ತು ಮಾರ್ಸೆಲಿಸ್ (೨೩/೭/೧೮೯೯) ತಲುಪಿದಾಗ ಕ್ರಿಸ್ಟ್ಟೈನಾಗೆ ಎರಡು ಪತ್ರಗಳು ಹೋಗಿವೆ. ಮೊದಲನೆಯ ಪತ್ರದಲ್ಲಿ ಅನುಭವಿಸುತ್ತಿರುವ ರೋಗಗಳ ವಿವರವಿದ್ದರೆ , ಎರಡನೇ ಪತ್ರದಲ್ಲಿ ‘ ಸಾಧ್ಯವಾದರೆ ಬಂದರಿಗೆ ಬಾ. ಅದು ಸರಿ ಹೋಗುವುದು. ಏಕೆಂದರೆ ನಮ್ಮ ಗುಂಪಿನಲ್ಲಿ ಹೆಂಗಸಿದ್ದು [ಮಾರ್ಗರೆಟ್ ನೋಬಲ್] ಆಕೆಯನ್ನು ನೋಡಲು ಇತರರು ಬರುವರು. ಕ್ರಿಸ್ಟೈನಾ ನಿನಗೇನಾದರೂ ಆಯಾಸವಾಗಿದ್ದರೆ ಅಥವಾ ಅನಾರೋಗ್ಯದಿಂದ ಇದ್ದರೆ ಮಾತ್ರ ಬರಬೇಡ. ……. ಪೌರಾತ್ಯರು ಭಾವನೆಗಳು ಉಕ್ಕಿ ಹರಿಯುವುದನ್ನು ಇಷ್ಟಪಡುವುದಿಲ್ಲ ; ಅವರಿಗೆ ಭಾವನೆಗಳನ್ನು ಬಚ್ಚಿಡುವಂತೆ ತರಬೇತಿಯಾಗಿರುತ್ತದೆ….ನಿನ್ನನ್ನು ಬೇಗ ನೋಡುವೆನೆಂಬ ಭರವಸೆಯೊಂದಿಗೆ…’ . ಸ್ವಾಮಿಗಳು ತಮ್ಮೊಂದಿಗೆ ತುರೀಯಾನಂದ ಮತ್ತು ಸತೀಶಚಂದ್ರ ಚಕ್ರವರ್ತಿ (ಶಾರದಾನಂದರ ತಮ್ಮ) ಇರುತ್ತಾರೆ ಅವರ ಮುಂದೆ ನಾನು ನೀನು ಬಂದದ್ದಕ್ಕೆ ಮುಕ್ತವಾಗಿ ಅಮೆರಿಕದಲ್ಲಿ ತೋರಿಸಿದಂತೆ ಹರ್ಷವನ್ನು ತೋರಿಸಲು ಸಾಧ್ಯವಿಲ್ಲ. ಆದ್ದರಿಂದ ನಾನು ‘ಬಿಗಿ’ಯಾಗಿ ಇರುತ್ತೇನೆ ತಪ್ಪು ತಿಳಿಯಬೇಡ ಎನ್ನುವ ಸಂದೇಶವನ್ನು ಮುಂಚಿತವಾಗಿ ಕಳಿಸಿದ್ದಾರೆ. ಕ್ರಿಸ್ಟೈನಾಳನ್ನು ನೋಡಿ ಸ್ಥಿತಪ್ರಜ್ಞರಾದ ಸ್ವಾಮಿಗಳ ಭಾವನೆಗಳ ಉಕ್ಕಿ ಹರಿಯುವುದೇಕೇ ? ಅವುಗಳನ್ನು ಅವರು ಮುಚ್ಚಿಟ್ಟುಕೊಳ್ಳುವುದೇಕೆ ? ಆ ಭಾವನೆಗಳು ಏನು ಎನ್ನುವುದೊಂದು ಒಗಟೇ ಆಗಿದೆ.
‘ನೀನು ಬ್ಯಾಟ್ಲ್’ಕ್ರೀಕ್ ಆಹಾರದ ಎಲ್ಲಾ ಸೂಚನೆಗಳನ್ನು ತೆಗೆದುಕೊಂಡು ಬಂದರೆ ಅದನ್ನು ತಯಾರಿಸಲು ನಾನು ಇಲ್ಲಿ ವ್ಯವಸ್ಥೆ ಮಾಡುತ್ತೇನೆ. ಅಥವಾ ನಮ್ಮ ನಮ್ಮಲ್ಲಿ ಅದನ್ನು ತಯಾರಿಸೋಣ. ನನಗೆ ಅಡುಗೆ ಮಾಡಲು ಚೆನ್ನಾಗಿ ಬರುತ್ತದೆ. ನಿನಗೆ ಅಡುಗೆ ಮಾಡುವುದರ ಬಗ್ಗೆ ಏನೂ ತಿಳಿಯದು. ಒಳ್ಳೆಯದು. ನೀನು ತಟ್ಟೆಗಳನ್ನು ತೊಳೆಯುವುದು ಮುಂತಾದ ಸಹಾಯ ಮಾಡಬಹುದು. …. ಬೇಕಾಗಿರುವುದು ಆಹಾರ ಮತ್ತು ನಿಶ್ಚಿಂತತೆ. ನಾವು ಎಲ್ಲಿಯಾದರೂ ಹೋಗಿ ಸಣ್ಣ ಕೂಟವನ್ನು ಏರ್ಪಡಸಿ ಅದರ ವ್ಯವಸ್ಥಯನ್ನೆಲ್ಲ ನಾವೇ ನೋಡಿಕೊಳ್ಳೋಣ. ಕೇಂಬ್ರಿಜ್’ನಲ್ಲಿ ಒಂದು ಪ್ರಶಾಂತ ಪ್ರತ್ಯೇಕ ಸ್ಥಳವಿದೆ. ಅಲ್ಲಿನ ಕೊಠಡಿಗಳಲ್ಲಿ ವಾಸಿಸಬಹುದು. ನೀನು ಸಾರಾ ಬುಲ್ ಪರಿಚಯ ಮಾಡಿಕೊಂಡರೆ ಒಳ್ಳೆಯದು. ಅವರು ನಿಜವಾದ ಸಂತರು….ನಾನು ಇಂದು ಅಥವಾ ನಾಳೆ ಸಾರಾ ಬುಲ್ ಅವರನ್ನು ನೋಡಿದ ಬಳಿಕ ನಿನಗೆ ಮತ್ತೆ ಬರೆಯುತ್ತೇನೆ – ಇದು ಸ್ವಾಮಿಗಳು ೧೦/೧೧/೧೮೯೯ ರಂದು ಕ್ರಿಸ್ಟೈನಾಗೆ ಬರೆದ ಪತ್ರದ ಮುಖ್ಯಾಂಶ. ಅದರ ಮುಂದುವರಿಕೆ ‘ನೀನು ನಿಸ್ಸಂಕೋಚವಾಗಿ ನಾನು ಎಲ್ಲಿರಬೇಕೆನ್ನುವಿಯೋ ತಿಳಿಸು. ನಾನು ಡೆಟ್ರಾಯಿಟ್’ಗೆ ಬರುವುದು ಅತ್ಯುತ್ತಮ ಎಂದು ಭಾವಿಸಿದರೆ ಅದಕ್ಕೆ ಪತ್ರ ಬರೆ ಅಥವಾ ತಂತಿ ಕಳಿಸು ನಾನು ಕೂಡಲೇ ಬರುತ್ತೇನೆ’ ಎನ್ನುವ ಹೇಳಿಕೆ (ಪತ್ರ-೧೨/೧೧/೧೮೯೯). ಸಾರಾ ಬುಲ್ ಮನೆಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಕ್ರಿಸ್ಟೈನಾ ಜೊತೆಗಿದ್ದು ಅಡುಗೆ ಮಾಡಿಕೊಳ್ಳುತ್ತ ವಾಸಿಸುವ ಬೇಕೆನ್ನುವ ಅವರ ಹಂಬಲವಿದೆ. ಅಭೇದಾನಂದ , ತುರೀಯಾನಂದ ಅಥವಾ ತಮ್ಮ ಅಭಿಮಾನಿ , ಶಿಷ್ಯರುಗಳಲ್ಲಿ ಯಾರೊಬ್ಬರು ಸ್ವಾಮಿಗಳ ನೆನಪಿಗೆ ಬಾರದೆ ಕ್ರಿಸ್ಟೈನಾ ಮಾತ್ರ ಬಂದಿರುವುದು ಸೋಜಿಗವಾಗಿದೆ.
ಲಾಸ್ ಏಂಜೆಲೆಸ್’ನಲ್ಲಿ ಮೊದಲ ಸಾರ್ವಜನಿಕ ಭಾಷಣ ಮಾಡಿದ ಮರುದಿನ -೯/೧೨/೧೮೯೯-ಸ್ವಾಮಿಗಳು ಬರೆದ ಪತ್ರ ಹಲವು ಅರ್ಥಗಳನ್ನು ಹೊರಡಿಸುತ್ತದೆ. ‘…ನೀನು ಬೋಸ್ಟನ್’ಗೆ ಹೋಗುವೆಯಾ ? ನೀನು ಹೋಗುವುದಿಲ್ಲ ಎಂದು ನನಗೆನಿಸುತ್ತದೆ. ನಾನೆಂದೂ ನಿನ್ನ ಯೋಜನೆಗಳನ್ನು ಭಂಗಗೊಳಿಸಿಲ್ಲ ಅಲ್ಲವೇ ? ಅನಾವಶ್ಯಕ ಖರ್ಚು ? ಒಳ್ಳೆಯದು . ಅದೇನಾದರೂ ಇದ್ದರೆ ನಾನು ಭರಿಸುತ್ತೇನೆ. ತೊಂದರೆ ಮಾತ್ರ ನಿನ್ನದು. ನನ್ನ ವಿಪರೀತ ಆಲೋಚನೆಗಳಿಗೆ ನಾನು ಸಂಕೋಚ ಪಡುತ್ತೇನೆ. ಒಳ್ಳೆಯದು. ನೀನು ಹೇಗಿರುವೆ ?.....ಯಾವಾಗಲೂ ನನ್ನ ಕಷ್ಟಗಳನ್ನೆಲ್ಲಾ ಚಿಂತಿಸುತ್ತ ಇತರರ ಬಗ್ಗೆ ಗಮನ ನೀಡದೆ ನಾನು ಸ್ವಾರ್ಥಿಯಾಗುತ್ತಿದ್ದೇನೆ. ನನಗಾಗಿ ಪ್ರಾರ್ಥಿಸು ; ಕಷ್ಟ ಸಹಿಸಲು ಸಾಧ್ಯವಾಗುವಂತೆ ನನಗೆ ಬಲವಾದ ಆಲೋಚನೆಗಳನ್ನು ಕಳಿಸು. ನೀನು ಇದನ್ನು ಮಾಡುವೆ ಎಂದು ನನಗೆ ಗೊತ್ತು. …..ನಿನಗೆ ಬರೆಯಬೇಕೆನಿಸಿದರೆ ಮತ್ತು ಇಚ್ಛೆಯಾದರೆ ದೀರ್ಘ ಪತ್ರವನ್ನು ಬರೆಯುವೆಯಾ ?....’ ಬೇರೆಯವರಿಗೆ ಕೈಬಿಗಿ ಹಿಡಿದು ಹಣ ನೀಡಲು ಹಿಂದುಮುಂದು ನೋಡುತ್ತಿದ್ದ ಸ್ವಾಮಿಗಳು ಕ್ರಿಸ್ಟೈನಾ ವಿಷಯದಲ್ಲಿ ಧಾರಾಳಿ. ರಾಜಯೋಗದಿಂದ ಮನಸ್ಸನ್ನು ನಿಯಂತ್ರಿಸಿದ್ದ ಸ್ವಾಮಿಗಳಿಗೆ ಕ್ರಿಸ್ಟೈನಾ ಮುಂದೆ ಮಾತ್ರ ಹೇಳಿಕೊಳ್ಳದಂತಹ ಸಂಕೋಚ ಪಡುವಂತಹ ಆಲೋಚನೆಗಳು ಏಕೆ ಬರುತ್ತವೆ , ಅವು ಯಾವುವು ಎನ್ನುವುದು ತಿಳಿಯದು. ಆಕೆ ತಮ್ಮ ಒಳಿತಿಗಾಗಿ ಪ್ರಾರ್ಥಿಸಬೇಕೆಂಬ ಬಯಕೆ.
‘ ನಾನು ಯುರೋಪ್'ಗೆ ಹೋಗುವ ಮೊದಲು ನಿನ್ನನ್ನು ಖಂಡಿತವಾಗಿ ನೋಡುತ್ತೇನೆ. ಅಲ್ಲಿ ಅಥವಾ ನೀನೆಲ್ಲಿ ಇಚ್ಛಿಸುವೆಯೊ ಅಲ್ಲಿ. ಒಹಿಯೊಗೆ ಬರಲು ನಿನಗೆ ಸಾದ್ಯವಾಗಲಾರದೆಂದು ನಿನಗೆನಿಸಿದರೆ ನಾನು ಎಲ್ಲಿಗೆ ಬರಬೇಕೆಂದು ನೀನು ಬಯಸುವೆಯೋ ಅಲ್ಲಿಗೆ ಬರುತ್ತೇನೆ. ನಿನಗೆ ವಿದಾಯ ಹೇಳಲು. …..ದೈಹಿಕ ಶಕ್ತಿ ಕುಗ್ಗಿದಾಗ ಮತ್ತ ನರಗಳು ದುರ್ಬಲವಾದಾಗ ನಾನು ಯಾರನ್ನಾದರೂ ಅವಲಂಬಿಸಲು ಅದೇಷ್ಟು ತವಕಿಸುವೆ ‘ ಎಂದು ಕ್ರಿಸ್ಟೈನಾಗೆ ಹೇಳಿ (೧೯/೬/೧೯೦೦) ಇದಾದ ನಾಲ್ಕೇ ದಿನಗಳಲ್ಲಿ ‘ನಾನು ಎಲ್ಲಾ ಭಾವಾತಿರೇಕಗಳಿಂದ , ಉದ್ವೇಗಗಳಿಂದ ಹೊರಬರಲು ಸಂಕಲ್ಪಸಿದ್ದೇನೆ. ನೀನು ಮತ್ತೊಮ್ಮೆ ನನ್ನಲ್ಲಿ ಭಾವಾತಿರೇಕ ಕಂಡರೆ ನನ್ನನ್ನು ನೇಣು ಹಾಕು. ನಾನು ಅದ್ವೈತಿ . ನನ್ನ ಗುರಿ ಅರಿವು. ಅಲ್ಲಿ ಉದ್ವೇಗ , ಪ್ರೀತಿಯಲ್ಲ ‘ (೨೩/೬/೧೯೦೦). ‘….ನಾನು ನಿನ್ನನ್ನು ಬಿಟ್ಟು ಉಳಿದವರೆಲ್ಲರ ವಿಷಯದಲ್ಲಿ ಕಾತರನಾಗಿದ್ದೇನೆ. ನಾನು ನಿನ್ನನ್ನು ಜಗನ್ಮಾತೆಗೆ ಅರ್ಪಿಸಿದ್ದೇನೆ…’( ೬/೭/೧೯೦೧) ಸ್ವಾಮಿಗಳು ಏಕೆ ಭಾವೋದ್ವೇಗಗೊಳ್ಳುತ್ತಿದ್ದಾರೆ ? ಹಾಗಾಗಲು ಯಾವ ಚಿಂತೆ ಕಾರಣ . ಯಾರನ್ನು ಅವಲಂಬಿಸಲು ತವಕ ಪಡುತ್ತಿದ್ದಾರೆ ? ನಾನು ಅದ್ವೈತಿ ಎಂದು ನೆನಪಿಸಿಕೊಳ್ಳುತ್ತ ಏನನ್ನು ಸರಿಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ? ಕ್ರಿಸ್ಟೈನಾ ಸ್ವಾಮಿಗಳಿಗೆ ಹಲವು ತಿಂಗಳುಗಳಿಂದ ಪತ್ರ ಬರೆದಿರಲಿಲ್ಲ. ಅದು ಅವರ ಕಳವಳಕ್ಕೆ ಕಾರಣವಾಗಿ ಅವರೂ ಆಕೆಗೆ ಒಂದು ತಿಂಗಳು ಪತ್ರ ಬರೆದಿರಲಿಲ್ಲ. ೧೩/೫/೧೯೦೧ ರಂದು ‘ ನನ್ನ ಪತ್ರಗಳು ನಿನಗೆ ತಲುಪಿರಬಹುದು. ಬಹುಶಃ ಇದು ಹೇಗೆ ಕೆಲವು ವೇಳೆ ಮೌನ ಬಂಗಾರ ಎನ್ನುವುದನ್ನು ಸ್ವಲ್ಪ ರುಚಿಯನ್ನು ನಿನಗೆ ತೋರಿಸಿರಬಹುದು. …. ಒಂದು ವಿಷಯವನ್ನು ಹೇಳುವುದಾದರೆ ನಾನು ಶಾಂತನಾಗಿರುವೆನು. ಬಹಳ ಶಾಂತನಾಗಿರುವೆನು. ಈ ಸ್ಥಿತಿಯಲ್ಲಿ ದೀರ್ಘ ಕಾಲ ಇರುವೆನೆಂದು ಭಾವಿಸುವೆನು. ಇದಕ್ಕೆ ನೀನೇ ಶ್ರೇಷ್ಟ ಸಹಾಯಕಳು....ಇಷ್ಟು ಕಡಿಮೆ ಬರೆದಿರುವುದಕ್ಕೆ ನೂರು ಬಾರಿ ಕ್ಷಮಾಪಣೆ ಕೇಳುವೆ…..’ ಸ್ವಾಮಿಗಳ ದೀರ್ಘ ಕಾಲ ಶಾಂತಿಗೆ ಕ್ರಿಸ್ಟೈನಾ ಹೇಗೆ ನೆರವಾಗುತ್ತಾಳೆ ?
ಸ್ವಾಮಿಗಳು ೧೯೦೧ ಮತ್ತು ೧೯೦೨ ರಲ್ಲಿ ಕ್ರಿಸ್ಟೈನಾಗೆ ಬರೆದ ಪತ್ರಗಳ ಅರ್ಥ ಮಾಡಿಕೊಳ್ಳಲು ಭಾರಿ ತೊಡಕಿನವಾಗಿವೆ. ‘……ತಾಯಿಗೆ ತಿಳಿದಿರುವುದು ಮಾತ್ರವಲ್ಲ, ಇಷ್ಟರಲ್ಲಿ ಆಕೆ ನನಗೆ ಬಹಳ ಒಳಿತನ್ನು ಮಾಡುವಳು. ಇದು ನನಗೆ ಮಾತ್ರ ಗೊತ್ತು. ಈ ಜಗತ್ತಿನಲ್ಲಿ ನನಗೆ ಯಾವುದು ಒಳ್ಳೆಯದು ? ಚಿನ್ನ , ಬೆಳ್ಳಿ ? ಛೀ ಅದಕ್ಕಿಂತ ಕೋಟಿ ಪಾಲು ಉತ್ತಮವಾದುದು ನನ್ನಲ್ಲಿದೆ. ಆದರೆ ನನ್ನ ಒಡವೆಯನ್ನು ಸೂಕ್ತ ಸನ್ನಿವೇಶದಲ್ಲಿ ಇಡಲು ಸ್ವಲ್ಪ ಚಿನ್ನದಿಂದ ದೋಷವೇನಿಲ್ಲ. ಅದು ಮತ್ತೆ ಬರುತ್ತಿದೆ ಅಲ್ಲವೆ ? ನಾನು ಹೆಚ್ಚು ಚಡಪಡಿಸುತ್ತೇನಾದರೂ ಕಾಯುತ್ತೇನೆ, ಸೇಬು ತಾನಾಗಿಯ ಬಂದು ಬಾಯಿಗೆ ಬೀಳುವುದು. ಆದ್ದರಿಂದ ಅದು ಬರುತ್ತದೆ, ಬರುತ್ತಿದೆ, ಬರುತ್ತಿದೆ………. (೯/೮/೧೯೦೧) ಸ್ವಾಮಿಗಳು ಈ ಪತ್ರದಲ್ಲಿ ಏನನ್ನು ಹೇಳುತ್ತಿದ್ದಾರೆ, ಚಿನ್ನ , ಬೆಳ್ಳಿ , ಸೇಬು ಇವೆಲ್ಲ ಏನು ? ಮಾನಸಿಕ ಏರುಪೇರಿನಿಂದ ಇಂತಹ ಅಸಂಬದ್ಧ ಪತ್ರ ಬರೆಯುತ್ತಿದ್ದಾರೆಯೆ ? ತಿಳಿಯದು. ೨೭/೮/೧೯೦೧ ರಂದು ‘ ಈಗ , ಕ್ರಿಸ್ಟೈನಾ ಅನೇಕ ಕಾರಣಗಳಿಂದ ಈ ಪತ್ರ ಬಹಳ ಮೊಟಕಾಗಿರುವುದು. ಇದು ಒಂದು ವಿಶೇಷ ಉದ್ದೇಶದಿಂದ ಬರೆಯಲ್ಪಟ್ಟಿದೆ. ಈ ಪತ್ರ ತಲುಪಿದ ಕೂಡಲೇ ನಿನ್ನ ಇತ್ತೀಚಿನ ಭಾವಚಿತ್ರವನ್ನು ನನಗೆ ಕಳಿಸು. … ಅದಕ್ಕಿಂತ ಮುಖ್ಯವಾಗಿ (ಇದು ನಮ್ಮ ನಡುವೆ ಗುಟ್ಟಾಗಿರಲಿ) ಮಾರಾಟದ ಹಣ ಬಂದಿಲ್ಲ ‘ . ಸ್ವಾಮಿಗಳು ೧೬/೩/೧೮೯೭ ರಂದು ಕ್ರಿಸ್ಟೈನಾ ಕಳಿಸಿದ ಭಾವಚಿತ್ರ ತಲುಪಿದೆಯೆಂದು ತಿಳಿಸಿದ್ದರು. ಈಗ ನಾಲ್ಕೂವರೆ ವರ್ಷಗಳ ನಂತರ ಮತ್ತೊಮ್ಮೆ ಭಾವಚಿತ್ರ ಕೇಳುತ್ತಿದ್ದಾರೆ.
೨/೯/೧೯೦೧ ರಂದು ‘ ನಿನ್ನ ಹಳೆಯ ಭಾವಚಿತ್ರವೊಂದನ್ನು ನೋಡುತ್ತಿದ್ದೆ-ನಾಲ್ಕೈದು ವರ್ಷಗಳ ಹಿಂದೆ ನೀನು ಕಳಿಸಿದ ಒಂದು ಚಿತ್ರ ಅದು. ಕಳೆದ ಬೇಸಗೆಯಲ್ಲಿ ಅದೆಷ್ಟು ತೆಳುವಾಗಿ ಕಂಡೆ ಎನ್ನುವುದು ನನಗೆ ನೆನಪಿದೆ. ಈಗ ನೀನು ಇನ್ನೂ ತೆಳ್ಳಗಾಗಿರಬಹುದು ಎಂದು ಮನಸ್ಸಿಗೆ ತೋಚಿತು….ಸರಿ ಕ್ರಿಸ್ಟೈನಾ ಈಗ ನಿನ್ನ ಇತ್ತೀಚಿನ ಭಾವಚಿತ್ರವನ್ನು ನನಗೆ ಮುಂದಿನ ಪತ್ರದಲ್ಲಿ ಕಳಿಸುವೆಯಾ ? ಒಂದು ವರ್ಷದಲ್ಲಿ ನೀನೆಷ್ಟು ದಪ್ಪವಾಗಿರುವೆ ಎಂದು ನೋಡಬೇಕು ……ಪ್ರಪಂಚದಲ್ಲಿಯೇ ಅತ್ಯಂತ ರುಚಿಕರವಾದ ಈ ಮೀನಿನ ರುಚಿ ನೋಡಲು ನೀನು ಇಲ್ಲಿದ್ದರೆ ಎಷ್ಟು ಚೆನ್ನಾಗಿತ್ತು. ….ನನ್ನ ಮೈ ಪೂರಾ ಒರಟು ಮಚ್ಚೆಗಳಿಂದ ಕೂಡಿದೆ. ಸುತ್ತಲೆಲ್ಲೂ ಹೆಂಗಸರು ಇಲ್ಲದಿರುವುದು ನನ್ನ ಅದೃಷ್ಟ ! …ನನ್ನದೇ ಆದ ವಿಚಾರವಿದೆ. ನಾನು ನಿರಾಶನಾಗೆನು. ಅದನ್ನು ಒಂದು ಸುಂದರ ಸ್ವರ್ಗವನ್ನಾಗಿ ಆದಷ್ಟು ಬೇಗನೆ ಮಾಡುವೆನೆಂಬ ಭರವಸೆಯಿದೆ….ಸ್ವಭಾವದಿಂದ ನಾನು ಅರೆಹುಚ್ಚ ; ನನ್ನ ಅಧಿಕ ಕೆಲಸ ನನ್ನನ್ನು ಆಗಾಗ್ಗೆ ಕೆರಳಿಸುತ್ತದೆ………’ ೮/೧೦/೧೯೦೧ ರ ಪತ್ರದಲ್ಲಿ ‘….. (ನಿನ್ನ ಪತ್ರದ ಪ್ರಕಾರ)-ಓ , ಆ ಉಬ್ಬಸ , ಒರಳಾಟ , ಏದುಸಿರು ಮುಂತಾದವು ! ಹೇಗಾದರೂ ದುಂಡಾದ ಮಾಗಿದ ಹಣ್ಣಿನಂತಿರುವುದು ಜಗತ್ತಿನಲ್ಲಿ ಯಾವುದೂ ಇಲ್ಲ…..ಎಂದಿದ್ದಾರೆ. ೧೨/೧೧/೧೯೦೧- ಇಂದು ಬೆಳಗಿನ ಅಂಚೆ ಡೆಟ್ರಾಯಿಟ್’ನಿಂದ ಒಂದು ಭಾವಚಿತ್ರವನ್ನು ತಂದಿತು. ಅದನ್ನು ಶೀಘ್ರವಾಗಿ ಕಳಿಸಿದವರಿಗೆ ಧನ್ಯವಾದಗಳು. ಅದು ನನಗೆ ಬಹಳ ಇಷ್ಟವಾಯಿತು. ಆದರೆ ಹಳೆಯದು ಪೂರ್ತಿ ಚಿತ್ರ. ಇದು ಮುಂಭಾಗದ ನೋಟ. ಕೊಬ್ಬು ಕಾಣದು. ಇದು ಕೇವಲ ಊಹೆಯೆನಿಸುವುದು. ಒಂದು ರೀತಿಯಿಂದ ನನಗೆ ಹಳೆಯ ಚಿತ್ರ ಒಗ್ಗಿದೆ. ನಾನು ನನ್ನ ಹಳೆಯ ಮಿತ್ರಳನ್ನು ಉದಾಸೀನ ಮಾಡಲಾಗದು. ಎರಡೂ ಚಿತ್ರಗಳು ಚೆನ್ನಾಗಿವೆ. ಒಂದು ಇನ್ನೊಂದರ ವಿಕಾಸ-ಒಳ್ಳೆಯದಕ್ಕಾಗಿಯೇ. ಒಂದು ಸಾಲು ಉತ್ತರವನ್ನು ನಿರೀಕ್ಷಿಸಿದ್ದೆ. ಆದರೆ ಬರಲಿಲ್ಲ…….’ ಸ್ವಾಮಿಗಳು ಕ್ರಿಸ್ಟೈನಾ ಆರೋಗ್ಯ ವಿಚಾರಿಸಿದ್ದರೆ ಒಪ್ಪಬಹುದಿತ್ತು. ಅದರ ಬದಲು ಎರಡು ಬಾರಿ ಪತ್ರ ಬರೆದು ಆಕೆಯ ಭಾವಚಿತ್ರವನ್ನು ತರಿಸಿಕೊಂಡಿದ್ದಾರೆ. ಆಕೆ ಪೂರ್ಣಚಿತ್ರದ ಕಳಿಸದಿದ್ದುದಕ್ಕೆ , ಚಿತ್ರದೊಂದಿಗೆ ಏನನ್ನೂ ಬರೆಯದಿದ್ದುದಕ್ಕೆ ಬೇಸರಿಸಿಕೊಂಡಿದ್ದಾರೆ. ಸರ್ವಸಂಗ ಪರಿತ್ಯಾಗಿಗಳಾದ ಸ್ವಾಮಿಗಳು ಹಲವಾರು ವರ್ಷಗಳಿಂದ ಕ್ರಿಸ್ಟೈನಾ ಭಾವಚಿತ್ರ ಏಕೆ ಇಟ್ಟುಕೊಂಡಿದ್ದಾರೆ ? ಆಕೆ ದಪ್ಪವಾಗಿದ್ದಾಳೋ ಇಲ್ಲವೋ ಎನ್ನುವ ಪರಿಶೀಲನೆ ಏಕೆ ಬೇಕು ? ಮಾಗಿದ ಹಣ್ಣಿನ ಸುದ್ದಿಯೇಕೆ ಎನ್ನುವುವು ನಿಗೂಢ ಸಂಗತಿಗಳಾಗಿ ಕಾಣುತ್ತವೆ.
‘ನೀನು ಭರವಸೆ ಇಟ್ಟಂತೆ ನೀನು ಕಳಿಸಿದ ನರಪೋಷಕ ಟಾನಿಕ್ ಅಷ್ಟೇನೂ ಕೆಲಸ ಮಾಡಲಿಲ್ಲ…....ಅಂದ ಹಾಗೆ ನನ್ನ ಬಲಗಣ್ಣು ಸರಿಯಾಗಿ ಕಾಣುತ್ತಿಲ್ಲ. ಕೆಲವು ವೇಳೆ ಓದಲು ಬರೆಯಲು ಕಷ್ಟವಾಗುತ್ತದೆ. ……. ನಿನ್ನ ಟಾನಿಕ್ ಬಂದಾಗ ಅದನ್ನು ತೆಗೆದುಕೊಂಡು ನೊಡುತ್ತೇನೆ ; ಮತ್ತು ಉಡುಗೊರೆ ಹಾಗೂ ಅದರ ಹಿಂದೆ ಅದನ್ನು ಕೊಡುವವರು ಬರುವರು ಎಂದು ನನ್ನ ಪ್ರಾರ್ಥನೆ.. (ಪದಗಳು ಬಿಟ್ಟು ಹೋಗಿವೆ…)……. ನಿರ್ಜೀವ ಔಷಧಿಗಿಂತ ಹೆಚ್ಚು ಉತ್ತೇಜಕ ಮತ್ತು ಗುಣದಾಯಕ’ ೨೫/೧೧/೧೯೦೧ ರ ಈ ಪತ್ರದಲ್ಲಿ ಕ್ರಿಸ್ಟೈನಾ ತಮಗೆ ಟಾನಿಕ್ ಕುಡಿಸಲು ಬರಬೇಕು ಎನ್ನುವ ಅರ್ಥವನ್ನು ಸ್ವಾಮಿಗಳು ಸೂಚಿಸಿದ್ದಾರೆ. ಸ್ವಾಮಿಗಳು ಬರೆಯುತ್ತಿದ್ದ ನಾನಾ ಅರ್ಥ ನೀಡುವ ಕಾಗದಗಳಿಂದ ಕ್ರಿಸ್ಟೈನಾ ಆತಂಕಕ್ಕೆ ಒಳಗಾಗಿ ಸ್ವಾಮಿಗಳಿರುವ ನೈಜ ಸ್ಥಿತಿಯನ್ನು ತಿಳಿಸಬೇಕೆಂದು ಒತ್ತಾಯಿಸಿದ್ದಳು. ಅದಕ್ಕೆ ಉತ್ತರವಾಗಿ ಸ್ವಾಮಿಗಳು ತಮ್ಮ ರೋಗದ ವರದಿಯನ್ನು ೧೨/೧೨/೧೯೦೧ ರ ಪತ್ರದಲ್ಲಿ ನೀಡಿದ್ದರು. ಅದರಲ್ಲಿಯೇ ಇನ್ನೊಂದು ಕಡೆ ನೀನು ಭಾರತಕ್ಕೆ ಬರುವೆ ಎಂದು ಹಾರೈಸುತ್ತೇನೆ. ತಾಯಿ ನನ್ನ ಪ್ರಾರ್ಥನೆಯನ್ನು ಈಡೇರಿಸದಿದ್ದರೆ ಖಂಡಿತ ಅವಳು ನನ್ನನ್ನು ಸಮುದ್ರಾಚೆಗೆ ಕರೆದೊಯ್ಯುವಳು…..(ಸಾಲು ಬಿಟ್ಟು ಹೋಗಿದೆ….) ಈಗ ಚಿಂತಿಸಬೇಡ. ಒಳ್ಳೆಯ ದಿನಗಳು ಬಾರದಿದ್ದರೆ ನಾವದನ್ನು ಮಾಡೋಣ. ಅಷ್ಟೇ. ಅದರ ಯೋಚನೆ ಬಿಡು. ನಾನು ಯಾವಾಗಲೂ ಮಾತಿನಂತೆ ನಡೆಯುತ್ತೇನೆ. ತಾಯಿ ಅದರಂತೆ ಮಾಡಬೇಕು. ಇಲ್ಲದಿದ್ದರೆ ನಾನು ಅವಳನ್ನು ಬಿಟ್ಟುಬಿಡುತ್ತೇನೆ. ನಾನು ನಿನ್ನಷ್ಟು ವಿಧೇಯನಲ್ಲ……ಆಮೆಗಳನ್ನು ತಿನ್ನಲು ಇದು ಪ್ರಶಸ್ತವಾದ ಕಾಲ. ಆದರೆ ಅವೆಲ್ಲಾ ಅವೆಲ್ಲ ಅಮೆರಿಕದಲ್ಲಿ ಸಿಗುವ ಕಪ್ಪು-ಹಸಿರು ಬಣ್ಣದವು.. ನಾನೀಗ ಮಾಂಸವನ್ನು ತಿನ್ನುವಂತಿಲ್ಲ….ಈ ಬಾರಿ ಚಳಿಗಾಲದಲ್ಲಿ ಕಲ್ಕತದಲ್ಲಿ ನನಗೆ ಸಂತೋಷದಾಯಕ ಒಡನಾಟ ದಕ್ಕುತ್ತದೆ. ಸಾರಾ ಬುಲ್ , ಜೊಸೆಫಿನ್ ಮೆಕ್ಲಿಯಾಡ್ , ಶ್ರೀಮತಿ ಸೇವಿಯರ್ ಮತ್ತು ನಾನು. ಇನ್ನೊಬ್ಬರು ಜೊತೆಗೆ ಸೇರುವುದಾದರೆ ಬಹಳ ಸಂತೋಷ ಪಡುವೆನು…’. ಬಯಕೆ ವ್ಯಕ್ತ ಪಡಿಸಿದ್ದರು. ೨೫/೧೨/೧೯೦೧ರ ಪತ್ರ ‘“ರಾಣಿ”ಯ “ಸಿಪಾಯಿ” ತನಗೆ ಪ್ರೀತಿಪಾತ್ರವಾಗಿರುವುದನ್ನೆಲ್ಲ “ತಾಯಿ”ಗೆ ಬಿಟ್ಟು ಅವಳಿಗಾಗಿ ಯುದ್ಧ ಮಾಡಲು ಪರದೇಶಕ್ಕೆ ಹೋಗಿರುವನು. ಸೈನಿಕ ತನ್ನ ಕೆಲಸವನ್ನು ಮಾಡಬೇಕು. ಬ್ರಹ್ಮಾಂಡದ ರಾಣಿಗೆ ಅತ್ಯಂತ ಚೆನ್ನಾಗಿ ಗೊತ್ತು ‘ ಎಂದು ಮುಕ್ತಾಯಗೊಂಡಿದ್ದು ಅರ್ಥ ಮಾಡಿಕೊಳ್ಳಲು ಆಗದು.
೩೦/೩/೧೯೦೨ರ ಪತ್ರದಲ್ಲಿ ಕ್ರಿಸ್ಟೈನಾಳನ್ನು ಭಾರತಕ್ಕೆ ಸ್ವಾಮಿಗಳು ಸ್ವಾಗತಿಸಿದ್ದಾರೆ. ‘..ನೀನು ಅದೆಷ್ಟು ಸ್ವಾಗತಾರ್ಹಳೆಂದು ನಿನಗೆ ಗೊತ್ತಿದೆ. ನಾನು ಅದನ್ನು ವ್ಯಕ್ತಪಡಿಸಬೇಕಿಲ್ಲ. ಅಭಿವ್ಯಕ್ತಿಯನ್ನು ಎಚ್ಚರಿಕೆಯಿಂದ ಮಂದಗೊಳಿಸುವ ದೇಶವಿದು ‘ ಎಂದು ಎಚ್ಚರಿಸಿದ್ದಾರೆ. ಎರಡನೇ ಬಾರಿ ಪಾಶ್ಚಾತ್ಯ ದೇಶಗಳಿಗೆ ಹೋದಾಗ ತಮ್ಮನ್ನು ಸ್ವಾಗತಿಸಲು ಇಂಗ್ಲೆಂಡ್’ಗೆ ಬಂದಿದ್ದ ಕ್ರಿಸ್ಟೈನಾಳಿಗೆ ೨೨/೭/೧೮೯೯ ರಂದು ಬರೆದ ಪತ್ರದಲ್ಲಿಯೂ ‘ಪೌರಾತ್ಯರು ಭಾವನೆಗಳು ಉಕ್ಕಿ ಹರಿಯುವುದನ್ನು ಇಷ್ಟ ಪಡುವುದಿಲ್ಲ; ಅವರಿಗೆ ಭಾವನೆಗಳನ್ನು ಬಚ್ಚಿಡುವಂತೆ ತರಬೇತಿಯಾಗಿರುತ್ತದೆ….ನಿನ್ನನ್ನು ಬೇಗ ನೋಡುವೆನೆಂಬ ಭರವಸೆಯೊಂದಿಗೆ…’ಎಂದು ತಿಳಿಸಿದ್ದರು. ಸ್ವಾಮಿಗಳು ಕ್ರಿಸ್ಟೈನಾಳಿಗೆ ಮಾತ್ರ ಇಂತಹ ಎಚ್ಚರಿಕೆಗಳನ್ನು ಕೊಡುವುದರ ಹಿನ್ನೆಲೆಯೇನೋ ತಿಳಿಯದು. ೨೭/೫/೧೯೦೨- ಶ್ರೀಮತಿ ಸೇವಿಯರ್ ನೀನು ಸೀರೆ ಉಟ್ಟರೆ ತುಂಬಾ ಸುಂ-ದ-ರವಾಗಿ ಕಾಣುವೆಯೆಂದು ನನಗೆ ಬರೆಯುವರು. .. ಇಡೀ ದಿನ ಏನು ಮಾಡುವೆ, ದಿನವನ್ನು ಹೇಗೆ ಕಳೆಯುವೆ ? ಎಲ್ಲ ವಿವರಗಳನು ಬರೆ, ಆಗಾಗ್ಗೆ ಬರೆ. ಆದರೆ ನನ್ನಿಂದ ದೀರ್ಘವಾದ ಮತ್ತು ತಕ್ಷಣದ ಪತ್ರ ನಿರೀಕ್ಷಿಸದಿರು…’ ಎನ್ನುವ ಮೂಲಕ ಸೀರೆಯ ಉಡುಗೆಗೆ ಪರೋಕ್ಷ ಮೆಚ್ಚುಗೆಯನ್ನು ತಿಳಿಸಿದ್ದರು. ೧೫/೬/೧೯೦೨-ಎಷ್ಟು ಕಾಲ ನೀನು ಶ್ರೀಮತಿ ಸೇವಿಯರ್ ಜೊತೆಗಿರುವೆಯೋ ಅಷ್ಟು ಕಾಲ ನನ್ನ ಮನಸ್ಸು ಹಗುರವಾಗಿರುವುದು. ನೀನು ಕಲ್ಕತ್ತೆಯ ಬಾಗ ಬಜಾರ್'ನಲ್ಲಿದ್ದರೆ ನನ್ನ ಮನಸ್ಸು ಅತಂಕಗೊಳ್ಳುವುದು. ಮಾರ್ಗರೆಟ್ ಜೊತೆ ಕೆಳಗಿನ ಮೈದಾನ ಪ್ರದೇಶಕ್ಕೆ ಬರಬೇಡ ‘ ಎಂದಿದ್ದಾರೆ. ಆಕೆ ಕಲ್ಕತ್ತೆಗೆ ಬಂದರೆ ಸ್ವಾಮಿಗಳಿಗೇಕೆ ಭಯ ?
ಪತ್ರಗಳಲ್ಲಿರುವ ಸ್ವಾಮಿ ವಿವೇಕಾನಂದರು ಭಾಷಣ , ಬರಹಗಳಲ್ಲಿರುವ ಸ್ವಾಮಿ ವಿವೇಕಾನಂದರಿಗಿಂತ ಬೇರೆಯಾಗಿದ್ದಾರೆ. ಆದ್ದರಿಂದ ಸ್ವಾಮಿಗಳ ಪತ್ರಗಳ ವಿವರವಾದ ವಿಶ್ಲೇಷಣೆ ಮಾಡಿದರೆ ಈಗ ಪ್ರಚಲಿತವಿರುವ ವ್ಯಕ್ತಿಗಿಂತ ಬೇರೆಯದೇ ಆದ ವ್ಯಕ್ತಿ ಕಾಣಸಿಗುವುದರಲ್ಲಿ ಯಾವ ಸಂಶಯವೂ ಇಲ್ಲ.
********
ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯಲ್ಲಿರುವ ಅವರ ಪತ್ರಗಳನ್ನು ಮತ್ತು ‘ದಿ ಲೈಫ್-೧೯೧೪’ನಲ್ಲಿರುವ ವಿವರಗಳನ್ನು ಹೋಲಿಸಿ ನೋಡಿದರೆ ಈ ವ್ಯತ್ಯಾಸ ಎದ್ದು ಕಾಣುತ್ತದೆ. ಸ್ವಾಮಿಗಳ ಜೀವನವನ್ನು ಅರಿಯಲು ನೆರವಾಗುವ ಮೂಲ ಆಕರಗಳಲ್ಲಿಯೇ ಕೆಲವು ತೊಡಕುಗಳಿವೆ. ಅವುಗಳಲ್ಲಿ ಮುಖ್ಯವಾದುವು ಹೀಗಿವೆ.
(೧) ರಾಮಕೃಷ್ಣ ಮಠದ ಅದ್ವೈತ ಆಶ್ರಮದ ‘ಸ್ವಾಮಿ ವಿವೇಕಾನಂದ ಇನ್ ದಿ ವೆಸ್ಟ್-ನ್ಯೂ ಡಿಸ್ಕವರೀಸ್- ಸಂಪುಟ-೧ ರಿಂದ ೬ ರಲ್ಲಿ ಎತ್ತಿಗೆಯಾದ ಕೆಲ ಪತ್ರದ ಭಾಗಗಳು ಕಂಪ್ಲಿಟ್ ವರ್ಕ್ಸ್’ನಲ್ಲಿ ಬದಲಾಗಿ , ಕನ್ನಡಕ್ಕೆ ಬರುವ ವೇಳೆಗೆ ಅದಕ್ಕಿಂತಲೂ ಭಿನ್ನವಾಗಿ ಮೂಲ ಆಶಯ ತಿಳಿಯದಂತೆ ಮಾಡಲಾಗಿದೆ. ಇಂಗ್ಲಿಷ್ ಮೂಲದ ಸಂಶೋಧನ ಕೃತಿಗೆ ಓದುಗರು ಕಡಿಮೆ ಅಲ್ಲಿ ಮೂಲ ಪತ್ರವಿರಲಿ, ದೇಶ ಭಾಷೆಗಳ ಜನಕ್ಕೆ ಆರಾಧನೆಯ ಸಂಗತಿಗಳ ಹೊರತಾಗಿ ಬೇರೆ ವಿವಾದದ ಸಂಗತಿಗಳು ತಿಳಿಯಬಾರದು ಎನ್ನುವುದು ಕನ್ನಡದ ಕೃತಿಶ್ರೇಣಿ ಪ್ರಕಟಿಸಿದ ಮೈಸೂರು ರಾಮಕೃಷ್ಣ ಅಶ್ರಮದವರಿಗೆ ಇರುವಂತಿದೆ. ಆದ್ದರಿಂದ ಈಗ ಪ್ರಕಟವಾಗಿರುವ ಕಂಪ್ಲಿಟ್ ವರ್ಕ್ಸ್ ಮತ್ತು ಕೃತಿಶ್ರೇಣಿಯ ಎಲ್ಲ ಮೂಲ ಪತ್ರಗಳನ್ನು ತಟಸ್ಥರಾದ ಮೂರನೆ ಪಕ್ಷದವರು ಅಧ್ಯಯನ ಮಾಡದ ಹೊರತು ಅವುಗಳಲ್ಲಿ ಏನಿದೆ ಮತ್ತು ಓದುಗರಿಗೆ ಯಾವ ರೂಪದಲ್ಲಿ ಒದಗಿಸಲಾಗಿದೆ ಎನ್ನುವುದನ್ನು ಸಂಶಯದಿಂದಲೇ ನೋಡಬೇಕಾಗಿದೆ.
(೨) ಸ್ವಾಮಿಗಳು ಇತರರಿಗೆ ಬರೆದ ಪತ್ರಗಳು ನಮಗೆ ದಕ್ಕುತ್ತವೆಯೇ ಹೊರತು ಇತರರು ಅವರಿಗೆ ಬರೆದ ಪತ್ರಗಳು ಸುಲಭವಾಗಿ ಸಿಗುವುದಿಲ್ಲ. ಸ್ವಾಮಿಗಳು ಇತರರಿಗೆ ಬರೆದ ಪತ್ರಗಳನ್ನು ಸಂಗ್ರಹಿಸುವುದು ಕಷ್ಟ. ಏಕೆಂದರೆ ಇವು ನಾನಾ ಜನರಿಗೆ ಚದುರಿ ಹೊಗಿರುತ್ತವೆಯಲ್ಲದೆ ಪತ್ರಗಳನ್ನು ಪಡೆದವರು ಅವುಗಳನ್ನು ಓದಿದ ನಂತರ ಕಾದಿರಿಸಿಕೊಳ್ಳುವ ಅಭ್ಯಾಸ ಇಟ್ಟುಕೊಂಡಿಲ್ಲದಿರಬಹುದು ಅಥವಾ ಹಾಗೆ ಇಟ್ಟು ಕೊಂಡಿದ್ದರೂ ಅವರ ನಂತರ ಅವರ ಮಕ್ಕಳು ಅವುಗಳ ಪ್ರಾಮುಖ್ಯತೆಯನ್ನು ಅರಿಯದೆ ರದ್ದಿಗೆ ಎಸೆದಿರಬಹುದು. ಇತರರು ಸ್ವಾಮಿಗಳಿಗೆ ಬರೆದ ಪತ್ರಗಳು ಒಂದೇ ಮೂಲಕ್ಕೆ ಎಂದರೆ ಸ್ವಾಮಿ ವಿವೇಕಾನಂದರಿಗೆ ತಲುಪುವುದರಿಂದ ಅವುಗಳನ್ನು ಸಂಗ್ರಹಿಸುವುದು ಸುಲಭ. ಹಾಗಿರುವಾಗ ಕೃತಿಶ್ರೇಣಿಯಲ್ಲಿ ಇತರರು ಸ್ವಾಮಿಗಳಿಗೆ ಬರೆದ ಪತ್ರಗಳು ಏಕಿಲ್ಲ ? ಸ್ವಾಮಿಗಳು ತಮಗೆ ಬಂದ ಪತ್ರಗಳನ್ನು ಓದಿದ ನಂತರ ಹರಿದುಹಾಕುತ್ತಿದ್ದರೇ ಅಥವಾ ನಾಶಗೊಳಿಸುತ್ತಿದ್ದರೇ ? ಹಾಗೆ ಇಲ್ಲ ಎಂದಾದರೆ ಅವರಿಗೆ ಇತರರು ಬರೆದ ಪತ್ರಗಳು ಯಾರ ಬಳಿ ಇವೆ ? ಅವುಗಳನ್ನು ಏಕೆ ಪ್ರಕಟಿಸಿಲ್ಲ?
(೩) ಮನ್ಮಥನಾಥನಾಥ ಭಟ್ಟಾಚಾರ್ಯರಿಗೆ ಸ್ವಾಮಿಗಳು ೫/೯/೧೮೯೪ ರಂದು ಬರೆದೆ ಬಂಗಾಳಿ ಮೂಲದ ಈ ಪತ್ರ ಕನ್ನಡದ ಕೃತಿಶ್ರೇಣಿಯಲ್ಲಿ ಇಲ್ಲವಾದರೂ ಪತ್ರಾವಳಿಯಲ್ಲಿದೆ. (ಕಂಪ್ಲೀಟ್ ವರ್ಕ್ಸ್– ೭, ೪೭೪-೭೫) ಈ ಪತ್ರವನ್ನು ಸಂಪಾದಕರು ಭಾರಿ ಕತ್ತರಿಯಾಡಿಸಿ ಅಲ್ಪ ಭಾಗವನ್ನು ಮಾತ್ರ ಪ್ರಕಟಿಸಿ ಅಡಿಟಿಪ್ಪಣಿಯಲ್ಲಿ ಪುಸ್ತಕ ಪ್ರಕಟಣೆಗೆ ಹೋದ ನಂತರ ಈ ಪತ್ರದ ಮೂಲ ಪ್ರತಿ ಸಿಕ್ಕಿತು ಎಂದು ತಿಳಿಸಿದ್ದಾರೆ. ಆದರೆ ನಂತರದ ಆವೃತ್ತಿಗಳಲ್ಲಿಯೂ ಈ ಪತ್ರದ ಪೂರ್ಣ ಪಾಠವಿಲ್ಲ. ಈ ಪತ್ರದ ಪೂರ್ಣ ಪಾಠ ಸ್ವಾಮಿಗಳ ಘನತೆಗೆ ಕುಂದು ತರುತ್ತದೆ ಎಂದು ಸಂಪಾದಕರು ಭಾವಿಸಿ ಪೂರ್ಣ ಪ್ರಕಟಣೆಯನ್ನು ತಡೆಹಿಡಿದಂತಿದೆ. ಈ ಪತ್ರ ಅಸ್ತಿತ್ವದಲ್ಲಿ ಇಲ್ಲವೇನೋ ಎನ್ನುವಂತೆ ಕತ್ತಲಲ್ಲಿ ಇಡಲಾಗಿದೆ. ಕೆಲ ಪತ್ರಗಳನ್ನು ಸಂಪಾದಕರು ಉದ್ದೇಶಪೂರ್ವಕವಾಗಿ ಕತ್ತರಿಸಿ, ಮಾರ್ಪಡಿಸಿ ಹಾಗೂ ಪೂರ್ಣ ಪತ್ರವನ್ನು ಪ್ರಕಟಿಸದೆ ಅಂಶಿಕ ಭಾಗಗಳನ್ನು ಮಾತ್ರ ಕೊಟ್ಟಿದ್ದಾರೆ.
ಕಂಪ್ಲಿಟ್ ವರ್ಕ್ಸ್/ಕೃತಿಶ್ರೇಣಿಯಲ್ಲಿ ಕತ್ತರಿಯಾಡಿಸಿರುವ , ವಿಷಯ ಮುಚ್ಚಿಟ್ಟಿರುವ , ತಪ್ಪು ಅನುವಾದಗಳ ಒಂದು ಸ್ಥೂಲ ಪಟ್ಟಿ ಮುಂದಿದೆ.
ಕಂಪ್ಲೀಟ್ ವರ್ಕ್ಸ್ /ಕೃತಿ ಶ್ರೇಣಿ ಪತ್ರಗಳಲ್ಲಿ ಹೀಗೆ ಮಾಹಿತಿಗೆ ಕತ್ತರಿ , ಅನುವಾದದಲ್ಲಿ ವ್ಯತ್ಯಾಸ , ಅರ್ಥಾಂತರ ಮಾಡಲಾಗಿದೆ. ಹೀಗೆ ಮಾಡಲು ಕಾರಣವೇನು ? ಈ ಮೂಲ ಪತ್ರಗಳ ನೇರ ನಕಲುಗಳನ್ನು ಏಕೆ ಬಹಿರಂಗಗೊಳಿಸಬಾರದು ? ಇದಕ್ಕೆ ಎದ್ದು ತೋರುವ ಒಂದು ಉದಾಹರಣೆ ಕೊಡಬಹುದು.
ಕಂಪ್ಲೀಟ್ ವರ್ಕ್ಸ್/ಕೃತಿಶ್ರೇಣಿಗಳಲ್ಲಿ ಪ್ರಕಟವಾಗದ ಎರಡು ಪತ್ರಗಳು ರಾಜಸ್ಥಾನದ ಜುಂಝುನು ಪಟ್ಟಣದ ದಾಖಲೆಗಳ ಸಂಗ್ರಹಾಗಾರದಲ್ಲಿ ಆಕಸ್ಮಿಕವಾಗಿ ೧೯೯೯ ರಲ್ಲಿ ಪತ್ತೆಯಾದವು. ಈ ಎರಡು ಪತ್ರಗಳು ೨೪ ಫೆಬ್ರವರಿ ೧೯೯೯ ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಮೊದಲ ಬಾರಿಗೆ ಪ್ರಕಟಗೊಂಡವು. ಸ್ವಾಮಿ ವಿವೇಕಾನಂದರು ಈ ಹೆಸರನ್ನು ಪಡೆಯುವ ಮೊದಲು ಸ್ವಾಮಿ ಸಚ್ಚಿದಾನಂದ ಹೆಸರಿನಲ್ಲಿ ಮದ್ರಾಸಿನ ಬಳಿ ವಾಸಿಸುತ್ತಿರುವಾಗ ಖೇತ್ರಿ ಮಹಾರಾಜ ಅಜಿತ್ ಸಿಂಗ್’ಗೆ ಬರೆದ ಪತ್ರಗಳಿವು. ಮೊದಲನೆ ಪತ್ರವನ್ನು ೧೫/೨/೧೮೯೩ ಮತ್ತು ಎರಡನೇ ಪತ್ರವನ್ನು ೨೨/೫/೧೮೯೩ ರಂದು ಬರೆಯಲಾಗಿದೆ. ಈ ಪತ್ರಗಳ ಭಾಷೆ , ಪದ ಪ್ರಯೋಗಗಳು ವೈಲಕ್ಷ್ಯಣಗಳಿಂದ ತುಂಬಿವೆ. ಬರವಣಿಗೆಯಲ್ಲಿ ಎಲ್ಲಿಯೂ ಚಿಹ್ನೆಗಳನ್ನು , ಉದ್ದರಣಗಳನ್ನು ಬಳಸಿಲ್ಲ. ಖೇತ್ರಿಯ ಮಹಾರಾಜರನ್ನು ‘ಯುವರ್ ಹೈನೆಸ್’ ಎನ್ನುವ ಬದಲು ಹೈ ಅಪ್ (ಮೇಲಿನವನು-ದೇವರು?) ಎನ್ನಲಾಗಿದೆ. ಎರಡನೆಯ ಪತ್ರದಲ್ಲಿ ‘ಯುವರ್ಸ್ ಒಬಿಡಿಯೆಂಟ್ಲಿ’ ಎಂದು ಸ್ವಾಮಿಗಳು ಬರೆದಿದ್ದಾರೆ. ಸಚ್ಚಿದಾನಂದ ಹೆಸರನ್ನು ಸಚ್ಚಿತಾನಂದ ಎಂದು ಬರೆದು ಸಂಸ್ಕೃತ ಸಂಧಿ ದೋಷ ಎಸಗಿದ್ದಾರೆ. ಮೊದಲನೆಯ ಪತ್ರ ಸ್ವಾಮಿಗಳ ಭಾಷಾ ಕೌಶಲ್ಯ ಮತ್ತು ವಾಕ್ಯ ರಚನೆಯ ಕೊರತೆಗಳ ಬಗ್ಗೆ ಹಾಗೆಯೇ ಅವರಿಗಿದ್ದ ಕುರುಡು ನಂಬಿಕೆಗಳ ಬಗ್ಗೆ ಹೊಸ ಬೆಳಕು ಚೆಲ್ಲುತ್ತದೆ. ಎರಡನೇ ಪತ್ರದಲ್ಲಿ ಸ್ವಾಮಿಗಳು ರಾಜನಿಗೆ ‘ತಮ್ಮ ವಿಧೇಯ’ ಎಂದು ಬರೆದಿರುವುದರಿಂದ ಅವರ ನಿರ್ಭೀತ ನಡೆ,ನುಡಿಗಳ ಬಗ್ಗೆ ಮರು ಚಿಂತಿಸುವಂತೆ ಮಾಡುತ್ತದೆ. ರಾಮಕೃಷ್ಣ ಮಠದ ಪ್ರಬುದ್ಧ ಭಾರತ ಪತ್ರಿಕೆ ಈ ಎರಡೂ ಪತ್ರಗಳನ್ನು ಮರುಪ್ರಕಟಿಸಿತು. ಪ್ರಕಟಿಸುವಾಗ ಪತ್ರಗಳನ್ನು ಇರುವಂತೆಯೇ ಪ್ರಕಟಿಸದೆ ತಪ್ಪಾಗಿ ಬರೆದ ಪದಗಳನ್ನು ತಿದ್ದಿ , ವಾಕ್ಯದಲಿ ಚಿಹ್ನೆಗಳನ್ನು ಬಳಸಿ , ‘ಯುವರ್ಸ್ ಒಬಿಡಿಯೆಂಟ್ಲಿ’ ಎಂದಿರುವುದನ್ನು ‘ಯುವರ್ಸ್ ಇನ್ ದಿ ಲಾರ್ಡ್’ ಎಂದು ಬದಲಿಸಿ ಪ್ರಕಟಿಸಿತು. ಆದ್ದರಿಂದ ಕೃತಿಶ್ರೇಣಿ/ಕಂಪ್ಲಿಟ್ ವರ್ಕ್ಸ್’ನಲ್ಲಿರುವ ಪತ್ರಗಳು , ಟಿಪ್ಪಣಿಗಳು , ಬರಹಗಳು ಮೂಲದಲ್ಲಿ ಇರುವಂತೆಯೇ ಇವೆಯೇ ಅಥವಾ ಸಂಪಾದಕರಿಂದ ಅನುಕೂಲಕರವಾಗಿ ತಿದ್ದಲ್ಪಟ್ಟಿವೆಯೇ ಎನ್ನುವ ಅನುಮಾನ ಬಾರದಿರದು.
ಇಂಗ್ಲಿಷ್’ನಿಂದ ಕನ್ನಡಕ್ಕೆ ಪತ್ರಗಳನ್ನು ಭಾಷಾಂತರಿಸುವಾಗಲೂ ಅನುವಾದಕರು/ಸಂಪಾದಕರು ತಮ್ಮ ಪ್ರಭಾವ ತೋರಿಸಿದ್ದಾರೆ. ಕನ್ನಡದ ಕೃತಿ ಶ್ರೇಣಿಯಲ್ಲಿ ಪ್ರಕಟವಾಗಿರುವ ಪತ್ರಗಳೆಲ್ಲವೂ ವಿಶ್ವಾಸಾರ್ಹವಾಗಿಲ್ಲ. ಕನ್ನಡ ಅವತರಣಿಕೆಯ ಪತ್ರಗಳ ಅನುವಾದಕರು , ಸಂಪಾದಕರು ಹಲವು ಪತ್ರಗಳ ಮೂಲ ಸ್ವರೂಪವನ್ನೇ ಬದಲಾಯಿಸಿದ್ದಾರೆ. ಸ್ವಾಮಿಗಳ ಘನತೆಗೆ ಕುಂದು ಬರಬಹುದೆಂದು ಭಾವಿಸಿ ಹಲವು ಭಾಗಗಳನ್ನು ಕತ್ತರಿಸಿದ್ದಾರೆ , ಕೆಲವನ್ನು ಎಗರಿಸಿದ್ದಾರೆ , ಕೆಲವನ್ನು ಅನುವಾದದಲ್ಲಿ ಮೆದುಗೊಳಿಸಿದ್ದಾರೆ. ‘ಕಂಪ್ಲೀಟ್ ವರ್ಕ್ಸ್’ ನ ಕನ್ನಡ ಅವತರಣಿಕೆ ಕೃತಿಶ್ರೇಣಿಗೆ ರಾಷ್ಟ್ರಕವಿ ಕುವೆಂಪುರವರು ೧೯೬೭ ರಲ್ಲಿ ಮುನ್ನುಡಿ ಬರೆದಿದ್ದಾರೆ, ವ್ಯಕ್ತಿ ಪೂಜೆಗೆ ಇಳಿದರೆ ಕುವೆಂಪುರಂತಹವರು ಕೂಡ ಹೇಗೆ ದಾರಿ ತಪ್ಪಬಲ್ಲರು ಎನ್ನುವುದಕ್ಕೆ ಕೃತಿಶ್ರೇಣಿಯಲ್ಲಿರುವ ಸ್ವಾಮಿಗಳ ಪತ್ರಗಳೇ ಸಾಕ್ಷಿಯಾಗಿವೆ. ಕೃತಿಶ್ರೇಣಿಯಲ್ಲಿ ಕೆಲವು ಪತ್ರಗಳನ್ನು ಕತ್ತರಿಸಿ, ಮಾರ್ಪಡಿಸಿದ್ದು ಏಕೆ , ಅವುಗಳಲ್ಲಿ ಮುಚ್ಚಿಡುವಂತಹುದು ಏನಿದೆ ಎನ್ನುವ ಪ್ರಶ್ನೆಯನ್ನು ನಿರಂಕುಶಮತಿಗಳಾದ ಕುವೆಂಪುರವರನ್ನು ಕಾಡದೆ ಅವರು ಸ್ವಾಮಿಗಳ ವಿಭೂತಿ ಸದೃಶ್ಯ ಜೀವನವನ್ನು ಅವರು ನಡೆಸಿದ ಜೀವನಕ್ಕಿಂತಲೂ ಮಾಡಿದ ಭಾಷಣಗಳ ಮೇಲೆ ಗ್ರಹಿಸಿದ್ದಾರೆ. ಕಂಪ್ಲಿಟ್ ವರ್ಕ್ಸ್/ಕೃತಿಶ್ರೇಣಿಯ ಪತ್ರಗಳಲ್ಲಿ ನಡೆಸಿರುವ ಚಳಕಗಳಿಗೆ ಒಂದೆರಡು ಉದಾಹರಣೆಗಳು ಮುಂದಿದೆ.
(ಅ) ಸ್ವಾಮಿಗಳು ಪಂಡಿತ ಶಂಕರ ಲಾಲ್’ಗೆ ಮಲಬಾರಿನ ಸಾಮಾಜಿಕ ಸ್ಥಿತಿಗತಿಗಳನ್ನು ವಿವರಿಸುತ್ತ ೨೦/೯/೧೮೯೨ ರಂದು ಬರೆದ ಪತ್ರದಲ್ಲಿ where every bit of land is owned by the Brahmins, and the females, even of the royal family, hold it as high honor to live in concubinage with the Brahmin ಪ್ರತಿಯೊಂದು ಅಂಗುಲ, ಭೂಮಿಯೂ ಬ್ರಾಹ್ಮಣರಿಗೆ ಸೇರಿದೆ. ಎಂದು ಅನುವಾದಿಸಿ ರಾಜಮನೆತನದವರು ಸೇರಿದಂತೆ ಎಲ್ಲ ಹೆಂಗಸರು ಬ್ರಾಹ್ಮಣರ ಉಪಪತ್ನಿಯರಾಗಿರುವುದು ಗೌರವವೆಂದು ಭಾವಿಸುತ್ತಾರೆ’ ಎನ್ನುವ ಗೆರೆ ಎಳೆದ ವಾಕ್ಯವನ್ನು ಕತ್ತರಿಸಲಾಗಿದೆ.
(ಆ) ೨/೫/೧೮೯೪ ರಂದು ಇಸಾಬೆಲ್ಲಾ ಮೆಕೆಂಡ್ಲಿಗೆ ಬರೆದ ಪತ್ರದಲ್ಲಿ ‘…….. I have Eaten a good slice of meat just now because in the evening I am going to speaking in a Vegetarian Dinner . Well Iam a vegetarian for all that because I prefer it when can I get it- I have another invitation to lunch with Lymon Abbot day after tomorrow. After all Iam having nice time and hope to have very nice time in Bosotn-only that nasty , nasty lecturing is disgusting. However as soon as 19th is over –one leap from Boston Bake beans to Chicago smoked hams and then I will have a long , long breath and rest for two , three weeks. I will simply sit down and talk talk and smoke.
ಇದನ್ನು ಕನ್ನಡದ ಕೃತಿಶ್ರೇಣಿಯಲ್ಲಿ ‘ .. ಸಾಯಂಕಾಲ ಶಾಕಾಹಾರಿಗಳ ಒಂದು ಭೋಜನ ಕೂಟದಲ್ಲಿ ಮಾತನಾಡುತ್ತೇನೆ.ನಾನು ಕೂಡ ಶಾಖಾಹಾರಿಯೇ ! ಅದು ನನಗೆ ಸಿಕ್ಕರೆ ತೆಗೆದುಕೊಳ್ಳುತ್ತೇನೆ. ನಾಡಿದ್ದು ಲೈಮನ್ ಮನೆಯಲ್ಲಿ ನನಗೊಂದು ಆಮಂತ್ರಣವಿದೆ. ಅಂತೂ ಇದುವರೆಗೆ ಎಲ್ಲಾ ಸರಿಯಾಗಿದೆ. ಆದರೆ ಆ ಹಾಳು ಉಪನ್ಯಾಸ ಬೇಜಾರಾಗಿದೆ. ಅಂತೂ ೧೯ ರ ನಂತರ ಬೋಸ್ಟನ್’ನಿಂದ ಷಿಕಾಗೊಗೆ ಹಾರಿ ಹೋಗುವೆನು’ ಎಂದು ಭಾಷಾಂತರಿಸಿದೆ. ಅನುವಾದಕರು ಗೆರೆ ಎಳೆದ ಮಾತುಗಳನ್ನು ಅರಿತುಕೊಳ್ಳುವಷ್ಟು ಕನ್ನಡಿಗರು ಪ್ರಬುದ್ಧರಲ್ಲವೆಂದು , ಬೋಸ್ಟನ್ ಬೇಯಿಸಿದ ಕಾಳುಗಳಿಗೆ ಮತ್ತು ಷಿಕಾಗೊ ಹೊಗೆಯಾಡಿಸಿದ ಹಂದಿ ಮಾಂಸದ ಸವಿಗೆ ಖ್ಯಾತ ಎನ್ನುವ ಮಾಹಿತಿ ಅವರಿಗೆ ತಿಳಿಯಬಾರದೆಂದು ಭಾವಿಸಿರುವಂತಿದೆ.
(ಇ) ೯/೯/೧೮೯೫ ರಂದು ಮಾಂಸಾಹಾರ ಕುರಿತು ಅಳಸಿಂಗ ಪೆರುಮಾಳ್ ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತ ‘I am surprised you take so seriously the missionaries, nonsense. Of course I eat everything. ‘ ಎಂದು ಹೇಳಿರುವುದಲ್ಲಿ ಗೆರೆ ಎಳೆದ ವಾಕ್ಯವನ್ನು ಕೈಬಿಡಲಾಗಿದೆ.
(ಈ) ೧೮೯೭ ರಲ್ಲಿ ಅಮೆರಿಕದಿಂದ ಹಿಂದಿರುಗಿದ ನಂತರ ಸ್ವಾಮಿಗಳು ಕಲಕತ್ತಕ್ಕೆ ಹೋಗುವ ಮೊದಲು ಮೇರಿ ಹೇಲ್’ಗೆ ಡಾರ್ಜಿಲಿಂಗ್’ನಿಂದ ಬರೆದ ಕೊನೆಯ ಪತ್ರದಲ್ಲಿ ‘ ಕೆಲ ದಿನಗಳ ಹಿಂದೆ ನೀನು ಬರೆದ ಸುಂದರ ಪತ್ರ ತಲುಪಿತು. ನಿನ್ನೆ ಹ್ಯಾರಿಯೆಟ್ ಮದುವೆಯನ್ನು ತಿಳಿಸುವ ಪತ್ರ ಸಿಕ್ಕಿತು. ಭಗವಂತ ಸುಖೀ ಜೋಡಿಯನ್ನು ಆಶೀರ್ವದಿಸಲಿ (………… ಕತ್ತರಿಸಿದ ಭಾಗ…. ) . ನಾನು ಹ್ಯಾರಿಯೆಟ್’ಗೆ ಕೆಲವು ಮದುವೆಯ ಉಡುಗೊರೆಗಳನ್ನು ಕಳಿಸಬೇಕೆಂದಿದ್ದೆ. ಆದರೆ ಅಮೆರಿಕದಲ್ಲಿ ‘ಹೊರೆ’ ಹೆಚ್ಚಿರುವುದರಿಂದ ಅವುಗಳನ್ನು ಕೊಡಲು ಕಾಯಬೇಕಾಗಿದೆ. ನಾನು ಶೀಘ್ರದಲ್ಲಿ ಅವರನ್ನು ಯುರೋಪ್’ನಲ್ಲಿ ಕಾಣಬಹುದು. ಆದರೂ ನಿನ್ನ ಮದುವೆಯ ನಿಶ್ಚಿತಾರ್ಥವನ್ನು ಘೋಷಿಸಿದರೆ ನನಗೆ ಬಹಳ ಸಂತೋಷವಾಗುತ್ತದೆ. ಒಂದೇ ಪತ್ರದಲ್ಲಿ ಅರ್ಧ ಡಜನ್’ಗಿಂತ ಹೆಚ್ಚು ಪುಟಗಳನ್ನು ತುಂಬುವ ಭರವಸೆ ನೀಡುತ್ತೇನೆ. (…… ಕತ್ತರಿಸಿದ ಭಾಗ) ಎಂದಿದ್ದಾರೆ. (೨೮/೪/೧೮೯೭) . ಕಂಪ್ಲೀಟ್ ವರ್ಕ್ಸ್ ಮತ್ತು ಕೃತಿಶ್ರೇಣಿಗಳಲ್ಲಿ ಕತ್ತರಿಸಿರುವ ಎರಡನೇ ಭಾಗ ನಿಖಿಲಾನಂದರ ‘ವಿವೇಕಾನಂದ-ದಿ ಯೋಗಾಸ್ ಅಂಡ್ ಅದರ್ ವರ್ಕ್ಸ್ ‘ ಕೃತಿಯಲ್ಲಿ ಹೀಗಿದೆ. ‘ನೀನೇಕೆ ಮಿ. ಹೋವ್ ಕೈಹಿಡಿದು ಕೆಲಸ ಮುಗಿಸಬಾರದು. (ಆಗ ಮೇರಿಯ ಪ್ರಿಯತಮ ಕಾರ್ಲೊ ಗಯ್ಸಪ್ಪೆ ಮ್ಯಾಟಿನಿ ಆಗಿರಲಿಲ್ಲ.) ಆಗ ನಾವು ‘ಒಳ್ಳೆಯದರಲ್ಲಿ ಕೊನೆಯಾಗುವುದೆಲ್ಲ ಒಳ್ಳೆಯದೇ’ ಎನ್ನುವ ಹಾಡು ಹಾಡಬಹುದು. ಇಸಾಬೆಲ್ಲಾ ಸುದ್ದಿ ಏನು ? ಯಾಕೆಗೆ ಯಾರಾದರೂ ಸಿಕ್ಕರೇ? ಅದಿರಲಿ ನಾನು ….. ವೀನಸ್ (ವಿಗ್ರಹವನ್ನು) ನೋಡಿದೆ…ಅದನ್ನು ನೀವು ಏನೆಂದು ಕರೆಯುತ್ತಿರಲ್ಲ ? ಆಹಾ ಆಕೆಯ ಮುಖ ಆ ವಿಗ್ರಹದ ಮುಖದಂತೆಯೇ ಇದೆ. ಆಕೆಯ ಕೈಗಳು ಆ ವಿಗ್ರಹದ ಕೈಗಳಿಗಿಂತ ಉತ್ತಮವಾಗಿವೆ. ನಮ್ಮ ಅಶಿಕ್ಷಿತರ ದೃಷ್ಟಿಯಲ್ಲಿ ಅದರ ಕೈಗಳು ಕೊರಡಿನಂತಿವೆ. ಅದೇನೆ ಇರಲಿ ಇಸಾಬೆಲ್ಲಾ ಸುಂದರಿ-ವೀನಸ್ ವಿಗ್ರಹದಂತೆ. ವೀನಸ್ (ವಿಗ್ರಹ) ಸುಂದರವಾಗಿದೆ ಏಕೆಂದರೆ ಅದು ಇಸಾಬೆಲ್ಲಾ ಇದ್ದಂತಿದೆ. ನನಗನ್ನಿಸುವಂತೆ ಆಕೆ ವಿಗ್ರಹಕ್ಕಿಂತ ಅದೆಷ್ಟೋ ಚೆಲುವೆ.’ (1) ಸ್ವಾಮಿಗಳು ಮುಂದೆ ಮೇರಿ ಮತ್ತು ಇಸಾಬೆಲ್ಲರ ಮುಂದಿನ ಸಾಂಸಾರಿಕ ಜೀವನದ ಬಗ್ಗೆ ಅಣಕ ಮತ್ತು ವ್ಯಂಗ್ಯಗಳನ್ನು ಬೆರಸಿ ಬರೆದಿದ್ದಾರೆ. ನಿಖಿಲಾನಂದರ ಪುಸ್ತಕದಲ್ಲಿರುವ ಪತ್ರದ ಈ ಹೇಳಿಕೆಗಳಿಂದ ಸ್ವಾಮಿಗಳ ವ್ಯಕ್ತಿತ್ವ ಮತ್ತು ಸಾರ್ವಜನಿಕ ಬಿಂಬಕ್ಕೆ ಧಕ್ಕೆಯಾಗುತ್ತದೆಯೆಂದು ಭಾವಿಸಿ ಪತ್ರಮಾಲೆಯ ಸಂಪಾದಕರು ಈ ಭಾಗಕ್ಕೆ ಕತ್ತರಿ ಹಾಕಿದ್ದಾರೆ.
(ಉ) ೨೦/೬/೧೮೯೭ ರಂದು ಬ್ರಹ್ಮಾನಂದರಿಗೆ ಬರೆದ ಪತ್ರದ ಕೆಲ ಭಾಗಗಳನ್ನು ಸಂಪಾದಕರು ಕತ್ತರಿಸಿದ್ದಾರೆ. ಈ ಭಾಗದ ಮರು ನಿರ್ಮಾಣ ಹೀಗಿದೆ. ‘ ನಿನ್ನೆ (ಜೂನ್೧೯) ನಾನು (ದೇವಲ್ಧರ್’ನಿಂದ) ಆಲ್ಮೋರಕ್ಕೆಬಂದೆನು. ನಾನುಇನ್ನುಆತೋಟಕ್ಕೆಹೋಗುವುದಿಲ್ಲ. (ಮುಂದೆಸ್ವಾಮಿಗಳುಈನಿಲುವನ್ನುಬದಲಾಯಿಸುತ್ತಾರೆ). ಆದ್ದರಿಂದಮಿಸ್ಮುಲ್ಲರ್ಅತಿಥಿಯಾಗಿಇಂಗ್ಲಿಷ್ಪದ್ದತಿಯಂತೆದಿನಕ್ಕೆಮೂರುಊಟಗಳನ್ನುನಾನುಮಾಡಬೇಕು. …………………. ದಯವಿಟ್ಟುಅಗತ್ಯಕ್ಕೆತಕ್ಕಂತೆಬಾಡಿಗೆಗೆಮನೆಗಳನ್ನುಗೊತ್ತುಮಾಡು. ಇದಕ್ಕಾಗಿನನ್ನನ್ನುಕೇಳುವಅಗತ್ಯವಿಲ್ಲ. ‘ ಈ ಪತ್ರದಿಂದ ಕೆಲಕಾಲ ಸ್ವಾಮಿಗಳು ಮಿಸ್ ಮುಲ್ಲರ್ ಅತಿಥಿಯಾಗಿ ಆಕೆಯ ಮನೆಯಲ್ಲಿದ್ದರು ಎಂದು ತಿಳಿಯುತ್ತದೆ. ಇದನ್ನು ಅವರ ಜೀವನ ಚರಿತ್ರೆಗಳು ಹೇಳುವುದಿಲ್ಲ.
(ಊ) ೬/೮/೧೮೯೯- ಸಾರಾ ಬುಲ್- ‘….Only if Brahmananda spends some in the lawsuit as I must not be robbed that way--if he does I will make it good anyway if I live to do it…..’ ಬ್ರಹ್ಮಾನಂದನೇನಾದರೂ ಆ ಮಹಿಳೆಯ ವಿರುದ್ಧ ಹೀಗೆ ನನ್ನನ್ನು ದೋಚಬಾರದೆಂದು ಆಕೆಯ ಮೇಲೆ ಮೊಕದ್ದಮೆ ಹೂಡಲು ಖರ್ಚು ಮಾಡಿದರೆ ಆ ಹಣ ನನಗೆ ಉಳಿಯುವದು-ನಾನು ಬದುಕಿದ್ದರೆ ಎಂದು ಅನುವಾದ ಮಾಡಲಾಗಿದ್ದು ‘ if he does I will make it good anyway if I live to do it ‘ ಎನ್ನುವುದನ್ನು ಬದಲಿಸಲಾಗಿದೆ.
(ಋ) ಎಡ್ವರ್ಡ್ ಸ್ಟರ್ಡಿ ಸ್ವಾಮಿಗಳ ವೈರಾಗ್ಯವನ್ನು ಪ್ರಶ್ನಿಸಿ ಪತ್ರ ಬರೆದಿದ್ದ ಪತ್ರ ಓದಿ ಸ್ವಾಮಿಗಳು ೪/೯/೧೮೯೯ ರಂದು ಸಾರಾ ಬುಲ್ ‘ಗೆ ಪತ್ರ ಬರೆದಿದ್ದರು. ಕೃತಿಶ್ರೇಣಿಯಲ್ಲಿ ಈ ಪತ್ರವನ್ನು ‘……ಯಾವುದು ಉತ್ತಮವೆಂದು ಜಗನ್ಮಾತೆಗೆ ಗೊತ್ತು. ಇಷ್ಟೇ ನನ್ನ ವಿಷಯ…..’ ಎಂದು ಒಂದು ಸಾಲಿಗೆ ಇಳಿಸಿದ್ದಾರೆ. ಈ ಪತ್ರದ ಇತರ ಭಾಗವನ್ನು ಇದೇ ದಿನಾಂಕದಡಿಯಲ್ಲಿ ಇನ್ನೊಂದು ಪತ್ರವೇನೋ ಎನ್ನುವಂತೆ ಮಾಡಿದ್ದಾರೆ. (ಪತ್ರ ೪೨೬ ಮತ್ತು ೪೨೯ , ಸಂಪುಟ ೫) . ಸ್ವಾಮಿಗಳ ವೈರಾಗ್ಯವನ್ನು ಪ್ರಶ್ನಿಸಿದ್ದ ವಿವಾದಗಳನ್ನು ಮುಚ್ಚಿಹಾಕಲು ಹುಡುಕಿಕೊಂಡಿರುವ ದಾರಿಯಿದು.
(ೠ) ಸ್ವಾಮಿಗಳ ವೈರಾಗ್ಯವನ್ನು ಪ್ರಶ್ನಿಸಿ ಎಡ್ವರ್ಡ್ ಸ್ಟರ್ಡಿ ಬರೆದ ಪತ್ರಕ್ಕೆ ಸ್ವಾಮಿಗಳು ಉತ್ತರಿಸಿದ್ದರು. ಈ ಪತ್ರ ಕಂಪ್ಲೀಟ್ ವರ್ಕ್ಸ್ ಮತ್ತು ಕೃತಿ ಶ್ರೇಣಿಯಲ್ಲಿ ೧೪/೯/೧೮೯೯ ದಿನಾಂಕದಡಿಯಲ್ಲಿ ಪ್ರಕಟಗೊಂಡಿದೆ. ಮೂಲ ಪತ್ರವನ್ನು ಸಂಪೂರ್ಣ ಮಾರ್ಪಡಿಸಿ, ತಿದ್ದಿ , ಪತ್ರದಲ್ಲಿರುವ ಸಂಗತಿಗಳನ್ನು ಮುಚ್ಚಿಟ್ಟು ಪ್ರಕಟಿಸಲಾಗಿದೆ. ಇದೇ ರಾಮಕೃಷ್ಣ ಮಠದ ಅದ್ವೈತ ಆಶ್ರಮದ ‘ಸ್ವಾಮಿ ವಿವೇಕಾನಂದ ಇನ್ ದಿ ವೆಸ್ಟ್-ನ್ಯೂ ಡಿಸ್ಕವರೀಸ್-ಎ ನ್ಯೂ ಗಾಸ್ಪೆಲ್ , ಪಾರ್ಟ್-೫ , ನಾಲ್ಕನೇ ಆವೃತ್ತಿ-೧೯೯೮ರಲ್ಲಿ ಸಂಪೂರ್ಣ ಪತ್ರ ನೀಡಲಾಗಿದೆ. ಪತ್ರದಲ್ಲಿ ಮುಖ್ಯವಾದ ಭಾಗ ಹೀಗಿದೆ. (2)
‘ Well I was given some correspondence between you and Miss Noble to read the other day-Iam sorry we could not come up to your ideal. But my experience of life is we so rarely find a person who comes upto that. Then again it is almost impossible for anyone to keep steady on the plane we assign to him in that ideal. We are so human anad liable to change for good or worse. At the same time like the earth’s rotating we are always leaving the change in us out of calculation and attribute it to all the external ideals……….I so long thought it was only the fault of enslaved races like mine-but that manlier races like yours should also have it and suddenly bring it to light without any previous warning makes me sad. ….. I hear also that there has been some talk about the money you gave me., I got £500 = 7500 Rs.+ £500 = 7500 Rs. from Miss Soutter [Souter], Miss Muller gave through Goodwin 30,000 Rs. total 45,000 Rs. Miss Muller got us to buy a piece of land which cost 40,000 Rs: and about 4,000 to level it and fill up the huge gaps in it, as it was a dockyard. I have a building on it-not large-and a chapel and library &c. That has been paid for by the Indian friends-and Mrs. Bull of America. The land alone with the improvements will cover more than the sum I got from my English friends. An inquiry in the Registrar's records of the Howrah Dist. Bengal will show the truth of what I state nor have I even spent a penny of the money given to me by anyone in any country for my work on myself. For my own private expenses I in America used to get money by lecturing or writing in the papers. In India Mrs. Sevier and the Rajah of Khetri used to give me little sums to cover it. Whenever you think it necessary the accounts of every penny the Eng. people gave me is ready. Miss Noble's school was started with funds I got in India from the Maharajah of Kashmir and my Madras publications and her own money largely. Mrs. Johnson thinks the attitude of Miss Noble towards me is very unsatisfactory-and I am responsible for that. I do not know how I can be responsible for ideas another person has of me of which I am not even cognisant of!!! How could I know your or Mrs. Johnson's present mental attitude towards me if you did not through the American friends let me know of it? I am told there has been some discussion about some funds between you and Miss Noble-am I to be responsible for that too? Did I write to you to give me any money? I don't remember myself asking for pecuniary help from anybody anywhere. If they helped me of their own accord I took it, when they gave it to me personally I spent it; mostly on others; when for the work-it has been spent on the work. I can understand well how differences of opinion tastes and ideals should naturally arise in the course of years-but how so much hatred and dislike may slowly and without any warning expression, gather round little trifling personal peculiarities I cannot understand.
I so long thought it was only the fault of enslaved races like mine; but that manlier races like yours should also have it, and suddenly bring it to light without any previous warning, makes me sad. Of course it is my Karma-and I am glad that it is so for, though it smarts for the time, it is another great experience of life, which will be useful either in this or in the next. If you or Miss Muller or Miss Soutter repent of the help you gave to my work-only give me time, I will try my best to pay it back....
ಕತ್ತರಿಸಲಾದ ಮೇಲಿನ ಭಾಗದ ಕನ್ನದ ಅನುವಾದ ಮುಂದಿದೆ-
‘ ಒಂದು ದಿನ ನಿನ್ನ ಮತ್ತು ಮಿಸ್ ನೋಬಲ್ ನಡುವೆ ನಡೆದ ಪತ್ರ ವ್ಯವಹಾರವನ್ನು ಓದಲು ನನಗೆ ಕೊಡಲಾಯಿತು. ನಾವು ನಿನ್ನ ಆದರ್ಶದ ಮಟ್ಟಕ್ಕೆ ಬರಲಾಗದ್ದಕ್ಕೆ ಕ್ಷಮೆಯಿರಲಿ. ನನ್ನ ಜೀವನಾನುಭವದಂತೆ ಆ ಆದರ್ಶಕ್ಕೆ ತಲುಪಿದ ವ್ಯಕ್ತಿಗಳು ಸಿಗುವುದು ಅತ್ಯಪರೂಪ. ನಾವು ಒಬ್ಬರಿಗೆ ನಿಗದಿಪಡಿಸುವ ಆದರ್ಶ ಸ್ಥಿತಿಯನ್ನು ಅವರು ಕಾಯ್ದುಕೊಳ್ಳುವುದು ಬಹುತೇಕ ಅಸಾದ್ಯ. ಒಳ್ಳೆಯದಕ್ಕೋ , ಕೆಟ್ಟದ್ದಕ್ಕೋ ಬದಲಾಗುವ ಹುಲುಮಾನವರು ನಾವು. ಅದೇ ಸಮಯದಲ್ಲಿ ಸುತ್ತುತ್ತಿರುವ ಭೂಮಿಯಂತೆ ನಮ್ಮಲ್ಲಿರುವ ಎಲ್ಲ ಬದಲಾವಣೆಗಳನ್ನು ಅವಗಣಿಸುತ್ತ ಹೊರಗಿನ ಆದರ್ಶಗಳಿಗೆ ಆರೋಪಿಸುತ್ತೇವೆ……ನನ್ನಂತಹ ಗುಲಾಮ ಜನಾಂಗಗಳ ತಪ್ಪು ಇದೆಂದು ನಿನ್ನಂತಹ ಗಂಡುಗಲಿ ಜನಾಂಗಗಳೂ ಇದನ್ನೇ ಹೊಂದಿರಬೇಕೆಂದು ಬಹುದಿನಗಳಿಂದ ನಾನು ಯೋಚಿಸುತ್ತಿದ್ದು , ಯಾವುದೇ ಪೂರ್ವ ಎಚ್ಚರಿಕೆಯನ್ನು ಕೊಡದೆ ಅದನ್ನು ಹಠಾತ್ತನೆ ಬೆಳಕಿಗೆ ತಂದಿರುವುದು ನನಗೆ ದುಃಖವನ್ನುಂಟು ಮಾಡುತ್ತದೆ….
ನನಗೆ ನೀನು ಕೊಟ್ಟ ಹಣದ ಬಗ್ಗೆಯೂ ಕೆಲವು ಮಾತುಗಳನ್ನಾಡಲಾಗಿದೆ. ನೀನು ಮತ್ತು ಮಿಸ್ ಸೌಟೆರ್ ನನಗೆ ೫೦೦ ಡಾಲರ್ = ೭೫೦೦ ರೂ + ೫೦೦ ಡಾಲರ್=೭೫೦೦ ರೂ ಮತ್ತು ಮಿಸ್ ಮುಲ್ಲರ್ ಗುಡ್ವಿನ್ ಮೂಲಕ ೩೦,೦೦೦ ರೂ ಹೀಗೆ ಒಟ್ಟಿಗೆ ೪೫,೦೦೦ ರೂಗಳನ್ನು ಕೊಟ್ಟಿರಿ. ಮಿಸ್ ಮುಲ್ಲರ್ ಕೊಟ್ಟ ೪೦,೦೦೦ ಹಣ ಭೂಮಿ ಖರೀದಿಸಲು ಮತ್ತು ಹಡಗಿನ ಕಟ್ಟೆಯಾಗಿದ್ದ ಆ ಜಾಗದಲ್ಲಿದ್ದ ಗುಂಡಿಗಳನ್ನು ಮುಚ್ಚಿ ಸಮತಟ್ಟುಗೊಳಿಸಲು ೪೦೦೦ ರೂ ವೆಚ್ಚವಾಯಿತು. ಅದರ ಮೇಲೆ ಈಗ ದೊಡ್ಡದಲ್ಲದ ಗುಡಿ ಮತ್ತು ಗ್ರಂಥಾಲಯ ಕಟ್ಟಿಸಿದ್ದೇನೆ. ಇದರ ವೆಚ್ಚವನ್ನು ಭಾರತದ ಗೆಳೆಯರು ಮತ್ತು ಅಮೆರಿಕದ ಶ್ರೀಮತಿ ಬುಲ್ ಕೊಟ್ಟಿದ್ದಾರೆ. ಭೂಮಿ ಮತ್ತು ಅದರ ಅಭಿವೃದ್ಧಿಗೆ ತಗುಲಿದ ಖರ್ಚು ನನ್ನ ಇಂಗ್ಲಿಷ್ ಸ್ನೇಹಿತರು ಕೊಟ್ಟಿದ್ದಕ್ಕಿಂತ ಹೆಚ್ಚು. ಬಂಗಾಳದ , ಹೌರಾ ಜಿಲ್ಲೆಯ ದಾಖಲೆಗಳ ರಿಜಿಸ್ಟ್ರಾರ್ ಕಛೇರಿಯಲ್ಲಿ ವಿಚಾರಿಸಿದರೆ ನಾನು ಹೇಳಿದ್ದು ನಿಜ ಎಂದು ತಿಳಿಯುತ್ತದೆ. ಯಾವುದೇ ದೇಶದ , ಯಾರೇ ಕೊಟ್ಟ ಹಣದಲ್ಲಿ ಒಂದು ಪೈಸೆಯನ್ನೂ ನನ್ನ ಸ್ವಂತ ಖರ್ಚಿಗೆ ಬಳಸಿಲ್ಲ. ಅಮೆರಿಕದಲ್ಲಿ ಉಪನ್ಯಾಸಗಳಿಂದ ಅಥವಾ ಪತ್ರಿಕೆಗಳಿಗೆ ಬರೆಯುವುದರಿಂದ ನನ್ನ ಸ್ವಂತ ಖರ್ಚನ್ನು ನಿಭಾಯಿಸಿಕೊಳ್ಳುತ್ತಿದ್ದೆ. ಭಾರತದಲ್ಲಿ ಶ್ರೀಮತಿ ಸೇವಿಯರ್ಸ್ ಮತ್ತು ಖೇತ್ರಿ ರಾಜ ನನ್ನ ಖರ್ಚಿಗೆ ಅಲ್ಪ ಹಣ ಕೊಡುತ್ತಿದ್ದರು. ನಿನಗೆ ಬೇಕೆನಿಸಿದಾಗ ಇಂಗ್ಲಿಷ್ ಜನ ಕೊಟ್ಟ ಹಣದ ಪ್ರತಿ ಪೈಸೆಯ ಲೆಕ್ಕಾಚಾರ ಸಿದ್ಧವಾಗಿರುತ್ತದೆ. ಮಿಸ್ ನೋಬೆಲ್ ಶಾಲೆ ಕಾಶ್ಮೀರದ ಮಹಾರಾಜ ಕೊಟ್ಟ ಹಣ , ನನ್ನ ಮದ್ರಾಸ್ ಪ್ರಕಟಣೆಗಳು ಮತ್ತು ಆಕೆಯ ಸ್ವಂತ ಹಣದಿಂದ ಪ್ರಾರಂಭಿಸಲ್ಪಟ್ಟಿದೆ. ಶ್ರೀಮತಿ ಜಾನ್ಸನ್ ಮಿಸ್ ನೋಬಲ್ ನನ್ನ ಬಗ್ಗೆ ತಳೆದಿರುವ ಧೋರಣೆ ಅತ್ಯಂತ ಅಸಮಾಧಾನಕರದ್ದಾಗಿದ್ದು ಅದಕ್ಕೆ ನಾನು ಕಾರಣನೆಂದು ಭಾವಿಸುತ್ತಾಳೆ. ನನಗೆ ಗೊತ್ತಿಲ್ಲದಂತೆ ಬೇರೆಯವರು ನನ್ನ ಬಗ್ಗೆ ತಳೆದಿರುವ ಅಭಿಪ್ರಾಯಕ್ಕೆ ನಾನು ಹೇಗೆ ಹೊಣೆಗಾರ !!! ಅಮೆರಿಕ ಸ್ನೇಹಿತರ ಮೂಲಕ ತಿಳಿಸದ ಹೊರತು ನೀನಾಗಲಿ ಅಥವಾ ಶ್ರೀಮತಿ ಜಾನ್ಸನ್ ಆಗಲಿ ನನ್ನ ಬಗ್ಗೆ ಈಗ ನೀವು ಹೊಂದಿರುವ ಅಭಿಪ್ರಾಯ ಏನೆಂದು ನಾನು ಹೇಗೆ ಬಲ್ಲೆ , ಅದನ್ನು ತಿಳಿಸಬಲ್ಲೆಯಾ ? ಕೆಲ ಹಣದ ವಿಚಾರವಾಗಿ ನೀನು ಮತ್ತು ಮಿಸ್ ನೋಬಲ್ ನಡುವೆ ಚರ್ಚೆಗಳಾಗಿದ್ದವೆಂದು ತಿಳಿದೆ. ಅದಕ್ಕೂ ನಾನು ಹೊಣೆಯೆ ? ನಾನು ಎಂದಾದರೂ ನಿನಗೆ ಹಣ ಕೇಳಿ ಬರೆದಿದ್ದೆನೆ? ಯಾರಿಂದಲಾದರೂ , ಎಲ್ಲಾದರೂ ಹಣದ ನೆರವು ಕೇಳಿದ ನೆನಪು ನನಗಿಲ್ಲ. ಅವರೇ ಸ್ವಂತ ನೆರವಾಗಲು ಬಂದಾಗ ಅದನ್ನು ಪಡೆದೆ , ನನಗೆ ವೈಯಕ್ತಿಕವಾಗಿ ಕೊಟ್ಟಾಗ ಅದನ್ನು ಬಳಸಿದೆ ; ಬಹುತೇಕ ಬೇರೆಯವರಿಗಾಗಿ ; ಕೆಲಸಕ್ಕೆ ಕೊಟ್ಟ ಹಣ ಕೆಲಸಕ್ಕೆ. ಕಾಲ ಸರಿದಂತೆ ಅಭಿಪ್ರಾಯ , ಅಭಿರುಚಿ ಭೇದಗಳು ಕಾಣಿಸಿಕೊಳ್ಳುವುದು ಸಹಜವೆಂದು ನಾನು ಬಲ್ಲೆ-ಆದರೆ ವ್ಯಕ್ತಿಯ ಒಂದು ಸಣ್ಣ ವೈಚಿತ್ರ್ಯದ ಸುತ್ತ ನಿಧಾನಗತಿಯಲ್ಲಿ , ಯಾವುದೇ ಎಚ್ಚರಿಕೆಯಿಲ್ಲದೆ ಅಷ್ಟೊಂದು ದ್ವೇಷ , ಅಸಹ್ಯತೆ ಕಾಣಿಸಿಕೊಳ್ಳುವುದನ್ನು ಅರ್ಥ ಮಾಡಿಕೊಳ್ಳಲಾರೆ.
ಇಷ್ಟು ದಿನ ನನ್ನಂತಹ ಗುಲಾಮ ಜನಾಂಗಗಳ ತಪ್ಪು ಇದೆಂದು ನಿನ್ನಂತಹ ಗಂಡುಗಲಿ ಜನಾಂಗಗಳೂ ಇದನ್ನೇ ಹೊಂದಿರಬೇಕೆಂದು ಬಹುದಿನಗಳಿಂದ ನಾನು ಯೋಚಿಸುತ್ತಿದ್ದು , ಯಾವುದೇ ಪೂರ್ವ ಎಚ್ಚರಿಕೆಯನ್ನು ಕೊಡದೆ ಅದನ್ನು ಹಠಾತ್ತನೆ ಬೆಳಕಿಗೆ ತಂದಿರುವುದು ನನಗೆ ದುಃಖವನ್ನುಂಟು ಮಾಡುತ್ತದೆ. ಎಲ್ಲವದೂ ನನ್ನ ಕರ್ಮ-ಅದು ಈಗ ಅದು ಎದ್ದಿದ್ದರೂ , ಈ ಅಥವಾ ಮಂದಿನ ಜೀವನದಲ್ಲಿ ಉಪಯೋಗವಾಗುವ ಒಂದು ಮಹಾನ್ ಅನುಭವ . ನೀನಾಗಲಿ , ಮಿಸ್ಮುಲ್ಲರ್ಆಗಲಿಅಥವಾಮಿಸ್ಸೌಟೆರ್ಆಗಲಿನೀವುಮಾಡಿದಸಹಾಯಕ್ಕೆಪಶ್ಚಾತ್ತಾಪಪಡುತ್ತಿದ್ದರೆ-ಸ್ವಲ್ಪಸಮಯಮಾತ್ರನನಗೆಕೊಡಿ. ಆಹಣಹಿಂದಿರುಗಿಸಲುಎಲ್ಲಪ್ರಯತ್ನಮಾಡುತ್ತೇನೆ….
(ಎ) ೨/೯/೧೮೯೯- ಪತ್ರದಲ್ಲಿ I hope by this time you are much better. I am getting physically better every day, though mentally not much. The London work seems to fall to pieces. The friends over there are all shaky even Sturdy. Anyway in Mrs. Bull & Miss McLeod I have very strong friends. They stand by me here, through thick and thin. Life is a series of fights and disillusionments is it not? Well I am seeking some quiet if I can, before I plunge into work again. One has to work to gain a livelihood even. Good that it is so, it keeps us straight. How is Mrs. Funkey? Where are you both now? I am glad though that in this life I have got a number of staunch friends that will stand by me, whether I am in good or bad circumstances, whether I am ill or well, & you are two of them. I am rather happy these few days. It is so quiet here and everybody is good. Days are passing anyway, and I am learning to be contented. The secret of life is not enjoyment but education through experience. But we are killed off the moment we begin really to learn.That seems to many a potent argument for a future existence....I hope soon to be able to come to Detroit. Everywhere it is better to have a whirlwind come over the work. That clears the atmosphere & gives us a true insight into the nature of things. We begin, anew but on adamantine foundations. I am strong very strong now-I always am when left to stand alone. May you be strong very strong always.
ಈ ಪತ್ರ ಯಾರಿಗೆ ಬರೆಯಲಾಗಿದೆ ಎಂದು ಕಂಪ್ಲೀಟ್ ವರ್ಕ್ಸ್/ಕೃತಿಶ್ರೇಣಿ ತಿಳಿಸುವದಿಲ್ಲ. ಆದರೆ ಪತ್ರದ ಹೂರಣದಿಂದ ಅದು ನಿರ್ವಿವಾದವಾಗಿ ಕ್ರಿಸ್ಟೈನಾ ಗ್ರೀನ್’ಸ್ಟೈಡಲ್’ಗೆ ಬರೆದಿರುವುದು ಸ್ಪಷ್ಟ. ಈ ಪತ್ರದಲ್ಲಿ ವೇದಾಂತ ಬೋಧಿಸಿ ‘ ಅಹಂ ಬ್ರಹ್ಮಾಸ್ಮಿ , ಶಿವೋಹಂ- ಶಿವೋಹಂ ‘ ಎಂದು ಗುಡುಗುತ್ತಿದ್ದ ಸ್ವಾಮಿ ವಿವೇಕಾನಂದ ಇಲ್ಲವಾಗಿ ಬೆರಳೆಣಿಕೆಯ ಅಮೆರಿಕ ಹೆಂಗಸರ ಬೆಂಬಲವನ್ನು ನೆಚ್ಚಿಕೊಂಡಿರುವ, ಜೀವನದ ಜಂಜಾಟವನ್ನು ತನ್ನದೇ ಆದ ರೀತಿಯಲ್ಲಿ ಅರ್ಥೈಸಿಕೊಳ್ಳಲು ಹೆಣಗುತ್ತಿರುವ ಸಾಮಾನ್ಯ ವ್ಯಕ್ತಿಯಿದ್ದಾನೆ. ಆದ್ದರಿಂದಲೇ ಕಂಪ್ಲೀಟ್ ವರ್ಕ್ಸ್ / ಕೃತಿಶ್ರೇಣಿಗಳು ಗೆರೆ ಎಳೆದ ಭಾಗವನ್ನು ಮಾತ್ರ ಪ್ರಕಟಿಸಿ ಉಳಿದದ್ದನ್ನು ಮರೆಮಾಚಿವೆ.
(ಏ) ಸ್ವಾಮಿಗಳು ಭಾರಕ್ಕೆ ಮರಳಿದ ನಂತರ ಕಲ್ಕತ್ತದಲ್ಲಿ ೨೨/೨/೧೮೯೭ ರಂದು ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದಿತು. ಇದಾದ ನಂತರ ಸ್ವಾಮಿಗಳು ಭಾರತಿ ಪತ್ರಿಕೆಯ ಸಂಪಾದಕಿ ಸರಳ ಘೊಷಲ್’ಗೆ ೬/೪/೧೮೯೭ ಮತ್ತು ೨೪/೪/೧೮೯೭ ರಂದು ಎರಡು ಸುದೀರ್ಘ ಪತ್ರಗಳನ್ನು ಬರೆದಿದ್ದಾರೆ. ಅದರಲ್ಲಿ ಮೊದಲ ಪತ್ರದಲ್ಲಿ ಭಾರತದ ಜನರ ಬಗ್ಗೆ , ಆರ್ಥಿಕ ನೆರವು ನೀಡುವ ಬಗ್ಗೆ , ಕಲ್ಕತ್ತದಲ್ಲಿ ಸ್ವಾಗತ ಸಮಿತಿಯವರು ವೆಚ್ಚ ಭರಿಸಲು ಸ್ವಾಮಿಗಳಿಂದ ಉಪನ್ಯಾಸ ಕೊಡಿಸಿದ ಬಗ್ಗೆ ಸುದೀರ್ಘವಾಗಿ ದೂರಿದ್ದಾರೆ. ಸ್ವಾಮಿಗಳು ಸರಳಾ ಘೋಷಲ್’ರವರಿಗೆ ೨೪/೪/೧೮೯೭ ರಂದು ಬರೆದ ಎರಡನೇ ಪತ್ರವನ್ನು ಗಮನಿಸಿದರೆ ಸ್ವಾಮಿಗಳು ೬/೪/೧೮೯೭ ರ ಪತ್ರದಲ್ಲಿ ತಿಳಿಸಿರುವ ವಿಷಯಗಳನ್ನು ಶ್ರೀಮತಿ ಸರಳಾ ಘೋಷಲ್ ಬಹಿರಂಗಗೊಳಿಸಿ ಸಾರ್ವಜನಿಕರ ಗಮನಕ್ಕೆ ತರಲು ಬಯಸಿದ್ದಂತೆ ತೋರುತ್ತದೆ. ಅದನ್ನು ಸ್ವಾಮಿಯವರು ಒಪ್ಪಲಿಲ್ಲವೆಂದು ಅವರ ಎರಡನೇ ಪತ್ರ ತಿಳಿಸುತ್ತದೆ. ಈ ಪತ್ರಗಳು ಬಂಗಾಳಿಯಲ್ಲಿವೆ. ಬಂಗಾಳಿಯಲ್ಲಿರುವ ೨೪/೪/೧೮೯೭ ರ ಪತ್ರದ ಅನುವಾದ ನೀಡಿದಾಗ ಆ ಪತ್ರದಲ್ಲಿರುವ ಮೊದಲನೇ ಪರಿಚ್ಛೇದವನ್ನು ಕೈಬಿಡಲಾಗಿದೆ. ಕೈಬಿಡಲಾದ ಪರಿಚ್ಚೇದ ಹೀಗಿದೆ. ‘ ನೀವು ತೋರಿಸಿದ ಅನುಕಂಪಕ್ಕೆ ನನ್ನ ಹೃದಯದಾಳದಿಂದ ಕೃತಜ್ಞತೆ ಸಲ್ಲಿಸುತ್ತೇನೆ. ನಾನಾ ಕಾರಣಗಳಿಂದ ಆ ವಿಷಯವನ್ನು ನಾನು ಸಾರ್ವಜನಿಕವಾಗಿ ಚರ್ಚೆ ನಡೆಸಲು ಇಚ್ಛಿಸುವುದಿಲ್ಲ. (ಸಮಿತಿಯವರು ) ನಾನು ಕೊಡುವಂತೆ ಮಾಡಲಾದ ಮೊತ್ತದ ಬಹುಭಾಗ ನನ್ನ ಅಮೆರಿಕನ್ ಸ್ನೇಹಿತರು ಮಾಡಿದ ಖರ್ಚು. ಇದನ್ನು ಪ್ರಕಟಿಸಿದರೆ ನನಗೆ ಅವಮಾನವಾದಂತೆಯೇ ಸರಿ. ಅವರು ಮಾಡಿದ (ವೈಯಕ್ತಿಕ) ಖರ್ಚನ್ನು ಭರಿಸುವ ಆರ್ಥಿಕ ಶಕ್ತಿ ನನಗೆ ಇಲ್ಲದ್ದರಿಂದ ಸಮಿತಿಯವರು ತಮ್ಮ ಕಡೆಯಿಂದ ಅದನ್ನು ಭರಿಸಿದರೆಂದು ಕೇಳಿಪಟ್ಟಿದ್ದೇನೆ. ‘ (4)
(ಐ) ಎಡ್ವರ್ಡ್ ಸ್ಟರ್ಡಿ ಸ್ವಾಮಿಗಳ ವೈರಾಗ್ಯವನ್ನು ಪ್ರಶ್ನಿಸಿದ್ದಕ್ಕೆ ಉತ್ತರವಾಗಿ ಬರೆದ ದಿನಾಂಕವಿರದ ನವೆಂಬರ್ ೧೮೯೯ ಪತ್ರದಲ್ಲಿ ಶ್ರೀಮತಿ ಜಾನ್’ಸನ್ ಬದಲು ಶ್ರೀಮತಿ ಸ್ಟರ್ಡಿ ಎಂದು ಬದಲಿಸಲಾಗಿದೆ , I sent my brother away perhaps to his death ಇಲ್ಲಿರುವ borther (ಸೋದರ ಮಹೇಂದ್ರನಾಥ ದತ್ತ) ಗುರುಭಾಯಿಯಾಗಿ ಬದಲಾಗಿದೆ. (5)
(ಒ) ಕಂಪ್ಲೀಟ್ ವರ್ಕ್ಸ್’/ ಕೃತಿಶ್ರೇಣಿಯಲ್ಲಿ ೭/೪/೧೯೦೦ ಮತ್ತು ೧೨/೪/೧೯೦೦ ರಂದು ಸ್ವಾಮಿಗಳು ಬರೆದ ಪತ್ರಗಳನ್ನು ‘To an American Friend’ ಎಂದು ಸೂಚಿಸಲಾಗಿದೆ. ಮೊದಲ ವಾಕ್ಯದ ಹಿಂದೆ …….. (ಚುಕ್ಕಿಗಳು) ಹಾಕಿ ಈ ವಾಕ್ಯದ ಹಿಂದೆ ಇನ್ನೂ ಏನೋ ಇದೆ ಎಂದು ಸೂಚಿಸಲಾಗಿದೆ. ಕನ್ನಡಕ್ಕೆ ಬರುವ ವೇಳೆಗೆ ಈ ಚುಕ್ಕಿಗಳನ್ನು ಕೈಬಿಡಲಾಗಿದೆ. ಮಾರಿ ಲೂಯಿ ಬರ್ಕೆ ಈ ಪತ್ರಗಳನ್ನು ಸ್ವಾಮಿಗಳು ಸಾರಾ ಬುಲ್’ಗೆ ಬರೆದಿದ್ದರೆಂದು ಹೇಳುತ್ತ ೭/೪/೧೯೦೦ ಪತ್ರದಲ್ಲಿ ಚುಕ್ಕಿಗಳಿರುವ (……) ಭಾಗವನ್ನು ನೀಡಿದ್ದಾರೆ. ಅದು ಹೀಗಿದೆ- Today’s letter from the Math tells me that the Raja of Khetri has stopped the stipend –well , mother’s will . The Raja has been very good for years. All blessings on him . {ಸಂಪುಟ-೬, ಪುಟ ೮೯}. ರಾಜ ಅಜಿತ್ ಸಿಂಗ್ ಸ್ವಾಮಿಗಳಿಗೆ ಕೊನೆಯತನಕ ನಿಷ್ಠನಾಗಿದ್ದು ಅವರು ಹಾಕಿದ ಗೆರೆಯನ್ನು ದಾಟುತ್ತಿರಲಿಲ್ಲ ಎಂದು ಬಿಂಬಿಸಲಾಗಿದೆ. ಸ್ವಾಮಿಗಳ ಪತ್ರದಲ್ಲಿ ಕೈಬಿಟಿರುವ ವಾಕ್ಯ ಇದನ್ನು ಅಲ್ಲಗಳೆಯುವುದಲ್ಲದೆ ರಾಜ ಅಜಿತ್ ಸಿಂಗ್ ಸ್ವಾಮಿಗಳಿಗೆ ಕೊಡುತ್ತಿದ್ದ ಮಾಸಿಕ ಹಣವನ್ನು ಏಕೆ ನಿಲ್ಲಿಸಿದ ಎನ್ನುವ ಸಂಶಯ ಎದುರಾಗುತ್ತದೆ. ಆದ್ದರಿಂದ ಪತ್ರಗಳ ಸಂಪಾದಕರು ಸ್ವಾಮಿಗಳ ‘ನೈಜ ಚರಿತ್ರೆ’ಯನ್ನು ತಮ್ಮ ಕಡೆಯಿಂದ ಕಟ್ಟಿಕೊಡಲು ಪತ್ರದ ಮೇಲೆ ಸ್ವಲ್ಪ ಕತ್ತರಿಯಾಡಿಸಿದ್ದಾರೆ ಅಷ್ಟೇ ! (6)
೧೨/೪/೧೯೦೦ ಪತ್ರದಲ್ಲಿ ಮೂಲದಲ್ಲಿರುವ ಭಾಗಗಳನ್ನು ಕತ್ತರಿಸಲಾಗಿದೆ ಎನ್ನುವ ಮಾರಿ ಲೂಯಿ ಬರ್ಕೆ ಅವುಗಳ ಪಾಠವನ್ನು ಹೀಗೆ ಕೊಡುತ್ತಾರೆ. ‘ My chief idea in all my western work has been to help India. On New York I and mine have spent the greater part of our energies , and Indian work never had any help from New York –and I do not believe will ever have…. Here in California people are poor – but they come out with their help the best way they can and I have several applications every day from men and women to follow me to India ! … By the by , there is a very clever Scotchman and his Swiss wife here. The man is an inventor , electrician etc., . Just now there is a good chance of his making money by one of his automobile inventions. He is sure to go to the seviers with his wife if he can succeed in his scheme. If you think Abhedanaanda’s stay in New York will create disurbances , I can induce him to come over to san Fransico-he can have all the organisations here he wants. I can try at least. I will write him by this mail. (7)
ಕನ್ನಡ ಅನುವಾದ : ನನ್ನ ಎಲ್ಲ ಪಾಶ್ಚಾತ್ಯ ಕೆಲಸಗಳ ಗುರಿ ಭಾರತಕ್ಕೆ ನೆರವಾಗುವುದು. ನಾನು ಮತ್ತು ನನ್ನ ಬಹುತೇಕ ಶ್ರಮವನ್ನು ನ್ಯೂಯಾರ್ಕ್’ನಲ್ಲಿ ಬಳಸಲಾಯಿತು , ಭಾರತದ ಕೆಲಸಕ್ಕೆ ನ್ಯೂಯಾರ್ಕ್ ಎಂದಿಗೂ ನೆರವಾಗಲಿಲ್ಲ-ಮುಂದೆ ಮಾಡುತ್ತದೆ ಎನ್ನುವ ನಂಬಿಕೆ ನನಗಿಲ್ಲ…. ಇಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಜನ ಬಡವರು-ಆದರೆ ತಮ್ಮ ಶಕ್ತಿಗನುಗುಣವಾಗಿ ನೆರವು ನೀಡಲು ಮುಂದಾಗುತ್ತಾರೆ ಮತ್ತು ಪ್ರತಿ ದಿನ ಹಲವು ಗಂಡಸರು ಮತ್ತು ಹೆಂಗಸರು ಭಾರತಕ್ಕೆ ನನ್ನನ್ನು ಹಿಂಬಾಲಿಸಲು ಅವಕಾಶ ಕೇಳಿಕೊಂಡು ಬರುತ್ತಾರೆ ! ..ಅದಿರಲಿ , ಇಲ್ಲಿ ಬಹಳ ಜಾಣನಾದ ಸ್ಕಾಚ್ ವ್ಯಕ್ತಿಯೊಬ್ಬನಿದ್ದಾನೆ. ಆತನ ಹೆಂಡತಿ ಸ್ವಿಸ್. ಆತ ಒಬ್ಬ ಉಪಜ್ಞೆಕಾರ , ವೈದ್ಯುತ್ ಪರಿಣಿತ ಮುಂತಾಗಿ…ಆತನ ಒಂದು ಸ್ವಯಂಚಲಿ ವಾಹನದ ಉಪಜ್ಞೆಯಿಂದ ಬಹಳ ಹಣ ಗಳಿಸುವ ಸಾದ್ಯತೆಯಿದೆ.ಇದರಲ್ಲಿ ಯಶಸ್ಸು ಸಿಕ್ಕರೆ ಸೇವಿಯರ್ಸ್ ಇರುವಲ್ಲಿಗೆ ಹೆಂಡತಿಯೊಂದಿಗೆ ಹೋಗಬೇಕೆಂದಿದ್ದಾನೆ. ಅಭೇದಾನಂದ ನ್ಯೂಯಾರ್ಕ್’ನಲ್ಲಿರುವುದು ತೊಂದರೆಗೆ ಕಾರಣವಾಗುತ್ತದೆಯೆಂದು ನಿಮಗೆನಿಸಿದರೆ ,ನಾನು ಆತನನ್ನು ಸ್ಯಾನ್ ಫ್ತಾನ್ಸಿಸ್ಕೊ’ಕ್ಕೆ ಪರಿಚಯಿಸಬಲ್ಲೆ.-ಆತನಿಗೆ ಬೇಕಾದ ಎಲ್ಲ ಸಂಘಟನೆಗಳು ಇಲ್ಲಿವೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಈ ಅಂಚೆಯಲ್ಲಿಯ ಆತನಿಗೆ ಬರೆಯುತ್ತೇನೆ.
(ಓ) ೨೫/೮/೧೯೦೦-ಮಾರ್ಗರೆಟ್ ನೋಬಲ್’ಗೆ I gave a chance to Mrs. Bull to draw her money out of the Math; and as she did not say anything about it, and the trust deeds were waiting here to be executed, I got them executed duly at the British Consulate; and they are on their way to India now. Now I am free, as I have kept no power or authority or position for me in the work. I also have resigned the presidentship of the Ramakrishna Mission ಎಂದು ಬರೆದಿದ್ದಾರೆ. (8) ಇದನ್ನು ಕೃತಿಶ್ರೇಣಿಯಲ್ಲಿ ‘ನಾನೀಗಕೆಲಸದವಿಚಾರದಲ್ಲಿಯಾವುದೇಪ್ರಭಾವವನ್ನಾಗಲಿ , ಅಧಿಕಾರವನ್ನಾಗಲಿಇಟ್ಟುಕೊಂಡಿಲ್ಲ. ಆದ್ದರಿಂದಈಗನಾನುಸ್ವತಂತ್ರ. ರಾಮಕೃಷ್ಣಸೇವಾಸಂಸ್ಥೆಯಅಧ್ಯಕ್ಷ ಸ್ಥಾನಕ್ಕೂಕೂಡನಾನುರಾಜಿನಾಮೆಕೊಟ್ಟಿದ್ದೇನೆ ಎಂದು ಅನುವಾದಿಸಿ ಗೆರೆ ಎಳೆದಿರುವ ‘ಮಠದಿಂದಹಣವನ್ನುಹೊರತೆಗೆದುಕೊಳ್ಳುವಅವಕಾಶವನ್ನುನಾನಶ್ರೀಮತಿಬುಲ್’’ಗೆಕೊಟ್ಟೆ ; ಆಕೆಆಬಗ್ಗೆಏನನ್ನೂಹೇಳಲಿಲ್ಲ , ಮಠದಟ್ರಸ್ಟ್ಡೀಡ್’ಗಳುನಿರ್ವಹಣೆಗಾಗಿಕಾದಿದ್ದವು. ನಾನುಅವುಗಳನ್ನುಬ್ರಿಟಿಷ್ದೂತಾವಾಸಕಛೇರಿಯಲ್ಲಿನಿರ್ವಹಿಸಿದೆ ; ಅವೀಗಭಾರತದತ್ತಹೋಗುವದಾರಿಯಲ್ಲಿವೆ ‘ಭಾಗವನ್ನು ಎಗರಿಸಲಾಗಿದೆ.
(ಔ) ಕಂಪ್ಲೀಟ್ ವರ್ಕ್ಸ್ / ಕೃತಿಶ್ರೇಣಿಯಲ್ಲಿ ೨೦/೬/೧೯೦೧ ಮತ್ತು ೨/೭/೧೯೦೧ ಪತ್ರಗಳನ್ನು ಮಾರ್ಗರೆಟ್ ನೋಬಲ್’ಗೆ ಬರೆದದ್ದೆಂದು ಸೂಚಿಸಿಲಾಗಿದೆ. ೨೦/೬/೧೯೦೧ ಪತ್ರದಲ್ಲಿ ‘…….ಜಗನ್ಮಾತೆ ಮತ್ತೊಮ್ಮೆ ದಯಾಪರಳಾದಂತೆ ಕಾಣುತ್ತದೆ. ಚಕ್ರ ನಿಧಾನವಾಗಿ ಬರುತ್ತಿದೆ’ ಎನ್ನುವ ಒಂದು ಸಾಲಿದೆ. ೨/೭/೧೯೦೧ ಪತ್ರ ‘ ….ನಾನು ಯಾವಾಗಲೂ ಹೇಳುವಂತೆ ಜಗನ್ಮಾತೆಗೆ ಎಲ್ಲವೂ ತಿಳಿದಿದೆ. ಜಗನ್ಮಯಿಯನ್ನು ಪ್ರಾರ್ಥಿಸು. ನಾಯಕನಾಗುವುದು ಕಷ್ಟಕರವಾದ ಕೆಲಸ. ಸಮಾಜದ ಅಡಿಯಲ್ಲಿ ತನ್ನ ಸರ್ವಸ್ವವನ್ನೂ ಬಲಿಕೊಡಬೇಕು.’ ಎನ್ನುವ ಭಾಗ ಇದೆ. ಈ ಪತ್ರಗಳನ್ನು ಕ್ರಿಸ್ಟೈನಾ ಗ್ರೀನ್’ಸ್ಟೈಡಲ್’ಗೆ ಬರೆಯಲಾಗಿದೆಯೆಂದು ಹೇಳುವ ಮಾರಿ ಲೂಯಿ ಬರ್ಕೆ ಈ ಎರಡು ಪಾಠಗಳಿಗೆ ಕೊಟ್ಟಿರುವ ಪಾಠ ಹೀಗಿದೆ.
೨೦/೬/೧೯೦೧- ‘ ಮುಂದಿನ ವಾರ ಆದಷ್ಟು ನಾನು ಡೆಟ್ರಾಯಿಟ್’ನಲ್ಲಿರುತ್ತೇನೆ. ನಾನು ಬರಲು ತಡವಾದರೆ ಕಳವಳ ಬೇಡ. ನಿನ್ನನ್ನು ನೋಡದೆ ನಾನು ದೇಶವನ್ನು ತೊರೆಯುವುದಿಲ್ಲ. ಇದು ಅತ್ಯಗತ್ಯ. ತಾಯಿ ದಯೆಯುಳ್ಳವಳೆಂದು ತೋರುತ್ತಿದ್ದು ಚಕ್ರ ನಿಧಾನವಾಗಿ ಮೇಲಕ್ಕೆ ಏರುತ್ತಿದೆ. ನನ್ನ ಸ್ನೇಹಿತೆ ಮಿಸ್ ಮುಲ್ಲರ್ ಬಗ್ಗೆ ಕೇಳಿರುವೆಯಾ ? ಇರಲಿ , ಆಕೆ ಭಾರತದಲ್ಲಿ ನನ್ನನ್ನು ತೊರೆದಳು-ಇಂಗ್ಲೆಂಡ್’ನಲ್ಲಿ ನನಗೆ ಅಡಚಣೆಯುಂಟು ಮಾಡಲು ಯತ್ನಿಸಿದಳೆಂದು ಅವರು ಹೇಳುತ್ತಾರೆ. ಇಂದು ಬೆಳಿಗ್ಗೆ ಆಕೆ ಅಮೆರಿಕಕ್ಕೆ ಬರುತ್ತಿದ್ದಾಳೆ ಎಂದು ತಿಳಿಸುವ ಆಕೆಯ ಪತ್ರ ಬಂದಿತು- ಆಕೆ ನನ್ನನ್ನು ನೋಡಲೇಬೇಕಾದ ಸ್ಥಿತಿಯಲ್ಲಿದ್ದಾಳೆ.! ನಾನು ಆಕೆಯನ್ನು ಬಹು ಪ್ರೀತಿಸಿದ್ದರಿಂದ ಆಕೆಯ ಪಕ್ಷಾಂತರ ನನಗೆ ಒಂದು ದೊಡ್ದ ಹೊಡೆತವಾಗಿದ್ದಿತು. ಆಕೆ ಭಾರಿ ಕೆಲಸಗಾರ್ತಿ ಮತ್ತು ನೆರವುಗಾರ್ತಿ. ಆಕೆಗೆ ಲೌಕಿಕ ಜಗತ್ತಿನ ಸರಕು ಮತ್ತು ಜಾಣತನ ಬೇಕಾದಷ್ಟಿದ್ದು ಆಕೆಯೂ ನನ್ನಂತೆ ಆಗೊಮ್ಮೆ ಈಗೊಮ್ಮೆ ತೀವ್ರವಾಗಿ ಕೆರಳುತ್ತಾಳೆ. ಈಗ ಆಕೆಗೆ ವಯಸ್ಸೆಂಬ ಕ್ಷಮೆಯಿದೆ.; ನನಗೆ ಯಾವುದೂ ಇಲ್ಲ. ಆಕೆ ಜೂನ್ ಕೊನೆಗೆ ಬರಬೇಕೆಂದಿದ್ದಾಳೆ. ನಾನು ಆಕೆ ಬೇಗ ಬರಬೇಕೆಂದು ಬಯಸುತ್ತೇನೆ. ಹಾಗಾಗಿ ಇದೀಗ ಆಕೆಗೆ ಪತ್ರ ಬರೆದೆ. ಸಾಧ್ಯವಾದರೆ ಪ್ರಶಾಂತವಾದ ಹಳ್ಳಿಯ ಕಡೆ ನಾನು ಕಾಯುತ್ತೇನೆ. ಹೇಗಾದರೂ ಇರಲಿ ನಾನು ಡೆಟ್ರಾಯಿಟ್’ಗೆ ಬರುತ್ತೇನೆ.’ (9) ಮಿಸ್ ಹೆನ್ರಿಯೆಟ್ಟಾ ಮುಲ್ಲರ್ ಮತ್ತು ಸ್ವಾಮಿಗಳ ನಡುವೆ ಉಂಟಾಗಿದ್ದ ಕಂದಕದ ನಂತರ ಸ್ವಾಮಿಗಳು ಬರೆರಿರುವ ಪತ್ರದಲ್ಲಿರುವ ಈ ಅಂಶಗಳಿಗೆ ಮಹತ್ವವಿದೆ. ಆ ಮಹತ್ವದ ಭಾಗಕ್ಕೇ ಕತ್ತರಿ ಆಡಿಸಲಾಗಿದೆ.
೨/೭/೧೯೦೧- ನಿನ್ನ ಕಳೆದ ಪತ್ರ ತ್ರಾಸದಾಯಕ ಅಂಶಗಳನ್ನು ಒಳಗೊಂಡಿದ್ದಿತು. ಅದು ಸಹಜವೆ-ಆದರೆ ನನ್ನ ಕಡೆಯಿಂದ ಆದ ವಿಳಂಬಕ್ಕೆ ಸಮರ್ಥನೆಗಳಿವೆ. …ಹಠಾತ್ತನೆ ಕ್ಯಾಲಿಫೋರ್ನಿಯಾದಲ್ಲಿ ಒಂದು ಜಮೀನು ಕೊಡುಗೆಯಾಗಿ ಬಂದಿದೆ. ಕಳೆದ ವಾರ ನಾನು ಬರಬೇಕೆನ್ನುವಷ್ಟರಲ್ಲಿ ಇದು ಜರುಗಿ ತುರೀಯಾನಂದ ಕ್ಯಾಲಿಫೋರ್ನಿಯಾಕ್ಕೆ ಹೋಗುವ ಪ್ರಸಂಗ ಬಂದಿತು. ನಾಳೆ ಅಥವಾ ನಾಡಿದ್ದು ಆತ ಹೋಗುತ್ತಾನೆ. ನಾನು ಅವರೊಂದಿಗೆ ಡೆಟ್ರಾಯಿಟ್’ ತನಕ ಹೋಗಲು ಯತ್ನಿಸುತ್ತೇನೆ. ಆದರೆ ನಾನು ಯಾವಾಗಲೂ ಹೇಳುವಂತೆ ತಾಯಿಗೆ ಗೊತ್ತು. ನೀನು ತಾಯಿಯನ್ನು ಪ್ರಾರ್ಥಿಸು.ನಾಯಕನಾಗಿ ಕೆಲಸ ಮಾಡುವುದು ಕಠಿಣ. ಅದಕ್ಕಾಗಿ ತನ್ನತನವನ್ನೇ ಸಮದಾಯದ ಅಡಿಯಲ್ಲಿ ಹೊಸಗಿ ಹಾಕಬೇಕು. ಚಿಂತೆ ಬೇಡ . ಪ್ರತಿದಿನ ನಾನು ಶಕ್ತಿಯುತನಾಗುತ್ತಿದ್ದೇನೆ. (10)
(ಕ) ೬/೭/೧೯೦೧ ರಂದು ಕ್ರಿಸ್ಟೈನಾ ಗ್ರೀನ್’ಸ್ಟೈಡೆಲ್’ಗೆ ಬರೆದ ಪತ್ರ ಹೀಗಿದೆ. Things come to me by fits--today I am in a fit of writing……… The first thing to do is, therefore, to pen a few lines to you…… I am known to be nervous, I worry much; but it seems, dear Christine, you are not far behind in that tricks. One of our poets says, "Even the mountains will fly, the fire will be cold, yet the heart of the great will never change." I am small, very, but I know you are great, and my faith is always in your true heart. I worry about everything except you. I have dedicated you to the Mother. She is your shield, your guide. No harm can reach you--nothing hold you down a minute. I know it.Ever yours in the Lord-Vivekananda (11) ‘ದಿ ಲೈಫ್-೬ ನೇ ಆವೃತ್ತಿಯಲ್ಲಿ ಈ ಪತ್ರಕ್ಕೆ ಇನ್ನೂ ಕೆಲವು ಪರಿಚ್ಛೇದಗಳನ್ನು ಸೇರಿಸಿದೆ. ಎಂದರೆ ಈ ಭಾಗಗಳು ಪತ್ರಾವಳಿಯಲ್ಲಾಗಲಿ , ಹಿಂದಿನ ಕೃತಿಶ್ರೇಣಿಯಲ್ಲಾಗಲಿ , ನಿಖಿಲಾನಂದರ ವಿವೇಕಾನಂದ : ಯೋಗಾಸ್ ಅಂಡ್ ದಿ ಅದರ್ ವರ್ಕ್ಸ್’ನಲ್ಲಾಗಲಿ ಇಲ್ಲ. ಎಂದರೆ ಈ ಭಾಗವನ್ನು ಈ ಹಿಂದೆ ಮುಚ್ಚಿಟ್ಟಿರಬೇಕು ಅಥವಾ ಇದು ಇನ್ನೊಂದು ಪತ್ರದ ಭಾಗವಾಗಿರಬಹುದು. ಕನ್ನಡ ಕೃತಿಶ್ರೇಣಿಯಲ್ಲಿ ಮೇಲಿರುವುದನ್ನೇ ಅನುವಾದಿಸಲಾಗಿದೆ. dear Christine ಎನ್ನುವುದನ್ನು ಪ್ರಿಯ ಸೋದರಿ ಕ್ರಿಸ್ಟೈನಾ. ಎಂದಾಗಿದ್ದು ಮೂಲದಲ್ಲಿ ಇಲ್ಲದ ‘ಸೋದರಿ’ಯನ್ನು ನಡುವೆ ತುರುಕಲಾಗಿದೆ. ಗೆರೆ ಎಳೆದಿರುವ ವಾಕ್ಯವನ್ನು ‘ನಿನ್ನ ಹೃದಯ ವೈಶಾಲ್ಯವನ್ನು ನಾನು ಯಾವಾಗಲೂ ಮೆಚ್ಚುವೆನು’ ಎಂದು ಕೊಡಲಾಗಿದೆ.
(ಖ) ೯/೮/೧೯೦೧ – ಕ್ರಿಸ್ಟೈನಾ ಗ್ರೀನ್’ಸ್ಟೈಟೈಡಲ್’ಗೆ ಬರೆದ What do you think will be very good for me on earth? Silver? Gold? Pooh! I have got something infinitely better; but a little gold will not be amiss to keep my jewel in proper surroundings, and it is coming, don't you think so? ಇದರಲ್ಲಿ ಗೆರೆ ಎಳೆದಿರುವ ವಾಕ್ಯವನ್ನು ಕೃತಿಶ್ರಣಿಯಲ್ಲಿ ‘ಯಾವುದು ನನಗೆ ಈ ಪ್ರಪಂಚದಲ್ಲಿ ಒಳ್ಳೆಯದು ? ಎಂದು ಅನುವಾದಿಸಲಾಗಿದೆ. ಇಲ್ಲಿ ‘ ನನಗೆ ಜಗತ್ತಿನಲ್ಲಿ ಅತ್ಯುತ್ತಮವಾದುದು ಯಾವುದೆಂದು ನೀನು ಭಾವಿಸುವೆ ? ಎಂದಿರಬೇಕಿತ್ತು.
(ಗ) ೮/೧೦/೧೯೦೧ ಮತ್ತು ಅದೇ ದಿನದ ಪತ್ರ (12) ಒಂದೇ ಪತ್ರಕ್ಕೆ ಸಂಬಂಧಿಸಿದ್ದರೂ ಅವುಗಳನ್ನು ಬೇರೆ ಎನ್ನುವಂತೆ ಕೊಡಲಾಗಿದೆ. ಶ್ರೀಮತಿ ಬೆಟ್ಟಿ ಲೆಗೆಟ್’ಳನ್ನು ಪರಿಚಯಿಸಲು ೩/೧/೧೮೯೬ ರಂದು ಸ್ವಾಮಿಗಳು ಸಾರಾ ಬುಲ್ , ೧೭/೭/೧೮೯೬ ರೆ. ಹವೆಯಿಸ್’ಗೆ , ೯/೧೨/೧೮೯೯ ಮೇಬಲ್ ಮೆಕ್ಲಿಯಾಡ್ ಹ್ಯಾಮಂಡ್ ಇವರಿಗೆ ಬರೆದ ಪತ್ರಗಳು ಕಂಪ್ಲೀಟ್ ವರ್ಕ್ಸ್’/ಕೃತಿಶ್ರೇಣಿಯಲ್ಲಿ ಕಾಣಿಸಿಕೊಂಡಿಲ್ಲ. (13) ಕೊನೆಯ ಎರಡು ಪತ್ರಗಳು ವೇದಾಂತ ಕೇಸರಿ , ಮಾರ್ಚ್ ಸಂಚಿಕೆ ೨೦೦೪ ರಲ್ಲಿ ಪ್ರಕಟವಾಗಿದೆ. ಇದು ಕಂಪ್ಲೀಟ್ ವರ್ಕ್ಸ್/ಕೃತಿಶ್ರೇಣಿಯಲ್ಲಿ ಜೊಸೆಫಿನ್ ಮೆಕ್ಲಿಯಾಡ್’ಗೆ ಬರೆದ ಒಂದು ಪತ್ರದ ದಿನಾಂಕ ಜೂ-೧೮೯೫ ಎಂದಿದೆ. ಇದು ೮/೧೧/೧೮೯೯ ಆಗಬೇಕು. (14) (ಘ) ೨೦/೮/೧೮೯೩ ರಂದು ಸ್ವಾಮಿಗಳು ಅಳಸಿಂಗ ಪೆರುಮಾಳ್’ಗೆ ಬರೆದಿರುವ ಪತ್ರದ ಕನ್ನಡ ಅನುವಾದ ಕೃತಿಶ್ರೇಣಿಯಲ್ಲಿದೆ. ಅದರಲ್ಲಿರುವ ಒಂದು ವಿನೋದದ ಸಂಗತಿಯನ್ನು ತಿಳಿಸುವುದು ಅಪ್ರಸ್ತುತವಲ್ಲ. ಈ ಪತ್ರದಲ್ಲಿ I have left instructions with Cooks to forward any letter or money to me wherever I am. ಇದನ್ನು ಕೃತಿಶ್ರೇಣಿಯಲ್ಲಿ ‘ನಾನು ಎಲ್ಲಿರುತ್ತೇನೋ ಅಲ್ಲಿಗೆ ಪತ್ರವನ್ನೂ , ಹಣವನ್ನೂ ಕಳಿಸಬೇಕೆಂದು ಅಡಿಗೆಯವರಿಗೆ ಸಲಹೆ ನೀಡಿರುವೆನು’ ಎಂದಾಗಿದೆ. ಸ್ವಾಮಿಗಳು ಹಣ ಮತ್ತು ಪತ್ರಗಳ ಏಜೆಂಟರಾದ ಥಾಮಸ್ ಕುಕ್ಸ್ (ಥಾಮಸ್ ಕುಕ್ ಅಂಡ್ ಸನ್ಸ್) ಕಂಪೆನಿಯ ಬಗ್ಗೆ ಹೇಳುತ್ತಿದ್ದರೆ ಅದರ ಹಿನ್ನೆಲೆಯನ್ನು ಸ್ವಲ್ಪವೂ ತಿಳಿಯದ ಅನುವಾದಕರು ಅವರನ್ನು ‘ಅಡುಗೆ’ಯವರನ್ನಾಗಿಸಿದ್ದಾರೆ. ರಾಮಕೃಷ್ಣ ಮಠದವರು ಈ ‘ಅಡುಗೆ’ಯವರನ್ನು ಒಪ್ಪಿದ್ದಾರೆ. ಅಂತಹ ಅನುವಾದಕ್ಕೆ ಕುವೆಂಪು ಮುನ್ನುಡಿ ಬರೆದಿದ್ದಾರೆ !!